ಬಹುಭಾಷಾ ತಾರೆ ಭಾವನಾ ಜನುಮ ದಿನ ಸಂಭ್ರಮ - Vistara News

ಸಿನಿಮಾ

ಬಹುಭಾಷಾ ತಾರೆ ಭಾವನಾ ಜನುಮ ದಿನ ಸಂಭ್ರಮ

ಬಹುಭಾಷಾ ತಾರೆ ಭಾವನಾ ʼಜಾಕಿʼ ಚಿತ್ರದ ಮೂಲಕ ಕನ್ನಡ ಚಿತ್ರ ರಸಿಕರ ಮನಸೂರೆಗೊಂಡವರು.

VISTARANEWS.COM


on

ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಭಾವನಾ ಮೆನನ್ ದಕ್ಷಿಣ ಭಾರತದ ಸ್ಟಾರ್‌ ನಟಿ.‌ ನಟನೆಯಲ್ಲಷ್ಟೇ ಅಲ್ಲ, ಕೇರಳದ ನಟ ದಿಲೀಪ್ ಎಸಗಿದ ಲೈಂಗಿಕ ದೌರ್ಜನ್ಯದ ವಿರುದ್ಧ ದಿಟ್ಟತನದಿಂದ ಹೋರಾಡಿ ಗೆದ್ದು ಜನ ಬೆಂಬಲ ಪಡೆದವರು.

ಇದನ್ನೂ ಓದಿ| 777 Charlie : ವೇಸ್ಟ್‌ ಬಾಡಿ ಚಾರ್ಲಿ ಸೂಪರ್‌ ಹೀರೊ ಆಗಿದ್ದು ಹೀಗೆ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

Latest

Bikini Day: ಬಿಕಿನಿ ತೊಟ್ಟು ಪಡ್ಡೆ ಹುಡುಗರ ನಿದ್ದೆ ಉಡಾಯಿಸಿದ ಸುಂದರಿಯರಿವರು!

Bikini Day: ಪ್ರತಿವರ್ಷ ಜುಲೈ 5ರಂದು ಬಿಕಿನಿ ದಿನ ಆಚರಿಸಲಾಗುತ್ತದೆ. ಸಂಪ್ರದಾಯವಾದಿಗಳು ಈ ಉಡುಗೆಯನ್ನು ಕೆಂಗಣ್ಣಿನಿಂದ ನೋಡುತ್ತಾರಾರೂ, 60 ವರ್ಷಗಳ ಹಿಂದೆಯೇ ಶರ್ಮಿಳಾ ಟ್ಯಾಗೋರ್‌ ಬಿಕಿನಿ ತೊಟ್ಟು ಸಂಚಲನ ಮೂಡಿಸಿದ್ದರು. ದೀಪಿಕಾ ಪಡುಕೋಣೆ, ದಿಶಾ, ಪಟಾನಿ, ಶ್ರದ್ಧಾ ಕಪೂರ್, ಕತ್ರಿನಾ ಕೈಫ್ ಮತ್ತಿತರರೂ ಬಿಕಿನಿಯಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.

VISTARANEWS.COM


on

Bikini Dress
Koo

ಬಿಕಿನಿಯನ್ನು ಮಹಿಳೆಯರ ಸ್ಟೈಲಿಶ್ ಮತ್ತು ಸೆಕ್ಸಿ ಉಡುಗೆಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಬೇಸಿಗೆಗೂ ಬಿಕಿನಿಗೂ ಎಲ್ಲಿಲ್ಲಂದ ನಂಟು. ಹಾಗಾಗಿ ಬೇಸಿಗೆಯಲ್ಲಿ ಬೀಚ್‌ಗಳಲ್ಲಿ ಬಿಕಿನಿ(Bikini Day) ಸುಂದರಿಯರನ್ನು ಹೆಚ್ಚಾಗಿ ಕಾಣಬಹುದು! ಈ ಬಿಕಿನಿ ಉಡುಗೆ ಜುಲೈ 5, 1946ರಲ್ಲಿ ಮೊದಲ ಬಾರಿ ಕಾಣಿಸಿಕೊಂಡಿತು ಎನ್ನಲಾಗುತ್ತದೆ. ಹಾಗಾಗಿ ಪ್ರತಿವರ್ಷ ಜುಲೈ 5ರಂದು ಬಿಕಿನಿ ದಿನವನ್ನು ಆಚರಿಸಲಾಗುತ್ತದೆ.

ವಿದೇಶಗಳಲ್ಲಿ ಬಿಕಿನಿ ಉಡುಗೆಗಳು ಸಾಮಾನ್ಯವಾದರೂ ಭಾರತದಲ್ಲಿ ಸುಮಾರು 60 ವರ್ಷಗಳ ಹಿಂದೆಯೇ ಈ ಉಡುಗೆಯಲ್ಲಿ ಸುಂದರಿಯರು ಮಿಂಚಿದ್ದರು. ಬಾಲಿವುಡ್‌ ನಟಿ ಶರ್ಮಿಳಾ ಟ್ಯಾಗೋರ್‌ ಅವರು ಆರು ದಶಕಗಳ ಹಿಂದೆಯೇ ಬಿಕಿನಿ ಧರಿಸಿ ಸಂಚಲನ ಮೂಡಿಸಿದ್ದರು. ಭಾರತದ ಬಿಕಿನಿ ಸುಂದರಿಯರ ಹಿನ್ನೋಟ (ಮುನ್ನೋಟ ಕೂಡ!) ಇಲ್ಲಿದೆ.

