ಕಭಿ ಈದ್ ಕಭಿ ದಿವಾಲಿ: Salman Khan ಹೊಸ ಚಿತ್ರದ ಹೆಸರು ಬದಲಾಗುತ್ತಾ? ಹಾಗಿದ್ರೆ ಯಾಕೆ? - Vistara News

ಸಿನಿಮಾ

ಕಭಿ ಈದ್ ಕಭಿ ದಿವಾಲಿ: Salman Khan ಹೊಸ ಚಿತ್ರದ ಹೆಸರು ಬದಲಾಗುತ್ತಾ? ಹಾಗಿದ್ರೆ ಯಾಕೆ?

ಬಾಕ್ಸ್‌ ಅಫೀಸ್‌ ಕಿಂಗ್‌ ಸಲ್ಮಾನ್‌ ಖಾನ್‌ ಬಹುನಿರೀಕ್ಷಿತ ಚಿತ್ರವಾದ ಕಭಿ ಈದ್‌ ಕಭಿ ದಿವಾಲಿ ಚಿತ್ರದ ಹೆಸರನ್ನು ಬದಲಾಯಿಸಲಾಗುತ್ತದೆ ಎಂಬ ಸುದ್ದಿ ಹರಡಿದೆ. ಹಾಗಿದ್ದರೆ ಸಲ್ಮಾನ್‌ ಮತ್ತೊಮ್ಮೆ ಭಾಯಿಜಾನ್‌ ಆಗುತ್ತಾರಾ?

VISTARANEWS.COM


on

kabhi eid kabhi diwali
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮುಂಬಯಿ: ಸಲ್ಲೂಬಾಯಿ ಚಿತ್ರಗಳು ಅಂದ್ರೇನೇ ಹಾಗೇ. ಮನರಂಜನೆ, ಸಖತ್‌ ಹಾಡುಗಳು, ಉತ್ತಮ ಕಥೆ ಹಾಗೂ ಜಬರ್ದಸ್ತ್‌ ಸಾಹಸವನ್ನು ಒಳಗೊಂಡಿರುತ್ತದೆ. ಪ್ರೇಕ್ಷಕ ವರ್ಗವನ್ನು ಹಿಡಿದಿಡುವ ನಾಯಕರಲ್ಲಿ ಸಲ್ಮಾನ್‌ ಖಾನ್ ಮುಂಚೂಣಿಯಲ್ಲಿದ್ದಾರೆ. ಅವರ ಸಿನಿಮಾಗಳು ತೆರೆಯ ಮೇಲೆ ಬರುವ ಮೊದಲೇ ಸಾಕಷ್ಟು ಸುದ್ದಿ ಮಾಡಿರುತ್ತವೆ. ಹೀಗೆ ಸೆಟ್ಟೇರುವ ಹಂತದಲ್ಲೇ ಸಾಕಷ್ಟು ಗಮನ ಸೆಳೆದದ್ದು ಅವರ ಮುಂದಿನ ಸಿನಿಮಾದ ಟೈಟಲ್‌: ಕಭಿ ಈದ್‌ ಕಭಿ ದಿವಾಲಿ.

ಆದರೆ, ಈಗ ಬರುತ್ತಿರುವ ಸುದ್ದಿ ಪ್ರಕಾರ, ಈ ಟೈಟಲ್‌ ಬದಲಾಗಲಿದೆ. ಸಲ್ಮಾನ್‌ ಖಾನ್‌ ತಮ್ಮ ಇಷ್ಟದ ಟೈಟಲ್‌ ಆಗಿರುವ ಭಾಯಿ ಜಾನ್‌ಗೇ ಮರಳಲಿದ್ದಾರೆ. ಸಲ್ಮಾನ್‌ ಖಾನ್‌ ಅವರು ನಟಿಸಿದ ಭಜರಂಗಿ ಭಾಯಿ ಜಾನ್‌ ಭಾರಿ ಜನಪ್ರಿಯ ಚಿತ್ರ. 2015ರಲ್ಲಿ ಬಿಡುಗಡೆಯಾದ ಈ ಸಿನಿಮಾ ಸಲ್ಮಾನ್‌ ಖಾನ್‌ ಅವರನ್ನು ಮನೆ ಮನೆಯ ಹೀರೊ ಮಾಡಿತ್ತು. ಈಗ ಹೊಸ ಚಿತ್ರಕ್ಕೆ ಭಾಯಿ ಜಾನ್‌ ಎಂದು ಹೆಸರಿಟ್ಟರೆ ಅಭಿಮಾನಿಗಳು ಭಜರಂಗಿ ಭಾಯಿ ಜಾನ್‌ಗೂ ಕನೆಕ್ಟ್‌ ಮಾಡಿಕೊಳ್ಳುವ ಸಾಧ್ಯತೆ ಇದೆ. ಇದರಿಂದ ಚಿತ್ರದ ನಿರೀಕ್ಷೆ ಇನ್ನಷ್ಟು ಹೆಚ್ಚಲಿದೆ.

ಕಭಿ ಈದ್‌ ಕಭಿ ದಿವಾಲಿ ಸಿನಿಮಾಕ್ಕೆ ಸಂಬಂಧಿಸಿ ಈಗಾಗಲೇ ಹಲವು ಬದಲಾವಣೆಗಳು ಆಗಿ ಹೋಗಿದೆ. ಮೇ ತಿಂಗಳ ಆರಂಭದಲ್ಲಿ, ಆಯುಷ್ ಶರ್ಮಾ ಚಿತ್ರದಿಂದ ಹೊರನಡೆದಿದ್ದರು. ನಿರ್ದೇಶಕ ಫರ್ಹಾದ್‌ ಸಾಮ್ಜಿ ಅವರೊಂದಿಗೆ ಭಿನ್ನಾಭಿಪ್ರಾಯದಿಂದ ಅವರು ದೂರ ಸರಿದರು ಎನ್ನಲಾಗಿತ್ತು. ಆಗ ಸಂಬಂಧಿಕನೇ ಆಗಿರುವ ಆಯುಷ್‌ ಶರ್ಮನನ್ನು ಮರಳಿ ಕರೆ ತರುವ ಹೊಣೆಯನ್ನು ಸಲ್ಮಾನ್‌ ಖಾನ್‌ಗೇ ವಹಿಸಲಾಗಿತ್ತು. ಆದರೆ, ಸಲ್ಮಾನ್‌ ಖಾನ್‌ ಈ ಬಗ್ಗೆ ಹೆಚ್ಚು ಆಸಕ್ತಿ ತೋರಲಿಲ್ಲ. ಆಯುಷ್‌ ಶರ್ಮ ಅವರ ಪಾತ್ರವನ್ನು ಈಗ ಜಸ್ಸಿ ಗಿಲ್‌ ತುಂಬಿದ್ದಾರೆ. ಈ ನಡುವೆ ನಟ ಜಹೀರ್‌ ಇಕ್ಬಾಲ್‌ ಅವರೂ ಪ್ರಾಜೆಕ್ಟ್‌ ತೊರೆದಿದ್ದು, ಸಿದ್ಧಾರ್ಥ್‌ ನಿಗಮ್‌ ಆ ಸ್ಥಾನಕ್ಕೆ ಬಂದಿದ್ದಾರೆ.

