Weight Loss: ತೂಕ ಇಳಿಕೆಯ ಪ್ರಯಾಣದಲ್ಲಿ ಮಾಡಬಾರದ ಮೂರು ತಪ್ಪುಗಳು! - Vistara News

ಆರೋಗ್ಯ

Weight Loss: ತೂಕ ಇಳಿಕೆಯ ಪ್ರಯಾಣದಲ್ಲಿ ಮಾಡಬಾರದ ಮೂರು ತಪ್ಪುಗಳು!

ತೂಕ ಇಳಿಸುವ ಬಗೆಗೆ ಎಷ್ಟೇ ಓದಿಕೊಂಡರೂ, ತಿಳಿದುಕೊಂಡು ಮಾಡುತ್ತಿದ್ದರೂ ಆಹಾರದ ವಿಷಯದಲ್ಲಿ, ವ್ಯಾಯಾಮದ ವಿಷಯದಲ್ಲಿ ಒಂದಲ್ಲ ಒಂದು ತಪ್ಪು ನಡೆಯುತ್ತಲೇ ಇರುತ್ತದೆ. ಬಹಳಷ್ಟು ತಪ್ಪು ತಿಳುವಳಿಕೆಗಳು ನಮ್ಮನ್ನು ಹಾದಿ ತಪ್ಪಿಸುತ್ತವೆ.

VISTARANEWS.COM


on

ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಸ್ಪಂದನಾ ವಿಜಯ ರಾಘವೇಂದ್ರ (Spandana Vijay Raghavendra) ಅವರ ಮರಣದ ಬಳಿಕ, ದಿಡೀರ್‌ ದೇಹ ತೂಕ ಇಳಿಸುವುದರ ಬಗ್ಗೆ ಆತಂಕ ಉಂಟಾಗಿದೆ. ಜಿಮ್ ಹಾಗೂ ಆಹಾರ ಪಥ್ಯವನ್ನು ಸ್ಪಂದನ ಅನುಸರಿಸಿ 15 ಕೆ.ಜಿ ತೂಕ ಇಳಿಸಿಕೊಂಡಿದ್ದರು ಎಂಬ ವದಂತಿ ಇದೆ. ಆದರೆ ಇದು ನಿಜವಲ್ಲ ಎಂದೂ ಹೇಳಲಾಗ್ತಿದೆ. ಸ್ಪಂದನಾ ಅವರು ತೂಕ ಇಳಿಸಿಕೊಂಡಿದ್ದರೋ ಇಲ್ಲವೋ, ನಮ್ಮ ನಡುವೆ ಇರುವ ಸಾವಿರಾರು ಜನ ಮಾತ್ರ ತಮ್ಮ ಮೈ ತೂಕದ ಬಗ್ಗೆ ಆತಂಕಪಡುತ್ತಾ ಅದನ್ನು ದಿಡೀರ್‌ ಇಳಿಸಲು ಪ್ರಯತ್ನಿಸುತ್ತಾ ಇರುತ್ತಾರೆ.

ಇತ್ತೀಚಿನ ದಿನಗಳಲ್ಲಿ ನಮ್ಮ ಸುತ್ತಮುತ್ತಲ ಅನೇಕ ಮಂದಿ ತೂಕ ಹೆಚ್ಚಾಗಿದ್ದರ ಬಗ್ಗೆ ಗೊಣಗುತ್ತಾ ಇರುವುದನ್ನು ಕಾಣುತ್ತೇವೆ. ಬೇರೆಯವರ ಮಾತೇಕೆ? ನಾವೇ ತೂಕ ಹೆಚ್ಚಾಗುವ ಬಗ್ಗೆ ತಲೆ ಬಿಸಿ ಮಾಡಿಕೊಳ್ಳುತ್ತೇವೆ. ನಮ್ಮ ಹಾಗೆಯೇ ಹಲವರು, ಆದಷ್ಟೂ ಆರೋಗ್ಯಕರ ಜೀವನಶೈಲಿಯನ್ನು ರೂಢಿಸಿಕೊಳ್ಳಲು ಕಷ್ಟಪಡುವುದನ್ನು ಕಾಣುತ್ತೇವೆ. ಹೀಗೆ ಫಿಟ್‌ನೆಸ್‌ ಹಿಂದೆ ಬಿದ್ದ ಎಲ್ಲರೂ ಖಂಡಿತವಾಗಿಯೂ ನಮ್ಮ ನಿತ್ಯ ಸೇವಿಸುವ ಆಹಾರದ ಬಗ್ಗೆ ಗಮನ ಕೊಡಲೇಬೇಕಾಗುತ್ತದೆ. ಇದಕ್ಕೆ ಗಟ್ಟಿ ಮನಸ್ಸು, ಆತ್ಮಬಲ ಹಾಗೂ ಸಮಚಿತ್ತತೆ ಬಹಳ ಮುಖ್ಯವಾಗುತ್ತದೆ. ಯಾರು ಏನೇ ಹೇಳಲಿ, ನಿಯಮಿತವಾಗಿ ಒಂದು ಬಗೆಯ ಶಿಸ್ತುಬದ್ಧ ಜೀವನಕ್ಕೆ ಕಟ್ಟು ಬಿದ್ದು ಸಾಧಿಸುವ ಮನೋಭಾವ ಇದಕ್ಕೆ ಬೇಕೇ ಬೇಕು.

ಆದರೂ ತೂಕ ಇಳಿಸುವ ಬಗೆಗೆ ಎಷ್ಟೇ ಓದಿಕೊಂಡರೂ, ತಿಳಿದುಕೊಂಡು ಮಾಡುತ್ತಿದ್ದರೂ ಆಹಾರದ ವಿಷಯದಲ್ಲಿ, ವ್ಯಾಯಾಮದ ವಿಷಯದಲ್ಲಿ ಒಂದಲ್ಲ ಒಂದು ತಪ್ಪು ನಡೆಯುತ್ತಲೇ ಇರುತ್ತದೆ. ಬಹಳಷ್ಟು ತಪ್ಪು ತಿಳುವಳಿಕೆಗಳು ನಮ್ಮನ್ನು ಹಾದಿ ತಪ್ಪಿಸುತ್ತವೆ. ಹಾಗೆ ನೋಡಿದರೆ, ಇತ್ತೀಚೆಗಿನ ಸಂಶೋಧನೆಗಳ ಪ್ರಕಾರ, ಯಾರು ಡಯಟ್‌ ಮಾಡುತ್ತಾರೋ ಅವರು ಡಯಟ್‌ ಮಾಡದೆ ತಮ್ಮ ಎಂದಿನ ಶೈಲಿಯಲ್ಲಿ ಉಣ್ಣುವ ಮಂದಿಗಿಂತ ಹೆಚ್ಚು ತೂಕ ಹೆಚ್ಚಿಸಿಕೊಳ್ಳುತ್ತಾರೆ, ಹಾಗೂ ತೂಕದ ಏರುಪೇರು ಅನುಭವಿಸುತ್ತಾರಂತೆ. ಅದು ಯಾಕೆಂದರೆ, ಆಹಾರಕ್ರಮದ ಬದಲಾವಣೆಯನ್ನು ಅವೈಜ್ಞಾನಿಕವಾಗಿ ಮಾಡುವುದು. ಅದಕ್ಕಾಗಿಯೇ, ಸಾಧಾರಣವಾಗಿ ತೂಕ ಇಳಿಸುವ ಮಂದಿ ತಮ್ಮ ಫಿಟ್‌ನೆಸ್‌ ಪ್ರಯಾಣದಲ್ಲಿ ಮಾಡಬಾರದ ಮೂರು ತಪ್ಪುಗಳು (Weight Loss tips) ಇಲ್ಲಿವೆ.

೧. ಕಾರ್ಬೋಹೈಡ್ರೇಟ್‌ ಭಯ: ಬಹಳಷ್ಟು ಜನರು ಎಡವುವುದು ಇಲ್ಲಿಯೇ. ಕಾರ್ಬೋಹೈಡ್ರೇಟ್‌ ಪ್ರಮಾಣದ ಬಗ್ಗೆ. ನಮ್ಮ ಭಾರತೀಯ ಆಹಾರಕ್ರಮದ ಪ್ರಕಾರ ಚಪಾತಿ, ಪಲ್ಯಗಳು, ಅನ್ನ, ಉಪ್ಪಿಟ್ಟು, ಇಡ್ಲಿ, ದೋಸೆ ಇತ್ಯಾದಿಗಳನ್ನು ತಿನ್ನಲು ತೂಕ ಇಳಿಸುವ ಮಂದಿ ಭಯಪಡುತ್ತಾರೆ. ತೂಕ ಇಳಿಸುವವರು ಇಂತಹ ಆಹಾರವನ್ನೆಲ್ಲ ಬಿಟ್ಟುಬಿಡಬೇಕು, ಇದೆಲ್ಲ ಅನಗತ್ಯ ಕಾರ್ಬೋಹೈಡ್ರೇಟ್‌ ಸೇರಿಸುತ್ತದೆ ಎಂಬ ನಂಬಿಕೆಯದು. ಆದರೆ, ಈ ಬಗ್ಗೆ ನಡೆದಿರುವ ಸಂಶೋಧನೆಗಳ ಪ್ರಕಾರ, ಇಂತಹ ಮನಸ್ಥಿತಿಗಳೇ ನಮ್ಮನ್ನು ನಿತ್ಯದ ಕೆಲಸಗಳನ್ನು ಉಲ್ಲಾಸದಿಂದ ಮಾಡದಂತೆ ಮಾಡುತ್ತದೆ. ಮಾನಸಿಕವಾಗಿ ಸಂತೋಷದಿಂದಿರುವುದೂ ಕೂಡಾ ಆರೋಗ್ಯದ ಹಾಗೂ ತೂಕ ಇಳಿಕೆಯ ಮೂಲ. ಹೀಗಾಗಿ, ಮಾನಸಿಕ ಆರೋಗ್ಯಕ್ಕೂ ಹೆಚ್ಚು ಗಮನ ನೀಡಿಯೇ ಆಹಾರಾಭ್ಯಾಸವನ್ನು ತೂಕ ಇಳಿಕೆಗೆ ಅನುಗುಣವಾಗಿ ಕೊಂಚ ಮಟ್ಟಿನ ಬದಲಾವಣೆ ಮಾಡಿಕೊಳ್ಳಬಹುದು. ಪೂರ್ತಿ ಬದಲಾವಣೆಯಿಂದ ನೆಗೆಟಿವ್‌ ಪರಿಣಾಮಗಳೇ ಹೆಚ್ಚು.

