Rani Gaidinliu : 16ನೇ ವಯಸ್ಸಿನಲ್ಲಿಯೇ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ಜೈಲು ಸೇರಿದ್ದ ಸೇನಾನಿ ರಾಣಿ ಗೈಡಿನ್ಲ್ಯೂ - Vistara News

ದೇಶ

Rani Gaidinliu : 16ನೇ ವಯಸ್ಸಿನಲ್ಲಿಯೇ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ಜೈಲು ಸೇರಿದ್ದ ಸೇನಾನಿ ರಾಣಿ ಗೈಡಿನ್ಲ್ಯೂ

ನಾಗಾರಾಣಿ ಎಂದೇ ಪ್ರಸಿದ್ಧರಾಗಿದ್ದ ರಾಣಿ ಗೈಡಿನ್ಲ್ಯೂ (Rani Gaidinliu) ಅವರ ಜನ್ಮ ದಿನ ಇಂದು. ನಾಗಾ ಸಮಾಜವನ್ನು ಸಂಘಟಿಸಿ, ಮತಾಂತರದ ವಿರುದ್ಧ ಹೋರಾಟ ನಡೆಸಿದ ಈ ಸ್ವಾತಂತ್ರ್ಯ ಹೋರಾಟಗಾರ್ತಿಯ ಬದುಕಿನ ಬಗ್ಗೆ ತಿಳಿಯೋಣ.

VISTARANEWS.COM


on

Rani Gaidinliu
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಹೆಚ್ ಎಂ ರುಕ್ಮಿಣಿ ನಾಯಕ್
ಕೋಲ್ಕತಾದ ಇಂಡಿಯನ್‌ ಚೇಂಬರ್‌ ಆಫ್‌ ಕಾಮರ್ಸ್‌ನಲ್ಲಿ ಸ್ವಾಮಿ ವಿವೇಕಾನಂದ ಸೇವಾ ಪುರಸ್ಕಾರ ಸಮಾರಂಭ ಆಯೋಜನೆಗೊಂಡಿತ್ತು. ಈ ಪುರಸ್ಕಾರವನ್ನು ಲೋಕಮಾನ್ಯ ಸಮಾಜ ಸೇವಕಿಯರಿಗೆ ಮತ್ತು ಸ್ವಾತಂತ್ರ್ಯ ಸೇನಾನಿಗಳಿಗೆ ಕೊಡುವುದೆಂದು ತೀರ್ಮಾನಿಸಲಾಗಿತ್ತು. ಈ ಪುರಸ್ಕಾರವನ್ನು ಮೊಟ್ಟಮೊದಲಿಗೆ ಪಡೆದ ಹೆಗ್ಗಳಿಕೆ ನಾಗಾರಾಣಿ ಎಂದು ಪ್ರಸಿದ್ಧರಾಗಿದ್ದ ರಾಣಿ ಗೈಡಿನ್ಲ್ಯೂ (Rani Gaidinliu) ಅವರದ್ದು.

ಈಕೆ ಕೇವಲ ತಮ್ಮ ಹದಿಮೂರನೇಯ ವಯಸ್ಸಿನಿಂದಲೇ ಗುರು ಜಾದೋನಾಂಗರು ನಡೆಸಿದ ಸ್ವಾತಂತ್ರ್ಯ ಆಂದೋಲನದಲ್ಲಿ ಧುಮುಕಿದವರು. ಜನರಲ್ಲಿ ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ, ರಾಜಕೀಯವಾಗಿ ಜಾಗೃತಿಯನ್ನು ಉಂಟು ಮಾಡುತ್ತಾ ಜೇಮಿ, ಲಿಯಾಂಗ್ಮಯ್ ಮತ್ತುರಾಂಗ್‌ಮೈ (ಇವು ಅಲ್ಲಿನ ನಾನಾ ಪಂಗಡಗಳು) ನಾಗಾಗಳನ್ನು ಜೆಲಿಯಾಂಗ್ರಾಂಗ್ ಹೆಸರಿನಲ್ಲಿ ಒಗ್ಗೂಡಿಸಿದರು. ತತ್ಮೂಲಕ ಒಂದು ಸಮರಸ ಸಮಾಜವನ್ನು ಕಟ್ಟಿ, ಜೀವನದ ಕೊನೆ ಉಸಿರಿನವರಿಗೂ ದೇಶ ಹಾಗೂ ಸಮಾಜಸೇವೆ ಮಾಡುತ್ತಲೇ ಇದ್ದವರು.

ಸ್ವಾಮಿ ವಿವೇಕಾನಂದ ಪುರಸ್ಕಾರ ಸಮಾರಂಭವನ್ನು ರಾಣಿ ಗೈಡಿನ್ಲ್ಯೂ ಭಾರತ ಮಾತೆ ಹಾಗೂ ಸ್ವಾಮಿ ವಿವೇಕಾನಂದರ ಪ್ರತಿಮೆ ಎದುರು ಜ್ಯೋತಿ ಬೆಳಗುವ ಮೂಲಕ ಉದ್ಘಾಟಿಸಿದರು. ಅಧ್ಯಕ್ಷೀಯ ಸ್ಥಾನದಿಂದ ಮಾತನಾಡಿದ ಸ್ವಾಮಿ ವಿಜಯಾನಂದರು ರಾಣಿಮಾರವರ ವ್ಯಕ್ತಿತ್ವವನ್ನು ಈ ರೀತಿ ವರ್ಣಿಸಿದರು. “ಭಾರತದ ಇತಿಹಾಸದಲ್ಲಿ ದೇಶಕ್ಕಾಗಿ ತಮ್ಮ ಸರ್ವಸ್ವವನ್ನು ತ್ಯಾಗ ಮಾಡಿದ ಅನೇಕ ರಾಣಿಯರು ಕಂಡು ಬರುತ್ತಾರೆ. ರಾಣಿ ಲಕ್ಷ್ಮೀಬಾಯಿ, ರಾಣಿ ದುರ್ಗಾವತಿ, ದೇವಿ ಅಹಲ್ಯಾಬಾಯಿ ಹೋಳ್ಕರ್, ಕಣ್ಣಗಿ ಮುಂತಾದವರು ತಮ್ಮತ್ಯಾಗ ಹಾಗೂ ವೀರತ್ವದಿಂದ ಅವಿಸ್ಮರಣೀಯರಾಗಿದ್ದಾರೆ. ರಾಣಿ ಗೈಡಿನ್ಲ್ಯೂ ಕೂಡ ಬ್ರಿಟಿಷರಿಗೆ ನೀರು ಕುಡಿಸಿದವರು ಹಾಗೂ ಸ್ವಾತಂತ್ರ್ಯದ ನಂತರವೂ 1960 ರಿಂದ 1966 ರವರೆಗೆ ನಾಗಾ ಆತಂಕವಾದಿಗಳ ವಿರುದ್ಧ ಹಾಗೂ ಚರ್ಚಿನ ಸೇನೆಯೊಂದಿಗೆ ನಾಗಾಲ್ಯಾಂಡಿನಲ್ಲಿ ಏಕಾಂಗಿಯಾಗಿ ಹೋರಾಡಿದರು. ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸದಲ್ಲಿ ಈಕೆಯ ಹೆಸರು ಸುವರ್ಣಾಕ್ಷರದಲ್ಲಿ ಬರೆಯಲುಅರ್ಹವಾಗಿದೆ” ಎಂದು ಮನಸಾರೆ ಶ್ಲಾಘಿಸಿದರು.

ಸ್ವಾಮಿ ವಿವೇಕಾನಂದ ಪುರಸ್ಕಾರ ಪಡೆದ ನಂತರ ರಾಣಿಮಾತಮ್ಮ ಹೃದಯದ ಭಾವನೆಯನ್ನು ಈ ರೀತಿ ಹಂಚಿಕೊಂಡರು. “ಈದೇಶದ ಸೇವೆ ಇಲ್ಲಿಯ ಧರ್ಮ ಸಂಸ್ಕೃತಿಯ ರಕ್ಷೆ ಮತ್ತು ವಿಕಾಸ ನನ್ನ ಜೀವನದಗುರಿಯಾಗಿದೆ. ನಾಗಾಲ್ಯಾಂಡಿನಲ್ಲಿ ಬೆರೆಳೆಣಿಕೆಯಷ್ಟು ಆತಂಕವಾದಿಗಳನ್ನು ಬಿಟ್ಟರೆ ಉಳಿದೆಲ್ಲ ನಾಗಾಗಳು ಭಾರತ ವರ್ಷವನ್ನು ತಮ್ಮ ದೇವರೆಂದು ತಿಳಿದಿರುವವರು ಹಾಗೂ ಒಪ್ಪಿರುವವರು. ಆದರೆ ನಾಗ ಆತಂಕವಾದಿಗಳ ಹಾಗೂ ಚರ್ಚಿನ ಒತ್ತಡ – ಬೆದರಿಕೆಯಿಂದಾಗಿ ಅವರು ತಮ್ಮದೇಶ ಪ್ರೇಮವನ್ನು ಬಹಿರಂಗಪಡಿಸುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಅವರಿಗೆ ಮನೋಬಲ ನೀಡುವ ಅವಶ್ಯಕತೆ ಇದೆ. ಸಮಸ್ತ ಹಿಂದೂ ಸಮಾಜದ ಗಮನವನ್ನು ನಾಗಲ್ಯಾಂಡಿನ ಸಮಸ್ಯೆಯತ್ತ ಹೊರಳಿಸುವ ಅಗತ್ಯವಿದೆ” ಎನ್ನುತ್ತಾ ಜನಾಂಗದ ಬಗ್ಗೆ ತಮಗಿರುವ ಪ್ರೀತಿಯನ್ನು ವಿವರಿಸಿದರು.

