Sunday read: ಹೊಸ ಪುಸ್ತಕ: ಅಂತರ್ವೀಕ್ಷಣೆ: ದೈವೀ ಮತ್ತು ಆಸುರೀ ಗುಣಗಳು - Vistara News

ಕಲೆ/ಸಾಹಿತ್ಯ

Sunday read: ಹೊಸ ಪುಸ್ತಕ: ಅಂತರ್ವೀಕ್ಷಣೆ: ದೈವೀ ಮತ್ತು ಆಸುರೀ ಗುಣಗಳು

ಪೂರ್ಣಿಮಾ ಹೆಗಡೆ ಅವರು ರಚಿಸಿರುವ ʼಅಂತರ್ವೀಕ್ಷಣೆʼ ಎಂಬ ಕೃತಿಯು ಭಗವದ್ಗೀಯನ್ನು ಆಧುನಿಕ ಕಥೆಗಳ ಮೂಲಕ ನೋಡುತ್ತದೆ. ಈ ಕೃತಿಯಿಂದ ಆಯ್ದ ಒಂದು ಭಾಗ ಇಲ್ಲಿದೆ.

VISTARANEWS.COM


on

antarvikshane
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo
purnima hegade

: ಪೂರ್ಣಿಮಾ ಹೆಗಡೆ

ಗುಣಗಳು ನಮ್ಮ ಜೀವನದಲ್ಲಿ ಬಹಳ ಪ್ರಮುಖ ಪಾತ್ರ ವಹಿಸುತ್ತವೆ. ಒಂದು ದುರ್ಗುಣ ನಮ್ಮನ್ನು ಪ್ರಪಾತಕ್ಕೂ ಬೀಳಿಸಬಹುದು, ಇಲ್ಲ ಒಂದು ಸದ್ಗುಣ ಎತ್ತರಕ್ಕೂ ಏರಿಸಬಲ್ಲದು. ದೈವೀಗುಣ ಅಥವಾ ಆಸುರೀಗುಣ ಎರಡೂ ಇರುತ್ತದೆ. ಎರಡೂ ನಮ್ಮ ಜೀವನದ ದಿಕ್ಕನ್ನೇ ಬದಲಿಸಬಹುದು.

ಯಾವುದನ್ನು ಹೆಚ್ಚಿಸಿಕೊಳ್ಳಬೇಕು ಎನ್ನುವುದು ನಮ್ಮ ವಿವೇಚನೆಗೆ ಬಿಟ್ಟ ವಿಷಯ. ಪಾಪ ಕಾರ್ಯಗಳಲ್ಲಿ ತೊಡಗಿದ್ದ ಬೇಡನೊಬ್ಬ ಆಸುರೀ ಗುಣಗಳ ಅಥವಾ ಕೆಟ್ಟ ಕೆಲಸಗಳ ಪರಿಣಾಮ ಅರಿತು ರಾಮಾಯಣವನ್ನು ರಚಿಸುವ ಮಹಾಕವಿ ವಾಲ್ಮೀಕಿಯಾಗಿ ಪರಿವರ್ತನೆ ಆಗಲೂಬಹುದು. ರಾಕ್ಷಸನ ಮಗನಾಗಿ ಹುಟ್ಟಿ ರಾಕ್ಷಸೀ ಗುಣ ಹೊಂದದೆ ಹರಿ ಭಕ್ತನೆಂದು ಪ್ರಸಿದ್ಧನಾದ ಪ್ರಹ್ಲಾದನಾಗಿಯೂ ಇರಬಹುದು. ಇಲ್ಲವೇ ಶಿವನಿಂದ ಆತ್ಮಲಿಂಗ ಪಡೆದು ರಾಕ್ಷಸಗುಣಕ್ಕೆ ವಶನಾಗಿ ರಾವಣನಾಗಲೂಬಹುದು. ಎಲ್ಲ ನಮ್ಮ ವಿವೇಕಕ್ಕೆ ಬಿಟ್ಟ ವಿಷಯ.

ಹುಲು ಮಾನವರಾದ ನಮಗೆಲ್ಲ ಆಸೆ ಮೋಹ ಲೋಭ ಇತ್ಯಾದಿ ರಾಕ್ಷಸೀ ಗುಣಗಳು ಹಾಗೆಯೇ ದಯೆ, ಪ್ರೀತಿ, ಸಹನೆ ಇತ್ಯಾದಿ ದೈವೀ ಗುಣಗಳು ಇರುವುದು ಸಹಜ. ಅದರಲ್ಲಿ ನಮ್ಮ ಮಿತಿಗೆ ತಕ್ಕಂತೆ ಸಾತ್ವಿಕ ಗುಣಗಳನ್ನು ಉಳಿಸಿಕೊಂಡು ಬೆಳೆಸಿಕೊಳ್ಳುವುದು ಉತ್ತಮ. ಏಕೆಂದರೆ ಪರಿಶುದ್ಧ ಅಂತಃಕರಣ ಹೊಂದಿದವರಿಗೆ ಮಾತ್ರ ಪರಮಾತ್ಮ ಸಾಯುಜ್ಯ ಲಭ್ಯವಾಗುವುದು.

ದೈವಾಸುರಸಂಪದ್ ವಿಭಾಗಯೋಗ- ಸಂಕ್ಷಿಪ್ತವಾಗಿ ಅರ್ಜುನನಿಗೆ ಈ ಅಧ್ಯಾಯದಲ್ಲಿ ಶ್ರೀಕೃಷ್ಣ ಪರಮಾತ್ಮ ದೈವೀ ಸಂಪತ್ತು ಹಾಗೂ ಆಸುರೀ ಸಂಪತ್ತು ಎಂಬ ಎರಡು ವಿಭಾಗಗಳ ಬಗ್ಗೆ ತಿಳಿವಳಿಕೆ ನೀಡುತ್ತಾನೆ. ದೈವೀ
ಸಂಪತ್ತು ಹೊಂದಿದವರು ಮೋಕ್ಷದ ದಾರಿಯಲ್ಲಿ ನಡೆದರೆ ಆಸುರೀ ಸಂಪತ್ತು ಹೊಂದಿದವರು ವಿಕಾರಕ್ಕೊಳಗಾಗಿ ಪರರ ಶರೀರದೊಳಗಿರುವ ಅಂತರ್ಯಾಮಿ ಆದ ಪರಮಾತ್ಮನನ್ನೇ ದ್ವೇಷಿಸುತ್ತ ಸಂಸಾರ ಚಕ್ರದಲ್ಲಿ ಬಂಧಿ ಆಗುವರು.

