B.S. Yediyurappa Birthday: ಬಿ.ಎಸ್‌. ಯಡಿಯೂರ್‌ʼಅಪ್ಪʼ ಕುರಿತು ಐವರು ಮಕ್ಕಳ ಭಾವನಾತ್ಮಕ ನುಡಿಗಳಿವು - Vistara News

ಪ್ರಮುಖ ಸುದ್ದಿ

B.S. Yediyurappa Birthday: ಬಿ.ಎಸ್‌. ಯಡಿಯೂರ್‌ʼಅಪ್ಪʼ ಕುರಿತು ಐವರು ಮಕ್ಕಳ ಭಾವನಾತ್ಮಕ ನುಡಿಗಳಿವು

ಊರಿಗೆಲ್ಲರಿಗೂ ಮಾಜಿ ಸಿಎಂ, ಜನನಾಯಕ ಆದರೂ ಆದರೂ ಬಿ.ಎಸ್‌. ಯಡಿಯೂರಪ್ಪ ಅವರು ತಮ್ಮ ಮಕ್ಕಳಿಗೆ ಇಂದಿಗೂ ಪ್ರೀತಿಯ ʼಅಣ್ಣʼ. ತಂದೆಯ ಕುರಿತು ಮಕ್ಕಳ ನೆನಪಿನ ಬುತ್ತಿ ಇಲ್ಲಿದೆ.

VISTARANEWS.COM


on

children shares emtion on the occation of b-s-yediyurappa-birthday
ಸಂಗ್ರಹ ಚಿತ್ರ
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ 80ನೇ ವರ್ಷವನ್ನು ಪೂರೈಸುತ್ತಿರುವ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಂದ ಮೊದಲುಗೊಂಡು ನಾಡಿನ ಸಾಮಾನ್ಯ ಜನರವರೆಗೆ ಎಲ್ಲರೂ ಶುಭ ಹಾರೈಸುತ್ತಿದ್ದಾರೆ. ಹೋರಾಟವನ್ನೇ ಜೀವನವಾಗಿಸಿಕೊಂಡ ಯಡಿಯೂರಪ್ಪ ಕುರಿತು ರಾಜಕೀಯ ವಿರೋಧಿಗಳೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದೆಲ್ಲದರ ನಡುವೆ, ಯಡಿಯೂರಪ್ಪ ಅವರ ಕುಟುಂಬದವರು ಏನು ಹೇಳುತ್ತಾರೆ ಎನ್ನುವುದು ಮುಖ್ಯ. ಯಡಿಯೂರಪ್ಪ ಅವರ ಮೂವರು ಹೆಣ್ಣು ಮಕ್ಕಳು ಹಾಗೂ ಇಬ್ಬರು ಗಂಡು ಮಕ್ಕಳು ತಮ್ಮ ತಂದೆಯ ಕುರಿತು ಭಾವನಾತ್ಮಕ ನುಡಿಗಳನ್ನು ಹಂಚಿಕೊಂಡಿದ್ದಾರೆ.

ಬಿ.ವೈ.‌ ಪದ್ಮಾವತಿ, ಜ್ಯೇಷ್ಠ ಪುತ್ರಿ
ನಾವು ಮಕ್ಕಳೆಲ್ಲರಿಗೂ ತಂದೆಯವರನ್ನು ಅಣ್ಣ ಎಂದು ಕರೆದೇ ಅಭ್ಯಾಸ. ಇದು ನಮ್ಮ ಸೋದರತ್ತೆಯಿಂದ ರೂಢಿಗೆ ಬಂದಿತು. ಚಿಕ್ಕಂದಿನಿಂದಲೂ ನಮಗೆಲ್ಲಾ ಬೇರೆಯವರ ಹಾಗೆ ಪ್ರತಿ ದಿವಸ ತಂದೆಯವರ ಜೊತೆಯೇ ಇರುವ ಅವಕಾಶ ಸಿಗಲಿಲ್ಲ. ಅದಕ್ಕೆಲ್ಲ ನಮ್ಮ ತಂದೆಯವರ ಕೆಲಸದ ರೀತಿಯೇ ಕಾರಣ. ಬಹಳಷ್ಟು ಸಮಯ ಅವರು ರಾಜಕೀಯ ಕಾರಣಗಳಿಗಾಗಿ ಪ್ರವಾಸದಲ್ಲಿರಬೇಕಾಗುತ್ತಿತ್ತು. ಹಾಗಾಗಿ ಮನೆಯ ಜವಾಬ್ದಾರಿ ಸಂಪೂರ್ಣವಾಗಿ ಅಮ್ಮನದೇ ಆಗಿತ್ತು. ಆದರೂ ಸಹ ನಮ್ಮ ತಂದೆಯವರಿಗೆ ತಮ್ಮ ಮಕ್ಕಳ ಬಗ್ಗೆ ಇದ್ದ ಕಾಳಜಿ ಕಡಿಮೆ ಏನಿರಲಿಲ್ಲ. ಆಯಾ ಕಾಲಕ್ಕೆ ಅವರ ಜವಾಬ್ದಾರಿಯನ್ನು ಯಾವುದೇ ಕೊರತೆಯಾಗದಂತೆ ನಿಭಾಯಿಸಿದರು. ನಾವು ಸ್ವಲ್ಪ ಸಮಯ ಒಟ್ಟಿಗೆ ಇದ್ದರೂ ನಾವೂ ಯಾವಾಗಲೂ ಅವರಿಂದ ಸುರಕ್ಷಿತವಾಗಿರುವ ಭಾವನೆ. ಈಗಲೂ ಸಹ ತಾವು ಎಷ್ಟೇ ಕಷ್ಟಪಟ್ಟರೂ ಕುಟುಂಬದಲ್ಲಿ ಎಲ್ಲರೂ ನೆಮ್ಮದಿಯಿಂದಿರಬೇಕು, ಸುಖದಿಂದಿರಬೇಕು ಎಂದು ಆಸೆ ಪಡುವವರು, ತಮಗೆ ಏನೇ ಬೇಸರವಿರಲಿ, ದುಃಖವಿರಲಿ ತಮ್ಮಲ್ಲೇ ಇಟ್ಟುಕೊಂಡು ಸುಮ್ಮನೆ ಇದ್ದುಬಿಡುತ್ತಾರೆ.

ಒಂದು ವಿಷಯ ನಾನೀಗ ಬರೆಯಬೇಕೆನಿಸುತ್ತಿದೆ. ಅದು ಅಮ್ಮ ಅಪ್ಪಾಜಿಯ ಸಿನಿಮಾ ಪ್ರೀತಿ. ಇಬ್ಬರು ಬಿಡುವು ಸಿಕ್ಕಾಗ ಸದ್ದಿಲ್ಲದೆ ಚಿತ್ರ ಮಂದಿರಕ್ಕೆ ಹೊರಟು ಬಿಡುತ್ತಿದ್ದರು. ಕೆಲವು ಚಲನಚಿತ್ರಗಳಿಗೆ ನಮ್ಮನ್ನೂ ಕರೆದುಕೊಂಡು ಹೋಗುತ್ತಿದ್ದರು. ಕಲ್ಪನಾರ “ಬೆಳ್ಳಿಮೋಡ’ ಆಡ್ವಾಣಿಗೆ ಬಹಳ ಇಷ್ಟವಾದ ಚಿತ್ರ.

1999ರಲ್ಲಿ ನಡೆದ ಚುನಾವಣೆಯಲ್ಲಿ ತಂದೆಯವರು ಸೋಲನ್ನನುಭವಿಸಬೇಕಾಗಿ ಬಂತು. ಆಗ ದೊರೆತ ಬಿಡುವಿನಲ್ಲಿ ಬಹಳಷ್ಟು ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ಉಪಯೋಗಿಸದೇ ಖಾಲಿ ಬಿಟ್ಟಿದ್ದ ಜಮೀನನ್ನು ಒಂದು ತಿಂಗಳ ಕಾಲ ಹಗಲು ರಾತ್ರಿ ಎನ್ನದೇ ಪುತ್ರ ರಾಘವೇಂದ್ರನನ್ನೂ ಜೊತೆಗಿಟ್ಟುಕೊಂಡು ಹದ ಮಾಡಿಸಿದರು. ಅದು ಈಗ ನಂದನವನವಾಗಿದೆ. ಯಾವಾಗಲೂ ಅಷ್ಟೇ, ಅವರೊಬ್ಬ ಉತ್ತಮ ಗೃಹಸ್ಥ. ಪ್ರತಿನಿತ್ಯ ಬೆಳಿಗ್ಗೆ ಜಮೀನಿಗೆ ಭೇಟಿ ಕೊಟ್ಟು ಅಲ್ಲಿಯ ಕೆಲಸ ಕಾರ್ಯಗಳಲ್ಲಿ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುತ್ತಿದ್ದರು. ಫಸಲು ಕೈಗೆ ಬಂದು ಹಣ ಮಾಡುವಾಗ ಒಂದೊಂದು ವಾರ ಮನೆಗೆ ಬರದೆ ತೋಟದ ಮನೆಯಲ್ಲಿಯೇ ಇದ್ದು ಬಿಡುತ್ತಿದ್ದರು, ಮನೆಯಿಂದ ಊಟ ತಿಂಡಿ ರವಾನೆಯಾಗುತ್ತಿತ್ತು.

ಬಿ.ವೈ. ಅರುಣಾದೇವಿ, ದ್ವಿತೀಯ ಪುತ್ರಿ
ನನ್ನ ತಂದೆಯೇ ನನ್ನ ಬದುಕಿನ ʼಹೀರೊʼ, ʼಗಾಡ್‌ ಫಾದರ್‌ʼ- ಹೀಗೆ ಎಲ್ಲ ಏಳಿಗೆಗೆ ಅವರೇ ಕಾರಣ. ನನ್ನ ಅಮ್ಮ ಮೃದು ಸ್ವಭಾವದವರು. ತಂದೆ ಇದಕ್ಕೆ ತದ್ವಿರುದ್ಧ. ನಾನು ಆರು ವರ್ಷದವಳಿದ್ದಾಗಿನ ನೆನಪಿಗೂ, ಇಂದಿನ ತಂದೆ ಯಡಿಯೂರಪ್ಪ ಅವರ ಬದುಕನ್ನು ನೋಡಿದರೆ ಒಂದೇ ತೆರನಾಗಿದೆ. ಬೆಂಗಳೂರಿನಿಂದ ಶಿಕಾರಿಪುರಕ್ಕೆ ಬೆಳಗಿನ ಜಾವ ಬಂದಾಗ ಮನೆ ಗೇಟ್‌ನಿಂದಲೇ ʼಮೈತ್ರಾʼ ಎಂದು ಕೂಗಿಕೊಂಡೇ ಬಾಗಿಲು ಬಡಿಯುತ್ತಿದ್ದರು ಎಂದು ನನ್ನಮ್ಮ ಸಂಕೋಚದಿಂದ ನಮ್ಮೊಂದಿಗೆ ಹೇಳುತ್ತಿದ್ದರು. ಅಪ್ಪನ ಬಾಯಲ್ಲಿ ಅಮ್ಮನ ಹೆಸರು ಬಹಳ ಸುಂದರ ಎನ್ನಿಸುತ್ತಿತ್ತು. ಒಮ್ಮೆ ನಾನು 7ನೇ ತರಗತಿಯಲ್ಲಿದ್ದಾಗಆಗತಾನೆ ಸೈಕಲ್‌ ಕಲಿತು ರಸ್ತೆಯಲ್ಲಿ ಚಲಾಯಿಸುತ್ತಿದ್ದೆ. ಸೈಕಲ್‌ ಮೇಲೆ ಕೂಡಬಾರದು ಎಂದು ಅವತ್ತು ಅಪ್ಪ ಗದರಿದ್ದರು. ಆದರೆ ಮಾರನೆಯ ದಿನವೇ, ಸೈಕಲ್‌ ತೆಗೆದುಕೊಂಡು ಹೋಗಿ ತಮ್ಮ ಸ್ನೇಹಿತರನ್ನು ಸಭೆಗೆ ಆಹ್ವಾನಿಸುವಂತೆ ಕಳಿಸಿದ್ದರು. ಇದೇ ಅಪ್ಪ ಉಪಮುಖ್ಯಮಂತ್ರಿಯಾದಾಗ, ಹೆಣ್ಣುಮಕ್ಕಳಿಗೆ ಉಚಿತ ಸೈಕಲ್‌ ಯೋಜನೆ ಜಾರಿ ಮಾಡಿದಾಗ ಈ ಘಟನೆ ನೆನಪಾಯಿತು.

