Exercises To Lose Weight : ದೇಹದ ತೂಕ ಇಳಿಕೆಗೆ ದಾರಿ ಯಾವುದಯ್ಯಾ! - Vistara News

ಆರೋಗ್ಯ

Exercises To Lose Weight : ದೇಹದ ತೂಕ ಇಳಿಕೆಗೆ ದಾರಿ ಯಾವುದಯ್ಯಾ!

ತೂಕ ಇಳಿಸುವುದಕ್ಕೆ ಎರಡು ಪ್ರಮುಖ ಆಯಾಮಗಳಿವೆ. ಒಂದು ವ್ಯಾಯಾಮ, ಇನ್ನೊಂದು ಆಹಾರ. ಊಟದಲ್ಲಿ ಸಮತೋಲನ ಕಾಪಾಡಿಕೊಂಡರೆ, ಆರೋಗ್ಯಪೂರ್ಣವಾದ ಶರೀರ ನಮ್ಮದಾಗುತ್ತದೆ. ವ್ಯಾಯಾಮವನ್ನು (Exercises to Lose Weight) ನಿಯಮಿತವಾಗಿ ಮಾಡಿದರೆ ತೂಕ ಇಳಿಕೆ ಮಾತ್ರವೇ ಅಲ್ಲ, ಇನ್ನೂ ಬಹಳಷ್ಟು ಲಾಭಗಳಿವೆ ನಮ್ಮ ದೇಹಕ್ಕೆ.

VISTARANEWS.COM


on

Exercises To Lose Weight
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಒಂದಾನೊಂದು ಕಾಲದಲ್ಲಿ ಬೀದಿಯಲ್ಲಿ ತಿರುಗುವ ಮಾರಿಯನ್ನು ತಡೆಯಲು ಮನೆ ಬಾಗಿಲ ಮೇಲೆ ʻನಾಳೆ ಬಾʼ ಎಂದು ಬರೆಯುವ ಪರಿಪಾಠವಿತ್ತು. ಇದೀಗ ಹಲವರಲ್ಲಿ ಇಂಥದ್ದೇ ಅಭ್ಯಾಸಗಳನ್ನು ಕಾಣಬಹುದು. ಆದರೆ ಬರುವ ಮಾರಿಯನ್ನು ತಡೆಯಲಲ್ಲ, ಏರುವ ತೂಕವೆಂಬ ಮಾರಿಯನ್ನು ತಡೆಯಲು! ತೂಕ ಇಳಿಸುವುದು ʻನಾಳೆಯಿಂದ ಶುರುʼ ಎಂದು ಶಪಥ ಮಾಡಿಕೊಂಡವರೆಷ್ಟು ಮಂದಿ ಬೇಕು? ಇದೇ ಶಪಥ ಪೂರ್ಣಗೊಳ್ಳದೆ ವರ್ಷಾನುಗಟ್ಟಲೆ ಮುಂದುವರಿಯುವುದು ಮಾತ್ರ ಬೇಸರದ ವಿಷಯ. ಈ ಬಗ್ಗೆ ಬಾಯಿ ಬಿಚ್ಚಿದರೆ ಮಹಾ ಧಾರಾವಾಹಿಗೆ ಆಗುವಷ್ಟು ಸಲಹೆಗಳು ಬರಬಹುದು ಆಪ್ತರಿಂದ. ಇವುಗಳಲ್ಲಿ ಯಾವುದನ್ನು, ಎಷ್ಟು ಪಾಲಿಸಬೇಕು ಎಂಬ ಗೊಂದಲವೂ ಸೇರಿಕೊಂಡು ತೂಕ ಇಳಿಸುವ ಯೋಜನೆ ಮಗುಚುತ್ತದೆ. ಹಾಗಾದರೆ ತೂಕ ಇಳಿಸುವ (Exercises to Lose Weight) ಮರೀಚಿಕೆಯನ್ನು ಹಿಡಿಯುವುದು ಹೇಗೆ? ಅದಕ್ಕೇನು ಮಾಡಬೇಕು?

Weight Lose Exercises

ತೂಕ ಇಳಿಸುವುದಕ್ಕೆ ಎರಡು ಪ್ರಮುಖ ಆಯಾಮಗಳಿವೆ. ಒಂದು ವ್ಯಾಯಾಮ, ಇನ್ನೊಂದು ಆಹಾರ. ಒಂದನ್ನು ಬಿಟ್ಟು ಇನ್ನೊಂದಿಲ್ಲ. ಅಂದರೆ, ಬಕೆಟ್‌ಗಟ್ಟಲೆ ಬೆವರು ಬರುವಂತೆ ವ್ಯಾಯಾಮ ಮಾಡಿ, ಬೇಕಾಬಿಟ್ಟಿ ತಿಂದರೆ ಅಥವಾ ಊಟದಲ್ಲಿ ಚೆನ್ನಾಗಿ ಪಥ್ಯ ಮಾಡಿ ಜಡವಾಗಿ ಬಿದ್ದುಕೊಂಡರೆ ಶರೀರ ವಿಚಿತ್ರವಾಗಿ ವರ್ತಿಸಲಾರಂಭಿಸುತ್ತದೆ. ಊಟದಲ್ಲಿ ಸಮತೋಲನ ಕಾಪಾಡಿಕೊಂಡರೆ, ಆರೋಗ್ಯಪೂರ್ಣವಾದ ಶರೀರ ನಮ್ಮದಾಗುತ್ತದೆ. ವ್ಯಾಯಾಮವನ್ನು (Exercises to Lose Weight) ನಿಯಮಿತವಾಗಿ ಮಾಡಿದರೆ ತೂಕ ಇಳಿಕೆ ಮಾತ್ರವೇ ಅಲ್ಲ, ಇನ್ನೂ ಬಹಳಷ್ಟು ಲಾಭಗಳಿವೆ ನಮ್ಮ ದೇಹಕ್ಕೆ. ವ್ಯಾಯಾಮ ಎನ್ನುತ್ತಿದ್ದಂತೆ ರಸ್ತೆ ಮೇಲೆ ಅಂಗೈಯಲ್ಲಿ ಜೀವ ಹಿಡಿದು ಓಡುವವರೊ, ಬದುಕಿನಾಸೆ ಬಿಟ್ಟು ನೀರಿಗೆ ಹಾರುವವರೊ ಅಥವಾ ಜಿಮ್‌ನಲ್ಲಿ ಬೆವರಿಳಿಸುವವರೊ ನೆನಪಾಗಿ- ʻಅವೆಲ್ಲಾ ನನ್ಕೈಯಲ್ಲಾಗಲ್ಲ!ʼ ಎಂದು ಮನಸ್ಸು ಹಿಂಜರಿಯುತ್ತದೆ. ಇವನ್ನೆಲ್ಲಾ ಮಾಡಿದರೆ ಮಾತ್ರವೇ ವ್ಯಾಯಾಮ ಮಾಡಿದಂತೆ ಎಂದೇನಿಲ್ಲ. ಮನೆಯಲ್ಲಿ ಮಾಡುವಂಥ ಕೆಲವು ಸರಳ ತೂಕ ಇಳಿಸುವ ವ್ಯಾಯಾಮಗಳು ಇಲ್ಲಿವೆ.

Aerobic exercises

ಏರೋಬಿಕ್‌ ವ್ಯಾಯಾಮಗಳು

ನಡಿಗೆ ಇದರಲ್ಲಿ ಪ್ರಧಾನವಾದುದು. ತ್ವರಿತವಾಗಿ ನಡೆಯುವುದು ತೂಕ ಇಳಿಸುವುದಕ್ಕೆ ಪ್ರಶಸ್ತವಾದ ವ್ಯಾಯಾಮ. ದೇಹದ ಕೀಲುಗಳ ಮೇಲೆ ಕಡಿಮೆ ಒತ್ತಡ ಹಾಕುವ, ಹೆಚ್ಚಿನದಾದ ಯಾವುದೇ ಸೌಲಭ್ಯ ಬೇಡದ ಸರಳ ವ್ಯಾಯಾಮವಿದು. ವಾರದಲ್ಲಿ ಐದು ದಿನ, ದಿನಕ್ಕೆ 40 ನಿಮಿಷಗಳಂತೆ ತ್ವರಿತವಾಗಿ ನಡೆದರೆ ಒಂದು ತಿಂಗಳಲ್ಲಿ ದೇಹದ ತೂಕದಲ್ಲಿ ವ್ಯತ್ಯಾಸ ಕಾಣಲು ಆರಂಭಿಸುತ್ತದೆ. ಜೊತೆಗೆ ಆಹಾರದಲ್ಲಿ ಮಾರ್ಪಾಡೂ ಇರಬೇಕು. ಜಾಗಿಂಗ್‌, ಓಡುವುದು, ಸೈಕಲ್‌ ಹೊಡೆಯುವುದು, ನೃತ್ಯ, ಈಜು ಇತ್ಯಾದಿಗಳೆಲ್ಲಾ ಇನ್ನೂ ಒಳ್ಳೆಯದು, ಆದರೆ ಎಲ್ಲರಿಗೂ ಇದು ಆಗದಿರಬಹುದು.

Skipping

ಸ್ಕಿಪ್ಪಿಂಗ್

ಇದನ್ನು ಇಡೀ ದೇಹಕ್ಕೆ ಆಗುವಂಥ ವ್ಯಾಯಾಮ. ಕಡಿಮೆ ಸಮಯದಲ್ಲಿ ಹೆಚ್ಚು ಕ್ಯಾಲರಿಯನ್ನು ಬೂದಿ ಮಾಡುವುದೇ ಅಲ್ಲದೆ, ಸ್ನಾಯುಗಳನ್ನು ಸದೃಢಗೊಳಿಸುತ್ತದೆ. ದೇಹದ ಚಯಾಪಚಯವನ್ನೂ ಹೆಚ್ಚಿಸುತ್ತದೆ. ಹೃದಯ ಮತ್ತು ಶ್ವಾಸಕೋಶಗಳ ಬಲಹೆಚ್ಚಿಸಿ, ಅವುಗಳ ಕಾರ್ಯಕ್ಷಮತೆಯನ್ನು ಏರಿಸುತ್ತದೆ. ಮೊದಲಿಗೆ 50-100ರ ಲೆಕ್ಕದಲ್ಲಿ ಹಗ್ಗದಾಟವನ್ನು ಆರಂಭಿಸಿ, ಕ್ರಮೇಣ ಏರಿಸುತ್ತಾ ಸಾವಿರ ದಾಟಿಸಬಹುದು.

