IPL 2023: 'ಸಿಹಿ ಮಾವಿನ ಹಣ್ಣಿಗೆ' ಟಾಂಗ್​ ಕೊಟ್ಟ ವಿರಾಟ್​ ಕೊಹ್ಲಿ - Vistara News

ಕ್ರಿಕೆಟ್

IPL 2023: ‘ಸಿಹಿ ಮಾವಿನ ಹಣ್ಣಿಗೆ’ ಟಾಂಗ್​ ಕೊಟ್ಟ ವಿರಾಟ್​ ಕೊಹ್ಲಿ

ಮಾವಿನ ಹಣ್ಣುಗಳ ಫೋಟೊವನ್ನು ಹಂಚಿಕೊಳ್ಳುವ ಮೂಲಕ ಕೆಣಕ್ಕಿದ್ದ ನವೀನ್​ ಉಲ್​ ಹಕ್​ಗೆ(naveen ul haq) ಕೊಹ್ಲಿಯೂ ಪರೋಕ್ಷವಾಗಿ ಟಾಂಗ್​ ನೀಡಿದ್ದಾರೆ.

VISTARANEWS.COM


on

virat kohli and naveen ul haq
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮುಂಬಯಿ: ಮುಂಬೈ ಇಂಡಿಯನ್ಸ್​ ವಿರುದ್ಧ ವಿರಾಟ್​ ಕೊಹ್ಲಿ(virat kohli) ಅವರು ಔಟಾದ ಬಳಿಕ ಮಾವಿನ ಹಣ್ಣಿನ ಫೋಟೊ ಹಾಕುವ ಮೂಲಕ ಕೊಹ್ಲಿಯನ್ನು ಪರೋಕ್ಷವಾಗಿ ಲೇವಡಿ ಮಾಡಿದ್ದ, ಲಕ್ನೋ ತಂಡದ ಆಟಗಾರ ನವೀನ್​ ಉಲ್​ ಹಕ್​ಗೆ(naveen ul haq) ಇದೀಗ ಕೊಹ್ಲಿಯೂ ಪರೋಕ್ಷವಾಗಿ ಟಾಂಗ್​ ನೀಡಿದ್ದಾರೆ.

ಮಂಗಳವಾರ ನಡೆದ ಐಪಿಎಲ್​ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ ಅವರು ಬ್ಯಾಟಿಂಗ್​ ವೈಫಲ್ಯ ಕಂಡರು. ನಾಲ್ಕು ಎಸೆತಗಳಲ್ಲಿ ಕೇವಲ ಒಂದು ರನ್‌ ಗಳಿಸಿ ಜೇಸನ್‌ ಬೆಹ್ರನ್‌ಡ್ರಾಫ್‌ ಅವರಿಗೆ ವಿಕೆಟ್‌ ಒಪ್ಪಿಸಿದರು. ಈ ಪಂದ್ಯ ವೀಕ್ಷಿಸುತ್ತಿದ್ದ ನವೀನ್ ಉಲ್‌ ಹಕ್ ಅವರು ಮಾವಿನ ಹಣ್ಣುಗಳ ಫೋಟೊವನ್ನು ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಳ್ಳುವ ಮೂಲಕ ‘ಮಾವಿನ ಹಣ್ಣುಗಳು ಬಹಳ ಸಿಹಿಯಾಗಿವೆ’ ಎಂದು ಬರೆದು ಕೊಹ್ಲಿಯನ್ನು ಪರೋಕ್ಷವಾಗಿ ಕೆಣಕ್ಕಿದ್ದರು.

ಇದನ್ನೂ ಓದಿ IPL 2023: ಡೆಲ್ಲಿ ವಿರುದ್ಧ ಸ್ಪರ್ಧಾತ್ಮಕ ಮೊತ್ತ ದಾಖಲಿಸಿದ ಚೆನ್ನೈ ಸೂಪರ್​ ಕಿಂಗ್ಸ್​

ಇದೀಗ ನವೀನ್​ ಉಲ್​ ಹಕ್​ ಅವರ ಪೋಸ್ಟ್​ಗೆ ಕಿಂಗ್​ ವಿರಾಟ್​ ಕೊಹ್ಲಿಯೂ ತಿರುಗೇಟು ನೀಡಿದ್ದಾರೆ. ಕೊಹ್ಲಿ ಅವರು ಕುರ್ಚಿಯೊಂದರಲ್ಲಿ ಕುಳಿತುಕೊಂಡಿರುವ ಫೋಟೊವನ್ನು ಪೋಸ್ಟ್​ ಮಾಡುವ ಮೂಲಕ “ನೀನು ನನಗೆ ಸ್ಪರ್ಧಿಯೇ ಅಲ್ಲ” ಎಂಬ ಅರ್ಥದಲ್ಲಿ ಪಂಚ್​ ನೀಡಿದ್ದಾರೆ. ವಿರಾಟ್​ ಕೊಹ್ಲಿಯ ಪೋಸ್ಟ್​ನಲ್ಲಿ “ಸ್ಪರ್ಧೆ ಎನ್ನುವುದು ನಿನ್ನ ತಲೆಯಲ್ಲಿ ಇದೆ ಅಷ್ಟೆ. ಆದರೆ ವಾಸ್ತವದಲ್ಲಿ ನನ್ನ ಪ್ರತಿಸ್ಪರ್ಧಿ ನಾನೇ” ಎಂದು ಬರೆದುಕೊಂಡಿದ್ದಾರೆ.

ಉಭಯ ಆಟಗಾರರ ಶಿತಲ ಸಮರಕ್ಕೆ ಕಾರಣ ಏನು?

ಮೇ 1 ರಂದು ನಡೆದ ಆರ್​ಸಿಬಿ ಮತ್ತು ಲಕ್ನೋ ವಿರುದ್ಧದ ಪಂದ್ಯದಲ್ಲಿ ನವೀನ್​ ಉಲ್​ ಹಕ್​ ಬ್ಯಾಟಿಂಗ್​ ನಡೆಸುತ್ತಿದ್ದಾಗ ಸಿರಾಜ್​ ಜತೆ ಕಿರಿಕ್​ ಮಾಡಿದ್ದರು. ಈ ವೇಳೆ ವಿರಾಟ್​ ಮಧ್ಯ ಪ್ರವೇಶಿಸಿ ಉಲ್​ ಹಕ್​ಗೆ ಏನೋ ಬೈದಿದ್ದರು. ಅಲ್ಲಿಂದ ಉಭಯ ಆಟಗಾರರ ಮಧ್ಯೆ ಶಿತಲ ಸಮರ ನಡೆಯುತ್ತಲೇ ಇದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

MS Dhoni Birthday: ಧೋನಿಯ ಪಾದ ಮುಟ್ಟಿ ನಮಸ್ಕರಿಸಿದ ಪತ್ನಿ; ವಿಡಿಯೊ ವೈರಲ್​

MS Dhoni Birthday: ಧೋನಿ ಅವರು ಕೇಕ್​ ಕತ್ತರಿಸಿದ ಬಳಿಕ ಪತ್ನಿ ಸಾಕ್ಷಿಗೆ ತಿನ್ನಿಸಿದರು. ಸಾಕ್ಷಿ ಕೂಡ ಒಂದು ತುಂಡು ಕೇಕ್​ ಧೋನಿಗೆ ತಿನ್ನಿಸಿ, ಮುಖಕ್ಕೆ ಹಚ್ಚಿ ಬಳಿಕ ಪಾದ ಮುಟ್ಟಿ ಆಶೀರ್ವಾದ ಪಡೆದರು. ಈ ವಿಡಿಯೊ ವೈರಲ್​ ಆಗಿದೆ.