ರಾಣಿಮಾರವರ ಸತತ ಪ್ರಯತ್ನದಿಂದಾಗಿ ನಾಗ ವಿದ್ಯಾರ್ಥಿ-ವಿದ್ಯಾರ್ಥಿನಿಯರನ್ನು ದೇಶದ ನಾನಾ ಭಾಗಗಳಿಗೆ ವಿದ್ಯಾಭ್ಯಾಸಕ್ಕಾಗಿ ಕಳುಹಿಸಲಾಯಿತು. ಇಂದು ಬೇರೆ ಬೇರೆ ಸಂಘಟನೆಗಳ ನೂರಾರು ವಿದ್ಯಾರ್ಥಿ ನಿಲಯಗಳಲ್ಲಿ ಸೂಮಾರು 2000 ವಿದ್ಯಾರ್ಥಿ ವಿದ್ಯಾರ್ಥಿನಿಯರು ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

ನಾಗಾ ಸಮಾಜದಲ್ಲಿ ಯಾವುದೇ ಹೆಣ್ಣು ಮಕ್ಕಳು ಅವಿವಾಹಿತರಾಗಿ ಉಳಿದಿಲ್ಲ. ದೇಶ ಹಾಗೂ ಸಮಾಜ ಸೇವೆಗೆ ತಮ್ಮ ಬದುಕನ್ನು ಮುಡಿಪಾಗಿಟ್ಟ ಉದಾಹರಣೆಗಳಿಲ್ಲ. ರಾಣಿಮಾ ಇಂತಹ ಆದರ್ಶವನ್ನು ಸಮಾಜದ ಮುಂದೆತಮ್ಮ ಬದುಕಿನ ಮೂಲಕ ಮುಂದಿಟ್ಟರು. ಇವರಿಂದ ಪ್ರೇರಿತರಾಗಿ ಅನೇಕ ಮಹಿಳೆಯರು ಅವಿವಾಹಿತರಾಗುಳಿದು ದೇಶ ಸೇವೆಗೆ ಹಾಗೂ ಸಮಾಜ ಸೇವೆಗೆ ತಮ್ಮ ಬದುಕನ್ನು ಮುಡಿಪಾಗಿಟ್ಟರು.

ಹೀಗೆ ಆದರ್ಶ ಮಹಿಳೆಯಾಗಿ ಹೊರಹೊಮ್ಮಿದ ರಾಣಿ ಗೈಡಿನ್ಲ್ಯೂರವರು 1915 ಜನವರಿ 26ರಂದು ಮಣಿಪುರದ ರಾಂಗ್‌ಮೈಗ್ರಾಮದಲ್ಲಿ ಜನಿಸಿದರು. ಇವರತಂದೆ ಲೋಥೋನಾಂಗ ತಾಯಿ ಕೆಲುವತಲಿನ್ಲಿಯೂರ. ತಂದೆ ಸಾಮಾಜಿಕ ವ್ಯವಸ್ಥೆಯಲ್ಲಿ ಆಡಳಿತ ಜವಾಬ್ದಾರಿಯನ್ನು ನಿರ್ವಹಿಸುವ ಪಾಮಯ ಜನಾಂಗದ ಪ್ರಮುಖರಾಗಿದ್ದರು. ಹೀಗೆ ರಾಣಿಮಾರಿಗೆ ನಾಯಕತ್ವಗುಣ, ವಂಶದ ಬಳುವಳಿಯಾಗಿರಬಹುದು. ತಂದೆ ತಾಯಿ ಹಾಗೂ ಗ್ರಾಮಸ್ಥರು ಈ ಮಗುವನ್ನು ದೈವದತ್ತವೆಂದು ಭಾವಿಸಿದರು. ಮುಂದೆ ಹೀಗೆ ಆಧ್ಯಾತ್ಮಿಕ ತಳಹದಿಯಲ್ಲಿ ಹೋರಾಟ ನಡೆಸಿದರು.

ಹುಟ್ಟಿನಿಂದಲೇ ಸದೃಢ ಹಾಗೂ ಸುಂದರ ಬಾಲಕಿ. ಶಾಂತ ಸ್ವಭಾವದವಳು. ಚಿಕ್ಕಂದಿನಿಂದ ಧ್ಯಾನಸ್ಥಳಾಗುತ್ತಿದ್ದಳು. ಬೆಳೆಯುತ್ತಾ ಬೆಳೆಯುತ್ತಾ ಸ್ವತಂತ್ರಚಿಂತನೆ, ಜಿಜ್ಞಾಸೆ, ಅಂತರ್ಮುಖತೆ ಇವರ ಪ್ರವೃತ್ತಿಯಾಯಿತು. ಇಂತಹ ಅಪೂರ್ವ ವ್ಯಕ್ತಿತ್ವದ ಈಕೆಯನ್ನು ಜನ ದುರ್ಗೆಯ ಅವತಾರವೆಂದು ನಂಬಿದ್ದರು.

ಸನಾತನ ಧರ್ಮದ ಪ್ರಚಾರ ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯ ಸಂಗ್ರಾಮದಲ್ಲಿ ತೊಡಗಿಸಿಕೊಂಡಿದ್ದ ಜಾತೋನಾಂಗರನ್ನು ತಮ್ಮ ಗುರುವಾಗಿ ಸ್ವೀಕರಿಸಿದರು. ಅವರ ಪ್ರಭಾವದಿಂದ ಭೌತಿಕ ಸುಖ ಹಾಗೂ ಪ್ರಾಪಂಚಿಕ ಆಕರ್ಷಣೆಯಿಂದ ದೂರ ಸರಿದರು. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾದರು.

ಕೇವಲ ತಮ್ಮ ಹದಿನಾರನೇ ವಯಸ್ಸಿನಲ್ಲಿ ನಾಯಕಿಯಾಗಿ ಜನರನ್ನು ಉತ್ತಮ ಮಾರ್ಗದಲ್ಲಿ ನಡೆಸತೊಡಗಿದರು. ಯುವಜನಾಂಗಕ್ಕೆ ಸಂದೇಶ ನೀಡುತ್ತಾ “ನಾವು ನಾಗಾಗಳು ಯಾವತ್ತೂ ಸ್ವತಂತ್ರರಾಗಿಯೇ ಇರುವೆವು. ನಾವೆಂದಿಗೂ ಯಾರದಾಸ್ಯವನ್ನೂ ಒಪ್ಪಿಕೊಂಡವರಲ್ಲ ಅಂದ ಮೇಲೆ ಎಲ್ಲಿಂದಲೋ ಬಂದ ಬ್ರಿಟಿಷರಿಗೆ ನಮ್ಮ ಮೇಲೆ ಆಡಳಿತ ನಡೆಸಲು ಯಾವ ಅಧಿಕಾರವಿದೆ? ಅವರ ದಬ್ಬಾಳಿಕೆಯನ್ನು ನಾವು ಸಹಿಸಬಾರದು. ಅವರಿಗೆ ತೆರಿಗೆಕೊಡಬಾರದು. ಅವರ ಕಾನೂನುಗಳನ್ನು ಪಾಲಿಸಬಾರದು. ಅವರ ಯಾವುದೇ ಕೆಲಸದಲ್ಲಿ ಕಾರ್ಮಿಕರಾಗಿ ದುಡಿಯಬೇಕಾಗಿಲ್ಲ. ಕೂಲಿ ಆಳುಗಳಂತೆ ಅವರ ಸರಕುಗಳನ್ನು ಹೊರುವುದು ಸರಿಯಲ್ಲ. ಒಟ್ಟಿನಲ್ಲಿ ಅವರನ್ನು ನಮ್ಮ ನಮ್ಮ ಊರುಗಳಲ್ಲಿ ಪ್ರವೇಶಿಸಲು ಬಿಡಕೂಡದು” ಎಂದು ಭವಿಷ್ಯದದಾರಿಯನ್ನು ತೋರಿಸಿದರು, ಸ್ಫೂರ್ತಿತುಂಬಿದರು.

ಬ್ರಿಟಿಷ್ ಸರ್ಕಾರ ಮೋಸದಿಂದ ರಾಣಿಮಾರ ಗುರುಗಳಾದ ಜಾದೋನಾಂಗರನ್ನು ಸೆರಿ ಹಿಡಿಯಿತು. ಜೈಲಿನಲ್ಲಿ ಅವರನ್ನು ಭೇಟಿ ಮಾಡಿದರಾಣಿ ಮಾತಮ್ಮ ಭಾಷೆಯಲ್ಲಿ– “ಸ್ವಾತಂತ್ರ್ಯ ನಮ್ಮ ಜನ್ಮ ಸಿದ್ಧ ಹಕ್ಕು. ಬ್ರಿಟಿಷರ ಕುರುಡು ಆಡಳಿತ ಕೊನೆಗೊಳಿಸಿ ಅವರ ಮಿಷಿನರಿಗಳಿಂದ ನಮ್ಮ ಧರ್ಮವನ್ನು ರಕ್ಷಿಸುವುದು ನನ್ನ ಜೀವನದ ಗುರಿಯಾಗಿದೆ. ತಾವು ಬಂಧನದಲ್ಲಿದ್ದರೂ ನಾವು ಈ ಹೋರಾಟ ಮುಂದುವರಿಸುತ್ತೇವೆ. ನಿಮ್ಮನ್ನು ಮೋಸದಿಂದ ಬಂಧಿಸಿದ ಬ್ರಿಟಿಷರು ಇದರ ದಂಡತೆರಬೇಕಾಗುವುದು. ತಾವು ಭಾರತ ಮಾತೆಯ ಸುಪುತ್ರರು. ದೇಶ ತಮ್ಮನ್ನು ಗೌರವಿಸುವುದು”. ಒಬ್ಬ ಶಿಷ್ಯೆ ತನ್ನ ಗುರುವಿಗೆ ಸಲ್ಲಿಸಬಹುದಾದ ಅತ್ಯಂತ ದೊಡ್ಡ ಕಾಣಿಕೆ ಇದಲ್ಲವೇ?!

