Wagon R, Celerio price hike, see the new price list here Maruti Suzuki : ವ್ಯಾಗನ್​ ಆರ್​, ಸೆಲೆರಿಯೊ ಬೆಲೆ ಏರಿಕೆ, ಹೊಸ ದರ ಪಟ್ಟಿ ಇಲ್ಲಿದೆ ನೋಡಿ - Vistara News

ಆಟೋಮೊಬೈಲ್

Maruti Suzuki : ವ್ಯಾಗನ್​ ಆರ್​, ಸೆಲೆರಿಯೊ ಬೆಲೆ ಏರಿಕೆ, ಹೊಸ ದರ ಪಟ್ಟಿ ಇಲ್ಲಿದೆ ನೋಡಿ

ಕೇಂದ್ರ ಸರಕಾರ ಮಾಲಿನ್ಯ ನಿಯಂತ್ರಣ ಮಾನದಂಡಗಳನ್ನು ಬಿಗಿಗೊಳಿಸಿದ ಕಾರಣ ಎಂಜಿನ್​ ಅಪ್​​​ಗ್ರೇಡ್​ ಮಾಡಲಾಗಿದೆ. ಅದರ ವೆಚ್ಚವನ್ನು ಗ್ರಾಹಕರಿಗೆ ವಿಧಿಸಿದೆ ಮಾರುತಿ ಸುಜುಕಿ (Maruti Suzuki )ಕಂಪನಿ.

VISTARANEWS.COM


on

Wagon R, Celerio price hike, see the new price list here
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಮಾರುತಿ ಸುಜುಕಿ ಕಂಪನಿ (Maruti Suzuki) ತನ್ನ ಎಲ್ಲ ಕಾರುಗಳ ಬೆಲೆಯನ್ನು ಏರಿಕೆ ಮಾಡಿದೆ. ಅದರಂತೆ ಸುಜುಕಿ ಕಂಪನಿಯ ಜನಪ್ರಿಯ ಕಾರುಗಳಾಗಿರುವ ಸೆಲೆರಿಯೊ ಹಾಗೂ ವ್ಯಾಗನ್​ ಆರ್​ ಕಾರುಗಳ ಬೆಲೆ 1500 ರೂಪಾಯಿಯಷ್ಟು ಏರಿಕೆಯಾಗಿದೆ. ಕೇಂದ್ರ ಸರಕಾರ ಮಾಲಿನ್ಯ ಮಾನದಂಡಗಳನ್ನು ಬಿಗಿಗೊಳಿಸಿದ ಕಾರಣ ಕಾರಿನ ಎಂಜಿನ್​ನಲ್ಲಿ ಕೆಲವೊಂದು ಬದಲಾವಣೆ ಮಾಡುವುದು ಅನಿವಾರ್ಯವಾಗಿದೆ. ಈ ಬದಲಾವಣೆಗೆ ಹೆಚ್ಚುವರಿ ತಾಂತ್ರಿಕತೆಯನ್ನು ಅಳವಡಿಸಲಾಗಿದ್ದು ಅದರ ವೆಚ್ಚವನ್ನು ಗ್ರಾಹಕರಿಗೆ ವರ್ಗಾಯಿಸಿದೆ ಮಾರುತಿ ಸುಜುಕಿ ಕಂಪನಿ.

ಮಾರುತಿ ಸುಜುಕಿ ವ್ಯಾಗನ್​ ಆರ್​ಗೆ ಎಷ್ಟು ಏರಿಕೆ?

ಮಾರುತಿ ಸುಜುಕಿಯ ವ್ಯಾಗನ್​ ಆರ್​ ಕಾರಿಗೆ ಇದುವರೆಗೆ ಆರಂಭಿಕ ಬೆಲೆ 5.54 ಲಕ್ಷ ರೂಪಾಯಿಗಳಾಗಿದ್ದರೆ ಟಾಪ್​ ಎಂಡ್​ ಕಾರಿಗೆ 7.42 ಲಕ್ಷ ರೂಪಾಯಿ ನಿಗದಿ ಮಾಡಲಾಗಿತ್ತು. ಟಾಪ್ ಎಂಡ್ ಕಾರು ಜಡ್​ಎಕ್ಸ್​ಐ ಆಟೋಮ್ಯಾಟಿಕ್​. ಹೊಸ ದರ ಪಟ್ಟಿಯ ಪ್ರಕಾರ ವ್ಯಾಗನ್​ ಆರ್​ ಕಾರಿನ ಆರಂಭಿಕ ಬೆಲೆ 5.56 ಲಕ್ಷ ರೂಪಾಯಿಯಿಂದ ಆರಂಭಗೊಂಡು 7.44 ಲಕ್ಷ ರೂಪಾಯಿಗಳಾಗಿವೆ. ಇದು ಎಕ್ಸ್​ ಶೋರೂಮ್​ ಬೆಲೆಯಾಗಿದೆ.

ಮಾರುತಿ ಸುಜುಕಿ ಸೆಲೆರಿಯೊಗೆ ಎಷ್ಟು ಬೆಲೆ ಏರಿಕೆಯಾಗಿದೆ?

ಮಾರುತಿ ಸುಜುಕಿ ಸೆಲೆರಿಯೊ ನಾಲ್ಕು ವೇರಿಯೆಂಟ್​ಗಳಲ್ಲಿ ಲಭ್ಯವಿದೆ. ಎಲ್ಸ್​ಎಕ್ಸ್​ಐ, ವಿಎಕ್ಸ್​ಐ, ಜಡ್​ಎಕ್ಸ್​ಐ ಹಾಗೂ ಜಡ್​ಎಕ್ಸ್​ಐ ಪ್ಲಸ್​. ಈಗ ಮಾರುತಿ ಸುಜುಕಿ ಸೆಲೆರಿಯೊ ಕಾರಿನ ಬೆಲೆ 5.38 ಲಕ್ಷ ರೂಪಾಯಿಯಿಂದ ಆರಂಭಗೊಂಡು 7.16 ಲಕ್ಷ ರೂಪಾಯಿ ತನಕ ಆಗಿದೆ. ಒಟ್ಟಾರೆಯಾಗಿ 1500 ರೂಪಾಯಿ ಏರಿಕೆಯಾಗಿದೆ.

ಮಾರುತಿ ಸುಜುಕಿ ವ್ಯಾಗನ್​ ಆರ್​, ಸೆಲೆರಿಯೊ ಎಂಜಿನ್​ ಬಗ್ಗೆ

ಮಾರುತಿ ಸುಜುಕಿ ವ್ಯಾಗನ್​ ಆರ್​ ಆರ್​ ಹಾಗೂ ಸೆಲೆರಿಯೊ 1.0 ಲೀಟರ್​ ಎಂಜಿನ್ ಹೊಂದಿದೆ. ಇದರಲ್ಲಿ ಸಿಎನ್​ಜಿ ಆವೃತ್ತಿಯೂ ಇದೆ. ಈ ಎಂಜಿನ್​ಗೆ ಐದು ಸ್ಪೀಡ್​ನ ಗೇರ್​ ಬಾಕ್ಸ್ ಕೂಡ ಇದೆ. ಜತೆಗೆ ಆಟೋಮ್ಯಾಟಿಕ್​ ಆವೃತ್ತಿಯೂ ಲಭ್ಯವಿದೆ. ಸಿಎನ್​ಜಿ ಎಂಜಿನ್​ ಹೊಂದಿರುವ ಕಾರಿನಲ್ಲಿ ಮ್ಯಾನುಯಲ್​ ಗೇರ್​ ಬಾಕ್ಸ್ ಮಾತ್ರ ಇದೆ.

