ವಿಸ್ತಾರ Explainer: ಇಂಟರ್‌ನೆಟ್ ಮಾತ್ರವಲ್ಲ, ದೇಶದ ಎಕಾನಮಿ ಸ್ಪೀಡನ್ನೂ ಹೆಚ್ಚಿಸಲಿದೆ 5G! - Vistara News

5 G

ವಿಸ್ತಾರ Explainer: ಇಂಟರ್‌ನೆಟ್ ಮಾತ್ರವಲ್ಲ, ದೇಶದ ಎಕಾನಮಿ ಸ್ಪೀಡನ್ನೂ ಹೆಚ್ಚಿಸಲಿದೆ 5G!

ಭಾರತದಲ್ಲಿ 5G ಸ್ಪೆಕ್ಟ್ರಮ್‌ ಹರಾಜಿಗೆ ಕೇಂದ್ರ ಸಚಿವ ಸಂಪುಟ ಅನುಮೋದಿಸುವುದರೊಂದಿಗೆ ಇಂಟರ್‌ನೆಟ್‌ಗೆ ಸಂಬಂಧಿಸಿ ಅಪಾರ ನಿರೀಕ್ಷೆಗಳು ಗರಿಗೆದರಿವೆ. ಮುಂದಿದೆ 5ಜಿ ಜಮಾನಾ!

VISTARANEWS.COM


on

5G
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ದೇಶದ ಎಕಾನಮಿಯನ್ನೇ ಬದಲಿಸಲು ಶೀಘ್ರದಲ್ಲಿಯೇ ಬರಲಿದೆ 5G. ಇದರ ಸ್ಪೀಡ್‌ ಎಷ್ಟೆಂದರೆ, ಈಗಿನ 4Gಗಿಂತಲೂ 10 ಪಟ್ಟು ಹೆಚ್ಚು. ಹಾಗಂತ ಇದು ಕೇವಲ ಇಂಟರ್‌ನೆಟ್ ಸ್ಪೀಡ್‌ ಹೆಚ್ಚಿಸುವುದಲ್ಲ.‌ ೫ಜಿಯ ಉಪಯೋಗಗಳು ಹಲವು. ಹಾಗಾದರೆ 5G ಬಂದ ಬಳಿಕ ಭಾರತ ಹೇಗೆ ಬದಲಾಗಲಿದೆ? ಇದರಿಂದಾಗಿ ಜನ ಸಾಮಾನ್ಯರಿಗೆ, ಇಂಡಸ್ಟ್ರಿಗಳಿಗೆ ಲಾಭವೇನು? ಎಕಾನಮಿಯ ಅಬಿವೃದ್ಧಿ ಆಗುವುದಾದರೂ ಹೇಗೆ? ಇದರ ಜಾರಿಯಲ್ಲಿ ಇರುವಂಥ ಸವಾಲುಗಳಾದರೂ ಏನು? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.

ಏನಿದು 5G?

ಇದು ಐದನೇ ಪೀಳಿಗೆಯ ಸೆಲ್ಯುಲಾರ್‌ ನೆಟ್‌ವರ್ಕ್‌. ಈಗಿನ 4Gಗೆ ಹೋಲಿಸಿದರೆ 10 ಪಟ್ಟು ಹೆಚ್ಚು ವೇಗವಾಗಿ ಕಾರ್ಯನಿರ್ವಹಿಸುತ್ತದೆ. ಹೀಗಾಗಿ ಜನರಿಗೆ ದೈನಂದಿನ ಬಳಕೆಗೆ ಹಾಗೂ ಟೆಲಿಕಾಂ ತಂತ್ರಜ್ಞಾನ ಆಧಾರಿತ ಇಂಡಸ್ಟ್ರಿಗಳಿಗೆ ನೂರಾರು ರೀತಿಯಲ್ಲಿ ಉಪಯೋಗವಾಗಲಿದೆ. ಟೆಲಿಕಾಂ ಕಂಪನಿಗಳ ಆದಾಯವನ್ನೂ ಇದು ಹೆಚ್ಚಿಸುವ ನಿರೀಕ್ಷೆ ಇದೆ.
1G ಯುಗದಲ್ಲಿ ನೋಡುವುದಾದರೆ ಬ್ರೀಫ್‌ಕೇಸ್‌ ಸೈಜಿನ ಫೋನ್‌ಗಳಿದ್ದವು. ಹೆಚ್ಚು ಮಾತನಾಡಲು ಸಾಧ್ಯವಾಗುತ್ತಿರಲಿಲ್ಲ. ಸಣ್ಣ ಸಂಖ್ಯೆಯಲ್ಲಿ ವೃತ್ತಿಪರರು ಮಾತ್ರ ಬಳಸುತ್ತಿದ್ದರು.
ಆಮೇಲೆ 2G ಕಾಲದಲ್ಲಿ ಮೊಬೈಲ್‌ಗಳು ಜನಪ್ರಿಯವಾಯಿತು. 3G ಬಂದ ಬಳಿಕ ಮೊಬೈಲ್‌ಗಳ ಉಪಯೋಗ ಹೆಚ್ಚಾಯಿತು. ಎಸ್ಸೆಮ್ಮೆಸ್‌ ಮತ್ತು ಮೊಬೈಲ್‌ ಇಂಟರ್‌ನೆಟ್‌ ಯುಗ ಆರಂಭವಾಯಿತು.
ಈಗಿನ 4G ಯುಗದಲ್ಲಿ ನಾವೆಲ್ಲ ಸ್ಮಾರ್ಟ್‌ಫೋನ್‌ ಬಳಸುತ್ತೇವೆ. ನೂರಾರು ಬಗೆಯ ಮೊಬೈಲ್‌ ಆಪ್‌ಗಳು ದಿನ ಬಳಕೆಯಲ್ಲಿವೆ. ಲಕ್ಷಾಂತರ ಮಂದಿ ಯೂಟ್ಯೂಬ್‌ ಚಾನೆಲ್‌ ಹೊಂದಿದ್ದಾರೆ. ಮನೆಯಿಂದ ಹೊರಗೆ ಕಾಲಿಟ್ಟರೆ ಈಗ ಜೇಬಿನಲ್ಲಿ ನಗದು ನೋಟು ಬೇಕಿಲ್ಲ. ಪೇಟಿಎಂ, ಗೂಗಲ್‌ ಪೇ, ಫೋನ್‌ಪೇ ಇತ್ಯಾದಿ ಆಪ್‌ಗಳಿರುವ ಸ್ಮಾರ್ಟ್‌ಫೋನ್‌ ಇದ್ದರೆ ಸಾಕು.
ಈಗ ಬರಲು ಸಜ್ಜಾಗಿರುವ 5G ಅಂತೂ ನಮ್ಮ ವೃತ್ತಿ, ಉದ್ಯೋಗ, ವೈಯಕ್ತಿಕ ಜೀವನದ ಮೇಲೆ ಗಾಢವಾದ ಮತ್ತು ಅತ್ಯಂತ ಉಪಯುಕ್ತ, ಸಕಾರಾತ್ಮಕ ಪ್ರಭಾವವನ್ನು ಬೀರಬಲ್ಲುದು. ಇಂಡಸ್ಟ್ರಿಯ ಸಮಗ್ರ ಡಿಜಿಟಲೀಕರಣವನ್ನು ಕಾಣಬಹುದು. ಮಾತ್ರವಲ್ಲದೆ ಮೆಶೀನ್‌ ಟು ಮೆಶೀನ್‌ ಕಮ್ಯುನಿಕೇಶನ್‌, ಇಂಟರ್‌ನೆಟ್‌ ಆಫ್‌ ಥಿಂಗ್ಸ್‌, ಕೃತಕ ಬುದ್ಧಿಮತ್ತೆ, ಆಟೊಮೇಟಿವ್‌, ಆರೋಗ್ಯ, ಕೃಷಿ, ಇಂಧನ, ಶಿಕ್ಷಣ ಮತ್ತಿತರ ಕ್ಷೇತ್ರಗಳ ಲಾಭವನ್ನು ಹೆಚ್ಚಿಸಲಿದೆ. 5G ಸ್ಪೆಕ್ಟ್ರಮ್‌ ಹರಾಜಿಗೆ ಮೊದಲೇ ಅದನ್ನು ಬೆಂಬಲಿಸಬಲ್ಲ ಸ್ಮಾರ್ಟ್‌ಫೋನ್‌ಗಳನ್ನು ಕಂಪನಿಗಳು ತಯಾರಿಸಿವೆ.
ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಈಗಾಗಲೇ 5G ಕ್ರಾಂತಿಕಾರಕ ಸಕಾರಾತ್ಮಕ ಪರಿಣಾಮಗಳನ್ನು ಉಂಟು ಮಾಡಿದೆ. ಚೀನಾ ಮತ್ತು ಅಮೆರಿಕದ ಒಟ್ಟು 652 ನಗರಗಳಲ್ಲಿ 5G ನೆಟ್‌ವರ್ಕ್‌ ಬಂದಿದೆ. ಪಿಲಿಪ್ಪೀನ್ಸ್‌, ದಕ್ಷಿಣ ಕೊರಿಯಾ, ಕೆನಡಾ, ಇಟಲಿ, ಜರ್ಮನಿ, ಬ್ರಿಟನ್‌, ಸೌದಿ ಅರೇಬಿಯಾದ ನಗರಗಳಲ್ಲಿ 5G ಪ್ರಯೋಗ ನಡೆದಿದೆ.
ಈ ದೇಶಗಳಲ್ಲಿ ವಿದ್ಯುತ್‌ ವಿತರಣೆಯ ಗ್ರಿಡ್‌ಗಳ ಜಾಲ ಸ್ಮಾರ್ಟ್‌ ಆಗಿದೆ. ವಾಹನಗಳ ಸಂಚಾರ ದಟ್ಟಣೆಯ ದಕ್ಷತೆ ಸುಧಾರಿಸಿದ್ದು, ಅಪಘಾತಗಳ ಸಂಖ್ಯೆ ಕಡಿಮೆಯಾಗಿದೆ. ತುರ್ತು ಸಂದರ್ಭಗಳಲ್ಲಿ ಸೇವೆಗಳನ್ನು ಒದಗಿಸಲು ಉಪಯೋಗವಾಗಿದೆ. ಸೆನ್ಸರ್‌ಗಳ ಮೂಲಕ ಪ್ರಾಕೃತಿಕ ವಿಕೋಪಗಳನ್ನು ಮೊದಲೇ ಅರಿತುಕೊಳ್ಳಲು ಸುಲಭವಾಗಿದೆ. ಡ್ರೋನ್‌ಗಳ ಬಳಕೆ ವ್ಯಾಪಕವಾಗಿದೆ. ರೋಗಿಗಳಿಗೆ ತಜ್ಞ ವೈದ್ಯರಿಂದ ನೆರವು ಒದಗಿಸಲು ಬಳಕೆಯಾಗುತ್ತಿದೆ. ಇಂಡಸ್ಟ್ರಿಗಳಲ್ಲಿ ಬೇಡಿಕೆ ಮತ್ತು ಪೂರೈಕೆಯನ್ನು ತಿಳಿದುಕೊಂಡು ಉತ್ಪಾದನೆಯನ್ನು ಹೊಂದಾಣಿಕೆ ಮಾಡಲು ಸಹಾಯಕವಾಗಿದೆ. ಕೃಷಿ, ಸ್ಟಾರ್ಟಪ್‌, ಶಿಕ್ಷಣಕ್ಷೇತ್ರದ ಅಭಿವೃದ್ಧಿಗೆ ಅನುಕೂಲ ಮಾಡಿಕೊಟ್ಟಿದೆ.