ಇದನ್ನೂ ಓದಿ: Weight Loss: ತೂಕ ಇಳಿಸುತ್ತಿದ್ದೀರಾ? ಬಾಯಿ ಚಪಲ ನಿಯಂತ್ರಿಸುವುದು ಕಷ್ಟವಾಗುತ್ತಿದೆಯೇ?

೨. ಬಿಂಜ್‌ ಈಟಿಂಗ್‌ ಡಿಸಾರ್ಡರ್‌: ಬಹಳಷ್ಟು ಮಂದಿ ಒಂದು ಬಗೆಯ ತೂಕ ಇಳಿಸಿಕೊಳ್ಳುವ ಪದ್ಧತಿಗೆ ಮಾರು ಹೋಗಿರುತ್ತಾರೆ. ಅದೇನೆಂದರೆ, ಹೆಚ್ಚು ಹೊತ್ತು ಅಂದರೆ ಕೆಲ ಗಂಟೆಗಳ ಕಾಲ ಏನೂ ತಿನ್ನದೆ ಇರುವುದುದ ಹಾಗೂ, ಆ ಸಮಯ ಮುಗಿದ ಕೂಡಲೇ ಇದ್ದಕ್ಕಿದ್ದಂತೆ ಬೇಕಾಬಿಟ್ಟಿ ತಿನ್ನುವುದು. ಈ ಬಗೆಯ ಕ್ರಮದಿಂದಲೂ ಬಹಳಷ್ಟು ಮಾನಸಿಕ ಸಮಸ್ಯೆಗಳು ಇದಿರಾಗುತ್ತವೆ. ನಮ್ಮನ್ನು ನಾವು ಹೆಚ್ಚು ಹೊತ್ತು ಉಪವಾಸಕ್ಕೆ ಕೆಡವಿ ಅದರಿಂದ ನಮ್ಮ ಮೇಲೆಯೇ ಆಹಾರದ ವಿಚಾರದಲ್ಲಿ ಹೆಚ್ಚು ಒತ್ತಡ ಹಾಕುವುದಕ್ಕೆ ಇದು ಕಾರಣವಾಗುತ್ತದೆ.

೩. ಅವೈಜ್ಞಾನಿಕ ವ್ಯಾಯಾಮ ಕ್ರಮಗಳು: ಇಂದು ಬಹಳಷ್ಟು ಮಂದಿ ವ್ಯಾಯಾಮ ಮಾಡಬೇಕೆಂದುಕೊಂಡು, ನಮ್ಮ ದೇಹಕ್ಕೆ ಸರಿಹೊಂದದ, ಅಧವಾ ಶಿಸ್ತೇ ಇಲ್ಲದ ಪದ್ಧತಿಯ ಮೊರೆ ಹೋಗುತ್ತಾರೆ. ಪ್ರತಿಯೊಬ್ಬರ ದೇಹಕ್ರಮಕ್ಕೆ ಅನುಸಾರವಾಗಿ ವ್ಯಾಯಾಮವನ್ನು ಮಾಡಬೇಕು. ವ್ಯಾಯಾಮ ಎಂದುಕೊಂಡು ಎಲ್ಲ ಬಗೆಯನ್ನೂ ಪ್ರಯೋಗ ಮಾಡುವುದುದ ಒಳ್ಳೆಯದಲ್ಲ. ಇದರಿಂದ ದೇಹಾರೋಗ್ಯದಲ್ಲಿ ಬೆಳವಣಿಗೆ ಸಿಗುವುದಿಲ್ಲ. ಹಾಗಾಗಿ ವ್ಯಾಯಾಮ ಮಾಡುವಾಗಲೂ ಅದಕ್ಕೊಂದು ನಿರ್ಧಿಷ್ಠ ಶಿಸ್ತು, ಸಮಯಪಾಲನೆ, ಸಮಚಿತ್ತತೆ ಇರಬೇಕು.

ಇದನ್ನೂ ಓದಿ: Weight Loss: ನಿಮ್ಮದು ತೂಕ ಏರುತ್ತಿಲ್ಲವೆಂಬ ಸಮಸ್ಯೆಯೇ? ನಿಮಗಾಗಿ ಇಲ್ಲಿದೆ ಮ್ಯಾಜಿಕ್‌ ಡ್ರಿಂಕ್!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

Jackfruit Seed: ಹಲಸಿನ ಹಣ್ಣು ತಿಂದು ಬೀಜ ಎಸೆಯದಿರಿ; ಬೀಜದಿಂದಾಗುವ ಆರೋಗ್ಯ ಲಾಭಗಳು ಹಲವು!

ಈಗ ಎಲ್ಲೆಲ್ಲೂ ರಸ್ತೆ ಬದಿಗಳಲ್ಲೆಲ್ಲ ಹಲಸು ಮಾವಿನದೇ ಕಾರುಬಾರು. ಮಾವಿನ ಹಣ್ಣಿನಷ್ಟು ಹಲಸಿನಹಣ್ಣಿಗೆ ಮರ್ಯಾದೆ ಸಿಗದಿದ್ದರೂ ಹಲಸಿನ ಹಣ್ಣಿಗೂ ಅದರದ್ದೇ ಆದ ಸ್ಥಾನವಿದೆ. ಹೊಟ್ಟೆ ತುಂಬಿಸಬಲ್ಲ, ಸಾಕಷ್ಟು ಪೋಷಕಾಂಶಗಳಿಂದ ಸಮೃದ್ಧವಾಗಿರುವ, ಸಿಹಿಯಾಗಿ ರುಚಿಯಾಗಿರುವ ಹಲಸಿನ ಹಣ್ಣನ್ನು ತಂದು ತಿಂದು ಅದರ ಬೀಜವನ್ನು ಎಸೆಯುತ್ತೀರಾದರೆ, ಸ್ವಲ್ಪ ತಡೆಯಿರಿ. ಹಲಸಿನ ಹಣ್ಣಿನಲ್ಲಿರುವಂತೆಯೇ ಬೀಜದಲ್ಲೂ (Jackfruit seed) ಸಾಕಷ್ಟು ಪೋಷಕಾಂಶಗಳಿವೆ.

VISTARANEWS.COM


on

Jackfruit Seed: ಹಲಸಿನ ಹಣ್ಣು ತಿಂದು ಬೀಜ ಎಸೆಯದಿರಿ; ಬೀಜದಿಂದಾಗುವ ಆರೋಗ್ಯ ಲಾಭಗಳು ಹಲವು!
Koo