ಇದನ್ನೂ ಓದಿ : Innova Hycross : ಟಾಪ್​ ಎಂಡ್​ ವೇರಿಯೆಂಟ್​ ಇನ್ನೋವಾ ಕಾರುಗಳ ಬುಕಿಂಗ್​ ಸ್ಥಗಿತ

ಇವೆಲ್ಲದರ ನಡುವೆ ಮಾರುತಿ ಸುಜುಕಿ ಕಾರುಗಳ ಒಟ್ಟು ಮಾರಾಟ ಕಳೆದ ವರ್ಷಕ್ಕಿಂತ ಇಳಿಕೆಯಾಗಿದೆ. 2022ರಲ್ಲಿ 1,70, 395 ಕಾರುಗಳು ಮಾರಾಟವಾಗಿದ್ದರೆ, ಹಾಲಿ ವರ್ಷ 1,70, 071 ಕಾರುಗಳು ಮಾರಾಟವಾಗಿವೆ. ಮಾರುತಿ ಸುಜುಕಿ ಬ್ರೆಜಾ, ಎರ್ಟಿಗಾ, ಎಕ್ಸ್​ಎಲ್​6, ಎಸ್​ ಕ್ರಾಸ್​ ಹಾಗೂ ಗ್ರ್ಯಾಂಡ್​ ವಿಟಾರಾ ಕಾರಿಗೆ ಅತಿ ಹೆಚ್ಚು ಬೇಡಿಕೆ ಸೃಷ್ಟಿಯಾಗಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆಟೋಮೊಬೈಲ್

Bajaj Freedom 125: ವಿಶ್ವದ ಮೊದಲ ಸಿಎನ್‌ಜಿ ಬೈಕ್‌ ಬಜಾಜ್‌ ಫ್ರೀಡಂ 125 ಇಂದು ಬಿಡುಗಡೆ

Bajaj Freedom 125: ಬುದಿನಗಳ ಕಾಯುವಿಕೆ ಅಂತ್ಯವಾಗುವ ಸಮಯ ಬಂದಿದೆ. ವಿಶ್ವದ ಮೊದಲ ಸಿಎನ್‌ಜಿ ಬೈಕ್‌ ಎನ್ನುವ ಖ್ಯಾತಿಯ, ಭಾರತದ ಬಜಾಜ್‌ ಆಟೋ ಕಂಪನಿ ಆವಿಷ್ಕರಿಸಿರುವ ಫ್ರೀಡಂ 125 ಬೈಕ್‌ ಇಂದು (ಜುಲೈ 5) ಬಿಡುಗಡೆಯಾಗಲಿದೆ. ಈ ಹಿಂದೆ ಜೂನ್‌ 18ರಂದು ಬೈಕ್‌ ಬಿಡುಗಡೆಗೆ ಮಾಡುವುದಾಗಿ ಕಂಪನಿ ಘೋಷಿಸಿತ್ತು. ಬಳಿಕ ಕಾರಣಾಂತರಗಳಿಂದ ದಿನಾಂಕವನ್ನು ಮುಂದೂಡಲಾಗಿತ್ತು.

VISTARANEWS.COM


on

Bajaj Freedom 125
Koo

ಮುಂಬೈ: ವಿಶ್ವದ ಮೊದಲ ಸಿಎನ್‌ಜಿ ಬೈಕ್‌ (CNG Bike) ಎನ್ನುವ ಖ್ಯಾತಿಯ, ಭಾರತದ ಬಜಾಜ್‌ ಆಟೋ (Bajaj Auto) ಕಂಪನಿ ಆವಿಷ್ಕರಿಸಿರುವ ಫ್ರೀಡಂ 125 (Bajaj Freedom 125) ಬೈಕ್‌ ಇಂದು (ಜುಲೈ 5) ಬಿಡುಗಡೆಯಾಗಲಿದೆ. ಬಜಾಜ್‌ ಬ್ರೂಝರ್‌ ಎಂದೂ ಕರೆಯಲ್ಪಡುವ ಈ ಬೈಕ್‌ ಅನ್ನು ದ್ವಿಚಕ್ರ ವಾಹನ ವಲಯದಲ್ಲಿ ಒಂದು ಮೈಲಿಗಲ್ಲು ಎಂದೇ ಪರಿಗಣಿಸಲಾಗಿದೆ.

ಕಂಪನಿಯು ಮುಂಬೈಯಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಿ ಬೈಕ್‌ ಬಿಡುಗಡೆ ಮಾಡಲಿದ್ದು, ಬಜಾಜ್‌ ಎಂ.ಡಿ. ರಾಜೀವ್‌ ಬಜಾಜ್‌ ಮತ್ತು ಕೇಂದ್ರ ಸಚಿವ ನಿತಿನ್‌ ಗಡ್ಕರಿ ಮತ್ತಿತರರು ಪಾಲ್ಗೊಳ್ಳಲಿದ್ದಾರೆ. ಈ ಹಿಂದೆ ಜೂನ್‌ 18ರಂದು ಬೈಕ್‌ ಬಿಡುಗಡೆಗೆ ಮಾಡುವುದಾಗಿ ಕಂಪನಿ ಘೋಷಿಸಿತ್ತು. ಬಳಿಕ ಕಾರಣಾಂತರಗಳಿಂದ ದಿನಾಂಕವನ್ನು ಮುಂದೂಡಲಾಗಿತ್ತು. ಇದೀಗ ಬೈಕ್‌ ಪ್ರಿಯರ ಹಲವು ದಿನಗಳ ಕಾಯುವಿಕೆ ಅಂತ್ಯವಾಗಲಿದೆ. ಈ ಮೂಲಕ ಬಜಾಜ್‌ ಆಟೋ ಸಾಂಪ್ರದಾಯಿಕ ಪೆಟ್ರೋಲ್ ಚಾಲಿತ ಬೈಕುಗಳಿಗೆ ಪರಿಸರ ಸ್ನೇಹಿ ಪರ್ಯಾಯವನ್ನು ಪರಿಚಯಿಸುತ್ತಿದ್ದು, ಬಹುದೊಡ್ಡ ಕ್ರಾಂತಿಯನ್ನುಂಟು ಮಾಡಲು ಸಜ್ಜಾಗಿದೆ.

ವೈಶಿಷ್ಟ್ಯ

ಮೊದಲೇ ಹೇಳಿದಂತೆ ಫ್ರೀಡಂ 125 ವಿಶ್ವದ ಮೊದಲ ಸಿಎನ್‌ಜಿ ಬೈಕ್‌ ಆಗಿದ್ದು, ಇದು ಪೆಟ್ರೋಲ್ ಮತ್ತು ಸಿಎನ್‌ಜಿ ಎರಡರಲ್ಲೂ ಕಾರ್ಯ ನಿರ್ವಹಿಸುತ್ತದೆ. ಈ ಬೈಕ್‌ನ ಉದ್ದಕ್ಕೂ ಸಿಎನ್‌ಜಿ ಟ್ಯಾಂಕ್ ಅನ್ನು ಅಳವಡಿಸಲಾಗಿದೆ. ಹಾಗೇ ಇದನ್ನು ನಿರ್ವಹಿಸುವ ವಿಶಿಷ್ಟವಾದ ಚಾಸಿಸ್ ಸೆಟಪ್ ಅನ್ನು ಬೈಕ್ ಹೊಂದಿದೆ. ಸಿಎನ್‌ಜಿ ಬೈಕ್‌ನ ಆಯಿಲ್ ಟ್ಯಾಂಕ್ ಚಿಕ್ಕದಾಗಿದ್ದರೂ, ಬೈಕ್‌ಗೆ ಹೆಚ್ಚುವರಿ ಮೈಲೇಜ್ ನೀಡುತ್ತದೆ. ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್‌ನೊಂದಿಗೆ ಜೋಡಿಸಲಾದ 125 ಸಿಸಿ ಎಂಜಿನ್‌ನೊಂದಿಗೆ ಈ ಬೈಕ್‌ ಬರುವ ನಿರೀಕ್ಷೆ ಇದೆ. ಅಲ್ಲದೇ ಈ ಬೈಕ್ ಅನ್ನು ನಗರ ಪ್ರದೇಶಗಳಲ್ಲಿ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಎರಡೂ ಕಡೆ ಆರಾಮವಾಗಿ ಓಡಿಸಬಹುದು. ಈ ಬೈಕ್ ಕ್ಲಚ್ ಗಾರ್ಡ್, ಹ್ಯಾಂಡಲ್ ಬಾರ್ ಬ್ರೇಸ್ ಮತ್ತು ಸಂಪ್ ಗಾರ್ಡ್ ಅನ್ನು ಹೊಂದಿರುವುದರಿಂದ ಇದರಲ್ಲಿ ಕಳಪೆ ರಸ್ತೆಯಲ್ಲೂ ಕೂಡ ಆರಾಮವಾಗಿ ಸವಾರಿ ಮಾಡಬಹುದು.

ದರ ಎಷ್ಟು?

ಈ ಬೈಕ್ ಬೆಲೆ ಸುಮಾರು 90,000 ರೂ. ಆಗಿರುವ ನಿರೀಕ್ಷೆ ಇದೆ. ಬಜಾಜ್ ಫ್ರೀಡಂ 125 ಬೈಕ್ ಟಿವಿಎಸ್ ರೇಡಿಯನ್, ಹೋಂಡಾ ಸಿಬಿ ಶೈನ್, ಹೀರೋ ಹೆಚ್ ಎಫ್ 100, ಟಿವಿಎಸ್ ಸ್ಪೋರ್ಟ್, ಬಜಾಜ್ ಸಿಟಿ 110 ಮತ್ತು ಬಜಾಜ್ ಪ್ಲಾಟಿನಾಗಳಂತಹ ಇತರ ಮೋಟಾರ್ ಸೈಕಲ್‌ಗಳ ಎದುರು ಸ್ಪರ್ಧೆಗಿಳಿಯುವ ಸಾಧ್ಯತೆ ಇದೆ.

