H3N2 Influenza: ಕೋವಿಡ್‌ ಬಳಿಕ H3N2 ವೈರಸ್‌ ಭೀತಿ; ICMRನಿಂದ ಹೈ ಅಲರ್ಟ್‌ ಘೋಷಣೆ - Vistara News

ಆರೋಗ್ಯ

H3N2 Influenza: ಕೋವಿಡ್‌ ಬಳಿಕ H3N2 ವೈರಸ್‌ ಭೀತಿ; ICMRನಿಂದ ಹೈ ಅಲರ್ಟ್‌ ಘೋಷಣೆ

H3N2 Influenza: ರಾಜ್ಯದಲ್ಲಿ ಹೊಸ ವೈರಸ್ H3N2 ಆತಂಕ ಹೆಚ್ಚಾಗಿದ್ದು, ಈ ಕುರಿತು ಬೆಂಗಳೂರಿನಲ್ಲಿ ಸಚಿವ ಸುಧಾಕರ್ ಸೋಮವಾರ (ಮಾ.6) ಮಹತ್ವದ ಸಭೆ ನಡೆಸಲಿದ್ದಾರೆ. ರಾಜ್ಯದಲ್ಲಿ ಸೋಂಕು ತಡೆಯಲು ಯಾವ ರೀತಿ ಮುನ್ನೆಚ್ಚರಿಕೆ ವಹಿಸಬೇಕು ಎಂಬುದರ ಕುರಿತು ಚರ್ಚೆ ನಡೆಸಲಿದ್ದಾರೆ.

VISTARANEWS.COM


on

324 New Covid Cases In India, Active Cases Rise To 2,791
ಸಾಂದರ್ಭಿಕ ಚಿತ್ರ
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ನೋವೆಲ್‌ ಕೊರೊನಾ ವೈರಸ್‌ ಬಳಿಕ ಮತ್ತೊಂದು ವೈರಸ್ ಜನರ ನೆಮ್ಮದಿಯನ್ನು ಹಾಳು ಮಾಡುತ್ತಿದೆ. H3N2 ವೈರಸ್‌ ಭೀತಿ (H3N2 Influenza) ಕುರಿತು ಎಚ್ಚರದಿಂದ ಇರುವಂತೆ ICMR (Indian Council of Medical Research) ದೇಶಾದ್ಯಂತ ಹೈ ಅಲರ್ಟ್‌ ಘೋಷಣೆ ಮಾಡಿದೆ. ಹೀಗಾಗಿ ರಾಜ್ಯದಲ್ಲಿ ಮುನ್ನೆಚ್ಚರಿಕೆ ಕ್ರಮಕೈಗೊಳ್ಳಲು ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌ ಸೋಮವಾರ ಮಹತ್ವದ ಸಭೆ ನಡೆಸಲಿದ್ದಾರೆ.

ಐಸಿಎಂಆರ್‌ ಸೂಚನೆಯಂತೆ ಹೊಸ ವೈರಸ್ ಬಗ್ಗೆ ನಿಗಾ ವಹಿಸಲಾಗುತ್ತಿದೆ ಎಂದು ಆರೋಗ್ಯ ಇಲಾಖೆಯ ಆಯುಕ್ತ ರಣದೀಪ್‌ ಪ್ರತಿಕ್ರಿಯಿಸಿದ್ದಾರೆ. ರಾಜ್ಯದಲ್ಲಿ ಸದ್ಯಕ್ಕೆ ಯಾರಲ್ಲೂ H3N2 ವೈರಸ್‌ ಕಾಣಿಸಿಕೊಂಡಿಲ್ಲ. ಸಾರಿ ಮತ್ತು ಐಎಲ್‌ಎ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಈ ಸೋಂಕು ಬಹುಬೇಗ ಹರಡುತ್ತಿದೆ. ಹೀಗಾಗಿ ಸಾರಿ ಮತ್ತು ಐಎಲ್‌ಎ ಸಮಸ್ಯೆಯಿಂದ ಬಳಲುತ್ತಿರುವವರು ಎಚ್ಚರದಿಂದಿರಬೇಕು ಎಂದು ತಿಳಿಸಿದ್ದಾರೆ.

ಹೊಸ ವೈರಸ್‌ ಕುರಿತು ಸಚಿವ ಸುಧಾಕರ್ ಪ್ರತಿಕ್ರಿಯಿಸಿದ್ದು, H3N2 ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯ ಕೂಡ ಗಮನ ಕೊಡುವಂತೆ ತಿಳಿಸಿದೆ. ಈ ಬಗ್ಗೆ ಇಲಾಖೆಯ ಆಯುಕ್ತರು, ಪ್ರಧಾನ ಕಾರ್ಯದರ್ಶಿ ಜತೆಗೆ ಸೋಮವಾರ ಮಹತ್ವದ ಸಭೆ ನಡೆಸಲಾಗುವುದು ಎಂದಿದ್ದಾರೆ. ಸೋಂಕಿನ ಲಕ್ಷಣ ದೀರ್ಘ ಕಾಲದ ಕೆಮ್ಮು ಇರಬಹುದು ಎಂದು ಪ್ರಾರಂಭಿಕ ವರದಿಯಲ್ಲಿ ತಿಳಿದು ಬಂದಿದೆ. ಯಾವ ರೀತಿ ಮುನ್ನೆಚ್ಚರಿಕೆ ವಹಿಸಬೇಕು? ಯಾವೆಲ್ಲ ಕ್ರಮ ತೆಗೆದು ಕೊಳ್ಳಬೇಕು, ಚಿಕಿತ್ಸೆ ಏನು ಎಂದು ಸಭೆಯಲ್ಲಿ ಚರ್ಚಿಸಿ ತೀರ್ಮಾನ ಮಾಡಲಾಗುವುದು. ಈ ಸಭೆಯಲ್ಲಿ ತಜ್ಞರು ಕೂಡ ಭಾಗಿಯಾಗಲಿದ್ದಾರೆ ಎಂದು ತಿಳಿಸಿದ್ದಾರೆ.

ಮಹಿಳೆಯರಿಗಾಗಿ ಸೈಕ್ಲೋಥಾನ್‌ಗೆ ಚಾಲನೆ

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಭಾನುವಾರ ಮುಂಜಾನೆ 8:30ಕ್ಕೆ ವಿಧಾನಸೌಧದಿಂದ- ಆರೋಗ್ಯ ಸೌಧದವರೆಗೆ ಸೈಕ್ಲೋಥಾನ್ ಆಯೋಜನೆ ಮಾಡಲಾಗಿತ್ತು. ಆರೋಗ್ಯವಂತ ಮಹಿಳೆಯಿಂದ ಆರೋಗ್ಯಕರ ಭಾರತ ಎಂಬ ಅಡಿಬರಹದೊಂದಿಗೆ ಸೈಕ್ಲೋಥಾನ್‌ಗೆ ಸಚಿವ ಸುಧಾಕರ್‌ ಚಾಲನೆ ನೀಡಿದರು.

ಈ ಸಂಬಂಧ ಮಾತನಾಡಿದ ಆರೋಗ್ಯ ಇಲಾಖೆಯ ಆಯುಕ್ತ ರಣದೀಪ್, ವಿಶ್ವ ಮಹಿಳಾ ದಿನದ ಅಂಗವಾಗಿ ಸೈಕ್ಲೋಥಾನ್ ಅನ್ನು ಆಯೋಜನೆ ಮಾಡಲಾಗಿದೆ. ಕೌಟುಂಬಿಕ ಜವಾಬ್ದಾರಿಗಳಲ್ಲಿ ಮಹಿಳೆಯರು ಅವರ ಆರೋಗ್ಯದ ಕಡೆ ಗಮನ ಹರಿಸುತ್ತಿಲ್ಲ. ಒಳ್ಳೆಯ ಊಟ ಸೇವನೆ, ವ್ಯಾಯಾಮ ಮಾಡುವುದು ಬಹಳ ಮುಖ್ಯವಾಗಿದೆ ಎಂದು ಹೇಳಿದರು.

ಇದನ್ನೂ ಓದಿ: Raichur RIMS Hospital: ಕಾಕ್ಲೇರ್ ಪ್ಲಾಂಟ್ ಸ್ಕೀಂ ಅಡಿ ಇಬ್ಬರು ಪುಟ್ಟ ಬಾಲಕರಿಗೆ ಸರ್ಜರಿ; ರಿಮ್ಸ್‌ ವೈದ್ಯರ ಸಾಧನೆ

ಹೀಗಾಗಿ ಆರೋಗ್ಯ ಇಲಾಖೆ ಸೈಕ್ಲೋಥಾನ್‌ ಮೂಲಕ ಅರಿವು ಕಾರ್ಯಕ್ರಮ ಮೂಡಿಸಿದೆ. ಮಹಿಳೆಯರು ಸ್ವಂತ ಆರೋಗ್ಯ ಕಾಪಾಡಿಕೊಳ್ಳಬೇಕು. ಕ್ಯಾನ್ಸರ್, NCDಗೆ ಸ್ಕ್ರೀನಿಂಗ್ ಮಾಡಿಸಿಕೊಳ್ಳಬೇಕು. ಇದನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ಮಾಡಲಾಗುತ್ತಿದೆ ಎಂದು ತಿಳಿಸಿದರು.‌

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

Tears Of Joy: ಕಣ್ಣೀರು ಸುರಿಸುವುದರಿಂದಲೂ ಲಾಭವಿದೆ!