ಬೇಸಿಗೆ ಬಂದ ತಕ್ಷಣ ಸಂತಸ ತರುವ ವಿಚಾರಗಳ ಪೈಕಿ ಹಲಸು, ಮಾವುಗಳಿಗೂ ಕ್ರೆಡಿಟ್‌ ಸಲ್ಲಬೇಕು. ಯಾಕೆಂದರೆ, ಹಲಸಿನ ಹಣ್ಣಿಗೂ ಮಾವಿನ ಹಣ್ಣಿಗೂ ಕಾಯಬೇಕೆಂದರೆ ನಾವು ಬೇಸಿಗೆಗೆ ಕಾಯಲೇಬೇಕು. ಈಗ ಎಲ್ಲೆಲ್ಲೂ ರಸ್ತೆ ಬದಿಗಳಲ್ಲೆಲ್ಲ ಹಲಸು ಮಾವಿನದೇ ಕಾರುಬಾರು. ಮಾವಿನ ಹಣ್ಣಿನಷ್ಟು ಹಲಸಿನಹಣ್ಣಿಗೆ ಮರ್ಯಾದೆ ಸಿಗದಿದ್ದರೂ ಹಲಸಿನ ಹಣ್ಣಿಗೂ ಅದರದ್ದೇ ಆದ ಸ್ಥಾನವಿದೆ. ಹೊಟ್ಟೆ ತುಂಬಿಸಬಲ್ಲ, ಸಾಕಷ್ಟು ಪೋಷಕಾಂಶಗಳಿಂದ ಸಮೃದ್ಧವಾಗಿರುವ, ಸಿಹಿಯಾಗಿ ರುಚಿಯಾಗಿರುವ ಹಲಸಿನ ಹಣ್ಣನ್ನು ತಂದು ತಿಂದು ಅದರ ಬೀಜವನ್ನು ಎಸೆಯುತ್ತೀರಾದರೆ, ಸ್ವಲ್ಪ ತಡೆಯಿರಿ. ಹಲಸಿನ ಹಣ್ಣಿನಲ್ಲಿರುವಂತೆಯೇ ಬೀಜದಲ್ಲೂ ಸಾಕಷ್ಟು ಪೋಷಕಾಂಶಗಳಿವೆ. ಆರೋಗ್ಯದ ಲಾಭಗಳಿವೆ. ಹಲಸಿನ ಹಣ್ಣು ವಿಟಮಿನ್‌ ಬಿ ಹಾಗೂ ಪೊಟಾಶಿಯಂನಿಂದ ಸಮೃದ್ಧವಾಗಿದ್ದರೆ, ಅದರ ಬೀಜಗಳಲ್ಲಿ ಥೈಮೀನ್‌, ರೈಬೋಫ್ಲೇವಿನ್‌ ಕಣ್ಣು, ಚರ್ಮ ಹಾಗೂ ಕೂದಲ ಆರೋಗ್ಯಕ್ಕೆ ಬಹಳ ಉತ್ತಮ. ಬೀಜಗಳಲ್ಲಿ ಝಿಂಕ್‌, ಕಬ್ಬಿಣಾಂಶ, ಕ್ಯಾಲ್ಶಿಯಂ, ತಾಮ್ರ, ಪೊಟಾಶಿಯಂ ಹಾಗೂ ಮೆಗ್ನೀಶಿಯಂ ಮತ್ತಿತರ ಖನಿಜ ಲವಣಗಳಿಂದ ಸಮೃದ್ಧವಾಗಿದೆ. ಇವು ಬ್ಯಾಕ್ಟೀರಿಯಾಗಳಿಂದಾಗುವ ಸಮಸ್ಯೆಗಳಿಗೆ ಉತ್ತಮ ಆಹಾರವಾಗಿದ್ದು, ಇವುಗಳಿಂದಾಗುವ ಸಮಸ್ಯೆಗಳನ್ನು ಕಡಿಮೆ ಮಾಡುವ ತಾಕತ್ತನ್ನು ಹೊಂದಿದೆ. ಬನ್ನಿ, ಹಲಸಿನ ಹಣ್ಣಿನ ಬೀಜದಿಂದ ಯಾವೆಲ್ಲ ಆರೋಗ್ಯದ ಲಾಭಗಳಿವೆ (Jackfruit seed) ಎಂಬುದನ್ನು ನೋಡೋಣ.

Skin Care

ಚರ್ಮದ ಸುಕ್ಕಿಗೆ

ಚರ್ಮದಲ್ಲಿ ಸುಕ್ಕಿನ ಸಮಸ್ಯೆಯೇ. ಸಣ್ಣ ವಯಸ್ಸಿನಲ್ಲಿಯೇ ವಯಸ್ಸಿಗೆ ಮೀರಿದ ಈ ಸಮಸ್ಯೆ ನಿಮಗಿದೆ ಎಂದಾದಲ್ಲಿ ಈ ಬೀಜಕ್ಕೆ ಸ್ವಲ್ಪ ಹಾಲು ಸೇರಿಸಿ ನುಣುಪಾಗಿ ಅರೆದು ಅದರ ಪೇಸ್ಟನ್ನು ಮುಖದ ಚರ್ಮದ ಮೇಲೆ ಹಚ್ಚುವುದರಿಂದ ಚರ್ಮ ನುಣುಪಾಗುತ್ತದೆ. ಚರ್ಮಕ್ಕೆ ಹೊಸ ಕಾಂತಿ ಬರುತ್ತದೆ. ನಿರಿಗೆಗಳು ಕಡಿಮೆಯಾಗುತ್ತದೆ. ನಿತ್ಯವೂ ಹೀಗೆ ಮಾಡುವುದರಿಂದ ಒಳ್ಲೆಯ ಫಲಿತಾಂಶ ಕಾಣಬಹುದು.

Stress Reduction Tea Benefits

ಮಾನಸಿಕ ಒತ್ತಡಕ್ಕೆ

ಹಲಸಿನ ಹಣ್ಣಿನ ಬೀಜದಲ್ಲಿ ಸಾಕಷ್ಟು ಪ್ರೊಟೀನ್‌ ಹಾಗೂ ಮೈಕ್ರೋ ನ್ಯೂಟ್ರಿಯೆಂಟ್‌ಗಳು ಇರುವುದರಿಂದ ಇವು ಮಾನಸಿಕ ಒತ್ತಡ ಹಾಗೂ ಸಾಕಷ್ಟು ಚರ್ಮದ ಸಮಸ್ಯೆಗಳನ್ನು ವಾಸಿ ಮಾಡುವಲ್ಲಿ ನೆರವಾಗುತ್ತದೆ. ಹಲಸಿನ ಬೀಜಗಳನ್ನು ಬೇಯಿಸಿ ಅಥವಾ ಅಡುಗೆಯಲ್ಲಿ ಬಳಸಿ ಸೇವಿಸುವುದರಿಂದ ಈ ಉಪಯೋಗ ಪಡೆಯಬಹುದು.

Woman anemia image Coriander Benefits

ಅನೀಮಿಯಾಕ್ಕೆ

ಹಲಸಿನ ಹಣ್ಣಿನ ಬೀಜವನ್ನು ಸೇವಿಸುವುದರಿಂದ ದೇಹಕ್ಕೆ ಬೇಕಾದ ಕಬ್ಬಿಣಾಂಶ ದೊರೆತು, ಅನೀಮಿಯಾದಂತಹ ರಕ್ತಹೀನತೆಯ ಸಮಸ್ಯೆ ಕಡಿಮೆಯಾಗುತ್ತದೆ. ದೇಹದಲ್ಲಿ ರಕ್ತ ತುಂಬಿಕೊಳ್ಳುತ್ತದೆ. ಕಬ್ಬಿನಾಂಶವು ಹಿಮೋಗ್ಲೋಬಿನ್‌ ಹೆಚ್ಚಳಕ್ಕೆ ಬೇಕಾದ ಪ್ರಮುಖ ಪೋಷಕಾಂಶವಾಗಿರುವುದರಿಂದ ದೇಹಕ್ಕೆ ಶಕ್ತಿ ಸಾಮರ್ಥ್ಯವನ್ನು ನೀಡುವಲ್ಲಿ ಇದು ಮುಖ್ಯ ಪಾತ್ರ ವಹಿಸುತ್ತದೆ.

Close-up human eye, lens, cornea and brown iris.

ಕಣ್ಣಿನ ಆರೋಗ್ಯಕ್ಕೆ ಹಾಗೂ ಕೂದಲ ಪೋಷಣೆಗೆ

ಹಲಸಿನ ಬೀಜದಲ್ಲಿ ವಿಟಮಿನ್‌ ಎ ಸಮೃದ್ಧವಾಗಿರುವುದರಿಂದ ಕಣ್ಣಿನ ಆರೋಗ್ಯಕ್ಕೆ ಇದು ಅತ್ಯುತ್ತಮ ಆಹಾರ. ಅಷ್ಟೇ ಅಲ್ಲ, ಕೂದಲಿಗೂ ಇದು ಅತ್ಯುತ್ತಮ ಪೋಷಣೆ ನೀಡುತ್ತದೆ.

healthy internal organs of human digestive system

ಜೀರ್ಣಕ್ರಿಯೆ ಸಮಸ್ಯೆಗೆ

ತಿಂದದನ್ನು ಸರಿಯಾಗಿ ಜೀರ್ಣವಾಗದೆ ಸಮಸ್ಯೆಯಾಗುತ್ತಿದೆ ಎಂದಾದಲ್ಲಿ ಹಲಸಿನ ಹಣ್ಣಿನ ಬೀಜದ ಪುಡಿಯನ್ನು ಸೇವಿಸಿದರೆ ತಕ್ಷಣವೇ ಪರಿಹಾರ ಸಿಗುತ್ತದೆ. ಬೀಜಗಳನ್ನು ಒಣಗಿಸಿ ಪುಡಿ ಮಾಡಿ ಇಟ್ಟುಕೊಂಡರೆ ಇಂಥ ಸಂದರ್ಭಗಳಲ್ಲಿ ಬಳಸಬಹುದು. ಅಥವಾ ಮಲಬದ್ಧತೆಯ ಸಮಸ್ಯೆಯಿದ್ದರೆ, ಹಲಸಿನ ಬೀಜವನ್ನು ಬೇಯಿಸಿ ತಿನ್ನುವ ಮೂಲಕ ಸಮಸ್ಯೆಯಿಂದ ಪಾರಾಗಬಹುದು.

ಇದನ್ನೂ ಓದಿ: Drinks for Summer: ಬೇಸಿಗೆಯಲ್ಲಿ ತಂಪಾಗಿರಬೇಕೆ? ಈ ಪೇಯಗಳನ್ನು ತಪ್ಪದೇ ಕುಡಿಯಿರಿ

ಮಾಂಸಖಂಡಗಳ ಬಲವರ್ಧನೆಗೆ

ಹಲಸಿನ ಹಣ್ಣಿನ ಬೀಜದಲ್ಲಿ ಅಧಿಕ ಗುಣಮಟ್ಟದ ಪ್ರೊಟೀನ್‌ ಇರುವುದರಿಂದ ಇದು ಮಾಂಸಖಂಡಗಳ ಬಲವರ್ಧನೆಗೆ ಅತ್ಯಂತ ಒಳ್ಳೆಯದು. ಇದರಲ್ಲಿರುವ ಪ್ರೊಟೀನ್‌ ಕೊಲೆಸ್ಟೆರಾಲ್‌ ರಹಿತವಾಗಿರುವುದರಿಂದ ಜಿಮ್‌ಗೆ ಹೋಗಿ ದೇಹದಾರ್ಢ್ಯತೆ ಬೆಳೆಸುವ ಮಂದಿಗೂ, ಫಿಟ್‌ನೆಸ್‌ ಪ್ರಿಯರಿಗೂ ಇದು ಒಳ್ಳೆಯ ಆಹಾರ.