ದೈವೀ ಸಂಪತ್ತು : ಅಹಿಂಸೆ, ಅಭಯ ಅಥವಾ ಧೈರ್ಯ, ಸತ್ಯ, ಅಕ್ರೋಧ – ಕೋಪ ಇಲ್ಲದಿರುವುದು, ಶಾಂತಿ, ದಯೆ, ಕೋಮಲತೆ, ಲಜ್ಜೆ, ದಾನ, ದಮ-ಇಂದ್ರಿಯಗಳ ದಮನ, ಯಜ್ಞ, ಸ್ವಾಧ್ಯಾಯ, ತಪಸ್ಸು, ಋಜುತ್ವ – ಸರಳತೆ, ಅಂತಃಕರಣದ ನಿರ್ಮಲತೆ, ಜ್ಞಾನಯೋಗದಲ್ಲಿ ಸ್ಥಿರತೆ, ತ್ಯಾಗ, ಚಾಡಿ ಹೇಳದಿರುವುದು, ಲೋಲುಪತೆ ಇಲ್ಲದಿರುವುದು, ಚಂಚಲತೆ ಇಲ್ಲದಿರುವುದು, ತೇಜಸ್ಸು, ಕ್ಷಮೆ, ಧೃತಿ, ಅತೀ ಅಭಿಮಾನ ಇಲ್ಲದಿರುವುದು,
ಶುಚಿ ಇವೆಲ್ಲಾ ದೈವೀ ಸಂಪತ್ತಿನ ಲಕ್ಷಣಗಳು. ದೈವೀ ಸಂಪತ್ತು ಜೀವಿಯನ್ನು ಮೋಕ್ಷಕ್ಕಾಗಿ ಪ್ರಯತ್ನಿಸಲು ಪ್ರೆರೇಪಿಸುತ್ತದೆ.

ಆಸುರೀ ಸಂಪತ್ತು : ಜಂಭ, ಅಹಂಕಾರ, ಅಭಿಮಾನ, ಕ್ರೋಧ, ಕಠೋರತೆ, ಅಜ್ಞಾನ ಇವೆಲ್ಲಾ ಆಸುರೀ ಸಂಪತ್ತಿನ ಲಕ್ಷಣಗಳು, ಬಂಧನಕ್ಕೆ ಗುರಿಯಾಗಿಸುತ್ತವೆ. ಆಸುರೀ ಜನರು ಪ್ರವೃತ್ತಿ ಹಾಗೂ ನಿವೃತ್ತಿಯ ಮಾರ್ಗವನ್ನು ಅರಿಯರು. ಅವರಲ್ಲಿ ಅಂತಃಕರಣ ಶುದ್ಧಿಯಾಗಲಿ ಬಾಹ್ಯ ಶುದ್ಧಿಯಾಗಲಿ ಇರುವುದಿಲ್ಲ. ಈ ಜಗತ್ತು ಆಧಾರರಹಿತವಾದದ್ದು. ಕಾಮವೇ ಈ ಜಗತ್ತಿನ ಸೃಷ್ಟಿಗೆ ಕಾರಣ ಎಂದು ಆಸುರೀ ಜನರು ತಿಳಿಯುವರು. ಇಂತವರು ಜಗತ್ತಿನ ನಾಶಕ್ಕೆ ಕಾರಣವಾಗುವರು. ಕಾಮ, ಕ್ರೋಧ, ಲೋಭಗಳಲ್ಲಿ ತೊಡಗುವರು. ತಾವೇ ಶ್ರೇಷ್ಠರೆಂದು ತಿಳಿದುಕೊಂಡು ಅಹಂಕಾರ, ಬಲ, ದರ್ಪ, ಕಾಮ, ಕ್ರೋಧ ಇವುಗಳನ್ನು ಅವಲಂಬಿಸಿದವರಾಗಿ ಹೊಟ್ಟೆಕಿಚ್ಚನ್ನು ಕಾರುವ ಇವರು ತಮ್ಮ ಶರೀರದೊಳಗೆ ಹಾಗೂ ಪರರ ಶರೀರದೊಳಗೆ ಇರುವ ಪರಮಾತ್ಮನನ್ನು ದ್ವೇಷಿಸುತ್ತಾರೆ. ಅಂಥವರು ಮತ್ತೆ ಮತ್ತೆ ಸಂಸಾರ ಚಕ್ರದಲ್ಲಿ ಸಿಲುಕುತ್ತಾರೆ.

ಇದನ್ನೂ ಓದಿ: Sunday Read: ಹೊಸ ಪುಸ್ತಕ: ದಿಗಂಬರ: ಬೀಗ ಹಾಕಿದ ಕದ, ತೆರೆಯದ ಮನಗಳು

ಕಾಮ, ಕ್ರೋಧ, ಲೋಭ ಇವು ಮೂರು ಆತ್ಮನನ್ನು ನಾಶಪಡಿಸುವಂತಹವು. ಆದ್ದರಿಂದ ಈ ಮೂರನ್ನು ತ್ಯಜಿಸತಕ್ಕದ್ದು.

ತ್ರಿವಿಧಂ ನರಕದಂ ದ್ವಾರಂ ನಾಶನಮಾತ್ಮನಃ | ಕಾಮಃ ಕ್ರೋಧಸ್ತಥಾ
ಲೋಭಸ್ತಸ್ಮಾದೇತತ್ ತ್ರಯಂ ತ್ಯಜೇತ್ ||

ಶಾಸ್ತ್ರ ವಿಧಿಯನ್ನು ಅನುಸರಿಸದೆ ಯಾರು ತನ್ನಿಷ್ಟದಂತೆ ನಡೆಯುತ್ತಾನೋ ಆತನು ಪರಮಗತಿಯನ್ನು ಹೊಂದುವುದಿಲ್ಲ. ಮಾಡಬೇಕಾದ್ದು ಯಾವುದು, ಮಾಡಬಾರದ್ದು ಯಾವುದು ಎಂಬುದನ್ನು ತಿಳಿದುಕೊಳ್ಳುವ ವಿಷಯದಲ್ಲಿ ಶಾಸ್ತ್ರವೇ ಪ್ರಮಾಣ. ಅದರ ಅನ್ವಯ ಕರ್ಮ ಮಾಡತಕ್ಕದ್ದು.

ತಸ್ಸಾಚ್ಚಾಸ್ಲಂ ಪ್ರಮಾಣಂ ತೇ ಕಾರ್ಯಾಕಾರ್ಯವ್ಯವಸ್ಥಿತ್ | ಜಾತ್ವಾ ಶಾಸ್ತ್ರವಿಧಾನೋಕ್ತಂ ಕರ್ಮ ಕರ್ತುಮಿಹಾರ್ಹಸಿ

ಇದನ್ನೂ ಓದಿ: Sunday Read: ಹೊಸ ಪುಸ್ತಕ: ಚಾಂಡಾಳನೊಬ್ಬನ ಆತ್ಮವಿಮರ್ಶೆ

ಕೃತಿ: ಅಂತರ್ವೀಕ್ಷಣೆ
ಲೇಖಕಿ: ಪೂರ್ಣಿಮಾ ಹೆಗಡೆ
ಪ್ರಕಾಶನ: ಸಾಹಿತ್ಯಲೋಕ ಪಬ್ಲಿಕೇಷನ್ಸ್‌
ಬೆಲೆ: 135 ರೂ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

Utthana Essay Competition 2024: ಉತ್ಥಾನ ಪ್ರಬಂಧ ಸ್ಪರ್ಧೆಗೆ ಬರಹ ಕಳುಹಿಸಿ; 10,000 ರೂ. ಬಹುಮಾನ ಪಡೆಯಿರಿ!

