Health Tips: ಏರ್‌ ಫ್ರೈಯರ್‌ನಲ್ಲಿ ಯಾವೆಲ್ಲ ಆಹಾರವನ್ನು ತಯಾರಿಸಬಾರದು ಗೊತ್ತಾ? - Vistara News

ಆರೋಗ್ಯ

Health Tips: ಏರ್‌ ಫ್ರೈಯರ್‌ನಲ್ಲಿ ಯಾವೆಲ್ಲ ಆಹಾರವನ್ನು ತಯಾರಿಸಬಾರದು ಗೊತ್ತಾ?

ಬಿಸಿ ಗಾಳಿಯನ್ನು ಬಳಸಿ ಅಡುಗೆ ಮಾಡುವ ಏರ್‌ ಫ್ರೈಯರ್‌ ಉಪಕರಣ ಕೆಲವು ಬಗೆಯ ಫಾಸ್ಟ್‌ ಫುಡ್‌ ಸೇರಿದಂತೆ, ಎಣ್ಣಿರಹಿತ ಅಡುಗೆಯಲ್ಲಿಂದು ಹೆಚ್ಚು ಬಳಕೆಯಾಗುತ್ತಿದೆ. ಆದರೆ ಇದು ಎಲ್ಲ ಅಡುಗೆಗೂ ಸೂಕ್ತವಲ್ಲ.

VISTARANEWS.COM


on

air frier
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಇತ್ತೀಚಿನ ದಿನಗಳಲ್ಲಿ ಅಡುಗೆ ಮನೆಯೆಲ್ಲವೂ ಸಾಕಷ್ಟು ವೈವಿಧ್ಯಮಯ ಉಪಕರಣಗಳಿಂದ ತುಂಬಿ ಹೋಗಿವೆ. ಅಡುಗೆಯ ಕೆಲಸ ವೇಗವಾಗಿ, ರುಚಿಯಾಗಿ ಆಗಲು ನಾನಾ ಬಗೆಯ ಉಪಕರಣಗಳಿಂದು ಮನುಷ್ಯನ ನಿತ್ಯದ ಸಾಥಿಯಾಗಿವೆ. ಆದರೆ, ಇವುಗಳಿಂದಾಗಿ ನಮ್ಮ ಹಳೆಯ ಪದ್ಧತಿಗಳ ಮೂಲಕ ಅಡುಗೆ ಮಾಡುವುದು ಬಹುತೇಕ ಕಡಿಮೆಯಾಗಿದೆ. ಹೀಗೆ ಇತ್ತೀಚಿನ ದಿನಗಳಲ್ಲಿ ಹೆಚ್ಚು ಬಳಕೆಯಾಗುವ ಉಪಕರಣಗಳ ಪೈಕಿ ಏರ್‌ ಫ್ರೈಯರ್‌ ಕೂಡಾ ಒಂದು. ಏರ್‌ ಫ್ರೈಯರ್‌ ಎಂಬ ಪುಟಾಣಿ ಉಪಕರಣ ಬಿಸಿ ಗಾಳಿಯನ್ನು ಬಳಸಿ ಅಡುಗೆ ಮಾಡುವ ಉಪಕರಣವಾಗಿದ್ದು ಇದು ಕೆಲವು ಬಗೆಯ ಫಾಸ್ಟ್‌ ಫುಡ್‌ ಸೇರಿದಂತೆ, ಎಣ್ಣಿರಹಿತ ಅಡುಗೆಯಲ್ಲಿಂದು ಹೆಚ್ಚು ಬಳಕೆಯಾಗುತ್ತಿದೆ. ಹೀಗಾಗಿ, ಡಯಟ್‌ ಪ್ರಿಯರು, ಫಿಟ್‌ನೆಸ್‌ ಪ್ರಿಯರು ಇದರ ಬಳಕೆಯನ್ನಿಂದು ಹೆಚ್ಚು ಮಾಡಿದ್ದಾರೆ. ಆದರೆ ಇದು ಎಲ್ಲ ಅಡುಗೆಗೂ ಸೂಕ್ತವಲ್ಲ. ಹಾಗಾದರೆ ಬನ್ನಿ, ಏರ್‌ ಫ್ರೈಯರ್‌ನಲ್ಲಿ ಯಾವ ಬಗೆಯ ಅಡುಗೆಯನ್ನು ನಾವು ಮಾಡಬಾರದು ಎಂಬುದನ್ನು ನೋಡೋಣ.

1. ಪಕೋಡಾ, ಬಜ್ಜಿ ಮಾಡಬೇಡಿ: ನೀರು ಹಾಕಿ ರುಬ್ಬಿಕೊಂಡ ತೇವಯುಕ್ತ ಹಿಟ್ಟುಗಳನ್ನು ಉಪಯೋಗಿಸಿ ಮಾಡುವ ತಿಂಡಿಗಳನ್ನು ಮಾಡಲು ಏರ್‌ ಫ್ರೈಯರ್‌ ಬಳಸಬಾರದು. ಅದು ಪಕೋಡಾ ಇರಲಿ, ವಡಾವೇ ಆಗಿರಲಿ, ಗರಿಗರಿಯಾಗಿ ಎಣ್ಣೆ ಕಡಿಮೆ ಹಾಕಿ ಏರ್‌ ಫ್ರೈಯರ್‌ನಲ್ಲಿ ಮಾಡುತ್ತೇನೆ ಎಂದು ನೀವಂದುಕೊಂಡರೆ ಅದು ಶುದ್ಧ ಮೂರ್ಖತನ. ಯಾಕೆಂದರೆ ಇದು ಎಣ್ಣೆ ಕಡಿಮೆ ಬಳಕೆ ಮಾಡುತ್ತದೆ ಎಂದು ಮೇಲ್ನೋಟಕ್ಕೆ ಆಕರ್ಷಕವಾಗಿ ಕಾಣಬಹುದು. ಆದರೆ ಖಂಡಿತವಾಗಿಯೂ ಎಣ್ಣೆಯಲ್ಲಿ ಡೀಪ್‌ ಫ್ರೈ ಮಾಡಿದಷ್ಟು ಗರಿಗರಿಯಾಗಿ, ರುಚಿರುಚಿಯಾಗಿ ಏರ್‌ ಫ್ರೈಯರ್‌ನಲ್ಲಿ ಆಗದು. ಅಷ್ಟೇ ಅಲ್ಲ, ಇದು ಕೊನೆಗೆ ನಿರಾಶೆಯಲ್ಲಿಯೇ ಅಂತ್ಯಗೊಳ್ಳುವುದರಿಂದ ಅಪರೂಪಕ್ಕೊಮ್ಮೆ ಡೀಪ್‌ ಫ್ರೈಯ ತಿಂಡಿಗಳನ್ನು ತಿನ್ನಬಹುದು ಎಂದು ನಿಮ್ಮನ್ನು ನೀವು ಸಮಾಧಾನಿಸಿಕೊಂಡು ಸಹಜವಾಗಿ ಮಾಡುವ ಬಗೆಯಲ್ಲಿಯೇ ಮಾಡಿ ತಿನ್ನಿ.

2. ಚೀಸ್‌ ಬಳಕೆ: ಚೀಸ್‌ ಹಾಕಿ ಮಾಡುವ ತಿನಿಸುಗಳನ್ನು ಏರ್‌ ಫ್ರೈಯರ್‌ನಲ್ಲಿ ಅದ್ಭುತವಾಗಿ ಮಾಡಬಹುದು ಎಂದು ನೀವು ಅಂದುಕೊಂಡಿದ್ದರೆ ನಿಮ್ಮ ಎಣಿಕೆ ತಪ್ಪು. ಯಾಕೆಂದರೆ ಚೀಸ್‌ ಏರ್‌ ಫ್ರೈಯರ್‌ನಲ್ಲಿ ಸರಿಯಾಗಿ ಕರಗದು. ಹಾಗಾಗಿ ಚೀಸ್‌ಗೆ ಮೈಕ್ರೋವೇವ್‌ ಅವನ್‌ ಸೂಕ್ತ.

