Eye Care Tips: ಕಣ್ಣಿನ ಸಮಸ್ಯೆಗಳಿಂದ ಪಾರಾಗಲು ಈ ಮುಂಜಾಗ್ರತಾ ಕ್ರಮಗಳು ಗೊತ್ತಿರಲಿ! - Vistara News

ಆರೋಗ್ಯ

Eye Care Tips: ಕಣ್ಣಿನ ಸಮಸ್ಯೆಗಳಿಂದ ಪಾರಾಗಲು ಈ ಮುಂಜಾಗ್ರತಾ ಕ್ರಮಗಳು ಗೊತ್ತಿರಲಿ!

ಕಣ್ಣಿನ ಆರೋಗ್ಯ ಕಾಪಾಡಲು, ಒತ್ತಡ ಕಡಿಮೆ ಮಾಡಲು ಈ ಕೆಲವು ಮುಂಜಾಗ್ರತಾ ಕ್ರಮಗಳನ್ನು ಕಣ್ಣಿನ ಆರೋಗ್ಯದ (Eye care tips) ನಿಟ್ಟಿನಲ್ಲಿ ತೆಗೆದುಕೊಳ್ಳುವುದು ಅತ್ಯಂತ ಅಗತ್ಯ.

VISTARANEWS.COM


on

Eye Care
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಹೆಚ್ಚಿದ ಸ್ಕ್ರೀನ್‌ಟೈಮ್‌ (Screen time), ದಿನವಿಡೀ ಓದುವುದು, ಡ್ರೈವಿಂಗ್‌ ಮತ್ತಿತರ ಒಂದೇ ಬಗೆಯ ಕೆಲಸವನ್ನು ದಿನವಿಡೀ ಮಾಡುವುದು, ಪದೇ ಪದೆ ಮಾಡುವುದರಿಂದ ಕಣ್ಣಿನ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದು ಗೊತ್ತೇ ಇದೆ. ಬಳಲಿದ ಕಣ್ಣು ಅನುಭವಿಸುವ ಒತ್ತಡದಿಂದ ಪಾರಾಗುವುದು ಸುಲಭವಲ್ಲ. ಕಣ್ಣಿಗೆ ನೀಡಬೇಕಾದ, ಸಿಗಬೇಕಾದ ವಿಶ್ರಾಂತಿ ಸಿಗಲೇಬೇಕು. ಇತ್ತೀಚಿನ ದಿನಗಳಲ್ಲಿ, ಕೆಲಸದ ನಂತರವೂ ವಿಶ್ರಾಂತಿಯ ನೆಪದಲ್ಲಿ ಮೊಬೈಲ್‌ ಫೋನ್‌ ಬಳಕೆ, ಮನರಂಜನೆಯ ನೆಪದಲ್ಲಿ ಗಂಟೆಗಟ್ಟಲೆ ಸಿನಿಮಾ ವೀಕ್ಷಣೆ ಇತ್ಯಾದಿಗಳು ಕೇವಲ ದೇಹಕ್ಕಷ್ಟೇ ವಿಶ್ರಾಂತಿ, ಬದಲಾವಣೆ ನೀಡಿದರೂ ಕಣ್ಣಿಗೆ ನೀಡುವಲ್ಲಿ ನಾವು ಎಡವುತ್ತೇವೆ. ಇದರಿಂದಾಗಿ ಕಣ್ಣುರಿ, ಕಣ್ಣು ತುರಿಕೆ, ಕಣ್ಣು ನೋವು, ಕಣ್ಣು ಒಣಗಿದಂತಾಗುವುದು, ಕಣ್ಣು ಮಬ್ಬಾದಂತಾಗುವುದು, ತಲೆಸುತ್ತು, ತಲೆನೋವು, ಬೆಳಕಿಗೆ ಕಣ್ಣು ನೋವಾಗುವುದು, ಓದಲು ಕಷ್ಟವಾಗುವುದು, ಒಂದೆಡೆ ದೃಷ್ಟಿ ಕೇಂದ್ರೀಕರಿಸಲು ಕಷ್ಟವಾಗುವುದು, ಕತ್ತು ಹಾಗೂ ಬೆನ್ನು ನೋವಾಗುವುದು ಇತ್ಯಾದಿ ಸಮಸ್ಯೆಗಳು ಹೆಚ್ಚಾಗಿವೆ. ಇವುಗಳಲ್ಲಿ ಹೆಚ್ಚಿನವು ಕಣ್ಣಿನ ಸಮಸ್ಯೆಯೆಂದು ಮೇಲ್ನೋಟಕ್ಕೆ ಅನಿಸದಿದ್ದರೂ, ಇವು ಕಣ್ಣಿನ ಸಮಸ್ಯೆಗಳೂ ಆಗಿರಬಹುದು ಎಂಬುದನ್ನು ನಾವು ಅರಿಯಲು ತಡ ಮಾಡಬಾರದು. ಹಾಗಾಗಿ ಇಂಥ ಸಮಸ್ಯೆಗಳು ತಲೆದೋರಿದ ಕೂಡಲೇ ಕಣ್ಣಿನ ವೈದ್ಯರ ನೆರವು ಸಲಹೆ ಅತ್ಯಂತ ಅಗತ್ಯ. ಇವುಗಳ ಜೊತೆಗೆ ಕಣ್ಣಿನ ಆರೋಗ್ಯ ಕಾಪಾಡಲು, ಒತ್ತಡ ಕಡಿಮೆ ಮಾಡಲು ಈ ಕೆಲವು ಮುಂಜಾಗ್ರತಾ ಕ್ರಮಗಳನ್ನು ಕಣ್ಣಿನ ಆರೋಗ್ಯದ (Eye care tips) ನಿಟ್ಟಿನಲ್ಲಿ ತೆಗೆದುಕೊಳ್ಳುವುದು ಅತ್ಯಂತ ಅಗತ್ಯ.

1. 20:20 ನಿಯಮ ಪಾಲಿಸಿ: ಕಣ್ಣಿನ ಒತ್ತಡ ಆಗದಂತೆ ಮುಂಜಾಗ್ರತಾ ಕ್ರಮವಾಗಿ 20:20 ನಿಯಮ ಪಾಲಿಸಬಹುದು. 20 ನಿಮಿಷಗಳ ಕಾಲ ಒಂದು ಕೆಲಸ ಮಾಡಿದರೆ, ನಂತರ 20 ನಿಮಿಷ ಬೇರೆ ಕೆಲಸ ಮಾಡುವುದೇ ಈ ನಿಯಮ. ಇದರಿಂದ ಕಣ್ಣು ಒಂದೇ ಕಡೆಗೆ ದೃಷ್ಠಿ ನೆಡುವುದು ತಪ್ಪಿ ಕಣ್ಣಿನ ಮೇಲೆ ಒತ್ತಡ ಬೀಳುವುದು ತಪ್ಪುತ್ತದೆ. ಇದು ಸಾಧ್ಯವಾಗದಿದ್ದರೆ, ಬೆಳಗ್ಗಿನಿಂದ ಒಂದೇ ಬಗೆಯ ಕೆಲಸ ಕಂಪ್ಯೂಟರ್‌ ಪರದೆಯನ್ನು ನೋಡುತ್ತಾ ಕಳೆದಿದ್ದರೆ, ಮಧ್ಯಾಹ್ನ ಊಟದ ಸಮಯಕ್ಕೊಂದು ಸಣ್ಣ ವಾಕ್‌ ಮಾಡಿ. ದೃಷ್ಠಿ ಬದಲಾಯಿಸಿ. ಕಣ್ಣಿಗೆ ಕೆಲಕಾಲ ವಿಶ್ರಾಂತಿ ಕೊಡಿ.

2. ಅಂತರ ಕಾಪಾಡಿ: ಯಾವುದೇ ಡಿಜಿಟಲ್‌ ಪರದೆಯನ್ನು ಬಳಸಿ ನೀವು ಕೆಲಸ ಮಾಡುತ್ತಿದ್ದರೆ ಒಂದು ಅಂತರವನ್ನು ಸದಾ ಕಾಪಾಡಿ. ಕಣ್ಣಿಗೆ ಸ್ವಲ್ಪ ದೂರವಿರುವಂತೆ ಫೋನ್‌, ಕಂಪ್ಯೂಟರ್‌ ಪರದೆಯಿರಲಿ.

