Ganesha Stories With Audio: ನೀವು ಓದಲೇಬೇಕಾದ ಗಣಪತಿಯ ಕುತೂಹಲಕರ ಕಥೆಗಳಿವು! - Vistara News

ಗಣೇಶ ಚತುರ್ಥಿ

Ganesha Stories With Audio: ನೀವು ಓದಲೇಬೇಕಾದ ಗಣಪತಿಯ ಕುತೂಹಲಕರ ಕಥೆಗಳಿವು!

ಗಣಪತಿ ದೇವರ ಕುರಿತ ಕತೆಗಳು ಹಲವಾರು. ಗಣೇಶನ ಕತೆಗಳು ಸದಾ ಮನಸ್ಸಿಗೆ ಖುಷಿ ನೀಡುತ್ತವೆ. ಅಂಥ ಕೆಲವು ಕುತೂಹಲಕರ ಕತೆಗಳು (Ganesha Stories With Audio) ಇಲ್ಲಿವೆ.

VISTARANEWS.COM


on

Ganesha Stories With Audio
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಗಣಪತಿಯ ಬಗ್ಗೆ ಆತನ ಬಾಲ್ಯದಿಂದ ಹಿಡಿದು ಪ್ರೌಢಾವಸ್ಥೆಯವರೆಗೆ ಹಲವು ರೀತಿಯ ಕಥೆಗಳು ಪ್ರಚಲಿತದಲ್ಲಿವೆ. ಜನಪದ ಕಥೆಗಳಂತೆ ಅವು ಬಾಯಿಂದ ಬಾಯಿಗೆ ಬರುವಾಗ ತಮ್ಮಿಷ್ಟದ ರೂಪ ತಾಳಿವೆ. ಇವೆಲ್ಲವಕ್ಕೂ ಪೌರಾಣಿಕ ಉಲ್ಲೇಖಗಳು ನಿಖರವಾಗಿ ದೊರೆಯುತ್ತದೆಂದು ಹೇಳಲಾಗದಿದ್ದರೂ, ನಾವು ನಂಬಿದ ಭಗವಂತನ ಮನರಂಜಿಸುವ ಕಥೆಗಳನ್ನು ನಂಬುವುದಲ್ಲಿ ಹಾನಿಯಿಲ್ಲ. ಅದೇ ಖಾತ್ರಿಯಿಂದ ಒಂದಿಷ್ಟು ಗಣಪತಿ ಕಥೆಗಳು (Ganesha Stories With Audio) ನಿಮಗಾಗಿ.

ಆಡಿಯೊ ಕೇಳಿ

ವಿಷ್ಣುವಿನ ಶಂಖ

ಶಂಖ, ಚಕ್ರ, ಗಧಾಹಸ್ತನಾದ ಶ್ರೀಮನ್ನಾರಾಯಣನಿಗೆ ತನ್ನ ಶಂಖವೇ ಕಾಣೆಯಾಗಿದೆ ಎಂಬುದು ಒಂದು ದಿನ ಹಠಾತ್ತನೆ ಅರಿವಾಯಿತು! ʻಅರೆ! ಇತ್ತಲ್ಲ ನನ್ನ ಕೈಯಲ್ಲೇ! ಎಲ್ಲಿ ಕಾಣೆಯಾಯಿತು!ʼ ಎಂದು ಲೋಕಲೋಕಾಂತರಗಳನ್ನು ಹುಡುಕಲು ಮುಂದಾದ ಅನಂತಶಯನ. ಅಷ್ಟರಲ್ಲೇ ದೂರದಿಂದ ಶಂಖನಾದವೊಂದು ತೇಲಿಬಂತು. ಆಲಿಸಿ ಕೇಳಿದರೆ, ಹೌದು ಇದು ತನ್ನದೇ ಶಂಖದ ಧ್ವನಿ ಎಂಬುದು ಖಾತ್ರಿಯಾಯಿತು ಮಹಾವಿಷ್ಣುವಿಗೆ. ಇದೆಲ್ಲಿಂದ ಬರುತ್ತಿದೆ ಎಂದು ನೋಡಿದರೆ, ಕೈಲಾಸ ಪರ್ವತದ ದಿಕ್ಕಿನಿಂದ!

Shankha ( Brass conch shell ) is religious importance in Hinduism and Buddhism on the Peepal leaves.

ಗರುಡನನ್ನೇರಿ ಪರ್ವತದ ತುದಿಗೆ ಹಾರಿದ ಶೂಲಪಾಣಿಯ ಮಿತ್ರ. ಅಲ್ಲಿ ನೋಡಿದರೆ… ಶಂಖವು ಗಣಪತಿಯ ಕೈಯಲ್ಲಿದೆ. ಅದನ್ನು ಊದಲು ಆತ ತನ್ನದೇ ರೀತಿಯಲ್ಲಿ ಪ್ರಯತ್ನಿಸುತ್ತಿದ್ದಾನೆ. ಆನೆ ಮುಖದವನಿಗೆ ಶಂಖ ಊದುವುದು ಸುಲಭವಲ್ಲ, ಹಾಗೆಂದು ಆತ ತನ್ನ ಪ್ರಯತ್ನ ಬಿಡುವವನಲ್ಲ. ಆದರೆ ಶಂಖ ಮರಳಿ ಪಡೆಯುವುದು ವಿಷ್ಣುವಿಗೆ ಅನಿವಾರ್ಯ. ʻದಾರಿ ತೋರಿಸಯ್ಯʼ ಎಂದು ಈಶ್ವರನನ್ನೇ ಕೇಳಿದ ವಿಷ್ಣು. ಗಣಪತಿಯ ಸ್ತುತಿ ಮಾಡುವುದು ಬಿಟ್ಟರೆ ಬೇರೆ ದಾರಿಯಿಲ್ಲ ಎಂದ ಈಶ. ತ್ರಿಮೂರ್ತಿಗಳಲ್ಲಿ ಒಬ್ಬನಾಗಿ, ಜಗತ್ತಿನ ಸ್ಥಿತಿಯನ್ನು ಕಾಪಾಡುವ ಹೊಣೆ ಹೊತ್ತ ಮಹಾವಿಷ್ಣುವು ಕ್ಷಣಕಾಲವೂ ಯೋಚಿಸದೆ ಗಣೇಶನನ್ನು ಸ್ತುತಿಸಿದ. ಪ್ರಸನ್ನನಾದ ಗಣಪತಿ ಶಂಖವನ್ನು ಮಹಾವಿಷ್ಣುವಿಗೆ ಮರಳಿಸಿದ.

ಕುಬೇರ ಕಲಿತ ಪಾಠ

ವಿಶ್ವದಲ್ಲಿ ಸಂಪತ್ತಿನ ಅಧಿದೇವತೆ ಎಂದರೆ ಕುಬೇರ. ತನ್ನ ಅಲಕಾವತಿಯಲ್ಲಿ ಉಕ್ಕಿ ಹರಿಯುವ ಸಂಪತ್ತಿನ ಬಗ್ಗೆ ಆತನಿಗೆ ಸಿಕ್ಕಾಪಟ್ಟೆ ಹೆಮ್ಮೆ; ಅಷ್ಟೇ ತೂಕದ ಅಹಂಕಾರ! ಹೀಗೆಯೇ ಒಮ್ಮೆ ಎಲ್ಲಾ ದೇವತೆಗಳಿಗಾಗಿ ಒಂದು ಭರ್ಜರಿ ಔತಣಕೂಟವನ್ನು ಆತ ಏರ್ಪಡಿಸಿದ್ದ. ಶಿವ- ಪಾರ್ವತಿಯರಿಗೂ ಈ ಕೂಟದ ಆಹ್ವಾನ ಹೋಗಿತ್ತು. ಅಂದು ಅವರಿಗೆ ಪುರುಸೊತ್ತೇ ಇಲ್ಲ; ಆದರೆ ಆಹ್ವಾನ ಬಂದ ಮೇಲೆ ಹೋಗಬೇಕಲ್ಲ. ಹಾಗಾಗಿ ತಮ್ಮ ಪ್ರತಿನಿಧಿಯಾಗಿ ಗಣೇಶನನ್ನು ಈ ಔತಣಕೂಟಕ್ಕೆ ಅಟ್ಟಿದರು.