Rani Gaidinliu
ರಾಣಿ ಗೈಡಿನ್ಲ್ಯೂ

ಇಷ್ಟರಲ್ಲಿ ಬ್ರಿಟಿಷ್ ಸರ್ಕಾರಕ್ಕೆ ರಾಣಿ ಗೈಡಿನ್ಲ್ಯೂರವರ ಶಕ್ತಿ ಸಾಮರ್ಥ್ಯದ ಅರಿವಾಗಿತ್ತು. ಆಕೆಯನ್ನು ಬಂಧಿಸುವ ಪ್ರಯತ್ನ ನಡೆದಿತ್ತು. ಈ ವಿಷಯ ತಿಳಿದ ರಾಣಿ ಮಾತಮ್ಮಯುದ್ಧ ಪರಿಣಿತರೊಂದಿಗೆ ಮಣಿಪುರದ ರಾಜಸ್ಥಾನದಲ್ಲಿ ಭೂಗತರಾಗಿದ್ದುಕೊಂಡು ಹೋರಾಟ ನಡೆಸಿದರು. ಕೇವಲ ಏಳು ತಿಂಗಳಲ್ಲಿ ಬ್ರಿಟಿಷ್ ಸರ್ಕಾರವನ್ನು ನಡುಗಿಸಿದರು. ಗುರಿಯೆಡೆಗೆ ದೃಷ್ಟಿ ಇದ್ದವರಿಗೆ ಹಸಿವು ನಿದ್ದೆ ಪರಿಶ್ರಮಯಾವುದರ ಪರಿವಿಯೂ ಇರಲಿಲ್ಲ. ಇದು ಅವರ ಆಧ್ಯಾತ್ಮಿಕ ಒಲವೂ ಇದ್ದಿರಬಹುದು.

ಬ್ರಿಟಿಷ್ ಸರ್ಕಾರ ಆಕೆಯನ್ನು ಬಂಧಿಸಲು ಸತತ ಪ್ರಯತ್ನ ಹಾಕಿತು. ಆಕೆಯನ್ನು ಹಿಡಿದುಕೊಟ್ಟವರಿಗೆ ರೂ.200, ರೂ.500 ರವರೆಗೆ ಬಹುಮಾನ ಘೋಷಿಸಿದರು. ಆ ಗ್ರಾಮದ ಹತ್ತು ವರ್ಷದ ಕಂದಾಯವನ್ನು ಮನ್ನಾ ಮಾಡಲಾಗುವುದು ಎಂದು ಸಾರಿದರು. ಜನರಿಗೆ ಕಿರುಕುಳ ನೀಡಲು ಆರಂಭಿಸಿದರು. ಇದನ್ನು ತಪ್ಪಿಸಲುತನ್ನ ಜನರ ಪ್ರಾಣರಕ್ಷಣೆಗಾಗಿ ಆಕೆ ಬ್ರಿಟಿಷರಿಗೆ ಸೆರೆಯಾದಳು. ಸರ್ಕಾರ ವಿಚಾರಣೆಯ ನಾಟಕ ವಾಡಿ ಅಜೀವಪರ್ಯಂತ ಕಾರಾಗ್ರಹ ಶಿಕ್ಷೆ ವಿಧಿಸಿತು. 17 ವರ್ಷದ ಸಿಂಹಿಣಿಯನ್ನು ಪಂಜರದಲ್ಲಿ ಕೂಡಿಡಲಾಯಿತು.

ರಾಣಿ ಗೈಡಿನ್ಲ್ಯೂರವ ಸೆರೆಸಿಕ್ಕ ನಂತರ ವಿಹರಕ್ಕಾ ಆಂದೋಲನವು ಕ್ರಮೇಣ ದುರ್ಬಲವಾಯಿತು. ಬ್ರಿಟೀಷರು ಅಸ್ಸಾಂ, ನಾಗಾ ಹಿಲ್ಸ್ ಹಾಗೂ ಮಣಿಪುರಗಳಲ್ಲಿ ವಿಕಾಸ ಕಾರ್ಯವನ್ನು ತಡೆಹಿಡಿದರು. ಅಲ್ಲಿಯಜನ ಬಡತನ, ಅಜ್ಞಾನ, ದೌರ್ಬಲ್ಯದಿಂದ ನರಳುವಂತೆ ಮಾಡಿದರು. ಎಲ್ಲಿಯವರೆಗೆ ಆ ಜನಾಂಗ ಮತಾಂತರಗೊಳ್ಳುವುದಿಲ್ಲವೋ ಅಲ್ಲಿಯವರೆಗೆ ಅವರ ಏಳಿಗೆ ಸಾಧ್ಯವಿಲ್ಲ ಎಂಬ ಅಭಿಪ್ರಾಯ ಮೂಡಿಸಲಾಯಿತು.

ದೇಶಕ್ಕೆ ಸ್ವಾತಂತ್ರ್ಯ ದೊರೆತ ದಿನ 1947 ಆಗಸ್ಟ್ 15 ರಂದು ರಾಣಿತಮ್ಮ 15 ವರ್ಷಗಳ ಬಂಧನದಿಂದ ಮುಕ್ತರಾದರು. ಆಗ ಅವರಿಗೆ ಕೇವಲ 37 ವರ್ಷ. ಜೈಲಿನಿಂದ ಬಿಡುಗಡೆಯಾದರೂ ಅವರಿಗೆ ಮಣಿಪುರ ನಾಗಾಲ್ಯಾಂಡ್ ಮೊದಲಾದಕಡೆ ಪ್ರವೇಶಕ್ಕೆ ನಿರ್ಬಂಧ ಹೇರಲಾಯಿತು. ಇದರಿಂದ ಆಕೆಗೆ ಬಹಳ ನೋವಾಯಿತು. ತನ್ನ ತಮ್ಮನ ಮನೆಯಲ್ಲಿ ಗೃಹ ಬಂಧಿಯಾಗಿ ಇರಲು ಸರ್ಕಾರ ಅನುಮತಿ ನೀಡಿತು. ಆದರೆ ಸಾಮಾನ್ಯ ಜನರು ಆಕೆಯನ್ನು ದೇವತೆ ಎಂಬಂತೆ ಗೌರವಿಸಿದರು.

ರಾಷ್ಟಾçದ್ಯಂತ ಹಿಂದೂ ಸಂಘಟನೆಗಳು ಆಕೆಯನ್ನು ಗೌರವಿಸಿ ಆಕೆಯ ಬೆನ್ನೆಲುಬಾಗಿ ನಿಂತವು. ಬಿಂದುವಿನಲ್ಲಿ 1985 ಜನವರಿಯಲ್ಲಿ ನಡೆದ ಪ್ರಥಮ ರಾಷ್ಟ್ರೀಯ ವನವಾಸಿ ಮಹಾಸಮ್ಮೇಳನದಲ್ಲಿ ರಾಣಿ ಗೈಡಿನ್ಲ್ಯೂ ಮುಖ್ಯ ಅತಿಥಿಯಾಗಿ ಭಾಗವಹಿಸಿದರು. 2ಸಾವಿರಕ್ಕೂ ಹೆಚ್ಚು ಮಾತೆಯರು ದೇಶದ ಎಲ್ಲಾ ಕಡೆಯಿಂದ ಭಾಗವಹಿಸಿದರು. ರಾಣಿಮಾ ಮಹಾ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿರಾಷ್ಟ್ರ ನಿರ್ಮಾಣದಲ್ಲಿ ಹೆಣ್ಣು ಮಕ್ಕಳು ಭಾಗವಹಿಸುವಂತೆ ಕರೆ ನೀಡಿದರು. ಇದೇ ಸಂದರ್ಭದಲ್ಲಿಜನವರಿ 26ರಂದು ರಾಣಿಮಾರನ್ನುಒಂದು ಶೃಂಗರಿಸಿದ ರಥದಲ್ಲಿ ಕುಳ್ಳಿರಿಸಲಾಯಿತು. ಆಕೆಯ ಅಕ್ಕಪಕ್ಕದಲ್ಲಿ ಇಬ್ಬರು ಯುವತಿಯರು ರೈಫಲ್ ಹಿಡಿದು ನಿಂತಿದ್ದರು. ಶೋಭಾಯಾತ್ರೆಯ ಮುಂದುಗಡೆ 24 ಜನ ಮಹಿಳೆಯರು ಮೋಟರ್ ಸೈಕಲ್ ಸವಾರಿ ಮಾಡಿ ಹೆಣ್ಣು ಮಕ್ಕಳ ಶಕ್ತಿಯನ್ನು ಪ್ರದರ್ಶಿಸಿ ರಾಣಿ ಮಾಗೇಗೌರವ ಸಮರ್ಪಿಸಿದರು.

ರಾಣಿಮಾರ ಶೌರ್ಯ, ನಿಷ್ಠೆ, ಧೈರ್ಯ, ಸಾಹಸದ ಕಥೆಗಳನ್ನು ಹಿರಿಯರು ತಮ್ಮ ಮನೆಯ ಮಕ್ಕಳಿಗೆ ಹೇಳಿ ಸ್ಫೂರ್ತಿತುಂಬಿದರು. ರಾಣಿಮಾರ ಬಗ್ಗೆ ಅವರಿಗೆಲ್ಲ ಅಪಾರ ಗೌರವ ಭಕ್ತಿ ಇತ್ತು ಏಕೆಂದರೆ ರಾಣಿಮಾ ಭಾರತೀಯತೆಯ ಪ್ರತೀಕವಾಗಿದ್ದರು.

