Lizards in home: ಹಲ್ಲಿಯನ್ನು ಮನೆಯಿಂದ ಓಡಿಸುವ ಕಲೆ ನಿಮಗೆ ಗೊತ್ತೇ? ಇಲ್ಲಿವೆ ಟಿಪ್ಸ್! - Vistara News

ಲೈಫ್‌ಸ್ಟೈಲ್

Lizards in home: ಹಲ್ಲಿಯನ್ನು ಮನೆಯಿಂದ ಓಡಿಸುವ ಕಲೆ ನಿಮಗೆ ಗೊತ್ತೇ? ಇಲ್ಲಿವೆ ಟಿಪ್ಸ್!

ನಿರುಪದ್ರವಿ ಹಲ್ಲಿಗಳಿಗೆ ಹೆದರುವ ಅವಶ್ಯಕತೆಯಿಲ್ಲ. ಕೆಲವು ಸರಳ ವಿಧಾನಗಳಿಂದ ಮನೆಗೆ ಬರದಂತೆ ತಡೆಯಬಹುದು, ಅಥವಾ ಇರುವ ಹಲ್ಲಿಗಳನ್ನು ಓಡಿಸಿಬಿಡಬಹುದು. ಹಾಗಾದರೆ ಬನ್ನಿ, ಈ ಸರಳ ಟಿಪ್ಸ್‌ಗಳು ಯಾವುವು (lifestyle tips) ಎಂದು ನೋಡೋಣ.

VISTARANEWS.COM


on

home lizard
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಕಚೇರಿಯಲ್ಲಿ ಸುಸ್ತಾಗುವಷ್ಟು ಕೆಲಸ ಮಾಡಿ ಬಂದು ಸೋಫಾದ ಮೇಲೆ ಅಡ್ಡಾದರೆ, ಕಣ್ಣು ಮುಚ್ಚುವ ಮೊದಲೇ ಕಣ್ಣೆದುರು ಗೋಡೆಯಲ್ಲೊಂದು ಹಲ್ಲಿ ನಿಮ್ಮನ್ನೇ ನೋಡುತ್ತಿದ್ದರೆ, ಒಮ್ಮೆಲೆ ನಿಮ್ಮ ನಿದ್ದೆಯೆಲ್ಲ ಹಾರಿ ಹೋಗುತ್ತದೆ. ಜಿರಳೆ, ಹಲ್ಲಿ, ಜೇಡ ಇತ್ಯಾದಿಗಳು ಮನೆಯ ಗೋಡೆಗಳಲ್ಲಿ (Lizards in home) ಹರಿದಾಡುತ್ತಿದ್ದರೆ, ಖಂಡಿತವಾಗಿಯೂ ಅದು ಸಹ್ಯವಾಗಿ ಅನಿಸುವುದು ಕಷ್ಟ. ಹಲ್ಲಿಯಿಂದ ಹಾಗೆ ನೋಡಿದರೆ ಯಾವ ತೊಂದರೆಯೂ ಮೇಲ್ನೋಟಕ್ಕೆ ಕಾಣದಿದ್ದರೂ, ಹಲ್ಲಿ ನಡೆದಾಡುವ ರೀತಿಯೇ ಕೆಲವರಲ್ಲಿ ವಿಚಿತ್ರ ಭಯ ಹುಟ್ಟಿಸುತ್ತದೆ. ಇನ್ನೂ ಕೆಲವರಂತೂ ಹಲ್ಲಿ ಕಂಡಾಗ ಹುಲಿ ಕಂಡಂತೆ ಕಿರುಚಾಡಿ ಆಕಾಶ ಭೂಮಿ ಒಂದು ಮಾಡಿಬಿಡುತ್ತಾರೆ. ಆದರೆ, ಈ ನಿರುಪದ್ರವಿ ಹಲ್ಲಿಗಳಿಗೆ ಹೆದರುವ ಅವಶ್ಯಕತೆಯಿಲ್ಲ. ಕೆಲವು ಸರಳ ವಿಧಾನಗಳಿಂದ ಮನೆಗೆ ಬರದಂತೆ ತಡೆಯಬಹುದು, ಅಥವಾ ಇರುವ ಹಲ್ಲಿಗಳನ್ನು ಓಡಿಸಿಬಿಡಬಹುದು. ಹಾಗಾದರೆ ಬನ್ನಿ, ಈ ಸರಳ ಟಿಪ್ಸ್‌ಗಳು ಯಾವುವು (lifestyle tips) ಎಂದು ನೋಡೋಣ.

