Tarek Fatah Dead: ಖ್ಯಾತ ಪಾಕ್-ಕೆನಡಿಯನ್ ಅಂಕಣಕಾರ, ಲೇಖಕ ತಾರೆಕ್ ಫತಾಹ್ ನಿಧನ - Vistara News

ದೇಶ

Tarek Fatah Dead: ಖ್ಯಾತ ಪಾಕ್-ಕೆನಡಿಯನ್ ಅಂಕಣಕಾರ, ಲೇಖಕ ತಾರೆಕ್ ಫತಾಹ್ ನಿಧನ

Tarek Fatah Dead: ಪಾಕಿಸ್ತಾನದಲ್ಲಿ ಜನಿಸಿದ ಭಾರತೀಯ ಮತ್ತು ಇಸ್ಲಾಮ್‌ನಲ್ಲಿ ಜನಿಸಿದ ಪಂಜಾಬಿ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದ ಪಾಕಿಸ್ತಾನ ಮೂಲದ ಕೆನಡಿಯನ್ ತಾರೆಕ್ ಫತಾಹ್, ದೀರ್ಘ ಅನಾರೋಗ್ಯದಿಂದಾಗಿ ನಿಧನರಾಗಿದ್ದಾರೆ.

VISTARANEWS.COM


on

Renowned Pakistani-Canadian columnist, author Tarek Fatah passes away
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ಪ್ರಖ್ಯಾತ ಲೇಖಕ, ಅಂಕಣಕಾರ, ಪಾಕ್-ಕೆನಡಿಯನ್ ತಾರೆಕ್ ಫತಾಹ್ ಅವರು ಮೃತರಾಗಿದ್ದಾರೆ. ಅವರಿಗೆ 73 ವರ್ಷ ವಯಸ್ಸಾಗಿತ್ತು. ದೀರ್ಘಕಾಲದಿಂದ ಅನಾರೋಗ್ಯಕ್ಕೀಡಾಗಿದ್ದ ಅವರು ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ತಾರೆಕ್ ಫತಾಹ್ ಅವರ ನಿಧನವನ್ನು ಅವರ ಪುತ್ರಿ ನತಾಶಾ ಫತಾಹ್ ಅವರು ಖಚಿತಪಡಿಸಿದ್ದಾರೆ(Tarek Fatah Dead).

ತಾರೆಕ್ ಫತಾಹ್ ಅವರ ಪುತ್ರಿ ನತಾಶಾ ಅವರ ಟ್ವೀಟ್

ಪಂಜಾಬ್‌ನ ಸಿಂಹ, ಹಿಂದೂಸ್ತಾನದ ಪುತ್ರ, ಕೆನಡಾವನ್ನು ಪ್ರೀತಿಸುವವ, ಸತ್ಯ ಹೇಳುವಾತ, ನ್ಯಾಯಯಕ್ಕಾಗಿ ಹೋರಾಡುವ, ತುಳಿತಕ್ಕೊಳಗಾದವರು, ದೀನದಲಿತರು, ಹಿಂದುಳಿದವರು ಧ್ವನಿ, ತಾರೆಕ್ ಫತಾಹ್ ಬ್ಯಾಟನ್ ಪಾಸ್ ಮಾಡಿದ್ದಾರೆ. ಅವರ ಕ್ರಾಂತಿ ಅವರನ್ನು ತಿಳಿದಿರುವವರು ಮತ್ತು ಪ್ರೀತಿಸುವ ಎಲ್ಲರೊಂದಿಗೆ ಅದು ಮುಂದರಿಯಲಿದೆ. ನೀವು ನಮ್ಮೊಂದಿಗೆ ಸೇರಿಕೊಳ್ಳುತ್ತೀರಾ? 1949-2023 ಎಂದು ಫತಾಹ್ ಅವರ ಪುತ್ರಿ ನತಾಶಾ ಟ್ವೀಟ್ ಮಾಡಿದ್ದಾರೆ.

ನನ್ನ ತಂದೆಯೊಂದಿಗೆ ನಿಧಾನವಾದ ಭಾನುವಾರದ ಮುಂಜಾನೆಯನ್ನು ಆನಂದಿಸುತ್ತಿದ್ದೇನೆ. ಹಳೆಯ ಬಾಲಿವುಡ್ ಹಾಡುಗಳನ್ನು ಕೇಳುತ್ತಿದ್ದೇನೆ ಮತ್ತು ಭಾರತ ಮಾತೆಯ ಮೇಲಿನ ನಮ್ಮ ಪ್ರೀತಿಗಾಗಿ ನಾನು ಕಿತ್ತಳೆ ಬಣ್ಣ ಬಟ್ಟೆ ಧರಿಸಿದ್ದೇನೆ ಎಂದು ನತಾಶಾ ಅವರು ಟ್ವೀಟ್‌ ಮಾಡಿದ್ದರು.

Tarek Fatah ನಿಧನಕ್ಕೆ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಕಂಬನಿ

ಫತಾಹ್ ಅವರು ಇಸ್ಲಾಂ ಧರ್ಮದ ಬಗ್ಗೆ ಪ್ರಗತಿಪರ ದೃಷ್ಟಿಕೋನಗಳು ಮತ್ತು ಪಾಕಿಸ್ತಾನದ ಬಗ್ಗೆ ಅವರ ಕಡು ನಿಲುವುಗಳಿಗೆ ಹೆಸರುವಾಸಿಯಾಗಿದ್ದರು. ಅವರು ತಮ್ಮನ್ನು ‘ಪಾಕಿಸ್ತಾನದಲ್ಲಿ ಜನಿಸಿದ ಭಾರತೀಯ’ ಮತ್ತು ‘ಇಸ್ಲಾಂನಲ್ಲಿ ಜನಿಸಿದ ಪಂಜಾಬಿ’ ಎಂದು ಕರೆದುಕೊಳ್ಳುತ್ತಿದ್ದರು .ಭಾರತದಲ್ಲಿ ಅವರು ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರಕ್ಕೆ ತಮ್ಮ ಬೆಂಬಲವನ್ನು ನೀಡಿದ್ದರು.

