Dates Health Benefits: ಸಮೃದ್ಧ ಹಣ್ಣು ಖರ್ಜೂರವನ್ನು ನಾವು ಏಕೆ ಬೆಳಗ್ಗೆ ತಿನ್ನಬೇಕು ಗೊತ್ತೇ? Vistara News

ಆರೋಗ್ಯ

Dates Health Benefits: ಸಮೃದ್ಧ ಹಣ್ಣು ಖರ್ಜೂರವನ್ನು ನಾವು ಏಕೆ ಬೆಳಗ್ಗೆ ತಿನ್ನಬೇಕು ಗೊತ್ತೇ?

ಎಲ್ಲ ಪೋಷಕಾಂಶಗಳಿಂದಲೂ (Nutrient rich) ಸಮೃದ್ಧವಾಗಿರುವ ಖರ್ಜೂರವನ್ನು ಕೊಂಚ ಪ್ರಮಾಣದಲ್ಲಿ ನಿಯಮಿತವಾಗಿ ಸೇವನೆ ಮಾಡುವುದರಿಂದ ಶಕ್ತಿ ವರ್ಧನೆಯ (energy booster) ಜೊತೆಗೆ ಆರೋಗ್ಯದಲ್ಲಿ ಸಾಕಷ್ಟು ಪ್ರಗತಿಯನ್ನು ಕಾಣಬಹುದು (Dates Health Benefits) ಎಂಬುದೂ ನಿಜ.

VISTARANEWS.COM


on

dates
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಖರ್ಜೂರವು (Dates) ಅತ್ಯಂತ ಪುರಾತನವಾದ ಸಮೃದ್ಧ ಆಹಾರಗಳಲ್ಲಿ (Heathy food) ಒಂದು. ಕ್ರಿಸ್ತಪೂರ್ವ 5320ಕ್ಕೂ ಮೊದಲೇ ಖರ್ಜೂರವನ್ನು ನಮ್ಮ ಪೂರ್ವಜರು ನಿತ್ಯಾಹಾರದಲ್ಲಿ (daily food) ಬಳಕೆ ಮಾಡುತ್ತಿದ್ದರು ಎಂಬುದಕ್ಕೆ ಆಧಾರಗಳಿವೆ. ಹೆಚ್ಚು ಕ್ಯಾಲರಿ (Calorie food) ಇರುವ, ಹೆಚ್ಚು ನೈಸರ್ಗಿಕ ಸಕ್ಕರೆಯಿಂದ (Natural sugar) ಸಮೃದ್ಧವಾಗಿರುವ ಈ ಹಣ್ಣನ್ನು ಹಾಗೆಯೇ ಹಾಗೂ ಒಣಗಿಸಿಯೂ ತಿನ್ನುವ ಅಭ್ಯಾಸವು ಮೊದಲಿನಿಂದಲೂ ಬಳಕೆಯಲ್ಲಿದೆ. ಆದರೆ, ಈ ಗುಣದಿಂದಾಗಿಯೇ ಬಹುತೇಕ ತೂಕ ಇಳಿಸುವ (Weight loss) ಕಾಳಜಿ ಹೊಂದಿದ ಮಂದಿ ಖರ್ಜೂರವನ್ನು ತಿನ್ನುವುದರಿಂದ ತಪ್ಪಿಸಿಕೊಳ್ಳುತ್ತಾರೆ. ಆದರೆ, ಕಬ್ಬಿಣಾಂಶವೂ ಅಧಿಕವಾಗಿರುವ, ಬಹುತೇಕ ಎಲ್ಲ ಪೋಷಕಾಂಶಗಳಿಂದಲೂ (Nutrient rich) ಸಮೃದ್ಧವಾಗಿರುವ ಖರ್ಜೂರವನ್ನು ಕೊಂಚ ಪ್ರಮಾಣದಲ್ಲಿ ನಿಯಮಿತವಾಗಿ ಸೇವನೆ ಮಾಡುವುದರಿಂದ ಶಕ್ತಿ ವರ್ಧನೆಯ (energy booster) ಜೊತೆಗೆ ಆರೋಗ್ಯದಲ್ಲಿ ಸಾಕಷ್ಟು ಪ್ರಗತಿಯನ್ನು ಕಾಣಬಹುದು (Dates Health Benefits) ಎಂಬುದೂ ನಿಜ.

ಖರ್ಜೂರವು ಸಾಕಷ್ಟು ಕ್ಯಾಲರಿಯನ್ನು ಹೊಂದಿರುವ ಆಹಾರವಾದ್ದರಿಂದ ಇದನ್ನು ತಿನ್ನುವಾಗ ಹಿತಮಿತವಾಗಿ ತಿನ್ನಬೇಕೆಂಬ ಎಚ್ಚರಿಕೆಯನ್ನು ಸದಾ ಇಟ್ಟುಕೊಳ್ಳುವುದು ಒಳ್ಳೆಯದು. ಹೆಚ್ಚು ಖರ್ಜೂರವನ್ನು ಸೇವಿಸಿದರೆ ಖಂಡಿತವಾಗಿಯೂ ನಿಮ್ಮ ತೂಕ ಏರಿಕೆಯ ಭಯ ಇದ್ದೇ ಇದೆ. ಬನ್ನಿ, ಬೆಳಗ್ಗೆ ಎದ್ದ ಕೂಡಲೇ ಖರ್ಜೂರ ತಿನ್ನುವುದರಿಂದ ಯಾವೆಲ್ಲ ಆರೋಗ್ಯಕರ ಲಾಭಗಳಿವೆ ಎಂಬುದನ್ನು ನೋಡೋಣ.

1. ಖರ್ಜೂರವು ತನ್ನಲ್ಲಿ ನೈಸರ್ಗಿಕವಾಗಿ ಸಾಕಷ್ಟು ಕಾರ್ಬೋಹೈಡ್ರೇಟನ್ನೂ, ಸಕ್ಕರೆಯನ್ನೂ ಹೊಂದಿದೆ. ನೈಸರ್ಗಿಕ ಸಕ್ಕರೆಯ ಮೂಲಗಳಲ್ಲಿ ಮುಖ್ಯವಾದವುಗಳು ಇವು. ಇದರಲ್ಲಿ ನೈಸರ್ಗಿಕ ಸುಕ್ರೋಸ್‌, ಫ್ರಕ್ಟೋಸ್‌ ಹಾಗೂ ಗ್ಲೂಕೋಸ್‌ ಇವೆ. ಬೆಳಗ್ಗಿನ ಹೊತ್ತು ಎದ್ದ ಕೂಡಲೇ ಈ ಖರ್ಜೂರವನ್ನು ತಿನ್ನುವುದರಿಂದ ದೇಹಕ್ಕೆ ದಿಢೀರ್‌ ಶಕ್ತಿ ದೊರಕಿ, ಜೀರ್ಣಕ್ರಿಯೆಯನ್ನು ಉತ್ತೇಜಿಸುತ್ತದೆ. ವಿಶ್ರಾಂತಿ ಪಡೆದುಕೊಂಡ ಜೀರ್ಣಾಂಗವ್ಯೂಹವು ಬೆಳಗ್ಗೆ ಚುರುಕಾಗಿ ಕೆಲಸ ಆರಂಭಿಸಲು ಖರ್ಜೂರ ಒಳ್ಳೆಯ ಆಹಾರ.

2. ಖರ್ಜೂರದಲ್ಲಿ ಸಾಕಷ್ಟು ನಾರಿನಂಶವೂ ಇರುವುದರಿಂದ ಜೀರ್ಣಾಂಗವ್ಯೂಹವು ಸರಿಯಾಗಿ ಕೆಲಸ ಮಾಡಲು, ಜೀರ್ಣಕ್ರಿಯೆಗೆ ಸಹಕಾರಿಯಾಗಿ ಹೆಗಲು ಕೊಡುವ ಆಹಾರಗಳ ಪೈಕಿ ಇದಕ್ಕೆ ಉನ್ನತ ಸ್ಥಾನವಿದೆ. ಬೆಳಗ್ಗಿನ ಹೊತ್ತು ನಾರಿನಂಶವಿರುವ ಈ ಆಹಾರ ಸೇವನೆಯಿಂದ ಹೊಟ್ಟೆ ತುಂಬಿದ ಭಾವ ಸಿಕ್ಕಿ, ಅತಿಯಾಗಿ ತಿನ್ನುವುದೂ ಕೂಡಾ ಕಡಿಮೆಯಾಗುತ್ತದೆ. ಇದರಿಂದ ಜೀರ್ಣಾಂಗವ್ಯೂಹಕ್ಕೆ ಹೆಚ್ಚು ಒತ್ತಡ ಬೀಳುವುದೂ ಕೂಡಾ ಕಡಿಮೆಯಾಗುತ್ತದೆ.

3. ಖರ್ಜೂರದಲ್ಲಿ ಎಲ್ಲ ಬಗೆಯ ಪೋಷಕಾಂಶಗಳೂ ಶ್ರೀಮಂತವಾಗಿವೆ. ಇದೊಂದು ಸಂಪೂರ್ಣ ಆಹಾರ. ತತ್‌ಕ್ಷಣಕ್ಕೆ ಬೇಕಾಗುವ ಶಕ್ತಿಯನ್ನು ದೀಢೀರ್‌ ನೀಡಿ ನಮ್ಮ ದೇಹವನ್ನು ಪುನಶ್ಚೇತನಗೊಳಿಸುವ ಶಕ್ತಿ ಇದಕ್ಕಿದೆ. ವಿಟಮಿನ್ಗಳು, ಖನಿಜಾಂಶಗಳು ಹಾಗೂ ಪೋಷಕಾಂಶಗಳಾದ ಪೊಟಾಶಿಯಂ, ಮೆಗ್ನೀಶಿಯಂ, ವಿಟಮಿನ್‌ ಬಿ6, ಹಾಗೂ ಕಬ್ಬಿಣಾಂಶ ಇದರಲ್ಲಿ ಹೇರಳವಾಗಿದೆ. ದೇಹ ಆರೋಗ್ಯವಾಗಿರಲು ಬೇಕಾಗುವ ಎಲ್ಲ ಬಗೆಯ ಪೋಷಣೆಯೂ ಇದರಲ್ಲಿರುವುದು ವಿಶೇಷ.