3. ಬ್ರೊಕೊಲಿ: ಬ್ರೊಕೋಲಿಯನ್ನೂ ಏರ್‌ ಫ್ರೈಯರ್‌ನಲ್ಲಿಡಬಾರದು. ಇದು ಬ್ರೊಕೋಲಿಯನ್ನು ಒಣಕಲಾಗಿಸುತ್ತದೆ. ರುಚಿಹೀನವನ್ನಾಗಿಸುತ್ತದೆ. ಇದರಲ್ಲಿರುವ ತೇವಾಂಶ ಪೂರ್ತಿ ಹೋಗಿ ಇದು ಸೀದು ಹೋಗುವುದೇ ಹೆಚ್ಚು. ಆದರೆ ನಿಮಗೆ ಬ್ರೊಕೋಲಿಯನ್ನು ಏರ್‌ ಫ್ರೈಯರ್‌ನಲ್ಲಿಡಬೇಕಾದ ಪರಿಸ್ಥಿತಿ ಬಂದರೆ ಸ್ವಲ್ಪ ನೀರು ಚಿಮುಕಿಸಿ ಅಡುಗೆ ಮಾಡಿ.

ಇದನ್ನೂ ಓದಿ: Health Tips: ತೇಗುವುದೇ ನಿಮ್ಮ ಸಮಸ್ಯೆಯೇ? ಹಾಗಾದರೆ ಇಲ್ಲಿದೆ ನಿಮಗೆ ಉತ್ತರ!

4. ಚಿಕನ್:‌ ಇಡಿಯ ಚಿಕನ್‌ ಅನ್ನು ಏರ್‌ ಫ್ರೈಯರ್‌ನಲ್ಲಿಟ್ಟು ಬೇಯಿಸಲು ಹೊರಡಬೇಡಿ. ಇದರ ಗಾತ್ರ ದೊಡ್ಡದಿರುವುದರಿಂದ ಸರಿಯಾಗಿ ಇದು ಬೇಯದು. ಒಳಭಾಗದಲ್ಲಿ ಬೇಯದೆ ಹಾಗೇ ಉಳಿಯುವ ಸಂದರ್ಭವೇ ಹೆಚ್ಚು. ಹೊರಗಿನ ಭಾಗ ಹೆಚ್ಚು ಬೆಂದು, ಸೀದು ಒಳಭಾಗ ಬೇಯದೆ ಹಾಗೆ ಉಳಿಯಬಹುದು.

5. ಪಾಪ್‌ಕಾರ್ನ್‌: ಪಾಪ್‌ಕಾರ್ನ್‌ ಯಾರಿಗಿಷ್ಟವಿಲ್ಲ ಹೇಳಿ. ಮನೆಯಲ್ಲಿ ಎಲ್ಲರೂ ಜೊತೆಯಾಗಿ ಸಿನಿಮಾ ನೋಡುವಾಗ ಫಟಾಫಟ್‌ ಪಾಪ್‌ಕಾರ್ನ್‌ ಮಾಡುತ್ತೇನೆ ಎಂದು ಏರ್‌ ಫ್ರೈಯರ್‌ನಲ್ಲಿ ಮಾಡುವ ಪ್ರಯತ್ನ ಮಾಡಬೇಡಿ. ಯಾಕೆಂದರೆ ಮೈಕ್ರೋವೇವ್‌ ಅವನ್‌ನಲ್ಲಿ ಬೇಗ ಮಾಡಲು ಸಾಧ್ಯವಾಗುವಂತೆ ಇಲ್ಲೂ ಸಾಧ್ಯ ಎಂದು ನೀವು ಅಂದುಕೊಂಡರೆ ನಿಮ್ಮ ಎಣಿಕೆ ತಪ್ಪು. ಯಾಕೆಂದರೆ ಮೈಕ್ರೋವೇವ್‌ ತಲುಪಬಹುದಾದ ಉಷ್ಣತೆಯ ಮಟ್ಟಕ್ಕೆ ಏರ್‌ ಫ್ರೈಯರ್‌ ತಲುಪುವುದಿಲ್ಲ. ಹಾಗೂ, ಪಾಪ್‌ ಕಾರ್ನ್‌ಗೆ ಹೆಚ್ಚು ಉಷ್ಣತೆಯ ಅಗತ್ಯ ಇರುವುದರಿಂದ ಪಾಪ್‌ ಕಾರ್ನ್‌ ಮಾಡಲು ಏರ್‌ ಫ್ರೈಯರ್‌ನಲ್ಲಿ ಸಾದ್ಯವಾಗುವುದಿಲ್ಲ. 

ಇದನ್ನೂ ಓದಿ: Health Tips: ನಿಮ್ಮ ಪ್ರಿಯವಾದ ಅನ್ನವನ್ನು ಬಿಡದೆ, ತೂಕ ಇಳಿಸಿಕೊಳ್ಳಬಹುದು ಗೊತ್ತೇ?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Covishield Vaccine: ಕೋವಿಡ್‌ ಲಸಿಕೆಯಿಂದ ಬರುತ್ತೆ ರಕ್ತ ಹೆಪ್ಪುಗಟ್ಟೋ ಕಾಯಿಲೆ! ವಿವರ ನಿಮಗೆ ತಿಳಿದಿರಲಿ

Covishield Vaccine: ಕೋವಿಶೀಲ್ಡ್, ಅಸ್ಟ್ರಾಜೆನೆಕಾ ಮತ್ತು ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯ ಅಭಿವೃದ್ಧಿಪಡಿಸಿದ ಮತ್ತು ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದಿಂದ ತಯಾರಿಸಲ್ಪಟ್ಟ ಲಸಿಕೆ. ನ್ಯಾಯಾಲಯದ ದಾಖಲೆಗಳ ಪ್ರಕಾರ ಅಪರೂಪದ ಸಂದರ್ಭಗಳಲ್ಲಿ ಅದು ಟಿಟಿಎಸ್‌ ಸ್ಥಿತಿಗೆ ಕಾರಣವಾಗಬಹುದು. ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ಈ ಲಸಿಕೆಯನ್ನು ಭಾರತದಾದ್ಯಂತ ವ್ಯಾಪಕವಾಗಿ ನೀಡಲಾಗಿದೆ.

VISTARANEWS.COM


on

covishield vaccine
Koo

ಹೊಸದಿಲ್ಲಿ: ಬ್ರಿಟಿಷ್ ಔಷಧೀಯ ದೈತ್ಯ ಕಂಪನಿ ಅಸ್ಟ್ರಾಜೆನೆಕಾ (AstraZeneca), ತನ್ನ ಕೋವಿಡ್-19 (Covid 19) ಲಸಿಕೆ ಕೋವಿಶೀಲ್ಡ್ (Covishield Vaccine)‌ ಇದು ಥ್ರಂಬೋಸಿಸ್ ವಿಥ್ ಥ್ರಂಬೋಸೈಟೋಪೆನಿಯಾ ಸಿಂಡ್ರೋಮ್ (Thrombosis with Thrombocytopenia Syndrome – TTS) ಎಂಬ ಅಪರೂಪದ ಅಡ್ಡ ಪರಿಣಾಮವನ್ನು ಉಂಟುಮಾಡಬಹುದು ಎಂದು ಒಪ್ಪಿಕೊಂಡಿದೆ. ಕಂಪನಿಯ ವಿರುದ್ಧ ದಾಖಲಾಗಿರುವ ಒಂದು ಮೊಕದ್ದಮೆಯ ಸಂದರ್ಭದಲ್ಲಿ ಇದನ್ನು ಒಪ್ಪಿಕೊಳ್ಳಲಾಗಿದೆ.

ಈ ಮೊಕದ್ದಮೆಯಲ್ಲಿ ಲಸಿಕೆಗೆ ಸಂಬಂಧಿಸಿ ಗಂಭೀರ ದೈಹಿಕ ಹಾನಿ ಮತ್ತು ಸಾವುಗಳನ್ನು ಆರೋಪಿಸಲಾಗಿದೆ. ಕೋವಿಶೀಲ್ಡ್, ಅಸ್ಟ್ರಾಜೆನೆಕಾ ಮತ್ತು ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯ ಅಭಿವೃದ್ಧಿಪಡಿಸಿದ ಮತ್ತು ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದಿಂದ ತಯಾರಿಸಲ್ಪಟ್ಟ ಲಸಿಕೆ. ನ್ಯಾಯಾಲಯದ ದಾಖಲೆಗಳ ಪ್ರಕಾರ ಅಪರೂಪದ ಸಂದರ್ಭಗಳಲ್ಲಿ ಅದು ಟಿಟಿಎಸ್‌ ಸ್ಥಿತಿಗೆ ಕಾರಣವಾಗಬಹುದು. ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ಈ ಲಸಿಕೆಯನ್ನು ಭಾರತದಾದ್ಯಂತ ವ್ಯಾಪಕವಾಗಿ ನೀಡಲಾಗಿದೆ.