ಪೂಜಾ ಹೆಗ್ಡೆ ಎಂಟ್ರಿ
ಕಭಿ ಈದ್ ಕಭಿ ದಿವಾಲಿ ಸಿನಿಮಾದಲ್ಲಿ ಕರಾವಳಿ ಬೆಡಗಿ ಪೂಜಾ ಹೆಗ್ಡೆ ಸಹ ನಟಿಸಲಿದ್ದಾರೆ. ಭರವಸೆಯ ನಟಿ ಶೆಹನಾಜ್ ಗಿಲ್ ಅವರಿಗೆ ಇದು ಚೊಚ್ಚಲ ಬಾಲಿವುಡ್ ಚಿತ್ರವಾಗಲಿದೆ. ಅವರು ಈಗಾಗಲೇ ಚಿತ್ರೀಕರಣದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಮುಂಬಯಿಯಲ್ಲಿ ಮೊದಲ ಶೆಡ್ಯೂಲ್‌ನ ಚಿತ್ರೀಕರಣ ನಡೆಯುತ್ತಿದ್ದು, ಎರಡನೇ ಸುತ್ತು ಹೈದರಾಬಾದ್‌ನಲ್ಲಿ ನಡೆಯಲಿದೆ. ಬಳಿಕ ಉತ್ತರ ಭಾರತದ ಹಲವು ನಗರಗಳಲ್ಲಿ ಚಿತ್ರೀಕರಣ ನಡೆಯಲಿದೆ ಎಂದು ತಿಳಿದುಬಂದಿದೆ.
ಕಭಿ ಈದ್ ಕಭಿ ದಿವಾಲಿ ಹೊರತುಪಡಿಸಿ ಸಲ್ಮಾನ್ ಖಾನ್ ಇತರ ಹಲವು ಸಿನಿಮಾಗಳಲ್ಲಿ ಸಲ್ಮಾನ್‌ ಬ್ಯುಸಿ ಆಗಿದ್ದಾರೆ. ರೆಡಿ ಆಗುತ್ತಿದ್ದಾರೆ. ಕತ್ರಿನಾ ಕೈಫ್ ಸಹ ನಟಿಸಿರುವ ಟೈಗರ್ 3 ಗಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಈ ಚಿತ್ರವು 2023ರ ಏಪ್ರಿಲ್‌ನಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಶಾರುಖ್ ಖಾನ್ ಅವರ ಪಠಾನ್ ಚಿತ್ರದಲ್ಲಿ ಹಿಂದೆಂದೂ ನೋಡಿರದ ಆಕ್ಷನ್ ಸೀಕ್ವೆನ್ಸ್ ಗಳಲ್ಲಿ ಸಲ್ಮಾನ್ ಖಾನ್ ಕಾಣಿಸಿಕೊಳ್ಳಲಿದ್ದಾರೆ. ಇದರ ಕೆಲವು ಆಯ್ದ ದೃಶ್ಯಗಳನ್ನು ಟೈಗರ್‌ 3ಯಲ್ಲಿಯೂ ಬಳಸಲಾಗುತ್ತದೆ ಎಂಬ ಸುದ್ದಿ ಇದೆ.

ಇದನ್ನೂ ಓದಿ: ಬಾಲಿವುಡ್‌ ನ ಜನ ಮೆಚ್ಚಿದ ಗಾಯಕ ಕೆಕೆ, ಶಾಸ್ತ್ರೀಯ ಸಂಗೀತ ಕಲಿಯದಿದ್ದರೂ, 3,000 ಜಿಂಗಲ್ಸ್‌ ಹಾಡಿದ್ದರು!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಸಿನಿಮಾ

Jolly LLB 3: ಬರ್ತಿದೆ ಅಕ್ಷಯ್‌ ಕುಮಾರ್‌ ನಟನೆಯ ಜಾಲಿ ಎಲ್‌ಎಲ್‌ಬಿ 3; ಈ ಬಾರಿ ಇದೆ ಸರ್‌ಪ್ರೈಸ್!

Jolly LLB 3: ಜಾಲಿ ಎಲ್‌ಎಲ್‌ಬಿ 3 ಸಿನಿಮಾ ಶೂಟಿಂಗ್‌ ಆರಂಭವಾಗಿರುವ ಕುರಿತು ಬಾಲಿವುಡ್‌ ನಟ ಅಕ್ಷಯ್‌ ಕುಮಾರ್‌ ಅವರು ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ. ಈ ಬಾರಿ ಅರ್ಷದ್‌ ವಾರ್ಸಿ ಹಾಗೂ ಅಕ್ಷಯ್‌ ಕುಮಾರ್‌ ಅವರು ಪಾರ್ಟ್‌ 3ನಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಸಿನಿಮಾ ಬಿಡುಗಡೆ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ.

VISTARANEWS.COM


on

Jolly LLB 3
Koo

ಮುಂಬೈ: ಅರ್ಷದ್‌ ವಾರ್ಸಿ ನಟನೆಯ ಜಾಲಿ ಎಲ್‌ಎಲ್‌ಬಿ (Jolly LLB) ಹಾಗೂ ಅಕ್ಷಯ್‌ ಕುಮಾರ್‌ (Askhay Kumar) ಅಭಿನಯದ ಜಾಲಿ ಎಲ್‌ಎಲ್‌ಬಿ 2 (Jolly LLB 2) ಸಿನಿಮಾಗಳು ಸೂಪರ್‌ ಹಿಟ್‌ ಆಗಿದ್ದವು. ಕೋರ್ಟ್‌ ಡ್ರಾಮಾ ಜಾನರ್‌ನ ಈ ಸಿನಿಮಾಗಳು ಕಾಮಿಡಿ ದಿಸೆಯಲ್ಲೂ ಜನರ ಮನಸೂರೆಗೊಳಿಸಿದ್ದವು. ಸೌರಭ್‌ ಶುಕ್ಲಾ ಅವರ ಮನೋಜ್ಞ ನಟನೆಯೂ ಮೆಚ್ಚುಗೆ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ, ನಟ ಅಕ್ಷಯ್‌ ಕುಮಾರ್‌ ಅವರು ಜಾಲಿ ಎಲ್‌ಎಲ್‌ಬಿ 3 (Jolly LLB 3) ಸಿನಿಮಾ ಕುರಿತು ಮಹತ್ವದ ಘೋಷಣೆ ಮಾಡಿದ್ದಾರೆ.

ಹೌದು, ಜಾಲಿ ಎಲ್‌ಎಲ್‌ಬಿ 3 ಸಿನಿಮಾ ಶೂಟಿಂಗ್‌ ಶುರುವಾಗಿರುವ ಕುರಿತು ಅಕ್ಷಯ್‌ ಕುಮಾರ್‌ ಅವರು ವಿಡಿಯೊ ಸಮೇತ ಮಾಹಿತಿ ನೀಡಿದ್ದಾರೆ. “ಈಗ ಅಸಲಿ ಯಾರು, ನಕಲಿ ಯಾರು ಎಂಬುದು ಗೊತ್ತಿಲ್ಲ. ಆದರೆ, ಇದು ನಿಮಗೆ ಅತ್ಯುತ್ತಮ ಸಿನಿ ಪಯಣ ಆಗಲಿದೆ. ನನ್ನ ಅಪ್‌ಡೇಟ್‌ಗಳಿಗಾಗಿ ಕಾಯುತ್ತಿರಿ. ಜೈ ಮಹಾಕಾಳ್”‌ ಎಂಬುದಾಗಿ ಅಕ್ಷಯ್‌ ಕುಮಾರ್‌ ಅವರು ವಿಡಿಯೊ ಜತೆಗೆ ಎಕ್ಸ್‌ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದಾರೆ. ಅಕ್ಷಯ್‌ ಕುಮಾರ್‌ ಘೋಷಣೆ ಬಳಿಕ ಅಭಿಮಾನಿಗಳು ಖುಷಿಯಾಗಿದ್ದಾರೆ.