ಭಾವಗೀತೆಗಳನ್ನು ಕೇಳುವುದೆಂದರೆ ಅಪ್ಪನಿಗೆ ತುಂಬಾ ಇಷ್ಟ. ಅಮ್ಮನ ಧ್ವನಿ ಮಧುರವಾಗಿತ್ತು. ಅಮ್ಮನ ಭಾವಗೀತೆಗಳನ್ನು ರೆಕಾರ್ಡ್‌ ಮಾಡಿಡುತ್ತಿದ್ದರು. ಎಲ್ಲಿಗೇ ಪ್ರವಾಸ ಹೋದರೂ ಅಮ್ಮನೊಂದಿಗೇ ಹೋಗುತ್ತಿದ್ದರು. ಬಹಳಷ್ಟು ವಿದೇಶ ಪ್ರವಾಸ ಮಾಡಿದ್ದಾರೆ. ಅಪ್ಪ ನಮಗೆ ತರುತ್ತಿದ್ದ ಬಟ್ಟೆ, ಶೂಗಳ ಕುರಿತು ಬೆಂಗಳೂರಿನಲ್ಲಿ ನಮ್ಮ ಕಾಲೇಜಿನ ಸ್ನೇಹಿತರು ಆಶ್ಚರ್ಯಪಡುತ್ತಿದ್ದರು. ಅವರಿಂದ ದೊರಕಿದ ಸಮಾಜಮುಖಿ ಜೀವನದ ದೃಷ್ಟಿಯ ಕಾರಣದಿಂದಲೇ ಇಂದು ಅನೇಕ ಸಾಮಾಜಿಕ ಸೇವೆಗಳಲ್ಲಿ ತೊಡಗಿಸಿಕೊಂಡಿದ್ದೇನೆ. ಇಲ್ಲದಿದ್ದರೆ ನಾನು ಒಬ್ಬ ಗೃಹಿಣಿಯಾಗಷ್ಟೆ ಇರುತ್ತಿದ್ದೆ ಎನ್ನಿಸುತ್ತದೆ.

ಬಿ.ವೈ. ಉಮಾದೇವಿ, ತೃತೀಯ ಪುತ್ರಿ
ತಮ್ಮ ಅರ್ಧ ಶತಮಾನಕ್ಕೂ ಅಧಿಕವಾದ ರಾಜಕೀಯ ಬದುಕಿನಲ್ಲಿ ಶಿಕಾರಿಪುರದ ಮುನಿಸಿಪಲ್‌ ಅಧ್ಯಕ್ಷರಾಗಿ, ಶಾಸಕರಾಗಿ, ಬಿಜೆಪಿಯ ರಾಜ್ಯಾಧ್ಯಕ್ಷರಾಗಿ, ವಿರೋಧ ಪಕ್ಷದ ನಾಯಕರಾಗಿ, ಉಪ ಮುಖ್ಯಮಂತ್ರಿಗಳಾಗಿ, ಮುಖ್ಯಮಂತ್ರಿಗಳ ಹುದ್ದೆಯನ್ನೂ ಅಲಂಕರಿಸಿ ಈ ದೇಶಕ್ಕೇ ಚಿರಪರಿಚಿತರಾದರೂ ನನಗೆ ಮಾತ್ರ ನನ್ನ ಪ್ರೀತಿಯ ‘ಅಣ್ಣ’. ಶಾಲೆಯಲ್ಲಿ ಓದುತ್ತಿರುವಾಗ ವಾರ್ಷಿಕೋತ್ಸವದಂತಹ ಕಾರ್ಯಕ್ರಮಗಳಿಗೆ ತಂದೆಯವರು ‘ಅತಿಥಿಗಳಾಗಿ ವೇದಿಕೆಯ ಮೇಲಿರುವಾಗ ನನಗೂ ಸ್ವಾಗತ ಭಾಷಣವೋ, ವಂದನಾರ್ಪಣೆಯೋ ಮಾಡುವ ಅವಕಾಶ ಬಂದರೆ, ನನಗೆ ಈ ತಾಲ್ಲೂಕಿನ ಜನಪ್ರಿಯ ಶಾಸಕರಾಗಿರುವ ಶ್ರೀ…… ಎನ್ನಬೇಕಾಗಿರುವ ಅನಿವಾರ್ಯತೆ, ಸ್ವಲ್ಪ ಮುಜುಗರ/ಹಿಂಜರಿಕೆ. ಗೆಳತಿಯರೆಲ್ಲಾ ನಂತರ ತಮಾಷೆ ಮಾಡುತ್ತಿದ್ದುದು ಈಗಲೂ ನೆನಪು.

ಹಾಸ್ಟೆಲ್ಲಿಂದ ಒಮ್ಮೆ ರಜೆಗಾಗಿ ಮನೆಗೆ ಬಂದಿದ್ದೆ. ತಂದೆ ಮನೆಯಲ್ಲಿಯೇ ಕಾರ್ಯಕರ್ತರ ಮೀಟಿಂಗ್ ಕರೆದಿದ್ದರು. ಅಯೋಧ್ಯೆಗೆ ರಾಮಮಂದಿರ ನಿರ್ಮಾಣದ ವಿಷಯದಲ್ಲಿ ಹೋಗಲು ಕರಸೇವಕರ ಆಯ್ಕೆ ನಡೆದಿತ್ತು. ನಾನೂ ಬಾಗಿಲ ಹಿಂದೆಯೇ ನಿಂತು ಅವರ ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದೆ. ಆಗ ತಂದೆಯವರು ಕಾರ್ಯಕರ್ತರಿಗೆ ಹೇಳಿದ ಮಾತು ಈಗಲೂ ನನ್ನ ಕಿವಿಯಲ್ಲಿ ಪ್ರತಿಧ್ವನಿಸುತ್ತಿರುತ್ತದೆ. ಈ ಹೋರಾಟದಲ್ಲಿ ಜೀವ ಕೊಡುವ ಸಂದರ್ಭ ಬಂದರೂ ಬರಬಹುದು. ಹಾಗಾಗಿ ಪೂರ್ತಿ ಧೈರ್ಯ ಇರುವವರು ಮಾತ್ರ ನನ್ನ ಜೊತೆ ಬನ್ನಿ ಎಂದು. ಎಷ್ಟೊಂದು ಸುಲಭವಾಗಿ ಅಣ್ಣ ಈ ಮಾತನ್ನು ಹೇಳುತ್ತಿದ್ದಾರಲ್ಲ ಎಂದು ನನಗೆ ದಿಗ್ಧಮೆಯಾಗಿತ್ತು.

ಅಕ್ಟೋಬರ್ 1, 2004 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ತಂದೆಯವರಿಗೆ ಸನ್ಮಾನ ಕಾರ್ಯಕ್ರಮವಿತ್ತು. ವಾಜಪೇಯಿಯವರ ಅಧ್ಯಕ್ಷತೆ. ಕಾರಿನಲ್ಲಿ ನಾನೂ ಕುಳಿತಿದ್ದೆ. ಲಕ್ಷಾಂತರ ಕಾರ್ಯಕರ್ತರು ಸಮಾರಂಭಕ್ಕೆ ಆಗಮಿಸುತ್ತಿದ್ದನ್ನು ನೋಡಿ ತಂದೆಯವರು ಅಮ್ಮನಿಗೆ “ಮೈತ್ರಾ ನಿನ್ನ ಕಾಲ್ಗುಣದಿಂದ ಈ ರೀತಿಯ ಅಪರೂಪದ ಜನಾಭಿಮಾನ ನನ್ನ ಮೇಲೆ ಬಂದಿದೆ,” ಎಂದು ಕಣ್ಣಲ್ಲಿ ನೀರು ತಂದುಕೊಂಡು ಭಾವುಕರಾಗಿ ನುಡಿದಿದ್ದರು.

ಬಿ.ವೈ. ರಾಘವೇಂದ್ರ, ಹಿರಿಯ ಪುತ್ರ
ನನ್ನ ತಂದೆ ಎಷ್ಟೇ ಬ್ಯುಸಿಯಾಗಿದ್ದರೂ ಮಕ್ಕಳ ಆರೈಕೆ, ಪೋಷಣೆಗಳಲ್ಲಿ ಹಿಂದೆ ಬಿದ್ದವರಲ್ಲ, ನನಗೆ ಶಿಕ್ಷಣ ಸಮಯದಲ್ಲಿ ಆರೋಗ್ಯ ಹದಗೆಟ್ಟು ಬೆಂಗಳೂರಿನಲ್ಲಿ ಆಸ್ಪತ್ರೆ ಸೇರಿದ್ದೆ. ಆಗ ನನ್ನ ತಾಯಿ ಜೊತೆ ನಿತ್ಯ ಬಂದು ನನ್ನ ಉಪಚರಿಸಿ ಮಮತೆಯ ಮಡಿಲು ನೀಡಿದವರು. ಈಗಲೂ ನನ್ನ ತಾಯಿ ಕಳೆದುಕೊಂಡರೂ ನಿತ್ಯ ತಾಯಿ ಮಮತೆ ತೋರುವ ಮಮಕಾರದ ಮೂರ್ತಿ ಅವರು, ತನ್ನ ಒತ್ತಡದ ಬದುಕಲ್ಲಿ ಕುಟುಂಬವನ್ನೆಂದೂ ಮರೆತವರಲ್ಲ, ನಾವು ಶಿವಮೊಗ್ಗದಲ್ಲಿ ಓದುತ್ತಿದ್ದಾಗ ಶಿಕಾರಿ ಪುರದಿಂದ ಬೆಂಗಳೂರಿಗೆ ಹೋಗುವಾಗ ಪ್ರತೀಬಾರಿ ಬಂದು ನಮ್ಮ ಜೊತೆ ಕಾಲಕಳೆದು ಹೋಗುತ್ತಿದ್ದುದು ನನಗಿನ್ನೂ ಹಸಿರಾದ ನೆನಪು. ಹಾಗೆಯೇ ನನ್ನ ಎಲ್ಲಾ ಅಕ್ಕಂದಿರನ್ನು ತಮ್ಮನನ್ನು ಸಮಾನವಾಗಿ ಪ್ರೀತಿಸಿ ನಮ್ಮ ಜೊತೆ ಮಧುರ ಕ್ಷಣ ಕಳೆಯುತ್ತಲೇ ಮಾಸದಂತೆ ಪಾಠ ಕಲಿಸುತ್ತಿದ್ದ ಅವರ ವ್ಯಕ್ತಿತ್ವ ಅನನ್ಯ.
ಸಂಘಟನೆ ವಿಷಯ ಬಂದಾಗ ನಮ್ಮಣ್ಣ ಶಿಕಾರಿಪುರದಲ್ಲಿ ಪ್ರಾರಂಭಿಸಿದ ಸಣ್ಣ ಸಾರ್ವಜನಿಕ ಗಣಪತಿ ಹಬ್ಬದಿಂದ ರಾಜ್ಯ ಸಂಘಟನೆವರೆಗೆ ಮನೆ-ಮಠ ತೊರೆದು ಹಗಲಿರುಳು ದುಡಿದ, ಪರಿ ನಮಗೆ ಪಾಠವಾಗಿದೆ.