Continue Reading

Latest

Diabetes Management Tips: ಈ ಏಳು ಪಾನೀಯಗಳನ್ನು ಸೇವಿಸಿ, ಮಧುಮೇಹ ನಿಯಂತ್ರಿಸಿ

ನೈಸರ್ಗಿಕವಾಗಿ ದೇಹದಲ್ಲಿ ಇನ್ಸುಲಿನ್ ಉತ್ಪಾದನೆಯನ್ನು ಹೆಚ್ಚಿಸಲು ಆಯುರ್ವೇದ ಸೂಚಿಸುವ ಏಳು ಗಿಡಮೂಲಿಕೆ ಪಾನೀಯಗಳು ಇವೆ. ಇವುಗಳನ್ನು ನಿಯಮಿತವಾಗಿ ಸೇವಿಸುವುದರಿಂದ ಮಧುಮೇಹವನ್ನು (Diabetes Management Tips) ನಿಯಂತ್ರಿಸಬಹುದು.

VISTARANEWS.COM


on

By

Diabetes Management Tips
Koo

ಇತ್ತೀಚಿನ ದಿನಗಳಲ್ಲಿ ಬಹುತೇಕ ಜನರನ್ನು ಕಾಡುವ ಕಾಯಿಲೆ ರಕ್ತದೊತ್ತಡ (blood pressure) ಮತ್ತು ಮಧುಮೇಹ (diabetes). ರಕ್ತದೊತ್ತಡವಾದರೆ ಬಹುಬೇಗನೆ ತನ್ನ ಇರುವಿಕೆಯನ್ನು ಸೂಚಿಸುತ್ತದೆ. ಆದರೆ ಮಧುಮೇಹ ಹೆಚ್ಚಿನವರಿಗೆ ಗೊತ್ತೇ ಆಗುವುದಿಲ್ಲ. ಮಧುಮೇಹದಿಂದ ಬಳಲುತ್ತಿರುವವರು ನೀವಾಗಿದ್ದರೆ ನೈಸರ್ಗಿಕವಾಗಿ ದೇಹದಲ್ಲಿ ಇನ್ಸುಲಿನ್ (insulin) ಉತ್ಪಾದನೆಯನ್ನು ಹೆಚ್ಚಿಸುವ ಹಲವು ಆಯುರ್ವೇದ ಗಿಡಮೂಲಿಕೆಯ (Ayurvedic herbal) ಪಾನೀಯಗಳಿವೆ.

ಮಧುಮೇಹವು ಇಂದು ಜಗತ್ತಿನಾದ್ಯಂತ ಲಕ್ಷಾಂತರ ಜನರನ್ನು ಕಾಡುತ್ತಿರುವ ಸಾಮಾನ್ಯ ಆರೋಗ್ಯ ಸಮಸ್ಯೆಯಾಗಿದೆ. ಆರೋಗ್ಯಕರ ಜೀವನ ನಡೆಸಲು ಮಧುಮೇಹದ ಲಕ್ಷಣಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಅತ್ಯಗತ್ಯ. ಪುರಾತನ ಭಾರತೀಯ ವೈದ್ಯಕೀಯ ಪದ್ಧತಿಯಾದ ಆಯುರ್ವೇದವು ಇನ್ಸುಲಿನ್ ಉತ್ಪಾದನೆಯನ್ನು ಹೆಚ್ಚಿಸಲು ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸಮತೋಲನಗೊಳಿಸಲು ನೈಸರ್ಗಿಕ ಚಿಕಿತ್ಸೆಗಳನ್ನು ಶಿಫಾರಸು ಮಾಡುತ್ತದೆ. ಮಧುಮೇಹದ ರೋಗಲಕ್ಷಣಗಳನ್ನು ಪರಿಣಾಮಕಾರಿಯಾಗಿ ನಿಭಾಯಿಸಲು ಸಹಾಯ ಮಾಡುವ ಏಳು ಪ್ರಸಿದ್ಧ ಆಯುರ್ವೇದ ಪಾನೀಯಗಳಿವೆ.

ಆಯುರ್ವೇದವು ಒಟ್ಟಾರೆ ಆರೋಗ್ಯವನ್ನು ಹೆಚ್ಚಿಸಲು ನೈಸರ್ಗಿಕ ಪದಾರ್ಥಗಳ ಬಳಕೆಯನ್ನು ಪ್ರೋತ್ಸಾಹಿಸುತ್ತದೆ. ಆಯುರ್ವೇದದ ಪಾನೀಯಗಳು ಔಷಧೀಯ ಗಿಡಮೂಲಿಕೆಗಳು, ಮಸಾಲೆಗಳು ಮತ್ತು ಹಣ್ಣುಗಳನ್ನು ದೈನಂದಿನ ಜೀವನದಲ್ಲಿ ಸೇರಿಸಲು ನೆಚ್ಚಿನ ವಿಧಾನವಾಗಿದೆ. ಇದು ಕೇವಲ ರುಚಿಕರವಲ್ಲ ಆದರೆ ಸುಧಾರಿತ ಸೇರಿದಂತೆ ಆರೋಗ್ಯ ಪ್ರಯೋಜನಗಳಿಂದ ಕೂಡಿದೆ.


ದಾಲ್ಚಿನ್ನಿ ಮತ್ತು ಮೆಂತ್ಯ

ದಾಲ್ಚಿನ್ನಿ ಮತ್ತು ಮೆಂತ್ಯ ಮಧುಮೇಹ ವಿರೋಧಿ ಗುಣಲಕ್ಷಣಗಳನ್ನು ಹೊಂದಿದೆ. ದಾಲ್ಚಿನ್ನಿ ಮತ್ತು ಮೆಂತ್ಯಯೊಂದಿಗೆ ಒಂದು ಕಪ್ ಚಹಾ ಮಾಡಿ ಸೇವಿಸಿದರೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ ಮತ್ತು ಇನ್ಸುಲಿನ್ ಹೆಚ್ಚಿಸುತ್ತದೆ. ಉತ್ಕರ್ಷಣ ನಿರೋಧಕಗಳಿಂದ ತುಂಬಿರುವ ಈ ಪದಾರ್ಥಗಳು ಮಧುಮೇಹ ರೋಗಲಕ್ಷಣಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಸಹಾಯ ಮಾಡುತ್ತದೆ.

ಹಾಗಲಕಾಯಿ

ಹಾಗಲಕಾಯಿಯನ್ನು ಆಯುರ್ವೇದದಲ್ಲಿ ರಕ್ತದಲ್ಲಿನ ಸಕ್ಕರೆಯನ್ನು ಕಡಿಮೆ ಮಾಡುವ ಪರಿಣಾಮಕ್ಕಾಗಿ ಪ್ರಶಂಸಿಸಲಾಗುತ್ತದೆ. ಇದರ ರಸವನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಸಮತೋಲನಗೊಳಿಸಬಹುದು. ನೈಸರ್ಗಿಕವಾಗಿ ಇನ್ಸುಲಿನ್ ಉತ್ಪಾದನೆಯನ್ನು ಉತ್ತೇಜಿಸಬಹುದು.


ನೆಲ್ಲಿಕಾಯಿ

ಪೋಷಕಾಂಶಗಳು ಮತ್ತು ಉತ್ಕರ್ಷಣ ನಿರೋಧಕಗಳಿಂದ ತುಂಬಿರುತ್ತದೆ. ಆಮ್ಲಾ ಜ್ಯೂಸ್ ಮಧುಮೇಹವನ್ನು ನಿರ್ವಹಿಸಲು ಪ್ರಸಿದ್ಧವಾದ ಆಯುರ್ವೇದ ಟಾನಿಕ್ ಆಗಿದೆ. ವಿಟಮಿನ್ ಸಿ ಯಲ್ಲಿ ಸಮೃದ್ಧವಾಗಿರುವ ಆಮ್ಲಾವು ಮೇದೋಜ್ಜೀರಕ ಗ್ರಂಥಿಯ ಕಾರ್ಯಗಳನ್ನು ಮತ್ತು ಇನ್ಸುಲಿನ್ ಸ್ರವಿಸುವಿಕೆಯನ್ನು ಸುಧಾರಿಸುತ್ತದೆ. ನಿಯಮಿತ ಸೇವನೆಯು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಸಹಾಯ ಮಾಡುತ್ತದೆ.

ಅರಿಶಿನ

ಅರಿಶಿನವು ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಮಲಗುವ ಮುನ್ನ ಅರಿಶಿನ ಬೆರೆಸಿದ ಹಾಲನ್ನು ಕುಡಿಯುವುದು ಉರಿಯೂತವನ್ನು ಕಡಿಮೆ ಮಾಡುತ್ತದೆ, ಇನ್ಸುಲಿನ್ ಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ಉತ್ತಮ ನಿದ್ರೆಗೆ ಕಾರಣವಾಗುತ್ತದೆ. ಅರಿಶಿನದಲ್ಲಿರುವ ಅಗತ್ಯ ಸಂಯುಕ್ತವಾದ ಕರ್ಕ್ಯುಮಿನ್ ಸ್ವಾಭಾವಿಕವಾಗಿ ಮಧುಮೇಹದ ಲಕ್ಷಣಗಳನ್ನು ನಿರ್ವಹಿಸಬಲ್ಲದು.