Utthana Essay Competition 2024: ಸದಭಿರುಚಿಯ ಮಾಸಪತ್ರಿಕೆ ʼಉತ್ಥಾನʼ ವತಿಯಿಂದ ಕಾಲೇಜು ವಿದ್ಯಾರ್ಥಿಗಳಿಗಾಗಿ “ಕೃತಕ ಬುದ್ಧಿಮತ್ತೆ ಮತ್ತು ಭವಿಷ್ಯದ ಜಗತ್ತು” ಎಂಬ ವಿಷಯದ ಕುರಿತು ರಾಜ್ಯ ಮಟ್ಟದ ವಾರ್ಷಿಕ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ʼಉತ್ಥಾನ ಕಾಲೇಜು ವಿದ್ಯಾರ್ಥಿ ಪ್ರಬಂಧ ಸ್ಪರ್ಧೆ 2024ʼರ ಪೋಸ್ಟರ್ ಅನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ವ್ಯವಸ್ಥಾ ಪ್ರಮುಖ್ ಮಂಗೇಶ್ ಭೇಂಡೆ, ಕರ್ನಾಟಕ ದಕ್ಷಿಣ ಪ್ರಾಂತದ ಪ್ರಾಂತ ಸಹ ಕಾರ್ಯವಾಹ ಪಟ್ಟಾಭಿರಾಮ ಮತ್ತೂರು ಹಾಗೂ ಬೆಂಗಳೂರಿನ ಇಂದಿರಾ ಗಾಂಧಿ ನ್ಯಾಷನಲ್ ಸೆಂಟರ್ ಫಾರ್ ದಿ ಆರ್ಟ್ಸ್‌ನ ಪ್ರಾದೇಶಿಕ ನಿರ್ದೇಶಕ ಡಿ. ಮಹೇಂದ್ರ ಅವರು ಬಿಡುಗಡೆ ಮಾಡಿದರು. ಉತ್ಥಾನ ಮಾಸಪತ್ರಿಕೆಯ ಸಂಪಾದಕ ಅನಿಲ್‌ಕುಮಾರ್ ಮೊಳಹಳ್ಳಿ ಉಪಸ್ಥಿತರಿದ್ದರು.

VISTARANEWS.COM


on

Utthana Essay Competition 2024
Koo

ಬೆಂಗಳೂರು: ಸದಭಿರುಚಿಯ ಮಾಸಪತ್ರಿಕೆ ʼಉತ್ಥಾನʼ ವತಿಯಿಂದ ಕಾಲೇಜು ವಿದ್ಯಾರ್ಥಿಗಳಿಗಾಗಿ “ಕೃತಕ ಬುದ್ಧಿಮತ್ತೆ ಮತ್ತು ಭವಿಷ್ಯದ ಜಗತ್ತು” ಎಂಬ ವಿಷಯದ ಕುರಿತು ರಾಜ್ಯಮಟ್ಟದ ವಾರ್ಷಿಕ ಪ್ರಬಂಧ ಸ್ಪರ್ಧೆಯನ್ನು (Utthana Essay Competition 2024) ಆಯೋಜಿಸಲಾಗಿದೆ.

ʼಉತ್ಥಾನ ಕಾಲೇಜು ವಿದ್ಯಾರ್ಥಿ ಪ್ರಬಂಧ ಸ್ಪರ್ಧೆ 2024ʼ ರ ಪೋಸ್ಟರ್ ಅನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ವ್ಯವಸ್ಥಾ ಪ್ರಮುಖ್ ಮಂಗೇಶ್ ಭೇಂಡೆ, ಕರ್ನಾಟಕ ದಕ್ಷಿಣ ಪ್ರಾಂತದ ಪ್ರಾಂತ ಸಹ ಕಾರ್ಯವಾಹ ಪಟ್ಟಾಭಿರಾಮ ಮತ್ತೂರು ಹಾಗೂ ಬೆಂಗಳೂರಿನ ಇಂದಿರಾ ಗಾಂಧಿ ನ್ಯಾಷನಲ್ ಸೆಂಟರ್ ಫಾರ್ ದಿ ಆರ್ಟ್ಸ್‌ನ ಪ್ರಾದೇಶಿಕ ನಿರ್ದೇಶಕ ಡಿ. ಮಹೇಂದ್ರ ಅವರು ಬಿಡುಗಡೆ ಮಾಡಿದರು. ಉತ್ಥಾನ ಮಾಸಪತ್ರಿಕೆಯ ಸಂಪಾದಕ ಅನಿಲ್‌ಕುಮಾರ್ ಮೊಳಹಳ್ಳಿ ಉಪಸ್ಥಿತರಿದ್ದರು.

ಇದನ್ನೂ ಓದಿ: Kali Bridge Collapse: ಕಾಳಿನದಿ ಸೇತುವೆ ಕುಸಿತ; ಉ.ಕ ಡಿಸಿಯಿಂದ ಮಾಹಿತಿ ಪಡೆದ ಸಿಎಂ

ಉತ್ಥಾನ ಮಾಸಪತ್ರಿಕೆಯು ಕಳೆದ ಹಲವು ವರ್ಷಗಳಿಂದ ಕಾಲೇಜು ವಿದ್ಯಾರ್ಥಿಗಳಿಗಾಗಿ ರಾಜ್ಯ ಮಟ್ಟದ ವಾರ್ಷಿಕ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸುತ್ತಾ ಬಂದಿದ್ದು, ಈ ಬಾರಿಯ 2024ನೇ ಸಾಲಿನಲ್ಲಿ ಕಾಲೇಜು ವಿದ್ಯಾರ್ಥಿ ಪ್ರಬಂಧ ಸ್ಪರ್ಧೆಗೆ ಪ್ರಬಂಧಗಳನ್ನು ಆಹ್ವಾನಿಸಲಾಗಿದೆ.

ಸ್ಪರ್ಧೆಯ ನಿಯಮಗಳು

ಸ್ಪರ್ಧೆಯಲ್ಲಿ ಪದವಿ, ಯಾ ತತ್ಸಮಾನ ಮತ್ತು ಸ್ನಾತಕೋತ್ತರ ಕಾಲೇಜು ವಿದ್ಯಾರ್ಥಿಗಳು ಮಾತ್ರ ಭಾಗವಹಿಸಬಹುದು. ಪ್ರಬಂಧವು ಕನ್ನಡ ಭಾಷೆಯಲ್ಲಿರಬೇಕು. ಪ್ರಬಂಧವು 1500 ಪದಗಳು ಮೀರದಂತೆ ಇರಲಿ. ಪ್ರಬಂಧವನ್ನು ಪೋಸ್ಟ್ ಮೂಲಕ ಅಥವಾ ಇಮೇಲ್ ಮೂಲಕ ಕಳುಹಿಸಬೇಕು.