ರಾಣಿ ಗೈಡಿನ್ಲ್ಯೂರವರ ಹೋರಾಟದ ಬದುಕನ್ನು ಶ್ಲಾಘಿಸುತ್ತಾ ನಾನಾ ಪ್ರಶಸ್ತಿಗಳು ಅರಸಿ ಬಂದವು. ತಮ್ಮ ಮೌಲ್ಯವನ್ನು ಹೆಚ್ಚಿಸಿಕೊಂಡವು. ಅವುಗಳಲ್ಲಿ ಮುಖ್ಯವಾದವು ಸ್ವಾತಂತ್ರ್ಯ ಸೇನಾನಿ ತಾಮ್ರ ಪತ್ರ ಪುರಸ್ಕಾರ 1972, ಆಗಸ್ಟ್ ಸ್ವಾತಂತ್ರ್ಯದ ರಜತಮಹೋತ್ಸವದ ಸಂದರ್ಭದಲ್ಲಿ ಸಂದ ಪದ್ಮಭೂಷಣ (1972 ಜನವರಿ 26), ಭಗವಾನ್ ಬಿರಸಾ ಮುಂಡ ಪುರಸ್ಕಾರ-1996(ಮರಣದ ನಂತರ), ಒಂದು ರೂಪಾಯಿ ಬೆಲೆಯ ಅಂಚೆ ಚೀಟಿಯ ಬಿಡುಗಡೆ ಪ್ರಮುಖವಾದವು. ಭಾರತ ಸರ್ಕಾರ ಭಾರತೀಯ ಇತಿಹಾಸದ ಐದು ಪ್ರಮುಖ ನಾರಿಯರ ಸಮ್ಮಾನದಲ್ಲಿ ಸ್ತ್ರೀಶಕ್ತಿ ಪುರಸ್ಕಾರ ಪ್ರಾರಂಭ ಮಾಡಿದ್ದು ಅವರಲ್ಲಿ ರಾಣಿ ರಾಣಿ ಗೈಡಿನ್ಲ್ಯೂ ಸಹ ಒಬ್ಬರು. ಉಳಿದವರು ಅಹಲ್ಯ ಬಾಯಿ ಹೊಳ್ಕರ್, ಕಣ್ಣಗಿ, ಜೀಜಾಬಾಯಿ.

ಸ್ವಾತಂತ್ರ್ಯದ ನಂತರವೂ ದೇಶದ ಅಖಂಡತೆ ಹಾಗೂ ಸಾರ್ವಭೌಮತ್ವದ ಸುರಕ್ಷೆಗಾಗಿ ಜೀವಮಾನವಿಡೀ ಹೋರಾಡಿದ ಮಹಾನಾಯಕಿ ರಾಣಿ ಗೈಡಿನ್ಲ್ಯೂ 1993 ಫೆಬ್ರವರಿ 17ರಂದು ದೈವಾಧೀನರಾದರು. ಆದರೂ ಭಾರತದೇಶದ ಲಕ್ಷಾಂತರ ಪ್ರಾಥಃಸ್ಮರಣೀಯರಲ್ಲಿ ರಾಣಿ ಗೈಡಿನ್ಲ್ಯೂ ಸಹ ಒಬ್ಬರೆಂದು ಹೆಮ್ಮೆ ಎನಿಸುತ್ತದೆ. ಇಂಥವರ ತ್ಯಾಗ ಬಲಿದಾನಗಳಿಂದ ವನವಾಸಿಗಳ ಇಂದಿನ ಬದುಕು ಸುಂದರಗೊಳ್ಳುತ್ತಿದೆ. ಇಂತಹವರ ಸಂತತಿ ದಿನೇ ದಿನೇ ವೃದ್ಧಿಸಲಿ ಎಂಬುದೇ ನಮ್ಮ ಆಶಯ.

ಲೇಖಕರು ಸಂಚಾಲಕರು, ಶ್ರೀ ಅನ್ನಪೂರ್ಣೇಶ್ವರಿ ಮುಷ್ಟಿ ಅಕ್ಕಿ ಯೋಜನೆ, ಶಿವಮೊಗ್ಗ

ಇದನ್ನೂ ಓದಿ : Republic Day 2023 President Speech: ಜಿ20 ಪ್ರೆಸಿಡೆನ್ಸಿಯು ಪ್ರಜಾಪ್ರಭುತ್ವ, ಬಹುತ್ವ ಉತ್ತೇಜಿಸುವ ಅವಕಾಶ ಎಂದು ಬಣ್ಣಿಸಿದ ರಾಷ್ಟ್ರಪತಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Narendra Modi: ಅಂಬಾನಿ, ಅದಾನಿಯಿಂದ ಕಾಂಗ್ರೆಸ್‌ಗೆ ಟೆಂಪೋಗಟ್ಟಲೆ ಹಣ; ಮೋದಿ ತಿರುಗುಬಾಣ!

Narendra Modi: ಕಾಂಗ್ರೆಸ್‌ ಮಹಾರಾಜ (ರಾಹುಲ್‌ ಗಾಂಧಿ) ಈಗ ಮುಕೇಶ್‌ ಅಂಬಾನಿ ಹಾಗೂ ಗೌತಮ್‌ ಅದಾನಿ ಅವರ ಬಗ್ಗೆ ಮಾತನಾಡುತ್ತಿಲ್ಲ. ಏಕೆಂದರೆ, ಚುನಾವಣೆಗಾಗಿ ಉದ್ಯಮಿಗಳಿಂದ ಕಾಂಗ್ರೆಸ್‌ಗೆ ಟೆಂಪೋಗಟ್ಟಲೆ ಕಾಳಧನವನ್ನು ಕಾಂಗ್ರೆಸ್‌ಗೆ ನೀಡಲಾಗಿದೆ ಎಂದು ರಾಹುಲ್‌ ಗಾಂಧಿ ವಿರುದ್ಧ ನರೇಂದ್ರ ಮೋದಿ ಅವರು ತೆಲಂಗಾಣದ ರ‍್ಯಾಲಿಯಲ್ಲಿ ವಾಗ್ದಾಳಿ ನಡೆಸಿದರು.

VISTARANEWS.COM


on

Narendra Modi
Koo

ಹೈದರಾಬಾದ್:‌ ಲೋಕಸಭೆ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಸೇರಿ ಹಲವು ನಾಯಕರ ಭಾಷಣಗಳು, ಆರೋಪಗಳು, ವಾಗ್ದಾಳಿಗಳು ತೀಕ್ಷ್ಣ ಸ್ವರೂಪ ಪಡೆದಿವೆ. ಇನ್ನು, ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರಂತೂ ಮುಕೇಶ್‌ ಅಂಬಾನಿ (Mukesh Ambani), ಗೌತಮ್‌ ಅದಾನಿ (Gautam Adani) ಹೆಸರು ಪ್ರಸ್ತಾಪಿಸಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ಆದರೆ, ಮೋದಿ ಈಗ ಅಂಬಾನಿ, ಅದಾನಿ ಹೆಸರು ಹೇಳಿಕೊಂಡೇ ಕಾಂಗ್ರೆಸ್‌ಗೆ ತಿರುಗೇಟು ನೀಡಿದ್ದಾರೆ. “ಚುನಾವಣೆಗಾಗಿ ಕಾಂಗ್ರೆಸ್‌ಗೆ ಅಂಬಾನಿ ಹಾಗೂ ಅದಾನಿಯಿಂದ ಟೆಂಪೋಗಟ್ಟಲೆ ಹಣ ಸಂದಾಯವಾಗಿದೆ” ಎಂದು ತಿರುಗುಬಾಣ ಬಿಟ್ಟಿದ್ದಾರೆ.

ತೆಲಂಗಾಣದಲ್ಲಿ ನಡೆದ ಚುನಾವಣೆ ರ‍್ಯಾಲಿಯಲ್ಲಿ ಮಾತನಾಡಿದ ಮೋದಿ, ರಾಹುಲ್‌ ಗಾಂಧಿ ಅವರಿಗೆ ತಿರುಗೇಟು ನೀಡಿದರು. “ಕಾಂಗ್ರೆಸ್‌ ಮಹಾರಾಜ (ರಾಹುಲ್‌ ಗಾಂಧಿ) ಈಗ ಮುಕೇಶ್‌ ಅಂಬಾನಿ ಹಾಗೂ ಗೌತಮ್‌ ಅದಾನಿ ಅವರ ಬಗ್ಗೆ ಮಾತನಾಡುತ್ತಿಲ್ಲ. ಏಕೆಂದರೆ, ಚುನಾವಣೆಗಾಗಿ ಉದ್ಯಮಿಗಳಿಂದ ಕಾಂಗ್ರೆಸ್‌ಗೆ ಟೆಂಪೋಗಟ್ಟಲೆ ಕಾಳಧನವನ್ನು ಕಾಂಗ್ರೆಸ್‌ಗೆ ನೀಡಲಾಗಿದೆ. ಇದೇ ಕಾರಣಕ್ಕಾಗಿ ರಾಹುಲ್‌ ಗಾಂಧಿ ಅವರು ಅಂಬಾನಿ, ಅದಾನಿ ಬಗ್ಗೆ ಈಗ ಮಾತನಾಡುತ್ತಿಲ್ಲ” ಎಂದು ಟೀಕಿಸಿದರು.

“ಕಳೆದ ಐದು ವರ್ಷಗಳಿಂದ ರಾಹುಲ್‌ ಗಾಂಧಿ ಅವರು ನಮ್ಮ ವಿರುದ್ಧ ಆರೋಪಗಳನ್ನು ಮಾಡುತ್ತಲೇ ಇದ್ದರು. ರಾಫೆಲ್‌ ವಿಚಾರವಾಗಿ ಮಾಡಿದ ಆರೋಪವು ನೆಲಕಚ್ಚಿತು. ಅದಾದ ಬಳಿಕ ಐವರು ಉದ್ಯಮಿಗಳು, ಐವರು ಉದ್ಯಮಿಗಳು ಎಂದು ಪರೋಕ್ಷ ಆರೋಪ ಶುರುವಿಟ್ಟುಕೊಂಡರು. ಅದಾದ ಬಳಿಕ ಅಂಬಾನಿ-ಅದಾನಿ ಎಂದು ನೇರವಾಗಿ ಆರೋಪ ಮಾಡಿದರು. ಆದರೆ, ಚುನಾವಣೆ ಘೋಷಣೆಯಾಗುತ್ತಲೇ ರಾಹುಲ್‌ ಗಾಂಧಿ ಅವರು ಅಂಬಾನಿ ಹಾಗೂ ಅದಾನಿ ಹೆಸರೇ ಎತ್ತುತ್ತಿಲ್ಲ. ರಾಹುಲ್‌ ಗಾಂಧಿ ಏಕೆ ಈಗ ರಾತ್ರೋರಾತ್ರಿ ಬದಲಾದರು? ಏಕೆ ಅವರು ಅಂಬಾನಿ-ಅದಾನಿ ಹೆಸರು ಹೇಳುತ್ತಿಲ್ಲ” ಎಂದು ಪ್ರಶ್ನಿಸಿದರು.