4. ಸಿಹಿ ತಿನ್ನಬೇಕೆನ್ನುವ ಬಯಕೆಗೂ ಕೂಡಾ ಖರ್ಜೂರ ಒಳ್ಳೆಯ ಉತ್ತರ. ಸಿಹಿ ತಿನ್ನಬಾರದು ಎಂಬ ವೈದ್ಯರ ಸಲಹೆಗೆ ಅಥವಾ ಆರೋಗ್ಯದ ಕಾರಣಗಳಿಗಾಗಿ ಸಿಹಿತಿಂಡಿಗಳನು ದೂರವಿಟ್ಟಿರುವ ಎಷ್ಟೋ ಮಂದಿಗೆ ಇದ್ದಕ್ಕಿದ್ದಂತೆ ಉದ್ಭವಿಸುವ ಸಿಹಿ ಬಯಕೆಯನ್ನು ತಣಿಸಲು ಆಪತ್ಪಾಂಧವನಂತೆ ಪ್ರತ್ಯಕ್ಷವಾಗುವ ಆರೋಗ್ಯಕರ ಸಿಹಿಯೆಂದರೆ ಈ ಖರ್ಜೂರ. ಬೆಳಗ್ಗೆ ಏನಾದರೊಂದು ಸಿಹಿ ತಿನ್ನಬೇಕೆನಿಸದರೆ ಅಥವಾ ಬೆಳಗ್ಗಿನ ತಿಂಡಿ ಹಾಗೂ ಮಧ್ಯಾಹ್ನದೂಟದ ಮಧ್ಯದ ಸ್ನ್ಯಾಕ್‌ಟೈಮ್‌ಗೆ ತಿನ್ನಬಹುದಾದ ಸಿಹಿಯಿದು.

5. ಖರ್ಜೂರದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಆಂಟಿ ಆಕ್ಸಿಡೆಂಟ್‌ಗಳಿವೆ. ಫ್ಲೇವನಾಯ್ಡ್‌ಗಳು, ಕೆರೋಟಿನಾಯ್ಡ್‌ಗಳು, ಗೂ ಫಿನೋಲಿಕ್‌ ಆಸಿಡ್‌ಗಳೂ ಇರುವುದರಿಂದ ಇವು ಅಪಾಯಕಾರಿ ರೋಗಗಳು ದೇಹವನ್ನು ಆಕ್ರಮಿಸುವುದನ್ನು ತಪ್ಪಿಸುತ್ತವೆ. ಹಾಗಾಗಿ ಬೆಳಗ್ಗೆ ನಿತ್ಯವೂ ಒಂದು ಅಥವಾ ಎರಡು ಖರ್ಜೂರವನ್ನು ತಿನ್ನುವುದರಿಂದ ಸಾಕಷ್ಟು ಆರೋಗ್ಯಕರ ಲಾಭಗಳನ್ನು ಪಡೆಯಬಹುದು.

ಇದನ್ನೂ ಓದಿ: Ghee Health Benefits: ಮಳೆಗಾಲದಲ್ಲಿ ಜಾಸ್ತಿ ತುಪ್ಪ ತಿನ್ನಿ; ಏಕೆಂದರೆ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

Foods To Avoid Eating With Bananas: ತಿಳಿದಿರಲಿ, ಬಾಳೆಹಣ್ಣಿನ ಜೊತೆಗೆ ಈ ಆಹಾರಗಳನ್ನು ಸೇರಿಸಿ ತಿನ್ನಬಾರದು!

ಬಾಳೆ ಹಣ್ಣನ್ನು ಯಾವುದರ ಜೊತೆ ತಿನ್ನಬಾರದು (Foods to avoid eating with bananas) ಎಂಬ ಸಾಮಾನ್ಯ ಸಂಗತಿಯನ್ನು ನಾವು ತಿಳಿದುಕೊಂಡರೆ, ನಮ್ಮ ಹಲವು ಆರೋಗ್ಯ ಸಮಸ್ಯೆಗಳ ಕಾರಣಗಳು ನಮಗೆ ಚಿಟಿಕೆ ಹೊಡೆದಷ್ಟೇ ಸುಲಭದಲ್ಲಿ ಮಾಯವಾದೀತು! ಈ ಬಗ್ಗೆ ಮಾಹಿತಿ ಇಲ್ಲಿದೆ.

VISTARANEWS.COM


on

Foods To Avoid Eating With Bananas
Koo

ಬಾಳೆಹಣ್ಣು ಸಾಮಾನ್ಯವಾಗಿ ಎಲ್ಲರಿಗೂ ಲಭ್ಯವಾಗುವ ಅತ್ಯಂತ ಸಾಮಾನ್ಯವಾದ ಹಣ್ಣು. ಬಡವನಿಂದ ಶ್ರೀಮಂತನವರೆಗೆ ಎಲ್ಲರಿಗೂ ಹಸಿವಾದಾಗ ಪಕ್ಕನೆ ನೆನಪಾಗುವ ಹಣ್ಣು ಎಂದರೆ ಇದು. ಪೋಷಕಾಂಶಗಳಿಂದ ಸಮೃದ್ಧವಾಗಿರುವ ಬಾಳೆಹಣ್ಣು ಬಡವನ ಸ್ನೇಹಿತ ಕೂಡಾ. ಇಂತಹ ಬಾಳೆಹಣ್ಣನ್ನು ಯಾವಾಗ ಬೇಕಾದ ಹಾಗೆ ನಾವು ತಿನ್ನಬಹುದೇ? ಹೇಗೆಲ್ಲ ಬಳಸುವುದು ಸೂಕ್ತವಲ್ಲ ಎಂಬ ಮಾಹಿತಿ ನಮಗಿದೆಯೇ? ಎಂಬಿತ್ಯಾದಿ ಪ್ರಶ್ನೆಗಳು ನಿಮ್ಮನ್ನು ಕಾಡಿದರೆ ಅದಕ್ಕೆ ಉತ್ತರ ಇಲ್ಲಿದೆ. ಈ ಹಣ್ಣನ್ನು ಯಾವುದರ ಜೊತೆ ತಿನ್ನಬಾರದು (Foods to avoid eating with bananas) ಎಂಬ ಕೆಲವು ಸಾಮಾನ್ಯ ಸಂಗತಿಗಳನ್ನು ನಾವು ತಿಳಿದುಕೊಂಡರೆ, ನಮ್ಮ ಹಲವು ಆರೋಗ್ಯ ಸಮಸ್ಯೆಗಳ ಕಾರಣಗಳು ನಮಗೆ ಚಿಟಿಕೆ ಹೊಡೆದಷ್ಟೇ ಸುಲಭದಲ್ಲಿ ಮಾಯವಾದೀತು.

ಬಾಳೆಹಣ್ಣು ಹಾಗೂ ಹಾಲು

ಆಯುರ್ವೇದದ ಪ್ರಕಾರ, ಬಾಳೆಹಣ್ಣಿನಲ್ಲಿ ಅಸಿಡಿಕ್‌ ಗುಣವೂ ಇದೆ. ಹಾಲು ಸಿಹಿ ಗುಣವನ್ನು ಹೊಂದಿದೆ. ಹೀಗಾಗಿ, ಹಾಲು ಹಾಗೂ ಬಾಳೆಹಣ್ಣು ಜೊತೆಯಾಗಿ ತೆಗೆದುಕೊಂಡರೆ, ಹೊಟ್ಟೆಯೊಳಗಿನ ಪ್ರಕೃತಿಗೆ ಗೊಂದಲವಾಗುವುದುಂಟು. ವಿರುದ್ಧ ಆಹಾರಗಳನ್ನು ಪರಸ್ಪರ ಸೇರಿಸಿ ತೆಗೆದುಕೊಂಡುರೆ ಅಡ್ಡ್‌ ಪರಿಣಾಮಗಳಾಗುವುದುಂಟು. ಆದರೆ, ಬಹುತೇಕರಿಗೆ ಈ ಬಗ್ಗೆ ಹೆಚ್ಚು ಅರಿವಿರುವುದಿಲ್ಲವಾದ್ದರಿಂದ ಈ ಎರಡು ವಿರುದ್ಧ ಗುಣಗಳ ಆಹಾರವನ್ನು ಬೆರೆಸಿ ಜೊತೆಯಾಗಿಯೂ ತೆಗೆದುಕೊಳ್ಳುವುದುಂಟು. ಇದರ ಪರಿಣಾಮವೆಂದರೆ, ಜೀರ್ಣಾಂಗವ್ಯೂಹದ ವ್ಯವಸ್ಥೆಯೊಳಗೆ ಆಮ್ಲ ಹೆಚ್ಚು ಉತ್ಪ್ತಿಯಾಗುತ್ತದೆ. ಇದಕ್ಕಾಗಿಯೇ ಅಸಿಡಿಟಿ ಸಮಸ್ಯೆಯೂ ಬಾಧಿಸುತ್ತದೆ. ಕೆಲವರಿಗೆ ಹೀಗೆ ವಿರುದ್ಧ ಆಹಾರಗಳ ಸೇವನೆಯಿಂದ ನೆಗಡಿ, ಶೀತ, ಕಫ, ಕೆಮ್ಮು ಮತ್ತಿತರ ಸಮಸ್ಯೆಗಳೂ ಬರುವುದುಂಟು.