ಶರ್ಮಿಳಾ ಟ್ಯಾಗೋರ್:

1966ರಲ್ಲಿ ನಿಯತಕಾಲಿಕಯೊಂದರ ಮುಖಪುಟಕ್ಕಾಗಿ ಶರ್ಮಿಳಾ ಟ್ಯಾಗೋರ್ ಅವರು ಬಿಕಿನಿಯಲ್ಲಿ ಪೋಸ್ ನೀಡುವ ಮೂಲಕ ಈ ಉಡುಗೆ ಧರಿಸಿದ ಮೊದಲ ಬಾಲಿವುಡ್ ನಟಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಆದರೆ ನಟಿಯ ಈ ಫೋಸ್‌ಗೆ ಜನರು ಕೆಟ್ಟ ಪ್ರತಿಕ್ರಿಯೆ ನೀಡಿದ್ದಕ್ಕೆ ನಟಿ ಆಗ ಆಘಾತಕ್ಕೊಳಗಾಗಿದ್ದರು. ಸಂಪ್ರದಾಯವಾದಿ ಸಮಾಜದಲ್ಲಿ ನಾನೇಕೆ ಈ ಉಡುಗೆ ಧರಿಸಿದೆ ಎಂಬುದು ತಿಳಿದಿಲ್ಲ, ಆದರೆ ಏನಾದರೂ ವಿಭಿನ್ನವಾಗಿ ಮಾಡಲು ಮುಂದಾಗಿದ್ದೆ. ಹಾಗಾಗಿ ಈ ಡ್ರೆಸ್ ಧರಿಸಿದೆ ಎಂಬುದಾಗಿ ಇವರು ಸಂದರ್ಶನವೊಂದರಲ್ಲಿ ಹೇಳಿಕೆ ನೀಡಿದ್ದರು.

ದೀಪಿಕಾ ಪಡುಕೋಣೆ :

ಬಾಲಿವುಡ್ ಬ್ಯೂಟಿ ದೀಪಿಕಾ ಪಡುಕೋಣೆ ಅವರು ಕೂಡ ಬಿಕಿನಿ ಧರಿಸಿ ಪೋಸ್ ನೀಡಿದ್ದರು. ಇವರು ಪಠಾನ್, ಪ್ಲೇಯರ್ಸ್, ಫೈಟರ್ ಮತ್ತು ಹೌಸ್ ಫುಲ್ ಚಿತ್ರಗಳಲ್ಲಿ ಈ ಬೋಲ್ಡ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ದಿಶಾ ಪಟಾನಿ:

ಬಾಲಿವುಡ್ ಬ್ಯೂಟಿ ಕ್ವೀನ್‌ ಎನಿಸಿಕೊಂಡ ನಟಿ ದಿಶಾ ಪಟಾನಿಯವರು ಆಗಾಗ ಬೀಚ್‌ನಲ್ಲಿ ಬಿಕಿನಿ ಪ್ರದರ್ಶನ ಮಾಡುತ್ತಾರೆ. ವಾಸ್ತವವಾಗಿ, ʼಮಲಾಂಗ್‍ʼ ಚಿತ್ರದಲ್ಲಿ ಅವರು ಬಿಕಿನಿ ಅವತಾರದಲ್ಲಿ ನಟಿಸಿ ಪಡ್ಡೆ ಹುಡುಗರ ಮನ ಗೆದ್ದಿದ್ದರು.

ಶ್ರದ್ಧಾ ಕಪೂರ್ :

ರಣಬೀರ್ ಕಪೂರ್ ಅಭಿನಯದ ʼತು ಜೂತಿ ಮೈ ಮಕ್ಕರ್ʼ ಚಿತ್ರದಲ್ಲಿ ಶ್ರದ್ಧಾ ಕಪೂರ್ ತನ್ನ ಬಿಕಿನಿ ಅವತಾರದೊಂದಿಗೆ ಪ್ರೇಕ್ಷಕರ ಮನ ಕದ್ದಿದ್ದರು. ನಾನಾ ಭಂಗಿಯ ಇವರ ಬಿಕಿನಿ ಉಡುಗೆ ಯುವ ಜನರ ನಿದ್ದೆಗೆಡಿಸಿತ್ತು.

ಇದನ್ನೂ ಓದಿ: ತಲೆಕೂದಲಿನಲ್ಲಿ ಟೀಪಾಟ್ ತಯಾರಿಸಿ ಅದರಿಂದ ನೀರು ಕುಡಿದ ಕೇಶ ವಿನ್ಯಾಸಕಿ!

ಕತ್ರಿನಾ ಕೈಫ್ :

ಆಗಾಗ ಬಿಕಿನಿಯಲ್ಲಿ ಕಾಣಿಸಿಕೊಳ್ಳುವ ನಟಿ ಕತ್ರಿನಾ ಕೈಫ್ ಅವರು ಬ್ಯಾಂಗ್ ಬ್ಯಾಂಗ್, ಬಾರ್ ಬಾರ್ ದೇಖೋ ಮತ್ತು ಇತರ ಕೆಲವು ಚಿತ್ರಗಳಲ್ಲಿ ತಮ್ಮ ಬಿಕಿನಿ ಲುಕ್ ಅನ್ನು ಹುಡುಗರು ಹುಚ್ಚೆದ್ದು ಕುಣಿಯುವಂತೆ ಮಾಡಿದ್ದಾರೆ.

Continue Reading

ಟಾಲಿವುಡ್

Samantha Ruth Prabhu: ಸಮಂತಾಗೆ ಜೈಲಿಗೆ ಕಳಿಸಿ ಎಂದ ವೈದ್ಯ ; ನಟಿ ಹೇಳಿದ್ದೇನು?

Samantha Ruth Prabhu: ಆರೋಗ್ಯದ ಬಗ್ಗೆ ಬೇಕಾ ಬಿಟ್ಟಿ ಸಲಹೆಯನ್ನು ನೀಡುತ್ತಿರುವ ಸಮಂತಾ ಅವರ ವಿರುದ್ಧ ಸಾರ್ವಜನಿಕ ಆರೋಗ್ಯಕ್ಕೆ ಅಪಾಯವನ್ನುಂಟು ಮಾಡುವ ಆರೋಪದಡಿ ಜೈಲಿಗೆ ಹಾಕಬೇಕು ಎಂದು ಕೂಡ ಆಗ್ರಹಿಸಿದ್ದಾರೆ ವೈದ್ಯರು. ಕಳೆದೆರಡು ವರ್ಷಗಳಲ್ಲಿ ನಾನು ಎದುರಿಸಿದ ಮತ್ತು ಕಲಿತ ಎಲ್ಲದರಿಂದ ನಾನು ಕೇವಲ ಒಳ್ಳೆಯ ಉದ್ದೇಶದಿಂದ ಸಲಹೆ ನೀಡಿದ್ದೇನೆ ಎಂದು ಕೂಡ ಸಮಂತಾ ಹೇಳಿದ್ದಾರೆ.