ತಾರೆಕ್ ಫತಾಹ್ ಅವರು 1949 ನವೆಂಬರ್ 20ರಂದು ಪಾಕಿಸ್ತಾನದ ಕರಾಚಿಯಲ್ಲಿ ಜನಿಸಿದರು. ಅವರು 1980ರ ದಶಕದ ಆರಂಭದಲ್ಲಿ ಕೆನಡಾಕ್ಕೆ ವಲಸೆ ಹೋದರು. ರಾಜಕೀಯ ಕಾರ್ಯಕರ್ತ, ಪತ್ರಕರ್ತ ಮತ್ತು ದೂರದರ್ಶನ ನಿರೂಪಕರಾಗಿ ಕೆಲಸ ಮಾಡಿದರು. ಅವರು ‘ಚೇಸಿಂಗ್ ಎ ಮಿರಾಜ್: ದಿ ಟ್ರಾಜಿಕ್ ಇಲ್ಯೂಷನ್ ಆಫ್ ಆನ್ ಇಸ್ಲಾಮಿಕ್ ಸ್ಟೇಟ್’ ಮತ್ತು ‘ದಿ ಯಹೂದಿ ಈಸ್ ನಾಟ್ ಮೈ ಎನಿಮಿ: ಅನ್‌ವೇಲಿಂಗ್‌ ದಿ ಮಿಥ್ಸ್ ದ್ಯಾಟ್ ಫ್ಯೂಯಲ್ ಮುಸ್ಲಿಂ ಆ್ಯಂಟಿ-ಸ್ಮಿಟಿಸಂ’ ಸೇರಿದಂತೆ ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ.

ಇದನ್ನೂ ಓದಿ: ಕೆ.ವಿ ತಿರುಮಲೇಶ್‌: ಕನ್ನಡಕ್ಕೆ ಸದಾ ಹೊಸದನ್ನು ತರುತ್ತಿದ್ದ ಕವಿಹೃದಯಿ, ಚಿಂತಕ

ತಾರೆಕ್ ಫತಾಹ್ ನಿಧನ ಸುದ್ದಿ ಗೊತ್ತಾಗುತ್ತಿದಂತೆ ಹಲವರು ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸಂತಾಪಗಳ ಟ್ವೀಟ್‌ಗಳಾಗುತ್ತಿವೆ. ನಟ ರಣವೀರ್ ಶೋರೆ ಅವರು ಟ್ವೀಟ್ ಮಾಡಿ, ಫತಾಹ್ ನಿಧನ ಸುದ್ದಿ ತಿಳಿದು ದುಃಖವಾಗಿದೆ. ನನಗೆ ಗೊತ್ತಿರುವ ಪೈಕಿ ಅವರು ಭಾರೀ ಧೈರ್ಯಶಾಲಿ ಮತ್ತು ಜಾಣ ವ್ಯಕ್ತಿಯಾಗಿದ್ದರು. ಅವರಿಗೆ ಸದ್ಗತಿ ಸಿಗಲಿ. ಅವರು ತಮ್ಮ ಪಾಲಿನಗಿಂತಲೂ ಹೆಚ್ಚಿನ ಒಳ್ಳೆಯದನ್ನು ಈ ಜಗತ್ತಿಗೆ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Indian Economy : 2027ರ ವೇಳೆಗೆ ಭಾರತ 3ನೇ ಅತಿದೊಡ್ಡ ಆರ್ಥಿಕತೆಯಾಗಲಿದೆ: ಐಎಂಎಫ್​ನ ಗೀತಾ ಗೋಪಿನಾಥ್

Indian Economy :

VISTARANEWS.COM


on

Indian Economy
Koo

ಬೆಂಗಳೂರು : ಭಾರತದ ಆರ್ಥಿಕತೆಯ (Indian Economy ) ಬೆಳವಣಿಗೆಯೂ ನಿರೀಕ್ಷೆಯನ್ನೂ ಮೀರುತ್ತಿದೆ ಎಂಬುದಾಗಿ ಅಂತರರಾಷ್ಟ್ರೀಯ ಹಣಕಾಸು ನಿಧಿಯ (IMF) ಮೊದಲ ಉಪ ವ್ಯವಸ್ಥಾಪಕ ನಿರ್ದೇಶಕಿ ಡಾ.ಗೀತಾ ಗೋಪಿನಾಥ್ ಅಭಿಪ್ರಾಯಪಟ್ಟಿದ್ದಾರೆ. 2027 ರ ವೇಳೆಗೆ ಭಾರತವು ಮೂರನೇ ಅತಿದೊಡ್ಡ ಆರ್ಥಿಕತೆಯಾಗುವ ಭರವಸೆಯಿದೆ ಎಂದು ಅವರ ಹೇಳಿದ್ದಾರೆ.

ಇಂಡಿಯಾ ಟುಡೇಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು ಭಾರತದ ಆರ್ಥಿಕ ಬೆಳವಣಿಗೆಯು ನಿರೀಕ್ಷೆಗಿಂತ ಉತ್ತಮವಾಗಿದೆ. ಇದು ವಿವಿಧ ಅಂಶಗಳಿಂದ ಪ್ರೇರಿತವಾಗಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. “ಭಾರತದ ಬೆಳವಣಿಗೆಯು ಕಳೆದ ಹಣಕಾಸು ವರ್ಷದಲ್ಲಿ ನಾವು ನಿರೀಕ್ಷಿಸಿದ್ದಕ್ಕಿಂತ ಉತ್ತಮವಾಗಿ ಸಾಗಿದೆ. ಅದೇ ರೀತಿಯ ಪರಿಣಾಮಗಳು ಮುಂದಿನ ಹಲವು ವರ್ಷಗಳವರೆಗೆ ಸಾಗಲಿದೆ. ಈ ವರ್ಷದ ಮುನ್ಸೂಚನೆಯೂ ಪರಿಣಾಮ ಬೀರುತ್ತಿವೆ. ಮತ್ತೊಂದು ಅಂಶವೆಂದರೆ ಖಾಸಗಿ ಉದ್ಯಮಗಳು ಚೇತರಿಸಿಕೊಳ್ಳುತ್ತಿರುವುದರಿಂದ ಉತ್ತಮ ಫಲಿತಾಂಶ ನಿರೀಕ್ಷಿಸಬಹುದು ಎಂದು ಗೋಪಿನಾಥ್ ಹೇಳಿದ್ದಾರೆ.

ಎಫ್ಎಂಸಿಜಿ ಮತ್ತು ದ್ವಿಚಕ್ರ ವಾಹನ ಮಾರಾಟದ ಹೊಸ ಅಂಕಿ ಅಂಶಗಳು ಮತ್ತು ಅನುಕೂಲಕರವಾಗಿ ಮಾನ್ಸೂನ್ ಮಳೆ ಸುರಿದಿರುವ ಆಧಾರದ ಮೇಲೆ, 2024-25ರ ಆರ್ಥಿಕ ವರ್ಷದಲ್ಲಿ ಭಾರತದ ಬೆಳವಣಿಗೆಯ ಮುನ್ಸೂಚನೆಯನ್ನು 7% ಕ್ಕೆ ಐಎಂಎಫ್ ನಿರೀಕ್ಷಿಸಿದೆ. ಇದು ಆರ್ಥಿಕ ಸಮೀಕ್ಷೆಯಲ್ಲಿ ಕೇಂದ್ರ ಸರ್ಕಾರ ನೀಡಿದ 6.5% ಅಂದಾಜಿಗಿಂತ ಹೆಚ್ಚಿನ ಅಂಕಿ ಅಂಶವಾಗಿದೆ. 2027 ರ ವೇಳೆಗೆ ಭಾರತವು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದೆ ಎಂದು ಐಎಂಎಫ್ ಭವಿಷ್ಯ ನುಡಿದಿದೆ.