ಎಷ್ಟೋ ಸಾರಿ ಸಂಘಟನೆಗೆ ಹಣದ ಕೊರತೆಯಾದಾಗ ನಮ್ಮ ಮನೆಯಲ್ಲಿದ್ದ ಫಸಲು ಮಾರಿ, ಅಮ್ಮನ ಬಂಗಾರ ಮಾರಿ ಸಂಘಟನೆಯ, ಪಕ್ಷದ ಕೆಲಸ ಮಾಡಿದ್ದು ನಮಗೆ ನೆನಪಿದೆ. ಅವರು ವಿಶ್ರಾಂತಿ ಎಂದರೆ ಪುಸ್ತಕ ಪ್ರೀತಿ, ಜ್ಞಾನಾರ್ಜನೆ, ಅವರ ಹತ್ತಿರ ದೊಡ್ಡ ಪುಸ್ತಕ ಭಂಡಾರವೇ ಇದೆ. ಸಮಯ ಸಿಕ್ಕಾಗಲೆಲ್ಲ ಓದುತ್ತಾರೆ. ತಮ್ಮ ದಿನಚರಿಯ ಪ್ರಸ್ತಕದಲ್ಲಿ ವಿಶಿಷ್ಟ ಜ್ಞಾನದ ಸಾಲುಗಳನ್ನು ದಾಖಲಿಸುತ್ತಾರೆ, ಪ್ರತಿ ದಿನದ ಕಾರ್ಯಕ್ರಮ ಪಟ್ಟಿ, ಕೆಲಸಗಳ ವಿವರಗಳನ್ನು ಈಗಲೂ ದಿನಚರಿಯಲ್ಲಿ ಬರೆದಿಡುತ್ತಾರೆ. ಯಾರಾದರೂ ತಜ್ಞರು ಮಾತನಾಡುವಾಗ ಈಗಲೂ ವೇದಿಕೆಯಲ್ಲೇ ಕುಳಿತು Learning Points ನ್ನು Note ಮಾಡಿಕೊಳ್ಳುತ್ತಾರೆ. ಅವರ ಅಕ್ಷರವೇ ಚೆಂದ, ಪ್ರಯಾಣದಲ್ಲಿ ಬರೆದರೂ ಮುದ್ದಾಗಿ ಬರೆಯುತ್ತಾರೆ… ಅದೇ ನೀತಿಪಾಠ ನನಗೂ ಸಹಾಯಕವಾಗಿದೆ.

ಸೋಲು ಗೆಲುವು, ನೋವು – ನಲಿವು, ಸಂಕಟ ಸಂಭ್ರಮ, ನಗೆ – ಹಗೆ ಎಲ್ಲವನ್ನೂ ಸಮಾನವಾಗಿ ಅನುಭವಿಸಿದವರು ನನ್ನ ತಂದೆ. ಪುರಸಭೆ ಅಧ್ಯಕ್ಷತನದಿಂದ ರಾಜ್ಯದ ಮುಖ್ಯಮಂತ್ರಿಯಾಗುವ ತನಕ ಹಲವು ಏರು – ಪೇರುಗಳನ್ನು ಕಂಡ ಹಿರಿಜೀವ ಅವರದ್ದು. ಅವರ ಪಯಣ, ಅಭಿವೃದ್ಧಿಗೆ ಅವರು ನೀಡಿದ ಕೊಡುಗೆ ಕಂಡಾಗ ನಮಗನಿಸುವುದೇನೆಂದರೆ ನಿಶ್ಚಿತ ಗುರಿ, ನಿರಂತರ ಪರಿಶ್ರಮ, ಪ್ರಾಮಾಣಿಕ ಶ್ರದ್ಧಾವಂತ ನಿರ್ಧಾರಗಳೊಂದಿಗೆ ಉದಾತ್ತ ಧೈರ್ಯವನ್ನು ಎದುರಿಗಿಟ್ಟುಕೊಂಡು ಮುನ್ನಡೆದಾಗ ಯಾವುದೇ ಅಡ್ಡಿ – ಆತಂಕಗಳನ್ನೂ ಜಯಿಸಬಹುದೆಂಬುದು. ಅಂತಹ ಮಾದರಿಯ ಬದುಕೇ ನನಗೆ ದೊರೆತ ದೊಡ್ಡ ಜೀವನ ಪಾಠ, ಅವರು ಕಲಿಸಿದ ಪಾಠಗಳನ್ನು ಸ್ಮರಿಸಿಕೊಳ್ಳುತ್ತೇನೆ. ಅವರ ಆದರ್ಶಗಳನ್ನು ಪಾಲಿಸುತ್ತೇನೆ, ಅವರ ನೀತಿ, ಜೀವನ ಪ್ರೀತಿಗಳನ್ನು ಮೈಗೂಡಿಸಿಕೊಂಡಿದ್ದೇನೆ. ಅವರ ದೃಢ ಹೆಜ್ಜೆ, ಗಂಭೀರ ನಡೆ, ಸಾಹಸ ಗಾಥೆಗಳನ್ನು ಧೈಯವಾಗಿಸಿಕೊಂಡು ಮುಂದೆ ಸಾಗುತ್ತಿದ್ದೇನೆ. ನನ್ನ ದೃಷ್ಟಿಯಲ್ಲಿ ನನ್ನ ತಂದೆಯವರು ಸಾಧನೆಯ ಶಿಖರ, ಅವರು ಸವೆದ ಹಾದಿಯಲ್ಲೇ ನನ್ನ ಹೆಜ್ಜೆಗಳು. ಅವರ ಜೀವನ ನಿದರ್ಶನಗಳೇ ನನ್ನ ಬದುಕಿನ ಆದರ್ಶ ಎಂದು ಮನದುಂಬಿ ಸ್ಮರಿಸುತ್ತೇನೆ.

ಬಿ.ವೈ. ವಿಜಯೇಂದ್ರ, ಕಿರಿಯ ಪುತ್ರ
ಸ್ವಂತ ಬದುಕಿನ ಸಿಹಿಯನ್ನು ತ್ಯಾಗ ಮಾಡಿ ಜನಸಾಮಾನ್ಯರ ಬದುಕಿನ ಕಹಿಯನ್ನು ರುಚಿಸಿ ಅವರ ಮುಖದಲ್ಲಿ ಮಂದಹಾಸ ಮೂಡಿಸಲು ಸಮಾಜಕ್ಕೆ ತಮ್ಮನ್ನು ಸಮರ್ಪಿಸಿಕೊಂಡಿರುವ ನನ್ನ ತಂದೆ ನನಗೆ ಮಾದರಿ. ಅವರು ನನ್ನ ಹೀರೋ, ನಾನು ಎದೆಯುಬ್ಬಿಸಿ ಹೇಳಬಲ್ಲ ನಿಜವಾದ ಜನನಾಯಕ – ಬಾಲ್ಯದಿಂದ ತಂದೆಯ ಪ್ರೀತಿ ವಾತ್ಸಲ್ಯದ ಬಂಧನದಲ್ಲಿ ಬೆಳೆದ ನನಗೆ ನನ್ನ ತಂದೆಯಲ್ಲಿ ಕಂಡ ಗುಣ ವಿಶೇಷವಿದೆ.

ಸ್ವಚ್ಛತೆ, ಶಿಸ್ತು, ಡ್ರೆಸ್ ಸೆನ್ಸ್ ಹಾಗೂ ಸಮಯ ಪಾಲನೆಯಲ್ಲಿ ನನಗವರೇ ರೋಲ್ ಮಾಡೆಲ್. ಪ್ರತಿದಿನ ಸ್ನಾರದ ನಂತರ ಅವರು ತಲ್ಲೀನರಾಗಿ ಮಾಡುತ್ತಿದ್ದ ದೇವರ ಪೂಜೆ, ಸದಾ ಧರಿಸುತ್ತಿದ್ದ ಇಸ್ತ್ರಿ ಮಾಡಿದ ಡ್ರೆಸ್, ಎಣ್ಣೆ ಹಾಕಿ ಬಾಚಿದ ತಲೆಗೂದಲು ಮತ್ತು ಹಣೆಗಿಡುವ ತಿಲಕ ನನಗರಿವಿಲ್ಲದಂತೆಯೂ ನನ್ನ ಮೇಲೆ ಪ್ರಭಾವ ಬೀರುತ್ತಿದ್ದವು. ಮುಂಚಿತವಾಗಿಯೂ ತಾವು ಡೈರಿಯಲ್ಲಿ ಬರೆದಿಟ್ಟುಕೊಂಡ ಕಾರ್ಯಕ್ರಮಗಳ ಪಟ್ಟಿ ಹಾಗೂ ಅವುಗಳಲ್ಲಿ ವ್ಯತ್ಯಾಸವಾಗದಂತೆ ಪಾಲ್ಗೊಳ್ಳುತ್ತಿದ್ದ ಅವರ ಸಮಯ ಪಾಲನೆ ನನ್ನ ತಂದೆಯವರಲ್ಲಿ ನಾನು ತುಂಬಾ ಇಷ್ಟಪಟ್ಟಿರುವ ಒಳ್ಳೆ ಅಭ್ಯಾಸಗಳು.