ಈಗಾಗಲೇ ಈ ಬೈಕ್‌ ಅನ್ನು ಬಿಗುಡೆಗೆ ಮುನ್ನವೇ ಹಲವು ಬಾರಿ ಸಾರ್ವಜನಿಕ ರಸ್ತೆಯಲ್ಲಿ ಓಡಿಸಲಾಗಿದೆ ಎಂದು ಕಂಪನಿ ತಿಳಿಸಿದೆ. ಅಲ್ಲದೆ ಸಿಎನ್‌ಜಿ ತಂತ್ರಜ್ಞಾನಕ್ಕೆ ಬಜಾಜ್ ಆಟೋ ಪ್ರವೇಶಿಸುತ್ತಿರುವುದು ಇದು ಹೊಸತೇನಲ್ಲ. ಕಂಪನಿಯು ಈಗಾಗಲೇ ತನ್ನ ಸಿಎನ್‌ಜಿ ಚಾಲಿತ ತ್ರಿಚಕ್ರ ವಾಹನಗಳೊಂದಿಗೆ ಯಶಸ್ಸನ್ನು ಸಾಧಿಸಿದೆ. ಇದು ಭಾರತೀಯ ಮಾರುಕಟ್ಟೆಯಲ್ಲಿ ಸುಮಾರು ಶೇ. 60ರಷ್ಟು ಪಾಲನ್ನು ಹೊಂದಿದೆ. ಬಜಾಜ್ ಫ್ರೀಡಂ 125 ಮೂಲಕ ಕಂಪನಿ ತನ್ನ ಯಶಸ್ಸನ್ನು ಪುನರಾವರ್ತಿಸುವ ಗುರಿಯನ್ನು ಹೊಂದಿದೆ.

ಇದನ್ನೂ ಓದಿ: Tata Motors: ನೆಕ್ಸಾನ್, ಪಂಚ್‌ ಮೂಲಕ ಎಸ್‌ಯುವಿ ಮಾರುಕಟ್ಟೆಯಲ್ಲಿ ಮುನ್ನಡೆ ಸಾಧಿಸಿದ ಟಾಟಾ ಮೋಟಾರ್ಸ್

Continue Reading

ಆಟೋಮೊಬೈಲ್

Upcoming SUVs: ಶೀಘ್ರದಲ್ಲೇ ಮಾರುಕಟ್ಟೆಗೆ ಬರಲಿದೆ 10 ಲಕ್ಷ ರೂ.ಗಿಂತ ಕಡಿಮೆ ಬೆಲೆಯ ಎಸ್ ಯು ವಿಗಳು

ಕಡಿಮೆ ಬೆಲೆಯ ಕಾರುಗಳಿಗೆ ಈಗ ಬೇಡಿಕೆ ಹೆಚ್ಚಾಗುತ್ತಿದೆ. ಹೀಗಾಗಿ ಮಾರುಕಟ್ಟೆಯಲ್ಲಿ ಈಗ ಕಾಂಪ್ಯಾಕ್ಟ್ ಎಸ್‌ಯುವಿಗಳೇ ವಿಜೃಂಭಿಸಲು ಪ್ರಾರಂಭವಾಗಿದೆ. ಕಾರು ಖರೀದಿ ಬಗ್ಗೆ ಯೋಚಿಸುತ್ತಿದ್ದರೆ ಅದರಲ್ಲೂ ಕಾಂಪ್ಯಾಕ್ಟ್ ಎಸ್ ಯು ವಿ ಖರೀದಿಸಲು ಬಯಸುತ್ತಿದ್ದರೆ ಸ್ವಲ್ಪ ಕಾಯಬೇಕು. ಯಾಕೆಂದರೆ ಶೀಘ್ರದಲ್ಲೇ ಮಾರುಕಟ್ಟೆಗೆ (Upcoming SUVs) ಬರಲಿರುವ ನಾಲ್ಕು ಕಾಂಪ್ಯಾಕ್ಟ್ ಎಸ್ ಯು ವಿ ಗಳ ಮಾಹಿತಿ ಇಲ್ಲಿವೆ.

VISTARANEWS.COM


on

By

Upcoming SUVs
Koo

ಕಾರು ಪ್ರಿಯರಿಗೆ ಒಂದು ಸಿಹಿ ಸುದ್ದಿ. ಹತ್ತು ಲಕ್ಷ ರೂಪಾಯಿಗಳಿಗಿಂತ ಕಡಿಮೆ ಬೆಲೆಯ ಕಾರುಗಳು (Upcoming SUVs) ಶೀಘ್ರದಲ್ಲೇ ಮಾರುಕಟ್ಟೆಗೆ ಬರಲಿವೆ. ಮಾರುಕಟ್ಟೆಯಲ್ಲೀಗ ಹ್ಯಾಚ್‌ಬ್ಯಾಕ್ (hatchback) ವಿಭಾಗಕ್ಕೆ ಬೇಡಿಕೆ ಕಡಿಮೆಯಾಗುತ್ತಿದ್ದು, ಈ ಜಾಗವನ್ನು ಕಾಂಪ್ಯಾಕ್ಟ್ ಎಸ್‌ಯುವಿಗಳು (compact SUVs ) ಪಡೆಯುತ್ತಿದೆ. ಕಳೆದ ಕೆಲವು ವರ್ಷಗಳಲ್ಲಿ 10 ಲಕ್ಷ ರೂ. ಗಳಿಗಿಂತ ಕಡಿಮೆ ಬೆಲೆಯ ಹಲವಾರು ಹೊಸ ಎಸ್ ಯು ವಿಗಳ ಆಗಮನ ಇದಕ್ಕೆ ಪುಷ್ಟಿಯನ್ನು ನೀಡಿದೆ.

ಎಸ್ ಯು ವಿ ವಿನ್ಯಾಸ, ಹೆಚ್ಚಿನ ಗ್ರೌಂಡ್ ಕ್ಲಿಯರೆನ್ಸ್ ಮತ್ತು ನೇರ ಚಾಲನಾ ನಿಲುವುಗಳು ಅದರ ಜನಪ್ರಿಯತೆಗೆ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ.

ಕಾರು ಖರೀದಿ ಬಗ್ಗೆ ಯೋಚಿಸುತ್ತಿದ್ದರೆ ಅದರಲ್ಲೂ ಕಾಂಪ್ಯಾಕ್ಟ್ ಎಸ್ ಯು ವಿ ಖರೀದಿಸಲು ಬಯಸುತ್ತಿದ್ದರೆ ಶೀಘ್ರದಲ್ಲೇ ಮಾರುಕಟ್ಟೆಗೆ ಬರಲಿರುವ ನಾಲ್ಕು ಕಾಂಪ್ಯಾಕ್ಟ್ ಎಸ್ ಯು ವಿ ಗಳ ಮಾಹಿತಿ ಇಲ್ಲಿವೆ.


ನಿಸ್ಸಾನ್ ಮ್ಯಾಗ್ನೈಟ್ ಫೇಸ್ ಲಿಫ್ಟ್

ನಿಸ್ಸಾನ್ ಮ್ಯಾಗ್ನೈಟ್ ದೇಶದ ಅತ್ಯಂತ ಕೈಗೆಟುಕುವ ಎಸ್ ಯುವಿ ಗಳಲ್ಲಿ ಒಂದಾಗಿದೆ. ಆದರೆ ಕಂಪೆನಿ ಹೆಚ್ಚಿನ ಪ್ರಮಾಣದಲ್ಲಿ ಇದನ್ನು ಉತ್ಪಾದಿಸಲು ವಿಫಲವಾಗಿದೆ. ಈಗ ನಿಸ್ಸಾನ್ ತನ್ನ ಫೇಸ್‌ಲಿಫ್ಟ್ ಅನ್ನು ಪ್ರಾರಂಭಿಸಲು ಯೋಜಿಸುತ್ತಿದೆ ಮತ್ತು ಇದರ ಪರೀಕ್ಷೆಯನ್ನು ಪ್ರಾರಂಭಿಸಿದೆ.

ಮ್ಯಾಗ್ನೈಟ್ ಫೇಸ್‌ಲಿಫ್ಟ್ 2024 ರ ಕೊನೆಯಲ್ಲಿ ಅಥವಾ 2025 ರ ಆರಂಭದಲ್ಲಿ ಹೊಸ ಗ್ರಿಲ್, ಪರಿಷ್ಕೃತ ಹೆಡ್‌ಲ್ಯಾಂಪ್‌ಗಳು ಮತ್ತು ಎಲ್ ಇಡಿ ಸಿಗ್ನೇಚರ್‌ಗಳು, ಮರುವಿನ್ಯಾಸಗೊಳಿಸಲಾದ ಮುಂಭಾಗ ಮತ್ತು ಹಿಂಭಾಗದ ಬಂಪರ್‌ಗಳು ಮತ್ತು ಹೊಸ ಮಿಶ್ರಲೋಹದ ಚಕ್ರಗಳನ್ನು ಒಳಗೊಂಡಂತೆ ಕನಿಷ್ಠ ಕಾಸ್ಮೆಟಿಕ್ ಬದಲಾವಣೆಗಳೊಂದಿಗೆ ಮಾರುಕಟ್ಟೆಗೆ ಪಾದಾರ್ಪಣೆ ಮಾಡುವ ಸಾಧ್ಯತೆಯಿದೆ. ಆದರೆ ಪವರ್‌ಟ್ರೇನ್‌ನಲ್ಲಿ ಯಾವುದೇ ಬದಲಾವಣೆಗಳು ಇರುವ ಸಾಧ್ಯತೆ ಇಲ್ಲ.