ಜನ ಸಾಮಾನ್ಯರಿಗೆ ಪ್ರಯೋಜನವೇನು?
ಯಾವುದೇ ದೇಶದ ಎಕಾನಮಿ ಸುಧಾರಿಸಿದರೆ, ಬಡತನ ನಿವಾರಣೆಯ ನಿಟ್ಟಿನಲ್ಲಿ ಪ್ರಯೋಜನವಾಗುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಆರ್ಥಿಕ ಚಟುವಟಿಕೆ ಅಭಿವೃದ್ಧಿಯಾದಾಗ ಸರಕಾರಕ್ಕೆ ತೆರಿಗೆ ಆದಾಯ ಹೆಚ್ಚುತ್ತದೆ. ರಸ್ತೆ, ರೈಲು, ಆಸ್ಪತ್ರೆ, ಶಾಲೆ ಇತ್ಯಾದಿ ಮೂಲಸೌಕರ್ಯಗಳಿಗೆ ಹೆಚ್ಚು ಹೂಡಿಕೆ ಮಾಡುತ್ತದೆ. ಇದು ಮತ್ತಷ್ಟು ಖಾಸಗಿ ಬಂಡವಾಳ ಹೂಡಿಕೆಯನ್ನೂ ಆಕರ್ಷಿಸುತ್ತದೆ. ದೇಶ-ವಿದೇಶಗಳ ಕಂಪನಿಗಳು ಇನ್ವೆಸ್ಟ್‌ ಮಾಡುತ್ತವೆ. ಆಗ ಉಂಟಾಗುವ ಉದ್ಯೋಗ ಸೃಷ್ಟಿ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಎಲ್ಲಕ್ಕಿಂತ ಹೆಚ್ಚು ಅನುಕೂಲ ಮಾಡಿಕೊಡುತ್ತದೆ. ಇಂಥ ಉದ್ಯಮಸ್ನೇಹಿ ವಾತಾವರಣ ಸೃಷ್ಟಿಗೆ 5G ಅಗತ್ಯ ಎನ್ನುತ್ತಾರೆ ತಜ್ಞರು.
ಎಲ್ಲ ಕ್ಷೇತ್ರಗಳಲ್ಲೂ ‌ಯಾವುದೇ ಕಷ್ಟದ ಸಂದರ್ಭಗಳಲ್ಲಿ ಆರ್ಥಿಕ ಚಟುವಟಿಕೆಗಳನ್ನು, ಮಾರುಕಟ್ಟೆಗಳನ್ನು ಒಗ್ಗೂಡಿಸಲು ಇದು ಪರಿಣಾಮಕಾರಿಯಾಗಲಿದೆ. ಉದಾಹರಣೆಗೆ ನಾನಾ ರಾಜ್ಯಗಳಲ್ಲಿ ರೈತರು ಕೋವಿಡ್‌ ಲಾಕ್‌ ಡೌನ್ ಸಂದರ್ಭ ತಮ್ಮ ಉತ್ಪನ್ನಗಳನ್ನು ಆನ್‌ಲೈನ್‌ ಮೂಲಕವೇ ಮಾರಾಟ ಮಾಡಿದ್ದರು. ಅನೇಕ ಮಂದಿ ಮನೆಯಲ್ಲೇ ಮಕ್ಕಳಿಗೆ ಆನ್‌ಲೈನ್‌ ಟ್ಯೂಷನ್‌ ನೀಡಿದ್ದರು. ಸಾವಿರಾರು ಮಂದಿ ಯೂಟ್ಯೂಬ್‌ ಮೂಲಕ ಹೊಸ ಮಾರುಕಟ್ಟೆಯನ್ನು ಕಂಡುಕೊಂಡಿದ್ದರು. 5G ಮೂಲಕ ನಗರ ಮತ್ತು ಗ್ರಾಮೀಣ ಪ್ರದೇಶಗಳ ಅಂತರ ಕಡಿಮೆಯಾಗಲಿದೆ. ಹಿಂದುಳಿದ ಪ್ರದೇಶಗಳಲ್ಲೂ ನಗರಗಳ ಸೌಕರ್ಯಗಳನ್ನು ಮುಟ್ಟಿಸಲು ಟೆಕ್ನಾಲಜಿ ನೆರವಾಗಲಿದೆ. ಭವಿಷ್ಯದ ದಿನಗಳಲ್ಲಿ ಬಡ ವಿದ್ಯಾರ್ಥಿಗಳು ಎಲ್ಲಿದ್ದರೂ, ಆನ್‌ಲೈನ್‌ ಮೂಲಕ ಗುಣಮಟ್ಟದ ಶಿಕ್ಷಣ ಪಡೆಯಲು ಹಾದಿ ಸುಗಮವಾಗಲಿದೆ. ಅವರೂ ವರ್ಚಯವಲ್‌ ಕ್ಲಾಸ್‌ ರೂಮ್‌ಗಳ ಮೂಲಕ ಕಲಿಯಬಹುದು. ಆನ್‌ಲೈನ್‌ ದೂರ ಶಿಕ್ಷಣದಲ್ಲಿ ಕ್ರಾಂತಿಕಾರಕ ಬದಲಾವಣೆ ಉಂಟಾಗಲಿದೆ.
ಆರೋಗ್ಯ ಕ್ಷೇತ್ರದಲ್ಲೂ 5G ಟೆಕ್ನಾಲಜಿಯಿಂದ ಸಾಕಷ್ಟು ಅನುಕೂಲವಾಗಲಿದೆ. ಹಳ್ಳಿಗಳಲ್ಲೂ ಸ್ಥಳೀಯ ಕಿಯೋಸ್ಕ್‌ಗಳ ಮೂಲಕ ನುರಿತ ವೈದ್ಯರಿಂದ ಕನ್ಸಲ್ಟೇಶನ್‌ ಪಡೆದು ಆರೋಗ್ಯ ಸುಧಾರಿಸಿಕೊಳ್ಳಬಹುದು. ಐಒಟಿ, ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ದೇಶದ ಹೆಲ್ತ್‌ ಕೇರ್‌ಗೆ ಹೊಸ ಆಯಾಮ ನೀಡಲಿದೆ.
ನಮ್ಮ ದೇಶದಲ್ಲಿ ಬಹುಪಾಲು ಕೃಷಿಕರೂ ಸಣ್ಣ ಹಿಡುವಳಿದಾರರು. ಅವರಿಗೆ ಕೃಷಿ ಉತ್ಪಾದನೆ ಹೆಚ್ಚಿಸಲು 5G ಸಹಕಾರಿಯಾಗಲಿದೆ. ಮಣ್ಣಿನ ಗುಣಮಟ್ಟ ಪರೀಕ್ಷೆಗೆ ಸ್ಮಾಟ್‌ ಸೆನ್ಸರ್‌, ಮಣ್ಣಿನ ತೇವಾಂಶದಿಂದ ಮಾರುಕಟ್ಟೆಯಲ್ಲಿ ಉತ್ಪನ್ನಗಳ ದರ ಏರಿಳಿತ, ಸ್ವತಃ ತಮ್ಮದೇ ಮೌಲ್ಯ ವರ್ಧಿತ ಉತ್ಪನ್ನಗಳ ಮಾರಾಟಕ್ಕೆ 5G ತಂತ್ರಜ್ಞಾನದ ಬೆಂಬಲ ಸಿಗಲಿದೆ.
ಮನರಂಜನೆಯ ಕ್ಷೇತ್ರದಲ್ಲೂ 5G ಹೊಸ ಕ್ರಾಂತಿಗೆ ಕಾರಣವಾಗಲಿದೆ. ಮುಖ್ಯವಾಗಿ ವೀಡಿಯೊ ವೀಕ್ಷಣೆಯ ಗುಣಮಟ್ಟ ವೃದ್ಧಿಸಲಿದೆ. ಡೌನ್‌ಲೋಡ್‌ ಸ್ಪೀಡ್‌ ವೃದ್ಧಿಸಲಿದೆ.