VISTARANEWS.COM


on

MS Dhoni Birthday
Koo

ಮುಂಬಯಿ: ಇಂದು(ಜುಲೈ 7) 43ನೇ ವಸಂತಕ್ಕೆ ಕಾಲಿಟ್ಟ ಟೀಮ್​ ಇಂಡಿಯಾದ ಮಾಜಿ ಆಟಗಾರ ಮಹೇಂದ್ರ ಸಿಂಗ್​ ಧೋನಿ(MS Dhoni Birthday) ಅವರು ತಮ್ಮ ಹುಟ್ಟುಹಬ್ಬವನ್ನು ಪತ್ನಿ ಜತೆ ಕೇಕ್​ ಕತ್ತರಿಸಿ ಆಚರಿಸಿದ್ದಾರೆ. ಈ ವೇಳೆ ಪತ್ನಿ ಸಾಕ್ಷಿ ಸಿಂಗ್(​ ಧೋನಿ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ವಿಡಿಯೊ ಇದೀಗ ವೈರಲ್​ ಆಗಿದೆ. ಈ ವಿಡಿಯೊವನ್ನು ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿರುವ ಸಾಕ್ಷಿ ಸಿಂಗ್(Sakshi Singh)​, ಹ್ಯಾಪಿ ಬರ್ತ್‌ಡೇ ಟೂ ಯು ಮಾಹಿ ಎಂದು ಬರೆದಿದ್ದಾರೆ.

ಧೋನಿ ಅವರು ಕೇಕ್​ ಕತ್ತರಿಸಿದ ಬಳಿಕ ಪತ್ನಿ ಸಾಕ್ಷಿಗೆ ತಿನ್ನಿಸಿದರು. ಸಾಕ್ಷಿ ಕೂಡ ಒಂದು ತುಂಡು ಕೇಕ್​ ಧೋನಿಗೆ ತಿನ್ನಿಸಿ, ಮುಖಕ್ಕೆ ಹಚ್ಚಿ ಬಳಿಕ ಪಾದ ಮುಟ್ಟಿ ಆಶೀರ್ವಾದ ಪಡೆದರು. ಧೋನಿ ಕೇಕ್​ ಕತ್ತರಿಸುವ ವೇಳೆ ಬಾಲಿವುಡ್​ ನಟ ಸಲ್ಮಾನ್​ ಖಾನ್​ ಕೂಡ ಜತೆಗಿದ್ದರು.

ಜುಲೈ 4 ರಂದು ಧೋನಿ ಮತ್ತು ಸಾಕ್ಷಿ ತಮ್ಮ 15ನೇ ವರ್ಷದ ವಿವಾಹ ವಾರ್ಷಿಕೋತ್ಸವ(ms dhoni wedding anniversary) ಆಚರಿಸಿದ್ದರು. ಧೋನಿ ಕೇಕ್​ ಕತ್ತರಿಸಿ ಪತ್ನಿಗೆ ತಿನ್ನಿಸುವ ಮೂಲಕ ತಮ್ಮ 15ನೇ ವರ್ಷದ ವಿವಾಹ ವಾರ್ಷಿಕೋತ್ಸವನ್ನು ಸಂಭ್ರಮಿಸಿದ್ದರು. 2010ರಲ್ಲಿ ಧೋನಿ ಅವರು ಸಾಕ್ಷಿ ಅವರನ್ನು ಡೆಹರಾಡೂನ್​ನಲ್ಲಿ ​ವಿವಾಹವಾಗಿದ್ದರು.  ಈ ಜೋಡಿಗೆ ಝಿವಾ ಎಂಬ ಮುದ್ದಾಗ ಮಗಳಿದ್ದಾಳೆ.

ಧೋನಿ ಆಗಸ್ಟ್​ 15 2020ರಂದು ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ನಿವೃತ್ತಿ ಹೊಂದಿದ್ದರ. ಸದ್ಯ ಐಪಿಎಲ್​ನಲ್ಲಿ ಮಾತ್ರ ಸಕ್ರಿಯರಾಗಿದ್ದಾರೆ. ಹಿಂದೊಮ್ಮೆ ಧೋನಿ ಅವರು ನನ್ನ ಪತ್ನಿಗೆ ಟ್ರಾವೆಲ್​ ಎಂದರೆ ಬಲು ಇಷ್ಟ. ಕ್ರಿಕೆಟ್​ ನಿವೃತ್ತಿ ಬಳಿಕ ನಾನು ಖಂಡಿತಾ ಹಲವು ದೇಶಕ್ಕೆ ಪ್ರವಾಸ ಮಾಡುವ ಎಲ್ಲ ಯೋಜನೆಗಳನ್ನು ರೂಪಿಸಿದ್ದೇನೆ ಎಂದು ಹೇಳಿದ್ದರು. ಬಿಡುವಿನ ವೇಳೆಯಲ್ಲಿ ಪತ್ನಿ ಮತ್ತು ಮಗಳ ಜತೆ ಧೋನಿ ಆಗಾಗ ವಿದೇಶಕ್ಕೆ ಭೇಟಿ ನೀಡುತ್ತಾ ಪ್ರವಾಸವನ್ನು ಎಂಜಾಯ್​ ಮಾಡುತ್ತಿರುತ್ತಾರೆ.

ಇದನ್ನೂ ಓದಿ MS Dhoni Birthday: 43ನೇ ವಸಂತಕ್ಕೆ ಕಾಲಿಟ್ಟ ಮಹೇಂದ್ರ ಸಿಂಗ್‌ ಧೋನಿ

ಧೋನಿ ಅವರು ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ದೂರ ಉಳಿದಿದ್ದರೂ ಅವರ ಮೇಲಿನ ಕ್ರೇಜ್ ಮಾತ್ರ ಕಿಂಚಿತ್ತು ಕಡಿಮೆಯಾಗಿಲ್ಲ. ಅವರು ಕ್ರಿಕೆಟ್​ ಆಡಬೇಕೆಂಬುವುದು ಅಭಿಮಾನಿಗಳ ಆಶಯವಾಗಿದೆ. ಇದಕ್ಕೆ ಈ ಬಾರಿಯ ಐಪಿಎಲ್​ ಟೂರ್ನಿಯೇ ಉತ್ತಮ ನಿದರ್ಶನ. ಧೋನಿ ಅವರು ಈ ಬಾರಿಯ ಐಪಿಎಲ್​ ಬಳಿಕ ನಿವೃತ್ತಿ ಘೋಷಿಸುತ್ತಾರೆ ಎನ್ನಲಾಗಿತ್ತು. ಇದೇ ಕಾರಣಕ್ಕೆ ಅವರ ಅಭಿಮಾನಿಗಳು ಚೆನ್ನೈ ಪಂದ್ಯ ಎಲ್ಲೆಲ್ಲಿ ನಡೆಯುತ್ತದೋ ಅಲ್ಲೆಲ್ಲ ಹೋಗಿ ಧೋನಿ ಆಟವನ್ನು ಕಣ್ತುಂಬಿಕೊಂಡಿದ್ದಾರೆ. ಜತೆಗೆ ಧೋನಿ ಅವರು ಮೈದಾನಕ್ಕೆ ಬರುವ ವೇಳೆ ಮೊಬೈಲ್​ ಪ್ಲ್ಯಾಶ್​ ಲೈಟ್​ಗಳನ್ನು ಹಾಕಿ ವಿಶೇಷ ಗೌರವ ಸೂಚಿಸುತ್ತಿದ್ದರು.