ಅಂಬಾನಿ-ಅದಾನಿ ಹೆಸರಿಟ್ಟುಕೊಂಡು ಟೀಕೆ ಮಾಡುತ್ತಿದ್ದ ರಾಹುಲ್‌ ಗಾಂಧಿ ಅವರಿಗೆ ಈಗ ಮೋದಿ ಅವರು ಉದ್ಯಮಿಗಳ ಹೆಸರು ಪ್ರಸ್ತಾಪಿಸಿಯೇ ಟೀಕಿಸಿದ್ದಾರೆ. “ನರೇಂದ್ರ ಮೋದಿ ಅವರು ಕೆಲವು ಉದ್ಯಮಿಗಳಿಗೆ ಮಾತ್ರ ನೆರವು ನೀಡುತ್ತಾರೆ. ಅವರಿಗಾಗಿಯೇ ಅವರು ಆಡಳಿತ ಮಾಡುತ್ತಾರೆ. ಕೇಂದ್ರ ಸರ್ಕಾರದ ಹಣವು ಅಂಬಾನಿ-ಅದಾನಿಗೆ ಮಾತ್ರ ಹೋಗುತ್ತದೆ. ಬಡವರಿಗೆ ಮೋದಿ ಸರ್ಕಾರದಿಂದ ಯಾವುದೇ ಉಪಯೋಗವಿಲ್ಲ” ಎಂದು ರಾಹುಲ್‌ ಗಾಂಧಿ ಆರೋಪಿಸುತ್ತಿದ್ದರು.

ಇದನ್ನೂ ಓದಿ: PM Modi: ರಾಮಮಂದಿರಕ್ಕೆ ಕಾಂಗ್ರೆಸ್‌ ಬೀಗ ಹಾಕಬಾರದು ಎಂದರೆ ನಮಗೆ 400 ಸೀಟು ಕೊಡಿ ಎಂದ ಮೋದಿ

Continue Reading

ಪ್ರಮುಖ ಸುದ್ದಿ

Chicken Shawarma: ಬೀದಿ ಬದಿ ಚಿಕನ್‌ ಶವರ್ಮಾ ತಿಂದು 19 ವರ್ಷದ ಯುವಕ ಸಾವು; ಚಿಕನ್‌ ಪ್ರಿಯರೇ ಎಚ್ಚರ!

Chicken Shawarma: ಮೃತ ಯುವಕನನ್ನು ಪ್ರಥಮೇಶ್‌ ಭೋಕ್ಸೆ ಎಂದು ಗುರುತಿಸಲಾಗಿದೆ. ಮೇ 3ರಂದು ಸಾಯಂಕಾಲ ಮುಂಬೈನ ಮಾಂಖುರ್ದ್‌ ಪ್ರದೇಶದಲ್ಲಿರುವ ಬೀದಿ ಬದಿಯ ಅಂಗಡಿಯೊಂದಕ್ಕೆ ತೆರಳಿದ ಯುವಕನು ಚಿಕನ್‌ ಶವರ್ಮಾ ತಿಂದಿದ್ದಾನೆ. ಇದಾದ ಮರುದಿನ ಆತ ಹೊಟ್ಟೆನೋವು ಹಾಗೂ ಪದೇಪದೆ ವಾಂತಿ ಮಾಡಿಕೊಂಡಿದ್ದಾನೆ. ಕೂಡಲೇ ಆಸ್ಪತ್ರೆಗೆ ದಾಖಲಿಸಿದರೂ ಆತ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ.

VISTARANEWS.COM


on

Chicken Shawarma
Koo

ಮುಂಬೈ: ಬೀದಿ ಬದಿಯ ಆಹಾರವನ್ನು (Road Side Food) ಸೇವಿಸುವುದು, ಜಂಕ್‌ಫುಡ್‌ಗಳನ್ನು ಹೆಚ್ಚಾಗಿ ತಿನ್ನುವುದು ಆರೋಗ್ಯಕ್ಕೆ ಹಾನಿಕರ ಎಂದು ವೈದ್ಯರು ಹೇಳುತ್ತಲೇ ಇರುತ್ತಾರೆ. ಆದರೂ, ಬಾಯಿಚಪಲ ತಾಳದೆ ತುಂಬ ಜನ ರೋಡ್‌ ಸೈಡ್‌ ತಿಂಡಿಗಳನ್ನು ಸೇವಿಸುತ್ತಾರೆ. ಹೀಗೆ, ಮಹಾರಾಷ್ಟ್ರದಲ್ಲಿ (Maharashtra) ಬೀದಿ ಬದಿಯಲ್ಲಿ ಚಿಕನ್‌ ಶವರ್ಮಾ (Chicken Shawarma) ತಿಂದ 19 ವರ್ಷದ ಯುವಕನು ಮೃತಪಟ್ಟಿದ್ದಾನೆ. ಇನೂ ಐವರು ಅಸ್ವಸ್ಥರಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೃತ ಯುವಕನನ್ನು ಪ್ರಥಮೇಶ್‌ ಭೋಕ್ಸೆ ಎಂದು ಗುರುತಿಸಲಾಗಿದೆ. ಮೇ 3ರಂದು ಸಾಯಂಕಾಲ ಮುಂಬೈನ ಮಾಂಖುರ್ದ್‌ ಪ್ರದೇಶದಲ್ಲಿರುವ ಬೀದಿ ಬದಿಯ ಅಂಗಡಿಯೊಂದಕ್ಕೆ ತೆರಳಿದ ಯುವಕನು ಚಿಕನ್‌ ಶವರ್ಮಾ ತಿಂದಿದ್ದಾನೆ. ಇದಾದ ಬಳಿಕ ಆತನು ಎಂದಿನಂತೆ ಮನೆಗೆ ತೆರಳಿದ್ದಾನೆ. ಮನೆಗೆ ತೆರಳಿದ ಮರುದಿನವೇ ಆತನಿಗೆ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಪದೇಪದೆ ವಾಂತಿ ಮಾಡಿಕೊಂಡಿದ್ದಾನೆ. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ತೀವ್ರವಾಗಿ ಅಸ್ವಸ್ಥಗೊಂಡಿದ್ದ ಯುವಕನು ಮಂಗಳವಾರ (ಮೇ 7) ಬೆಳಗ್ಗೆ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.

ಕೊಳೆತ ಮಾಂಸ ಬೆರೆಸಿದ್ದೇ ಕಾರಣ?

ಬೀದಿ ಬದಿ ಅಂಗಡಿ ಮಾಲೀಕರು ಚಿಕನ್‌ ಶವರ್ಮಾ ತಯಾರಿಸುವಾಗ ಅದಕ್ಕೆ ಕೊಳೆತ ಮಾಂಸವನ್ನು ಬೆರೆಸಿದ್ದೇ ಯುವಕ ಮೃತಪಟ್ಟು, ಐವರು ಅಸ್ವಸ್ಥರಾಗಲು ಕಾರಣ ಎಂದು ತಿಳಿದುಬಂದಿದೆ. ಈಗಲೂ ಐವರು ಅಸ್ವಸ್ಥರು ಕೆಇಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಥಮೇಶ್‌ ಭೋಕ್ಸೆ ಸಾವಿನ ಬಳಿಕ ಅಂಗಡಿ ಮಾಲೀಕರ ವಿರುದ್ಧ ಆತನ ಪೋಷಕರು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದಾದ ಬಳಿಕ ಇಬ್ಬರು ಅಂಗಡಿ ಮಾಲೀಕರನ್ನು ಪೊಲೀಸರು ಬಂಧಿಸಿದ್ದಾರೆ.

“ಕೊಳೆತ ಮಾಂಸವನ್ನು ಚಿಕನ್‌ ಶವರ್ಮಾಗೆ ಬೆರೆಸಿದ ಕಾರಣ ಸೇವಿಸಿದವರಿಗೆ ಅನಾರೋಗ್ಯ ಉಂಟಾಗಿದೆ. ಎಲ್ಲರೂ ಆಸ್ಪತ್ರೆಗೆ ದಾಖಲಾಗಿದ್ದು, ಪ್ರಥಮೇಶ್‌ ಮಾತ್ರ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ. ಆರೋಪಿಗಳ ವಿರುದ್ಧ ಐಪಿಸಿಯ ಹಲವು ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಇಬ್ಬರನ್ನೂ ಬಂಧಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ” ಎಂಬುದಾಗಿ ಪೊಲೀಸರು ತಿಳಿಸಿದ್ದಾರೆ. ಬಂಧಿತರನ್ನು ಆನಂದ್‌ ಕಾಂಬ್ಳೆ ಹಾಗೂ ಮೊಹಮ್ದ್‌ ಶೇಖರ್‌ ರಾಜಾ ಎಂದು ಗುರುತಿಸಲಾಗಿದೆ.

