Tips for Healthy Travel: ಪ್ರವಾಸ ಮಾಡುತ್ತಿದ್ದೀರಾ? ಆಹಾರದ ಸಮತೋಲನಕ್ಕಾಗಿ ಹೀಗೆ ಮಾಡಿ - Vistara News

ಆರೋಗ್ಯ

Tips for Healthy Travel: ಪ್ರವಾಸ ಮಾಡುತ್ತಿದ್ದೀರಾ? ಆಹಾರದ ಸಮತೋಲನಕ್ಕಾಗಿ ಹೀಗೆ ಮಾಡಿ

ಪ್ರವಾಸದ ಸಂದರ್ಭದಲ್ಲಿ  (Tips for Healthy Travel) ಸಾಮಾನ್ಯವಾಗಿ ಆರೋಗ್ಯ ಏರುಪೇರಾಗುವುದು ಹೆಚ್ಚು. ಪ್ರಯಾಣ ಮಾಡುವಾಗ ಆಹಾರದ ಸಮತೋಲನ ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ.

VISTARANEWS.COM


on

Tips for Healthy Travel
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಸುತ್ತಾಟಗಳ ಸಂದರ್ಭದಲ್ಲಿ (Tips for Healthy Travel) ಸಿಕ್ಕಿದ್ದೆಲ್ಲಾ ತಿನ್ನುವ ಅನಿವಾರ್ಯತೆಗೆ ಸಿಲುಕುವುದೇ ಹೆಚ್ಚು. ಅಥವಾ ಕಂಡಿದ್ದನ್ನು ತಿನ್ನುವ ಚಪಲವೂ ಕಾಡಬಹುದು. ಯಾವುದೋ ಹೊತ್ತಿಗೆ ಸರಿಯಾಗಿ ಊಟ ಸಿಗಲಿಲ್ಲ ಎನ್ನುವ ಕಾರಣಕ್ಕೆ, ಏನೋ ಕರುಂಕುರುಂ ತಿಂದುಕೊಂಡು, ಮುಂದೆ ಒಳ್ಳೆಯ ಆಹಾರ ಸಿಕ್ಕಿದಲ್ಲಿ ಹೊಟ್ಟೆಬಿರಿ ತಿನ್ನಬಹುದು. ಪ್ರವಾಸದಲ್ಲಿ (Eat Healthy during Vacation) ಆಹಾರ ಸರಿಮಾಡಿಕೊಳ್ಳಲು ಸಾಧ್ಯವೇ?

Eat Healthy during Vacation

ಪ್ರಯಾಣ, ರಜೆ, ಮೋಜು, ಮಸ್ತಿಯೆಂದರೆ ಹುರುಪಿನಿಂದಲೇ ತಯಾರಾಗುತ್ತೇವೆ. ನಾವೇ ಡ್ರೈವ್‌ ಮಾಡಿದರೂ, ರೈಲು, ವಿಮಾನು ಮುಂತಾದ ಸಾರ್ವಜನಿಕ ಸಂಪರ್ಕ ತೆಗೆದುಕೊಂಡರೂ- ಪ್ರಯಾಣಕ್ಕೆ ಸಿದ್ಧತೆಯನ್ನಂತೂ ಮಾಡಲೇಬೇಕು. ಸುತ್ತಾಟಗಳ ಸಂದರ್ಭದಲ್ಲಿ ಸಿಕ್ಕಿದ್ದೆಲ್ಲಾ ತಿನ್ನುವ ಅನಿವಾರ್ಯತೆಗೆ ಸಿಲುಕುವುದೇ ಹೆಚ್ಚು. ಅಥವಾ ಕಂಡಿದ್ದನ್ನು ತಿನ್ನುವ ಚಪಲವೂ ಕಾಡಬಹುದು. ಉದಾ, ಬೆಳಗಿನ ತಿಂಡಿಗೆ ಇಡ್ಲಿ, ದೋಸೆಯಂಥ ಆಯ್ಕೆ ಮನದಲ್ಲಿದ್ದರೂ ಮೆನುದಲ್ಲಿ ಕಂಡ ಪೂರಿ, ಬನ್ಸ್‌ನಂಥವು ಮನ ಸೆಳೆಯಬಹುದು. ಯಾವುದೋ ಹೊತ್ತಿಗೆ ಸರಿಯಾಗಿ ಊಟ ಸಿಗಲಿಲ್ಲ ಎನ್ನುವ ಕಾರಣಕ್ಕೆ, ಏನೋ ಕರುಂಕುರುಂ ತಿಂದುಕೊಂಡು, ಮುಂದೆ ಒಳ್ಳೆಯ ಆಹಾರ ಸಿಕ್ಕಿದಲ್ಲಿ ಹೊಟ್ಟೆಬಿರಿ ತಿನ್ನಬಹುದು. ಇಂಥವೆಲ್ಲಾ ಪ್ರಯಾಣದ ದಿನಗಳಲ್ಲಿ ನಮ್ಮ ಆರೋಗ್ಯ ಕೆಡುವುದಕ್ಕೆ ಮತ್ತು ತೂಕ ಹೆಚ್ಚುವುದಕ್ಕೆ ಕಾರಣವಾಗುತ್ತವೆ. ಹಾಗಾದರೆ ಪ್ರವಾಸದ ದಿನಗಳಲ್ಲಿ ನಾವು (Eat Healthy during Vacation) ಅನುಸರಿಸಬೇಕಾದ ಆಹಾರಕ್ರಮಗಳೇನು?

ಬಾಯಾಡುವುದಕ್ಕೆ ನಿಮ್ಮಲ್ಲೇ ಇರಲಿ

ಬೆಳಗಿನ ತಿಂಡಿ, ಆಮೇಲಿನ ಎರಡು ಊಟಗಳನ್ನು ಎಲ್ಲಾದರೂ ವ್ಯವಸ್ಥೆ ಮಾಡಿಕೊಂಡರೂ, ನಡುವಿನ ಹಸಿವೆಗಳಿಗೆ ಬೇಕಾದ ತಿನಿಸುಗಳನ್ನು ನೀವೇ ತಂದುಕೊಳ್ಳಿ. ಗುಡ್‌ಲೈಫ್‌ ಮಾದರಿಯ ಹಾಲುಗಳು, ಪ್ರೊಟೀನ್‌ ಬಾರ್‌ಗಳು, ಹಣ್ಣುಗಳು, ಬೀಜಗಳು, ಒಣಹಣ್ಣುಗಳು, ಮನೆಯಲ್ಲೇ ಮಾಡಿ ತರಬಹುದಾದ ಲಡ್ಡುಗಳು- ಮುಂತಾದವುಗಳನ್ನು ಹೊರಡುವಾಗಲೇ ತಂದುಕೊಳ್ಳಿ. ಅಥವಾ ಪ್ರವಾಸ ಹೋದ ಸ್ಥಳದಲ್ಲಿ ಇಂಥವು ಹೇರಳವಾಗಿ ಲಭ್ಯವಿದೆ ಎಂಬುದು ಖಾತ್ರಿಯಿದ್ದರೆ, ಅಲ್ಲಾದರೂ ಖರೀದಿಸಿ. ಆದರೆ ದಾರಿಯಲ್ಲಿ ಸಿಕ್ಕಿದ್ದನ್ನು ತಿಂದರಾಯಿತು ಎನ್ನುವ ಆಯ್ಕೆ ಕೈಕೊಡುವುದೇ ಹೆಚ್ಚು.

morning breakfast while travel don't miss it

ಬೆಳಗಿನ ತಿಂಡಿ ತಪ್ಪಿಸಬೇಡಿ

ಬೆಳಗ್ಗೆ ತಿಂಡಿ ತಿನ್ನುತ್ತಾ ಕುಳಿತರೆ ಹೊತ್ತಾಗುತ್ತದೆ ಎನ್ನುವ ಭಾವನೆ ಹಲವರಲ್ಲಿ ಇರುತ್ತದೆ. ಆದರೆ ವಾಸ್ತವ್ಯದ ಹೊಟೆಲ್‌ನಿಂದ ಬೆಳಗ್ಗೆ ಹೊರಬೀಳುವಾಗ ತಿಂಡಿ ತಿಂದೇ ಹೋಗುವ ಅಭ್ಯಾಸ ಇಟ್ಟುಕೊಳ್ಳಿ. ಹೋಗ್ತಾ ದಾರಿಯಲ್ಲಿ ತಿಂದರಾಯಿತು ಎಂದುಕೊಂಡ ದಿನವೇ ಏನೂ ದೊರೆಯದೆ ಹೋಗಬಹುದು. ಆಗ ಮತ್ತೆ ಕೈ ಹೋಗುವುದು ಜಂಕ್‌ಗಳತ್ತ. ಹಸಿದಾಗ ಇವುಗಳನ್ನು ಹೊಟ್ಟೆಗೆ ತುಂಬಿಸುವುದರಿಂದ ಹೊಟ್ಟೆ ಹಾಳಾಗುವುದು ನಿಶ್ಚಿತ. ಅಲ್ಲಿಗೆ ಪ್ರವಾಸ ಮಗುಚಿಬೀಳಬಹುದು. ಬೆಳಗಿನ ತಿಂಡಿಗೆ ಆದಷ್ಟೂ ದೋಸೆ, ಇಡ್ಲಿ, ಉಪ್ಪಿಟ್ಟು, ಆಮ್ಲೆಟ್‌, ಚಪಾತಿಯಂಥ ಆರೋಗ್ಯಕರ ತಿಂಡಿಗಳನ್ನೇ ಆಯ್ಕೆ ಮಾಡಿಕೊಳ್ಳಿ.