ಮನೆಯಿಂದಲೇ ಕೆಲಸ ಮಾಡಲು ಅನುಕೂಲ
ಕೋವಿಡ್‌ ಬಿಕ್ಕಟ್ಟಿನ ಲಾಕ್‌ ಡೌನ್‌ ಸಂದರ್ಭ ಭಾರತ ಎರಡೂವರೆ ತಿಂಗಳಿಗೂ ಹೆಚ್ಚು ಕಾಲ ಸ್ತಬ್ಧವಾಗಿತ್ತು. ಮನೆ ಬಿಟ್ಟು ಹೊರಗೆ ಹೋಗುವಂತಿರಲಿಲ್ಲ. ಲಾಕ್‌ ಡೌನ್‌ ಆದ ಒಂದೇ ವಾರದೊಳಗೆ ಬಹುತೇಕ ಐಟಿ ಕಂಪನಿಗಳು ಮನೆಯಿಂದಲೇ ಕೆಲಸ ಮಾಡುವಂತೆ ಉದ್ಯೋಗಿಗಳಿಗೆ ಸೂಚಿಸಿತ್ತು. ಹೀಗಾಗಿ ದೇಶದ ಆರ್ಥಿಕತೆಗೂ ಭಾರಿ ಕುಸಿತವಾಗದಂತೆ ತಡೆಯಲು ಸಾಧ್ಯವಾಯಿತು. 5G ನೆಟ್‌ವರ್ಕ್‌ ಪರಿಣಾಮ ವರ್ಕ್‌ ಫ್ರಂ ಹೋಮ್‌ ಮತ್ತಷ್ಟು ಸುಲಭವಾಗಲಿದೆ. ಉದ್ಯೋಗಿಗಳು ಎಲ್ಲಿದ್ದರೂ ಕೆಲಸ ಮಾಡಬಹುದು. ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗ, ಶಿಕ್ಷಣ ಮುಂದುವರಿಸಲು ಭಾರಿ ಅನುಕೂಲವಾಗಲಿದೆ. ವರ್ಕ್‌ ಫ್ರಂ ಹೋಮ್‌ ಪರಿಕಲ್ಪನೆ ಈಗ ಹಲವು ಇಂಡಸ್ಟ್ರಿಗಳಲ್ಲಿ ಸಾಮಾನ್ಯವಾಗಿದೆ. ಇದಕ್ಕೆ ಕಾರಣ ಟೆಲಿಕಾಂ ತಂತ್ರಜ್ಞಾನದ ಅಭಿವೃದ್ಧಿ.

5G ಜಮಾನಾ ಶೀಘ್ರದಲ್ಲೇ ಆರಂಭ
ಮೊದಲನೆಯದಾಗಿ ಭಾರತದಲ್ಲಿ ಮುಂದಿನ ಜುಲೈ ಮುಗಿಯುವುರೊಳಗೆ ಬಹು ನಿರೀಕ್ಷಿತ 5G ಸ್ಪೆಕ್ಟ್ರಮ್‌ ಹರಾಜು ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಈ ಬಗ್ಗೆ ತನ್ನ ಅನುಮೋದನೆ ನೀಡಿದೆ. ಜೂನ್‌ 15ರಂದು ಈ ಬಗ್ಗೆ ಅಧಿಕೃತವಾಗಿ ಘೋಷಿಸಲಾಗಿದೆ. ಇದರೊಂದಿಗೆ ದೇಶದಲ್ಲಿ 5G ಜಮಾನಾ ಸನ್ನಿಹಿತವಾಗಿದೆ.
ಸರಕಾರ ಒಟ್ಟು 72097.85 ಮೆಗಾ ಹರ್ಟ್ಸ್‌ ಸ್ಪೆಕ್ಟ್ರಮ್‌ ಅನ್ನು ಹರಾಜಿಗಿಡಲಿದೆ. 20 ವರ್ಷಗಳ ಅವಧಿಗೆ ಈ ತರಂಗ ಗುಚ್ಛಗಳು ಸಿಗಲಿವೆ. 2022ರ ಜುಲೈ ಅಂತ್ಯದೊಳಗೆ ಹರಾಜು ನಡೆಸಲು ಸರಕಾರ ಉದ್ದೇಶಿಸಿದೆ.
600 MHz, 700MHz, 800MHz, 900MHz, 1800MHz, 2100MHz, 2300MHz ಮತ್ತು 26GHz ಶ್ರೇಣಿಗಳ ತರಂಗಾಂತರಗಳಲ್ಲಿ ಸ್ಪೆಕ್ಟ್ರಮ್‌ ಹರಾಜು ನಡೆಯಲಿದೆ.
ದೂರ ಸಂಪರ್ಕ ಇಲಾಖೆ ಕೂಡಲೇ ಹರಾಜಿಗೆ ಸಂಬಂಧಿಸಿ ಅರ್ಜಿಗಳನ್ನು ಆಹ್ವಾನಿಸಲಿದೆ ( Notice Inviting Applications- NIA) ದೂರಸಂಪರ್ಕ ಇಲಾಖೆಯು ಈ ಅರ್ಜಿಗಳನ್ನು ಆಹ್ವಾನಿಸಿದ ಬಳಿಕ ಹರಾಜು ನಡೆಸಲು ಕೆಲ ವಾರಗಳ ಅವಧಿ ಬೇಕಾಗುತ್ತದೆ. ಟ್ರಾಯ್‌ ಶಿಫಾರಸಿನ ಮೇರೆಗೆ ಕೇಂದ್ರ ಸರಕಾರ ಹರಾಜಿನ ಮೂಲ ದರಗಳನ್ನು ನಿಗದಿಪಡಿಸಲಿದೆ. ದೇಶದ ಅತಿ ದೊಡ್ಡ ಸ್ಪೆಕ್ಟ್ರಮ್‌ ಹರಾಜು ಇದಾಗಲಿದೆ.

ಮೂಲ ದರ ಇಳಿಸಲು ಖಾಸಗಿ ಟೆಲಿಕಾಂ ಕಂಪನಿಗಳ ಪಟ್ಟು
ಸ್ಪೆಕ್ಟ್ರಮ್‌ ದುಬಾರಿಯಾಗಲಿದ್ದು, ಟೆಲಿಕಾಂ ಕಂಪನಿಗಳು ಈ ಹೊರೆಯನ್ನು ಹೊತ್ತುಕೊಳ್ಳುವುದು ಅನಿವಾರ್ಯವಾಗಲಿದೆ. ಈಗಾಗಲೇ ಖಾಸಗಿ ಟೆಲಿಕಾಂ ಕಂಪನಿಗಳು ಭಾರಿ ದರ ವಿಧಿಸಬಾರದು ಎಂದಿವೆ. ಮೂಲ ದರ ಅತ್ಯಧಿಕ ಮಟ್ಟದಲ್ಲಿ ಇದ್ದರೆ ಭಾಗವಹಿಸುವುದಿಲ್ಲ ಎಂದು ಏರ್‌ಟೆಲ್‌ ತಿಳಿಸಿದೆ.
ಕಳೆದ ತಿಂಗಳು ಡಿಜಿಟಲ್‌ ಕಮ್ಯುನಿಕೇಶನ್ಸ್‌ ಕಮೀಶನ್‌ 5G ಹರಾಜಿಗೆ ಅನುಮೋದಿಸಿತ್ತು. ಮೂಲ ದರದಲ್ಲಿ 90% ಕಡಿತಕ್ಕೆ ಮೊಬೈಲ್‌ ಸೇವೆಗಳನ್ನು ನೀಡುವ ಕಂಪನಿಗಳು ಲಾಬಿ ನಡೆಸಿವೆ.
ಮೊದಲ ಬಾರಿಗೆ ಬಿಡ್‌ನಲ್ಲಿ ಗೆದ್ದವರು ಸ್ಪೆಕ್ಟ್ರಮ್‌ ಖರೀದಿಗೆ ಮುಂಗಡ ಪಾವತಿಸಬೇಕಿಲ್ಲ. 20 ಕಂತುಗಳಲ್ಲಿ ಶುಲ್ಕ ಪಾವತಿಸಬಹುದು. 10 ವರ್ಷಗಳ ಬಳಿಕ ಬಿಡ್ಡರ್‌ಗಳು ಸ್ಪೆಕ್ಟ್ರಮ್‌ ಅನ್ನು ಹಿಂತಿರುಗಿಸಲೂ ಅವಕಾಶ ನೀಡಲಾಗಿದೆ. ಟ್ರಾಯ್‌ ಈ ಹಿಂದೆ 5 ಲಕ್ಷ ಕೋಟಿ ರೂ.ಗಳ ಮೂಲ ದರವನ್ನು ಶಿಫಾರಸು ಮಾಡಿತ್ತು.

