ವಿಸ್ತಾರ ಯುಗಾದಿ ಕಥಾಸ್ಪರ್ಧೆ: ತೀರ್ಪುಗಾರರ ಟಿಪ್ಪಣಿ: ಸಾಮಾಜಿಕ ಪ್ರಸ್ತುತತೆಯೇ ಜೀವಾಳವಾಗಿರುವ ಕತೆಗಳು - Vistara News

ಕಲೆ/ಸಾಹಿತ್ಯ

ವಿಸ್ತಾರ ಯುಗಾದಿ ಕಥಾಸ್ಪರ್ಧೆ: ತೀರ್ಪುಗಾರರ ಟಿಪ್ಪಣಿ: ಸಾಮಾಜಿಕ ಪ್ರಸ್ತುತತೆಯೇ ಜೀವಾಳವಾಗಿರುವ ಕತೆಗಳು

ವಿಸ್ತಾರ ನ್ಯೂಸ್‌ ಯುಗಾದಿ ಕಥಾಸ್ಪರ್ಧೆಯಲ್ಲಿ ಬಹುಮಾನ ಪಡೆದ ಕಥೆಗಳ ಬಗ್ಗೆ ತೀರ್ಪುಗಾರರು ವಿವರವಾದ ಟಿಪ್ಪಣೆ ಬರೆದಿದ್ದಾರೆ. ತೀರ್ಪುಗಾರರಲ್ಲಿ ಒಬ್ಬರಾದ ಬಿ.ಜನಾರ್ದನ ಭಟ್‌ ಬರೆದ ವಿವರವಾದ ಟಿಪ್ಪಣಿ ಇಲ್ಲಿದೆ.

VISTARANEWS.COM


on

vistara short story contest winners
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

b-janardhana-bhat

:: ಡಾ. ಬಿ. ಜನಾರ್ದನ ಭಟ್

ಈ ಇಪ್ಪತ್ತೈದು ಕತೆಗಳನ್ನು ಕನ್ನಡದ ಈ ಕಾಲಘಟ್ಟದ ಕತೆಗಳ ಪ್ರಾತಿನಿಧಿಕ ಕತೆಗಳು ಎಂದು ಭಾವಿಸಿದರೆ ಈ ಕತೆಗಳನ್ನು ಒಟ್ಟಾರೆಯಾಗಿ ಸಮೀಕ್ಷಿಸುವ ಮೂಲಕ ಸಣ್ಣಕತೆಗಳ ಒಲವು ನಿಲುವುಗಳನ್ನು ಅರಿಯಬಹುದು ಅನಿಸುತ್ತದೆ.

ಅದಕ್ಕಿಂತ ಮೊದಲು ಸಣ್ಣಕತೆಗಳ ಪ್ರಕಾರಕ್ಕೆ ಸಂಬಂಧಿಸಿದ ಕೆಲವು ಮಾತುಗಳು: ಸಣ್ಣಕತೆಗಳಲ್ಲಿ ಒಂದು ಕಥಾಂಶ ಅಥವಾ ಟೇಲ್ ಪ್ರಾಪರ್ ಮತ್ತು ಅದರ ಮೂಲಕ ವ್ಯಕ್ತವಾಗುವ ಆಶಯ – ಕತೆಗಾರ ರೂಪಿಸುವ ಒಂದು ಪರಿಣಾಮ – ಓದುಗರಿಗೆ ಮುಖ್ಯವಾಗಿ ಗಮನಕ್ಕೆ ಬರುವ ಅಂಶಗಳು. ಸತ್ಯದ ಅನ್ವೇಷಣೆ ಬಹುಮಟ್ಟಿಗೆ ಕತೆಗಾರಿಕೆಯ ಉದ್ದೇಶ.

ಆದರೆ ಸಣ್ಣಕತೆಯು ರ್ಯಾಶಿಯಾಸಿನೇಷನ್ (ratiocination) ಅಥವಾ ತರ್ಕಪ್ರಕ್ರಿಯೆಯ ಕಥಾನಕವೂ ಹೌದು – ಎನ್ನುವುದನ್ನು ಮೊದಲನೆಯ ಆಧುನಿಕ ಕತೆಗಾರ ಎಡ್ಗರ್ ಅಲನ್ ಪೋ-ನೇ ಹೇಳಿದ್ದಾನೆ. ಈ ಕಾಲದ ಕತೆಗಳಿಗೆ ಈ ಮಾದರಿ ಹೆಚ್ಚು ಪ್ರಿಯವಾಗಿದೆ. ಬಹುತೇಕ ಕತೆಗಳು ರ್ಯಾಶಿಯಾಸಿನೇಷನ್ ಮಾದರಿಯವು. ಇದನ್ನು ಬಳಸುವುದರಲ್ಲಿ ಹೆಚ್ಚುಗಾರಿಕೆಯಾಗಲಿ, ದೋಷವಾಗಲಿ ಇಲ್ಲ. ಆದರೆ ಕಥೆಯ ಸಂವಿಧಾನವನ್ನು ಕಲ್ಪಿಸುವಾಗ ಡೆನ್ಯೂಮೋ ಅಥವಾ ಇಳಿಮುಖ ಕ್ರಿಯೆ ಮತ್ತು ಅಂತ್ಯವನ್ನು – ಅಂತ್ಯವು ಬೀರಬೇಕಾದ ಪರಿಣಾಮವನ್ನು – ಕಲ್ಪಿಸುವಲ್ಲಿ ಬಹುತೇಕ ಕತೆಗಾರರು ವಿಫಲರಾಗುತ್ತಿರುವುದನ್ನು ಈ ಕೆಲವು ಕತೆಗಳಲ್ಲಿ ನಾನು ಗಮನಿಸಿದ್ದೇನೆ.

ಸಣ್ಣಕತೆ ನೈತಿಕ ಅರಿವಿನಲ್ಲಿನ ಬದಲಾವಣೆಯನ್ನು ತೋರಿಸುತ್ತದೆ; ಕಾದಂಬರಿಯಲ್ಲಿ ಬದುಕಿನ ನೈತಿಕ ಬದಲಾವಣೆಯನ್ನು ಚಿತ್ರಿಸುತ್ತದೆ (ಸಣ್ಣ ಕತೆಯು ಇದನ್ನು ಸೂಚಿಸಬಹುದಷ್ಟೆ). ಶೋರರ್ ಪ್ರಕಾರ – ಸಣ್ಣಕತೆಯಲ್ಲಿ ‘ನೈತಿಕ ಸಾಕ್ಷಾತ್ಕಾರದ ನೆಲೆ’ (ಆರ್ಟ್ ಆಫ್ ಮೋರಲ್ ರಿವಿಲೇಶನ್) ಇರುತ್ತದೆ; ಕಾದಂಬರಿಯಲ್ಲಿ ‘ನೈತಿಕ ವಿಕಾಸದ ನೆಲೆ’ (ಆರ್ಟ್ ಆಫ್ ಮೋರಲ್ ಇವೊಲ್ಯೂಷನ್) ಇರುತ್ತದೆ. ಸಣ್ಣಕತೆಯು ವಿಕಾಸದ ಪ್ರಕ್ರಿಯೆಯನ್ನು ಪರೀಕ್ಷಿಸಲು ಅದರಲ್ಲಿ ಮನುಷ್ಯ ಸಂಬಂಧಗಳು, ಅಥವಾ ಸಮಾನಾಂತರ ಕತೆಗಳು / ವೈದೃಶ್ಯಗಳು ಬೇಕಾಗುತ್ತವೆ. ಹೀಗೆ ಪರೀಕ್ಷಿಸುವ ವೇದಿಕೆಯಾಗಿದ್ದರೂ ಕೂಡ ಸಣ್ಣ ಕತೆಯಲ್ಲಿ ಒಂದು ಅನಿಸಿಕೆಯಾಗಿ ಅಥವಾ ತೀರ್ಮಾನವಾಗಿ ಮಾತ್ರ ಈ ನೈತಿಕ ಅರಿವಿನ ಸಾಕ್ಷಾತ್ಕಾರ ಬರುತ್ತದೆ. ಈ ಪರಿಶೀಲನೆಯ ಮೂಲಕ ಒಂದು ಮೌಲ್ಯವಾಗಿ ಸ್ವೀಕರಿಸಲ್ಪಟ್ಟ ನೈತಿಕ ಸಾಕ್ಷಾತ್ಕಾರದ ನೆಲೆಯು ಅದರ ಬೆಳವಣಿಗೆ ಅಥವಾ ನಿಜವಾದ ಸಾಕ್ಷಾತ್ಕಾರವನ್ನು ಓದುಗರ ಊಹೆಗೆ ಬಿಡಬೇಕಾಗುತ್ತದೆ.

ಫ್ರಾಂಕ್ ಒಕಾನರ್ ಹೇಳುವ ಪ್ರಕಾರ ಸಣ್ಣಕತೆಗಳ ನಾಯಕರು ಮುಳುಗಿಹೋದ ಜನರ (ಸಬ್‍ಮರ್ಜ್‍ಡ್ ಪಾಪ್ಯುಲೇಶನ್ ಗ್ರೂಪ್) ಪ್ರತಿನಿಧಿಗಳಾಗಿರುತ್ತಾರೆ. ಹಾಗಾಗಿ ಪತನದ ಅನುಭವ ಕೊಡುವ ಕತೆಗಳೇ ಹೆಚ್ಚು. ಈ 25 ಕತೆಗಳ ಮಟ್ಟಿಗೂ ಅದನ್ನು ಹೇಳಬಹುದು. ಇಲ್ಲಿ ಬಹುಮಾನ ಪಡೆದ ಕತೆಗಳ ಬಗ್ಗೆ ಒಟ್ಟಿನಲ್ಲಿ ಕೆಲವು ಮಾತುಗಳನ್ನು ಹೇಳುವುದಾದರೆ ಇವು ಸಮಕಾಲೀನತೆ ಉಳ್ಳ, ಸಾಮಾಜಿಕ ಪ್ರಸ್ತುತತೆಯುಳ್ಳ ಕತೆಗಳಾಗಿರುವುದರ ಜತೆಗೆ ‘ಮುಳುಗಿಹೋದ’ ಸ್ಥಿತಿಯಿಂದ ಎದ್ದು ಬರುವ ಛಲವನ್ನು ಅಥವಾ ಮುಳುಗುತ್ತಿರುವವರಿಗೆ ಕೈನೀಡಿ ಎಬ್ಬಿಸುವ ಛಾತಿಯನ್ನು ತೋರಿಸುತ್ತವೆ. ಹಾಗಾಗಿ ಅವು ಬಹುಮಾನಕ್ಕೆ ಅರ್ಹವಾಗಿವೆ. ಈ ಮಾನದಂಡದಲ್ಲಿ ಅಥವಾ ಯಾವುದೇ ಮಾನದಂಡದಲ್ಲಿ ನೋಡಿದರೂ ಬಹುಮಾನಕ್ಕೆ ಅರ್ಹವಾಗಿರುವ ಇನ್ನಷ್ಟು ಕತೆಗಳು ಈ 25 ಕತೆಗಳಲ್ಲಿವೆ. ಕೇವಲ ಎಂಟು ಕತೆಗಳನ್ನು ಆರಿಸಿಕೊಳ್ಳಬೇಕಾದಾಗ, ಅಂತಹ ಕೆಲವು ಕತೆಗಳನ್ನು ಹೊರಗಿಡುವ ತೀರ್ಮಾನ ಕೈಗೊಳ್ಳುವುದು ಕೂಡ ಸ್ವಲ್ಪ ಕಷ್ಟವೇ ಆಗಿತ್ತು.

ನನಗೆ ಸಂಪಾದಕರು ಕಳುಹಿಸಿಕೊಟ್ಟಿರುವ ಅಂತಿಮ ಸುತ್ತಿಗೆ ಆಯ್ಕೆಯಾದ 25 ಕತೆಗಳಲ್ಲಿ ಮೊದಲ ಎಂಟು ಸ್ಥಾನಗಳಿಗೆ ಆಯ್ಕೆಯಾಗಿರುವ ಕತೆಗಳ ಕುರಿತು ಟಿಪ್ಪಣಿಗಳು ಹೀಗಿವೆ:

ಪ್ರಥಮ ಬಹುಮಾನ ಪಡೆದ ಕತೆ: ಸೋಮನ ಕುಣಿತ

ಸೋಮನ ಕುಣಿತ ಎನ್ನುವುದು ಒಂದು ಗ್ರಾಮೀಣ ಆಚರಣೆ ಎನ್ನುವುದು ಕತೆಯಿಂದ ತಿಳಿದುಬರುವ ಮಾಹಿತಿ; ಈ ಆಚರಣೆಯ ಕುರಿತು ತಿಳಿಯದವರಿಗೂ ಕತೆಯನ್ನು ಓದಿ ಮೆಚ್ಚಲು ಬೇಕಾಗುವಷ್ಟು ಮಾಹಿತಿ ಕತೆಯೊಳಗೆಯೆ ಸಿಗುವುದರಿಂದ ಈ ಆಚರಣೆಯ ಬಗ್ಗೆ ತಿಳಿಯದ ಓದುಗರಿಗೆ ಸಮಸ್ಯೆಯಾಗುವುದಿಲ್ಲ. ಕೊಂಡಮ್ಮ ದೇವಿ ಎಂಬ ಗ್ರಾಮದೇವತೆಯ ಇಬ್ಬರು ಅಂಗರಕ್ಷಕರಲ್ಲಿ ರೌದ್ರ ಸೋಮ ಮತ್ತು ಸೌಮ್ಯ ಸೋಮ ಎಂಬ ಇಬ್ಬರು ಪಾತ್ರಧಾರಿಗಳಿರಬೇಕು. ರೌದ್ರ ಸೋಮನ ವೇಷಧಾರಿ ಕೆಂಪು ಬಣ್ಣ ಬಳಿದುಕೊಂಡು 15 ಕಿಲೋ ಭಾರವಾದ ರೌದ್ರ ಸೋಮನನ್ನು ಹೊತ್ತು ಕುಣಿಯಬೇಕು. ರಂಗಯ್ಯ ರೌದ್ರ ಸೋಮನನ್ನು ಹೊತ್ತು ಕುಣಿಯುತ್ತಿದ್ದ ಶಕ್ತಿವಂತ. ಅವನ ತಮ್ಮ ನರಸುಮ್ಮ ಹಳದಿ ಬಣ್ಣದ ಸೌಮ್ಯ ಸೋಮನನ್ನು ಹೊತ್ತು ಸುಮ್ಮನೆ ನಿಂತರೆ ಸಾಕಿತ್ತು. ರಂಗಯ್ಯ ಊರು ಬಿಟ್ಟು ಹೋದ ಮೇಲೆ ರೌದ್ರ ಸೋಮನನ್ನು ಹೊರುವವರು ಯಾರೂ ಸಿಕ್ಕಿರಲಿಲ್ಲ. ತನಗೆ ಬದುಕುವ ದಾರಿ ಮಾಡಿಕೊಡುತ್ತಿದ್ದ ತಮಟೆಯ ಚರ್ಮ ಹರಿದು ಬೇರೊಂದು ಚರ್ಮಕ್ಕಾಗಿ ದೊಡ್ಡಮದುರೆಯ ಜಾತ್ರೆಯ ಕೋಣಬಲಿಯ ದಿನಕ್ಕೆ ಕಾಯುತ್ತಿದ್ದ ನರಸುಮ್ಮನಿಗೆ ನಿಷೇಧ ಇತ್ಯಾದಿ ಗೊಂದಲದಿಂದ ಚರ್ಮ ಸಿಗುವುದಿಲ್ಲ. ಎರಡು ದಿನ ಕಳೆದು ಜಾತ್ರೆಯಾಗುತ್ತಿದ್ದ ಪಕ್ಕದ ಸ್ವಾಂದೇನಹಳ್ಳಿಗೆ ಹೋದರೆ ಅಲ್ಲಿ ಪೊಲೀಸರು ಎಚ್ಚರಿಕೆಯಿಂದ ಕಾದುಕೊಂಡಿದ್ದು ಬಲಿಯಾಗದಂತೆ ತಡೆಯುತ್ತಾರೆ. ಹೊಟ್ಟೆಗಿಲ್ಲದೆ ಚರ್ಮಕ್ಕಾಗಿ ಕಾದುಕೊಂಡಿದ್ದ ನರಸುಮ್ಮನ ಸಾತ್ವಿಕ ರೋಷವು ಅವನನ್ನು ರೌದ್ರ ಸೋಮನನ್ನು ಹೊತ್ತುಕೊಂಡು ಕುಣಿಯುವಂತೆ ಪ್ರಚೋದಿಸುತ್ತದೆ. ಅವನ ರೌದ್ರ ಕುಣಿತದೊಂದಿಗೆ ಕತೆ ಕೊನೆಯಾಗುತ್ತದೆ.