Plank

ಪ್ಲಾಂಕ್

ದೇಹದ ಹಲವಾರು ದೊಡ್ಡ ಸ್ನಾಯುಗಳನ್ನು ಹುರಿಗಟ್ಟಿಸುವುದಕ್ಕೆ ಈ ವ್ಯಾಯಾಮ ಉಪಯುಕ್ತ. ಭುಜ, ತೋಳು, ಎದೆ, ಹೊಟ್ಟೆ, ಬೆನ್ನು, ಪೃಷ್ಠ ಮತ್ತು ತೊಡೆಯ ಸ್ನಾಯುಗಳಿಗೆ ಇದು ಬಲ ನೀಡುತ್ತದೆ. ಮಾತ್ರವಲ್ಲ, ಈ ಭಾಗಗಳಲ್ಲಿರುವ ಬೊಜ್ಜು ಕರಗಿಸಲು ಅತ್ಯಂತ ಪರಿಣಾಮಕಾರಿಯಾದ ವ್ಯಾಯಾಮವಿದು. ನೋಡುವುದಕ್ಕೆ ಸರಳವಾದರೂ, ಎರಡು ನಿಮಿಷ ಪ್ಲಾಂಕ್‌ ಭಂಗಿಯಲ್ಲಿ ದೇಹವನ್ನು ಹಿಡಿಯುವಷ್ಟರಲ್ಲಿ ʻಉಶ್ಶಪ್ಪಾʼ ಎನಿಸುವ ವ್ಯಾಯಾಮವಿದು. ಇದರಲ್ಲೂ ಹಲವು ಭಿನ್ನ ಭಂಗಿಗಳಿದ್ದು, ಒಂದೊಂದೂ ಒಂದೊಂದು ಸ್ನಾಯುಗಳಿಗೆ ಕೆಲಸ ನೀಡುತ್ತದೆ. ಮೊದಲಿಗೆ ಅರ್ಧ ನಿಮಿಷದಿಂದ ಆರಂಭಿಸಿ, ಕ್ರಮೇಣ ಹಲವು ನಿಮಷಗಳವರೆಗೆ ಈ ಭಂಗಿಯ ತೀವ್ರತೆಯನ್ನು ಹೆಚ್ಚಿಸಬಹುದು.

Push up

ಪುಶ್‌ ಅಪ್‌

ಇದರಲ್ಲೂ ಹಲವಾರು ಭಿನ್ನತೆಗಳಿದ್ದು, ಒಂದೊಂದು ವ್ಯಾಯಾಮದ ತೀವ್ರತೆಯೂ ಬೇರೆಯೇ ಇದೆ. ಇಂಥ ಬಹಳಷ್ಟು ವ್ಯಾಯಾಮಗಳು ಬೇಡುವುದು ಒಂದು ಯೋಗ ಮ್ಯಾಟ್‌ ಮಾತ್ರ. ನೆಲಕ್ಕೆ ಸಮಾನಾಂತರವಾಗಿ ದೇಹವನ್ನು ನಿಲ್ಲಿಸಿ, ಶರೀರವನ್ನು ಏರಿಳಿಸುವ ಈ ಕ್ರಿಯೆಯಲ್ಲಿ ಎದೆ, ಭುಜ, ರಟ್ಟೆ, ಹೊಟ್ಟೆ ಮತ್ತು ಬೆನ್ನುಗಳನ್ನು ಹುರಿಗಟ್ಟಿಸಬಹುದು.

Squat

ಸ್ಕ್ವಾಟ್

ಇವೆಲ್ಲ ಒಂದು ರೀತಿಯಲ್ಲಿ ಅರೆಮಂಡಿಯ ಭಂಗಿಗಳು. ಕಟಿಯಿಂದ ಕೆಳ ಭಾಗಕ್ಕೆ ಬಲ ತುಂಬುವ ಭಂಗಿಗಳಿವು. ಸೊಂಟ ಮತ್ತು ತೊಡೆಗಳಲ್ಲಿ ಹೆಚ್ಚಿರುವ ಸುತ್ತಳತೆಯನ್ನು ಕರಗಿಸಲು ಈ ವ್ಯಾಯಾಮಗಳು ಉಪಯುಕ್ತ. ದೇಹದ ಸಮತೋಲನ ಮತ್ತು ಚುರುಕುತನವನ್ನು ಹೆಚ್ಚಿಸಲೂ ಇವು ಬಳಕೆಯಾಗುತ್ತವೆ. ಆರಂಭದಲ್ಲಿ ಯಾವುದಾದರೊಂದು ರೀತಿಯ ಸ್ಕ್ವಾಟ್‌ ವ್ಯಾಯಾಮವನ್ನು ೨೫-೫೦ರಂತೆ ಪ್ರಾರಂಭಿಸಿ, ದಿನ ಕಳೆದಂತೆ ಸಂಖ್ಯೆಯನ್ನು ಹೆಚ್ಚಿಸಬಹುದು.

Lunges

ಲಂಜಸ್‌

ಜನಪ್ರಿಯವಾಗಿ ಬಳಕೆಯಲ್ಲಿರುವ ಸ್ಟ್ರೆಂಥ್‌ ತರಬೇತಿಯ ವ್ಯಾಯಾಮಗಳಿವು. ಬೆನ್ನು, ಪೃಷ್ಠ ಮತ್ತು ಕಾಲುಗಳ ಬಲವರ್ಧನೆಗೆ ಇವು ಅತಿ ಉಪಯುಕ್ತವಾದವು. ದೇಹದ ಈ ಭಾಗಗಳ ಕೊಬ್ಬನ್ನು ಕರಗಿಸಲು ಮತ್ತು ಸ್ನಾಯುಗಳನ್ನು ಹುರಿಗಟ್ಟಿಸಲು ಇವು ಪರಿಣಾಮಕಾರಿಯಾಗಿವೆ. ದೇಹದ ಚಲನೆ, ಸಮತೋಲನ ಮತ್ತು ಸಮನ್ವಯ ವೃದ್ಧಿಯೂ ಇವುಗಳಿಂದ ಸಾಧ್ಯ.

Yoga

ಯೋಗ

ಇದಲ್ಲದೆ, ಯೋಗ, ಪಿಲಾಟೆ ಮುಂತಾದ ಕೆಲವು ವ್ಯಾಯಾಮ ಪದ್ಧತಿಗಳನ್ನು ಸರಿಯಾದ ಮಾರ್ಗದರ್ಶನದಲ್ಲಿ ಕಲಿತರೆ ದೇಹದಲ್ಲಿ ಜಮೆಯಾದ ಕೊಬ್ಬು ಕರಗಿಸಿ, ಬಲವೃದ್ಧಿ ಮಾಡುವುದಕ್ಕೆ ಸಾಧ್ಯವಿದೆ. ಇಂಥ ಯಾವ ತರಬೇತಿಗಳಿಗೆ ಅಗತ್ಯವಾಗುವ ವಸ್ತುಗಳೆಂದರೆ ಕಲಿಯುವವರ ಶ್ರಮ ಮತ್ತು ಕಲಿಸುವವರ ಸೂಕ್ತ ಮಾರ್ಗದರ್ಶನ ಮಾತ್ರ.

FAQ
ಚೆನ್ನಾಗಿ ಬೆವರಿದರೆ ತೂಕ ಇಳಿಯುತ್ತದೆಯೇ?

ಇಲ್ಲ! ಬೆವರಿಗೂ ತೂಕ ಇಳಿಕೆಗೂ ನೇರ ಸಂಬಂಧವಿಲ್ಲ. ಉಷ್ಣತೆಯನ್ನು ಕಾಪಾಡಿಕೊಳ್ಳುವುದಕ್ಕೆ ದೇಹ ಬೆವರುತ್ತದೆಯಷ್ಟೇ. ವ್ಯಾಯಾಮ ಮಾಡುವಾಗ ಬೆವರಿದರೆ ತೂಕ ಇಳಿಯುವುದು ವ್ಯಾಯಾಮದಿಂದಲೇ ಹೊರತು ಬೆವರಿನಿಂದಲ್ಲ.

ಒಂದು ವಾರದಲ್ಲಿ ತೂಕ ಇಳಿಸಬಹುದೇ?

ಸ್ವಲ್ಪ ಇಳಿದೀತು. ಆದರೆ ಜಾದೂ ಆಗುವುದಕ್ಕೆ ಸಾಧ್ಯವಿಲ್ಲ. ತೂಕ ಇಳಿಸುವುದು ಸುಸ್ಥಿರವಾದಾಗ ಮಾತ್ರ ಆರೋಗ್ಯಕ್ಕೆ ತೊಂದರೆ ಆಗುವುದಿಲ್ಲ. ವ್ಯಾಯಾಮ ಮತ್ತು ಆಹಾರ ನಿರ್ವಹಣೆಯಿಂದ ಇದು ಸಾಧ್ಯ.

ಇದನ್ನೂ ಓದಿ: Foods For Healthy Joints And Muscles: ಬಲವಾದ ಕೀಲು, ಸ್ನಾಯುಗಳು ಬೇಕೆ? ಈ ಆಹಾರಗಳು ಬೇಕು!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

Fortis Hospital: ನೈಜೀರಿಯನ್ ಯುವತಿಗೆ ಯಶಸ್ವಿ ‘ಡ್ಯುಯಲ್ ಕಾಕ್ಲಿಯರ್ ಇಂಪ್ಲಾಂಟ್ ಸರ್ಜರಿ’

Fortis Hospital: ವೈರಲ್‌ ಜ್ವರದ ಬಳಿಕ ಎರಡೂ ಕಿವಿಗಳು ಶ್ರವಣದೋಷಕ್ಕೆ ಒಳಗಾಗಿದ್ದ ನೈಜೀರಿಯಾ ಮೂಲದ 23 ವರ್ಷದ ಯುವತಿಗೆ ಏಕಕಾಲದಲ್ಲೇ “ಡ್ಯುಯಲ್ ಕಾಕ್ಲಿಯರ್ ಇಂಪ್ಲಾಂಟ್ ಸರ್ಜರಿ” ಮೂಲಕ ಯುವತಿಗೆ ಎರಡು ಶ್ರವಣ ಸಾಧನಗಳನ್ನು ಫೋರ್ಟಿಸ್‌ ಆಸ್ಪತ್ರೆ ವೈದ್ಯರು ಯಶಸ್ವಿಯಾಗಿ ಅಳವಡಿಸಿದ್ದಾರೆ.