ಕಿಯಾ ಕ್ಲಾವಿಸ್

ಕಿಯಾ ಇಂಡಿಯಾದಿಂದ ಹೊಸ ಸಬ್- 4 ಮೀಟರ್ ಎಸ್‌ಯುವಿ ಪರೀಕ್ಷೆಯಲ್ಲಿದೆ. 2024 ರ ಅಂತ್ಯದ ವೇಳೆಗೆ ಬಿಡುಗಡೆಯಾಗುವ ಸಾಧ್ಯತೆಯಿದೆ. ಕಿಯಾ ಕ್ಲಾವಿಸ್ ಅಥವಾ ಕಿಯಾ ಸಿರೋಸ್ ಎಂದು ಇದನ್ನು ಹೆಸರಿಸುವ ಸಾಧ್ಯತೆ ಇದೆ. ಬೃಹತ್ ಬಾಡಿ, ಮೇಲ್ಛಾವಣಿ ಮತ್ತು ಹೆಚ್ಚಿನ ಗ್ರೌಂಡ್ ಕ್ಲಿಯರೆನ್ಸ್‌ನೊಂದಿಗೆ ಇದು ಬರಲಿದೆ. 360-ಡಿಗ್ರಿ ಕೆಮರಾ, ಸನ್‌ರೂಫ್, ದೊಡ್ಡ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು ಸುಸಜ್ಜಿತ ಆಸನಗಳೊಂದಿಗೆ ಬರುವ ನಿರೀಕ್ಷೆಯಿದೆ.


ನ್ಯೂ-ಜೆನ್ ಹ್ಯುಂಡೈ ವೆನ್ಯೂ

ಹೊಸ ತಲೆಮಾರಿನ ಹ್ಯುಂಡೈ ವೆನ್ಯೂ ಕಾಂಪ್ಯಾಕ್ಟ್ ಎಸ್ ಯು ವಿ ಮುಂದಿನ ವರ್ಷ ಬಿಡುಗಡೆಯಾಗಲಿದೆ. ಪ್ರಸ್ತುತ ಎಂಜಿನ್ ಮತ್ತು ಗೇರ್‌ಬಾಕ್ಸ್ ಆಯ್ಕೆಗಳನ್ನು ಉಳಿಸಿಕೊಂಡು 2025ರೊಳಗೆ ನವೀಕರಿಸಿದ ವೈಶಿಷ್ಟ್ಯಗಳೊಂದಿಗೆ ಇದು ಮಾರುಕಟ್ಟೆ ಬರುವ ಸಿದ್ಧತೆಯಲ್ಲಿದೆ. ಕಂಪೆನಿಯು ಹಲವು ವಿಶಿಷ್ಟ ಮತ್ತು ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಉತ್ಪಾದಿಸಲಾಗುವ ಮೊದಲ ಹ್ಯುಂಡೈ ಮಾದರಿ ಇದಾಗಿದೆ.


ಸ್ಕೋಡಾ ಕಾಂಪ್ಯಾಕ್ಟ್ ಎಸ್ ಯು ವಿ

ಸ್ಕೋಡಾ ತನ್ನ ಮುಂಬರುವ ಕಾಂಪ್ಯಾಕ್ಟ್ ಎಸ್ ಯು ವಿಗಾಗಿ ಮೊದಲ ಟೀಸರ್ ಅನ್ನು ಅನಾವರಣಗೊಳಿಸಿದೆ. 2025ರ ಮಾರ್ಚ್ ನಲ್ಲಿ ಭಾರತದಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಇದನ್ನು MQB A0 IN ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಿಸಲಾಗುವುದು ಮತ್ತು ಕುಶಾಕ್‌ಗಿಂತ ಕಡಿಮೆ ವೀಲ್‌ಬೇಸ್ ಅನ್ನು ಹೊಂದಿರುತ್ತದೆ.

ಇದು ADAS ವೈಶಿಷ್ಟ್ಯಗಳನ್ನು ಮತ್ತು 360-ಡಿಗ್ರಿ ಕೆಮರಾವನ್ನು ಹೊಂದಿರಲಿದೆ. 115bhp, 1.0L ಟರ್ಬೊ ಪೆಟ್ರೋಲ್ ಎಂಜಿನ್‌ನಿಂದ ಚಾಲಿತವಾಗುವ ಸಾಧ್ಯತೆಯಿದೆ. ಇದನ್ನು 6-ಸ್ಪೀಡ್ ಮ್ಯಾನುವಲ್ ಅಥವಾ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ಗೆ ಜೋಡಿಸಲಾಗುತ್ತದೆ.

Continue Reading

ಆಟೋಮೊಬೈಲ್

Safe Drive Tips: ಜೀವ ಅಮೂಲ್ಯ; ಕಾರು ಓಡಿಸುವಾಗ ಈ ಸಂಗತಿಗಳನ್ನು ಮರೆಯಬೇಡಿ!

ಇತ್ತೀಚಿನ ದಿನಗಳಲ್ಲಿ ಕಾರುಗಳ ಬಳಕೆ ಹೆಚ್ಚಾಗಿದೆ. ಜೊತೆಗೆ ಅಪಘಾತಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ಇದಕ್ಕೆ ಮುಖ್ಯ ಕಾರಣ ರಸ್ತೆ ನಿಯಮಗಳು ನಮಗೆ ಗೊತ್ತಿಲ್ಲ ಎಂದಲ್ಲ. ಗೊತ್ತಿರುವ ನಿಯಮಗಳನ್ನು ನಾವು ಪಾಲಿಸದೇ ಇರುವುದು. ಕಾರು ಚಾಲನೆ ಮಾಡುವಾಗ ಎಚ್ಚರಿಕೆ ವಹಿಸುವುದು ಬಹುಮುಖ್ಯ. ಇದಕ್ಕಾಗಿ ಕೆಲವೊಂದು ನಿಯಮಗಳನ್ನು (Safe Drive Tips) ಪಾಲಿಸಲೇಬೇಕು. ಅವು ಯಾವುದು ಗೊತ್ತೇ? ಈ ಲೇಖನ ಓದಿ.

VISTARANEWS.COM


on

By

Safe Drive Tips
Koo

ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರ ಮನೆಯಲ್ಲಿ ಕಾರುಗಳು (car) ಇದ್ದೇ ಇವೆ. ಕೆಲವರು ಕಾರು ಓಡಿಸುವುದು (drive) ಕಲಿತಿದ್ದರೂ ರಸ್ತೆಯಲ್ಲಿ (road) ಕಾರು ಓಡಿಸಲು ಹಿಂಜರಿಯುತ್ತಾರೆ. ಕಾರುಗಳು ಇವತ್ತು ಎಲ್ಲರಿಗೂ ಬೇಕೇ ಬೇಕು ಎನ್ನುವಷ್ಟು ಅನಿವಾರ್ಯವಾಗಿದೆ. ಇದಕ್ಕೆ ಕಾರಣ ಪ್ರಯಾಣ ಹೆಚ್ಚು ಸುರಕ್ಷಿತ (Safe Drive Tips) ಎನ್ನುವ ಭಾವನೆ. ಹೀಗಾಗಿ ಕಚೇರಿ ಕೆಲಸ, ಸ್ನೇಹಿತರ ಭೇಟಿ, ಸಣ್ಣಪುಟ್ಟ ಪ್ರಯಾಣಕ್ಕೂ ಹೆಚ್ಚಿನವರು ತಮ್ಮಲ್ಲಿರುವ ಕಾರುಗಳನ್ನೇ ತೆಗೆದುಕೊಂಡು ಹೋಗಲು ಇಷ್ಟ ಪಡುತ್ತಾರೆ.

ಅನೇಕ ಬಾರಿ ಕಾರು ಚಾಲನೆ ಮಾಡುವಾಗ ಕೆಲವೊಂದು ವಿಷಯಗಳ ಬಗ್ಗೆ ನಾವು ಗಮನ ಹರಿಸುವುದಿಲ್ಲ. ಇದು ಅಪಘಾತಗಳ ಅಪಾಯವನ್ನು ಹೆಚ್ಚಿಸುತ್ತದೆ. ಕಾರು ಚಾಲನೆ ಮಾಡುವಾಗ ಕೆಲವು ವಿಷಯಗಳನ್ನು ನಾವು ನೆನಪಿನಲ್ಲಿ ಇಟ್ಟುಕೊಂಡರೆ ಅಪಘಾತಗಳಿಂದ ನಮ್ಮನ್ನು ನಾವು ಮಾತ್ರವಲ್ಲ ನಮ್ಮ ಕಾರುಗಳನ್ನೂ ರಕ್ಷಿಸಬಹುದು.