ಸಿನಿ ಪ್ರೇಮಿಗಳಿಗೆ ಸರ್‌ಪ್ರೈಸ್‌

ಜಾಲಿ ಎಲ್‌ಎಲ್‌ಬಿ ಸಿನಿಮಾದಲ್ಲಿ ಅಭಿಮಾನಿಗಳಿಗೆ ಅಕ್ಷಯ್‌ ಕುಮಾರ್‌ ಸರ್‌ಪ್ರೈಸ್‌ ನೀಡಿದ್ದಾರೆ. ಜಾಲಿ ಎಲ್‌ಎಲ್‌ಬಿ ಸರಣಿಯ ಮೊದಲ ಸಿನಿಮಾದಲ್ಲಿ ಅರ್ಷದ್‌ ವಾರ್ಸಿ ಅವರು ಹೀರೊ ಆಗಿದ್ದರೆ, ಎರಡನೇ ಸಿನಿಮಾದಲ್ಲಿ ಅಕ್ಷಯ್‌ ಕುಮಾರ್‌ ಹೀರೊ ಆಗಿದ್ದರು. ಆದರೆ, ಮೂರನೇ ಭಾಗದಲ್ಲಿ ಅಕ್ಷಯ್‌ ಕುಮಾರ್‌ ಹಾಗೂ ಅರ್ಷದ್‌ ವಾರ್ಸಿ ಇಬ್ಬರೂ ಇದ್ದಾರೆ. ಎಂದಿನಂತೆ ಸೌರಭ್‌ ಶುಕ್ಲಾ ಅವರು ನ್ಯಾಯಾಧೀಶರ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಸಿನಿಮಾಗೆ ಯಾರು ನಾಯಕಿ ಎಂಬುದರ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

ಅಕ್ಷಯ್‌ ಕುಮಾರ್‌ ಹಾಗೂ ಅರ್ಷದ್‌ ವಾರ್ಸಿ ಅವರು ಇದಕ್ಕೂ ಮೊದಲು ಎರಡು ಸಿನಿಮಾಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. 2002ರಲ್ಲಿ ಬಿಡುಗಡೆಯಾದ ಜಾನಿ ದುಷ್ಮನ್: ಏಕ್‌ ಅನೋಖಿ ಕಹಾನಿ ಹಾಗೂ 2022ರಲ್ಲಿ ಬಿಡುಗಡೆಯಾದ ಬಚ್ಚನ್‌ ಪಾಂಡೆ ಸಿನಿಮಾದಲ್ಲಿ ಇಬ್ಬರೂ ಜತೆಯಾಗಿ ನಟಿಸಿದ್ದರು. ಅರ್ಷದ್‌ ವಾರ್ಸಿ ಅವರ ಜಾಲಿ ಎಲ್‌ಎಲ್‌ಬಿ 2013ರಲ್ಲಿ ಬಿಡುಗಡೆಯಾಗಿತ್ತು. ಅಕ್ಷಯ್‌ ಕುಮಾರ್‌ ನಟನೆಯ ಜಾಲಿ ಎಲ್‌ಎಲ್‌ಬಿ 2 ಸಿನಿಮಾ 2017ರಲ್ಲಿ ಬಿಡುಗಡೆಯಾಗಿ ಮೆಚ್ಚುಗೆಗೆ ಪಾತ್ರವಾಗಿತ್ತು.

ಇದನ್ನೂ ಓದಿ: Akshay Kumar: ತೆಲುಗು ಚಿತ್ರಕ್ಕೆ ಎಂಟ್ರಿ ಕೊಟ್ಟ ಅಕ್ಷಯ್‌ ಕುಮಾರ್‌; ಜತೆಗಿರಲಿದ್ದಾರೆ ಶಿವಣ್ಣ!

Continue Reading

ಬಾಲಿವುಡ್

Deepika Padukone: ಸಖತ್‌ ಗ್ಲೋ ಆದ ಪ್ರೆಗ್ನೆಂಟ್‌ ದೀಪಿಕಾ: ಜ್ಯೂನಿಯರ್‌ ಆರ್ಟಿಸ್ಟ್‌ ಕೊಟ್ಟ ಸ್ಪೆಷಲ್‌ ಗಿಫ್ಟ್‌ ಏನು?

Deepika Padukone: ದೀಪಿಕಾ ತನ್ನೊಂದಿಗೆ ಕೆಲಸ ಮಾಡುವ ಜ್ಯೂನಿಯರ್‌ ಕಲಾವಿದರೊಂದಿಗೆ ಪೋಸ್ ನೀಡಿದ್ದಾರೆ. ಜ್ಯೂನಿಯರ್‌ ಕಲಾವಿದರು ನಟಿಗಾಗಿ ಮಾಡಿದ ಸ್ಕೆಚ್ ಮತ್ತು ಹೂಗುಚ್ಛವನ್ನು ನೀಡಿದ್ದಾರೆ. ಫೋಟೊ ಶೇರ್‌ ಮಾಡಿ ʻʻನಮ್ಮ ನಾಯಕಿ ಲೇಡಿ ಸಿಂಗಮ್ಗೆ” ಎಂದು ಕ್ಯಾಪ್ಷನ್‌ ಕೊಟ್ಟಿದ್ದಾರೆ. ದೀಪಿಕಾ, ಸದ್ಯ ಸಿನಿಮಾದಿಂದ ಬ್ರೇಕ್‌ ಪಡೆದುಕೊಂಡಿದ್ದಾರೆ.ಈ ವರ್ಷ ಸೆಪ್ಟೆಂಬರ್​ ತಿಂಗಳಲ್ಲಿ ಅವರು ಮಗುವಿಗೆ ಜನ್ಮ ನೀಡಲಿದ್ದಾರೆ.

VISTARANEWS.COM


on

Deepika Padukone
Koo

ಬೆಂಗಳೂರು: ತಾಯಿಯಾಗಲಿರುವ ದೀಪಿಕಾ ಪಡುಕೋಣೆ ( Deepika Padukone) ಸದ್ಯ `ಸಿಂಗಂ ಅಗೇನ್’ ಚಿತ್ರದ ಶೂಟಿಂಗ್ ನಲ್ಲಿದ್ದಾರೆ. ಸೆಟ್‌ನಲ್ಲಿದ್ದಾಗ, ದೀಪಿಕಾ ತನ್ನೊಂದಿಗೆ ಕೆಲಸ ಮಾಡುವ ಜ್ಯೂನಿಯರ್‌ ಕಲಾವಿದರೊಂದಿಗೆ ಪೋಸ್ ನೀಡಿದ್ದಾರೆ. ಫೋಟೊದಲ್ಲಿ ದೀಪಿಕಾ ಪಡುಕೋಣೆ ಅವರ ಮುಖ ಗ್ಲೋ ಆಗಿ ಕಂಡಿದೆ. ಇದೀಗ ದೀಪಿಕಾ ಫ್ಯಾನ್ಸ್‌ ಮೆಚ್ಚಿನ ನಟಿಯನ್ನು ಕಂಡು ಸಂತಸ ಹೊರಹಾಕುತ್ತಿದ್ದಾರೆ.