Meat with banana

ಬಾಳೆಹಣ್ಣಿನ ಜೊತೆ ಮಾಂಸ

ಬಾಳೆಹಣ್ಣಿನಲ್ಲಿ ಪ್ಯೂರಿನ್‌ ಅಂಶವಿದೆ. ಇದು ಬೇಘ ಕರಗಲು ಸಹಾಯ ಮಾಡುತ್ತದೆ. ಆದರೆ ಮಾಂಸದಲ್ಲಿರುವ ಅತ್ಯಂತ ಹೆಚ್ಚಿನ ಪ್ರೊಟೀನ್‌ ಜೀರ್ಣಕ್ರಿಯೆಯನ್ನು ನಿಧಾನ ಮಾಡುತ್ತದೆ. ಆರೋಗ್ಯ ಹಾಗೂ ಆಹಾರ ತಜ್ಞರ ಪ್ರಕಾರ ಇವೆರೆಡರೂ ಹೀಗಾಗಿ ವಿರುದ್ಧ ಗುಣಗಳನ್ನು ಹೊಂದಿರುವುದರಿಂದ ದೇಹದಲ್ಲಿ ಗ್ಯಾಸ್‌ ಉತ್ಪತ್ತಿ ಮಾಡುತ್ತವೆ.

ಬಾಳೆಹಣ್ಣು ಹಾಗೂ ಬೇಕಿಂಗ್‌

ಬಹಳಷ್ಟು ಮಂದಿ ಹೊಸ ಹೊಸ ರೆಸಿಪಿಗಳೊಂದಿಗೆ ಅಂತರ್ಜಾಲದಲ್ಲಿ, ಸಾಮಾಜಿಕ ಜಾಲತಾಣದಲ್ಲಿ ನೀವು ನೋಡಿರಬಹುದು. ಅಂಥಹ ರೆಸಿಪಿಗಳ ಪೈಕಿ ಬಹುತೇಕರು ಟ್ರೈ ಮಾಡುವುದು ಬಾಳೆಹಣ್ಣನ್ನು ಹಾಕಿ ಕೇಕ್‌, ಬ್ರೆಡ್‌ ಮತ್ತಿತರ ತಿನಿಸುಗಳನ್ನು ಬೇಕ್‌ ಮಾಡುವುದು. ಬಾಳೆಹಣ್ಣು ಹಾಗೂ ಬ್ರೆಡ್‌ ಎರಡೂ ಗುಣದಲ್ಲಿ ವಿರುದ್ಧವಾದವುಗಳು. ಇನ್ನು ಬಾಳೆಹಣ್ಣನ್ನೇ ಸೇರಿಸಿ ಬ್ರೆಡ್‌/ಕೇಕ್‌ ಮಾಡಿದರೆ ಹೇಗೆ? ಸಾಮಾನ್ಯವಾಗಿ ಬಾಳೆಹಣ್ಣು ಬೇಗ ಕರಗಿದರೆ, ಬೇಕ್‌ ಮಾಡಿದ ಕೇಕ್ ಕರಗಲು ಹೆಚ್ಚು ಕಾಳ ತೆಗೆದುಕೊಳ್ಳುತ್ತದೆ. ಹಾಗಾಗಿ ಇವೆರಡೂ ಕೂಡಾ ವಿರುದ್ಧ ಗುಣಗಳನ್ನು ಹೊಂದಿರುವಂಥದ್ದಾಗಿದ್ದು, ಜೀರ್ಣಕ್ರಿಯೆಯಲ್ಲಿ ಇದು ಏರುಪೇರು ಉಂಟು ಮಾಡುತ್ತದೆ.

Bananas and citrus fruits

ಬಾಳೆಹಣ್ಣು ಹಾಗೂ ಸಿಟ್ರಸ್‌ ಹಣ್ಣುಗಳು

ಬಾಳೆಹಣ್ಣಿನ ಜೊತೆಗೆ ಕೆಲವು ಹಣ್ಣುಗಳನ್ನು ಮಿಶ್ರ ಮಾಡಿ ತಿನ್ನುವುದುದಂಟು. ಬಗೆಬಗೆಯ ಹಣ್ಣುಗಳನ್ನು ಸೇರಿಸಿ ತಿಂದರೆ ಒಂದು ಹೊತ್ತಿನ ಊಟ ಮಾಡಿದಂತೆ ಎಂದು ಅಂದುಕೊಳ್ಳುವುದುಂಟು. ಮುಖ್ಯವಾಗಿ ಸಿಟ್ರಸ್‌ ಹಣ್ಣುಗಳಲ್ಲಿ ಆಮ್ಲೀಯ ಗುಣ ಹೆಚ್ಚಿದೆ. ಉದಾಹರನೆಗೆ ನಿಂಬೆಹಣ್ಣು, ದಾಲಿಂಬೆ, ಸ್ಟ್ರಾಬೆರಿ ಮತ್ತಿತರ ಹಣ್ಣೂಗಳನ್ನು ಬಾಳೆಹಣ್ಣಿನ ಜೊತೆಗೆ ತಿನ್ನಬೇಡಿ. ಹೀಗೆ ಮಾಡುವದರಿಂದ ದೇಹದ ತ್ರಿದೋಷಗಳಾದ ವಾತ, ಪಿತ್ತ, ಕಫಗಳಲ್ಲಿ ವ್ಯತ್ಯಾಸವಾಗಿ, ತಲೆನೋವು, ಶೀತ, ನೆಗಡಿ, ತಲೆಸುತ್ತು, ಮತ್ತಿತರ ತೊಂದರೆಗಳೂ ಕಾಡಬಹುದು.

ಇದನ್ನೂ ಓದಿ: Healthy Food: ಈ ಎಲ್ಲ ರಾಸಾಯನಿಕಗಳು ನೀವು ತಿನ್ನುವ ಆಹಾರದಲ್ಲಿದೆಯೇ? ಹಾಗಾದರೆ ಎಚ್ಚರ!

Continue Reading

ಆರೋಗ್ಯ

Drumsticks For Weight Loss: ನುಗ್ಗೆಕಾಯಿ ತಿಂದೂ ತೂಕ ಇಳಿಸಿಕೊಳ್ಳಬಹುದು!

ನುಗ್ಗೆಕಾಯಿಯು ವ್ಯಂಜನಗಳ ರುಚಿಯನ್ನು ಮಾತ್ರವೇ ಹೆಚ್ಚಿಸುವುದಲ್ಲ, ಹೆಚ್ಚಿದ ತೂಕವನ್ನೂ ಇಳಿಸುತ್ತದೆ (Drumsticks for Weight Loss) ಎನ್ನುತ್ತವೆ ಅಧ್ಯಯನಗಳು. ನುಗ್ಗೆಯನ್ನು ಯಾವುದೇ ರೀತಿಯಲ್ಲಿ ಆಹಾರದ ಭಾಗವನ್ನಾಗಿ ಮಾಡಿಕೊಂಡರೂ ಲಾಭವಿದೆ. ಪ್ರಯತ್ನಿಸಿ ನೋಡಿ.

VISTARANEWS.COM


on

Drumsticks For Weight Loss
Koo

ಹಳೆಯ ಕಾಲದ ಜನರನ್ನು ಕೇಳಿದರೆ ಹೊಟ್ಟೆಯ ಮೇಲೊಂದು ಪುಟ್ಟ ಡೊಳ್ಳು ಕೂರುವುದು ಸಿರಿವಂತಿಕೆಯ ಲಕ್ಷಣ ಎನ್ನುತ್ತಿದ್ದರು. ಇಂದಿನ ಕಾಲದಲ್ಲಿ ಡೊಳ್ಳು ಸಿರಿಯಲ್ಲ, ಆರೋಗ್ಯಕ್ಕೆ ಹೊರೆ! ಬರೀ ಹೊಟ್ಟೆ ಕರಗಿಸುವುದು ಮಾತ್ರವೇ ಸವಾಲಲ್ಲ, ದೇಹ ತೂಕ ಕರಗಿಸುವುದೇ ದೊಡ್ಡ ಸವಾಲು ಎನಿಸುತ್ತದೆ. ಇದಕ್ಕಾಗಿ ಊಟ ಬಿಟ್ಟು, ನಿದ್ದೆಗೆಟ್ಟು, ತಲೆ ಕೆಟ್ಟು ಪ್ರಯತ್ನಿಸಿದರೂ ಯಶಸ್ಸು ಕಾಣದೆ ಇರಬಹುದು. ಇಂಥ ಸಂದರ್ಭದಲ್ಲಿ ಎಲ್ಲರಿಗೂ ಮೆಚ್ಚಾಗುವ ನುಗ್ಗೆಕಾಯಿ (Drumsticks for Weight Loss) ಮತ್ತು ನುಗ್ಗೆ ಸೊಪ್ಪುಗಳನ್ನು ತೂಕ ಇಳಿಸುವುದಕ್ಕಾಗಿ ಬಳಸಬಹುದೇ? ನೋಡೋಣ ಇದರ ಗುಣಗಳನ್ನು.