ದಲಿತರ ಬಡತನ ಮತ್ತು ಜೀವನದ ಹೋರಾಟಗಳ ಒಂದು ಅದ್ಭುತ ಚಿತ್ರಣ ನೀಡುವ ಈ ಕತೆಯ ಭಾಷೆ, ಬಳಸುವ ರೂಪಕಗಳು ಎಲ್ಲವೂ ಸಶಕ್ತವಾಗಿವೆ. ಇದು ತನ್ನ ಒಡಲಲ್ಲಿಟ್ಟುಕೊಂಡಿರುವ ಸಮೃದ್ಧ ಜೀವನಾನುಭವ ಮತ್ತು ಅಷ್ಟೇ ಹೃದಯಸ್ಪರ್ಶಿಯಾಗಿ ಓದುಗನ ಅನುಭವವಾಗಿ ಮಾರ್ಪಡಿಸುವ ಶಕ್ತಿಯಿರುವ ಕತೆಯಾದುದರಿಂದ ಮೊದಲನೆಯ ಬಹುಮಾನಕ್ಕೆ ಅರ್ಹವಾದ ಕತೆಯಾಗಿದೆ.

ಇಂತಹ ಕತೆಗಳ ಸಮಾಜಶಾಸ್ತ್ರೀಯ ವಿವರಗಳನ್ನು ವಾಸ್ತವದ ನೆಲೆಗಟ್ಟಿನಲ್ಲಿ ವಿಶ್ಲೇಷಿಸಲು ಹೋದಾಗ ಅವು, ವರ್ತಮಾನ ಕಾಲದ ಅನುಭವಗಳಿಂದ ಪ್ರಶ್ನಾರ್ಹವಾಗುತ್ತವೆ. ಅನಂತಮೂರ್ತಿಯವರ ‘ಸಂಸ್ಕಾರ’ದ ಶವಸಂಸ್ಕಾರದ ಪ್ರಶ್ನೆ, ಚಿನುಅ ಅಚೆಬೆಯವರ ಕತೆಗಳ ಆಚರಣೆಗಳು ಈ ರೀತಿಯವು. ಇಂತಹ ಕತೆಗಳು ಪ್ರಶ್ನೆಗಳನ್ನು ಮೀರಿ, ಕೆಲವೊಮ್ಮೆ ದೇಶ ಕಾಲಗಳನ್ನೂ ಮೀರಿ ಚಿರಂತನ ರೂಪಕಗಳಾಗುವ ಶಕ್ತಿಯನ್ನು ಪಡೆದಾಗ ಅವು ಯಶಸ್ವಿ ಸಾಹಿತ್ಯಕೃತಿಗಳಾಗುತ್ತವೆ. ‘ಸೋಮನ ಕುಣಿತ’ ಕತೆಗೆ ಆ ಬಗೆಯ ಶಕ್ತಿಯಿರುವುದರಿಂದ ಇದಕ್ಕೆ ಮೊದಲನೆಯ ಬಹುಮಾನ ಕೊಡಬಹುದೆನ್ನುವುದು ನನ್ನ ಅಭಿಪ್ರಾಯವಾಗಿದೆ.

ಎರಡನೆಯ ಬಹುಮಾನ: ಅಂತಃಕರಣದ ಟಿಪ್ಪಣಿಗಳು

ಈ ಕತೆಯು ಕುಟುಂಬದ ಕೇಂದ್ರದಲ್ಲಿರುವ ವಿದ್ಯಾವಂತ ಮತ್ತು ಪ್ರಜ್ಞಾವಂತ ಗೃಹಿಣಿಯೊಬ್ಬಳ (ಭಾಗೀರಥಿ) ಸ್ವಗತದ ಮೂಲಕ ನಿರೂಪಿಸಲ್ಪಟ್ಟಿದೆ. ಆಕೆಗೆ ಬಹುಶಃ ಡಿಪ್ರೆಶನ್ ತರಹದ ಸಮಸ್ಯೆಯಿದ್ದು ಆಕೆಯ ವೈದ್ಯೆ ಸುಮನ ಆಕೆಗೆ ತನ್ನ ಬಗೆಗೆ ಬರೆದಿಡುವಂತೆ ಹೇಳಿದ್ದರಿಂದ ಟಿಪ್ಪಣಿಯ ರೂಪದಲ್ಲಿ ಇದನ್ನು ಬರೆಯುತ್ತಿದ್ದಾಳೆ. ಅವಳ ಕನಸಿನಲ್ಲಿ ಅಥವಾ ಭ್ರಮಾಲೋಕದೊಳಗೆ ಒಬ್ಬ ಹುಡುಗ ದಂಡವನ್ನಾಡಿಸುತ್ತಾ ಪ್ರತ್ಯಕ್ಷವಾಗುತ್ತಾನೆ. ಇದು ಅಂತಃಪ್ರಜ್ಞೆಗೆ ರೂಪಕವಾಗಿರಬಹುದು. ಕಾರ್ಲ್ ಯೂಂಗ್ ಈ ರೀತಿ ಚಿತ್ರಗಳನ್ನು ಬರೆಸುವುದು, ಅಕ್ಷರಗಳಲ್ಲಿ ದಾಖಲಿಸುವುದು, ಹೇಳಿಕೊಳ್ಳುವುದು ಇತ್ಯಾದಿಗಳ ಮೂಲಕ ಮನಸ್ಸಿನ ಅಂತರಾಳದಲ್ಲಿ ಅಥವಾ ಅನ್‍ಕಾನ್ಷಸ್ ಹಂತದಲ್ಲಿರುವ ಅದುಮಿಟ್ಟ ಮನಸ್ಸಿನ ಕಲ್ಮಶಗಳನ್ನು ಹೊರತಂದು ಮನೋಚಿಕಿತ್ಸೆ ನೀಡುತ್ತಿದ್ದ. ನಿರೂಪಕಿಯ ಕನಸಿನ ಹುಡುಗ ಇಂತಹ ಒಂದು ಸಂಕೇತವಾಗಿರಬಹುದು.

ಆಕೆಯ ಗಂಡ ಪ್ರಕಾಶ ರಾಜಕಾರಣಿ – ಬೈಸೆಕ್ಸುವಲ್. ಆತನಿಗೆ ಮತ್ತೊಬ್ಬ ಪುರುಷನ ಜತೆಗೂ ಸಂಪರ್ಕವಿದೆ. ಅದರ ವಿಡಿಯೋ ಒಮ್ಮೆ ವೈರಲ್ ಆಗಿ ರಾಜಕೀಯ ಬಿರುಗಾಳಿ ಎದ್ದಾಗ ಈ ಕಥಾನಾಯಕಿ ಅದು ಸಹಜ ಎಂದು ಹೇಳಿ ಬಿರುಗಾಳಿಯನ್ನು ತಣ್ಣಗಾಗಿಸಿ ಗಂಡನನ್ನು ಕಾಪಾಡಿದ್ದಳು.

ಅವಳ ಇಬ್ಬರು ಮಕ್ಕಳೂ ಅತ್ತ ಗಂಡೂ ಅಲ್ಲದ ಹೆಣ್ಣೂ ಅಲ್ಲದ ಇಂಟರ್ ಸೆಕ್ಸ್ ಮಕ್ಕಳಾಗಿ ಹುಟ್ಟಿರುತ್ತಾರೆ. ಮೊದಲು ಹುಟ್ಟಿದ ಮಗುವನ್ನು ಹೆಣ್ಣಾಗಿ ಲಿಂಗಪರಿವರ್ತನೆ ಮಾಡಿಸಿ ಭೂಮಿ ಎಂದು ಹೆಸರಿಟ್ಟಿದ್ದರು. ಎರಡನೆಯದನ್ನು ಗಂಡಾಗಿ ಮಾಡಿ ಮುಗಿಲು ಎಂದು ಹೆಸರಿಟ್ಟಿದ್ದರು. ಬೆಳೆದ ಮಕ್ಕಳು ತಾವು ಏನಾಗಿದ್ದೇವೋ ಅದಕ್ಕಿಂತ ಭಿನ್ನವಾದ ಮನಸ್ಥಿತಿಯನ್ನು ಹೊಂದಿ ಅಪ್ಪ ಅಮ್ಮನ ಮೇಲೆ ಅಸಮಾಧಾನಗೊಂಡಿರುತ್ತಾರೆ. ಕೊನೆಗೆ ಮುಗಿಲು ಮನೆಬಿಟ್ಟು ಹೋಗಿರುತ್ತಾನೆ/ಳೆ.

ಅಪ್ರಜ್ಞೆಗೆ ಸಂಕೇತವಾಗಿರಬಹುದಾದ ಹುಡುಗ ಕೊನೆಯ ಭಾಗದಲ್ಲಿ ಅವಳನ್ನು ನುಂಗಲು ಬರುವಂತಹ ಅನುಭವ ನಿರೂಪಕಿಗೆ ಆಗುತ್ತದೆ. ಆಮೇಲೆ ಸ್ವಲ್ಪ ದಿನ ಚಿಕಿತ್ಸೆ ಪಡೆದು ಬರುತ್ತಾಳೆ. ಈ ಕತೆಯ ವೈಶಿಷ್ಟ್ಯ ಎಂದರೆ ಕತೆಯ ಹುಡುಗನನ್ನು ಬಿಟ್ಟರೆ ಉಳಿದ ವಿವರಗಳು ವಾಸ್ತವವೂ ಆಗಿವೆ, ಸಾಂಕೇತಿಕವೂ ಆಗಿವೆ. ಭಾಗೀರಥಿ ಅಥವಾ ಗಂಗೆ ಎನ್ನುವ ಹೆಸರು, ಭೀಷ್ಮಪ್ರತಿಜ್ಞೆಯ ಚಿತ್ರ ಇತ್ಯಾದಿ ಹಲವು ಸಂಕೇತಗಳು ಕತೆಯಲ್ಲಿವೆ.

ಕತೆಯಲ್ಲಿ ಟಿಪ್ಪಣಿಗಳನ್ನುಬರೆಯುವವಳು ಮತ್ತು ಕೇಂದ್ರಪ್ರಜ್ಞೆಯಾಗಿರುವವಳು ಒಬ್ಬಳು ‘ತಾಯಿ’. ಇದೊಂದು ತನ್ನದೇ ಸಮಸ್ಯೆಗಳನ್ನುಳ್ಳ ಆಧುನಿಕ ಮಹತ್ವಾಕಾಂಕ್ಷೀ ಸಂಸಾರ. ಇದರಲ್ಲಿ ಸಂಸಾರದ ಪೂರ್ವಪ್ರಜ್ಞೆಗೆ ಸಂಕೇತವಾಗಿ ಚಿಕ್ಕಿ ಇದ್ದಾರೆ; ಪತ್ನಿಗೆ ಪೂರ್ತಿ ನಿಷ್ಠನಾಗಿಲ್ಲದ ಮಹತ್ವಾಕಾಂಕ್ಷೀ ಗಂಡನಿದ್ದಾನೆ. ಮಕ್ಕಳು ಅವರದೇ ಸಮಸ್ಯೆಗಳ ಜತೆಗೆ ಹೆತ್ತವರನ್ನು ಧಿಕ್ಕರಿಸುತ್ತ ತಮ್ಮ ಅಸ್ತಿತ್ವದ ಅರ್ಥವನ್ನು ಅನ್ವೇಷಿಸುವ ಕಷ್ಟಗಳನ್ನು ಎದುರಿಸುತ್ತಿವೆ. ಇಲ್ಲಿ ಯುವಜನಾಂಗ ಬೇಜವಾಬ್ದಾರಿಯದು ಎನ್ನುವ ನಿಲುವಿಲ್ಲ. ಹೆತ್ತವರ ಆಯ್ಕೆಯಿಂದಾಗಿ ಅವರಿಗೆ ತಮ್ಮ ಬದುಕನ್ನು ಕಟ್ಟಿಕೊಳ್ಳಲು ಕಷ್ಟವಾಗುತ್ತಾ ಇದೆ. ರ್ಯಾಶಿಯೋಸಿನೇಶನ್ ಮಾದರಿಯ ಕತೆಯಾಗಿ, ಕನ್ನಡ ಕಥನಪರಂಪರೆಗೆ ಹೊಸದೇ ಆದ ಸಮಸ್ಯೆಯೊಂದರ ಮೂಲಕ ಬದುಕಿನ ಅರ್ಥಶೋಧನೆ ನಡೆಸುವ ಕಾರಣ ಈ ಕತೆ ಬಹುಮಾನಕ್ಕೆ ಅರ್ಹವಾಗುತ್ತದೆ.