ಬೇವಿನ ಎಲೆ

ಔಷಧೀಯ ಗುಣಗಳು ಸಮೃದ್ಧವಾಗಿರುವ ಬೇವಿನ ಎಲೆಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸಮತೋಲನಗೊಳಿಸುತ್ತದೆ. ಸ್ವಲ್ಪ ಕಹಿಯಾಗಿದ್ದರೂ, ಬೇವಿನ ಎಲೆಯ ಚಹಾವು ಪರಿಣಾಮಕಾರಿ ಆಯುರ್ವೇದ ಪಾನೀಯವಾಗಿದ್ದು ಅದು ರಕ್ತದಲ್ಲಿನ ಗ್ಲೂಕೋಸ್ ಅನ್ನು ಕಡಿಮೆ ಮಾಡುತ್ತದೆ ಮತ್ತು ಇನ್ಸುಲಿನ್ ಸೂಕ್ಷ್ಮತೆಯನ್ನು ಹೆಚ್ಚಿಸುತ್ತದೆ.


ನಿಂಬೆ ಮತ್ತು ಶುಂಠಿ

ನಿಂಬೆ ಮತ್ತು ಶುಂಠಿ ಆರೋಗ್ಯದ ಪರಿಣಾಮಗಳಿಗೆ ಹೆಸರುವಾಸಿಯಾಗಿದೆ. ಶುಂಠಿ ಮತ್ತು ನಿಂಬೆಯ ಬೆಚ್ಚಗಿನ ಪಾನೀಯವು ದೇಹವನ್ನು ನಿರ್ವಿಷಗೊಳಿಸುತ್ತದೆ. ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸಮತೋಲನಗೊಳಿಸುತ್ತದೆ. ಇದು ನೈಸರ್ಗಿಕವಾಗಿ ಇನ್ಸುಲಿನ್ ಉತ್ಪಾದನೆ ಮಾಡುತ್ತದೆ.

ಇದನ್ನೂ ಓದಿ: FSSAI Warning: ನೀವು ತಿನ್ನುವ ಮಾವಿನ ಹಣ್ಣು ಸುರಕ್ಷಿತವಾಗಿದೆಯೇ?

ತ್ರಿಫಲ

ಆಯುರ್ವೇದ ಗಿಡಮೂಲಿಕೆಗಳ ಮಿಶ್ರಣವು ಮೂರು ಹಣ್ಣುಗಳನ್ನು ಒಳಗೊಂಡಿದೆ: ಆಮ್ಲಾ, ಬಿಭಿಟಕಿ ಮತ್ತು ಹರಿತಕಿ. ತ್ರಿಫಲಾ ಚಹಾವು ಒಟ್ಟಾರೆ ಆರೋಗ್ಯ ಮತ್ತು ಜೀರ್ಣಕಾರಿ ಯೋಗಕ್ಷೇಮವನ್ನು ಉತ್ತೇಜಿಸುತ್ತದೆ. ನಿಯಮಿತ ಸೇವನೆಯು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿರಿಸುತ್ತದೆ. ಇನ್ಸುಲಿನ್ ಸಂವೇದನೆಯನ್ನು ಹೆಚ್ಚಿಸುತ್ತದೆ ಮತ್ತು ಕರುಳಿನ ಆರೋಗ್ಯಕ್ಕೆ ಸಹಾಯ ಮಾಡುತ್ತದೆ.

Continue Reading

ಆರೋಗ್ಯ

Health Tips Kannada: ಸನ್‌ಸ್ಕ್ರೀನ್‌ ಕುರಿತು ನಿಮಗೆಷ್ಟು ಗೊತ್ತು?

ಬಿಸಿಲಿಗೆ ಹೊರಗೆ ಹೋಗುವಾಗ ಸನ್‌ಸ್ಕ್ರೀನ್‌ (Sunscreen) ಹಚ್ಚಿಕೊಳ್ಳುವ ಸಲಹೆ ಸಾಮಾನ್ಯವಾಗಿ ಎಲ್ಲರಿಂದ ಬರುತ್ತದೆ. ಆದರೆ ಸೌಂದರ್ಯ ತಜ್ಞರಿಂದ ಬರುವ ಸಲಹೆಗಳಲ್ಲಿ ಬಹಳಷ್ಟನ್ನು ಪಾಲಿಸಲು ಸಾಧ್ಯವಿಲ್ಲ ಎಂದೇ ಭಾವಿಸುತ್ತೇವೆ. ಆದರೆ ಬಿರುಬೇಸಿಗೆಯಲ್ಲಿ ನಿಯಮಿತವಾಗಿ ಸನ್‌ಸ್ಕ್ರೀನ್‌ ಬಳಕೆ ಮಾಡುವುದರಿಂದ ಚರ್ಮ ಸುಟ್ಟು ಕೆಂಪಾಗುವುದು, ಸುಕ್ಕಾಗುವುದು, ಕಪ್ಪು ಕಲೆಗಳು ಬರುವಂಥ ಬಹಳಷ್ಟು ತೊಂದರೆಗಳನ್ನು ತಪ್ಪಿಸಬಹುದು. ಆದರೆ ಈ ಬಗ್ಗೆ ಹಲವಾರು ತಪ್ಪು ತಿಳಿವಳಿಕೆಗಳು ಚಾಲ್ತಿಯಲ್ಲಿವೆ. ಇವು ಏನು ಎಂಬ ಮಾಹಿತಿ (Health Tips Kannada) ಇಲ್ಲಿದೆ.

VISTARANEWS.COM


on

Health Tips Kannada
Koo

ಸನ್‌ಸ್ಕ್ರೀನ್‌ (Sunscreen) ಕುರಿತಾಗಿ ಬಹಳಷ್ಟು ತಪ್ಪು ಕಲ್ಪನೆಗಳು ಚಾಲ್ತಿಯಲ್ಲಿವೆ. ಸೂರ್ಯನ ಬಿಸಿಲಲ್ಲಿರುವ ಅತಿನೇರಳೆ ಕಿರಣಗಳು ಚರ್ಮಕ್ಕೆ ಹಾನಿ ಮಾಡುವುದನ್ನು ತಡೆಗಟ್ಟುವ ಉದ್ದೇಶ ಇದನ್ನು ಬಳಸುವುದರ ಹಿಂದಿದೆ. ತೀವ್ರ ಬಿಸಿಲಿಗೆ ಹೋಗುವಾಗ ಸನ್‌ಬ್ಲಾಕ್‌ ಜೊತೆಗೆ ಉದ್ದ ತೋಳಿನ ವಸ್ತ್ರಗಳನ್ನು ಧರಿಸುವುದು ಇನ್ನೂ ಒಳ್ಳೆಯದು.
ಬಿಸಿಲಿಗೆ ಹೊರಗೆ ಹೋಗುವಾಗ ಸನ್‌ಸ್ಕ್ರೀನ್‌ ಹಚ್ಚಿಕೊಳ್ಳುವ ಸಲಹೆ ಸಾಮಾನ್ಯವಾಗಿ ಎಲ್ಲರಿಂದ ಬರುತ್ತದೆ. ಆದರೆ ಸೌಂದರ್ಯ ತಜ್ಞರಿಂದ ಬರುವ ಸಲಹೆಗಳಲ್ಲಿ ಬಹಳಷ್ಟನ್ನು ಪಾಲಿಸಲು ಸಾಧ್ಯವಿಲ್ಲ ಎಂದೇ ಭಾವಿಸುತ್ತೇವೆ. ಆದರೆ ಬಿರುಬೇಸಿಗೆಯಲ್ಲಿ ನಿಯಮಿತವಾಗಿ ಸನ್‌ಸ್ಕ್ರೀನ್‌ ಬಳಕೆ ಮಾಡುವುದರಿಂದ ಚರ್ಮ ಸುಟ್ಟು ಕೆಂಪಾಗುವುದು, ಸುಕ್ಕಾಗುವುದು, ಕಪ್ಪು ಕಲೆಗಳು ಬರುವಂಥ ಬಹಳಷ್ಟು ತೊಂದರೆಗಳನ್ನು ತಪ್ಪಿಸಬಹುದು. ಆದರೆ ಈ ಬಗ್ಗೆ ಹಲವಾರು ತಪ್ಪು ತಿಳುವಳಿಕೆಗಳು ಚಾಲ್ತಿಯಲ್ಲಿವೆ. ಏನವು ಎಂಬುದನ್ನು (Health Tips Kannada) ನೋಡೋಣ.

Woman hand apply sunscreen

ಮೋಡವಿರುವಾಗ ಸನ್‌ಸ್ಕ್ರೀನ್‌ ಬೇಡ

ಹಾಗೇನಿಲ್ಲ. ಮೋಡವಿರುವಾಗ ಸೂರ್ಯ ಕಾಣುವುದಿಲ್ಲ ಎನ್ನುವುದು ನಿಜವಾದರೂ, ಮೋಡದಡಿಗಿನ ಬಿಸಿಲು ಸಹ ಸಾಕಷ್ಟು ಸುಡುತ್ತದೆ. ತೀರ ಮಳೆ ಬರುವಾಗಿನ ಸಂದರ್ಭವನ್ನು ಹೊರತು ಪಡಿಸಿ, ಮೋಡ ಇರುವಾಗಲೂ ಚರ್ಮ ಸುಡಬಹುದು. ಹಾಗಾಗಿ ಸನ್‌ಸ್ಕ್ರೀನ್‌ ಕ್ರೀಮ್‌, ಸ್ಪ್ರೇ, ಸ್ಟಿಕ್‌ ಮುಂತಾದ ಯಾವುದನ್ನಾದರೂ ಬಳಸುವುದು ಒಳ್ಳೆಯದು.