ಕುಬೇರನ ಅರಮನೆಗೆ ಬಂದ ಗಣಪತಿ. ಬಂದವರನ್ನೆಲ್ಲಾ ಸ್ವಾಗತಿಸುತ್ತ ನಿಂತಿದ್ದ ಕುಬೇರ. ಆದರೆ ಆತನಲ್ಲಿ ಅತಿಥಿ ಸತ್ಕಾರದ ಭಾವಕ್ಕಿಂತ ಹೆಚ್ಚಾಗಿ ತನ್ನ ಸಂಪತ್ತಿನ ಪ್ರದರ್ಶನವೇ ಹೆಚ್ಚಾಗಿ ಕಂಡಿತು ಗಣಪತಿಗೆ. ಇವನಿಗೊಂದು ಪಾಠ ಕಲಿಸಬೇಕೆಂದು ನಿರ್ಧರಿಸಿದ. ಔತಣಕ್ಕಾಗಿ ಸಿದ್ಧಪಡಿಸಲಾಗಿದ್ದ ಆಹಾರವನ್ನು ಉಳಿದವರಿಗಿಂತ ಮೊದಲೇ ಮೆಲ್ಲಲಾರಂಭಿಸಿದ ಪ್ರಥಮ ಪೂಜಿತ, ನೋಡನೋಡುತ್ತಿದ್ದಂತೆ ಅಟ್ಟಿದ್ದ ಅಡುಗೆಯನ್ನೆಲ್ಲ ಬರಿದಾಗಿಸಿದ. ಆದರೇನು, ವಿಘ್ನನಿವಾರಕ ಹಸಿವೆಯಿನ್ನೂ ನಿವಾರಣೆ ಆಗಿರಲಿಲ್ಲ. ಅಡುಗೆ ಮಾಡಿರಿಸಿದ್ದ ಪಾತ್ರೆಗಳನ್ನು ತಿಂದಿದ್ದಾಯ್ತು; ಕುಬೇರನ ಸಂಪತ್ತನ್ನೆಲ್ಲಾ ತಿಂದಿದ್ದಾಯ್ತು; ಊಹುಂ, ಲಂಬೋದರ ತುಂಬಲಿಲ್ಲ. ಇನ್ನೀಗ ಕುಬೇರನನ್ನೇ ತಿಂದಾದರೂ ಹಸಿವೆ ನೀಗಿಸುವ ಪ್ರಯತ್ನಿಕ್ಕಿಳಿದ ಗಣಪತಿ. ಕಂಗಾಲಾದ ಕುಬೇರ, ಈಶ್ವರನಲ್ಲಿಗೆ ಓಡಿದ.

ನಡೆದ ವಿಷಯವೆಲ್ಲಾ ಈಶ್ವರನಿಗೆ ತಿಳಿಯಿತು. ಒಂದು ಹಿಡಿ ಧಾನ್ಯವನ್ನು ಭಕ್ತಿಯಿಂದ, ನಮ್ರತೆಯಿಂದ ಗಣಪತಿಗೆ ಅರ್ಪಿಸು ಎಂದು ಕುಬೇರನಿಗೆ ಸೂಚಿಸಿದ ಈಶ್ವರ. ಇಷ್ಟಾದ ಮೇಲೆ ಗಣಪತಿಯ ಡೊಳ್ಳು ಹೊಟ್ಟೆ ತುಂಬಿತು. ಕುಬೇರ ತನ್ನ ಅಹಂಕಾರಕ್ಕಾಗಿ ಕ್ಷಮೆ ಬೇಡಿದ

Idol of Lord Ganesha with Modak Sweet Dish and Flower. Ganesh Chaturthi

ಅವನೇಕೆ ಮೋದಕಪ್ರಿಯ?

ಗಣಪತಿಯ ನೈವೇದ್ಯಕ್ಕೆ ಮೋದಕ ಇರಲೇಬೇಕು. ಹಾಗಾದರೆ ಅವನಿಗೆ ಮೋದಕ ಎಂದರೆ ಅಷ್ಟೊಂದು ಪ್ರೀತಿಯೇಕೆ? ಒಮ್ಮೆ ಅತ್ರಿ ಮಹರ್ಷಿಗಳ ಆಶ್ರಮಕ್ಕೆ ಶಿವ-ಪಾರ್ವತಿಯರು ಹೋಗಿದ್ದರಂತೆ. ಜೊತೆಗೆ ಪುಟ್ಟ ಗಣೇಶನೂ ಇದ್ದ. ಶಿವ ಸಂಸಾರ ಸಮೇತ ತಮ್ಮಲ್ಲಿಗೆ ಬಂದಿದ್ದನ್ನು ಕಂಡು ಆನಂದಪರವಶಳಾದ ಅತ್ರಿ ಸತಿ ಅನಸೂಯೆ, ಹಲವು ಬಗೆಯ ಭೋಜನಗಳನ್ನು ಸಿದ್ಧಪಡಿಸಿದಳು. ಅದರ ಪರಿಮಳಕ್ಕೆ ಗಣೇಶನ ಹೊಟ್ಟೆಯಲ್ಲಿ ತಳಮಳ ಪ್ರಾರಂಭವಾಯಿತು.
ಮಕ್ಕಳೆಂದರೆ ದೇವರ ಸ್ವರೂಪ, ಇಲ್ಲಂತೂ ದೇವರೇ ಮಗುವಿನ ರೂಪದಲ್ಲಿದ್ದಾನೆ ಎಂದು ಭಾವಿಸಿದ ಅನಸೂಯಾ ದೇವಿ, ಮೊದಲು ಗಣೇಶನಿಗೇ ಬಡಿಸಿದಳು. ಮಾಡಿದ್ದೆಲ್ಲಾ ತಳ ಕಂಡರೂ ದೇವರ ನೈವೇದ್ಯ ಮುಗಿಯಲಿಲ್ಲ. ಇದು ಹೀಗೆಯೇ ಆದರೆ ಶಿವ-ಪಾರ್ವತಿಯರಿಗೆ ಏನೂ ಉಳಿಯುವುದಿಲ್ಲ ಎಂದು ಗ್ರಹಿಸಿದ ಅನಸೂಯೆ, ರುಚಿಯಾದ, ಸಿಹಿಯಾದ ಮೋದಕಗಳನ್ನು ಸಿದ್ಧಮಾಡಿ ಬಡಿಸಿದಳು. ನಾಲ್ಕಾರು ಮೋದಕಗಳನ್ನು ಮೆಲ್ಲುತ್ತಿದ್ದಂತೆಯೇ ಪುಟ್ಟ ಗಣೇಶನಿಗೆ ತೃಪ್ತಿಯಾಯಿತು. ಇದನ್ನು ಕಂಡ ಪಾರ್ವತಿ, ತನ್ನ ಮುದ್ದು ಮಗನಿಗೆ ಮೋದಕದ ನೈವೇದ್ಯವೇ ಶ್ರೇಷ್ಠ ಎಂದು ಸಾರಿದಳಂತೆ. ಲಂಬೋದರ ಮೋದಕ ಪ್ರಿಯನೂ ಆಗಿದ್ದು ಹೀಗೆ.

Lord Ganesha Sculpture on Nature. Background for Ganesh Chaturthi Festival Celebration.

ಕಾವೇರಿಗೂ ಗಣಪತಿಗೂ ಏನು ನಂಟು?

ಕಾವೇರಿ ಹುಟ್ಟಿದ ಪ್ರದೇಶದಲ್ಲಿ ಮನೆಮನೆಯಲ್ಲೂ ಗಣಪತಿ ಎಂಬ ಹೆಸರಿನವರು ಇರುವುದಕ್ಕೂ ಈ ಕಥೆಗೂ ಸಂಬಂಧ ಇದ್ದಿರಲಾರದು. ಆದರೆ ಕಾವೇರಿ ನದಿಗೂ, ಗಂಗಾ ನದಿಯ ಮಗನೂ ಆದ ಗಣಪನಿಗೂ (ಅಗ್ನಿ ಪುರಾಣ, ಹರಚರಿತ ಚಿಂತಾಮಣಿಗಳ ಪ್ರಕಾರ) ನಂಟುಂಟು. ದಕ್ಷಿಣ ಭಾರತದ ಬಹುಮಂದಿಗೆ ಆಸರೆ ನೀಡುವಂಥ ಪವಿತ್ರ ನದಿಯೊಂದನ್ನು ಸೃಷ್ಟಿಸಬೇಕೆಂದು ಅಗಸ್ತ್ಯರು ಚಿಂತಿಸಿದರು. ಇದಕ್ಕೆ ಪೂರಕವಾಗಿ, ದೇವತೆಗಳು ಅವರ ಕಮಂಡಲಕ್ಕೆ ಪವಿತ್ರ ಜಲವನ್ನು ತುಂಬಿ, ಸೂಕ್ತ ಸ್ಥಳದಲ್ಲಿ ಈ ನೀರನ್ನು ಹರಿಸಿದರೆ ನದಿ ಸೃಷ್ಟಿಯಾಗುತ್ತದೆ ಎಂದು ಹರಸಿದರು.
ಸೂಕ್ತ ಸ್ಥಳವನ್ನು ಅರಸುತ್ತಾ ಹೊರಟರು ಅಗಸ್ತ್ಯರು. ಬಹಳ ದೂರ ನಡೆದ ಮೇಲೆ ಪರ್ವತಗಳನ್ನು ದಾಟುತ್ತಿರುವಾಗ ಆಯಾಸಗೊಂಡ ಮುನಿಗಳಿಗೆ ಕೊಂಚ ವಿಶ್ರಾಂತಿ ಬೇಕೆನಿಸಿತು. ಆದರೆ ಈ ಕಮಂಡಲದ ನೀರನ್ನು ಕಾಯುವವರಾರು? ಸಮೀಪದಲ್ಲೇ ಬಾಲಕನೊಬ್ಬ ನಿಂತಿದ್ದ. ಆತನನ್ನು ಕರೆದು, ಕಮಂಡಲದ ಜಲವನ್ನು ಕಾಯ್ದುಕೊಳ್ಳುವಂತೆ ಸೂಚಿಸಿ ವಿರಮಿಸಿದರು. ನದಿ ಹರಿಯುವುದಕ್ಕೆ ಪ್ರಶಸ್ತವಾದ ಸ್ಥಳ ಅದೇ ಪರ್ವತದ ಒಡಲು ಎಂದು ಗ್ರಹಿಸಿದ್ದ ಗಣಪತಿ, ಅಲ್ಲಿಗೆ ಬಾಲಕನ ರೂಪದಲ್ಲಿ ಬಂದಿದ್ದ.