ಇದನ್ನೂ ಓದಿ: Donald Trump : ಡೊನಾಲ್ಡ್​ ಟ್ರಂಪ್​, ಎಲಾನ್​ ಮಸ್ಕ್​ ಮಸ್ತ್​ ಡಾನ್ಸ್​; ಇದು ಕೃತಕ ಬುದ್ದಿಮತ್ತೆಯ ಕರಾಮತ್ತು!

ಕಳೆದ ವರ್ಷ ಖಾಸಗಿ ಕ್ಷೇತ್ರದ ಬೆಳವಣಿಗೆಯನ್ನು ನೋಡಿದರೆ, ಸುಮಾರು 4% ರಷ್ಟಿತ್ತು. ಗ್ರಾಮೀಣ ಬಳಕೆಯ ಚೇತರಿಕೆಯಿಂದ ಅದು ಹೆಚ್ಚಾಗುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ. ನೀವು ದ್ವಿಚಕ್ರ ವಾಹನ ಮಾರಾಟ ಪ್ರಗತಿ ನೋಡಿದರೆ ಆಟೋಮೊಬೈಲ್ ಕ್ಷೇತ್ರವೂ ಉತ್ತಮವಾಗಿದೆ. ಉತ್ತಮ ಮಾನ್ಸೂನ್ ಮಳೆ ಬಿದ್ದರೆ ಉತ್ತಮ ಫಸಲನ್ನು ನೋಡಬಹುದು ಎಂದು ನಾವು ನಿರೀಕ್ಷಿಸುತ್ತೇವೆ. ಕೃಷಿ ಆದಾಯವು ಹೆಚ್ಚುತ್ತಿರುವುದರಿಂದ, ಗ್ರಾಮೀಣ ಪ್ರದೇಶದಲ್ಲಿ ಆರ್ಥಿಕ ಚೇತರಿಕೆಯನ್ನು ನೋಡಬಹುದು ಎಂದು ಹೇಳಿದ ಗೋಪಿನಾಥ್, 2024-25ರ ಹಣಕಾಸು ವರ್ಷದಲ್ಲಿ ಭಾರತದ ಬೆಳವಣಿಗೆಯ ಮುನ್ಸೂಚನೆಯನ್ನು 7% ಕ್ಕೆ ಹೆಚ್ಚಿಸಲಾಗಿದೆ ಎಂದು ನುಡಿದರು.

Continue Reading

Latest

Kolkata Doctor Murder Case: ಕೋಲ್ಕತ್ತಾ ವೈದ್ಯೆಯ ಅತ್ಯಾಚಾರಿಗೆ ಮರಣದಂಡನೆ ವಿಧಿಸುವಂತೆ ಬಾಲಿವುಡ್ ತಾರೆಯರ ಆಗ್ರಹ

Kolkata Doctor Murder Case: ಕೋಲ್ಕತ್ತಾದ ವೈದ್ಯೆಯ ಭೀಕರ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಇಡೀ ದೇಶದ ಜನರು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ತಾರೆಯರು ಸೋಶಿಯಲ್ ಮೀಡಿಯಾದ ಮೂಲಕ ತಮ್ಮ ಬೆಂಬಲ ಮತ್ತು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.ಹೃತಿಕ್ ರೋಶನ್, ಜೆನಿಲಿಯಾ ದೇಶ್‌ಮುಖ್‌, ಆಯುಷ್ಮಾನ್ ಖುರಾನಾ, ರಿಚಾ ಚಡ್ಡಾ, ನವ್ಯಾ ನವೇಲಿ ನಂದಾ, ಜೋಯಾ ಅಖ್ತರ್ ಮುಂತಾದ ನಟನಟಿಯರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

VISTARANEWS.COM


on

Kolkata Doctor Murder Case
Koo


ಕೋಲ್ಕತಾ: ಕೋಲ್ಕತಾದ ಆರ್ ಜಿ ಕರ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ತರಬೇತಿ ನೀಡುತ್ತಿದ್ದ ವೈದ್ಯೆಯ (Kolkata Doctor Murder Case) ಭೀಕರ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ದೇಶದ ಜನರು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ತಾರೆಯರು ಸೋಶಿಯಲ್ ಮೀಡಿಯಾದ ಮೂಲಕ ತಮ್ಮ ಬೆಂಬಲ ಮತ್ತು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

Kolkata Doctor Murder Case
Kolkata Doctor Murder Case

ಬಾಲಿವುಡ್ ಸೆಲೆಬ್ರಿಟಿಗಳಾದ ಜೆನಿಲಿಯಾ ದೇಶ್‌ಮುಖ್‌, ಆಯುಷ್ಮಾನ್ ಖುರಾನಾ, ರಿಚಾ ಚಡ್ಡಾ, ನವ್ಯಾ ನವೇಲಿ ನಂದಾ, ಜೋಯಾ ಅಖ್ತರ್ ಮತ್ತು ಇತರರು ದೇಶದಲ್ಲಿ ಮಹಿಳೆಯರ ಸುರಕ್ಷತೆಯ ಕೊರತೆಯ ವಿರುದ್ಧ ತಮ್ಮ ಆಕ್ರೋಶವನ್ನು ಕಟುವಾದ ಪದಗಳ ಮೂಲಕ ಹೊರಹಾಕಿದ್ದಾರೆ ಮತ್ತು ಅಪರಾಧಿಗಳಿಗೆ ಮರಣದಂಡನೆ ವಿಧಿಸುವಂತೆ ಒತ್ತಾಯಿಸಿದ್ದಾರೆ.