ಆಯ್ಕೆಯತ್ತ ಗಮನ ಕೊಡಿ

ಪ್ರವಾಸೀ ತಾಣಗಳ ಸುತ್ತ ಮುತ್ತ ಇರುವಂಥ ರೆಸ್ಟೋರೆಂಟ್‌ಗಳನ್ನು ಆಯ್ಕೆ ಮಾಡಬಾರದೆಂದಲ್ಲ; ಅಥವಾ ಯಾವುದೋ ಊರಿನ ವಿಶೇಷ ಖಾದ್ಯಗಳನ್ನು ಸವಿಯುವುದರಲ್ಲಿ ಖಂಡಿತಕ್ಕೂ ತಪ್ಪಿಲ್ಲ. ಆದರೆ ಸ್ಥಳಗಳ ಸ್ವಚ್ಛತೆಯ ಬಗ್ಗೆ ಗಮನಕೊಡಿ. ಮೆನುದಲ್ಲಿರುವ ಆಹಾರಗಳು ಗೊತ್ತಿಲ್ಲದಿದ್ದರೆ, ಕೇಳಿ ತಿಳಿಯಿರಿ. ಆಹಾರದಲ್ಲಿ ಸಿಹಿ ಅಥವಾ ಕೊಬ್ಬು ಹೆಚ್ಚಿದೆ ಎನಿಸಿದರೆ, ಅದನ್ನು ಹಂಚಿಕೊಂಡು ತಿನ್ನಲು ಪ್ರಯತ್ನಿಸಿ. ಮಧ್ಯಾಹ್ನದ ಊಟವೇ ಭರಪೂರ ಆಗಿದೆ ಎನಿಸಿದರೆ, ರಾತ್ರಿಯೂಟವನ್ನು ಮಿತಗೊಳಿಸಿ. ಹೊಟ್ಟೆಗೂ ಕೊಂಚ ಆರಾಮ ನೀಡಿ. ಹೊಸ ರುಚಿ ಸವಿಯುತ್ತಿದ್ದರೆ, ಒಂದೊಂದು ತುತ್ತನ್ನೂ ಸವಿಯಿರಿ. ಏನನ್ನು ಮತ್ತು ಎಷ್ಟು ತಿನ್ನುತ್ತಿದ್ದೀರಿ ಎಂಬ ಬಗ್ಗೆ ಗಮನಕೊಡಿ

ಕಿಚನ್‌ ಇದೆಯೇ?

ಕೆಲವು ಹೊಟೆಲ್‌ ಕೋಣೆಗಳಲ್ಲಿ ಸಣ್ಣದೊಂದು ಕಿಚನ್‌ ಇರುವುದಕ್ಕುಂಟು. ಪೂರಾ ಅಡುಗೆಮನೆಯೇ ಅಲ್ಲದಿದ್ದರೂ, ಸಣ್ಣ ಕೌಂಟರ್‌ ಇದ್ದರೂ ಅನುಕೂಲವಾದೀತು. ಅದರಲ್ಲೂ ಮಕ್ಕಳು, ವಯಸ್ಸಾದವರೊಂದಿಗೆ ಪ್ರಯಾಣ ಮಾಡುತ್ತಿದ್ದರೆ ಇಂಥವು ಅಗತ್ಯವಾಗುತ್ತವೆ. ಅದರಲ್ಲೂ ಹೊರದೇಶಗಳಿಗೆ ಪ್ರವಾಸ ಹೋದಾಗ, ಅಲ್ಲಿ ನಮಗೆ ಬೇಕಾದಂಥ ಆಹಾರ ದೊರೆಯದಿದ್ದರೆ ಸಿಕ್ಕಿದ್ದು ತಿಂದು ಜೀವ ಹಿಡಿದುಕೊಳ್ಳುವ ಬದಲು ಇಂಥವುಗಳ ಆಯ್ಕೆ ಜಾಣತನ.

Woman Drinking Water

ನೀರು ಕುಡಿಯುತ್ತಿದ್ದೀರಾ?

ಪ್ರವಾಸದ ಸಂದರ್ಭದಲ್ಲಿ ಸ್ವಚ್ಛವಾದ ಶೌಚಾಲಯಗಳು ದೊರೆಯದಿದ್ದರೆ ಎಂಬ ಚಿಂತೆಯಲ್ಲಿ ನೀರು ಕುಡಿಯುವುದನ್ನೇ ಕಡಿಮೆ ಮಾಡುವವರು ಬಹಳ ಮಂದಿಯಿದ್ದಾರೆ. ಇದು ಅಪಾಯಕ್ಕೆ ಆಹ್ವಾನ ನೀಡಿದಂತೆ. ದೇಹ ನಿರ್ಜಲೀಕರಣಕ್ಕೆ ಸಿಲುಕುವುದರ ಜೊತೆಗೆ ಜೀರ್ಣಾಂಗಗಳ ಕ್ಷಮತೆಯೂ ಕ್ಷೀಣಿಸುತ್ತದೆ. ಹೋದ ಸ್ಥಳಗಳಲ್ಲಿ ಅಲ್ಕೋಹಾಲ್‌ ಸೇವಿಸಿದರಂತೂ ದೇಹ ಮತ್ತಷ್ಟು ನೀರಿಲ್ಲದಂತಾಗಿ ಬಳಲುತ್ತದೆ. ಹಾಗಾಗಿ ಚೆನ್ನಾಗಿ ನೀರು ಕುಡಿಯಿರಿ

ಪ್ರಯಾಣಿಸುವಾಗ

ವಿಮಾನ, ರೈಲುಗಳಲ್ಲಿ ಸರಿಯಾದ ಆಹಾರ ದೊರೆಯದಿದ್ದರೆ ನಿಲ್ದಾಣಗಳಲ್ಲಿ ಆರೋಗ್ಯಕರ (Eat Healthy during Vacation) ಆಯ್ಕೆಗಳಿವೆಯೇ ಪರಿಶೀಲಿಸಿ. ಅದಿಲ್ಲದಿದ್ದರೆ ಬಿಸಿನೀರು ಹಾಕಿದರೆ ಸಿದ್ಧವಾಗುವಂಥ ಆಹಾರಗಳು ಸಹ ನಮ್ಮ ನೆರವಿಗೆ ಬರಬಹುದು. ಆರಾಮದಾಯಕ ಧಿರಿಸುಗಳನ್ನು ಧರಿಸಿ, ಹೊಟ್ಟೆಯ ಸುತ್ತ ಬಿಗಿಯಾದ ಉಡುಪುಗಳು ಜೀರ್ಣಾಂಗದ ಮೇಲೆ ಒತ್ತಡ ಹಾಕಬಹುದು. ಸಾಧ್ಯವಿದ್ದಷ್ಟೂ ಚಟುವಟಿಕೆಯಿಂದಿರಿ. ವಾಕಿಂಗ್‌ನಂಥ ಸರಳ ವ್ಯಾಯಾಮಗಳಿಗೆ ಸಮಯ ದೊರೆತರೆ ಒಳ್ಳೆಯದು.

ಇದನ್ನೂ ಓದಿ: Dates Health Benefits: ಸಮೃದ್ಧ ಹಣ್ಣು ಖರ್ಜೂರವನ್ನು ನಾವು ಏಕೆ ಬೆಳಗ್ಗೆ ತಿನ್ನಬೇಕು ಗೊತ್ತೇ?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಆರೋಗ್ಯ

World Milk Day: ಹಾಲಿಗೊಂದು ದಿನವೇ ಬೇಕೆಂದಿಲ್ಲ, ವರ್ಷವಿಡೀ ಆಚರಿಸಬಹುದು!