Moringa drumsticks

ದೇಹದಲ್ಲಿ ಜಮೆಯಾಗುವ ಕೊಬ್ಬನ್ನು ವಿಘಟಿಸಲು ಮತ್ತು ಕರಗಿಸಲು ನುಗ್ಗೆಸೊಪ್ಪು ಮತ್ತು ಕಾಯಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತವೆ ಎನ್ನುವುದನ್ನು ಹಲವು ಅಧ್ಯಯನಗಳು ಸಾಬೀತು ಪಡಿಸಿವೆ. ಮಾತ್ರವಲ್ಲ, ಬಹಳಷ್ಟು ಬಗೆಯ ಪೋಷಕಾಂಶಗಳು ನುಗ್ಗೆಯಲ್ಲಿದ್ದು, ದೇಹಕ್ಕೆ ಹಲವು ರೀತಿಯಲ್ಲಿ ಅನುಕೂಲಗಳನ್ನು ಒದಗಿಸಿಕೊಡುತ್ತದೆ. ಭಾರತೀಯ ಸೂಪಶಾಸ್ತ್ರದಲ್ಲಿ ಶತಮಾನಗಳಿಂದ ಬಳಕೆಯಲ್ಲಿರುವ ನುಗ್ಗೆ, ಏಷ್ಯಾಖಂಡದ ಉದ್ದಗಲಕ್ಕೆ ಪ್ರಚಲಿತದಲ್ಲಿದೆ. ಇದು ತೂಕ ಇಳಿಕೆಗೆ ಹೇಗೆ ನೆರವಾಗುತ್ತದೆ ಎಂಬ ವಿವರಗಳಿವು.

weight loss

ತೂಕ ಇಳಿಕೆಗೆ ಬೇಕು

ನುಗ್ಗೆಯಲ್ಲಿ ಉತ್ಕರ್ಷಣ ನಿರೋಧಕಗಳು ಹೇರಳವಾಗಿವೆ. ವಿಟಮಿನ್‌ ಎ, ಇ, ಸಿ ಸತ್ವಗಳು, ಕ್ಯಾಲ್ಶಿಯಂ, ಪೊಟಾಶಿಯಂ, ಕಬ್ಬಿಣದಂಥ ಖನಿಜಗಳು ನುಗ್ಗೆಯಲ್ಲಿ ಭರಪೂರ ಇವೆ. ಹೆಚ್ಚಿನ ಪೋಷಕಾಂಶಯುಕ್ತ ಆಹಾರಗಳನ್ನು ಸೇವಿಸಿದರೆ, ಕಳ್ಳ ಹಸಿವೆಯನ್ನು ತಡೆಯಬಹುದು. ಇದರಿಂದ ಸತ್ವವಿಲ್ಲದ, ಕ್ಯಾಲರಿ ತುಂಬಿದ ಸಕ್ಕರೆ, ಕೊಬ್ಬಿನ ಆಹಾರಗಳ ಸೇವನೆಯ ಬಯಕೆಯನ್ನು ಹತ್ತಿಕ್ಕುವುದಕ್ಕೆ ಅನುಕೂಲವಾಗುತ್ತದೆ.

ನಾರುಭರಿತ

ನುಗ್ಗೆಕಾಯಿಯಲ್ಲಿ ನಾರು ವಿಫುಲವಾಗಿದೆ. ನಾರುಭರಿತ ಆಹಾರಗಳ ಸೇವನೆಯಿಂದ ದೇಹಕ್ಕೆ ನಾನಾ ರೀತಿಯ ಲಾಭಗಳಿವೆ. ನಾರು ಹೆಚ್ಚು ತಿಂದಾಗ ಬೇಗ ಹೊಟ್ಟೆ ತುಂಬಿದಂತೆ ಭಾಸವಾಗಿ, ದೀರ್ಘಕಾಲದವರೆಗೆ ಹಸಿವಾಗದಂತೆ ಉಳಿಯುತ್ತದೆ. ಇವುಗಳು ಜೀರ್ಣವಾಗುವುದಕ್ಕೆ ಪಿಷ್ಟಭರಿತ ಆಹಾರಗಳಿಗಿಂತ ಹೆಚ್ಚಿನ ಸಮಯ ಬೇಕು. ಇದರಿಂದ ದೇಹಕ್ಕೆ ಅಗತ್ಯವಾದ್ದಕ್ಕಿಂತ ಹೆಚ್ಚಿನ ಆಹಾರ ಸೇವಿಸುವುದನ್ನು ತಪ್ಪಿಸಬಹುದು.

ನಾರು ಹೆಚ್ಚಿರುವ ಆಹಾರಗಳು ನಮ್ಮ ಜೀರ್ಣಾಂಗಗಳನ್ನು ಶುದ್ಧಗೊಳಿಸುತ್ತವೆ. ಕರಗಬಲ್ಲ ನಾರುಗಳು ನಮ್ಮ ದೇಹದಲ್ಲಿನ ಕೊಬ್ಬಿನಾಂಶವನ್ನು ವಿಘಟಿಸಿದರೆ, ಕರಗದೆ ಇರುವಂಥ ನಾರುಗಳು ಜೀರ್ಣಾಂಗಗಳ ಕ್ಷಮತೆಯನ್ನು ಹೆಚ್ಚಿಸುತ್ತವೆ. ಇವುಗಳ ಜೊತೆಗೆ, ನುಗ್ಗೆಯಲ್ಲಿನ ಕ್ಯಾಲರಿ ಕಡಿಮೆ. ಮನಸ್ಸಿಗೆ ತೃಪ್ತಿಯಾಗುವಷ್ಟು ತಿಂದರೂ, ಸಿಕ್ಕಾಪಟ್ಟೆ ಕ್ಯಾಲರಿಗಳೇನೂ ದೇಹ ಸೇರುವುದಿಲ್ಲ. ಹಾಗಾಗಿ ನುಗ್ಗೆ ತಿನ್ನುವಾಗ ಹೆಚ್ಚು ಯೋಚಿಸಬೇಕಿಲ್ಲ.

ಚಯಾಪಚಯ ಹೆಚ್ಚಳ

ತೂಕ ಇಳಿಕೆಗಾಗಿಯೇ ಆಹಾರಕ್ರಮವನ್ನು ರೂಪಿಸಿಕೊಂಡಿದ್ದರೆ, ಅದರಲ್ಲಿ ನುಗ್ಗೆಗೆ ಜಾಗ ಬೇಕೇಬೇಕು. ಇದು ದೇಹದ ಚಯಾಪಚಯವನ್ನು ಹೆಚ್ಚಿಸುತ್ತದೆ. ಅಂದರೆ ಇದರಲ್ಲಿರುವ ಐಸೊಥಿಯೊಸೈನೇಟ್‌ಗಳು ದೇಹದ ಶಕ್ತಿ ಬಳಕೆಯ ಪ್ರಮಾಣವನ್ನು ಹೆಚ್ಚಿಸುತ್ತವೆ. ಅಂದರೆ ನಾವು ಬಳಸುವ ಶಕ್ತಿಗಿಂತ ದೇಹಕ್ಕೆ ದೊರೆಯುವ ಶಕ್ತಿ ಕಡಿಮೆಯಾದರೆ ಸಹಜವಾಗಿಯೇ ದೇಹದ ತೂಕ ಇಳಿಯುತ್ತದೆ.

Sugar control

ಸಕ್ಕರೆಮಟ್ಟ ನಿಯಂತ್ರಣ

ತೂಕ ನಿಯಂತ್ರಿಸುವಾಗ ರಕ್ತದಲ್ಲಿನ ಸಕ್ಕರೆ ಮಟ್ಟದ ನಿಯಂತ್ರಣವನ್ನೂ ಅಗತ್ಯವಾಗಿ ಮಾಡಬೇಕಾಗುತ್ತದೆ. ರಕ್ತದಲ್ಲಿ ಸಕ್ಕರೆಯಂಶ ಹತೋಟಿಯಲ್ಲಿಲ್ಲದೆ ಏರಿಳಿತವಾಗುತ್ತಿದ್ದರೆ, ತಿನ್ನುವ ಆಹಾರದ ಪ್ರಮಾಣ, ಅಗತ್ಯ ಮತ್ತು ಬಯಕೆಗಳೂ ನಿಯಂತ್ರಣಕ್ಕೆ ದೊರೆಯುವುದಿಲ್ಲ. ಅನಾರೋಗ್ಯಕರ ಆಹಾರಗಳತ್ತ ನಮ್ಮ ಚಿತ್ತ ಹೊರಳಬಹುದು. ಇಂಥವೆಲ್ಲದಕ್ಕೂ ಕಡಿವಾಣ ಹಾಕಲು ಸುಲಭವಾಗುವಂತೆ, ನುಗ್ಗೆಕಾಯಿ ಸಕ್ಕರೆ ಮಟ್ಟವನ್ನು ಏರಿಳಿತವಿಲ್ಲದಂತೆ ಮಾಡಲು ನೆರವಾಗುತ್ತದೆ.

ಡಿಟಾಕ್ಸ್‌ ಪೇಯ

ನುಗ್ಗೆ ಸೊಪ್ಪಿನ ಚಹಾವನ್ನು ಬೆಳಗಿನ ಖಾಲಿ ಹೊಟ್ಟೆಯಲ್ಲಿ ಡಿಟಾಕ್ಸ್‌ ಪೇಯವಾಗಿ ಬಳಸಲಾಗುತ್ತದೆ. ದೇಹದಲ್ಲಿರುವ ಕಶ್ಮಲಗಳನ್ನು ಹೊರಹಾಕಲು ಇದು ನೆರವಾಗುತ್ತದೆ. ಅದರಲ್ಲೂ ನುಗ್ಗೆ ಸೊಪ್ಪಿನ ಕಷಾಯವನ್ನು ಬೆಳಗಿನ ಹೊತ್ತು ಸೇವಿಸಿದಾದ ಹೊಟ್ಟೆಯ ಭಾಗದಲ್ಲಿ ಜಮೆಯಾಗಿರುವ ಕೊಬ್ಬನ್ನು ಕತ್ತರಿಸಲು ಸಹಾಯವಾಗುತ್ತದೆ ಎನ್ನುತ್ತವೆ ಅಧ್ಯಯನಗಳು.