ಮುನಿಗಳು ವಿಶ್ರಾಂತಿಯಿಂದ ಮರಳಿ ಬಂದವರು ನೋಡುತ್ತಾರೆ, ಆ ಬಾಲಕನಿಲ್ಲ. ಬದಲಿಗೆ ಕಮಂಡಲ ನೆಲದ ಮೇಲಿದೆ ಮತ್ತು ಕಾಗೆಯೊಂದು ಬಂದು ಅದರ ನೀರನ್ನು ಕುಡಿಯಲು ಹವಣಿಸುತ್ತಿದೆ. ಆ ಪಕ್ಷಿಯನ್ನು ಅಗಸ್ತ್ಯರು ಓಡಿಸಿದರೂ, ಹಾರುವ ಭರದಲ್ಲಿ ಆ ಕಮಂಡಲವನ್ನು ಕಾಗೆ ಉರುಳಿಸಿತು. ಅದೇ ಸ್ಥಳದಲ್ಲಿ ಕಾವೇರಿ ನದಿಯ ಉಗಮವಾಯಿತು ಎಂಬ ಕಥೆಯಿದೆ.

Ganesha religious restraint thing old power

ಭೂಕೈಲಾಸಕ್ಕೂ ಗಣಪನೇ ಬೇಕಾಯ್ತು

ಸ್ವರ್ಣ ಲಂಕಾಧೀಶ, ರಾಕ್ಷಸ ರಾಜ ರಾವಣ ಸಕಲವಿದ್ಯಾ ಪಾರಂಗತ; ಮಹಾ ಶಿವಭಕ್ತ. ಆತನ ತಾಯಿ ಕೈಕಸಾ ದೇವಿ ಪ್ರತಿ ದಿನ ಸಮುದ್ರದ ತಟದಲ್ಲಿ, ಮರಳಿನಲ್ಲಿ ಶಿವಲಿಂಗವನ್ನು ಮಾಡಿ ಅರ್ಚಿಸುತ್ತಿದ್ದಳು. ಆದರೆ ಮಾರನೇ ದಿನಕ್ಕೆ ಆ ಲಿಂಗ ನೀರಿನಲ್ಲಿ ಕೊಚ್ಚಿಹೋಗುತ್ತಿತ್ತು. ಹಾಗಾಗಿ ಶಿವನ ಆತ್ಮಲಿಂಗವನ್ನೇ ಲಂಕೆಯಲ್ಲಿ ಪ್ರತಿಷ್ಠಾಪಿಸಬೇಕೆಂದು ಆಕೆ ಬಯಸಿದಳು. ತಾಯಿಯ ಬಯಕೆಯನ್ನು ನೆರವೇರಿಸಲು ರಾವಣ ಹೊರಟ. ದೀರ್ಘಕಾಲ ಘೋರ ತಪಸ್ಸು ಮಾಡಿ, ಶಿವನನ್ನು ಒಲಿಸಿಕೊಂಡ. ಮೆಚ್ಚಿ ಒಲಿದ ದೇವನಲ್ಲಿ ಆತನ ಆತ್ಮಲಿಂಗವನ್ನೇ ಬೇಡಿದ. ದೇವ ʻತಥಾಸ್ತುʼ ಎಂದ. ಆದರೆ ಈ ಲಿಂಗವನ್ನು ಎಲ್ಲಿ ಭೂಮಿಗೆ ತಾಗಿಸಿದರೂ ಅದು ಅಲ್ಲಿಯೇ ಸ್ಥಿರವಾಗಿತ್ತದೆ ಎಂದು ಎಚ್ಚರಿಸಿದ ಶಿವ.
ಮಹೇಶ್ವರನ ಆತ್ಮಲಿಂಗವನ್ನು ಹಿಡಿದು ರಾವಣ ಹೊರಡುತ್ತಿದ್ದಂತೆ, ದೇವತೆಗಳಲ್ಲಿ ತಳಮಳ ಜೋರಾಯಿತು. ಇನ್ನೀಗ ಈ ರಕ್ಕಸನನ್ನು ಹಿಡಿಯುವವರುಂಟೇ? ಈ ವಿಘ್ನವನ್ನು ನಿವಾರಿಸಿಕೊಡು ಎಂದು ಗಣಪತಿಯಲ್ಲಿ ಮೊರೆಯಿಟ್ಟರು. ಉಪಾಯದಿಂದ ಅಪಾಯ ನಿವಾರಿಸುವುದಕ್ಕೆ ಬುದ್ಧಿ ಪ್ರದಾಯಕನಿಗೆ ಹೇಳಿಕೊಡಬೇಕೆ! ಸಣ್ಣ ವಟುವಿನ ರೂಪದಲ್ಲಿ ಹೊರಟ. ಇತ್ತ ಲಂಕೆಯನ್ನು ತಲುಪುವ ಗಡಿಬಿಡಿಯಲ್ಲಿ ಧಾವಿಸುತ್ತಿದ್ದ ರಾವಣ ಸಂಜೆಯಾಗುತ್ತಿದ್ದಂತೆ ಕೊಂಚ ವಿಚಲಿತನಾದ. ಕಾರಣ, ಅದು ಸಂಧ್ಯಾವಂದನೆಯ ಸಮಯ, ಆತ ಅನುಷ್ಠಾನದ ಸಮಯ ತಪ್ಪಿಸುವವನಲ್ಲ, ಆದರೆ ಕೈಯಲ್ಲಿರುವ ಲಿಂಗವನ್ನು ಏನು ಮಾಡುವುದು? ಆಗಲೇ ಸಣ್ಣ ವಟುವೊಬ್ಬ ಎದುರಾದ.
ʻಸರಿಯಾದ ಸಮಯಕ್ಕೆ ದೇವರಂತೆ ನನ್ನೆದುರಿಗೆ ಬಂದೆ! ನಾನು ಸಂಧ್ಯಾವಂದನೆ ಮಾಡಿ ಬರುವವರೆಗೆ ಈ ಲಿಂಗವನ್ನು ಕೈಯಲ್ಲಿ ಹಿಡಿದಿರುತ್ತೀಯಾ?ʼ ವಟುವನ್ನು ಕೇಳಿದ ರಾವಣ. ಮೊದಲಿಗೆ ಒಲ್ಲೆ ಎಂದ ಹುಡುಗ, ರಾವಣನ ಆಗ್ರಹದ ಮೇಲೆ ಒಪ್ಪಿದ. ʻಆದರೆ ನೀನು ಜಪ ಮುಗಿಸಿ ಬರುವುದು ತಡವಾದರೆ ನನ್ನ ಕೈಸೋಲಬಹುದು. ಆಗ ಮೂರು ಬಾರಿ ನಿನ್ನ ಹೆಸರು ಕರೆಯುತ್ತೇನೆ. ಮೂರನೇ ಬಾರಿಗೂ ನೀ ಬಾರದಿದ್ದರೆ, ಈ ಲಿಂಗವನ್ನು ಕೆಳಗೆ ಇರಿಸುತ್ತೇನೆʼ ಎಂದು ಹುಡುಗ. ರಾವಣ ಒಪ್ಪಿದ.

ರಾವಣ ಸಂಧ್ಯಾವಂದನೆ ಮಾಡುತ್ತಿರುವಾಗ ಹುಡುಗ ಒಮ್ಮೆ ಕರೆದ, ಇನ್ನೊಮ್ಮೆ ಕರೆದ, ಮೂರನೇ ಬಾರಿಗೂ ಕರೆದವ ಲಿಂಗವನ್ನು ನೆಲ್ಕಕಿರಿಸಿಯೇಬಿಟ್ಟ. ರಾವಣ ಓಡೋಡಿ ಬರುವಷ್ಟರಲ್ಲಿ ಲಿಂಗ ನೆಲದಲ್ಲಿ ಸ್ಥಿರವಾಗಿ ಕುಳಿತಿತ್ತು. ಕೋಪಗೊಂಡ ರಾವಣ ಆ ವಟುವನ್ನು ಅಟ್ಟಿಕೊಂಡು ಹೋದರೂ ಪ್ರಯೋಜನವಾಗಲಿಲ್ಲ. ಆತ್ಮಲಿಂಗವನ್ನು ಕೀಳುವುದಕ್ಕೆ ಆತ ಯತ್ನಿಸಿದರೂ ಅದು ಮೂರು ಚೂರಾಗಿ, ಒಂದು ಅಲ್ಲಿಯೇ ಉಳಿಯಿತು. ಭಾರತದ ಪಶ್ಚಿಮ ತೀರದಲ್ಲಿ ಶಿವನ ಆತ್ಮಲಿಂಗ ಮೊದಲಿಗೆ ಸ್ಥಿತವಾದ ಆ ಸ್ಥಳವೇ ಗೋಕರ್ಣ.