ಟಿಟಿಎಸ್ ಎಂದರೇನು?

ಥ್ರಂಬೋಸೈಟೋಪೆನಿಯಾ ಸಿಂಡ್ರೋಮ್ (ಟಿಟಿಎಸ್) ಜೊತೆಗಿನ ಥ್ರಂಬೋಸಿಸ್ ಅಪರೂಪದ ಸ್ಥಿತಿಯಾಗಿದ್ದು, ದೇಹದಲ್ಲಿನ ಅಸಾಮಾನ್ಯ ಸ್ಥಳಗಳಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಉಂಟಾಗುತ್ತದೆ. ರಕ್ತದಲ್ಲಿನ ಪ್ಲೇಟ್‌ಲೆಟ್‌ಗಳ ಸಂಖ್ಯೆಯು ಕಡಿಮೆಯಾಗುತ್ತದೆ. ಪ್ಲೇಟ್‌ಲೆಟ್‌ಗಳು ರಕ್ತ ಹೆಪ್ಪುಗಟ್ಟಲು ಸಹಾಯ ಮಾಡುವ ಸಣ್ಣ ಕೋಶಗಳು. ಆದ್ದರಿಂದ ಅವು ತುಂಬಾ ಕಡಿಮೆ ಇರುವುದು ಅಪಾಯಕಾರಿ.

ಅಡೆನೊವೈರಲ್ ವೆಕ್ಟರ್ COVID-19 ಲಸಿಕೆಗಳನ್ನು ಪಡೆದ ಜನರಲ್ಲಿ ಈ ಸ್ಥಿತಿಯನ್ನು ಗಮನಿಸಲಾಗಿದೆ. ಉದಾಹರಣೆಗೆ Vaxzevria, Covishield (AstraZeneca) ಮತ್ತು Johnson & Johnson/Janssen COVID-19 ಲಸಿಕೆ ಪಡೆದವರಲ್ಲಿ. ದೇಹದ ರೋಗನಿರೋಧಕ ವ್ಯವಸ್ಥೆಯು ಲಸಿಕೆಗೆ ಪ್ರತಿಕ್ರಿಯಿಸಿ, ರಕ್ತದ ಹೆಪ್ಪುಗಟ್ಟುವಿಕೆಯಲ್ಲಿ ಒಳಗೊಂಡಿರುವ ಪ್ರೋಟೀನ್ ಮೇಲೆ ದಾಳಿ ಮಾಡುವ ಪ್ರತಿಕಾಯಗಳನ್ನು ತಯಾರಿಸುವುದರಿಂದ TTS ಸಂಭವಿಸುತ್ತದೆ.

TTS ಅನ್ನು 2 ಹಂತಗಳಾಗಿ ವರ್ಗೀಕರಿಸಲಾಗಿದೆ.

ಹಂತ 1

  • ಅಪರೂಪದ ರಕ್ತ ಹೆಪ್ಪುಗಟ್ಟುವಿಕೆ, ಮೆದುಳು ಅಥವಾ ಕರುಳಿನಲ್ಲಿ, ಕೆಲವೊಮ್ಮೆ ಕಾಲುಗಳು ಅಥವಾ ಶ್ವಾಸಕೋಶಗಳಲ್ಲಿ.
  • ಕಡಿಮೆ ಪ್ಲೇಟ್ಲೆಟ್ ಎಣಿಕೆ (ಪ್ರತಿ ಮೈಕ್ರೋಲೀಟರ್‌ಗೆ 150,000ಕ್ಕಿಂತ ಕಡಿಮೆ).
  • ಧನಾತ್ಮಕ PF4 ವಿರೋಧಿ ELISA ಪರೀಕ್ಷೆಗಳು ರೋಗನಿರ್ಣಯವನ್ನು ಖಚಿತಪಡಿಸಲು ಸಹಾಯ ಮಾಡುತ್ತದೆ.
  • ಹಂತ 1 ಪ್ರಕರಣಗಳು ಸಾಮಾನ್ಯವಾಗಿ ಹೆಚ್ಚು ತೀವ್ರವಾಗಿರುತ್ತವೆ ಮತ್ತು ಅಪಾಯಕಾರಿಯಾಗಿರುತ್ತವೆ.
  • ಇದು ಯುವ ಜನರಲ್ಲಿ ಹೆಚ್ಚು ಸಾಮಾನ್ಯವಾಗಿದೆ.

ಹಂತ 2

  • ಕಾಲುಗಳು ಅಥವಾ ಶ್ವಾಸಕೋಶಗಳಲ್ಲಿರುವಂತೆ ಸಾಮಾನ್ಯ ರಕ್ತ ಹೆಪ್ಪುಗಟ್ಟುವಿಕೆ.
  • ಕಡಿಮೆ ಪ್ಲೇಟ್ಲೆಟ್ ಎಣಿಕೆ (ಪ್ರತಿ ಮೈಕ್ರೋಲೀಟರ್‌ಗೆ 150,000ಕ್ಕಿಂತ ಕಡಿಮೆ).
  • ರೋಗನಿರ್ಣಯಕ್ಕೆ ಧನಾತ್ಮಕ PF4 ELISA ಪರೀಕ್ಷೆ ಅಗತ್ಯ.

ರೋಗಲಕ್ಷಣಗಳು

TTSನ ಲಕ್ಷಣಗಳು ತೀವ್ರವಾದ ತಲೆನೋವು, ಹೊಟ್ಟೆ ನೋವು, ಕಾಲುಗಳಲ್ಲಿ ಊತ, ಉಸಿರಾಟದ ತೊಂದರೆ, ಚಿಂತನೆಯಲ್ಲಿ ಸಮಸ್ಯೆ, ದೇಹದ ಕಂಪನಗಳು. ಲಸಿಕೆ ಪಡೆದ ನಂತರ ಯಾರಲ್ಲಾದರೂ ಈ ಚಿಹ್ನೆಗಳು ಕಂಡುಬಂದರೆ ಅವರು ತಕ್ಷಣ ವೈದ್ಯರನ್ನು ಭೇಟಿ ಮಾಡಬೇಕು.

ಇದನ್ನೂ ಓದಿ: Covishield Vaccine: ಕೋವಿಶೀಲ್ಡ್‌ನಿಂದ ಅಡ್ಡ ಪರಿಣಾಮವಿದೆ ಎಂದು ಕೊನೆಗೂ ಒಪ್ಪಿಕೊಂಡ ತಯಾರಿಕೆ ಕಂಪನಿ ಅಸ್ಟ್ರಾಜೆನೆಕಾ

Continue Reading

ಆರೋಗ್ಯ

Ayushman Bharat Diwas 2024: 50 ಕೋಟಿಗೂ ಹೆಚ್ಚು ಜನರಿಗೆ ಉಚಿತ ಆರೋಗ್ಯ ಸೇವೆ ನೀಡುತ್ತಿರುವ ಅಯುಷ್ಮಾನ್ ಭಾರತ್

Ayushman Bharat Diwas 2024: ದೇಶಾದ್ಯಂತ ಇಂದು ಆಯುಷ್ಮಾನ್ ಭಾರತ್ ದಿನವನ್ನು ಆಚರಿಸಲಾಗುತ್ತಿದೆ. ಆಯುಷ್ಮಾನ್ ಭಾರತ್ ದಿವಸ್ ಅನ್ನು ಏಪ್ರಿಲ್ 30ರಂದು ಗುರುತಿಸಲಾಗಿದೆ. 2018ರ ಸೆಪ್ಟೆಂಬರ್ 23ರಂದು ಆಯುಷ್ಮಾನ್ ಭಾರತ್ ಪ್ರಧಾನ್ ಮಂತ್ರಿ ಜನ ಆರೋಗ್ಯ ಯೋಜನೆಯ (AB-PMJAY) ಪ್ರಾರಂಭದ ಸ್ಮರಣಾರ್ಥವಾಗಿ ಈ ದಿನವನ್ನು ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಆಡಿರುವ ಸ್ಫೂರ್ತಿದಾಯಕ ಮಾತುಗಳು ಇಲ್ಲಿವೆ.