ನಾನು ಹುಟ್ಟಿದ್ದು 1975ರಲ್ಲಿ, ನನ್ನ ಹಂದೆಯವರೇ ಹೇಳಿದಂತೆ ಆಗ ದೇಶದಲ್ಲಿ ತುರ್ತು ಪರಿಸ್ಥಿತಿ ಜಾರಿಯಲ್ಲಿತ್ತು. ನಾನು ತಾಯಿಗರ್ಭದಲ್ಲಿದ್ದ ಸಮಯದಲ್ಲಿ, ಕರಾಳ ದಿನಗಳನ್ನು ವಿರೋಧಿಸಿದ ನನ್ನ ತಂದೆ ಜೈಲಿನಲ್ಲಿದ್ದರು. ತುಂಬು ಗರ್ಭಿಣಿಯವರು ತಂದೆಯವರನ್ನು ನೋಡಲು ಜೈಲಿಗೆ ಹೋಗಿದ್ದರಂತೆ. ಗುರುರಾಘವೇಂದ ಮೇಲೆ ನಮ್ಮ ತಂದೆಗೆ ಅಪಾರ ಭಕ್ತಿ. ಹಾಗೆಯೇ ಮಂತ್ರಾಲಯಕ್ಕೆ ಹೋಗಿ ಅವರ ದರ್ಶನ ಮಾಡಿಕೊಂಡು ಬಂದ ನಂತರ ಜನಿಸಿದ ನನ್ನ ಅಣ್ಣನಿಗೆ ರಾಘವೇಂದ್ರ ಎಂದೇ ಹೆಸರಿಡಲಾಯಿತು. ಶ್ರೀ ರಾಘವೇಂದ್ರ ಸ್ವಾಮಿಗಳ ಗುರುಗಳಾದ ಶ್ರೀ ವಿಜಯೇಂದ್ರ ಸರಸ್ವತಿಗಳ ಆಶೀರ್ವಾದಗಳಿಂದ ನನ್ನ ಹೆಸರನ್ನು ವಿಜಯೇಂದ್ರ ಎಂದು ಕರೆಯಲಾಯಿತಂತೆ. ಅನ್ನದ ಬಗ್ಗೆ ಅಪ್ಪನಿಗೆ ತುಂಬಾ ಗೌರವ. ಊಟ ಮಾಡುವಾಗ ಒಂದು ಅನ್ನದ ಅಗುಳು ಚೆಲ್ಲಿದರೆ ಅನ್ನದ ಬೆಲೆ, ಅದನ್ನು ಬೆಳೆಯುವ ರೈತನ ಬೆಲೆ ನಿಮಗೆ ಗೊತ್ತಾ ಎಂದು ಕೋಪಿಸಿಕೊಳ್ಳುತ್ತಿದ್ದರು.

(ಮೂಲ: ʼದಣಿವರಿಯದ ಧೀಮಂತʼ ಕೃತಿಯಿಂದ ಆಯ್ದ ಭಾಗಗಳು)

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

MS Dhoni : ವಿರಾಟ್ ಕೊಹ್ಲಿ ಜತೆಗಿನದ ಸಂಬಂಧವನ್ನು ವಿವರಿಸಿದ ಕೂಲ್ ಕ್ಯಾಪ್ಟನ್​ ಮಹೇಂದ್ರ ಸಿಂಗ್ ಧೋನಿ

MS Dhoni :ನಾವು ಬಹಳ ಸಮಯದಿಂದ ಭಾರತಕ್ಕಾಗಿ ಆಡಿದ ಸಹೋದ್ಯೋಗಿಗಳು. ವಿಶ್ವ ಕ್ರಿಕೆಟ್​ಗೆ ಬಂದಾಗ ಅವರು (ಕೊಹ್ಲಿ) ಅತ್ಯುತ್ತಮರಲ್ಲಿ ಒಬ್ಬರು. ನಾವು ಆಗಾಗ್ಗೆ ಭೇಟಿಯಾಗುವುದಿಲ್ಲ, ಆದರೆ ನಮಗೆ ಅವಕಾಶ ಸಿಕ್ಕಾಗಲೆಲ್ಲಾ, ಸ್ವಲ್ಪ ಸಮಯದವರೆಗೆ ಮಾತುಕತೆ ನಡೆಸುತ್ತೇವೆ ಎಂದು ಧೋನಿ ಹೇಳಿದ್ದಾರೆ. ಮುಂದೆ ಏನಾಗುತ್ತಿದೆ ಎಂಬುದರ ಬಗ್ಗೆ ನಾವು ಮಾತನಾಡುತ್ತೇವೆ. ಆದ್ದರಿಂದ ಅದು ನಮ್ಮ ಸಂಬಂಧ ಉತ್ತಮವಾಗಿತ್ತು, ಎಂದು ಧೋನಿ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ.

VISTARANEWS.COM


on

MS Dhoni
Koo

ಬೆಂಗಳೂರು: ಟೀಮ್ ಇಂಡಿಯಾದ ಮಾಜಿ ವಿಕೆಟ್​ ಕೀಪರ್ ಬ್ಯಾಟರ್​ ಹಾಗೂ ಕೂಲ್ ಕ್ಯಾಪ್ಟನ್​ ಎಂ.ಎಸ್.ಧೋನಿ (MS Dhoni) ಇತ್ತೀಚೆಗೆ ಬ್ಯಾಟಿಂಗ್ ಸೂಪರ್​ಸ್ಟಾರ್​​ ವಿರಾಟ್ ಕೊಹ್ಲಿ ಅವರೊಂದಿಗಿನ ಸಂಬಂಧದ ಬಗ್ಗೆ ಒಳನೋಟಗಳನ್ನು ಹಂಚಿಕೊಂಡಿದ್ದಾರೆ. ಭಾರತವನ್ನು ಎರಡು ವಿಶ್ವಕಪ್ ವಿಜಯಗಳಿಗೆ ಮುನ್ನಡೆಸಿದ ಲೆಜೆಂಡರಿ ವಿಕೆಟ್ ಕೀಪರ್-ಬ್ಯಾಟರ್​​ ಯಾವಾಗಲೂ ತಮ್ಮ ಶಾಂತ ನಡವಳಿಕೆ ಮತ್ತು ಕಾರ್ಯತಂತ್ರದ ಪ್ರತಿಭೆಗೆ ಹೆಸರುವಾಸಿಯಾಗಿದ್ದಾರೆ. ಮತ್ತೊಂದೆಡೆ, ಕೊಹ್ಲಿ ಧೋನಿ ನಾಯಕತ್ವದಲ್ಲಿ ಸಾರ್ವಕಾಲಿಕ ಶ್ರೇಷ್ಠ ಬ್ಯಾಟರ್​ಗಳಲ್ಲಿ ಒಬ್ಬರಾಗಿ ಹೊರಹೊಮ್ಮಿದರು. ಅವರಿಬ್ಬರೂ ಏಕಕಾಲಕ್ಕೆ ಯಶಸ್ವಿನ ಉತ್ತುಂಗಕ್ಕೆ ಏರಿದ್ದರು. ಹೀಗಾಗಿ ಅವರ ನಡುವಿನ ಬಾಂಧವ್ಯ ಚರ್ಚೆಯ ವಿಷಯವೇ ಆಗಿದೆ.

ಅವರ ಒಟ್ಟಿಗೆ ಪ್ರಯಾಣವು ಒಂದು ದಶಕಕ್ಕೂ ಹೆಚ್ಚು ಕಾಲದ್ದು. ಅದರಲ್ಲೂ ಸ್ಮರಣೀಯ ಬ್ಯಾಟಿಂಗ್​ ಜತೆಯಾಟವನ್ನು ನೀಡಿದ್ದರು. ಅವರಿಬ್ಬರೂ ಗೆಲುವುಗಳಿಗಾಗಿ ಸಾಕಷ್ಟು ಹೋರಾಡಿದ್ದಾರೆ. ಇದೀಗ ಧೋನಿ. ಸಹ ಆಟಗಾರ ಕೊಹ್ಲಿಯ ಬಗ್ಗೆ ಹೊಂದಿರುವ ಗೌರವ ಮತ್ತು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

ನಾವು ಬಹಳ ಸಮಯದಿಂದ ಭಾರತಕ್ಕಾಗಿ ಆಡಿದ ಸಹೋದ್ಯೋಗಿಗಳು. ವಿಶ್ವ ಕ್ರಿಕೆಟ್​ಗೆ ಬಂದಾಗ ಅವರು (ಕೊಹ್ಲಿ) ಅತ್ಯುತ್ತಮರಲ್ಲಿ ಒಬ್ಬರು. ನಾವು ಆಗಾಗ್ಗೆ ಭೇಟಿಯಾಗುವುದಿಲ್ಲ, ಆದರೆ ನಮಗೆ ಅವಕಾಶ ಸಿಕ್ಕಾಗಲೆಲ್ಲಾ, ಸ್ವಲ್ಪ ಸಮಯದವರೆಗೆ ಮಾತುಕತೆ ನಡೆಸುತ್ತೇವೆ ಎಂದು ಧೋನಿ ಹೇಳಿದ್ದಾರೆ. ಮುಂದೆ ಏನಾಗುತ್ತಿದೆ ಎಂಬುದರ ಬಗ್ಗೆ ನಾವು ಮಾತನಾಡುತ್ತೇವೆ. ಆದ್ದರಿಂದ ಅದು ನಮ್ಮ ಸಂಬಂಧ ಉತ್ತಮವಾಗಿತ್ತು, ಎಂದು ಧೋನಿ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ.

ವಿರಾಟ್ ಜೊತೆ ಬ್ಯಾಟಿಂಗ್ ಮಾಡುವುದು ಖುಷಿ :ಎಂಎಸ್ ಧೋನಿ

ವಿರಾಟ್​ ಕೊಹ್ಲಿ ಆನ್-ಫೀಲ್ಡ್ ಚಟುವಟಿಕೆಯನ್ನು ನೆನಪಿಸಿಕೊಂಡ ಧೋನಿ, ಅವರೊಂದಿಗಿನ ಮಧ್ಯಮ ಕ್ರಮಾಂಕದ ಬ್ಯಾಟಿಂಗ್​ ಪಾಲುದಾರಿಕೆಯನ್ನು ಸ್ಮರಿಸಿಕೊಂಡಿದ್ದಾರೆ. ಧೋನಿ ಅವರು ಕೊಹ್ಲಿಯೊಂದಿಗೆ ಬ್ಯಾಟಿಂಗ್ ಮಾಡುವುದನ್ನು ಆನಂದಿಸಿದ್ದಾರೆ. ಏಕೆಂದರೆ ಅವರು ಆಟದಲ್ಲಿ ಸಾಕಷ್ಟು ಬಾರಿ ಎರಡು ಮತ್ತು ಮೂರು ರನ್​ಗಳಿಗಾಗಿ ಓಡಿದ್ದರು.

ಮಧ್ಯಮ ಓವರ್​ನಲ್ಲಿ ನಾನು ಅವರೊಂದಿಗೆ ಸಾಕಷ್ಟು ಬ್ಯಾಟಿಂಗ್ ಮಾಡಬಲ್ಲೆ ಎಂಬ ಅಂಶವು ತುಂಬಾ ಮೋಜಿನ ಸಂಗತಿಯಾಗಿದೆ ಏಕೆಂದರೆ ನಾವು ಆಟದಲ್ಲಿ ಸಾಕಷ್ಟು ಎರಡು ಮತ್ತು ಮೂರು ರನ್​​ಗಳನ್ನು ತೆಗೆದುಕೊಳ್ಳುತ್ತಿದ್ದೆವು, ಆದ್ದರಿಂದ ಇದು ಯಾವಾಗಲೂ ಮೋಜಿನ ಸಂಗತಿಯಾಗಿತ್ತು ಎಂದು ಧೋನಿ ಹೇಳಿದ್ದಾರೆ.