ಹಾಲು ಸರ್ವರಿಗೂ ಸಲ್ಲುವಂಥ ಆಹಾರ. ವಿಶ್ವದ ಎಲ್ಲ ದೇಶಗಳಲ್ಲಿ ಇದನ್ನು ಒಂದಿಲ್ಲೊಂದು ರೀತಿಯಲ್ಲಿ ನಿಶ್ಚಿತವಾಗಿ ಬಳಸುತ್ತಾರೆ. ಹಾಗಾಗಿಯೇ ಜೂನ್‌ ತಿಂಗಳ ಮೊದಲ ದಿನವನ್ನು ವಿಶ್ವ ಕ್ಷೀರ ದಿನವೆಂದು ಗುರುತಿಸಿದ್ದಾರೆ. ಆದರೆ ಅದೇ ದಿನಕ್ಕೆ ಕಾಯಬೇಕಿಲ್ಲ, ವರ್ಷವಿಡೀ ಕ್ಷೀರ ದಿನವನ್ನು (World Milk Day) ಆಚರಿಸಬಹುದು.

VISTARANEWS.COM


on

World Milk Day
Koo

ಹಾಲನ್ನೇಕೆ ಕುಡಿಯಬೇಕು ಎಂದು ಕೇಳಿದರೆ ಯಾರಾದರೂ ನಕ್ಕಾರು. ಹಾಗಂತ ನಗುವವರಿಗೆಲ್ಲ ಹಾಲಿನ ಸದ್ಗುಣಗಳು ಗೊತ್ತಿರುತ್ತವೆ ಎಂದಲ್ಲ. ಆದರೆ ಹಾಲು ಪೌಷ್ಟಿಕವಾದ ಆಹಾರ ಎಂಬುದನ್ನಂತೂ ಎಲ್ಲರೂ ಕೇಳಿ ತಿಳಿದಿರುತ್ತಾರೆ. ಏನಿವೆ ಅಂಥ ಪೌಷ್ಟಿಕಾಂಶಗಳು ಹಾಲಿನಲ್ಲಿ? ಎಲ್ಲರೂ ಹಾಲನ್ನು ಕುಡಿಯುವುದಕ್ಕೆ ಮಾತ್ರ ಬಳಸುತ್ತಾರೆಂದಿಲ್ಲ. ಮೊಸರು, ಬೆಣ್ಣೆ, ತುಪ್ಪ, ಚೀಸ್‌, ಪನೀರ್‌ಗಳನ್ನು ಮಾಡಬಹುದು. ಹಾಲಿನಲ್ಲಿ ಸಿಹಿಗಳನ್ನು ತಯಾರಿಸಬಹುದು, ಶೇಖ್‌ ಮತ್ತು ಸ್ಮೂದಿಗಳಿಗೆ ಬಳಸಬಹುದು, ಸೀರಿಯಲ್‌ಗಳಿಗೆ ಹಾಕಿ ತಿನ್ನಬಹುದು. ಅಂತೂ ಹಾಲು ಎಲ್ಲರಿಗೂ ಎಲ್ಲ ಹೊತ್ತಿಗೂ ಸಲ್ಲುವಂಥದ್ದು. ಹಾಗಾಗಿ ಜೂನ್‌ ತಿಂಗಳ ಮೊದಲ ದಿನವನ್ನು ವಿಶ್ವ ಕ್ಷೀರ ದಿನವೆಂದು ಗುರುತಿಸಿದ್ದರೂ, ನಾವು ವರ್ಷವಿಡೀ ಕ್ಷೀರ ದಿನವನ್ನು (World Milk Day) ಆಚರಿಸಬಹುದು.

glass of milk

ಕ್ಯಾಲ್ಶಿಯಂ ಹೇರಳ

ನಮ್ಮ ಮೂಳೆಗಳು, ಹಲ್ಲುಗಳೆಲ್ಲ ಬಲಯುತವಾಗಿ ಇರಬೇಕೆಂದರೆ ಕ್ಯಾಲ್ಶಿಯಂ ಬೇಕು. ಕೇವಲ ಅದಕ್ಕಷ್ಟೇ ಅಲ್ಲ, ನಾವು ಮಾಡುವ ಪ್ರತಿಯೊಂದು ದೈಹಿಕ ಚಟುವಟಿಕೆಗೂ ಕ್ಯಾಲ್ಶಿಯಂ ಬಲದ ಅಗತ್ಯವಿದೆ. ಮೂಳೆಗಳು ಟೊಳ್ಳಾಗದಂತೆ, ಅವುಗಳ ಸಾಂದ್ರತೆ ಕಾಪಾಡಿಕೊಳ್ಳುವುದಕ್ಕೂ ಇದು ಬೇಕು. ಹಾಗಾಗಿ ದಿನಕ್ಕೆ 150 ಎಂ.ಎಲ್‌. ಗ್ಲಾಸ್‌ನಲ್ಲಿ ಮೂರು ಗ್ಲಾಸ್‌ ಹಾಲು ನಮ್ಮ ನಿತ್ಯದ ಕ್ಯಾಲ್ಶಿಯಂ ಅಗತ್ಯವನ್ನು ಪೂರೈಸುತ್ತದೆ.

ಉತ್ಕೃಷ್ಟ ಪ್ರೊಟೀನ್‌

ಹಾಲಿನಲ್ಲಿ ಉತ್ಕೃಷ್ಟ ಗುಣಮಟ್ಟದ ಪ್ರೊಟೀನ್‌ ದೊರೆಯುತ್ತದೆ. ಸ್ನಾಯುಗಳ ಬೆಳವಣಿಗೆ ಮತ್ತು ದುರಸ್ತಿಗೆ ಇಂಥ ಪರಿಪೂರ್ಣ ಪ್ರೊಟೀನ್‌ ಅಗತ್ಯ. ಅದರಲ್ಲೂ ಬೆಳೆಯುವ ಮಕ್ಕಳ ದೇಹಕ್ಕೆ ಆವಶ್ಯಕವಾದ ಪ್ರೊಟೀನ್‌ಗಳು ಹಾಲಿನಲ್ಲಿವೆ. ಗರ್ಭಿಣಿಯರಿಗೆ, ಬಾಣಂತಿಯರಿಗೆ, ಋತುಬಂಧದ ಆಚೀಚೆ ಇರುವ ಮಹಿಳೆಯರಿಗೆ, ವೃದ್ಧರಿಗೆ- ಹೀಗೆ ಎಲ್ಲ ವಯಸ್ಸಿನವರಿಗೂ ಅವರವರ ಅಗತ್ಯಗಳನ್ನು ಪೂರೈಸುವಂಥ ಪೋಷಕಾಂಶಗಳು ಹಾಲಿನಲ್ಲಿವೆ.

Fresh Milk

ವಿಟಮಿನ್‌, ಖನಿಜಗಳು

ಬಹಳಷ್ಟು ರೀತಿಯ ಜೀವಸತ್ವಗಳು ಮತ್ತು ಖನಿಜಗಳು ಹಾಲಿನಲ್ಲಿವೆ. ವಿಟಮಿನ್‌ ಡಿ, ವಿಟಮಿನ್‌ ಬಿ12, ರೈಬೊಪ್ಲೇವಿನ್‌, ಫಾಸ್ಫರಸ್‌, ಪೊಟಾಶಿಯಂ, ಸೆಲೆನಿಯಂ, ಮೆಗ್ನೀಶಿಯಂ ಮುಂತಾದ ಸತ್ವಗಳು ಇದರಲ್ಲಿವೆ. ಇವೆಲ್ಲವೂ ನಮ್ಮ ಶರೀರದ ಶಕ್ತಿಯನ್ನು ಸುಸ್ಥಿರವಾಗಿ ಕಾಯ್ದುಕೊಳ್ಳುವುದಕ್ಕೆ ಬೇಕಾದಂಥವು. ಅದಲ್ಲದೆ, ನರಗಳ ಕ್ಷಮತೆ ಕಾಯ್ದುಕೊಳ್ಳುವುದಕ್ಕೆ ಮತ್ತು ಶರೀರದ ಚಯಾಪಚಯ ನಿರ್ವಹಣೆಯಲ್ಲೂ ಇವು ಪ್ರಮುಖವಾಗಿವೆ.

ಸತ್ವಗಳು ಇಷ್ಟೇ ಅಲ್ಲ

ಒಂದು ಲೋಟ ಹಸುವಿನ ಹಾಲಿನಿಂದ 145 ಕ್ಯಾಲರಿ ಶಕ್ತಿ ದೊರೆಯುತ್ತದೆ. ಅದರಲ್ಲಿ ಸುಮಾರು 8 ಗ್ರಾಂ ಪ್ರೊಟೀನ್‌, ಅಷ್ಟೇ ಪ್ರಮಾಣದ ಕೊಬ್ಬು, ಶೇ. 28ರಷ್ಟು ಕ್ಯಾಲ್ಶಿಯಂ, 24% ವಿಟಮಿನ್‌ ಡಿ, 26% ವಿಟಮಿನ್‌ ಬಿ2, 18% ವಿಟಮಿನ್‌ ಬಿ12, 22% ಫಾಸ್ಫರಸ್‌, 13% ಸೆಲೆನಿಯಂ ಇದರಲ್ಲಿ ಪ್ರಮುಖವಾಗಿ ದೊರೆಯುತ್ತದೆ. ಇದಲ್ಲದೆ, ವಿಟಮಿನ್‌ ಎ, ಸತು ಮತ್ತು ಥಿಯಮಿನ್‌ ಸಹ ಇವೆ.