VISTARANEWS.COM


on

Samantha Ruth Prabhu Doctor Calls Health Illiterate
Koo

ಬೆಂಗಳೂರು: ಸಮಂತಾ ರುತ್ ಪ್ರಭು (Samantha Ruth Prabhu) ಇತ್ತೀಚೆಗೆ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಸಾಮಾನ್ಯ ವೈರಲ್ ಸೋಂಕುಗಳಿಗೆ ಚಿಕಿತ್ಸೆ ನೀಡಲು ಪರ್ಯಾಯ ಮಾರ್ಗದ ಬಗ್ಗೆ ಸಲಹೆ ನೀಡಿರುವ ಕುರಿತು ವಿವಾದಕ್ಕೆ ಒಳಗಾಗಿದ್ದಾರೆ. ವೈರಲ್ ಇನ್​ಫೆಕ್ಷನ್ ​ತಡೆಯಲು, ಹೈಡ್ರೋಜ್ ಪೆರಾಕ್ಸೈಡ್ ಹಾಗೂ ಭಟ್ಟಿ ಇಳಿಸಿದ ನೀರನ್ನು ಮಿಕ್ಸ್ ಮಾಡಿ ನೆಬ್ಯುಲೈಸರ್ ಮೂಲಕ ಅದನ್ನು ತೆಗೆದುಕೊಳ್ಳುವಂತೆ ಸಮಂತಾ ಹೇಳಿದ್ದಾರೆ. ಈ ಹೇಳಿಕೆಯ ಬಗ್ಗೆ ವೈದ್ಯರು ತಕರಾರು ತೆಗೆದಿದ್ದಾರೆ. ವಿಜ್ಞಾನ ಹಾಗೂ ವೈದ್ಯ ಲೋಕದಲ್ಲಿ ಸ್ವಲ್ಪವೂ ಜ್ಞಾನವಿಲ್ಲದ ವ್ಯಕ್ತಿ ಎಂದು ಹೇಳಿದ್ದಾರೆ. ಡಾ ಸಿರಿಯಾಕ್ ಅಬ್ಬಿ ಫಿಲಿಪ್ಸ್ ಅವರು ಸಮಂತಾಗೆ “ಆರೋಗ್ಯ ಮತ್ತು ವಿಜ್ಞಾನ ಅನಕ್ಷರಸ್ಥರು” ಎಂದು ಕರೆದಿದ್ದಾರೆ. ಇಂತಹ ಚಿಕಿತ್ಸೆಯನ್ನು ಉತ್ತೇಜಿಸುವ ವ್ಯಕ್ತಿಗಳಿಗೆ ದಂಡ ವಿಧಿಸಬೇಕು ಮತ್ತು ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ. ಈ ಬಗ್ಗೆ ನಟಿ ಪೋಸ್ಟ್‌ ಕೂಡ ಮಾಡಿದ್ದಾರೆ.

ಸಮಂತಾ ಸಲಹೆಗೆ ಪ್ರತಿಕ್ರಿಯಿಸಿದ ವೈದ್ಯರು, “ದುರದೃಷ್ಟವಶಾತ್ ಆರೋಗ್ಯ ಮತ್ತು ವಿಜ್ಞಾನ ಅನಕ್ಷರಸ್ಥರಾಗಿರುವ ಭಾರತೀಯ ನಟಿ ಸಮಂತಾ ರುತ್ ಅವರು ತಮ್ಮ ಲಕ್ಷಾಂತರ ಫಾಲೋವರ್ಸ್‌ಗಳಿಗೆ ವೈರಲ್ ಇನ್​ಫೆಕ್ಷನ್​ತಡೆಯಲು, ಹೈಡ್ರೋಜ್ ಪೆರಾಕ್ಸೈಡ್ ಹಾಗೂ ಭಟ್ಟಿ ಇಳಿಸಿದ ನೀರನ್ನು ಮಿಕ್ಸ್ ಮಾಡಿ ನೆಬ್ಯುಲೈಸರ್ ಮೂಲಕ ಅದನ್ನು ತೆಗೆದುಕೊಳ್ಳುವಂತೆ ಹೇಳಿದ್ದಾರೆ. ಹೈಡ್ರೋಜನ್ ಪೆರಾಕ್ಸೈಡ್ ಅನ್ನು ನೆಬ್ಯುಲೈಸ್ ಮಾಡಬೇಡಿ. ಮತ್ತು ಉಸಿರಾಡಬೇಡಿ. ಏಕೆಂದರೆ ಇದು ಆರೋಗ್ಯಕ್ಕೆ ಅಪಾಯಕಾರಿ. ಅಮೇರಿಕದ ಸೈಂಟಿಫಿಕ್ ಸೊಸೈಟಿ ಅಸ್ತಮಾ ಮತ್ತು ಅಲರ್ಜಿ ಫೌಂಡೇಶನ್ ನವರೇ ಈ ಮಾತನ್ನು ಹೇಳಿದ್ದಾರೆ ಎಂದು ಕೂಡ ಹೇಳಿದ್ದಾರೆ ಡಾಕ್ಟರ್ ಸೈರಿಕ್ ಅಬ್ಬಿ ಫಿಲಿಪ್ಸ್ .

ಆರೋಗ್ಯದ ಬಗ್ಗೆ ಬೇಕಾ ಬಿಟ್ಟಿ ಸಲಹೆಯನ್ನು ನೀಡುತ್ತಿರುವ ಸಮಂತಾ ಅವರ ವಿರುದ್ಧ ಸಾರ್ವಜನಿಕ ಆರೋಗ್ಯಕ್ಕೆ ಅಪಾಯವನ್ನುಂಟು ಮಾಡುವ ಆರೋಪದಡಿ ಜೈಲಿಗೆ ಹಾಕಬೇಕು ಎಂದು ಕೂಡ ಆಗ್ರಹಿಸಿರುವ ವೈದ್ಯರು, ಭಾರತದ ಆರೋಗ್ಯ ಸಚಿವಾಲಯ ಅಥವಾ ಯಾವುದೇ ಆರೋಗ್ಯ ಸಂಸ್ಥೆ ಇವರ ಮೇಲೆ ಕ್ರಮ ಕೈಗೊಳ್ಳುತ್ತದೆಯೇ ಅಥವಾ ಸುಮ್ಮನೆ ಇದ್ದು ಜನರನ್ನು ಸಾಯಲು ಬಿಡುತ್ತಾರಾ ಎಂದು ಪ್ರಶ್ನೆಯನ್ನೂ ಕೂಡ ಮಾಡಿದ್ದಾರೆ.

