Prerane : ಆತ್ಮ ಪೂಜೋಪನಿಷತ್‌ನಲ್ಲಿ ಧ್ಯಾನದ ಬಗ್ಗೆ ಏನು ಹೇಳಲಾಗಿದೆ ಗೊತ್ತೇ? - Vistara News

ಧಾರ್ಮಿಕ

Prerane : ಆತ್ಮ ಪೂಜೋಪನಿಷತ್‌ನಲ್ಲಿ ಧ್ಯಾನದ ಬಗ್ಗೆ ಏನು ಹೇಳಲಾಗಿದೆ ಗೊತ್ತೇ?

ಎಲ್ಲ ವಸ್ತುಗಳೂ ಪರಮಾತ್ಮನೆ ಎಂಬುದನ್ನು ಕಂಡುಕೊಳ್ಳಬೇಕು. ಸತತವಾದ ಅವಲೋಕನವೆಂದರೆ ಇದೆ, ಈ ಅವಲೋಕನವೇ ಧ್ಯಾನ ಎನ್ನುತ್ತಾರೆ ಸ್ವಾಮಿ ಶ್ರೀ ಕೈವಲ್ಯಾನಂದ ಸರಸ್ವತೀ. ಅವರ ಧ್ಯಾನದ ಕುರಿತ ಲೇಖನ ಇಂದಿನ ಪ್ರೇರಣೆ (Prerane) ಅಂಕಣದಲ್ಲಿ.

VISTARANEWS.COM


on

prerane morning spiritual thoughts in kannada
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಶ್ರೀ ಕೈವಲ್ಯಾನಂದ ಸರಸ್ವತೀ
ಉಪನಿಷತ್ತಗಳಲ್ಲಿ ಕೇವಲ ಹತ್ತು ಆಥವಾ ಹನ್ನೆರಡು ಉಪನಿಷತ್ತುಗಳು ಮಾತ್ರ ವೇದಗಳಲ್ಲಿ ಇರುವಂತೆ ಕಂಡು ಬರುತ್ತವೆ. ಆದರೆ 128 ಉಪನಿಷತ್ತುಗಳ ಪುಸ್ತಕಗಳು ಉಪಲಬ್ದಿಯಲ್ಲಿವೆ. ಇವುಗಳನ್ನು ಯಾರೋ ಮಹನೀಯರು, ವೇದಗಳಲ್ಲಿರುವ ಉಪನಿಷತ್ತುಗಳ ತತ್ವವನ್ನು ಅರಿತು, ಅವರ ಮಾತಿನಲ್ಲೇ ಆ ತತ್ವವನ್ನು ತಿಳಿಸಲು ಬರೆದಿರಬಹುದೆನಿಸುತ್ತದೆ. ಆ ಮಾತುಗಳು ಕೆಲವು ತತ್ವಕ್ಕೆ ಸಮ್ಮತವೂ, ಕೆಲವು ಭಿನ್ನತೆಯುಳ್ಳದ್ದಾಗಿಯೂ ಇರಬಹುದು. ತತ್ವಕ್ಕೆ ವಿರೋಧವಿಲ್ಲದವುಗಳನ್ನು ಚಿಂತನೆ ಮಾಡಿ, ಅರ್ಥಮಾಡಿಕೊಂಡು, ಸ್ವ ಸ್ವರೂಪದಲ್ಲಿ ನಿಲ್ಲಲು ಪ್ರಯತ್ನ ಮಾಡುವುದರಲ್ಲಿ ಯಾವ ದೋಷವೂ ಇಲ್ಲ.

ಅಂತಹ ಉಪನಿಷತ್ತುಗಳಲ್ಲಿ ಆತ್ಮ ಪೂಜೋಪನಿಷತ್ತೆಂಬುದೊಂದು. ಆತ್ಮ ಪೂಜೆ ಎಂದಾಗ ಬಹಳ ಜನ ಶರೀರಕೆಲ್ಲಾ ವಿಭೂತಿ ಬಳಿಯುವುದು ʻʻಓಂ ಆತ್ಮನೇ ನಮಃ’’ ಇತ್ಯಾದಿಯಾಗಿ ಮಂತ್ರಗಳನ್ನು ಹೇಳಿಕೊಂಡು ತಮ್ಮ ತಲೆಯ ಮೇಲೆ ಹೂವು ಇಟ್ಟುಕೊಳ್ಳುವುದು, ಎದೆಗೆ ಆರತಿ ಮಾಡಿಕೊಳ್ಳುವುದು-ಮೊದಲಾದ ಚೇಷ್ಠೆಗಳನ್ನು ಮಾಡುತ್ತಾರೆ. ಆದರೆ ಇದರಿಂದ ʻಆತ್ಮಪೂಜೆ’ ಯಾಗದು. (ಯಾವುದಾದರೂ ಶುಭಕಾರ್ಯಕ್ಕೆ ಮುನ್ನ ಶರೀರ ಶುದ್ದಿಯಾಗಬೇಕೆನ್ನುವುದರಲ್ಲಿ ಭಿನ್ನಾಭಿಪ್ರಾಯವಿಲ್ಲ).

ನಿಜವಾದ ಆತ್ಮಪೂಜೆ ಎಂದರೆ ಏನೆಂಬುದನ್ನು ಈಗ ಚಿಂತಿಸೋಣ. ಆತ್ಮ ಪೂಜೋಪನಿಷತ್ತಿನಲ್ಲಿ ಮೊದಲನೇಯ ಮಂತ್ರ, ʻʻತಸ್ಯ ನಿಶ್ಚಿಂತನಂ ಧ್ಯಾನಮ್’’ ಕಡಿವಡೆಯದ ಅದರ ಚಿಂತನೆ ಧ್ಯಾನ. ನಾವುಗಳು ಪ್ರಪಂಚದ ಮೂರು ಆಯಾಮಗಳಲ್ಲಿ ಜೇವಿಸುತ್ತೇವೆ. ನಾನು ನನ್ನದು ಎಂಬುವುದೊಂದು ವಸ್ತುಗಳ ಪ್ರಪಂಚ. ನಾನು ನನ್ನ ಮನೆ, ನಾನು ನನ್ನ ಪೀಠೊಪಕರಣಗಳು, ನಾನು ನನ್ನ ಸಂಪತ್ತು ಇತ್ಯಾದಿ. ಇದು ನಾನು ನನ್ನದು ಎಂಬ ಸಾಮ್ರಾಜ್ಯ ವಸ್ತುಗಳ ಸಾಮ್ರಾಜ್ಯವು ನನ್ನನ್ನು ಸುತ್ತುವರಿದಿರುತ್ತದೆ. ಮತ್ತೊಂದು ಆಯಾಮವಿದೆ. ನಾನು ನನ್ನವರು, ನಾನು ಹಾಗೂ ನನ್ನ ಪ್ರೇಯಸಿ, ನಾನು ಮತ್ತು ನನ್ನ ಮಿತ್ರ, ನಾನು ಹಾಗೂ ನನ್ನ ಕುಟುಂಬ- ಇದು ವ್ಯಕ್ತಿಗಳನ್ನೊಳಗೊಂಡ ಪ್ರಪಂಚ, ಎರಡನೆಯ ಸಾಮ್ರಾಜ್ಯ. ಸದಾ ಈ ಎರಡು ಕ್ಷೇತ್ರಗಳ ಚಿಂತೆ ಇರುತ್ತದೆ. ಧ್ಯಾನವೆಂದರೆ ನನ್ನ ವಸ್ತುಗಳ ಚಿಂತನೆಯೂ ಅಲ್ಲ.

prerane morning spiritual thoughts in kannada

ಅಥವಾ ನನಗೆ ಸಂಬಂಧಿಸಿದವರ ಚಿಂತನೆಯೂ ಅಲ್ಲ. ಅದರ ಎಂದಾಗ ಇವುಗಳ ಚಿಂತನೆಯಲ್ಲ. ಅದು ವ್ಯಕ್ತಿಯಲ್ಲ ಅಥವಾ ಇದು ಎಂದು ವಿಷಯೀಕರಿಸಿ ಗುರುತಿಸುವ ವಸ್ತುವಲ್ಲ. ಈ ದೇಶ ಕಾಲಕ್ಕೆ ಸಂಬಂಧಿಸಿದ ವಸ್ತುವಲ್ಲ. ಉಪನಿಷತ್ತುಗಳು: ʻʻತತ್ – ಅದು’ ಎಂಬ ಶಬ್ಧವನ್ನು ಪ್ರಯೋಗ ಮಾಡುತ್ತವೆ. ಇದರ ಅರ್ಥ ಯಾವದೋ ಒಂದು ಅತೀತವಾದದ್ದು, ಎಲ್ಲದರ ಆಚೆಗಿರುವುದು, ನಾವಿರುವ ದೇಶಕಾಲದಲ್ಲಿಲ್ಲದ್ದು ವಸ್ತುಗಳೊಂದಿಗಿರುವ ನಮ್ಮ ಸಂಬಂಧದಲ್ಲಿಯಾಗಲಿ, ಅಥವಾ ವ್ಯಕ್ತಿಗಳೊಂದಿಗಿರುವ ನಮ್ಮ ಸಂಬಂಧಗಳಲ್ಲಾಗಲಿ ಇಲ್ಲದ್ದು, ಹೆಸರಿಸಲಾಗದ್ದು.