VISTARANEWS.COM


on

Fortis hospital Doctors Perform Successful Dual Cochlear Implant Surgery on Nigerian Young Woman
Koo

ಬೆಂಗಳೂರು: ವೈರಲ್‌ ಜ್ವರದ ಬಳಿಕ ಎರಡೂ ಕಿವಿಗಳ ಶ್ರವಣದೋಷಕ್ಕೆ ಒಳಗಾಗಿದ್ದ ನೈಜೀರಿಯಾ ಮೂಲದ 23 ವರ್ಷದ ಯುವತಿಗೆ ಏಕಕಾಲದಲ್ಲೇ “ಡ್ಯುಯಲ್ ಕಾಕ್ಲಿಯರ್ ಇಂಪ್ಲಾಂಟ್ ಸರ್ಜರಿ” ಮೂಲಕ ಯುವತಿಗೆ ಎರಡು ಶ್ರವಣ ಸಾಧನಗಳನ್ನು ಫೋರ್ಟಿಸ್‌ ಆಸ್ಪತ್ರೆ (Fortis Hospital) ವೈದ್ಯರು ಯಶಸ್ವಿಯಾಗಿ ಅಳವಡಿಸಿದ್ದಾರೆ.

ಫೋರ್ಟಿಸ್‌ ಆಸ್ಪತ್ರೆಯ ಇಎನ್‌ಟಿ, ಕಾಕ್ಲಿಯರ್ ಇಂಪ್ಲಾಂಟ್ ಮತ್ತು ಸ್ಕಲ್ ಬೇಸ್ ಸರ್ಜನ್ ಹಿರಿಯ ಸಲಹೆಗಾರ ಡಾ.ಎಚ್.ಕೆ. ಸುಶೀನ್ ದತ್ ಹಾಗೂ ತಜ್ಞರ ಆರೈಕೆಯಲ್ಲಿ ಈ ಸಂಕೀರ್ಣ ಕಾರ್ಯವಿಧಾನವನ್ನು 9 ಗಂಟೆಗಳಲ್ಲಿ ಪೂರ್ಣಗೊಳಿಸಲಾಯಿತು.

ಇದನ್ನೂ ಓದಿ: Bengaluru News: ಬೆಂಗಳೂರಿನಲ್ಲಿ ಜೂ. 29ರಂದು ನಿವೃತ್ತ ನ್ಯಾ. ಚಂದ್ರಶೇಖರಯ್ಯಗೆ ಅಭಿನಂದನೆ

ಈ ಕುರಿತು ಡಾ.ಎಚ್. ಕೆ. ಸುಶೀನ್ ದತ್ ಮಾತನಾಡಿ, 23 ವರ್ಷದ ನೈಜೀರಿಯಾ ಮೂಲದ ಲೀನಾ (ಹೆಸರು ಬದಲಿಸಲಾಗಿದೆ) ಗೆ ಮೂರು ವರ್ಷಗಳ ಹಿಂದೆ ಅತಿಯಾದ ವೈರಲ್‌ ಜ್ವರ ಕಾಣಿಸಿಕೊಂಡಿದೆ, ಈ ಜ್ವರದ ತೀವ್ರತೆಯಿಂದ ಕ್ರಮೇಣ ಅವರು ಮೊದಲು ಬಲಕಿವಿಯ ಕೇಳುವ ಶಕ್ತಿ ಕಳೆದುಕೊಂಡರು, ನಂತರ ಎಡ ಕಿವಿಯು ಶ್ರವಣವೂ ಹೋಯಿತು. ದೊಡ್ಡ ಶಬ್ಧವನ್ನೂ ಸಹ ಅವರು ಕೇಳಲು ಸಾಧ್ಯವಾಗದ ಸ್ಥಿತಿಗೆ ತಲುಪಿದರು.

ನಂತರ ಫೋರ್ಟಿಸ್‌ ಆಸ್ಪತ್ರೆಗೆ ದಾಖಲಾದ ಬಳಿಕ ಅವರ ಕಿವುಡುತನದ ತೀವ್ರತೆ ಅರಿವಾಯಿತು. ಇವರಿಗೆ ಕಾಕ್ಲಿಯರ್ ಇಂಪ್ಲಾಂಟ್ ಸರ್ಜರಿ ಮಾಡಲು ನಿರ್ಧರಿಸಿದೆವು. ಆದರೆ ಇವರಿಗೆ ಎರಡೂ ಕಿವಿಗಳಿಗೂ ಈ ಸರ್ಜರಿ ಅವಶ್ಯಕತೆ ಇತ್ತು, ಸಾಮಾನ್ಯವಾಗಿ ಈ ಸರ್ಜರಿಯನ್ನು ಒಮ್ಮೆಲೆ ಒಂದು ಕಿವಿಗೆ ಮಾತ್ರ ಮಾಡಲು ಸಾಧ್ಯ. ಆದರೆ, ನಮ್ಮ ತಂಡ ಏಕಕಾಲದಲ್ಲೇ ಎರಡೂ ಕಿವಿಗಳಿಗೂ ಕಾಕ್ಲಿಯರ್ ಇಂಪ್ಲಾಂಟ್ ಸರ್ಜರಿ ಮಾಡಲು ನಿರ್ಧರಿಸಿದೆವು. ಇದಕ್ಕೆ ಸೂಕ್ತ ತಂತ್ರಜ್ಞಾನಗಳ ಬಳಕೆಯಿಂದ 9 ಗಂಟೆಗಳ ನಿರಂತರ ಶಸ್ತ್ರಚಿಕಿತ್ಸೆಯ ಬಳಿಕ ಅವರಿಗೆ ಶ್ರವಣ ಸಾಧನಗಳನ್ನು ಅಳಡಿಸಲಾಗಿದೆ.

ಇದನ್ನೂ ಓದಿ: Pralhad Joshi: ಹೊಸ ಖಾತೆಗಳ ಅಧಿಕಾರ ಸ್ವೀಕರಿಸಿದ ಪ್ರಲ್ಹಾದ್‌ ಜೋಶಿ; ಲಕ್ಷ್ಮಿ ಪೂಜೆಯೊಂದಿಗೆ ಕಾರ್ಯಾರಂಭ

ಶಸ್ತ್ರಚಿಕಿತ್ಸೆಯ 5 ದಿನಗಳ ನಂತರ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಪ್ರಸ್ತುತ ಅವರು ನೈಜೀರಿಯಾದಲ್ಲಿ ಶ್ರವಣೇಂದ್ರಿಯ ಮೌಖಿಕ ತರಬೇತಿಯನ್ನು ಪಡೆಯುತ್ತಿದ್ದು, ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ ಎಂದು ತಿಳಿಸಿದ್ದಾರೆ.

Continue Reading

ಆರೋಗ್ಯ

Health Tips For Monsoon: ಮಳೆಗಾಲಕ್ಕೆ ನಮ್ಮ ಆಹಾರ ಹೇಗಿರಬೇಕು?

ಆಹಾರವೇ ಔಷಧವಾಗಿ ನಮ್ಮನ್ನು ಕಾಯುತ್ತಿದ್ದ ಕಾಲವೊಂದಿತ್ತು. ಈಗಲೂ ಇದೆ. ಆದರೆ ನಮ್ಮ ಆಹಾರವನ್ನು ನಾವು ಸರಿಯಾಗಿ ಅರ್ಥ ಮಾಡಿಕೊಂಡರೆ ಮಾತ್ರ. ಮಳೆಗಾಲಕ್ಕೆ ಪೂರಕವಾದಂಥ ಆಹಾರ ಹೇಗಿರಬೇಕು, ಯಾವ ಆಹಾರಗಳು ಹಿತವೆನಿಸುತ್ತವೆ? ನಾವೂ ಮಳೆಯಲ್ಲಿ ನೆನೆಯುವ ಪ್ರಸಂಗಗಳು ಬಂದರೆ, ನಮ್ಮ ರೋಗನಿರೋಧಕ ಶಕ್ತಿಯೂ ದುರ್ಬಲವಾಗಬಹುದು. ಇಂಥ ದಿನಗಳಲ್ಲಿ ನಮ್ಮ ಆಹಾರ ಹೇಗಿರಬೇಕು ಎಂಬೆಲ್ಲ ಉಪಯುಕ್ತ (Health Tips for Monsoon)ಮಾಹಿತಿಗಳು ಇಲ್ಲಿವೆ.

VISTARANEWS.COM


on

Health Tips For Monsoon
Koo

ಮಳೆಗಾಲವೆಂದರೆ ಎಲ್ಲವೂ (Health Tips for Monsoon) ಜೀವ ತಳೆಯುವ ಕಾಲ… ರೋಗಾಣುಗಳೂ ಸಹ! ಬೇಸಿಗೆಯಲ್ಲಿ ರೋಗವೇ ಇರುವುದಿಲ್ಲ ಎಂದಲ್ಲ. ಆದರೆ ಮಳೆಗಾಲದಲ್ಲಿ ಬರುವ ರೋಗಗಳ ಪ್ರಮಾಣ ಸ್ವಲ್ಪ ಹೆಚ್ಚು. ನೀರು, ಆಹಾರ, ಗಾಳಿ, ಸೊಳ್ಳೆ- ಹೀಗೆ ನಾನಾ ಮೂಲಗಳಿಂದ ಮಳೆಗಾಲವು ರೋಗಗಳನ್ನು ಆಹ್ವಾನಿಸುತ್ತದೆ. ಅಷ್ಟು ಸಾಲದೆಂಬಂತೆ ನಾವೂ ಮಳೆಯಲ್ಲಿ ನೆನೆಯುವ ಪ್ರಸಂಗಗಳು ಬಂದರೆ, ನಮ್ಮ ರೋಗನಿರೋಧಕ ಶಕ್ತಿಯೂ ದುರ್ಬಲವಾಗಬಹುದು. ಇಂಥ ದಿನಗಳಲ್ಲಿ ನಮ್ಮ ಆಹಾರ ಹೇಗಿರಬೇಕು?
ಆಹಾರವೇ ಔಷಧವಾಗಿ ನಮ್ಮನ್ನು ಕಾಯುತ್ತಿದ್ದ ಕಾಲವೊಂದಿತ್ತು, ಈಗಲೂ ಇದೆ… ನಮ್ಮ ಆಹಾರವನ್ನು ನಾವು ಸರಿಯಾಗಿ ಅರ್ಥ ಮಾಡಿಕೊಂಡರೆ. ಇದರಿಂದ ದೇಹದ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸಿ, ಶರೀರವನ್ನು ಸಶಕ್ತವಾಗಿ ಇರಿಸಿಕೊಳ್ಳುವುದಕ್ಕೆ ಸಾಧ್ಯವಿದೆ. ಮಳೆಗಾಲದಲ್ಲಿ ನಮ್ಮ ಆರೋಗ್ಯವನ್ನೂ ಹಸಿರಾಗಿ ಇರಿಸಿಕೊಳ್ಳಬಹುದು. ಹಾಗಾಗಿ ಮಳೆಗಾಲಕ್ಕೆ ಪೂರಕವಾದಂಥ ಆಹಾರ ಹೇಗಿರಬೇಕು, ಯಾವ ಆಹಾರಗಳು ಹಿತವೆನಿಸುತ್ತವೆ ಎಂಬೆಲ್ಲ ಮಾಹಿತಿಗಳು ಇಲ್ಲಿವೆ.