Continue Reading

ಕ್ರೀಡೆ

Gautam Gambhir: ಕೆಕೆಆರ್ ತಂಡದ ಮೆಂಟರ್​ ಸ್ಥಾನಕ್ಕೆ ಗಂಭೀರ್​ ರಾಜೀನಾಮೆ?; ಕೋಚ್​ ಆಗುವುದು ಖಚಿತ

Gautam Gambhir: ಗೌತಮ್ ಗಂಭೀರ್ ಶ್ರೀಲಂಕಾ ಸರಣಿಯ ವೇಳೆ ಭಾರತ ತಂಡದ ಕೋಚ್ ಸ್ಥಾನವನ್ನು ಅಲಂಕರಿಸಲಿದ್ದಾರೆ ಎನ್ನಲಾಗಿದೆ. ರಾಹುಲ್ ದ್ರಾವಿಡ್ ಕೋಚ್ ಸ್ಥಾನದಿಂದ ಈಗಾಗಲೇ ನಿರ್ಗಮಿಸಿದ್ದಾರೆ.

VISTARANEWS.COM


on

Gautam Gambhir
Koo

ಕೋಲ್ಕತ್ತಾ: ಗೌತಮ್​ ಗಂಭೀರ್(Gautam Gambhir)​ ಅವರು ಟೀಮ್ ಇಂಡಿಯಾದ ಕೋಚ್(Team India Coach)​ ಆಗುವುದು ಬಹುತೇಕ ಖಚಿತ. ಕೆಕೆಆರ್(KKR)​ ತಂಡದ ಮೆಂಟರ್​ ಆಗಿದ್ದ ಅವರು ಇದೀಗ ಈ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ. ಹೀಗಾಗಿ ಗಂಭೀರ್​ ಶೀಘ್ರದಲ್ಲೇ ಕೋಚ್ ಆಗುವುದು ನಿಶ್ಚಿತ. ಕೆಕೆಆರ್​ ಫ್ರಾಂಚೈಸಿ ಮುಂದಿನ ಶುಕ್ರವಾರ ಕೋಲ್ಕತಾದಲ್ಲಿ ಗಂಭೀರ್​ಗೆ ಬೀಳ್ಕೊಡುಗೆ ಸಮಾರಂಭ ಏರ್ಪಡಿಸಿದೆ ಎಂದು ಮೂಲಗಳು ತಿಳಿಸಿವೆ.

​ಗೌತಮ್ ಗಂಭೀರ್ ಶ್ರೀಲಂಕಾ ಸರಣಿಯ ವೇಳೆ ಭಾರತ ತಂಡದ ಕೋಚ್ ಸ್ಥಾನವನ್ನು ಅಲಂಕರಿಸಲಿದ್ದಾರೆ ಎನ್ನಲಾಗಿದೆ. ರಾಹುಲ್ ದ್ರಾವಿಡ್ ಕೋಚ್ ಸ್ಥಾನದಿಂದ ಈಗಾಗಲೇ ನಿರ್ಗಮಿಸಿದ್ದಾರೆ. ದ್ರಾವಿಡ್ ಅವರಿಂದ ತೆರವಾದ ಸ್ಥಾನವನ್ನು ಗಂಭೀರ್ ಭರ್ತಿ ಮಾಡಲಿದ್ದಾರೆ. ಬಿಸಿಸಿಐ ಅಧಿಕೃತ ಘೋಷಣೆ ಮಾಡುವುದೊಂದೆ ಬಾಕಿ. . ಶ್ರೀಲಂಕಾ ವಿರುದ್ಧದ ಸರಣಿ ಜುಲೈ 27ರಿಂದ ಆರಂಭಗೊಳ್ಳಲಿದೆ.

ನೂತನ ಕೋಚ್​ ಆಗಿ ಆಯ್ಕೆಯಾದವರ ಕಾರ್ಯಾವಧಿ 2027ರ ಡಿಸೆಂಬರ್ 31ಕ್ಕೆ ಮುಕ್ತಾಯಗೊಳ್ಳುತ್ತದೆ. 2027ರಲ್ಲಿ ನಡೆಯುವ ಏಕದಿನ ವಿಶ್ವಕಪ್​ ಟೂರ್ನಿಯೂ ಈ ಕೋಚ್​ಗೆ ಸಿಗಲಿದೆ. ಆಯ್ಕೆಯಾದ ಹೊಸ ಕೋಚ್‌ ಟಿ20 ವಿಶ್ವಕಪ್‌ ಟೂರ್ನಿಯ ನಂತರ ತಕ್ಷಣವೇ ತಂಡದ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ. ಕೆಳವು ದಿನಗಳ ಹಿಂದೆ ಗಂಭೀರ್​ ಜತೆ ವಿ. ರಾಮನ್‌(WV Raman) ಕೂಡ ಕೋಚ್​ ರೇಸ್​ನಲ್ಲಿದ್ದಾರೆ ಎನ್ನಲಾಗಿತ್ತು. ಆದರೆ ಕೊನೆಗೂ ಬಿಸಿಸಿಐ ಗಂಭೀರ್​ಗೆ ಮಣೆ ಹಾಕಿದಂತಿದೆ.

ದಕ್ಷಿಣ ಆಫ್ರಿಕಾದ ಈ ಮಾಜಿ ಆಟಗಾರ, ಕ್ರಿಕೆಟ್​ ಕಂಡ ಬೆಸ್ಟ್​ ಫೀಲ್ಡರ್​ ಜಾಂಟಿ ರೋಡ್ಸ್(Jonty Rhodes) ಅವರು ಭಾರತ ತಂಡದ ಫೀಲ್ಡಿಂಗ್​ ಕೋಚ್​(Jonty Rhodes ia’s New Fielding Coach) ಆಗಲಿದ್ದಾರೆ ಎಂದು ತಿಳಿದುಬಂದಿದೆ. ತಂಡದ ಇತರ ಕೋಚ್​ಗಳ ಆಯ್ಕೆಯಲ್ಲಿ ತನ್ನ ವ್ಯಕ್ತಿಗಳನ್ನು ನೇಮಿಸಿಕೊಳ್ಳುವ ಅವಕಾಶ ನೀಡಬೇಕೆಂದು ಗಂಭೀರ್​ ಅವರು ಬಿಸಿಸಿಐಗೆ ಬೇಡಿಕೆ ಇಟ್ಟಿದ್ದು ಈ ಬೇಡಿಕೆಯನ್ನು ಬಿಸಿಸಿಐ ಒಪ್ಪಿಕೊಂಡಿದೆ ಎನ್ನಲಾಗಿದೆ.

ಇದನ್ನೂ ಓದಿ Gautam Gambhir : ಕೊಹ್ಲಿಯನ್ನು ತಂಡದಿಂದ ಹೊರಗಿಡಿ; ಕೋಚ್​ ಆಗಲು ಗಂಭೀರ್​ ಒಡ್ಡಿದ್ದ ಷರತ್ತು ಒಪ್ಪಿದ ಬಿಸಿಸಿಐ

ಈ ಬಾರಿಯ ಐಪಿಎಲ್​ನಲ್ಲಿ ಕೆಕೆಆರ್‌ ತಂಡಕ್ಕೆ ಯಶಸ್ವಿ ಮಾರ್ಗದರ್ಶನ ನೀಡಿ ತಂಡವನ್ನು ಚಾಂಪಿಯನ್​ ಮಾಡಿದ ಗಂಭೀರ್‌, ರಾಹುಲ್‌ ದ್ರಾವಿಡ್‌ ಅವರ ಸ್ಥಾನ ತುಂಬಲು ಅರ್ಹರು ಎಂದು ಬಿಸಿಸಿಐ ಭಾವಿಸಿದೆ ಎಂದು ಮೂಲಗಳು ತಿಳಿಸಿವೆ.  ಮೂಲಗಳ ಪ್ರಕಾರ ಗಂಭೀರ್​ ಕೋಚ್​ ಆಗುವ ದೃಷ್ಟಿಯಿಂದಲೇ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿಲ್ಲ ಎನ್ನಲಾಗಿದೆ.