ಹೆಸರಿಸಿದ್ದೇ ಆದರೆ ಮೇಲಿನ ಎರಡು ಕ್ಷೇತ್ರಗಳಿಗೆ ಸೇರಬೇಕಾಗುತ್ತದೆ. ಆಗ ನಾವು ಅದನ್ನ ಸೀಮಿತಗೊಳಿಸುತ್ತೇವೆ, ಪರಿಚ್ಚಿನ್ನ ಗೊಳಿಸುತ್ತೇವೆ. ಅದನ್ನು ದೇವರೆಂದು ಕರೆದು ಪುನಃ ತಂದೆ, ತಾಯಿ ಎಂದು ಭಕ್ತಿಯಿಂದ ಭಾವಿಸಬಹು ದಾದರೆ, ಅದನ್ನು ಸೀಮಿತಗೊಳಿಸಿದಂತೆ. ಅದಕ್ಕೆ ರೂಪವಿಲ್ಲ, ಒಂದು ಎಲ್ಲೆಯಿಲ್ಲ. ಈ ಕಾರಣದಿಂದ ಅದಕ್ಕೆ ಹೆಸರಿಲ್ಲ. ಆದಕಾರಣ ಉಪನಿಷತ್ತು ʻತತ್ – ಅದು’ ಎಂಬ ಶಬ್ದವನ್ನು ಬಳಸುತ್ತದೆ. (ಬ್ರಹ್ಮಸೂತ್ರಗಳಲ್ಲಿ ʻಜನ್ಮಾಧ್ಯಸ್ಯ ಯತಃ’ ಎಂಬ, ಸೂತ್ರದಲ್ಲಿ ಜಗತ್ತಿನ ಸೃಷ್ಠ ಸ್ಥಿತಿಲಯಗಳು ಯಾವುದರಿಂದ ಆಗುತ್ತವೆಯೋ ಎಂದೂ ಹೇಳಿರುವುದು ಸಹ ಆ ತತ್ ಎಂಬುದನ್ನೇ).

ʻಅದನ್ನು’ ಸತತವಾಗಿ ಸ್ಮೃತಿಯಲ್ಲಿ ಇರಿಸಿಕೊಳ್ಳಲು ಸಾಧ್ಯವಾದಲ್ಲಿ ಆಗ ನೀನು ಧ್ಯಾನದಲ್ಲಿದ್ದಂತೆ. ವಸ್ತುಗಳ ಜತೆಗಿದ್ದಾಗ, ವ್ಯಕ್ತಿಗಳ ಜತೆಗಿದ್ದಾಗ ಅದನ್ನು ಜ್ಞಾಪಿಸಿಕೊ. ಎಲ್ಲಿದ್ದರೂ ಅದರ ಸ್ಮರಣೆಯಿರಲಿ. ಪರಿಚ್ಚಿನ್ನವಾದದ್ದನ್ನು ಪರಿಚ್ಚಿನ್ನವೆಂದು ನೋಡುವುದು ಬೇಡ. ಉಪಾಧಿಯ ಅಂತರಾಳಕ್ಕೆ ಹೋಗಿ ಅಪರಿಚ್ಚಿನ್ನವಾದದ್ದನ್ನು ನೋಡಲು ಪ್ರಯತ್ನಿಸು. ರೂಪವನ್ನು ರೂಪವೆಂದು ನೋಡಬೇಡ. ರೂಪದ ಅಂತರಂಗದ ಒಳಹೊಕ್ಕು ರೂಪರಹಿತವಾದದ್ದನ್ನು ಕಾಣು. ವಸ್ತುವನ್ನು ವಸ್ತವೆಂದು ನೋಡಬೇಡ. ಅವುಗಳ ಆಳಕ್ಕೆ ಹೋಗು, ಅವುಗಳ ಕೇಂದ್ರವನ್ನು ಸ್ಪರ್ಶಿಸು. ʻಅದು’
ವ್ಯಕ್ತವಾಗುವುದು. ಯಾವ ವ್ಯಕ್ತಿಯನ್ನೂ, ಆತನ ವ್ಯಕ್ತಿತ್ವದಲ್ಲಿ ಬಂಧಿತನಾಗಿರುವಂತೆ ಎಂದೂ ನೋಡಬೇಡ. ವ್ಯಕ್ತಿತ್ವವನ್ನು ಭೇದಿಸಿಕೊಂಡು ಆಳಕ್ಕೆ ಹೊಗು ಹಾಗು ಎಲ್ಲದರ ಆಚೆಗಿರುವುದನ್ನು ಗ್ರಹಿಸು. ಸತತವಾದ ಅದರ ಅವಲೋಕನೆಯೇ ಧ್ಯಾನ.

ಆದರೆ ಇದು ಕಷ್ಟ ಸಾಧ್ಯ, ಪ್ರಯಾಸಕರ. ಸತತ ಸ್ಮರಣೆಯಿರಬೇಕು, ಮಧ್ಯೆ ಮಧ್ಯೆ ವ್ಯವಧಾನವಿರಬಾರದು. ಸ್ಮರಣೆ ಬಿಟ್ಟು ಹೋಗಬಾರದು, ಒಂದು ಕ್ಷಣದ ವಿಸ್ಮೃತಿಯೂ ಆಗಬಾರದು. ಇದು ಕಷ್ಚಸಾಧ್ಯ. ಕೆಲವು ಕ್ಷಣಗಳ ಕಾಲ ಹಾಗಿರುವುದೇ ದುಷ್ಕರವಾಗುತ್ತದೆ. ಕಷ್ಟಸಾಧ್ಯವೇಕೆಂದರೆ ನಾವು ನಿದ್ದೆಯಲ್ಲಿದ್ದೇವೆ. ಅನಾದಿ ಮಾಯಾ ನಿದ್ರೆಯಲ್ಲಿದ್ದೇವೆ. ಎಚ್ಚರವೆಂದು ಕೊಂಡಾಗಲೂ, ಅದು ಮಾಯಾ ನಿದ್ರೆಯಲ್ಲಿ ತೋರಿಕೊಂಡ ಕನಸು. ಎಲ್ಲವೂ ಯಾಂತ್ರಿಕವಾಗಿ ನಡೆಯುತ್ತಿದೆ. ಯಾವುದರ ಬಗ್ಗೆಯೂ ನಾವು ಎಚ್ಚರವಾಗಿಲ್ಲ.

ಇಡೀ ಜೀವನದಲ್ಲಿ ಯಾವುದೋ ಒಂದು ಕ್ಷಣ ದ್ವೈತರಹಿತವಾಗಿ, ಅಹಂಕಾರ ರಹಿತವಾಗಿ, ನಿಜವಾದ ಎಚ್ಚರದಲ್ಲಿರುತ್ತೇವೆ. ಇದು ಯಾವುದೂ ಆಕಸ್ಮಿಕವಾದ ನಿಮಿತ್ತದಿಂದ ಆದದ್ದಾದ ಕಾರಣ ಹೆಚ್ಚು ಕಾಲ ಉಳಿಯದು. ಪುನಃ ನಿದ್ದೆ ಮಾಡುತ್ತೇವೆ. ಉಪನಿಷತ್ತು ಸತತವಾದ ಅದರ ಅವಲೋಕನೆಯೇ ಧ್ಯಾನ ಎಂದು ಹೇಳುವಾಗ ಅದರ ಅಭಿಪ್ರಾಯವೇನೆಂದರೆ. ನಿರಂತರವಾಗಿ, ಎಡಬಿಡದೆ ಅದನ್ನು ಎಲ್ಲದರಲ್ಲೂ, ಎಲ್ಲ ಘಟನೆಯಲ್ಲೂ, ಏನಿದೆಯೊ ಅದರಲೆಲ್ಲ, ಹೊರಗೂ, ಒಳಗೂ ಕಾಣಬೇಕು ಎಂಬುದೇ ಆಗಿದೆ. ಇದು ಯಾವಾಗ ಸಾಧ್ಯವೆಂದರೆ ಪ್ರತಿಯೊಂದು ʻಅದರ’ ಸಂಕೇತವಾಗಬೇಕು.