ಕಣ್ಣೀರಿನಿಂದ ಲಾಭವಿದೆ! ಅಂದರೆ ನಮ್ಮ ಕಿಸೆ ತುಂಬುತ್ತದೆ ಎಂದಲ್ಲ, ಮನಸ್ಸು ತುಂಬಿ ಬಂದು ಒಳಗಿನ ಒತ್ತಡ ಹೆಚ್ಚಾದಾಗ ಅದನ್ನು ಹೊರ ಹಾಕುವುದಕ್ಕೆ ನಮಗೆ ಕಣ್ಣೀರು ಬೇಕು. ಬೇಸರದಲ್ಲಿ ಅಳುವಷ್ಟೇ ಸಹಜ, ಖುಷಿಯಾದಾಗ ಆನಂದದ ಕಣ್ಣೀರು. ಇದರಿಂದ ದೇಹದಲ್ಲಿ ಪೇರಿಸಲ್ಪಟ್ಟ ಒತ್ತಡ, ಆತಂಕಗಳು ಕಣ್ಣೀರಾಗಿ ಕರಗಿ ಹರಿದು ಹೋಗುತ್ತವೆ. ಈ ಕುರಿತ (Tears Of Joy) ಮಾಹಿತಿ ಇಲ್ಲಿದೆ.

VISTARANEWS.COM


on

Tears Of Joy
Koo

ಬೇಸಿಗೆಯಲ್ಲಿ ಶರೀರದ ಉಷ್ಣತೆ ಹೆಚ್ಚಾದರೆ ಅದನ್ನು ತಣಿಸಲು ನಾವು ಬೆವರುವುದಿಲ್ಲವೇ? ಹಾಗೆಯೇ, ದೇಹಕ್ಕೆ ಬೇಡದಿರುವಂಥ ಯಾವುದು ಹೆಚ್ಚಾದರೂ ಅದನ್ನು ಹೊರಗೆ ಹಾಕುವುದಕ್ಕೆ ಶರೀರಕ್ಕೊಂದು ವಿಸರ್ಜನಾ ಕ್ರಮವೆಂಬುದಿದೆ. ಹಾಗಿರುವುದರಿಂದಲೇ ನಮ್ಮ ದೇಹ ಆರೋಗ್ಯಪೂರ್ಣವಾಗಿ ಇರುವುದು. ಇದು ಶರೀರಕ್ಕೆ ಮಾತ್ರವೇ ಅಲ್ಲ, ಮನಸ್ಸಿನ ವಿಷಯದಲ್ಲೂ ಹೌದು. ಭಾವನೆಗಳ ಒತ್ತಡ ಅತಿಯಾದಾಗ ಅದನ್ನು ಹೊರಕ್ಕೆ ಹಾಕುವುದಕ್ಕೆ ಕಣ್ಣೀರು ನಮಗೆ ನೆರವಾಗುತ್ತದೆ (Tears Of Joy) ಎಂಬುದನ್ನು ಗಮನಿಸಿದ್ದೀರಾ? ದುಃಖ, ಬೇಸರವಾದಾಗ ಅಳುವಷ್ಟೇ ಸಹಜ, ಸಂತಸದಲ್ಲೂ ಅಳುವುದು. ಒಂದೊಮ್ಮೆ ಹೀಗೆ ಭಾವನೆಗಳ ಒತ್ತಡದಲ್ಲಿ ಕಣ್ಣೀರು ಬರುವುದನ್ನು ನಾಚಿಕೆ ಎಂದುಕೊಂಡರೆ- ತಪ್ಪು ತಿಳುವಳಿಕೆಯಿದು. ಸಂತೋಷದಲ್ಲಿ ಕಣ್ಣೀರು ಸುರಿಸುವುದರಲ್ಲೂ ಬಹಳಷ್ಟು ಪ್ರಯೋಜನಗಳಿವೆ. ಹಾಗಾಗಿ ಹೆಚ್ಚು ಯೋಚಿಸದೆ ಕಣ್ಣು, ಮೂಗು ಒರೆಸಿಕೊಳ್ಳುವುದಕ್ಕೆ ಕರವಸ್ತ್ರ ಇರಿಸಿಕೊಳ್ಳಿ.

happy Tears

ಖುಷಿಗೂ ಕಣ್ಣೀರೇ?

ನಮ್ಮ ಭಾವನೆಗಳ ಒತ್ತಡ ಅತಿಯಾದಾಗ ಅದನ್ನು ಹೊರಹಾಕುವಂಥ ನೈಸರ್ಗಿಕ ವ್ಯವಸ್ಥೆಯೆಂದರೆ ಕಣ್ಣೀರು ಹಾಕುವುದು. ಕಣ್ಣೀರು ಹಾಕುವುದಕ್ಕೆ ಖುಷಿ-ಬೇಸರ ಎಂಬ ಭೇದವಿಲ್ಲ. ಮನಸ್ಸಿನಲ್ಲಿ, ದೇಹದಲ್ಲಿ ಪೇರಿಸಲ್ಪಟ್ಟ ಒತ್ತಡ, ಆತಂಕಗಳು ಕಣ್ಣೀರಾಗಿ ಕರಗಿ ಹರಿದು ಹೋಗುವುದರಿಂದ ದೇಹ-ಮನಸ್ಸುಗಳ ಸ್ವಾಸ್ಥ್ಯಕ್ಕೆ ಬಹಳಷ್ಟು ಲಾಭವಿದೆ. ಕಣ್ಣು-ಮೂಗು ಒರೆಸಿಕೊಳ್ಳುತ್ತಿದ್ದಂತೆ ಮನಸ್ಸು ಶಾಂತವಾಗುವುದು, ದೇಹಾದ್ಯಂತ ಹರಡಿದ್ದ ಉದ್ವಿಗ್ನತೆ ಮಾಯವಾಗುವುದನ್ನು ಗಮನಿಸಬಹುದು. ಆನಂದಭಾಷ್ಪ ಸುರಿಸುವುದರಿಂದ ಆಗುವ ಲಾಭಗಳೇನು ಎಂದರೆ-

ಮನಸ್ಸು ಶಾಂತ

ಅತಿಯಾದ ಖುಷಿಯಲ್ಲಿ ಎಂಡಾರ್ಫಿನ್‌, ಆಕ್ಸಿಟೋಸಿನ್‌ ಮತ್ತು ಡೋಪಮಿನ್‌ ಮುಂತಾದ ಚೋದಕಗಳನ್ನು ದೇಹ ಸ್ರವಿಸುತ್ತದೆ. ಇಂಥ ಸಂದರ್ಭದಲ್ಲಿ ಭಾವನೆಗಳ ಹೊಳೆಯಿಂದ ಹೊರತಂದು ಮನಸ್ಸನ್ನು ಸ್ಥಿಮಿತಗೊಳಿಸುವುದಕ್ಕೆ ಸಂತೋಷದ ಕಣ್ಣೀರು ಸಹಾಯ ಮಾಡುತ್ತದೆ.

ಭಾವಗಳಿಗೆ ಕೋಡಿ

ನಿತ್ಯದ ಬದುಕಿನಲ್ಲಿ ಸುಪ್ತವಾಗಿ ಮನದಲ್ಲಿ ಅಡಗುವ ಭೀತಿ, ನೋವು, ಶೋಕ, ಖುಷಿ, ಸಂಭ್ರಮ ಮುಂತಾದ ಹತ್ತೆಂಟು ಭಾವನೆಗಳು ಸಹಿಸಲು ಅಸಾಧ್ಯವಾದ ಒತ್ತಡವನ್ನು ಉಂಟುಮಾಡುತ್ತವೆ. ಕಣ್ಣೀರು ಅವುಗಳಿಗೆ ಹೊರಹೋಗುವ ದಾರಿಯನ್ನು ತೋರಿಸುತ್ತದೆ. ಮಕ್ಕಳ ವಿವಾಹದಲ್ಲಿ ಹೆತ್ತವರು ಸುರಿಸುವ ಆನಂದಭಾಷ್ಪ ಇರಬಹುದು, ಹೊಸ ಕೆಲಸ ಸಿಕ್ಕ ಸಂಭ್ರಮ ಆದರೂ ಸರಿಯೇ- ಅಂತೂ ಹಳೆಯದೆಲ್ಲಾ ಸುಪ್ತ ಖಾತೆಗಳನ್ನು ಹೊರತೆಗೆದು ಕಣ್ಣೀರು ಕರೆಯುತ್ತದೆ ಮನಸ್ಸು. ಇದರಿಂದ ಜೀವಕ್ಕೆ ಬಹಳ ಆರಾಮ ಲಭಿಸುವುದು ಅನುಭವಕ್ಕೆ ಬರುತ್ತದೆ.