ಕವಿತೆ ರಚಿಸುವ ಕಲೆ ಹೊಂದಿರುವಂತಹ ನಟ ಆಯುಷ್ಮಾನ್ ಖುರಾನಾ ಅವರು ಕಾಶ್ ಮೈ ಭಿ ಲಡ್ಕಾ ಹೋತಿ (ನಾನು ಹುಡುಗನಾಗಬೇಕೆಂದು ಬಯಸುತ್ತೇನೆ) ಎಂಬ ಭಾವನಾತ್ಮಕ ಕವಿತೆಯನ್ನು ಬರೆದು ಆ ಕವಿತೆಯನ್ನು ಹೇಳುತ್ತಾ ವಿಡಿಯೊ ಮಾಡಿ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಆ ಕವಿತೆಯಲ್ಲಿ ಅವರು ನಾನು ಹುಡುಗನಾಗಬೇಕೆಂದು ಬಯಸುತ್ತೇನೆ. ಯಾಕೆಂದರೆ ನಾನು ಬಾಗಿಲನ್ನು ಲಾಕ್ ಮಾಡದೆ ಮಲಗಬಹುದು. ನಿರಾತಂಕವಾಗಿ ಎಲ್ಲಿ ಬೇಕಾದರೂ ಓಡಾಡಬಹುದು, ಹಾರಾಡಬಹುದು, ರಾತ್ರಿಯಿಡೀ ಸ್ನೇಹಿತರೊಂದಿಗೆ ತಿರುಗಾಡಬಹುದು. ಆದರೆ ಈ ಸ್ವಾತಂತ್ರ್ಯ ಮಹಿಳೆಯರಿಗೆ ಇಲ್ಲವಲ್ಲ ಎಂಬುದನ್ನು ತಮ್ಮ ಕವಿತೆಯ ಮೂಲಕ ಮಾರ್ಮಿಕವಾಗಿ ತಿಳಿಸಿದ್ದಾರೆ.

Kolkata Doctor Murder Case
Kolkata Doctor Murder Case

ಈ ಪ್ರಕರಣದ ಬಗ್ಗೆ ಬೇಸರ ವ್ಯಕ್ತಪಡಿಸಿದ ನಟಿ ಕೃತಿ “ನಾವು ನಮ್ಮ 78ನೇ ಸ್ವಾತಂತ್ರ್ಯ ವರ್ಷವನ್ನು ಆಚರಿಸುತ್ತಿರುವಾಗ ಜಾಗತಿಕವಾಗಿ ಒಂದು ದೇಶವಾಗಿ ನಾವು ಎಷ್ಟು ದೂರ ಬಂದಿದ್ದೇವೆ ಎಂಬುದರ ಬಗ್ಗೆ ಹೆಮ್ಮೆಪಡುತ್ತೇವೆ. ಆದರೆ ತಮ್ಮ ದೇಶದಲ್ಲಿ ಮಹಿಳೆಯರು ಇನ್ನೂ ಸುರಕ್ಷಿತವಾಗಿಲ್ಲ ಎಂಬ ಭಯಾನಕ ವಾಸ್ತವವನ್ನು ನೋಡಿದಾಗ ನನಗೆ ಬೇಸರವಾಗುತ್ತದೆ. ಈ ಅಮಾನವೀಯ ಕೃತ್ಯಗಳನ್ನು ಮಾಡುವ ಜನರಿಗೆ ಯಾವುದೇ ಭಯವಿರುವುದಿಲ್ಲ. ಆದರೆ ಇಂದಿಗೂ, ಇದರಲ್ಲಿ ಬಲಿಪಶುವಾಗಿರುವುದಕ್ಕೆ ಮಹಿಳೆಯನ್ನು ದೂಷಿಸಲಾಗುತ್ತಿದೆ ಎಂದು ವಿಷಾದಿಸಿದ್ದಾರೆ.

ಈ ಪ್ರಕರಣದಲ್ಲಿ ಭಾಗಿಯಾದವರಿಗೆ ಮರಣದಂಡನೆ ವಿಧಿಸಬೇಕೆಂದು ನಟಿ ಜೆನಿಲಿಯಾ ದೇಶ್‌ಮುಖ್‌ ಆಗ್ರಹಿಸಿದ್ದಾರೆ. ತಮ್ಮ ಎಕ್ಸ್ (ಹಿಂದೆ ಟ್ವಿಟರ್) ಖಾತೆಯಲ್ಲಿ ಅವರು, “ರಾಕ್ಷಸರನ್ನು ಗಲ್ಲಿಗೇರಿಸಬೇಕಾಗಿದೆ. ಬಲಿಪಶು ಅನುಭವಿಸಿದ್ದನ್ನು ಓದಿದಾಗ ನನ್ನ ರಕ್ತ ಕುದಿಯುತ್ತದೆ. ಸೆಮಿನಾರ್ ಹಾಲ್‍ನಲ್ಲಿ ಕರ್ತವ್ಯದಲ್ಲಿದ್ದ ಒಬ್ಬ ಮಹಿಳೆ, ಇಂತಹ ಘೋರ ಭಯಾನಕತೆಯನ್ನು ಎದುರಿಸಿದಳು. ಅವಳ ಕುಟುಂಬದವರು ಮತ್ತು ಪ್ರೀತಿಪಾತ್ರರು ಈ ದುರಂತವನ್ನು ಹೇಗೆ ಎದುರಿಸುತ್ತಿದ್ದಾರೆಂದು ಊಹಿಸಲು ಸಹ ಸಾಧ್ಯವಿಲ್ಲʼʼ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ನಟ ಹೃತಿಕ್ ರೋಷನ್ ಕೂಡ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ತೀವ್ರ ಕೋಪ ಮತ್ತು ಕಳವಳವನ್ನು ವ್ಯಕ್ತಪಡಿಸಿದ್ದಾರೆ. ಅವರು ತಮ್ಮ ಎಕ್ಸ್ ಖಾತೆಯಲ್ಲಿ, ನಾವೆಲ್ಲರೂ ಸಮಾನವಾಗಿ ಸುರಕ್ಷಿತರೆಂದು ಭಾವಿಸುವ ಸಮಾಜವನ್ನು ನಿರ್ಮಿಸಬೇಕು. ಆದರೆ ಅದಕ್ಕೆ ಹಲವು ವರ್ಷಗಳು ಬೇಕಾಗುತ್ತದೆ. ನಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರ ಕಲಿಸಿದರೆ ಮುಂದಿನ ತಲೆಮಾರು ಉತ್ತಮವಾಗಿರುತ್ತದೆ. ಇದೀಗ ಇಂತಹ ದೌರ್ಜನ್ಯಗಳಿಗೆ ಕಠಿಣ ಕ್ರಮ ಕೈಗೊಳ್ಳುವುದು ನ್ಯಾಯವಾಗಿದೆ. ಮತ್ತು ಅದನ್ನು ಮಾಡಲು ಇರುವ ಏಕೈಕ ಮಾರ್ಗವೆಂದರೆ ಅಂತಹ ಅಪರಾಧಿಗಳಿಗೆ ಹಾಡುಹಗಲಿನಲ್ಲೇ ಕಠಿಣ ಶಿಕ್ಷೆ ನೀಡುವುದು ಎಂದು ತಿಳಿಸಿದ್ದಾರೆ ಮತ್ತು ತಾನು ಸಂತ್ರಸ್ತೆಗೆ ನ್ಯಾಯ ದೊರಕಿಸಲು ಆಕೆಯ ಕುಟುಂಬದೊಂದಿಗೆ ನಿಲ್ಲುತ್ತೇನೆ ಎಂದು ಅವರು ಪೋಸ್ಟ್ ಮಾಡಿದ್ದಾರೆ.