Dhyanam prerane

ಅಥವಾ ಅದೇ ಎಲ್ಲವಾಗಿ ತೋರುತ್ತಿದೆ ಎಂಬ ನಿಶ್ಚಿತ ಜ್ಞಾನವಿರಬೇಕು. ಸತತವಾಗಿ ಅದರ ಸ್ಮರಣೆಮಾಡಬೇಕೆಂದರೆ, ದೈನಂದಿನ ಕಾರ್ಯ ಗಳನ್ನು ಸರಿಯಾಗಿ ಮಾಡಲಾಗದು. ಯಾವುದಾದರೂ ಪರಮಾತ್ಮನ ನಾಮವನ್ನು ಮಾನಸಿಕವಾಗಿ ಉಚ್ಚರಿಸುವುದೆಂದರೆ ಆಗಲೂ ದೈನಂದಿನ ಕಾರ್ಯಕ್ರಮ, ನಾಮಸ್ಮರಣೆ ಎರಡೂ ಸತತವಾಗಿ ನಡೆಯಲಾರವು. ಹಾಗಾದರೆ ಸತತ ಚಿಂತನೆ ಎಂದರೆ ಏನು? ಹೇಗೆ ಸಾಧ್ಯ? ನೀವು ಮಾಡುತ್ತಿರುವ ಪ್ರತಿಯೊಂದರಲ್ಲೂ ʻಅದನ್ನೇ’ ಕಾಣಬೇಕು. ಮಾಡುವ ನೀವು, ಮಾಡುವಿಕೆಗೆ ಉಪಯೋಗಿಸುವ ಸಾಮಗ್ರಿ, ಮಾಡುವಿಕೆ ಸಕಲವೂ ಅದೇ ಎಂದು ಗ್ರಹಿಸಬೇಕು.

ಝೆನ್ ಸಿದ್ದಾಂತದ ಸಂತರಾದ Bokoju ಎಂಬುವರನ್ನು, ತಾವು ಸದಾ ಏನು ಮಾಡುತ್ತೀರ ಎಂದು ಕೇಳಲಾಯಿತು? ಈ ಪ್ರಶ್ನೆಗೆ ಸಮಾಧಾನವಾಗಿ ಅವರು ನಾನು ಯಾವುದನ್ನೂ ನಿರಂತರವಾಗಿ ಮಾಡುವುದಿಲ್ಲ. ಏನನ್ನು ಮಾಡಿದರೂ ಪೂರ್ಣವಾಗಿ ಮಾಡುತ್ತೇನೆ. ಬಾವಿಯಿಂದ ನೀರು ತರಬೇಕಾದರೆ, ನೀರು ತರುತ್ತೇನೆ. ಸೌದೆ ಹೊಡೆಯುವುದಾದರೆ, ಸೌದೆ ಹೊಡೆಯುತ್ತೇನೆ. ನಿದ್ರಿಸುವಾಗ ನಿದ್ರಿಸುತ್ತೇನೆ. ಈ ಕೆಲಸಗಳೆಲ್ಲವನ್ನೂ ಮಾಡುವ ಸಮಯದಲ್ಲಿ ನೀನು ಏನು ಮಾಡುತ್ತಿರುತ್ತೀಯೆ? ಎಂದು ಪ್ರಶ್ನಿಸಲಾಗುತ್ತದೆ.

ಧಾರ್ಮಿಕ ಮತ್ತು ಆಧ್ಯಾತ್ಮಿಕ ಲೇಖನ, ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ.

ನಾನು ಏನನ್ನೂ ಮಾಡುವುದಿಲ್ಲ. ನಾನು ಸೌದೆ ಹೊಡೆಯುತ್ತಿರುವಂತೆ ಕಂಡಾಗ, ಪರಮಾತ್ಮನೇ ಸೌದೆ ಹೊಡೆಯುತ್ತಿದ್ದಾನೆ. ನೀರು ತರುತ್ತಿರುವಂತೆ ಕಂಡಾಗ ಆತನೆ ನೀರು ತರುತ್ತಿದ್ದಾನೆ. ಮತ್ತೇನೆಂದರೆ ತರಲ್ಪಟ್ಟ ನೀರು ಪರಮಾತ್ಮನೆ, ಹೊಡೆಯಲ್ಪಟ್ಟ ಸೌದೆಯೂ ಪರಮಾತ್ಮನೆ. ಈಗ ಪರಮಾತ್ಮನೇ ಇದ್ದಾನೆ, ನಾನಿಲ್ಲ. ನಾನೆಂಬ ಕರ್ತೃವಿಲ್ಲ. ಆದಕಾರಣ ಪ್ರತಿಯೊಂದು ಪೂಜೆಯಾಯಿತು ಹಾಗೂ ಮಾಡುವುದೆಲವೂ ಸರ್ವವೂ ಧ್ಯಾನವಾಯಿತು.
ಇಡೀ ನಿಮ್ಮ ಜೀವನವನ್ನು ಪೂಜೆಯನ್ನಾಗಿ ಪರಿವರ್ತಿಸುವುದೆ ಉಪನಿಷತ್ತಿನ ಗುರಿ. ಒಂದು ವಿಭಿನ್ನ ದೃಷ್ಟಿಯ ಅವಶ್ಯಕತೆ ಇದೆ. ಹೊಸ ದೃಷ್ಟಿ ಎಂದಾಗ ಕಲ್ಲು ಇದೆ. ಅದನ್ನು ಪರಮಾತ್ಮನೆಂದು ಭಾವಿಸುವುದಲ್ಲ. ಮತ್ತೇನೆಂದರೆ ಕಲ್ಲೆಂಬುದು ಬಿದ್ದು ಹೋಗಬೇಕು. ಕೇವಲ ‘ಅದೇ’ ಇದೆ. ‘ಪರಮಾತ್ಮನೇ’ ಇದ್ದಾನೆ. ಇದು ಒಂದು ಗಹನವಾದ ವಾಸ್ತವಿಕತೆಯ ಅರಿವು. ನಿರಂತರವಾದ ಅರಿವು.

ಪರಮಾತ್ಮನನ್ನು ಗ್ರಹಿಸಲು ಪ್ರಾರಂಭಿಸು. ಆ ಇರುವನ್ನು ಗ್ರಹಿಸದೆ ಯಾವ ವಸ್ತುವನ್ನೂ ಮುಟ್ಟಬೇಡ. ಪರಮಾತ್ಮನೆಂಬ ಜ್ಞಾನವಿಲ್ಲದೆ ಯಾವುದನ್ನೂ ಪ್ರೀತಿಸಬೇಡ. ಆ ಜ್ಞಾನವಿಲ್ಲದೆ ಚಲಿಸಬೇಡ. ಉಸಿರಾಡಲು ಬೇಡ. ಪರಮಾತ್ಮನನ್ನು ಎಲ್ಲ ವಸ್ತುಗಳ ಮೇಲೆ ಆರೋಪಿಸಬೇಕೆಂಬುದಲ್ಲ. ಎಲ್ಲ ವಸ್ತುಗಳೂ ಪರಮಾತ್ಮನೆ ಎಂಬುದನ್ನು ಕಂಡುಕೊಳ್ಳಬೇಕು. ಸತತವಾದ ಅವಲೋಕನವೆಂದರೆ ಇದೆ, ಈ ಅವಲೋಕನವೇ ಧ್ಯಾನ.

ಲೇಖಕರು ವೇದಾಂತೋಪದೇಶ ಮಾಡುವ ಪರಿವ್ರಾಜಕರು.

ಇದನ್ನೂ ಓದಿ : Navavidha Bhakti : ನವವಿಧಗಳಲ್ಲಿ ಭಗವಂತನನ್ನು ಪ್ರೀತಿಸೋಣ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಧಾರ್ಮಿಕ

Vastu Tips: ವಾಸ್ತು ಶಾಸ್ತ್ರದ ಪ್ರಕಾರ ಪ್ರೀತಿ ಪಾತ್ರರಿಗೆ ನೀಡುವ ಉಡುಗೊರೆಗಳು ಹೀಗಿರಬೇಕು

ನಮ್ಮ ದೈನಂದಿನ ಜೀವನದಲ್ಲಿ ವಾಸ್ತು ಶಾಸ್ತ್ರದ (Vastu Tips) ಪ್ರಭಾವವು ಗಾಢವಾಗಿದೆ. ಮನೆ ಅಥವಾ ಕಾರ್ಯಸ್ಥಳದೊಳಗೆ ಸರಿಯಾದ ವಸ್ತುಗಳನ್ನು ಸರಿಯಾದ ಸ್ಥಳಗಳಲ್ಲಿ ಇರಿಸಿದಾಗ ಅವು ಶಕ್ತಿಯ ಹರಿವನ್ನು ಸಮನ್ವಯಗೊಳಿಸುತ್ತವೆ. ಉತ್ತಮ ಆರೋಗ್ಯ, ಆರ್ಥಿಕ ಸ್ಥಿರತೆ ಮತ್ತು ಸಂತೋಷವನ್ನು ನೀಡುವ ಉಡುಗೊರೆಗಳನ್ನು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದ್ದು, ಪ್ರೀತಿಪಾತ್ರರಿಗೆ ಉಡುಗೊರೆಗಳನ್ನು ನೀಡುವಾಗ ಹೆಚ್ಚು ಚಿಂತೆ ಮಾಡದೇ ಇವುಗಳನ್ನು ಆಯ್ಕೆ ಮಾಡಬಹುದು.