Summer Fruits

ಹಣ್ಣುಗಳು

ಈ ಋತುವಿನಲ್ಲಿ ದೊರೆಯುವ ಹಣ್ಣುಗಳನ್ನು ಕಡ್ಡಾಯವಾಗಿ ಸೇವಿಸಿ. ಈಗಿನ್ನೂ ಮಾವಿನ ಹಣ್ಣಿನ ಋತು ಮುಗಿದಿಲ್ಲ. ಜೊತೆಗೆ ಹಲಸು, ನೇರಳೆ, ಲಿಚಿ, ದಾಳಿಂಬೆ, ಪೇರ್‌, ಮರಸೇಬು ಮುಂತಾದ ಹಲವು ರೀತಿಯ ಹಣ್ಣುಗಳು ದೊರೆಯುವ ಕಾಲವಿದು. ಇವೆಲ್ಲ ಆಹಾರದ ಭಾಗವಾದರೆ ಒಳ್ಳೆಯದು. ಈ ಹಣ್ಣುಗಳಲ್ಲಿ ವಿಟಮಿನ್‌ ಸಿ, ವಿಟಮಿನ್‌ ಎ, ನಾರು, ಖನಿಜಗಳು ಮತ್ತು ಹಲವು ರೀತಿಯ ಉತ್ಕರ್ಷಣ ನಿರೋಧಕಗಳು ಯಥೇಚ್ಛವಾಗಿ ದೊರೆಯುತ್ತವೆ.

Fresh Vegetables

ತರಕಾರಿಗಳು

ಈ ದಿನಗಳಲ್ಲಿ ಸೊಪ್ಪು ತರಕಾರಿಗಳು ದೊರೆಯುವುದು ಕಷ್ಟವಾಗಬಹುದು. ಮಳೆನೀರಿಗೆ ಸಿಕ್ಕ ಕಾಯಿಪಲ್ಲೆಗಳು ಉಳಿಯುವುದಕ್ಕಿಂತ ಕೊಳೆಯುವುದೇ ಹೆಚ್ಚು. ಆದಾಗ್ಯೂ, ಹಾಗಲ, ಹೀರೆ, ಸೋರೆ, ಸೌತೆ, ಕುಂಬಳ, ಬೂದುಗುಂಬಳದಂಥ ತರಕಾರಿಗಳು ಈ ದಿನಗಳಿಗೆ ಆಪ್ಯಾಯಮಾನ ಎನಿಸುತ್ತವೆ. ಜೊತೆಗೆ, ಹಸಿ ಅರಿಶಿನ, ಹಸಿ ಶುಂಠಿಯಂಥ ಬೇರುಗಳು ಅಡುಗೆಯಲ್ಲಿ ಬಳಕೆಯಾಗುವುದು ಮುಖ್ಯ. ಇವುಗಳು ಶರೀರದ ರೋಗ ನಿರೋಧಕತೆಯನ್ನು ಉದ್ದೀಪಿಸುತ್ತವೆ. ಜೋಳವನ್ನು ಬೇಯಿಸಿ ಅಥವಾ ಸುಟ್ಟುಕೊಂಡು, ಬಾಯಿ ಸುಟ್ಟುಕೊಳ್ಳುತ್ತಾ ತಿನ್ನುವುದು ಬಹಳ ಮಂದಿಗೆ ಇಷ್ಟವಾಗುವಂಥದ್ದು.

ಕಾಳು-ಬೇಳೆಗಳ ಕಟ್ಟು

ಮಳೆಗಾಲದ ಶೀತ-ಥಂಡಿ-ಒದ್ದೆಯ ದಿನಗಳಿಗೆ ಸರಿಯಾಗಿ ದೇಹವನ್ನು ಬೆಚ್ಚಗಿರಿಸಿಕೊಳ್ಳುವುದು ಅಗತ್ಯ. ಹಾಗಾಗಿ ಬೇಳೆ-ಕಾಳುಗಳ ಕಟ್ಟಿನ ಸಾರುಗಳು ಹಿತವೆನಿಸುತ್ತವೆ. ಹುರುಳಿ ಕಟ್ಟು, ತೊಗರಿ ಕಟ್ಟು, ಹೆಸರು ಕಟ್ಟುಗಳನ್ನು ವಿಫುಲವಾಗಿ ಸೇವಿಸಿ. ಇಂತಹ ಕಟ್ಟಿನ ಸಾರುಗಳು ಜೀರ್ಣಕ್ರಿಯೆ ನಿಧಾನವಾಗದಂತೆ ನೋಡಿಕೊಳ್ಳುತ್ತವೆ. ಇದನ್ನು ಊಟಕ್ಕಾದರೂ ಬಳಸಿ, ಸೂಪ್‌ನಂತಾದರೂ ಕುಡಿಯಿರಿ. ಇದರಿಂದ ದೇಹಕ್ಕೆ ಬೇಕಾದ ನೀರಿನಂಶವೂ ದೊರೆಯುತ್ತದೆ. ಇಂಥ ಕಟ್ಟಿನ ಸೂಪ್‌ ಅಥವಾ ಸಾರುಗಳ ಜೊತೆಗೆ ನಿಂಬೆಹಣ್ಣನ್ನು ವಿಫುಲವಾಗಿ ಬಳಸಿ.

Drinking Water Before Meals

ನೀರು

ಇದೀಗ ನೀರು ಬದಲಾಗುವ ಸಮಯ. ಹಾಗಾಗಿ ನೀರನ್ನು ಕುದಿಸಿ ಕುಡಿಯುವುದು ಕ್ಷೇಮ. ಹಾಗಿಲ್ಲದಿದ್ದರೆ ಆರ್‌ಒ ನೀರು ಬಳಸುವುದು ಸಹ ಸುರಕ್ಷಿತ. ಹೊರಗಿನ ಯಾವುದೇ ಆಹಾರಗಳು, ತೆರೆದಿಟ್ಟ ತಿನಿಸುಗಳು ಈ ದಿನಗಳಲ್ಲಿ ಖಂಡಿತ ಕ್ಷೇಮವಲ್ಲ. ಕಾಲರಾ, ಕರುಳುಬೇನೆ, ಟೈಫಾಯ್ಡ್‌ನಂಥ ಸಾಂಕ್ರಾಮಿಕಗಳು ಕಲುಷಿತ ಆಹಾರ-ನೀರಿನ ಮೂಲಕವೇ ಹರಡುವಂಥವು. ಹಸಿ ಆಹಾರವನ್ನು ಎಲ್ಲಿಯೂ ತಿನ್ನಬೇಡಿ. ಆಹಾರವನ್ನು ಚೆನ್ನಾಗಿ ಬೇಯಿಸಿಕೊಂಡೇ ಸೇವಿಸಿ.

Spices

ಮಸಾಲೆಗಳು

ನಮ್ಮ ಅಡುಗೆಮನೆಗಳೇ ಕೆಲವೊಮ್ಮೆ ಕಿರುವೈದ್ಯರಂತೆ ವರ್ತಿಸುತ್ತವೆ. ನಿತ್ಯದ ಊಟದಲ್ಲಿ ಈರುಳ್ಳಿ, ಬೆಳ್ಳುಳ್ಳಿ, ಶುಂಠಿ, ಕಾಳುಮೆಣಸು, ಜೀರಿಗೆ, ಧನಿಯಾ, ದಾಲ್ಚಿನಿ, ಲವಂಗ, ಅರಿಶಿನ, ಇಂಗು ಮುಂತಾದ ಮಸಾಲೆಗಳು ಇರಲಿ. ಇವೆಲ್ಲ ಹಲವು ರೀತಿಯ ಉತ್ಕರ್ಷಣ ನಿರೋಧಕಗಳನ್ನು ತುಂಬಿಕೊಂಡಂಥವು. ಮಾತ್ರವಲ್ಲ, ಇವುಗಳಲ್ಲಿ ಸೋಂಕು ನಿರೋಧಕ ಗುಣವೂ ಇದ್ದು, ರೋಗಾಣುಗಳೊಂದಿಗೆ ಹೋರಾಡಲು ದೇಹಕ್ಕೆ ಶಕ್ತಿ ನೀಡುತ್ತದೆ.

Some herbal teas can relax the mind and induce sleep Tips For Better Sleep

ಹರ್ಬಲ್‌ ಚಹಾ

ಇಂಥ ಚಹಾಗಳನ್ನು ತುಳಸಿ, ಅಶ್ವಗಂಧ, ಪುದೀನಾ, ನಿಂಬೆ, ಸೋಂಪು, ಏಲಕ್ಕಿ, ಶುಂಠಿ, ದಾಲ್ಚಿನಿ ಮುಂತಾದ ಮೂಲಿಕೆಗಳನ್ನು ಬಳಸಿ ತಯಾರಿಸಿಕೊಳ್ಳಬಹುದು. ಕೆಫೇನ್‌ ಪೇಯಗಳ ಬದಲಿಗೆ ಇಂಥವುಗಳ ಬಿಸಿ ಚಹಾಗಳನ್ನು ಸೇವಿಸಿದರೆ ಶೀತ-ಥಂಡಿಯ ದಿನಗಳಲ್ಲಿ ಚಳಿಯೂ ಮಾಯ, ಆರೋಗ್ಯಕ್ಕೂ ಇಲ್ಲ ಅಪಾಯ.