ಮೂರನೆಯ ಬಹುಮಾನ: ಅದು ಅವರ ಪ್ರಾಬ್ಲಮ್

ಈ ಕತೆ ಬೆಂಗಳೂರು ನಗರ ಕೇಂದ್ರಿತ ಆಧುನಿಕ ಚಟುವಟಿಕೆಗಳಲ್ಲಿ ಒಂದಾದ (ಬಹುಶ ಅನಿವಾಸಿ ಭಾರತೀಯರಿಂದ ನಡೆಸಲ್ಪಡುತ್ತಿರುವ) ಸಮಾಜಸೇವಾ ಚಟುವಟಿಕೆಯ ಸಂಘಟನೆಯೊಂದರ ಕೆಲವು ವ್ಯಕ್ತಿಗಳ ಕತೆ. ವಿಷಯ ವೈಯಕ್ತಿತವಾದರೂ ಸಂಘಟನೆಯ ಚಟುವಟಿಕೆ ಮತ್ತು ಸಾಮಾಜಿಕ ಪ್ರಸ್ತುತತೆಯಿರುವ ಕಾರಣ ಗಮನ ಸೆಳೆಯುತ್ತದೆ. ವಾರಾಂತ್ಯದಲ್ಲಿ ಯುವಜನಾಂಗದ ಸಾಮಾಜಿಕ ಕಾಳಜಿ ಇರುವ ಯುವಕ ಯುವತಿಯರು ಗ್ರಾಮೀಣ ಪ್ರದೇಶದ ಶಾಲೆಗಳಿಗೆ ಹೋಗಿ ಅವರಿಗೆ ಆಪ್ತ ಸಲಹೆ, ಮುಂದಿನ ಜೀವನದ ಮಾರ್ಗದರ್ಶನ, ಆರೋಗ್ಯ ಸಲಹೆ, ಸಾಮಾಜಿಕ ಜಾಗೃತಿಗಾಗಿ ಬೀದಿ ನಾಟಕ ಇತ್ಯಾದಿಗಳನ್ನು ಹಮ್ಮಿಕೊಳ್ಳುತ್ತಾರೆ. ಮಕ್ಕಳಿಗೆ ಚಾಕಲೇಟ್, ಗಿಫ್ಟ್ ಇತ್ಯಾದಿಗಳ ಆಮಿಷದಿಂದಾಗಿ ಅವರು ರಜಾದಿನವೂ ಬರುತ್ತಾರೆ. ಈ ಕತೆಯ ನಾಯಕಿಗೆ ಇದೇ ಸಂಘಟನೆಯ ಆಕರ್ಷಕ ಯುವಕ ಮ್ಯಾಡಿಯ ಬಗ್ಗೆ ಆಕರ್ಷಣೆ ಇದೆ. ಅವನನ್ನು ಒಲಿಸಿಕೊಳ್ಳಲು, ಅವನ ಬೈಕಿನಲ್ಲಿ ಹೋಗಲು ಆಸೆಪಡುತ್ತಾಳೆ.

ಇಂತಹ ಒಂದು ವಾರಾಂತ್ಯದ ಕಾರ್ಯಕ್ರಮದಲ್ಲಿ ಅವಳಿಗೆ ಮ್ಯಾಡಿಯು ಬಡ ಬಾಲಕನೊಬ್ಬನನ್ನು ಲೈಂಗಿಕವಾಗಿ ದುರುಪಯೋಗಪಡಿಸಿಕೊಂಡದ್ದು ಗಮನಕ್ಕೆ ಬರುತ್ತದೆ. ಅವನ ಬಗ್ಗೆ ದೂರು ನೀಡಲು ಹುಡುಗನ ಹೆತ್ತವರು, ಅಧ್ಯಾಪಕರು, ಸಂಘಟನೆಯವರು ಯಾರೂ ಮುಂದೆ ಬರುವುದಿಲ್ಲ. ‘ಅದು ಅವರ ಪ್ರಾಬ್ಲೆಮ್’ ಎನ್ನುವ ಮನೋಭಾವ ಎಲ್ಲರದೂ. ಮ್ಯಾಡಿ ಬೇರೆ ಹುಡುಗರನ್ನು ಬಳಸಿಕೊಂಡಿರುವುದೂ ಕತೆಯಲ್ಲಿ ದಾಖಲಾಗುತ್ತದೆ. ಕಥಾನಾಯಕಿ ಮ್ಯಾಡಿಯ ಬಿಳಿ ಟೀಶರ್ಟ್ ಬೆನ್ನಿಗೆ ‘ಐ ಆಮ್ ಅ ಪೀಡೋಫೈಲ್’ (ಮಕ್ಕಳನ್ನು ಲೈಂಗಿಕವಾಗಿ ಬಳಸಿಕೊಳ್ಳುವ ವಿಕೃತಕಾಮಿ) ಎಂದು ಪೋಸ್ಟರ್ ಪೆನ್ನಿನಿಂದ ಬರೆದು ತನ್ನ ಪ್ರತಿಭಟನೆಯನ್ನು ದಾಖಲಿಸುತ್ತಾಳೆ. ಮುಂದೆಯೂ ಆಕೆ ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳಬಹುದಾದ ನಿರ್ಧಾರದಲ್ಲಿರುವಂತೆ ಅನಿಸುತ್ತದೆ. ವಿಕೃತ ಮನಸ್ಥಿತಿಯ ಚಿತ್ರಣ ಮತ್ತು ಸಾಮಾಜಿಕ ಜವಾಬ್ದಾರಿಯ ಪ್ರತಿಪಾದನೆ ಇದರ ಆಶಯ. ಸಮಾಜದಲ್ಲಿ ಮುಖ್ಯ ನೆಲೆಯ ಚರ್ಚೆಗೆ ಬಾರದೆ ಉಳಿಯುವ ಬಹುದೊಡ್ಡ ಸಮಸ್ಯೆಯೊಂದನ್ನು ಈ ಕತೆ ಪರಿಶೀಲನೆಗೆ ಎತ್ತಿಕೊಂಡಿರುವುದು ಶ್ಲಾಘನೀಯವಾಗಿದೆ.

ಮೆಚ್ಚುಗೆ ಪಡೆದ 5 ಕತೆಗಳು:

1. ಹುಣಸೇ ಹೂವು

ಗ್ರಾಮೀಣ ಬದುಕಿನ ಬಡತನದ ಬದುಕು ಮತ್ತು ಜಮೀನುದಾರೀ ಶೋಷಣೆ ಬಹಳ ಸಶಕ್ತವಾಗಿ ಕತೆಯ ರೂಪವನ್ನು ತಾಳಿದೆ. ಬಡತನದ ದಾರುಣ ಚಿತ್ರಣ ಮತ್ತು ಭೀಭತ್ಸ ನಿರೂಪಣೆಯಿಂದಾಗಿ ಹೊಟ್ಟೆ ತೊಳಸುವಂತಾಗುವ ಸನ್ನಿವೇಶಗಳಿವೆ. ಬಡವರನ್ನು ಗೌಡರ ಮನೆಯವರು ಲೈಂಗಿಕವಾಗಿ ಶೋಷಿಸುವುದು ಮತ್ತು ದುಡಿಯುವವರ ಆರ್ಥಿಕ ಸಂಕಷ್ಟಗಳು ಹಿನ್ನೆಲೆಯಲ್ಲಿ ಬಂದು ಬಡ ಕುಟುಂಬದ ಗಂಡಸಿನ ದೈನೇಸಿ ಬದುಕು, ಅಸಹಾಯಕತೆ ಮತ್ತು ಮಗಳ ಮೇಲಿನ ಸಿಟ್ಟಿನ ಮೂಲಕವೇ ಕತೆಯಲ್ಲಿ ಬದುಕಿನ ಕ್ರೌರ್ಯವನ್ನು ಚಿತ್ರಿಸಿರುವುದು ವಿಶೇಷವಾಗಿದೆ. ಲೈಂಗಿಕ ಶೋಷಣೆ ಮತ್ತು ಆರ್ಥಿಕ ದುಸ್ಥಿತಿಯಿಂದಾಗಿ ಒಂದು ಕುಟುಂಬದ ಸರ್ವನಾಶ ಆಗುವುದು ಹೃದಯಸ್ಪರ್ಶಿಯಾಗಿದೆ. ಗ್ರಾಮ್ಯಭಾಷೆಯ ಬಳಕೆ ಇಲ್ಲಿ ಸಹಜವಾಗಿ ಬಂದಿದೆ.

2. ಪಿಂಕ್ ಟ್ರಂಪೆಟ್

ಈ ಕತೆಯಲ್ಲಿ ಮಧ್ಯವಯಸ್ಸಿನ ಹಳ್ಳಿಯ ವಿಧವೆ ಹೆಂಗಸು ಶರಾವತಿ ನಗರಕ್ಕೆ ಬಂದಾಗ ಇಲ್ಲಿನ ಜೀವನಶೈಲಿಗೆ ಹೊಂದಿಕೊಳ್ಳುತ್ತಾ ಮಾನಸಿಕವಾಗಿ ಅರಳುವುದನ್ನು ಪಿಂಕ್ ಟ್ರಂಪೆಟ್ ಎಂಬ ಹೂವಿನ ಸಂಕೇತದ ಮೂಲಕ ಹೇಳಿರುವ ಸೂಕ್ಷ್ಮ ಚೆನ್ನಾಗಿದೆ. ಊರಲ್ಲಿ ಅಡಿಕೆ ಕೃಷಿಕ ಕುಟುಂಬದಲ್ಲಿದ್ದು ಸಹಕರಿಸಬೇಕಾದ ಆಕೆಗೆ ಈ ಕೆಲಸಗಳು ಇರದ ಫೆಬ್ರವರಿ, ಮಾರ್ಚ್, ಎಪ್ರಿಲ್ – ಹೀಗೆ ಬೇಸಗೆಯ ತಿಂಗಳುಗಳಲ್ಲಿ ಮಾತ್ರ ಮಗನ ಜತೆಗೆ ಬಂದಿರಲು ಸಾಧ್ಯ. ಆಗ ವಾಕಿಂಗ್ ಹೋಗುತ್ತ ಮಧ್ಯವಯಸ್ಕ ಕಲಾವಿದ, ಆಧುನಿಕ ಜೀವನಶೈಲಿಯ ರತ್ನಾಕರನ ಜತೆಗೆ ವಾಕಿಂಗ್ ಹೋಗುತ್ತ ಅವನತ್ತ ಆಕರ್ಷಿತಳಾಗುತ್ತಾಳೆ. ವೈಧವ್ಯದ ಬದುಕು ಅನಿವಾರ್ಯವೆಂಬಂತಿದ್ದ ಆಕೆಯ ಮನಸ್ಸು ಆತನನ್ನು ಮದುವೆಯಾದರೆ ಆದೀತು ಎನ್ನುವಂತೆ ಅರಳುತ್ತದೆ. ಅದೇ ವೇಳೆಗೆ ಆತನ ಪತ್ನಿ ಗಾಯತ್ರಿಯೂ ಮುನಿಸಿಕೊಂಡು ಆತನನ್ನು ಬಿಟ್ಟುಹೋಗಿರುತ್ತಾಳೆ. ‌

ಮುಂದಿನ ವರ್ಷ ಬೆಂಗಳೂರಿಗೆ ಹೋದಾಗ ಶರಾವತಿಗೆ ತಾನು ರತ್ನಾಕರನ ಜತೆಗೆ ಹೊಸಬದುಕನ್ನು ಪ್ರಾರಂಭಿಸಬೇಕೆನ್ನುವ ನಿರ್ಧಾರ ಗಟ್ಟಿಯಾಗಿರುತ್ತದೆ. ಅವಳ ಮಾವನ ಮನೆಯವರಿಗೆ ಕೆಲಸಕ್ಕೆ ಒಂದಾಳು ಕಡಿಮೆಯಾಗುವುದೆಂದು ಆತಂಕದಿಂದ ಅವಳು ಬೆಂಗಳೂರಿನಲ್ಲಿ ಹೆಚ್ಚು ದಿನ ಇರಬಾರದು ಎಂದು ಒತ್ತಾಯಿಸುತ್ತಾರೆ. ಗಾಯತ್ರಿ ರತ್ನಾಕರನ ಬದುಕಿಗೆ ಹಿಂದಿರುಗಿರುವುದಿಲ್ಲ. ಇದರಿಂದ ಶರಾವತಿಗೆ ತಾನೇ ಮುಂದುವರಿದು ತಾವಿಬ್ಬರು ಜತೆಗೂಡಿದರೆ ಹೇಗೆ ಎಂದು ಪತ್ರಬರೆಯಲು ಧೈರ್ಯವಾಗುತ್ತದೆ. ಆದರೆ ರಮಾನಂದ ಅದಕ್ಕೆ ಸ್ಪಂದಿಸುವುದಿಲ್ಲ. ಅವನು ಮಾನಸಿಕವಾಗಿ ತನ್ನ ಪತ್ನಿಯನ್ನು ಹಚ್ಚಿಕೊಂಡಿರಬಹುದು; ಅಥವಾ ಪತ್ರವನ್ನು ನೋಡದೆಯೆ ಇರಬಹುದು, ಅಥವಾ ಅವನು ಗಾಯತ್ರಿಯನ್ನು ಜೀವನಸಂಗಾತಿಯನ್ನಾಗಿ ಕಲ್ಪಿಸಿಕೊಳ್ಳದೆ ಇರಬಹುದು.

ರ್ಯಾಶಿಯೋಸಿನೇಶನ್ ಮಾರ್ಗದ ಒಂದು ಕತೆಯಾದ ಇದರಲ್ಲಿ ನಾಯಕಿ ಶರಾವತಿ ತಾನೇ ಪ್ರೌಢ ಮರುಮದುವೆಗೆ ಪ್ರಸ್ತಾಪ ಮಾಡುವಷ್ಟು ದಿಟ್ಟತನ ತೋರಿಸುವಷ್ಟಕ್ಕೆ ಮನೋವ್ಯಾಪಾರದ ಬೆಳವಣಿಗೆ ನಿಂತುಬಿಡುತ್ತದೆ. ಅದು ಆ ಗಂಡಸಿನ ಗಮನಕ್ಕೆ ಬಂದಿದೆಯೋ ಬಂದಿಲ್ಲವೋ ಎನ್ನುವುದು ಅಸ್ಪಷ್ಟವಾದ ಕಾರಣ ಅವಳ ಮುಂದಿನ ನಡೆ ಮತ್ತೆ ತನ್ನ ಹಳೆಯ ಬದುಕಿಗೆ ವಾಪಸಾಗುವುದೇ ಆಗಬಹುದು ಎನ್ನುವ ದಟ್ಟವಾದ ಸೂಚನೆ ಕತೆಯಲ್ಲಿದೆ. ಹಾಗಾಗಿ ಹೊಸ ಅರಿವು ‘ನೈತಿಕ ವಿಕಾಸದ ನೆಲೆ’ಯನ್ನು ತಲುಪುವುದನ್ನು ಕೂಡ ಓದುಗರು ಊಹಿಸಲು ಅವಕಾಶ ಇರುವುದಿಲ್ಲ. ಹಿಂದೆ ಇಪ್ಪತ್ತನೆಯ ಶತಮಾನದ ನವೋದಯ ಸಾಹಿತ್ಯದಲ್ಲಿ ವಿಧವಾ ವಿವಾಹವನ್ನು ಪ್ರತಿಪಾದಿಸುವ ಕತೆ ಕಾದಂಬರಿಗಳಲ್ಲಿ ಸಮಾಜದ ಒಟ್ಟಭಿಪ್ರಾಯವನ್ನು ಒಲಿಸಿಕೊಳ್ಳಬೇಕಾದ ಅಗತ್ಯ ಎಷ್ಟಿತ್ತೆಂದರೆ ಆಕೆ ಅಕ್ಷತ ಕನ್ಯೆ ಎನ್ನುವುದನ್ನು ಸೂಚಿಸುವ ಕೃತಿಗಳನ್ನು ಕಾಣಬಹುದಾಗಿತ್ತು. ಇಲ್ಲಿ, ನಾಯಕಿಯ ತರ್ಕ ಪ್ರಕ್ರಿಯೆ ಗಟ್ಟಿಯಾದುದೇ ಆಗಿದ್ದರೆ ಆಕೆ ನೇರವಾಗಿ, “ನಾನು ನಿಮಗೊಂದು ಸಂದೇಶ ಇರಿಸಿದ್ದೆ. ನೀವದನ್ನು ಗಮನಿಸಿದಿರಾ?” ಎಂದು ಕೇಳಿ ಸಂಶಯ ಪರಿಹರಿಸಿಕೊಳ್ಳಬಹುದಿತ್ತು. ಅವಳು ಮತ್ತೆ ತನ್ನ ಹಳೆಯ ಬದುಕಿಗೆ ಮರಳುತ್ತಾಳೆ ಎನ್ನುವ ಸೂಚನೆಯೇ ಕತೆಯಲ್ಲಿದೆ.