ಖಾಸಗಿ ನೆಟ್‌ವರ್ಕ್‌ ಅಭಿವೃದ್ಧಿಗೆ ಅವಕಾಶ
ಸರಕಾರ ಪ್ರೈವೇಟ್‌ ಕ್ಯಾಪ್ಟಿವ್‌ ನೆಟ್‌ವರ್ಕ್‌ಗಳನ್ನು (Private captive networks) ಸ್ಥಾಪಿಸಲು ಕೂಡ ಹಾದಿ ಸುಗಮಗೊಳಿಸಿದೆ. ಇದರಿಂದ ಉದ್ಯಮ ಕ್ಷೇತ್ರದಲ್ಲಿ ಹೊಸ ಬಗೆಯ ಮೆಶೀನ್-ಟು ಮೆಶೀನ್‌ ಕಮ್ಯುನಿಕೇಶನ್‌, ಇಂಟರ್‌ನೆಟ್‌ ಆಫ್‌ ಥಿಂಗ್ಸ್‌, ಕೃತಕ ಬುದ್ಧಿಮತ್ತೆ (ಎಐ), ಆಟೊಮೇಟಿವ್‌ ತಂತ್ರಜ್ಞಾನಗಳ ವ್ಯಾಪಕ ಅಭಿವೃದ್ಧಿ ನಿರೀಕ್ಷಿಸಲಾಗಿದೆ. ಆರೋಗ್ಯ, ಕೃಷಿ, ಇಂಧನ ಮತ್ತಿತರ ಕ್ಷೇತ್ರಗಳಲ್ಲಿ ಕ್ರಾಂತಿಕಾರಕ ಪ್ರಗತಿಗೆ ಹಾದಿ ತೆರೆದುಕೊಳ್ಳಲಿದೆ ಎನ್ನುತ್ತಾರೆ ತಜ್ಞರು. 5G ಸ್ಪೆಕ್ಟ್ರಮ್‌ ಹರಾಜಿಗೆ ಅನುಮತಿ ನೀಡುವುದರೊಂದಿಗೆ ಭಾರತದ ಟೆಲಿಕಾಂ ವಲಯದಲ್ಲಿ ಹೊಸ ಯುಗಾರಂಭ ಆದಂತಾಗಿದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್‌ ಹೇಳಿದ್ದಾರೆ.

ಬೆಂಗಳೂರಿಗೆ ಮೊದಲು ಸಿಗಲಿದೆ 5G
ಬೆಂಗಳೂರು ಸೇರಿದಂತೆ 13 ನಗರಗಳಲ್ಲಿ ಮೊದಲ ಬಾರಿಗೆ 5G ಸೇವೆ ಸಿಗಲಿದೆ.
ಬೆಂಗಳೂರು, ಅಹಮದಾಬಾದ್‌, ಚಂಡೀಗಢ, ಚೆನ್ನೈ, ನವದೆಹಲಿ, ಗಾಂಧಿನಗರ, ಗುರ್‌ಗಾಂವ್‌, ಹೈದರಾಬಾದ್‌, ಜಾಮ್‌ನಗರ್‌, ಕೋಲ್ಕೊತಾ, ಲಖನೌ, ಮುಂಬಯಿ ಮತ್ತು ಪುಣೆಯಲ್ಲಿ ಮೊದಲು 5G ನೆಟ್‌ ವರ್ಕ್‌ ಸೌಲಭ್ಯ ಸಿಗಲಿದೆ.

ಪ್ರಧಾನಿ ನರೇಂದ್ರ ಮೋದಿ 5G ಬಗ್ಗೆ ಹೇಳಿದ್ದೇನು?
ಇಪ್ಪತ್ತೊಂದನೇ ಶತಮಾನದಲ್ಲಿ ದೇಶದ ಆರ್ಥಿಕ ಬೆಳವಣಿಗೆಗೆ ಸಂಪರ್ಕ ಕ್ಷೇತ್ರದಲ್ಲಿ ಸುಧಾರಣೆ ಅವಶ್ಯಕ. 5G ಅಂಥ ಸಕಾರಾತ್ಮಕ ಬದಲಾವಣೆಯನ್ನು ಉಂಟು ಮಾಡಲಿದೆ. ಇದರಿಂದಾಗಿ ಮುಂದಿನ 10 ವರ್ಷಗಳಲ್ಲಿ ಭಾರತದ ಜಿಡಿಪಿ ಪ್ರಗತಿಗೆ ಅಭಿವೃದ್ಧಿ, ಉದ್ಯೋಗ ಸೃಷ್ಟಿ ಇತ್ಯಾದಿಗಳ ಮೂಲಕ 450 ಶತಕೋಟಿ ಡಾಲರ್‌, ಅಂದರೆ ಅಂದಾಜು 35 ಲಕ್ಷ ಕೋಟಿ ರೂ. ಸೇರ್ಪಡೆಯಾಗಲಿದೆ ಎನ್ನುತ್ತಾರೆ ಪ್ರಧಾನಿ ನರೇಂದ್ರ ಮೋದಿ. ಆದ್ದರಿಂದ 2030ರ ವೇಳೆಗೆ 6G ಅನ್ನು ಜಾರಿಗೊಳಿಸಲೂ ಸರ್ಕಾರ ಈಗಾಗಲೇ ಕಾರ್ಯಪಡೆಯನ್ನು ರಚಿಸಿದೆ. 2G ಕಾಲದಲ್ಲಿ ಭ್ರಷ್ಟಾಚಾರ, ದೊಡ್ಡ ಹಗರಣಗಳು, ಅರಾಜಕತೆ ಇತ್ತು. ನಾವು ಇವುಗಳನ್ನೆಲ್ಲ ದಾಟಿ 3Gಯಿಂದ 4G ಹಾಗೂ ಇದೀಗ 5G ಮತ್ತು 6G ಯುಗಕ್ಕೆ ವೇಗವಾಗಿ ಬಂದಿದ್ದೇವೆ. ಹಲವಾರು ಸಮಸ್ಯೆಗಳನ್ನು ಬಗೆಹರಿಸಿರುವುದರಿಂದ ಟೆಲಿಕಾಂ ಕ್ಷೇತ್ರಕ್ಕೆ ಈಗ ವಿದೇಶಿ ಹೂಡಿಕೆಯ ಹರಿವು ಹೆಚ್ಚಿದೆ. 2014ಕ್ಕೆ ಮೊದಲು ದೇಶದಲ್ಲಿ 100 ಗ್ರಾಮ ಪಂಚಾಯಿತಿಗಳಿಗೂ ಇಂಟರ್‌ನೆಟ್ ಸಂಪರ್ಕ ಇದ್ದಿರಲಿಲ್ಲ. ಈಗ 1.75 ಲಕ್ಷ ಗ್ರಾಮಪಂಚಾಯಿತಿಗಳಿಗೆ ನೆಟ್‌ ಸಂಪರ್ಕವಿದೆ. ಪ್ರತಿಯೊಂದು ಗ್ರಾಮ ಪಂಚಾಯಿತಿಗೂ ಇದೆ ಎನ್ನುತ್ತಾರೆ ಮೋದಿ.

ಸವಾಲುಗಳೇನು?
ಗ್ರಾಮೀಣ ಪ್ರದೇಶಗಳಲ್ಲಿ ಮೊಬೈಲ್‌ ಟವರ್‌ಗಳ ಸಂಖ್ಯೆ ಹೆಚ್ಚಳವಾಗಲಿದೆ. 4G ಮೊಬೈಲ್‌ಗಳ ಬದಲಿಗೆ 5G ಮೊಬೈಲ್‌ಗಳನ್ನು ಖರೀದಿಸಬೇಕಾಗುತ್ತದೆ. 5Gಗೆ ಬೇಕಾಗುವ ಅಗಾಧ ಮೂಲಸೌಕರ್ಯ ಸವಾಲಾಗಿ ಪರಿಣಮಿಸಬಹುದು. ಎರಡನೆಯದಾಗಿ 5G ಸ್ಪೆಕ್ಟ್ರಮ್‌ ಹರಾಜಿನಲ್ಲಿ ಬಿಡ್ಡಿಂಗ್‌ನ ದುಬಾರಿ ಮೂಲ ದರದ ಪರಿಣಾಮ ಖಾಸಗಿ ಟೆಲಿಕಾಂ ಕಂಪನಿಗಳಿಗೆ ಖರೀದಿ ಕಷ್ಟವಾಗಬಹುದು. ಕಾರ್ಪೊರೇಟ್‌ ಕಂಪನಿಗಳಿಗೆ ಅವುಗಳ ಅಗತ್ಯಕ್ಕೆ ತಕ್ಕಂತೆ ಖಾಸಗಿ ಸಂಪರ್ಕ ನೆಟ್‌ವರ್ಕ್‌ಗಳನ್ನು ಅಳವಡಿಸಲು ನೇರವಾಗಿ ದೂರಸಂಪರ್ಕ ಇಲಾಖೆ ಮೂಲಕ 5G ವಿತರಣೆಗೂ ಸರ್ಕಾರ ಪ್ರಸ್ತಾಪಿಸಿದೆ. ಆದರೆ ಇದರಿಂದ ತಮ್ಮ ಬಿಸಿನೆಸ್‌ಗೆ ಎಲ್ಲಿ ಹೊಡೆತ ಬೀಳುವುದೋ ಎಂಬ ಆತಂಕ ಟೆಲಿಕಾಂ ಕಂಪನಿಗಳಿಗೆ ಇವೆ. ಇಂಥ ಸವಾಲುಗಳನ್ನು ಸರ್ಕಾರ ಹೇಗೆ ನಿಭಾಯಿಸಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ. ಆದರೆ 5G ಮತ್ತು 6G ನೀಡಲಿರುವ ಪ್ರಯೋಜನಗಳು ದೊಡ್ಡದು ಎಂಬುದರಲ್ಲಿ ಅನುಮಾನವಿಲ್ಲ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ತಂತ್ರಜ್ಞಾನ

SmartPhone: ಆನ್‌ಲೈನ್‌ನಲ್ಲಿ ಮೊಬೈಲ್ ಖರೀದಿಸುವ ಯೋಚನೆ ಇತ್ತಾ? ನಿಮಗೊಂದು ಶಾಕಿಂಗ್ ನ್ಯೂಸ್!