Continue Reading

ಮನಿ ಗೈಡ್

Cashless Health Claim: ಸಂಪೂರ್ಣ ನಗದು ರಹಿತ ಆರೋಗ್ಯ ವಿಮೆ ಕ್ಲೈಮ್; ಆಗಸ್ಟ್ 1ರಿಂದ ಜಾರಿ

ಅರೋಗ್ಯ ಕ್ಲೈಮ್ ನಲ್ಲಿ ನಗದು ರಹಿತ ಸೇವೆಗಳನ್ನು (Cashless Health Claim) ಸ್ವೀಕರಿಸಲು, ನಿಭಾಯಿಸಲು ಮತ್ತು ಸಹಾಯ ಮಾಡಲು ಆಸ್ಪತ್ರೆಯಲ್ಲಿ ಹೆಲ್ಪ್ ಡೆಸ್ಕ್‌ಗಳನ್ನು ವಿಮೆಗಾರರು ವ್ಯವಸ್ಥೆಗೊಳಿಸಬೇಕು. ವಿಮಾದಾರರು ಡಿಜಿಟಲ್ ಮೋಡ್ ಮೂಲಕ ಪಾಲಿಸಿದಾರರಿಗೆ ಪೂರ್ವ ಅಧಿಕಾರವನ್ನು ಸಹ ಒದಗಿಸಬೇಕು ಎಂದು ಐಆರ್ ಡಿಎಐ ಸೂಚಿಸಿದೆ.

VISTARANEWS.COM


on

By

Cashless Health Claim
Koo

ಆರೋಗ್ಯ ವಿಮೆ (health insurance) ಕ್ಲೈಮ್ ಗಳಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದ್ದು, ಇದು ಈ ವರ್ಷದ ಆಗಸ್ಟ್ 1ರಿಂದ ಜಾರಿಯಾಗಲಿದೆ. ಇನ್ನು ಮುಂದೆ ವಿಮಾ ಕಂಪನಿಗಳು ಆರೋಗ್ಯ ವಿಮಾ ಕ್ಲೈಮ್‌ಗಳ ನಗದು ರಹಿತ ಸೆಟಲ್‌ಮೆಂಟ್‌ ಗೆ (Cashless Health Claim) ಆದ್ಯತೆ ನೀಡಬೇಕಿದೆ. ಇದರಿಂದ ಪಾಲಿಸಿದಾರರ ಆಸ್ಪತ್ರೆ ಬಿಲ್ (hospital bill) ಪಾವತಿ ಸುಗಮವಾಗಲಿದೆ ಮತ್ತು ವೇಗವಾಗಿ ನಡೆಯಲಿದೆ.

ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (IRDAI) ಇದಕ್ಕಾಗಿ 2024ರ ಜುಲೈ 31ರ ಮೊದಲು ಅಗತ್ಯ ವ್ಯವಸ್ಥೆಗಳು ಮತ್ತು ಕಾರ್ಯವಿಧಾನಗಳನ್ನು ವಿಮಾದಾರರು ತಕ್ಷಣವೇ ಜಾರಿಗೆ ತರಬೇಕು ಎಂದು ಹೇಳಿದೆ.

ನಗದು ರಹಿತ ಸೇವೆಗಳನ್ನು ಸ್ವೀಕರಿಸಲು, ನಿಭಾಯಿಸಲು ಮತ್ತು ಸಹಾಯ ಮಾಡಲು ಆಸ್ಪತ್ರೆಯಲ್ಲಿ ಹೆಲ್ಪ್ ಡೆಸ್ಕ್‌ಗಳನ್ನು ವಿಮೆದಾರರು ವ್ಯವಸ್ಥೆಗೊಳಿಸಬೇಕು. ವಿಮಾದಾರರು ಡಿಜಿಟಲ್ ಮೋಡ್ ಮೂಲಕ ಪಾಲಿಸಿದಾರರಿಗೆ ಪೂರ್ವ ಅಧಿಕಾರವನ್ನು ಸಹ ಒದಗಿಸಬೇಕು ಎಂದು ಐ ಆರ್ ಡಿ ಎ ಐ ತಿಳಿಸಿದೆ.

ನಗದು ರಹಿತ ಕ್ಲೈಮ್

ಪ್ರತಿಯೊಬ್ಬ ವಿಮಾದಾರರು ಸಮಯಕ್ಕೆ ಅನುಗುಣವಾಗಿ ಶೇ. 100ರಷ್ಟು ನಗದು ರಹಿತ ಕ್ಲೈಮ್ ಇತ್ಯರ್ಥವನ್ನು ಒದಗಿಸಲು ಪ್ರಯತ್ನಿಸಬೇಕು. ಮರುಪಾವತಿಯ ಮೂಲಕ ಕ್ಲೈಮ್‌ಗಳನ್ನು ಇತ್ಯರ್ಥಪಡಿಸುವ ನಿದರ್ಶನಗಳು ಕನಿಷ್ಠ ಮಟ್ಟದಲ್ಲಿರಿಸಿ ಅನಿವಾರ್ಯ ಸಂದರ್ಭಗಳಲ್ಲಿ ಮಾತ್ರ ಒದಗಿಸುವುದನ್ನು ಖಚಿತಪಡಿಸಿಕೊಳ್ಳಲು ವಿಮಾದಾರರು ಪ್ರಯತ್ನಿಸಬೇಕು ಎಂದು ಹೇಳಿದೆ.

ನಗದು ರಹಿತಕ್ಕೆ ತಕ್ಷಣ ನಿರ್ಧಾರ

ವಿಮಾದಾರರು ನಗದು ರಹಿತ ವಿನಂತಿಯನ್ನು ತಕ್ಷಣವೇ ನಿರ್ಧರಿಸಬೇಕು. ಅದು ವಿನಂತಿ ಸ್ವೀಕೃತಿಯ ಒಂದು ಗಂಟೆಗಿಂತ ಹೆಚ್ಚು ಇರಬಾರದು ಎಂದು ಐಆರ್ ಡಿಎ ಆರೋಗ್ಯ ವಿಮಾ ವ್ಯವಹಾರದ ಸುತ್ತೋಲೆಯಲ್ಲಿ ತಿಳಿಸಿದೆ.
ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ವಿನಂತಿಯನ್ನು ಸ್ವೀಕರಿಸಿದ ಮೂರು ಗಂಟೆಗಳ ಒಳಗೆ ವಿಮಾದಾರರು ಅಂತಿಮ ಸೆಟಲ್ ಮೆಂಟ್ ಮಾಡಬೇಕು ಎಂದು ತಿಳಿಸಿರುವ ಐಆರ್ ಡಿಎಐ, ಯಾವುದೇ ಸಂದರ್ಭದಲ್ಲೂ, ಪಾಲಿಸಿದಾರರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲು ಕಾಯುವಂತೆ ಮಾಡಬಾರದು ಎಂದು ಹೇಳಿದೆ.


ಡಿಸ್ಚಾರ್ಜ್ ವಿಳಂಬ ಮಾಡಬಾರದು

ಡಿಸ್ಚಾರ್ಜ್ ಅವಧಿ ಮೂರು ಗಂಟೆಗಳಿಗಿಂತ ಹೆಚ್ಚಿನ ವಿಳಂಬವಾದರೆ ಆಸ್ಪತ್ರೆಯಿಂದ ಶುಲ್ಕ ವಿಧಿಸಿದರೆ ಹೆಚ್ಚುವರಿ ಮೊತ್ತವನ್ನು ವಿಮಾದಾರರು ಭರಿಸಬೇಕು. ಚಿಕಿತ್ಸೆಯ ಸಮಯ, ಪಾಲಿಸಿದಾರನ ಮರಣ, ವಿಮಾದಾರನು ಕ್ಲೈಮ್ ಇತ್ಯರ್ಥಕ್ಕಾಗಿ ವಿನಂತಿಯನ್ನು ತಕ್ಷಣವೇ ಪ್ರಕ್ರಿಯೆಗೊಳಿಸಬೇಕು ಮತ್ತು ಮೃತ ದೇಹವನ್ನು ತಕ್ಷಣವೇ ಆಸ್ಪತ್ರೆಯಿಂದ ಬಿಡುಗಡೆ ಮಾಡಬೇಕು ಎಂದು ಐಆರ್ ಡಿಎಐ ತಿಳಿಸಿದೆ.

ಕ್ಲೈಮ್ ಇತ್ಯರ್ಥದ ಸಮೀಕ್ಷೆ ವರದಿ ಏನು ಹೇಳಿದೆ?

ಪಾಲಿಸಿದಾರರಿಗೆ ಕ್ಲೈಮ್ ಇತ್ಯರ್ಥವು ತೊಡಕಿನ ಕಾರ್ಯವಿಧಾನವಾಗಿದೆ. ಸಮೀಕ್ಷೆಯೊಂದರ ಪ್ರಕಾರ ಕಳೆದ 3 ವರ್ಷಗಳಲ್ಲಿ ಶೇ. 43ರಷ್ಟು ವಿಮಾ ಪಾಲಿಸಿದಾರರು ತಮ್ಮ “ಆರೋಗ್ಯ ವಿಮೆ” ಕ್ಲೈಮ್‌ಗಳನ್ನು ಪಡೆಯಲು ತೊಂದರೆಗಳನ್ನು ಎದುರಿಸಿದ್ದರು. ವಿಮಾ ಕಂಪನಿಗಳು ಆರೋಗ್ಯ ಸ್ಥಿತಿಯನ್ನು ಮೊದಲೇ ಅಸ್ತಿತ್ವದಲ್ಲಿರುವ ಸ್ಥಿತಿ ಎಂದು ವರ್ಗೀಕರಿಸುವ ಮೂಲಕ ಕ್ಲೈಮ್‌ಗಳನ್ನು ತಿರಸ್ಕರಿಸುವುದರಿಂದ ಹಿಡಿದು ಭಾಗಶಃ ಮೊತ್ತವನ್ನು ಮಾತ್ರ ಅನುಮೋದಿಸುವವರೆಗೆ ಸವಾಲುಗಳನ್ನು ಎದುರಿಸುತ್ತಿದೆ ಎಂದು ಸಮೀಕ್ಷೆಯೊಂದು ಹೇಳಿದೆ.