ಇದನ್ನೂ ಓದಿ: Channapatna News: ಮದುವೆಯಲ್ಲಿ ಐಸ್ ಕ್ರೀಂ ತಿಂದು 50ಕ್ಕೂ ಹೆಚ್ಚು ಮಂದಿ ಅಸ್ವಸ್ಥ

Continue Reading

ದೇಶ

Ram Mandir: ರಾಮಮಂದಿರ ‘ಯೂಸ್‌ಲೆಸ್’ ಎಂದ ಸಮಾಜವಾದಿ ಪಕ್ಷದ ನಾಯಕ; ಬಿಜೆಪಿ ಆಕ್ರೋಶ

Ram Mandir: ಚುನಾವಣೆಯಲ್ಲಿ ರಾಮಮಂದಿರ ವಿಷಯವು ಭಾರಿ ಚರ್ಚೆಯಾಗುತ್ತಿದೆ. ನರೇಂದ್ರ ಮೋದಿ ಅವರೂ ರಾಮಮಂದಿರವನ್ನು ಪ್ರಸ್ತಾಪಿಸುತ್ತಿದ್ದಾರೆ. ಕಾಂಗ್ರೆಸ್‌ನವರು ಕೂಡ, ನಾವೂ ರಾಮನ ಭಕ್ತರು ಎನ್ನುತ್ತಿದ್ದಾರೆ. ಇದರ ಮಧ್ಯೆಯೇ ರಾಮಮಂದಿರ ಕುರಿತು ಸಮಾಜವಾದಿ ಪಕ್ಷದ ನಾಯಕ ರಾಮ್‌ ಗೋಪಾಲ್‌ ಯಾದವ್‌ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

VISTARANEWS.COM


on

Ram Mandir
Koo

ಲಖನೌ: ಲೋಕಸಭೆ ಚುನಾವಣೆ (Lok Sabha Electio) ಹಿನ್ನೆಲೆಯಲ್ಲಿ ರಾಜಕಾರಣಿಗಳ ಭಾಷಣಗಳು ಮೊನಚಾಗಿವೆ. ಒಂದೊಂದು ವಿಷಯಗಳು ಕೂಡ ವಿವಾದ, ಚರ್ಚೆ, ವಾಗ್ವಾದಗಳಿಗೆ ಕಾರಣವಾಗುತ್ತಿವೆ. ಚುನಾವಣೆ ವೇಳೆ ರಾಮಮಂದಿರ ವಿಷಯವೂ ಹೆಚ್ಚು ಚರ್ಚೆಗೆ ಗ್ರಾಸವಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ (Narendra Modi) ಅವರೂ ರಾಮಮಂದಿರವನ್ನು ಪ್ರಸ್ತಾಪಿಸುತ್ತಿದ್ದಾರೆ. ಇದರ ಬೆನ್ನಲ್ಲೇ, ಸಮಾಜವಾದಿ ಪಕ್ಷದ ನಾಯಕ ರಾಮ್‌ ಗೋಪಾಲ್‌ ಯಾದವ್‌ (Ram Gopal Yadav) ಅವರು “ರಾಮಮಂದಿರ ಯೂಸ್‌ಲೆಸ್”‌ ಎಂದು ಹೇಳುವ ಮೂಲಕ ವಿವಾದಕ್ಕೆ ಕಾರಣರಾಗಿದ್ದಾರೆ.

ನ್ಯೂಸ್‌ 18 ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ರಾಮ್‌ ಗೋಪಾಲ್‌ ಯಾದವ್‌, “ನಾನು ಪ್ರತಿ ದಿನವೂ ರಾಮನನ್ನು ಆರಾಧಿಸುತ್ತೇನೆ. ಆದರೆ, ಕೆಲವರು ರಾಮನವಮಿಯ ಪೇಟೆಂಟ್‌ಅನ್ನು ತೆಗೆದುಕೊಂಡಿದ್ದಾರೆ. ಇದರ ಮಧ್ಯೆ, ಅಯೋಧ್ಯೆಯಲ್ಲಿ ನಿರ್ಮಿಸಲಾಗಿರುವ ರಾಮಮಂದಿರದಿಂದ ಯಾವುದೇ ಉಪಯೋಗವಿಲ್ಲ. ಅದು ಶಾಸ್ತ್ರೋಕ್ತವಾಗಿ ನಿರ್ಮಾಣ ಆಗಿಲ್ಲ. ದೇಶದ ಪುರಾತನ ದೇವಾಲಯಗಳನ್ನು ನೋಡಿಕೊಂಡು ಬನ್ನಿ. ಉತ್ತರದಿಂದ ದಕ್ಷಿಣದವರೆಗೆ ನಿರ್ಮಿಸಿದ ದೇವಾಲಯಗಳನ್ನು ನೋಡಿ. ರಾಮಮಂದಿರವು ನಮ್ಮ ಹಳೆಯ ಮಂದಿರಗಳಂತೆ ನಿರ್ಮಾಣ ಮಾಡಿಲ್ಲ” ಎಂದಿದ್ದಾರೆ.

Ram Mandir

“ರಾಮಮಂದಿರವನ್ನು ವಾಸ್ತು ಪ್ರಕಾರ ನಿರ್ಮಿಸಿಲ್ಲ. ನಮ್ಮ ದೇಶದ ಹಳೆಯ ದೇವಾಲಯಗಳಂತೆ ವೈಜ್ಞಾನಿಕವಾದ ವಾಸ್ತುವನ್ನು ಪಾಲಿಸಿಲ್ಲ. ಯಾರಾದರೂ ಈ ರೀತಿ ದೇವಾಲಯವನ್ನು ನಿರ್ಮಾಣ ಮಾಡುತ್ತಾರೆಯೇ? ದೇವಾಲಯ ನಿರ್ಮಾಣಕ್ಕೂ ಮೊದಲು ಅದರ ಬಗ್ಗೆ ಅಧ್ಯಯನ ನಡೆಯಬೇಕು. ದೇವಾಲಯಗಳ ವಾಸ್ತುವನ್ನು ಅಧ್ಯಯನ ಮಾಡಬೇಕು. ಆ ಮೂಲಕ ವೈಜ್ಞಾನಿಕವಾಗಿ ದೇವಾಲಯವನ್ನು ನಿರ್ಮಾಣ ಮಾಡಬೇಕು. ಆದರೆ, ಅಯೋಧ್ಯೆಯಲ್ಲಿ ನಿರ್ಮಾಣವಾಗಿರುವ ದೇವಾಲಯವು ಯಾವುದೇ ರೀತಿಯಲ್ಲಿ ವೈಜ್ಞಾನಿಕವಾಗಿಲ್ಲ” ಎಂದು ತಿಳಿಸಿದರು.

ತಿರುಗೇಟು ನೀಡಿದ ಯೋಗಿ

ರಾಮ್‌ ಗೋಪಾಲ್‌ ಯಾದವ್‌ ಹೇಳಿಕೆಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ತಿರುಗೇಟು ನೀಡಿದ್ದಾರೆ. “ಭಗವಾನ್‌ ಶ್ರೀರಾಮನಿಗೆ, ರಾಮಮಂದಿರಕ್ಕೆ, ಸನಾತನ ಧರ್ಮಕ್ಕೆ, ಕೋಟ್ಯಂತರ ಜನರ ಭಾವನೆಗಳಿಗೆ ಧಕ್ಕೆ ತರುವ ಮೂಲಕ ತಮ್ಮ ವೋಟ್‌ ಬ್ಯಾಂಕ್‌ಅನ್ನು ಭದ್ರಪಡಿಸಿಕೊಳ್ಳುವುದೇ ಇಂತಹವರ ಉದ್ದೇಶವಾಗಿದೆ. ಆದರೆ, ಒಂದು ವಿಷಯ ನೆನಪಿರಲಿ, ಭಾರತೀಯರ ನಂಬಿಕೆಯ ಬಗ್ಗೆ, ದೈವತ್ವದ ಬಗ್ಗೆ ಕೆಟ್ಟದಾಗಿ ಮಾತನಾಡಿದವರಿಗೆ ದೈವವೇ ಸರಿಯಾದ ಪಾಠ ಕಲಿಸಿದೆ. ಇದು ಇತಿಹಾಸದಿಂದ ಸಾಬೀತಾಗಿದೆ” ಎಂದು ಹೇಳಿದರು.

ಇದನ್ನೂ ಓದಿ: PM Modi: ರಾಮಮಂದಿರಕ್ಕೆ ಕಾಂಗ್ರೆಸ್‌ ಬೀಗ ಹಾಕಬಾರದು ಎಂದರೆ ನಮಗೆ 400 ಸೀಟು ಕೊಡಿ ಎಂದ ಮೋದಿ

Continue Reading

ಪ್ರಮುಖ ಸುದ್ದಿ

PM Narendra Modi: “ಚರ್ಮದ ಬಣ್ಣದ ಮೇಲಿನ ಈ ಅವಮಾನವನ್ನು ಸಹಿಸುವುದಿಲ್ಲ…” ಪಿತ್ರೋಡಾಗೆ ಮೋದಿ ತಪರಾಕಿ

ತೆಲಂಗಾಣದ ವಾರಂಗಲ್‌ನಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ಪಿಎಂ ನರೇಂದ್ರ ಮೋದಿ (PM Narendra Modi) ಅವರು, ಪಿತ್ರೋಡಾ (Sam Pitroda) ಹೇಳಿಕೆಗೆ ತೀಕ್ಷ್ಣವಾಗಿ ತಿರುಗೇಟು ನೀಡಿದ್ದಾರೆ. “ಕಾಂಗ್ರೆಸ್‌ನ ಶೆಹಜಾದಾ ಅಮೆರಿಕದ ಅಂಕಲ್‌ನಿಂದ ಸ್ಫೂರ್ತಿ ಪಡೆಯುತ್ತಿದ್ದಾರೆ ಎಂದು ಕುಟುಕಿದ್ದಾರೆ.