VISTARANEWS.COM


on

By

Ayushman Bharat Diwas 2024
Koo

ಬಡ ವರ್ಗದ ಜನರಿಗೆ ಉಚಿತ ಆರೋಗ್ಯ ಸೇವೆ ಒದಗಿಸುವ ಉದ್ದೇಶದಿಂದ 2018ರ ಸೆಪ್ಟೆಂಬರ್ 23ರಂದು ಜಾರಿಗೊಳಿಸಲಾಗಿರುವ ಆಯುಷ್ಮಾನ್ ಭಾರತ್ ಯೋಜನೆಯ (Ayushman Bharat Yojana) ಕುರಿತು ಜನರಲ್ಲಿ ಅರಿವು ಮೂಡಿಸಲು ಇಂದು ದೇಶಾದ್ಯಂತ ಆಯುಷ್ಮಾನ್ ಭಾರತ್ ದಿನವನ್ನು (Ayushman Bharat Diwas 2024) ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಜನರ ಅರೋಗ್ಯ ರಕ್ಷಣೆಯ ಕುರಿತು ಪ್ರಧಾನಿ (PM) ನರೇಂದ್ರ ಮೋದಿ (narendra modi) ಹೇಳಿರುವ ಸ್ಫೂರ್ತಿದಾಯಕ ಮಾತುಗಳು ಹೀಗಿವೆ.

ಆಯುಷ್ಮಾನ್ ಭಾರತ್ ದಿವಸ್ ಅನ್ನು ಏಪ್ರಿಲ್ 30ರಂದು ಗುರುತಿಸಲಾಗಿದೆ. 2018ರ ಸೆಪ್ಟೆಂಬರ್ 23ರಂದು ಆಯುಷ್ಮಾನ್ ಭಾರತ್ ಪ್ರಧಾನ್ ಮಂತ್ರಿ ಜನ ಆರೋಗ್ಯ ಯೋಜನೆಯ (AB-PMJAY) ಪ್ರಾರಂಭದ ಸ್ಮರಣಾರ್ಥವಾಗಿ ಈ ದಿನವನ್ನು ಆಚರಿಸಲಾಗುತ್ತದೆ. AB-PMJAY ಎಂಬುದು ಫಲಾನುಭವಿಗಳಿಗೆ ಆರೋಗ್ಯ ರಕ್ಷಣೆ ಒದಗಿಸುವ ಗುರಿಯನ್ನು ಹೊಂದಿದೆ. ದ್ವಿತೀಯ ಮತ್ತು ತೃತೀಯ ಆಸ್ಪತ್ರೆಯ ಆರೈಕೆಗಾಗಿ 5 ಲಕ್ಷ ರೂ.ವರೆಗೆ ಉಚಿತ ವೆಚ್ಚವನ್ನು ಒದಗಿಸಲಾಗುತ್ತದೆ.

ಈ ಯೋಜನೆಯಲ್ಲಿ ಫಲಾನುಭವಿಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಜಂಟಿಯಾಗಿ ಹಣವನ್ನು ನೀಡಲಾಗುತ್ತದೆ. 2021ರ ಜುಲೈ ವೇಳೆಗೆ AB-PMJAY ಅನ್ನು ಪಶ್ಚಿಮ ಬಂಗಾಳ, ದೆಹಲಿಯ NCT ಮತ್ತು ಒಡಿಶಾ ಹೊರತುಪಡಿಸಿ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಅಳವಡಿಸಲಾಗಿದೆ.

ಇದನ್ನೂ ಓದಿ: Ayushman Bharat Diwas: ಇಂದು ಆಯುಷ್ಮಾನ್ ಭಾರತ್ ದಿನ; ಏನಿದರ ಮಹತ್ವ?

ಮಾನದಂಡವೇನು?

ಅಯುಷ್ಮಾನ್ ಭಾರತ್ ಯೋಜನೆಯ ಫಲಾನುಭವಿಗಳು 2011ರ ಸಾಮಾಜಿಕ- ಆರ್ಥಿಕ ಮತ್ತು ಜಾತಿ ಜನಗಣತಿಯಲ್ಲಿ (SECC) ಉಲ್ಲೇಖಿಸಲಾದ ಮಾನದಂಡಗಳ ಮೇಲೆ ಅರ್ಹರಾಗಿರುತ್ತಾರೆ.

ಮನೆಯಿಲ್ಲದ, ಭೂರಹಿತ ಕುಟುಂಬಗಳು, ಕೂಲಿ ಪಡೆಯುವ ಕಾರ್ಮಿಕರು, ಬುಡಕಟ್ಟು ಜನರು.. ಸೇರಿದಂತೆ ಸರ್ಕಾರ ನಿಗದಿಪಡಿಸುವ ಮಾನದಂಡದ ಅಡಿಯಲ್ಲಿ ಗ್ರಾಮೀಣ ಮತ್ತು ನಗರ ನಿವಾಸಿಗಳಿಗೆ ಅರ್ಹತೆಯು ವಿಭಿನ್ನವಾಗಿದೆ.


50 ಕೋಟಿಗೂ ಹೆಚ್ಚು ಅರ್ಹರು

2011ರ ಸಾಮಾಜಿಕ-ಆರ್ಥಿಕ ಜಾತಿ ಜನಗಣತಿ (ಎಸ್‌ಇಸಿಸಿ) ಪಟ್ಟಿಯನ್ನು ಆಧರಿಸಿ ಆಯುಷ್ಮಾನ್ ಭಾರತ್ ಯೋಜನೆಯಡಿ 50 ಕೋಟಿಗೂ ಹೆಚ್ಚು ಜನರನ್ನು ಅರ್ಹರೆಂದು ಗುರುತಿಸಲಾಗಿದೆ. ಎಲ್ಲಾ ರಾಷ್ಟ್ರೀಯ ಸ್ವಾಸ್ಥ್ಯ ಬಿಮಾ ಯೋಜನೆ ಕಾರ್ಡ್ ಹೊಂದಿರುವವರು ಸಹ ಈ ಯೋಜನೆಗೆ ಅರ್ಹರಾಗಿದ್ದಾರೆ. ಅವರ ಅರ್ಹತೆಯನ್ನು ಪರಿಶೀಲಿಸಲು ಒಬ್ಬರು AB-PMJAY ಸಹಾಯವಾಣಿಗೆ 14555 ಅಥವಾ 1800-111-565ಗೆ ಕರೆ ಮಾಡಬಹುದು.

ಆರೋಗ್ಯ ಕುರಿತು ಪ್ರಧಾನಿ ಮೋದಿ ಮಾತುಗಳು…

  • – ಉತ್ತಮ ಆರೋಗ್ಯವು ಮಾನವನ ಪ್ರಗತಿ ಮತ್ತು ಸಮೃದ್ಧಿಯ ಅಡಿಪಾಯವಾಗಿದೆ. ಸ್ವಚ್ಛ ಭಾರತ ಅಭಿಯಾನವು ಸ್ವಚ್ಛ ಬೀದಿಗಳ ಬಗ್ಗೆ ಮಾತ್ರವಲ್ಲ, ಎಲ್ಲರಿಗೂ ಆರೋಗ್ಯಕರ ವಾತಾವರಣವನ್ನು ನಿರ್ಮಿಸುವುದಾಗಿದೆ.
  • – ನಮ್ಮ ಆರೋಗ್ಯ ವ್ಯವಸ್ಥೆಯಲ್ಲಿ ನಾವು ಸಮಗ್ರ ವಿಧಾನವನ್ನು ಅಳವಡಿಸಿಕೊಂಡಿದ್ದೇವೆ. ಇಂದು ನಮ್ಮ ಗಮನವು ಆರೋಗ್ಯದ ಮೇಲೆ ಮಾತ್ರವಲ್ಲ, ಕ್ಷೇಮದ ಮೇಲೆಯೂ ಇದೆ. ಆರೋಗ್ಯ ರಕ್ಷಣೆಯು ಪ್ರತಿ ಸರ್ಕಾರದ ಆದ್ಯತೆಯಾಗಿರಬೇಕು.