ಮಗುವಿನ ನಿರೀಕ್ಷೆಯಲ್ಲಿರುವ ದೀಪಿಕಾ ʻಸಿಂಗಮ್ ಅಗೇನ್ʼ ಚಿತ್ರದಲ್ಲಿ ಲೇಡಿ ಸಿಂಗಮ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗೆ, ದೀಪಿಕಾ ಅವರೊಂದಿಗೆ ಕೆಲಸ ಮಾಡಿದ ಜ್ಯೂನಿಯರ್‌ ಕಲಾವಿದರು ನಟಿಯೊಂದಿಗಿನ ಸೆಲ್ಫಿಯನ್ನು ಇನ್‌ಸ್ಟಾದಲ್ಲಿ ಹಂಚಿಕೊಂಡಿದ್ದಾರೆ. ಜ್ಯೂನಿಯರ್‌ ಕಲಾವಿದರು ನಟಿಗಾಗಿ ಮಾಡಿದ ಸ್ಕೆಚ್ ಮತ್ತು ಹೂಗುಚ್ಛವನ್ನು ನೀಡಿದ್ದಾರೆ. ಫೋಟೊ ಶೇರ್‌ ಮಾಡಿ ʻʻನಮ್ಮ ನಾಯಕಿ ಲೇಡಿ ಸಿಂಗಮ್‌”ಗೆ ಎಂದು ಕ್ಯಾಪ್ಷನ್‌ ಕೊಟ್ಟಿದ್ದಾರೆ.

ಜ್ಯೂನಿಯರ್‌ ಆರ್ಟಿಸ್ಟ್‌ಗಳು ಪೋಟೊ ಶೇರ್‌ ಮಾಡಿ ʻದೀಪಿಕಾ ಪಡುಕೋಣೆ ದಿ ಓನ್ಲಿ ಲೇಡಿ ಸಿಂಗಮ್ . ನಿಮ್ಮನ್ನು ಭೇಟಿಯಾಗಿದ್ದು ಸಂತೋಷವಾಗಿದೆ ಮೇಡಮ್. ನನ್ನ ಜೀವನದ ಅತ್ಯುತ್ತಮ ದಿನಗಳಲ್ಲಿ ಒಂದು. ನಿಮ್ಮೊಂದಿಗೆ ಕೆಲಸ ಮಾಡಿದ್ದು ನಮ್ಮ ಅದೃಷ್ಟ. ಭವಿಷ್ಯದಲ್ಲಿ ನಾವು ಇನ್ನೂ ಹಲವು ಬಾರಿ ನಿಮ್ಮನ್ನು ಭೇಟಿಯಾಗಬೇಕೆಂದು ಪ್ರಾರ್ಥಿಸುತ್ತೇವೆʼʼ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Deepika Padukone: ತಾಯ್ತತನದ ಜೊತೆಗೆ ವೃತ್ತಿ ಜೀವನ ನಿಭಾಯಿಸುತ್ತಿರುವ ದೀಪಿಕಾ ಪಡುಕೋಣೆ

ʻಸಿಂಗಂ ಅಗೇನ್ʼ ಚಿತ್ರದಲ್ಲಿ ದೀಪಿಕಾ ಪಡುಕೋಣೆ (Deepika Padukone) ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರೋಹಿತ್ ಶೆಟ್ಟಿ ನಿರ್ದೇಶನದ ಈ ಸಿನಿಮಾದಲ್ಲಿ ಹಲವು ಪ್ರಮುಖ ನಟರು ಇದ್ದಾರೆ. ಲೇಡಿ ಸಿಂಗಮ್ ಚಿತ್ರದಲ್ಲಿ ಅಜಯ್ ದೇವಗನ್ ಅವರ ಸಹೋದರಿ ಪಾತ್ರವನ್ನು ನಿರ್ವಹಿಸಲಿದ್ದಾರೆʼʼಎನ್ನಲಾಗಿತ್ತು.

ದೀಪಿಕಾ ಪಡುಕೋಣೆ ಮತ್ತು ರಣವೀರ್​ ಸಿಂಗ್ ಅವರು ಪರಸ್ಪರ ಪ್ರೀತಿ ಮದುವೆ ಆಗಿದ್ದು 2018ರಲ್ಲಿ. ಆರು ವರ್ಷಗಳ ಬಳಿಕ ಅವರು ಮಗು ಹೊಂದುವ ನಿರ್ಧಾರಕ್ಕೆ ಬಂದಿದ್ದಾರೆ. ಫೈಟರ್‌ನಲ್ಲಿ ಹೃತಿಕ್ ರೋಷನ್ ಜತೆಗೆ ಕೊನೆಯದಾಗಿ ಕಾಣಿಸಿಕೊಂಡ ದೀಪಿಕಾ, ಸದ್ಯ ಸಿನಿಮಾದಿಂದ ಬ್ರೇಕ್‌ ಪಡೆದುಕೊಂಡಿದ್ದಾರೆ. ಈ ವರ್ಷ ಸೆಪ್ಟೆಂಬರ್​ ತಿಂಗಳಲ್ಲಿ ಅವರು ಮಗುವಿಗೆ ಜನ್ಮ ನೀಡಲಿದ್ದಾರೆ.

Continue Reading

ಬಾಲಿವುಡ್

Amitabh Bachchan: ಅಮಿತಾಭ್‌ ಬಚ್ಚನ್‌ ವ್ಯಾನ್‌ನಲ್ಲಿ ಸುಸ್ಸು ಮಾಡೋದೇ ನನ್ನ ಗುರಿ ಎಂದ ಖ್ಯಾತ ನಿರ್ದೇಶಕ!

Amitabh Bachchan: ವಿಧು ವಿನೋದ್ ಚೋಪ್ರಾ (Vidhu Vinod Chopra) ಜತೆ ಬಚ್ಚನ್‌ ಸಿನಿಮಾ ಮಾಡಲು ಒಪ್ಪಿದರು. ಅಮಿತಾಭ್‌ ಅವರು ಕೂಡ ಉತ್ತಮ ಸ್ಕ್ರಿಪ್ಟ್‌ಗಾಗಿ ಕಾದಿದ್ದರು. ಹೀಗಾಗಿ ಅಂತೂ ಬಚ್ಚನ್‌ ಹಾಗೂ ವಿಧು ವಿನೋದ್ ಚೋಪ್ರಾ ಒಟ್ಟಿಗೆ ಕೈ ಜೋಡಿಸಿ ʻಏಕಲವ್ಯ: ದಿ ರಾಯಲ್ ಗಾರ್ಡ್‌ʼ ಸಿನಿಮಾ (Eklavya: The Royal Guard) ಮಾಡಿ ತೆರೆ ತಂದರು. ವಿಧು ವಿನೋದ್ ಚೋಪ್ರಾ ಮಾತನಾಡಿ ʻʻಅಮಿತಾಭ್‌ ಅವರ ವ್ಯಾನಿಟಿ ವ್ಯಾನ್‌ನಲ್ಲಿ (vanity van) ಮೂತ್ರ ಮಾಡಬೇಕು ಎಂಬುದೇ ನನ್ನ ದೊಡ್ಡ ಮಹತ್ವಾಕಾಂಕ್ಷೆಯಾಗಿತ್ತುʼʼಎಂದು ಹೇಳಿಕೊಂಡಿದ್ದಾರೆ.