ಗಂಭೀರ್​ ಅವರು ಜಾಂಟಿ ರೋಡ್ಸ್ ಜತೆ ಐಪಿಎಲ್​ನಲ್ಲಿ ಲಕ್ನೋ ತಂಡದ ಪರ ಜತೆಯಾಗಿ 2 ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿದ್ದರು. ಇದೇ ಕಾಂಬಿನೇಷನ್​ನಲ್ಲಿ ಇದೀಗ ಟೀಮ್​ ಇಂಡಿಯಾದಲ್ಲೂ ಕಾಣಿಸಿಕೊಳ್ಳುವ ಸಾಧ್ಯತೆ ಕಂಡುಬಂದಿದೆ. 2019ರಲ್ಲಿಯೂ ಜಾಂಟಿ ರೋಡ್ಸ್ ಅವರು ಭಾರತದ ತಂಡದ ಫೀಲ್ಡಿಂಗ್​ ಕೋಚ್​ ಹುದ್ದೆಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಭಾರತೀಯ ಮೂಲದ ಸಿಬ್ಬಂದಿಗೆ ಬಿಸಿಸಿಐ ಮಣೆ ಹಾಕಿತ್ತು. ಈ ಬಾರಿ ಗಂಭೀರ್​ ಅವರ ಅಭಯಹಸ್ತದಿಂದ ರೋಡ್ಸ್​ಗೆ ಅವಕಾಶ ಸಿಗುವ ಸಾಧ್ಯತೆ ಇದೆ

Continue Reading

ಕ್ರೀಡೆ

IND vs ZIM: ಗೆಲುವಿನ ಹಾದಿಗೆ ಮರಳುವುದೇ ಶುಭಮನ್​ ಗಿಲ್​ ಪಡೆ?; ಇಂದು ದ್ವಿತೀಯ ಟಿ20

IND vs ZIM: ಜಿಂಬಾಬ್ಬೆ ತಂಡದ ಬೌಲಿಂಗ್​ ವಿಭಾಗ ಅತ್ಯಂತ ಘಾತಕವಾಗಿದೆ. ಸ್ಪಿನ್​ ಮತ್ತು ವೇಗಿಗಳು ಉತ್ತಮ ಲಯದಲ್ಲಿದ್ದಾರೆ. ನಾಯಕ ಸಿಕಂದರ್​ ರಾಜಾ ಸ್ಪಿನ್​ ಮೊಡಿಗೆ ಭಾರತೀಯ ಬ್ಯಾಟರ್​ಗಳು ರನ್​ ಗಳಿಸಲು ಪರದಾಡಿದ್ದನ್ನು ಈಗಾಗಲೇ ಕಂಡಿದ್ದೇವೆ. ತೆಂಡೈ ಚತಾರಾ ಕೂಡ ಅಪಾಯಕಾರಿಯಾಗಿದ್ದಾರೆ.

VISTARANEWS.COM


on

IND vs ZIM
Koo

ಹರಾರೆ: ಶನಿವಾರ ನಡೆದಿದ್ದ ಜಿಂಬಾಬ್ವೆ(IND vs ZIM) ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಆಘಾತಕಾರಿ ಸೋಲು ಕಂಡಿದ್ದ ಶುಭಮನ್​ ಸಾರಥ್ಯದ ಯಂಗ್​ ಟೀಮ್​ ಇಂಡಿಯಾ ಇದೀಗ ಮತ್ತೊಂದು ಪಂದ್ಯವನ್ನಾಡಲು ಸಜ್ಜಾಗಿದೆ. ಇಂದು ನಡೆಯುವ ದ್ವಿತೀಯ ಟಿ20 ಪಂದ್ಯದಲ್ಲಿ ಕಣಕ್ಕಿಳಿಯಲಿದೆ. 5 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಕಾಯ್ದುಕೊಂಡಿರುವ ಜಿಂಬಾಬ್ವೆ ಈ ಪಂದ್ಯವನ್ನು ಕೂಡ ಗೆಲ್ಲವ ವಿಶ್ವಾಸದಲ್ಲಿದೆ.

ಮೊದಲ ಪಂದ್ಯಕ್ಕೆ ತಂಡದ ಬ್ಯಾಟಿಂಗ್​ ವೈಫಲ್ಯವೇ ಕಾರಣ ಎಂದು ಈಗಾಗಲೇ ನಾಯಕ ಶುಭಮನ್​ ಗಿಲ್​ ಹೇಳಿದ್ದಾರೆ. ಹೀಗಾಗಿ ಈ ಪಂದ್ಯದಲ್ಲಿ ಭಾರತೀಯ ಬ್ಯಾಟರ್​ಗಳು ಉತ್ತಮವಾಗಿ ಆಡುವ ಅಗತ್ಯವಿದೆ. ಐಪಿಎಲ್​ನಲ್ಲಿ ಸಿಡಿಲಬ್ಬರದ ಬ್ಯಾಟಿಂಗ್​ ನಡೆಸಿದ್ದ ಅಭಿಷೇಕ್​ ಶರ್ಮ ಅವರು ಮೇಲೆ ಮೊದಲ ಪಂದ್ಯದಲ್ಲಿ ಭಾರೀ ನಿರೀಕ್ಷೆ ಇರಿಸಲಾಗಿತ್ತು. ಆದರೆ ಅವರು ಖಾತೆ ತೆರೆಯುವಲ್ಲಿಯೂ ಯಶಸ್ಸು ಕಾಣಲಿಲ್ಲ. ರಿಂಕು ಸಿಂಗ್​, ಋತುರಾಜ್​ ಗಾಯಕ್ವಾಡ್​,​ ಜುರೇಲ್​, ಪರಾಗ್​ ಸಂಪೂರ್ಣ ವೈಫಲ್ಯ ಕಂಡಿದ್ದರು. ಈ ಪಂದ್ಯದಲ್ಲಿ ಹೇಗೆ ಪ್ರದರ್ಶನ ತೋರಲಿದ್ದಾರೆ ಎಂದು ಕಾದು ನೋಡಬೇಕಿದೆ.

ಜಿಂಬಾಬ್ಬೆ ತಂಡದ ಬೌಲಿಂಗ್​ ವಿಭಾಗ ಅತ್ಯಂತ ಘಾತಕವಾಗಿದೆ. ಸ್ಪಿನ್​ ಮತ್ತು ವೇಗಿಗಳು ಉತ್ತಮ ಲಯದಲ್ಲಿದ್ದಾರೆ. ನಾಯಕ ಸಿಕಂದರ್​ ರಾಜಾ ಸ್ಪಿನ್​ ಮೊಡಿಗೆ ಭಾರತೀಯ ಬ್ಯಾಟರ್​ಗಳು ರನ್​ ಗಳಿಸಲು ಪರದಾಡಿದ್ದನ್ನು ಈಗಾಗಲೇ ಕಂಡಿದ್ದೇವೆ. ತೆಂಡೈ ಚತಾರಾ ಕೂಡ ಅಪಾಯಕಾರಿಯಾಗಿದ್ದಾರೆ.

ಭಾರತ ಮತ್ತು ಜಿಂಬಾಬ್ವೆ ಇದುವರೆಗೆ ಒಟ್ಟು 9 ಟಿ20 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಭಾರತ 6 ಪಂದ್ಯ ಗೆದ್ದಿದ್ದರೆ, ಜಿಂಬಾಬ್ವೆ 3 ಪಂದ್ಯ ಗೆದ್ದಿದೆ. ಇದರಲ್ಲೊಂದು ಗೆಲುವು ಈ ಸರಣಿಯದ್ದಾಗಿದೆ.