Eye care

3. ಕಣ್ಣಿನ ವ್ಯಾಯಾಮ ಮಾಡಿ: ಕಣ್ಣನ್ನು ಬಳಸಿ ಮಾಡುವ ಕೆಲಸವೇ ನಿಮ್ಮ ಉದ್ಯೋಗವಾಗಿದ್ದರೆ ಖಂಡಿತವಾಗಿಯೂ ನಿತ್ಯವೂ ಕಣ್ಣಿನ ವ್ಯಾಯಾಮಕ್ಕೆ ಕೊಂಚ ಸಮಯ ಕೊಡಿ. ಸರಳ ಕಣ್ಣಿನ ವ್ಯಾಯಾಮವನ್ನು ಕಲಿತುಕೊಂಡು ಕಣ್ಣಿಗೆ ವಿಶ್ರಾಂತಿಯನ್ನು ನೀಡಿ, ಕಣ್ಣಿನ ಶಕ್ತಿಯನ್ನು ಹೆಚ್ಚಿಸಿಕೊಳ್ಳಿ.

ಇದನ್ನೂ ಓದಿ: Health tips: ಮಾನಸಿಕ ಒತ್ತಡ, ಉದ್ವೇಗ ಶಮನಕ್ಕೆ ಖಂಡಿತ ಬೇಕು ಈ ಹಣ್ಣುಗಳು!

4. ಬೆಳಕಿರಲಿ: ಕಣ್ಣಿಗೆ ಸಂಬಂಧಪಟ್ಟ ಕೆಲಸ ಮಾಡುವಾಗ ಉತ್ತಮ ಬೆಳಕು ಇರುವಂತೆ ನೋಡಿಕೊಳ್ಳಿ. ಆ ಬೆಳಕು ಅತ್ಯಂತ ಪ್ರಕಾಶದ್ದಾಗದಿರಲಿ, ಹಾಗಂತ ಕಡಿಮೆ ಬೆಳಕೂ ಇರದಿರಲಿ. ಹದವಾದ, ಸರಿಯಾದ ಬೆಳಕಿನಲ್ಲಿ ಓದುವುದು ಅಥವಾ ಇತರ ಯಾವುದೇ ಕೆಲಸ ಮಾಡುವುದನ್ನು ರೂಢಿಸಿಕೊಳ್ಳಿ.

5. ಕಣ್ಮುಚ್ಚಿ ವಿಶ್ರಾಂತಿ ಕೊಡಿ: ಕಣ್ಣು ಒತ್ತಡ ಅನುಭವಿಸುಂತಾದಾಗ ಕಣ್ಮುಚ್ಚಿ ಕಣ್ಣಿಗೆ ಆಗಾಗ ವಿಶ್ರಾಂತಿ ಕೊಡಿ. ಕೆಲಸದ ಮಧ್ಯೆ ಆಗಾಗ ಒಂದೈದು ನಿಮಿಷ ಕಣ್ಮುಚ್ಚಿ ಕಣ್ಣನ್ನು ರಿಲ್ಯಾಕ್ಸ್‌ ಮಾಡಿಸಿ.

6. ಸಮರ್ಪಕ ಕನ್ನಡಕ ಧರಿಸಿ: ಕಣ್ಣಿನ ತೊಂದರೆಗೆ ಸರಿಯಾದ ಕನ್ನಡಕ ಅತ್ಯಂತ ಅಗತ್ಯ. ಕಣ್ಣಿನ ಪರೀಕ್ಷೆಯನ್ನು ಕಾಲಕಾಲಕ್ಕೆ ಮಾಡಿಸಿ ಅಗತ್ಯವಾದ ಕನ್ನಡಕ ಬಳಸಿ. ಬೇರೆಯವರ ಕನ್ನಡಕ, ಅಥವಾ ಎಷ್ಟೋ ವರ್ಷಗಳ ಹಿಂದೆ ಪರೀಕ್ಷೆ ಮಾಡಿಸಿಕೊಂಡು ಬಳಸಿದ ನಿಮ್ಮದೇ ಕನ್ನಡಕ ಬಳಸುವುದು ಇತ್ಯಾದಿ ತಪ್ಪುಗಳನ್ನು ಮಾಡಬೇಡಿ.

ಇದನ್ನೂ ಓದಿ: Health Tips: ಬೆಳ್ಳಂಬೆಳಗ್ಗೆ ಶೌಚವೇ ಒಂದು ಸಮಸ್ಯೆ: ಸುಲಭ ಶೌಚಕ್ಕೆ ಪಂಚಸೂತ್ರಗಳು!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

Ayushman Bharat Diwas: ಇಂದು ಆಯುಷ್ಮಾನ್ ಭಾರತ್ ದಿನ; ಏನಿದರ ಮಹತ್ವ?

Ayushman Bharat Diwas: ಸರ್ಕಾರದ ಆಯುಷ್ಮಾನ್ ಭಾರತ್ ಯೋಜನೆಯ ಗುರಿಗಳ ಬಗ್ಗೆ ಜನರಿಗೆ ಅರಿವು ಮೂಡಿಸಲು ಪ್ರತಿ ವರ್ಷ ಏಪ್ರಿಲ್ 30 ರಂದು ಭಾರತವು ಆಯುಷ್ಮಾನ್ ಭಾರತ್ ದಿನವನ್ನು ಆಚರಿಸುತ್ತದೆ. ಪ್ರಧಾನ ಮಂತ್ರಿ ಜನ್ ಆರೋಗ್ಯ ಯೋಜನೆ (PMJAY) ಎಂದೂ ಕರೆಯಲ್ಪಡುವ ಈ ಯೋಜನೆಯಿಂದ ಭಾರತ ಸರ್ಕಾರವು ಸುಮಾರು 50 ಕೋಟಿ ಆರ್ಥಿಕವಾಗಿ ಹಿಂದುಳಿದ ಜನರಿಗೆ ಅಗ್ಗದ ಮತ್ತು ಸುಲಭವಾದ ಆರೋಗ್ಯ ಸೇವೆಯನ್ನು ನೀಡುತ್ತಿದೆ.

VISTARANEWS.COM


on

By

Ayushman Bharat Diwas
Koo

ಕೋಟ್ಯಂತರ ಭಾರತೀಯರಿಗೆ(indians) ಉಚಿತ ಆರೋಗ್ಯ ಸೇವೆ (free health service) ಒದಗಿಸುವ ಉದ್ದೇಶದಿಂದ ಜಾರಿಗೊಳಿಸಿರುವ ಆಯುಷ್ಮಾನ್ ಭಾರತ್ ಯೋಜನೆಯ (Ayushman Bharat Yojana) ಕುರಿತು ಜನರಲ್ಲಿ ಅರಿವು ಮೂಡಿಸಲು ಪ್ರತಿ ವರ್ಷ ಏಪ್ರಿಲ್ ಕೊನೆಯ ದಿನವಾದ ಏಪ್ರಿಲ್ 30ರಂದು ಆಯುಷ್ಮಾನ್ ಭಾರತ್ ದಿನವನ್ನು (Ayushman Bharat Diwas) ಆಚರಿಸಲಾಗುತ್ತದೆ.

ಸರ್ಕಾರವು ಆಯುಷ್ಮಾನ್ ಭಾರತ್ ಯೋಜನೆ ಮತ್ತು ಅದರ ಗುರಿ ಏನು ಎಂಬುದರ ಕುರಿತು ಜನರಿಗೆ ತಿಳಿಸಲು ಈ ದಿನ ಆಚರಣೆ ನಡೆಸಲು ಕರೆ ನೀಡಿದೆ. ಈ ಯೋಜನೆಯೊಂದಿಗೆ ಭಾರತ ಸರ್ಕಾರವು ಪ್ರತಿಯೊಬ್ಬರೂ ಸರ್ಕಾರದಿಂದ ನಿಭಾಯಿಸಲ್ಪಡುವ ಉತ್ತಮ ಆರೋಗ್ಯವನ್ನು ಪಡೆಯಬಹುದೆಂದು ಖಚಿತಪಡಿಸಿಕೊಳ್ಳಲು ಬಯಸುತ್ತದೆ.

ಬಡವರಿಗೆ ಆರೋಗ್ಯ ರಕ್ಷಣೆ ಒದಗಿಸಲು ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಯನ್ನು ಜಾರಿ ಮಾಡಿದ್ದು ಈ ಮೂಲಕ ಸರ್ಕಾರಿ ಆಸ್ಪತ್ರೆ ಮತ್ತು ಚಿಕಿತ್ಸಾಲಯಗಳಲ್ಲಿ ಉಚಿತ ವೈದ್ಯಕೀಯ ಚಿಕಿತ್ಸೆ ನೀಡಲಾಗುವುದು. ಈ ಯೋಜನೆಯು ಲಕ್ಷಾಂತರ ನಾಗರಿಕರಿಗೆ ಗುಣಮಟ್ಟದ ವೈದ್ಯಕೀಯ ಆರೈಕೆಯನ್ನು ಉಚಿತವಾಗಿ ಹೆಚ್ಚು ಸುಲಭವಾಗಿ ಸಿಗುವಂತೆ ಮಾಡುವ ಗುರಿಯನ್ನು ಹೊಂದಿದೆ.