ಕೋಲ್ಕತ್ತಾದಲ್ಲಿ ತರಬೇತಿ ವೈದ್ಯೆಯ ಭೀಕರ ಅತ್ಯಾಚಾರ ಮತ್ತು ಕೊಲೆಯನ್ನು ನಟಿ ಕರೀನಾ ಕಪೂರ್ ಖಾನ್ ಕೂಡ ಖಂಡಿಸಿದ್ದಾರೆ. ಈ ಬಗ್ಗೆ ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿರುವ ಕರೀನಾ, “12 ವರ್ಷಗಳ ನಂತರ; ಅದೇ ಕಥೆ; ಅದೇ ಪ್ರತಿಭಟನೆ. ಆದರೆ ನಾವು ಇನ್ನೂ ಬದಲಾವಣೆಗಾಗಿ ಕಾಯುತ್ತಿದ್ದೇವೆʼʼ ಎಂದಿದ್ದಾರೆ.

ಆಘಾತಕಾರಿ ಘಟನೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ನಟಿ ಪ್ರೀತಿ ಜಿಂಟಾ, ಮಹಿಳೆಯರ ಸುರಕ್ಷತೆಗೆ ಸರ್ಕಾರವು ಆದ್ಯತೆ ನೀಡಬೇಕು ಎಂದು ತಿಳಿಸುವ ಮೂಲಕ ಅವರು ಮಹಿಳೆಯರ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಅಲ್ಲದೇ ಅತ್ಯಾಚಾರ ಮತ್ತು ಹಿಂಸಾತ್ಮಕ ಲೈಂಗಿಕ ಅಪರಾಧದ ಸಂತ್ರಸ್ತರ ಹೆಸರುಗಳು ಮತ್ತು ಮುಖಗಳು ಮಾಧ್ಯಮಗಳಲ್ಲಿ ಸೋರಿಕೆಯಾಗಿರುವಾಗ, ಅತ್ಯಾಚಾರಿಯ ಮುಖವನ್ನು ಮರೆಮಾಚುವುದನ್ನು ನೋಡಿದರೆ ಅಸಹ್ಯವಾಗುತ್ತದೆ. ಇಂತಹ ಘೋರ ಕೃತ್ಯಗಳಿಗೆ ಬೇಗ ನ್ಯಾಯ ಸಿಗುವುದಿಲ್ಲ, ಅಪರಾಧಿಗಳಿಗೆ ಕಠಿಣ ಶಿಕ್ಷೆಯಾಗುವುದಿಲ್ಲ. ಹಾಗಾಗಿ ಅನ್ಯಾಯಕ್ಕೊಳಗಾದ ಪ್ರತಿಯೊಬ್ಬ ಹೆಣ್ಣುಮಗಳ ಬಗ್ಗೆ ತಾನು ವಿಷಾದ ವ್ಯಕ್ತಪಡಿಸುತ್ತೇನೆ. ಕ್ಷಮಿಸಿ ಎಂದು ಅವರು ಬರೆದಿದ್ದಾರೆ

ಇದನ್ನೂ ಓದಿ:ಲೈಂಗಿಕ ಕಿರುಕುಳ ನೀಡಿದವನನ್ನು ನಡು ರಸ್ತೆಯಲ್ಲಿ ಥಳಿಸಿದ ಅಕ್ಕತಂಗಿ; ವಿಡಿಯೊ ವೈರಲ್

ಆಗಸ್ಟ್ 9ರಂದು ಕೋಲ್ಕತಾದ ಆರ್‌ ಜಿ ಕರ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಸೆಮಿನಾರ್ ಹಾಲ್‍ನಲ್ಲಿ ಸ್ನಾತಕೋತ್ತರ ತರಬೇತಿ ವೈದ್ಯೆಯೊಬ್ಬರು ಶವವಾಗಿ ಪತ್ತೆಯಾಗಿದ್ದರು. ಸಂತ್ರಸ್ತೆಯ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಲಾಗಿದೆ ಎಂದು ಕುಟುಂಬ ಆರೋಪಿಸಿದೆ. ಸ್ನಾತಕೋತ್ತರ ತರಬೇತಿ (ಪಿಜಿಟಿ) ವೈದ್ಯೆಯ ಕೊಲೆ ಮತ್ತು ಲೈಂಗಿಕ ದೌರ್ಜನ್ಯದ ವಿರುದ್ಧ ದೇಶಾದ್ಯಂತ ವೈದ್ಯರು ಪ್ರತಿಭಟನೆ ಮುಂದುವರಿಸಿದ್ದು, ಸಂತ್ರಸ್ತೆಗೆ ನ್ಯಾಯಕ್ಕಾಗಿ ಒತ್ತಾಯಿಸಿದ್ದಾರೆ.

Continue Reading

ಪ್ರಮುಖ ಸುದ್ದಿ

ISRO Mission : ಭೂ ಪರಿವೀಕ್ಷಣಾ ಉಪಗ್ರಹವನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದ ಇಸ್ರೋ

ISRO Mission : ಉಡಾವಣೆ ಭಾರತೀಯ ಕಾಲಮಾನ 09:17 ಕ್ಕೆ ಆರಂಭಗೊಂಡಿತು. ಉಡಾವಣೆಯಾದ ಸುಮಾರು 17 ನಿಮಿಷಗಳ ನಂತರ, ಇಒಎಸ್ -08 ಉಪಗ್ರಹವನ್ನು ಎಸ್ಆರ್ -0 ಡೆಮೊಸ್ಯಾಟ್ ಜೊತೆಗೆ 475 ಕಿ.ಮೀ ವೃತ್ತಾಕಾರದ ಕಕ್ಷೆಯಲ್ಲಿ ಯಶಸ್ವಿಯಾಗಿ ಇರಿಸಲಾಯಿತು. ಉಪಗ್ರಹವು 175.5 ಕೆ.ಜಿ ತೂಕವನ್ನು ಹೊಂದಿದೆ. ಇದರಲ್ಲಿ ಹೊಸ ತಾಂತ್ರಿಕತೆ ಹಾಗೂ ಪೇಲೋಡ್​ಗಳಿವೆ.