ಸಂಚಾರ ನಿಯಮಗಳನ್ನು ಅನುಸರಿಸಿ

ಕಾರು ಚಾಲನೆ ಮಾಡುವಾಗ ಯಾವಾಗಲೂ ಸಂಚಾರ ನಿಯಮಗಳನ್ನು ಅನುಸರಿಸಿ. ವೇಗದ ಮಿತಿಗಳನ್ನು ಅನುಸರಿಸುವುದು, ಕೆಂಪು ದೀಪಗಳನ್ನು ಗಮನಿಸಿ ನಿಲ್ಲಿಸುವುದು ಮತ್ತು ಸ್ಟಾಪ್ ಚಿಹ್ನೆಗಳನ್ನು ಪಾಲಿಸುವುದು ಇದರಲ್ಲಿ ಸೇರಿದೆ. ಇದಲ್ಲದೆ, ಜೀಬ್ರಾ ಕ್ರಾಸಿಂಗ್‌ಗಳಲ್ಲಿ ಪಾದಚಾರಿಗಳಿಗೆ ದಾರಿ ಮಾಡಿಕೊಡುವುದು ಮತ್ತು ತಪ್ಪು ದಿಕ್ಕಿನಲ್ಲಿ ವಾಹನ ಚಲಾಯಿಸದಿರುವುದು ಸಹ ಮುಖ್ಯವಾಗಿದೆ.


ಯಾವಾಗಲೂ ಸೀಟ್ ಬೆಲ್ಟ್ ಧರಿಸಿ

ಕಾರು ಚಾಲನೆ ಮಾಡುವಾಗ ಯಾವಾಗಲೂ ಸೀಟ್ ಬೆಲ್ಟ್ ಧರಿಸುವುದು ಮುಖ್ಯ. ನಿಮ್ಮ ಮತ್ತು ನಿಮ್ಮೊಂದಿಗೆ ಪ್ರಯಾಣಿಸುವ ಜನರ ಸುರಕ್ಷತೆಗೆ ಇದು ಬಹಳ ಮುಖ್ಯವಾಗಿದೆ. ಸೀಟ್ ಬೆಲ್ಟ್‌ಗಳು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಳ್ಳುವುದರಿಂದ ನಮ್ಮನ್ನು ರಕ್ಷಿಸುತ್ತದೆ.

ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಬೇಡಿ

ಆಲ್ಕೋಹಾಲ್ ಅಥವಾ ಡ್ರಗ್ಸ್ ಸೇವಿಸಿದ ಅನಂತರ ವಾಹನ ಚಲಾಯಿಸುವುದು ತುಂಬಾ ಅಪಾಯಕಾರಿ. ಇದು ಮನಸ್ಸನ್ನು ಕ್ರಿಯಾಶೀಲವಾಗದಂತೆ ಮಾಡುತ್ತದೆ. ಇದರಿಂದ ಕಾರಿನ ಮೇಲೆ ನಿಯಂತ್ರಣವನ್ನು ಕಳೆದುಕೊಳ್ಳಬಹುದು. ಇದು ಅಪಘಾತಗಳ ಅಪಾಯವನ್ನು ಹೆಚ್ಚಿಸುತ್ತದೆ.

ಮೊಬೈಲ್ ಫೋನ್ ಬಳಸಬೇಡಿ

ಕರೆ ಮಾಡಲು ಅಥವಾ ಸಂದೇಶಗಳನ್ನು ಕಳುಹಿಸಲು ಚಾಲನೆ ಮಾಡುವಾಗ ಮೊಬೈಲ್ ಫೋನ್ ಬಳಸಬೇಡಿ. ಇದು ನಿಮ್ಮ ಗಮನವನ್ನು ರಸ್ತೆಯಿಂದ ಬೇರೆಡೆಗೆ ತಿರುಗಿಸುತ್ತದೆ ಮತ್ತು ಇದರಿಂದ ರಸ್ತೆ ಅಪಘಾತಕ್ಕೆ ಬಲಿಯಾಗಬಹುದು.

ಸುಸ್ತಾಗಿದ್ದಾಗ ಅಥವಾ ನಿದ್ದೆ ಬಂದಾಗ ವಾಹನ ಚಲಾಯಿಸಬೇಡಿ

ಹೆಚ್ಚು ದಣಿದಿದ್ದರೆ ಅಥವಾ ನಿದ್ರೆ ಬರುತ್ತಿದ್ದರೆ ವಾಹನ ಚಲಾಯಿಸಬೇಡಿ. ಆಯಾಸವು ಡ್ರೈವಿಂಗ್ ಮಾಡುವಾಗ ನಿಮಗೆ ನಿದ್ರೆ ಬರುವಂತೆ ಮಾಡುತ್ತದೆ. ಇದು ಕಾರಿನ ನಿಯಂತ್ರಣ ತಪ್ಪಲು ಕಾರಣವಾಗಬಹುದು. ಇದು ಅಪಘಾತದ ಅಪಾಯವನ್ನು ಹೆಚ್ಚಿಸುತ್ತದೆ.

ಹೆಚ್ಚಿನ ವೇಗದಲ್ಲಿ ಚಾಲನೆ ಮಾಡಬೇಡಿ

ರಸ್ತೆ ಪರಿಸ್ಥಿತಿಗಳು ಮತ್ತು ಹವಾಮಾನದ ಪ್ರಕಾರ ವಾಹನದ ವೇಗವನ್ನು ನಿಯಂತ್ರಿಸಿ. ಹೆಚ್ಚಿನ ವೇಗದಲ್ಲಿ ಚಾಲನೆ ಮಾಡುವುದು ತುಂಬಾ ಅಪಾಯಕಾರಿ. ವಿಶೇಷವಾಗಿ ಮಳೆ ಅಥವಾ ಮಂಜಿನಂತಹ ಕೆಟ್ಟ ಹವಾಮಾನ ಪರಿಸ್ಥಿತಿಗಳಲ್ಲಿ ಹೆಚ್ಚು ವೇಗವಾಗಿ ಚಾಲನೆ ಮಾಡುವುದನ್ನು ತಪ್ಪಿಸಿ.

ಸುರಕ್ಷಿತ ಅಂತರವನ್ನು ಕಾಪಾಡಿಕೊಳ್ಳಿ

ಇತರ ವಾಹನಗಳಿಂದ ಯಾವಾಗಲೂ ಸುರಕ್ಷಿತ ಅಂತರವನ್ನು ಕಾಯ್ದುಕೊಳ್ಳಿ. ಇದರಿಂದ ಎದುರಿನ ವಾಹನ ಹಠಾತ್ತನೆ ನಿಂತರೆ ಸಕಾಲದಲ್ಲಿ ಬ್ರೇಕ್ ಹಾಕುವ ಅವಕಾಶ ಸಿಗುತ್ತದೆ.

ಇದನ್ನೂ ಓದಿ: Tata Motors: ನೆಕ್ಸಾನ್, ಪಂಚ್‌ ಮೂಲಕ ಎಸ್‌ಯುವಿ ಮಾರುಕಟ್ಟೆಯಲ್ಲಿ ಮುನ್ನಡೆ ಸಾಧಿಸಿದ ಟಾಟಾ ಮೋಟಾರ್ಸ್

ಓವರ್ ಟೇಕ್ ಮಾಡುವಾಗ ಜಾಗರೂಕರಾಗಿರಿ

ಓವರ್‌ಟೇಕ್ ಮಾಡುವಾಗ ಯಾವಾಗಲೂ ಜಾಗರೂಕರಾಗಿರಿ. ರಸ್ತೆಯಲ್ಲಿ ಓವರ್‌ಟೇಕ್ ಮಾಡಲು ಸಾಕಷ್ಟು ಸ್ಥಳವಿದೆ ಮತ್ತು ಮುಂಭಾಗದಿಂದ ಯಾವುದೇ ವಾಹನ ಬರುತ್ತಿಲ್ಲ ಎಂದು ಖಚಿತಪಡಿಸಿಕೊಂಡ ಬಳಿಕವೇ ಓವರ್ ಟೇಕ್ ಮಾಡಿ.