ಕ್ಲೈಮ್ ನಿರಾಕರಿಸುವಂತಿಲ್ಲ

ಉತ್ಪನ್ನ ನಿರ್ವಹಣಾ ಸಮಿತಿ (PMC) ಅಥವಾ ಕ್ಲೈಮ್ಸ್ ರಿವ್ಯೂ ಕಮಿಟಿ (CRC) ಎಂದು ಕರೆಯಲ್ಪಡುವ ಪಿಎಂಸಿಯ ಮೂರು ಸದಸ್ಯ ಉಪ-ಗುಂಪಿನ ಅನುಮೋದನೆಯಿಲ್ಲದೆ ಯಾವುದೇ ಕ್ಲೈಮ್ ಅನ್ನು ನಿರಾಕರಿಸಬಾರದು ಎಂದು ಹೇಳಿರುವ ಐಆರ್ ಡಿಎ ಐ, ಒಂದು ವೇಳೆ ಕ್ಲೈಮ್ ಅನ್ನು ನಿರಾಕರಿಸಿದರೆ ಅಥವಾ ಭಾಗಶಃ ಅನುಮತಿಸದಿದ್ದರೆ ಪಾಲಿಸಿ ಡಾಕ್ಯುಮೆಂಟ್‌ನ ನಿರ್ದಿಷ್ಟ ನಿಯಮ ಮತ್ತು ಷರತ್ತುಗಳನ್ನು ಉಲ್ಲೇಖಿಸುವ ಸಂಪೂರ್ಣ ವಿವರಗಳನ್ನು ಹಕ್ಕುದಾರರಿಗೆ ತಿಳಿಸಬೇಕು. ಕ್ಲೈಮ್‌ನ ಸೂಚನೆಯ ಪ್ರಕಾರ ವಿಮಾದಾರರು ಮತ್ತು ಥರ್ಡ್ ಪಾರ್ಟಿ ಅಡ್ಮಿನಿಸ್ಟ್ರೇಟರ್‌ಗಳು (ಟಿಪಿಎ) ಆಸ್ಪತ್ರೆಗಳಿಂದ ಅಗತ್ಯ ದಾಖಲೆಗಳನ್ನು ಸಂಗ್ರಹಿಸಬೇಕು. ಪಾಲಿಸಿದಾರರು ದಾಖಲೆಗಳನ್ನು ಸಲ್ಲಿಸುವ ಅಗತ್ಯವಿಲ್ಲ ಎಂದು ನಿಯಂತ್ರಕರು ತಿಳಿಸಿದ್ದಾರೆ.


ಪಾಲಿಸಿ ಪೋರ್ಟ್ ಮಾಡುವ ಅಧಿಕಾರ

ಐಆರ್ ಡಿಎಐ ಪ್ರಕಾರ ಒಬ್ಬ ಪಾಲಿಸಿದಾರರು ತನ್ನ ಪಾಲಿಸಿಗಳನ್ನು ಒಬ್ಬ ವಿಮಾದಾರರಿಂದ ಇನ್ನೊಂದು ಇನ್ಶುರೆನ್ಸ್ ಕಂಪನಿಗೆ ಪೋರ್ಟ್ ಮಾಡುವ ಆಯ್ಕೆಯನ್ನು ಹೊಂದಿರುತ್ತಾರೆ. ಇದನ್ನು ಪಡೆಯುವವರು ಮತ್ತು ಅಸ್ತಿತ್ವದಲ್ಲಿರುವ ವಿಮಾದಾರರು ಜಂಟಿಯಾಗಿ ಪಾಲಿಸಿದಾರರ ಸಂಪೂರ್ಣ ಅಂಡರ್ರೈಟಿಂಗ್ ವಿವರಗಳು ಮತ್ತು ಕ್ಲೈಮ್ ಇತಿಹಾಸವನ್ನು ವರ್ಗಾಯಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಬೇಕು ಎಂದು ಅದು ಹೇಳಿದೆ.

ಅಸ್ತಿತ್ವದಲ್ಲಿರುವ ವಿಮಾದಾರರು ಸ್ವಾಧೀನಪಡಿಸಿಕೊಳ್ಳುವ ವಿಮಾದಾರರು ಕೇಳಿದ ಮಾಹಿತಿಯನ್ನು ತಕ್ಷಣವೇ ಒದಗಿಸಬೇಕು. ಅದು ವಿಮಾ ಮಾಹಿತಿ ಬ್ಯೂರೋ ಆಫ್ ಇಂಡಿಯಾ (IIB) ಮೂಲಕ ವಿನಂತಿಯ ಸ್ವೀಕೃತಿಯ 72 ಗಂಟೆಗಳ ಒಳಗೆ. ಸ್ವಾಧೀನಪಡಿಸಿಕೊಳ್ಳುವ ವಿಮಾದಾರರು ಪ್ರಸ್ತಾವನೆಯನ್ನು ತಕ್ಷಣವೇ ನಿರ್ಧರಿಸಬೇಕು ಮತ್ತು ಸಂವಹನ ಮಾಡಬೇಕು. ಆದರೆ ಅಸ್ತಿತ್ವದಲ್ಲಿರುವ ವಿಮಾದಾರರಿಂದ ಮಾಹಿತಿಯ ಸ್ವೀಕೃತಿಯ 5 ದಿನಗಳಿಗಿಂತ ಹೆಚ್ಚು ಇರಬಾರದು.

ಇದನ್ನೂ ಓದಿ: Money Guide: ಪಿಎಫ್‌ ನಿಯಮಗಳಲ್ಲಿ ಮಹತ್ವದ ಬದಲಾವಣೆ; ಇಲ್ಲಿದೆ ಸಂಪೂರ್ಣ ಮಾಹಿತಿ

ಪಾಲಿಸಿದಾರನು ಪಡೆದ ಕ್ರೆಡಿಟ್‌ಗಳನ್ನು ವಿಮಾ ಮೊತ್ತದ ಮಟ್ಟಿಗೆ ವರ್ಗಾಯಿಸಲು ಅರ್ಹನಾಗಿರುತ್ತಾನೆ. ಯಾವುದೇ ಕ್ಲೈಮ್ ಬೋನಸ್, ನಿರ್ದಿಷ್ಟ ಕಾಯುವ ಅವಧಿ, ಮೊದಲೇ ಅಸ್ತಿತ್ವದಲ್ಲಿರುವ ಕಾಯಿಲೆಗಾಗಿ ಕಾಯುವ ಅವಧಿ, ಹಿಂದಿನ ಪಾಲಿಸಿಯಲ್ಲಿ ಅಸ್ತಿತ್ವದಲ್ಲಿರುವ ವಿಮಾದಾರರಿಂದ ಮೊರಟೋರಿಯಂ ಅವಧಿಯನ್ನು ಸ್ವಾಧೀನಪಡಿಸಿಕೊಂಡಿರುವ ವಿಮಾದಾರರಿಗೆ ವರ್ಗಾಯಿಸಲು ಅರ್ಹರಾಗಿರುತ್ತಾರೆ ಎಂದು ಐಆರ್ ಡಿಎಐ ಹೇಳಿದೆ.

Continue Reading

ಆರೋಗ್ಯ

Menopause: ಮಹಿಳೆಯರೇ, ಈ ಸಮಸ್ಯೆಗಳು ಕಾಣಿಸುತ್ತಿವೆಯೇ?; ಹಾಗಿದ್ದರೆ ನಿಮ್ಮ ಮೆನೋಪಾಸ್‌ ಸಮೀಪದಲ್ಲಿದೆ ಎಂದರ್ಥ!

ಹಲವು ಮಹಿಳೆಯರಲ್ಲಿ 40 ವರ್ಷ ತಲುಪುವ ಮೊದಲೇ ಮೆನೋಪಾಸ್‌ ಪೂರ್ವ ಲಕ್ಷಣಗಳು ಗೋಚರಿಸುತ್ತಿವೆ. ಮೆನೋಪಾಸ್‌ ಮಹಿಳೆಯ ಆರೋಗ್ಯದ ಸಾಮಾನ್ಯ ಘಟ್ಟವೇ ಆಗಿದ್ದರೂ ಈ ಸಂದರ್ಭ ಬಹಳಷ್ಟು ಸಾರಿ ವೈದ್ಯರ ನೆರವು, ಸುತ್ತಲಿನವರ ಕಾಳಜಿ ಪ್ರೀತಿಯೂ ಬೇಕಾಗುತ್ತದೆ. ಯಾವೆಲ್ಲ ಲಕ್ಷಣಗಳ ಮೂಲಕ, ಪ್ರತಿ ಮಹಿಳೆ ತನ್ನ ಮೆನೋಪಾಸ್‌ ಸಮೀಪಿಸುತ್ತಿದೆ ಎಂಬುದನ್ನು ಹೇಗೆ ತಿಳಿದುಕೊಳ್ಳಬಹುದು? ಈ ಕುರಿತ ಉಪಯುಕ್ತ (Menopause) ಮಾಹಿತಿ ಇಲ್ಲಿದೆ.

VISTARANEWS.COM


on

Menopause
Koo

ಬದಲಾದ ಜೀವನಕ್ರಮ, ಬದಲಾದ ವಾತಾವರಣ, ನಗರ ಜೀವನ, ಒತ್ತಡ ಇವೆಲ್ಲವೂ ಇಂದು ಮನುಷ್ಯನ ದೇಹ ಪ್ರಕೃತಿಯ ಮೇಲೂ ಪರಿಣಾಮ ಬೀರುತ್ತಿವೆ. ಮಹಿಳೆಯ ಮೆನೋಪಾಸ್‌ ಅಥವಾ ಋತುಬಂಧವೂ ಕೂಡಾ ಇಂದು ಇಂತಹ ಅನೇಕ ಕಾರಣಗಳಿಂದಾಗಿ ಬಹುಬೇಗನೆ ಆಗುತ್ತಿದೆ. ಹಲವರಲ್ಲಿ ನಲವತ್ತನ್ನು ತಲುಪುವ ಮೊದಲೇ ಮೆನೋಪಾಸ್‌ ಪೂರ್ವ ಲಕ್ಷಣಗಳು ಗೋಚರಿಸುತ್ತಿವೆ. ಮೆನೋಪಾಸ್‌ ಮಹಿಳೆಯ ಆರೋಗ್ಯದ ಸಾಮಾನ್ಯ ಘಟ್ಟವೇ ಆಗಿದ್ದರೂ ಈ ಸಂದರ್ಭ ಬಹಳಷ್ಟು ಸಾರಿ ವೈದ್ಯರ ನೆರವು, ಸುತ್ತಲಿನವರ ಕಾಳಜಿ ಪ್ರೀತಿಯೂ ಬೇಕಾಗುತ್ತದೆ. ಯಾವೆಲ್ಲ ಲಕ್ಷಣಗಳ ಮೂಲಕ, ಪ್ರತಿ ಮಹಿಳೆ ತನ್ನ ಮೆನೋಪಾಸ್‌ ಸಮೀಪಿಸುತ್ತಿದೆ ಎಂಬುದನ್ನು ಹೇಗೆ ತಿಳಿದುಕೊಳ್ಳಬಹುದು (Menopause) ಎಂಬುದನ್ನು ನೋಡೋಣ.