ಇದಾದ ಬಳಿಕ ಸಮಂತಾ ಈ ಬಗ್ಗೆ ಪೋಸ್ಟ್‌ ಮಾಡಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ ವಿವಿಧ ರೀತಿಯ ಔಷಧಿಗಳನ್ನು ತೆಗೆದುಕೊಳ್ಳಬೇಕಾಗಿತ್ತು ಎಂದಿರುವ ಸಮಂತಾ, ಹಲವು ಚಿಕಿತ್ಸೆಗಳು ತುಂಬಾ ದುಬಾರಿಯಾಗಿದ್ದವು. ನಾನು ನಿಭಾಯಿಸಬಲ್ಲೆ. ಆದರೆ ಕೆಲವರಿಗೆ ಅಸಾಧ್ಯ. ಕಳೆದೆರಡು ವರ್ಷಗಳಲ್ಲಿ ನಾನು ಎದುರಿಸಿದ ಮತ್ತು ಕಲಿತ ಎಲ್ಲದರಿಂದ ನಾನು ಕೇವಲ ಒಳ್ಳೆಯ ಉದ್ದೇಶದಿಂದ ಸಲಹೆ ನೀಡಿದ್ದೇನೆ ಎಂದು ಕೂಡ ಸಮಂತಾ ಹೇಳಿದ್ದಾರೆ.

ಇದನ್ನೂ ಓದಿ: Samantha Ruth Prabhu: ಬೆತ್ತಲೆ ಫೋಟೊ ಅಪ್​ಲೋಡ್ ಮಾಡಿದ್ರಾ ಸಮಂತಾ?

ಮಾತ್ರವಲ್ಲ ಜೈಲಿಗೆ ಕಳುಹಿಸಿ ಎಂದು ನನಗೆ ಹೇಳುವ ಬದಲು, ನನ್ನ ಪೋಸ್ಟ್‌ನಲ್ಲಿ ಟ್ಯಾಗ್ ಮಾಡಿರುವ ನನ್ನ ಡಾಕ್ಟರನ್ನು ಅವರು ಕೇಳಬೇಕಿತ್ತು ಎಂದಿದ್ದಾರೆ. ಆಗ ಇಬ್ಬರು ವೃತ್ತಿಪರ ವೈದ್ಯರ ನಡುವೆ ಚರ್ಚೆಯಾಗುತ್ತಿತ್ತು. ಆ ಚರ್ಚೆಯಿಂದ ನಾನು ಇನ್ನೂ ಹೆಚ್ಚು ಕಲಿಯಬಹುದಿತ್ತು ಎಂದು ಕೂಡ ಸಮಂತಾ ಹೇಳಿದ್ದಾರೆ. . ಇನ್ನು ಮುಂದೆ ತಾನು ಹಂಚಿಕೊಳ್ಳುವ ವೈದ್ಯಕೀಯ ಸಲಹೆಯ ಬಗ್ಗೆ ‘ಹೆಚ್ಚು ಜಾಗರೂಕರಾಗಿರುತ್ತೇನೆ’ ಎಂದು ಹೇಳಿದ್ದಾರೆ ಸಮಂತಾ.

ಈ ಮುಂಚೆಯೂ ನಟಿ ಲಿವರ್‌ ಡೆಟಾಕ್ಸಿಫಿಕೇಶನ್‌ (liver detoxification) ಬಗ್ಗೆ ತಪ್ಪು ಮಾಹಿತಿ ನೀಡಿದ್ದರು ಎಂದು ಹಲವರು ಆರೋಪಿಸಿದ್ದರು. ಅಲ್ಲಿ ಸಮಂತಾ ಅವರು ಲಿವರ್‌ ಆರೋಗ್ಯಕ್ಕಾಗಿ ʻದಂಡೇಲಿಯನ್‌ʼನಂತಹ ಗಿಡಮೂಲಿಕೆಗಳ ಬಳಕೆ ಬಗ್ಗೆ ಚರ್ಚಿಸಿದ್ದರು. ಈ ಬಗ್ಗೆ ಸುಳ್ಳು ಮಾಹಿತಿಯನ್ನು ಪ್ರಚಾರ ಮಾಡಿದ್ದಕ್ಕಾಗಿ ವೈದ್ಯರೊಬ್ಬರು ಸಮಂತಾ ಅವರನ್ನು ಟೀಕಿಸಿದ್ದರು.

Continue Reading

ಬಾಲಿವುಡ್

Kangana Ranaut: ನಿಮ್ಮೊಳಗೆ ರಾಷ್ಟ್ರೀಯ ಪ್ರಶಸ್ತಿ ಇದೆಯಾ ಎಂದು ಕಂಗನಾಗೆ ಡಬಲ್‌ ಮೀನಿಂಗ್‌ ಪ್ರಶ್ನೆ;ಬಿದ್ದು ಬಿದ್ದು ನಕ್ಕ ಆರ್ ಮಾಧವನ್!

Kangana Ranaut: ಈ ಲೋಕಸಭಾ ಚುನಾವಣೆಯಲ್ಲಿ ಮೊದಲ ಬಾರಿಗೆ ಸ್ಪರ್ಧಿಸಿದ್ದ ಕಂಗನಾ ಕೆಲವು ದಿನಗಳ ಹಿಂದೆ ಚಿತ್ರದ ಬಿಡುಗಡೆಯನ್ನು ಮುಂದಕ್ಕೆ ಹಾಕಿದ್ದರು. ಇಲ್ಲದಿದ್ದರೆ ಇಷ್ಟರಲ್ಲಾಗಲೇ ಚಿತ್ರ ತೆರೆ ಕಾಣಬೇಕಿತ್ತು. ಚುನಾವಣಾ ಪ್ರಚಾರದ ಹಿನ್ನೆಲೆಯಲ್ಲಿ ಅವರು ರಿಲೀಸ್‌ ಡೇಟ್‌ ಮುಂದೂಡಿದ್ದರು. ಸದ್ಯ ಅವರು ಹಿಮಾಚಲ ಪ್ರದೇಶ ಮಂಡಿ ಕ್ಷೇತಚರದಿಂದ ಗೆದ್ದು, ಸಂಸದರಾಗಿದ್ದಾರೆ.