3. ಪರವೇಶ್ಮಸ್ಥನ ಫಿಕ್ಖ್ ಪ್ರಸಂಗ

ಇಲ್ಲಿ ಒಬ್ಬ ಮುಸಲ್ಮಾನ ಸಂಸಾರಸ್ಥ ಒಂದು ಕುಗ್ರಾಮದ ಮಸೀದಿಯಲ್ಲಿ ಇಮಾಮ್ ಆಗಿ ಕಾರ್ಯನಿರ್ವಹಿಸುತ್ತಾ ಇದ್ದಾನೆ. ಅವನ ಏಕೈಕ ಪುತ್ರ ತಾಂತ್ರಿಕ ಶಿಕ್ಷಣ ಪಡೆದು ಮುಂಬಯಿಯಲ್ಲಿ ಸಂಸಾರ ಹೂಡಿದ್ದಾನೆ. ಅಪ್ಪ ಅಮ್ಮ ತನ್ನ ಜತೆಗೆ ಬಂದಿರುವಂತೆ ಕರೆಯುತ್ತಿದ್ದಾನೆ. ಅಪ್ಪ ಇಮಾಮ್, ಊರಿನ ಮುಖಂಡನೊಬ್ಬನ ಜತೆಗೆ ಮಸೀದಿಯ ಡೆಪೆÇೀಸಿಟ್‍ಗೆ ಬರುವ ಬಡ್ಡಿ ಹಣದ ವಿಚಾರದಲ್ಲಿ ತಾಕಲಾಟಕ್ಕೆ ಬಿದ್ದಿದ್ದಾನೆ. ಮುಖಂಡ ಆ ಹಣವನ್ನು ತಿಂದುಹಾಕಬಾರದೆಂಬ ನ್ಯಾಯಪ್ರಜ್ಞೆಯೇ ಅದು. ಆದರೆ ಇಮಾಮ್ ಕೆಲವೊಮ್ಮೆ ಇಕ್ಕಟ್ಟಿಗೆ ಸಿಲುಕುವಾಗ ಮುಖಂಡನ ಇನ್‍ಫ್ಲೂಯೆನ್ಸ್ ಇವನನ್ನು ಉಳಿಸಲು ಬೇಕಾಗುತ್ತದೆ. ಅಲ್ಲದೆ ಈತ ಪರವೇಶ್ಮಸ್ಥ (ಬೇರೆಯವರ ಮನೆಯಲ್ಲಿ ವಾಸಿಸುವವನು). ಕೊನೆಗೂ ಊರಿನ ಉಸಾಬರಿಯನ್ನು ಬಿಟ್ಟು ಮುಂಬಯಿಗೆ ತೆರಳುತ್ತ್ತಾನೆ. ಮಗ ಅವನಿಂದ ಕೆಲವು ವಿಚಾರಗಳ ಬಗ್ಗೆ ಮಾಹಿತಿ ಕೇಳಿ ಪಡೆಯುತ್ತಾನೆ. ಮುಖ್ಯವಾದುದು, ಇಮಾಮನ ಪತ್ನಿ ನಫೀಸಾ ಹಿಂದೂ ಆಗಿದ್ದವಳು ಎನ್ನುವುದು.

ಇಲ್ಲಿನ ಮುಖ್ಯ ಧರ್ಮ ಜಿಜ್ಞಾಸೆ ಶೀರ್ಷಿಕೆಯಲ್ಲಿರುವ ಹಾಗೆ ಫಿಕ್ಖ್ ಎಂಬ ಬಡ್ಡಿ ಹಣದ ನಿಯಮದ ಕುರಿತಾಗಿದೆ; ಜತೆಗೆ ಈ ಜಿಜ್ಞಾಸೆಗೆ ತಾನು ಅಧಿಕಾರಸ್ಥ ಎಂದು ಮುಂದೆ ಕಾಲಿಟ್ಟು ಹಿಂದೆ ಸರಿದ ಕಥಾನಾಯಕನ ‘ಪರವೇಶ್ಮಸ್ಥ’ ಸ್ಥಿತಿಯ ಜತೆಗೆ ಅವನ ಧಾರ್ಮಿಕ ನಿಲುವಿನ ಮುಖಾಮುಖಿಯನ್ನು ಅದು ಸೂಚಿಸುತ್ತದೆ. ಕತೆಯ ಕೊನೆ ಇನ್ನಷ್ಟು ಪರಿಣಾಮಕಾರಿಯಾಗಿರಬಹುದಿತ್ತು.

4. ಕಿತ್ತಳೆ ಚಿಟ್ಟೆ

ಮನಸ್ಸಿನ ಮತ್ತು ಸಂಬಂಧಗಳ ಸೂಕ್ಷ್ಮಗಳನ್ನು ಚಿತ್ರಿಸಿರುವ ಸಣ್ಣಕತೆ. ಕಥಾನಾಯಕಿ ತಾನೊಂದು ಕಿತ್ತಳೆಯಾಗಿರುವಂತೆ, ಅದನ್ನು ಯಾರೋ ಸಿಪ್ಪೆ ಸುಲಿದು ತಿಂದಂತೆ, ಮತ್ತೆ ತಾನೊಂದು ಕಿತ್ತಳೆ ಚಿಟ್ಟೆಯಾದಂತೆ ಕನಸುಕಾಣುತ್ತಾಳೆ. ಅವಳ ಮನಸ್ಸು ಅತಿಯಾಗಿ ಸೂಕ್ಷ್ಮವಾಗಿದೆ. ಅವಳ ಪ್ರಿಯತಮ ಒಮ್ಮೆ ಅವಸರಿಸಿ ಅವಳ ಮೇಲೆ ದಾಳಿಮಾಡಿದನೆಂದು ದೂರಸರಿಯುತ್ತಾಳೆ. ಮತ್ತೆ ಅವರು ಜತೆಯಾದರೂ ಮೊದಲಿನ ವಿಶ್ವಾಸ ಉಳಿಯುವುದಿಲ್ಲ ಇತ್ಯಾದಿ ಮನಸ್ಸಿನ ಸೂಕ್ಷ್ಮಗಳು, ಪ್ರೇಮ-ಕಾಮವನ್ನು ಹೆಸರಿಸದೆ ಅವುಗಳ ವ್ಯತ್ಯಾಸವನ್ನು ಕ್ರಿಯೆಯಲ್ಲಿ ಅನುಭವಿಸುವ ಮಾದರಿಯ ಕತೆ.

‘ಪಿಂಕ್ ಟ್ರಂಪೆಟ್’ ಎಂಮ ಕತೆಯ ಶೀರ್ಷಿಕೆಯನ್ನು ಇದರ ಶೀರ್ಷಿಕೆಯ ಜತೆಗೆ ಹೋಲಿಸಿದಾಗ ಒಂದು ವಿಶಿಷ್ಟ ವಿದ್ಯಮಾನವು ನಮ್ಮ ಗಮನಕ್ಕೆ ಬರುತ್ತದೆ. ಹೆಣ್ಣನ್ನು ಹೂವಿಗೆ, ಚಿಟ್ಟೆಗೆ, ಹಣ್ಣಿಗೆ ಹೋಲಿಸುವ ಒಂದು ಸಂಪ್ರದಾಯ ಆಧುನಿಕ ಸಾಹಿತ್ಯದಲ್ಲಿಯೂ ಬೇರೆಬೇರೆ ರೀತಿಗಳಲ್ಲಿ ಪರಂಪರೆಯ ಮುಂದುವರಿಕೆಯಾಗಿ ಕಾಣಿಸುತ್ತಿದೆ. ಈ ಎರಡೂ ಕತೆಗಳಲ್ಲಿ ಈ ರೂಪಕಗಳು ಸೃಜನಶೀಲವಾಗಿ ಬಂದಿವೆ; ಸಿದ್ಧಕಲ್ಪನೆಯಾಗಿ ಬಂದಿಲ್ಲ.

ಹಾಗೆ ನೋಡಿದರೆ ‘ಹುಣಸೇ ಹೂವು’ ಕೂಡ ಗ್ರಾಮೀಣ ಶೋಷಿತ ಮಹಿಳೆಗೆ ರೂಪಕವಾಗಿಯೇ ಬಂದಿದೆ. ಇದು ಕೂಡ ಸೃಜನಶೀಲವಾಗಿಯೇ ಇದೆ. ಅಲ್ಲಿ ಅದು ಹೋಲಿಕೆಯಾಗಿ ಬಂದಿಲ್ಲ; ಹೆಚ್ಚು ಸಾಂಕೇತಿಕವಾಗಿದೆ.

5. ನೆಲೆ

ಪ್ರತಿಭಾ ಎನ್ನುವ ಪ್ರತಿಭಾವಂತ ಸುಂದರಿ ಯುವತಿಯನ್ನು ಬಡತನದ ಕಾರಣದಿಂದಾಗಿ ಮುಂಬಯಿಯ ಕಿವುಡ, ಮೂಗನಿಗೆ ಮದುವೆ ಮಾಡಿಕೊಟ್ಟಿರುತ್ತಾರೆ. ಆಕೆ ಸ್ವಂತ ಪರಿಶ್ರಮದಿಂದ ಉದ್ಯೋಗ ಸಂಪಾದಿಸಿಕೊಂಡು ಸ್ವಂತ ಕಾಲಿನ ಮೇಲೆ ನಿಲ್ಲುವಂತಾಗುತ್ತಾಳೆ. ಚಿತ್ರಲೇಖಾ ಎಂಬ ಹೆಣ್ಣೂಮಗುವಾದ ಮೇಲೆ ಗಂಡನನ್ನೂ ಮಗಳನ್ನೂ ಬಿಟ್ಟು ದೆಹಲಿಗೆ ಹೋಗಿ ಮಧು ಎಂದು ಹೆಸರು ಬದಲಾಯಿಸಿಕೊಳ್ಳುತ್ತಾಳೆ. ಅಲ್ಲಿಯೇ ಒಬ್ಬ ಸಹೋದ್ಯೋಗಿಯನ್ನು ಮದುವೆಯಾಗಿ ಸ್ಟಾರ್ಟ್ ಅಪ್ ಕಂಪೆನಿ ಮಾಡುತ್ತಾಳೆ. ಗಂಡ ತೀರಿಹೋಗುತ್ತಾನೆ. ಅವಳಿಗೆ ಅವನಲ್ಲಿ 19 ವರ್ಷದ ಮಗ ಇರುತ್ತಾನೆ. ಈಗ ಅವಳಿಗೆ ಅವಳ ಹಿರಿಯ ಮಗಳನ್ನು ಸಂಪರ್ಕಿಸಲು ಆಸೆಯಾಗಿ ಸಾಮಾಜಿಕ ಜಾಲತಾಣದಲ್ಲಿ ಸಂಪರ್ಕ ಸಾಧಿಸುತ್ತಾಳೆ. ಅವಳ ಮಗಳು ಮೊದಲು ತನ್ನನ್ನು ತೊರೆದು ಹೋದವಳು ಎಂದು ಅವಳನ್ನು ತಿರಸ್ಕರಿಸಿದರೂ ನಂತರ ಅವಳ ‘ನೆಲೆ’ಯಿಂದ ಅವಳ ಬದುಕನ್ನು ಅರ್ಥಮಾಡಿಕೊಂಡು ಅವಳನ್ನು ಭೇಟಿಯಾಗಲು ಮಾನಸಿಕವಾಗಿ ಸಿದ್ಧಳಾಗುತ್ತಾಳೆ.

ವ್ಯಕ್ತಿಗಳ ಆಯ್ಕೆಯನ್ನು ಭಿನ್ನಭಿನ್ನವಾದ ನೆಲೆಗಳ ಮೂಲಕ ನೋಡಲು ಪ್ರೇರಣೆ ಕೊಡುವ, ಯಾರನ್ನೂ ಟೀಕಿಸದೆ; ಆಯ್ಕೆಗಳನ್ನು ಮಾಡುವ ಮೂಲಕ ವ್ಯಕ್ತಿ ತನ್ನ ಬದುಕಿಗೆ ತಾನು ಜವಾಬ್ದಾರನಾಗುವುದನ್ನು ಅರಿತುಕೊಂಡು ಅವನನ್ನು ಸ್ವೀಕರಿಸುವ ಧನಾತ್ಮಕ ಚಿಂತನೆಯನ್ನು ಆಶಯವಾಗಿ ಪರಿವರ್ತಿಸಿರುವ ಉತ್ತಮ ಕತೆ ಇದು.

ಬಹುಮಾನ ವಿಜೇತರಿಗೂ, ಉತ್ತಮ ಕತೆಗಳನ್ನು ಬರೆದಿರುವ ಇತರರಿಗೂ ಅಭಿನಂದನೆಗಳು. ಈ ಕಥಾಸ್ಪರ್ಧೆಯನ್ನು ಏರ್ಪಡಿಸಿ, ಕನ್ನಡದ ಸಣ್ಣಕಥಾ ಕ್ಷೇತ್ರದಲ್ಲಿ ಹೊಸ ಸ್ಪಂದನೆಗಳಿಗೆ ಕಾರಣವಾಗಿರುವ ವಿಸ್ತಾರ ನ್ಯೂಸ್ ಬಳಗಕ್ಕೆ ಧನ್ಯವಾದಗಳು ಹಾಗೂ ಅಭಿನಂದನೆಗಳು.