Daughter Wipes Away Mother's Tears of Joy

ಸಂವಹನದ ಮಾಧ್ಯಮ

ಮಾನವ ಸಂಘಜೀವಿ. ಜೊತೆಗಿರುವವರೊಡನೆ ಸಂವಹನ ನಡೆಸುತ್ತಲೇ ಬದುಕು ನಡೆಸಬೇಕು. ಇಷ್ಟಾಗಿಯೂ ಕೆಲವೊಮ್ಮೆ ಎಲ್ಲವನ್ನೂ ವಾಚ್ಯವಾಗಿಯೇ ಹೇಳಲು ಸಾಧ್ಯವಾಗುವುದಿಲ್ಲ. ಅದರಲ್ಲೂ ಭಾವನೆಗಳು ಅತಿಯಾದ ಹೊತ್ತಿನಲ್ಲಿ ಮಾತು ಸೋಲುವುದು ಸಹಜ. ಎದುರಿನವರ ಕಣ್ಣೀರು ಕಂಡಾಕ್ಷಣವೇ ಅವರ ಪ್ರೀತಿ, ಕೃತಜ್ಞತೆಯಂಥ ಭಾವನೆಗಳು ಫಕ್ಕನೆ ಮನಸ್ಸಿಗೆ ನಾಟುತ್ತವೆ. ಮನಸ್ಸುಗಳನ್ನು ಹತ್ತಿರವಾಗಿಸುತ್ತವೆ. ಆಕ್ಸಿಟೋಸಿನ್‌ನಂಥ ಚೋದಕಗಳು ಸಾಮಾಜಿಕವಾಗಿ ಇನ್ನೊಬ್ಬರೊಂದಿಗೆ ಸಂಪರ್ಕ ಸಾಧಿಸಲು ಸಹ ನೆರವಾಗುತ್ತವೆ. ಮಾನಸಿಕ ಸ್ಥಿರತೆಯಿಂದ ಬದುಕು ಸ್ಥಿರವಾಗುವುದು ಹೌದು.

ದೇಹಕ್ಕೂ ಲಾಭ

ಈವರೆಗಿನ ಉಪಯುಕ್ತತೆಗಳೆಲ್ಲಾ ಹೆಚ್ಚಿನವು ಮಾನಸಿಕ ಸ್ತರದಲ್ಲಿನವು. ಆದರೆ ಅಷ್ಟೇ ಅಲ್ಲ, ದೇಹಕ್ಕೂ ಉಪಯೋಗವಿದೆ. ಕಣ್ಣನ್ನು ಸ್ವಚ್ಚಗೊಳಿಸಲು ಕಣ್ಣೀರು ಸಾಧನ. ಇದರಿಂದ ಕಣ್ಣಿನ ಸೋಂಕನ್ನು ಸಹ ತಡೆಗಟ್ಟಬಹುದು. ಅಳುವುದರಿಂದ ಉಸಿರಾಟ ಮತ್ತು ಹೃದಯ ಬಡಿತವೂ ನಿಯಂತ್ರಣಕ್ಕೆ ಬರುತ್ತದೆ. ಈ ಎಲ್ಲವುಗಳಿಂದ ಒತ್ತಡವನ್ನು ನಿಭಾಯಿಸುವ ಕ್ಷಮತೆ ಹೆಚ್ಚುತ್ತದೆ. ಹಾಗಾಗಿ ಎಂದಾದರೂ ಭಾವನೆಗಳ ಮಹಾಪೂರದಲ್ಲಿ ತೇಲುತ್ತಿರುವಾಗ ಅಳು ಬಂತೋ, ನಾಚಿಕೆ ಪಡಬೇಡಿ. ಮನಸ್ಸು ತುಂಬುವಷ್ಟು ಕಣ್ಣೀರು ಸುರಿಸಿ, ಆರೋಗ್ಯವಂತರಾಗಿರಿ.

ಇದನ್ನೂ ಓದಿ: Home Remedy For Cracked Heels: ಒಡೆದ ಹಿಮ್ಮಡಿಗಳಿಗೆ ಕರ್ಪೂರದ ಎಣ್ಣೆ ಪರಿಣಾಮಕಾರಿ

Continue Reading

ಆರೋಗ್ಯ

Sleeping Tips: ದಿನಕ್ಕೆಷ್ಟು ತಾಸು ನಿದ್ದೆ ಮಾಡುತ್ತೀರಿ ನೀವು? ಇದು ಗಂಭೀರ ವಿಷಯ!

ನಿದ್ದೆ ಹಾಳಾಗುವುದಕ್ಕೆ ಕಾರಣಗಳು (Sleeping Tips) ಸಾವಿರ ಇರಬಹುದು. ಆದರೆ ಅದನ್ನು ಸರಿ ಮಾಡಿಕೊಳ್ಳುವುದು ಅಸಾಧ್ಯವಲ್ಲ. ನಮ್ಮ ಜೀವನಶೈಲಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಂಡರೆ, ರಾತ್ರಿ ಕಣ್ತುಂಬಾ ನಿದ್ರಿಸಬಹುದು. ನಿದ್ದೆ ಹಾಳಾಗುವುದಕ್ಕೆ ಕಾರಣಗಳು ಸಾವಿರ ಇರಬಹುದು. ಅದನ್ನು ಸರಿ ಮಾಡಿಕೊಳ್ಳುವುದು ಅಸಾಧ್ಯವಲ್ಲ. ನಮ್ಮ ಜೀವನಶೈಲಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಂಡರೆ, ರಾತ್ರಿ ಕಣ್ತುಂಬಾ ನಿದ್ರಿಸಬಹುದು, ದೇಹ-ಮನಸ್ಸುಗಳನ್ನು ಸ್ವಸ್ಥವಾಗಿ ಇರಿಸಿಕೊಳ್ಳಬಹುದು.

VISTARANEWS.COM


on

Sleeping Tips
Koo

ಕುಂಭಕರ್ಣನ ಬಗ್ಗೆ ನಾವೆಲ್ಲ ಕೇಳಿದ್ದೇವೆ. ಅವನನ್ನು ಎಬ್ಬಿಸುವದಕ್ಕೆ ರಾವಣನ ಸೈನ್ಯವೇ ಒದ್ದಾಡಿದರೂ ತಬ್ಬಿದ ನಿದ್ರಾಂಗನೆಯನ್ನು ಆತ ಬಿಡುತ್ತಿರಲಿಲ್ಲವಂತೆ. ಈಗಿನವರೂ ಒಂಥರಾ ಕುಂಭಕರ್ಣರೇ! ಆದರೆ ಎಬ್ಬಿಸಲಿಕ್ಕಲ್ಲ, ನಿದ್ರಿಸುವುದಕ್ಕೇ ಹರಸಾಹಸ ಪಡಬೇಕು. ಲೋಕವೆಲ್ಲಾ ಬಂದು ಲಾಲಿ ಹಾಡಿದರೂ ನಿದ್ದೆ ಮಾತ್ರ ಸಾಧ್ಯವಿಲ್ಲ (Sleeping Tips) ಇಂದಿನವರಿಗೆ. ದಿಂಬಿಗೆ ತಲೆ ಕೊಡುವ ಕೆಲಸವನ್ನು ಸರಿಯಾಗಿ ಮಾಡದಿದ್ದರೆ ಬೇಗನೇ ʻಹಾಸಿಗೆ ಹಿಡಿಯುವುದುʼ ಸತ್ಯ ಎನ್ನುತ್ತಾರೆ ಆರೋಗ್ಯ ತಜ್ಞರು. ಭಾರತೀಯರಲ್ಲಿ ದಿನಕ್ಕೆ 6 ತಾಸುಗಳ ಗಾಢ ನಿದ್ರೆಗೂ ಗತಿಯಿಲ್ಲದವರು ಶೇ. 61 ಮಂದಿ ಎನ್ನುತ್ತದೆ ಇತ್ತೀಚಿನ ಸಮೀಕ್ಷೆಯೊಂದು. ಶೇ. 34ರಷ್ಟು ಜನ 4 ತಾಸುಗಳ ಗಾಢ ನಿದ್ದೆ ಮಾಡುತ್ತೇವೆ ಎಂದಿದ್ದರೆ ಉಳಿದವರಿಗೆ ಅದೂ ಅಲಭ್ಯವಾಗಿದೆ. ಇದಕ್ಕಿಂತ ಆತಂಕಕಾರಿ ಸಂಗತಿಯೆಂದರೆ 2022ಕ್ಕೆ ಹೋಲಿಸಿದರೆ, 2023ರಲ್ಲಿ ನಿದ್ದೆಬಿಡುವವರು, ನಿದ್ದೆಗೆಡುವವರ ಸಂಖ್ಯೆ ಶೇ. 50ರಷ್ಟು ಹೆಚ್ಚಾಗಿರುವುದು. ಈ ಪ್ರಮಾಣ 2024ಕ್ಕೆ ಮತ್ತೂ ಏರುತ್ತಿರುವುದಂತೂ ಇನ್ನಷ್ಟು ಕಳವಳಕ್ಕೆ ಕಾರಣವಾಗಿದೆ. ನಿದ್ದೆಗೆಟ್ಯೊ ಬುದ್ಧಿಗೆಟ್ಯೊ ಎನ್ನುವ ಹಳೆಯ ಜನರ ಮಾತನ್ನು ಮರೆಯುವಂತಿಲ್ಲ ಈಗ. ನಿದ್ದೆ ಹಾಳಾಗುವುದಕ್ಕೆ ಕಾರಣಗಳು ಸಾವಿರ ಇರಬಹುದು. ಅದನ್ನು ಸರಿ ಮಾಡಿಕೊಳ್ಳುವುದು ಅಸಾಧ್ಯವಲ್ಲ. ನಮ್ಮ ಜೀವನಶೈಲಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಂಡರೆ, ರಾತ್ರಿ ಕಣ್ತುಂಬಾ ನಿದ್ರಿಸಬಹುದು, ದೇಹ-ಮನಸ್ಸುಗಳನ್ನು ಸ್ವಸ್ಥವಾಗಿ ಇರಿಸಿಕೊಳ್ಳಬಹುದು. ಯಾವುದು ಆ ಬದಲಾವಣೆಗಳು? ಏನನ್ನು ಬದಲಿಸಿಕೊಳ್ಳಬೇಕು?