Food Tips Kannada adulterated food effect health

ಎಲ್ಲದಕ್ಕೂ ಸಲ್ಲುತ್ತದೆ

ಕಾಫಿ, ಚಹಾ, ಮಿಲ್ಕ್‌ಶೇಖ್‌, ಸ್ಮೂದಿ, ಸೀರಿಯಲ್‌ಗಳು, ಪಾಯಸ, ಖೀರು, ಹಲ್ವಾಗಳು, ಕೇಕ್‌ಗಳು, ಗ್ರೇವಿಗಳು ಮುಂತಾದ ಬಹಳಷ್ಟು ರೀತಿಯ ಅಡುಗೆಗಳಿಗೆ ಹಾಲು ನೇರವಾಗಿ ಸಲ್ಲುತ್ತದೆ. ಅದಲ್ಲದೆ, ಮೊಸರು, ಚೀಸ್‌, ಪನೀರ್‌, ಬೆಣ್ಣೆ-ತುಪ್ಪಗಳನ್ನು ಇನ್ನೂ ಹೆಚ್ಚಿನ ಆಹಾರಗಳಿಗೆ ಪೂರಕವಾಗಿ ಬಳಸಬಹುದು. ಹಾಗೆಂದು ಹಾಲಿನ ಕೊಬ್ಬಿನಿಂದ ಮಾಡಿದ ಪದಾರ್ಥಗಳನ್ನು ಅತಿಯಾಗಿ ಸೇವಿಸಿದರೆ ತೂಕ ಹೆಚ್ಚಬಹುದು.

ಇದನ್ನೂ ಓದಿ: Cardamom Benefits: ಏಲಕ್ಕಿ ಕೇವಲ ಘಮದಲ್ಲಷ್ಟೇ ಅಲ್ಲ, ಇದರ ಪ್ರಯೋಜನಗಳು ಎಷ್ಟೊಂದು!

ಜಾಗ್ರತೆ ಮಾಡಿ

ಹಾಲು ಸರ್ವರಿಗೂ ಸಲ್ಲುವಂಥ ಆಹಾರ. ಅನಾರೋಗ್ಯದ ಸಂದರ್ಭಗಳಲ್ಲೂ ಕೆಲವೊಮ್ಮೆ ಹಾಲಿನ ಸೇವನೆ ಪ್ರಯೊಜನ ನೀಡಬಹುದು. ಆದರೆ ಅತಿ ಸ್ಥೂಲ ದೇಹಿಗಳು ಮತ್ತು ಕೆಲವು ಆರೋಗ್ಯ ಸಮಸ್ಯೆ ಇರುವವರು ಎಚ್ಚರ ವಹಿಸುವುದು ಅಗತ್ಯ. ಈಗಾಗಲೇ ಬೊಜ್ಜಿನ ಸಮಸ್ಯೆ ಇದ್ದವರು ಕಡಿಮೆ ಕೊಬ್ಬಿನ ಹಾಲನ್ನು ಸೇವಿಸುವುದು ಉತ್ತಮ. ಏರಿದ ಕೊಲೆಸ್ಟ್ರಾಲ್‌, ಹೃದಯ ರೋಗಗಳನ್ನು ಹೊಂದಿದವರು ಸಹ ಕೊಬ್ಬು ರಹಿತ ಹಾಲು ಕುಡಿಯುವುದು ಒಳ್ಳೆಯ ಆಯ್ಕೆ. ಲ್ಯಾಕ್ಟೋಸ್‌ ಅಲರ್ಜಿ ಇರುವವರಿಗೆ ಹಾಲು ಆಗಿ ಬರುವುದಿಲ್ಲ. ಒಂದೊಮ್ಮೆ ಹಾಲು ಸೇವಿಸಿದರೂ ಹೊಟ್ಟೆ ನೋವು, ಹೊಟ್ಟೆಯುಬ್ಬರ, ಡಯರಿಯಾದಂಥ ತೊಂದರೆಗಳು ಬಾಧಿಸಬಹುದು.

Continue Reading

ಆರೋಗ್ಯ

Cardamom Benefits: ಏಲಕ್ಕಿ ಕೇವಲ ಘಮದಲ್ಲಷ್ಟೇ ಅಲ್ಲ, ಇದರ ಪ್ರಯೋಜನಗಳು ಎಷ್ಟೊಂದು!

ಯಾವುದೇ ಆಹಾರ ತಯಾರಿಸುವ ಸಂದರ್ಭ ಚಿಟಿಕೆ ಏಲಕ್ಕಿಯನ್ನು ಅದಕ್ಕೆ ಹಾಕಿದರೂ ಸಾಕು, ಅದು ಏಲಕ್ಕಿಯ ಘಮವನ್ನು ಪಡೆದುಕೊಂಡುಬಿಡುತ್ತದೆ. ಅದಕ್ಕಾಗಿಯೇ, ಇದು ಸಿಹಿತಿಂಡಿಗಳಿಗೆ ಹೇಳಿ ಮಾಡಿಸಿದ ಮಸಾಲೆ. ಒಂದು ಚಿಟಿಕೆ ಏಲಕ್ಕಿ ಹಾಕಿದ ಪಾಯಸದ ರುಚಿಯೇ ಬೇರೆ. ಆದರೆ, ಏಲಕ್ಕಿ, ಕೇವಲ ತನ್ನ ಘಮದಲ್ಲಷ್ಟೇ ಶ್ರೀಮಂತಿಕೆ ಮೆರೆದಿಲ್ಲ. ಗುಣದಲ್ಲೂ ಏಲಕ್ಕಿ ಶ್ರೀಮಂತಿಕೆಯಲ್ಲಿ ಯಾವುದಕ್ಕೂ (cardamom benefits) ಕಡಿಮೆಯಿಲ್ಲ.

VISTARANEWS.COM


on

Cardamom Benefits
Koo

ಮಸಾಲೆಗಳ ರಾಣಿ ಎಂದೇ ಹೆಸರಾದ ಏಲಕ್ಕಿಗೆ ಒಂದು ಅಪರೂಪದ ಘಮವಿದೆ. ತನ್ನ ಘಮದ ಮೂಲಕ ಯಾವುದೇ ಆಹಾರವನ್ನು ಕ್ಷಣ ಮಾತ್ರದಲ್ಲಿ ತನ್ನತನವನ್ನು ಅದಕ್ಕೆ ಕೊಡುವ ಶಕ್ತಿಯಿದೆ. ಯಾವುದೇ ಆಹಾರ ತಯಾರಿಸುವ ಸಂದರ್ಭ ಚಿಟಿಕೆ ಏಲಕ್ಕಿಯನ್ನು ಅದಕ್ಕೆ ಹಾಕಿದರೂ ಸಾಕು, ಅದು ಏಲಕ್ಕಿಯ ಘಮವನ್ನು ಪಡೆದುಕೊಂಡುಬಿಡುತ್ತದೆ. ಅದಕ್ಕಾಗಿಯೇ, ಇದು ಸಿಹಿತಿಂಡಿಗಳಿಗೆ ಹೇಳಿ ಮಾಡಿಸಿದ ಮಸಾಲೆ. ಒಂದು ಚಿಟಿಕೆ ಏಲಕ್ಕಿ ಹಾಕಿದ ಪಾಯಸದ ರುಚಿಯೇ ಬೇರೆ. ಆದರೆ, ಏಲಕ್ಕಿ, ಕೇವಲ ತನ್ನ ಘಮದಲ್ಲಷ್ಟೇ ಶ್ರೀಮಂತಿಕೆ ಮೆರೆದಿಲ್ಲ. ಗುಣದಲ್ಲೂ ಏಲಕ್ಕಿ ಶ್ರೀಮಂತಿಕೆಯಲ್ಲಿ ಯಾವುದಕ್ಕೂ ಕಡಿಮೆಯಿಲ್ಲ. ಬನ್ನಿ, ಏಲಕ್ಕಿಯ ಆರೋಗ್ಯಕರ ಲಾಭಗಳನ್ನು (cardamom benefits) ತಿಳಿಯೋಣ.