VISTARANEWS.COM


on

PM Narendra Modi
Koo

ಹೈದರಾಬಾದ್:‌ ಕಾಂಗ್ರೆಸ್‌ನ ಹಿರಿಯ ನಾಯಕ ಸ್ಯಾಮ್ ಪಿತ್ರೋಡಾ (Congress Leader Sam Pitroda) ಅವರ ಹೊಸ ವಿವಾದಿತ ಹೇಳಿಕೆಗೆ (Controversial statement) ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi), “ಚರ್ಮದ ಬಣ್ಣದ (skin colour) ಆಧಾರದ ಮೇಲೆ ಭಾರತೀಯರಿಗೆ ಮಾಡುವ ಅವಮಾನವನ್ನು ಈ ದೇಶ ಸಹಿಸುವುದಿಲ್ಲ” ಎಂದು ಹೇಳಿದ್ದಾರೆ.

ವೈವಿಧ್ಯತೆಯ ಬಗ್ಗೆ ಮಾತನಾಡುವಾಗ ರಾಷ್ಟ್ರದ ವಿವಿಧ ಭಾಗಗಳ ಜನತೆಯನ್ನು ಚೀನಿಯರು, ಅರಬ್ಬರು, ಬಿಳಿಯರು ಮತ್ತು ಆಫ್ರಿಕನ್ನರಿಗೆ ಹೋಲಿಸಿ ಸ್ಯಾಮ್‌ ಪಿತ್ರೋಡಾ ವಿವಾದ ಹುಟ್ಟುಹಾಕಿದ್ದರು. “ನಾವು ಜಗತ್ತಿನಲ್ಲಿ ಪ್ರಜಾಪ್ರಭುತ್ವದ ಉಜ್ವಲ ಉದಾಹರಣೆಯಾಗಿದ್ದೇವೆ. ನಾವು ವೈವಿಧ್ಯತೆಯನ್ನು ಒಟ್ಟಿಗೆ ಹಿಡಿದಿಟ್ಟುಕೊಂಡಿರುವ ದೇಶವಾಗಿದ್ದೇವೆ. ಇಲ್ಲಿ ಪೂರ್ವದಲ್ಲಿರುವ ಜನರು ಚೀನಿಯರಂತೆ ಕಾಣುತ್ತಾರೆ. ಪಶ್ಚಿಮದಲ್ಲಿ ಜನರು ಹಾಗೆ ಅರಬ್ಬರಂತೆ, ಉತ್ತರದ ಜನರು ಬಹುಶಃ ಶ್ವೇತವರ್ಣೀಯರಂತೆ ಹಾಗೂ ದಕ್ಷಿಣದ ಜನರು ದಕ್ಷಿಣ ಆಫ್ರಿಕಾದವರಂತೆ ಕಾಣುತ್ತಾರೆ. ಪರವಾಗಿಲ್ಲ, ನಾವೆಲ್ಲರೂ ಸಹೋದರರು ಮತ್ತು ಸಹೋದರಿಯರು” ಎಂದು ಭಾರತೀಯ ಸಾಗರೋತ್ತರ ಕಾಂಗ್ರೆಸ್ ವಿಭಾಗದ ಅಧ್ಯಕ್ಷ ಪಿತ್ರೋಡಾ ಹೇಳಿದ್ದರು.

ತೆಲಂಗಾಣದ ವಾರಂಗಲ್‌ನಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ಪಿಎಂ ನರೇಂದ್ರ ಮೋದಿ ಇದಕ್ಕೆ ತೀಕ್ಷ್ಣವಾಗಿ ತಿರುಗೇಟು ನೀಡಿದ್ದಾರೆ. “ಆದಿವಾಸಿ ಕುಟುಂಬದ ಮಗಳಾದ ದ್ರೌಪದಿ ಮುರ್ಮು ಅವರನ್ನು ರಾಷ್ಟ್ರಪತಿ ಪದವಿಯ ಸ್ಪರ್ಧೆಯ ವೇಳೆ ಸೋಲಿಸಲು ಕಾಂಗ್ರೆಸ್ ಏಕೆ ಶ್ರಮಿಸಿತು ಎಂದು ನಾನು ತುಂಬಾ ಯೋಚಿಸುತ್ತಿದ್ದೆ. ಇಂದು ನನಗೆ ಅದರ ಕಾರಣ ತಿಳಿಯಿತು. ‘ಶೆಹಜಾದಾ’ನ ಅಂಕಲ್‌ ಹಾಗೂ ಫಿಲಾಸಫಿ ಮಾರ್ಗದರ್ಶಕನೊಬ್ಬ ಅಮೆರಿಕದಲ್ಲಿದ್ದಾನೆ. ಆತ ಕ್ರಿಕೆಟ್‌ನ ಮೂರನೇ ಅಂಪೈರ್‌ನಂತೆ. ಈ ‘ಶೆಹಜಾದಾ’ ಮೂರನೇ ಅಂಪೈರ್‌ನಿಂದ ಸಲಹೆ ಪಡೆಯುತ್ತಾನೆ. ಕಪ್ಪು ಚರ್ಮ ಇರುವ ಭಾರತೀಯರು ಆಫ್ರಿಕಾದವರು ಎಂದು ಈ ʼತತ್ವಜ್ಞಾನಿ ಅಂಕಲ್‌ʼ ಹೇಳಿದ್ದಾರೆ. ಇದರರ್ಥ, ನೀವು ದೇಶದ ಹಲವಾರು ಜನರನ್ನು ಅವರ ಚರ್ಮದ ಬಣ್ಣದ ಆಧಾರದ ಮೇಲೆ ನಿಂದಿಸುತ್ತಿದ್ದೀರಿ.. ” ಎಂದು ಪಿತ್ರೋಡಾ ಮೇಲೆ ನರೇಂದ್ರ ಮೋದಿ ಹರಿಹಾಯ್ದರು.

ಪಿತ್ರೋಡಾ ಹೇಳಿಕೆಗೆ ಪ್ರತಿಕ್ರಿಯಿಸಿರುವ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, “ನಾವು ವಿಭಿನ್ನವಾಗಿ ಕಾಣಿಸಬಹುದು, ಆದರೆ ನಾವೆಲ್ಲರೂ ಒಂದೇ” ಎಂದಿದ್ದಾರೆ. “ಸ್ಯಾಮ್ ಭಾಯ್, ನಾನು ಈಶಾನ್ಯದಿಂದ ಬಂದವನು ಮತ್ತು ನಾನು ಭಾರತೀಯನಂತೆ ಕಾಣುತ್ತೇನೆ. ನಮ್ಮದು ವೈವಿಧ್ಯಮಯ ದೇಶ. ನಾವು ವಿಭಿನ್ನವಾಗಿ ಕಾಣಿಸಬಹುದು ಆದರೆ ನಾವೆಲ್ಲರೂ ಒಂದೇ. ಹಮಾರೆ ದೇಶ್ ಕೆ ಬಾರೆ ಮೇ ಥೋಡಾ ತೊ ಸಮಜ್ ಲೋ! (ನಮ್ಮ ದೇಶದ ಬಗ್ಗೆ ಸ್ವಲ್ಪ ತಿಳುವಳಿಕೆ ಇರಲಿ)” ಎಂದಿದ್ದಾರೆ ಶರ್ಮಾ.

ಹಿಮಾಚಲ ಪ್ರದೇಶದ ಮಂಡಿಯ ಬಿಜೆಪಿ ಲೋಕಸಭೆ ಅಭ್ಯರ್ಥಿ ಕಂಗನಾ ರಣಾವತ್, ಪಿತ್ರೋಡಾ ಮಾತಿಗೆ ಕಟುವಾಗಿ ಪ್ರತಿಕ್ರಿಯಿಸಿದ್ದಾರೆ, “ಸ್ಯಾಮ್ ಪಿತ್ರೋಡಾ ಅವರು ರಾಹುಲ್ ಗಾಂಧಿಯವರ ಮಾರ್ಗದರ್ಶಕರು. ಅವರ ಜನಾಂಗೀಯವಾದಿಗಳ ಮಾತುಗಳನ್ನು ಕೇಳಿ. ಇವರು ಭಾರತೀಯರನ್ನು ವಿಭಜಿಸುವವರು. ಅವರ ಸಂಪೂರ್ಣ ಸಿದ್ಧಾಂತವೇ ವಿಭಜಿಸು ಮತ್ತು ಆಳು. ಸಹ ಭಾರತೀಯರನ್ನು ಚೈನೀಸ್, ಆಫ್ರಿಕನ್ ಎಂದು ಕರೆಯುವುದು ಬೇಸರದ ಸಂಗತಿ‌; ಇದು ಕಾಂಗ್ರೆಸ್‌ಗೂ ಅವಮಾನಕಾರಿ!” ಎಂದು ಕಂಗನಾ ಎಕ್ಸ್‌ನಲ್ಲಿ ಬರೆದಿದ್ದಾರೆ.

ಕಾಂಗ್ರೆಸ್ ನಾಯಕ ಪಿತ್ರೋಡಾ ಈ ರೀತಿ ಹೇಳಿಕೆ ನೀಡಿ ರಾಜಕೀಯ ಬಿರುಗಾಳಿ ಎಬ್ಬಿಸುತ್ತಿರುವುದು ಇದೇ ಮೊದಲಲ್ಲ. ಇತ್ತೀಚೆಗೆ ಅವರು ʼಅಮೆರಿಕದ ಮಾದರಿಯ ಪಿತ್ರಾರ್ಜಿತ ತೆರಿಗೆʼ ಹಾಗೂ ʼಆಸ್ತಿ ಮರುಹಂಚಿಕೆʼ ಉಲ್ಲೇಖ ಮಾಡಿದ್ದರು. ಅಮೆರಿಕದಲ್ಲಿ ಶ್ರೀಮಂತರು ಮರಣ ಹೊಂದಿದಾಗ, ಅವರ ಆಸ್ತಿಯ ಒಂದು ಭಾಗವನ್ನು ಮಾತ್ರ ಅವರ ಮಕ್ಕಳಿಗೆ ವರ್ಗಾಯಿಸಲಾಗುತ್ತದೆ. ಸರ್ಕಾರ ಗಮನಾರ್ಹ ಪಾಲನ್ನು ವಶಪಡಿಸಿಕೊಳ್ಳುತ್ತದೆ. ಭಾರತದಲ್ಲಿ ಈ ರೀತಿಯ ವಿಧಾನ ನ್ಯಾಯಯುತ ಮತ್ತು ಪ್ರಯೋಜನಕಾರಿ ಎಂದಿದ್ದರು. ಕಾಂಗ್ರೆಸ್‌ ಪಕ್ಷ ಈ ಹೇಳಿಕೆಯಿಂದ ಉಂಟಾದ ಕೋಲಾಹಲದಿಂದ ಬೆಚ್ಚಿಬಿದ್ದು, ಪಿತ್ರೋಡಾ ಹೇಳಿಕೆಯಿಂದ ಅಂತರ ಕಾಪಾಡಿಕೊಂಡಿತ್ತು.