ಶಿಯೋಮಿ ಮತ್ತು ರಿಯಲ್ ಮಿ ಸ್ಮಾರ್ಟ್ ಫೋನ್  ಬ್ರ್ಯಾಂಡ್ ಗಳು ಚಿಲ್ಲರೆ ವ್ಯಾಪಾರಿಗಳು ನೀಡುತ್ತಿರುವ ರಿಯಾಯಿತಿಗಳಿಗೆ ತಡೆ ಹಾಕಲು ಮುಂದಾಗಿದೆ. ಅಧಿಕೃತ ಚಾನೆಲ್‌ಗಳ ಹೊರಗೆ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುವುದನ್ನು ತಡೆಯುವ ಒಪ್ಪಂದಕ್ಕೆ ಸಹಿ ಹಾಕಿಸಿಕೊಂಡು ಎಚ್ಚರಿಕೆ ನೀಡಿವೆ.

VISTARANEWS.COM


on

SmartPhone
Koo

ಬೆಂಗಳೂರು: ಶಿಯೋಮಿ ಮತ್ತು ರಿಯಲ್ ಮಿ ಸ್ಮಾರ್ಟ್ ಫೋನ್  ಬ್ರ್ಯಾಂಡ್‌ಗಳು ಆನ್‌ ಲೈನ್ ಪ್ಲಾಟ್‌ ಫಾರ್ಮ್‌ ಗಳಲ್ಲಿ ತಮ್ಮ ಮೊಬೈಲ್ ಫೋನ್‌ಗಳಿಗೆ (Mobile phone) ಚಿಲ್ಲರೆ ವ್ಯಾಪಾರಿಗಳು ನೀಡುತ್ತಿರುವ ರಿಯಾಯಿತಿಗಳಿಗೆ ಬ್ರೇಕ್ ಹಾಕಲು ಹೊರಟಿವೆ ಎಂದು ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ. ಅಂದರೆ, ಇನ್ನು ಮುಂದೆ ಪ್ರಮುಖ ಬ್ರ್ಯಾಂಡ್‌ಗಳ ಮೊಬೈಲ್‌ಗಳು ಆನ್‌ಲೈನ್‌ ಮೂಲಕ ಹೆಚ್ಚಿನ ರಿಯಾಯಿತಿ ದರದಲ್ಲಿ ಸಿಗುವುದಿಲ್ಲ.

ಭಾರತದಲ್ಲಿ ತಮ್ಮ ಉತ್ಪನ್ನಗಳ ಮಾರಾಟದ ವ್ಯಾಪ್ತಿ ಹೆಚ್ಚಿಸಲು ಕಂಪನಿಗಳು ಆಫ್‌ ಲೈನ್ ಚಾನಲ್ ಗಳಿಗೆ ಒತ್ತು ನೀಡುವ ಗುರಿಯನ್ನು ಹೊಂದಿವೆ. ಹಾಗಾಗಿ ಆನ್‌ಲೈನ್‌ ರಿಯಾಯಿತಿಗಳಿಗೆ ತಡೆ ಹಾಕಲು ಮುಂದಾಗಿವೆ. ಆನ್‌ಲೈನ್‌ ರಿಯಾಯಿತಿ ಮಾರಾಟದಿಂದಾಗಿ ತಮಗೆ ಭಾರಿ ನಷ್ಟವಾಗುತ್ತಿದೆ ಎಂದು ಚಿಲ್ಲರೆ ವ್ಯಾಪಾರಿಗಳ ಸಂಘಗಳು ದೂರಿದ್ದವು. ಈ ಹಿನ್ನೆಲೆಯಲ್ಲಿ ಶಿಯೋ ಮಿ ಮತ್ತು ರಿಯಲ್ ಮಿ ಕಂಪನಿಗಳು ರಿಯಾಯಿತಿ ದರದಲ್ಲಿನ ಆನ್‌ಲೈನ್‌ ಮಾರಾಟಕ್ಕೆ ಕಡಿವಾಣ ಹಾಕಲು ಮುಂದಾಗಿವೆ. ಮಿತಿ ಮೀರಿದ ವಿನಾಯಿತಿ ನೀಡುವವರನ್ನು ಪತ್ತೆ ಹಚ್ಚಿ ದಂಡ ವಿಧಿಸುವ ಉದ್ದೇಶದಿಂದ ಕಡಿಮೆ ಬೆಲೆಯಲ್ಲಿ ಮಾರಾಟವಾಗುವ ಸ್ಟಾಕ್ ಗಳನ್ನು ಈ ಕಂಪನಿಗಳು ಮರುಖರೀದಿ ಮಾಡುತ್ತಿವೆ ಎಂದು ವರದಿಗಳು ತಿಳಿಸಿವೆ.

ವ್ಯಾಪಾರಿಗಳ ಮೇಲೆ ಏನು ಕ್ರಮ?

ಬ್ರ್ಯಾಂಡ್‌ ಗಳು ಸದ್ಯಕ್ಕೆ ಚಿಲ್ಲರೆ ವ್ಯಾಪಾರಿಗಳ ಮೇಲೆ ಯಾವುದೇ ಕ್ರಮವನ್ನು ತೆಗೆದುಕೊಳ್ಳುತ್ತಿಲ್ಲ. ಅಧಿಕೃತ ಚಾನೆಲ್‌ಗಳ ಹೊರಗೆ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುವುದನ್ನು ತಡೆಯುವ ಒಪ್ಪಂದಕ್ಕೆ ಸಹಿ ಹಾಕಿಸಿಕೊಂಡು ಎಚ್ಚರಿಕೆ ನೀಡುತ್ತಿವೆ. ಜಮ್ಮು, ಪಶ್ಚಿಮ ಬಂಗಾಳ, ಹರಿಯಾಣ ಮತ್ತು ತಮಿಳುನಾಡಿನ ಹಲವು ಚಿಲ್ಲರೆ ವ್ಯಾಪಾರಿಗಳಿಂದ ಈ ರೀತಿ ಸಹಿ ಹಾಕಿಸಿಕೊಳ್ಳಲಾಗಿದೆ.

ಆನ್‌ ಲೈನ್ ಮೊಬೈಲ್ ಮಾರಾಟದ ಹೆಚ್ಚಿನ ರಿಯಾಯಿತಿಗಳ ಮೇಲೆ ದೂರು

ಆಲ್ ಇಂಡಿಯಾ ಮೊಬೈಲ್  ರೀಟೇಲರ್ಸ್ ಅಸೋಸಿಯೇಷನ್ (AIMRA)ನ ರಾಜ್ಯ ಘಟಕಗಳಿಂದ ಹಲವಾರು ದೂರುಗಳು ಬಂದಿವೆ. ಅದರ ಪ್ರಕಾರ ಶಿಯೋಮಿ, ರಿಯಲ್ ಮಿ ಮತ್ತು ಸ್ಯಾಮ್ ಸಂಗ್ ನಂತಹ ಬ್ರ್ಯಾಂಡ್‌ ಗಳ ಹನ್ನೆರಡು ಉತ್ಪನ್ನಗಳನ್ನು ಆನ್‌ಲೈನ್ ಚಾನೆಲ್‌ ಗಳಲ್ಲಿ ಸುಮಾರು 1,000-2,000 ರೂ. ಕಡಿಮೆ ಬೆಲೆಗೆ ಮಾರಾಟ ಮಾಡಲಾಗುತ್ತಿದೆ.

ಇದನ್ನೂ ಓದಿ:Phone Addiction: ಸ್ಮಾರ್ಟ್‌ಫೋನ್‌ ಚಟದಿಂದ ಹೊರಬರಲು ಹೀಗೆ ಮಾಡಿ!

“ಇಕಾಮರ್ಸ್ ಪ್ಲಾಟ್‌ ಫಾರ್ಮ್‌ಗಳು ಆನ್‌ ಲೈನ್‌ನಲ್ಲಿ ಚಿಲ್ಲರೆ ವ್ಯಾಪಾರಿಗಳನ್ನು ನೋಂದಾಯಿಸಿ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಬ್ರ್ಯಾಂಡ್ ಅನುಮತಿಸಿದೆ. ಇದು ನಿಜವಾಗಿಯೂ ಆತಂಕಕಾರಿ ಪರಿಸ್ಥಿತಿಯಾಗಿದೆ. ಗ್ರಾಹಕರಿಗೆ ತಮ್ಮ ಅತ್ಯುತ್ತಮ ಸಾಮರ್ಥ್ಯಗಳೊಂದಿಗೆ ಉತ್ಪನ್ನವನ್ನು ಮಾರಾಟ ಮಾಡಲು ಪ್ರಾಮಾಣಿಕ ಪ್ರಯತ್ನಗಳನ್ನು ಮಾಡುತ್ತಿರುವ ಮುಖ್ಯ ಚಿಲ್ಲರೆ ವ್ಯಾಪಾರಿಗಳ ನಂಬಿಕೆಯನ್ನು ಬ್ರ್ಯಾಂಡ್ ಕಳೆದುಕೊಳ್ಳುತ್ತಿದೆ.”  ಎಂದು ಚಿಲ್ಲರೆ ವ್ಯಾಪಾರಿಗಳ ಸಂಘವು ಮಾರ್ಚ್ 26ರಂದು ರಿಯಲ್ ಮಿಗೆ ಬರೆದ ಪತ್ರದಲ್ಲಿ ತಿಳಿಸಿತ್ತು.