Sleeping alaram

ನಿದ್ದೆಗೊಂದು ಅಲರಾಂ

ಅಂದರೆ ಬೆಳಗ್ಗೆ ಏಳುವುದಕ್ಕೆ ಅಲರಾಂ ಇಡುವುದರ ಬಗ್ಗೆ ಅಲ್ಲ. ರಾತ್ರಿ ಮಲಗುವುದಕ್ಕೆ ಅಲರಾಂ ಇಡುವ ಬಗ್ಗೆ ಇಲ್ಲಿ ಹೇಳುತ್ತಿರುವುದು. ಹೌದು. ಒಂದೊಂದು ದಿನ ಒಂದೊಂದು ಸಮಯಕ್ಕೆ ಮಲಗುವುದಲ್ಲ, ಸಾಧ್ಯವಾದಷ್ಟೂ ನಿಗದಿತ ಸಮಯಕ್ಕೆ ಮಲಗುವ ಅಭ್ಯಾಸ ರೂಢಿಸಿಕೊಳ್ಳಿ. ರಾತ್ರಿ ತೀರಾ ತಡವಾಗಿ ಮಲಗುವುದು, ಇದಕ್ಕೆ ಬದಲಿಗೆ ಹಗಲಿಗೆ ಒಂದೆರಡು ತಾಸು ನಿದ್ರಿಸುವುದು ಸರಿಯಲ್ಲ. 7 ತಾಸುಗಳ ಗಾಢ ನಿದ್ರೆ ರಾತ್ರಿಯೇ ದೊರೆಯುವಂತೆ ನಿಮ್‌ ಕೆಲಸಗಳನ್ನು ಹೊಂದಿಸಿಕೊಳ್ಳಲು ಪ್ರಯತ್ನಿಸಿ. ಇದರಿಂದ ದೇಹದ ಸರ್ಕೇಡಿಯನ್‌ ಲಯಕ್ಕೆ ತೊಂದರೆಯಾಗದೆ, ಸ್ವಾಸ್ಥ್ಯ ಸುಧಾರಿಸುತ್ತದೆ.

Savasana Yoga Asanas For Best Sleep

ರಿಲ್ಯಾಕ್ಸ್‌ ಪ್ಲೀಸ್!

ಮಲಗುವ ಮುನ್ನ ಭಯಾನಕ ಸಿನೆಮಾಗಳನ್ನು ನೋಡುವುದು, ಮನಸ್ಸನ್ನು ಅಶಾಂತಗೊಳಿಸುವ ಸುದ್ದಿಗಳನ್ನು ಹೇಳಿ-ಕೇಳುವುದು- ಇಂಥ ಯಾವುದೇ ಸಂಗತಿಗಳನ್ನು ನಿದಿರೆಯನ್ನು ಹಾಳು ಮಾಡಬಲ್ಲವು. ಹಾಗಾಗಿ ಮಲಗುವ ಮುನ್ನ ದೇಹವನ್ನು ಮಾತ್ರವೇ ಅಲ್ಲ, ಮನಸ್ಸನ್ನು ವಿಶ್ರಾಂತಿಗೆ ದೂಡಿ. ಬೆವರು ಹರಿಸಿ ವ್ಯಾಯಾಮ ಮಾಡುವುದು ಸಹ ಮಲಗುವ ಮೊದಲು ಬೇಡ. ಬದಲಿಗೆ, ಹಗಲು ಹೊತ್ತಿನಲ್ಲಿ ಚೆನ್ನಾಗಿ ವ್ಯಾಯಾಮ ಮಾಡಿ. ಮಲಗುವ ಮುನ್ನ ಹದವಾದ ಬಿಸಿ ನೀರಿನ ಸ್ನಾನ, ದೀರ್ಘ ಉಸಿರಾಟ, ಸಂಗೀತ ಕೇಳುವುದು, ಏನನ್ನಾದರು ಓದುವುದು, ತಂಗಾಳಿಯಲ್ಲಿ ಹತ್ತಾರು ನಿಮಿಷ ಲಘುವಾಗಿ ಓಡಾಡುವುದು ಇತ್ಯಾದಿಗಳು ನಿದ್ದೆಗೆ ಪೂರಕ.

ಮಲಗುವ ಸ್ಥಳ

ಇದು ಸಹ ಮುಖ್ಯವಾಗುತ್ತದೆ. ಸ್ವಚ್ಛವಾದ, ಗಾಳಿಯಾಡುವ ಸ್ಥಳದಲ್ಲಿ ಮಲಗುವುದು ಒಳ್ಳೆಯದು. ಸೊಳ್ಳೆಗಳ ಉಪದ್ರವಿದ್ದರೆ ಪರದೆ ಬಳಸಿ. ಗಲಾಟೆಯಿಲ್ಲದ ಮಂದ ಬೆಳಕಿನ ವಾತಾವರಣ ಏರ್ಪಡಿಸಿಕೊಳ್ಳಿ. ಹಾಸಿಗೆ ಮತ್ತು ದಿಂಬುಗಳು ಕೂಡಾ ಆರಾಮದಾಯಕವಾಗಿರಲಿ. ಒಂದೊಮ್ಮೆ ಹೊರಗಿನ ಗಲಾಟೆಗೆ ನಿದ್ದೆ ಬರುತ್ತಿದ್ದ ಎಂದಾದರೆ, ಅದನ್ನು ಮರೆಮಾಚುವುದಕ್ಕೆ ನಿಮ್ಮಿಷ್ಟದ ಮೆಲು ಸಂಗೀತ ಹಾಕಿಕೊಳ್ಳಿ. ಅದು ಬೇಡದಿದ್ದರೆ, ಇಯರ್‌ ಪ್ಲಗ್‌ ಬಳಕೆ ಸಾಧ್ಯವೇ ನೋಡಿ.

Sleeping Tips

ನೀಲಿ ಬೆಳಕು ಬೇಡ

ಯಾವುದೇ ಎಲೆಕ್ಟ್ರಾನಿಕ್‌ ಉಪಕರಣದಿಂದ ಸೂಸುವ ನೀಲಿ ಬೆಳಕು ನಿದ್ದೆಯ ಶತ್ರುವಿದ್ದಂತೆ. ಮಲಗುವ ಒಂದು ತಾಸು ಮೊದಲೇ ಇವುಗಳಿಂದ ಸನ್ಯಾಸ ತೆಗೆದುಕೊಳ್ಳಿ. ಸ್ಮಾರ್ಟ್‌ ಫೋನ್‌, ಟ್ಯಾಬ್ಲೆಟ್‌, ಕಂಪ್ಯೂಟರ್‌ ಮುಂತಾದವು ದೇಹದ ಆಂತರಿಕ ಗಡಿಯಾರಕ್ಕೆ ತೊಂದರೆ ನೀಡುತ್ತವೆ. ಮಲಗುವ ಹಾಸಿಗೆಯಲ್ಲಿ ಫೋನ್‌ ಇರಿಸಿಕೊಳ್ಳುವ ತಪ್ಪನ್ನಂತೂ ಮಾಡಲೇಬೇಡಿ.