ರಸ್ತೆ ಚಿಹ್ನೆಗಳಿಗೆ ಗಮನ ಕೊಡಿ

ರಸ್ತೆ ಚಿಹ್ನೆ ಮತ್ತು ಗುರುತುಗಳತ್ತ ಯಾವಾಗಲೂ ಗಮನ ಕೊಡಿ. ಈ ಚಿಹ್ನೆಗಳು ನಿಮಗೆ ರಸ್ತೆ ನಿಯಮಗಳು ಮತ್ತು ಅಪಾಯಗಳ ಬಗ್ಗೆ ಮಾಹಿತಿಯನ್ನು ನೀಡುತ್ತವೆ.

Continue Reading

ಆಟೋಮೊಬೈಲ್

Safe Drive Tips: ಮಳೆಯಲ್ಲಿ ಬೈಕ್ ಓಡಿಸುವಾಗ ಈ ಸಂಗತಿಗಳು ಗಮನದಲ್ಲಿರಲಿ

ಮಳೆಯಲ್ಲಿ ಬೈಕ್ ಸವಾರಿ ಮಾಡುವಾಗ ಸಾಕಷ್ಟು ಎಚ್ಚರಿಕೆ (Safe Drive Tips) ವಹಿಸುವುದು ಮುಖ್ಯ. ಪ್ರಯಾಣದಲ್ಲಿ ಸುರಕ್ಷತೆ ಮತ್ತು ಆನಂದವನ್ನು ಅನುಭವಿಸಬೇಕಾದರೆ ಬೈಕು, ಗೇರ್ ಮತ್ತು ರೈಡಿಂಗ್ ಶೈಲಿಯ ಬಗ್ಗೆ ಚೆನ್ನಾಗಿ ತಿಳಿದುಕೊಂಡಿರುವುದು ಬಹು ಮುಖ್ಯ.

VISTARANEWS.COM


on

By

Safe Drive Tips
Koo

ಮಳೆಗಾಲದಲ್ಲಿ (rainy season) ವಾಹನ ಓಡಿಸುವಾಗ ಎಷ್ಟು ಎಚ್ಚರವಾಗಿದ್ದರೂ ಸಾಲದು. ಅದರಲ್ಲೂ ಬೈಕ್ ರೈಡಿಂಗ್ (bike riding) ಮಾಡುವವರು ಕೆಲವು ಸೂಕ್ಷ್ಮ ವಿಷಯಗಳನ್ನು (Safe Drive Tips) ಗಮನಿಸಬೇಕಾಗುವುದು. ದೂರ ಪ್ರಯಾಣವನ್ನು ಪ್ರಾರಂಭಿಸುವ ಮೊದಲು ವಾತಾವರಣದ ಪರಿಸ್ಥಿತಿ, ಬೈಕ್ ಸುಸ್ಥಿತಿಯಲ್ಲಿ ಇದೆಯೇ ಎಂಬುದನ್ನು ಖಚಿತ ಪಡಿಸಿಕೊಳ್ಳುವುದು ಕೂಡ ಬಹು ಮುಖ್ಯವಾಗಿರುತ್ತದೆ.

ಮಳೆಗಾಲದಲ್ಲಿ ಬೈಕ್ ನಲ್ಲಿ ದೂರ ಪ್ರಯಾಣ ಪ್ರಾರಂಭಿಸುವ ಮೊದಲು ಕೆಲವೊಂದು ವಿಷಯಗಳನ್ನು ಗಮನಿಸಬೇಕು. ಅವುಗಳಲ್ಲಿ ಮುಖ್ಯವಾದದ್ದು ಯಾವುದು ಎನ್ನುವ ಮಾಹಿತಿ ಇಲ್ಲಿದೆ.

ಟಯರ್, ಬ್ರೇಕ್‌ಗಳನ್ನು ಪರಿಶೀಲಿಸಿ

ಮಳೆಯಲ್ಲಿ ಸುರಕ್ಷಿತ ಪ್ರಯಾಣಕ್ಕಾಗಿ ಬೈಕ್‌ನ ಟಯರ್, ಬ್ರೇಕ್‌ಗಳ ಸ್ಥಿತಿಯು ನಿರ್ಣಾಯಕವಾಗಿದೆ. ಟಯರ್‌ನ ಹೊರ ಭಾಗದ ಆಳವನ್ನು ಮೊದಲು ಪರೀಕ್ಷಿಸಿ. ಚಕ್ರದ ಹೊರಮೈಯಲ್ಲಿರುವ ಟಯರ್ ಗಳು ಒದ್ದೆಯಾದ ಮೇಲ್ಮೈಗಳಲ್ಲಿ ಉತ್ತಮ ಹಿಡಿತವನ್ನು ಒದಗಿಸುತ್ತವೆ, ಜಾರಿಬೀಳುವ ಅಥವಾ ಸ್ಕಿಡ್ ಆಗುವ ಅಪಾಯವನ್ನು ಕಡಿಮೆ ಮಾಡುತ್ತದೆ. ಟೈರ್‌ಗಳು ಸವೆದಿದ್ದರೆ ಅವುಗಳನ್ನು ಬದಲಾಯಿಸಿ. ಸಾಮಾನ್ಯವಾಗಿ ಆಳವಾದ ಚಕ್ರದ ಹೊರಮೈಗಳು ಮತ್ತು ಒದ್ದೆಯಾದ ರಸ್ತೆಗಳಲ್ಲಿ ಜಾರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಬ್ರೇಕ್‌ಗಳು ಯಾವುದೇ ವಿಳಂಬ ಅಥವಾ ಹೆಚ್ಚಿನ ಬಲದ ಅಗತ್ಯವಿಲ್ಲದೆ ಸರಾಗವಾಗಿ ಹಿಡಿಯುವಂತಿರಬೇಕು. ಬ್ರೇಕ್‌ಗಳು ಸ್ಪಂಜಿಯಾಗಿದ್ದರೆ ಅಥವಾ ತಕ್ಷಣವೇ ಪ್ರತಿಕ್ರಿಯಿಸದಿದ್ದರೆ ಕೂಡಲೇ ಸರಿಪಡಿಸಿ.

ಹೆಡ್ ಲೈಟ್, ಸಿಗ್ನಲ್ ಲೈಟ್

ಮಳೆಯ ವಾತಾವರಣದಲ್ಲಿ ಗೋಚರತೆಯು ಕಡಿಮೆಯಾಗಿರುತ್ತದೆ. ಬೈಕ್‌ನ ದೀಪ ಮತ್ತು ಸಿಗ್ನಲ್‌ಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಅತ್ಯಗತ್ಯ. ಹೆಡ್‌ಲೈಟ್‌, ಸಿಗ್ನಲ್ ಲೈಟ್ ಗಳು ಸರಿಯಾಗಿ ಕಾರ್ಯನಿರ್ವಹಿಸದಿದ್ದರೆ ಕೂಡಲೇ ದುರಸ್ತಿ ಪಡಿಸಿ. ಮಳೆಯಿರುವಾಗ ಹಗಲಿನಲ್ಲಿ ಸ್ಪಷ್ಟವಾಗಿ ಗೋಚರಿಸುವಂತಾಗಲು ಹೆಡ್ ಲೈಟ್ ಗಳನ್ನು ಬಳಸಿ.

ಬ್ರೇಕ್ ದೀಪಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿವೆಯೇ ಎಂದು ಪರಿಶೀಲಿಸಿ. ಬ್ರೇಕ್‌ಗಳನ್ನು ಅನ್ವಯಿಸಿದಾಗ ಬ್ರೇಕ್ ಲೈಟ್‌ಗಳು ನಿಮ್ಮ ಹಿಂದಿರುವ ವಾಹನಗಳನ್ನು ನಿಧಾನಗೊಳಿಸಲು ಅಥವಾ ನಿಲ್ಲಿಸಲು ಎಚ್ಚರಿಕೆ ವಹಿಸಲು ತಕ್ಷಣವೇ ಬೆಳಗಬೇಕು.


ಸೂಕ್ತವಾದ ಗೇರ್

ಮಳೆಯಲ್ಲಿ ಸವಾರಿ ಮಾಡುವಾಗ ಶುಷ್ಕ, ಆರಾಮದಾಯಕ ಮತ್ತು ಸುರಕ್ಷಿತವಾಗಿ ಉಳಿಯಲು ಸರಿಯಾಗಿ ಗೇರ್ ಅನ್ನು ಆಯ್ಕೆ ಮಾಡುವುದು ಮುಖ್ಯವಾಗಿದೆ.