ಸ್ಪರ್ಧೆಗೆ ಕಳುಹಿಸುವ ಪ್ರಬಂಧ ವಿದ್ಯಾರ್ಥಿಯ ಸ್ವಂತ ರಚನೆಯಾಗಿರಬೇಕು. ಈವರೆಗೆ ಎಲ್ಲಿಯೂ ಯಾವ ರೀತಿಯಲ್ಲೂ ಪ್ರಕಟ ಅಥವಾ ಪ್ರಸಾರ ಆಗಿರಬಾರದು. ಕಳುಹಿಸುವ ಪ್ರಬಂಧವನ್ನು ಕಾಲೇಜು/ವಿಭಾಗ ಮುಖ್ಯಸ್ಥರಿಂದ ದೃಢೀಕರಿಸಬೇಕು. ಪ್ರಬಂಧವನ್ನು ಹಾಳೆಯ ಒಂದೆ ಮಗ್ಗುಲಲ್ಲಿ ಸ್ಫುಟವಾಗಿ ಬರೆದಿರಬೇಕು. ಹಾಳೆಗಳನ್ನು ಚಿತ್ರಗಳಿಂದ, ಬಣ್ಣಗಳಿಂದ ಅಲಂಕರಿಸುವುದು ಬೇಡ. ಸ್ಪರ್ಧಿಗಳು ತಮ್ಮ ಹೆಸರು, ಪರಿಚಯ, ಮೊಬೈಲ್ ನಂಬರ್, ಕಾಲೇಜಿನ ಹೆಸರು, ವಿಳಾಸ ಇತ್ಯಾದಿಗಳನ್ನು ಪ್ರತ್ಯೇಕ ಹಾಳೆಯಲ್ಲಿ ಬರೆದು ಲಗತ್ತಿಸಬೇಕು. ಜತೆಗೆ ಭಾವಚಿತ್ರವೂ ಇರಬೇಕು.

ಪ್ರಬಂಧವನ್ನು ನುಡಿ/ಯೂನಿಕೋಡ್ ತಂತ್ರಾಶದಲ್ಲಿ ಸಿದ್ಧಪಡಿಸಿ (ಪಿಡಿಎಫ್‌ ಮತ್ತು ವರ್ಡ್‌ ಫೈಲ್‌ ಎರಡನ್ನೂ) utthanacompetition@gmail.com ಈ ವಿಳಾಸಕ್ಕೆ ಇ-ಮೇಲ್ ಮೂಲಕವೂ ಕಳುಹಿಸಬಹುದು. ಜೆರಾಕ್ಸ್‌ /ಫೋಟೋ ಪಿಡಿಎಫ್‌ ಪ್ರತಿಗಳನ್ನು ಪರಿಶೀಲಿಸಲಾಗುವುದಿಲ್ಲ. ಸ್ಪರ್ಧೆಗೆ ಸಂಬಂಧಿಸಿದ ಎಲ್ಲ ವಿಚಾರಗಳಲ್ಲೂವ್ಯವಸ್ಥಾಪಕರದ್ದೇ ಅಂತಿಮ ತೀರ್ಮಾನ. ಪ್ರಬಂಧ ತಲುಪಲು ಅಕ್ಟೋಬರ್ 10 ಕೊನೆಯ ದಿನವಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಬಹುಮಾನಗಳ ವಿವರ

ಮೊದಲ ಬಹುಮಾನ: ರೂ. 10,000/-
ಎರಡನೆಯ ಬಹುಮಾನ: ರೂ. 7,000 /-
ಮೂರನೆಯ ಬಹುಮಾನ: ರೂ. 5,000/-
ಹತ್ತು ಮೆಚ್ಚುಗೆಯ ಬಹುಮಾನಗಳು: ತಲಾ ರೂ. 2,000/-

ಇದನ್ನೂ ಓದಿ: Kannada New Movie: ʼಆಪರೇಷನ್ ಕೊಂಬುಡಿಕ್ಕಿʼ ಚಿತ್ರ ನಿರ್ಮಾಣ ಮಾಡಲು ಅಣಿಯಾದ ಅನುಪ್ ಹನುಮಂತೇಗೌಡ

ಪ್ರಬಂಧವನ್ನು ಕಳುಹಿಸಬೇಕಾದ ವಿಳಾಸ

ಸಂಪಾದಕರು, ‘ಉತ್ಥಾನ’ ವಾರ್ಷಿಕ ಪ್ರಬಂಧ ಸ್ಪರ್ಧೆ – 2024
‘ಕೇಶವ ಶಿಲ್ಪ’, ಕೆಂಪೇಗೌಡ ನಗರ ಬೆಂಗಳೂರು –04, ಇ-ಮೇಲ್: utthanacompetition@gmail.com ದೂರವಾಣಿ: 77954 41894

Continue Reading

ಅಂಕಣ

ರಾಜಮಾರ್ಗ ಅಂಕಣ: ನಾವು ನಾಶ ಆಗೋದು ಯಾವಾಗ?

ರಾಜಮಾರ್ಗ ಅಂಕಣ: ಕೆಲವೊಮ್ಮೆ ನಮ್ಮ ಸಾವು ನಮಗೆ ತಿಳಿಯುವುದೇ ಇಲ್ಲ. ಆದರೆ ವ್ಯಕ್ತಿಗಳ ಬದುಕಿನ ಚೈತನ್ಯಮಯಿ ಕ್ಷಣಗಳ ನಾಶ ನಾನಾ ಬಗೆಯಲ್ಲಿ ಸಾಧ್ಯ. ಅವು ಹೇಗೆ ಅಂತ ಇಲ್ಲಿ ನೋಡೋಣ.

VISTARANEWS.COM


on

change ರಾಜಮಾರ್ಗ ಅಂಕಣ
Koo

ಬನ್ನಿ ಬದಲಾಗೋಣ. ಆಗದಿದ್ದರೆ ಅದಕ್ಕೆ ನಾವೇ ಹೊಣೆ!

Rajendra-Bhat-Raja-Marga-Main-logo

:: ರಾಜೇಂದ್ರ ಭಟ್ ಕೆ.

ರಾಜಮಾರ್ಗ ಅಂಕಣ: 1) ನಾನು ಏನು ಬರೆದರೂ ಜನರು ಓದುತ್ತಾರೆ ಎಂದು ನಂಬಲು ತೊಡಗಿದ ಕ್ಷಣಕ್ಕೆ ಒಬ್ಬ ಬರಹಗಾರ ಸಾಯುತ್ತಾನೆ.

2) ತಾನು ಏನು ಮಾಡಿದರೂ ಜನರು ಓಟು ಹಾಕ್ತಾರೆ ಎಂದು ನಂಬಿದ ಕ್ಷಣಕ್ಕೆ ಓರ್ವ ರಾಜಕಾರಣಿ ನಾಶವಾಗುತ್ತಾನೆ.

3) ತಾನು ಎಲ್ಲವೂ ಕಲಿತಾಗಿದೆ, ಹೊಸದಾಗಿ ಕಲಿಯುವುದು ಏನಿಲ್ಲ ಎಂದು ನಂಬಿದ ಕ್ಷಣಕ್ಕೆ ಒಬ್ಬ ಗುರುವು ಸಾವನ್ನು ಕಾಣುತ್ತಾನೆ.

4) ತಾನು ಉಪದೇಶ ಮಾಡುವುದರಿಂದ ಜಗತ್ತು ಬದಲಾಗುತ್ತದೆ ಎಂದು ನಂಬಿದ ಕ್ಷಣಕ್ಕೆ ಓರ್ವ ಧರ್ಮಗುರುವು ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತಾನೆ.