VISTARANEWS.COM


on

ISRO Mission
Koo

ಬೆಂಗಳೂರು: ಭೂಪರಿವೀಕ್ಷಣಾ ಉಪಗ್ರಹಗಳನ್ನು (EOS-08) ಭಾರತೀಯ ಬಾಹ್ಯಾಕಾಶ ಸಂಸ್ಥೆ (ISRO Mission) ಶುಕ್ರವಾರ ಯಶಸ್ವಿಯಾಗಿ ಭೂ ಕಕ್ಷೆಯಲ್ಲಿ ಸ್ಥಾಪಿಸಿದೆ. ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಸಣ್ಣ ಉಪಗ್ರಹ ಉಡಾವಣಾ ವಾಹನ (ಎಸ್ಎಸ್ಎಲ್​ವಿ-ಡಿ 3) ಈ ಉಪಗ್ರಹಗಳನ್ನು ಹೊತ್ತೊಯ್ದಿತು. ಚೆನ್ನೈನಿಂದ ಪೂರ್ವಕ್ಕೆ 135 ಕಿ.ಮೀ ದೂರದಲ್ಲಿರುವ ಬಾಹ್ಯಾಕಾಶ ಕೇಂದ್ರದ ಮೊದಲ ಉಡಾವಣಾ ಪ್ಯಾಡ್​ನಿಂದ ಬೆಳಿಗ್ಗೆ 9.17 ಕ್ಕೆ ಉಪಗ್ರಹಗಳನ್ನು ಹೊತ್ತಿದ್ದ ಎಸ್​​ಎಸ್​ಎಲ್​​ವಿ ಹಾರಾಟ ಆರಂಭಿಸಿತು.

ಮೈಕ್ರೋಸ್ಯಾಟ್​ಲೈಟ್​ ವಿನ್ಯಾಸಗೊಳಿಸುವುದು ಮತ್ತು ಅಭಿವೃದ್ಧಿಪಡಿಸುವುದು ಮತ್ತು ಮೈಕ್ರೋಸ್ಯಾಟ್​ಲೈಟ್​ ಬಸ್​ಗೆ ಹೊಂದಿಕೆಯಾಗುವ ಪೇಲೋಡ್ ಉಪಕರಣಗಳನ್ನು ರಚಿಸುವುದು ಎಸ್ಎಸ್ಎಸ್​ವಿ -ಡಿ3 ಮತ್ತು ಇಒಎಸ್ -08 ಯೋಜನೆಯ ಉದ್ದೇಶ ಎಂದು ಬೆಂಗಳೂರಿನಲ್ಲಿ ಪ್ರಧಾನ ಕಚೇರಿ ಹೊಂದಿರುವ ರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆ (ISRO) ತಿಳಿಸಿದೆ. ಎಸ್ಎಸ್ಎಲ್​​ವಿ -ಡಿ3 ಮಿಷನ್ ಮೊದಲಿಗೆ ಆಗಸ್ಟ್ 15 ರಂದು ನಿಗದಿಯಾಗಿತ್ತು. ಬಳಿಕ ಒಂದು ದಿನ ಮುಂದೂಡಲ್ಪಟ್ಟು 16ರಂದು ಉಡಾವಣೆಗೊಂಡಿತು. ಇದು ಬಾಹ್ಯಾಕಾಶಕ್ಕೆ ಕಡಿಮೆ ವೆಚ್ಚದಲ್ಲಿ ಯಾನ ಮಾಡುವ ಇಸ್ರೋದ ಪ್ರಯತ್ನಗಳಲ್ಲಿ ಮಹತ್ವದ ಹೆಜ್ಜೆಯಾಗಿದೆ.

ಉಡಾವಣೆ ಭಾರತೀಯ ಕಾಲಮಾನ 09:17 ಕ್ಕೆ ಆರಂಭಗೊಂಡಿತು. ಉಡಾವಣೆಯಾದ ಸುಮಾರು 17 ನಿಮಿಷಗಳ ನಂತರ, ಇಒಎಸ್ -08 ಉಪಗ್ರಹವನ್ನು ಎಸ್ಆರ್ -0 ಡೆಮೊಸ್ಯಾಟ್ ಜೊತೆಗೆ 475 ಕಿ.ಮೀ ವೃತ್ತಾಕಾರದ ಕಕ್ಷೆಯಲ್ಲಿ ಯಶಸ್ವಿಯಾಗಿ ಇರಿಸಲಾಯಿತು. ಉಪಗ್ರಹವು 175.5 ಕೆ.ಜಿ ತೂಕವನ್ನು ಹೊಂದಿದೆ. ಇದರಲ್ಲಿ ಹೊಸ ತಾಂತ್ರಿಕತೆ ಹಾಗೂ ಪೇಲೋಡ್​ಗಳಿವೆ.

ಇದನ್ನೂ ಓದಿ:Rahul Gandhi : ಕೆಂಪುಕೋಟೆಯಲ್ಲಿ ರಾಹುಲ್ ಗಾಂಧಿಗೆ ಲಾಸ್ಟ್​ ಬೆಂಚ್​; ಬಿಜೆಪಿ- ಕಾಂಗ್ರೆಸ್​ ಜಟಾಪಟಿ

ಕಾರ್ಯವೇನು?

ಉಪಗ್ರಹ ಆಧಾರಿತ ಕಣ್ಗಾವಲು, ವಿಪತ್ತು ಮೇಲ್ವಿಚಾರಣೆ, ಪರಿಸರದ ಮೇಲ್ವಿಚಾರಣೆ, ಬೆಂಕಿ ಪತ್ತೆ, ಜ್ವಾಲಾಮುಖಿ ಚಟುವಟಿಕೆ ವೀಕ್ಷಣೆ ಮತ್ತು ಕೈಗಾರಿಕಾ ಮತ್ತು ವಿದ್ಯುತ್ ಸ್ಥಾವರಗಳ ವಿಪತ್ತು ಮೇಲ್ವಿಚಾರಣೆಗೆ ಈ ಉಪಗ್ರಹ ಬಳಕೆಯಾಗಲಿದೆ. ಹಗಲು ಮತ್ತು ರಾತ್ರಿ ಮಿಡ್-ವೇವ್ ಐಆರ್ (ಎಂಐಆರ್) ಮತ್ತು ಲಾಂಗ್-ವೇವ್ ಐಆರ್ (ಎಲ್ಡಬ್ಲ್ಯುಐಆರ್) ಬ್ಯಾಂಡ್​ಗಳಲ್ಲಿ ಚಿತ್ರಗಳನ್ನು ಸೆರೆಹಿಡಿಯಲು ಇಒಐಆರ್ ಪೇಲೋಡ್ ಇದು ಹೊಂದಿದೆ

ಸಾಗರ ಮೇಲ್ಮೈ ಗಾಳಿ ವಿಶ್ಲೇಷಣೆ, ಮಣ್ಣಿನ ತೇವಾಂಶ ಮೌಲ್ಯಮಾಪನ, ಹಿಮಾಲಯ ಪ್ರದೇಶದ ಕ್ರಯೋಸ್ಪಿಯರ್ ಅಧ್ಯಯನಗಳು, ಪ್ರವಾಹ ಪತ್ತೆ ಮತ್ತು ಒಳನಾಡಿನ ಜಲಮೂಲದ ಪತ್ತೆಯಂತಹ ಕಾರ್ಯವನ್ನೂ ಇದು ಮಾಡಬಲ್ಲುದು.