ಇದನ್ನೂ ಓದಿ ZIM vs IND : ಜಿಂಬಾಬ್ವೆ ವಿರುದ್ಧ 13 ರನ್​ಗಳಿಂದ ಸೋತ ವಿಶ್ವ ವಿಜೇತ ಭಾರತ ತಂಡ

ಬೌಲಿಂಗ್​ಗೆ ಹೆಚ್ಚು ಸಹಕಾರಿಯಾಗಿರುವ ಹರಾರೆ ಸ್ಪೋರ್ಟ್ಸ್ ಕ್ಲಬ್ ಪಿಚ್​ನಲ್ಲಿ ಒಂದು ಕೂಡ ಲೋ ಸ್ಕೋರ್​ ಆಗುವ ನಿರೀಕ್ಷೆ ಇದೆ. ಹೆಚ್ಚಾಗಿ ಸ್ಪಿನ್​ ಬೌಲರ್​ಗಳು ಮೇಲುಗೈ ಸಾಧಿಸುವ ಸಾಧ್ಯತೆ ಅಧಿಕ. ಹೀಗಾಗಿ ಇತ್ತಂಡಗಳು ಸ್ಪಿನ್​​ ಬೌಲಿಂಗ್​ಗೆ ಹೆಚ್ಚಿನ ಒತ್ತು ನೀಡಬಹುದು. ಸೋಲು ಕಂಡರೂ ಕೂಡ ಭಾರತ ಈ ಪಂದ್ಯಕ್ಕೆ ತನ್ನ ಆಡುವ ಬಳಗದಲ್ಲಿ ಬದಲಾವಣೆ ಮಾಡುವುದು ಅನುಮಾನ.

ಮೊದಲ ಪಂದ್ಯದಲ್ಲಿ ಸೋಲು


ನಿನ್ನೆ(ಶನಿವಾರ) ನಡೆದಿದ್ದ ಪಂದ್ಯದಲ್ಲಿ ಟಾಸ್‌ ಗೆದ್ದು ಫೀಲ್ಡಿಂಗ್‌ ಆಯ್ದುಕೊಂಡ ಭಾರತ ಭರ್ಜರಿ ಬೌಲಿಂಗ್‌ ಮಾಡಿ ಜಿಂಬಾಬ್ವೆ ಆಟಗಾರರನ್ನು 115 ರನ್​ಗೆ ಕಟ್ಟಿ ಹಾಕಿತು. ಈ ಮೊತ್ತವನ್ನು ಭಾರತ ಕೇವಲ 10 ಓವರ್​ನಲ್ಲಿ ಹೊಡೆದು ಮುಗಿಸಬಹುದು ಎಂದು ನಿರೀಕ್ಷೆ ಮಾಡಲಾಗಿತ್ತು. ಆದರೆ ಚೇಸಿಂಗ್ ಆರಂಭಿಸಿದಾಗ ನಡೆದಿದ್ದೇ ಬೇರೆ. ಭಾರತೀಯ ಬ್ಯಾಟರ್​ಗಳ ವಿಕೆಟ್​ಗಳು ತರಗೆಲೆಯಂತೆ ಉದುರಿಹೋಯಿತು. 19,5 ಓವರ್​ಗಳಲ್ಲಿ 102 ರನ್​ಗೆ ಸರ್ವ ಪತನ ಕಂಡು ಸೋಲೊಪ್ಪಿಕೊಂಡಿತು.

Continue Reading

ಕ್ರೀಡೆ

MS Dhoni Birthday: ಧೋನಿ ನಾಯಕರಾಗಿದ್ದಾಗ ಬಳಸಿದ ಮಹತ್ವದ ಗೆಲುವಿನ ತಂತ್ರಗಳು ಇಲ್ಲಿವೆ

MS Dhoni Birthday: ಕ್ರಿಕೆಟ್‌ ಮೈದಾನದಲ್ಲಿ ಬ್ಯಾಟಿಂಗ್‌, ವಿಕೆಟ್‌ ಕೀಪಿಂಗ್‌ ಅಥವಾ ನಾಯಕನಾಗೇ ಇರಲಿ ಶಾಂತಚಿತ್ತ ಅವರ ಮುಖ್ಯ ಗುಣ. ಎಂತಹ ಸನ್ನಿವೇಶವಿದ್ದರೂ ಧೋನಿ(MS Dhoni) ತಾಳ್ಮೆ ಕಳೆದುಕೊಳ್ಳುವುದು ವಿರಳ. ಇದಕ್ಕಾಗಿ ಅವರಿಗೆ ಕ್ಯಾಪ್ಟನ್‌ ಕೂಲ್‌’ ಎಂಬ ಹೆಸರು ಕೂಡ ಇದೆ.

VISTARANEWS.COM


on

MS Dhoni Birthday
Koo

ಬೆಂಗಳೂರು ಭಾರತಕ್ಕೆ 2 ವಿಶ್ವಕಪ್(ಟಿ20, ಏಕದಿನ) ಗೆದ್ದ ಕೊಟ್ಟ ನಾಯಕ ಮಹೇಂದ್ರ ಸಿಂಗ್‌ ಧೋನಿಗೆ(MS Dhoni Birthday) 43ನೇ ಜನುಮದಿನದ ಸಂಭ್ರಮ. ಕ್ರಿಕೆಟ್‌ ಮೈದಾನದಲ್ಲಿ ಬ್ಯಾಟಿಂಗ್‌, ವಿಕೆಟ್‌ ಕೀಪಿಂಗ್‌ ಅಥವಾ ನಾಯಕನಾಗೇ ಇರಲಿ ಶಾಂತಚಿತ್ತ ಅವರ ಮುಖ್ಯ ಗುಣ. ಎಂತಹ ಸನ್ನಿವೇಶವಿದ್ದರೂ ಧೋನಿ(MS Dhoni) ತಾಳ್ಮೆ ಕಳೆದುಕೊಳ್ಳುವುದು ವಿರಳ. ಇದಕ್ಕಾಗಿ ಅವರಿಗೆ ಕ್ಯಾಪ್ಟನ್‌ ಕೂಲ್‌’ ಎಂಬ ಹೆಸರು ಕೂಡ ಇದೆ. ಧೋನಿ ಎಂದರೆ ಅಭಿಮಾನಿಗಳಿಗೊಂದು ಎಮೋಷನ್‌. ನಾಯಕನಾಗಿ ಧೋನಿ ತೆಗೆದುಕೊಂಡ ಕೆಲವು ನಿರ್ಧಾರಗಳು ಭಾರತ ತಂಡಕ್ಕೆ ಹೇಗೆ ಹೇಗೆ ನೆರವಾಯಿತು ಎಂಬುದರ ಕುತೂಹಲಕಾರಿ ಸಂಗತಿ ಹೀಗಿದೆ

ಜೋಗಿಂದರ್ ಶರ್ಮಾಗೆ ಕೊನೆ ಓವರ್​ ನೀಡಿದ್ದು!