ಇದನ್ನೂ ಓದಿ:  Ayushman Bharat Yojana: ಆಪತ್ಕಾಲದಲ್ಲಿ ಆಯುಷ್ಮಾನ್‌ ಭಾರತ್‌ ಯೋಜನೆಯ ಪ್ರಯೋಜನ ಪಡೆಯುವುದು ಹೇಗೆ?


ಇದು ಜಾರಿಯಾಗಿದ್ದು ಯಾವಾಗ?

ಆಯುಷ್ಮಾನ್ ಭಾರತ್ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು 2018ರಲ್ಲಿ ಘೋಷಿಸಿದರು. ಇದು ಎರಡು ಮುಖ್ಯ ಸ್ತಂಭಗಳನ್ನು ಹೊಂದಿದೆ.

1. ಆಯುಷ್ಮಾನ್ ಭಾರತ್ ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರಗಳು (AB-HWCs)
ಆಯುಷ್ಮಾನ್ ಭಾರತ್ ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರಗಳು ಪ್ರಾಥಮಿಕ ಆರೋಗ್ಯ ಸೇವೆಗಳನ್ನು ಜನರ ಮನೆಗಳಿಗೆ ಹತ್ತಿರ ತರುವ ಗುರಿಯನ್ನು ಹೊಂದಿವೆ.

2. ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ (PM-JAY)
ಇದು ಆರೋಗ್ಯ ವಿಮಾ ಯೋಜನೆಯಾಗಿದ್ದು, ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ವರ್ಷಕ್ಕೆ 5 ಲಕ್ಷ ರೂ. ವರೆಗೆ ನಗದು ರಹಿತ ಮತ್ತು ಕೈಗೆಟುಕುವ ವೈದ್ಯಕೀಯ ರಕ್ಷಣೆಯನ್ನು ನೀಡುವ ಉದ್ದೇಶ ಹೊಂದಿದೆ.


ಆಯುಷ್ಮಾನ್ ಭಾರತ್ ದಿವಸ್‌ನ ಮಹತ್ವ

ಆಯುಷ್ಮಾನ್ ಭಾರತ್ ದಿವಸ್ ಹಲವಾರು ಉದ್ದೇಶಗಳನ್ನು ಹೊಂದಿದೆ. ಅವುಗಳಲ್ಲಿ ಮುಖ್ಯವಾಗಿ:
1. ಆಯುಷ್ಮಾನ್ ಭಾರತ್ ಯೋಜನೆಯ ಗುರಿ ಮತ್ತು ಅದರ ಪ್ರಯೋಜನಗಳ ಬಗ್ಗೆ ಜನರಿಗೆ ತಿಳಿಸಲು ಆಯುಷ್ಮಾನ್ ಭಾರತ್ ದಿವಸ್ ಅನ್ನು ಆಚರಿಸಲಾಗುತ್ತದೆ.
2. ಆಯುಷ್ಮಾನ್ ಭಾರತ್ ಯೋಜನೆಯು ಭಾರತ ಸರ್ಕಾರವು ಮಾಡಿದ ದೊಡ್ಡ ಆರೋಗ್ಯ ಯೋಜನೆಯಾಗಿದೆ. ಈ ಯೋಜನೆಯು ಭಾರತದಲ್ಲಿ 10 ಕೋಟಿಗೂ ಹೆಚ್ಚು ಬಡ ಮತ್ತು ದುರ್ಬಲ ಕುಟುಂಬಗಳಿಗೆ ಆರ್ಥಿಕ ರಕ್ಷಣೆ ನೀಡುವ ಗುರಿಯನ್ನು ಹೊಂದಿದೆ.
3. ಅರ್ಹ ಕುಟುಂಬಗಳು ದೇಶಾದ್ಯಂತ ಸರ್ಕಾರಿ ಆಸ್ಪತ್ರೆಗಳಲ್ಲಿ ವರ್ಷಕ್ಕೆ 5 ಲಕ್ಷ ರೂ.ವರೆಗೆ ವೈದ್ಯಕೀಯ ಸೇವೆಗಳನ್ನು ಪಡೆಯಬಹುದು.
4. ಸರ್ಕಾರವು ಆಯುಷ್ಮಾನ್ ಮಿತ್ರ ಎಂಬ ಹೊಸ ಉದ್ಯೋಗವನ್ನು ಆರೋಗ್ಯ ಕ್ಷೇತ್ರದಲ್ಲಿ ಸೃಷ್ಟಿಸಿದೆ. ಇದಕ್ಕಾಗಿ ಸಾಕಷ್ಟು ಯುವಕರನ್ನು ನೇಮಿಸಿಕೊಳ್ಳಲಾಗಿದೆ.
5. ಆಯುಷ್ಮಾನ್ ಭಾರತ್ ಯೋಜನೆಯಡಿ ಯುವಜನರಿಗೆ ಉದ್ಯೋಗ ನೀಡಲು ಆಯುಷ್ಮಾನ್ ಮಿತ್ರರನ್ನು ಆಸ್ಪತ್ರೆಗಳು ನೇಮಿಸಿಕೊಂಡಿವೆ.
6. ಆಯುಷ್ಮಾನ್ ಭಾರತ್ ಯೋಜನೆಯ ಪ್ರಯೋಜನಗಳನ್ನು ಪಡೆಯಲು ಉತ್ತಮ ಆರೋಗ್ಯ ವಿಮಾ ಯೋಜನೆಯ ಅಗತ್ಯವಿದೆ.

Continue Reading

ಆರೋಗ್ಯ

Onion Benefits: ಬೇಸಿಗೆಯಲ್ಲಿ ಆಗಾಗ ಹಸಿ ಈರುಳ್ಳಿ ತಿನ್ನಲೇಬೇಕು ಯಾಕೆ ಗೊತ್ತೆ?

ಹಸಿಯಾದ ಈರುಳ್ಳಿ ತಿಂದರೆ ಬಾಯಿ ಕೆಟ್ಟ ವಾಸನೆ ಬರುತ್ತದೆ ಎಂಬ ಕಾರಣಕ್ಕೋ ಅಥವಾ ಅದರ ಕಟು ರುಚಿಗಾಗಿಯೋ, ಹಸಿ ಈರುಳ್ಳಿಯ ಬಳಕೆಯನ್ನು ಎಲ್ಲರೂ ಇಷ್ಟ ಪಡುವುದಿಲ್ಲ. ಆದರೆ, ಸಲಾಡ್‌ಗಳಲ್ಲಿ, ಊಟದ ಸಂದರ್ಭ ಹಸಿ ಈರುಳ್ಳಿ ತಿನ್ನುವ ಅಭ್ಯಾಸವೂ ಹಲವರಲ್ಲಿದೆ. ಹಸಿ ಈರುಳ್ಳಿಯನ್ನು ತಿನ್ನುವುದರಿಂದ ಸಾಕಷ್ಟು ಲಾಭಗಳೂ ಇವೆ. ಈ ಕುರಿತು (Onion Benefits) ಇಲ್ಲಿದೆ ಮಾಹಿತಿ.

VISTARANEWS.COM


on

Onion Benefits
Koo

ಈರುಳ್ಳಿಯನ್ನು ನಿತ್ಯವೂ ನಮ್ಮ ಮನೆಗಳಲ್ಲಿ ಬಳಸುತ್ತೇವೆ. ಈರುಳ್ಳಿಯಿಲ್ಲದೆ ಅಡುಗೆ ಮಾಡುವುದೇ ಸವಾಲು ಕೂಡಾ. ಪ್ರತಿಯೊಂದು ಅಡುಗೆಗೂ ಈರುಳ್ಳಿಯನ್ನು ಹಾಕುತ್ತೇವಾದರೂ, ಈರುಳ್ಳಿಯನ್ನು ಹಸಿಯಾಗಿ ನಾವು ತಿನ್ನುವುದು ಕಡಿಮೆಯೇ. ಹಸಿಯಾದ ಈರುಳ್ಳಿ ತಿಂದರೆ ಬಾಯಿ ಕೆಟ್ಟ ವಾಸನೆ ಬರುತ್ತದೆ ಎಂಬ ಕಾರಣಕ್ಕೋ, ಅಥವಾ ಅದರ ಕಟು ರುಚಿಗಾಗಿಯೋ, ಹಸಿ ಈರುಳ್ಳಿಯ ಬಳಕೆಯನ್ನು ಎಲ್ಲರೂ ಇಷ್ಟ ಪಡುವುದಿಲ್ಲ. ಆದರೆ, ಸಲಾಡ್‌ಗಳಲ್ಲಿ, ಊಟದ ಸಂದರ್ಭ ಹಸಿ ಈರುಳ್ಳಿ ತಿನ್ನುವ ಅಭ್ಯಾಸವೂ ಹಲವರಲ್ಲಿದೆ. ಹಸಿ ಈರುಳ್ಳಿಯನ್ನು ತಿನ್ನುವುದರಿಂದ ಸಾಕಷ್ಟು ಲಾಭಗಳೂ ಇವೆ. ಈ ಬೇಸಗೆಯಲ್ಲಂತೂ ಆಗಾಗ ಸಲಾಡ್‌ಗಳ ರೂಪದಲ್ಲಾದರೂ ಹಸಿ ಈರುಳ್ಳಿ ಬಳಸಬೇಕು. ಯಾಕೆ ಹಸಿ ಈರುಳ್ಳಿಯನ್ನು ತಿನ್ನಬೇಕು ಎಂಬುದಕ್ಕೆ (Onion Benefits) ಕಾರಣಗಳು ಇಲ್ಲಿವೆ.