ಇದನ್ನೂ ಓದಿ: Paris Olympics 2024 : ಪುರುಷ ಸ್ಪರ್ಧಿಯಿಂದ ಏಟು ತಿಂದ ಇಟಲಿಯ ಮಹಿಳಾ ಬಾಕ್ಸರ್​ಗೆ 41 ಲಕ್ಷ ಬಹುಮಾನ ಘೋ

ದಕ್ಷಿಣ ಆಫ್ರಿಕಾ ವಿರುದ್ಧದ ಫೈನಲ್​​ನಲ್ಲಿ 76 ರನ್ ಗಳಿಸುವ ಮೂಲಕ ಕೊಹ್ಲಿ 2024 ರ ಟಿ 20 ವಿಶ್ವಕಪ್ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು. ಈ ಗೆಲುವು ಕೊಹ್ಲಿ ಅವರ ​​ಕಿರೀಟಕ್ಕೆ ಮತ್ತೊಂದು ಗರಿ ಸೇರಿಸಿದೆ. ಧೋನಿ ನಂತರ ಎಲ್ಲಾ ಮೂರು ಐಸಿಸಿ ವೈಟ್-ಬಾಲ್ ಟ್ರೋಫಿಗಳನ್ನು ಗೆದ್ದ ಎರಡನೇ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಯಶಸ್ವಿ ಮೊಣಕಾಲು ಶಸ್ತ್ರಚಿಕಿತ್ಸೆಯ ನಂತರ ಧೋನಿ ಕೊನೆಯ ಬಾರಿಗೆ ಐಪಿಎಲ್ 2024 ಋತುವಿನಲ್ಲಿ ಕಾಣಿಸಿಕೊಂಡಿದ್ದರು. ಅವರು 11 ಇನ್ನಿಂಗ್ಸ್ಗಳಲ್ಲಿ 53.66 ಸರಾಸರಿ ಮತ್ತು 220.54 ಸ್ಟ್ರೈಕ್ ರೇಟ್ನಲ್ಲಿ 161 ರನ್ ಗಳಿಸಿದ್ದಾರೆ, 37* ಅತ್ಯುತ್ತಮ ಸ್ಕೋರ್ ಮತ್ತು ಈ ಋತುವಿನಲ್ಲಿ ಒಟ್ಟು 14 ಬೌಂಡರಿಗಳು ಮತ್ತು 13 ಸಿಕ್ಸರ್​ಗಳನ್ನು ಗಳಿಸಿದ್ದಾರೆ.

Continue Reading

ಕರ್ನಾಟಕ

Shiradi ghat landslide: ಶಿರಾಡಿ ಘಾಟ್ ಗುಡ್ಡ ಕುಸಿತದ ಭೀಕರತೆಗೆ ಸಿಎಂ‌ ಶಾಕ್; 90 ಡಿಗ್ರಿ ನೇರವಾಗಿ ಗುಡ್ಡ ಸೀಳಿದ್ದಕ್ಕೆ ಅಧಿಕಾರಿಗೆ ತರಾಟೆ

Shiradi ghat landslide: ರಸ್ತೆ ನಿರ್ಮಾಣಕ್ಕಾಗಿ ಗುಡ್ಡಗಳನ್ನು 90 ಡಿಗ್ರಿಯಲ್ಲಿ ನೇರವಾಗಿ ಸೀಳಿರುವುದಕ್ಕೆ ಅಸಮಾಧಾನಗೊಂಡು, ಗುಡ್ಡ ಕುಸಿತಕ್ಕೆ ಇದೂ ಕೂಡ ಪ್ರಮುಖ ಕಾರಣ ಎಂದು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಯನ್ನು ಸಿಎಂ ಸಿದ್ದರಾಮಯ್ಯ ತರಾಟೆಗೆ ತೆಗೆದುಕೊಂಡಿದ್ದಾರೆ.

VISTARANEWS.COM


on

Shiradi ghat landslide
Koo

ಹಾಸನ: ಶಿರಾಡಿ ಘಾಟ್ ಗುಡ್ಡ ಕುಸಿತದ (Shiradi ghat landslide) ಭೀಕರತೆಗೆ ಶಾಕ್ ಆದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (ಎನ್‌ಎಚ್‌ಎಐ) ಪ್ರಾದೇಶಿಕ ಅಧಿಕಾರಿ ವಿಲಾಸ್ ಅವರಿಗೆ ಸಾಲು ಸಾಲು ಪ್ರಶ್ನೆಗಳ ಸುರಿಮಳೆಗೈದರು. ಗುಡ್ಡ ಕುಸಿತದ ಸ್ಥಳ ಪರಿಶೀಲನೆಗೆ ಅಧಿಕಾರಿಗಳ ತಂಡದೊಂದಿಗೆ ರಸ್ತೆ ಮಾರ್ಗವಾಗಿ ಘಟನಾ ಸ್ಥಳಕ್ಕೆ ತೆರಳಿದ್ದ ಮುಖ್ಯಮಂತ್ರಿಗಳು, ರಸ್ತೆ ನಿರ್ಮಾಣಕ್ಕಾಗಿ ಗುಡ್ಡಗಳನ್ನು 90 ಡಿಗ್ರಿಯಲ್ಲಿ ನೇರವಾಗಿ ಸೀಳಿರುವುದಕ್ಕೆ ಅಸಮಾಧಾನಗೊಂಡು, ಗುಡ್ಡ ಕುಸಿತಕ್ಕೆ ಇದೂ ಕೂಡ ಪ್ರಮುಖ ಕಾರಣ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರಸ್ತೆ ಕಾಮಗಾರಿ ಕುರಿತಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಸಿಎಂಗೆ ವಿವರಿಸುತ್ತಾ, “ಒಟ್ಟು 45 ಕಿ.ಮೀನಲ್ಲಿ 35 ಕಿ.ಮೀ ಹೈವೇ ಕಾಮಗಾರಿ ಮುಗಿದಿದೆ. 10 ಕಿ.ಮೀ ಬಾಕಿ ಇದೆ. ಆದರೆ ಇಲ್ಲಿಯವರೆಗೂ ಎಲ್ಲೂ ತಡೆಗೋಡೆಗಳನ್ಜು ನಿರ್ಮಿಸಿಲ್ಲ, ಮಣ್ಣಿನ ಗುಣಮಟ್ಟ ಪರೀಕ್ಷೆ ನಡೆಸಿ ಅದರ ಆಧಾರದಲ್ಲಿ ಸುರಕ್ಷತಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಂತೆ ಇಲ್ಲ” ಎಂದು ವಿವರಿಸಿದರು.

ಮೊಣಕಾಲುದ್ದುದ ಕೆಸರಲ್ಲೇ ಗುಡ್ಡ ಕುಸಿತದ ಜಾಗದುದ್ದಕ್ಕೂ ನಡೆದು ಪರಿಶೀಲಿಸಿದ ಮುಖ್ಯಮಂತ್ರಿಗಳು, ಸ್ಥಳದಲ್ಲಿ ಮಣ್ಣು ತೆರವು ಕಾರ್ಯಾಚರಣೆಯಲ್ಲಿ ತೊಡಗಿದ್ದ ಎಸ್‌ಡಿಆರ್‌ಎಫ್‌ ತಂಡದೊಂದಿಗೆ ಕೆಲ ಹೊತ್ತು ಚರ್ಚಿಸಿದರು. ಬಳಿಕ ಹೆದ್ದಾರಿ ಪ್ರಾಧಿಕಾರದ ಪ್ರಾದೇಶಿಕ‌ ಅಧಿಕಾರಿ ವಿಲಾಸ್ ಅವರ ಮುಂದೆ ಸಿಎಂ ಸಾಲು ಸಾಲು ಪ್ರಶ್ನೆಗಳನ್ನು ಇಟ್ಟರು.

ಇದನ್ನೂ ಓದಿ | Wayanad Landslide: ವಯನಾಡು ಭೂಕುಸಿತಕ್ಕೆ ಗೋಹತ್ಯೆಯೇ ಕಾರಣ ಎಂದ ಬಿಜೆಪಿ ನಾಯಕ; ಅವರ ವಿವರಣೆ ಹೀಗಿದೆ!

*ಹಣ ಉಳಿಸುವ ಉದ್ದೇಶದಿಂದ ಕಡಿಮೆ ಭೂಮಿ ಸ್ವಾಧೀನಗೊಳಿಸಿಕೊಳ್ಳುವುದು, ಬಳಿಕ ಖರ್ಚು ಉಳಿಸಲು 90 ಡಿಗ್ರಿಯಲ್ಲಿ ಗುಡ್ಡಗಳನ್ನು ಕತ್ತರಿಸಿದ್ದೀರಿ. ಇದು ಅವೈಜ್ಞಾನಿಕ ಕಾಮಗಾರಿ ಅಲ್ಲವೇ?, *ಗುಡ್ಡಗಳನ್ನು 30 ರಿಂದ 45 ಡಿಗ್ರಿಯಲ್ಲಿ ಕತ್ತರಿಸಿ ತಡೆಗೋಡೆ ನಿರ್ಮಿಸಿದ್ದರೆ ಮಣ್ಣು ಕುಸಿತವನ್ನು ತಡೆಯಬಹುದಿತ್ತಲ್ಲವೇ? *ಕಾಮಗಾರಿ ಆರಂಭಿಸುವ ಮೊದಲು ಮಣ್ಣಿನ ಗುಣಮಟ್ಟ ಪರೀಕ್ಷೆ ನಡೆಸಿದ್ದೀರಾ? ಅದಕ್ಕೆ ತಕ್ಕಂತೆ ಮುಂಜಾಗ್ರತಾ ಕ್ರಮ ಏಕೆ ವಹಿಸಿಲ್ಲ ಎಂದು ಪ್ರಶ್ನಿಸಿದರು.

ವಿಲಾಸ್ ಅವರಿಂದ ಸೂಕ್ತ ಉತ್ತರ ಬರದಿದ್ದಾಗ ಒಟ್ಟಾರೆ ಸ್ಥಿತಿ ಗತಿ ಕುರಿತು ಕೇಂದ್ರ ಸಚಿವರಾದ ಗಡ್ಕರಿ ಅವರಿಗೆ ಪತ್ರ ಬರೆಯುವಂತೆ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಸೂಚಿಸಿದರು.

ಹಾಸನ ಜಿಲ್ಲಾ ಉಸ್ತುವಾರಿ ಸಚಿವ ರಾಜಣ್ಣ, ಶಾಸಕ ಶಿವಲಿಂಗೇಗೌಡರು, ಸಂಸದ ಶ್ರೇಯಸ್ ಪಟೇಲ್ , ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿ ಸತ್ಯನಾರಾಯಣ್ ಸೇರಿ ಹಿರಿಯ ಅಧಿಕಾರಿಗಳ ತಂಡವೇ ಸ್ಥಳದಲ್ಲಿತ್ತು.

ಮೈಸೂರಿನಿಂದ ಶಿರಾಡಿ ಘಾಟ್ ಗುಡ್ಡ ಕುಸಿತ ಸ್ಥಳಕ್ಕೆ ರಸ್ತೆ ಮಾರ್ಗವಾಗಿ ತೆರಳಿದ ಸಿಎಂ

ಮೈಸೂರು: ಮೈಸೂರಿನಿಂದ ಶಿರಾಡಿ ಘಾಟ್ ಗುಡ್ಡ ಕುಸಿತ ಸ್ಥಳಕ್ಕೆ ರಸ್ತೆ ಮಾರ್ಗವಾಗಿ ತೆರಳಿದ ಮುಖ್ಯಮಂತ್ರಿಗಳು ಮಾರ್ಗದುದ್ದಕ್ಕೂ ನಾನಾ ರಸ್ತೆ ಕಾಮಗಾರಿಗಳ ಬಗ್ಗೆ ಮಾಹಿತಿ ಪಡೆದರು.