VISTARANEWS.COM


on

By

Vastu Tips
Koo

ಉಡುಗೊರೆಗಳನ್ನು (Gift) ಸ್ವೀಕರಿಸುವುದು ಯಾರಿಗೆ ಇಷ್ಟವಿಲ್ಲ? ಪ್ರತಿಯೊಬ್ಬರೂ ಉಡುಗೊರೆ ನೀಡುವಾಗ ಅದು ತೆಗೆದುಕೊಳ್ಳುವವರ ಮನಕ್ಕೆ ಇಷ್ಟವಾಗುವಂತಿರಬೇಕು ಎಂದು ಎಲ್ಲರೂ ಬಯಸುತ್ತಾರೆ. ಉಡುಗೊರೆಗಳು ಪ್ರೀತಿಯ ಶುದ್ಧ ಸೂಚಕವಾಗಿದೆ ಮತ್ತು ಅವು ಭಾವನಾತ್ಮಕ ಮತ್ತು ಆಂತರಿಕ ಮೌಲ್ಯವನ್ನು ಹೊಂದಿರುತ್ತದೆ. ಹೀಗಾಗಿ ಪ್ರೀತಿ ಪಾತ್ರರಿಗೆ ಉಡುಗೊರೆಗಳನ್ನು ಆಯ್ಕೆ ಮಾಡುವಾಗ ಯೋಚನೆ ಕಾಡುವುದು ಸಹಜ.

ನಾವು ಕೊಡುವ ಉಡುಗೊರೆಯು ಸ್ವೀಕರಿಸುವವರ ಜೀವನಕ್ಕೆ ಸಮೃದ್ಧಿ (prosperity), ಸಕಾರಾತ್ಮಕತೆ (positivity) ಮತ್ತು ಸಾಮರಸ್ಯವನ್ನು (harmony) ತರುವಂತೆ ಇರಬೇಕು ಎನ್ನುತ್ತದೆ ವಾಸ್ತುಶಾಸ್ತ್ರ (Vastu Tips). ಉಡುಗೊರೆಗಳನ್ನು ಆಯ್ಕೆ ಮಾಡಲು ವಾಸ್ತು ಶಾಸ್ತ್ರವು ಕೆಲವೊಂದು ಮಾರ್ಗದರ್ಶನವನ್ನು ನೀಡುತ್ತದೆ.

ವಾಸ್ತು ತತ್ತ್ವಗಳೊಂದಿಗೆ ಜೋಡಿಸಲಾದ ಉಡುಗೊರೆಯನ್ನು ಪ್ರೀತಿ ಪಾತ್ರರಿಗೆ ನೀಡಿದಾಗ ಇದು ಕೇವಲ ವಸ್ತುವನ್ನು ನೀಡುವುದಿಲ್ಲ. ಅದರೊಂದಿಗೆ ಅದೃಷ್ಟ ಮತ್ತು ಧನಾತ್ಮಕ ಶಕ್ತಿಯನ್ನು ನೀಡುತ್ತೀರಿ.

ಸ್ವೀಕರಿಸುವವರ ಯೋಗಕ್ಷೇಮ ಮತ್ತು ಯಶಸ್ಸನ್ನು ಹೆಚ್ಚಿಸುವ ನಿರ್ದಿಷ್ಟ ಉಡುಗೊರೆಗಳನ್ನು ವಾಸ್ತು ಶಾಸ್ತ್ರವು ಸೂಚಿಸುತ್ತದೆ. ಈ ಉಡುಗೊರೆಗಳು ಯಾವುದೇ ಚಿಂತೆ ಇಲ್ಲದೆ ಆಯ್ಕೆ ಮಾಡಬಹುದು. ಇದು ಉಡುಗೊರೆ ಸ್ವೀಕರಿಸುವವರ ಪರಿಸರದಲ್ಲಿನ ಶಕ್ತಿಯನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ. ಜೀವನದ ವಿವಿಧ ಅಂಶಗಳಲ್ಲಿ ಅವರಿಗೆ ಅನುಕೂಲಕರವಾಗಿರುತ್ತದೆ.

ಸಮೃದ್ಧಿ ಮತ್ತು ಸಕಾರಾತ್ಮಕತೆಯನ್ನು ತರುವ 7 ಅದೃಷ್ಟದ ಉಡುಗೊರೆಗಳು

ಲಾಫಿಂಗ್ ಬುದ್ಧ

ಲಾಫಿಂಗ್ ಬುದ್ಧ ಅನೇಕರ ಕಚೇರಿ ಮತ್ತು ಮನೆಗಳಲ್ಲಿ ಕಂಡುಬರುವ ಜನಪ್ರಿಯ ಅಲಂಕಾರಿಕ ವಸ್ತುವಾಗಿದೆ. ಹರ್ಷಚಿತ್ತದ ವ್ಯಕ್ತಿ ಯಾವುದೇ ಜಾಗದಲ್ಲಿ ಸಂತೋಷವನ್ನು ತರುತ್ತದೆ ಎನ್ನುವ ನಂಬಿಕೆ ಇದೆ. ಫೆಂಗ್ ಶೂಯಿ ತತ್ತ್ವಗಳ ಪ್ರಕಾರ ರೋಮಾಂಚಕ ಮತ್ತು ಮಂಗಳಕರ ಶಕ್ತಿಯನ್ನು ಇದು ಸೃಷ್ಟಿಸುತ್ತದೆ.


ಗಣೇಶ ವಿಗ್ರಹ

ಗಣೇಶ ಹೊಸ ಆರಂಭ ಮತ್ತು ಯಶಸ್ಸಿನ ದೇವರು. ಗಣೇಶನ ಪ್ರತಿಮೆಯನ್ನು ನೀಡುವುದು ಉಡುಗೊರೆ ಸ್ವೀಕರಿಸುವವರಿಗೆ ಆಶೀರ್ವಾದವನ್ನು ಕೊಡುತ್ತದೆ. ಈ ಪ್ರತಿಮೆಯು ಶಕ್ತಿ, ಬುದ್ಧಿವಂತಿಕೆ ಮತ್ತು ಜೀವನದಲ್ಲಿ ಸವಾಲುಗಳನ್ನು ಜಯಿಸುವ ಸಾಮರ್ಥ್ಯವನ್ನು ಪ್ರತಿನಿಧಿಸುತ್ತದೆ.


ಶ್ರೀ ಮೇರು ಯಂತ್ರ

ಮೇರು ಶ್ರೀ ಯಂತ್ರವು ತನ್ನ ಆರಾಧಕರಿಗೆ ಶಾಂತಿ, ಸಂತೋಷ, ಜನಪ್ರಿಯತೆ, ಶಕ್ತಿ, ಅಧಿಕಾರ, ಸಂಪತ್ತು, ಸಮೃದ್ಧಿ ಮತ್ತು ಯಶಸ್ಸನ್ನು ತರುತ್ತದೆ. ಸಮರ್ಪಣೆ ಮತ್ತು ನಂಬಿಕೆಯಿಂದ ಇದನ್ನು ಪೂಜಿಸಿದರೆ ಆಶೀರ್ವಾದ ಸಿಗುತ್ತದೆ ಎನ್ನುವ ನಂಬಿಕೆ ಇದೆ.


ರಾಧಾ ಕೃಷ್ಣನ ವಿಗ್ರಹ

ಶುಭ ಸೂಚಕವಾಗಿ ರಾಧಾ ಕೃಷ್ಣನ ವಿಗ್ರಹವನ್ನು ಉಡುಗೊರೆಯಾಗಿ ನೀಡಬಹುದು. ಇದು ನಿಮ್ಮ ಜೀವನದಲ್ಲಿ ಆಳವಾದ ಶಾಂತಿ, ಸಮೃದ್ಧ ಪ್ರೀತಿ ಮತ್ತು ಬಲವಾದ ಸಮರ್ಪಣೆಯನ್ನು ತರುತ್ತದೆ ಎಂದು ಹೇಳಲಾಗುತ್ತದೆ.