Red onion

ಈರುಳ್ಳಿಯಲ್ಲಿ ಫ್ಲೇವನಾಯ್ಡ್‌ಗಳಿದ್ದು, ಅವುಗಳು ಆಂಟಿ ಆಕ್ಸಿಡೆಂಟ್‌ಗಳ ರೀತಿಯಲ್ಲಿ ವರ್ತಿಸುತ್ತವೆ. ಇವು ದೇಹದಲ್ಲಿ ಹಾನಿಕಾರಕ ಫ್ರೀ ರ್ಯಾಡಿಕಲ್ಸ್‌ಗಳನ್ನು ಸಮತೋಲನಗೊಳಿಸುವಲ್ಲಿ ಹಾಗೂ ಆಕ್ಸಿಡೇಟಿವ್‌ ಸ್ಟ್ರೆಸ್‌ ಅನ್ನು ಕಡಿಮೆಗಳಿಸುವಲ್ಲಿ ಸಹಾಯ ಮಾಡುತ್ತವೆ. ಇದರಿಂದ ಹೃದಯದ ಕಾಯಿಲೆ ಅಥವಾ ಕ್ಯಾನ್ಸರ್‌ನಂತಹ ಮಾರಣಾಂತಿಕ ಕಾಯಿಲೆಗಳಿಂದ ದೂರವಿರಬಹುದು.

ಈರುಳ್ಳಿಯಲ್ಲಿ ಕ್ವೆರ್‌ಸೆಟಿನ್‌ ಹಾಗೂ ಸಲ್ಫರ್‌ ಇರುವುದರಿಂದ ಇವುಗಳ ಮೂಲಕ ದೇಹಕ್ಕೆ ಆಂಟಿ ಇನ್‌ಫ್ಲಮೇಟರಿ ಗುಣಗಳು ದೊರೆಯುತ್ತವೆ. ಇದರಿಂದ ಆರ್ತ್ರೈಟಿಸ್‌, ಅಸ್ತಮಾ ಮತ್ತಿತರ ಸಮಸ್ಯೆಗಳಿಗೆ ಕೊಂಚ ಪರಿಹಾರ ಸಿಗಬಹುದು ಹಾಗೂ ಅವುಗಳಿಂದ ದೂರವಿರಬಹುದು.

ಈರುಳ್ಳಿಯಲ್ಲಿ ಆರ್ಗನೋಸಲ್ಫರ್‌ನ ಅಂಶಗಳು ಅಲ್ಲಿಸಿನ್‌ ರೂಪದಲ್ಲಿ ಇರುವುದರಿಂದ ಇದು ಕೊಲೆಸ್ಟೆರಾಲ್‌ ಹಾಗೂ ಅಧಿಕ ರಕ್ತದೊತ್ತಡವನ್ನೂ ಇಳಿಸುವಲ್ಲಿ ಸಹಾಯ ಮಾಡುತ್ತದೆ. ದೇಹದಲ್ಲಿ ರಕ್ತಸಂಚಾರವನ್ನು ಚುರುಕುಗೊಳಿಸುವಲ್ಲಿ ಇದು ಸಹಾಯ ಮಾಡುತ್ತದೆ. ಹೃದಯದ ಆರೋಗ್ಯಕ್ಕೆ ಈರುಳ್ಳಿ ಬಹಳ ಒಳ್ಳೆಯದು.

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಈರುಳ್ಳಿಯಲ್ಲಿರುವ ಆಂಟಿ ಆಕ್ಸಿಡೆಂಟ್‌ಗಳು ಸಹಾಯ ಮಾಡುತ್ತವೆ. ಈರುಳ್ಳಿಯಲ್ಲಿ ಆಂಟಿ ಮೈಕ್ರೋಬಿಯಲ್‌ ಗುಣಗಳೂ ಹೇರಳವಾಗಿದ್ದು ಇದು ದೇಹದ ಒಟ್ಟು ರೋಗನಿರೋಧಕತೆಯನ್ನು ಹೆಚ್ಚಿಸುತ್ತವೆ.

onion cut

ಈರುಳ್ಳಿಯಲ್ಲಿ ಕ್ರೋಮಿಯಂ ಹಾಗೂ ಸಲ್ಫರ್‌ ಇವೆರಡೂ ಇರುವುದರಿಂದ ಇವು ರಕ್ತದಲ್ಲಿ ಸಕ್ಕರೆಯ ಮಟ್ಟವನ್ನೂ ನಿಯಂತ್ರಣದಲ್ಲಿರಿಸಲು ಸಹಾಯ ಮಾಡುತ್ತದೆ. ಹಾಗಾಗಿ ಮಧುಮೇಹ ಇರುವ ಮಂದಿ ಹಸಿ ಈರುಳ್ಳಿ ತಿನ್ನುವುದರಿಂದ ಸಹಾಯವಾಗುತ್ತದೆ.

ಈರುಳ್ಳಿಯಲ್ಲಿ ನಾರಿನಂಶ ಹೆಚ್ಚಿರುವುದರಿಂದ ಮಲಬದ್ಧತೆಯ ಸಮಸ್ಯೆ ಇರುವ ಮಂದಿಗೆ ಒಳ್ಳೆಯದು. ಇದು ಪಚನಕಾರಿ ಬ್ಯಾಕ್ಟೀರಿಯಾಗಳನ್ನು ಪೋಷಣೆ ಮಾಡುವುದರಿಂದ ಜೀರ್ಣಕ್ರಿಯೆ ಚುರುಕಾಗುತ್ತದೆ. ಹಾಗಾಗಿ ಜೀರ್ಣಕ್ರಿಯೆ ಸಂಬಂಧೀ ಸಮಸ್ಯೆಗಳು ಹತ್ತಿರ ಸುಳಿಯದು.

ಈರುಳ್ಳಿಯಲ್ಲಿರುವ ಸಲ್ಫರ್‌ನ ಅಂಶಗಳಲ್ಲಿ ಕ್ಯಾನ್ಸರ್‌ ವಿರೋಧಿ ಗುಣಗಳನ್ನು ಹೊಂದಿರುವುದರಿಂದ ಬಹುಮುಖ್ಯವಾಗಿ ಕರುಳು ಹಾಗೂ ಹೊಟ್ಟೆಯ ಸಂಬಂಧಿ ಕ್ಯಾನ್ಸರ್‌ಗಳಿಂದ ಇದು ದೂರವಿರಿಸುತ್ತದೆ.

ಕ್ವೆರ್ಸೆಟಿನ್‌ ಹಾಗೂ ಸಲ್ಫರ್‌ನ ಅಂಶಗಳು ಎಲುಬಿನ ಆರೋಗ್ಯಕ್ಕೂ ಬಹಳ ಒಳ್ಳೆಯದು. ಮೂಳೆಗಳು ಗಟ್ಟಿಯಾಗಿರಲು, ಮೂಳೆಯಲ್ಲಿನ ಸಾಂದ್ರತೆ ಉಳಿಯಲು ಈರುಳ್ಳಿ ಸೇವನೆ ಒಳ್ಳೆಯದು. ಮುಖ್ಯವಾಗಿ ಮೂಳೆ ಸವೆತ, ಸಂಧಿವಾತದಂತಹ ಸಮಸ್ಯೆ ಇರುವ ಮಂದಿಗೆ ಇದು ಬಹಳ ಒಳ್ಳೆಯದು.