ಇದನ್ನೂ ಓದಿ: Ganesha Chaturthi : ಚೌತಿಗೆ ಗಣೇಶನ ಕೂರಿಸ್ತೀರಾ? ಹಾಗಿದ್ದರೆ ನೀವು ಈ 9 ನಿಯಮ ಕಡ್ಡಾಯವಾಗಿ ಪಾಲಿಸಲೇಬೇಕು

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

ಗಣಪತಿ ವಿಸರ್ಜನೆ ಮಾಡುವಾಗ ನೀರಲ್ಲಿ ಮುಳುಗಿ ಬಾಲಕ ಸಾವು

Drowned in River : ಸ್ನೇಹಿತರೊಂದಿಗೆ ಗಣೇಶ ವಿಸರ್ಜನೆ (Ganesha chaturthi) ಮಾಡುವಾಗ ಬಾಲಕನೊರ್ವ ಹಳ್ಳದಲ್ಲಿ ನೀರಿನ ಆಳ ಅರಿಯದೇ ಮುಳುಗಿ ಮೃತಪಟ್ಟಿರುವ ಘಟನೆ ನಡೆದಿದೆ.

VISTARANEWS.COM


on

By

nishal tej
ಮೃತ ಬಾಲಕ ನಿಶಾಲ್‌ ತೇಜ್
Koo

ಚಿಕ್ಕಬಳ್ಳಾಪುರ : ಇಲ್ಲಿನ ಚಿಕ್ಕಕಾಡಿಗೇನಹಳ್ಳಿ ಗ್ರಾಮದಲ್ಲಿರುವ ಶ್ರೀರಾಮಕುಂಟೆ ಹಳ್ಳದಲ್ಲಿ (Drowned) ಗಣಪತಿ ವಿಸರ್ಜನೆ (Ganesha chathurthi) ಮಾಡಲು ಹೋಗಿ ಬಾಲಕ ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ. ಕಡಶೀಗೇನಹಳ್ಳಿ ಗ್ರಾಮದ ನಿಶಾಲ್ ತೇಜ್ (12) ಮೃತ ಬಾಲಕ.

ಸೆ.29ರಂದು ಸ್ನೇಹಿತರೊಂದಿಗೆ ನಿಶಾಲ್‌ ತೇಜ್‌ ಗಣಪತಿ ವಿಸರ್ಜನೆಗೆ ತೆರಳಿದ್ದ. ಈ ವೇಳೆ ಗಣೇಶ ವಿಸರ್ಜನೆ ಮಾಡುವ ಉತ್ಸಾಹದಲ್ಲಿ ಹಳ್ಳದ ಆಳ ಅರಿಯದೇ ನೀರಿಗೆ ಇಳಿದಿದ್ದಾನೆ. ಆದರೆ ನೀರಿನ ರಭಸಕ್ಕೆ ಕೊಚ್ಚಿ ಹೋಗಿ ಮೃತಪಟ್ಟಿದ್ದಾನೆ. ಆತನ ಮೃತದೇಹವು ಕೂಗಳತೆ ದೂರದಲ್ಲಿ ಪತ್ತೆಯಾಗಿದೆ.

ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ರವಾನಿಸಿದ್ದಾರೆ. ನಂದಿಗಿರಿಧಾಮ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಇದನ್ನೂ ಓದಿ: Doctor death : ಸರ್ಕಾರಿ ಆಸ್ಪತ್ರೆಯ ತಜ್ಞ ವೈದ್ಯೆ ನಿಗೂಢ ಸಾವು; ಪಕ್ಕದಲ್ಲೇ ಸಿರಿಂಜ್‌ ಪತ್ತೆ!

ಆಟವಾಡುವಾಗ ಕಾಲು ಜಾರಿ ನಾಲೆಗೆ ಬಿದ್ದ ಬಾಲಕಿ ದಾರುಣ ಸಾವು

ಹಾಸನ: ಇಲ್ಲಿನ ಅರಕಲಗೂಡು ತಾಲ್ಲೂಕಿನ ಮಧುರನಹಳ್ಳಿ ಗ್ರಾಮದಲ್ಲಿ ಸ್ನೇಹಿತರೊಂದಿಗೆ ಆಟವಾಡುವಾಗ ಬಾಲಕಿ ಕಾಲು ಜಾರಿ ನಾಲೆ ಬಿದ್ದು (Drowned In Canal) ಮೃತಪಟ್ಟಿರುವ ಘಟನೆ ನಡೆದಿದೆ. ಸುಪ್ರೀತಾ (5) ಮೃತ ದುರ್ದೈವಿ.

ಗ್ರಾಮದ ರೇವಣ್ಣ-ಭಾಗ್ಯ ದಂಪತಿ ಪುತ್ರಿ ಸುಪ್ರೀತಾ ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಶಾಲೆಗೆ ರಜೆ ಇತ್ತು. ಹೀಗಾಗಿ ಗ್ರಾಮದ ಸಮೀಪವಿರುವ ನಾಲೆಯ ಬಳಿ ಸ್ನೇಹಿತರೊಂದಿಗೆ ಸುಪ್ರೀತಾ ಆಟವಾಡುತ್ತಿದ್ದಳು. ಈ ವೇಳೆ ಅಚಾನಕ್‌ ಆಗಿ ಕಾಲುಜಾರಿ ನಾಲೆಗೆ ಬಿದ್ದಿದ್ದಾಳೆ. ನಾಲೆಯಲ್ಲಿ ಹರಿಯುತ್ತಿದ್ದ ನೀರಲ್ಲಿ ಮುಳುಗಿ ಮೃತಪಟ್ಟಿದ್ದಾಳೆ.

ಹಾರಂಗಿ ಬಲದಂಡೆ ನಾಲೆಯಲ್ಲಿ ಮುಳುಗಿರುವ ಬಾಲಕಿ ಮೃತದೇಹಕ್ಕಾಗಿ ಶೋಧ ಕಾರ್ಯ ನಡೆಯುತ್ತಿದೆ. ಈಗಾಗಲೇ ಅಗ್ನಿಶಾಮಕ ದಳದ ಸಿಬ್ಬಂದಿ 6 ಕಿ.ಮೀವರೆಗೂ ಶೋಧಕಾರ್ಯ ನಡೆಸಿದ್ದಾರೆ. ಆದರೆ ಮೃತದೇಹವು ಪತ್ತೆಯಾಗಿಲ್ಲ. ಹಳ್ಳಿ ಮೈಸೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Continue Reading

ಕರ್ನಾಟಕ

Food Poisoning : ಗಣೇಶ ವಿಸರ್ಜನೆಯಲ್ಲಿ ಪ್ರಸಾದ ಸೇವಿಸಿದ 28ಕ್ಕೂ ಹೆಚ್ಚು ಮಂದಿ ಅಸ್ವಸ್ಥ

Tumkur News : ತುಮಕೂರಲ್ಲಿ ಗಣೇಶ ವಿಸರ್ಜನೆ (Ganesh Chaturthi) ವೇಳೆ ಪ್ರಸಾದ ಸೇವಿಸಿದ 20ಕ್ಕೂ ಹೆಚ್ಚು ಜನರು (Food Poisoning) ಅಸ್ವಸ್ಥಗೊಂಡಿದ್ದಾರೆ. ಹಲವರು ಗಂಭೀರವಾಗಿದ್ದು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ.

VISTARANEWS.COM


on

By

Food Poisoning
ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಸ್ವಸ್ಥರು
Koo

ತುಮಕೂರು: ಇಲ್ಲಿನ ಶೆಟ್ಟಪ್ಪನಹಳ್ಳಿಯಲ್ಲಿ ಆಹಾರ ಸೇವಿಸಿದ 28ಕ್ಕೂ ಹೆಚ್ಚು ಮಂದಿ (Food Poisoning) ಅಸ್ವಸ್ಥಗೊಂಡಿದ್ದಾರೆ. ಭಾನುವಾರ (ಸೆ.24) ಗಣೇಶ ವಿಸರ್ಜನೆ ಸಮಯದಲ್ಲಿ ಪ್ರಸಾದ ಸೇವಿಸಿದ್ದರೂ ಜತೆಗೆ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿರುವ ಶಂಕೆ ವ್ಯಕ್ತವಾಗಿದೆ.

6 ಮಂದಿ ಆರೋಗ್ಯವು ಗಂಭೀರವಾಗಿದ್ದು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಜಯಲಕ್ಷ್ಮಿ (35), ಬೋರಮ್ಮ (68), ಬೈರಪ್ಪ(80), ಗಂಗಮ್ಮ (70), ನಂಜಮ್ಮ(85) ಎಂಬುವವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು 20ಕ್ಕೂ ಹೆಚ್ಚು ಜನರಿಗೆ ಗೂಳೂರು ಪ್ರಾಥಮಿಕ ವೈದ್ಯರಿಂದ ಗ್ರಾಮದಲ್ಲೇ ಚಿಕಿತ್ಸೆ ಮುಂದುವರಿದಿದೆ.