ವಾಸ್ತು ಆಮೆ

ಆಮೆಗಳು ಅದೃಷ್ಟ ಮತ್ತು ದೀರ್ಘಾಯುಷ್ಯವನ್ನು ಪ್ರತಿನಿಧಿಸುತ್ತವೆ. ಆದ್ದರಿಂದ, ಗಾಜಿನ ಅಥವಾ ಸ್ಫಟಿಕ ಆಮೆಯನ್ನು ಉಡುಗೊರೆಯಾಗಿ ನೀಡುವುದು ಅವರಿಗೆ ಮಾಡುವ ಯಾವುದೇ ಕೆಲಸದಲ್ಲಿ ಅದೃಷ್ಟ ಮತ್ತು ಯಶಸ್ಸನ್ನು ತರುತ್ತದೆ.

ಚೈಮ್ಸ್

ವಿಂಡ್ ಚೈಮ್ ಗಳು ಕೇವಲ ಅಲಂಕಾರಕ್ಕಾಗಿ ಮಾತ್ರವಲ್ಲ. ಅವುಗಳು ಅದೃಷ್ಟ, ಸಮೃದ್ಧಿ ಮತ್ತು ಪಾಲಿಸಬೇಕಾದ ನೆನಪುಗಳನ್ನು ಸಂಕೇತಿಸುತ್ತವೆ. ಅದರ ಸುಮಧುರ ರಾಗಗಳು ಮನಸ್ಸನ್ನು ಶಾಂತಗೊಳಿಸುತ್ತದೆ. ಉತ್ಸಾಹವನ್ನು ಹೆಚ್ಚಿಸುತ್ತವೆ. ಮನೆಗೆ ಧನಾತ್ಮಕ ಶಕ್ತಿ ಮತ್ತು ಶಾಂತಿಯುತ ವಾತಾವರಣವನ್ನು ತುಂಬುತ್ತದೆ.

ಇದನ್ನೂ ಓದಿ: Vastu Tips: ಆರ್ಥಿಕ ಪ್ರಗತಿಗೆ ಈ ವಾಸ್ತು ಟಿಪ್ಸ್‌ ಫಾಲೋ ಮಾಡಿ


ಗೋಮತಿ ಚಕ್ರ ವೃಕ್ಷ

ಗೋಮತಿ ಚಕ್ರವನ್ನು ಉಡುಗೊರೆಯಾಗಿ ನೀಡುವುದು ಆಧ್ಯಾತ್ಮಿಕ ಮಹತ್ವದಿಂದ ತುಂಬಿದ ಅರ್ಥಪೂರ್ಣ ಸೂಚಕವಾಗಿದೆ. ಗೋಮತಿ ನದಿಯಲ್ಲಿ ಹೆಚ್ಚಾಗಿ ಕಂಡುಬರುವ ಈ ಪವಿತ್ರ ಕಲ್ಲುಗಳು ಸಕಾರಾತ್ಮಕ ಶಕ್ತಿ ಮತ್ತು ರಕ್ಷಣಾತ್ಮಕ ಗುಣಗಳಿಂದ ಮೌಲ್ಯಯುತವಾಗಿವೆ. ಗೋಮತಿ ಚಕ್ರವನ್ನು ನೀಡುವುದು ಸ್ವೀಕರಿಸುವವರಿಗೆ ಸಮೃದ್ಧಿ ಮತ್ತು ಅದೃಷ್ಟವನ್ನು ಆಶೀರ್ವಾದಿಸುತ್ತದೆ.

Continue Reading

ಬೆಳಗಾವಿ

Belagavi News: ಬೆಳಗಾವಿಯಲ್ಲಿ ಮೇ 29ರಿಂದ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದ 11ನೇ ವಾರ್ಷಿಕ ಮಹೋತ್ಸವ

Belagavi News: ಬೆಳಗಾವಿಯ ವಡಗಾವಿ ಯಳ್ಳೂರು ರಸ್ತೆಯ ಶ್ರೀ ಅನ್ನಪೂರ್ಣೇಶ್ವರಿ ನಗರದಲ್ಲಿರುವ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದ 11 ನೇ ವಾರ್ಷಿಕ ಮಹೋತ್ಸವವು ಇದೇ ಮೇ 29 ರಿಂದ ಮೇ 31 ರವರೆಗೆ ನಡೆಯಲಿದೆ ಎಂದು ದೇವಸ್ಥಾನದ ಧರ್ಮದರ್ಶಿ ರವಿರಾಜ ಹೆಗ್ಡೆ ತಿಳಿಸಿದ್ದಾರೆ.

VISTARANEWS.COM


on

11th Annual Mahotsav of Sri Annapurneswari Temple in Belagavi from 29th May
Koo

ಬೆಳಗಾವಿ: ಬೆಳಗಾವಿಯ ವಡಗಾವಿ ಯಳ್ಳೂರು ರಸ್ತೆಯ ಶ್ರೀ ಅನ್ನಪೂರ್ಣೇಶ್ವರಿ ನಗರದಲ್ಲಿರುವ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದ 11ನೇ ವಾರ್ಷಿಕ ಮಹೋತ್ಸವವು ಇದೇ ಮೇ 29 ರಿಂದ ಮೇ 31 ರವರೆಗೆ ನಡೆಯಲಿದೆ ಎಂದು ದೇವಸ್ಥಾನದ ಧರ್ಮದರ್ಶಿ ರವಿರಾಜ ಹೆಗ್ಡೆ (Belagavi News) ತಿಳಿಸಿದ್ದಾರೆ.

ಇದನ್ನೂ ಓದಿ: Fortis Hospital: ವಿಶ್ವದಲ್ಲೇ ಮೊದಲ ಬಾರಿಗೆ 3 ವಿಭಿನ್ನ ಕಾಯಿಲೆಗೆ ಏಕಕಾಲದಲ್ಲೇ ಯಶಸ್ವಿ ಶಸ್ತ್ರಚಿಕಿತ್ಸೆ

ಮೇ 29 ರಂದು ಬೆಳಗ್ಗೆ 6 ಗಂಟೆಗೆ ಶ್ರೀ ಅನ್ನಪೂರ್ಣೇಶ್ವರಿ ಸಹಿತ ಪರಿವಾರ ದೇವರಿಗೆ ಕಲಶಾಭಿಷೇಕ, 8 ಕ್ಕೆ ನಾಗದೇವರ ಬಿಂಬ ಪ್ರತಿಷ್ಠಾಪನೆ, ಕಲಶಾಭಿಷೇಕ ಮಹಾಪೂಜೆ, ಮಧ್ಯಾಹ್ನ 12 ಕ್ಕೆ ಮಹಾಪೂಜೆ, ಪ್ರಸನ್ನ ಪೂಜೆ, ಪ್ರಸಾದ, ಸಂಜೆ 5 ರಿಂದ ರಂಗ ಪೂಜೆ ಶ್ರೀ ದೇವಿಯ ಪಲ್ಲಕ್ಕಿ- ಮೆರವಣಿಗೆ, ದೀಪೋತ್ಸವ ನಡೆಯಲಿದೆ.

ಮೇ 30 ರಂದು ಬೆಳಗ್ಗೆ 7 ಕ್ಕೆ ಸಂಪ್ರೋಕ್ಷಣೆ, ಅನ್ನಪೂರ್ಣೇಶ್ವರಿ ಯಾಗ, ಸುಬ್ರಮಣ್ಯ ದೇವರಿಗೆ ಆಶ್ಲೇಷ ಬಲಿ, 8.30 ಕ್ಕೆ ಮಹಾ ಚಂಡಿಕಾ ಯಾಗ, ಸಂಜೆ 6 ಕ್ಕೆ ಕೀರ್ತನಾಕಾರರಿಂದ ಕೀರ್ತನೆ, ವ್ಯಾಖ್ಯಾನ ನಡೆಯಲಿದೆ.

ಇದನ್ನೂ ಓದಿ: New Financial Rules: ಜೂನ್ 1ರಿಂದ ಏನೆಲ್ಲಾ ಬದಲಾವಣೆಗಳಾಗಲಿವೆ ಗೊತ್ತಿದೆಯೆ?

ಮೇ 31 ರಂದು ಬೆಳಗ್ಗೆ 9 ಕ್ಕೆ ದೇವಿಗೆ ವಿಶೇಷ ಅಲಂಕಾರ, ಪೂಜಾರಾಧನೆ, 10 ಕ್ಕೆ ಭಜನಾ ಮಂಡಳಿಯಿಂದ ಭಜನೆ, ಮಧ್ಯಾಹ್ನ 1 ರಿಂದ 3 ಗಂಟೆವರೆಗೆ ಮಹಾಪ್ರಸಾದ ನಡೆಯಲಿದೆ ಎಂದು ದೇವಸ್ಥಾನದ ಧರ್ಮದರ್ಶಿ ರವಿರಾಜ ಹೆಗ್ಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Continue Reading

ಬೆಂಗಳೂರು

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Basavanagudi News : ಬಸವನಗುಡಿ ದೊಡ್ಡ ಗಣಪತಿ ದೇವಸ್ಥಾನದಲ್ಲಿರುವ (Dodda Ganapathi Temple) ಮಳಿಗೆಗಳಲ್ಲಿ ಪೂಜಾ ಸಾಮಗ್ರಿಗಳನ್ನು ಒನ್‌ ಟು ಡಬಲ್‌ ರೇಟ್‌ಗೆ ಮಾರಾಟ ಮಾಡಲಾಗುತ್ತಿದೆ ಎನ್ನಲಾಗಿದೆ. ಹೀಗಾಗಿ ಭಕ್ತಾಧಿಗಳು ಹಾಗೂ ವ್ಯಾಪಾರಿಗಳ ನಡುವೆ ಗಲಾಟೆ ನಡೆದಿದ್ದು, ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿತ್ತು.