ಇದನ್ನೂ ಓದಿ: Tips to Keep Joints Healthy: ಹೀಗೆ ಮಾಡಿ, ಕೀಲುಗಳ ಸ್ವಾಸ್ಥ್ಯ ಕಾಪಾಡಿ

Continue Reading

ಆರೋಗ್ಯ

Masala Tea: ಚಳಿಗಾಲವೆಂದು ಅತಿಯಾಗಿ ಮಸಾಲೆ ಚಹಾ ಕುಡಿಯುತ್ತೀರಾ? ಹಾಗಾದರೆ ಎಚ್ಚರ!

ಯಾವುದೇ ಕಾಲವಿರಲಿ, ಚಹಾವನ್ನು (Masala Tea) ಹಿತಮಿತವಾಗಿ ಕುಡಿದರೆ, ಇಂಥ ಸಮಸ್ಯೆಗಳು ಬರದಂತೆ ನೋಡಿಕೊಳ್ಳಬಹುದು. ಈ ಕುರಿತ ಆರೋಗ್ಯ ಸಲಹೆ ಇಲ್ಲಿದೆ.

VISTARANEWS.COM


on

Masala Tea
Koo

ಬಹಳಷ್ಟು ಮಂದಿಗೆ ಎದ್ದ ಕೂಡಲೇ, ಕೈಯಲ್ಲೊಂದು ಕಪ್‌ ಚಹಾ ಹಿಡಿಯದಿದ್ದರೆ, ಬೆಳಗು ಬೆಳಗೆನಿಸುವುದೇ ಇಲ್ಲ. ಬಿಸಿ ಬಿಸಿಯಾದ ಚಹಾ ಹೀರುತ್ತಾ ಒಂದ್ಹತ್ತು ನಿಮಿಷವಾದರೂ ಕೂತರೆ ಏನೋ ಒಂದು ನೆಮ್ಮದಿ. ಅದು ಚಳಿಗಾಲವೇ ಇರಲಿ, ಮಳೆಗಾಲವೇ ಇರಲಿ, ಸುಡು ಸುಡು ಬೇಸಿಗೆಯೇ ಇರಲಿ, ಈ ಪರಿಪಾಠ ಬಹಳಷ್ಟು ಮಂದಿಗೆ ಅಭ್ಯಾಸವಾಗಿಬಿಟ್ಟಿದೆ. ಆರೋಗ್ಯದ ದೃಷ್ಠಿಯಿಂದ ಬೆಳಗ್ಗೆ ಚಹಾ ಕುಡಿಯುವುದನ್ನು ಬಿಡಿ ಎಂಬ ಸಲಹೆಗಳನ್ನು ಕೇಳಿದರೂ ಅನುಸರಿಸುವುದು ಹಲವರಿಗೆ ಸಾಧ್ಯವಾಗುವುದೇ ಇಲ್ಲ. ಒಂದೆರಡು ದಿನ ಬಿಟ್ಟು ಮತ್ತೆ, ಯಥಾಪ್ರಕಾರ ಮನಸ್ಸು ಚಹಾ (Masala Tea) ಬಯಸುತ್ತದೆ. ಚಹಾದಲ್ಲೂ, ಒಬ್ಬೊಬ್ಬರು ಒಂದೊಂದು ಬಗೆಯ ಚಹಾ ಇಷ್ಟಪಡುವುದೂ ಇದೆ. ಒಬ್ಬೊಬ್ಬರದು ಒಂದೊಂದು ಆದ್ಯತೆ. ಕೆಲವರಿಗೆ ಸಾದಾ ಚಹಾ, ಬ್ಲ್ಯಾಕ್‌ ಚಹಾ, ಗ್ರೀನ್‌ ಚಹಾ ಹೀಗೆ ಬಗೆಬಗೆಯ ಚಹಾಗಳಲ್ಲಿ ಒಂದು ಅಭ್ಯಾಸವಾದರೆ, ಇನ್ನೂ ಕೆಲವರಿಗೆ ಬೆಳಗ್ಗೆ ಶುಂಠಿ ಸೇರಿದಂತೆ ತುಳಸಿ, ಚೆಕ್ಕೆ, ಏಲಕ್ಕಿ, ಕರಿಮೆಣಸು ಹೀಗೆ ಹಲವು ಬಗೆಯ ಮಸಾಲೆಗಳನ್ನು ಹಾಕಿದ ಮಸಾಲೆ ಚಹಾ ಕುಡಿಯುವ ಅಭ್ಯಾಸ. ಮುಖ್ಯವಾಗಿ ಚಳಿಗಾಲ ಬಂದೊಡನೆ ಈ ಮಸಾಲೆ ಚಹಾದ ಬಯಕೆ ಹೆಚ್ಚು. ಚಳಿಗಾಲಕ್ಕೆ ಈ ಎಲ್ಲ ಮಸಾಲೆಗಳು ಒಳ್ಳೆಯದು ಎಂದು ನಾವೂ ಆಗಾಗಬೆಚ್ಚಗೆ ಈ ಮಸಾಲೆ ಚಹಾವನ್ನು (Masala Tea) ಹೊಟ್ಟೆಗಿಳಿಸುತ್ತಲೇ ಇರುತ್ತೇವೆ. ಆದರೆ, ಸಾಧಕ ಬಾಧಕಗಳ ಬಗ್ಗೆ ಕೊಂಚವಾದರೂ ಯೋಚಿಸುತ್ತೇವಾ?

Masala tea/chai

ಹೌದು. ಯಾವುದೂ ಅತಿಯಾಗಬಾರದು ಎಂದು ನಮ್ಮ ಹಿರಿಯರೇ ಹೇಳಿ ಹೋಗಿದ್ದಾರೆ. ಹಾಗೆಯೇ ಚಹಾದ ಮಸಾಲೆಯೂ ಅತಿಯಾಗಬಾರದು. ಈ ಮಸಾಲೆಗಳೆಲ್ಲ ಚಳಿಗಾಲಕ್ಕೆ ಒಳ್ಳೆಯದೇ ಆಗಿರುವುದರಿಂದ ಚಿಂತೆಯೇ ಇಲ್ಲ ಎಂದು ಅಂದುಕೊಂಡರೆ ತಪ್ಪಾದೀತು. ಯಾಕೆಂದರೆ, ಚಿಂತೆ ಮಾಡುವ ಪ್ರಸಂಗವೂ ಬಂದೀತು. ಯಾಕೆಂದರೆ, ಮಸಾಲೆ ಅಧಿಕವಾದರೆ, ತೊಂದರೆಯೂ ತಪ್ಪಿದ್ದಲ್ಲ. ಹಾಗಾದರೆ ಬನ್ನಿ, ಮಸಾಲೆಗಳ ಅತಿಯಾದ ಸೇವನೆಯಿಂದ ಯಾವೆಲ್ಲ ಸಮಸ್ಯೆಗಳು ನಿಮ್ಮನ್ನು ಕಾಡಬಹುದು ಎಂಬುದನ್ನು ನೋಡೋಣ.

Indian Masala Tea

ಮಿತವಾಗಿ ಸೇವಿಸಿ

ಮಸಾಲೆಗಳ ಸೇವನೆ ಚಹಾದ ಮೂಲಕ ಅಥವಾ ಇನ್ನಾವುದೇ ಆಹಾರ ಪದಾರ್ಥಗಳ ಮೂಲಕ ಅತಿಯಾದರೆ, ಕೆಲವೊಮ್ಮೆ ಜೀರ್ಣಕ್ರಿಯೆಯಲ್ಲೂ ತೊಂದರೆಗಳಾಗಬಹುದು. ಹೊಟ್ಟೆನೋವು, ಮಲಬದ್ಧತೆ, ಅಜೀರ್ಣದಂತಹ ತೊಂದರೆಗಳೂ ಕಾಡಬಹುದು. ಹಾಗಾಗಿ ಮಸಾಲೆಗಳಿಂದ ಲಾಭ ಪಡೆಯಬೇಕೆಂದರೆ, ಮಿತವಾಗಿ ಸೇವಿಸಬೇಕು.

ಸಮಸ್ಯೆಗೂ ಕಾರಣವಾಗಬಹುದು

ಮಸಾಲೆ ಚಹಾದಲ್ಲಿ ಸಾಕಷ್ಟು ಕೆಫೀನ್‌ ಇರುವುದರಿಂದ ಇದು ಅಧಿಕವಾದರೆ, ಒತ್ತಡ ಹಾಗೂ ದುಗುಡ, ಉದ್ವೇಗದಂತಹ ಸಮಸ್ಯೆಗಳೂ ಬರಬಹುದು. ಹಾಗಾಗಿ ಮಸಾಲೆ ಚಹಾವಿರಲಿ, ಇನ್ನಾವುದೇ ಚಹಾವಿರಲಿ, ಅತಿಯಾಗಿ ಕುಡಿಯಬಾರದು.

Young woman scratching her itchy arm.

ಅಲರ್ಜಿ ತರಬಹುದು

ಕೆಲವು ಮಂದಿಗೆ ಕೆಲವು ಮಸಾಲೆಗಳು ಅಲರ್ಜಿಯನ್ನೂ ತರಬಹುದು. ಹಾಗಾಗ ಅಲರ್ಜಿ ಸಮಸ್ಯೆಯ ಮಂದಿ, ಇಂತಹ ಮಸಾಲೆಗಳ ಸೇವನೆಯಿಂದ ದೂರವಿರುವುದು ಒಳ್ಳೆಯದು.