ರೈನ್ ಕೋಟ್

ಮಳೆಗಾಲದಲ್ಲಿ ಉತ್ತಮ ಗುಣಮಟ್ಟದ ರೈನ್ ಕೋಟ್‌ಗಳನ್ನು ಧರಿಸುವುದು ಬಹಳ ಮುಖ್ಯ. ಮಳೆಯಿಂದ ಬೆಚ್ಚಗಿರಲು ಇದು ಬಹುಮುಖ್ಯ. ಜೊತೆಗೆ ಮಳೆ ನೀರು ಹೋಗದ ಬೂಟುಗಳನ್ನು ಹಾಕಿ. ಪಾದಗಳನ್ನು ಶುಷ್ಕ ಮತ್ತು ಬೆಚ್ಚಗಾಗಲು ಇದು ಸಹಾಯ ಮಾಡುತ್ತದೆ. ಒದ್ದೆಯಾದ ಬಟ್ಟೆ, ಪಾದಗಳು ತ್ವರಿತವಾಗಿ ತಣ್ಣಗಾಗಬಹುದು ಮತ್ತು ಅಹಿತಕರವಾಗಬಹುದು. ಸವಾರಿ ಮಾಡುವಾಗ ಏಕಾಗ್ರತೆ ಮತ್ತು ನಿಯಂತ್ರಣದ ಮೇಲೆ ಪರಿಣಾಮ ಬೀರುತ್ತದೆ.

ಹೆಲ್ಮೆಟ್ ತಪ್ಪದೇ ಧರಿಸಿ

ಮಳೆಗಾಲದಲ್ಲಿ ಗೋಚರತೆಯನ್ನು ಕಾಪಾಡಿಕೊಳ್ಳಲು ಸ್ಪಷ್ಟವಾದ ಹೆಲ್ಮೆಟ್ ಧರಿಸುವುದು ಕೂಡ ಬಹುಮುಖ್ಯ. ಆಂಟಿ-ಫಾಗ್ ಲೇಪನವನ್ನು ಹೊಂದಿರುವ ಹೆಲ್ಮೆಟ್ ಧರಿಸಿ. ಹೆಲ್ಮೆಟ್ ಮೇಲೆ ಮಳೆಹನಿಗಳು ವೀಕ್ಷಣೆಗೆ ಅಡ್ಡಿಯಾಗಬಹುದು.

ರಸ್ತೆ ಬಗ್ಗೆ ತಿಳಿದುಕೊಳ್ಳಿ

ಮಳೆಗಾಲದಲ್ಲಿ ದೂರ ಸವರಿ ಮಾಡುವಾಗ ರಸ್ತೆ ಬಗ್ಗೆ ಮೊದಲೇ ತಿಳಿದಿದ್ದರೆ ಉತ್ತಮ. ಆರ್ದ್ರ ಮತ್ತು ಜಾರು ರಸ್ತೆಗಳಲ್ಲಿ ಚಾಲನೆ ಮಾಡುವಾಗ ನಿಯಂತ್ರಣ ಮತ್ತು ಸುರಕ್ಷತೆಯನ್ನು ಕಾಪಾಡಿಕೊಳ್ಳಲು ಸವಾರಿ ತಂತ್ರವನ್ನು ಸರಿಹೊಂದಿಸುವುದು ಕೂಡ ಅತ್ಯಗತ್ಯ.

ನಿಧಾನವಾಗಿ ಸಂಚರಿಸಿ

ಬ್ರೇಕ್ ಹಾಕುವಾಗ, ವಾಹನ ತಿರುಗಿಸುವಾಗ ವಾಹನದ ವೇಗವನ್ನು ನಿಧಾನಗೊಳಿಸಿ. ಹಠಾತ್ ಅಥವಾ ಆಕ್ರಮಣಕಾರಿ ಕುಶಲತೆಯು ವಾಹನ ರಸ್ತೆಯಲ್ಲಿ ಜಾರಿ ಬೀಳಲು ಕಾರಣವಾಗಬಹುದು.

ವಾಹನಗಳ ನಡುವೆ ಅಂತರವಿರಲಿ

ಒದ್ದೆಯಾದ ರಸ್ತೆಗಳಲ್ಲಿ ವಾಹನಗಳ ನಡುವೆ ಸಾಕಷ್ಟು ಅಂತರ ಕಾಯ್ದುಕೊಳ್ಳಿ. ಒದ್ದೆಯಾದ ರಸ್ತೆಯಲ್ಲಿ ವಾಹನ ನಿಲುಗಡೆ ಮಾಡಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಎಂಬುದನ್ನು ನೆನಪಿನಲ್ಲಿರಲಿ. ಮಳೆಯಲ್ಲಿ ಟ್ರಾಫಿಕ್, ರಸ್ತೆ ಪರಿಸ್ಥಿತಿಗಳಲ್ಲಿನ ಬದಲಾವಣೆಗಳಿಗೆ ಪ್ರತಿಕ್ರಿಯಿಸಲು ಸಾಕಷ್ಟು ಸಮಯ ಬೇಕಾಗುತ್ತದೆ. ಹೀಗಾಗಿ ವಾಹನಗಳ ನಡುವೆ ಸಾಕಷ್ಟು ಅಂತರ ಕಾಯ್ದುಕೊಳ್ಳುವುದು ಸುರಕ್ಷತೆ ದೃಷ್ಟಿಯಿಂದ ಒಳ್ಳೆಯದು.

ಗೋಚರತೆ

ಇತರ ರಸ್ತೆ ಬಳಕೆದಾರರಿಗೆ ನಿಮ್ಮ ಗೋಚರತೆಯನ್ನು ಹೆಚ್ಚಿಸುವುದು ಮಳೆಯಲ್ಲಿ ಅತ್ಯಗತ್ಯ. ಇದಕ್ಕಾಗಿ ಹಗಲು ಹೊತ್ತಿನಲ್ಲಿಯೂ ಬೈಕ್‌ನ ಹೆಡ್‌ಲೈಟ್‌ಗಳನ್ನು ಬಳಸಿ. ಬೈಕ್ ಫ್ರೇಮ್ ಮತ್ತು ಚಕ್ರಗಳಿಗೆ ಪ್ರತಿಫಲಿತ ಸ್ಟಿಕ್ಕರ್‌ ಅಥವಾ ಟೇಪ್ ಗಳನ್ನು ಹಾಕುವುದು ಇತರ ವಾಹನಗಳಿಗೆ ನಿಮ್ಮ ಉಪಸ್ಥಿತಿಯನ್ನು ಕಡಿಮೆ ಬೆಳಕಿನಲ್ಲೂ ಪ್ರತಿಬಿಂಬಿಸುವಂತೆ ಮಾಡುತ್ತದೆ.

ಸಿಗ್ನಲ್ ಸ್ಪಷ್ಟವಾಗಿರಲಿ

ಇತರ ರಸ್ತೆ ಬಳಕೆದಾರರಿಗೆ ನಿಮ್ಮ ಉದ್ದೇಶಗಳನ್ನು ತಿಳಿಸಲು ಕೈ ಸಂಕೇತಗಳು ಮತ್ತು ಸೂಚಕಗಳನ್ನು ಬಳಸಿ. ಹಿಂದೆ ಮೋಟಾರು ಚಾಲಕರು ಮತ್ತು ಸೈಕ್ಲಿಸ್ಟ್‌ಗಳಿಗೆ ಪ್ರತಿಕ್ರಿಯಿಸಲು ಸಮಯವನ್ನು ನೀಡಲು ನಿಮ್ಮ ತಿರುವುಗಳು ಮತ್ತು ಲೇನ್ ಬದಲಾವಣೆಗಳನ್ನು ಮೊದಲೇ ಸೂಚಿಸಿ. ಸ್ಪಷ್ಟವಾದ ಮತ್ತು ಸ್ಥಿರವಾದ ಸಿಗ್ನಲಿಂಗ್ ತಪ್ಪುಗ್ರಹಿಕೆಯನ್ನು ತಡೆಯುತ್ತದೆ ಮತ್ತು ಅಪಾಯವನ್ನು ಕಡಿಮೆ ಮಾಡುತ್ತದೆ.

ಇದನ್ನೂ ಓದಿ: Top 10 Motar Bike: ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುವ ಟಾಪ್ 10 ಬೈಕ್‌ಗಳಿವು

ಜಾಗರೂಕರಾಗಿರಿ

ಮಳೆಯಲ್ಲಿ ರಸ್ತೆ ಪರಿಸ್ಥಿತಿಗಳು ಅಪಾಯಕಾರಿಯಾಗಿರುತ್ತದೆ. ಹೀಗಾಗಿ ಹೆಚ್ಚಿನ ಜಾಗೃತಿಯನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ದೊಡ್ಡ ಕೊಚ್ಚೆ ಗುಂಡಿಗಳು ಅಥವಾ ನಿಂತಿರುವ ನೀರಿನ ಮೂಲಕ ಸವಾರಿ ಮಾಡುವುದನ್ನು ತಪ್ಪಿಸಿ.