VISTARANEWS.COM


on

By

Basavanagudi News
Koo

ಬೆಂಗಳೂರು: ಬೆಂಗಳೂರಿನ ಪ್ರಸಿದ್ಧ ಬಸವನಗುಡಿ ದೊಡ್ಡ ಗಣಪತಿ ದೇವಸ್ಥಾನದಲ್ಲಿ (Basavanagudi News) ಭಕ್ತಾದಿಗಳು ಹಾಗೂ ಮಳಿಗೆ ವ್ಯಾಪಾರಿಗಳ ನಡುವೆ ಗಲಾಟೆ ನಡೆದಿದೆ. ದೇವಸ್ಥಾನದಲ್ಲಿರುವ (Dodda Ganapathi Temple) ಮಳಿಗೆಯಲ್ಲಿ ಪೂಜಾ ಸಾಮಗ್ರಿಗಳು ದುಬಾರಿ ಬೆಲೆಗೆ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.

ಕಳೆದ ಕೆಲವು ತಿಂಗಳಿಂದ ಪೂಜಾ ಸಾಮಗ್ರಿಗಳ ಬೆಲೆ ಕೇಳಿ ಭಕ್ತಾದಿಗಳು ಶಾಕ್ ಆಗಿದ್ದರು. ಮನಸೋ ಇಚ್ಛೆ ವಸೂಲಿ ಮಾಡಲಾಗುತ್ತಿದೆ ಎಂಬ ದೂರು ಕೂಡ ಕೇಳಿಬಂದಿತ್ತು. ಹೂವು, ಹಣ್ಣು, ಕಡ್ಡಿ, ಕರ್ಪೂರ ಸೇರಿದ 70-80 ರೂಪಾಯಿಯ ಒಂದು ಸಣ್ಣ ಕಿಟ್ ಅನ್ನು ಬರೋಬ್ಬರಿ 150 ರೂಪಾಯಿಗೆ ಸೇಲ್ ಮಾಡಲಾಗುತ್ತಿದೆ. ಇದೊಂಥರಾ ಹಗಲು ದರೋಡೆ ಅಂದರೆ ತಪ್ಪಾಗಲ್ಲ.

ದುಬಾರಿ ಬೆಲೆಗೆ ಮಾರಾಟ ಮಾಡುತ್ತಿರುವ ಹಿನ್ನೆಲೆಯಲ್ಲಿ ಭಕ್ತಾಧಿಗಳು ಇದನ್ನೂ ಪ್ರಶ್ನಸಿದ್ದಾರೆ. ಈ ವೇಳೆ ಭಕ್ತರು ಹಾಗೂ ಮಳಿಗೆ ವ್ಯಾಪಾರಿಗಳ ಮಧ್ಯೆ ಮಾತಿನ ಚಕಮಕಿ ನಡೆದು, ಕೈ ಕೈ ಮಿಲಾಯಿಸುವ ಹಂತಕ್ಕೆ ಗಲಾಟೆ ನಡೆದಿದೆ. ಟೆಂಟರ್‌ಗೆ ಹೆಚ್ಚು ಹಣವನ್ನು ಕೊಟ್ಟಿದ್ದೀವಿ, ಹೀಗಾಗಿ ಹೆಚ್ಚುವರಿ ಹಣ ತೆಗೆದುಕೊಳ್ಳುತ್ತಿವಿ. ಮಾರುಕಟ್ಟೆಯಲ್ಲಿ ಹೂ-ತೆಂಗಿನಕಾಯಿ ದಿನಕ್ಕೊಂದು ದರ ಇರುತ್ತದೆ, ನಾವೇನು ಮಾಡೋಣ ಎಂದು ಮಳಿಗೆ ವ್ಯಾಪಾರಿಗಳು ವಾದವಾಗಿದೆ.

ಇತ್ತ 2 ಬಾಳೆಹಣ್ಣು, ತೆಂಗಿನಕಾಯಿ, ಅಗರಬತ್ತಿ, ಹೂವಿ ಇರುವು ಪೂಜಾ ಸಾಮಗ್ರಿಗೆ ಬರೋಬ್ಬರಿ 150-300 ರೂ. ವ್ಯಾಪಾರಿಗಳು ಭಕ್ತರಿಂದ ಪಡೆಯುತ್ತಿದ್ದಾರೆ. ಇದರಿಂದ ರೊಚ್ಚಿಗೆದ್ದ ಭಕ್ತರು, ವ್ಯಾಪಾರಿಗಳೊಂದಿಗೆ ವಾಗ್ವಾದಕ್ಕಿಳಿದರು. ಇದನ್ನು ಕೇಳಬೇಕಿದ್ದ ಮುಜರಾಯಿ ಕಣ್ಮುಚ್ಚಿ ಕುಳಿತಿದೆ. ಇದರ ಪರಿಣಾಮ ಭಕ್ತರ ಜೇಬು ಖಾಲಿ ಆಗುತ್ತಿದ್ದು, ವಿಧಿಯಿಲ್ಲದೆ ದುಬಾರಿ ಹಣ ತೆರಬೇಕಾಗುತ್ತಿದೆ.

ಇದನ್ನೂ ಓದಿ: Raichur News : ಸಾಲದ ಸುಳಿಗೆ ಸಿಲುಕಿದ ಸ್ನೇಹಿತೆಗೆ ಕೊಟ್ಟಳು 10 ತೊಲೆ ಬಂಗಾರ! ‘ಕಳ್ಳತನ’ ನಾಟಕವಾಡಿದ ಗೆಳತಿಯರು ಲಾಕ್‌

Theft Case : ಚಿನ್ನ ಕದಿಯಲು ಬಂದು ಮದುವೆ ಮನೆಯವರಿಂದ ಧರ್ಮದೇಟು ತಿಂದ ಕಳ್ಳ

ಚಿಕ್ಕಬಳ್ಳಾಪುರ: ಮದುವೆ ಮನೆಗೆ ಬಂದ ಕಳ್ಳನಿಗೆ (Theft Case ) ವರ ಹಾಗೂ ವಧುವಿನ ಕಡೆಯವರು ಭರಪೂರ ಉಡುಗೊರೆ ಕೊಟ್ಟಿದ್ದಾರೆ. ಮದುವೆ ಮನೆಯೊಳಗೆ ನುಗ್ಗಿದ ಕಳ್ಳನೊಬ್ಬ ಮಹಿಳೆ ಬಳಿ ಚಿನ್ನದ ಸರ ಕದಿಯುವಾಗಲೇ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾನೆ.

ಕಳ್ಳನನ್ನು ಹಿಡಿದ ಮದುವೆ ಮನೆಯವರು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ನಗರ ಹೊರವಲಯದ ಬೈಪಾಸ್ ರಸ್ತೆಯಲ್ಲಿರುವ ಸಾಯಿಕೃಷ್ಣ ಫಂಕ್ಷನ್ ಹಾಲ್‌ನಲ್ಲಿ ಘಟನೆ ನಡೆದಿದೆ.

ಸರ ಕದ್ದ ಆರೋಪಿಯನ್ನು ಆಂದ್ರಪ್ರದೇಶದ ಮುಲ್ಲಮೋತುಕಪಲ್ಲಿ ಗ್ರಾಮದ ಪಿ. ನರೇಶ್ ಎಂದು ತಿಳಿದು ಬಂದಿದೆ. ಮದುವೆ ಮನೆಯಲ್ಲಿ ಮಹಿಳೆ ಬಟ್ಟೆ ಬದಲಿಸುವ ವೇಳೆ ನರೇಶ್ ಚಿನ್ನದ ಸರ ಕದಿಯಲು ಯತ್ನಿಸಿದ್ದ. ಆದರೆ ಇದನ್ನೂ ಗಮನಿಸಿದ ಮಹಿಳೆ ಕೂಡಲೇ ಕಿರುಚಾಡಿದ್ದು, ತಪ್ಪಿಸಿಕೊಂಡು ಓಡಾಡುತ್ತಿದ್ದ ನರೇಶ್‌ನನ್ನು ಹಿಡಿದು ಥಳಿಸಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಗೌರಿಬಿದನೂರು ನಗರದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಬೆಳಗ್ಗೆ ಕೋಳಿ ಕುಯ್ಯುತ್ತಾರೆ, ರಾತ್ರಿಯಾದರೆ ಸುಲಿಗೆಗೆ ಇಳಿಯುತ್ತಾರೆ!