VISTARANEWS.COM


on

Amitabh Bachchan vanity van ambition was to pee by Vidhu Vinod Chopra
Koo

ಬೆಂಗಳೂರು: ಬಾಲಿವುಡ್‌ ಫೇಮಸ್‌ ನಿರ್ದೇಶಕ ವಿಧು ವಿನೋದ್ ಚೋಪ್ರಾ ಅವರು ಅಮಿತಾಭ್‌ ಬಚ್ಚನ್‌ (Amitabh Bachchan) ಅವರೊಂದಿಗಿನ ಅವರ ಮೊದಲ ಭೇಟಿಯನ್ನು ನೆನಪಿಸಿಕೊಂಡರು. ಹೃಷಿಕೇಶ್ ಮುಖರ್ಜಿಯವರ ಶಿಫಾರಸು ಮೇರೆಗೆ ಅಮಿತಾಭ್‌ ಅವರನ್ನು ಮೊದಲ ಬಾರಿ ಭೇಟಿ ಮಾಡಿದರು. ಆ ಬಳಿಕ ವಿಧು ವಿನೋದ್ ಚೋಪ್ರಾ (Vidhu Vinod Chopra) ಜತೆ ಬಚ್ಚನ್‌ ಸಿನಿಮಾ ಮಾಡಲು ಒಪ್ಪಿದರು. ಅಮಿತಾಭ್‌ ಅವರು ಕೂಡ ಉತ್ತಮ ಸ್ಕ್ರಿಪ್ಟ್‌ಗಾಗಿ ಕಾದಿದ್ದರು. ಹೀಗಾಗಿ ಅಂತೂ ಬಚ್ಚನ್‌ ಹಾಗೂ ವಿಧು ವಿನೋದ್ ಚೋಪ್ರಾ ಒಟ್ಟಿಗೆ ಕೈ ಜೋಡಿಸಿ ʻಏಕಲವ್ಯ: ದಿ ರಾಯಲ್ ಗಾರ್ಡ್‌ʼ ಸಿನಿಮಾ (Eklavya: The Royal Guard) ಮಾಡಿ ತೆರೆ ತಂದರು.

ಕೆಲ್ಲಾಗ್ ಮ್ಯಾನೇಜ್‌ಮೆಂಟ್ ಸ್ಕೂಲ್‌ನಲ್ಲಿ ನಡೆದ ಚಾಟ್‌ನಲ್ಲಿ ವಿಧು ವಿನೋದ್ ಚೋಪ್ರಾ ಮಾತನಾಡಿ ʻʻಅಮಿತಾಭ್‌ ಅವರ ವ್ಯಾನಿಟಿ ವ್ಯಾನ್‌ನಲ್ಲಿ (vanity van) ಮೂತ್ರ ಮಾಡಬೇಕು ಎಂಬುದೇ ನನ್ನ ದೊಡ್ಡ ಮಹತ್ವಾಕಾಂಕ್ಷೆಯಾಗಿತ್ತುʼʼಎಂದು ಹೇಳಿಕೊಂಡಿದ್ದಾರೆ. ವಿಧು ವಿನೋದ್ ಚೋಪ್ರಾ ಮಾತನಾಡಿ, “ಅಮಿತಾಭ್‌ ಅವರೊಂದಿಗೆ ಚಲನಚಿತ್ರ ಮಾಡುವುದು ಅವರ ವೈಯಕ್ತಿಕ ವಾಶ್‌ರೂಮ್‌ನಲ್ಲಿ ಮೂತ್ರ ವಿಸರ್ಜಿಸುವಷ್ಟು ಮುಖ್ಯವಾಗಿರಲಿಲ್ಲ” ಎಂದು ನಗುತ್ತ ಹೇಳಿದರು. “ನಾನು ಅಮಿತಾಭ್‌ ಅವರನ್ನು ಮೊದಲು ಅವರ ವ್ಯಾನಿಟಿ ವ್ಯಾನ್‌ನಲ್ಲಿ ಭೇಟಿಯಾದೆ. ಆ ಸಮಯದಲ್ಲಿ, ಅಮಿತಾಭ್‌ ಬಚ್ಚನ್ ಅವರ ವ್ಯಾನಿಟಿ ವ್ಯಾನ್‌ನಲ್ಲಿ ಶೌಚಾಲಯವಿದೆ ಎಂಬುದು ದೊಡ್ಡ ಸುದ್ದಿಯಾಗಿತ್ತು. ಮೊದಲ ಬಾರಿಯ ಭೇಟಿಯಲ್ಲಿಯೇ ನಾನು ತುಂಬಾ ಅಸಭ್ಯವಾಗಿ ವರ್ತಿಸಿದೆ. ಅಮಿತಾಭ್‌ಗೆ ನಾನು ಹೀಗೆ ಹೇಳಿದೆ. ನನ್ನ ಹೆಸರು ತುಂಬಾ ಪ್ರಭಾವಶಾಲಿಯಾಗಿಲ್ಲದಿರಬಹುದು, ಆದರೆ ನನ್ನ ಚಿತ್ರ….ಇದೆʼʼಎಂದು ಹೇಳಿದಾಗ ಸ್ವಲ್ಪ ನನ್ನನ್ನು ದಿಟ್ಟಿಸಿ ನೋಡಿ ಕೊನೆಗೆ ಸಿನಿಮಾ ಮಾಡಲು ಒಪ್ಪಿದರು ಎಂದರು.

ಇದನ್ನೂ ಓದಿ: Amit Shah: ಅಮಿತ್‌ ಶಾ ತಿರುಚಿದ ವಿಡಿಯೋ ಪ್ರಕರಣ: ಆಪ್‌, ಕಾಂಗ್ರೆಸ್‌ ಪಕ್ಷದ ಮೂವರ ಬಂಧನ