– ರಿಮೋಟ್ ಹೆಲ್ತ್‌ಕೇರ್ ಮತ್ತು ಟೆಲಿಮೆಡಿಸಿನ್ ಭಾರತದ ನಗರ ಮತ್ತು ಗ್ರಾಮೀಣ ಪ್ರದೇಶದ ನಡುವಿನ ಆರೋಗ್ಯ ಪ್ರವೇಶ ವಿಭಜನೆಯನ್ನು ಕಡಿಮೆ ಮಾಡುತ್ತದೆ. ಆಯುಷ್ಮಾನ್ ಭಾರತ್ ನವ ಭಾರತದ ಕ್ರಾಂತಿಕಾರಿ ಹೆಜ್ಜೆಗಳಲ್ಲಿ ಒಂದಾಗಿದೆ. ಇದು ದೇಶದ ಜನಸಾಮಾನ್ಯರ ಮತ್ತು ಬಡವರ ಜೀವ ಉಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ಎಂಬ ಕಾರಣಕ್ಕಾಗಿ ಮಾತ್ರವಲ್ಲದೆ, ಭಾರತವನ್ನು ಪ್ರತಿನಿಧಿಸುವ 130 ಕೋಟಿ ಜನರ ಸಾಮೂಹಿಕ ಸಂಕಲ್ಪ ಮತ್ತು ಶಕ್ತಿಯ ಸಂಕೇತವಾಗಿದೆ.

  • – ಉತ್ತಮ ಆರೋಗ್ಯ ಮೂಲಸೌಕರ್ಯವು ಕೇವಲ ಸೌಲಭ್ಯವಲ್ಲ, ಇದು ಆರೋಗ್ಯ ಸೇವೆಗಳ ಬೇಡಿಕೆಯನ್ನು ಹೆಚ್ಚಿಸುತ್ತದೆ. ಇದು ಹೆಚ್ಚಿನ ಉದ್ಯೋಗವನ್ನು ಸೃಷ್ಟಿಸಲು ಉತ್ತಮ ಮಾರ್ಗವಾಗಿದೆ. ನಾವು ದೇಶದಲ್ಲಿ ಫಿಟ್ನೆಸ್ ಸಂಸ್ಕೃತಿಯನ್ನು ರಚಿಸಬೇಕಾಗಿದೆ. ಜೈವಿಕ ತಂತ್ರಜ್ಞಾನಕ್ಕೆ ಸಂಬಂಧಿಸಿದ ಸಂಶೋಧನೆ, ಔಷಧಗಳು ಮತ್ತು ವೈದ್ಯಕೀಯ ಉಪಕರಣಗಳಲ್ಲಿ ಸ್ವಾವಲಂಬನೆ ಇಲ್ಲದೆ ಆರೋಗ್ಯ ರಕ್ಷಣೆಗೆ ಸಂಬಂಧಿಸಿದ ನಮ್ಮ ಉದ್ದೇಶಗಳನ್ನು ಸಾಧಿಸಲಾಗುವುದಿಲ್ಲ.
  • – ಗುಣಮಟ್ಟದ ಮತ್ತು ಕೈಗೆಟಕುವ ದರದಲ್ಲಿ ಆರೋಗ್ಯ ಸೇವೆಯನ್ನು ಪಡೆಯುವುದು ಪ್ರತಿಯೊಬ್ಬ ನಾಗರಿಕನ ಹಕ್ಕು.
Continue Reading

ಆರೋಗ್ಯ

Ayushman Bharat Diwas: ಇಂದು ಆಯುಷ್ಮಾನ್ ಭಾರತ್ ದಿನ; ಏನಿದರ ಮಹತ್ವ?

Ayushman Bharat Diwas: ಸರ್ಕಾರದ ಆಯುಷ್ಮಾನ್ ಭಾರತ್ ಯೋಜನೆಯ ಗುರಿಗಳ ಬಗ್ಗೆ ಜನರಿಗೆ ಅರಿವು ಮೂಡಿಸಲು ಪ್ರತಿ ವರ್ಷ ಏಪ್ರಿಲ್ 30 ರಂದು ಭಾರತವು ಆಯುಷ್ಮಾನ್ ಭಾರತ್ ದಿನವನ್ನು ಆಚರಿಸುತ್ತದೆ. ಪ್ರಧಾನ ಮಂತ್ರಿ ಜನ್ ಆರೋಗ್ಯ ಯೋಜನೆ (PMJAY) ಎಂದೂ ಕರೆಯಲ್ಪಡುವ ಈ ಯೋಜನೆಯಿಂದ ಭಾರತ ಸರ್ಕಾರವು ಸುಮಾರು 50 ಕೋಟಿ ಆರ್ಥಿಕವಾಗಿ ಹಿಂದುಳಿದ ಜನರಿಗೆ ಅಗ್ಗದ ಮತ್ತು ಸುಲಭವಾದ ಆರೋಗ್ಯ ಸೇವೆಯನ್ನು ನೀಡುತ್ತಿದೆ.

VISTARANEWS.COM


on

By

Ayushman Bharat Diwas
Koo

ಕೋಟ್ಯಂತರ ಭಾರತೀಯರಿಗೆ(indians) ಉಚಿತ ಆರೋಗ್ಯ ಸೇವೆ (free health service) ಒದಗಿಸುವ ಉದ್ದೇಶದಿಂದ ಜಾರಿಗೊಳಿಸಿರುವ ಆಯುಷ್ಮಾನ್ ಭಾರತ್ ಯೋಜನೆಯ (Ayushman Bharat Yojana) ಕುರಿತು ಜನರಲ್ಲಿ ಅರಿವು ಮೂಡಿಸಲು ಪ್ರತಿ ವರ್ಷ ಏಪ್ರಿಲ್ ಕೊನೆಯ ದಿನವಾದ ಏಪ್ರಿಲ್ 30ರಂದು ಆಯುಷ್ಮಾನ್ ಭಾರತ್ ದಿನವನ್ನು (Ayushman Bharat Diwas) ಆಚರಿಸಲಾಗುತ್ತದೆ.

ಸರ್ಕಾರವು ಆಯುಷ್ಮಾನ್ ಭಾರತ್ ಯೋಜನೆ ಮತ್ತು ಅದರ ಗುರಿ ಏನು ಎಂಬುದರ ಕುರಿತು ಜನರಿಗೆ ತಿಳಿಸಲು ಈ ದಿನ ಆಚರಣೆ ನಡೆಸಲು ಕರೆ ನೀಡಿದೆ. ಈ ಯೋಜನೆಯೊಂದಿಗೆ ಭಾರತ ಸರ್ಕಾರವು ಪ್ರತಿಯೊಬ್ಬರೂ ಸರ್ಕಾರದಿಂದ ನಿಭಾಯಿಸಲ್ಪಡುವ ಉತ್ತಮ ಆರೋಗ್ಯವನ್ನು ಪಡೆಯಬಹುದೆಂದು ಖಚಿತಪಡಿಸಿಕೊಳ್ಳಲು ಬಯಸುತ್ತದೆ.

ಬಡವರಿಗೆ ಆರೋಗ್ಯ ರಕ್ಷಣೆ ಒದಗಿಸಲು ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಯನ್ನು ಜಾರಿ ಮಾಡಿದ್ದು ಈ ಮೂಲಕ ಸರ್ಕಾರಿ ಆಸ್ಪತ್ರೆ ಮತ್ತು ಚಿಕಿತ್ಸಾಲಯಗಳಲ್ಲಿ ಉಚಿತ ವೈದ್ಯಕೀಯ ಚಿಕಿತ್ಸೆ ನೀಡಲಾಗುವುದು. ಈ ಯೋಜನೆಯು ಲಕ್ಷಾಂತರ ನಾಗರಿಕರಿಗೆ ಗುಣಮಟ್ಟದ ವೈದ್ಯಕೀಯ ಆರೈಕೆಯನ್ನು ಉಚಿತವಾಗಿ ಹೆಚ್ಚು ಸುಲಭವಾಗಿ ಸಿಗುವಂತೆ ಮಾಡುವ ಗುರಿಯನ್ನು ಹೊಂದಿದೆ.

ಇದನ್ನೂ ಓದಿ:  Ayushman Bharat Yojana: ಆಪತ್ಕಾಲದಲ್ಲಿ ಆಯುಷ್ಮಾನ್‌ ಭಾರತ್‌ ಯೋಜನೆಯ ಪ್ರಯೋಜನ ಪಡೆಯುವುದು ಹೇಗೆ?


ಇದು ಜಾರಿಯಾಗಿದ್ದು ಯಾವಾಗ?

ಆಯುಷ್ಮಾನ್ ಭಾರತ್ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು 2018ರಲ್ಲಿ ಘೋಷಿಸಿದರು. ಇದು ಎರಡು ಮುಖ್ಯ ಸ್ತಂಭಗಳನ್ನು ಹೊಂದಿದೆ.