Woman Putting Sunblock on Back

ಕಪ್ಪು ಬಣ್ಣದವರಿಗೆ ಸನ್‌ಸ್ಕ್ರೀನ್‌ ಬೇಡ

ಬಿಳಿ ಬಣ್ಣದವರ ಚರ್ಮ ಬಿಸಿಲಿಗೆ ಸುಟ್ಟು ಕೆಂಪಾಗುವುದು ಎದ್ದು ಕಾಣುತ್ತದೆ. ಆನಂತರ ಕಪ್ಪಾಗುವುದು ಸಹಜ. ಇದರರ್ಥ ಚರ್ಮದ ಬಣ್ಣ ಕಪ್ಪಾಗಿದ್ದರೆ ಬಿಸಿಲು ಸುಡುವುದಿಲ್ಲ ಎಂದಲ್ಲ, ಸುಟ್ಟಿದ್ದು ಕಾಣುವುದಿಲ್ಲ ಅಷ್ಟೆ. ಕಪ್ಪು ಚರ್ಮದಲ್ಲಿ ಮೆಲನಿನ್‌ ಇರುವುದು ಸ್ವಲ್ಪ ಹೆಚ್ಚು ಎನ್ನುವುದು ನಿಜ. ಆದರೆ ಅವರಿಗೂ ಸನ್‌ಬ್ಲಾಕ್‌ ಬೇಕು. ಯಾವುದೇ ಬಣ್ಣದವರಿಗಾದರೂ ಬಿಸಿಲಿಗೆ ಚರ್ಮ ಸುಡುವುದರಲ್ಲಿ ವ್ಯತ್ಯಾಸವಿಲ್ಲ.

ವಿಟಮಿನ್‌ ಡಿ ಕೊರತೆ

ಸದಾ ಕಾಲ ಸನ್‌ಸ್ಕ್ರೀನ್‌ ಹಚ್ಚಿಕೊಂಡೇ ಇದ್ದರೆ ವಿಟಮಿನ್‌ ಡಿ ಕೊರತೆಯಾಗಬಹುದು ಎಂಬುದು ಹಲವರ ವಾದ. ಆದರೆ ಹಾಗೇನಿಲ್ಲ. 365 ದಿನವೂ ಸನ್‌ಸ್ಕ್ರೀನ್‌ ಹಚ್ಚಿಕೊಂಡಿದ್ದರೆ, ವಿಟಮಿನ್‌ ಡಿ ಉತ್ಪಾದನೆಗೆ ಕೊಂಚ ಹಿನ್ನಡೆ ಆಗುವ ಸಾಧ್ಯತೆ ಇಲ್ಲದಿಲ್ಲ. ಆದರೆ ಸಾಧಾರಣವಾಗಿ ಯಾರೂ ಆ ಪ್ರಮಾಣದಲ್ಲಿ ಸನ್‌ಸ್ಕ್ರೀನ್‌ ಹಚ್ಚಿಕೊಳ್ಳುವುದಿಲ್ಲ.

ಮೇಕಪ್‌ನಲ್ಲಿ ಇರುವಷ್ಟು ಎಸ್‌ಪಿಎಫ್‌ ಸಾಕಾಗುತ್ತದೆ

ಇಲ್ಲ, ಸಾಕಾಗುವುದಿಲ್ಲ. ಬಹಳಷ್ಟು ಬಾರಿ ಮೇಕಪ್‌ಗಳಲ್ಲಿ 30 ಎಸ್‌ಪಿಎಫ್‌ ಸನ್‌ಬ್ಲಾಕ್‌ ಸೇರಿಕೊಂಡಿರುವುದು ಹೌದು. ಆದರೆ ಸನ್‌ಸ್ಕೀನ್‌ನಷ್ಟು ಧಾರಾಳವಾಗಿ ಮೇಕಪ್‌ ಬಳಕೆಯಾಗುವುದಿಲ್ಲ. ಹಾಗಾಗಿ ಇದರಲ್ಲಿರುವ ಸನ್‌ಬ್ಲಾಕ್‌ ನಂಬಿಕೊಳ್ಳುವ ಬದಲು, ಪ್ರತ್ಯೇಕ್ ಸನ್‌ಸ್ಕ್ರೀನ್‌ ಉಪಯೋಗಿಸುವುದು ಉತ್ತಮ.

Woman Applying Sunscreen on Face

ಹೆಚ್ಚು ಎಸ್‌ಪಿಎಫ್‌ ಎಂದರೆ ಹೆಚ್ಚು ರಕ್ಷಣೆ

ಹಾಗಲ್ಲ, ಹೆಚ್ಚಿನ ಎಸ್‌ಪಿಎಫ್‌ ಇದ್ದರೆ ರಕ್ಷಣೆಯ ಪ್ರಮಾಣ ಹೆಚ್ಚು ಎಂದೇನಿಲ್ಲ. ಬದಲಿಗೆ, ಸಮಯ ದೀರ್ಘ ಎಂದಾಗಬಹುದು. ಉದಾ, 30 ಎಸ್‌ಪಿಎಫ್‌ ಇದ್ದರೆ ಎಷ್ಟು ಅತಿನೇರಳೆ ಕಿರಣಗಳನ್ನು ತಡೆಯುತ್ತದೋ 60 ಎಸ್‌ಪಿಎಫ್‌ ಇದ್ದರೆ ಅದರ ದುಪ್ಪಟ್ಟು ಅತಿನೇರಳೆ ಕಿರಣಗಳನ್ನು ತಡೆಯುತ್ತದೆ ಎಂದು ಅರ್ಥವಲ್ಲ. ಇದು ಎಷ್ಟು ದೀರ್ಘ ಕಾಲ ಯುವಿ ಕಿರಣಗಳನ್ನು ತಡೆಯುತ್ತದೆ ಎಂಬುದನ್ನು ಸೂಚಿಸುತ್ತದೆ ಹೊರತು, ಎಷ್ಟು ಶೇಕಡಾ ತಡೆಯುತ್ತದೆ ಎಂದಲ್ಲ.

ವಾಟರ್‌ಪ್ರೂಫ್‌ ಇರುತ್ತದೆ

ಬಹಳಷ್ಟು ಕಂಪೆನಿಗಳು ಹಾಗೆಂದು ಹೇಳಿಕೊಳ್ಳುತ್ತವೆ. ಆದರೆ ವೃತ್ತಿಪರ ಈಜುಗಾರರು ಬಳಸುವಂಥ ಕೆಲವು ವಾಟರ್‌ ರೆಸಿಸ್ಟೆಂಟ್‌ ಸನ್‌ಬ್ಲಾಕ್‌ಗಳ ಹೊರತಾಗಿ, ಸಂಪೂರ್ಣ ವಾಟರ್‌ಪ್ರೂಫ್‌ ಇರುವುದು ಬಹಳ ಕಡಿಮೆ. ಹಾಗಾಗಿ ನೀರು, ಬೆವರು ಮುಂತಾದವುಗಳಿಂದ ಒದ್ದೆಯಾದಾಗ, ಒರೆಸಿದರೆ ಮತ್ತೆ ಸನ್‌ಸ್ಕ್ರೀನ್‌ ಬೇಕಾಗುತ್ತದೆ.

ಇದನ್ನೂ ಓದಿ: Hair Conditioner: ರಾಸಾಯನಿಕ ಹೇರ್‌ ಕಂಡೀಷನರ್‌ ಬಿಡಿ; ಈ 5 ನೈಸರ್ಗಿಕ ಹೇರ್ ಕಂಡೀಷನರ್ ಬಳಸಿ

ಎಲ್ಲರಿಗೂ ಒಂದೇ ಥರದ್ದು ಸಾಕು

ಇದೂ ತಪ್ಪು. ಒಂದೊಂದು ರೀತಿಯ ಚರ್ಮದವರಿಗೆ ಒಂದೊಂದು ರೀತಿಯ ಸನ್‌ ಬ್ಲಾಕ್‌ ಬೇಕಾಗಬಹುದು. ಎಣ್ಣೆ ಚರ್ಮದವರಿಗೆ ಜೆಲ್‌ ಸ್ವರೂಪದ ಸನ್‌ ಬ್ಲಾಕ್‌ಗಳು ಹೆಚ್ಚು ಉಪಯುಕ್ತ. ಇದರಿಂದ ಚರ್ಮದ ಸೂಕ್ಷ್ಮ ರಂಧ್ರಗಳು ಮುಚ್ಚಿಕೊಳ್ಳುವುದಿಲ್ಲ. ಒಣ ಚರ್ಮದವರಿಗೆ ಮಾಯಿಶ್ಚರೈಸರ್‌ ಜೊತೆಗಿರುವ ಸನ್‌ಸ್ಕ್ರೀನ್‌ ಅನುಕೂಲಕರ. ಸೂಕ್ಷ್ಮ ಚರ್ಮದವರು ಬೇಬಿ ಸನ್‌ಬ್ಲಾಕ್‌ ಉಪಯೋಗಿಸುವುದು ಕ್ಷೇಮ.

Continue Reading

ಆರೋಗ್ಯ

Sweat Problem: ದುರ್ಗಂಧದ ಬೆವರಿನ ಸಮಸ್ಯೆಗೆ ಇಲ್ಲಿವೆ ನೈಸರ್ಗಿಕ ಪರಿಹಾರಗಳು!