ರಕ್ತದೊತ್ತಡ ಏರುಪೇರಾಗಬಹುದು

ಮಸಾಲೆಗಳ ಅತಿಯಾದ ಸೇವನೆಯಿಂದ ರಕ್ತದೊತ್ತಡದಲ್ಲೂ ಏರುಪೇರಾಗಬಹುದು. ಹಾಗಾಗಿ ಅಧಿಕ ರಕ್ತದೊತ್ತಡ ಇರುವ ಮಂದಿ ಹೆಚ್ಚು ಮಸಾಲೆಗಳ ಸೇವನೆಯಿಂದ ದೂರ ಉಳಿಯುವುದು ಒಳ್ಳೆಯದು.

Unhealthy Fastfood Stomach Heartburn

ಎದೆ ಉರಿ ಹೆಚ್ಚಬಹುದು

ಇನ್ನೂ ಕೆಲವರಿಗೆ ಮಸಾಲೆ ಚಹಾ ಹೆಚ್ಚು ಕುಡಿಯುವುದರಿಂದ ಎದೆಯುರಿಯೂ ಬರಬಹುದು.

ತುರಿಕೆಗೆ ಕಾರಣವಾಗಬಹುದು

ಕೆಲವು ಮಂದಿಗೆ ಮಸಾಲೆ ಚಹಾದಿಂದ ಅಂದರೆ ಅದರಲ್ಲಿ ಹಾಕಿರುವ ಕರಿ ಮೆಣಸಿನಿಂದಾಗಿ ತುರಿಕೆಯಂತಹ ಅಲರ್ಜಿಗಳೂ ಉಂಟು ಮಾಡುತ್ತವೆ. ಮುಖ್ಯವಾಗಿ ಗರ್ಭಿಣಿಯರಿಗೆ ಇಂಥ ಅಲರ್ಜಿಗಳಾಗುವ ಸಂಭವ ಹೆಚ್ಚು. ಹಾಗಾಗಿ ಗರ್ಭಿಣಿಯರು ಅತಿಯಾದ ಮಸಾಲೆಗಳಿಂದ ದೂರವಿರುವುದು ಒಳ್ಳೆಯದು.

ಹಾಗಾಗಿ, ಯಾವುದೇ ಕಾಲವಿರಲಿ, ಚಹಾವನ್ನು ಹಿತಮಿತವಾಗಿ ಕುಡಿದರೆ, ಇಂಥ ಸಮಸ್ಯೆಗಳು ಬರದಂತೆ ನೋಡಿಕೊಳ್ಳಬಹುದು. ಇಲ್ಲವಾದರೆ, ತೊಂದರೆ ಖಂಡಿತ.

ಇದನ್ನೂ ಓದಿ: Keep Your Heart Healthy: ಹೀಗೆ ಮಾಡಿ ಹೃದಯವನ್ನು ಭದ್ರವಾಗಿಟ್ಟುಕೊಳ್ಳಿ!

Continue Reading

ಆರೋಗ್ಯ

Hair Care Tips: ಕೂದಲು ಉದುರೋದಕ್ಕೆ ಕಾರಣ ಏನು ಅನ್ನೋದನ್ನ ಮೊದಲು ತಿಳಿದುಕೊಳ್ಳಿ!

ವಯಸ್ಸಾದಂತೆ ಹಣೆ ಅಗಲವಾಗುತ್ತಾ ಹೋಗುವುದು ಸಾಮಾನ್ಯ ಸಂಗತಿ. ಇದು ವಂಶವಾಹಿಗಳಿಂದಲೂ ಬರುವುದಕ್ಕೆ ಸಾಧ್ಯ. ಮಹಿಳೆಯರಿಗಿಂತ ಪುರುಷರಲ್ಲಿ ಹೆಚ್ಚಾಗಿ ಬೊಕ್ಕತಲೆಯ ಸಮಸ್ಯೆ ಕಾಣುತ್ತದೆ. ಆದರೆ ಕಿರಿಯ ವಯಸ್ಸಿನಲ್ಲೇ ಹಣೆ ಅಗಲವಾಗಿ, ಕೂದಲ ಗಾತ್ರ ಕಿರಿದಾಗುವುದು (Hair Care Tips) ಇತ್ತೀಚಿನ ವರ್ಷಗಳಲ್ಲಿ ಹೆಚ್ಚುತ್ತಿದೆ.

VISTARANEWS.COM


on

Hair Care Tips
Koo

ಕೂದಲು ಉದುರುವುದು ಈಗ ಸಮಸ್ಯೆಯ ಬದಲಿಗೆ ಎಲ್ಲರ ಪಾಲಿನ ನಿತ್ಯಸತ್ಯವಾಗಿ ಪರಿಣಮಿಸಿದೆ. ಆದರೆ ಯಾವಾಗ ಹಣೆ ದೊಡ್ಡದಾಗುತ್ತಾ ಕೂದಲಿನ ಹಣೆಬರಹ ಸಣ್ಣದಾಗಲು ಪ್ರಾರಂಭಿಸುತ್ತದೊ ಆಗ ಆತಂಕವೂ ಶುರುವಾಗುತ್ತದೆ. ʻಛೇ! ಕೂದಲು ಉದುರುತ್ತಿದೆʼ ಎಂದು ಎದುರಿಗೆ ದೇಶಾವರಿ ಸಂತಾಪ ಸೂಚಿಸುವ ಜನ, ಬೆನ್ನ ಹಿಂದೆ ಬೊಕ್ಕ ತಲೆಯವರಿಗೆ ನಾನಾ ಹೆಸರಿಡುತ್ತಾರೆ ಎಂಬುದು ರಹಸ್ಯವೇನಲ್ಲ. ಹೇಳುವವರು ಏನೇ ಹೇಳಲಿ, ಆದರೆ ಕೂದಲು ಉದುರಿ ತಲೆ ಬೋಳಾಗುವುದು (Hair Care Tips ) ಸಂತೋಷದ ವಿಷಯವಂತೂ ಖಂಡಿತಾ ಅಲ್ಲ.

Middle Aged Woman Thinking Hard

ವಯಸ್ಸಾದಂತೆ ಹಣೆ ಅಗಲವಾಗುತ್ತಾ ಹೋಗುವುದು ಸಾಮಾನ್ಯ ಸಂಗತಿ. ಇದು ವಂಶವಾಹಿಗಳಿಂದಲೂ ಬರುವುದಕ್ಕೆ ಸಾಧ್ಯ. ಮಹಿಳೆಯರಿಗಿಂತ ಪುರುಷರಲ್ಲಿ ಹೆಚ್ಚಾಗಿ ಬೊಕ್ಕತಲೆಯ ಸಮಸ್ಯೆ ಕಾಣುತ್ತದೆ. ಆದರೆ ಕಿರಿಯ ವಯಸ್ಸಿನಲ್ಲೇ ಹಣೆ ಅಗಲವಾಗಿ, ಕೂದಲ ಗಾತ್ರ ಕಿರಿದಾಗುವುದು ಇತ್ತೀಚಿನ ವರ್ಷಗಳಲ್ಲಿ ಹೆಚ್ಚುತ್ತಿದೆ. ಒಮ್ಮೆ ಕೂದಲ ಅಂಚುಗಳು ಹಿಂದೆ ಸರಿದು, ಹಣೆ ಅಗಲವಾಗುತ್ತಾ ಹೋದರೆ ಅದನ್ನು ನಿಲ್ಲಿಸುವುದು ಕಷ್ಟ. ಹೆಚ್ಚಿನ ಸಾರಿ ಇದಕ್ಕೆ ಪರಿಹಾರ ಹುಡುಕುವ ಭರದಲ್ಲಿ (haircare tips) ಇನ್ನಷ್ಟು ಹಾನಿಯನ್ನೇ ಮಾಡಿಕೊಳ್ಳುವ ಸಂದರ್ಭಗಳು ಹೆಚ್ಚು. ಆದರೆ ಹೀಗೇಕಾಗುತ್ತಿದೆ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳುವುದಿಲ್ಲ

ಹಾನಿ ಹೆಚ್ಚುವುದು ಹೀಗೆ!

ಕೂದಲು ಉದುರುತ್ತಿರುವ ಕಾರಣವನ್ನು ಅರ್ಥ ಮಾಡಿಕೊಳ್ಳದೇ ನಮ್ಮಿಷ್ಟದಂತೆ ಮನೆಮದ್ದು ಮಾಡಿಕೊಳ್ಳುವುದರಿಂದ ಸಮಸ್ಯೆ ಬಿಗಡಾಯಿಸಬಹುದು. ಕೂದಲು ಉದುರುವುದಕ್ಕೆ ಕಾರಣಗಳು ನಾನಾ ರೀತಿಯಲ್ಲಿ ಇರುತ್ತವೆ. ಅತಿಯಾದ ಒತ್ತಡ, ನಿದ್ದೆಗೆಡುವುದು ಕಾರಣವಾಗಿದ್ದರೆ ಅದಕ್ಕೆ ಪರಿಹಾರ ಕಂಡುಕೊಳ್ಳಿ. ಸಮತೋಲನವಿಲ್ಲದ ಆಹಾರ ಪದ್ಧತಿ ನಿಮ್ಮದಾಗಿದ್ದರೆ, ಪೌಷ್ಟಿಕಾಂಶ ಕೂದಲಿಗೆ ಮಾತ್ರವಲ್ಲ, ಇಡೀ ದೇಹಕ್ಕೇ ಬೇಕಾಗುತ್ತದೆ. ಹಾರ್ಮೋನುಗಳ ತೊಂದರೆಯಿಂದಲೂ ಈ ಸಮಸ್ಯೆ ಕಾಣಬಹುದು. ಸೂಕ್ಷ್ಮ ಪೋಷಕಾಂಶಗಳ ಕೊರತೆ ಇದ್ದರೆ ಅದರ ಅಡ್ಡ ಪರಿಣಾಮ ಕೂದಲಿನ ಮೇಲಾಗುವ ಸಾಧ್ಯತೆಯಿದೆ. ಇಂಥ ಸಮಸ್ಯೆಗಳ ಪರಿಹಾರಕ್ಕೆ ವೈದ್ಯರನ್ನೇ ಸಂಪರ್ಕಿಸಬೇಕಾಗುತ್ತದೆ. ಇನ್ನು ವಂಶವಾಹಿಗಳು ಕಾರಣವಾಗಿದ್ದಲ್ಲಿ ಏನು ಮಾಡಿದರೂ ಪರಿಣಾಮ ಕಾಣುವುದು ಅನುಮಾನ.