1. ಆಯುಷ್ಮಾನ್ ಭಾರತ್ ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರಗಳು (AB-HWCs)
ಆಯುಷ್ಮಾನ್ ಭಾರತ್ ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರಗಳು ಪ್ರಾಥಮಿಕ ಆರೋಗ್ಯ ಸೇವೆಗಳನ್ನು ಜನರ ಮನೆಗಳಿಗೆ ಹತ್ತಿರ ತರುವ ಗುರಿಯನ್ನು ಹೊಂದಿವೆ.

2. ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ (PM-JAY)
ಇದು ಆರೋಗ್ಯ ವಿಮಾ ಯೋಜನೆಯಾಗಿದ್ದು, ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ವರ್ಷಕ್ಕೆ 5 ಲಕ್ಷ ರೂ. ವರೆಗೆ ನಗದು ರಹಿತ ಮತ್ತು ಕೈಗೆಟುಕುವ ವೈದ್ಯಕೀಯ ರಕ್ಷಣೆಯನ್ನು ನೀಡುವ ಉದ್ದೇಶ ಹೊಂದಿದೆ.


ಆಯುಷ್ಮಾನ್ ಭಾರತ್ ದಿವಸ್‌ನ ಮಹತ್ವ

ಆಯುಷ್ಮಾನ್ ಭಾರತ್ ದಿವಸ್ ಹಲವಾರು ಉದ್ದೇಶಗಳನ್ನು ಹೊಂದಿದೆ. ಅವುಗಳಲ್ಲಿ ಮುಖ್ಯವಾಗಿ:
1. ಆಯುಷ್ಮಾನ್ ಭಾರತ್ ಯೋಜನೆಯ ಗುರಿ ಮತ್ತು ಅದರ ಪ್ರಯೋಜನಗಳ ಬಗ್ಗೆ ಜನರಿಗೆ ತಿಳಿಸಲು ಆಯುಷ್ಮಾನ್ ಭಾರತ್ ದಿವಸ್ ಅನ್ನು ಆಚರಿಸಲಾಗುತ್ತದೆ.
2. ಆಯುಷ್ಮಾನ್ ಭಾರತ್ ಯೋಜನೆಯು ಭಾರತ ಸರ್ಕಾರವು ಮಾಡಿದ ದೊಡ್ಡ ಆರೋಗ್ಯ ಯೋಜನೆಯಾಗಿದೆ. ಈ ಯೋಜನೆಯು ಭಾರತದಲ್ಲಿ 10 ಕೋಟಿಗೂ ಹೆಚ್ಚು ಬಡ ಮತ್ತು ದುರ್ಬಲ ಕುಟುಂಬಗಳಿಗೆ ಆರ್ಥಿಕ ರಕ್ಷಣೆ ನೀಡುವ ಗುರಿಯನ್ನು ಹೊಂದಿದೆ.
3. ಅರ್ಹ ಕುಟುಂಬಗಳು ದೇಶಾದ್ಯಂತ ಸರ್ಕಾರಿ ಆಸ್ಪತ್ರೆಗಳಲ್ಲಿ ವರ್ಷಕ್ಕೆ 5 ಲಕ್ಷ ರೂ.ವರೆಗೆ ವೈದ್ಯಕೀಯ ಸೇವೆಗಳನ್ನು ಪಡೆಯಬಹುದು.
4. ಸರ್ಕಾರವು ಆಯುಷ್ಮಾನ್ ಮಿತ್ರ ಎಂಬ ಹೊಸ ಉದ್ಯೋಗವನ್ನು ಆರೋಗ್ಯ ಕ್ಷೇತ್ರದಲ್ಲಿ ಸೃಷ್ಟಿಸಿದೆ. ಇದಕ್ಕಾಗಿ ಸಾಕಷ್ಟು ಯುವಕರನ್ನು ನೇಮಿಸಿಕೊಳ್ಳಲಾಗಿದೆ.
5. ಆಯುಷ್ಮಾನ್ ಭಾರತ್ ಯೋಜನೆಯಡಿ ಯುವಜನರಿಗೆ ಉದ್ಯೋಗ ನೀಡಲು ಆಯುಷ್ಮಾನ್ ಮಿತ್ರರನ್ನು ಆಸ್ಪತ್ರೆಗಳು ನೇಮಿಸಿಕೊಂಡಿವೆ.
6. ಆಯುಷ್ಮಾನ್ ಭಾರತ್ ಯೋಜನೆಯ ಪ್ರಯೋಜನಗಳನ್ನು ಪಡೆಯಲು ಉತ್ತಮ ಆರೋಗ್ಯ ವಿಮಾ ಯೋಜನೆಯ ಅಗತ್ಯವಿದೆ.

Continue Reading

ಆರೋಗ್ಯ

Onion Benefits: ಬೇಸಿಗೆಯಲ್ಲಿ ಆಗಾಗ ಹಸಿ ಈರುಳ್ಳಿ ತಿನ್ನಲೇಬೇಕು ಯಾಕೆ ಗೊತ್ತೆ?

ಹಸಿಯಾದ ಈರುಳ್ಳಿ ತಿಂದರೆ ಬಾಯಿ ಕೆಟ್ಟ ವಾಸನೆ ಬರುತ್ತದೆ ಎಂಬ ಕಾರಣಕ್ಕೋ ಅಥವಾ ಅದರ ಕಟು ರುಚಿಗಾಗಿಯೋ, ಹಸಿ ಈರುಳ್ಳಿಯ ಬಳಕೆಯನ್ನು ಎಲ್ಲರೂ ಇಷ್ಟ ಪಡುವುದಿಲ್ಲ. ಆದರೆ, ಸಲಾಡ್‌ಗಳಲ್ಲಿ, ಊಟದ ಸಂದರ್ಭ ಹಸಿ ಈರುಳ್ಳಿ ತಿನ್ನುವ ಅಭ್ಯಾಸವೂ ಹಲವರಲ್ಲಿದೆ. ಹಸಿ ಈರುಳ್ಳಿಯನ್ನು ತಿನ್ನುವುದರಿಂದ ಸಾಕಷ್ಟು ಲಾಭಗಳೂ ಇವೆ. ಈ ಕುರಿತು (Onion Benefits) ಇಲ್ಲಿದೆ ಮಾಹಿತಿ.

VISTARANEWS.COM


on

Onion Benefits
Koo

ಈರುಳ್ಳಿಯನ್ನು ನಿತ್ಯವೂ ನಮ್ಮ ಮನೆಗಳಲ್ಲಿ ಬಳಸುತ್ತೇವೆ. ಈರುಳ್ಳಿಯಿಲ್ಲದೆ ಅಡುಗೆ ಮಾಡುವುದೇ ಸವಾಲು ಕೂಡಾ. ಪ್ರತಿಯೊಂದು ಅಡುಗೆಗೂ ಈರುಳ್ಳಿಯನ್ನು ಹಾಕುತ್ತೇವಾದರೂ, ಈರುಳ್ಳಿಯನ್ನು ಹಸಿಯಾಗಿ ನಾವು ತಿನ್ನುವುದು ಕಡಿಮೆಯೇ. ಹಸಿಯಾದ ಈರುಳ್ಳಿ ತಿಂದರೆ ಬಾಯಿ ಕೆಟ್ಟ ವಾಸನೆ ಬರುತ್ತದೆ ಎಂಬ ಕಾರಣಕ್ಕೋ, ಅಥವಾ ಅದರ ಕಟು ರುಚಿಗಾಗಿಯೋ, ಹಸಿ ಈರುಳ್ಳಿಯ ಬಳಕೆಯನ್ನು ಎಲ್ಲರೂ ಇಷ್ಟ ಪಡುವುದಿಲ್ಲ. ಆದರೆ, ಸಲಾಡ್‌ಗಳಲ್ಲಿ, ಊಟದ ಸಂದರ್ಭ ಹಸಿ ಈರುಳ್ಳಿ ತಿನ್ನುವ ಅಭ್ಯಾಸವೂ ಹಲವರಲ್ಲಿದೆ. ಹಸಿ ಈರುಳ್ಳಿಯನ್ನು ತಿನ್ನುವುದರಿಂದ ಸಾಕಷ್ಟು ಲಾಭಗಳೂ ಇವೆ. ಈ ಬೇಸಗೆಯಲ್ಲಂತೂ ಆಗಾಗ ಸಲಾಡ್‌ಗಳ ರೂಪದಲ್ಲಾದರೂ ಹಸಿ ಈರುಳ್ಳಿ ಬಳಸಬೇಕು. ಯಾಕೆ ಹಸಿ ಈರುಳ್ಳಿಯನ್ನು ತಿನ್ನಬೇಕು ಎಂಬುದಕ್ಕೆ (Onion Benefits) ಕಾರಣಗಳು ಇಲ್ಲಿವೆ.