ಮಾತು ಮುಂದುವರಿಸಿ ʻʻಅಮಿತಾಭ್‌, ಹೃಷಿ ಮತ್ತು ನಟಿ ರೇಖಾ ಎಲ್ಲರೂ ಈಗ ಕೆಲಸದಲ್ಲಿ ನಿರತರಾಗಿದ್ದಾರೆ. ಆಗಾಗ ಅವರ ಮಧ್ಯೆ ಕೆಲವು ವಾದಗಳು ನಡೆಯುತ್ತಿತ್ತು. ನಾನು ನನ್ನ ಸಿನಿಮಾ ಮರ್ಡರ್‌ ಅಟ್‌ ಮಂಕಿ ಹಿಲ್‌ (Murder at Monkey Hill) ಸಿನಿಮಾವನ್ನು ಅಮಿತಾಭ್‌ ಅವರಿಗೆ ತೋರಸಿಬೇಕಿತ್ತು. ಸಂಜೆ 4ರ ಸುಮಾರಿಗೆ ನನ್ನ ಸಿನಿಮಾ ಅಮಿತಾಭ್‌ಗೆ ನೋಡಲು ಸಮಯ ಇಲ್ಲ ಎಂದು ಅರಿತುಕೊಂಡೆ. ಸ್ವಲ್ಪ ಸಮಯದ ನಂತರ, ನಾನು ಅಲ್ಲಿಂದ ಹೊರಟೆ. ನಾನು ಹೊರಗೆ ಕುಳಿತಿದ್ದೆ. ಆಗ ನನ್ನ ಭುಜದ ಮೇಲೆ ಒಂದು ಕೈ ಬಂತು. ಅದು ಯಾರದ್ದು ಅಲ್ಲ ಅಮಿತಾಭ್‌ ಅವರದ್ದು. ಅಮಿತಾಭ್ ನನ್ನ ಬಳಿ ಕೇಳಿದರು. ಥಿಯೇಟರ್‌ 5ರವರೆಗೆ ಬುಕ್ಕಿಂಗ್‌ ಆಗಿದೆಯಾ? ಇದ್ದರೆ ಹೋಗೋಣ ಎಂದು. ಮಾತ್ರವಲ್ಲ ನನ್ನ ಜೊತೆಯಲ್ಲಿ ಒಬ್ಬ ಸ್ನೇಹಿತನನ್ನು ಕರೆದುಕೊಂಡು ಬರಬಹುದೇ ಎಂದು ಕೇಳಿದರು. ಅದು ಯಾರು ಅಲ್ಲ. ರೇಖಾ ಆಗಿದ್ದರು. ಬಳಿಕ ನಾವೆಲ್ಲ ಸಿನಿಮಾ ನೋಡಲು ತಯಾರಾದೆವುʼʼಎಂದರು.

ಮಾತು ಮುಂದುವರಿಸಿ ʻʻಹೀಗೆ ನಾನು ಅಮಿತಾಭ್‌ ಅವರ ಬಳಿ ನಿಮ್ಮ ವ್ಯಾನಿಟಿ ವ್ಯಾನ್‌ ಶೌಚಾಲಯವನ್ನು ಬಳಸಬಹುದೇ?’ ಎಂದು ಕೇಳಿದೆ, ಅಮಿತಾಭ್‌ ಬಚ್ಚನ್ ಅವರ ವ್ಯಾನ್‌ನಲ್ಲಿ ಮೂತ್ರ ಮಾಡುವುದು ನನ್ನ ಜೀವನದ ದೊಡ್ಡ ಮಹತ್ವಾಕಾಂಕ್ಷೆಯಾಗಿತ್ತು. ಚಿತ್ರವು ವರ್ಕ್ ಔಟ್ ಆಗುತ್ತದೋ ಇಲ್ಲವೋ ಯಾರಿಗೆ ಗೊತ್ತು, ಆದರೆ ಕನಿಷ್ಠ ಅವರ ವ್ಯಾಬಿಟಿ ವ್ಯಾನ್‌ನ ಶೌಚಾಲಯದಲ್ಲಿ ನಾನು ಮೂತ್ರ ವಿಸರ್ಜಿಸಿದ್ದೇನೆ ಅಂತಾದರೂ ಖುಷಿ ಇರತ್ತದಲ್ಲ ಎಂದು ಕೇಳಿದೆ. ಇದಾದ ಬಳಿಕ ಬಚ್ಚನ್ ಅಂತಿಮವಾಗಿ ನನ್ನ ಸಿನಿಮಾ ನೋಡಿದರು. ಒಟ್ಟಿಗೆ ಕೆಲಸ ಮಾಡಬೇಕೆಂದು ಹೇಳಿದರು. ಕೊನೆಗೆ ʻಏಕಲವ್ಯ: ದಿ ರಾಯಲ್ ಗಾರ್ಡ್‌ʼ ಸಿನಿಮಾ ಮಾಡಿದೆವು. ಆಸ್ಕರ್‌ಗೆ ಭಾರತದಿಂದ ಅಧಿಕೃತ ಪ್ರವೇಶವಾಗಿ ಆಯ್ಕೆಯಾಯಿತುʼʼಎಂದರು. ಸಿನಿಮಾ ಹಿಟ್‌ ಆದ ಬಳಿಕ ಬಚ್ಚನ್‌ ಅವರು ಚೋಪ್ರಾ ಅವರಿಗೆ ರೋಲ್ಸ್ ರಾಯ್ಸ್ ಕಾರನ್ನು ಉಡುಗೊರೆಯಾಗಿ ನೀಡಿದ್ದರು.

Continue Reading

ಟಾಲಿವುಡ್

Pawan Kalyan: ʻಹರಿ ಹರ ವೀರ ಮಲ್ಲುʼವಾಗಿ ಅಬ್ಬರಿಸಿದ ಪವನ್ ಕಲ್ಯಾಣ್; ಟೀಸರ್‌ ಔಟ್‌!

Pawan Kalyan: ಪವನ್ ಕಲ್ಯಾಣ್ ಕತ್ತಿ ಹಿಡಿದು ಸ್ಟೈಲಿಶ್ ಆಗಿ ಎಂಟ್ರಿ ಕೊಟ್ಟಿದ್ದಾರೆ. ನಟ ಕೆಂಪು ಬಟ್ಟೆಯಲ್ಲಿ ಕಾಣಿಸಿಕೊಂಡಿದ್ದಾರೆ. ಇದೀಗ ಈ ಟೀಸರ್‌ ತಮಿಳು, ಮಲಯಾಳಂ, ಕನ್ನಡ ಮತ್ತು ಹಿಂದಿಯಲ್ಲೂ ಬಿಡುಗಡೆಯಾಗಿದೆ.ಮೋಘಲ್‌ ಚಕ್ರವರ್ತಿ ಆಗಿ ಬಾಬಿ ಡಿಯೋಲ್‌ ಕಂಡಿದ್ದಾರೆ. ಮೆಗಾ ಸೂರ್ಯ ಫಿಲ್ಮ್ ಅಡಿಯಲ್ಲಿ ಎ ದಯಾಕರ್ ರಾವ್ ಚಿತ್ರವನ್ನು ನಿರ್ಮಿಸುತ್ತಿದ್ದರೆ, ಎಎಮ್ ರತ್ನಂ ಅವರು ಚಿತ್ರವನ್ನು ಪ್ರಸ್ತುತಪಡಿಸುತ್ತಿದ್ದಾರೆ.

VISTARANEWS.COM


on

Pawan Kalyan Hari Hara Veera Mallu Part 1 teaser Out
Koo

ಬೆಂಗಳೂರು: ಜನ ಸೇನಾ ಪಕ್ಷದ (Jana Sena Party) ಮುಖ್ಯಸ್ಥ ಪವನ್ ಕಲ್ಯಾಣ್ (Pawan Kalyan) ಈ ವರ್ಷ ನಡೆಯಲಿರುವ ಆಂಧ್ರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ (Andhra Pradesh assembly election) ಪೀಠಂಪುರಂ ಕ್ಷೇತ್ರದಿಂದ (Anushka Shetty) ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. ಇದರ ಜತೆಗೆ ಪವನ್ ಕಲ್ಯಾಣ್ ನಟನೆಯ ಹರಿ ʻಹರ ವೀರ ಮಲ್ಲು ಭಾಗ 1ʼ (Hari Hara Veera Mallu)ಚಿತ್ರದ ಟೀಸರ್‌ ಬಿಡುಗಡೆಯಾಗಿದೆ.