VISTARANEWS.COM


on

Kangana Ranaut Madhavan's Hilarious Reaction To Double-Meaning
Koo

ಬೆಂಗಳೂರು: ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದು ಅಭಿನಯಕ್ಕಾಗಿ ಹೆಸರುವಾಸಿಯಾಗಿರುವ ನಟಿ ಕಂಗನಾ ಕ್ವೀನ್, ತನು ವೆಡ್ಸ್ ಮನು ರಿಟರ್ನ್ಸ್, ಮಣಿಕರ್ಣಿಕಾ- ದಿ ಕ್ವೀನ್ ಆಫ್ ಝಾನ್ಸಿ, ಮತ್ತು ಪಂಗಾ ಚಿತ್ರಗಳಿಗಾಗಿ ನಾಲ್ಕು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದಿದ್ದಾರೆ. ನಟನೆಯ ಹೊರತಾಗಿ, ಆಗಾಗ ತಮ್ಮ ಹೇಳಿಕೆಗಳ ಮೂಲಕ ಟ್ರೋಲ್‌ಗೆ ಗುರಿಯಾಗುತ್ತಲೇ ಇರುತ್ತಾರೆ. ಈಗ ಬಿಜೆಪಿ ಸಂಸದೆ ಆಗಿರುವ ಕಂಗನಾ ರಣಾವತ್ (Kangana Ranaut) ಅವರ ಹಳೆಯ ವಿಡಿಯೊವೊಂದು ವೈರಲ್‌ ಆಗಿದೆ. ವಿಡಿಯೊ ಡಬಲ್-ಮೀನಿಂಗ್‌ನಲ್ಲಿದ್ದು, ಸಹ-ನಟ ಆರ್ ಮಾಧವನ್ ಬಿದ್ದು ಬಿದ್ದು ನಕ್ಕಿದ್ದಾರೆ.

ರಾಷ್ಟ್ರಪ್ರಶಸ್ತಿ ಗೆದ್ದಿರುವ ಬಗ್ಗೆ ಪ್ರತಿಕ್ರಿಯಿಸಿರುವ ಹಳೆಯ ವಿಡಿಯೋವೊಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ವೈರಲ್‌ ಆದ ವಿಡಿಯೊಗೆ ಸಬ್‌ಟೈಟಲ್‌ ಕೂಡ ಇದೆ. ಹೆಚ್ಚು ಡಬಲ್-ಮೀನಿಂಗ್‌ನಲ್ಲಿಯೂ ಇದೆ.

ಸಿದ್ಧಾರ್ಥ್ ಕಣ್ಣನ್ ಅವರೊಂದಿಗಿನ ಸಂದರ್ಶನದಲ್ಲಿ ಈ ಘಟನೆ ನಡೆದಿದೆ. ವೈರಲ್‌ ಆದ ವಿಡಿಯೊದಲ್ಲಿ ಸಂದರ್ಶಕರು ಕಂಗನಾಗೆ, “ರಾಷ್ಟ್ರೀಯ ಪ್ರಶಸ್ತಿ ಗೆದ್ದ ನಂತರ ನಿಮಗೆ ಏನನಿಸುತ್ತದೆ? ನಿಮ್ಮೊಳಗೆ ರಾಷ್ಟ್ರೀಯ ಪ್ರಶಸ್ತಿ ಇದೆಯಾ?ಎಂದು ಕೇಳಿದ್ದಾರೆ. ನಿಮ್ಮೊಳಗೆ ರಾಷ್ಟ್ರೀಯ ಪ್ರಶಸ್ತಿ ಇದೆಯಾ ಎಂದು ಪ್ರಶ್ನೆ ಕೇಳಿದ ಕೂಡಲೇ ನಟ ಆರ್ ಮಾಧವನ್ ಬಿದ್ದು ಬಿದ್ದು ನಕ್ಕಿದ್ದಾರೆ.

ಆ ಬಳಿಕ ಕಂಗನಾ ಉತ್ತರ ನೀಡಿ ʻʻನಮ್ಮೊಳಗೆ ರಾಷ್ಟ್ರೀಯ ಪ್ರಶಸ್ತಿ ಬಗ್ಗೆ ತಿಳಿದಿಲ್ಲ ಆದರೆ ನಾನು ರೋಮಾಂಚನಗೊಂಡಿದ್ದೇನೆ. ಈ ವಯಸ್ಸಿನಲ್ಲಿ ನನಗೆ ಈ ಪ್ರಶಸ್ತಿ ಸಿಕ್ಕಿದೆ ಎಂದು ನಾನು ರೋಮಾಂಚನಗೊಂಡಿದ್ದೇನೆʼʼಎಂದಿದ್ದಾರೆ. ಇಷ್ಟಾದರೂ ಮಾಧವನ್‌ ಅವರಿಗೆ ಮಾತ್ರ ನಗು ಕಂಟ್ರೋಲ್‌ ಆಗಿಲ್ಲ. ಈ ವಿಡಿಯೊಗೆ ನೆಟ್ಟಿಗರು ಬಗೆ ಬಗೆಯಲ್ಲಿ ಕಮೆಂಟ್‌ ಮಾಡಿದ್ದಾರೆ. ಒಬ್ಬರು ʻʻಈ ಹಾಸ್ಯ ನಿರೂಪಕನಿಗೆ ಇಂದಿನವರೆಗೂ ಅರ್ಥವಾಗಲಿಲ್ಲʼʼಎಂದು ಕಮೆಂಟ್‌ ಮಾಡಿದ್ದಾರೆ.

ಇದನ್ನೂ ಓದಿ: Kangana Ranaut: ಕಂಗನಾಗೆ ಕಪಾಳಮೋಕ್ಷ ಮಾಡಿದ್ದ ಕಾನ್‌ಸ್ಟೇಬಲ್‌ ಬೆಂಗಳೂರಿಗೆ ವರ್ಗಾವಣೆ?