ಇದೇ ರೀತಿಯ ಪತ್ರಗಳನ್ನು ಶಿಯೋಮಿಗೂ ಕಳುಹಿಸಲಾಗಿದೆ. ಅದರ ಪ್ರತಿನಿಧಿಯೊಬ್ಬರು ಈ ಬಗ್ಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ನಾವು ಈ ಸಮಸ್ಯೆಯ ಮೂಲ ಹುಡುಕಲು ಮತ್ತು ಭಾರೀ ದಂಡದೊಂದಿಗೆ ಅದನ್ನು ಸರಿಪಡಿಸಲು ಸ್ಟಾಕ್‌ ಗಳನ್ನು ಖರೀದಿಸುತ್ತಿದ್ದೇವೆ ಎಂದವರು ತಿಳಿಸಿದ್ದಾರೆ.

Continue Reading

5 G

Team India : ಭಾರತ ತಂಡ 2024ರ ಮಾರ್ಚ್​ ತನಕವೂ ಬ್ಯುಸಿ; ಇಲ್ಲಿದೆ ಟೂರ್ನಿಗಳ ವಿವರ

ಮುಂದಿನ ನಾಲ್ಕು ತಿಂಗಳಲ್ಲಿ ಭಾರತವು (Team India) ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ಅಫ್ಘಾನಿಸ್ತಾನ ಮತ್ತು ಇಂಗ್ಲೆಂಡ್ ವಿರುದ್ಧ ಸರಣಿಗಳನ್ನು ಆಡಲಿದೆ.

VISTARANEWS.COM


on

Cricket news
Koo

ಬೆಂಗಳೂರು: ಐಸಿಸಿ ಕ್ರಿಕೆಟ್ ವಿಶ್ವಕಪ್ 2023ರ ಫೈನಲ್​ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಆರು ವಿಕೆಟ್​ಗಳಿಂದ ಸೋತ ನಂತರ ಬೇಸರದಲ್ಲಿದೆ. ಆದರೆ, ಹೆಚ್ಚು ದಿನ ಅದೇ ಮೂಡ್​ನಲ್ಲಿ ಇರಲು ಅವಕಾಶವಿಲ್ಲ. ಟೀಮ್ ಇಂಡಿಯಾ ಮುಂದಿನ ಮೂರು ತಿಂಗಳಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿರಲಿದೆ. ನಿರಂತರ ವೇಳಾಪಟ್ಟಿಯನ್ನು ಹೊಂದಿರುವುದರಿಂದ ತ್ವರಿತವಾಗಿ ಮರು ಸಂಘಟನೆಗೊಳ್ಳಬೇಕಾಗಿಎ. ವಿಶ್ವಕಪ್ ಬಳಿಕ ಟೀಂ ಇಂಡಿಯಾ ನವೆಂಬರ್ 23ರಿಂದ ಆರಂಭವಾಗಲಿರುವ 5 ಪಂದ್ಯಗಳ ಟಿ20 ಸರಣಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೆಣಸಲಿದೆ. ಅದಕ್ಕೀಗ ತಂಡ ಪ್ರಕಟಗೊಂಡಿದೆ.

ರೋಹಿತ್ ಶರ್ಮಾ ನೇತೃತ್ವದ ತಂಡವು ಡಿಸೆಂಬರ್​ನಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿದ್ದು, ಮೂರು ಟಿ 20 ಮತ್ತು ಅನೇಕ ಏಕದಿನ ಪಂದ್ಯಗಳನ್ನು ಆಡಲಿದೆ. ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಅವರು ದಕ್ಷಿಣ ಆಫ್ರಿಕಾವನ್ನು ಎದುರಿಸಲಿದ್ದಾರೆ. ಇದಲ್ಲದೆ, ಭಾರತವು ಅಫ್ಘಾನಿಸ್ತಾನ ವಿರುದ್ಧ ಮೂರು ಪಂದ್ಯಗಳ ಟಿ 20 ಐ ಸರಣಿಯೊಂದಿಗೆ ಹೊಸ ವರ್ಷವನ್ನು ಪ್ರಾರಂಭಿಸಲಿದೆ. ನಂತರ ಜನವರಿ ಕೊನೆಯ ವಾರದಲ್ಲಿ ಇಂಗ್ಲೆಂಡ್ ವಿರುದ್ಧ ಐದು ಪಂದ್ಯಗಳ ಟೆಸ್ಟ್ ಸರಣಿ ಪ್ರಾರಂಭವಾಗಲಿದೆ.

ಟಿ20ಗೆ ಆದ್ಯತೆ

ಮುಂಬರುವ ಪ್ರವಾಸಗಳು ಟಿ 20 ಪಂದ್ಯಗಳಿಂದಲೇ ತುಂಬಿರುತ್ತವೆ. ಏಕೆಂದರೆ ತಂಡದ ಪ್ರಮುಖ ಗಮನವು ಯುಎಸ್ ಮತ್ತು ವೆಸ್ಟ್ ಇಂಡೀಸ್​ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ 2024 ರ ಮೇಲೆ ಇರುತ್ತದೆ. ಇದಲ್ಲದೆ, ನಿರ್ಣಾಯಕ ಸರಣಿಯಲ್ಲಿ ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್ ವಿರುದ್ಧ ಸೆಣಸಲಿರುವ ಭಾರತ ಟೆಸ್ಟ್ ತಂಡವು ವಿಶ್ವ ಟೆಸ್ಟ್ ಚಾಂಪಿಯನ್​ಶೀಪ್​ (ಡಬ್ಲ್ಯುಟಿಸಿ) ಪಾಯಿಂಟ್ಸ್ ಟೇಬಲ್​​ನಲ್ಲಿ ನಿರ್ಣಾಯಕ ಅಂಕಗಳನ್ನು ಸಂಗ್ರಹಿಸಲು ಸಜ್ಜಾಗಿದೆ.

ಡಬ್ಲ್ಯುಟಿಸಿ ಪಾಯಿಂಟ್ಸ್ ಟೇಬಲ್​ನಲ್ಲಿ ಟೀಮ್ ಇಂಡಿಯಾ ಪ್ರಸ್ತುತ ಎರಡು ಪಂದ್ಯಗಳಲ್ಲಿ ಒಂದು ಗೆಲುವು ಮತ್ತು ಒಂದು ಡ್ರಾದೊಂದಿಗೆ ಎರಡನೇ ಸ್ಥಾನದಲ್ಲಿದೆ. ಪಂದ್ಯಾವಳಿಯ ಹಿಂದಿನ ಎರಡು ಆವೃತ್ತಿಗಳಲ್ಲಿ ರನ್ನರ್ ಅಪ್ ಸ್ಥಾನ ಪಡೆದ ಭಾರತ ತಂಡ ಈ ಬಾರಿ ಒಂದು ಹೆಜ್ಜೆ ಮುಂದೆ ಹೋಗಿ ಅಪೇಕ್ಷಿತ ಗದೆ ರೂಪದ ಟ್ರೋಫಿಗೆ ಗೆಲ್ಲಲು ಸಿದ್ಧವಾಗಬೇಕಿದೆ.

ಇದನ್ನೂ ಓದಿ: Team India : ಜನವರಿಯಲ್ಲಿ ನಡೆಯಲಿದೆ ಅಫಘಾನಿಸ್ತಾನ ವಿರುದ್ಧ ಕ್ರಿಕೆಟ್​ ಸರಣಿ

ಪಂತ್​ಗಾಗಿ ಕಾಯುವಿಕೆ

ಪ್ಯಾಕ್ ಆಗಿರುವ ವೇಳಾಪಟ್ಟಿಯ ಹೊರತಾಗಿ, 2022 ರ ಡಿಸೆಂಬರ್​ನಲ್ಲಿ ಭೀಕರ ಕಾರು ಅಪಘಾತದ ಬಳಿಕ ಸುಧಾರಿಸಿಕೊಳ್ಳುತ್ತಿರುವ ಮತ್ತು ಸುಮಾರು ಒಂದು ವರ್ಷದಿಂದ ಆಟದಿಂದ ಹೊರಗುಳಿದಿದ್ದ ರಿಷಭ್ ಪಂತ್ ಮತ್ತೆ ಭಾರತೀಯ ತಂಡಕ್ಕೆ ಮರಳಲು ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಿರ್ದೇಶಕ ಸೌರವ್ ಗಂಗೂಲಿ ಅವರು ಪಂತ್ ಐಪಿಎಲ್ 2024 ರಲ್ಲಿ ಭಾಗವಹಿಸುತ್ತಾರೆ ಎಂದು ಖಚಿತಪಡಿಸಿದ್ದಾರೆ ಮತ್ತು ಅವರ ಅಂತಾರಾಷ್ಟ್ರೀಯ ಪುನರಾಗಮನವು ಫೆಬ್ರವರಿ 2023 ರಲ್ಲಿ ಇಂಗ್ಲೆಂಡ್ ವಿರುದ್ಧದ ಸರಣಿಯ ಸಮಯದಲ್ಲಿ ನಡೆಯುವ ಸಾಧ್ಯತೆಯಿದೆ.