ಇದನ್ನೂ ಓದಿ: Sam Pitroda: “ದಕ್ಷಿಣ ಭಾರತೀಯರು ಆಫ್ರಿಕನ್ನರಂತೆ…” ಸ್ಯಾಮ್‌ ಪಿತ್ರೋಡಾ ಮತ್ತೊಂದು ಆತ್ಮಹತ್ಯಾ ಬಾಂಬ್!

Continue Reading
Advertisement
Fried Oil
ಆರೋಗ್ಯ11 mins ago

Fried Oil: ಒಮ್ಮೆ ಕರಿದ ಎಣ್ಣೆಯನ್ನು ಮತ್ತೊಮ್ಮೆ ಬಳಸಬಹುದೆ?

IPL 2024
ಕ್ರೀಡೆ22 mins ago

IPL 2024: ಐಪಿಎಲ್​ನಲ್ಲಿ ದಾಖಲೆ ಬರೆದ ಮ್ಯಾಕ್‌ಗುರ್ಕ್; ಜೈಸ್ವಾಲ್​ ದಾಖಲೆ ಪತನ

Akshaya Tritiya Jewellery
ಫ್ಯಾಷನ್41 mins ago

Akshaya Tritiya Jewellery: ಅಕ್ಷಯ ತೃತೀಯಕ್ಕೆ ಬಂದಿವೆ ವೈವಿಧ್ಯಮಯ ಫ್ಯಾಷನ್‌ ಜ್ಯುವೆಲರಿಗಳು!

Narendra Modi
ದೇಶ45 mins ago

Narendra Modi: ಅಂಬಾನಿ, ಅದಾನಿಯಿಂದ ಕಾಂಗ್ರೆಸ್‌ಗೆ ಟೆಂಪೋಗಟ್ಟಲೆ ಹಣ; ಮೋದಿ ತಿರುಗುಬಾಣ!

Apple New Products
ಗ್ಯಾಜೆಟ್ಸ್50 mins ago

Apple New Products: ಐಪ್ಯಾಡ್ ಪ್ರೊನಿಂದ ಪೆನ್ಸಿಲ್ ಪ್ರೊವರೆಗೆ; 2024ರ ಆಪಲ್‌ ಹೊಸ ಉತ್ಪನ್ನಗಳಿವು

State Education Policy
ಕರ್ನಾಟಕ53 mins ago

State Education Policy: 3 ವರ್ಷದ ಪದವಿಗೆ ರಾಜ್ಯ ಸರ್ಕಾರ ಅಸ್ತು; ಎಸ್‌ಇಪಿ ಆಯೋಗದ ಶಿಫಾರುಸುಗಳ ಅನ್ವಯ ಆದೇಶ

Actor Ravichandran female lead in ravichandrans premaloka 2
ಸ್ಯಾಂಡಲ್ ವುಡ್56 mins ago

Actor Ravichandran: ಕನಸುಗಾರನ ʻಪ್ರೇಮಲೋಕ 2’ ಚಿತ್ರಕ್ಕೆ ನಾಯಕಿ ಫಿಕ್ಸ್‌!

Prajwal Revanna Case Two additional SPPs appointed for SIT cases
ಕ್ರೈಂ59 mins ago

Prajwal Revanna Case: ಎಸ್‌ಐಟಿ ಕೇಸ್‌ಗಳಿಗಾಗಿ ಇಬ್ಬರು ಹೆಚ್ಚುವರಿ ಎಸ್‌ಪಿಪಿ ನೇಮಕ; ರಾಜ್ಯ ಸರ್ಕಾರದ ಮಹತ್ವದ ಆದೇಶ

Paris Olympics 2024
ಕ್ರೀಡೆ1 hour ago

Paris Olympics 2024: 19ನೇ ಶತಮಾನದ ಹಡಗಿನಲ್ಲಿ ಇಂದು ಫ್ರಾನ್ಸ್‌ಗೆ ಬರಲಿದೆ ಒಲಿಂಪಿಕ್‌ ಜ್ಯೋತಿ

Chicken Shawarma
ಪ್ರಮುಖ ಸುದ್ದಿ2 hours ago

Chicken Shawarma: ಬೀದಿ ಬದಿ ಚಿಕನ್‌ ಶವರ್ಮಾ ತಿಂದು 19 ವರ್ಷದ ಯುವಕ ಸಾವು; ಚಿಕನ್‌ ಪ್ರಿಯರೇ ಎಚ್ಚರ!

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ13 hours ago

Dina Bhavishya : ಅಮಾವಾಸ್ಯೆ ದಿನ ಈ ರಾಶಿಯವರಿಗೆ ಅದೃಷ್ಟ; ಹಣ ಗಳಿಕೆಗೆ ಪುಷ್ಟಿ

Prajwal Revanna Case HD Revanna has severe chest pain Admission in Victoria
ರಾಜಕೀಯ21 hours ago

Prajwal Revanna Case: ಎಚ್.ಡಿ. ರೇವಣ್ಣಗೆ ಹೆಚ್ಚಾದ ಎದೆ ನೋವು; ಸಲೈನ್‌ ಹಾಕಿ ಕಳಿಸಿದ ವೈದ್ಯರು

Karnataka Weather Forecast
ಮಳೆ24 hours ago

Karnataka Weather : ಹಾಸನ, ಚಿಕ್ಕಮಗಳೂರಲ್ಲಿ ಆಲಿಕಲ್ಲು ಸಹಿತ ಭಾರಿ ಮಳೆ; ನಾಳೆ ಬಿರುಗಾಳಿ ಎಚ್ಚರಿಕೆ

Prajwal Revanna Case Government work against Revanna HD Kumaraswamy gives details of the case
ರಾಜಕೀಯ1 day ago

Prajwal Revanna Case: ರೇವಣ್ಣರಿಗೆ ಖೆಡ್ಡಾ ತೋಡಿದ್ದು ಸರ್ಕಾರ; ಎಲ್ಲೆಲ್ಲಿ ಏನೇನು ಮಾಡಲಾಯಿತೆಂಬ ಇಂಚಿಂಚು ಡಿಟೇಲ್ಸ್‌ ಕೊಟ್ಟ ಎಚ್‌ಡಿಕೆ!

Prajwal Revanna Case 2nd accused in KR Nagar victim abduction case sent to SIT custody Trouble for Revanna
ಕ್ರೈಂ2 days ago

Prajwal Revanna Case: ಕೆ.ಆರ್.‌ ನಗರ ಸಂತ್ರಸ್ತೆ ಕಿಡ್ನ್ಯಾಪ್‌ ಕೇಸ್‌ನ 2ನೇ ಆರೋಪಿ SIT ಕಸ್ಟಡಿಗೆ; ರೇವಣ್ಣಗೆ ಸಂಕಷ್ಟ?

karnataka weather forecast
ಮಳೆ2 days ago

Karnataka Weather : ಬೆಂಗಳೂರು ಸೇರಿ ಹಲವೆಡೆ ಮತ್ತೆ ಅಬ್ಬರಿಸುತ್ತಿರುವ ಮಳೆ; ಇನ್ನೊಂದು ವಾರ ಅಲರ್ಟ್‌

Prajwal Revanna Case DK Shivakumar behind Prajwal video leak Devaraje Gowda demands CBI probe
ಕ್ರೈಂ2 days ago

Prajwal Revanna Case: ಪ್ರಜ್ವಲ್‌ ವಿಡಿಯೊ ಲೀಕ್‌ ಹಿಂದೆ ಇರೋದು ಡಿಕೆಶಿ; ದಾಖಲೆ ತೋರಿಸಿ, ಸಿಬಿಐಗೆ ಕೇಸ್‌ ವಹಿಸಲು ದೇವರಾಜೇಗೌಡ ಆಗ್ರಹ

Dina bhavishya
ಭವಿಷ್ಯ3 days ago

Dina Bhavishya : ಈ ರಾಶಿಯವರಿಗೆ ಇಂದು ಹುಡುಕಿಕೊಂಡು ಬರಲಿವೆ ಹೊಸ ಅವಕಾಶಗಳು

Prajwal Revanna Case HD Revanna sent to judicial custody Shift to Parappana Agrahara
ಕ್ರೈಂ3 days ago

Prajwal Revanna Case: ಎಸ್‌ಐಟಿ ಕಸ್ಟಡಿಗೆ ಮಾಜಿ ಸಚಿವ ಎಚ್‌.ಡಿ. ರೇವಣ್ಣ; ಮತ್ತೆ ತೀವ್ರ ವಿಚಾರಣೆ

Prajwal Revanna Case No evidence against me its a conspiracy says HD Revanna
ಕರ್ನಾಟಕ3 days ago

Prajwal Revanna Case: ನನ್ನ ವಿರುದ್ಧ ಯಾವುದೇ ಸಾಕ್ಷಿಗಳಿಲ್ಲ, ಇದೊಂದು ಷಡ್ಯಂತ್ರ: ಎಚ್‌.ಡಿ. ರೇವಣ್ಣ ಫಸ್ಟ್‌ ರಿಯಾಕ್ಷನ್‌!

ಟ್ರೆಂಡಿಂಗ್‌