2007ರಲ್ಲಿ ನಡೆದ ಚೊಚ್ಚಲ ಟಿ 20 ವಿಶ್ವಕಪ್ ಫೈನಲ್​ನಲ್ಲಿ ಬದ್ಧ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಯಾಗಿತ್ತು. ಸಾಧಾರಣ ಗುರಿ ಬೆನ್ನತ್ತಿದ್ದ ಪಾಕ್​ ಓಂದೆಡೆ ವಿಕೆಟ್ ಬೀಳುತ್ತಿದ್ದರೂ ಮಿಸ್ಬಾ ಉಲ್ ಹಕ್ ನಿಂತು ಆಡುತ್ತಿದ್ದರು. ಕೊನೆಯ ಓವರ್ ನಲ್ಲಿ 13 ರನ್ ಬೇಕಾಗಿತ್ತು. ಕೈಯಲ್ಲಿ ಇದ್ದಿದ್ದು ಒಂದು ವಿಕೆಟ್. ಜೋಗಿಂದರ್ ಶರ್ಮಾರ ಎರಡನೇ ಎಸೆತವನ್ನು ಸಿಕ್ಸರ್​ಗೆ ಅಟ್ಟಿದ ಮಿಸ್ಬಾ ಮೂರನೇ ಎಸೆತವನ್ನು ಫೈನ್ ಲೆಗ್​ಗೆ ಸ್ಕೂಪ್ ಮಾಡಿದ್ದರು. ಆದರೆ ಚೆಂಡು ಶ್ರೀಶಾಂತ್ ಕೈ ಸೇರಿತ್ತು. ಪಾಕಿಸ್ತಾನ ಆಲ್​ಔಟ್​ ಆಯಿತು. ಭಾರತ ಕೇವಲ 5 ರನ್​ ಅಂತರದಿಂದ ಗೆದ್ದು ಟ್ರೋಫಿ ಎತ್ತಿ ಹಿಡಿಯಿತು. ಇಲ್ಲಿಂದ ಧೋನಿ ಯುಗ ಕೂಡ ಆರಂಭವಾಯಿತು. ಅನಾನುಭವಿ ಜೋಗಿಂದರ್ ಶರ್ಮಾ ಕೈಗೆ ಧೋನಿ ಚೆಂಡು ಕೊಟ್ಟ ನಿರ್ಧಾರ ಪಂದ್ಯದ ಗತಿಯನ್ನೇ ಬದಲಿಸಿತು. ಪಂದ್ಯದ ನಂತರ ಧೋನಿ, ಮಧ್ಯಮ ವೇಗದ ಬೌಲರ್ ಜೋಗಿಂದರ್​ ಮೇಲೆ ನನಗೆ ನಂಬಿಕೆ ಇತ್ತು. ಹಾಗಾಗಿ ಇದು ಸುಲಭ ನಿರ್ಧಾರವಾಗಿತ್ತು ಎಂದು ಸ್ಪಷ್ಟಪಡಿಸಿದ್ದರು.

ಚಾಂಪಿಯನ್ಸ್ ಟ್ರೋಫಿಯಲ್ಲಿ ಇಶಾಂತ್ ಶರ್ಮಾಗೆ ಬೌಲಿಂಗ್​ ಕೊಟ್ಟದ್ದು

2013ರಲ್ಲಿ ನಡೆದಿದ್ದ ಚಾಂಪಿಯನ್ಸ್​ ಟ್ರೋಫಿ ಫೈನಲ್​ನಲ್ಲಿ ಭಾರತ ಮತ್ತು ಇಂಗ್ಲೆಂಡ್​ ಮುಖಾಮುಖಿಯಾಗಿತ್ತು. ನಿಧಾನಗತಿಯ ಎಡ್ಜ್ ಬಾಸ್ಟನ್ ಪಿಚ್​ನಲ್ಲಿ ಇಂಗ್ಲೆಂಡ್ 130 ರನ್ ಗಳ ಗುರಿ ಬೆನ್ನಟ್ಟುತ್ತಿತ್ತು. ಈ ಅವಧಿಯಲ್ಲಿ ಮಳೆಯ ಅವಕೃಪೆಯೂ ಎದುರಾಯಿತು. ಈ ವೇಳೆ ಧೋನಿಗೆ ಬೌಲಿಂಗ್​ಗೆ ಇಳಿಸುವ ಸವಾಲು ಎದುರಾಯಿತು. ವಿಶ್ವಾಸಾರ್ಹ ಸ್ಪಿನ್ ಜೋಡಿ ರವೀಂದ್ರ ಜಡೇಜಾ ಮತ್ತು ಆರ್ ಅಶ್ವಿನ್ ಅವರನ್ನು ಬಳಸಿಕೊಂಡು ಇಂಗ್ಲೆಂಡ್ ಬ್ಯಾಟರ್​ಗಳನ್ನು ಕಟ್ಟಿ ಹಾಕಿದರು. ಆದರೂ ಆತಿಥೇಯ ಆಂಗ್ಲರ ಪಡೆಗೆ ಕೊನೇ 18 ಎಸೆತಗಳಲ್ಲಿ ಕೇವಲ 28 ರನ್​ ಬೇಕಾಗಿತ್ತು. ಈ ವೇಳೆ ಧೋನಿ ಇಶಾಂತ್ ಶರ್ಮಾ ಕೈಗೆ ಚೆಂಡನ್ನು ನೀಡಿದರು.

ಇದನ್ನೂ ಓದಿ MS Dhoni Birthday: ಸಲ್ಮಾನ್​ ಖಾನ್​ ಜತೆ ಕೇಕ್​ ಕತ್ತರಿಸಿ ಹುಟ್ಟುಹಬ್ಬ ಆಚರಿಸಿದ ಧೋನಿ

ಅವರ ಎಸೆತಕ್ಕೆ ಇಯಾನ್ ಮಾರ್ಗನ್ ಸಿಕ್ಸರ್ ಭಾರಿಸಿದ ಜತೆಗೆ ಶರ್ಮಾ ಎರಡು ವೈಡ್​ ನೀಡಿದ ಬಳಿಕ ಧೋನಿಯ ನಿರ್ಧಾರ ತಲೆಕೆಳಗಾದಂತೆ ಕಂಡಿತು. ಆದರೆ, ನಂತರ ನಡೆದಿದ್ದೇ ಬೇರೆ. ಇಶಾಂತ್ ನಿಧಾನಗತಿಯ ಚೆಂಡನ್ನು ಸಿಕ್ಸರ್ ಕಡೆಗೆ ಕಳುಹಿಸಲು ಹೋದ ಮಾರ್ಗನ್​ ಔಟಾದರು. ಮುಂದಿನ ಎಸೆತದಲ್ಲಿ ರವಿ ಬೋಪಾರಾ ವಿಕೆಟ್ ಪಡೆದರು. ಪಿಚ್​​ನಲ್ಲಿ ತಳವೂರಿದ್ದ ಬ್ಯಾಟರ್​​ಗಳನ್ನು ಪೆವಿಲಿಯನ್​ಗೆ ಕಳುಹಿಸಿ ಭಾರತದ ಜಯಕ್ಕೆ ಹಾದಿ ಮಾಡಿಕೊಟ್ಟರು ಇಶಾಂತ್​. ಅಲ್ಲಿಗೆ ಧೋನಿಯ ತಂತ್ರಗಾರಿಕೆ ಮತ್ತೆ ಫಲಕೊಟ್ಟಂತಾಯಿತು.