Female Menstrual Cycle Concept

ಸಮತೋಲನ ತಪ್ಪಿದ ಋತುಚಕ್ರ

ಪೀರಿಯಡ್ಸ್‌ ಅಥವಾ ಮಾಸಿಕ ಋತುಚಕ್ರದ ಕ್ರಮ ಬದಲಾಗಬಹುದು. ಪೀರಿಯಡ್‌ ನಡುವಿನ ಅಂತರ ಕಡಿಮೆಯಾಗಬಹುದು. ರಕ್ತಸ್ರಾವದಲ್ಲಿ ಏರಿಳಿತವಾಗಬಹುದು ಅಥವಾ, ಕಡಿಮೆ ರಕ್ತಸ್ರಾವವಾಗಬಹುದು, ಹೆಚ್ಚಾಗಬಹುದು. ಅಥವಾ ಮಾಸಿಕ ಋತುಸ್ರಾವ ತಪ್ಪಬಹುದು. ಹಾಗಾಗಿ, ಇಂತಹ ಸಮಸ್ಯೆ ನಿಮ್ಮ ಗಮನಕ್ಕೆ ಬರುತ್ತಿದೆ ಎಂದಾದಲ್ಲಿ, ಇವೆಲ್ಲವನ್ನೂ ಒಂದು ಡೈರಿಯಲ್ಲಿ ಬರೆದಿಟ್ಟುಕೊಂಡು ನಿಮ್ಮ ವೈದ್ಯರನ್ನು ಸಂಪರ್ಕಿಸಿ.

ಸೆಖೆಯೋ ಸೆಖೆ

ವಾತಾವರಣ ತಂಪಾಗಿದ್ದರೂ, ನಿಮಗೆ ಮಾತ್ರ ಇದ್ದಕ್ಕಿದ್ದಂತೆ ಸೆಖೆಯಾಗಬಹುದು. ಬೆವರಿಳಿಯಬಹುದು. ರಾತ್ರಿ ಮಲಗಿದ ಸಂದರ್ಭ ಇದ್ದಕ್ಕಿಂದ್ದಂತೆ ವಿಪರೀತ ಸೆಖೆಯಾಗಿ ನಿದ್ದೆಗೆಡಬಹುದು. ಇದಕ್ಕಾಗಿ, ನಿಮ್ಮ ಮಲಗುವ ಕೋಣೆಯನ್ನು ತಂಪಾಗಿಡಿ. ಜೊತೆಗೆ ಮಸಾಲೆ ಪದಾರ್ಥಗಳು ಹಾಗೂ ಕೆಫಿನ್‌ಯುಕ್ತ ಆಹಾರದಿಂದ ದೂರವಿರಿ.

stay awake till late night what is the problem For health

ನಿದ್ದೆಯ ಸಮಸ್ಯೆ

ಮಲಗಿದ ಮೇಲೆ ನಿದ್ದೆಗೆ ಜಾರಲು ಬಹಳ ಸಮಯ ಬೇಕಾಗಬಹುದು. ನಿದ್ದೆ ಬರುತ್ತಿದೆ ಎನಿಸಿದರೂ ಬಹಳ ಹೊತ್ತಿನವರೆಗೆ ನಿದ್ದೆ ಹತ್ತಿರ ಸುಳಿಯದು. ಹೀಗಾಗುತ್ತಿದ್ದರೆ, ಒಂದು ನಿಗದಿತ ಸಮಯಕ್ಕೆ ನಿದ್ದೆ ಮಾಡುವ ಅಭ್ಯಾಸ ಮಾಡಿಕೊಳ್ಳಿ. ಕೆಫಿನ್‌ ಹಾಗೂ ಗ್ಯಾಜೆಟ್‌ಗಳಿಂದ ದೂರವಿರಿ.

Foods are also responsible for relieving stress and increasing cheerfulness Foods That Lift Your Mood

ಮೂಡ್‌ ಬದಲಾವಣೆ

ಇದ್ದಕ್ಕಿದ್ದಂತೆ ಅನಗತ್ಯವಾಗಿ ಉದ್ವೇಗ, ಸಿಟ್ಟು, ಹತಾಶೆ, ಬೇಸರ ಇತ್ಯಾದಿ ಭಾವನೆಗಳು ಕೆಲವೊಮ್ಮೆ ಒತ್ತಾಗಿ ಬರಬಹುದು. ಕಾರಣವಿಲ್ಲದೆ ಬೇಸರದ ಛಾಯೆ ಕವಿದಿರಬಹುದು. ಅನಗತ್ಯವಾಗಿ ನಿಮ್ಮ ಪ್ರೀತಿಪಾತ್ರರ ಸಣ್ಣ ನಡೆಯೂ ಸಿಟ್ಟು ತರಿಸಬಹುದು. ಇದ್ದಕ್ಕಿದ್ದಂತೆ ಬೇರೊಬ್ಬರ ಮೇಲೆ ರೇಗುವುದು ಇತ್ಯಾದಿ ಮೂಡ್‌ ಬದಲಾವಣೆಯೂ ಮೆನೋಪಾಸ್‌ ಹತ್ತಿರ ಬರುತ್ತಿರುವುದರ ಕಾರಣಗಳೇ ಆಗಿವೆ. ನಿಮ್ಮ ಪ್ರೀತಿಪಾತ್ರರ ಬಳಿಯಲ್ಲಿ ಈ ಬಗ್ಗೆ ಚರ್ಚಿಸಿ, ವೈದ್ಯರಿಂದ ಸರಿಯಾದ ಸಲಹೆ ಮಾರ್ಗದರ್ಶನ ಪಡೆಯಿರಿ.

ಲೈಂಗಿಕ ನಿರಾಸಕ್ತಿ

ಸಂಗಾತಿಯ ಜೊತೆಗೆ ಸರಸ ಸಲ್ಲಾಪದಲ್ಲಿ ಆಸಕ್ತಿ ಇಲ್ಲದಿರುವುದು, ಅವರ ಕೋರಿಕೆ ಕಿರಿಕಿರಿಯಾಗುವುದು, ಲೈಂಗಿಕ ಕ್ರಿಯೆಯಲ್ಲಿ ಆಸಕ್ತಿ ಸಂಪೂರ್ಣವಾಗಿ ಕಡಿಮೆಯಾಗುವುದು ಇತ್ಯಾದಿಗಳೂ ಕೂಡಾ ಮೆನೋಪಾಸ್‌ ಪೂರ್ವ ಲಕ್ಷಣಗಳೇ ಆಗಿವೆ.

vagina

ಯೋನಿಯಲ್ಲಿ ತುರಿಕೆ

ಯೋನಿ ಒಣಗಿದಂತಾಗುವುದು, ಆ ಭಾಗದಲ್ಲಿ ತುರಿಕೆ ಇತ್ಯಾದಿ ಸಮಸ್ಯೆಗಳೂ ಮೆನೋಪಾಸ್‌ ಸಂದರ್ಭದಲ್ಲಿ ಆಗುವ ಸಂಭವ ಹೆಚ್ಚು. ಯೋನಿಗೆ ಹಚ್ಚಬಹುದಾದ ಲುಬ್ರಿಕೆಂಟ್‌ಗಳು, ಮುಲಾಮುಗಳು, ಮಾಯ್‌ಶ್ಚರೈಸರ್‌ಗಳನ್ನು ವೈದ್ಯರಿಂದ ಕೇಳಿ ಪಡೆಯುವ ಮೂಲಕ ಸಮಸ್ಯೆಯಿಂದ ಪಾರಾಗಬಹುದು. ರಾಸಾಯನಿಕಯುಕ್ತ ಸಾಬೂನುಗಳಿಂದ ಆ ಭಾಗವನ್ನು ಅತಿಯಾಗಿ ತೊಳೆಯುವುದು ಇತ್ಯಾದಿ ಮಾಡಬೇಡಿ. ಹೆಚ್ಚು ನೀರು ಕುಡಿಯುವುದು ಬಹಳ ಮುಖ್ಯ.

ಸ್ಮರಣ ಶಕ್ತಿ ಕುಂಠಿತ

ಸ್ಮರಣ ಶಕ್ತಿ ಕಡಿಮೆಯಾಘುವುದು, ತಾನು ಮಾಡಬೇಕಾದ ಕೆಸ ಕೆಲವೊಮ್ಮೆ ಮರೆತು ಹೋಗುವುದು ಇತ್ಯಾದಿಗಳೂ ಕೂಡಾ ಮೆನೋಪಾಸ್‌ ಪೂರ್ವ ಲಕ್ಷಣಗಳೇ. ಹೀಗಾಗಿ, ಮಾಡಬೇಕಾದ ಕೆಲಸಗಳು ಹಾಗೂ ಮರೆತು ಹೋಗಬಹುದು ಎಂಬುದನ್ನು ಡೈರಿಯಲ್ಲಿ ಬರೆದಿಟ್ಟುಕೊಂಡು ಕ್ರಮಬದ್ಧವಾಗಿ ಕೆಲಸ ಮಾಡುವ ಅಭ್ಯಾಸ ರೂಢಿಸಿಕೊಳ್ಳಿ.

Belly Fat Reduction

ತೂಕ ಹೆಚ್ಚಾಗುವುದು

ಮೆನೋಪಾಸ್‌ ಹತ್ತಿರ ಬರುತ್ತಿದ್ದಂತೆ ಬಹಳಷ್ಟು ಮಹಿಳೆಯಲ್ಲಿ ಕಾಣಿಸಿಕೊಳ್ಳುವ ಸಾಮಾನ್ಯ ಸಮಸ್ಯೆ ಎಂದರೆ ತೂಕ ಹೆಚ್ಚಾಗುವುದು. ಹೊಟ್ಟೆಯ ಹಾಗೂ ಸೊಂಟದ ಭಾಗದಲ್ಲಿ ತೂಕ ಏರುವುದು ಸಮಸ್ಯೆಯ ಭಾಗ. ಆರೋಗ್ಯಕರ ಆಹಾರ ಶೈಲಿ, ಹಣ್ಣು ತರಕಾರಿ ಸೊಪ್ಪು ಮೊಳಕೆ ಕಾಳುಗಳೂ ಸೇರಿದಂತೆ ಕ್ಯಾಲ್ಶಿಯಂಯುಕ್ತ ಆಹಾರವನ್ನು ಸೇವಿಸಿ. ವ್ಯಾಯಾಮವೂ ಬಹಳ ಮುಖ್ಯ.