Woman Hands Dyeing Hair. Middle Age Woman Colouring Dark Hair with Gray Roots at Home

ರಾಸಾಯನಿಕಗಳು

ಕೂದಲನ್ನು ಸೊಂಪಾಗಿಸುವ, ಉದುರುವುದನ್ನು ನಿಲ್ಲಿಸುವಂಥ ಜಾಹೀರಾತುಗಳನ್ನು ನೋಡಿ ಮರುಳಾದವರ ಸಂಖ್ಯೆ ಲೆಕ್ಕವಿಲ್ಲ. ಈ ಜಾಹೀರಾತುಗಳ ಸತ್ಯಾಸತ್ಯತೆಯನ್ನು ಪರಿಶೀಲಿಸಿದವರಾರು? ಕಠೋರವಾದ ಶಾಂಪೂಗಳು, ಅತಿಯಾದ ಕಂಡೀಶನರ್‌ ಬಳಕೆ, ಹೊಟ್ಟು ನಿವಾರಣೆಗೆ ಯದ್ವಾತದ್ವಾ ಚಿಕಿತ್ಸೆಗಳು, ಪ್ರತಿದಿನ ತಲೆಸ್ನಾನ ಮಾಡುವುದು, ಸಿಕ್ಕಾಪಟ್ಟೆ ಬಿಸಿನೀರು ಸ್ನಾನ ಮಾಡುವುದು ಇಂಥವೆಲ್ಲಾ ಕೂದಲಿಗೆ ನಿಶ್ಚಿತವಾಗಿ ಹಾನಿಯನ್ನು ಉಂಟುಮಾಡುತ್ತವೆ.

ಕೂದಲನ್ನು ಬಿಸಿ ಮಾಡಿ, ನೇರವೊ ಸುರುಳಿಯೊ ಮಾಡುವಂಥ ಉಪಕರಣಗಳನ್ನು ಅತಿಯಾಗಿ ಬಳಸುವುದು ಹಾನಿ ಮಾಡಬಹುದು. ಕೂದಲ ವಿನ್ಯಾಸಗಳಿಗಾಗಿ ಉಪಯೋಗಿಸುವ ಯಾವುದೇ ರಾಸಾಯನಿಕಗಳು ಮತ್ತು ಉಪಕರಣಗಳು ಒಂದಿಲ್ಲೊಂದು ಪರಿಣಾಮವನ್ನು ತಲೆಯ ಚರ್ಮ ಮತ್ತು ನೆತ್ತಿಯ ಮೇಲೆ ಉಂಟುಮಾಡುತ್ತವೆ. ಕೂದಲನ್ನು ಅತಿಯಾಗಿ ಬಾಚುವುದು ಮತ್ತು ತೀರಾ ಬಾಚದಿರುವುದು- ಈ ಎರಡೂ ಸಮಸ್ಯೆಗಳನ್ನು ತರಬಲ್ಲವು. ಕೂದಲನ್ನು ಸದಾಕಾಲ ಬಿಗಿಯಾಗಿ ಕಟ್ಟುವುದು, ಹಿಮ್ಮುಖವಾಗಿ ಎಳೆದು ಬಾಚುವುದರಿಂದಲೂ ಹಣೆ ಕ್ರಮೇಣ ಅಗಲವಾಗತೊಡಗುತ್ತದೆ. ನೆತ್ತಿಯ ಮೇಲೆ ಬಿಗಿಯಾಗಿ ಹೇರ್‌ಬ್ಯಾಂಡ್‌ ಧರಿಸುವುದು, ಸದಾ ಕ್ಯಾಪ್‌ ಹಾಕಿಕೊಳ್ಳುವುದು ಸಹ ಸಮಸ್ಯೆಗೆ ಕಾರಣವಾಗಬಲ್ಲವು.

Woman in Purple Eating

ಕಾಳಜಿ ಹೀಗಿರಲಿ

ಮೊದಲಿಗೆ ಸೇವಿಸುವ ಆಹಾರದ ಬಗ್ಗೆ ನಿಗಾ ವಹಿಸಿ. ಕಬ್ಬಿಣ, ಜಿಂಕ್‌, ಬಯೋಟಿನ್‌, ವಿಟಮಿನ್‌ ಎ, ಇ ಮತ್ತು ಡಿ ಆಹಾರಗಳು ಹಾಗೂ ಸಾಕಷ್ಟು ಪ್ರೊಟೀನ್‌ ನಿಮ್ಮ ಆಹಾರದಲ್ಲಿರಲಿ. ಇದಕ್ಕಾಗಿ ಹಣ್ಣು, ತರಕಾರಿ, ಮೀನು, ಮೊಟ್ಟೆ, ಬೀಜಗಳು, ಸೊಪ್ಪು ಮತ್ತು ಮೊಳಕೆ ಕಾಳುಗಳನ್ನು ಆಹಾರದಲ್ಲಿ ಸೇರಿಸಿಕೊಳ್ಳಿ. ಚೆನ್ನಾಗಿ ನೀರು ಕುಡಿಯಿರಿ.

ದಿನಕ್ಕೆ ಎಂಟು ತಾಸುಗಳ ನಿದ್ದೆ ಅಗತ್ಯವಾಗಿ ಬೇಕು. ಇದರಿಂದ ದೇಹದ ರಿಪೇರಿ ಮಾತ್ರವಲ್ಲ, ಮನಸ್ಸಿನ ಒತ್ತಡ ನಿವಾರಣೆಗೂ ಅನುಕೂಲವಾಗುತ್ತದೆ. ವ್ಯಾಯಾಮ, ಆಸಕ್ತಿಯ ಹವ್ಯಾಸಗಳು, ಧ್ಯಾನ, ಪ್ರಾಣಾಯಾಮಗಳು ಕೂದಲು ಸೇರಿದಂತೆ ದೇಹದ ಎಲ್ಲಾ ಅಂಗಗಳ ಮೇಲೂ ಧನಾತ್ಮಕ ಪರಿಣಾಮ ಬೀರುತ್ತವೆ.

ಮೃದುವಾದ ಶಾಂಪೂಗಳನ್ನು ಬಳಸಿ. ಉಗುರು ಬಿಸಿ ನೀರೇ ಸಾಕಾಗುತ್ತದೆ ತಲೆಸ್ನಾನಕ್ಕೆ. ಕೂದಲ ಬುಡವನ್ನು ಶಕ್ತಿ ಹಾಕಿ ಉಜ್ಜುವಂಥದ್ದು ಏನೂ ಇರುವುದಿಲ್ಲ. ವಾರಕ್ಕೆರಡು ಬಾರಿ ನಿಯಮಿತವಾಗಿ ತಲೆಸ್ನಾನ ಮಾಡಿದರೆ, ಕೂದಲ ಕೊಳೆ ತೆಗೆಯುವುದಕ್ಕೆ ಸಾಕಾಗುತ್ತದೆ. ತಲೆಸ್ನಾನಕ್ಕೆ ಬಳಸುವ ನೀರು ತುಂಬಾ ಗಡುಸಾಗಿದ್ದರೂ ಸಮಸ್ಯೆಗೆ ನಾಂದಿಯಾಗಬಹುದು.

ಇವು ಬೇಡ

ಕೂದಲು ಉದುರುವುದಕ್ಕೆ ಪ್ರಾರಂಭವಾದ ಮೇಲೆ, ಅತಿಯಾದ ರಾಸಾಯನಿಕಗಳ ಬಳಕೆಯು ಸಮಸ್ಯೆಯ ತೀಕ್ಷ್ಣತೆಯನ್ನು ಹೆಚ್ಚಿಸುತ್ತದೆ. ಜೆಲ್‌, ವ್ಯಾಕ್ಸ್‌ ಅಥವಾ ಸ್ಪ್ರೇಗಳು ಈ ಸಾಲಿಗೆ ಸೇರುತ್ತವೆ. ಬದಲಿಗೆ, ಆಗಾಗ ಶುದ್ಧ ತೆಂಗಿನ ಎಣ್ಣೆಯಿಂದ ಕೂದಲ ಬುಡವನ್ನು ಲಘುವಾಗಿ ಮಸಾಜ್‌ ಮಾಡಿ. ಇದರಿಂದ ತಲೆಗೆ ರಕ್ತ ಸಂಚಾರ ಹೆಚ್ಚಿ, ಹೊಸ ಕೂದಲುಗಳ ಬೆಳವಣಿಗೆಗೆ ಸಹಾಯವಾಗುತ್ತದೆ.

ಕೂದಲುಗಳನ್ನು ಎಳೆದು ಬಿಗಿಯಾಗಿ ಹಿಮ್ಮುಖವಾಗಿ ಬಾಚಬೇಡಿ. ಅತಿ ಒರಟಾಗಿ ಬಾಚುವುದು ಸಹ ಸಲ್ಲದು. ಕೂದಲಿನ ಮೇಲೆ ಯಾವುದೇ ರೀತಿಯ ಬಲಪ್ರಯೋಗದಿಂದಲೂ ಬುಡ ಸಡಿಲವಾಗಿ, ಕೂದಲು ಬಲಹೀನವಾಗುತ್ತದೆ. ಆಮೇಲೆ ಉದುರುವುದೇ, ಇನ್ನೇನು!