ಬೆವರಿ ನೀರಾಗಿ ಹರಿದು, ಒದ್ದೆಯಾಗಿ ನೆನೆಯುವುದಷ್ಟೇ ಅಲ್ಲ, ಅಕ್ಕಪಕ್ಕದವರೆಲ್ಲರ ಬೆವರ ಗಂಧವೂ ನಮ್ಮ ಮೂಗಿನ ಹೊಳ್ಳೆಯೊಳಕ್ಕೆ ದಾಳಿ ಮಾಡಿ ಅಲ್ಲಿರುವುದೇ ಕಷ್ಟಸಾಧ್ಯವಾಗುವ ಪರಿಸ್ಥಿತಿ ನಿರ್ಮಾಣ ಮಾಡುತ್ತದೆ. ಬೆವರುವುದು ಸಾಮಾನ್ಯ ಲಕ್ಷಣವೇ ಆದರೂ, ಬೆವರಿನ ದುರ್ಗಂಧ ಖಂಡಿತವಾಗಿಯೂ ಮುಜುಗರ ತರಿಸುವಂಥದ್ದೇ ಆಗಿದೆ. ಇದಕ್ಕೆ (sweat problem) ಏನು ಪರಿಹಾರ?

VISTARANEWS.COM


on

Sweat Problem
Koo

ಬಿರುಬೇಸಿಗೆಯಲ್ಲಿ ಯಾರಿಗೆ ಬೆವರುವುದಿಲ್ಲ ಹೇಳಿ! ಅದರಲ್ಲೂ ತುಂಬಿದ ಬಸ್‌, ಕಿಕ್ಕಿರಿದು ನೆರೆದಿರುವ ಜನಸಂದಣಿಯ ನಡುವೆ ಇರುವುದು ಸುಲಭದ ಮಾತಲ್ಲ. ಬೆವರಿ ನೀರಾಗಿ ಹರಿದು, ಒದ್ದೆಯಾಗಿ ನೆನೆಯುವುದಷ್ಟೇ ಅಲ್ಲ, ಅಕ್ಕಪಕ್ಕದವರೆಲ್ಲರ ಬೆವರ ಗಂಧವೂ ನಮ್ಮ ಮೂಗಿನ ಹೊಳ್ಳೆಯೊಳಕ್ಕೆ ದಾಳಿ ಮಾಡಿ ಅಲ್ಲಿರುವುದೇ ಕಷ್ಟಸಾಧ್ಯವಾಗುವ ಪರಿಸ್ಥಿತಿ ನಿರ್ಮಾಣ ಮಾಡುತ್ತದೆ. ಬೆವರುವುದು ಸಾಮಾನ್ಯ ಲಕ್ಷಣವೇ ಆದರೂ, ಬೆವರಿನ ದುರ್ಗಂಧ ಖಂಡಿತವಾಗಿಯೂ ಮುಜುಗರ ತರಿಸುವಂಥದ್ದೇ ಆಗಿದೆ. ಕೆಲವರಿಗೆ ಕಡಿಮೆ ಬೆವರಿದರೆ, ಇನ್ನೂ ಕೆಲವರಿಗೆ ಬೆವರುವುದೇ ಒಂದು ಸಮಸ್ಯೆ. ಇದಕ್ಕೆ ಕಾರಣಗಳು ಅನೇಕ. ಕೆಲವರ ಆಹಾರಭ್ಯಾಸದಿಂದ ಈ ಸಮಸ್ಯೆ ಕಾಡಿದರೆ, ಇನ್ನೂ ಕೆಲವರಿಗೆ ಬೊಜ್ಜು, ಹೃದಯದ ಸಮಸ್ಯೆ, ಥೈರಾಯ್ಡ್‌ ಸಮಸ್ಯೆ, ಒತ್ತಡ, ಮಧುಮೇಹ, ಮೆನೋಪಾಸ್‌ ಹೀಗೆ ನಾನಾ ಆರೋಗ್ಯ ಸಮಸ್ಯೆಗಳಿಂದಲೂ ಹೀಗಾಗುತ್ತದೆ. ಆದರೆ, ಬೆವರಿನ ದುರ್ಗಂಧದಿಂದ ಪಾರಾಗಲು ಅನೇಕರು ಹಲವು ವಿಧಾನಗಳಿಂದ ಪ್ರಯತ್ನಿಸುತ್ತಾರೆ. ಮಾರುಕಟ್ಟೆಯಲ್ಲಿ ಇದಕ್ಕೆ ಬಗೆಬಗೆಯ ಡಿಯೋಡರೆಂಟ್‌ ಹಾಗೂ ಪರಿಮಳ ದ್ರವ್ಯಗಳ ಮೂಲಕ ಉತ್ತರ ಸಿಗುತ್ತದೆಯಾದರೂ, ಅವೆಲ್ಲ ತಾತ್ಕಾಲಿಕ ಉತ್ತರಗಳಾದುವು. ಕೆಲವು ನೈಸರ್ಗಿಕ ವಿಧಾನಗಳಿಂದ ಬೆವರಿನ ದುರ್ಗಂಧಕ್ಕೆ ಮುಕ್ತಿ ಹಾಡಬಹುದು. ಆ ಕೆಲವು ಉಪಾಯಗಳು (sweat problem) ಇಲ್ಲಿವೆ.

Apple cider vinegar for Fungal Infection Home Remedies

ಆಪಲ್‌ ಸೈಡರ್‌ ವಿನೆಗರ್

ಆಪಲ್‌ ಸೈಡರ್‌ ವಿನೆಗರ್‌ನಲ್ಲಿ ಆಸ್ಟ್ರಿಂಜೆಂಟ್‌ ಗುಣಗಳಿರುವುದರಿಂದ ಇದು ನಮ್ಮ ದೇಹದಲ್ಲಿ ಅತಿಯಾಗಿ ಬೆವರುವುದನ್ನು ತಡೆಯುತ್ತದೆ. ಅಷ್ಟೇ ಅಲ್ಲ ದುರ್ಗಂಧವನ್ನೂ ಕಡಿಮೆ ಮಾಡುತ್ತದೆ. ಇದರ ಆಂಟಿ ಪರ್ಸ್ಪಿರೆಂಟ್‌ ಗುಣಗಳು ಚರ್ಮದ ಮೇಲಿರುವ ಬೆವರಿನ ರಂಧ್ರಗಳನ್ನು ಮುಚ್ಚುವಂತೆ ಮಾಡುವುದರಿಂದ ದೇಹದ ಪಿಎಚ್‌ ಮಟ್ಟ ಸಮತೋಲನ ಕಾಯ್ದುಕೊಳ್ಳುತ್ತದೆ. ಒಂದು ಸಣ್ಣ ಬೌಲ್‌ನಲ್ಲಿ ಆಪಲ್‌ ಸೈಡರ್‌ ವಿನೆಗರ್‌ ಅನ್ನು ಸ್ವಲ್ಪ ತೆಗೆದುಕೊಂಡು ಅದಕ್ಕೆ ನೀರು ಸೇರಿಸಿ. ನಂತರ ಒಂದು ಹತ್ತಿಯನ್ನು ಈ ಮಿಶ್ರಣದಲ್ಲಿ ಮುಳುಗಿಸಿ ತೆಗೆದು ಬೆವರು ಹೆಚ್ಚು ಬರುವ ಜಾಗಗಳಲ್ಲಿ ಹಚ್ಚಿಕೊಳ್ಳಿ. ಇದನ್ನು ನಿತ್ಯವೂ ಬಳಸುವುದರಿಂದ ಬೆವರಿನ ಸಮಸ್ಯೆ ಕಡಿಮೆಯಾಗಬಹುದು.

Baking soda for Fungal Infection Home Remedies

ಬೇಕಿಂಗ್‌ ಸೋಡಾ

ಕೇವಲ ಕೇಕ್‌ಗಷ್ಟೇ ಬೇಕಿಂಗ್‌ ಸೋಡಾದ ಪ್ರಯೋಜನ ಎಂದು ನೀವಂದುಕೊಂಡರೆ ತಪ್ಪಾಗುತ್ತದೆ. ಇದಕ್ಕೆ ಕೆಟ್ಟವಾಸನೆಯನ್ನು ಹೀರಿಕೊಳ್ಳುವ ಒಂದು ಅದ್ಭುತ ಗುಣವಿದೆ. ಹಾಗಾಗಿ ಇದು ನೈಸರ್ಗಿಕವಾದ ಡಿಯೋಡರೆಂಟ್.‌ ಇದು ಆಲ್ಕಲೈನ್‌ ಗುಣಗಳನ್ನು ಹೊಂದಿರುವುದರಿಂದ ದೇಹದ ಬೆವರಿನ ಆಮ್ಲೀಯ ಗುಣಗಳನ್ನು ಸಮತೋಲನಗೊಳಿಸಿ ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತದೆ. ಸ್ವಲ್ಪ ಬೇಕಿಂಗ್‌ ಸೋಡಾವನ್ನು ತೆಗೆದುಕೊಂಡು ಅದನ್ನು ಹೆಚ್ಚು ಬೆವರಿನ ಸಮಸ್ಯೆಯಿರುವ ದೇಹದ ಭಾಗಗಳಿಗೆ ಹಚ್ಚಿಕೊಳ್ಳಿ. ರಾತ್ರಿ ಮಲಗುವ ಸಂದರ್ಭ ಇದನ್ನು ಹಚ್ಚಿಕೊಂಡು ಬೆಳಗ್ಗೆ ತೊಳೆಯಿರಿ. ಹೀಗೆ ಕೆಲದಿನಗಳ ಕಾಲ ಮಾಡುತ್ತಾ ಬಂದರೆ, ನಿಮ್ಮ ಬೆವರಿನ ಸಮಸ್ಯೆ ಕಡಿಮೆಯಾಗುವುದು.