5) ಬೇರೆಯವರ ಖಾಸಗಿ ಜೀವನದಲ್ಲಿ ಇಣುಕಿ ನೋಡುವುದೇ ಸುದ್ದಿ ಎಂದು ನಿರ್ಧಾರ ಮಾಡಿದ ಕ್ಷಣಕ್ಕೆ ಓರ್ವ ಪತ್ರಕರ್ತನು ನಾಶವಾಗುತ್ತಾನೆ.

6) ನಾನು ಪ್ರಯತ್ನ ಮಾಡದೆ ಎಲ್ಲರನ್ನೂ ದೇವರೇ ಗುಣಪಡಿಸುತ್ತಾನೆ ಎಂದು ನಂಬಿ ಕೂತ ಕ್ಷಣಕ್ಕೆ ಓರ್ವ ವೈದ್ಯನು ತನ್ನ ಮೌಲ್ಯ ಕಳೆದುಕೊಳ್ಳುತ್ತಾನೆ.

7) ಪರಿಶ್ರಮವಿಲ್ಲದೆ ಕೀರ್ತಿ ಬರಲಿ ಎಂದು ಹಾರೈಸಿದ ಕ್ಷಣಕ್ಕೆ ಒಂದು ಪ್ರತಿಭೆಯು ಸಾಯುತ್ತದೆ.

8) ತಾನಿರುವುದೇ ಆದೇಶ ನೀಡಲು, ಉಳಿದವರೆಲ್ಲರೂ ನನ್ನನ್ನು ಫಾಲೋ ಮಾಡಬೇಕು ಎಂದು ನಂಬಿದ ಕ್ಷಣಕ್ಕೆ ಒಬ್ಬ ಲೀಡರ್ ಸಾಯುತ್ತಾನೆ.

9) ತಾನು ಕಂಫರ್ಟ್ ವಲಯದಲ್ಲಿ ಇರ್ತೇನೆ, ರಿಸ್ಕ್ ಯಾರಿಗೆ ಬೇಕು? ಎಂದು ನಂಬಿ ಕೂತ ಕ್ಷಣಕ್ಕೆ ಓರ್ವ ಉದ್ಯಮಿಯು ನಾಶವಾಗುತ್ತಾನೆ.

10) ಸೃಜನಶೀಲವಾಗಿ ಯೋಚನೆ ಮಾಡುವುದನ್ನು ಬಿಟ್ಟ ಕ್ಷಣದಲ್ಲಿ ಓರ್ವ ಕಲಾವಿದನು ಸಾಯುತ್ತಾನೆ.

11) ತನ್ನ ಸಾಮರ್ಥ್ಯವನ್ನು ನಂಬದೆ ಬೇರೆಯವರನ್ನು ಅನುಕರಣೆ ಮಾಡುತ್ತಾ ಹೋದಾಗ ಓರ್ವ ಸಾಧಕನು ನಿಧಾನವಾಗಿ ನಾಶವಾಗುತ್ತಾನೆ.

12) ತನ್ನ ಉತ್ಪನ್ನಗಳಲ್ಲಿ ನಂಬಿಕೆ ಇಡದೆ ಜಾಹೀರಾತುಗಳನ್ನು ನಂಬಿ ಕೂತಾಗ ಓರ್ವ ವ್ಯಾಪಾರಿಯು ಖಾಲಿ ಆಗುತ್ತಾನೆ.

13) ಕ್ಷಣ ಕ್ಷಣಕ್ಕೆ ಅಪ್ಡೇಟ್ ಆಗದೇ ಅದೇ ಸವಕಲು ಮಾದರಿಗಳನ್ನು ನಂಬಿ ಕೂತಿರುವ ಸಂಶೋಧಕನು ಔಟ್ ಡೇಟ್ ಆಗುವುದು ಖಂಡಿತ.

14) ತನಗೆ ಬಂದ ಸೋಲುಗಳಿಗೆ ಆತ್ಮಾವಲೋಕನ ಮಾಡಿಕೊಳ್ಳದೆ ಬೇರೆಯವರನ್ನು ದೂರುತ್ತಾ ಕೂತಾಗ ಒಬ್ಬ ಮ್ಯಾನೇಜರ್ ಸಾಯುತ್ತಾನೆ.

15) ಗುರುಗಳ ಮೇಲೆ ನಂಬಿಕೆ ಇಲ್ಲದೆ ಎಲ್ಲವನ್ನೂ ನಾನೇ ಕಲಿಯುತ್ತೇನೆ ಎಂದು ಹೊರಡುವ ಶಿಷ್ಯ ಸೋಲುವುದು ಖಂಡಿತ.

16) ಗೆಲುವಿನ ದಾರಿಯನ್ನು ಹೇಳಿಕೊಡದೆ ಕೇವಲ ಮೋಟಿವೇಶನ್ ಮಾತ್ರ ಮಾಡುತ್ತಾ ಹೋಗುವ ತರಬೇತುದಾರನು ನಿಧಾನಕ್ಕೆ ಖಾಲಿ ಆಗುತ್ತಾನೆ.

17) ತನಗೆ ದೊರೆತ ಪ್ರತೀಯೊಂದು ಅವಕಾಶವನ್ನು ವ್ಯರ್ಥ ಮಾಡುತ್ತಾ ಇನ್ನೊಂದು ಅವಕಾಶ ಬೇಕಿತ್ತು ಎಂದು ಕಾಯುತ್ತಾ ಕುಳಿತ ಕ್ರೀಡಾಪಟುವು ನಿಧಾನವಾಗಿ ಮೌಲ್ಯ ಕಳೆದುಕೊಳ್ಳುತ್ತಾನೆ.

Morning sun light and get up early
Morning sun light and get up early

18) ತನ್ನ ಮತದಾನದ ಹಕ್ಕನ್ನು ಸರಿಯಾಗಿ ಚಲಾವಣೆ ಮಾಡದೆ ಸರಕಾರ ಸರಿಯಿಲ್ಲ ಎಂದು ಟೀಕೆ ಮಾಡುವ ಮತದಾರನು ತಾನು ನಾಶವಾಗುವುದು ಮಾತ್ರವಲ್ಲ, ಪ್ರಜಾಪ್ರಭುತ್ವದ ನಾಶಕ್ಕೆ ಕೂಡ ಕಾರಣ ಆಗುತ್ತಾನೆ.

19) ಬೇರೆಯವರ ಮಾತುಗಳನ್ನು ಆಲಿಸದೇ ಎಲ್ಲವನ್ನೂ ತನ್ನ ಮೂಗಿನ ನೇರಕ್ಕೆ ನಿರ್ಧಾರ ಮಾಡುವ ಅರಸನು ನಿಧಾನವಾಗಿ ನಾಶವಾಗುತ್ತಾನೆ.

20) ತನ್ನ ಸಾಮರ್ಥ್ಯಗಳ ಮೇಲೆ ನಂಬಿಕೆ ಇಡದೆ ಯಾರ್ಯಾರನ್ನೋ ಅವಲಂಬನೆ ಮಾಡುವ ಬಾಸ್ ನಿಧಾನವಾಗಿ ನಾಶವಾಗಿ ಬಿಡುತ್ತಾನೆ.