ಮುಖ್ಯಮಂತ್ರಿಗಳ ಕಾರು ಬಿಳಿಕೆರೆ ಕ್ರಾಸ್ ಸಮೀಪಿಸುತ್ತಿದ್ದಂತೆ ಬಿಳಿಕೆರೆ ಕ್ರಾಸ್ ನಿಂದ ಯಡಗೊಂಡನಹಳ್ಳಿ ವರೆಗಿನ 41ಕಿಮೀ ಉದ್ದದ ನಾಲ್ಕು ಪಥ ರಾಷ್ಟ್ರೀಯ ಹೆದ್ದಾರಿ ಉದ್ದೇಶಿತ ಯೋಜನೆ ಬಗ್ಗೆ ಮಾಹಿತಿ ಪಡೆದರು. 600 ಕೋಟಿ ರೂಪಾಯಿ ವೆಚ್ಚದ ಈ ಯೋಜನೆ ಟೆಂಡರ್ ಕರೆಯಲಾಗಿದೆ ಎನ್ನುವ ಮಾಹಿತಿ ಅಧಿಕಾರಿಗಳಿಂದ ಬಂತು.

ಮಾರ್ಗದಲ್ಲಿ ಅಲ್ಲಲ್ಲಿ ಕಾಣಿಸಿದ ರಸ್ತೆ ಗುಂಡಿಗಳಿಗೆ ಗರಂ ಆದ ಮುಖ್ಯಮಂತ್ರಿಗಳು, ಇದರಿಂದ ಅಪಘಾತಗಳ ಸಾಧ್ಯತೆಗಳು ಹೆಚ್ಚಾಗಿರುವುದರಿಂದ ಮಳೆ ಇಲ್ಲದ ಸಮಯ ನೋಡಿಕೊಂಡು ಗುಂಡಿಗಳನ್ನು ಮುಚ್ಚಿಸುವಂತೆ ಸೂಚನೆ ನೀಡಿದರು.

ಅಪಾಯದ ಅಂಚಿನಲ್ಲಿರುವ ವಿದ್ಯುತ್ ಕಂಬಗಳನ್ನು ಬದಲಾಯಿಸಲು ಸೂಚನೆ

ಹೊಳೆ ನರಸೀಪುರ ತಾಲೂಕಿನ ದೊಡ್ಡಕಾಡನೂರು ಮಾರ್ಗವಾಗಿ ಸಾಗುತ್ತಿದ್ದಂತೆ ಅಪಾಯದ ಸೂಚನೆ ನೀಡುತ್ತಿದ್ದ ವಿದ್ಯುತ್ ಕಂಬಗಳನ್ನು ಬದಲಾಯಿಸಿ, ವೈರ್‌ಗಳನ್ನು ದುರಸ್ತಿಗೊಳಿಸುವಂತೆ ಅಧಿಕಾರಿಗಳಿಗೆ ದೂರವಾಣಿ ಮೂಲಕವೇ ಸೂಚಿಸಿದರು. ಹಳ್ಳಿ ಮೈಸೂರು ಹಾದು ಹೋಗುವಾಗ ಹಾಳಾಗಿದ್ದ ರಸ್ತೆ ವಿಭಜಕಗಳನ್ನು ಗುರುತಿಸಿ ಸರಿ ಪಡಿಸಲು ಸೂಚನೆ ನೀಡಿದರು.

Cloudburst: ಮೇಘಸ್ಫೋಟದಿಂದ ಉತ್ತರ ಭಾರತದಲ್ಲಿ ಅಲ್ಲೋಲ ಕಲ್ಲೋಲ; ಏನಿದು ವಿದ್ಯಮಾನ? ಹೇಗೆ ಸಂಭವಿಸುತ್ತದೆ? ಇಲ್ಲಿದೆ ವಿವರ

ನಾನು ಹುಟ್ಟು ಹಬ್ಬ ಮಾಡಲ್ಲ: ಇವೆಲ್ಲಾ ಯಾಕೆ ತಂದ್ರಿ?

ಮಾರ್ಗದುದ್ದಕ್ಕೂ ಅಭಿಮಾನಿಗಳು ಹುಟ್ಟುಹಬ್ಬದ ಶುಭ ಕೋರಲು ಹಾರ ತುರಾಯಿ, ಶಾಲುಗಳ ಸಮೇತ ಅಲ್ಲಲ್ಲಿ ಕಾದಿದ್ದರು. ಯಾವುದನ್ನೂ ಸ್ವೀಕರಿಸದ ಸಿಎಂ, ನಾನು ಹುಟ್ಟು ಹಬ್ಬ ಆಚರಿಸಲ್ಲ ಎಂದು ಕೈ ಬೀಸಿ, ಕೈ ಮುಗಿದು ಮುಂದೆ ಸಾಗಿದರು.

Continue Reading

ಪ್ರಮುಖ ಸುದ್ದಿ

Paris Olympics 2024 : ಪುರುಷ ಸ್ಪರ್ಧಿಯಿಂದ ಏಟು ತಿಂದ ಇಟಲಿಯ ಮಹಿಳಾ ಬಾಕ್ಸರ್​ಗೆ 41 ಲಕ್ಷ ಬಹುಮಾನ ಘೋಷಿಸಿದ ಬಾಕ್ಸಿಂಗ್​ ಸಂಸ್ಥೆ

Paris Olympics 2024 : ಕಾರಿನಿ ಅವರಿಗೆ 50,000 ಡಾಲರ್ ಬಹುಮಾನ ನೀಡಲಾಗುವುದು ಎಂದು ಅಸೋಸಿಯೇಷನ್ ಶುಕ್ರವಾರ ಪ್ರಕಟಿಸಿದೆ. ಕಳೆದ ವರ್ಷ ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯ ನಂತರ ಬಾಕ್ಸಿಂಗ್ ಸಂಸ್ಥೆಯ ಅಂತರರಾಷ್ಟ್ರೀಯ ಮಾನ್ಯತೆಯನ್ನು ಹಿಂತೆಗೆದುಕೊಂಡಿತು. ಹೀಗಾಗಿ ಐಬಿಎ ಬ್ಯಾನ್ ಮಾಡಿದ ಖೇಲಿಫಾಗೆ ಒಲಿಂಪಿಕ್ಸ್​​ನಲ್ಲಿ ಅವಕಾಶ ಸಿಕ್ಕಿತು. ಇದೀಗ ಒಲಿಂಪಿಕ್ಸ್ ಸಂಸ್ಥೆ ಜತೆ ಜಿದ್ದಿಗೆ ಬಿದ್ದಿರುವ ಬಾಕ್ಸಿಂಗ್​ ಸಂಸ್ಥೆ ಕಾರಿನಿಗೆ 50,000 ಡಾಲರ್, ಇಟಲಿ ಫೆಡರೇಶನ್​​ಗೆ 25,000 ಡಾಲರ್ ಮತ್ತು ಕೋಚ್​ಗೆ ಹೆಚ್ಚುವರಿಯಾಗಿ 25,000 ಡಾಲರ್ ಕೊಡುವುವದಾಗಿ ಹೇಳಿದೆ.

VISTARANEWS.COM


on

Paris Olympics 2024
Koo

ಬೆಂಗಳೂರು : ಪ್ಯಾರಿಸ್​ನಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್ 2024ರಲ್ಲಿ (Paris Olympics 2024 ) ಪುರುಷ ಸ್ಪರ್ಧಿಯಿಂದ ಮೂಗಿಗೆ ಪಂಚ್​ ತಿಂದು ವಿವಾದಾತ್ಮಕ ಸೋಲಿಗೆ ಒಳಗಾದ ಇಟಲಿಯ ಮಹಿಳಾ ಬಾಕ್ಸರ್​ಗೆ ಅಂತರರಾಷ್ಟ್ರೀಯ ಬಾಕ್ಸಿಂಗ್ ಅಸೋಸಿಯೇಷನ್ 41 ಲಕ್ಷ (50 ಸಾವಿರ ಡಾಲರ್​) ಬಹುಮಾನ ಘೋಷಿಸಿದೆ. ಗುರುವಾರ ನಡೆದ ವೆಲ್ಟರ್​ವೇಟ್​ ರೌಂಡ್ ಆಫ್ 16 ಪಂದ್ಯದಲ್ಲಿ ಅಲ್ಜೀರಿಯಾದ ಇಮಾನೆ ಖೇಲಿಫ್ ವಿರುದ್ಧ ಕಾರಿನಿ 46 ಸೆಕೆಂಡುಗಳಲ್ಲಿ ಸೋತಿದ್ದರು. ಖೇಲಿಫ್ ಅವರು ಪುರುಷರ ದೇಹದಲ್ಲಿರುವ ಟೆಸ್ಟೋಸ್ಟೆರಾನ್ ಪ್ರಮಾಣ ಹೆಚ್ಚಿದೆ. ಹೀಗಾಗಿ ಅವರಿಗೆ ಸಾಮರ್ಥ್ಯ ಹೆಚ್ಚಿದೆ ಎನ್ನಲಾಗಿದೆ. ಈ ವಿಷಯ ದೊಡ್ಡ ವಿವಾದವಾಗಿ ಮಾರ್ಪಟ್ಟಿತ್ತು.