Continue Reading

5 G

BSNL 5G : ಗ್ರಾಹಕರಿಗೆ ಸಿಹಿ ಸುದ್ದಿ, ವರ್ಷಾಂತ್ಯಕ್ಕೆ ದೇಶಾದ್ಯಂತ ಸಿಗಲಿದೆ ಬಿಎಸ್ಸೆನ್ನೆಲ್‌ 5ಜಿ

VISTARANEWS.COM


on

BSNL users data hack and sold on dark web
Koo

ನವ ದೆಹಲಿ: ಬಿಎಸ್ಸೆನ್ನೆಲ್‌ನ (BSNL 5G) 4ಜಿ ನೆಟ್‌ ವರ್ಕ್‌ 2023ರ ವರ್ಷಾಂತ್ಯದ ವೇಳೆಗೆ 5ಜಿಗೆ ಮೇಲ್ದರ್ಜೆಗೇರಲಿದೆ ಎಂದು ಕೇಂದ್ರ ದೂರಸಂಪರ್ಕ ಖಾತೆ ಸಚಿವ ಅಶ್ವಿನಿ ವೈಷ್ಣವ್‌ ತಿಳಿಸಿದ್ದಾರೆ. (BSNL 5G) ಕಂಪನಿಯು ಪಂಜಾಬ್-ಫಿರೋಜ್‌ಪುರ್‌, ಪಠಾಣ್‌ ಕೋಟ್‌ ಮತ್ತು ಅಮೃತ್‌ಸರದಲ್ಲಿ 200 ಟವರ್‌ಗಳ ಸ್ಥಳಗಳಲ್ಲಿ 4ಜಿಯನ್ನು ಪ್ರಾಯೋಗಿಕವಾಗಿ ಆರಂಭಿಸಿದ್ದು, ಮೂರು ತಿಂಗಳ ಕಾಲ ನಡೆಯಲಿದೆ. ಬಳಿಕ ದಿನಕ್ಕೆ 200 ಸೈಟ್ಸ್‌ಗಳ ಲೆಕ್ಕದಲ್ಲಿ 4ಜಿ ನೆಟ್‌ ವರ್ಕ್‌ ವಿಸ್ತರಣೆಯಾಗಲಿದೆ. ಹಾಗೂ ನವೆಂಬರ್-ಡಿಸೆಂಬರ್‌ ವೇಳೆಗೆ 5ಜಿಗೆ ಅಪ್‌ಗ್ರೇಡ್‌ ಆಗಲಿದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್‌ ತಿಳಿಸಿದ್ದಾರೆ.

ಬಿಎಸ್ಸೆನ್ನೆಲ್‌ ಈಗಾಗಲೇ ಟಿಸಿಎಸ್‌ ಮತ್ತು ಐಟಿಐ ಲಿಮಿಟೆಡ್‌ ಜತೆಗೆ 4ಜಿ ನೆಟ್‌ ವರ್ಕ್‌ ಅಳವಡಿಕೆಗೆ ಸಂಬಂಧಿಸಿ 19,000 ಕೋಟಿ ರೂ.ಗಳ ಖರೀದಿ ಆರ್ಡರ್‌ಗೆ ಮುಂಗಡವನ್ನು ನೀಡಿದೆ (advance purchase order) ಎಂದು ಟೆಲಿಕಾಂ ಸಚಿವ ಅಶ್ವಿನಿ ವೈಷ್ಣವ್‌ ತಿಳಿಸಿದ್ದಾರೆ.

ಬಿಎಸ್ಸೆನ್ನೆಲ್‌ ನೆಟ್‌ ವರ್ಕ್‌ ಆರಂಭದಲ್ಲಿ 4ಜಿಯಲ್ಲಿ ಇರಲಿದೆ. ಬಳಿಕ ನವೆಂಬರ್-ಡಿಸೆಂಬರ್‌ ವೇಳೆಗೆ ಸಾಫ್ಟ್‌ವೇರ್‌ನಲ್ಲಿ ಸಣ್ಣ ಬದಲಾವಣೆಯೊಂದಿಗೆ 5ಜಿಗೆ ಅಪ್‌ಡೇಟ್‌ ಆಗಲಿದೆ ಎಂದು ಟೆಲಿಕಾಂ ಸಚಿವ ಅಶ್ವಿನಿ ವೈಷ್ಣವ್‌ ವಿವರಿಸಿದ್ದಾರೆ.

ಅಮೆರಿಕಕ್ಕೆ ಭಾರತದ ಟೆಲಿಕಾಂ ತಂತ್ರಜ್ಞಾನ ರಫ್ತು:

ಭಾರತದ ಟೆಲಿಕಾಂ ತಂತ್ರಜ್ಞಾನವನ್ನು ಅಮೆರಿಕಕ್ಕೂ ಈಗ ರಫ್ತು ಮಾಡಲಾಗುತ್ತಿದೆ. 18 ದೇಶಗಳು ಭಾರತದ 4ಜಿ ಮತ್ತು 5ಜಿ ತಂತ್ರಜ್ಞಾನವನ್ನು ಅಳವಡಿಸಲು ಉತ್ಸುಕವಾಗಿವೆ. ದೇಶ ದೂರಸಂಪರ್ಕ ತಂತ್ರಜ್ಞಾನದಲ್ಲಿ ಬೆಳೆಯುತ್ತಿರುವುದಕ್ಕೆ ಇದು ಸಾಕ್ಷಿ ಎಂದು ಟೆಲಿಕಾಂ ಸಚಿವ ಅಶ್ವಿನಿ ವೈಷ್ಣವ್‌ ತಿಳಿಸಿದ್ದಾರೆ.

ಇದನ್ನೂ ಓದಿ: BSNL OTT : ಬಿಎಸ್ಸೆನ್ನೆಲ್‌ನಿಂದ OTT ಸೇವೆ ಸಿನಿಮಾಪ್ಲಸ್‌ ಆರಂಭ

Continue Reading

5 G

Jio True 5G | ಜಿಯೋದಿಂದ ಹೊಸ ವರ್ಷದ ಕೊಡುಗೆ; ಮೈಸೂರಿನಲ್ಲಿ ಟ್ರೂ 5ಜಿ ಸೇವೆ ಪ್ರಾರಂಭ

ದೇಶದ ವಿವಿಧ ನಗರಗಳಲ್ಲಿ 5ಜಿ ಸೇವಯನ್ನು ಒದಗಿಸುತ್ತಿರುವ ರಿಲಯನ್ಸ್ ಜಿಯೋ ಇದೀಗ ಕರ್ನಾಟಕದ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಜಿಯೋ ಟ್ರೂ 5ಜಿ (Jio True 5G) ಸೇವೆಯನ್ನು ಆರಂಭಿಸಿದೆ.

VISTARANEWS.COM


on

Jio True 5G @ Mysuru
Koo

ಮೈಸೂರು: ರಿಲಯನ್ಸ್ ಜಿಯೋ ಮೈಸೂರಿನಲ್ಲಿ ಟ್ರೂ 5ಜಿ ಸೇವೆಗಳಿಗೆ (Jio True 5G) ಚಾಲನೆ ನೀಡಿತು. ಅಷ್ಟೇ ಅಲ್ಲ, ಲಖನೌ, ತಿರುವನಂತಪುರಂ, ನಾಸಿಕ್, ಔರಂಗಾಬಾದ್, ಚಂಡೀಗಢ, ಮೊಹಾಲಿ, ಪಂಚಕುಲ, ಜಿರಾಕ್‌ಪುರ, ಖರಾರ್ ಮತ್ತು ದೇರಾಬಸ್ಸಿಗಳಲ್ಲಿ ಕೂಡ ತನ್ನ ಟ್ರೂ 5ಜಿ ಸೇವೆಗಳ ಪ್ರಾರಂಭದ ಬಗ್ಗೆ ಘೋಷಣೆ ಮಾಡಿತು. ಅಂದಹಾಗೆ, ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ 5ಜಿ ಸೇವೆಗಳನ್ನು ಪ್ರಾರಂಭಿಸುವ ಮೊದಲ ಮತ್ತು ಏಕೈಕ ಆಪರೇಟರ್ ರಿಲಯನ್ಸ್ ಜಿಯೋ ಆಗಿದೆ.

ಬುಧವಾರದಿಂದಲೇ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ 1 ಜಿಬಿಪಿಎಸ್‌+ ವೇಗದಲ್ಲಿ ಅನಿಯಮಿತ ಡೇಟಾವನ್ನು ಅನುಭವಿಸಲು ಮೈಸೂರಿನಲ್ಲಿರುವ ಜಿಯೋ ಬಳಕೆದಾರರನ್ನು ಜಿಯೋ ವೆಲ್‌ಕಮ್ ಆಫರ್‌ಗೆ ಆಹ್ವಾನಿಸಲಾಗುತ್ತದೆ.

ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ ಜಿಯೋ ವಕ್ತಾರರು, ಮೈಸೂರು ನಗರದಲ್ಲಿ 5ಜಿ ಆರಂಭಿಸುವುದಕ್ಕೆ ನಾವು ಹೆಮ್ಮೆಪಡುತ್ತೇವೆ ಮತ್ತು ನಾವು ಟ್ರೂ 5ಜಿ ಸೇವೆಗಳನ್ನು ಹೊರತರಲು ಪ್ರಾರಂಭಿಸಿದಾಗಿನಿಂದ ನಮ್ಮ ಅತಿದೊಡ್ಡ ಆರಂಭದಲ್ಲಿ ಇದು ಒಂದಾಗಿದೆ. ಜಿಯೋ ಟ್ರೂ 5ಜಿ ತಂತ್ರಜ್ಞಾನದ ವೇರಿಯಂಟ್‌ ಪ್ರಯೋಜನಗಳನ್ನು ಆನಂದಿಸುವ ಮೂಲಕ ಈಗ 2023ರಿಂದ ಪ್ರಾರಂಭ ಆಗುವುದರೊಂದಿಗೆ ಲಕ್ಷಾಂತರ ಜಿಯೋ ಬಳಕೆದಾರರಿಗೆ ಇದು ಗೌರವವಾಗಿದೆ.