21) ಬೇರೆ ಯಾರನ್ನೂ ಬೆಳೆಸದೆ ತಾನು ಮಾತ್ರ ಬೆಳೆದರೆ ಸಾಕು ಎಂದು ಯೋಚಿಸುವ ವ್ಯಕ್ತಿಯು ನಿಧಾನವಾಗಿ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತಾನೆ.

22) ತಾನು ಆಡುವ ಮಾತುಗಳು ಬೇರೆಯವರಿಗೆ, ತನ್ನ ಅನುಷ್ಠಾನಕ್ಕೆ ಅಲ್ಲ ಎಂದು ನಂಬುತ್ತ ಕೂತರೆ ಒಬ್ಬ ಭಾಷಣಕಾರ ನಾಶವಾಗಲು ಹೆಚ್ಚು ಸಮಯ ಬೇಕಾಗಿಲ್ಲ.

23) ರಾಷ್ಟ್ರಕ್ಕೆ ತನ್ನ ನಿಷ್ಠೆಯನ್ನು ಮರೆತು, ರಾಷ್ಟ್ರ ಮೊದಲು ಎಂದು ನಂಬಿಕೆ ಇಲ್ಲದ ಸೈನಿಕನು ಯುದ್ಧವನ್ನು ಮಾಡದೆ ಸಾಯುತ್ತಾನೆ.

ಯೋಚಿಸಿ ಮತ್ತು ಬದಲಾಗಿ.

ಇದನ್ನೂ ಓದಿ: ರಾಜಮಾರ್ಗ ಅಂಕಣ: ಕೃತಜ್ಞತೆ ಎಂಬ ಮಹಾನ್ ಪ್ರವಾಹ

Continue Reading

ಕರ್ನಾಟಕ

Book Release: ಬೆಂಗಳೂರಿನಲ್ಲಿ ಆ.4ರಂದು ʼರಣಧುರಂಧರʼ ಗ್ರಂಥ ಲೋಕಾರ್ಪಣೆ

Book Release: ಯಾಜಿ ಪ್ರಕಾಶನದಿಂದ ಬೆಂಗಳೂರಿನ ಗಿರಿನಗರದ ಸಂಸ್ಕೃತ ಭಾರತ ಅಕ್ಷರಂ ನಲ್ಲಿ ಇದೇ ಆಗಸ್ಟ್‌ 4 ರಂದು ಭಾನುವಾರ ಬೆಳಿಗ್ಗೆ 10 ಗಂಟೆಗೆ “ರಣಧುರಂಧರ” (ಛತ್ರಪತಿ ಶಿವಾಜಿ ಮಹಾರಾಜರ ಹತ್ತು ನಿರ್ಣಾಯಕ ಯುದ್ಧಗಳು ಮತ್ತು ಅವರ ಕಟ್ಟಕಡೆಯ ಯುದ್ಧ- ಒಂದು ವಿಶ್ಲೇಷಣೆ) ಗ್ರಂಥ ಲೋಕಾರ್ಪಣೆ ಕಾರ್ಯಕ್ರಮ ಏರ್ಪಡಿಸಲಾಗಿದೆ.

VISTARANEWS.COM


on

Ranadhurandhara book release in Bengaluru on August 4
Koo

ಬೆಂಗಳೂರು: ಯಾಜಿ ಪ್ರಕಾಶನದಿಂದ ಬೆಂಗಳೂರಿನ ಗಿರಿನಗರದ ಸಂಸ್ಕೃತ ಭಾರತ ಅಕ್ಷರಂನಲ್ಲಿ ಇದೇ ಆಗಸ್ಟ್‌ 4ರಂದು ಭಾನುವಾರ ಬೆಳಗ್ಗೆ 10 ಗಂಟೆಗೆ “ರಣಧುರಂಧರ” (ಛತ್ರಪತಿ ಶಿವಾಜಿ ಮಹಾರಾಜರ ಹತ್ತು ನಿರ್ಣಾಯಕ ಯುದ್ಧಗಳು ಮತ್ತು ಅವರ ಕಟ್ಟಕಡೆಯ ಯುದ್ಧ- ಒಂದು ವಿಶ್ಲೇಷಣೆ) ಗ್ರಂಥ ಲೋಕಾರ್ಪಣೆ ಕಾರ್ಯಕ್ರಮ (Book Release) ಏರ್ಪಡಿಸಲಾಗಿದೆ.

ಇದನ್ನೂ ಓದಿ: Pralhad Joshi: ಪ್ರಸಕ್ತ ಸಕ್ಕರೆ ಋತುವಿನಲ್ಲಿ 1 ಲಕ್ಷ ಕೋಟಿ ರೂ. ರೈತರ ಬಾಕಿ ಪಾವತಿ

ಹೊಸಪೇಟೆಯ ಯಾಜಿ ಪ್ರಕಾಶನದ ಪ್ರಕಾಶಕಿ ಸವಿತಾ ಯಾಜಿ ಹಾಗೂ ಲೇಖಕ ಗುರುಪ್ರಸಾದ್‌ ಭಟ್‌ ಅವರ “ರಣಧುರಂಧರ” ಗ್ರಂಥದ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸಂಸದ ತೇಜಸ್ವಿ ಸೂರ್ಯ ಪಾಲ್ಗೊಳ್ಳುವರು. ನವದೆಹಲಿಯ ಸಂಸ್ಕೃತ ಭಾರತಿ ಅಖಿಲ ಭಾರತ ಸಂಘಟನ ಮಂತ್ರಿ ದಿನೇಶ ಕಾಮತ್‌ ಅಧ್ಯಕ್ಷತೆ ವಹಿಸುವರು. ಲೇಖಕ ಸತ್ಯೇಶ್‌ ಬೆಳ್ಳೂರ್‌ ಪುಸ್ತಕ ಪರಿಚಯಿಸುವರು.

ಇದನ್ನೂ ಓದಿ: KSET 2024: ಕೆಸೆಟ್‌ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಆ.22 ಕೊನೆ ದಿನ; ವೇಳಾಪಟ್ಟಿ ಹೀಗಿದೆ

ಪೂರ್ಣಪ್ರಮತಿ ಶಾಲೆಯ ಮಕ್ಕಳಿಂದ “ಮಹಾನ್‌ ರಾಜಾ ಶಿವಾಜಿ” ಕುರಿತಾಗಿ ಕಿರು ನಾಟಕ ಏರ್ಪಡಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Continue Reading

ಬೆಂಗಳೂರು

Utthana Katha Spardhe 2024: ಉತ್ಥಾನ ವಾರ್ಷಿಕ ಕಥಾ ಸ್ಪರ್ಧೆ; ಕಥೆ ತಲುಪಿಸಲು ಅ.10 ಕೊನೆಯ ದಿನ

Utthana Katha Spardhe 2024: ಸದಭಿರುಚಿಯ ಮಾಸಪತ್ರಿಕೆ ʼಉತ್ಥಾನʼ ವತಿಯಿಂದ ʼಉತ್ಥಾನ ವಾರ್ಷಿಕ ಕಥಾಸ್ಪರ್ಧೆ 2024ʼ ಆಯೋಜಿಸಲಾಗಿದ್ದು, ಕಥೆಗಳನ್ನು ತಲುಪಿಸಲು ಅಕ್ಟೋಬರ್‌ 10 ಕೊನೆಯ ದಿನವಾಗಿದೆ. ಕಥಾಸ್ಪರ್ಧೆಯಲ್ಲಿ ಮೊದಲ ಬಹುಮಾನ 15 ಸಾವಿರ ರೂ., 2ನೇ ಬಹುಮಾನ 12 ಸಾವಿರ ರೂ., ತೃತೀಯ ಬಹುಮಾನ 10 ಸಾವಿರ ರೂ. ಹಾಗೂ ಐದು ಮೆಚ್ಚುಗೆಯ ಬಹುಮಾನಗಳು ತಲಾ 2 ಸಾವಿರ ರೂ. ಇರಲಿದೆ.