Blood Pressure Regulation Cucumber Benefits

ರಕ್ತದೊತ್ತಡಕ್ಕೆ ಪರಿಹಾರ

ಅಧಿಕ ರಕ್ತದೊತ್ತಡ ಇರುವ ಮಂದಿಗೆ ಏಲಕ್ಕಿಯಿಂದ ಲಾಭಗಳಿವೆ. ಒಂದು ಸಂಶೋಧನೆಯ ಪ್ರಕಾರ, ಅಧಿಕ ರಕ್ತದೊತ್ತಡ ಸಮಸ್ಯೆ ಆರಂಭವಾದ 20 ಮಂದಿಗೆ ಪ್ರತಿದಿನ ಮೂರು ಗ್ರಾಂಗಳಷ್ಟು ಏಲಕ್ಕಿ ಪುಡಿ ಪ್ರತಿಯೊಬ್ಬರೂ ಸೇವಿಸದಾಗ 12 ವಾರಗಳಲ್ಲೇ ಅವರ ರಕ್ತದೊತ್ತಡ ಸಮತೋಲನಕ್ಕೆ ಬಂದಿರುವುದು ಸಾಬೀತಾಗಿದೆ. ಇದಕ್ಕೆ ಕಾರಣ, ಏಲಕ್ಕಿಯಲ್ಲಿರುವ ಆಂಟಿ ಆಕ್ಸಿಡೆಂಟ್‌ಗಳು.

ealthy internal organs of human digestive system / highlighted blue organs

ಜೀರ್ಣಕಾರಿ ಗುಣಗಳಿವೆ

ಏಲಕ್ಕಿಯಲ್ಲಿ ಜೀರ್ಣಕಾರಿ ಗುಣಗಳಿವೆ. ಏಲಕ್ಕಿಯಲ್ಲಿರುವ ಮೆಂಥೋನ್‌ ಎಂಬ ಎಣ್ಣೆಯಂಶಕ್ಕೆ ಜೀರ್ಣಕ್ರಿಯೆಗೆ ಸಹಾಯ ಮಾಡುವ ಗುಣವಿದೆ. ಇದು ಅಸಿಡಿಟಿ, ಅಜೀರ್ಣ ಹಾಗೂ ಹೊಟ್ಟೆ ನೋವಿನಂಥ ಸಮಸ್ಯೆಗಳಿಗೆ ಪರಿಹಾರ ಒದಗಿಸುತ್ತದೆ. ಇದಕ್ಕೆ ಜೀರ್ಣಕ್ರಿಯೆಯನ್ನು ಪ್ರಚೋದಿಸುವ ಗುಣವಿದೆ.

ವಾಂತಿಗೆ ಪರಿಹಾರ

ಏಲಕ್ಕಿಯಲ್ಲಿ ವಾಂತಿ ಹಾಗೂ ತಲೆಸುತ್ತಿನಂಥ ಸಮಸ್ಯೆಗೆ ಪರಿಹಾರವಿದೆ. ವಾಂತಿಯಾದ ಮೇಲೆ ಆಗುವ ಗಂಟಲಿನ ಹುಳಿ ರುಚಿಯಂಥ ಕಿರಿಕಿರಿ ಗಂಟಲು ಕೆರೆತದ ಭಾವಕ್ಕೆ ಏಲಕ್ಕಿ ಒಳ್ಳೆಯ ಪರಿಹಾರ. ಅಷ್ಟೇ ಅಲ್ಲ, ಪ್ರಯಾಣದಲ್ಲಿ ಆಗುವ ವಾಂತಿಯಂಥ ಸಮಸ್ಯೆಗೂ ಏಲಕ್ಕಿಯನ್ನು ಬಾಯಲ್ಲಿ ಇಟ್ಟುಕೊಳ್ಳುವುದರಿಂದ ಈ ಸಮಸ್ಯೆಗೆ ಪರಿಹಾರ ಸಿಗುತ್ತದೆ.

Woman Suffering from Toothache Benefits Of Drinking Green Tea

ಹಲ್ಲು ನೋವು ನಿವಾರಣೆ

ಏಲಕ್ಕಿಯಲ್ಲಿ ಆಂಟಿ ಸೆಪ್ಟಿಕ್‌ ಹಾಗೂ ಆಂಟಿ ಮೈಕ್ರೋಬಿಯಲ್‌ ಗುಣಗಳಿವೆ. ಇದರಿಂದಾಗಿ ಇದು ಹಲ್ಲಿನ ಸಮಸ್ಯೆಗಳಿಗೆ ಒಳ್ಳೆಯದು. ಏಲಕ್ಕಿಯಲ್ಲಿರುವ ಎಣ್ಣೆಯ ಅಂಶ ಹಲ್ಲು ನೋವಿಗೆ ಒಳ್ಳೆಯ ಔಷಧಿ. ಯಾಕೆಂದರೆ ಇದರಲ್ಲಿರುವ ಆಂಟಿ ಸೆಪ್ಟಿಕ್‌ ಗುಣವು ಕ್ಯಾವಿಟಿಗೆ ಬಹಳ ಒಳ್ಳೆಯದು. ಅಷ್ಟೇ ಅಲ್ಲ, ಹಲ್ಲು ಹುಳುಕಾಗುವುದನ್ನೂ ಇದು ತಡೆಯುತ್ತದೆ.

ಶೀತ ಬಾಧೆ ನಿವಾರಣೆ

ಶೀತ ಹಾಗೂ ನೆಗಡಿಗೂ ಏಲಕ್ಕಿ ಒಳ್ಳೆಯದು ಎಂದರೆ ನಂಬುತ್ತೀರಾ? ಹೌದು, ನಂಬಲೇಬೇಕು. ಏಲಕ್ಕಿಯಲ್ಲಿರುವ ವಿಶೇಷ ಗುಣವು ಕಫ ಕಟ್ಟುವುದನ್ನು ತಡೆಯುತ್ತದೆ. ಇದು ಶ್ವಾಸಕೋಶದಲ್ಲಿ ರಕ್ತ ಪರಿಚಲನೆಯನ್ನು ಚುರುಕಾಗಿಸುತ್ತದೆ. ಇದರಿಂದ ಉಸಿರಾಟದ ಗತಿಯೂ ಚುರುಕಾಗುತ್ತದೆ.

ಅತ್ಯುತ್ತಮ ಡಿಟಾಕ್ಸ್‌

ಏಲಕ್ಕಿ ಅತ್ಯುತ್ತಮ ಡಿಟಾಕ್ಸ್‌ ಕೂಡಾ ಹೌದು. ಇದು ರಕ್ತದಲ್ಲಿರುವ ವಿಷಕಾರಿ ಅಂಶವನ್ನು ದೇಹದಿಂದ ಹೊರಕ್ಕೆ ಕಳುಹಿಸುತ್ತದೆ. ಏಲಕ್ಕಿಯಲ್ಲಿರುವ ಏಸೆನ್ಶಿಯಲ್ ಆಯಿಲ್‌ ಹಾಗೂ ಫೈಟೋಕೆಮಿಕಲ್‌ಗಳಲ್ಲಿ ಡಿಟಾಕ್ಸ್‌ ಗುಣವಿದೆ.

ನಿಕೋಟಿನ್‌ನಿಂದ ಹೊರ ಬರಲು ಮದ್ದು

ನಿಕೋಟಿನ್‌ ಚಟಕ್ಕೆ ಬಿದ್ದ ಮಂದಿ, ಇದರಿಂದ ಹೊರಬರುವ ಇಚ್ಛೆಯಿದ್ದರೆ ನೈಸರ್ಗಿಕ ಉಪಾಯ ಎಂದರೆ ಅದು ಏಲಕ್ಕಿ. ಏಲಕ್ಕಿಯನ್ನು ದಿನಕ್ಕೆ ನಾಲ್ಕೈದು ಬಾರಿ ಜಗಿಯುವ ಮೂಲಕ ನಿಕೋಟಿನ್‌ ಬಯಕೆಯನ್ನು ನಿಧಾನವಾಗಿ ಹತ್ತಿಕ್ಕಬಹುದು. ಖಿನ್ನತೆಯಂತ ಸಮಸ್ಯೆ ಇರುವ ಮಂದಿಯ ನಿದ್ದೆಗೂ ಇದು ಒಳ್ಳೆಯದು.

Women with Breast Cancer Prevention Benefits Of Drinking Green Tea

ಕ್ಯಾನ್ಸರ್‌ ವಿರೋಧಿ ಗುಣ

ಏಲಕ್ಕಿಯಲ್ಲಿ ಕ್ಯಾನ್ಸರ್‌ ವಿರೋಧಿ ಗುಣಗಳೂ ಇವೆ. ದೇಹದಲ್ಲಿರುವ ಕ್ಯಾನ್ಸರ್‌ ವಿರೋಧಿ ಕಿಣ್ವಗಳನ್ನು ಮತ್ತಷ್ಟು ಚುರುಕಾಗಿಸುವ ಮೂಲಕ ಏಲಕ್ಕಿ ಕ್ಯಾನ್ಸರ್‌ನಂತಹ ಕಾಯಿಲೆಯ ವಿರುದ್ಧವೂ ಹೋರಾಡುವ ಗುಣ ಹೊಂದಿದೆ. ಇತ್ತೀಚೆಗೆ ನಡೆದ ಅಧ್ಯಯನವೊಂದು ಇದನ್ನು ಪುಷ್ಠೀಕರಿಸುತ್ತದೆ. ಕ್ಯಾನ್ಸರ್‌ನ ಗಡ್ಡೆಯ ಅಂಗಾಂಶಗಳನ್ನು ಕೊಲ್ಲಲು ಏಲಕ್ಕಿಯಲ್ಲಿರುವ ವಿಶೇಷ ಗುಣವು ಸಹಾಯ ಮಾಡುತ್ತದೆ.