2011 ರ ವಿಶ್ವಕಪ್ ಫೈನಲ್​ ಪಂದ್ಯದಲ್ಲಿ ಬ್ಯಾಟಿಂಗ್​ ಮುಂಬಡ್ತಿ


ನಾಯಕನಾಗಿ ಧೋನಿ ಅವರ ಅತ್ಯಂತ ಪ್ರಸಿದ್ಧ ಮತ್ತು ಕ್ಷಿಪ್ರ ನಿರ್ಧಾರದಲ್ಲಿ 2011ರಲ್ಲಿ ನಡೆದಿದ್ದ ಏಕದಿನ ವಿಶ್ವಕಪ್​ ಫೈನಲ್ ಕೂಡ ಒಂದು. ಶ್ರೀಲಂಕಾ ವಿರುದ್ಧದ 2011 ರ ವಿಶ್ವಕಪ್ ಫೈನಲ್​​ನಲ್ಲಿ ತಾವೇ ಸ್ವತಃ ಯುವರಾಜ್ ಸಿಂಗ್ ಅವರಿಗಿಂತ ಮುಂಚಿತವಾಗಿ ಬ್ಯಾಟ್​ ಮಾಡಲು ಇಳಿದಿರುವುದು. ತಂಡದ ಮೂರನೇ ವಿಕೆಟ್ ಪತನದ ನಂತರ ಅವರು ತಾವೇ ಬ್ಯಾಟ್​ ಹಿಡಿದು ಆಡಲು ಮುಂದಾದರು. ಗೌತಮ್​ ಗಂಭೀರ್​ ಜತೆ ಅಮೂಲ್ಯ ಜತೆಯಾಟ ನೀಡುವ ಜತೆಗೆ ಲಂಕಾದ ಸ್ಪಿನ್ ಬೌಲರ್​ಗಳ ತಂತ್ರವನ್ನು ಅವರಿಬ್ಬರು ವಿಫಲಗೊಳಿಸಿದರು. ಅಲ್ಲದೇ ತಾವು ಕೊನೇ ತನಕ ಉಳಿದು 97 ರನ್ ಬಾರಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು. ಇದು ಭಾರತ ಕ್ರಿಕೆಟ್ ತಂಡದ ಪಾಲಿಗೆ ಐತಿಹಾಸಿಕ ನಿರ್ಧಾರವೇ ಸರಿ.

ಲಾರ್ಡ್ಸ್​ನಲ್ಲಿ ಇಶಾಂತ್ ಶರ್ಮಾ ಬೌನ್ಸರ್ ದಾಳಿ


ಭಾರತವು 2014ರ ಇಂಗ್ಲೆಂಡ್​ ಪ್ರವಾಸದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯಲು ಹೆಣಗಾಡಿತ್ತು. ಆದರೆ ಪ್ರವಾಸದ ಎರಡನೇ ಟೆಸ್ಟ್​​ನಲ್ಲಿ ಅದು ಬದಲಾಯಿತು. ಅಲ್ಲಿ ಧೋನಿ ನಾಯಕತ್ವದಲ್ಲಿ ಆಡಿದ ಭಾರತ ತಂಡ ಪುಟಿದೆದ್ದಿತು. ಆ ಪಂದ್ಯದಲ್ಲಿ ಇಂಗ್ಲೆಂಡ್​ ತಂಡಕ್ಕೆ 6 ವಿಕೆಟ್​ಗಳು ಕೈಯಲ್ಲಿರುವಾಗ 140 ರನ್​ಗಳ ಅಗತ್ಯವಿತ್ತು . ಹೀಗಾಗಿ ಗೆಲುವು ಇಂಗ್ಲೆಂಡ್​ ತಂಡದ್ದು ಎಂದು ಭಾವಿಸಲಾಗಿತ್ತು. ಧೋನಿ ತಂತ್ರಗಾರಿಕೆ ಬಳಸಿದರು. ಇಶಾಂತ್​ ಶರ್ಮಾಗೆ ಚೆಂಡು ಕೊಟ್ಟು ಶಾರ್ಟ್ ಪಿಚ್ ದಾಳಿ ಮಾಡಲು ಹೇಳಿದರು. ಶರ್ಮಾ ಮಿಂಚಿದರು. ಜೀವನ ಶ್ರೇಷ್ಠ 7 ವಿಕೆಟ್​ ಪಡೆದರು. ಕೇವಲ 74 ರನ್ ನೀಡಿ ಈ ಸಾಧನೆ ಮಾಡಿದರು. ಭಾರತಕ್ಕೆ 95 ರನ್​ಗಳ ಗೆಲುವು ಲಭಿಸಿತು. ಇಶಾಂತ್​ ಅವರ ಶಾರ್ಟ್​​ ಪಿಚ್ ಹಾಗೂ ಬೌನ್ಸರ್​ಗಳು ಕೆಲಸ ಮಾಡಿದವು. ಧೋನಿಯ ತಂತ್ರಗಾರಿಕೆ ಮೇಲುಗೈ ಸಾಧಿಸಿತ್ತು.

ಪೊಲಾರ್ಡ್ ವಿರುದ್ಧ ಸ್ಟ್ರೈಟ್-ಆನ್ ಫೀಲ್ಡಿಂಗ್​ ತಂತ್ರ


ಎಂಎಸ್ ಧೋನಿ ನಾಯಕತ್ವದಲ್ಲಿ ಫೀಲ್ಡಿಂಗ್ ಸೆಟ್ಟಿಂಗ್​ ಕೂಡ ಅದ್ಭುತವಾಗಿತ್ತು. 2010ರ ಐಪಿಎಲ್ ಫೈನಲ್​ನಲ್ಲಿ ಇದಕ್ಕೊಂದು ತಾಜಾ ಉದಾಹರಣೆಯಿದೆ. ಸಿಎಸ್​ಕೆ ಮತ್ತು ಮುಂಬಯಿ ನಡುವಿನ ಫೈನಲ್​ ಹಣಾಹಣಿಯದರು. ವಿಂಡೀಸ್ ದೈತ್ಯ ಕೀರನ್ ಪೊಲಾರ್ಡ್ ಚೆನ್ನೈ ಕೈಯಿಂದ ಜಯ ಕಸಿಯುವ ಪ್ರಯತ್ನ ಮಾಡುತ್ತಿದ್ದರು. 9 ಎಸೆತಗಳಲ್ಲಿ 27 ರನ್ ಗಳಿಸಿದ್ದರು ಪೊಲಾರ್ಡ್​. ಇದನ್ನು ಗ್ರಹಿಸಿದ ಧೋನಿ ಮ್ಯಾಥ್ಯೂ ಹೇಡನ್ ಅವರನ್ನು ಮ್ಯಾಥ್ಯೂ ಹೇಡನ್ ಅವರನ್ನು ಸ್ಟ್ರೈನ್ ಆನ್​ ಬಳಿ ಫೀಲ್ಡಿಂಗ್ ನಿಲ್ಲಿಸಿದರು. ಪೊಲಾರ್ಡ್​ ಕ್ಯಾಚ್​ ನೀಡಿ ನಿರ್ಗಮಿಸಿದರು. ಧೋನಿ 2017 ರ ಫೈನಲ್​ನಲ್ಲಿ ರೈಸಿಂಗ್ ಪುಣೆ ಸೂಪರ್​ಜೈಂಟ್ಸ್​ ತಂಡ ಪರವಾಗಿ ಅದೇ ತಂತ್ರ ಬಳಸಿ ಪೊಲಾರ್ಡ್ ಅವರನ್ನು ಔಟ್​ ಮಾಡಿಸಿದರು. 2022ರಲ್ಲಿ ಪೊಲಾರ್ಡ್ ಅವರ ಅಂತಿಮ ಐಪಿಎಲ್​ ಋತುವಿನಲ್ಲೂ ಅವರನ್ನು ಅದೇ ರೀತಿ ಔಟ್​ ಮಾಡಿಸಿದ್ದರು ಧೋನಿ.