ಟೀಸರ್‌ನಲ್ಲಿ ಪವನ್ ಕಲ್ಯಾಣ್ ಅಬ್ಬರಿಸಿದ್ದಾರೆ. ಟೀಸರ್‌ನಲ್ಲಿ ಮಗಳು ತಂದೆಯ ಮೇಲೆ ಆಗುತ್ತಿರುವ ದಬ್ಬಾಳಿಕೆ ಬಗ್ಗೆ ಪ್ರಶ್ನೆ ಇಡುತ್ತಾಳೆ. ಆಗ ತಂದೆ ʻʻಪ್ರತಿಯೊಬ್ಬನನ್ನು ಅವನ ಮೇಲಿರೋನು ದೋಚಿಕೊಳ್ಳುತ್ತಾನೆ. ನಮ್ಮನ್ನು ದೊರೆ ದೋಚಿಕೊಳ್ಳುತ್ತಾನೆ. ದೊರೆಯನ್ನು ಗೋಲ್ಕುಂಡ ನವಾಬ್‌ ದೋಚಿಕೊಳ್ಳುತ್ತಾನೆ. ಅವನಲ್ಲಿ ಇರುವುದನ್ನು ಮೋಘಲ್‌ ಚಕ್ರವರ್ತಿ ದೋಚಿಕೊಳ್ಳುತ್ತಾನೆ. ನಮ್ಮ ಮೇಲೆ ಇರುವ ಈ ಕಳ್ಳರನ್ನು ದೋಚಿಕೊಳ್ಳೋದಕ್ಕೆ ಭಗವಂತ ಖಂಡಿತ ಒಬ್ಬನನ್ನು ಕಳಿಸಿಕೊಡುತ್ತಾನೆʼʼ ಎಂದಾಗ ಪವನ್‌ ಎಂಟ್ರಿ ಆಗುತ್ತಾರೆ. ಹಾಗೇ ಮೋಘಲ್‌ ಚಕ್ರವರ್ತಿ ಆಗಿ ಬಾಬಿ ಡಿಯೋಲ್‌ ಕಂಡಿದ್ದಾರೆ.

ಪವನ್ ಕಲ್ಯಾಣ್ ಕತ್ತಿ ಹಿಡಿದು ಸ್ಟೈಲಿಶ್ ಆಗಿ ಎಂಟ್ರಿ ಕೊಟ್ಟಿದ್ದಾರೆ. ನಟ ಕೆಂಪು ಬಟ್ಟೆಯಲ್ಲಿ ಕಾಣಿಸಿಕೊಂಡಿದ್ದಾರೆ. ಇದೀಗ ಈ ಟೀಸರ್‌ ತಮಿಳು, ಮಲಯಾಳಂ, ಕನ್ನಡ ಮತ್ತು ಹಿಂದಿಯಲ್ಲೂ ಬಿಡುಗಡೆಯಾಗಿದೆ.

ಇದನ್ನೂ ಓದಿ: Pawan Kalyan: ಎನ್‌ಡಿಎ ತೊರೆಯಲ್ಲ! ಉಲ್ಟಾ ಹೊಡೆದ ನಟ, ಜನಸೇನಾ ನಾಯಕ ಪವನ್ ಕಲ್ಯಾಣ್

ಮೆಗಾ ಸೂರ್ಯ ಫಿಲ್ಮ್ ಅಡಿಯಲ್ಲಿ ಎ ದಯಾಕರ್ ರಾವ್ ಚಿತ್ರವನ್ನು ನಿರ್ಮಿಸುತ್ತಿದ್ದರೆ, ಎಎಮ್ ರತ್ನಂ ಅವರು ಚಿತ್ರವನ್ನು ಪ್ರಸ್ತುತಪಡಿಸುತ್ತಿದ್ದಾರೆ. ಆಸ್ಕರ್ ವಿಜೇತ ಎಂಎಂ ಕೀರವಾಣಿ ಅವರ ಹಾಡುಗಳು ಮತ್ತು ಸಂಗೀತ ಸಂಯೋಜನೆ ಚಿತ್ರಕ್ಕಿದೆ. ನಿಧಿ ಅಗರ್ವಾಲ್, ಎಂ. ನಾಸರ್, ಸುನಿಲ್, ರಘುಬಾಬು, ಸುಬ್ಬರಾಜು, ಮತ್ತು ನೋರಾ ಫತೇಹಿ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಈ ಹಿಂದೆ ಪವನ್ ಕಲ್ಯಾಣ್ ರಾಜಕೀಯದತ್ತ ಗಮನಹರಿಸುತ್ತಿರುವುದರಿಂದ ಸಿನಿಮಾ ಇನ್ನು ಮುಂದೆ ಮಾಡುವುದಿಲ್ಲ ಎಂಬ ಮಾತುಗಳು ಕೇಳಿ ಬಂದಿದ್ದವು. ಕ್ರಿಶ್‌ ಜಾಗರ್ಲಮುಡಿ ಅವರ ನಿರ್ದೇಶನ ಈ ಸಿನಿಮಾಕ್ಕಿದೆ.

ದಬ್ಬಾಳಿಕೆ ಮಾಡುವವರ ವಿರುದ್ಧ ಹೋರಾಡುವ ʻಹರಿ ಹರ ವೀರ ಮಲ್ಲುʼ ಆಗಿ ಪವನ್ ಕಲ್ಯಾಣ್ ಕಾಣಿಸಿಕೊಂಡಿದ್ದಾರೆ. ‘ಧರ್ಮಕ್ಕಾಗಿ ಯುದ್ಧ’ ಎನ್ನುವ ಕ್ಯಾಪ್ಶನ್ ಗಮನ ಸೆಳೆದಿದೆ.

ಸದ್ಯ ಪವನ್ ಕಲ್ಯಾಣ್ ಅವರ ಜನಸೇನಾ ಪಕ್ಷವು ಚಂದ್ರಬಾಬು ನಾಯ್ಡು ಅವರ ʻತೆಲುಗು ದೇಶಂʼ ಮತ್ತು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದೆ. ಆಂಧ್ರಪ್ರದೇಶದಲ್ಲಿ ಒಟ್ಟು 25 ಲೋಕಸಭಾ ಕ್ಷೇತ್ರ ಮತ್ತು ಒಟ್ಟು 175 ವಿಧಾನಸಭಾ ಕ್ಷೇತ್ರಗಳಿವೆ. ವಿಧಾನಸಭಾ ಚುನಾವಣೆಯಲ್ಲಿ ಪವನ್‌ ಕಲ್ಯಾಣ್ ಅವರ ಜನಸೇನಾ ಪಕ್ಷವು ಒಟ್ಟು 175 ಸ್ಥಾನಗಳ ಪೈಕಿ 21 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ. ಬಿಜೆಪಿ 10 ಸ್ಥಾನಗಳಲ್ಲಿ ಸ್ಪರ್ಧಿಸಿದರೆ, ಟಿಡಿಪಿ 144 ಸ್ಥಾನಗಳಲ್ಲಿ ಕಣಕ್ಕಿಳಿಯಲಿದೆ. ಇನ್ನು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 6 ಕಡೆ ಸ್ಪರ್ಧಿಸಲಿದೆ. ಟಿಡಿಪಿ 17 ಕ್ಷೇತ್ರ ಮತ್ತು ಜನಸೇನಾ ಪಕ್ಷವು 2 ಕಡೆ ಕಣಕ್ಕಿಳಿಯಲಿದೆ.