ಈ ಲೋಕಸಭಾ ಚುನಾವಣೆಯಲ್ಲಿ ಮೊದಲ ಬಾರಿಗೆ ಸ್ಪರ್ಧಿಸಿದ್ದ ಕಂಗನಾ ಕೆಲವು ದಿನಗಳ ಹಿಂದೆ ಚಿತ್ರದ ಬಿಡುಗಡೆಯನ್ನು ಮುಂದಕ್ಕೆ ಹಾಕಿದ್ದರು. ಇಲ್ಲದಿದ್ದರೆ ಇಷ್ಟರಲ್ಲಾಗಲೇ ಚಿತ್ರ ತೆರೆ ಕಾಣಬೇಕಿತ್ತು. ಚುನಾವಣಾ ಪ್ರಚಾರದ ಹಿನ್ನೆಲೆಯಲ್ಲಿ ಅವರು ರಿಲೀಸ್‌ ಡೇಟ್‌ ಮುಂದೂಡಿದ್ದರು. ಸದ್ಯ ಅವರು ಹಿಮಾಚಲ ಪ್ರದೇಶ ಮಂಡಿ ಕ್ಷೇತಚರದಿಂದ ಗೆದ್ದು, ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಚುನಾವಣೆಯಲ್ಲಿ ಗೆಲುವು ಸಾಧಿಸಿದರೆ ರಾಹಜೀಯಕ್ಕೆ ಆದ್ಯತೆ ನೀಡುವುದಾಗಿ ಈ ಹಿಂದೆ ಕಂಗನಾ ಘೋಷಿಸಿದ್ದರು. ಈ ಹಿನ್ನೆಲೆಯಲ್ಲಿ ಚಿತ್ರ ಬಿಡುಗಡೆ ಬಗ್ಗೆ ಕೆಲವರು ಅನುಮಾನ ವ್ಯಕ್ತಪಡಿಸಿದ್ದರು. ಆದರೆ ಈಗ ಅನುಮಾನಕ್ಕೆ ಸ್ವತಃ ಅವರೇ ತೆರೆ ಎಳೆದಿದ್ದಾರೆ.

‘ಎಮರ್ಜೆನ್ಸಿ’ಯಲ್ಲಿ ಅನುಪಮ್ ಖೇರ್, ಮಹಿಮಾ ಚೌಧರಿ, ಮಿಲಿಂದ್ ಸೋಮನ್, ಶ್ರೇಯಸ್ ತಲ್ಪಾಡೆ, ವಿಶಾಕ್ ನಾಯರ್ ಮತ್ತು ದಿವಂಗತ ಸತೀಶ್ ಕೌಶಿಕ್ ಕೂಡ ಕಾಣಿಸಿಕೊಂಡಿದ್ದಾರೆ. ಕಂಗನಾ ಅವರು ದಿವಂಗತ ಪ್ರಧಾನಿ ಇಂದಿರಾ ಗಾಂಧಿಯವರ ಪಾತ್ರದಲ್ಲಿ ನಟಿಸಿದ್ದು, ಫಸ್ಟ್‌ ಲುಕ್‌ನಲ್ಲಿ ಇಂದಿರಾ ಗಾಂಧಿ ಅವರನ್ನೇ ಹೋಲುತ್ತಿರುವುದನ್ನು ನೋಡಿ ಫ್ಯಾನ್ಸ್‌ ಥ್ರಿಲ್‌ ಆಗಿದ್ದಾರೆ. ಇನ್ನು ಅಟಲ್ ಬಿಹಾರಿ ವಾಜಪೇಯಿ ಪಾತ್ರವನ್ನು ಶ್ರೇಯಸ್ ತಲ್ಪಡೆ ನಿರ್ವಹಿಸಿದ್ದಾರೆ. ಸಿನಿಮಾದಲ್ಲಿ ಇಂದಿರಾ ಗಾಂಧಿಯ ಗಟ್ಟಿ ವ್ಯಕ್ತಿತ್ವದ ಅನಾವರಣ ಮಾಡಲಾಗಿದೆ ಎನ್ನಲಾಗುತ್ತಿದೆ. ಜತೆಗೆ ತುರ್ತು ಪರಿಸ್ಥಿತಿಯನ್ನೂ ಇಂಚು ಇಂಚಾಗಿ ತೆರೆದಿಡಲಿದೆ. ಹೀಗಾಗಿ ಈಗಾಗಲೇ ಸಿನಿಮಾ ಗಮನ ಸೆಳೆದಿದೆ.

Continue Reading

ಒಟಿಟಿ

Kung Fu Panda 4 OTT: ಪುಟಾಣಿಗಳ ಫೇವರಿಟ್‌ ʻಕುಂಗ್ ಫು ಪಾಂಡಾ 4 ಸಿನಿಮಾʼ ಒಟಿಟಿಗೆ; ಕನ್ನಡ ಭಾಷೆಯಲ್ಲೂ ಲಭ್ಯ!

Kung Fu Panda 4 OTT: ಮಕ್ಕಳನ್ನೂ ಮಾತ್ರವಲ್ಲದೆ ದೊಡ್ಡವರನ್ನೂ ಮನರಂಜಿಸುವ ಕುಂಗ್‌ ಫು ಪಾಂಡದ 4ನೇ ಸಿನಿಮಾ ಒಟಿಟಿಗೆ ಬರುತ್ತಿದೆ. ಈ ಡ್ರಾಗನ್‌ ವಾರಿಯನ್‌ ಸಿನಿಮಾವನ್ನು ಕನ್ನಡ ಸೇರಿದಂತೆ ಇಂಗ್ಲಿಷ್‌, ಹಿಂದಿ, ತಮಿಳು, ತೆಲುಗು, ಮರಾಠಿ ಮತ್ತು ಬೆಂಗಾಳಿ ಭಾಷೆಗಳಲ್ಲಿ ನೋಡಬಹುದು.

VISTARANEWS.COM


on

Kung Fu Panda 4 OTT Jio cinema july 15th onwards
Koo

ಬೆಂಗಳೂರು: ʻಕುಂಗ್‌ ಫು ಪಾಂಡ 4ʼ (Kung Fu Panda 4 ) ಎನ್ನುವುದು ಬಹುನಿರೀಕ್ಷಿತ ಸಾಹಸಮಯ ಸಿನಿಮಾ. ಕುಂಗ್‌ ಫುನ ಹೊಸ ಸಾಹಸಗಳನ್ನು ಕಣ್ತುಂಬಿಕೊಳ್ಳುವ ಸಮಯ ಬಂದಿದೆ. ಜಾಕ್‌ ಬ್ಲ್ಕ್ಯಾಕ್‌ನ ಪೂ ಪಾತ್ರವು ಹೊಸ ಡ್ರ್ಯಾಗನ್‌ ಸೈನಿಕನಾಗಿ ಆಗಮಿಸುತ್ತಿದೆ. ಸಾಹಸಮಯ ಹಾಸ್ಯ ಸಿನಿಮಾ ಇದೇ ಜುಲೈ 15ರಿಂದ ಜಿಯೋ ಸಿನೆಮಾ ಪ್ರೀಮಿಯಂ ಒಟಿಟಿಯಲ್ಲಿ ಲಭ್ಯವಿದೆ. ಅದಕ್ಕೂ ಮೊದಲು ನೋಡಬೇಕೆನ್ನುವವರು ರೆಂಟ್‌ ಹಣ ನೀಡಿ ನೋಡಬಹುದು. ನೀವು ಜಿಯೋ ಸಿನೆಮಾ ಪ್ರೀಮಿಯಂನ ಚಂದಾದಾರರಾಗಿದ್ದರೆ ಈ ಡ್ರಾಗನ್‌ ವಾರಿಯನ್‌ ಸಿನಿಮಾವನ್ನು ಕನ್ನಡ ಸೇರಿದಂತೆ ಇಂಗ್ಲಿಷ್‌, ಹಿಂದಿ, ತಮಿಳು, ತೆಲುಗು, ಮರಾಠಿ ಮತ್ತು ಬೆಂಗಾಳಿ ಭಾಷೆಗಳಲ್ಲಿ ನೋಡಬಹುದು.