ಕಾರಿನಿ ಅವರಿಗೆ 50,000 ಡಾಲರ್ ಬಹುಮಾನ ನೀಡಲಾಗುವುದು ಎಂದು ಅಸೋಸಿಯೇಷನ್ ಶುಕ್ರವಾರ ಪ್ರಕಟಿಸಿದೆ. ಕಳೆದ ವರ್ಷ ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯ ನಂತರ ಬಾಕ್ಸಿಂಗ್ ಸಂಸ್ಥೆಯ ಅಂತರರಾಷ್ಟ್ರೀಯ ಮಾನ್ಯತೆಯನ್ನು ಹಿಂತೆಗೆದುಕೊಂಡಿತು. ಹೀಗಾಗಿ ಐಬಿಎ ಬ್ಯಾನ್ ಮಾಡಿದ ಖೇಲಿಫಾಗೆ ಒಲಿಂಪಿಕ್ಸ್​​ನಲ್ಲಿ ಅವಕಾಶ ಸಿಕ್ಕಿತು. ಇದೀಗ ಒಲಿಂಪಿಕ್ಸ್ ಸಂಸ್ಥೆ ಜತೆ ಜಿದ್ದಿಗೆ ಬಿದ್ದಿರುವ ಬಾಕ್ಸಿಂಗ್​ ಸಂಸ್ಥೆ ಕಾರಿನಿಗೆ 50,000 ಡಾಲರ್, ಇಟಲಿ ಫೆಡರೇಶನ್​​ಗೆ 25,000 ಡಾಲರ್ ಮತ್ತು ಕೋಚ್​ಗೆ ಹೆಚ್ಚುವರಿಯಾಗಿ 25,000 ಡಾಲರ್ ಕೊಡುವುವದಾಗಿ ಹೇಳಿದೆ. “ಒಲಿಂಪಿಕ್ಸ್ ಸಂಸ್ಥೆ ಮಹಿಳಾ ಬಾಕ್ಸಿಂಗ್ ಅನ್ನು ನಾಶ ಮಾಡಲು ಮುಂದಾಗುತ್ತಿದ್ದಾರೆ ” ಎಂದು ಐಬಿಎ ಅಧ್ಯಕ್ಷ ಉಮರ್ ಕ್ರೆಮ್ಲೆವ್ ಹೇಳಿದ್ದಾರೆ. “ಸುರಕ್ಷತೆಯ ದೃಷ್ಟಿಯಿಂದ ಅರ್ಹ ಕ್ರೀಡಾಪಟುಗಳು ಮಾತ್ರ ರಿಂಗ್​​ನಲ್ಲಿ ಸ್ಪರ್ಧಿಸಬೇಕು. ಕಾರಿನಿಯ ಕಣ್ಣೀರನ್ನು ನೋಡಲಾಗಲಿಲ್ಲ, ಎಂದು ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ಐಬಿಎ ಅರ್ಹತಾ ಮಾನದಂಡಗಳಲ್ಲಿ ವಿಫಲವಾದ ಕಾರಣ 2023 ರ ವಿಶ್ವ ಚಾಂಪಿಯನ್​​ಷಿಪ್​ನಲ್ಲಿ ಅನರ್ಹಗೊಂಡಿದ್ದ ಅಲ್ಜೀರಿಯಾದ ಖೇಲಿಫ್ ಮತ್ತು ತೈವಾನ್ ಡಬಲ್ ವಿಶ್ವ ಚಾಂಪಿಯನ್ ಲಿನ್ ಯು-ಟಿಂಗ್ ಅವರಿಗೆ ಪ್ಯಾರಿಸ್​ನಲ್ಲಿ ಅನುಮತಿ ನೀಡಿರುವುದೇ ವಿವಾದಕ್ಕೆ ಕಾರಣವಾಗಿದೆ. ಅವರ ನಿಯಮಗಳ ಪ್ರಕಾರ, ಪುರುಷ ಎಕ್ಸ್​ವೈ ಕ್ರೋಮೋಸೋಮ್​ಗಳನ್ನು ಹೊಂದಿರುವ ಕ್ರೀಡಾಪಟುಗಳು ಮಹಿಳಾ ಸ್ಪರ್ಧೆಗಳಲ್ಲಿ ಸ್ಪರ್ಧಿಸುವುದನ್ನು ನಿಷೇಧಿಸಲಾಗಿದೆ.

ಐಒಸಿ ಐಬಿಎಯನ್ನು ಬಾಕ್ಸಿಂಗ್ ಆಡಳಿತ ಮಂಡಳಿಯ ಸ್ಥಾನದಿಂದ ತೆಗೆದುಹಾಕಿದೆ. ಪ್ಯಾರಿಸ್ ಒಲಿಂಪಿಕ್ಸ್ 2024 ಬಾಕ್ಸಿಂಗ್ ಸ್ಪರ್ಧೆಯ ಉಸ್ತುವಾರಿಯನ್ನು ವಹಿಸಿಕೊಂಡಿದೆ. ಹೀಗಾಗಿ ಖಲೀಫ್ ಮತ್ತು ಲಿನ್ ಯು-ಟಿಂಗ್ ಭಾಗವಹಿಸುವಿಕೆಯ ಬಗ್ಗೆ ವಿವಾದದ ಕೇಂದ್ರಬಿಂದುವಾಗಿದ್ದಾರೆ.

ಇದನ್ನೂ ಓದಿ: Paris Olympics 2024 : ಚಿನ್ನ ಪದಕ ಗೆದ್ದ ಖುಷಿಗೆ ಸಹ ಆಟಗಾರ್ತಿಗೆ ಮದುವೆ ಪ್ರಪೋಸ್ ಮಾಡಿದ ಚೀನಾದ ಷಟ್ಲರ್​!

ಖೇಲಿಫ್ ಪರ ಐಒಎ ಸಮರ್ಥನೆ

ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ಖೇಲಿಫ್ ಅವರ ಸ್ಪರ್ಧಿಸುವ ಹಕ್ಕಿನ ಪರವಾಗಿ ನಿಂತಿದೆ. ವಕ್ತಾರ ಮಾರ್ಕ್ ಆಡಮ್ಸ್ ಅವರ ಸ್ಥಾನಮಾನವನ್ನು ದೃಢಪಡಿಸಿದ್ದಾರೆ. “ಅಲ್ಜೀರಿಯಾದ ಬಾಕ್ಸರ್ ಹೆಣ್ಣಾಗಿ ಜನಿಸಿದ್ದಾಳೆ. ನೋಂದಾಯಿತ ಮಹಿಳೆಯಾಗಿದ್ದಾಳೆ. ಹೆಣ್ಣಾಗಿ ತನ್ನ ಜೀವನವನ್ನು ನಡೆಸಿದ್ದಾಕೆ, ಹೆಣ್ಣಾಗಿ ಬಾಕ್ಸಿಂಗ್ ರಿಂಗ್​ಗೆ ಇಳಿದಿದ್ದಾರೆ. ಮಹಿಳಾ ಪಾಸ್ಪೋರ್ಟ್ ಹೊಂದಿದ್ದಾಳೆ” ಎಂದು ಆಡಮ್ಸ್ ಶುಕ್ರವಾರ ಹೇಳಿದ್ದಾರೆ. ಖೇಲಿಫ್ ಅವರ ಭಾಗವಹಿಸುವಿಕೆಯು ಅವರ ಐಒಸಿಯ ಬದ್ಧತೆಗೆ ಸಾಕ್ಷಿ ಎಂದಿದ್ದಾರೆ.

Continue Reading

ದೇಶ

Wayanad Landslide: ವಯನಾಡು ಭೂಕುಸಿತ; ಎಲ್‌ಐಸಿ ಸೇರಿ ವಿಮಾ ಕಂಪನಿಗಳಿಗೆ ಕೇಂದ್ರ ಪ್ರಮುಖ ಸೂಚನೆ!

Wayanad Landslide: ವಯನಾಡು ಸೇರಿ ಹಲವು ಜಿಲ್ಲೆಗಳ ವಿಮಾ ಪಾಲಿಸಿದಾರರನ್ನು ಗುರುತಿಸಿ, ಅವರಿಗೆ ಕ್ಲೇಮ್‌ಗಳ ಮೂಲಕ ನೆರವಾಗಿ ಎಂದು ಎಲ್‌ಐಸಿ ಸೇರಿ ಹಲವು ಸಾರ್ವಜನಿಕ ವಲಯದ ವಿಮಾ ಕಂಪನಿಗಳಿಗೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ.

VISTARANEWS.COM


on

Wayanad Landslide
Koo

ತಿರುವನಂತಪುರಂ: ದೇವರ ನಾಡು ಕೇರಳದ ವಯನಾಡಿನಲ್ಲಿ ಸಂಭವಿಸಿದ ಭೂಕುಸಿತವು 358 ಜನರನ್ನು ಬಲಿಪಡೆದಿದೆ. ಇನ್ನೂ 300 ಜನ ನಾಪತ್ತೆಯಾಗಿದ್ದು, ಸಾವಿನ ಸಂಖ್ಯೆ ದಿನೇದಿನೆ ಏರಿಕೆಯಾಗುತ್ತಿದೆ. ಇದರ ಬೆನ್ನಲ್ಲೇ, ಕೇಂದ್ರ ಸರ್ಕಾರವು ಭಾರತೀಯ ಜೀವ ವಿಮಾ ನಿಗಮ (LIC) ಸೇರಿ ಹಲವು ಸಾರ್ವಜನಿಕ ವಲಯದ ವಿಮಾ ಕಂಪನಿಗಳಿಗೆ ಮಹತ್ವದ ಸೂಚನೆ ನೀಡಿದೆ. “ಮೃತರು ಹಾಗೂ ಗಾಯಾಳುಗಳು ವಿಮೆ ಮಾಡಿಸಿದ್ದರೆ, ಅವರ ಕ್ಲೇಮ್‌ಅನ್ನು ಶೀಘ್ರದಲ್ಲೇ ನೀಡುವ ಮೂಲಕ ನೆರವಾಗಿ” ಎಂದು ಸೂಚಿಸಿದೆ.

ದೇಶದ ಸಾರ್ವಜನಿಕ ವಲಯದ ವಿಮಾ ಸಂಸ್ಥೆಗಳಾದ ಎಲ್‌ಐಸಿ, ನ್ಯೂ ಇಂಡಿಯಾ ಇನ್ಶುರೆನ್ಸ್‌, ಓರಿಯಂಟಲ್‌ ಇನ್ಶುರೆನ್ಸ್‌ ಹಾಗೂ ಯುನೈಟೆಡ್‌ ಇಂಡಿಯಾ ಕಂಪನಿಗಳಿಗೆ ಕೇಂದ್ರ ಹಣಕಾಸು ಸಚಿವಾಲಯವು ಸೂಚನೆ ನೀಡಿದೆ. ಸಂತ್ರಸ್ತ ಕುಟುಂಬಗಳಿಗೆ ಎಷ್ಟು ಸಾಧ್ಯವೋ ಅಷ್ಟು ನೆರವಾಗಿ ಎಂದು ಸೂಚಿಸಿದೆ. ಈಗಾಗಲೇ ವಿಮಾ ಕಂಪನಿಗಳು ಸ್ಥಳೀಯ ಪತ್ರಿಕೆಗಳು, ಸಾಮಾಜಿಕ ಜಾಲತಾಣ, ಕಂಪನಿ ವೆಬ್‌ಸೈಟ್‌ ಹಾಗೂ ಎಸ್‌ಎಂಎಸ್‌ ಮೂಲಕ ಪಾಲಿಸಿ ಹೋಲ್ಡರ್‌ಗಳನ್ನು ಸಂಪರ್ಕಿಸಲು ಯತ್ನಿಸುತ್ತಿವೆ ಎಂದು ಕೂಡ ಕೇಂದ್ರ ಸರ್ಕಾರ ತಿಳಿಸಿದೆ.

ವಯನಾಡು, ಪಾಲಕ್ಕಾಡ್‌, ಕಲ್ಲಿಕೋಟೆ, ಮಲಪ್ಪುರಂ ಹಾಗೂ ತ್ರಶ್ಶೂರ್‌ನಲ್ಲಿರುವ ಪಾಲಿಸಿದಾರರನ್ನು ಸಂಪರ್ಕಿಸುವ, ಅವರ ಸಂಪರ್ಕ ಸಂಖ್ಯೆಯನ್ನು ಪತ್ತೆ ಹಚ್ಚುವ ಪ್ರಯತ್ನ ಮಾಡಲಾಗುತ್ತದೆ. ಆ ಮೂಲಕ ವಿಮಾ ಸೌಲಭ್ಯದ ಮೂಲಕವಾದರೂ ಸಂತ್ರಸ್ತರಿಗೆ ನೆರವಾಗಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ.

ಕರ್ನಾಟಕದಲ್ಲೂ ಕಟ್ಟೆಚ್ಚರ

ವಯನಾಡು ದುರಂತವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರವು ಕರ್ನಾಟಕದ ಯಾವುದೇ ಮೂಲೆಯಲ್ಲಿ ಪ್ರವಾಹ, ಭೂಕುಸಿತ ಅಥವಾ ಇತರೇ ಯಾವುದೇ ನೈಸರ್ಗಿಕ ವಿಕೋಪಗಳು ಸಂಭವಿಸಿದರೆ ಅದನ್ನು ಸಮರ್ಥವಾಗಿ ಎದುರಿಸಲು ಸನ್ನದ್ಧ ಸ್ಥಿತಿಯಲ್ಲಿರಲು ಜಿಲ್ಲಾಡಳಿತಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ನಿನ್ನೆ ಮುಖ್ಯಮಂತ್ರಿಗಳು ಕೊಡಗಿನಲ್ಲಿ ಭೂಕುಸಿತ ಸಂಭವಿಸಿದ ಜಾಗಕ್ಕೆ ಭೇಟಿ ನೀಡಿದ್ದರು.