Onion Price

ಶವಾಸಕೋಶದ ಆರೋಗ್ಯಕ್ಕೂ ಈರುಳ್ಳಿ ಬಹಳ ಒಳ್ಳೆಯದು. ಅಸ್ತಮಾ ಹಾಗೂ ಅಲರ್ಜಿಗಳಂತಹ ಸಮಸ್ಯೆ ಇರುವ ಮಂದಿಗೆ ಈರುಳ್ಳಿ ಒಳ್ಳೆಯದು. ಕಫ ಕಟ್ಟಿದಂತಹ ಸಂದರ್ಭ, ನೆಗಡಿ, ಶೀತವಿದ್ದಾಗಲೂ ಈರುಳ್ಳಿಯಲ್ಲಿ ನೈಸರ್ಗಿಕವಾದ ಗುಣಗಳಿರುವುದರಿಂದ ಇದು ಕಫವನ್ನು ಕರಗಿಸುವಲ್ಲಿಯೂ ನೆರವಾಗುತ್ತದೆ. ಉಸಿರಾಟ ಸುಲಭವಾಗುತ್ತದೆ.

ಬಹುಮುಖ್ಯವಾಗಿ ಈರುಳ್ಳಿಯಲ್ಲಿರುವ ಆಂಟಿಆಕ್ಸಿಡೆಂಟ್‌ ಗುಣಗಳು ಹಾಗೂ ಸಲ್ಫರ್‌ ಆರೋಗ್ಯಕರ ಕೂದಲು ಹಾಗೂ ಚರ್ಮಕ್ಕೆ ಬಹಳ ಒಳ್ಳೆಯದು. ಕೊಲಾಜೆನ್‌ ಹೆಚ್ಚಿಸುವಲ್ಲಿ ಇದು ನೆರವಾಗುವ ಮೂಲಕ ಚರ್ಮವನ್ನು ತಾಜಾ ಹಾಗೂ ಹೊಳಪಾಗಿರಿಸುತ್ತದೆ. ದೃಢವಾದ, ನಯವಾದ ಕೂದಲ ಅಂದವನ್ನೂ ಹೆಚ್ಚಿಸುತ್ತದೆ.

ಇದನ್ನೂ ಓದಿ: Eating Bread: ನಿತ್ಯವೂ ಬ್ರೆಡ್‌ ತಿನ್ನುತ್ತೀರಾ? ಹಾಗಿದ್ದರೆ ಖರೀದಿಸುವ ಮುನ್ನ ಇವಿಷ್ಟು ತಿಳಿದಿರಲಿ

Continue Reading

ಆರೋಗ್ಯ

Paneer Test: ನಾವು ತಿನ್ನುವ ಪನೀರ್‌ ಶುದ್ಧವಾದದ್ದೋ, ಕಲಬೆರಕೆಯದ್ದೋ ಪರೀಕ್ಷೆ ಮಾಡೋದು ಹೇಗೆ?

ಫಿಟ್‌ನೆಸ್‌ ಪ್ರಿಯರೂ ಕೂಡಾ ಪ್ರೊಟೀನ್‌ಗಾಗಿ ತಿನ್ನುವ ನಿತ್ಯಾಹಾರಗಳಲ್ಲಿ ಪನೀರ್‌ ಕೂಡ ಒಂದು. ಮಾರುಕಟ್ಟೆಯಲ್ಲಿ ಪ್ಯಾಕೆಟ್‌ಗಳಲ್ಲಿ, ಡೈರಿ ಉತ್ಪನ್ನಗಳ ಅಂಗಡಿಗಳಲ್ಲಿ ದೊರೆಯುವ ಈ ಪನೀರ್‌ ಅನ್ನು ಬಹುತೇಕರು ಮನೆಯಲ್ಲೇ ತಯಾರಿಸುವ ಬದಲು ಮಾರುಕಟ್ಟೆಯಿಂದ ಖರೀದಿಸಿ ಮಾಡುವವರೇ ಹೆಚ್ಚು. ಆದರೆ, ಪನೀರ್‌ ಹೆಸರಿನಲ್ಲಿ ಸಾಕಷ್ಟು ಕಲಬೆರಕೆಗಳೂ ನಡೆಯುತ್ತಿವೆ. ಇದನ್ನು ಪತ್ತೆ ಹಚ್ಚುವುದು ಹೇಗೆ? ಇಲ್ಲಿದೆ (Paneer Test) ಉಪಯುಕ್ತ ಮಾಹಿತಿ.

VISTARANEWS.COM


on

Paneer test
Koo

ಪನೀರ್‌ ಮಂಚೂರಿಯನ್‌, ಪನೀರ್‌ ಟಿಕ್ಕಾ, ಪನೀರ್‌ ಬುರ್ಜಿ, ಪನೀರ್‌ ಮಖನಿ, ಪನೀರ್‌ ಪರಾಠಾ ಹೀಗೆ ಪನೀರ್‌ ಹಾಕಿದ ತಿನಿಸುಗಳನ್ನು ಬಹುತೇಕ ಎಲ್ಲರೂ ಇಷ್ಟಪಡುತ್ತಾರೆ. ಮಕ್ಕಳಾದಿಯಾಗಿ ದೊಡ್ಡವರೂ ಇಷ್ಟಪಡುವ ಒಳ್ಳೆಯ ಆಹಾರವಿದು. ಫಿಟ್‌ನೆಸ್‌ ಪ್ರಿಯರೂ ಕೂಡಾ ಪ್ರೊಟೀನ್‌ಗಾಗಿ ತಿನ್ನುವ ನಿತ್ಯಾಹಾರಗಳಲ್ಲಿ ಪನೀರ್‌ ಕೂಡ ಒಂದು. ಬಹಳ ರುಚಿಯಾಗಿಯೂ ಮಾಡಬಹುದಾದ, ಆರೋಗ್ಯಕರವೂ ಆದ, ದೇಹಕ್ಕೆ ಅಗತ್ಯ ಪೋಷಕಾಂಶಗಳನ್ನೂ ನೀಡುವ ಈ ಪನೀರನ್ನು ಸಸ್ಯಾಹಾರಿಗಳೂ, ಮಾಂಸಾಹಾರಿಗಳೂ ಎಲ್ಲರೂ ಇಷ್ಟಪಟ್ಟು ತಿನ್ನುತ್ತಾರೆ. ಮಾರುಕಟ್ಟೆಯಲ್ಲಿ ಪ್ಯಾಕೆಟ್‌ಗಳಲ್ಲಿ, ಡೈರಿ ಉತ್ಪನ್ನಗಳ ಅಂಗಡಿಗಳಲ್ಲಿ ದೊರೆಯುವ ಈ ಪನೀರ್‌ ಅನ್ನು ಬಹುತೇಕರು ಮನೆಯಲ್ಲೇ ತಯಾರಿಸುವ ಬದಲು ಮಾರುಕಟ್ಟೆಯಿಂದ ಖರೀದಿಸಿ ಮಾಡುವವರೇ ಹೆಚ್ಚು. ಆದರೆ, ಪನೀರ್‌ ಹೆಸರಿನಲ್ಲಿ ಸಾಕಷ್ಟು ಕಲಬೆರಕೆಗಳೂ ನಡೆಯುತ್ತಿವೆ. ಇತ್ತೀಚೆಗಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಹಲವೆಡೆ ಕಲಬೆರಕೆ ಪನೀರ್‌ನ ಮಾರಾಟದ ಕೇಂದ್ರಗಳನ್ನು ಆಹಾರ ಅಧಿಕಾರಿಗಳು ಪತ್ತೆಹಚ್ಚುವ ಪ್ರಕರಣಗಳೂ ನಡೆದಿವೆ. ಕಲಬೆರಕೆ ವ್ಯಾಪಕವಾಗಿ ನಡೆಯುವ ಇಂತಹ ಕಾಲಘಟ್ಟದಲ್ಲಿ ನಮ್ಮ ಆಹಾರದ ಕಾಳಜಿಯನ್ನು ನಾವು ಮಾಡಲೇಬೇಕು. ಒಳ್ಳೆಯ ಪನೀರ್‌ ಎಂದು ಭಾವಿಸಿ ಕೊಂಡು ತಂದ ಪನೀರ್‌ ಆರೋಗ್ಯಕ್ಕೆ ಕೆಟ್ಟ ಪರಿಣಾಮವನ್ನು ಬೀರುವಂಥದ್ದೂ ಆಗಿರಬಹುದ್ದರಿಂದ ಕೆಲವು ಸಾಮಾನ್ಯ ತಿಳಿವಳಿಕೆಗಳನ್ನು ಕೊಳ್ಳುವ ಮುನ್ನ ಹೊಂದಿರುವುದು ಬಹಳ ಒಳ್ಳೆಯದು. ಆದರೆ, ಇದು ತಿಳಿಯುವುದು ಹೇಗೆ ಎಂಬ ಪ್ರಶ್ನೆ ಹಲವರಲ್ಲಿರಬಹುದು. ತಾನು ಕೊಂಡುಕೊಂಡಿದ್ದು ಒಳ್ಳೆಯ ಪನೀರೋ, ಕಲಬೆರಕೆಯಾದುದೋ (Paneer Test) ಎಂದು ಕಂಡುಹಿಡಿಯುವ ಕೆಲವು ಸರಳ ವಿಧಾನಗಳು ಇಲ್ಲಿವೆ. ಆ ಮೂಲಕ ಕೆಟ್ಟ ಆಹಾರ ಸೇವನೆಯಿಂದ ನೀವು ದೂರವಿರಬಹುದು.