ಇದನ್ನೂ ಓದಿ: Mouthwashes: ಬಾಯಿಯ ಎಲ್ಲ ಸಮಸ್ಯೆಗಳಿಗೂ ಮೌತ್‌ವಾಷ್‌ ಪರಿಹಾರವೆ? ಇದರ ಇತಿಮಿತಿ ಬಗ್ಗೆಯೂ ತಿಳಿದಿರಲಿ

ಏನು ಮಾಡಬಹುದು?

ಏಲಕ್ಕಿಯ ಈ ಆರೋಗ್ಯಕರ ಗುಣಗಳನ್ನು ಪಡೆಯಲು ನಾವು ಏನು ಮಾಡಬಹುದು, ಹೇಗೆ ಇದನ್ನು ಸೇವಿಸಬೇಕು ಎಂಬುದು ಈಗ ಬಹುತೇಕರಲ್ಲಿರುವ ಪ್ರಶ್ನೆ. ಏಲಕ್ಕಿಯ ಒಂದೆರಡು ಬೀಜಗಳನು ಬಾಯಲ್ಲಿ ಹಾಕಿ ಮೌತ್‌ ಫ್ರೆಶ್ನರ್‌ನ ಹಾಗೆ ಬಳಸಬಹುದು. ಅಥವಾ ಏಲಕ್ಕಿ, ಜಾಯಿಕಾಯಿ, ಅರಿಶಿನ, ಕರಿಮೆಣಸು ಇತ್ಯಾದಿಗಳ ಪುಡಿ ಮಾಡಿ ಇಟ್ಟುಕೊಂಡು ರಾತ್ರಿ ಮಲಗುವ ಮುನ್ನ ಕುಡಿಯುವ ಹಾಲಿಗೆ ಚಿಟಿಕೆ ಪುಡಿ ಸೇರಿಸಿ ಕುಡಿಯಬಹುದು. ಇದರಿಂದ ಸೊಂಪಾದ ನಿದ್ರೆಯೂ ಬರುತ್ತದೆ. ಅಥವಾ ನಿತ್ಯವೂ ಕುಡಿಯುವ ನೀರಿಗೆ ಏಲಕ್ಕಿಯ ಎಸಳೊಂದನ್ನು ಹಾಕಿಡಬಹುದು. ಇನ್ನುಳಿದಂತೆ, ಆಹಾರದ ಮೂಲಕ, ಸಿಹಿತಿಂಡಿಗಳ ಮೂಲಕ ಏಲಕ್ಕಿ ಆಗಾಗ ದೇಹ ಸೇರುತ್ತಲೇ ಇರುತ್ತದೆ. ಈ ಎಲ್ಲ ವಿಧಾನಗಳ ಮೂಲಕ ಏಲಕ್ಕಿಯ ಲಾಭವನ್ನು ನಾವು ಪಡೆಯಬಹುದು.

Continue Reading

ಆಹಾರ/ಅಡುಗೆ

Healthy Salad Tips: ನೀವು ಸಲಾಡ್‌ ಪ್ರಿಯರೇ? ಸಲಾಡ್‌ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ!

ಕೆಲವು ಬಗೆಯ ಹಣ್ಣುಗಳು, ಒಣಬೀಜಗಳು, ಒಣಹಣ್ಣುಗಳು, ಹಸಿ ತರಕಾರಿಗಳು, ಮೊಳಕೆ ಕಾಳುಗಳು, ಬೇಯಿಸಿದ ಕಾಳುಗಳು ಹೀಗೆ ಹತ್ತು ಹಲವು ಬಗೆಯ ಕಾಂಬಿನೇಶನ್ನಿನ ಸಲಾಡ್‌ಗಳನ್ನು ನಿತ್ಯವೂ ತಯಾರಿಸಬಹುದು. ಕಡಿಮೆ ಕ್ಯಾಲರಿಯ, ಪ್ರೊಟೀನ್‌ ಹಾಗೂ ಸಾಕಷ್ಟು ಪೋಷಕಾಂಶಗಳನ್ನು ನಮ್ಮ ದೇಹಕ್ಕೆ ಒದಗಿಸಬಲ್ಲ ಆಹಾರವಾದ ಈ ಸಲಾಡ್‌ಗಳು ಆರೋಗ್ಯಕರ ಎಂಬುದರಲ್ಲಿ ಎರಡು ಮಾತೇ ಇಲ್ಲ. ಹಸಿವಾದಾಗ ತಕ್ಷಣ ಹಸಿವು ಕಡಿಮೆ ಮಾಡಬಲ್ಲ ಆಪದ್ಬಾಂಧವ ಕೂಡಾ ಈ ಸಲಾಡ್‌ಗಳೇ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಈ ಆರೋಗ್ಯ ವರ್ಧಿಸುವ ಸಲಾಡ್‌ಗಳನ್ನು ಮಾಡುವ ಸಮಯದಲ್ಲಿ (healthy salad tips) ಕೆಲವು ತಪ್ಪುಗಳನ್ನು ಮಾಡುವ ಅಪಾಯವೂ ಇದೆ.

VISTARANEWS.COM


on

Healthy Salad Tips
Koo

ಪೋಷಕಾಂಶಯುಕ್ತ ಆಹಾರ ಎಂದಾಕ್ಷಣ ಸುಲಭವಾಗಿ ನೆನಪಿಗೆ ಬರುವುದು ಸಲಾಡ್‌ಗಳು. ಸುಲಭವಾಗಿ ಮಾಡಬಹುದಾದ, ಹೆಚ್ಚೂ ಶ್ರಮ ಬೇಡದ, ಬೇಗ ಹೊಟ್ಟೆ ತುಂಬಿಸುವ ಗುಣ ಉಳ್ಳ ಸಲಾಡ್‌ಗಳು ತೂಕ ಇಳಿಸುವ ಮಂದಿಯ ಪರಮಾಪ್ತ ಸ್ನೇಹಿತನಂತೆ. ಕಚೇರಿಗಳಿಗೆ ಬಿಡು ಹೊತ್ತಿನಲ್ಲಿ ತಿನ್ನಬಹುದಾದ ಸ್ನ್ಯಾಕ್‌ಗಳ ಬದಲಿಗೂ ಈ ಸಲಾಡ್‌ಗಳು ಅನೇಕರಿಗೆ ಸುಲಭವಾಗಿ ಮಾಡಬಹುದಾದ ಆಹಾರವೇ ಆಗಿದೆ. ಕೆಲವು ಬಗೆಯ ಹಣ್ಣುಗಳು, ಒಣಬೀಜಗಳು, ಒಣಹಣ್ಣುಗಳು, ಹಸಿ ತರಕಾರಿಗಳು, ಮೊಳಕೆ ಕಾಳುಗಳು, ಬೇಯಿಸಿದ ಕಾಳುಗಳು ಹೀಗೆ ಹತ್ತು ಹಲವು ಬಗೆಯ ಕಾಂಬಿನೇಶನ್ನಿನ ಸಲಾಡ್‌ಗಳನ್ನು ನಿತ್ಯವೂ ತಯಾರಿಸಬಹುದು. ಕಡಿಮೆ ಕ್ಯಾಲರಿಯ, ಪ್ರೊಟೀನ್‌ ಹಾಗೂ ಸಾಕಷ್ಟು ಪೋಷಕಾಂಶಗಳನ್ನು ನಮ್ಮ ದೇಹಕ್ಕೆ ಒದಗಿಸಬಲ್ಲ ಆಹಾರವಾದ ಈ ಸಲಾಡ್‌ಗಳು ಆರೋಗ್ಯಕರ ಎಂಬುದರಲ್ಲಿ ಎರಡು ಮಾತೇ ಇಲ್ಲ. ಹಸಿವಾದಾಗ ತಕ್ಷಣ ಹಸಿವು ಕಡಿಮೆ ಮಾಡಬಲ್ಲ ಆಪದ್ಬಾಂಧವ ಕೂಡಾ ಈ ಸಲಾಡ್‌ಗಳೇ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಈ ಆರೋಗ್ಯ ವರ್ಧಿಸುವ ಸಲಾಡ್‌ಗಳನ್ನು ಮಾಡುವ ಸಮಯದಲ್ಲಿ ಕೆಲವು ತಪ್ಪುಗಳನ್ನು ಮಾಡುವ ಅಪಾಯವೂ ಇದೆ. ಬನ್ನಿ, ನೀವು ಸಲಾಡ್‌ಗಳನ್ನು ಮಾಡುವ ಸಂದರ್ಭ ಈ ಕೆಳಗಿನ ತಪ್ಪುಗಳನ್ನು ಮಾಡುತ್ತಿದ್ದೀರಿ ಎಂದಾದಲ್ಲಿ, ಆರೋಗ್ಯಕ್ಕೆ ಒಳಿತಾಗುವ ರೀತಿಯಲ್ಲಿ ತಿದ್ದಿಕೊಳ್ಳಿ. ಬನ್ನಿ, ಸಲಾಡ್‌ ಮಾಡುವ ಸಮಯದಲ್ಲಿ ಸಾಮಾನ್ಯವಾಗಿ (healthy salad tips) ಮಾಡುವ ತಪ್ಪುಗಳೇನು ಎಂಬುದನ್ನು ನೋಡೋಣ.