Red onion

ಈರುಳ್ಳಿಯಲ್ಲಿ ಫ್ಲೇವನಾಯ್ಡ್‌ಗಳಿದ್ದು, ಅವುಗಳು ಆಂಟಿ ಆಕ್ಸಿಡೆಂಟ್‌ಗಳ ರೀತಿಯಲ್ಲಿ ವರ್ತಿಸುತ್ತವೆ. ಇವು ದೇಹದಲ್ಲಿ ಹಾನಿಕಾರಕ ಫ್ರೀ ರ್ಯಾಡಿಕಲ್ಸ್‌ಗಳನ್ನು ಸಮತೋಲನಗೊಳಿಸುವಲ್ಲಿ ಹಾಗೂ ಆಕ್ಸಿಡೇಟಿವ್‌ ಸ್ಟ್ರೆಸ್‌ ಅನ್ನು ಕಡಿಮೆಗಳಿಸುವಲ್ಲಿ ಸಹಾಯ ಮಾಡುತ್ತವೆ. ಇದರಿಂದ ಹೃದಯದ ಕಾಯಿಲೆ ಅಥವಾ ಕ್ಯಾನ್ಸರ್‌ನಂತಹ ಮಾರಣಾಂತಿಕ ಕಾಯಿಲೆಗಳಿಂದ ದೂರವಿರಬಹುದು.

ಈರುಳ್ಳಿಯಲ್ಲಿ ಕ್ವೆರ್‌ಸೆಟಿನ್‌ ಹಾಗೂ ಸಲ್ಫರ್‌ ಇರುವುದರಿಂದ ಇವುಗಳ ಮೂಲಕ ದೇಹಕ್ಕೆ ಆಂಟಿ ಇನ್‌ಫ್ಲಮೇಟರಿ ಗುಣಗಳು ದೊರೆಯುತ್ತವೆ. ಇದರಿಂದ ಆರ್ತ್ರೈಟಿಸ್‌, ಅಸ್ತಮಾ ಮತ್ತಿತರ ಸಮಸ್ಯೆಗಳಿಗೆ ಕೊಂಚ ಪರಿಹಾರ ಸಿಗಬಹುದು ಹಾಗೂ ಅವುಗಳಿಂದ ದೂರವಿರಬಹುದು.

ಈರುಳ್ಳಿಯಲ್ಲಿ ಆರ್ಗನೋಸಲ್ಫರ್‌ನ ಅಂಶಗಳು ಅಲ್ಲಿಸಿನ್‌ ರೂಪದಲ್ಲಿ ಇರುವುದರಿಂದ ಇದು ಕೊಲೆಸ್ಟೆರಾಲ್‌ ಹಾಗೂ ಅಧಿಕ ರಕ್ತದೊತ್ತಡವನ್ನೂ ಇಳಿಸುವಲ್ಲಿ ಸಹಾಯ ಮಾಡುತ್ತದೆ. ದೇಹದಲ್ಲಿ ರಕ್ತಸಂಚಾರವನ್ನು ಚುರುಕುಗೊಳಿಸುವಲ್ಲಿ ಇದು ಸಹಾಯ ಮಾಡುತ್ತದೆ. ಹೃದಯದ ಆರೋಗ್ಯಕ್ಕೆ ಈರುಳ್ಳಿ ಬಹಳ ಒಳ್ಳೆಯದು.

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಈರುಳ್ಳಿಯಲ್ಲಿರುವ ಆಂಟಿ ಆಕ್ಸಿಡೆಂಟ್‌ಗಳು ಸಹಾಯ ಮಾಡುತ್ತವೆ. ಈರುಳ್ಳಿಯಲ್ಲಿ ಆಂಟಿ ಮೈಕ್ರೋಬಿಯಲ್‌ ಗುಣಗಳೂ ಹೇರಳವಾಗಿದ್ದು ಇದು ದೇಹದ ಒಟ್ಟು ರೋಗನಿರೋಧಕತೆಯನ್ನು ಹೆಚ್ಚಿಸುತ್ತವೆ.

onion cut

ಈರುಳ್ಳಿಯಲ್ಲಿ ಕ್ರೋಮಿಯಂ ಹಾಗೂ ಸಲ್ಫರ್‌ ಇವೆರಡೂ ಇರುವುದರಿಂದ ಇವು ರಕ್ತದಲ್ಲಿ ಸಕ್ಕರೆಯ ಮಟ್ಟವನ್ನೂ ನಿಯಂತ್ರಣದಲ್ಲಿರಿಸಲು ಸಹಾಯ ಮಾಡುತ್ತದೆ. ಹಾಗಾಗಿ ಮಧುಮೇಹ ಇರುವ ಮಂದಿ ಹಸಿ ಈರುಳ್ಳಿ ತಿನ್ನುವುದರಿಂದ ಸಹಾಯವಾಗುತ್ತದೆ.

ಈರುಳ್ಳಿಯಲ್ಲಿ ನಾರಿನಂಶ ಹೆಚ್ಚಿರುವುದರಿಂದ ಮಲಬದ್ಧತೆಯ ಸಮಸ್ಯೆ ಇರುವ ಮಂದಿಗೆ ಒಳ್ಳೆಯದು. ಇದು ಪಚನಕಾರಿ ಬ್ಯಾಕ್ಟೀರಿಯಾಗಳನ್ನು ಪೋಷಣೆ ಮಾಡುವುದರಿಂದ ಜೀರ್ಣಕ್ರಿಯೆ ಚುರುಕಾಗುತ್ತದೆ. ಹಾಗಾಗಿ ಜೀರ್ಣಕ್ರಿಯೆ ಸಂಬಂಧೀ ಸಮಸ್ಯೆಗಳು ಹತ್ತಿರ ಸುಳಿಯದು.

ಈರುಳ್ಳಿಯಲ್ಲಿರುವ ಸಲ್ಫರ್‌ನ ಅಂಶಗಳಲ್ಲಿ ಕ್ಯಾನ್ಸರ್‌ ವಿರೋಧಿ ಗುಣಗಳನ್ನು ಹೊಂದಿರುವುದರಿಂದ ಬಹುಮುಖ್ಯವಾಗಿ ಕರುಳು ಹಾಗೂ ಹೊಟ್ಟೆಯ ಸಂಬಂಧಿ ಕ್ಯಾನ್ಸರ್‌ಗಳಿಂದ ಇದು ದೂರವಿರಿಸುತ್ತದೆ.

ಕ್ವೆರ್ಸೆಟಿನ್‌ ಹಾಗೂ ಸಲ್ಫರ್‌ನ ಅಂಶಗಳು ಎಲುಬಿನ ಆರೋಗ್ಯಕ್ಕೂ ಬಹಳ ಒಳ್ಳೆಯದು. ಮೂಳೆಗಳು ಗಟ್ಟಿಯಾಗಿರಲು, ಮೂಳೆಯಲ್ಲಿನ ಸಾಂದ್ರತೆ ಉಳಿಯಲು ಈರುಳ್ಳಿ ಸೇವನೆ ಒಳ್ಳೆಯದು. ಮುಖ್ಯವಾಗಿ ಮೂಳೆ ಸವೆತ, ಸಂಧಿವಾತದಂತಹ ಸಮಸ್ಯೆ ಇರುವ ಮಂದಿಗೆ ಇದು ಬಹಳ ಒಳ್ಳೆಯದು.

Onion Price

ಶವಾಸಕೋಶದ ಆರೋಗ್ಯಕ್ಕೂ ಈರುಳ್ಳಿ ಬಹಳ ಒಳ್ಳೆಯದು. ಅಸ್ತಮಾ ಹಾಗೂ ಅಲರ್ಜಿಗಳಂತಹ ಸಮಸ್ಯೆ ಇರುವ ಮಂದಿಗೆ ಈರುಳ್ಳಿ ಒಳ್ಳೆಯದು. ಕಫ ಕಟ್ಟಿದಂತಹ ಸಂದರ್ಭ, ನೆಗಡಿ, ಶೀತವಿದ್ದಾಗಲೂ ಈರುಳ್ಳಿಯಲ್ಲಿ ನೈಸರ್ಗಿಕವಾದ ಗುಣಗಳಿರುವುದರಿಂದ ಇದು ಕಫವನ್ನು ಕರಗಿಸುವಲ್ಲಿಯೂ ನೆರವಾಗುತ್ತದೆ. ಉಸಿರಾಟ ಸುಲಭವಾಗುತ್ತದೆ.