Paneer Benefits

ಬಣ್ಣ ಕೂಡ ಮುಖ್ಯ

ಸಾಮಾನ್ಯವಾಗಿ ಒಳ್ಳೆಯ ಪನೀರ್‌ನ ಬಣ್ಣ ಒಂದೇ ತೆರನಾಗಿರುತ್ತದೆ. ಬಿಳಿ ಅಥವಾ ಕೆನೆಬಣ್ಣದ ಬಿಳಿಯನ್ನು ಹೊಂದಿರುವ ಪನೀರ್‌ ಮುಟ್ಟಲು ನುಣುಪಾಗಿರುತ್ತದೆ. ಅದರ ಮೇಲ್ಮೈಯಲ್ಲಿ ಬಣ್ಣದ ಅಥವಾ ಶೇಡ್‌ನಲ್ಲಿ ಸ್ವಲ್ಪವೂ ವ್ಯತ್ಯಾಸವಿರುವುದಿಲ್ಲ. ಬಣ್ಣದಲ್ಲಿ ವ್ಯತ್ಯಾಸ ಕಂಡರೆ ಅದು ಒಳ್ಳೆಯ ಪನೀರ್‌ ಅಲ್ಲ.

ಪೇಸ್ಟ್‌ನಂತಾಗುತ್ತದೆಯಾ ನೋಡಿ

ಸ್ವಲ್ಪ ಪನೀರನ್ನು ಕೈಯಿಂದ ಹಿಸುಕಿ ನೋಡಿ. ಹಿಸುಕಿದಾಗ ತರಿತರಿಯಾದಂತೆ ಅನಿಸಿದರೆ ಅದು ಒಳ್ಳೆಯ ಪನೀರ್‌. ಹಿಸುಕಿದಾಗಲೂ ನುಣುಪಾಗಿ ಪೇಸ್ಟ್‌ನಂತೆ ಇರುವುದಿಲ್ಲ.

smell Paneer

ಮೂಸಿ ನೀಡಿ ಗ್ರಹಿಸಬಹುದು

ಒಳ್ಳೆಯ ಶುದ್ಧವಾದ ಪನೀರನ್ನು ನೀವು ಮೂಸಿ ನೋಡಿ. ಅದರ ಪರಿಮಳ ಹಾಲಿನ ಹಾಗೆ ಮೆದುವಾದ ಘಮವನ್ನು ಹೊಂದಿರುತ್ತದೆ. ಕಲಬೆರಕೆಯಾಗಿದ್ದರೆ, ಇದರ ಪರಿಮಳ ಹೀಗಿರುವುದಿಲ್ಲ. ಹೆಚ್ಚು ಹುಳಿಯಾಗಿಯೋ ಅಥವಾ ಪರಿಮಳದಲ್ಲಿ ವ್ಯತ್ಯಾಸವನ್ನು ಹೊಂದಿರುತ್ತದೆ.

ನೀರಿಗೆ ಹಾಕಿ ನೋಡಿ

ಪನೀರ್‌ನ ಸಣ್ಣ ತುಣುಕೊಂದನ್ನು ನೀರಿಗೆ ಹಾಕಿ ನೋಡಿ. ಶುದ್ಧ ಪನೀರ್‌ ಆಗಿದ್ದರೆ ನೀರಲ್ಲಿ ಮುಳುಗುತ್ತದೆ. ಕಲಬೆರಕೆಯದಾಗಿದ್ದರೆ ಅದು ಅರೆಬರೆ ಕರಗಿಬಿಡಬಹುದು ಅಥವಾ ಇನ್ನಷ್ಟು ಸಣ್ಣ ಸಣ್ಣ ತುಣುಕುಗಳಾಗಿ ಒಡೆಯಬಹುದು.

ಆಕಾರ ಬದಲಾಗುತ್ತದೆ

ಒಂದು ಪ್ಯಾನ್‌ನಲ್ಲಿ ಒಂದು ಸಣ್ಣ ತುಂಡು ಪನೀರ್‌ ಅನ್ನು ಯಾವುದೇ ನೀರು ಅಥವಾ ಎಣ್ಣೆಯನ್ನು ಹಾಕದೆ ಹಾಗೆಯೇ ಬಿಡಿ. ಉರಿಯ ತಾಪಕ್ಕೆ ಪ್ಯಾನ್‌ನಲ್ಲಿ ಅದು ನೀರು ಬಿಡಲಾರಂಭಿಸುತ್ತದೆ. ಆದರೆ, ತನ್ನ ಆಕಾರವನ್ನು ಹಾಗೆಯೇ ಉಳಿಸಿಕೊಳ್ಳುತ್ತದೆ. ಕಲಬೆರಕೆಯ ಪನೀರ್‌ ಹೆಚ್ಚು ಕರಗಿ ಹೆಚ್ಚು ನೀರು ಬಿಡಬಹುದು. ಹಾಗೂ ಅದರ ಆಕಾರ ಬದಲಾಗಬಹುದು.

Paneer

ಅಯೋಡಿನ್‌ ಟಿಂಚರ್‌ ಟೆಸ್ಟ್‌

ಒಂದು ಸಣ್ಣ ಪಾತ್ರೆಯಲ್ಲಿ ನೀರು ತೆಗೆದುಕೊಂಡು ಪನೀರ್‌ನ ಸಣ್ಣ ತುಂಡನ್ನು ಹಾಕಿ ಅದನ್ನು ಕುದಿಸಿ. ನಂತರ ಅದಕ್ಕೆ ಕೆಲವು ಹನಿ ಅಯೋಡಿನ್‌ ಟಿಂಚರ್‌ ಅನ್ನು ಹಾಕಿ. ಅದು ನೀಲಿಯಾಗಿ ಬದಲಾದರೆ ಅದರಲ್ಲಿ ಸ್ಟಾರ್ಚ್‌ ಅಥವಾ ಬೇರೇನೋ ಮಿಕ್ಸ್‌ ಮಾಡಲಾಗಿದೆ ಎಂದರ್ಥ.

ಇದನ್ನೂ ಓದಿ: Drinks for Summer: ಬೇಸಿಗೆಯಲ್ಲಿ ತಂಪಾಗಿರಬೇಕೆ? ಈ ಪೇಯಗಳನ್ನು ತಪ್ಪದೇ ಕುಡಿಯಿರಿ

Continue Reading

ಆರೋಗ್ಯ

Tears Of Joy: ಕಣ್ಣೀರು ಸುರಿಸುವುದರಿಂದಲೂ ಲಾಭವಿದೆ!

ಕಣ್ಣೀರಿನಿಂದ ಲಾಭವಿದೆ! ಅಂದರೆ ನಮ್ಮ ಕಿಸೆ ತುಂಬುತ್ತದೆ ಎಂದಲ್ಲ, ಮನಸ್ಸು ತುಂಬಿ ಬಂದು ಒಳಗಿನ ಒತ್ತಡ ಹೆಚ್ಚಾದಾಗ ಅದನ್ನು ಹೊರ ಹಾಕುವುದಕ್ಕೆ ನಮಗೆ ಕಣ್ಣೀರು ಬೇಕು. ಬೇಸರದಲ್ಲಿ ಅಳುವಷ್ಟೇ ಸಹಜ, ಖುಷಿಯಾದಾಗ ಆನಂದದ ಕಣ್ಣೀರು. ಇದರಿಂದ ದೇಹದಲ್ಲಿ ಪೇರಿಸಲ್ಪಟ್ಟ ಒತ್ತಡ, ಆತಂಕಗಳು ಕಣ್ಣೀರಾಗಿ ಕರಗಿ ಹರಿದು ಹೋಗುತ್ತವೆ. ಈ ಕುರಿತ (Tears Of Joy) ಮಾಹಿತಿ ಇಲ್ಲಿದೆ.