ಜಾರುವ ರಸ್ತೆಗಳ ಮೇಲೆ ಗಮನವಿರಲಿ

ಮಳೆಯಲ್ಲಿ ರಸ್ತೆಯಲ್ಲಿ ಚಿತ್ರಿಸಿದ ರೇಖೆಗಳು ಅಥವಾ ರಸ್ತೆ ಗುರುತುಗಳ ಮೇಲೆ ಸವಾರಿ ಮಾಡುವಾಗ ಸಾಕಷ್ಟು ಎಚ್ಚರಿಕೆ ವಹಿಸಬೇಕು. ತೇವವಾದ ಮೇಲ್ಮೈಗಳು ಜಾರುವ ಅಪಾಯ ಹೆಚ್ಚಾಗಿರುತ್ತದೆ. ಟಯರ್ ನ ಹಿಡಿತವನ್ನು ಕಡಿಮೆ ಮಾಡುತ್ತದೆ. ಸ್ಕಿಡ್ಡಿಂಗ್ ಅಥವಾ ಸ್ಲೈಡಿಂಗ್ ಅಪಾಯವನ್ನು ಹೆಚ್ಚಿಸುತ್ತದೆ. ಹೀಗಾಗಿ ಈ ಪ್ರದೇಶಗಳಲ್ಲಿ ಎಚ್ಚರಿಕೆಯಿಂದ ವಾಹನ ಚಲಾಯಿಸಿ.

Continue Reading
Advertisement
Viral Video
ವೈರಲ್ ನ್ಯೂಸ್12 mins ago

Viral Video: ವೇದಿಕೆಯಲ್ಲೇ ಎಲ್ಲರೆದುರು ಟಾಪ್‌ ಎತ್ತಿ ಸ್ತನ ಪ್ರದರ್ಶಿಸಿದ ಸಚಿವೆ- ವಿಡಿಯೋ ಭಾರೀ ವೈರಲ್‌

karnataka rain
ಮಳೆ15 mins ago

Karnataka Rain: ಮಳೆಗೆ ಮನೆಗಳಿಗೆ ನುಗ್ಗುತ್ತಿವೆ ಹಾವುಗಳು! ಕುಸಿದು ಬಿತ್ತು ಮನೆಗಳು

Ayodhya Ram Mandir
ದೇಶ18 mins ago

Ayodhya Ram Mandir: ಅಯೋಧ್ಯೆ ರಾಮ ಮಂದಿರದ ಅರ್ಚಕರಿಗೆ ಹೊಸ ಸಮವಸ್ತ್ರ; ನಿಯಮದಲ್ಲಿ ಬದಲಾವಣೆ: ಕಾರಣವೇನು?

Latest23 mins ago

Self Harming: ಮೊದಲ ರಾತ್ರಿಯ ಟೆನ್ಶನ್‌ಗೆ ವರ ಆತ್ಮಹತ್ಯೆ? ಉತ್ತರ ಪ್ರದೇಶದಲ್ಲೊಂದು ವಿಲಕ್ಷಣ ಘಟನೆ

Valmiki Corporation Scam
ಪ್ರಮುಖ ಸುದ್ದಿ26 mins ago

Valmiki Corporation Scam: ವಾಲ್ಮೀಕಿ ನಿಗಮ ಹಗರಣದಲ್ಲಿ ಮುಂದುವರಿದ ಮಾಜಿ ಸಚಿವರ ಪಿಎಸ್‌ ವಿಚಾರಣೆ; ನಾಗೇಂದ್ರಗೆ ಢವಢವ!

Team India's Victory Parade
ಕ್ರಿಕೆಟ್27 mins ago

Team India’s Victory Parade: ಟೀಮ್ ಇಂಡಿಯಾದ ವಿಕ್ಟರಿ ಪೆರೇಡ್​ನಲ್ಲಿ ಹಲವು ಅಭಿಮಾನಿಗಳಿಗೆ ಗಾಯ; ಆಸ್ಪತ್ರೆಗೆ ದಾಖಲು

Viral News
Latest31 mins ago

Viral News: ಕಾಮ ದಾಹ ತಣಿಸಿಕೊಳ್ಳಲು ವಿದ್ಯಾರ್ಥಿಗಳನ್ನೇ ಬಳಸಿಕೊಂಡ ಶಿಕ್ಷಕಿಗೆ ಶಿಕ್ಷೆ

Dengue Fever
ಕರ್ನಾಟಕ46 mins ago

Dengue Fever: ಡೆಂಗ್ಯೂ ಆತಂಕ; ರಾಜಧಾನಿಯಲ್ಲಿ ಇನ್ಮುಂದೆ ಎಲ್ಲೆಂದರಲ್ಲಿ ಕಸ ಬಿಸಾಡಿದರೆ ಬೀಳಲಿದೆ ಭಾರಿ ದಂಡ!

Fire accident
ದೇಶ56 mins ago

Fire accident: ಮಾಲ್‌ನಲ್ಲಿ ಭೀಕರ ಅಗ್ನಿ ಅವಘಡ; ಭಾರೀ ಸಾವು-ನೋವಿನ ಶಂಕೆ

Rashmika Mandanna Kubera interesting first look
ಕಾಲಿವುಡ್1 hour ago

Rashmika Mandanna: ಧನುಷ್‌ ನಟನೆಯ ʻಕುಬೇರʼ ಸಿನಿಮಾದ ರಶ್ಮಿಕಾ ಫಸ್ಟ್‌ ಲುಕ್‌ ಪೋಸ್ಟರ್‌ ಔಟ್‌!

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka rain
ಮಳೆ15 mins ago

Karnataka Rain: ಮಳೆಗೆ ಮನೆಗಳಿಗೆ ನುಗ್ಗುತ್ತಿವೆ ಹಾವುಗಳು! ಕುಸಿದು ಬಿತ್ತು ಮನೆಗಳು

Elephant attack in Hassan and Chikmagalur
ಹಾಸನ2 hours ago

Elephant Attack : ಕಾಫಿ ತೋಟದ‌ ಕೆಲಸಗಾರನನ್ನು ಸೊಂಡಿಲಿನಿಂದ ಎತ್ತಿ ಬಿಸಾಡಿದ ಒಂಟಿ ಸಲಗ

Physical Abuse
ಬೆಂಗಳೂರು3 hours ago

Physical Abuse : ಇವಳೇನು ಶಿಕ್ಷಕಿಯೋ ಕಾಮುಕಿಯೋ; ಬಾಲಕಿಯ ಖಾಸಗಿ ಅಂಗಾಂಗ ಮುಟ್ಟಿ ವಿಕೃತಿ

Self Harming in bengaluru
ಬೆಂಗಳೂರು3 hours ago

Self Harming : ವರದಕ್ಷಿಣೆ ಟಾರ್ಚರ್‌; ಫ್ಯಾನಿಗೆ ನೇಣು ಬಿಗಿದುಕೊಂಡು ಟೆಕ್ಕಿ ಸೂಸೈಡ್‌

karnataka Weather Forecast Rain
ಮಳೆ8 hours ago

Karnataka Weather : ಕರಾವಳಿ, ಮಲೆನಾಡಿನಲ್ಲಿ ಮಳೆ ಅಬ್ಬರ; ಇಲ್ಲೆಲ್ಲ ಕಾದಿದೆ ಗಂಡಾಂತರ

karnataka Weather Forecast
ಮಳೆ20 hours ago

Karnataka Weather : ಭಾರಿ ಮಳೆಗೆ ಗುಡ್ಡ ಕುಸಿತ; ಮಣ್ಣಿನ ಅಡಿ ಸಿಲುಕಿದ ಮಹಿಳೆ ಉಸಿರುಗಟ್ಟಿ ಸಾವು

karnataka Rain
ಮಳೆ21 hours ago

Karnataka Rain : ಮಳೆಗೆ ಜಾರಿ ಮುಖಾಮುಖಿ ಡಿಕ್ಕಿಯಾದ ಲಾರಿಗಳು; ಕಾರಿನ ಮೇಲೆ ಬಿದ್ದ ಬೃಹತ್‌ ಮರ

wild animal attack
ಬೆಂಗಳೂರು ಗ್ರಾಮಾಂತರ22 hours ago

Wild Animal Attack : ಮಾಗಡಿಯಲ್ಲಿ ರೈತನ ತಲೆ ಬಗೆದ ಕರಡಿ; ಮಲೆನಾಡಿನಲ್ಲಿ ಆನೆಗಳ ಹಾವಳಿ

Chikkaballapura News
ಚಿಕ್ಕಬಳ್ಳಾಪುರ1 day ago

Chikkaballapura News : ಒಂದು ವರ್ಷದ ಮಗು ಬಿಟ್ಟು ಕ್ಷಣಾರ್ಧದಲ್ಲಿ ತಾಯಿ ಎಸ್ಕೇಪ್!

karnataka Rain
ಮಳೆ1 day ago

Karnataka Rain : ಧಾರಾಕಾರ ಮಳೆಗೆ ಗುಡ್ಡ ಕುಸಿತ; ಹೊನ್ನಾವರ-ಬೆಂಗಳೂರು ಹೆದ್ದಾರಿ ಬಂದ್

ಟ್ರೆಂಡಿಂಗ್‌