ಎಸ್ಎಸ್ಎಲ್​ವಿ ಸಾಧನೆ

ಎಸ್ಎಸ್ಎಲ್​ವಿ ಡಿ 3 ಮಿಷನ್ ಉಪಗ್ರಹ ಮೇನ್​​ಫ್ರೇಮ್​ ವ್ಯವಸ್ಥೆಗಳಲ್ಲಿ ಗಮನಾರ್ಹ ಪ್ರಗತಿಯನ್ನು ಎತ್ತಿ ತೋರಿಸುತ್ತದೆ. ಇದರಲ್ಲಿ ಇಂಟಿಗ್ರೇಟೆಡ್ ಏವಿಯಾನಿಕ್ಸ್ ಸಿಸ್ಟಮ್ ಕೂಡ ಸೇರಿದೆ. ಇದು ಅನೇಕ ಕಾರ್ಯಗಳನ್ನು ಒಂದೇ ಘಟಕದ ಮೂಲಕ ನಿಯಂತ್ರಿಸುತ್ತದೆ. 400 ಜಿಬಿ ಡೇಟಾ ಸಂಗ್ರಹಣೆ ಸಾಮರ್ಥ್ಯವೂ ಇದೆ. ಈ ಮಿಷನ್ ಸಣ್ಣ ಉಪಗ್ರಹ ಉಡಾವಣೆಗಳಿಗೆ ಹೆಚ್ಚುತ್ತಿರುವ ಬೇಡಿಕೆಗೆ ಹೊಂದಿಕೊಳ್ಳುವ ಇಸ್ರೋದ ಸಾಮರ್ಥ್ಯವನ್ನು ಪ್ರದರ್ಶಿಸಿದೆ.

ಈ ಉಡಾವಣೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸುವುದರೊಂದಿಗೆ ಇಸ್ರೋ ಜಾಗತಿಕ ಬಾಹ್ಯಾಕಾಶ ಮಾರುಕಟ್ಟೆಯಲ್ಲಿ ತನ್ನ ಸಾಮರ್ಥ್ಯಗಳನ್ನು ವಿಸ್ತರಿಸಿದೆ. ಮಿನಿ, ಮ್ರೈಕ್ರೊ ಮತ್ತು ನ್ಯಾನೊ ಉಪಗ್ರಹಗಳನ್ನು ಉಡಾವಣೆ ಮಾಡಲು ಸಜ್ಜಾಗಿದೆ. ಇಒಎಸ್ -08 ಮಿಷನ್ ಭಾರತದ ಬಾಹ್ಯಾಕಾಶ ಸಾಮರ್ಥ್ಯವನ್ನು ಹೆಚ್ಚಿಸುವುದಲ್ಲದೆ ಅಂತರರಾಷ್ಟ್ರೀಯ ಬಾಹ್ಯಾಕಾಶ ಸಮುದಾಯದಲ್ಲಿ ಅದರ ಸ್ಥಾನ ಬಲಪಡಿಸುತ್ತದೆ.

Continue Reading

ಪ್ರಮುಖ ಸುದ್ದಿ

Physical Assault : 11 ವರ್ಷದ ಶಾಲಾ ಬಾಲಕಿ ಮೇಲೆ ಶಿಕ್ಷಕನಿಂದ ಲೈಂಗಿಕ ದೌರ್ಜನ್ಯ

Physical Assault : ಪ್ರಾಂಶುಪಾಲರು ಆಕೆಯ ಪೋಷಕರಿಗೆ ಮಾಹಿತಿ ನೀಡಿದ್ದು ಅವರು ಪೊಲೀಸರನ್ನು ಸಂಪರ್ಕಿಸಿ ದೂರು ದಾಖಲಿಸಿದ್ದಾರೆ. ಬಾಲಕಿಯ ಹೇಳಿಕೆಯ ಆಧಾರದ ಮೇಲೆ, ಶಿಕ್ಷಕನ ವಿರುದ್ಧ ಕಠಿಣ ಪೋಕ್ಸೊ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ) ಕಾಯ್ದೆಯಡಿ ಪೊಲೀಸ್ ಪ್ರಕರಣ ದಾಖಲಿಸಲಾಗಿದೆ.

VISTARANEWS.COM


on

Physical Assault
Koo

ಮುಂಬೈ: 11 ವರ್ಷದ ಬಾಲಕಿಯ ಮೇಲೆ ಶಾಲಾ ಶಿಕ್ಷಕನೊಬ್ಬ ಲೈಂಗಿಕ ದೌರ್ಜನ್ಯ ಎಸಗಿದ ಘಟನೆ (Physical Assault) ಮುಂಬೈನ ಕಾಂದಿವಲಿಯಲ್ಲಿ ನಡೆದಿದೆ. 7 ನೇ ತರಗತಿಯ ವಿದ್ಯಾರ್ಥಿ ಬುಧವಾರ ಈ ಬಗ್ಗೆ ಶಾಲಾ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾನೆ. ಶಿಕ್ಷಕ ತನ್ನ ತರಗತಿಯ ನಂತರ ತನ್ನನ್ನು ಕರೆದು ಅನುಚಿತವಾಗಿ ಸ್ಪರ್ಶಿಸಿದ್ದಾರೆ ಎಂದು ಅವಳು ತನ್ನ ಪ್ರಾಂಶುಪಾಲರಿಗೆ ತಿಳಿಸಿದ್ದಾಳೆ. ಜುಲೈನಲ್ಲಿ ಈ ಘಟನೆ ನಡೆದಿದ್ದು ಇದೀಗ ಪ್ರಕರಣದ ದಾಖಲಾಗಿದೆ.

ಪ್ರಾಂಶುಪಾಲರು ಆಕೆಯ ಪೋಷಕರಿಗೆ ಮಾಹಿತಿ ನೀಡಿದ್ದು ಅವರು ಪೊಲೀಸರನ್ನು ಸಂಪರ್ಕಿಸಿ ದೂರು ದಾಖಲಿಸಿದ್ದಾರೆ. ಬಾಲಕಿಯ ಹೇಳಿಕೆಯ ಆಧಾರದ ಮೇಲೆ, ಶಿಕ್ಷಕನ ವಿರುದ್ಧ ಕಠಿಣ ಪೋಕ್ಸೊ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ) ಕಾಯ್ದೆಯಡಿ ಪೊಲೀಸ್ ಪ್ರಕರಣ ದಾಖಲಿಸಲಾಗಿದೆ.