ಇದನ್ನೂ ಓದಿ: ವಿಸ್ತಾರ ಯುಗಾದಿ ಕಥಾ ಸ್ಪರ್ಧೆ ಬಹುಮಾನ: ಚಂದ್ರಶೇಖರ್‌ ಡಿ.ಆರ್‌ ಪ್ರಥಮ, ದಾದಾಪೀರ್‌ ಜೈಮನ್‌ ದ್ವಿತೀಯ, ಪೂರ್ಣಿಮಾ ಮಾಳಗಿಮನಿ ತೃತೀಯ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಮೈಸೂರು

Mysore News: ಮೈಸೂರಿನಲ್ಲಿ ಗಾಯಕ ಎಚ್ ಎಸ್ ನಾಗರಾಜ್ ಗೆ ಶ್ರೀ ವಾಸುದೇವಾಚಾರ್ಯ ಸಂಸ್ಮರಣಾ ಪ್ರಶಸ್ತಿ ಪ್ರದಾನ

Mysore News: ಕರ್ನಾಟಕ ಶಾಸ್ತ್ರೀಯ ಸಂಗೀತ ಒಕ್ಕೂಟ ಟ್ರಸ್ಟ್ ವತಿಯಿಂದ ಮೈಸೂರಿನ ಶ್ರೀವಾಸುದೇವಾಚಾರ್ಯ ಭವನದಲ್ಲಿ ಮೈಸೂರು ವಾಸುದೇವಾಚಾರ್ಯ ಸಂಸ್ಮರಣಾ ಸಂಗೀತ ಉತ್ಸವದ ವಿದ್ವತ್ ಸಭೆ ಜರುಗಿತು. ಈ ವೇಳೆ ವಿದ್ವಾನ್ ಶೃಂಗೇರಿ ನಾಗರಾಜ್ ರಿಗೆ ‘ಶ್ರೀವಾಸುದೇವಾಚಾರ್ಯ ಸಂಸ್ಮರಣಾ ಪ್ರಶಸ್ತಿ’, ವಿದ್ವಾನ್ ಎಚ್.ಕೆ.ನರಸಿಂಹಮೂರ್ತಿ ರಿಗೆ ‘ಶ್ರೇಷ್ಠ ಜೀವಮಾನ ಸಾಧನೆ ಪ್ರಶಸ್ತಿ’, ವಿದುಷಿ ಪುಷ್ಪಾ ಶ್ರೀನಿವಾಸ್ ರಿಗೆ ‘ಕರ್ನಾಟಕ ಸಂಗೀತಾಚಾರ್ಯ ಪ್ರಶಸ್ತಿ’ ಯನ್ನು ನೀಡಿ, ಗೌರವಿಸಲಾಯಿತು.

VISTARANEWS.COM


on

Mysore Vasudevacharya Memorial Music utsav Vidwat Sabha and award ceremony
Koo

ಮೈಸೂರು: ಕರ್ನಾಟಕ ಶಾಸ್ತ್ರೀಯ ಸಂಗೀತಕ್ಕೆ ಮಹಾಮಹಿಮರಾದ ಮೈಸೂರು ವಾಸುದೇವಾಚಾರ್ಯರ ಕೊಡುಗೆ ಅನನ್ಯವಾಗಿದೆ ಎಂದು ಶಿವಮೊಗ್ಗದ ಖ್ಯಾತ ಗಾಯಕ ವಿದ್ವಾನ್ ಶೃಂಗೇರಿ ಎಚ್.ಎಸ್. ನಾಗರಾಜ್ (Mysore News) ಹೇಳಿದರು.

ಕರ್ನಾಟಕ ಶಾಸ್ತ್ರೀಯ ಸಂಗೀತ ಒಕ್ಕೂಟ ಟ್ರಸ್ಟ್ ವತಿಯಿಂದ ಮೈಸೂರಿನ ಶ್ರೀವಾಸುದೇವಾಚಾರ್ಯ ಭವನದಲ್ಲಿ ಹಮ್ಮಿಕೊಂಡಿದ್ದ ಮೈಸೂರು ವಾಸುದೇವಾಚಾರ್ಯ ಸಂಸ್ಮರಣಾ ಸಂಗೀತ ಉತ್ಸವದ ವಿದ್ವತ್ ಸಭೆಯಲ್ಲಿ ಅವರು ಪ್ರತಿಷ್ಠಿತ ‘ಶ್ರೀವಾಸುದೇವಾಚಾರ್ಯ ಸಂಸ್ಮರಣಾ ಪ್ರಶಸ್ತಿ’ ಸ್ವೀಕರಿಸಿ ಮಾತನಾಡಿದರು.

ಇದನ್ನೂ ಓದಿ: Traffic Violation : ಪೆಟ್ರೋಲ್ ಖಾಲಿಯಾಗಿ ರಸ್ತೆಯಲ್ಲಿ ವಾಹನ ನಿಂತುಬಿಟ್ಟರೆ ಚಾಲಕನ ಮೇಲೆ ಕೇಸ್!

ಮೈಸೂರು ವಾಸುದೇವಾಚಾರ್ಯ ಮನೆ ಮೈಸೂರಿನಲ್ಲಿ ಸಂಗೀತಕ್ಕೆ ಮಹೋನ್ನತ ವೇದಿಕೆಯಾಗಿ ರೂಪುಗೊಂಡಿದೆ. ಅಲ್ಲಿ ಹಾಡಿದವರ ಧನ್ಯತೆಯೇ ವಿಶೇಷವಾಗಿದ್ದು ಎಂದು ಅವರು ಸ್ಮರಿಸಿದರು.

ಪ್ರಶಸ್ತಿ ಪ್ರದಾನ

ವಿದ್ವಾನ್ ಶೃಂಗೇರಿ ನಾಗರಾಜ್ ಅವರಿಗೆ ‘ಶ್ರೀವಾಸುದೇವಾಚಾರ್ಯ ಸಂಸ್ಮರಣಾ ಪ್ರಶಸ್ತಿ’, ವಿದ್ವಾನ್ ಎಚ್.ಕೆ. ನರಸಿಂಹಮೂರ್ತಿ ಅವರಿಗೆ ‘ಶ್ರೇಷ್ಠ ಜೀವಮಾನ ಸಾಧನೆ ಪ್ರಶಸ್ತಿ’, ವಿದುಷಿ ಪುಷ್ಪಾ ಶ್ರೀನಿವಾಸ್ ಅವರಿಗೆ ‘ಕರ್ನಾಟಕ ಸಂಗೀತಾಚಾರ್ಯ ಪ್ರಶಸ್ತಿ’ ಯನ್ನು ನೀಡಿ, ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಡಾ. ರಮಾ ಬೆಣ್ಣೂರು ಮಾತನಾಡಿ, ವಯೋಲಿನ್ ವಿದ್ವಾಂಸ ಎಚ್.ಕೆ. ನರಸಿಂಹ ಮೂರ್ತಿ ಅವರು ಕಲಾ ಲೋಕಕ್ಕೆ ಅಹರ್ನಿಷಿ ಸೇವೆ ಸಲ್ಲಿಸಿದ್ದಾರೆ. ಮೈಸೂರಿನಲ್ಲಿ ಯುವಕರು ವಯಲಿನ್ ಹಿಡಿದು ಸಾಗುತ್ತಿದ್ದರೆ ಅವರು ಎಚ್.ಕೆ. ಎನ್. ಸ್ಟೂಡೆಂಟ್ ಎಂದು ಧೈರ್ಯವಾಗಿ ಹೇಳಬಹುದು. ಜೀವಮಾನದಲ್ಲಿ ಅವರು ಬಹುತೇಕ ಸಮಯವನ್ನು ಈ ವಾದ್ಯದ ನುಡಿಸಾಣಿಕೆ ಮತ್ತು ಪಾಠಕ್ಕಾಗಿ ಮೀಸಲಿಟ್ಟಿದ್ದಾರೆ. ಅವರಿಗೆ ಜೀವಮಾನದ ಪ್ರಶಸ್ತಿ ನೀಡಿ ಗೌರವಿಸಿರುವುದು ಮಹತ್ತರ ಕಾರ್ಯ ಎಂದು ಶ್ಲಾಘಿಸಿದರು.

ಇದನ್ನೂ ಓದಿ: Success Story: ಎರಡೇ ತಿಂಗಳಲ್ಲಿ ಆನ್ ಲೈನ್ ಮೂಲಕ 1,800 ಕೆ.ಜಿ. ಮಾವು ಮಾರಿದ ರಾಯಚೂರಿನ ರೈತ!

ಖ್ಯಾತ ಸಂಗೀತ ವಿದ್ವಾಂಸ ಮತ್ತು ಟ್ರಸ್ಟಿ ಡಾ. ರಾ. ನಂದಕುಮಾರ್ ಮಾತನಾಡಿ, ಕನ್ನಡ ನಾಡಿನ ಖ್ಯಾತ, ವಿಖ್ಯಾತ ಸಂಗೀತ ವಿದ್ವಾಂಸರನ್ನು ಒಳಗೊಂಡ ಕರ್ನಾಟಕ ಶಾಸ್ತ್ರೀಯ ಸಂಗೀತ ಒಕ್ಕೂಟ ಟ್ರಸ್ಟ್ (ಕೆಸಿಎಂಸಿ) ಕಳೆದ ಮೂರು ವರ್ಷಗಳಿಂದ ಕಲಾಕ್ಷೇತ್ರದ ಅಭ್ಯುದಯಕ್ಕೆ ಸೇವೆ ಸಲ್ಲಿಸುತ್ತಿದೆ. ಮುಂದೆ ನೂರಾರು ಕಾರ್ಯಾಗಾರ, ಪ್ರಾತ್ಯಕ್ಷಿಕೆ ಹಮ್ಮಿಕೊಂಡು ಯುವ ಸಂಗೀತಗಾರರ ಏಳಿಗೆಗೆ ಶ್ರಮಿಸಲು ಸಂಕಲ್ಪ ಮಾಡಿದೆ. ಸಂಗೀತ ಲೋಕದ ದಿಗ್ಗಜರನ್ನು ಗುರುತಿಸಿ, ಗೌರವಿಸುವ ಸೇವೆಯನ್ನೂ ಟ್ರಸ್ಟ್ ಮಾಡುತ್ತಿದೆ. ಒಟ್ಟಾರೆ ಕರ್ನಾಟಕ ಶಾಸ್ತ್ರೀಯ ಸಂಗೀತದ ಮಹತ್ವ ಕಾಪಾಡಲು ನಮ್ಮ ಕೆಸಿಎಂಸಿ ಟ್ರಸ್ಟ್ ದಿಟ್ಟ ಹೆಜ್ಜೆ ಇಟ್ಟಿದೆ ಎಂದರು.

ಹಿರಿಯ ವೀಣಾ ವಿದ್ವಾಂಸ ವಿದ್ವಾನ್ ಡಾ. ರಾ. ವಿಶ್ವೇಶ್ವರನ್ ಮಾತನಾಡಿ, ಸಂಗೀತ ಕ್ಷೇತ್ರದಲ್ಲಿ ಸಿದ್ಧಿ ಪಡೆದ ಅನೇಕರು ಪ್ರಸಿದ್ಧಿಗೆ ಬರಲೇ ಇಲ್ಲ. ಅವರ ಸಾಲಿನಲ್ಲಿ ಮೈಸೂರು ವಾಸುದೇವಾಚಾರ್ಯರೂ ಒಬ್ಬರು. ಮೈಸೂರಿನಲ್ಲಿ ಅವರಿಗೆ ರಾಜಾಶ್ರಯ ಮಾತ್ರ ಇತ್ತು. ಆದರೆ ರಾಷ್ಟ್ರಮಟ್ಟದ ಪ್ರಶಸ್ತಿ, ಪುರಸ್ಕಾರಗಳು ಇನ್ನಷ್ಟು ಮಾನ್ಯವಾಗಬೇಕಿತ್ತು. ಇಂದಿನ ಪೀಳಿಗೆ ಇಂಥ ಮಹಾನ್ ಕಲಾವಿದರ ರಚನೆಗಳನ್ನು ಶ್ರದ್ಧೆಯಿಂದ ಕಲಿತು ಹಾಡಬೇಕು. ಕೆಸಿಎಂಸಿ ಟ್ರಸ್ಟ್ ಈ ನಿಟ್ಟಿನಲ್ಲಿ ಸಾವಿರಾರು ಕೆಲಸಗಳನ್ನು ಮಾಡಲಿ ಎಂದು ಹಾರೈಸುವೆ ಎಂದು ತಿಳಿಸಿದರು.

ರೇವತಿ ಕಾಮತ್ ಚಾರಿಟಬಲ್ ಟ್ರಸ್ಟ್ ಉದ್ಘಾಟನೆ

ಇದೇ ವೇಳೆ ಖ್ಯಾತ ವೀಣಾ ವಿದುಷಿ ರೇವತಿ ಕಾಮತ್ ಅವರ ‘ರೇವತಿ ಕಾಮತ್ ಚಾರಿಟಬಲ್ ಟ್ರಸ್ಟ್’ ಅನ್ನು ವಿದ್ವಾನ್ ಆರ್. ವಿಶ್ವೇಶ್ವರನ್ ಅವರು ಉದ್ಘಾಟಿಸಿದರು. ಪರಿಸರ ಸಂರಕ್ಷಣೆ, ಗ್ರಾಮೀಣ ಮಕ್ಕಳ ಶಿಕ್ಷಣ ಅಭಿವೃದ್ಧಿ, ಕರ್ನಾಟಕ ಶಾಸ್ತ್ರೀಯ ಸಂಗೀತ ಪೋಷಣೆ ಮತ್ತು ಸಂವರ್ಧನೆಗೆ ಟ್ರಸ್ಟ್ ಸಂಕಲ್ಪ ಮಾಡಿದೆ ಎಂದು ರೇವತಿ ಕಾಮತ್ ತಿಳಿಸಿದರು.

ಈ ಸಂದರ್ಭದಲ್ಲಿ ಕಲಾಕ್ಷೇತ್ರದ ಹಿರಿಯ ಚೇತನ ವಿದ್ವಾನ್ ಡಾ.ರಾ. ವಿಶ್ವೇಶ್ವರನ್, ಲೇಖಕ ಮತ್ತು ಪತ್ರಕರ್ತ ಎ.ಆರ್. ರಘುರಾಮ, ಡಾ.ರಮಾ ಬೆಣ್ಣೂರು, ಭ್ರಮರಾ ಟ್ರಸ್ಟ್‌ನ ಸಂಸ್ಥಾಪಕಿ ಮಾಧುರಿ ತಾತಾಚಾರಿ, ವಿದ್ವಾನ್ ಡಾ.ರಾ.ಸ.ನಂದಕುಮಾರ್ ಮತ್ತು ವೀಣಾ ವಿದ್ವಾಂಸ ಪ್ರಶಾಂತ ಅಯ್ಯಂಗಾರ್, ವಿದ್ವಾನ್ ಆನೂರು ಅನಂತ ಕೃಷ್ಣ ಶರ್ಮ (ಶಿವು) ಮತ್ತು ಪುಸ್ತಕಂ ರಮಾ ಉಪಸ್ಥಿತರಿದ್ದರು.