Continue Reading
Advertisement
Prajwal Revanna Case Revanna denied anticipatory bail today Court allows SIT to file objections
ಕ್ರೈಂ12 mins ago

Prajwal Revanna Case: ರೇವಣ್ಣಗೆ ಇಂದು ಸಿಗಲಿಲ್ಲ ನಿರೀಕ್ಷಣಾ ಜಾಮೀನು; ಆಕ್ಷೇಪಣೆ ಸಲ್ಲಿಸಲು ಎಸ್‌ಐಟಿಗೆ ಸೂಚಿಸಿದ ಕೋರ್ಟ್!

Covaxin
ದೇಶ33 mins ago

Covaxin: ಕೊವ್ಯಾಕ್ಸಿನ್‌ ಸುರಕ್ಷಿತ ಲಸಿಕೆ ಎಂದ ಭಾರತ್‌ ಬಯೋಟೆಕ್;‌ ಸೈಡ್‌ ಎಫೆಕ್ಟ್‌ ಆರೋಪದ ಬೆನ್ನಲ್ಲೇ ಸ್ಪಷ್ಟನೆ!

Prajwal Revanna Case Another victim gives statement before judge Will Revanna get anticipatory bail
ಕ್ರೈಂ35 mins ago

Prajwal Revanna Case: ನ್ಯಾಯಾಧೀಶರ ಮುಂದೆ 2 ಗಂಟೆ ಹೇಳಿಕೆ ನೀಡಿದ ಮತ್ತೊಬ್ಬ ಸಂತ್ರಸ್ತೆ; ರೇವಣ್ಣಗೆ ಸಿಗುತ್ತಾ ನಿರೀಕ್ಷಣಾ ಜಾಮೀನು?

KL Rahul
ಕ್ರೀಡೆ49 mins ago

KL Rahul : ವಿಶ್ವ ಕಪ್​ ತಂಡದಲ್ಲಿ ರಾಹುಲ್​ಗೆ ಸ್ಥಾನ ನೀಡದಿರುವ ಬಗ್ಗೆ ಸ್ಪಷ್ಟನೆ ನೀಡಿದ ಆಯ್ಕೆಗಾರ ಅಜಿತ್ ಅಗರ್ಕರ್​​

T20 World Cup
ಕ್ರೀಡೆ1 hour ago

T20 World Cup : ವಿಶ್ವ ಕಪ್​ ಗೆಲ್ಲುವುದು ಭಾರತ; ವಿಶ್ವ ಕಪ್​ ವಿಜೇತ ಲಂಕಾ ಆಟಗಾರನ ಸ್ಪಷ್ಟ ನುಡಿ

Shine Shetty Summer Fashion
ಫ್ಯಾಷನ್2 hours ago

Summer Fashion: ಉರಿ ಬಿಸಿಲಿನಲ್ಲಿ ಗಮನ ಸೆಳೆವ ನಟ ಶೈನ್‌ ಶೆಟ್ಟಿಯ ಕೂಲ್‌ ಸ್ಮೈಲ್‌ & ಸ್ಟೈಲ್‌!

IPL 2024
ಕ್ರೀಡೆ2 hours ago

IPL 2024 : ಐಪಿಎಲ್​ ಮಧ್ಯದಲ್ಲಿಯೇ ಕೆಕೆಆರ್​ ತಂಡ ತೊರೆದ ಆರಂಭಿಕ ಆಟಗಾರ

assault Case
ಬೆಂಗಳೂರು2 hours ago

Assault Case : ಪೊಲೀಸ್‌ ಸ್ಟೇಷನ್‌ನಲ್ಲೇ ಇನ್‌ಸ್ಪೆಕ್ಟರ್‌ ಕಪಾಳಕ್ಕೆ ಹೊಡೆದ ಮಹಿಳೆ

Prajwal Revanna Case Centre says it has no power to revoke Prajwal diplomatic passport Big relief for MP
ಕರ್ನಾಟಕ2 hours ago

Prajwal Revanna Case: ಪ್ರಜ್ವಲ್‌ರ ಡಿಪ್ಲೊಮ್ಯಾಟಿಕ್‌ ಪಾಸ್‌ಪೋರ್ಟ್‌ ರದ್ದು ಮಾಡೋ ಅಧಿಕಾರ ನಮಗಿಲ್ಲ ಎಂದ ಕೇಂದ್ರ! ಸಂಸದನಿಗೆ ಬಿಗ್‌ ರಿಲೀಫ್‌?

Virat kohli
ಪ್ರಮುಖ ಸುದ್ದಿ2 hours ago

Virat Kohli : ಅಂಕಿ, ಅಂಶ ಪಂಡಿತರೇ ಬಾಯ್ಮುಚ್ಚಿ; ಕೊಹ್ಲಿಯನ್ನು ಟೀಕಿಸಿದವರ ಬೆಂಡೆತ್ತಿದ ಡಿ’ವಿಲಿಯರ್ಸ್​​

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Prajwal Revanna Case Another victim gives statement before judge Will Revanna get anticipatory bail
ಕ್ರೈಂ35 mins ago

Prajwal Revanna Case: ನ್ಯಾಯಾಧೀಶರ ಮುಂದೆ 2 ಗಂಟೆ ಹೇಳಿಕೆ ನೀಡಿದ ಮತ್ತೊಬ್ಬ ಸಂತ್ರಸ್ತೆ; ರೇವಣ್ಣಗೆ ಸಿಗುತ್ತಾ ನಿರೀಕ್ಷಣಾ ಜಾಮೀನು?

Dina Bhavishya
ಭವಿಷ್ಯ15 hours ago

Dina Bhavishya : ದಿನದ ಕೊನೆಯಲ್ಲಿ ಈ ರಾಶಿಯವರು ಯಾವುದಾದರೂ ಶುಭ ಸುದ್ದಿ ಕೇಳುವಿರಿ

dina bhavishya read your daily horoscope predictions for April 30 2024
ಭವಿಷ್ಯ3 days ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

PM Narendra modi in Bagalakote and Attack on Congress
Lok Sabha Election 20243 days ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 20243 days ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ4 days ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Vote Jihad
Lok Sabha Election 20244 days ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

PM Narendra Modi in Sirsi
Lok Sabha Election 20244 days ago

PM Narendra Modi: ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

If Congress comes to power all your assets will belong to Government says PM Narendra Modi
Lok Sabha Election 20244 days ago

Narendra Modi: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀವು ಕಷ್ಟಪಟ್ಟು ಸಂಪಾದಿಸಿದ ಆಸ್ತಿಯೆಲ್ಲ ಅನ್ಯರ ಪಾಲು: ಮೋದಿ ಎಚ್ಚರಿಕೆ

Congress ties with Aurangzeb supporters and Girls killed under his rule says Narendra Modi
Lok Sabha Election 20244 days ago

Narendra Modi: ಔರಂಗಜೇಬ್ ಬೆಂಬಲಿಗರ ಜತೆ ಕಾಂಗ್ರೆಸ್ ದೋಸ್ತಿ; ಇವರ ಆಡಳಿತದಲ್ಲಿ ಹೆಣ್ಣು ಮಕ್ಕಳ ಹತ್ಯೆ: ಮೋದಿ ವಾಗ್ದಾಳಿ

ಟ್ರೆಂಡಿಂಗ್‌