ಇದನ್ನೂ ಓದಿ: Drinks for Summer: ಬೇಸಿಗೆಯಲ್ಲಿ ತಂಪಾಗಿರಬೇಕೆ? ಈ ಪೇಯಗಳನ್ನು ತಪ್ಪದೇ ಕುಡಿಯಿರಿ

ಆಹಾರ

ಊಟ ಮಾಡಿ ಕೈ ತೊಳೆಯುತ್ತಿದ್ದಂತೆ ಹಾಸಿಗೆ ಸೇರಿದರೆ ನಿದ್ದೆಯೂ ಹಾಳು, ಹೊಟ್ಟೆಗೂ ಗೋಳು! ರಾತ್ರಿಯೂಟವನ್ನು ಆದಷ್ಟೂ ಸರಳವಾಗಿಡಿ, ಕೊಬ್ಬು, ಖಾರದ ವಸ್ತುಗಳನ್ನು ರಾತ್ರಿ ಕಡಿಮೆ ಮಾಡಿ. ರಾತ್ರಿ ಮಲಗುವ ಮೂರು ತಾಸುಗಳ ಮುನ್ನ ಊಟ ಮಾಡುವುದು ಸರಿಯಾದ ಕ್ರಮ. ಆನಂತರ ಕಾಫಿ, ಚಹಾ ಸೇರಿದಂತೆ ಯಾವುದೇ ಕೆಫೇನ್‌ ಸೇವನೆ ಸಲ್ಲದು. ಆಲ್ಕೋಹಾಲ್‌ ಸೇವನೆಯನ್ನು ರೂಢಿಸಿಕೊಂಡರೆ ಕ್ರಮೇಣ ನಿದ್ದೆ ಹಾಳಾಗುತ್ತದೆ.

Continue Reading

ಆರೋಗ್ಯ

Tooth Decay: ನಮ್ಮ ಈ ದುರಭ್ಯಾಸಗಳು ಹಲ್ಲಿನ ಹುಳುಕಿಗೆ ಕಾರಣವಾಗುತ್ತವೆ

ಎಲ್ಲರನ್ನೂ ಒಂದಲ್ಲ ಒಂದು ದಿನ ಕಾಡುವ ಸಾರ್ವಕಾಲಿಕ ತೊಂದರೆಯೆಂದರೆ ಅದು ಹಲ್ಲು ನೋವು. ಇದು ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತದೆ. ನಿತ್ಯವೂ ಬಾಯಿಯ ಸ್ವಚ್ಛತೆ ಬಗ್ಗೆ ಹಾಗೂ ನಮ್ಮ ಜೀವನಶೈಲಿಯ ಬಗ್ಗೆ ಗಮನ ಹರಿಸಿದರೆ ಹಲ್ಲಿನ ಆರೋಗ್ಯ ಚೆನ್ನಾಗಿ ಇಡಬಹುದು. ನಮ್ಮ ಯಾವ ಯಾವ ನಿರ್ಲಕ್ಷ್ಯಗಳಿಂದ ಹಲ್ಲಿನ ಹುಳುಕಿಗೆ ಕಾರಣವಾಗುತ್ತದೆ ಹಾಗೂ ನಾವು ಇದಕ್ಕೆ ಯಾವ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ಬಗ್ಗೆ ಇಲ್ಲಿದೆ (tooth decay) ಮಾಹಿತಿ.

VISTARANEWS.COM


on

Tooth Decay
Koo

ಹಲ್ಲು ಹುಳುಕಾಗುವುದು ಸಾಮಾನ್ಯವಾಗಿ ಎಲ್ಲರೂ ಅನುಭವಿಸುವ ಸಾಮಾನ್ಯ ತೊಂದರೆ. ವಯಸ್ಸಿನ ಭೇದವಿಲ್ಲದೆ, ಬಡವ ಶ್ರೀಮಂತನೆಂಬ ಹಂಗಿಲ್ಲದೆ, ಎಲ್ಲರನ್ನೂ ಒಂದಲ್ಲ ಒಂದು ದಿನ ಕಾಡುವ ಸಾರ್ವಕಾಲಿಕ ತೊಂದರೆಯಿದು. ಆದರೆ, ಅಷ್ಟೇ ನಿರ್ಲಕ್ಷ ವಹಿಸುವ ಆರೋಗ್ಯವೂ ಕೂಡಾ ಇದೇ. ಆದರೆ, ನಿತ್ಯವೂ ಬಾಯಿಯ ಸ್ವಚ್ಛತೆ ಹಾಗೂ ಆಹಾರದ ಬಗ್ಗೆ, ನಮ್ಮ ಜೀವನಶೈಲಿಯ ಬಗ್ಗೆ ಗಮನ ಹರಿಸಿದರೆ ಹಲ್ಲಿನ ಆರೋಗ್ಯ ಚೆನ್ನಾಗಿಟ್ಟಿರಬಹುದು. ಬನ್ನಿ, ನಮ್ಮ ಯಾವ ಯಾವ ನಿರ್ಲಕ್ಷ್ಯಗಳಿಂದ ಹಲ್ಲಿನ ಹುಳುಕಿಗೆ ಕಾರಣವಾಗುತ್ತದೆ ಹಾಗೂ ನಾವು ಇದಕ್ಕೆ ಯಾವ ಕ್ರಮಗಳನ್ನು ಕೈಗೊಳ್ಳಬೇಕು (tooth decay) ಎಂಬುದನ್ನು ನೋಡೋಣ.

Young Man Suffering from Acute Toothache and Touching Cheek with Grimace of Pain

ಬಾಯಿಯ ಆರೋಗ್ಯದ ಕಾಳಜಿ ಸರಿಯಾಗಿ ಮಾಡದೇ ಇರುವುದು

ದಿನಕ್ಕೆ ಎರಡು ಬಾರಿ ಅಂದರೆ ಬೆಳಗ್ಗೆ ಹಾಗೂ ರಾತ್ರಿ ಮಲಗುವ ಮೊದಲು ಹಲ್ಲುಜ್ಜುವುದು ಮಾಡದೆ ಇದ್ದರೆ, ಸರಿಯಾಗಿ ಕಾಳಜಿ ವಹಿಸದಿದ್ದರೆ, ಹಲ್ಲಿನ ಸಮಸ್ಯೆಗಳು ಬಹುಬೇಗನೆ ಬರುತ್ತವೆ. ಹಲ್ಲು ಹುಳುಕಾಗಲು ಇರುವ ಪ್ರಮುಖ ಕಾರಣಗಳಲ್ಲಿ ಇದೂ ಒಂದು.

Selection of Colorful Sweets

ಸಕ್ಕರೆಯುಕ್ತ ಆಹಾರ ಅಥವಾ ಸಿಹಿತಿಂಡಿಗಳ ಅತಿಯಾದ ಸೇವನೆ

ಹೆಚ್ಚು ಸಿಹಿತಿಂಡಿಗಳನ್ನು ಸೇವಿಸುವುದರಿಂದ ಹಲ್ಲು ಬಹುಬೇಗನೆ ಹುಳುಕಾಗುತ್ತದೆ. ಸಕ್ಕರೆಯುಕ್ತ ಆಹಾರಗಳಿಂದ ಬಾಯಿಯಲ್ಲಿ ಬಹಳ ಹೊತ್ತಿನವರೆಗೆ ಬ್ಯಾಕ್ಟೀರಿಯಾ ಇರುವುದರಿಂದ ಹಲ್ಲು ಹುಳುಕಿಗೆ ಕಾರಣವಾಗುತ್ತದೆ.

ಆಗಾಗ ದಂತವೈದ್ಯರನ್ನು ಭೇಟಿಯಾಗದೆ ಇರುವುದು

ಆಗಾಗ ದಂತವೈದ್ಯರನ್ನು ಸಂಪರ್ಕಿಸಿ ಹಲ್ಲಿನ ಆರೋಗ್ಯದ ಕಾಳಜಿ ತೆಗೆದುಕೊಳ್ಳುವುದು ಬಹಳ ಮುಖ್ಯ. ಹಲ್ಲಿನ ಕ್ಲೀನಿಂಗ್‌ ಇರಬಹುದು, ಸಣ್ಣ ಹುಳುಕಾದಾಗ ಫಿಲ್ಲಿಂಗ್‌ ಇರಬಹುದು ಅಥವಾ ಆಯಾ ಸಮಸ್ಯೆಗಳಿಗೆ ತಕ್ಕ ಪರಿಹಾರವನ್ನು ಆಗಾಗ ಕಂಡುಕೊಳ್ಳುವುದರಿಂದ ಮುಂದಿನ ಪರಿಣಾಮ ಘೋರವಾಗಿರುವುದಿಲ್ಲ. ಕ್ಲೀನಿಂಗ್‌ ಆಗಾಗ ಮಾಡಿಸಿಕೊಳ್ಳುವುದು, ಹಲ್ಲಿನ ಸಂದುಗಳಲ್ಲಿ ಸಿಕ್ಕಿ ಹಾಕಿಕೊಂಡಿರುವ ಆಹಾರದ ಸಣ್ಣ ತುಣುಕುಗಳನ್ನು ತೆಗೆದು ಕ್ಲೀನ್‌ ಮಾಡುವುದು ಬಹಳ ಮುಖ್ಯ. ಇದರಿಂದ ಹಲ್ಲಿನ ಆರೋಗ್ಯ ಚೆನ್ನಾಗಿರುತ್ತದೆ. ಹುಳುಕು ಹತ್ತಿರ ಸುಳಿಯುವುದಿಲ್ಲ.