ಇದನ್ನೂ ಓದಿ: Gold Rate Today: ಚಿನ್ನದ ಬೆಲೆಯಲ್ಲಿ ಕೊಂಚ ಏರಿಕೆ; ಬಂಗಾರದ ಮಾರುಕಟ್ಟೆಯಲ್ಲಿ ಇಂದಿನ ಧಾರಣೆ ಹೀಗಿದೆ

ಇದಕ್ಕೂ ಮುನ್ನ ವಾಸುದೇವಾಚಾರ್ಯರ ಕೃತಿಗಳ ಗೋಷ್ಠಿ ಗಾಯನ, ವಿದುಷಿ ಮೈಸೂರು ರಾಜಲಕ್ಷ್ಮೀ ಅವರ ವೀಣಾವಾದನ ನೂರಾರು ಪ್ರೇಕ್ಷಕರನ್ನು ರಂಜಿಸಿತು.

Continue Reading

ಪ್ರಮುಖ ಸುದ್ದಿ

ಗುರು ಸಕಲಮಾ ಆತ್ಮಕಥನ ʻಹಿಮಾಲಯ ಋಷಿಗಳ ದಿವ್ಯ ಸಂದೇಶಗಳುʼ ಮುಖಪುಟ ಅನಾವರಣ

ಅಧ್ಯಾತ್ಮದ ಹಾದಿ ಕಷ್ಟದ್ದು, ನಮಗಲ್ಲ ಎಂದು ಸಾಮಾನ್ಯರಲ್ಲಿ ತಪ್ಪು ತಿಳುವಳಿಕೆ ಇದೆ. ಗೃಹಸ್ಥ ಆಶ್ರಮದಲ್ಲಿದ್ದುಕೊಂಡೇ ಅಧ್ಯಾತ್ಮದ ಹಾದಿಯಲ್ಲಿ ಪಯಣಿಸಬಹುದು. ತಂತ್ರಮಾರ್ಗದ ಬಗೆಗೆ ಇಂದು ಸಮಾಜದಲ್ಲಿ ಗೊಂದಲಗಳಿವೆ, ತಪ್ಪು ತಿಳುವಳಿಕೆಗಳೂ ಇವೆ ಎಂದು ಗುರು ಸಕಲಮಾ ನುಡಿದರು. ʻಹಿಮಾಲಯ ಋಷಿಗಳ ದಿವ್ಯ ಸಂದೇಶಗಳು- ಸಕಾಲಿಕ ಮತ್ತು ಕಾಲಾತೀತʼ ಕೃತಿಯ ಮುಖಪುಟವನ್ನು ಸಾಹಿತಿ ಜೋಗಿ ಅನಾವರಣಗೊಳಿಸಿದರು.

VISTARANEWS.COM


on

ಹಿಮಾಲಯ book cover page launch 2
Koo

ಹಿಮಾಲಯದ ಗುರು ಪರಂಪರೆ ಅವಿನಾಶಿ: ಗುರು ಸಕಲಮಾ

ಬೆಂಗಳೂರು: ಅಧ್ಯಾತ್ಮದ (Spirituality) ಬಗ್ಗೆ ಸಮಾಜದಲ್ಲಿ ಇರುವ ತಪ್ಪು ತಿಳುವಳಿಕೆಗಳು, ಭಯಗಳಿಂದಾಗಿ ಮೊದಲಿನಷ್ಟು ಮೌಲ್ಯಯುತವಾಗಿ ಅದನ್ನು ನಮಗೆ ಉಳಿಸಿಕೊಳ್ಳಲಾಗಿಲ್ಲ. ಆದರೆ, ನಾವು ಅದನ್ನು ಕಳೆದುಕೊಂಡಿಲ್ಲ. ಯಾರು ಏನೇ ಪ್ರಯತ್ನ ಮಾಡಿದರೂ ಇದನ್ನು ನಾಶ ಮಾಡಲು ಸಾಧ್ಯವಿಲ್ಲ. ಈ ನಮ್ಮ ಸಂಸ್ಕೃತಿ ಅವಿನಾಶಿ ಎಂದು ಹಿಮಾಲಯ ಯೋಗಿ ಸ್ವಾಮಿ ರಾಮ (Swami Rama) ಹಾಗೂ ಬಹುಶ್ರುತ ವಿದ್ವಾಂಸ ಡಾ. ಆರ್‌ ಸತ್ಯನಾರಾಯಣ (Dr. R Satyanarayana) ಅವರ ನೇರ ಶಿಷ್ಯೆ, ಶ್ರೀವಿದ್ಯಾ ಗುರು ಸಕಲಮಾ (Guru Sakalamaa) ಅವರು ಹೇಳಿದ್ದಾರೆ.

ಅವರು ತಮ್ಮ, ʻಹಿಮಾಲಯ ಋಷಿಗಳ ದಿವ್ಯ ಸಂದೇಶಗಳು- ಸಕಾಲಿಕ ಮತ್ತು ಕಾಲಾತೀತʼ ಪುಸ್ತಕದ ಇಂಗ್ಲೀಷ್‌ ಹಾಗೂ ಕನ್ನಡ ಆತ್ಮಚರಿತ್ರೆಯ ಮುಖಪುಟ ಅನಾವರಣ ಸಮಾರಂಭದಲ್ಲಿ ಮಾತನಾಡುತ್ತಿದ್ದರು.

ಅಧ್ಯಾತ್ಮದ ಹಾದಿ ಕಷ್ಟದ್ದು, ನಮಗಲ್ಲ ಎಂದು ಸಾಮಾನ್ಯರಲ್ಲಿ ತಪ್ಪು ತಿಳುವಳಿಕೆ ಇದೆ. ಆದರೆ ಇದಕ್ಕೆ ಇನ್ನೊಂದು ಮುಖವಿದೆ ಅದು ತಂತ್ರಶಾಸ್ತ್ರ. ತಂತ್ರ ನಿಮ್ಮನ್ನು ನೀವು ಹೇಗಿದ್ದೇವೋ ಹಾಗೆಯ ಸ್ವೀಕರಿಸುತ್ತದೆ. ಗೃಹಸ್ಥ ಆಶ್ರಮದಲ್ಲಿದ್ದುಕೊಂಡೇ ನೀವು ಅಧ್ಯಾತ್ಮ ದ ಹಾದಿಯಲ್ಲಿ ಪಯಣಿಸಬಹುದು. ಈ ತಂತ್ರದ ಬಗೆಗೆ ಇಂದು ಸಮಾಜದಲ್ಲಿ ಗೊಂದಲಗಳಿವೆ, ತಪ್ಪು ತಿಳುವಳಿಕೆಗಳೂ ಇವೆ. ಇದು ಇವತ್ತಿನ ಸಮಸ್ಯೆಯಲ್ಲ. ಶಂಕರಾಚಾರ್ಯರ ಕಾಲದಿಂದಲೂ ಇತ್ತು. ಅವರು ಇದಕ್ಕೆ ಅಂಟಿದ ಜಾಡ್ಯಗಳನ್ನು ಕಿತ್ತೆಸೆದು ಅದನ್ನು ಪ್ರವರ್ಧಮಾನಕ್ಕೆ ತರಲು ಶ್ರಮಿಸಿದರು ಎಂದರು.

ನನ್ನಮ್ಮ ನನಗೆ ಋಷಿಮುನಿಗಳ ಕತೆಗಳನ್ನೆಲ್ಲ ಹೇಳುವಾಗ ಈ ಕತೆಗಳ ಋಷಿಮುನಿಗಳಿಗೂ ನಮಗೂ ಸಂಬಂಧವಿಲ್ಲ, ಅವರು ಯಾವುದೋ ಲೋಕದಲ್ಲಿ ಕೂತಿರುವವರು. ನನಗೂ ಅವರಿಗೂ ಯಾವುದೇ ಸಂಬಂಧವಿಲ್ಲ ಎಂದೇ ನಾನಂದುಕೊಂಡಿದ್ದೆ. ಆದರೆ, ಶ್ರದ್ಧೆಯಿಂದ ನೀವು ಈ ಲೋಕಕ್ಕೆ ಬಂದರೆ, ಇವು ಕತೆಗಳಲ್ಲ, ಅಧ್ಯಾತ್ಮಿಕ ಸತ್ಯಗಳು ಎಂಬುದು ನಿಮಗೆ ಗೋಚರವಾಗಬಹುದು. ನೀವು ಬಯಸಿದಲ್ಲಿ, ಈ ಪುಸ್ತಕದಲ್ಲಿ ಬಂದಿರುವ ಋಷಿಮುನಿಗಳನ್ನೆಲ್ಲ ನೀವು ಭೇಟಿ ಮಾಡಬಹುದು. ನಿಮ್ಮ ಕನಸಿನಲ್ಲೂ ಅವರು ಬಂದು ನಿಮ್ಮ ಜೊತೆ ಮಾತನಾಡಬಹುದು. ಪಕ್ಕದಲ್ಲೇ ಗೆಳೆಯನ ರೀತಿಯಲ್ಲಿ ಬಂದು ನಿಮಗೆ ಅರಿವು ಮೂಡಿಸಿ ಹೋಗಬಹುದು. ಅವರೆಲ್ಲ ಬೇರೊಂದು ಲೋಕದಲ್ಲಿ ಕುಳಿತು, ಈ ಲೋಕಕಲ್ಯಾಣಕ್ಕಾಗಿ ಕಂಕಣ ಬದ್ಧರಾಗಿ ನಿಂತಿದ್ದಾರೆ, ಸದಾ ನಮ್ಮನ್ನು ಪೊರೆಯುತ್ತಿದ್ದಾರೆ ಎಂದು ಅವರು ಹೇಳಿದರು.

ಬದುಕಿನ ಪಯಣದಲ್ಲಿ ಗುರುವಿನ ಸ್ಥಾನ ದೊಡ್ಡದು. ನಾನು, ನನ್ನದು ಎಂಬುದನ್ನು ಬಿಟ್ಟಾಗ ಗುರು ಸಿಕ್ಕುತ್ತಾನೆ. ಗುರುವಿನ ಅನ್ವೇಷಣೆಯಲ್ಲಿ ನಾವಿದ್ದೇವೆ ಎಂಬುದು ಅನೇಕ ಸಾರಿ ನಮಗೆ ಅರಿವೇ ಇರುವುದಿಲ್ಲ. ಅದಕ್ಕಾಗಿಯೇ, ಅರಿವೇ ಗುರುವು ಗುರುವೇ ಅರಿವು. ಗುರು ಸಿಕ್ಕ ಮೇಲೆ ಕೆಲವರಿಗೆ ಅರಿವು ಸಿಕ್ಕರೆ, ಇನ್ನು ಕೆಲವರಿಗೆ ಅರಿವಾಗಿ ಗುರು ಬೇಕು ಅನಿಸುತ್ತದೆ ಎಂದು ಹೇಳಿದರು.

ಹಿಮಾಲಯ book cover page launch 2

ಕನ್ನಡಪ್ರಭದ ಪುರವಣಿ ಸಂಪಾದಕ, ಸಾಹಿತಿ ಜೋಗಿ (Writer Jogi) ಮಾತನಾಡಿ, ಒಂದು ಪುಸ್ತಕವನ್ನು ಗೆಲ್ಲಿಸುವ ಅಂಶಗಳೆಂದರೆ ಮುಗ್ದತೆ ಹಾಗೂ ಪ್ರಾಮಾಣಿಕತೆ. ಇಂದು ಎಷ್ಟೋ ಪುಸ್ತಕಗಳು ಅಪ್ರಾಮಾಣಿಕವಾಗಿ ಇರುತ್ತದೆ, ಪುಸ್ತಕದ ಕೆಲವು ಪುಟಗಳನ್ನು ತೆರೆದು ನೋಡಿದ ತಕ್ಷಣ ಇದು ಪ್ರಾಮಾಣಿಕವೋ, ಅಪ್ರಾಮಾಣಿಕವೋ ಎಂಬುದು ಅರ್ಥವಾಗುತ್ತದೆ. ಈ ಪುಸ್ತಕ ಕೆಲವು ಪುಟಗಳನ್ನು ಮುಂಚಿತವಾಗಿ ಓದಿದ್ದರಿಂದ ನನಗೆ ಇದರಲ್ಲಿ ಮುಗ್ಧತೆ ಹಾಗೂ ಪ್ರಾಮಾಣಿಕತೆ ಎದ್ದು ಕಾಣುತ್ತಿವೆ. ಹಾಗಾಗಿ ಇದು ಸಾಕಷ್ಟು ಕುತೂಹಲವನ್ನು ಹುಟ್ಟುಹಾಕಿದೆ ಎಂದರು.

ಇಂದು ಪಾರಲೌಕಿಕ ಅಂದ ತಕ್ಷಣ ನಮಗೊಂದು ತಪ್ಪು ಕಲ್ಪನೆಯಿದೆ. ನಮಗೆ ಆ ವೇಷವನ್ನು ತೊಟ್ಟುಕೊಳ್ಳುವ ಧೈರ್ಯ ಇದೆಯೇ? ನಾವು ಆ ಜಗತ್ತಿಗೆ ಹೋಗಬಲ್ಲೆವಾ? ಇತ್ಯಾದಿ ಪ್ರಶ್ನೆಗಳು ನಮ್ಮನ್ನು ಕಾಡಿ ನಾವು ಅದರ ಗೊಡವೆಗೇ ಹೋಗುವುದಿಲ್ಲ. ಪುರಂದರ ದಾಸರೇ ʻಇಷ್ಟು ದಿನ ಈ ವೈಕುಂಠ ಎಷ್ಟು ದೂರ ಎನ್ನುತಲಿದ್ದೆʼ ಎಂದು ಬರೆಯುವ ಮೂಲಕ ವೈಕುಂಠ ಇಲ್ಲೇ ಇದ್ದರೂ, ಅಲ್ಲಿದೆ ಎಂದು ತಿಳಿದಿದ್ದೆ ಎನ್ನುವ ಸತ್ಯವನ್ನು ಹೇಳಿದ್ದಾರೆ. ಈ ಪುಸ್ತಕ ಈ ರೀತಿಯಲ್ಲಿ ಅಂಜಿಕೆಗಳನ್ನು ದೂರ ಮಾಡಿ ಸಂಕೋಚದ ತೆರೆಯನ್ನು ಸರಿಸಲು ದಾರಿದೀಪವಾಗಬಹುದು ಎಂದರು.