ತೆಂಗಿನೆಣ್ಣೆ ಹಾಗೂ ಕರ್ಪೂರ

ಕರ್ಪೂರ ಹಾಗೂ ತೆಂಗಿನೆಣ್ಣೆ ಇವೆರಡು ನಮ್ಮ ದೇಹದ ಬೆವರಿನ ಸಮಸ್ಯೆಗೆ ಅತ್ಯದ್ಭುತ ಪರಿಹಾರವನ್ನು ನೀಡುತ್ತದೆ. ತೆಂಗಿನೆಣ್ಣೆಯಲ್ಲಿ ಲಾರಿಕ್‌ ಆಸಿಡ್‌ ಇರುವುದರಿಂದ ಇದು ಬ್ಯಾಕ್ಟೀರಿಯಾವನ್ನು ನಾಶಪಡಿಸಲು ಸಹಾಯ ಮಾಡುತ್ತದೆ. ಹೀಗಾಗಿ ಬೆವರಿನ ದುರ್ಗಂಧಕ್ಕೆ ಕಾರಣವಾಗುವ ಬ್ಯಾಕ್ಟೀರಿಯಾಗಳು ನಾಶವಾಗುತ್ತದೆ. ಒಂದೆರಡು ಕರ್ಪೂರವನ್ನು ಸ್ವಲ್ಪ ತೆಂಗಿನೆಣ್ಣೆಯಲ್ಲಿ ಬೆರೆಸಿ ಅದನ್ನು ಬೆವರಿನ ಸಮಸ್ಯೆಯ ಭಾಗಗಳಿಗೆ ಹಚ್ಚಬಹುದು. ಈ ಎಣ್ಣೆ ದೇಹದ ಚರ್ಮದ ಮೇಲೆ ಒಂದು ಲಘುವಾದ ಘಮದೊಂದಿಗೆ ಇದ್ದು ಬೆವರಿನ ದುರ್ಗಂಧಕ್ಕೆ ಮುಕ್ತಿ ನೀಡುತ್ತದೆ.

Black and green tea

ಬ್ಲ್ಯಾಕ್‌ ಟೀ

ಬ್ಲ್ಯಾಕ್‌ ಟೀಯಲ್ಲಿ ಆಂಟಿ ಪರ್ಸ್ಪಿರೆಂಟ್‌ ಗುಣಗಳಿರುವುದರಿಂದ ಇದೂ ಕೂಡಾ ಆಪಲ್‌ ಸೈಡರ್‌ ವಿನೆಗರ್‌ನಂತೆಯೇ ವರ್ತಿಸುತ್ತದೆ. ದೇಹದ ಬೆವರುಗ್ರಂಥಿಗಳ ಮೇಲೆ ಒಂದು ಪದರದಂತೆ ನಿಂತು ಬೆವರಿನ ಸಮಸ್ಯೆ ಕಡಿಮೆ ಮಾಡುತ್ತದೆ. ಬ್ಯ್ಲಾಕ್‌ ಟೀಯನ್ನು ಹೆಚ್ಚು ಬೆವರಿನ ಜಾಗಗಳಲ್ಲಿ ಹಚ್ಚುವ ಮೂಲಕ ಇದರ ಪ್ರಯೋಜನ ಪಡೆಯಬಹುದು.

Aloe vera leaf and aloevera gel on wood table

ಆಲೊವೆರಾ ಜೆಲ್

ಆಲೋವೆರಾ ಜೆಲ್‌ ತನ್ನ ಕೂಲಿಂಗ್‌ ಗುಣಗಳ ಮೂಲಕ ಚರ್ಮದ ಎಲ್ಲ ಬಗೆಯ ಸಮಸ್ಯೆಗಳಿಗೂ ಉತ್ತರ ನೀಡುತ್ತದೆ. ಬೆವರಿನ ಸಮಸ್ಯೆಯಿರುವ ಮಂದಿಯೂ ಆಲೊವೆರಾ ಜೆಲ್‌ ಅನ್ನು ಅತಿಯಾಗಿ ಬೆವರುವ ಜಾಗಗಳಲ್ಲಿ ಹಚ್ಚುವ ಮೂಲಕ ಪ್ರಯೋಜನ ಪಡೆಯಬಹುದು.

ಇದನ್ನೂ ಓದಿ: Eye Care Tips: ಕಣ್ಣಿನ ಸುಸ್ತಿಗೆ ನೀವು ಇಷ್ಟಾದರೂ ಮಾಡಿ, ಕಣ್ಣಿಗೆ ಅಗತ್ಯ ವಿಶ್ರಾಂತಿ ನೀಡಿ!

Continue Reading
Advertisement
IPL 2024
ಕ್ರೀಡೆ37 mins ago

IPL 2024 : 17 ವರ್ಷ ಕಾದರೂ ಟ್ರೋಫಿ ಇಲ್ಲ: ಆರ್​ಸಿಬಿ ಅಭಿಮಾನಿಗಳ ಕಾಯುವಿಕೆ ನಿರಂತರ

Karnataka police
ಪ್ರಮುಖ ಸುದ್ದಿ52 mins ago

ವಿಸ್ತಾರ ಸಂಪಾದಕೀಯ: ಒಂದು ಕಡೆ ಸರಣಿ ಕೊಲೆ, ಇನ್ನೊಂದೆಡೆ ಪೊಲೀಸರ ಬೀದಿ ಸುಲಿಗೆ!

Harish Poonja
ಕರ್ನಾಟಕ1 hour ago

Harish Poonja: ವಿಚಾರಣೆ ಮುಗಿಸಿ ಠಾಣೆಯಿಂದ ಹೊರಬಂದ ಶಾಸಕ ಹರೀಶ್‌ ಪೂಂಜಾ

IPL 2024
ಕ್ರೀಡೆ1 hour ago

IPL 2024 : ಐಪಿಎಲ್​ 17ನೇ ಆವೃತ್ತಿಯಲ್ಲಿ ಆರ್​ಸಿಬಿ ಅಭಿಯಾನ ಅಂತ್ಯ; ರಾಜಸ್ಥಾನ್​ 2ನೇ ಕ್ವಾಲಿಫೈಯರ್​ಗೆ

IPL 2024
ಪ್ರಮುಖ ಸುದ್ದಿ2 hours ago

IPL 2024 : ದಿನೇಶ್​ ಕಾರ್ತಿಕ್​ ಔಟಾ; ನಾಟೌಟಾ? ಮತ್ತೊಂದು ಅಂಪೈರಿಂಗ್ ವಿವಾದ

Mother Dies
ಕರ್ನಾಟಕ3 hours ago

Mother Dies: ಅವಳಿ ಮಕ್ಕಳಿಗೆ ಜನ್ಮ ನೀಡಿದ ತಾಯಿ ಸಾವು; 35 ಲಕ್ಷ ಬಿಲ್‌ ಕಟ್ಟಿ ಮೃತದೇಹ ತೆಗೆದುಕೊಳ್ಳಿ ಎಂದ ಆಸ್ಪತ್ರೆ!

young womans lover was stabbed in the neck by an ex lover
ಉತ್ತರ ಕನ್ನಡ3 hours ago

Assault Case: ಯುವತಿಯ ಪ್ರಿಯಕರನ ಕುತ್ತಿಗೆಗೆ ಚಾಕುವಿನಿಂದ ಇರಿದ ಮಾಜಿ ಪ್ರಿಯಕರ!

IPL 2024
ಪ್ರಮುಖ ಸುದ್ದಿ3 hours ago

Yuzvendra Chahal : ರಾಜಸ್ಥಾನ್​ ರಾಯಲ್ಸ್​ ಪರ ವಿಕೆಟ್​ ಗಳಿಕೆಯಲ್ಲಿ ಹೊಸ ದಾಖಲೆ ಬರೆದ ಯಜ್ವೇಂದ್ರ ಚಹಲ್​

Pune porsche car crash
ದೇಶ3 hours ago

Pune porsche car crash : ಕುಡಿದು ಕಾರು ಚಲಾಯಿಸಿ ಇಬ್ಬರ ಸಾವಿಗೆ ಕಾರಣನಾದ ಬಾಲಕನ ಜಾಮೀನು ವಜಾ

Kalki 2898 AD
ಪ್ರಮುಖ ಸುದ್ದಿ4 hours ago

Kalki 2898 AD: ಕಲ್ಕಿ ಚಿತ್ರದ ʼಬುಜ್ಜಿʼ ಪಾತ್ರ ರಿವೀಲ್; ಅದ್ಧೂರಿ ಕಾರ್ಯಕ್ರಮದ LIVE ವಿಡಿಯೊ ಇಲ್ಲಿದೆ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Weather Forecast
ಮಳೆ18 hours ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ1 day ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು1 day ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

Contaminated Water
ಮೈಸೂರು2 days ago

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

Karnataka Rain
ಮಳೆ2 days ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ3 days ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ3 days ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ3 days ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

Prajwal Revanna Case JDS calls CD Shivakumar pen drive gang
ರಾಜಕೀಯ5 days ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

Karnataka weather Forecast
ಮಳೆ6 days ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

ಟ್ರೆಂಡಿಂಗ್‌