Smoking Heart Attack Causes

ಧೂಮಪಾನ ಹಾಗೂ ತಂಬಾಕಿನ ಸೇವನೆ

ಧೂಮಪಾನಕ್ಕೂ ಹಲ್ಲು ಹುಳುಕಿಗೂ ಏನು ಸಂಬಂಧ ಎಂದು ಯೋಚಿಸಬೇಡಿ. ಹಲ್ಲು ಹುಳುಕಾಗುವುದಕ್ಕೆ ಇನ್ನೊಂದು ಮುಖ್ಯ ಕಾರಣ ಎಂದರೆ ಧೂಮಪಾನ ಹಾಗೂ ತಂಬಾಕಿನ ಬಳಕೆ. ತಂಬಾಕಿನ ಯಾವುದೇ ವಸ್ತುಗಳನ್ನು ಬಳಸಿದರೂ ಕೂಡಾ, ಹಲ್ಲಿನ ಆರೋಗ್ಯ ಹದಗೆಡುತ್ತದೆ. ಹಲ್ಲು, ಸವಡು ಸೇರಿದಂತೆ ಬಾಯಿಯ ಆರೋಗ್ಯ ಹಾಳಾಗುತ್ತದೆ.

Drunk Man Drinking Alcohol and Smoking Cigarette Stomach Bloating Relief

ಆಲ್ಕೋಹಾಲ್‌ ಸೇವನೆ

ಮದ್ಯಪಾನ ಮಾಡುವುದರಿಂದಲೂ ಹಲ್ಲಿನ ಆರೋಗ್ಯ ಹಾಳಾಗುತ್ತದೆ. ಹೆಚ್ಚು ಆಲ್ಕೋಹಾಲ್‌ ಕುಡಿಯುವುದರಿಂದ ಬಾಯಿ ಒಣಗಿದಂತಾಗಿ, ಬಾಯಿಯ ಜೊಲ್ಲಿನ ಉತ್ಪತ್ತಿ ಕಡಿಮೆಯಾಗುತ್ತದೆ. ಕಡಿಮೆ ಸಲೈವಾ ಉತ್ಪತ್ತಿಯಾದಾಗ ಸಹಜವಾಗಿಯೇ ಹಲ್ಲಿನ ಹುಳುಕು ಹೆಚ್ಚುತ್ತದೆ.

ಹಲ್ಲನ್ನು ಉಪಕರಣವಾಗಿ ಬಳಸುವುದರಿಂದ

ಹಲ್ಲು ಗಟ್ಟಿಯಾಗಿದೆ ಎಂದುಕೊಂಡು ಗಟ್ಟಿ ಕವಚವಿರುವ ಬೀಜಗಳನ್ನು ಒಡೆಯಲು, ಯಾವುದಾದರೂ ಪ್ಯಾಕೆಟ್ಟನ್ನು ಬಿಡಿಸಲು ಹಲ್ಲಿನಿಂದ ಕಚ್ಚುವ ಮೂಲಕ ಹಲ್ಲಿನ ಸಹಾಯವನ್ನು ತೆಗೆದುಕೊಳ್ಳುತ್ತೇವೆ. ಇದರಿಂದಲೂ ಹಲ್ಲಿನ ಆರೋಗ್ಯ ಹಾಳಾಗುತ್ತದೆ. ಹಾಗಾದರೆ ಹಲ್ಲಿನ ಆರೋಗ್ಯ ಹೆಚ್ಚಿಸಲು ಏನು ಮಾಡಬಹುದು ಎಂಬುದನ್ನು ನೋಡೋಣ ಬನ್ನಿ.

Tooth brushing

ದಿನಕ್ಕೆ ಎರಡು ಬಾರಿ ಹಲ್ಲಿಜ್ಜಿ

ಇದು ಹಲ್ಲು ಹುಳುಕಾಗಿಸುವುದನ್ನು ತಪ್ಪಿಸುತ್ತದೆ. ಹಲ್ಲಿನ ಸಂದಿನಲ್ಲಿ ಸೇರಿದ ಕೊಳೆ ಹೊರಟು ಹೋಗಿ, ಹಲ್ಲು ಆರೋಗ್ಯಪೂರ್ಣವಾಗಿ ಇರುತ್ತದೆ. ಹಲ್ಲುಜ್ಜಲು ಯಾವಾಗಲೂ ಫ್ಲೋರೈಡ್‌ ಟೂತ್‌ಪೇಸ್ಟ್‌ ಹಾಗೂ ಮೆತ್ತಗಿನ ಬ್ರಷ್‌ ಅನ್ನು ಬಳಸುವುದು ಒಳ್ಳೆಯದು.

ಹಲ್ಲನ್ನು ಆಗಾಗ ಫ್ಲಾಸ್‌ ಮಾಡುವುದು ಒಳ್ಳೆಯದು

ಟೂತ್‌ ಬ್ರಷ್‌ನಿಂದ ತೆಗೆಯಲು ಸಾಧ್ಯವಾಗದ, ಹಲ್ಲಿನ ಸಂದಿಯಲ್ಲಿ ಸೇರಿಕೊಂಡಿರುವ ಆಹಾರ ಹಳೆಯ ತುಣುಕುಗಳುಫ್ಲಾಸ್‌ ಮಾಡುವ ಮೂಲಕ ಮಾತ್ರ ತೆಗೆಯಬಹುದು.

Sweet CANDAY

ಅಸಿಡಿಕ್‌ ಹಾಗೂ ಸಕ್ಕರೆಯುಕ್ತ ಆಹಾರಗಳ ಸೇವನೆ ಕಡಿಮೆ ಮಾಡಿ

ಸೋಡಾಗಳು, ಹಣ್ಣಿನ ಜ್ಯೂಸ್‌ಗಳು, ಕ್ಯಾಂಡಿ ಇತ್ಯಾದಿಗಳನ್ನು ತಿಂದಾಗ ಅಥವಾ ಕುಡಿದಾಗ ಬಾಯಿಯನ್ನು ಸ್ವಚ್ಛಗೊಳಿಸುವುದನ್ನು ಮರೆಯಬೇಡಿ.

ಆಗಾಗ ಏನಾದರೊಂದು ಜಗಿಯುತ್ತಿರುವ ಅಭ್ಯಾಸವಿದ್ದರೆ ಬಿಡಿ

ಆಗಾಗ ಏನಾದರೂ ತಿನ್ನುವುದರಿಂದ ಬಾಯಿಯಲ್ಲಿ ಆಹಾರಗಳು ಹಾಗೆಯೇ ಉಳಿದುಹೋಗುತ್ತವೆ. ಈ ತುಣುಕುಗಳು ಹಲ್ಲಿನ ಆರೋಗ್ಯವನ್ನು ಹಾಳುಗೆಡವುತ್ತದೆ.

Chewing gum

ಚ್ಯೂಯಿಂಗ್‌ ಗಮ್‌ ತಿನ್ನುವ ಮೂಲಕ ಬಾಯಿಯನ್ನು ಫ್ರೆಶ್‌ ಆಗಿರಿಸಬಹುದು

ಆದರೆ, ಸಿಹಿಯಾದ ಚ್ಯೂಯಿಂಗ್‌ಗಮ್‌ ಒಳ್ಳೆಯದಲ್ಲ. ಪುದಿನಯುಕ್ತ ಸಕ್ಕರೆ ರಹಿತ ಚ್ಯೂಯಿಂಗ್‌ ಗಮ್‌ ಯಾವಾಗಲಾದರೊಮ್ಮೆ ಅಗತ್ಯ ಬಿದ್ದಾಗ ಬಳಸಬಹುದು.

ಆಗಾಗ ದಂತ ವೈದ್ಯರನ್ನು ಭೇಟಿಯಾಗಿ

ಹಲ್ಲಿನ ಆರೋಗ್ಯದ ಬಗ್ಗೆ ಪರೀಕ್ಷೆ ಮಾಡಿಸಿಕೊಳ್ಳಿ. ಅಗತ್ಯ ಬಿದ್ದಾಗ ಕ್ಲೀನಿಂಗ್‌ ಮಾಡಿಸಿಕೊಳ್ಳಿ.