“ಮೈಸೂರು ನಮ್ಮ ದೇಶದ ಪ್ರಮುಖ ಪ್ರವಾಸೋದ್ಯಮ ಕೇಂದ್ರ ಮತ್ತು ಪ್ರಮುಖ ಶಿಕ್ಷಣ ಕೇಂದ್ರವಾಗಿದೆ. ಜಿಯೋದ ಟ್ರೂ 5ಜಿ ಸೇವೆಗಳ ಪ್ರಾರಂಭದೊಂದಿಗೆ ಈ ಪ್ರದೇಶದ ಗ್ರಾಹಕರು ಕೇವಲ ಉತ್ತಮ ದೂರಸಂಪರ್ಕ ಜಾಲವನ್ನು ಮಾತ್ರವಲ್ಲ, ಜತೆಗೆ ಇ-ಆಡಳಿತ, ಶಿಕ್ಷಣ, ಆಟೋಮೇಷನ್, ಕೃತಕ ಬುದ್ಧಿಮತ್ತೆ, ಗೇಮಿಂಗ್, ಆರೋಗ್ಯ, ಕೃಷಿ, ಐಟಿ ಕ್ಷೇತ್ರಗಳಲ್ಲಿ ಮತ್ತು ಸಣ್ಣ ಮತ್ತು ಮಧ್ಯಮ ಸಂಸ್ಥೆಗಳು ಅಮೋಘ ಬೆಳವಣಿಗೆಯ ಅವಕಾಶಗಳನ್ನು ಪಡೆಯುತ್ತಾರೆ. “ಈ ಪ್ರದೇಶವನ್ನು ಡಿಜಿಟಲೈಸ್ ಮಾಡುವ ನಮ್ಮ ಪ್ರಯತ್ನದಲ್ಲಿ ನಿರಂತರ ಬೆಂಬಲ ನೀಡುತ್ತಿರುವ ಕರ್ನಾಟಕ ಸರ್ಕಾರಕ್ಕೆ ನಾವು ಆಭಾರಿಯಾಗಿದ್ದೇವೆ” ಎಂದು ಅವರು ಹೇಳಿದರು.

ಇದನ್ನೂ ಓದಿ | Jio True 5G | ಮಹಾಕಾಲ ಮಹಾಲೋಕ, ಮಹಾಕಾಲೇಶ್ವರ ದೇವಸ್ಥಾನದಲ್ಲಿ ಜಿಯೋ ಟ್ರೂ 5ಜಿ ಸೇವೆ

Continue Reading
Advertisement
ಕರ್ನಾಟಕ7 mins ago

Rain News: ಮುಧೋಳದಲ್ಲಿ ಸಿಡಿಲಿಗೆ ಬಾಲಕಿ ಬಲಿ; ಚನ್ನರಾಯಪಟ್ಟಣ, ಗುಂಡ್ಲುಪೇಟೆ ಸೇರಿ ವಿವಿಧೆಡೆ ವರುಣಾರ್ಭಟ

dilip Kumar
ಪ್ರಮುಖ ಸುದ್ದಿ8 mins ago

Milind Kumar : ಆರ್​ಸಿಬಿಯ ಮಾಜಿ ಆಟಗಾರ ಕ್ರಿಕೆಟ್​ನಿಂದ ನಿವೃತ್ತಿ

Fan Code OTT Subscription Now for Jio AirFiber JioFiber Jio Mobility Customers
ದೇಶ23 mins ago

Reliance Jio: ಜಿಯೋ ಏರ್‌ಫೈಬರ್, ಜಿಯೋಫೈಬರ್, ಜಿಯೋ ಮೊಬಿಲಿಟಿ ಗ್ರಾಹಕರಿಗೆ ಫ್ಯಾನ್ ಕೋಡ್ ಒಟಿಟಿ ಸಬ್‌ಸ್ಕ್ರಿಪ್ಷನ್!

Gopi Hinduja
ವಿದೇಶ28 mins ago

Gopi Hinduja: ನಮ್ಮನ್ನಾಳಿದ ಬ್ರಿಟನ್‌ನಲ್ಲಿ ಭಾರತದ ಉದ್ಯಮಿಯೇ ಅತ್ಯಂತ ಸಿರಿವಂತ; ಯಾರಿವರು?

AC visited Gandabommanahalli Goshala and inspected
ವಿಜಯನಗರ1 hour ago

Vijayanagara News: ಗಂಡಬೊಮ್ಮನಹಳ್ಳಿಯ ಗೋಶಾಲೆಗೆ ಉಪ ವಿಭಾಗಾಧಿಕಾರಿ ಭೇಟಿ, ಪರಿಶೀಲನೆ

Application Invited for TTTI and Toyota Skill Courses from Toyota Technical Training Institute
ಕರ್ನಾಟಕ1 hour ago

Toyota: ಟೊಯೊಟಾ ಕೌಶಲ್ಯ ಕೋರ್ಸ್‌ಗೆ ಅರ್ಜಿ ಆಹ್ವಾನ; ಗ್ರಾಮೀಣ ಯುವಕರೇ ಈ ಅವಕಾಶ ಬಳಸಿಕೊಳ್ಳಿ

SSLC Exam 2024
ಕರ್ನಾಟಕ1 hour ago

SSLC 2024 Exam 2: ಎಸ್‌ಎಸ್‌ಎಲ್‌ಸಿ ಪರೀಕ್ಷೆ-1 ಫೇಲ್‌ ಆದ ವಿದ್ಯಾರ್ಥಿಗಳಿಗೆ ವಿಶೇಷ ಪರಿಹಾರ ಬೋಧನೆ ತರಗತಿ ಮುಂದೂಡಿಕೆ

ಕ್ರಿಕೆಟ್1 hour ago

Gautam Gambhir : ಗೌತಮ್​ ಗಂಭೀರ್ ಟೀಮ್ ಇಂಡಿಯಾದ ಮುಂದಿನ ಕೋಚ್​​?

Retirement Plan
ಮನಿ ಗೈಡ್2 hours ago

Retirement Plan: ನಿವೃತ್ತಿ ನಂತರ ನೆಮ್ಮದಿ ಜೀವನ ನಡೆಸಬೇಕೆ? ಈ 5 ಯೋಜನೆಗಳನ್ನು ಮರೆಯಬೇಡಿ

Siddharth Kak
ದೇಶ2 hours ago

Siddharth Kak: ಡಿಡಿಯ ʼಸುರಭಿʼ ಕಾರ್ಯಕ್ರಮ ನೆನಪಿದೆಯಾ? ಪ್ರತಿ ವಾರ ಎಷ್ಟು ಲಕ್ಷ ಪೋಸ್ಟ್‌ ಕಾರ್ಡ್‌ ಬರುತ್ತಿತ್ತು ಗೊತ್ತಾ?

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Prajwal Revanna Case JDS calls CD Shivakumar pen drive gang
ರಾಜಕೀಯ2 hours ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

Karnataka weather Forecast
ಮಳೆ16 hours ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

Dina Bhavishya
ಭವಿಷ್ಯ17 hours ago

Dina Bhavishya : ಈ ರಾಶಿಯ ಪ್ರೇಮಿಗಳಿಗೆ ಮನೆಯಿಂದ ಸಿಗುತ್ತೆ ಗ್ರೀನ್‌ ಸಿಗ್ನಲ್‌

Karnataka Weather Forecast
ಮಳೆ1 day ago

Karnataka Weather : ಭಾರಿ ಮಳೆಗೆ ಕೊಟ್ಟೂರು ಬಸ್ ಸ್ಟ್ಯಾಂಡ್‌ ಜಲಾವೃತ; ‌ ತಾಯಿ-ಮಗ ಗ್ರೇಟ್‌ ಎಸ್ಕೇಪ್‌

Drowned in water
ಹಾಸನ1 day ago

Drowned in water : ಕೆರೆಯಲ್ಲಿ ಈಜಲು ಹೋದ ನಾಲ್ವರು ನೀರುಪಾಲು; ಓರ್ವ ಬಾಲಕ ಪಾರು

Suspicious Case
ಬೆಂಗಳೂರು1 day ago

Suspicious Case : ಬಾತ್‌ ರೂಂನಲ್ಲಿತ್ತು ಕಾಲೇಜು ಹುಡುಗಿ ಡೆಡ್‌ ಬಾಡಿ; ಕುತ್ತಿಗೆ ಕೊಯ್ದು ಸಾಯಿಸಿದವರು ಯಾರು?

Prajwal Revanna Case
ಕರ್ನಾಟಕ3 days ago

Prajwal Revanna Case: ಪ್ರಜ್ವಲ್‌ ರೇವಣ್ಣ ಇಂದೇ ಜರ್ಮನಿಯಿಂದ ಭಾರತಕ್ಕೆ? ಎಸ್‌ಐಟಿ ಅಲರ್ಟ್‌

Dina Bhavishya
ಭವಿಷ್ಯ3 days ago

Dina Bhavishya : ಭೂ ವ್ಯವಹಾರಕ್ಕೆ ಇದು ಸೂಕ್ತ ಸಮಯ; ವ್ಯಾಪಾರದಲ್ಲಿ ಡಬಲ್‌ ಲಾಭ

HD Revanna Released first reaction after release will be acquitted of all charges
ರಾಜಕೀಯ3 days ago

HD Revanna Released: ರಿಲೀಸ್‌ ಬಳಿಕ ರೇವಣ್ಣ ಫಸ್ಟ್‌ ರಿಯಾಕ್ಷನ್;‌ ನ್ಯಾಯಾಂಗದ ಮೇಲೆ ನಂಬಿಕೆ ಇದೆ; ಆರೋಪ ಮುಕ್ತನಾಗುವೆ

CM Siddaramaiah says Our government is stable for 5 years BJP will disintegrate
Lok Sabha Election 20243 days ago

CM Siddaramaiah: ನಮ್ಮ ಸರ್ಕಾರ 5 ವರ್ಷ ಸುಭದ್ರ; ಚುನಾವಣೆ ಬಳಿಕ ಬಿಜೆಪಿ ಛಿದ್ರ ಎಂದ ಸಿಎಂ ಸಿದ್ದರಾಮಯ್ಯ!

ಟ್ರೆಂಡಿಂಗ್‌