ಬೆಂಗಳೂರು: ಸಾರಾಯಿಪಾಳ್ಯದ ಕೋಳಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಖರ್ತನಾಕ್‌ ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ. ರಿಯಾಝ್ ಖಾನ್ ಹಾಗು ವಸೀಂ ಫಿರೋಝ್ ಬಂಧಿತ ಆರೋಪಿಗಳು.

ಬೆಳಗಿನಿಂದ ಸಂಜೆ ತನಕ ಕೋಳಿ ಅಂಗಡಿಯಲ್ಲಿ ಕೋಳಿ ಕುಯ್ಯುವ ಕೆಲಸ ಮಾಡಿದರೆ, ರಾತ್ರಿಯಾದರೆ ಸಾಕು ಸುಲಿಗೆಗೆ ಇಳಿಯುತ್ತಿದ್ದರು. ಇತ್ತೀಚಿಗೆ ಸ್ಕೂಟರ್‌ನಲ್ಲಿ ಬಂದಿದ್ದ ಇವರಿಬ್ಬರು, ಅಮ್ಮೇಜಾನ್ ಎಂಬುವವರ ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದರು.

ಈ ಸಂಬಂಧ ಅಮ್ಮೇಜಾನ್‌ ಅವರು ದೂರು ದಾಖಲಿಸಿದ್ದರು. ದೂರು ಬಂದ ಹಿನ್ನೆಲೆಯಲ್ಲಿ ತನಿಖೆ ನಡೆಸಿದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಸದ್ಯ ಆರೋಪಿಗಳನ್ನು ಹೆಚ್ಚಿನ ತನಿಖೆಗೆ ಒಳಪಡಿಸಿರುವ ಬಾಣಸವಾಡಿ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಕರ್ನಾಟಕ

Siddaramaiah: ನೀವು 2 ಸಾವಿರ ಕೊಟ್ಟಿದ್ದಕ್ಕೆ ದೇವರ ದರ್ಶನ; ಧರ್ಮಸ್ಥಳದಲ್ಲಿ ಸಿದ್ದರಾಮಯ್ಯಗೆ ಸ್ತ್ರೀಯರ ಮೆಚ್ಚುಗೆ

Siddaramaiah: ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್‌ ಆಗಮನ ಹಿನ್ನೆಲೆಯಲ್ಲಿ ದೇವಸ್ಥಾನ ಪ್ರವೇಶಕ್ಕೆ ಭಕ್ತರಿಗೆ ಅರ್ಧ ಗಂಟೆಯಿಂದ ನಿರ್ಬಂಧವನ್ನು ವಿಧಿಸಲಾಗಿತ್ತು. ಮೊದಲೇ ಸಾಲುಗಟ್ಟಿ ನಿಂತಿದ್ದ ಭಕ್ತರಿಗೆ ಮತ್ತೆ ಕಾಯುವುದು ಶಿಕ್ಷೆಯಾಗಿ ಪರಿಣಮಿಸಿತು. ಸಿಎಂ, ಡಿಸಿಎಂ ಬರಲು ಸಾಕಷ್ಟು ಸಮಯ ಇದ್ದರೂ ಅವಧಿಗೆ ಮುನ್ನವೇ ಭಕ್ತರನ್ನು ತಡೆಯಲಾಗಿತ್ತು. ಕಾದು ಕಾದು ಸುಸ್ತಾಗಿದ್ದ ಭಕ್ತರ ಸಿಟ್ಟು ನೆತ್ತಿಗೇರಿತ್ತು. ರಾಜಕಾರಣಿಗಳ ಕಾರಣದಿಂದಾಗಿ ದೇವರ ದರ್ಶನಕ್ಕೂ ಇಷ್ಟು ಕಾಯಬೇಕಲ್ಲ ಎಂದು ಹಿಡಿಶಾಪ ಹಾಕಿದ್ದು ಕೂಡ ಕಂಡುಬಂತು.

VISTARANEWS.COM


on

Siddaramaiah
Koo

ಮಂಗಳೂರು: ಲೋಕಸಭೆ ಚುನಾವಣೆ ಪ್ರಚಾರದ ಭರಾಟೆ ಮುಗಿದು, ತುಸು ನಿರಾಳರಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್‌ (DK Shivakumar) ಅವರು ಶನಿವಾರ (ಮೇ 25) ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ (Dharmasthala) ತೆರಳಿ, ದೇವರ ಆಶೀರ್ವಾದ ಪಡೆದರು. ಅಲ್ಲದೆ, ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರನ್ನೂ ಭೇಟಿಯಾದರು. ಇದೇ ವೇಳೆ, ಗೃಹಲಕ್ಷ್ಮೀ ಯೋಜನೆ ಅಡಿಯಲ್ಲಿ ಗೃಹಿಣಿಯರಿಗೆ ಮಾಸಿಕ 2 ಸಾವಿರ ರೂ. ನೀಡುವ ತೀರ್ಮಾನದ ಕುರಿತು ಸಿದ್ದರಾಮಯ್ಯ ಅವರಿಗೆ ಹಲವು ಹೆಣ್ಣುಮಕ್ಕಳು ಮೆಚ್ಚುಗೆ ವ್ಯಕ್ತಪಡಿಸಿದರು. ಈ ಕುರಿತು ಸಿದ್ದರಾಮಯ್ಯ ಅವರೇ ಪೋಸ್ಟ್‌ ಮಾಡಿದ್ದಾರೆ.

ಧರ್ಮಸ್ಥಳ ಭೇಟಿ, ಮಹಿಳೆಯರ ಮೆಚ್ಚುಗೆ ಕುರಿತು ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ಸಿದ್ದರಾಮಯ್ಯ ಅವರು ಫೋಟೊಗಳ ಸಮೇತ ಪೋಸ್ಟ್‌ ಮಾಡಿದ್ದಾರೆ. “ಇಂದು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ದೇವರ ದರ್ಶನಕ್ಕೆ ತೆರಳುವ ಸಂದರ್ಭದಲ್ಲಿ ಕೆಲವು ಮಹಿಳೆಯರು ನಗುಮೊಗದಲ್ಲಿ ನನ್ನ ಬಳಿ ಬಂದು ಗೃಹಲಕ್ಷ್ಮೀ ಯೋಜನೆಯ 2,000 ರೂಪಾಯಿಯಿಂದ ನಾವು ನೆಮ್ಮದಿಯ ಬದುಕು ಕಟ್ಟಿಕೊಂಡಿದ್ದೇವೆ, ನೀವು ಶಕ್ತಿ ಯೋಜನೆ ಜಾರಿ ಮಾಡಿದ್ದರಿಂದ ಇಂದು ನಾವು ದೂರದ ಊರಿನಿಂದ ದೇವರ ದರ್ಶನಕ್ಕೆ ಬರಲು ಅನುಕೂಲ ಆಗಿದೆ, ನಿಮಗೆ ಮಂಜುನಾಥ ಸ್ವಾಮಿ ದೀರ್ಘ ಆಯಸ್ಸು, ಆರೋಗ್ಯ ನೀಡಲಿ, ಬಡವರಿಗೆ ಇನ್ನಷ್ಟು ಅನುಕೂಲ ಆಗುವಂತಹ ಕಾರ್ಯಕ್ರಮಗಳು ನಿಮ್ಮಿಂದ ಜಾರಿಯಾಗಲಿ ಎಂದು ಆಶೀರ್ವದಿಸಿದರು. ಈ ದಿನ ದೇವರ ದರ್ಶನ ಭಾಗ್ಯದ ಜೊತೆಗೆ ಹತ್ತಾರು ತಾಯಂದಿರ ಆಶೀರ್ವಾದ ಪಡೆದ ಧನ್ಯತಾಭಾವ ನನ್ನದು” ಎಂಬುದಾಗಿ ಅವರು ಪೋಸ್ಟ್‌ ಮಾಡಿದ್ದಾರೆ.