“ಕಸ್ತೂರಿ ರಂಗನ್ ವರದಿಯನ್ನು ತಿರಸ್ಕರಿಸಬೇಕು ಎನ್ನುವುದು ನಮ್ಮ ನಿಲುವಾಗಿದೆ. ಈ ಬಗ್ಗೆ ಅರಣ್ಯ ಸಚಿವರ ಜೊತೆ ಮತ್ತೊಮ್ಮೆ ಚರ್ಚಿಸಿ ಅಂತಿಮ ತೀರ್ಮಾನ ಮಾಡಲಾಗುವುದು” ಎಂದು ಭೇಟಿಯ ಬಳಿಕ ಹೇಳಿದ್ದರು. “ಜಿಲ್ಲೆಯಲ್ಲಿ 20 ಕಡೆ ಭೂ ಕುಸಿತ ಆಗಿದೆ, ಬಹುತೇಕ ಕಡೆಗಳಲ್ಲಿ ಸಣ್ಣ ಪ್ರಮಾಣದಲ್ಲಿ ಭೂಮಿ ಜಾರಿದೆ. ಅದೃಷ್ಟವಶಾತ್ ಪ್ರಾಣ ಹಾನಿ ಆಗಿಲ್ಲ. ಹಲವರು ಗಾಯಗೊಂಡಿದ್ದಾರೆ.‌ 67 ಮನೆಗಳು ಪೂರ್ಣಹಾನಿ ಆಗಿವೆ. 176 ಮನೆಗಳು ಭಾಗಶಃ ಹಾನಿ ಆಗಿವೆ. 24 ಗಂಟೆಗಳ ಒಳಗೆ ಪೂರ್ಣ ಮತ್ತು ಭಾಗಶಃ ಹಾನಿ ಆಗಿರುವ ಘಟನೆಗಳೂ ನಡೆದಿವೆ. ಒಂದು ಲಕ್ಷದ 20 ಸಾವಿರ ರೂಪಾಯಿ ಜೊತೆಗೆ ಮನೆ ಕಟ್ಟಿ ಕೊಡಲಾಗುವುದು. ಭಾಗಶಃ ಹಾನಿ ಆಗಿರುವ ಮನೆಗಳಿಗೆ 50 ಸಾವಿರ ರೂಪಾಯಿ ಪರಿಹಾರ ನೀಡಲಾಗುವುದು.‌ ಇದರಲ್ಲಿ 43 ಸಾವಿರ ರಾಜ್ಯ ಸರ್ಕಾರದ ಹಣ. ಈಗಾಗಲೇ ಸಂತ್ರಸ್ಥರ ಖಾತೆಗೆ ಹಣ ವರ್ಗಾವಣೆ ಆಗಿದೆ. 16 ಜಾನುವಾರು ಸತ್ತಿವೆ. ತಲಾ 35 ಸಾವಿರ ಪರಿಹಾರ ನೀಡಿದ್ದೇನೆ. 14 ಪರಿಹಾರ ಕ್ಯಾಂಪ್ ಗಳನ್ನು ತೆರೆಯಲಾಗಿದೆ. 10 ಕ್ಯಾಂಪ್ ಗಳಲ್ಲಿ 186 ಮಂದಿ ಇದ್ದಾರೆ. ತೋರಾ ಕ್ಯಾಂಪ್ ನಲ್ಲಿ ಇರುವವರ ಜೊತೆ ನಾನೇ ನೇರವಾಗಿ ಮಾತನಾಡಿದ್ದೇನೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಇದನ್ನೂ ಓದಿ: Wayanad Landslide: ವಯನಾಡು ಭೂಕುಸಿತಕ್ಕೆ ಗೋಹತ್ಯೆಯೇ ಕಾರಣ ಎಂದ ಬಿಜೆಪಿ ನಾಯಕ; ಅವರ ವಿವರಣೆ ಹೀಗಿದೆ!

Continue Reading
Advertisement
MS Dhoni
ಪ್ರಮುಖ ಸುದ್ದಿ15 mins ago

MS Dhoni : ವಿರಾಟ್ ಕೊಹ್ಲಿ ಜತೆಗಿನದ ಸಂಬಂಧವನ್ನು ವಿವರಿಸಿದ ಕೂಲ್ ಕ್ಯಾಪ್ಟನ್​ ಮಹೇಂದ್ರ ಸಿಂಗ್ ಧೋನಿ

KCET 2024
ಬೆಂಗಳೂರು33 mins ago

KCET 2024 : ನೀಟ್‌ ಮೊದಲ ಸುತ್ತಿನ ಕೌನ್ಸೆಲಿಂಗ್ ನಂತರವೇ ಕೆಸಿಇಟಿ ಸೀಟು ಹಂಚಿಕೆ ಪ್ರಕ್ರಿಯೆ ಶುರು

Shiradi ghat landslide
ಕರ್ನಾಟಕ33 mins ago

Shiradi ghat landslide: ಶಿರಾಡಿ ಘಾಟ್ ಗುಡ್ಡ ಕುಸಿತದ ಭೀಕರತೆಗೆ ಸಿಎಂ‌ ಶಾಕ್; 90 ಡಿಗ್ರಿ ನೇರವಾಗಿ ಗುಡ್ಡ ಸೀಳಿದ್ದಕ್ಕೆ ಅಧಿಕಾರಿಗೆ ತರಾಟೆ

Paris Olympics 2024
ಪ್ರಮುಖ ಸುದ್ದಿ37 mins ago

Paris Olympics 2024 : ಪುರುಷ ಸ್ಪರ್ಧಿಯಿಂದ ಏಟು ತಿಂದ ಇಟಲಿಯ ಮಹಿಳಾ ಬಾಕ್ಸರ್​ಗೆ 41 ಲಕ್ಷ ಬಹುಮಾನ ಘೋಷಿಸಿದ ಬಾಕ್ಸಿಂಗ್​ ಸಂಸ್ಥೆ

ದೇಶ44 mins ago

Accident: ಬಾಲಕ ಚಲಾಯಿಸುತ್ತಿದ್ದ ಕಾರು ಸ್ಕೂಟರ್‌ಗೆ ಡಿಕ್ಕಿ; ಮಹಿಳೆ ಬಲಿ; ಭೀಕರ ದೃಶ್ಯ ವೈರಲ್‌

Wayanad Landslide
ದೇಶ47 mins ago

Wayanad Landslide: ವಯನಾಡು ಭೂಕುಸಿತ; ಎಲ್‌ಐಸಿ ಸೇರಿ ವಿಮಾ ಕಂಪನಿಗಳಿಗೆ ಕೇಂದ್ರ ಪ್ರಮುಖ ಸೂಚನೆ!

Manu Bhaker
ಕ್ರೀಡೆ48 mins ago

Manu Bhaker: 20 ಲಕ್ಷದಿಂದ 1.5 ಕೋಟಿಗೆ ಏರಿಕೆ ಕಂಡ ಮನು ಭಾಕರ್ ಜಾಹೀರಾತು ಮೌಲ್ಯ; 40ಕ್ಕೂ ಹೆಚ್ಚು ಕಂಪನಿಗಳಿಂದ ಆಫರ್​

Raayan Movie crosses Rs 100 crore
ಕಾಲಿವುಡ್50 mins ago

Raayan Movie: ಎಂಟೇ ದಿನಕ್ಕೆ ‘100 ಕೋಟಿ ಕ್ಲಬ್‌’ ಸೇರಿದ ಧನುಷ್ ನಟನೆಯ’ರಾಯನ್‌’ ಸಿನಿಮಾ!

Paris Olympics 2024
ಪ್ರಮುಖ ಸುದ್ದಿ1 hour ago

Paris Olympics 2024 : ಚಿನ್ನ ಪದಕ ಗೆದ್ದ ಖುಷಿಗೆ ಸಹ ಆಟಗಾರ್ತಿಗೆ ಮದುವೆ ಪ್ರಪೋಸ್ ಮಾಡಿದ ಚೀನಾದ ಷಟ್ಲರ್​!

Cloudburst
ದೇಶ1 hour ago

Cloudburst: ಮೇಘಸ್ಫೋಟದಿಂದ ಉತ್ತರ ಭಾರತದಲ್ಲಿ ಅಲ್ಲೋಲ ಕಲ್ಲೋಲ; ಏನಿದು ವಿದ್ಯಮಾನ? ಹೇಗೆ ಸಂಭವಿಸುತ್ತದೆ? ಇಲ್ಲಿದೆ ವಿವರ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka rain
ಮಳೆ5 hours ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ2 days ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ2 days ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ2 days ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

karnataka Rain
ಮಳೆ4 days ago

Karnataka rain : ಭದ್ರಾ ನದಿಯಲ್ಲಿ ಕೊಚ್ಚಿ ಹೋದ ಹಸು; ಬೈಂದೂರಿನಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ

Karnataka Rain
ಮಳೆ4 days ago

Karnataka Rain : ಭಾರಿ ಮಳೆಗೆ ಬಾಳೆಹೊನ್ನೂರು ಮುಳುಗಡೆ; ನೆರೆಗೆ ಬೋಟ್‌ ಮೊರೆ ಹೋದ ಜನರು

Bharachukki falls
ಚಾಮರಾಜನಗರ4 days ago

Bharachukki Falls : ಭರಚುಕ್ಕಿ ಜಲಪಾತಕ್ಕೆ ಕಳ್ಳ ಮಾರ್ಗದಿಂದ ಹೋದೋರಿಗೆ ಬಸ್ಕಿ ಹೊಡೆಸಿದ ಪೊಲೀಸರು!

karnataka Rain
ಮಳೆ5 days ago

Karnataka Rain: ಮತ್ತೆ ಶುರು ಮಳೆ ಅಬ್ಬರ; ಗಾಳಿಗೆ ಹಾರಿ ಹೋದ ಮನೆಗಳ ಚಾವಣಿ, ಶಿರಾಡಿಘಾಟ್‌ನಲ್ಲಿ ಮತ್ತೆ ಭೂ ಕುಸಿತ

Elephant combing Makna elephant captured near Bannerghatta
ಬೆಂಗಳೂರು ಗ್ರಾಮಾಂತರ5 days ago

Elephant combing: ಭೀಮ, ಮಹೇಂದ್ರರ ಮುಂದೆ ಮಂಡಿಯೂರಿದ ಮಕ್ನಾ ಆನೆ; ಹೇಗಿತ್ತು ಗೊತ್ತಾ ಕಾರ್ಯಾಚರಣೆ

karnataka rain
ಮಳೆ5 days ago

Karnataka rain: ಪ್ರವಾಹದ ಭೀಕರತೆ; ಹಳ್ಳದಲ್ಲಿ ತೇಲಿಬಂದ ಎಮ್ಮೆಗಳ ಕಳೇಬರ

ಟ್ರೆಂಡಿಂಗ್‌