VISTARANEWS.COM


on

Tears Of Joy
Koo

ಬೇಸಿಗೆಯಲ್ಲಿ ಶರೀರದ ಉಷ್ಣತೆ ಹೆಚ್ಚಾದರೆ ಅದನ್ನು ತಣಿಸಲು ನಾವು ಬೆವರುವುದಿಲ್ಲವೇ? ಹಾಗೆಯೇ, ದೇಹಕ್ಕೆ ಬೇಡದಿರುವಂಥ ಯಾವುದು ಹೆಚ್ಚಾದರೂ ಅದನ್ನು ಹೊರಗೆ ಹಾಕುವುದಕ್ಕೆ ಶರೀರಕ್ಕೊಂದು ವಿಸರ್ಜನಾ ಕ್ರಮವೆಂಬುದಿದೆ. ಹಾಗಿರುವುದರಿಂದಲೇ ನಮ್ಮ ದೇಹ ಆರೋಗ್ಯಪೂರ್ಣವಾಗಿ ಇರುವುದು. ಇದು ಶರೀರಕ್ಕೆ ಮಾತ್ರವೇ ಅಲ್ಲ, ಮನಸ್ಸಿನ ವಿಷಯದಲ್ಲೂ ಹೌದು. ಭಾವನೆಗಳ ಒತ್ತಡ ಅತಿಯಾದಾಗ ಅದನ್ನು ಹೊರಕ್ಕೆ ಹಾಕುವುದಕ್ಕೆ ಕಣ್ಣೀರು ನಮಗೆ ನೆರವಾಗುತ್ತದೆ (Tears Of Joy) ಎಂಬುದನ್ನು ಗಮನಿಸಿದ್ದೀರಾ? ದುಃಖ, ಬೇಸರವಾದಾಗ ಅಳುವಷ್ಟೇ ಸಹಜ, ಸಂತಸದಲ್ಲೂ ಅಳುವುದು. ಒಂದೊಮ್ಮೆ ಹೀಗೆ ಭಾವನೆಗಳ ಒತ್ತಡದಲ್ಲಿ ಕಣ್ಣೀರು ಬರುವುದನ್ನು ನಾಚಿಕೆ ಎಂದುಕೊಂಡರೆ- ತಪ್ಪು ತಿಳುವಳಿಕೆಯಿದು. ಸಂತೋಷದಲ್ಲಿ ಕಣ್ಣೀರು ಸುರಿಸುವುದರಲ್ಲೂ ಬಹಳಷ್ಟು ಪ್ರಯೋಜನಗಳಿವೆ. ಹಾಗಾಗಿ ಹೆಚ್ಚು ಯೋಚಿಸದೆ ಕಣ್ಣು, ಮೂಗು ಒರೆಸಿಕೊಳ್ಳುವುದಕ್ಕೆ ಕರವಸ್ತ್ರ ಇರಿಸಿಕೊಳ್ಳಿ.

happy Tears

ಖುಷಿಗೂ ಕಣ್ಣೀರೇ?

ನಮ್ಮ ಭಾವನೆಗಳ ಒತ್ತಡ ಅತಿಯಾದಾಗ ಅದನ್ನು ಹೊರಹಾಕುವಂಥ ನೈಸರ್ಗಿಕ ವ್ಯವಸ್ಥೆಯೆಂದರೆ ಕಣ್ಣೀರು ಹಾಕುವುದು. ಕಣ್ಣೀರು ಹಾಕುವುದಕ್ಕೆ ಖುಷಿ-ಬೇಸರ ಎಂಬ ಭೇದವಿಲ್ಲ. ಮನಸ್ಸಿನಲ್ಲಿ, ದೇಹದಲ್ಲಿ ಪೇರಿಸಲ್ಪಟ್ಟ ಒತ್ತಡ, ಆತಂಕಗಳು ಕಣ್ಣೀರಾಗಿ ಕರಗಿ ಹರಿದು ಹೋಗುವುದರಿಂದ ದೇಹ-ಮನಸ್ಸುಗಳ ಸ್ವಾಸ್ಥ್ಯಕ್ಕೆ ಬಹಳಷ್ಟು ಲಾಭವಿದೆ. ಕಣ್ಣು-ಮೂಗು ಒರೆಸಿಕೊಳ್ಳುತ್ತಿದ್ದಂತೆ ಮನಸ್ಸು ಶಾಂತವಾಗುವುದು, ದೇಹಾದ್ಯಂತ ಹರಡಿದ್ದ ಉದ್ವಿಗ್ನತೆ ಮಾಯವಾಗುವುದನ್ನು ಗಮನಿಸಬಹುದು. ಆನಂದಭಾಷ್ಪ ಸುರಿಸುವುದರಿಂದ ಆಗುವ ಲಾಭಗಳೇನು ಎಂದರೆ-

ಮನಸ್ಸು ಶಾಂತ

ಅತಿಯಾದ ಖುಷಿಯಲ್ಲಿ ಎಂಡಾರ್ಫಿನ್‌, ಆಕ್ಸಿಟೋಸಿನ್‌ ಮತ್ತು ಡೋಪಮಿನ್‌ ಮುಂತಾದ ಚೋದಕಗಳನ್ನು ದೇಹ ಸ್ರವಿಸುತ್ತದೆ. ಇಂಥ ಸಂದರ್ಭದಲ್ಲಿ ಭಾವನೆಗಳ ಹೊಳೆಯಿಂದ ಹೊರತಂದು ಮನಸ್ಸನ್ನು ಸ್ಥಿಮಿತಗೊಳಿಸುವುದಕ್ಕೆ ಸಂತೋಷದ ಕಣ್ಣೀರು ಸಹಾಯ ಮಾಡುತ್ತದೆ.

ಭಾವಗಳಿಗೆ ಕೋಡಿ

ನಿತ್ಯದ ಬದುಕಿನಲ್ಲಿ ಸುಪ್ತವಾಗಿ ಮನದಲ್ಲಿ ಅಡಗುವ ಭೀತಿ, ನೋವು, ಶೋಕ, ಖುಷಿ, ಸಂಭ್ರಮ ಮುಂತಾದ ಹತ್ತೆಂಟು ಭಾವನೆಗಳು ಸಹಿಸಲು ಅಸಾಧ್ಯವಾದ ಒತ್ತಡವನ್ನು ಉಂಟುಮಾಡುತ್ತವೆ. ಕಣ್ಣೀರು ಅವುಗಳಿಗೆ ಹೊರಹೋಗುವ ದಾರಿಯನ್ನು ತೋರಿಸುತ್ತದೆ. ಮಕ್ಕಳ ವಿವಾಹದಲ್ಲಿ ಹೆತ್ತವರು ಸುರಿಸುವ ಆನಂದಭಾಷ್ಪ ಇರಬಹುದು, ಹೊಸ ಕೆಲಸ ಸಿಕ್ಕ ಸಂಭ್ರಮ ಆದರೂ ಸರಿಯೇ- ಅಂತೂ ಹಳೆಯದೆಲ್ಲಾ ಸುಪ್ತ ಖಾತೆಗಳನ್ನು ಹೊರತೆಗೆದು ಕಣ್ಣೀರು ಕರೆಯುತ್ತದೆ ಮನಸ್ಸು. ಇದರಿಂದ ಜೀವಕ್ಕೆ ಬಹಳ ಆರಾಮ ಲಭಿಸುವುದು ಅನುಭವಕ್ಕೆ ಬರುತ್ತದೆ.

Daughter Wipes Away Mother's Tears of Joy

ಸಂವಹನದ ಮಾಧ್ಯಮ

ಮಾನವ ಸಂಘಜೀವಿ. ಜೊತೆಗಿರುವವರೊಡನೆ ಸಂವಹನ ನಡೆಸುತ್ತಲೇ ಬದುಕು ನಡೆಸಬೇಕು. ಇಷ್ಟಾಗಿಯೂ ಕೆಲವೊಮ್ಮೆ ಎಲ್ಲವನ್ನೂ ವಾಚ್ಯವಾಗಿಯೇ ಹೇಳಲು ಸಾಧ್ಯವಾಗುವುದಿಲ್ಲ. ಅದರಲ್ಲೂ ಭಾವನೆಗಳು ಅತಿಯಾದ ಹೊತ್ತಿನಲ್ಲಿ ಮಾತು ಸೋಲುವುದು ಸಹಜ. ಎದುರಿನವರ ಕಣ್ಣೀರು ಕಂಡಾಕ್ಷಣವೇ ಅವರ ಪ್ರೀತಿ, ಕೃತಜ್ಞತೆಯಂಥ ಭಾವನೆಗಳು ಫಕ್ಕನೆ ಮನಸ್ಸಿಗೆ ನಾಟುತ್ತವೆ. ಮನಸ್ಸುಗಳನ್ನು ಹತ್ತಿರವಾಗಿಸುತ್ತವೆ. ಆಕ್ಸಿಟೋಸಿನ್‌ನಂಥ ಚೋದಕಗಳು ಸಾಮಾಜಿಕವಾಗಿ ಇನ್ನೊಬ್ಬರೊಂದಿಗೆ ಸಂಪರ್ಕ ಸಾಧಿಸಲು ಸಹ ನೆರವಾಗುತ್ತವೆ. ಮಾನಸಿಕ ಸ್ಥಿರತೆಯಿಂದ ಬದುಕು ಸ್ಥಿರವಾಗುವುದು ಹೌದು.