ಜೀವನದಲ್ಲಿ ನಾವು ಕಳೆದುಕೊಳ್ಳುವುದು ಅಪನಂಬಿಕೆಯಿಂದ. ನಮ್ಮಲ್ಲಿ ಅಪನಂಬಿಕೆಯಿದೆ ಎಂದರೆ ಅದು ನಮ್ಮ ವ್ಯಕ್ತಿತ್ವದ ದೋಷವೇ ಹೊರತು ಗುರುವಿನ ದೋಷವಲ್ಲ. ಒಂದು ಕತೆಯ ಒಳಗೆ ನನಗೆ ಹೋಗಲಾಗದಿದ್ದರೆ, ಅದು ಆ ಕಥನದ ದೋಷವಲ್ಲ, ಆ ಕಥನವನ್ನು ಸ್ವೀಕರಿಸುವ ಅನುಭವದ ಕೊರತೆಯೇ ಕಾರಣ. ಮನುಷ್ಯ ಎಲ್ಲ ದುಃಖಗಳನ್ನೂ, ಸುಖವನ್ನು ಬದುಕಿನಲ್ಲಿ ಅನುಭವಿಸಿದ ಮೇಲೆ ಒಂದು ಹುಡುಕಾಟ ಹಾದಿಯತ್ತ ಹೊರಳುತ್ತಾನೆ. ಈ ಹಾದಿಯಲ್ಲಿ ಸಿಗುವ ಗುರು ಯಾವುದೇ ರೂಪದಲ್ಲಿರಬಹುದು. ಇಂಥ ಸಂದರ್ಭ ನಂಬಿಕೆ ಬಹಳ ಮುಖ್ಯ ಪಾತ್ರ ವಹಿಸುತ್ತದೆ ಎಂದು ಅವರು ಹೇಳಿದರು. ಪುಸ್ತಕ ಜಗತ್ತಿಗೆ ಇಂಥದ್ದೊಂದು ಸಮಾರಂಭ ಬೇಕಿದೆ. ಮುಖಪುಟ ಅನಾವರಣವನ್ನೂ ಸಂಭ್ರಮಿಸುವ ಈ ನಡೆ ಪುಸ್ತಕ ಜಗತ್ತಿನಲ್ಲಿ ಸ್ವಾಗತಾರ್ಹ ಎಂದೂ ಅವರು ಹೇಳಿದರು.

ಸಕಲಮಾ ಅವರ ಯುಟ್ಯೂಬ್ ಅನಾವರಣಗೊಳಿಸಿದ ಕಾಂತಾರ (Kantara Movie) ಖ್ಯಾತಿಯ ನಟಿ ಸಪ್ತಮಿ ಗೌಡ (Saptami Gowda) ಮಾತನಾಡಿ, ಮುಖಪುಟವನ್ನು ನೋಡಿ ಪುಸ್ತಕವನ್ನು ಅಳೆಯಬೇಡಿ ಎಂಬ ಇಂಗ್ಲೀಷ್‌ ನುಡಿಗಟ್ಟಿದೆ. ಆದರೆ, ಸಾಮಾನ್ಯವಾಗಿ ನಾವು ಮುಖಪುಟವನ್ನು, ಟ್ರೈಲರ್‌ಗಳನ್ನು ನೋಡಿ ಅಳೆಯುವ ಪರಿಸ್ಥಿತಿ ಈಗ ಎಲ್ಲೆಡೆ ಇದೆ. ಒಳ ಹೂರಣ ಇದ್ದರೆ ಸಿನಿಮಾವಿರಲಿ, ಪುಸ್ತಕವಿರಲಿ ಗೆದ್ದೇ ಗೆಲ್ಲುತ್ತದೆ ಎಂಬುದು ನಾನು ಕಾಂತಾರದಿಂದ ಕಲಿತ ಪಾಠ ಎಂದರು.

ಒಂದು ಸಿನಿಮಾ ಮಾಡುವಂತೆ, ಪುಸ್ತಕ ಬರೆಯುವುದೂ ಕೂಡಾ ಸಾಕಷ್ಟು ಶ್ರಮ ಬೇಡುವ ಕೆಲಸ. ಅದರ ಹಿಂದೆ ಅಪಾರ ಶ್ರದ್ಧೆಯಿದೆ. ಸಿನಿಮಾ ಮಂದಿ ತಮ್ಮ ಸಿನಿಮಾದ ಕುತೂಹಲ ಮೊದಲೇ ಹೆಚ್ಚಿಸಲು ಟ್ರೈಲರ್, ಟೀಸರ್‌ ಬಿಡುಗಡೆಯನ್ನು ಇಟ್ಟುಕೊಳ್ಳುತ್ತಾರೆ. ಹಾಗಾಗಿ, ಪುಸ್ತಕವನ್ನೂ ಹೆಚ್ಚು ಮಂದಿಗೆ ತಲುಪಿಸಲು, ಕುತೂಹಲ ಹುಟ್ಟು ಹಾಕಿಲು ಇಂಥ ಮುಖಪುಟ ಅನಾವರಣದಂತಹ ಕಾರ್ಯಕ್ರಮಗಳು ನಡೆಯಬೇಕು. ಜನರು ಸೇರಬೇಕು. ಓದುವ ಪರಂಪರೆ ಹೆಚ್ಚಬೇಕು ಎಂದರು.

ಗುರು ಯಾರೇ ಇರಲಿ, ಅವರ ಮೇಲೆ ನಮಗೆ ನಂಬಿಕೆ ಇರಬೇಕು. ಜೀವನದಲ್ಲಿ ಕಲಿಯುವ ಹಾದಿ ದೊಡ್ಡದಿದೆ. ಆ ಸಂದರ್ಭ ಗುರು ತಿದ್ದಿದ್ದನ್ನು ನಾವು ಕಲಿತುಕೊಳ್ಳುವ ಆಸಕ್ತಿ ಇರಬೇಕು. ಅದಕ್ಕಾಗಿ ಗುರು ತೋರಿದ ಹಾದಿಯಲ್ಲಿ ನಾವು ನಡೆಯಬೇಕು ಎಂದೂ ಹೇಳಿದರು.

ಜುಲೈ 21ರಂದು ಚಂಡೀಗಢದಲ್ಲಿ ಆಂಗ್ಲ ಭಾಷೆಯ `Messages from the Himalayan Sages- Timely and Timeless’ ಹಾಗೂ ಸೆಪ್ಟೆಂಬರ್22ರಂದು ಬೆಂಗಳೂರಿನ ಗಾಯನ ಸಮಾಜದಲ್ಲಿ ʻಹಿಮಾಲಯ ಋಷಿಗಳ ದಿವ್ಯ ಸಂದೇಶಗಳು- ಸಕಾಲಿಕ ಮತ್ತು ಕಾಲಾತೀತʼ ಕನ್ನಡ ಪುಸ್ತಕ ಲೋಕಾರ್ಪಣೆಗೊಳ್ಳಲಿದೆ. ಗುರು ಸಕಲಮಾ ಅವರ ಯುಟ್ಯೂಬ್‌ ಲಿಂಕ್- https://youtube.com/@gurusakalamaa?feature=shared

ಇದನ್ನೂ ಓದಿ: ಹಿಮಾಲಯ ಋಷಿಗಳ ದಿವ್ಯ ಸಂದೇಶಗಳು- ಇವು ಗುರು ಸಕಲಮಾ ಬದುಕಿನ ಅಧ್ಯಾಯಗಳು!

Continue Reading

ವಿದೇಶ

Youngest Artist: ಅಂಬೆಗಾಲಿಡುವ ಬಾಲಕ ಈಗ ವಿಶ್ವದ ಅತಿ ಕಿರಿಯ ಚಿತ್ರ ಕಲಾವಿದ!

ಸುಮಾರು ಆರು ತಿಂಗಳ ಮಗುವಿದ್ದಾಗಲೇ ಚಿತ್ರ ರಚಿಸಲು ಪ್ರಾರಂಭಿಸಿದ ವಿಶ್ವದ ಕಿರಿಯ ಚಿತ್ರಕಲಾವಿದ (Youngest Artist) ಘಾನಾದ ಆಂಕ್ರಾ ಹಲವಾರು ವರ್ಣಚಿತ್ರಗಳನ್ನು ರಚಿಸಿರುವುದು ಮಾತ್ರವಲ್ಲ ಅವುಗಳಲ್ಲಿ ಒಂಬತ್ತು ಚಿತ್ರಗಳನ್ನು ಪ್ರದರ್ಶನದಲ್ಲಿ ಮಾರಾಟ ಮಾಡಿದ್ದಾನೆ! ಈ ಅತಿ ಕಿರಿಯ ಕಲಾವಿದನ ಕುರಿತು ವ್ಯಾಪಕ ಕುತೂಹಲ ಉಂಟಾಗಿದೆ.

VISTARANEWS.COM


on

By

Youngest Artist
Koo

ಅಂಬೆಗಾಲಿಡುವ (Toddler) ಮಗು ವರ್ಣಚಿತ್ರಗಳನ್ನು (Youngest Artist) ರಚಿಸಿ ಗಿನ್ನೆಸ್ ವಿಶ್ವ ದಾಖಲೆ (Guinness World Records) ಬರೆದಿದೆ. ವಿಶ್ವದ ಅತ್ಯಂತ ಕಿರಿಯ ಚಿತ್ರ ಕಲಾವಿದ ಎನ್ನುವ ಖ್ಯಾತಿಗೆ ಈ ಮಗು ಪಾತ್ರವಾಗಿದೆ. ಘಾನಾದ (Ghana) 1 ವರ್ಷ 152 ದಿನಗಳ ಏಸ್-ಲಿಯಾಮ್ ನಾನಾ ಸ್ಯಾಮ್ ಆಂಕ್ರಾ (Ace-Liam Nana Sam Ankrah) ತಾನೇ ರಚಿಸಿದ 9 ವರ್ಣಚಿತ್ರಗಳನ್ನು ಮಾರಾಟ ಮಾಡಿ ಈ ದಾಖಲೆ ನಿರ್ಮಿಸಿದೆ.

ಏಸ್- ಲಿಯಾಮ್ ನಾನಾ ಸ್ಯಾಮ್ ಆಂಕ್ರಾ ವಿಶ್ವದ ಅತ್ಯಂತ ಕಿರಿಯ ಪುರುಷ ಚಿತ್ರ ಕಲಾವಿದನಾಗಿ ಪ್ರತಿಷ್ಠಿತ ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ (GWR) ನಲ್ಲಿ ತನ್ನ ಹೆಸರನ್ನು ಬರೆದಿದ್ದಾನೆ.

ಸುಮಾರು ಆರು ತಿಂಗಳ ಮಗುವಿದ್ದಾಗಲೇ ಚಿತ್ರ ರಚಿಸಲು ಪ್ರಾರಂಭಿಸಿದ ಆಂಕ್ರಾ ಹಲವಾರು ವರ್ಣಚಿತ್ರಗಳನ್ನು ರಚಿಸಿರುವುದು ಮಾತ್ರವಲ್ಲ ಅವುಗಳಲ್ಲಿ ಒಂಬತ್ತು ವರ್ಣಚಿತ್ರಗಳನ್ನು ಪ್ರದರ್ಶನದಲ್ಲಿ ಮಾರಾಟ ಮಾಡಿದ. ಆಂಕ್ರಾನ ಈ ಸಾಧನೆ ಹಲವಾರು ಮಂದಿಯ ಗಮನ ಸೆಳೆದಿದ್ದ್ದು, ಜಾಗತಿಕ ಮೆಚ್ಚುಗೆಯನ್ನು ಗಳಿಸಿತ್ತು. ಇದೀಗ ವಿಶ್ವ ದಾಖಲೆ ಪಟ್ಟಿಯಲ್ಲಿ ಆಂಕ್ರಾ ಹೆಸರು ಸೇರ್ಪಡೆಗೆ ಸಾಕಷ್ಟು ಮಂದಿ ಅಚ್ಚರಿಯನ್ನೂ ವ್ಯಕ್ತಪಡಿಸಿದ್ದಾರೆ.


ಯಾವಾಗ ಚಿತ್ರಕಲೆ ಪ್ರಾರಂಭಿಸಿದ್ದು?

ಈಗಷ್ಟೇ ಅಂಬೆಗಾಲಿಡುತ್ತಿರುವ ಆಂಕ್ರಾ ಕೇವಲ ಆರು ತಿಂಗಳಲ್ಲೇ ಚಿತ್ರಕಲೆಯನ್ನು ಪ್ರಾರಂಭಿಸಿದನು ಎನ್ನುತ್ತಾರೆ ಆತನ ತಾಯಿ. ಚಿತ್ರಕಲೆಯ ಮೇಲಿನ ಆತನ ಉತ್ಸಾಹವು ಚಿಕ್ಕ ವಯಸ್ಸಿನಿಂದಲೂ ಸ್ಪಷ್ಟವಾಗಿತ್ತು ಎಂದು ಅವರು ತಿಳಿಸಿದ್ದಾರೆ.

ಆತ ಕಲಿಯಲು ಪ್ರಾರಂಭ ಮಾಡಿದಾಗಲೇ ಕ್ಯಾನ್ವಾಸ್‌ನ ತುಂಡನ್ನು ನೆಲದ ಮೇಲೆ ಹರಡಿ ಅದರ ಮೇಲೆ ಸ್ವಲ್ಪ ಬಣ್ಣವನ್ನು ಬೀಳಿಸಿದೆ. ಕ್ಯಾನ್ವಾಸ್‌ನಾದ್ಯಂತ ಆತ ಬಣ್ಣವನ್ನು ಹರಡಿ ಕೊನೆಗೊಳಿಸಿದ. ಇದು ಆತನ ಮೊದಲ ವರ್ಣಚಿತ್ರ ‘ದಿ ಕ್ರಾಲ್’ ಎಂದು ಅವರು ವಿವರಿಸಿದರು.


ಅಂಬೆಗಾಲಿಡುವ ಘಾನಾದ ಆಂಕ್ರಾ ಈಗ ಸೆಲೆಬ್ರಿಟಿಯಾಗಿದ್ದಾನೆ. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಾಧ್ಯಮಗಳಿಂದ ಮಾತ್ರವಲ್ಲದೆ ಘಾನಾ ಗಣರಾಜ್ಯದ ಪ್ರಥಮ ಮಹಿಳೆಯ ಗಮನವನ್ನೂ ಆತ ಸೆಳೆದಿದ್ದಾನೆ.