VISTARANEWS.COM


on

utthana vaarshika katha spardhe the last date for submission of the story is october 10
Koo

ಬೆಂಗಳೂರು: ಸದಭಿರುಚಿಯ ಮಾಸ ಪತ್ರಿಕೆ ʼಉತ್ಥಾನʼ ವತಿಯಿಂದ ʼಉತ್ಥಾನ ವಾರ್ಷಿಕ ಕಥಾ ಸ್ಪರ್ಧೆ 2024ʼ ಆಯೋಜಿಸಲಾಗಿದ್ದು, ಕಥೆಗಳನ್ನು ತಲುಪಿಸಲು ಅಕ್ಟೋಬರ್‌ 10 ಕೊನೆಯ ದಿನವಾಗಿದೆ. ಕಥಾ ಸ್ಪರ್ಧೆಯಲ್ಲಿ (Utthana Katha Spardhe 2024) ಮೊದಲ ಬಹುಮಾನ 15 ಸಾವಿರ ರೂ., ಎರಡನೇ ಬಹುಮಾನ 12 ಸಾವಿರ ರೂ., ತೃತೀಯ ಬಹುಮಾನ 10 ಸಾವಿರ ರೂ. ಹಾಗೂ ಐದು ಮೆಚ್ಚುಗೆಯ ಬಹುಮಾನಗಳು ತಲಾ 2 ಸಾವಿರ ರೂ. ಇರಲಿದೆ.

ಕಥಾ ಸ್ಪರ್ಧೆಯ ನಿಯಮಗಳು

ಕಥೆಗಳು ಸ್ವತಂತ್ರವಾಗಿರಬೇಕು. ಭಾಷಾಂತರವಾಗಲಿ, ಅನುಕರಣೆಯಾಗಲಿ ಆಗಿರಕೂಡದು. ಎಲ್ಲೂ ಸ್ವೀಕೃತವಾಗಿರಬಾರದು; ಪರಿಶೀಲನೆಗಾಗಿಯೂ ಯಾವುದೇ ಅನ್ಯ ಪತ್ರಿಕೆ, ಸಂಸ್ಥೆಗೆ ಕಳುಹಿಸಿರಬಾರದು. ಸಾಮಾಜಿಕ ಜಾಲತಾಣಗಳಲ್ಲೂ ಪ್ರಕಟವಾಗಿರಬಾರದು. ಒಬ್ಬರು ಒಂದು ಕಥೆಯನ್ನು ಮಾತ್ರ ಕಳುಹಿಸಬಹುದು.

ಬಹುಮಾನಿತ ಕಥೆ ‘ಉತ್ಥಾನ’ದಲ್ಲಿ ಪ್ರಕಟವಾಗುವವರೆಗೂ ಬೇರೆ ಎಲ್ಲೂ ಗ್ರಂಥರೂಪದಲ್ಲಾಗಲಿ, ಸಾಮಾಜಿಕ ಜಾಲತಾಣಗಳಲ್ಲಾಗಲಿ, ಪತ್ರಿಕೆ, ಆಕಾಶವಾಣಿ ಅಥವಾ ದೂರದರ್ಶನದಲ್ಲಾಗಲಿ ಪ್ರಕಟಣೆಗೆ, ಪ್ರಸಾರಕ್ಕೆ ಅವಕಾಶವಿಲ್ಲ.

ಪೋಸ್ಟ್‌ ಮೂಲಕ ಕಳುಹಿಸುವವರು: ಕಾಗದದ ಒಂದೇ ಮಗ್ಗುಲಲ್ಲಿ ಸ್ಪುಟವಾಗಿ ಬರೆದಿರಬೇಕು ಅಥವಾ ವಿರಳವಾಗಿ ಬೆರಳಚ್ಚು ಮಾಡಿರಬೇಕು. ಕಾರ್ಬನ್/ಜೆರಾಕ್ಸ್ ಪ್ರತಿಗಳನ್ನು ಪರಿಶೀಲಿಸಲಾಗುವುದಿಲ್ಲ.

ಇಮೇಲ್‌ ಮೂಲಕ ಕಳುಹಿಸುವವರು: ಕಥೆಯನ್ನು ನುಡಿ, ಬರಹ ಅಥವಾ ಯೂನಿಕೋಡ್ ತಂತ್ರಾಂಶದಲ್ಲಿ ಸಿದ್ಧಪಡಿಸಿ (ವರ್ಡ್ ಮತ್ತು ಪಿಡಿಎಫ್ 2 ರೂಪದಲ್ಲಿ) ಇ-ಮೇಲ್ ಮೂಲಕವೂ ಕಳುಹಿಸಬಹುದು. ಇ-ಮೇಲ್ ವಿಳಾಸ: utthanakathaspardhe@gmail.com

ಕಥೆ 3,000 ಪದಗಳ ಮಿತಿಯಲ್ಲಿ ಇರಬೇಕು.

ಹಸ್ತಪ್ರತಿಯನ್ನು ಹಿಂದಕ್ಕೆ ಕಳುಹಿಸುವ ಯಾವುದೇ ವ್ಯವಸ್ಥೆ ಇರುವುದಿಲ್ಲ

ಲೇಖಕರು ತಮ್ಮ ಹೆಸರು, ವಿಳಾಸ, ದೂರವಾಣಿ, ಕಿರುಪರಿಚಯ ಮುಂತಾದ ವಿವರಗಳನ್ನು ಕಥೆಯ ಜತೆಯಲ್ಲಿ ಬರೆಯದೆ, ಪ್ರತ್ಯೇಕ ಪುಟದಲ್ಲಿ ಬರೆದು ಕಳುಹಿಸಬೇಕು. ಜತೆಗೆ ಲೇಖಕರ ಭಾವಚಿತ್ರವೂ ಇರಬೇಕು.
ಬಹುಮಾನಿತ ಕಥೆಗಳನ್ನು ಯಾವುದೇ ರೂಪದಲ್ಲಿ, ಯಾವಾಗ ಬೇಕಾದರೂ ಬಳಸುವ ಸಂಪೂರ್ಣ ಹಕ್ಕು ‘ಉತ್ಥಾನ’ದ್ದು.