ಬಾಲಕಿಯ ಹೇಳಿಕೆಯನ್ನು ದಾಖಲಿಸಲು ಶಿಕ್ಷಕರನ್ನು ಕರೆಸಲಾಗಿದೆ. ಪೊಲೀಸರು ಪುರಾವೆಗಳಿಗಾಗಿ ಸಿಸಿಟಿವಿ ದೃಶ್ಯಾವಳಿಗಳನ್ನು ಸಹ ತನಿಖೆ ಮಾಡುತ್ತಿದ್ದಾರೆ. ಕೋಲ್ಕೊತಾದ ಸರ್ಕಾರಿ ಆಸ್ಪತ್ರೆಯಲ್ಲಿ ಕರ್ತವ್ಯದಲ್ಲಿದ್ದ ವೈದ್ಯೆಯ ಅತ್ಯಾಚಾರ ಮತ್ತು ಕೊಲೆಯಿಂದ ಘಟನೆ ಬಳಿಕ ಬಾಲಕಿಯರು ಮತ್ತು ಮಹಿಳೆಯರ ಸುರಕ್ಷತೆಯ ಬಗ್ಗೆ ಭಾರಿ ಕಳವಳ ವ್ಯಕ್ತಗೊಂಡಿದ್ದು ಮಧ್ಯೆ ಈ ಘಟನೆ ವರದಿಯಾಗಿದೆ.

ಇದನ್ನೂ ಓದಿ: Shocking Incident : ಮಹಿಳೆಯನ್ನು ನಗ್ನಗೊಳಿಸಿ ಶಸ್ತ್ರ ಚಿಕಿತ್ಸೆ ನಡೆಸಿದ ವಾರ್ಡ್​ ಬಾಯ್​! ವಿಡಿಯೊ ವೈರಲ್​

ದೇಶಾದ್ಯಂತದ ಮಹಿಳೆಯರು ಶಾಲೆಗಳು, ಕೆಲಸದ ಸ್ಥಳಗಳು ಮತ್ತು ಬೀದಿಗಳಲ್ಲಿ ತಮಗೆ ಸುರಕ್ಷಿತ ಪರಿಸರವನ್ನು ಬಯಸುತ್ತಿದ್ದಾರೆ ಎಂಬುದೇ ಚರ್ಚೆಯ ವಿಚಾರವಾಗಿದೆ. 2022 ರಲ್ಲಿ 63,414 ಪೋಕ್ಸೊ ಪ್ರಕರಣಗಳು ದಾಖಲಾಗಿವೆ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ಪ್ರಕಟಿಸಿದ ಇತ್ತೀಚಿನ ಅಪರಾಧ ಅಂಕಿ ಅಂಶಗಳು ತಿಳಿಸಿವೆ.

Continue Reading
Advertisement
Pav Bhaji
Latest2 mins ago

Pav Bhaji: ಪಾವ್ ಭಾಜಿ ಮನೆಯಲ್ಲೇ ಮಾಡುವುದು ಹೇಗೆ? ಇಲ್ಲಿದೆ ಸರಳ ವಿಧಾನ

Doctors protest
ಕರ್ನಾಟಕ11 mins ago

Doctors Protest: ನಾಳಿನ ಪ್ರತಿಭಟನೆಗೆ ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ ಬೆಂಬಲ; ಆಸ್ಪತ್ರೆಗಳಲ್ಲಿ ವೈದ್ಯಕೀಯ ಸೇವೆ ಬಂದ್

Medicine
ಆರೋಗ್ಯ17 mins ago

Red Line on Medicine Strip: ಔಷಧ ಪ್ಯಾಕೇಟ್‌ ಮೇಲೆ ಕೆಂಪು ಗೆರೆ ಏಕಿರುತ್ತದೆ ಅನ್ನೋದು ಗೊತ್ತಾ?

Vijay Surya drusti bottu serial will start
ಕಿರುತೆರೆ26 mins ago

Vijay Surya: `ದೃಷ್ಟಿಬೊಟ್ಟು’ ಧಾರಾವಾಹಿ ಮೂಲಕ ಖಡಕ್‌ ಎಂಟ್ರಿ ಕೊಟ್ಟ ವಿಜಯ್ ಸೂರ್ಯ!

Visa Free Countries
ಪ್ರವಾಸ29 mins ago

Visa Free Countries: ಪ್ರವಾಸಿ ತಾಣಗಳಿಗೆ ಹೆಸರಾದ ಈ 10 ದೇಶಗಳಿಗೆ ಹೋಗಲು ವೀಸಾ ಬೇಕಿಲ್ಲ!

Indian Economy
ಪ್ರಮುಖ ಸುದ್ದಿ1 hour ago

Indian Economy : 2027ರ ವೇಳೆಗೆ ಭಾರತ 3ನೇ ಅತಿದೊಡ್ಡ ಆರ್ಥಿಕತೆಯಾಗಲಿದೆ: ಐಎಂಎಫ್​ನ ಗೀತಾ ಗೋಪಿನಾಥ್

Kolkata Doctor Murder Case
Latest1 hour ago

Kolkata Doctor Murder Case: ಕೋಲ್ಕತ್ತಾ ವೈದ್ಯೆಯ ಅತ್ಯಾಚಾರಿಗೆ ಮರಣದಂಡನೆ ವಿಧಿಸುವಂತೆ ಬಾಲಿವುಡ್ ತಾರೆಯರ ಆಗ್ರಹ

Shiva Rajkumar 131st film set on Varamahalakshmi festival
ಸ್ಯಾಂಡಲ್ ವುಡ್1 hour ago

Shiva Rajkumar: ವರಮಹಾಲಕ್ಷ್ಮಿ ಹಬ್ಬದ ದಿನದಂದೇ ಸೆಟ್ಟೇರಿತು ಶಿವರಾಜ್ ಕುಮಾರ್ 131ನೇ ಸಿನಿಮಾ!

Vinesh Phogat
ಪ್ರಮುಖ ಸುದ್ದಿ1 hour ago

Vinesh Phogat : ವಿನೇಶ್​ ಫೈನಲ್ ತಲುಪಿದ್ದೇ ಹೆಮ್ಮೆಯ ವಿಷಯ; ಫೋಗಟ್ ಸಾಧನೆಯನ್ನು ಕೊಂಡಾಡಿದ ಮೋದಿ

Donald Trump
ಪ್ರಮುಖ ಸುದ್ದಿ2 hours ago

Donald Trump : ಡೊನಾಲ್ಡ್​ ಟ್ರಂಪ್​, ಎಲಾನ್​ ಮಸ್ಕ್​ ಮಸ್ತ್​ ಡಾನ್ಸ್​; ಇದು ಕೃತಕ ಬುದ್ದಿಮತ್ತೆಯ ಕರಾಮತ್ತು!

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ9 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka Weather Forecast
ಮಳೆ1 week ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ1 week ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ1 week ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು1 week ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ1 week ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 weeks ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ2 weeks ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ2 weeks ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ2 weeks ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ2 weeks ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

ಟ್ರೆಂಡಿಂಗ್‌