ಮೊದಲ ಪ್ರದರ್ಶನ

ಏಸ್- ಲಿಯಾಮ್ ಆಂಕ್ರಾ ಇತ್ತೀಚೆಗೆ ತನ್ನ ಚಿತ್ರಗಳನ್ನು ಮೊದಲ ಬಾರಿಗೆ ಸಾರ್ವಜನಿಕ ಪ್ರದರ್ಶನ ನಡೆಸಿದ. ಇದರಲ್ಲಿ ಆತನ ಹತ್ತು ಕಲಾಕೃತಿಗಳನ್ನು ಪ್ರದರ್ಶಿಸಲಾಯಿತು. ಅವುಗಳಲ್ಲಿ ಒಂಬತ್ತು ಮಾರಾಟವಾಗಿವೆ. ಏಸ್- ಲಿಯಾಮ್‌ನ ಕಲೆಯು ನಿರ್ದಿಷ್ಟ ಸಂದೇಶಗಳನ್ನು ರವಾನಿಸುವುದಕ್ಕಿಂತ ಹೆಚ್ಚಾಗಿ ಅಭಿವ್ಯಕ್ತಿ ಮತ್ತು ಅನ್ವೇಷಣೆಯ ಬಗ್ಗೆ ಹೆಚ್ಚಾಗಿದೆ ಎಂದು ಆತನ ತಾಯಿ ಹೇಳಿದ್ದಾರೆ.

ಅವನ ಅಮೂರ್ತ ವರ್ಣಚಿತ್ರಗಳು ಸುತ್ತಲಿನ ಪ್ರಪಂಚದಿಂದ ಪ್ರೇರಿತವಾಗಿವೆ. ಬಣ್ಣ, ಆಕಾರ, ಟೆಕಶ್ಚರ್ ಮತ್ತು ಅವನ ಮನಸ್ಥಿತಿಯನ್ನು ಇದು ಅವಲಂಬಿಸಿದೆ. ಪ್ರತಿ ಚಿತ್ರಕಲೆಯು ಹೊಸ ವಿಷಯಗಳನ್ನು ಕಂಡುಹಿಡಿಯುವಲ್ಲಿ ಆತನ ಕುತೂಹಲ ಮತ್ತು ಸಂತೋಷದ ಅಭಿವ್ಯಕ್ತಿಯಾಗಿದೆ ಎಂದಿದ್ದಾರೆ ಅವರು.


ಭವಿಷ್ಯದ ಯೋಜನೆಗಳು

ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಪ್ರಕಾರ, ವಿಶ್ವದ ಅತ್ಯಂತ ಕಿರಿಯ ಕಲಾವಿದ ಲಿಯಾಮ್ ಅವರ ದಾಖಲೆಯನ್ನು ಅನುಮೋದಿಸಿದ ಬಳಿಕ ಆತನ ಕುಟುಂಬವು ಆತನ ಕಲಾತ್ಮಕ ಪ್ರತಿಭೆಗೆ ಗುಣಮಟ್ಟದ ಶಿಕ್ಷಣದ ಮೂಲಕ ಪೋಷಿಸಲು ಅವಕಾಶಗಳನ್ನು ಹುಡುಕುತ್ತಿದೆ. ಅಂತಾರಾಷ್ಟ್ರೀಯ ವಿದ್ಯಾರ್ಥಿ ವೇತನದ ಅವಕಾಶಗಳು ಅವರಿಗೆ ದೊರೆಯುತ್ತದೆ ಮತ್ತು ಆತನ ಕಲಾಕೃತಿಗಳನ್ನು ಮಾರಾಟ ಮಾಡಲು ಬಯಸುತ್ತಿದೆ ಎಂದು ಹೇಳಿದೆ.

ಇದನ್ನೂ ಓದಿ: Guinness World Records: ಬರೋಬ್ಬರಿ 168 ಅಕ್ಷರಗಳನ್ನೊಳಗೊಂಡ ಈ ನಗರದ ಹೆಸರಿನಲ್ಲಿದೆ ವಿಶ್ವ ದಾಖಲೆ

ಏಸ್-ಲಿಯಾಮ್ ತಾಯಿಯ ಸಲಹೆ ಏನು?

ತಮ್ಮ ಆಸಕ್ತಿಗಳನ್ನು ಕಂಡುಕೊಳ್ಳಲು ಮಕ್ಕಳನ್ನು ಪ್ರೋತ್ಸಾಹಿಸಲು ಪೋಷಕರಿಗೆ ಸಲಹೆ ನೀಡಿದ ಅವರು, ಪ್ರತಿ ಮಗು ಅನನ್ಯವಾಗಿದೆ ಮತ್ತು ಅವರ ಭಾವೋದ್ರೇಕಗಳನ್ನು ಪೋಷಿಸುವುದು ಅದ್ಭುತ ಆವಿಷ್ಕಾರಗಳು ಮತ್ತು ಸಾಧನೆಗಳಿಗೆ ಕಾರಣವಾಗಬಹುದು. ಅದನ್ನು ಪ್ರಯತ್ನಿಸುವ ಮೊದಲು ಅದನ್ನು ಮತ್ತೆ ಮತ್ತೆ ಓದಿ ಮತ್ತು ನೆನಪಿಡಿ. ಪ್ರಯಾಣ ಮತ್ತು ಅದು ತರುವ ಸಂತೋಷವು ತುಂಬಾ ತೃಪ್ತಿಕರವಾಗಿರುತ್ತದೆ ಎಂದು ಅವರು ತಿಳಿಸಿದ್ದಾರೆ.

Continue Reading

ಕರ್ನಾಟಕ

Bengaluru News: ಬೆಂಗಳೂರಿನಲ್ಲಿ ಮೇ 26ರಂದು ʼಭಾರತದ ಧೀರ ಚೇತನಗಳುʼ ಕೃತಿ ಲೋಕಾರ್ಪಣೆ

Bengaluru News: ಡಾ. ವಿಕ್ರಮ್‌ ಸಂಪತ್‌ ಅವರ ʼಭಾರತದ ಧೀರ ಚೇತನಗಳುʼ (ಭಾರತೀಯ ಇತಿಹಾಸದ ವೀರರರ ಬಗೆಗೆ ನುಡಿಚಿತ್ರಗಳು) ಎಂಬ ಕೃತಿಯ ಲೋಕಾರ್ಪಣೆ ಕಾರ್ಯಕ್ರಮವು ಇದೇ ಮೇ 26 ರಂದು ಭಾನುವಾರ ಬೆಳಿಗ್ಗೆ 10.30 ಕ್ಕೆ ಬೆಂಗಳೂರಿನ ಬಸವನಗುಡಿಯ ಬಿ.ಪಿ. ವಾಡಿಯಾ ರಸ್ತೆಯಲ್ಲಿರುವ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ವರ್ಲ್ಡ್‌ ಕಲ್ಚರ್‌ ನಲ್ಲಿ ನಡೆಯಲಿದೆ. ಸಾಹಿತಿ ಎಸ್‌.ಎಲ್‌.ಭೈರಪ್ಪ ಕೃತಿ ಬಿಡುಗಡೆ ಮಾಡಲಿದ್ದಾರೆ.

VISTARANEWS.COM


on

Bharathada dheera chethanagalu kruthi lokarpane in Bengaluru on May 26
Koo

ಬೆಂಗಳೂರು: ಡಾ. ವಿಕ್ರಮ್‌ ಸಂಪತ್‌ ಅವರ ʼಭಾರತದ ಧೀರ ಚೇತನಗಳುʼ (ಭಾರತೀಯ ಇತಿಹಾಸದ ವೀರರರ ಬಗೆಗೆ ನುಡಿಚಿತ್ರಗಳು) ಎಂಬ ಕೃತಿಯ ಲೋಕಾರ್ಪಣೆ ಕಾರ್ಯಕ್ರಮವು ಇದೇ ಮೇ 26ರಂದು ಭಾನುವಾರ ಬೆಳಗ್ಗೆ 10.30ಕ್ಕೆ ನಗರದ (Bengaluru News) ಬಸವನಗುಡಿಯ ಬಿ.ಪಿ. ವಾಡಿಯಾ ರಸ್ತೆಯಲ್ಲಿರುವ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ವರ್ಲ್ಡ್‌ ಕಲ್ಚರ್‌ನಲ್ಲಿ ಜರುಗಲಿದೆ.

ಇದನ್ನೂ ಓದಿ: COMEDK UGET Result 2024: ಕಾಮೆಡ್‌ ಕೆ ಫಲಿತಾಂಶ ಪ್ರಕಟ; ಬೆಂಗಳೂರಿನ ಬಾಲಸತ್ಯ ಸರವಣನ್ ಫಸ್ಟ್‌ ರ‍್ಯಾಂಕ್‌

ಹುಬ್ಬಳ್ಳಿಯ ಸಾಹಿತ್ಯ ಪ್ರಕಾಶನದಿಂದ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಎಸ್‌.ಎಲ್‌. ಭೈರಪ್ಪ ಅವರು ಕೃತಿಯನ್ನು ಲೋಕಾರ್ಪಣೆ ಮಾಡಲಿದ್ದಾರೆ. ಇದೇ ವೇಳೆ ಎಸ್‌.ಎಲ್‌. ಭೈರಪ್ಪನವರ ಇಂಗ್ಲೀಷ್‌ ಅನುವಾದಿತ 3 ಕಾದಂಬರಿಗಳನ್ನು ಡಾ. ವಿಕ್ರಮ್‌ ಸಂಪತ್‌ ಅವರು ಲೋಕಾರ್ಪಣೆ ಮಾಡಲಿದ್ದಾರೆ.

ಇದನ್ನೂ ಓದಿ: Rotary June Run: ರೋಟರಿಯಿಂದ ಬೆಂಗಳೂರಿನಲ್ಲಿ ಜೂನ್​ 9ರಂದು ಮ್ಯಾರಥಾನ್​; ವಿಸ್ತಾರ ನ್ಯೂಸ್‌ ಸಹಯೋಗ

ಕಾರ್ಯಕ್ರಮದಲ್ಲಿ ಡಾ. ವಿಕ್ರಮ್‌ ಸಂಪತ್‌ ಅವರೊಂದಿಗೆ ಅರ್ಧಗಂಟೆಯ ಸಂವಾದ ಕಾರ್ಯಕ್ರಮ ಏರ್ಪಡಿಸಲಾಗಿದೆ. ಅನುವಾದಕರಾದ ಎಲ್‌.ವಿ. ಶಾಂತಕುಮಾರಿ, ಪ್ರೊ. ಜಿ.ಎಲ್‌. ಶೇಖರ್‌ ಸಮಾರಂಭದಲ್ಲಿ ಉಪಸ್ಥಿತರಿರಲಿದ್ದಾರೆ ಎಂದು ಎಂ.ಎ. ಸುಬ್ರಮಣ್ಯ ಮತ್ತು ಎಂ.ಎಸ್‌. ಋತ್ವಿಕ್‌ ತಿಳಿಸಿದ್ದಾರೆ.

Continue Reading
Advertisement
AUS vs NAM
ಕ್ರೀಡೆ11 mins ago

AUS vs NAM: ನಮೀಬಿಯಾ ವಿರುದ್ಧ ಅಭ್ಯಾಸ ಪಂದ್ಯವಾಡಿದ ಆಸೀಸ್​ ತಂಡದ ಕೋಚಿಂಗ್​ ಸಿಬ್ಬಂದಿ

Dream Of Retired Couple
ಪ್ರವಾಸ14 mins ago

Dream Of Retired Couple: ನಿರಂತರ ಮೂರೂವರೆ ವರ್ಷಗಳ ನೌಕಾಯಾನಕ್ಕಾಗಿ ತಮ್ಮದೆಲ್ಲವನ್ನೂ ಮಾರಿದ ದಂಪತಿ!

KSET Results 2024
ಕರ್ನಾಟಕ20 mins ago

KSET Results 2024:‌ ಕೆ-ಸೆಟ್‌ ಪರೀಕ್ಷೆ ಫಲಿತಾಂಶ; ಅಂಕಪಟ್ಟಿ ಡೌನ್‌ಲೋಡ್‌ ಮಾಡಿಕೊಳ್ಳುವುದು ಹೇಗೆ? ಇಲ್ಲಿದೆ ಮಾಹಿತಿ

MLC Election North East Graduate Constituency Election 2024 total 24 183 graduate voters in the district
ಬಳ್ಳಾರಿ20 mins ago

MLC Election: ಈಶಾನ್ಯ ಪದವೀಧರರ ಕ್ಷೇತ್ರ ಚುನಾವಣೆ; ಬಳ್ಳಾರಿ ಜಿಲ್ಲೆಯಲ್ಲಿ 24,183 ಪದವೀಧರ ಮತದಾರರು

Uttara Kannada DC Gangubai Manakar spoke in Vote counting training program at Kumta
ಉತ್ತರ ಕನ್ನಡ22 mins ago

Lok Sabha Election 2024: ಮತ ಎಣಿಕೆ ಕಾರ್ಯ ಎಚ್ಚರಿಕೆಯಿಂದ ನಿರ್ವಹಿಸಲು ಡಿಸಿ ಗಂಗೂಬಾಯಿ ಮಾನಕರ್ ಸೂಚನೆ

LinkedIns Tips for Graduates in the Job Search
ಕರ್ನಾಟಕ24 mins ago

LinkedIn: ಉದ್ಯೋಗ ಹುಡುಕಾಟದಲ್ಲಿರುವ ಪದವೀಧರರಿಗೆ ಲಿಂಕ್ಡ್‌ಇನ್‌ ಸಲಹೆಗಳು ಪ್ರಕಟ; ಏನೇನಿವೆ ತಪ್ಪದೇ ಓದಿ

Star Fashion
ಫ್ಯಾಷನ್31 mins ago

Star Fashion: ಏನಿದು ನಟಿ ಶ್ರೀ ಲೀಲಾ ಧರಿಸಿ ಮಿಂಚಿದ್ದ ಘರಾರ ಡ್ರೆಸ್?

bitcoin scam
ಪ್ರಮುಖ ಸುದ್ದಿ41 mins ago

Bitcoin Scam: ಬಿಟ್ ಕಾಯಿನ್ ಪ್ರಕರಣದಲ್ಲಿ ಮತ್ತೊಬ್ಬ ಇನ್‌ಸ್ಪೆಕ್ಟರ್‌ನನ್ನು ಬಂಧಿಸಿದ ಎಸ್ಐಟಿ

Dinesh Karthik
ಕ್ರೀಡೆ1 hour ago

Dinesh Karthik: ಪ್ಯಾರಿಸ್​ನಲ್ಲಿ ನೀರಜ್​ಗೆ ತೀವ್ರ ಪೈಪೋಟಿ ನೀಡಲು ಮುಂದಾದರೇ ದಿನೇಶ್​ ಕಾರ್ತಿಕ್​?; ಜಾವೆಲಿನ್​ ಅಭ್ಯಾಸದ ವಿಡಿಯೊ ವೈರಲ್​

Prajwal Revanna Case
ಕರ್ನಾಟಕ1 hour ago

Prajwal Revanna Case: ಚೇತನ್‌, ನವೀನ್ ಗೌಡಗೆ ಮೂರು ದಿನ ಎಸ್‌ಐಟಿ ಕಸ್ಟಡಿ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka weather Forecast
ಮಳೆ24 hours ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು1 day ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ2 days ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ3 days ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು3 days ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ4 days ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ7 days ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ1 week ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು1 week ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

ಟ್ರೆಂಡಿಂಗ್‌