ದೇಹದಲ್ಲಿ ಬಿಗು, ಮಾಂಸಖಂಡಗಳ ನೋವು

ಮಾಂಸಖಂಡಗಳ ಸೆಳೆತ, ನೋವು, ಗಂಟುಗಳಲ್ಲಿ ಬಿಗುತನ, ಸುಸ್ತಾಗುವಿಕೆ ಇತ್ಯಾದಿ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ನಿಯಮಿತ ವ್ಯಾಯಾಮ, ಚುರುಕಾಗಿ ಕೆಲಸಗಳಲ್ಲಿ ತೊಡಗಿಸಿಕೊಳ್ಳುವುದು, ಸರಿಯಾದ ಆಹಾರ ಕ್ರಮ ಇತ್ಯಾದಿಗಳ ಅಭ್ಯಾಸ ಬಿಡಬೇಡಿ. ವಿಟಮಿನ್‌ ಡಿ, ಕ್ಯಾಲ್ಶಿಯಂ, ಹಾಗೂ ಇತರ ಪೋಷಕಾಂಶಗಳ ಕೊರತೆಯಿದೆಯೇ ಎಂಬ ಪರೀಕ್ಷೆ ಮಾಡಿಸಿಕೊಂಡು ವೈದ್ಯರ ಸೂಕ್ತ ನೆರವಿನೊಂದಿಗೆ ಮುಂದುವರಿಯಿರಿ.

ಇದನ್ನೂ ಓದಿ: Personality Development: ಈ 10 ಸೂತ್ರ ಪಾಲಿಸಿದರೆ ನೆಮ್ಮದಿಯ ಬದುಕು ಗ್ಯಾರಂಟಿ!

ಕೂದಲು, ಚರ್ಮದ ಸಮಸ್ಯೆ

ಕೂದಲು ಉದುರುವಿಕೆ, ಸರ್ಮ ಒಣಕಲಾಗುವುದು ಇತ್ಯಾದಿ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಚರ್ಮ ಹಾಗೂ ಕೂದಲಲ್ಲಿ ನಿಮಗೆ ಗಣನೀಯ ಬದಲಾವಣೆ ಗೋಚರಿಸಬಹುದು. ಚೆನ್ನಾಗಿ ನೀರು ಕುಡಿಯಿರಿ. ಸೂರ್ಯನ ಬಿಸಿಲಿನಿಂದ ಚರ್ಮವನ್ನು ರಕ್ಷಿಸಿಕೊಳ್ಳಿ. ವ್ಯಾಯಾಮ, ನಿದ್ದೆ ಇವು ಸರಿಯಾಗಿ ಮಾಡಿ. ಕೂದಲು ಹಾಗೂ ಚರ್ಮದ ಪೋಷಣೆಯ ಕಾಳಜಿ ಮಾಡಿಕೊಳ್ಳಿ.

Continue Reading
Advertisement
T20 World Cup
ಪ್ರಮುಖ ಸುದ್ದಿ3 hours ago

T20 World Cup : ಕೊನೆಗೂ ದುರ್ಬಲ ಕೆನಾಡ ತಂಡದ ವಿರುದ್ಧ ಜಯ ಗಳಿಸಿದ ಪಾಕಿಸ್ತಾನ

Lt. General Upendra Dwivedi
ಪ್ರಮುಖ ಸುದ್ದಿ4 hours ago

Lt. General Upendra Dwivedi : ಸೇನಾ ಮುಖ್ಯಸ್ಥರಾಗಿ ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ ನೇಮಕ

Terrorist Killed
ಪ್ರಮುಖ ಸುದ್ದಿ4 hours ago

Terrorist Killed : ಜಮ್ಮು ಕಾಶ್ಮೀರದಲ್ಲಿ ಉಗ್ರನೊಬ್ಬನ್ನು ಹೊಡೆದುರುಳಿಸಿದ ಭದ್ರತಾ ಪಡೆ

Joe Biden
ಪ್ರಮುಖ ಸುದ್ದಿ5 hours ago

Joe Biden : ಬಂದೂಕು ಪ್ರಕರಣದಲ್ಲಿ ಅಮೆರಿಕ ಅಧ್ಯಕ್ಷ ಜೊ ಬೈಡೆನ್ ಪುತ್ರ ತಪ್ಪಿತಸ್ಥ; ಕಾದಿದೆ 25 ವರ್ಷ ಜೈಲು ಶಿಕ್ಷೆ

Pavithra Gowda
ಕರ್ನಾಟಕ5 hours ago

Pavithra Gowda: ಬಂಧನದ ಭಯವಿಲ್ಲದೇ ನಗುತ್ತಾ ಸಾಂತ್ವನ ಕೇಂದ್ರಕ್ಕೆ ಹೋದ ಪವಿತ್ರಾ ಗೌಡ!

Priyanka Gandhi:
ಪ್ರಮುಖ ಸುದ್ದಿ6 hours ago

Priyanka Gandhi : ವಾರಾಣಸಿಯಲ್ಲಿ ಪ್ರಿಯಾಂಕ ಸ್ಪರ್ಧಿಸಿದ್ದರೆ ಮೋದಿ ಸೋಲುತ್ತಿದ್ದರು; ರಾಹುಲ್​ ಗಾಂಧಿ

CM Siddaramaiah
ಕರ್ನಾಟಕ6 hours ago

CM Siddaramaiah: ಗಣಿಗಳ ಹರಾಜು ಪ್ರಕ್ರಿಯೆ ಕೂಡಲೇ ಕೈಗೆತ್ತಿಕೊಳ್ಳಲು ಸಿಎಂ ಸೂಚನೆ

Modi Ka Parivar
ಪ್ರಮುಖ ಸುದ್ದಿ6 hours ago

Modi Ka Parivar : ಸೋಶಿಯಲ್​ ಮೀಡಿಯಾ ಹ್ಯಾಂಡಲ್​​ಗಳಿಂದ ‘ಮೋದಿ ಕಾ ಪರಿವಾರ್​’ ತೆಗೆಯಲು ಸೂಚನೆ

Rajeev Taranath
ಕರ್ನಾಟಕ6 hours ago

Rajeev Taranath: ಖ್ಯಾತ ಸರೋದ್‌ ವಾದಕ ರಾಜೀವ್ ತಾರಾನಾಥ್ ಇನ್ನಿಲ್ಲ

Aishwarya Arjun
ಪ್ರಮುಖ ಸುದ್ದಿ7 hours ago

Aishwarya Arjun : ಚೆನ್ನೈನಲ್ಲಿ ವಿವಾಹವಾದ ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯಾ ಅರ್ಜುನ್​; ಇಲ್ಲಿವೆ ಚಿತ್ರಗಳು

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ10 hours ago

Karnataka Weather : ಭಾರಿ ಮಳೆಗೆ ಗುಡ್ಡದಿಂದ ಉರುಳಿ ಬಿದ್ದ ಬಂಡೆಗಲ್ಲು; ಬೆಂಗಳೂರಲ್ಲೂ ಸಂಜೆ ವರ್ಷಧಾರೆ

actor Darshan
ಚಿತ್ರದುರ್ಗ11 hours ago

Actor Darshan: ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್‌ ಅರೆಸ್ಟ್‌; ಪ್ರಕರಣವನ್ನು ಸಿಬಿಐಗೆ ವಹಿಸಲು ಒತ್ತಾಯ

Actor Darshan gets a series of questions from the police
ಸಿನಿಮಾ12 hours ago

Actor Darshan : ಪವಿತ್ರಗೌಡ ಬಗ್ಗೆ ಪೋಸ್ಟ್‌ ಮಾಡಿದ್ರೆ ನಿಮಗ್ಯಾಕೆ ಕೋಪ? ದರ್ಶನ್‌ಗೆ ಪೊಲೀಸರ ಪ್ರಶ್ನೆಗಳ ಸುರಿಮಳೆ

Actor Darshan
ಸಿನಿಮಾ14 hours ago

Actor Darshan : ದರ್ಶನ್‌ ಜೈಲಿಗೆ ಹೋಗುತ್ತಿರುವುದು ಇದೇ ಮೊದಲಲ್ಲ; ನಟನ ಮೇಲಿವೆ ಹತ್ತಾರು ಕೇಸ್‌ಗಳು!

Saptami Gowda
ಸಿನಿಮಾ16 hours ago

Saptami Gowda : ಯುವ ಪತ್ನಿ ಶ್ರೀದೇವಿ ವಿರುದ್ಧ ಮಾನಹಾನಿ ಕೇಸ್; ಕಾನೂನು ಹೋರಾಟಕ್ಕೆ ಮುಂದಾದ ನಟಿ ಸಪ್ತಮಿ ಗೌಡ!

Karnataka weather Forecast
ಮಳೆ1 day ago

Karnataka Weather : ಭಾರಿ ಮಳೆಗೆ ಮನೆ ಗೋಡೆ ಕುಸಿದು ಎಮ್ಮೆಗಳು ಸಾವು; ಆಕಳಿನ ಜೀವ ತೆಗೆದ ವಿದ್ಯುತ್‌ ತಂತಿ

Karnataka weather Forecast
ಮಳೆ4 days ago

Karnataka weather : ಮಳೆಯಲ್ಲೆ ತಪಸ್ಸಿಗೆ ಕುಳಿತ ವೃದ್ಧ; ಇನ್ನೊಂದು ವಾರ ನಾನ್‌ ಸ್ಟಾಪ್‌ ವರುಣನ ಅಬ್ಬರ

Sigandur launch
ಶಿವಮೊಗ್ಗ4 days ago

Sigandur launch: ಸಿಗಂದೂರು ಲಾಂಚ್‌ನಲ್ಲಿ ಭಾರಿ ವಾಹನಗಳಿಗೆ ನಿರ್ಬಂಧ

Karnataka Rain
ಮಳೆ6 days ago

Karnataka Rain : ಭಾರಿ ಮಳೆಗೆ ಮರ ಬಿದ್ದು ಮೇಕೆಗಳು ಸಾವು; ಸಿಡಿಲಿಗೆ ಎಲೆಕ್ಟ್ರಿಕ್‌ ಅಂಗಡಿ ಸುಟ್ಟು ಭಸ್ಮ

Lok Sabha Election Result 2024 Live
ದೇಶ1 week ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

ಟ್ರೆಂಡಿಂಗ್‌