Continue Reading
Advertisement
Attempt To Murder
ಬೆಂಗಳೂರು ಗ್ರಾಮಾಂತರ3 mins ago

Attempt To Murder: ಬಾಯಿಗೆ ಬಂದಂತೆ ಬೈದ್ರು ಅಂತ ಸಿಟ್ಟು; ಮಾಲೀಕನಿಗೆ ಹೊಡೆದು ಕೋಮಾಗೆ ಕಳಿಸಿದ ಸಪ್ಲೇಯರ್‌!

murder case
ಶಿವಮೊಗ್ಗ49 mins ago

Murder case : ಸ್ನೇಹಿತನಿಂದಲೇ ಕೊಲೆಯಾದಳು ಧರ್ಮಸ್ಥಳ ಸಂಘದ ಸೇವಾ ಪ್ರತಿನಿಧಿ

MS Dhoni Birthday
ಕ್ರೀಡೆ55 mins ago

MS Dhoni Birthday: ಧೋನಿಯ ಪಾದ ಮುಟ್ಟಿ ನಮಸ್ಕರಿಸಿದ ಪತ್ನಿ; ವಿಡಿಯೊ ವೈರಲ್​

Dengue Cases in Hassan
ಪ್ರಮುಖ ಸುದ್ದಿ55 mins ago

Dengue Cases in Hassan: ಹಾಸನದಲ್ಲಿ ಶಂಕಿತ ಡೆಂಗ್ಯೂಗೆ 26 ವರ್ಷದ ಯುವತಿ ಬಲಿ

Actor Darshan Ninasam Ratnakka shocked to hear the news of Darshan
ಸ್ಯಾಂಡಲ್ ವುಡ್58 mins ago

Actor Darshan: ದರ್ಶನ್‌ ಸುದ್ದಿ ಕೇಳಿ ಆಘಾತವಾಗಿತ್ತು ಎಂದು ಬಿಕ್ಕಿ ಬಿಕ್ಕಿ ಅತ್ತ ನೀನಾಸಂ ರತ್ನಕ್ಕ!

Bhadra Dam
ಶಿವಮೊಗ್ಗ59 mins ago

Bhadra Dam: ಕೊನೆಗೂ ಭದ್ರಾ ಡ್ಯಾಂನ ರಿವರ್ ಗೇಟ್‌ ದುರಸ್ತಿ; ಸೋರಿಕೆಯಾಗುತ್ತಿದ್ದ ನೀರಿಗೆ ತಡೆ

Rat Fever
ಪ್ರಮುಖ ಸುದ್ದಿ1 hour ago

Rat fever: ಡೆಂಗ್ಯೂ ರುದ್ರ ನರ್ತನದ ನಡುವೆ ಹಾವೇರಿಯಲ್ಲಿ ಇಲಿ ಜ್ವರ ಪತ್ತೆ; ಬಾಲಕನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ!

Gautam Gambhir
ಕ್ರೀಡೆ2 hours ago

Gautam Gambhir: ಕೆಕೆಆರ್ ತಂಡದ ಮೆಂಟರ್​ ಸ್ಥಾನಕ್ಕೆ ಗಂಭೀರ್​ ರಾಜೀನಾಮೆ?; ಕೋಚ್​ ಆಗುವುದು ಖಚಿತ

Wild Animals Attack
ವಿಜಯನಗರ2 hours ago

Wild Animals Attack: ವಿಜಯನಗರ: ನಾಡಿಗೆ ನುಗ್ಗಿದ ಕರಡಿಯನ್ನು ರಾತ್ರೋರಾತ್ರಿ ಕಾಡಿಗೆ ಅಟ್ಟಿದ ಅರಣ್ಯ ಇಲಾಖೆ ಸಿಬ್ಬಂದಿ

Actor Darshan case Fingerprint match of accused in Renukaswamy case
ಸ್ಯಾಂಡಲ್ ವುಡ್2 hours ago

Actor Darshan: ರೇಣುಕಾಸ್ವಾಮಿ ಪ್ರಕರಣದಲ್ಲಿ ಆರೋಪಿಗಳ ಫಿಂಗರ್ ಪ್ರಿಂಟ್ ಮ್ಯಾಚ್; ಸ್ಫೋಟಕ ಮಾಹಿತಿ ಬಹಿರಂಗ!

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ8 hours ago

Karnataka Weather : ವೇಗವಾಗಿ ಬೀಸುವ ಗಾಳಿ ಜತೆಗೆ ಅಬ್ಬರಿಸಲಿದೆ ಮಳೆ; ಈ ಜಿಲ್ಲೆಗಳಿಗೆ ಎಚ್ಚರಿಕೆ

karnataka weather Forecast
ಮಳೆ20 hours ago

Karnataka Weather : ಚಾರಣಪ್ರಿಯರಿಗೆ ಶಾಕ್‌; ಭಾರಿ ಮಳೆಯಿಂದಾಗಿ ಈ ಜಾಗಗಳಿಗೆ ಟ್ರೆಕ್ಕಿಂಗ್‌ ನಿಷೇಧ

Murder case
ಯಾದಗಿರಿ22 hours ago

Murder case : ಯಾದಗಿರಿಯಲ್ಲಿ ಹಸುಗೂಸನ್ನು ಬಾವಿಗೆ ಎಸೆದು ಕೊಂದರು ಹಂತಕರು

karnataka Rain
ಮಳೆ23 hours ago

Karnataka Rain : ಭಾರಿ ಗಾಳಿ- ಮಳೆಗೆ ಹಾರಿದ ಅಂಗಡಿಯ ತಗಡು; ಮಾಗುಂಡಿ-ಬಾಳೆಹೊನ್ನೂರು ಮಾರ್ಗ ಬಂದ್

Food Poisoning
ರಾಯಚೂರು1 day ago

Food Poisoning : ಮೊರಾರ್ಜಿ ವಸತಿ ಶಾಲೆ ಅವ್ಯವಸ್ಥೆ; ಊಟ ಸೇವಿಸಿದ 25ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ

Wild Animal Attack Elephant attack
ರಾಮನಗರ1 day ago

Wild Animal Attack : ತೋಟದಲ್ಲಿ ನೀರು ಹಾಯಿಸುತ್ತಿದ್ದವನ ತುಳಿದು ಸಾಯಿಸಿದ ಆನೆ

karnataka Weather Forecast
ಮಳೆ1 day ago

Karnataka Weather : ಕರಾವಳಿ, ಮಲೆನಾಡಿನಲ್ಲಿ ಇಂದು ನಾನ್‌ ಸ್ಟಾಪ್‌ ಮಳೆ; ಬೆಂಗಳೂರಲ್ಲಿ ಹೇಗೆ?

karnataka Weather Forecast
ಮಳೆ2 days ago

Karnataka Weather: ಧಾರಾಕಾರ ಮಳೆಗೆ ಜನರ ಒದ್ದಾಟ- ಸೇತುವೆಗಳು ಮುಳುಗಿ ಪರದಾಟ; ಶಾಲಾ-ಕಾಲೇಜುಗಳಿಗೆ ರಜೆ

Lovers Fighting
ಚಿಕ್ಕಬಳ್ಳಾಪುರ2 days ago

Lovers Fighting: ಪ್ರೀತಿಸಿ ಕೈಕೊಟ್ಟವನಿಗೆ ನಡುರಸ್ತೆಯಲ್ಲೇ ಚಳಿ ಬಿಡಿಸಿದ ಗರ್ಭಿಣಿ

Medical negligence
ದಾವಣಗೆರೆ2 days ago

Medical negligence: ಸಿಸೇರಿಯನ್ ಮಾಡುವಾಗ ಶಿಶುವಿನ ಮರ್ಮಾಂಗವನ್ನೇ ಕತ್ತರಿಸಿ ಸಾಯಿಸಿದ ವೈದ್ಯ!

ಟ್ರೆಂಡಿಂಗ್‌