ಇದನ್ನೂ ಓದಿ: Drinks for Summer: ಬೇಸಿಗೆಯಲ್ಲಿ ತಂಪಾಗಿರಬೇಕೆ? ಈ ಪೇಯಗಳನ್ನು ತಪ್ಪದೇ ಕುಡಿಯಿರಿ

Continue Reading

ದೇಶ

Vitamin D: ಎಚ್ಚರ..ಎಚ್ಚರ! ಕ್ಯಾನ್ಸರ್‌ಗೂ ಕಾರಣವಾಗುತ್ತೆ ವಿಟಮಿನ್‌ ಡಿ ಕೊರತೆ

Vitamin D:ವಿಟಮಿನ್‌ ಡಿ ಕೊರತೆ ಕ್ಯಾನ್ಸರ್‌ಗೆ ಕಾರಣವಾಗಲಿದೆ ಎಂಬ ಶಾಕಿಂಗ್‌ ವರದಿಯೊಂದು ಹೊರ ಬಿದ್ದಿದೆ. ವಿವಿಧ ಅಧ್ಯಯನಗಳ ವರದಿ ಪ್ರಕಾರ ವಿಟಮಿನ್‌ ಡಿ ಕೊರತೆಯಿಂದ ಓವರಿಯನ್‌, ಸ್ತನ ಸೇರಿದಂತೆ ವಿವಿಧ ಕ್ಯಾನ್ಸರ್‌ಗೆ ತುತ್ತಾಗುವ ಸಾಧ್ಯತೆ ಇದೆ.

VISTARANEWS.COM


on

Foods rich in vitamin D
Koo

ನವದೆಹಲಿ:ವಿಟಮಿನ್‌ ಡಿ(Vitamin D) ಕೊರತೆ ಎಂಬುದು ಪ್ರಪಂಚಾದ್ಯಂತ ಹೆಚ್ಚಿನ ಜನರಲ್ಲಿ ಅತ್ಯಂತ ಸಾಮಾನ್ಯವಾಗಿ ಕಂಡು ಬರುವ ಪೌಷ್ಟಿಕಾಂಶ ಕೊರತೆ(Nutrient shortages)ಯಾಗಿದೆ. ಇದು ಸಾಮಾನ್ಯವಾಗಿ 65 ವರ್ಷ ಮೇಲ್ಪಟ್ಟ ಜನರಲ್ಲಿ ಕಂಡು ಬರುವ ಪೌಷ್ಠಿಕಾಂಶ ಕೊರತೆ. ಪ್ರಪಂಚದ ಶೇ.13ರಷ್ಟು ಜನರಲ್ಲಿ ವಿಟಮಿನ್‌ ಡಿ ಕೊರತೆ ಕಂಡು ಬರುತ್ತದೆ. ವಿಟಮಿನ್‌ ಡಿ ಕೊರತೆಯಿಂದ ಎಲುಬು, ಗಂಟು ನೋವು, ಸಂಧು ನೋವು, ಮೂಡ್‌ ಚೇಂಜ್‌ ಹೀಗೆ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗಿದೆ. ಆದರೆ ಇದೀಗ ವಿಟಮಿನ್‌ ಡಿ ಕೊರತೆ ಕ್ಯಾನ್ಸರ್‌(Cancer)ಗೆ ಕಾರಣವಾಗಲಿದೆ ಎಂಬ ಶಾಕಿಂಗ್‌ ವರದಿಯೊಂದು ಹೊರ ಬಿದ್ದಿದೆ. ವಿವಿಧ ಅಧ್ಯಯನಗಳ ವರದಿ ಪ್ರಕಾರ ವಿಟಮಿನ್‌ ಡಿ ಕೊರತೆಯಿಂದ ಓವರಿಯನ್‌, ಸ್ತನ ಸೇರಿದಂತೆ ವಿವಿಧ ಕ್ಯಾನ್ಸರ್‌ಗೆ ತುತ್ತಾಗುವ ಸಾಧ್ಯತೆ ಇದೆ.

ವಿಟಮಿನ್‌ ಡಿ ಕೊರತೆ ಹೇಗೆ ಕ್ಯಾನ್ಸರ್‌ಗೆ ಕಾರಣವಾಗುತ್ತದೆ?

ವಿಟಮಿನ್‌ ಡಿ 3 ಮತ್ತು ಕ್ಯಾಲ್ಸಿಯಂ ಮಾತ್ರೆ ಸೇವನೆಯಿಂದ ಕ್ಯಾನ್ಸರ್‌ ತಡೆಯಲು ಸಾಧ್ಯವಿಲ್ಲ ಎಂದು ಅಧ್ಯಯನ ವರದಿ ಹೇಳಿದೆ. ವಿಟಮಿನ್‌ ಡಿ ಕ್ಯಾನ್ಸರ್‌ ಸೆಲ್‌ಗಳ ವಿಡಿಜನ್‌ ಮತ್ತು ಅವುಗಳ ಬೆಳವಣಿಗೆಯನ್ನು ತಡೆಗಟ್ಟುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಅಲ್ಲದೇ . ಅದರ ಕೊರತೆ ಆದಲ್ಲಿ ಹೊಟ್ಟೆಗೆ ಸಂಬಂಧಿಸಿದ ಕ್ಯಾನ್ಸರ್‌ಗೆ ತುತ್ತಾಗು ಸಾಧ್ಯತೆ ಹೆಚ್ಚಿರುತ್ತದೆ. ವೈದ್ಯರ ಹೇಳುವ ಪ್ರಕಾರ ವಿಟಮಿನ್‌ ಡಿ ಮನುಷ್ಯನ ಎಲುಬುಗಳ ಆರೋಗ್ಯ ಕಾಪಾಡುವುದು ಮಾತ್ರವಲ್ಲದೇ ದೇಹದಲ್ಲಿರುವ ದೋಷಯುಕ್ತ ಜೀನ್‌ಗಳನ್ನು ಸರಿಪಡಿಸುವ ಪ್ರಕ್ರಿಯೆಯಲ್ಲೂ ಪ್ರಮುಖ ಪಾತ್ರ ವಹಿಸುತ್ತದೆ. ಈ ಪ್ರಕ್ರಿಯೆಗೆ MMR ಎಂದು ಕರೆಯಲಾಗಿದ್ದು, ಇದಕ್ಕೆ ವಿಟಮಿನ್‌ ಡಿ ಅಗತ್ಯ ಹೆಚ್ಚಾಗಿದೆ. ಇನ್ನು ವಿಟಮಿನ್‌ ಡಿ ಕೊರತೆ ಕ್ಯಾನ್ಸರ್‌ ಗೆ ಕಾರಣವಾಗುತ್ತದೇಯೇ ಎಂಬ ವಿಷಯದ ಬಗ್ಗೆ ಮತ್ತಷ್ಟು ಅಧ್ಯಯನ ಮುಂದುವರೆದಿದೆ.

ವಿಟಮಿನ್ ಡಿ ಕೊರತೆ ಉಂಟಾಗದಿರಲು ಏನು ಮಾಡಬೇಕು?

1. ವಿಟಮಿನ್ ಡಿ ಕೊರತೆಗೆ ಪ್ರಮುಖ ಮದ್ದು ಎಂದರೆ ಬೆಳಗ್ಗೆ ಸ್ವಲ್ಪ ಹೊತ್ತು ಬಿಸಿಲಿನಲ್ಲಿ ನಿಲ್ಲುವುದು. ತ್ವಚೆಯ ಮೇಲೆ ಯುವಿ-ಬಿ ಕಿರಣಗಳು ಬಿದ್ದಾಗ ಕೊಲೆಸ್ಟ್ರಾಲ್ ವಿಟಮಿನ್ ಡಿ ಆಗಿ ಪರಿವರ್ತನೆ ಆಗುವುದು. ನಿಮ್ಮ ತ್ವಚೆಯ ಬಣ್ಣದ ಮೇಲೆ ನೀವು ಬಿಸಿಲಿನಲ್ಲಿ ನಿಲ್ಲುವ ಸಮಯಲ್ಲಿ ವ್ಯತ್ಯಾಸವಿರುತ್ತದೆ. ಕಪ್ಪು ಬಣ್ಣದ ತ್ವಚೆಯವರು ಬಿಳಿ ಬಣ್ಣದ ತ್ವಚೆಯವರಿಗಿಂತ ಹೆಚ್ಚು ಹೊತ್ತು ಬಿಸಿಲಿನಲ್ಲಿ ನಿಲ್ಲಬೇಕು. ಇನ್ನು ವಯಸ್ಸು ಹೆಚ್ಚಾದಂತೆ ಬಿಸಿಲಿನಲ್ಲಿ ಹೆಚ್ಚು ಹೊತ್ತು ನಿಂತರೆ ಒಳ್ಳೆಯದು.