ಸಿಎಂಗೆ ಪೂರ್ಣಕುಂಭ ಸ್ವಾಗತ

ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸುತ್ತಿದ್ದಂತೆ ಅವರಿಗೆ ಧರ್ಮಸ್ಥಳದ ಕ್ಷೇತ್ರದ ವತಿಯಿಂದ ಪೂರ್ಣಕುಂಭ ಸ್ವಾಗತವನ್ನು ಮಾಡಲಾಯಿತು. ಧರ್ಮಸ್ಥಳದ ಪ್ರವೇಶ ದ್ವಾರದಲ್ಲಿ ಸಿದ್ದರಾಮಯ್ಯ ಹಾಗೂ ಡಿಕೆಶಿಗೆ ಭವ್ಯ ಸ್ವಾಗತ ಸಿಕ್ಕಿತು. ವಾದ್ಯ ಘೋಷಗಳೊಂದಿಗೆ ಬರಮಾಡಿಕೊಳ್ಳಲಾಯಿತು. ಕ್ಷೇತ್ರದ ಪರವಾಗಿ ಧರ್ಮಸ್ಥಳ ಧರ್ಮದರ್ಶಿಗಳಾದ ಡಾ. ವೀರೇಂದ್ರ ಹೆಗ್ಗಡೆ ಅವರ ಸಹೋದರ ಹರ್ಷೇಂದ್ರ ಹೆಗ್ಗಡೆ ಸ್ವಾಗತಿಸಿದರು.

ವಿಶೇಷ ಪೂಜೆ, ಡಾ. ವೀರೇಂದ್ರ ಹೆಗ್ಗಡೆ ಭೇಟಿ

ಧರ್ಮಸ್ಥಳ ಮಂಜುನಾಥ ಸ್ವಾಮಿ ದರ್ಶನ ಪಡೆದ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರು ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಶ್ರೀಕ್ಷೇತ್ರದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡಿ ಆಶೀರ್ವಾದವನ್ನು ಪಡೆದುಕೊಂಡರು. ಬಳಿಕ ಕೆಲ ಹೊತ್ತು ಚರ್ಚೆ ನಡೆಸಿದರು.

ಧರ್ಮಸ್ಥಳ ಭೇಟಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್‌, “ಸರ್ಕಾರದ ಶಕ್ತಿ ಯೋಜನೆಯಿಂದ ರಾಜ್ಯದ ಮೂಲೆ ಮೂಲೆಯಿಂದ ಹೆಚ್ಚಿನ ಭಕ್ತರು ಧರ್ಮಸ್ಥಳಕ್ಕೆ ಆಗಮಿಸಿ ಮಂಜುನಾಥನ ದರ್ಶನ ಪಡೆಯುತ್ತಿದ್ದಾರೆ ಎಂದು ಧರ್ಮದರ್ಶಿ ವೀರೇಂದ್ರ ಹೆಗ್ಗಡೆಯವರು ಸಂತೋಷ ಹಂಚಿಕೊಂಡರು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದರು. “ನಾನು ಹಾಗೂ ಮುಖ್ಯಮಂತ್ರಿಗಳು ಮಂಜುನಾಥನ, ಅಣ್ಣಪ್ಪ ಸ್ವಾಮಿ ಹಾಗೂ ಅಮ್ಮನವರ ದರ್ಶನ ಮಾಡಿದ್ದೇವೆ. ರಾಜ್ಯದಲ್ಲಿ ಮುಂಗಾರು ಪ್ರಾರಂಭವಾಗಿದ್ದು, ಉತ್ತಮ ಮಳೆ, ಬೆಳೆಯಾಗಿ ರಾಜ್ಯದ ಜನರು ಶಾಂತಿ, ನೆಮ್ಮದಿಯಿಂದ ಇರಲಿ ಎಂದು ಪ್ರಾರ್ಥಿಸಿದ್ದೇವೆ” ಎಂದು ತಿಳಿಸಿದರು.

ಇದನ್ನೂ ಓದಿ: CM Siddaramaiah: ಸಿದ್ದು, ಡಿಕೆಶಿ ಧರ್ಮಸ್ಥಳ ದೇವಸ್ಥಾನಕ್ಕೆ ಎಂಟ್ರಿ ಕೊಡುತ್ತಿದ್ದಂತೆ ಜೈಶ್ರೀರಾಮ್‌, ಮೋದಿ ಕೀ ಜೈ ಘೋಷಣೆ!

Continue Reading
Advertisement
Sujay Hegde Manasare actor Engagement with Prerana
ಕಿರುತೆರೆ14 seconds ago

Sujay Hegde: ನಿಶ್ಚಿತಾರ್ಥ ಮಾಡಿಕೊಂಡ ‘ಮನಸಾರೆ’ ಧಾರಾವಾಹಿಯ ನಟ ಸುಜಯ್ ಹೆಗಡೆ

Viral News
ವೈರಲ್ ನ್ಯೂಸ್31 mins ago

Viral News: ರೈಲಿನಲ್ಲಿ ಅಶ್ಲೀಲವಾಗಿ ಮೈ ಕುಣಿಸಿದ ಮಹಿಳೆ; ರೀಲ್ಸ್ ಮಾಡುವವರ ಕಾಟವಿಲ್ಲದ ಪ್ರಯಾಣ ಅಸಾಧ್ಯ ಎಂದ ನೆಟ್ಟಿಗರು

Rahul Gandhi
ದೇಶ33 mins ago

Rahul Gandhi: ನೋಡ ನೋಡ್ತಿದ್ದಂತೆ ತಲೆ ಮೇಲೆ ನೀರು ಸುರಿದುಕೊಂಡ ರಾಹುಲ್‌ ಗಾಂಧಿ! ವಿಡಿಯೋ ಇದೆ

dk shivakumar jagdeep dhankar
ಪ್ರಮುಖ ಸುದ್ದಿ36 mins ago

DK Shivakumar: ಕುತೂಹಲ ಕೆರಳಿಸಿದ ಡಿಕೆಶಿ- ಉಪರಾಷ್ಟ್ರಪತಿ ಭೇಟಿ; ʼಬಿಜೆಪಿಗೆ ಸೇರ್ತೀರಾʼ ಎಂದ ನೆಟ್ಟಿಗರು!

Pushpa 2 SOOSEKI Couple Song Lyrical Video out
ಟಾಲಿವುಡ್38 mins ago

Pushpa 2: ʼಪುಷ್ಪ 2ʼ ಸಿನಿಮಾದ ಎರಡನೇ ಹಾಡು ರಿಲೀಸ್‌: ಅಲ್ಲು ಜತೆ ಹೆಜ್ಜೆ ಹಾಕಿದ ರಶ್ಮಿಕಾ!

UPI Safety Tips
ವಾಣಿಜ್ಯ39 mins ago

UPI Safety Tips: ಈ ಟಿಪ್ಸ್ ಪಾಲಿಸಿ, ಮೊಬೈಲ್ ನಿಂದ ಹಣ ಪಾವತಿಸುವಾಗ ಆಗುವ ವಂಚನೆಯಿಂದ ಪಾರಾಗಿ

Shakhahaari Movie 1 cr minutes of streaming amazon prime
ಸ್ಯಾಂಡಲ್ ವುಡ್1 hour ago

Shakhahaari Movie: ಪ್ರೇಕ್ಷಕರನ್ನು ಆವರಿಸಿದ ‘ಶಾಖಾಹಾರಿ’: ಪರಭಾಷಿಕರಿಂದಲೂ ಚಿತ್ರಕ್ಕೆ ಮೆಚ್ಚುಗೆ!

Arvind Kejriwal
ದೇಶ1 hour ago

Arvind Kejriwal: ಜಾಮೀನು ಅವಧಿ ವಿಸ್ತರಣೆಗೆ ಕೋರಿ ಅರ್ಜಿ; ಸುಪ್ರೀಂನಲ್ಲಿ ಕೇಜ್ರಿವಾಲ್‌ಗೆ ಭಾರೀ ಹಿನ್ನಡೆ-ಮತ್ತೆ ಜೈಲು ಫಿಕ್ಸ್‌!

Crime News
ಕ್ರೈಂ1 hour ago

Crime News: ಶಾಕಿಂಗ್‌: ಕುಟುಂಬದ 7 ಮಂದಿಯನ್ನು ಕೊಚ್ಚಿ ಕೊಲೆ ಮಾಡಿ ಆತ್ಮಹತ್ಯೆಗೆ ಶರಣಾದ ವ್ಯಕ್ತಿ; ಕಾರಣ ನಿಗೂಢ

belluru assault case
ಕ್ರೈಂ1 hour ago

Assault Case: ಬೆಳ್ಳೂರು ಹಿಂದೂ ಯುವಕನ ಮೇಲೆ ಹಲ್ಲೆ; ದೂರು ಸ್ವೀಕರಿಸದ ಪಿಎಸ್‌ಐ ಸಸ್ಪೆಂಡ್‌

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka weather Forecast
ಮಳೆ17 hours ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು1 day ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ2 days ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ3 days ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು3 days ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ4 days ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ6 days ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ1 week ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು1 week ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

ಟ್ರೆಂಡಿಂಗ್‌