ಮೈಕ್ ಮಿಚೆಲ್ ಮತ್ತು ಸ್ಟೆಫನಿ ಸ್ಟೈನ್ ಅವರ ಈ ಅನಿಮೇಟೆಡ್ ಸಿನಿಮಾದಲ್ಲಿ ಜ್ಯಾಕ್ ಬ್ಲ್ಯಾಕ್, ಡಸ್ಟಿನ್ ಹಾಫ್‌ಮನ್ (ಶಿಫು), ಜೇಮ್ಸ್ ಹಾಂಗ್ (ಲಿ ಶಾನ್), ಮತ್ತು ಬ್ರಿಯಾನ್ ಕ್ರಾನ್ಸ್‌ಟನ್ (ಮಿ. ಪಿಂಗ್) ಮುಂತಾದವರು ಸೇರಿದ್ದು, ಪ್ರಖ್ಯಾತ ಕುಂಗ್ ಫೂ ಪಾಂಡಾ ಕಥೆ ಇನ್ನಷ್ಟು ರೋಚಕವಾಗಿರುವ ಸೂಚನೆಯನ್ನು ನೀಡಿದೆ. ಪೂನ ಥ್ರಿಲ್ಲರ್‌ ಸಾಹಸಗಳು ಈ ಸಿನಿಮಾದಲ್ಲೂ ಮುಂದುವರೆದಿದೆ. ಫಾಕ್ಸ್‌ ಝೆನ್‌ ಪಾತ್ರಕ್ಕೆ ಅಕಫಿನಾ ಧ್ವನಿ ನೀಡಿದ್ದಾರೆ.

ಮೈಕ್ ಮಿಷೆಲ್ ಮತ್ತು ಸ್ಟೀಫನಿ ಸ್ಟೈನ್ ನಿರ್ದೇಶನದ ಈ ಅನಿಮೇಟೆಡ್ ಮಾಸ್ಟರ್ ಪೀಸ್ ಜಾಕ್ ‍ಬ್ಲಾಕ್, ಡಸ್ಟಿನ್ ಹಾಫ್ ಮನ್ (ಶಿರ್ಫು), ಜೇಮ್ಸ್ ಹಾಂಗ್ (ಲಿ ಶಾನ್), ಮತ್ತು ಕ್ರೇನ್ಸ್ ಟನ್ (ಮಿ.ಪಿಂಗ್) ಅವರ ಧ್ವನಿಗಳು ಇವೆ.

ಇದನ್ನೂ ಓದಿ: Rashmika Mandanna: ಧನುಷ್‌ ನಟನೆಯ ʻಕುಬೇರʼ ಸಿನಿಮಾದ ರಶ್ಮಿಕಾ ಫಸ್ಟ್‌ ಲುಕ್‌ ಪೋಸ್ಟರ್‌ ಔಟ್‌!

ಹೊಸದಾಗಿ ಬಿಡುಗಡೆಯಾದ ಕುಂಗ್ ಫು ಪಾಂಡಾ 4ರೊಂದಿಗೆ ಸಿನಿಮಾ ಪ್ರೀಮಿಯಂ 4ಕೆ ಗುಣಮಟ್ಟದವರೆಗೆ ಜಾಹೀರಾತು ಮುಕ್ತ ಅನುಭವ ನೀಡಲಿದೆ, ಆಫ್ ಲೈನ್ ವೀಕ್ಷಣೆಯ ಆಯ್ಕೆಗಳನ್ನು ನೀಡಿದೆ. 8 ವರ್ಷಗಳ ಬಳಿಕ ಬಿಡುಗಡೆಯಾದ ಕುಂಗ್‌ ಫು ಪಾಂಡ 4 ಅನ್ನು ಇದೇ ಜುಲೈ 15ರಿಂದ ಮನೆಯಲ್ಲಿಯೇ ಕುಳಿತು ನೋಡಬಹುದಾಗಿದೆ. ಕುಂಗ್ ಫು ಪಾಂಡಾ 4ರಲ್ಲಿ ಜುಲೈ 15ರಿಂದ ಪ್ರಸಾರವಾಗಲಿರುವ ಜಿಯೊಸಿನಿಮಾ ಪ್ರೀಮಿಯಂನಲ್ಲಿ ಮಾತ್ರ ಆನಂದಿಸಿ

Continue Reading
Advertisement
Hardik Pandya
ಪ್ರಮುಖ ಸುದ್ದಿ7 mins ago

Hardik Pandya : ವಿಶ್ವ ಕಪ್​ ಗೆದ್ದ ಹಾರ್ದಿಕ್​ ಪಾಂಡ್ಯಗೆ ಮುತ್ತು ಕೊಟ್ಟು ಅಭಿನಂದಿಸಿದ ಇಶಾನ್ ಕಿಶನ್​

Weather News
ಉತ್ತರ ಕನ್ನಡ1 hour ago

Weather News: ಭಾರಿ ಮಳೆ; ಕರಾವಳಿಯಾದ್ಯಂತ ಶಾಲೆ-ಕಾಲೇಜುಗಳಿಗೆ ನಾಳೆ ರಜೆ ಘೋಷಣೆ

Mahindra Marazzo
ಪ್ರಮುಖ ಸುದ್ದಿ1 hour ago

Mahindra Marazzo : ಈ 7 ಸೀಟರ್​ ಕಾರಿನ ಉತ್ಪಾದನೆ ನಿಲ್ಲಿಸಿದ ಮಹೀಂದ್ರಾ

BSP President
ದೇಶ2 hours ago

BSP President: ತಮಿಳುನಾಡಿನಲ್ಲಿ ಬಿಎಸ್‌ಪಿ ರಾಜ್ಯಾಧ್ಯಕ್ಷ ಆರ್ಮ್‌ಸ್ಟ್ರಾಂಗ್‌ ಹತ್ಯೆ; ರಾಜಕೀಯ ವೈಷಮ್ಯ ಕಾರಣ?