Greek Salad

ಡ್ರೆಸ್ಸಿಂಗ್‌ ಅತಿಯಾಗಿ ಮಾಡುವುದು

ಹೌದು, ಸಲಾಡ್‌ ಎಂದಾಕ್ಷಣ ಡ್ರೆಸ್ಸಿಂಗ್‌ ಸಹಜ. ಯಾಕೆಂದರೆ ಸಲಾಡ್‌ಗೆ ಒಂದು ರುಚಿಯನ್ನು ನೀಡುವುದೇ ಈ ಡ್ರೆಸ್ಸಿಂಗ್‌. ಆದರೆ, ಅತಿಯಾದ ಡ್ರೆಸ್ಸಿಂಗ್‌ ಮಾಡುವುದರಿಂದ ಸಲಾಡ್‌ನಲ್ಲಿ ಕೊಬ್ಬು ಜಾಸ್ತಿಯಾಗಬಹುದು. ಹೆಚ್ಚು ಕ್ಯಾಲರಿ ಸೇರಿಕೊಳ್ಳಬಹುದು. ಕೇವಲ ರುಚಿಗೆ ತಕ್ಕಷ್ಟೇ ಡ್ರೆಸ್ಸಿಂಗ್‌ ಮಾಡಿ.

ತರಕಾರಿಗಳನ್ನು ತೊಳೆಯದೆ ಇರುವುದು

ಹಸಿಯಾದ ತರಕಾರಿಗಳನ್ನು ಹಾಗೆಯೇ ಸಲಾಡ್‌ಗೆ ಬಳಸುವುದರಿಂದ ತರಕಾರಿಗಳನ್ನು ತೊಳೆಯುವುದು ಅತ್ಯಂತ ಮುಖ್ಯವಾದ ಘಟ್ಟ. ಹಾಗಾಗಿ ತರಕಾರಿಗಳನ್ನು ಒಮ್ಮೆ ಉಪ್ಪು ನೀರಿನಲ್ಲಿ ಹಾಕಿಟ್ಟು ತೊಳೆಯುವುದನ್ನು ರೂಢಿ ಮಾಡಿಕೊಳ್ಳಿ. ಯಾಕೆಂದರೆ ಇಲ್ಲಿ ತರಕಾರಿ ಬೇಯುವುದಿಲ್ಲವಾದ್ದರಿಂದ ಕೆಲವು ರಾಸಾಯನಿಕಗಳು ತರಕಾರಿಗೆ ಸಿಂಪಡಿಸಲ್ಪಟ್ಟದ್ದು ಹಾಗೆಯೇ ಉಳಿದಿರುವ ಸಾಧ್ಯತೆಯೂ ಇದೆ. ಹಾಗಾಗಿ, ತರಕಾರಿಯನ್ನು ಎರಡೆರಡು ಬಾರಿ ತೊಳೆದುಕೊಂಡು ಬಳಸಿ.

ಇದನ್ನೂ ಓದಿ: Which Type Of Roti Is Best: ಯಾರಿಗೆ ಯಾವ ರೊಟ್ಟಿ ಸೂಕ್ತ? ತಿನ್ನುವ ಮೊದಲು ತಿಳಿದುಕೊಂಡಿರಿ!

ಅತಿಯಾಗಿ ತರಕಾರಿಗಳನ್ನು ಬಳಸುವುದು

ಸಲಾಡ್‌ ಎಂದಾಕ್ಷಣ ಬೇಕಾದ ಹಾಗೆ ತರಕಾರಿಗಳನ್ನು ಬಳಸಬಹುದು ಎಂಬ ನಿಮ್ಮ ಎಣಿಕೆಯಾಗಿದ್ದರೆ ಅದು ತಪ್ಪು. ತರಕಾರಿಗಳ ಸಂಖ್ಯೆಯೂ ಅತಿಯಾಗಬಾರದು. ಒಂದಕ್ಕೊಂದು ಹೊಂದಿಕೊಳ್ಳುವ ಮೂರ್ನಾಲ್ಕು ಬಗೆಯ ತರಕಾರಿಗಳಿಗಿಂತ ಹೆಚ್ಚು ಬಳಸಬೇಡಿ. ತರಕಾರಿಗಳು ಅತಿಯಾದರೆ, ಅವು ಹಸಿಯಾಗಿರುವುದರಿಂದ ಇವು ಗ್ಯಾಸ್‌ನಂತಹ ಸಮಸಯೆಯನ್ನು ತಂದೊಡ್ಡಬಹುದು. ಜೀರ್ಣದ ಸಮಸ್ಯೆಗಳೂ ತಲೆದೋರಬಹುದು. ಕೆಲವರಿಗೆ ಹಸಿ ತರಕಾರಿಗಳು ಕರಗುವುದಿಲ್ಲ. ಇಂಥ ಮಂದಿ ತರಕಾರಿಗಳನ್ನು ಸ್ವಲ್ಪ ಬೇಯಿಸಿಕೊಂಡು ತಿನ್ನಬಹುದು. ಹೀಗೆ ಮಾಡುವುದರಿಂದ ಜೀರ್ಣ ಸಮಸ್ಯೆಗಳು ಬರದು.

Continue Reading

ಆರೋಗ್ಯ

Vijayanagara News: ದಡಾರ, ರುಬೆಲ್ಲಾ ಲಸಿಕಾ ಅಭಿಯಾನಕ್ಕೆ ಸಿದ್ಧತೆ

Vijayanagara News: ದಡಾರಾ ಮತ್ತು ರುಬೆಲ್ಲಾ ಲಸಿಕಾ ಅಭಿಯಾನವು ಜಿಲ್ಲೆಯಲ್ಲಿ ಅಚ್ಚುಕಟ್ಟಾಗಿ ನಡೆಯಬೇಕು ಎಂದು ವಿಜಯನರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸದಾಶಿವ ಪ್ರಭು ಬಿ., ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

VISTARANEWS.COM


on

Vijayanagara ZP CEO Sadashiva Prabhu instructed that Dadara Rubella Lasika Abhiyan should be conducted neatly
Koo

ಹೊಸಪೇಟೆ: ದಡಾರಾ ಮತ್ತು ರುಬೆಲ್ಲಾ ಲಸಿಕಾ ಅಭಿಯಾನವು ಜಿಲ್ಲೆಯಲ್ಲಿ (Vijayanagara News) ಅಚ್ಚುಕಟ್ಟಾಗಿ ನಡೆಯಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸದಾಶಿವ ಪ್ರಭು ಬಿ., ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಅಂತರ ಇಲಾಖಾ ಸಮನ್ವಯ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.

ದಡಾರಾ ಮತ್ತು ರುಬೆಲ್ಲಾ 2024 ಡಿಸೆಂಬರ್‌ದೊಳಗೆ ನಿರ್ಮೂಲನೆಯಾಗಬೇಕು. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಕಾರ್ಯಕ್ರಮಗಳು ಶಿಸ್ತುಬದ್ಧವಾಗಿ ನಡೆಯಬೇಕು. ಮಗುವಿಗೆ 9 ತಿಂಗಳ ತುಂಬಿದ ನಂತರ ಮೊದಲನೇ ಡೋಸ್ ನೀಡಬೇಕು. ಆ ಬಳಿಕ ಒಂದೂವರೆ ವರ್ಷಕ್ಕೆ ಎರಡನೇ ಡೋಸ್ ನೀಡುವ ಕಾರ್ಯವು ಜಿಲ್ಲೆಯಲ್ಲಿ ಶೇ. 100ರಷ್ಟು ಆಗಬೇಕು ಎಂದು ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.