ತುಮಕೂರು ತಾಲೂಕಿನ ಶೆಟ್ಟಪ್ಪನಹಳ್ಳಿ ಗ್ರಾಮದಲ್ಲಿ ಸುಮಾರು 54 ಮನೆಗಳಿದ್ದು, ಕಳೆದ ಭಾನುವಾರ ಗ್ರಾಮದ ಓರ್ವರಿಗೆ ವಾಂತಿ ಭೇದಿ ಕಾಣಿಸಿಕೊಂಡಿತ್ತು. ನಿನ್ನೆ ಬೆಳಗ್ಗೆ (ಸೆ.25) 10 ಗಂಟೆ ಸುಮಾರಿಗೆ 6 ಜನರ ಆರೋಗ್ಯದಲ್ಲಿ ಏರುಪೇರಾಗಿದೆ. ಅಸ್ವಸ್ಥರು ಗೂಳೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದಿದ್ದಾರೆ.

ಈ ವೇಳೆ ಎಚ್ಚತ್ತ ಆರೋಗ್ಯ ಅಧಿಕಾರಿಗಳು ವೈದ್ಯರ ತಂಡ ಸಮೇತ ಶೆಟ್ಟಪ್ಪನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಆರೋಗ್ಯ ತಪಾಸಣೆ ಮಾಡಿದ್ದಾರೆ. ಇದುವರೆಗೆ ಸುಮಾರು 28ಮಂದಿ ಆರೋಗ್ಯದಲ್ಲಿ ಏರುಪೇರಾಗಿದೆ. ಹೀಗಾಗಿ ಗ್ರಾಮದಲ್ಲೇ ಆರೋಗ್ಯ ಇಲಾಖೆ ಅಧಿಕಾರಿಗಳು ಮೊಕ್ಕಾಂ ಹೂಡಿದ್ದಾರೆ. ಅಸ್ವಸ್ಥಗೊಂಡಿರುವವರ ಮನೆಗೆ ತೆರಳಿ ಚಿಕಿತ್ಸೆ ನೀಡುತ್ತಿದ್ದಾರೆ. ಅಸ್ವಸ್ಥಗೊಂಡಿದ್ದ 28 ಜನರಲ್ಲಿ 24 ಜನರ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ.

ಸದ್ಯ ಆರೋಗ್ಯ ಇಲಾಖೆ ಅಧಿಕಾರಿಗಳು ಪ್ರಕರಣ ಸಂಬಂಧ ಮಾಹಿತಿ ಕಲೆಹಾಕುತ್ತಿದ್ದಾರೆ. ಅಣಬೆ ಸೇವಿಸಿದ್ದ ಬಗ್ಗೆಯೂ ಶಂಕೆ ಇದೆ. ಮೇಲ್ನೋಟಕ್ಕೆ ಕುಡಿಯುವ ನೀರು ಕಲುಷಿತಗೊಂಡಿರಬಹುದು, ಆಹಾರದಲ್ಲಿ ವ್ಯತ್ಯಾಸಗೊಂಡಿರಬಹುದೆಂದು ಅಂದಾಜಿಸಲಾಗಿದೆ. ಕುಡಿಯುವ ನೀರನ್ನು ಲ್ಯಾಬ್‌ಗೆ ಕಳುಹಿಸಲಾಗಿದೆ. ಬಳಿಕ ಪ್ರಕರಣದ ಸತ್ಯಸಂಗತಿ ಹೊರಬರಲಿದೆ. ಗ್ರಾಮಸ್ಥರಲ್ಲಿ ಸಾಂಕ್ರಾಮಿಕ ರೋಗದ ಆತಂಕವು ಹೆಚ್ಚಾಗಿದೆ. ತುಮಕೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Continue Reading

ಗಣೇಶ ಚತುರ್ಥಿ

Ganesh Chaturthi : ನಾಳೆ-ನಾಡಿದ್ದು ಈ ರೂಟ್‌ನಲ್ಲಿ ವಾಹನ ಸಂಚಾರ ಬಂದ್‌!

Ganesh Chaturthi : ಗಣೇಶ ಮೂರ್ತಿಗಳ ಮೆರವಣಿಗೆ ಹಾಗೂ ವಿಸರ್ಜನಾ ಇರುವುದರಿಂದ ಬೆಂಗಳೂರಿನ ಕೆಲವು ಕಡೆ ವಾಹನ ಸಂಚಾರವನ್ನು (Traffic advisory) ನಿರ್ಬಂಧಿಸಲಾಗಿದೆ.

VISTARANEWS.COM


on

By

Ganesh Chaturthi Vehicular traffic on this route to be restricted tomorrow
ಸಾಂದರ್ಭಿಕ ಚಿತ್ರ
Koo

ಬೆಂಗಳೂರು: ಆರ್.ಟಿ. ನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಮುನಿರೆಡ್ಡಿಪಾಳ್ಯದಲ್ಲಿ ಸೆ. 23ರ ರಾತ್ರಿ ಗಣೇಶ ಮೂರ್ತಿಗಳ ವಿಸರ್ಜನಾ (Ganesh Chaturthi) ಮೆರವಣಿಗೆ ನಡೆಯಲಿದೆ. ಹೀಗಾಗಿ ಶನಿವಾರ ಸಂಜೆ 06 ಗಂಟೆಯಿಂದ ಮರುದಿನ ಬೆಳಗ್ಗೆ 08 ಗಂಟೆಯವರೆಗೂ ಮೆರವಣಿಗೆ ಸಾಗುವ ಮಾರ್ಗಗಳಲ್ಲಿ ವಾಹನ ಸಂಚಾರ ಬಂದ್‌ ಆಗಲಿದೆ.

ಈ ಮಾರ್ಗಗಳಲ್ಲಿ ತಾತ್ಕಾಲಿಕ ನಿರ್ಬಂಧ

ದೇವೇಗೌಡ ರಸ್ತೆ, ಜೆ.ಸಿ.ನಗರ ಮುಖ್ಯರಸ್ತೆ, ಮಠದಹಳ್ಳಿ ಮುಖ್ಯರಸ್ತೆ, ದೇಸ್‌ರಾಜ್ ಅರಸ್ ರಸ್ತೆಗಯಲ್ಲಿ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ.

ಇದನ್ನೂ ಓದಿ: Ganesh Chaturthi : ಸೆ. 22, 24ಕ್ಕೆ ಸಂಚಾರ ಬದಲಿಸಿ; ಇದು ಗಣಪನ ಎಫೆಕ್ಟ್‌

ದಿಣ್ಣೂರಿಗೆ ಹೋಗಲು ಈ ದಾರಿ ಬಳಸಿ

1) ಸುಲ್ತಾನ್‌ ಪಾಳ್ಯ ಕಡೆಯಿಂದ ದೂರದರ್ಶನ ಕೇಂದ್ರ ಮತ್ತು ಕಂಟೋನ್ಮೆಂಟ್‌ ರೈಲು ನಿಲ್ದಾಣದ ಕಡೆಗೆ ಹಾಗೂ ಬೆಂಗಳೂರು ನಗರದ ಕಡೆಗೆ ಸಂಚರಿಸುವ ವಾಹನಗಳಿಗೆ ಬದಲಿ ಮಾರ್ಗಗಳು ಹೀಗಿವೆ.
ದಿಣ್ಣೂರು ಮುಖ್ಯರಸ್ತೆಯಿಂದ ಆರ್.ಟಿ.ನಗರ ಪೊಲೀಸ್ ಠಾಣೆ ಜಂಕ್ಷನ್‌ನಲ್ಲಿ ಎಡತಿರುವು ಪಡೆಯಬೇಕು. ಆರ್.ಟಿ.ನಗರ ಮುಖ್ಯರಸ್ತೆ ಮೂಲಕ ಗುಂಡುರಾವ್‌ ಮನೆ ಜಂಕ್ಷನ್‌, ಬೆಂಗಳೂರ ಬಳ್ಳಾರಿ ರಸ್ತೆ, ಮೇಖ್ರಿ ಸರ್ಕಲ್ ಸರ್ವೀಸ್ ರಸ್ತೆಯಲ್ಲಿ ಎಡತಿರುವು ಪಡೆದು ಜಯಮಹಲ್ ರಸ್ತೆಯಲ್ಲಿ ನೇರವಾಗಿ ಕಂಟೋನ್ಮೆಂಟ್‌ ರೈಲು ನಿಲ್ದಾಣದ ಕಡೆಗೆ ಸಂಚರಿಸಬಹುದಾಗಿದೆ.