ತೀರ್ಪುಗಾರರ ಮೌಲ್ಯನಿರ್ಣಯಾನಂತರ ಫಲಿತಾಂಶವನ್ನು ‘ಉತ್ಥಾನ’ದಲ್ಲಿ ಪ್ರಕಟಿಸಲಾಗುವುದು. ವಿಜೇತರಿಗೆ ಮಾತ್ರ ಪತ್ರ ಬರೆದು ತಿಳಿಸಲಾಗುವುದು. ಅದಕ್ಕೆ ಪೂರ್ವದಲ್ಲಿ ಯಾವುದೇ ಪತ್ರ ವ್ಯವಹಾರ ಸಾಧ್ಯವಾಗದು. ಸ್ಪರ್ಧೆಗೆ ಸಂಬಂಧಿಸಿದ ಎಲ್ಲ ವಿಚಾರಗಳಲ್ಲೂ ವ್ಯವಸ್ಥಾಪಕರದ್ದೇ ಅಂತಿಮ ತೀರ್ಮಾನ.

ಇದನ್ನೂ ಓದಿ: Pralhad Joshi: ಹಸಿರು ಜಲಜನಕ ಮಿಷನ್‌ಗೆ 19744 ಕೋಟಿ ರೂ. ಮೀಸಲು; ಪ್ರಲ್ಹಾದ್‌ ಜೋಶಿ

ಕಥೆ ತಲುಪಿಸುವ ವಿಳಾಸ

ಕಥೆಗಳನ್ನು ಅಕ್ಟೋಬರ್‌ 10ರೊಳಗೆ ವಿಳಾಸ: ಸಂಪಾದಕರು, ʼಉತ್ಥಾನ ವಾರ್ಷಿಕ ಕಥಾಸ್ಪರ್ಧೆ 2024ʼ ಕೇಶವ ಶಿಲ್ಪ, ಕೆಂಪೇಗೌಡನಗರ, ಬೆಂಗಳೂರು-560004 ಇಲ್ಲಿಗೆ ತಲುಪಿಸಬೇಕು. ಮೊಬೈಲ್‌ 77954 41894, ದೂರವಾಣಿ: 080-26604673 ಇ-ಮೇಲ್: utthanakathaspardhe@gmail.com

Continue Reading
Advertisement
Mirabai Chanu
ಕ್ರೀಡೆ1 hour ago

Mirabai Chanu: ಕೂದಲೆಳೆಯಲ್ಲಿ ಪದಕ ಕೈಚೆಲ್ಲಿದ ಮೀರಾಬಾಯಿ ಚಾನು; ಭಾರತಕ್ಕೆ ಮತ್ತೆ ನಿರಾಸೆ

Arvind Kejriwal
ದೇಶ4 hours ago

Arvind Kejriwal: ಕೇಜ್ರಿವಾಲ್‌ಗೆ ಮತ್ತೊಂದು ಸಂಕಷ್ಟ; ಸ್ವಾತಿ ಮಾಲಿವಾಲ್‌ ಕೇಸ್‌ನಲ್ಲೂ ಸಿಎಂ ವಿರುದ್ಧ ಚಾರ್ಜ್‌ಶೀಟ್!

ಕರ್ನಾಟಕ5 hours ago

Police Raid: ಸ್ಕೂಟರ್‌ನಲ್ಲಿ ಬರುತ್ತಿದ್ದ ಕಳ್ಳನನ್ನು ಸಿನಿಮೀಯ ಶೈಲಿಯಲ್ಲಿ ಹಿಡಿದ ಪೊಲೀಸ್‌ ಪೇದೆ!

John Abraham
ಕ್ರೀಡೆ5 hours ago

John Abraham: ಮನು ಭಾಕರ್‌ ಗೆದ್ದ ಒಲಿಂಪಿಕ್ಸ್‌ ಪದಕ ಮುಟ್ಟಿದ ಜಾನ್‌ ಅಬ್ರಾಹಂ; ನೆಟ್ಟಿಗರಿಂದ ನಟನಿಗೆ ಕ್ಲಾಸ್‌ ಏಕೆ?

Karnataka Governor
ಕರ್ನಾಟಕ5 hours ago

Karnataka Governor: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್‌ರನ್ನು ಭೇಟಿ ಮಾಡಿದ ಮಧ್ಯಪ್ರದೇಶದ ಸಿಎಂ

Dinesh Gundu Rao
ಬೆಂಗಳೂರು6 hours ago

Dinesh Gundu Rao: ರಾಜ್ಯದಲ್ಲಿ ಕಳಪೆ ಔಷಧಗಳ ಜಾಲ; ಅಧಿಕಾರಿಗಳಿಗೆ ಆರೋಗ್ಯ ಸಚಿವರ ತರಾಟೆ

Bangladesh Unrest
ವಿದೇಶ6 hours ago

Bangladesh Unrest: ಬಾಂಗ್ಲಾ ಹಿಂಸಾಚಾರ; ಬಹುರಾಷ್ಟ್ರೀಯ ಕಂಪನಿಗಳು ತತ್ತರ; ಭಾರತದ ಉದ್ಯಮಗಳ ಮೇಲೇನು ಪರಿಣಾಮ?

couple's fight
ಕರ್ನಾಟಕ6 hours ago

Couple’s fight: ಸಪ್ತಪದಿ ತುಳಿದ ಕೆಲವೇ ಹೊತ್ತಿನಲ್ಲಿ ನವದಂಪತಿ ಹೊಡೆದಾಟ; ವಧು ಸಾವು!

Bangladesh Unrest
ವಿದೇಶ6 hours ago

Bangladesh Unrest: ಬಾಂಗ್ಲಾದಲ್ಲಿ ಹಿಂದುಗಳ ಮೇಲಿನ ದಾಳಿಗೆ ಇಸ್ಲಾಮಿಕ್‌ ರಾಷ್ಟ್ರಗಳಿಂದ ಹಣ; ಇಲ್ಲಿದೆ ಸ್ಫೋಟಕ ಮಾಹಿತಿ

World Breastfeeding Week 2024
ಆರೋಗ್ಯ6 hours ago

World Breastfeeding Week 2024: ಹಾಲುಣಿಸುವುದು ನಿಲ್ಲಿಸಿದ ಮೇಲೆ ತಾಯಿಯ ತೂಕ ಹೆಚ್ಚುವುದೇಕೆ? ಆಗೇನು ಮಾಡಬೇಕು?

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Wild Animals Attack
ಚಿಕ್ಕಮಗಳೂರು1 day ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ1 day ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ4 days ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ5 days ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ7 days ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ7 days ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ7 days ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

karnataka Rain
ಮಳೆ1 week ago

Karnataka rain : ಭದ್ರಾ ನದಿಯಲ್ಲಿ ಕೊಚ್ಚಿ ಹೋದ ಹಸು; ಬೈಂದೂರಿನಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ಬಾಳೆಹೊನ್ನೂರು ಮುಳುಗಡೆ; ನೆರೆಗೆ ಬೋಟ್‌ ಮೊರೆ ಹೋದ ಜನರು

Bharachukki falls
ಚಾಮರಾಜನಗರ1 week ago

Bharachukki Falls : ಭರಚುಕ್ಕಿ ಜಲಪಾತಕ್ಕೆ ಕಳ್ಳ ಮಾರ್ಗದಿಂದ ಹೋದೋರಿಗೆ ಬಸ್ಕಿ ಹೊಡೆಸಿದ ಪೊಲೀಸರು!

ಟ್ರೆಂಡಿಂಗ್‌