ಇದನ್ನೂ ಓದಿ:IPL 2024 Points Table: ಲಕ್ನೋ, ಮುಂಬೈ ಸೋಲಿನ ಬಳಿಕ ಅಂಕಪಟ್ಟಿ ಹೇಗಿದೆ?

2. ಮೀನು ಹಾಗೂ ಸಮುದ್ರ ಆಹಾರಗಳಲ್ಲಿ ವಿಟಮಿನ್ ಡಿ ಇರುತ್ತದೆ. ಬೂತಾಯಿ, ಮೃದ್ವಂಗಿಗಳು, ಸಿಗಡಿ, ಬಂಗುಡೆ ಈ ಮೀನುಗಳಲ್ಲಿ ವಿಟಮಿನ್ ಡಿ ಅಂಶವಿರುತ್ತದೆ.

3. ಬೆಳಸುವ ಅಣಬೆಗಳಿಗಿಂತ ನೈಸರ್ಗಿಕವಾಗಿ ಸಿಗುವ ಅಣಬೆಗಳಲ್ಲಿ ವಿಟಮಿನ್ ಡಿ ಅಧಿಕವಿರುತ್ತದೆ.

4. ಮೀನು ತಿನ್ನದವರು ಮೊಟ್ಟೆಯನ್ನು ತಿಂದರೆ ಅದರಲ್ಲಿ ಸ್ವಲ್ಪ ಪ್ರಮಾಣದ ವಿಟಮಿನ್ ಡಿ ದೊರೆಯುವುದು. ಮೊಟ್ಟೆಯ ಬಿಳಿ ಜತೆಗೆ ಅರಿಶಿಣ ಕೂಡ ತಿನ್ನಿ.

5. ಇನ್ನು ದನದ ಹಾಲು ಕುಡಿಯುವುದು, ಸೋಯಾ ಹಾಲು, ಕಿತ್ತಳೆ ಜ್ಯೂಸ್‌ ಇವುಗಳನ್ನು ಕೂಡ ಡಯಟ್‌ನಲ್ಲಿ ಸೇರಿಸಿ.
ಓಟ್‌ಮೀಲ್ ಹಾಗೂ ಧಾನ್ಯಗಳಲ್ಲಿ ಕೂಡ ಸ್ವಲ್ಪ ಪ್ರಮಾಣದಲ್ಲಿ ವಿಟಮಿನ್ ಡಿ ಇರುತ್ತದೆ.

Continue Reading
Advertisement
Champions Trophy 2025
ಕ್ರೀಡೆ2 mins ago

Champions Trophy 2025: ಚಾಂಪಿಯನ್ಸ್ ಟ್ರೋಫಿಗೆ ಸ್ಥಳ ನಿಗದಿಪಡಿಸಿದ ಪಾಕಿಸ್ತಾನ

Karnataka Weather
ಕರ್ನಾಟಕ44 mins ago

Karnataka Weather: ರಾಯಚೂರಿನಲ್ಲಿ ರಾಜ್ಯದಲ್ಲೇ ಗರಿಷ್ಠ ಉಷ್ಣಾಂಶ ದಾಖಲು; ಇನ್ನೂ 4 ದಿನ ಶಾಖದ ಅಲೆ ಎಚ್ಚರಿಕೆ

Lok Sabha Election
ದೇಶ46 mins ago

3ನೇ ಹಂತದಲ್ಲಿ ಕಣಕ್ಕಿಳಿದ 1,352 ಅಭ್ಯರ್ಥಿಗಳ ಪೈಕಿ 244 ಜನರ ವಿರುದ್ಧ ಕ್ರಿಮಿನಲ್‌ ಕೇಸ್!

Thomas Cup 2024
ಕ್ರೀಡೆ1 hour ago

Thomas Cup 2024: ಕ್ವಾರ್ಟರ್‌ ಫೈನಲ್​ಗೆ ಲಗ್ಗೆಯಿಟ್ಟ ಹಾಲಿ ಚಾಂಪಿಯನ್​ ಭಾರತ

Rameshwaram Cafe blast
ಕರ್ನಾಟಕ2 hours ago

Rameshwaram Cafe Blast: ರಾಮೇಶ್ವರಂ ಕೆಫೆ ಬ್ಲಾಸ್ಟ್‌ ಕೇಸ್‌; ಇಬ್ಬರು ಶಂಕಿತ ಉಗ್ರರಿಗೆ 14 ದಿನ ನ್ಯಾಯಾಂಗ ಬಂಧನ

IPL 2024
ಕ್ರೀಡೆ2 hours ago

IPL 2024: ರಿಂಕು ಸಿಂಗ್​ಗೆ ಬೌಲಿಂಗ್​ ಮಾಡಿದ ಶಾರುಖ್‌ ಪುತ್ರ ಅಬ್ರಾಮ್; ವಿಡಿಯೊ ವೈರಲ್​

Narendra Modi
ದೇಶ2 hours ago

Narendra Modi: ತಾಕತ್ತಿದ್ದವರು 370ನೇ ವಿಧಿ ಜಾರಿಗೆ ತರಲಿ; ಪ್ರತಿಪಕ್ಷಗಳಿಗೆ ಮೋದಿ ಸವಾಲು!

International Labor Day-2024
ಉದ್ಯೋಗ2 hours ago

Labour Day 2024: ಮೇ 1ರ ಕಾರ್ಮಿಕ ದಿನಾಚರಣೆಯ ಹಿನ್ನೆಲೆ ಏನು? ಏನಿದರ ಸಂದೇಶ?

car crossed the divider and collided with a lorry Driver death
ತುಮಕೂರು2 hours ago

Road Accident: ಡಿವೈಡರ್ ದಾಟಿ ಲಾರಿಗೆ ಡಿಕ್ಕಿ ಹೊಡೆದ ಕಾರು; ಚಾಲಕ ಸ್ಥಳದಲ್ಲೇ ಸಾವು

Hassan Pen Drive Case
ಕರ್ನಾಟಕ2 hours ago

Hassan Pen Drive Case: ವಿಚಾರಣೆಗೆ ಕರೆದಾಗ ವಿದೇಶದಿಂದ ಪ್ರಜ್ವಲ್ ಬರುತ್ತಾನೆ ಎಂದ ಎಚ್‌.ಡಿ.ರೇವಣ್ಣ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

PM Narendra modi in Bagalakote and Attack on Congress
Lok Sabha Election 20249 hours ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 202410 hours ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ17 hours ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Narendra Modi
Lok Sabha Election 20241 day ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

PM Narendra Modi in Sirsi
Lok Sabha Election 20241 day ago

PM Narendra Modi: ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

If Congress comes to power all your assets will belong to Government says PM Narendra Modi
Lok Sabha Election 20241 day ago

Narendra Modi: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀವು ಕಷ್ಟಪಟ್ಟು ಸಂಪಾದಿಸಿದ ಆಸ್ತಿಯೆಲ್ಲ ಅನ್ಯರ ಪಾಲು: ಮೋದಿ ಎಚ್ಚರಿಕೆ

Congress ties with Aurangzeb supporters and Girls killed under his rule says Narendra Modi
Lok Sabha Election 20241 day ago

Narendra Modi: ಔರಂಗಜೇಬ್ ಬೆಂಬಲಿಗರ ಜತೆ ಕಾಂಗ್ರೆಸ್ ದೋಸ್ತಿ; ಇವರ ಆಡಳಿತದಲ್ಲಿ ಹೆಣ್ಣು ಮಕ್ಕಳ ಹತ್ಯೆ: ಮೋದಿ ವಾಗ್ದಾಳಿ

Modi in Karnataka stay in Belagavi tomorrow and Huge gatherings at five places
Latest2 days ago

Narendra Modi Live : ಪ್ರಧಾನಿ ಮೋದಿಯ ಬೆಳಗಾವಿ ಪ್ರಚಾರ ಸಭೆಯ ನೇರ ಪ್ರಸಾರವನ್ನು ಇಲ್ಲಿ ವೀಕ್ಷಿಸಿ…

Dina Bhavishya
ಭವಿಷ್ಯ2 days ago

Dina Bhavishya : ಈ ರಾಶಿಯವರಿಗೆ ದಿನದ ಮಟ್ಟಿಗೆ ಖರ್ಚು ಹೆಚ್ಚು

Lok sabha election 2024
Lok Sabha Election 20242 days ago

Lok Sabha Election 2024 : ಮೊಬೈಲ್ ನಿಷೇಧದ ನಡುವೆಯೂ ವೋಟ್‌ ಹಾಕಿದ ವಿಡಿಯೊ ಮಾಡಿದ ಪುಂಡರು

ಟ್ರೆಂಡಿಂಗ್‌