  1. ಕಂಟೋನ್ಮೆಂಟ್ ರೈಲು ನಿಲ್ದಾಣ ಕಡೆಯಿಂದ ಆರ್.ಟಿ.ನಗರ – ಸುಲ್ತಾನ್ ಪಾಳ್ಯ – ಕಾವಲ್‌ಭೈರಸಂದ್ರ ಕಡೆಗೆ ಸಂಚರಿಸುವ ವಾಹನಗಳು ಜಯಮಹಲ್‌ ರಸ್ತೆ ಮೂಲಕ ಮೇಖ್ರಿ ಸರ್ಕಲ್ ಬೆಂಗಳೂರು ಬಳ್ಳಾರಿ ರಸ್ತೆ, ಸಿಬಿಐ ಅಂಡರ್ ವಾಸ್ ಮೂಲಕ ಆರ್.ಟಿ.ನಗರ ಮುಖ್ಯರಸ್ತೆ- ಆರ್.ಟಿ.ನಗರ ಪೊಲೀಸ್ ಠಾಣೆ ಜಂಕ್ಷನ್ ಎಡತಿರುವು ಪಡೆದು ದಿಣ್ಣೂರು ರಸ್ತೆಯ ಮೂಲಕ ಸಂಚರಿಸಬಹುದು.
  2. ಯಶವಂತಪುರ ಕಡೆಯಿ೦ದ ಆರ್.ಟಿ.ನಗರ-ಸುಲ್ತಾನ್ ಪಾಳ್ಯ-ಕಾವಲ್‌ ಬೈರಸಂದ್ರ ಕಡೆಗೆ ಸಂಚರಿಸುವ ವಾಹನಗಳು ಮೇಕ್ರಿ ಸರ್ಕಲ್‌ನಲ್ಲಿ ಎಡತಿರುವು ಪಡೆದು ಬೆಂಗಳೂರು ಬಳ್ಳಾರಿ ರಸ್ತೆ, ಸಿಬಿಐ ಅಂಡರ್ ಪಾಸ್ ಬಲತಿರುವು ಪಡೆದು ಆರ್.ಟಿ.ನಗರ ಪೊಲೀಸ್ ಠಾಣೆ ಜಂಕ್ಷನ್-ಎಡತಿರುವು ಪಡೆದು ದಿಣ್ಣೂರು ರಸ್ತೆಯ ಮೂಲಕ ಸಂಚರಿಸಬಹುದು.
  3. ಬೆಂಗಳೂರು ನಗರದ ಕಡೆಯಿಂದ ಆರ್.ಟಿ.ನಗರ ಕಡೆಗೆ ಸಂಚರಿಸುವ ವಾಹನಗಳು ಮೇಖ್ರಿಸರ್ಕಲ್ ಅಂಡರ್ ಪಾಸ್, ಬೆಂಗಳೂರು ಬಳ್ಳಾರಿ ರಸ್ತೆ, ಸಿ.ಬಿ.ಐ. ಜಂಕ್ಷನ್ ನಂತರ ಕರ್ನಾಟಕ ಸ್ಪೀರಿಟ್‌ನಲ್ಲಿ ಬಲ ತಿರುವು ತೆಗೆದುಕೊಂಡು ಬಿಬಿ ಸರ್ವೀಸ್‌ ರಸ್ತೆ, ಸಿ.ಬಿ.ಐ ರಸ್ತೆ ಡೆಡ್ ಎಂಡ್ ಬಲತಿರುವು ಮೂಲಕ ದಿಣ್ಣೂರು ರಸ್ತೆಯ ಮೂಲಕ ಹೋಗಬಹುದು.

ಸೆ.24ರಂದು ಈ ಮಾರ್ಗದಲ್ಲಿ ಸಂಚಾರ ಬಂದ್

‌ಸೆ.24ರಂದು ರಾತ್ರಿ 8 ಗಂಟೆಯಿಂದ ಬೆಳಗ್ಗೆ 6 ಗಂಟೆವರೆಗೆ ಸಂಚಾರ ನಿರ್ಬಂಧ ಮಾಡಲಾಗಿದೆ.
-ನಾಗವಾರ ಜಂಕ್ಷನ್‌ನಿಂದ ಪಾಟರಿ ಸರ್ಕಲ್ ರಸ್ತೆಯವರೆಗೆ ಸಂಚಾರವನ್ನು ನಿರ್ಬಂಧಿಸಲಾಗುತ್ತದೆ.
-ನೇತಾಜಿ ಜಂಕ್ಷನ್‌ನಿಂದ ಪಾಟರಿ ಸರ್ಕಲ್ ಮೂಲಕ ಟ್ಯಾನರಿ ರಸ್ತೆ ಕಡೆಗೂ ಸಂಚಾರ ಬಂದ್‌ ಆಗಲಿದೆ.
-ಕೆನ್ಸಿಂಗ್‌ಟನ್‌ ಕಡೆಯಿಂದ ಎಂ.ಇ.ಜಿ ಮೂಲಕ ಹಲಸೂರು ಲೇಕ್ ಕಡೆಗೆ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗುತ್ತದೆ. ಆದರೆ ಎಂಇಜಿ ಕಡೆಯಿಂದ ಕೆನ್ಸಿಂಗ್‌ಟನ್ ಕಡೆಗೆ ಏಕಮುಖ ಸಂಚಾರ ಇರಲಿದೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Continue Reading

ಕರ್ನಾಟಕ

Ganesh Chaturthi: ನಾಳೆ ಗಣೇಶ ಮೂರ್ತಿಗಳ ವಿಸರ್ಜನೆ; ‌ಬೆಂಗಳೂರಿನ ಹಲವೆಡೆ ರಸ್ತೆ ಮಾರ್ಗ ಬದಲಾವಣೆ

Ganesh Chaturthi: ಬೆಂಗಳೂರಿನ ಆರ್.ಟಿ. ನಗರ ಸಂಚಾರ ಪೊಲೀಸ್‌ ಠಾಣಾ ಸರಹದ್ದಿನಲ್ಲಿ ಸೆ.21ರಂದು ಸಂಜೆ 6 ಗಂಟೆಯಿಂದ ಸೆ.22 ಬೆಳಗ್ಗೆ 7 ಗಂಟೆಯವರೆಗೆ ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿದೆ.

VISTARANEWS.COM


on

Ganesh visarjan
Koo

ಬೆಂಗಳೂರು: ನಗರದಲ್ಲಿ ಸೆ.21ರಂದು ಗಣೇಶ ಮೂರ್ತಿಗಳ ವಿಸರ್ಜನೆ (Ganesh Chaturthi) ‌ಹಿನ್ನೆಲೆಯಲ್ಲಿ ಸಂಚಾರ ದಟ್ಟಣೆ ಉಂಟಾಗುವ ಸಾಧ್ಯತೆ ಇದೆ. ಹೀಗಾಗಿ ಆರ್.ಟಿ. ನಗರ ಸಂಚಾರ ಪೊಲೀಸ್‌ ಠಾಣಾ ಸರಹದ್ದಿನಲ್ಲಿ ಸುಗಮ ಸಂಚಾರಕ್ಕಾಗಿ ಹಲವೆಡೆ ಮಾರ್ಗ ಬದಲಾವಣೆ ಮಾಡಲಾಗಿದೆ.

ಸೆ.21ರಂದು ಗುರುವಾರ ರಾತ್ರಿ ಗಣೇಶ ಮೂರ್ತಿಗಳ ವಿಸರ್ಜನಾ ಮೆರವಣಿಗೆ ನಡೆಯಲಿದೆ. ಹೀಗಾಗಿ ಗುರುವಾರ ಸಂಜೆ 6 ಗಂಟೆಯಿಂದ ಶುಕ್ರವಾರ ಬೆಳಗ್ಗೆ 7 ಗಂಟೆಯವರೆಗೆ ಮಾರ್ಗ ಬದಲಾವಣೆ ಮಾಡಲಾಗಿದೆ. ಅದ್ದರಿಂದ ವಾಹನ ಸವಾರರು ಬದಲಿ‌ ಮಾರ್ಗದಲ್ಲಿ ಸಾಗುವುದು ಅನಿವಾರ್ಯವಾಗಿದೆ.

ಇದನ್ನೂ ಓದಿ | Ganesh Chaturthi : ಸೆ. 22, 24ಕ್ಕೆ ಸಂಚಾರ ಬದಲಿಸಿ; ಇದು ಗಣಪನ ಎಫೆಕ್ಟ್‌

ಎಲ್ಲಾ ಮಾದರಿಯ ವಾಹನಗಳು ಪರ್ಯಾಯ ರಸ್ತೆಯಲ್ಲಿಯೇ ಸಂಚರಿಸಬೇಕಾಗಿದ್ದು, ಇದಕ್ಕಾಗಿ ಸಂಚಾರ ಪೋಲಿಸರು ಅಗತ್ಯ ಕ್ರಮ ಕೈಗೊಂಡಿದ್ದಾರೆ. ಸೂಕ್ತ ಸ್ಥಳಗಳಲ್ಲಿ ಅಧಿಕಾರಿಗಳ ನಿಯೋಜನೆ ಮತ್ತು ಬಂದೋಬಸ್ತ್ ಮಾಡಲಾಗಿದೆ.

ಸಂಚಾರ ತಾತ್ಕಾಲಿಕವಾಗಿ ನಿರ್ಬಂಧಿಸಲಾದ ರಸ್ತೆಗಳ ವಿವರ

  1. ದಿಣ್ಣೂರು ಮುಖ್ಯರಸ್ತೆ
  2. ಆರ್.ಟಿ ನಗರ ಮುಖ್ಯರಸ್ತೆ.
  3. ಸಿಬಿಐ ಮುಖ್ಯರಸ್ತೆ.