Dengue Fever
ಕರ್ನಾಟಕ2 hours ago

Dengue Fever: ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ 155 ಡೆಂಗ್ಯೂ ಕೇಸ್‌ಗಳು ಪತ್ತೆ!

Rohit Sharma
ಪ್ರಮುಖ ಸುದ್ದಿ2 hours ago

T20 World Cup : ಮಹಾರಾಷ್ಟ್ರದ ಆಟಗಾರರಿಗೆ 11 ಕೋಟಿ ರೂಪಾಯಿ ಬಹುಮಾನ ಘೋಷಿಸಿದ ಮಹಾ ಸಿಎಂ ಶಿಂಧೆ

RBI Fine
ದೇಶ2 hours ago

RBI Fine: ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ ಆರ್‌ಬಿಐ 1.31 ಕೋಟಿ ರೂ. ದಂಡ; ಕಾರಣ ಹೀಗಿದೆ

Namma Metro
ಕರ್ನಾಟಕ2 hours ago

Namma Metro: ಮೆಟ್ರೋ ಪ್ರಯಾಣಿಕರಿಗೆ ಗುಡ್‌ ನ್ಯೂಸ್‌; ನಾಳೆಯಿಂದ ನೇರಳೆ ಮಾರ್ಗದಲ್ಲಿ ಹೆಚ್ಚುವರಿ ರೈಲು ಸೇವೆ

Viral Video
ವೈರಲ್ ನ್ಯೂಸ್2 hours ago

Viral Video: ಆಧಾರ್ ಕಾರ್ಡ್ ಫೋಟೋಗೆ ಸುಂದರ ಪೋಸ್ ಕೊಟ್ಟು ಮನ ಗೆದ್ದ ಪುಟಾಣಿ! ನಿಮಗೇನು ಅನಿಸಿತು?

Brain Eating Amoeba
ಆರೋಗ್ಯ2 hours ago

Brain Eating Amoeba: ಏನಿದು ಮೆದುಳು ತಿನ್ನುವ ಅಮೀಬಾ? ಇದರಿಂದ ನಮಗೂ ಅಪಾಯ ಇದೆಯೆ?

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast
ಮಳೆ5 hours ago

Karnataka Weather: ಧಾರಾಕಾರ ಮಳೆಗೆ ಜನರ ಒದ್ದಾಟ- ಸೇತುವೆಗಳು ಮುಳುಗಿ ಪರದಾಟ; ಶಾಲಾ-ಕಾಲೇಜುಗಳಿಗೆ ರಜೆ

Lovers Fighting
ಚಿಕ್ಕಬಳ್ಳಾಪುರ7 hours ago

Lovers Fighting: ಪ್ರೀತಿಸಿ ಕೈಕೊಟ್ಟವನಿಗೆ ನಡುರಸ್ತೆಯಲ್ಲೇ ಚಳಿ ಬಿಡಿಸಿದ ಗರ್ಭಿಣಿ

Medical negligence
ದಾವಣಗೆರೆ8 hours ago

Medical negligence: ಸಿಸೇರಿಯನ್ ಮಾಡುವಾಗ ಶಿಶುವಿನ ಮರ್ಮಾಂಗವನ್ನೇ ಕತ್ತರಿಸಿ ಸಾಯಿಸಿದ ವೈದ್ಯ!

karnataka rain
ಮಳೆ9 hours ago

Karnataka Rain: ಮಳೆಗೆ ಮನೆಗಳಿಗೆ ನುಗ್ಗುತ್ತಿವೆ ಹಾವುಗಳು! ಕುಸಿದು ಬಿತ್ತು ಮನೆಗಳು

Elephant attack in Hassan and Chikmagalur
ಹಾಸನ11 hours ago

Elephant Attack : ಕಾಫಿ ತೋಟದ‌ ಕೆಲಸಗಾರನನ್ನು ಸೊಂಡಿಲಿನಿಂದ ಎತ್ತಿ ಬಿಸಾಡಿದ ಒಂಟಿ ಸಲಗ

Physical Abuse
ಬೆಂಗಳೂರು12 hours ago

Physical Abuse : ಇವಳೇನು ಶಿಕ್ಷಕಿಯೋ ಕಾಮುಕಿಯೋ; ಬಾಲಕಿಯ ಖಾಸಗಿ ಅಂಗಾಂಗ ಮುಟ್ಟಿ ವಿಕೃತಿ

Self Harming in bengaluru
ಬೆಂಗಳೂರು12 hours ago

Self Harming : ವರದಕ್ಷಿಣೆ ಟಾರ್ಚರ್‌; ಫ್ಯಾನಿಗೆ ನೇಣು ಬಿಗಿದುಕೊಂಡು ಟೆಕ್ಕಿ ಸೂಸೈಡ್‌

karnataka Weather Forecast Rain
ಮಳೆ17 hours ago

Karnataka Weather : ಕರಾವಳಿ, ಮಲೆನಾಡಿನಲ್ಲಿ ಮಳೆ ಅಬ್ಬರ; ಇಲ್ಲೆಲ್ಲ ಕಾದಿದೆ ಗಂಡಾಂತರ

karnataka Weather Forecast
ಮಳೆ1 day ago

Karnataka Weather : ಭಾರಿ ಮಳೆಗೆ ಗುಡ್ಡ ಕುಸಿತ; ಮಣ್ಣಿನ ಅಡಿ ಸಿಲುಕಿದ ಮಹಿಳೆ ಉಸಿರುಗಟ್ಟಿ ಸಾವು

karnataka Rain
ಮಳೆ1 day ago

Karnataka Rain : ಮಳೆಗೆ ಜಾರಿ ಮುಖಾಮುಖಿ ಡಿಕ್ಕಿಯಾದ ಲಾರಿಗಳು; ಕಾರಿನ ಮೇಲೆ ಬಿದ್ದ ಬೃಹತ್‌ ಮರ

ಟ್ರೆಂಡಿಂಗ್‌