ದೇಹಕ್ಕೂ ಲಾಭ

ಈವರೆಗಿನ ಉಪಯುಕ್ತತೆಗಳೆಲ್ಲಾ ಹೆಚ್ಚಿನವು ಮಾನಸಿಕ ಸ್ತರದಲ್ಲಿನವು. ಆದರೆ ಅಷ್ಟೇ ಅಲ್ಲ, ದೇಹಕ್ಕೂ ಉಪಯೋಗವಿದೆ. ಕಣ್ಣನ್ನು ಸ್ವಚ್ಚಗೊಳಿಸಲು ಕಣ್ಣೀರು ಸಾಧನ. ಇದರಿಂದ ಕಣ್ಣಿನ ಸೋಂಕನ್ನು ಸಹ ತಡೆಗಟ್ಟಬಹುದು. ಅಳುವುದರಿಂದ ಉಸಿರಾಟ ಮತ್ತು ಹೃದಯ ಬಡಿತವೂ ನಿಯಂತ್ರಣಕ್ಕೆ ಬರುತ್ತದೆ. ಈ ಎಲ್ಲವುಗಳಿಂದ ಒತ್ತಡವನ್ನು ನಿಭಾಯಿಸುವ ಕ್ಷಮತೆ ಹೆಚ್ಚುತ್ತದೆ. ಹಾಗಾಗಿ ಎಂದಾದರೂ ಭಾವನೆಗಳ ಮಹಾಪೂರದಲ್ಲಿ ತೇಲುತ್ತಿರುವಾಗ ಅಳು ಬಂತೋ, ನಾಚಿಕೆ ಪಡಬೇಡಿ. ಮನಸ್ಸು ತುಂಬುವಷ್ಟು ಕಣ್ಣೀರು ಸುರಿಸಿ, ಆರೋಗ್ಯವಂತರಾಗಿರಿ.

ಇದನ್ನೂ ಓದಿ: Home Remedy For Cracked Heels: ಒಡೆದ ಹಿಮ್ಮಡಿಗಳಿಗೆ ಕರ್ಪೂರದ ಎಣ್ಣೆ ಪರಿಣಾಮಕಾರಿ

Continue Reading
Advertisement
Paris Olympics
ಕ್ರೀಡೆ32 mins ago

Paris Olympics: ಪ್ಯಾರಿಸ್​ ಒಲಿಂಪಿಕ್ಸ್​ಗೆ ಅರ್ಹತೆ ಪಡೆದ ಭಾರತದ 7 ಶಟ್ಲರ್​ಗಳು; ಕನ್ನಡತಿ ಅಶ್ವಿನಿ ಪೊನ್ನಪ್ಪಗೂ ಅವಕಾಶ

ವಿದೇಶ43 mins ago

Pakistan: “ಭಾರತ ಸೂಪರ್‌ ಪವರ್‌ಪುಲ್‌ ರಾಷ್ಟ್ರ..ಪಾಕಿಸ್ತಾನ ಮಾತ್ರ ಭಿಕ್ಷೆ ಬೇಡ್ತಿದೆ”; ಹೀಗಂದಿದ್ದು ಯಾರು ಗೊತ್ತಾ?

IPL 2024
ಕ್ರೀಡೆ1 hour ago

IPL 2024: ಸೌರವ್ ಗಂಗೂಲಿಯ ಐಪಿಎಲ್​ ದಾಖಲೆ ಮುರಿದ ಫಿಲ್​ ಸಾಲ್ಟ್​

Hassan Pen Drive Case
ಪ್ರಮುಖ ಸುದ್ದಿ1 hour ago

Hassan Pen Drive Case: ಎಸ್‌ಐಟಿಗೆ 18 ಸಿಬ್ಬಂದಿ ನೇಮಕ; ಅಶ್ಲೀಲ ವಿಡಿಯೋದಲ್ಲಿ ಇರುವವರು ಯಾರು?

T20 World Cup 2024
ಕ್ರೀಡೆ2 hours ago

T20 World Cup 2024: ಇಂದು ಟಿ20 ವಿಶ್ವಕಪ್​ಗೆ ಭಾರತ ತಂಡ ಪ್ರಕಟ; ಸಂಭಾವ್ಯ ತಂಡ ಹೀಗಿದೆ

Manipur Violence
ದೇಶ2 hours ago

Manipur Violence:ಮಹಿಳೆಯರ ವಿವಸ್ತ್ರ ಕೇಸ್‌; ಪೊಲೀಸರೆದುರೇ ನಡೆದಿತ್ತು ನೀಚ ಕೃತ್ಯ

taliban writing muniraju
ಕ್ರೈಂ2 hours ago

Taliban Writing: ಗೋಡೆ ಮೇಲೆ ತಾಲಿಬಾನ್‌ ಬರಹ ಬರೆದ ಪೇದೆ ಮುನಿರಾಜು ಈಗ ಮುಸ್ಲಿಂ ಅಂತೆ!

IPL 2024 Points Table
ಕ್ರೀಡೆ2 hours ago

IPL 2024 Points Table: ಡೆಲ್ಲಿ ಕ್ಯಾಪಿಟಲ್ಸ್​ ಸೋಲಿನ ಬಳಿಕ ಹೀಗಿದೆ ಅಂಕಪಟ್ಟಿ

Rohit Sharma Birthday
ಕ್ರೀಡೆ3 hours ago

Rohit Sharma Birthday: ಹಿಟ್​ಮ್ಯಾನ್​ ಖ್ಯಾತಿಯ ರೋಹಿತ್​ಗೆ 37ನೇ ವರ್ಷದ ಹುಟ್ಟು ಹಬ್ಬದ ಸಂಭ್ರಮ

road accident anekal
ಬೆಂಗಳೂರು ಗ್ರಾಮಾಂತರ3 hours ago

Road Accident: ಪಂಚರ್‌ ಹಾಕುತ್ತಿದ್ದ ಲಾರಿ ಚಾಲಕ ಬೈಕ್‌ ಡಿಕ್ಕಿಯಾಗಿ ಸಾವು, ಹಿಟ್‌ ಆ್ಯಂಡ್‌ ರನ್‌ನಲ್ಲಿ ಯುವಕ ಮೃತ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

dina bhavishya read your daily horoscope predictions for April 30 2024
ಭವಿಷ್ಯ6 hours ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

PM Narendra modi in Bagalakote and Attack on Congress
Lok Sabha Election 202422 hours ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 202423 hours ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ1 day ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Narendra Modi
Lok Sabha Election 20242 days ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

PM Narendra Modi in Sirsi
Lok Sabha Election 20242 days ago

PM Narendra Modi: ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

If Congress comes to power all your assets will belong to Government says PM Narendra Modi
Lok Sabha Election 20242 days ago

Narendra Modi: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀವು ಕಷ್ಟಪಟ್ಟು ಸಂಪಾದಿಸಿದ ಆಸ್ತಿಯೆಲ್ಲ ಅನ್ಯರ ಪಾಲು: ಮೋದಿ ಎಚ್ಚರಿಕೆ

Congress ties with Aurangzeb supporters and Girls killed under his rule says Narendra Modi
Lok Sabha Election 20242 days ago

Narendra Modi: ಔರಂಗಜೇಬ್ ಬೆಂಬಲಿಗರ ಜತೆ ಕಾಂಗ್ರೆಸ್ ದೋಸ್ತಿ; ಇವರ ಆಡಳಿತದಲ್ಲಿ ಹೆಣ್ಣು ಮಕ್ಕಳ ಹತ್ಯೆ: ಮೋದಿ ವಾಗ್ದಾಳಿ

Modi in Karnataka stay in Belagavi tomorrow and Huge gatherings at five places
Latest2 days ago

Narendra Modi Live : ಪ್ರಧಾನಿ ಮೋದಿಯ ಬೆಳಗಾವಿ ಪ್ರಚಾರ ಸಭೆಯ ನೇರ ಪ್ರಸಾರವನ್ನು ಇಲ್ಲಿ ವೀಕ್ಷಿಸಿ…

Dina Bhavishya
ಭವಿಷ್ಯ2 days ago

Dina Bhavishya : ಈ ರಾಶಿಯವರಿಗೆ ದಿನದ ಮಟ್ಟಿಗೆ ಖರ್ಚು ಹೆಚ್ಚು

ಟ್ರೆಂಡಿಂಗ್‌