ಡ್ರೈಯರ್‌ಗಳು, ಸುರುಳಿ ಅಥವಾ ನೇರ ಮಾಡುವಂಥ ಹೀಟಿಂಗ್‌ ಉಪಕರಣಗಳು ಬೇಡ. ತೀರಾ ಅಗತ್ಯ ಸಂದರ್ಭಗಳನ್ನು ಬಿಟ್ಟರೆ, ಉಳಿದಂತೆ ಪರ್ಮಿಂಗ್‌, ಬಣ್ಣ ಹಾಕುವಂಥ ಪ್ರಯೋಗಗಳು ಕೂದಲಿನ ಮೇಲೆ ಬೇಡ. ಒದ್ದೆ ಕೂದಲನ್ನು ಬಾಚುವ ಸಾಹಸ ಬೇಡ. ಇದರಿಂದ ಉದುರುವುದು ಇನ್ನಷ್ಟು ಹೆಚ್ಚುತ್ತದೆ.

ಇದನ್ನೂ ಓದಿ: Health Tips: ಅತಿಯಾಗಿ ಕೈತೊಳೆಯುತ್ತೀರಾ? ಹಾಗಾದರೆ ಎಚ್ಚರ, ಎಕ್ಸಿಮಾ ಕೂಡಾ ಬರಬಹುದು!

Continue Reading
Advertisement
Saurav Gangly
ಕ್ರಿಕೆಟ್28 mins ago

Virat Kohli : ಕೊಹ್ಲಿಯನ್ನು ನಾಯಕತ್ವದಿಂದ ಇಳಿಸಿದ್ದಕ್ಕೆ ಕಾರಣ ತಿಳಿಸಿದ ಸೌರವ್​ ಗಂಗೂಲಿ

Physical Education Teacher
ಉದ್ಯೋಗ28 mins ago

Teachers Recruitment : ಪ್ರಾಥಮಿಕ ಶಾಲೆಯಲ್ಲಿ 2120 ದೈಹಿಕ ಶಿಕ್ಷಕರ ಹುದ್ದೆ ಭರ್ತಿಗೆ ತೀರ್ಮಾನ

sufi
ಅಂಕಣ28 mins ago

ನನ್ನ ದೇಶ ನನ್ನ ದನಿ ಅಂಕಣ: ಸಯ್ಯಿದ್ ರಿಜ್ವಿ ಸ್ವತಃ ಹೇಳಿದ ಸೂಫಿಗಳ ನಿಜ ಕಥನ

Rain in Karnataka woman listening to music with an umbrella
ಕರ್ನಾಟಕ43 mins ago

Karnataka Weather : ಇಂದು – ನಾಳೆ ಬೆಂಗಳೂರು ಸೇರಿ ದಕ್ಷಿಣ ಒಳನಾಡಲ್ಲಿ ಭಾರಿ ಮಳೆ; ಇದು ಮಿಚುಂಗ್ ಎಫೆಕ್ಟ್‌

Congress party directed kamal nath to resign Madhya Pradesh Congress president post
ದೇಶ58 mins ago

ಎಂಪಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಕಮಲ್ ನಾಥ್‌ಗೆ ಸೂಚನೆ!

Dasara Elephant Arjuna
ಕರ್ನಾಟಕ1 hour ago

ವಿಸ್ತಾರ ಸಂಪಾದಕೀಯ: ದಸರಾ ಹೀರೊ ‘ಅರ್ಜುನ’ ದಾರುಣ ಸಾವು, ಅಧಿಕಾರಿಗಳ ಬೇಜವಾಬ್ದಾರಿಯೇ ಕಾರಣ

Foods To Avoid Eating With Bananas
ಆರೋಗ್ಯ1 hour ago

Foods To Avoid Eating With Bananas: ತಿಳಿದಿರಲಿ, ಬಾಳೆಹಣ್ಣಿನ ಜೊತೆಗೆ ಈ ಆಹಾರಗಳನ್ನು ಸೇರಿಸಿ ತಿನ್ನಬಾರದು!

dina bhavishya read your daily horoscope predictions for December 5 2023
ಪ್ರಮುಖ ಸುದ್ದಿ2 hours ago

Dina Bhavishya : ಈ ರಾಶಿಯವರ ಅದೃಷ್ಟ ಸಂಖ್ಯೆ 1, 3! ನಿಮ್ಮ ಲಕ್ಕಿ ನಂಬರ್‌ ಏನು?

Shirshendu Mukhopadhyay
ಕರ್ನಾಟಕ7 hours ago

Shirshendu Mukhopadhyay: ಕುವೆಂಪು ರಾಷ್ಟ್ರೀಯ ಪುರಸ್ಕಾರಕ್ಕೆ ಶೀರ್ಷೇಂಧು ಮುಖ್ಯೋಪಾಧ್ಯಾಯ ಆಯ್ಕೆ

Bangalore Bulls
ಕ್ರೀಡೆ8 hours ago

Pro Kabaddi : ಬೆಂಗಳೂರು ತಂಡಕ್ಕೆ ಸತತ ಎರಡನೇ ಸೋಲು

Sharmitha Gowda in bikini
ಕಿರುತೆರೆ2 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

7th Pay Commission
ನೌಕರರ ಕಾರ್ನರ್1 year ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

Kannada Serials
ಕಿರುತೆರೆ2 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ2 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

DCC Bank Recruitment 2023
ಉದ್ಯೋಗ10 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Karnataka bandh Majestic
ಕರ್ನಾಟಕ2 months ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

Rajendra Singh Gudha
ದೇಶ5 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

kpsc recruitment 2023 pdo recruitment 2023
ಉದ್ಯೋಗ5 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Village Accountant Recruitment
ಉದ್ಯೋಗ10 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Kannada Serials
ಕಿರುತೆರೆ2 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

dina bhavishya read your daily horoscope predictions for December 5 2023
ಪ್ರಮುಖ ಸುದ್ದಿ2 hours ago

Dina Bhavishya : ಈ ರಾಶಿಯವರ ಅದೃಷ್ಟ ಸಂಖ್ಯೆ 1, 3! ನಿಮ್ಮ ಲಕ್ಕಿ ನಂಬರ್‌ ಏನು?

ead your daily horoscope predictions for december 4th 2023
ಪ್ರಮುಖ ಸುದ್ದಿ1 day ago

Dina Bhavishya : ಇಂದು ಹೂಡಿಕೆ ಮಾಡಿದ್ರೆ ಈ ರಾಶಿಯವರಿಗೆ ಡಬಲ್‌ ಧಮಾಕಾ!

Police call off protest FIR against lawyer who slapped police
ಕರ್ನಾಟಕ2 days ago

Police Protest : ಪ್ರತಿಭಟನೆ ಕೈ ಬಿಟ್ಟ ಪೊಲೀಸರು; ಕಪಾಳಕ್ಕೆ ಹೊಡೆದ ವಕೀಲನ ಮೇಲೆ ಎಫ್‌ಐಆರ್‌

Dina Bhavihsya
ಪ್ರಮುಖ ಸುದ್ದಿ2 days ago

Dina Bhavishya : ಸಂಡೇ ಆದರೂ ಈ ರಾಶಿಯವರಿಗೆ ಟೆನ್ಷನ್‌ ತಪ್ಪಲ್ಲ! ಇವರಿಂದ ದೂರ ಇರಿ

Cockroaches bite baby born 2 days ago in vanivilas hospital
ಆರೋಗ್ಯ3 days ago

Vanivilas Hospital : 2 ದಿನಗಳ ಹಿಂದಷ್ಟೇ ಜನಿಸಿದ ಮಗುವನ್ನು ಕಚ್ಚಿ ಹಾಕಿದ ಜಿರಳೆಗಳು!

Dina Bhavishya
ಪ್ರಮುಖ ಸುದ್ದಿ3 days ago

Dina Bhavishya : ಯಾರನ್ನೂ ನಂಬಿ ಇನ್ವೆಸ್ಟ್ಮೆಂಟ್‌ ಮಾಡ್ಬೇಡಿ!

DK Shiakumar and MLA Munirathna
ಕರ್ನಾಟಕ4 days ago

DK Shivakumar : ಡಿಕೆಶಿಯನ್ನು ಗೇಟ್‌ ಒಳಗೇ ಬಿಟ್ಟಿಲ್ಲ, ಸಿಎಂ ಮಾಡುವಂತೆಯೂ ಹೇಳಿಲ್ಲವೆಂದ ಮುನಿರತ್ನ!

Tigre Found in Mysuru again Beware of this village
ಕರ್ನಾಟಕ4 days ago

Operation Tiger : ಮೈಸೂರಲ್ಲಿ ಮತ್ತೆ ಹುಲಿ ಕಾಟ; ಈ ಗ್ರಾಮದವರು ಹುಷಾರು!

Infosys Narayana Murthy and Congress Guarantee
ಕರ್ನಾಟಕ5 days ago

Congress Guarantee : ಯಾವುದನ್ನೂ ಪುಕ್ಕಟೆ ಕೊಡಬೇಡಿ; ‘ಗ್ಯಾರಂಟಿ’ಗೆ ನಾರಾಯಣ ಮೂರ್ತಿ ಆಕ್ಷೇಪ!

Justice for Ajay Protests against NIMHANS Hospital
ಆರೋಗ್ಯ5 days ago

Child Death : ಜಸ್ಟಿಸ್ ಫಾರ್ ಅಜಯ್; ಶುರುವಾಯ್ತು ನಿಮ್ಹಾನ್ಸ್‌ ವಿರುದ್ಧ ಪ್ರತಿಭಟನೆ

ಟ್ರೆಂಡಿಂಗ್‌