ಬಹುಮುಖ್ಯವಾಗಿ ಈರುಳ್ಳಿಯಲ್ಲಿರುವ ಆಂಟಿಆಕ್ಸಿಡೆಂಟ್‌ ಗುಣಗಳು ಹಾಗೂ ಸಲ್ಫರ್‌ ಆರೋಗ್ಯಕರ ಕೂದಲು ಹಾಗೂ ಚರ್ಮಕ್ಕೆ ಬಹಳ ಒಳ್ಳೆಯದು. ಕೊಲಾಜೆನ್‌ ಹೆಚ್ಚಿಸುವಲ್ಲಿ ಇದು ನೆರವಾಗುವ ಮೂಲಕ ಚರ್ಮವನ್ನು ತಾಜಾ ಹಾಗೂ ಹೊಳಪಾಗಿರಿಸುತ್ತದೆ. ದೃಢವಾದ, ನಯವಾದ ಕೂದಲ ಅಂದವನ್ನೂ ಹೆಚ್ಚಿಸುತ್ತದೆ.

ಇದನ್ನೂ ಓದಿ: Eating Bread: ನಿತ್ಯವೂ ಬ್ರೆಡ್‌ ತಿನ್ನುತ್ತೀರಾ? ಹಾಗಿದ್ದರೆ ಖರೀದಿಸುವ ಮುನ್ನ ಇವಿಷ್ಟು ತಿಳಿದಿರಲಿ

Continue Reading
Advertisement
Lok Sabha Election 2024
Lok Sabha Election 20248 mins ago

Lok Sabha Election 2024: ಬಿಜೆಪಿ ಅಭ್ಯರ್ಥಿಗಳಿಗೆ ಪತ್ರ ಬರೆದ ಮೋದಿ; ಕಾಂಗ್ರೆಸ್‌ನ ತುಷ್ಟೀಕರಣ ನೀತಿಯ ಬಗ್ಗೆಅರಿವು ಮೂಡಿಸಲು ಕರೆ

Mahanati Show
ಪ್ರಮುಖ ಸುದ್ದಿ17 mins ago

Mahanati Show: ʼಮಹಾನಟಿ ಶೋʼ ವಿರುದ್ಧ ಮೆಕ್ಯಾನಿಕ್‌ಗಳ ಆಕ್ರೋಶ; ಸ್ಪರ್ಧಿ ಗಗನಾ, ರಮೇಶ್‌ ಅರವಿಂದ್‌ ಸೇರಿ ಐವರ ವಿರುದ್ಧ ಮತ್ತೊಂದು ದೂರು

jammu kashmir flash flood
ದೇಶ43 mins ago

Jammu Kashmir Flash Flood: ಜಮ್ಮ- ಕಾಶ್ಮೀರದಲ್ಲಿ ಭೂಕುಸಿತ, ಹಠಾತ್ ಪ್ರವಾಹ: 5 ಸಾವು

Love Jihad
ದೇಶ53 mins ago

‌Love Jihad: ಲವ್‌ ಜಿಹಾದ್‌ಗೆ ಮತ್ತೊಂದು ಬಲಿ? ಹೋಟೆಲ್ ರೂಮ್ ನಲ್ಲಿ ಹಿಂದೂ ಯುವತಿ ಶವ ಪತ್ತೆ; ಮುಸ್ಲಿಂ ಯುವಕ ಎಸ್ಕೇಪ್‌

T20 World Cup 2024
ಕ್ರಿಕೆಟ್54 mins ago

T20 World Cup 2024: ಟಿ20 ವಿಶ್ವಕಪ್​ಗೆ ಭಾರತ ತಂಡ ಪ್ರಕಟ; ಕನ್ನಡಿಗ ರಾಹುಲ್​ಗೆ ಕೊಕ್​

Hassan Pen Drive Case I gave video only to Devaraje Gowda says Karthik
ಹಾಸನ57 mins ago

Hassan Pen Drive Case: ನಾನು ವಿಡಿಯೊ ಕೊಟ್ಟಿದ್ದು ದೇವರಾಜೇಗೌಡರಿಗೆ ಮಾತ್ರ; ಅವರೇ ಲೀಕ್‌ ಮಾಡಿರಬೇಕು ಎಂದ ಕಾರ್ತಿಕ್!

Jai Shri Ram Slogan
ವಿದೇಶ1 hour ago

Jai Shri Ram Slogan: ಪ್ಯಾಲೆಸ್ತೇನ್ ವಿರುದ್ಧ ಜೈಶ್ರೀರಾಮ್ ಘೋಷಣೆ ಕೂಗಿದ ಇಸ್ರೇಲ್ ಬೆಂಬಲಿಗರು!

Amit Shah doctored video case
ದೇಶ1 hour ago

Amit Shah: ಅಮಿತ್‌ ಶಾ ತಿರುಚಿದ ವಿಡಿಯೋ ಪ್ರಕರಣ: ಆಪ್‌, ಕಾಂಗ್ರೆಸ್‌ ಪಕ್ಷದ ಮೂವರ ಬಂಧನ

National Commission for Women enters Prajwal Hassan Pen Drive Case Letter to DG to submit report within 3 days
ಕ್ರೈಂ1 hour ago

Hassan Pen Drive Case: ಪ್ರಜ್ವಲ್‌ ಕೇಸ್‌ಗೆ ರಾಷ್ಟ್ರೀಯ ಮಹಿಳಾ ಆಯೋಗ ಎಂಟ್ರಿ; 3 ದಿನದಲ್ಲಿ ವರದಿ ಕೊಡಲು ಡಿಜಿಗೆ ಪತ್ರ

T20 World Cup 2024
ಕ್ರೀಡೆ2 hours ago

T20 World Cup 2024: ಟಿ20 ವಿಶ್ವಕಪ್​ಗೆ ತಂಡ ಪ್ರಕಟಿಸಿದ ಇಂಗ್ಲೆಂಡ್​, ದಕ್ಷಿಣ ಆಫ್ರಿಕಾ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

dina bhavishya read your daily horoscope predictions for April 30 2024
ಭವಿಷ್ಯ12 hours ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

PM Narendra modi in Bagalakote and Attack on Congress
Lok Sabha Election 20241 day ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 20241 day ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ1 day ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Narendra Modi
Lok Sabha Election 20242 days ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

PM Narendra Modi in Sirsi
Lok Sabha Election 20242 days ago

PM Narendra Modi: ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

If Congress comes to power all your assets will belong to Government says PM Narendra Modi
Lok Sabha Election 20242 days ago

Narendra Modi: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀವು ಕಷ್ಟಪಟ್ಟು ಸಂಪಾದಿಸಿದ ಆಸ್ತಿಯೆಲ್ಲ ಅನ್ಯರ ಪಾಲು: ಮೋದಿ ಎಚ್ಚರಿಕೆ

Congress ties with Aurangzeb supporters and Girls killed under his rule says Narendra Modi
Lok Sabha Election 20242 days ago

Narendra Modi: ಔರಂಗಜೇಬ್ ಬೆಂಬಲಿಗರ ಜತೆ ಕಾಂಗ್ರೆಸ್ ದೋಸ್ತಿ; ಇವರ ಆಡಳಿತದಲ್ಲಿ ಹೆಣ್ಣು ಮಕ್ಕಳ ಹತ್ಯೆ: ಮೋದಿ ವಾಗ್ದಾಳಿ

Modi in Karnataka stay in Belagavi tomorrow and Huge gatherings at five places
Latest2 days ago

Narendra Modi Live : ಪ್ರಧಾನಿ ಮೋದಿಯ ಬೆಳಗಾವಿ ಪ್ರಚಾರ ಸಭೆಯ ನೇರ ಪ್ರಸಾರವನ್ನು ಇಲ್ಲಿ ವೀಕ್ಷಿಸಿ…

Dina Bhavishya
ಭವಿಷ್ಯ2 days ago

Dina Bhavishya : ಈ ರಾಶಿಯವರಿಗೆ ದಿನದ ಮಟ್ಟಿಗೆ ಖರ್ಚು ಹೆಚ್ಚು

ಟ್ರೆಂಡಿಂಗ್‌