ಮಾರ್ಗ ಬದಲಾವಣೆ ವಿವರಗಳು

1.ಸುಲ್ತಾನ್ ಪಾಳ್ಯ ಕಡೆಯಿಂದ ದೂರದರ್ಶನ ಕೇಂದ್ರ ಮತ್ತು ಕಂಟೋನ್‌ಮೆಂಟ್ ರೈಲು ನಿಲ್ದಾಣದ ಕಡೆಗೆ ಹಾಗೂ ಬೆಂಗಳೂರು ನಗರದ ಕಡೆಗೆ ಸಂಚರಿಸುವ ವಾಹನಗಳು ಸಂಚರಿಸಬೇಕಾದ ಮಾರ್ಗಗಳು:

ಸುಲ್ತಾನ್ ಪಾಳ್ಯ ಮುಖ್ಯರಸ್ತೆ – ದಿಣ್ಣೂರು ಜಂಕ್ಷನ್‌-ಎಡತಿರುವು – ದೇವೇಗೌಡ ಮುಖ್ಯರಸ್ತೆ – ಪಿ.ಆರ್.ಟಿ.ಸಿ ಜಂಕ್ಷನ್- ಬಲ ತಿರುವು – ವಾಟರ್ ಟ್ಯಾಂಕ್ ಜಂಕ್ಷನ್ – ಎಡ ತಿರುವು- ಟಿ.ವಿ ಟವರ್ – ಎಡ ತಿರುವು-ಜಯಮಹಲ್ ಮುಖ್ಯರಸ್ತೆ- ರಸ್ತೆಯಲ್ಲಿ ನೇರವಾಗಿ ಕಂಟೋನೆಂಟ್ ರೈಲು ನಿಲ್ದಾಣದ ಕಡೆಗೆ ಸಂಚರಿಸಬಹುದಾಗಿದೆ.

2.ಸುಲ್ತಾನ್ ಪಾಳ್ಯ ಕಡೆಯಿಂದ ಬೆಂಗಳೂರು ನಗರದ ಕಡೆಗೆ ಸಂಚರಿಸುವ ವಾಹನ ಸವಾರರು ಸಂಚರಿಸಬೇಕಾದ ಮಾರ್ಗಗಳು:

ಸುಲ್ತಾನ್ ಪಾಳ್ಯ ಮುಖ್ಯರಸ್ತೆ – ದಿಣ್ಣೂರು ಜಂಕ್ಷನ್-ಎಡತಿರುವು – ದೇವೇಗೌಡ ಮುಖ್ಯರಸ್ತೆ – ಪಿ.ಆರ್.ಟಿ.ಸಿ ಜಂಕ್ಷನ್- ಬಲ -ತಿರುವು – ವಾಟರ್ ಟ್ಯಾಂಕ್ ಜಂಕ್ಷನ್ -ಬಲ ತಿರುವು- ಮಠದಹಳ್ಳಿ ಮುಖ್ಯರಸ್ತೆ- ಗುಂಡೂರಾವ್ ಸರ್ಕಲ್ – ಎಡ ತಿರುವು – ತರಳಬಾಳು ರಸ್ತೆ – ಎಡತಿರುವು- ಬೆಂಗಳೂರು ಬಳ್ಳಾರಿ ರಸ್ತೆ ಮೇಕ್ರಿ ಸರ್ಕಲ್ – ಬೆಂಗಳೂರು ನಗರದ ಕಡೆಗೆ ಸಂಚರಿಸಬಹುದಾಗಿದೆ.

    3.ಕಂಟೋನ್ಸೆಂಟ್ ರೈಲು ನಿಲ್ದಾಣ ಕಡೆಯಿಂದ ಆರ್.ಟಿ.ನಗರ ಸಂಚರಿಸುವ ವಾಹನಗಳು ಸಂಚರಿಸಬೇಕಾದ ಮಾರ್ಗಗಳು. – ಸುಲ್ತಾನ್ ಪಾಳ್ಯ – ಕಾವಲ್‌ ಭೈರಸಂದ್ರ ಕಡೆಗೆ:

    ಜಯಮಹಲ್ ರಸ್ತೆ- ಜೆ.ಸಿ ನಗರ ಪಿ.ಎಸ್ ಜಂಕ್ಷನ್ – ಟಿವಿ ಟವರ್ (ಸಿ.ಕ್ಯೂ.ಎ.ಎಲ್ ಕ್ರಾಸ್ ಬಲ ತಿರುವು) – ವಾಟರ್ ಟ್ಯಾಂಕ್ ಜಂಕ್ಷನ್ – ಬಲ ತಿರುವು – ಪಿ.ಆರ್.ಟಿ.ಸಿ ಜಂಕ್ಷನ್ – ಎಡ ತಿರುವು- ದೇವೆಗೌಡ ರಸ್ತೆ – ದಿಣ್ಣೂರು ಜಂಕ್ಷನ್ ಬಲ ತಿರುವು -ಸುಲ್ತಾನ್ ಪಾಳ್ಯ – ಕಾವಲ್ ಭೈರಸಂದ್ರ ಕಡೆಗೆ ಸಂಚರಿಸಬಹುದು.

      4.ಯಶವಂತಪುರ ಕಡೆಯಿಂದ ಆರ್.ಟಿ.ನಗರ-ಸುಲ್ತಾನ್ ಪಾಳ್ಯ-ಕಾವಲ್ ಬೈರಸಂದ್ರ ಕಡೆಗೆ ಸಂಚರಿಸುವ ವಾಹನಗಳು ಸಂಚರಿಸಬೇಕಾದ ಮಾರ್ಗಗಳು:

      ಮೇಕ್ರಿ ಸರ್ಕಲ್‌- ಜಯಮಹಲ್ ಮುಖ್ಯರಸ್ತೆ – ಟಿ.ವಿ ಟವರ್ (ಸಿ.ಕ್ಯೂ.ಎ.ಎಲ್ ಕ್ರಾಸ್) ಎಡತಿರುವು ವಾಟರ್‌ ಟ್ಯಾಂಕ್ ಜಂಕ್ಷನ್ – ಪಿ.ಆರ್.ಟಿ.ಸಿ ಜಂಕ್ಷನ್ – ಎಡ ತಿರುವು- ದೇವೇಗೌಡ ರಸ್ತೆ – ದಿಣ್ಣೂರು ಜಂಕ್ಷನ್ ಬಲ- ತಿರುವು ಸುಲ್ತಾನ್ ಪಾಳ್ಯ – ಕಾವಲ್ ಭೈರಸಂದ್ರ ಕಡೆಗೆ ಸಂಚರಿಸಬಹುದು.

      5.ಬೆಂಗಳೂರು ನಗರದ ಕಡೆಯಿಂದ ಆರ್.ಟಿ.ನಗರ ಕಡೆಗೆ ಸಂಚರಿಸುವ ವಾಹನಗಳು ಅನುಸರಿಸಬೇಕಾದ ಮಾರ್ಗಗಳು:

      ಮೇಕಿ ಸರ್ಕಲ್- ಬಲ ತಿರುವು – ಜಯಮಹಲ್‌ ಮುಖ್ಯರಸ್ತೆ ಟಿ.ವಿ ಟವರ್ (ಸಿ.ಕ್ಯೂ.ಎ.ಎಲ್ ಕ್ರಾಸ್) ಎಡತಿರುವು ವಾಟರ್ ಟ್ಯಾಂಕ್ ಜಂಕ್ಷನ್‌ – ಎಡ ತಿರುವು ಮಠದಹಳ್ಳಿ ಮುಖ್ಯ ರಸ್ತೆ – ಸರ್ಕಲ್ – ಆರ್.ಟಿ.ನಗರ ಮುಖ್ಯರಸ್ತೆ ಮೂಲಕ ಸಂಚರಿಸಬಹುದು.

      6.ಹೆಬ್ಬಾಳ ಪಿ.ಎಸ್ ಜಂಕ್ಷನ್‌ನಿಂದ ಸುಲ್ತಾನ್ ಪಾಳ್ಯ ಕಾವಲ್ ಭೈರಸಂದ್ರ ಕಡೆಗೆ ಸಂಚರಿಸುವ ವಾಹನಗಳು – ಸಂಚರಿಸಬೇಕಾದ ಮಾರ್ಗಗಳು:

      ಹೆಬ್ಬಾಳ ಪಿ.ಎಸ್ ಜಂಕ್ಷನ್‌ನಿಂದ – ಬೆಂಗಳೂರು ಬಳ್ಳಾರಿ ರಸ್ತೆ- ಸಿಬಿಐ ಜಂಕ್ಷನ್‌ – ಸಂಜಯನಗರ ಕ್ರಾಸ್- ತರಳಬಾಳು ರಸ್ತೆ ಎಡತಿರುವು- ದೇಸ್ವರಾಜ್ ರಸ್ತೆ -ಗುಂಡೂರಾವ್ ಸರ್ಕಲ್ ಬಲತಿರುವು- 1 – ಮಠದಹಳ್ಳಿ ರಸ್ತೆ ವಾಟರ್ ಟ್ಯಾಂಕ್ ಜಂಕ್ಷನ್‌ ಎಡ ತಿರುವು -ಪಿ.ಆರ್.ಟಿ.ಸಿ ಜಂಕ್ಷನ್ – ದೇವೆಗೌಡ ರಸ್ತೆ – ದಿಣ್ಣೂರು ಸಂಚರಿಸಬಹುದು. – ಎಡ ತಿರುವು ದಿಣ್ಣೂರು ಜಂಕ್ಷನ್ ಬಲ ತಿರುವು ಸುಲ್ತಾನ್ ಪಾಳ್ಯ ಕಾವಲ್ ಭೈರಸಂದ್ರ ಕಡೆಗೆ.