ಇದನ್ನೂ ಓದಿ: Forest Man Of India: ಇವರೇ ನೋಡಿ ಭಾರತದ ಫಾರೆಸ್ಟ್‌ ಮ್ಯಾನ್‌; ಏಕಾಂಗಿಯಾಗಿ 1,360 ಎಕ್ರೆಯಲ್ಲಿ ಕಾಡು ಬೆಳೆಸಿದ ಸಾಹಸಿ

ಮಕ್ಕಳಿಗೆ ಲಸಿಕೆಯನ್ನು ಹಾಕಿಸಲು ಕೆಲವೊಮ್ಮೆ ಗ್ರಾಮೀಣ ಪ್ರದೇಶದ ಜನರು ಸಹಕರಿಸುವುದಿಲ್ಲ. ಆದ್ದರಿಂದ ದಡಾರ ಮತ್ತು ರುಬೆಲ್ಲಾ ಲಸಿಕೆಯ ಬಗ್ಗೆ ಜನರಿಗೆ ಸರಿಯಾದ ಮಾಹಿತಿ ನೀಡಬೇಕು. ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳು ಅಂಗನವಾಡಿ ಕಾರ್ಯಕರ್ತೆಯರ, ಮಹಿಳಾ ಸಂಘ-ಸಂಸ್ಥೆಗಳ, ಆಶಾ ಕಾರ್ಯಕರ್ತೆಯರ ಸಹಕಾರ ಪಡೆದುಕೊಂಡು ಜಾಗೃತಿ ಕಾರ್ಯಕ್ರಮಗಳನ್ನು ನಡೆಸಬೇಕು ಎಂದು ಸೂಚನೆ ನೀಡಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಡಾ. ಶಂಕರ್ ನಾಯ್ಕ್ ಎಲ್. ಮಾತನಾಡಿ, ಗ್ರಾಮೀಣ ಭಾಗದ ಕೆಲ ಜನರು ಮೂಢ ನಂಬಿಕೆಗಳಿಂದ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಕೊಡುವುದಿಲ್ಲ. ಆರೋಗ್ಯ ಇಲಾಖೆಯ ಯಾವುದೇ ಲಸಿಕೆ ಮತ್ತು ಅದರ ಮಹತ್ವದ ಕುರಿತು ವ್ಯಾಪಕವಾಗಿ ಜನರಿಗೆ ತಿಳಿವಳಿಕೆ ಮೂಡಿಸುವ ಕಾರ್ಯವು ಲಸಿಕಾ ಅಭಿಯಾನದ ಜತೆಜತೆಗೆ ಸಾಗಬೇಕು ಎಂದು ಸಲಹೆ ಮಾಡಿದರು.

ಜಿಲ್ಲಾ ಆರ್.ಸಿ.ಎಚ್. ಅಧಿಕಾರಿ ಡಾ.ಜಂಬಯ್ಯ ಮಾತನಾಡಿ, ಮಕ್ಕಳಲ್ಲಿ ಜ್ವರ ಮತ್ತು ತದ್ದು ಕಂಡು ಬರುತ್ತಿದ್ದಲ್ಲಿ ಪಾಲಕರು ನಿರ್ಲಕ್ಷ್ಯ ಮಾಡಬಾರದು. ಅಂತಹ ಮಕ್ಕಳಿದ್ದಲ್ಲಿ ಅವರನ್ನು ಕೂಡಲೇ ಹತ್ತಿರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಬೇಕು. ಆರೋಗ್ಯ ಇಲಾಖೆಯ ಗಮನಕ್ಕೆ ತರಬೇಕು. ಜ್ವರ ಮತ್ತು ತದ್ದು ಕಂಡು ಬರುವ ಮಕ್ಕಳೇನಾದರು ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾಗಿದ್ದರೆ ಈ ಬಗ್ಗೆ ಖಾಸಗಿ ಆಸ್ಪತ್ರೆಗಳು ಸರ್ಕಾರಿ ಆಸ್ಪತ್ರೆಗಳಿಗೆ ವರದಿ ಮಾಡಬೇಕು ಎಂದು ತಿಳಿಸಿದರು.

ಎನ್‌ಪಿಎಸ್‌ಪಿ ಸರ್ವೆಲನ್ಸ್ ನೋಡಲ್ ಅಧಿಕಾರಿ ಡಾ.ಶ್ರೀಧರ ಆರ್.ಎಸ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಇದನ್ನೂ ಓದಿ: Karnataka Weather : ರಾಜ್ಯದಲ್ಲಿ ತಗ್ಗಿದ ಮಳೆ ಪ್ರಮಾಣ; ಸ್ವಲ್ಪ ಕಡೆ ವರುಣ ಸಾಧಾರಣ, ಗಾಳಿ ರಭಸ ಅಸಾಧಾರಣ

ಈ ಸಂದರ್ಭದಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಅಧಿಕಾರಿ ಡಾ.ಷಣ್ಮುಖ ನಾಯ್ಕ ಬಿ., ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ದೊಡ್ಡಮನಿ ಎಂ.ಪಿ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿ ಡಾ.ಕೆ.ಕಮಲಮ್ಮ, ಜಿಲ್ಲಾ ಕುಷ್ಟರೋಗ ನಿರ್ಮೂಲನಾ ಅಧಿಕಾರಿ ಡಾ. ರಾಧಿಕಾ, ಹೊಸಪೇಟೆ ತಾಲೂಕು ಆರೋಗ್ಯಾಧಿಕಾರಿ ಡಾ. ಭಾಸ್ಕರ್, ಕ್ಷಯರೋಗ ನಿರ್ಮೂಲನಾ ಅಧಿಕಾರಿ ಡಾ.ಜಗದೀಶ್ ಪಾಟ್ನೆ ಸೇರಿದಂತೆ ಇತರರು ಇದ್ದರು.

Continue Reading
Advertisement
Karnataka Weather Forecast
ಮಳೆ41 seconds ago

Karnataka Weather : ಭಾರಿ ಮಳೆಗೆ ಕೆರೆಯಂತಾದ ರಸ್ತೆಗಳು; ಮುಳುಗಡೆಯಾದ ವಾಹನಗಳು

Star Saree Fashion
ಫ್ಯಾಷನ್5 mins ago

Star Saree Fashion: ಡಿಸೈನರ್‌ ಸೀರೆಯಲ್ಲಿ ನಟಿ ತಾನ್ಯಾ ಹೋಪ್‌ರಂತೆ ಕಾಣಲು ಈ 5 ಸಿಂಪಲ್‌ ರೂಲ್ಸ್ ಫಾಲೋ ಮಾಡಿ!

Arvind Kejriwal
ಪ್ರಮುಖ ಸುದ್ದಿ16 mins ago

Arvind Kejriwal : ಅರವಿಂದ್​ ಕೇಜ್ರಿವಾಲ್​ ಮತ್ತೆ ಜೈಲಿಗೆ ಹೋಗುವುದು ಫಿಕ್ಸ್​

World Milk Day
ಆರೋಗ್ಯ33 mins ago

World Milk Day: ಹಾಲಿಗೊಂದು ದಿನವೇ ಬೇಕೆಂದಿಲ್ಲ, ವರ್ಷವಿಡೀ ಆಚರಿಸಬಹುದು!

Narendra Modi
ಪ್ರಮುಖ ಸುದ್ದಿ41 mins ago

Narendra Modi : 45 ಗಂಟೆಗಳ ಸುದೀರ್ಘ ಧ್ಯಾನ ಪೂರ್ಣಗೊಳಿಸಿದ ಪ್ರಧಾನಿ ಮೋದಿ

KCET Result 2024
ಕರ್ನಾಟಕ47 mins ago

KCET Result 2024: ಸಿಇಟಿ ಫಲಿತಾಂಶ ಪ್ರಕಟ; ರಿಸಲ್ಟ್‌ ನೋಡಲು ಲಿಂಕ್‌ ಇಲ್ಲಿದೆ

Exit Poll Live 2024
Live News52 mins ago

Exit Poll 2024 Live: ಲೋಕಸಭೆ ಚುನಾವಣೆಯಲ್ಲಿ ಯಾರಿಗೆ ಗದ್ದುಗೆ? ಕೆಲವೇ ಕ್ಷಣಗಳಲ್ಲಿ ಎಕ್ಸಿಟ್‌ ಪೋಲ್‌, ಕ್ಷಣಕ್ಷಣದ ಮಾಹಿತಿ ಇಲ್ಲಿದೆ

Shah Rukh Khan shooting for King in Spain
ಬಾಲಿವುಡ್1 hour ago

Shah Rukh Khan: ಮಗಳ ಜತೆ ಶಾರುಖ್ ಅಭಿನಯಿಸಲಿರುವ ಸಿನಿಮಾ ದೃಶ್ಯ ಲೀಕ್‌!

Liquor ban
ಬೆಂಗಳೂರು1 hour ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

IPL 2025 Mega Auction
ಕ್ರೀಡೆ1 hour ago

IPL 2025 Mega Auction: ಕೇವಲ ಇಷ್ಟು ಆಟಗಾರರ ರಿಟೇನ್​ಗೆ ಮಾತ್ರ ಅವಕಾಶ!

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Liquor ban
ಬೆಂಗಳೂರು1 hour ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ2 days ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ4 days ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು4 days ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ5 days ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ6 days ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು6 days ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ1 week ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ1 week ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

ಟ್ರೆಂಡಿಂಗ್‌