        Continue Reading
        Advertisement
        IPL Ticket Scam
        ಕ್ರೀಡೆ5 mins ago

        IPL Ticket Scam: ಆನ್​ಲೈನ್​ ಟಿಕೆಟ್​ ಖರೀದಿಸಲು ಹೋಗಿ 3 ಲಕ್ಷ ರೂ ಕಳೆದುಕೊಂಡ ಆರ್​ಸಿಬಿ ಅಭಿಮಾನಿ

        Zakir Naik
        ವಿದೇಶ11 mins ago

        Zakir Naik: ಹಿಂದುಗಳನ್ನು ಮತಾಂತರಗೊಳಿಸುವ ಜಾಕೀರ್ ನಾಯ್ಕ್‌ನನ್ನು ಭಾರತದ ಚಕ್ರವರ್ತಿಯನ್ನಾಗಿಸಬೇಕು; ವಿವಾದ ಹುಟ್ಟುಹಾಕಿದ ಮೌಲ್ವಿ

        prajwal revanna case bhavani revanna hd revanna
        ಕ್ರೈಂ25 mins ago

        Prajwal Revanna Case: ಕಷ್ಟಕ್ಕಾಗದ ಭವಾನಿ ರೇವಣ್ಣ ಮೇಲೆ ದೇವೇಗೌಡ ಫ್ಯಾಮಿಲಿ ಕೆಂಡಾಮಂಡಲ

        Murder Case in Anekla
        ಬೆಂಗಳೂರು ಗ್ರಾಮಾಂತರ33 mins ago

        Murder case : ಬಯಲು ಶೌಚಾಲಯಕ್ಕೆ ಹೋದ ಬಾಲಕನ ದೊಣ್ಣೆಯಿಂದ ಹೊಡೆದು ಕೊಂದರು

        Kannada New Movie tanush shivannas mr natwarlal In OTT
        ಸ್ಯಾಂಡಲ್ ವುಡ್34 mins ago

        Kannada New Movie: ಒಟಿಟಿಗೆ ಲಗ್ಗೆ ಇಟ್ಟ ತನುಷ್ ಶಿವಣ್ಣ ಅಭಿನಯದ ಕ್ರೈಮ್-ಆ್ಯಕ್ಷನ್ ಸಿನಿಮಾ ʻMr ನಟ್ವರ್ ಲಾಲ್ʼ!

        Viral News
        ವೈರಲ್ ನ್ಯೂಸ್37 mins ago

        Viral News: ಅಂತ್ಯಕ್ರಿಯೆ ವೇಳೆ ಬದುಕಿ ಬಂದ ಮಗಳು; ಖುಷಿಯಾಗಿದ್ದ ಪೋಷಕರಿಗೆ ಕಾದಿತ್ತು ಮತ್ತೊಂದು ಶಾಕ್‌!

        Aniruddha Jatkar Chef Chidambara Release Date announce
        ಸ್ಯಾಂಡಲ್ ವುಡ್47 mins ago

        Aniruddha Jatkar: ಅನಿರುದ್ದ್ ನಟನೆಯ “Chef ಚಿದಂಬರ” ರಿಲೀಸ್‌ ಡೇಟ್‌ ಅನೌನ್ಸ್‌!

        Viral Video
        ಕ್ರೀಡೆ1 hour ago

        Viral Video: ಗಲ್ಲಿ ಕ್ರಿಕೆಟ್​ನಲ್ಲಿ ಎಡಗೈ ಬ್ಯಾಟಿಂಗ್​ ನಡೆಸಿದ ಕೆ.ಎಲ್​ ರಾಹುಲ್​

        Physical Abuse
        ಕ್ರೈಂ1 hour ago

        Physical Abuse: ತೀರ್ಥದಲ್ಲಿ ನಿದ್ದೆ ಮಾತ್ರೆ ಬೆರೆಸಿ ಅರ್ಚಕನಿಂದ ನಿರೂಪಕಿ ಮೇಲೆ ಅತ್ಯಾಚಾರ

        anjali murder suspect girish2
        ಕ್ರೈಂ1 hour ago

        Anjali Murder Case: ಥಳಿಸಿದವರಿಗೆ ಈತ ಅಂಜಲಿ ಹಂತಕ ಎಂದು ಗೊತ್ತೇ ಇರಲಿಲ್ಲ! ಕೊಲೆಗಾರ ಸಿಕ್ಕಿಬಿದ್ದಿದ್ದು ಹೀಗೆ

        Sharmitha Gowda in bikini
        ಕಿರುತೆರೆ7 months ago

        Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

        Kannada Serials
        ಕಿರುತೆರೆ7 months ago

        Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

        Bigg Boss- Saregamapa 20 average TRP
        ಕಿರುತೆರೆ7 months ago

        Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

        galipata neetu
        ಕಿರುತೆರೆ6 months ago

        Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

        Kannada Serials
        ಕಿರುತೆರೆ8 months ago

        Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

        Kannada Serials
        ಕಿರುತೆರೆ7 months ago

        Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

        Bigg Boss' dominates TRP; Sita Rama fell to the sixth position
        ಕಿರುತೆರೆ7 months ago

        Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

        geetha serial Dhanush gowda engagement
        ಕಿರುತೆರೆ5 months ago

        Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

        varun
        ಕಿರುತೆರೆ6 months ago

        Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

        Kannada Serials
        ಕಿರುತೆರೆ8 months ago

        Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

        Karnataka weather Forecast
        ಮಳೆ5 hours ago

        Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

        Dina Bhavishya
        ಭವಿಷ್ಯ7 hours ago

        Dina Bhavishya : ಈ ರಾಶಿಯ ಪ್ರೇಮಿಗಳಿಗೆ ಮನೆಯಿಂದ ಸಿಗುತ್ತೆ ಗ್ರೀನ್‌ ಸಿಗ್ನಲ್‌

        Karnataka Weather Forecast
        ಮಳೆ19 hours ago

        Karnataka Weather : ಭಾರಿ ಮಳೆಗೆ ಕೊಟ್ಟೂರು ಬಸ್ ಸ್ಟ್ಯಾಂಡ್‌ ಜಲಾವೃತ; ‌ ತಾಯಿ-ಮಗ ಗ್ರೇಟ್‌ ಎಸ್ಕೇಪ್‌

        Drowned in water
        ಹಾಸನ21 hours ago

        Drowned in water : ಕೆರೆಯಲ್ಲಿ ಈಜಲು ಹೋದ ನಾಲ್ವರು ನೀರುಪಾಲು; ಓರ್ವ ಬಾಲಕ ಪಾರು

        Suspicious Case
        ಬೆಂಗಳೂರು1 day ago

        Suspicious Case : ಬಾತ್‌ ರೂಂನಲ್ಲಿತ್ತು ಕಾಲೇಜು ಹುಡುಗಿ ಡೆಡ್‌ ಬಾಡಿ; ಕುತ್ತಿಗೆ ಕೊಯ್ದು ಸಾಯಿಸಿದವರು ಯಾರು?

        Prajwal Revanna Case
        ಕರ್ನಾಟಕ2 days ago

        Prajwal Revanna Case: ಪ್ರಜ್ವಲ್‌ ರೇವಣ್ಣ ಇಂದೇ ಜರ್ಮನಿಯಿಂದ ಭಾರತಕ್ಕೆ? ಎಸ್‌ಐಟಿ ಅಲರ್ಟ್‌

        Dina Bhavishya
        ಭವಿಷ್ಯ2 days ago

        Dina Bhavishya : ಭೂ ವ್ಯವಹಾರಕ್ಕೆ ಇದು ಸೂಕ್ತ ಸಮಯ; ವ್ಯಾಪಾರದಲ್ಲಿ ಡಬಲ್‌ ಲಾಭ

        HD Revanna Released first reaction after release will be acquitted of all charges
        ರಾಜಕೀಯ3 days ago

        HD Revanna Released: ರಿಲೀಸ್‌ ಬಳಿಕ ರೇವಣ್ಣ ಫಸ್ಟ್‌ ರಿಯಾಕ್ಷನ್;‌ ನ್ಯಾಯಾಂಗದ ಮೇಲೆ ನಂಬಿಕೆ ಇದೆ; ಆರೋಪ ಮುಕ್ತನಾಗುವೆ

        CM Siddaramaiah says Our government is stable for 5 years BJP will disintegrate
        Lok Sabha Election 20243 days ago

        CM Siddaramaiah: ನಮ್ಮ ಸರ್ಕಾರ 5 ವರ್ಷ ಸುಭದ್ರ; ಚುನಾವಣೆ ಬಳಿಕ ಬಿಜೆಪಿ ಛಿದ್ರ ಎಂದ ಸಿಎಂ ಸಿದ್ದರಾಮಯ್ಯ!

        I dont want to go to other states for Lok Sabha Election 2024 campaign for Congress says CM Siddaramaiah
        Lok Sabha Election 20243 days ago

        CM Siddaramaiah: ಕಾಂಗ್ರೆಸ್‌ ಪರ ಬೇರೆ ರಾಜ್ಯಗಳಿಗೆ ಪ್ರಚಾರಕ್ಕೆ ಹೋಗಲು ನನಗೆ ಇಷ್ಟವಿಲ್ಲ: ಸಿಎಂ ಸಿದ್ದರಾಮಯ್ಯ!

        ಟ್ರೆಂಡಿಂಗ್‌