1. ಮೊಟ್ಟೆಯ ಹೊರಕವಚ ಹಲ್ಲಿಗಳನ್ನು ಓಡಿಸಲು ಸುಲಭ ಉಪಾಯ. ಮೊಟ್ಟೆಯ ವಾಸನೆ ಹಲ್ಲಿಗಳಿಗೆ ಆಗಿ ಬರುವುದಿಲ್ಲ. ಹೀಗಾಗಿ, ಮುಂದಿನ ಬಾರಿ ಮನೆಯಲ್ಲಿ ಮೊಟ್ಟೆಯನ್ನು ಬಳಸಿದಾಗ ಅದರ ಹೊರಕವಚವನ್ನು ಕಸದ ತೊಟ್ಟಿಗೆ ಎಸೆಯಬೇಡಿ. ಅದನ್ನು ಹಾಗೆಯೇ ತೆಗೆದಿಟ್ಟು ಮನೆಯಲ್ಲಿ ಬಾಗಿಲ ಬಳಿ, ಕಿಟಕಿಯ ಬಳಿ ಹೀಗೆ ಕೆಲವು ಜಾಗಗಳಲ್ಲಿ ಇಟ್ಟುಬಿಡಿ. ಆದರೆ ಹೀಗೆ ಒಮ್ಮೆ ಇಟ್ಟ ಮೊಟ್ಟೆಯ ಕವಚವನ್ನು ಬಹಳ ದಿನ ಹಾಗೆಯೇ ಇಡಲಾಗುವುದಿಲ್ಲವಾದ್ದರಿಂದ ಪದೇಪದೇ ಈ ಕೆಲಸವನ್ನು ಮಾಡುತ್ತಲೇ ಇರಬೇಕಾಗುತ್ತದೆ.

2. ಹಲ್ಲಿಗಳು ಚಳಿಯಲ್ಲಿ ಇರಬಯಸುವುದಿಲ್ಲ. ಹೀಗಾಗಿ ನಿಮ್ಮ ಕೋಣೆಯ ಉಷ್ಣಾಂಶವನ್ನು ೨೨ ಡಿಗ್ರಿಗಿಂತ ಕಡಿಮೆ ಇಡಿ. ಹಲ್ಲಿಗಳೂ ಅಲ್ಲಿದ ಕಾಲು ಕೀಳುತ್ತವೆ.

3. ಕೆಟ್ಟ ವಾಸನೆಯನ್ನು ಯಾವತ್ತಿಗೂ ಹಲ್ಲಿಗಳು ಸಹಿಸಲಾರವು. ಹೀಗಾಗಿ ಬೆಳ್ಳುಳ್ಳಿ ಹಾಗೂ ಈರುಳ್ಳಿಯಂತಹ ವಸ್ತುಗಳು ನಿಮ್ಮ ಸಹಾಯಕ್ಕೆ ಬರುತ್ತವೆ. ಬೆಳ್ಳುಳ್ಳಿ ಹಾಗೂ ಈರುಳ್ಳಿಯನ್ನು ಕತ್ತರಿಸಿ ಮನೆಯಲ್ಲಿ ಅಲ್ಲಲ್ಲಿ ಇಟ್ಟುಬಿಡಿ. ಹಲ್ಲಿಗಳು ಆ ವಾಸನೆಗೆ ಓಡಿ ಹೋಗುತ್ತವೆ. ನಿಮಗೆ ಮನೆಯಲ್ಲಿ ಅಲ್ಲಲ್ಲಿ ಹೀಗೆ ಬೆಳ್ಳುಳ್ಳಿ, ಈರುಳ್ಳಿ ಇಡುವುದು ಇಷ್ಟವಾಗದಿದ್ದರೆ, ಇದರ ರಸ ತೆಗೆದು ಆ ರಸವನ್ನು ಮನೆಯಲ್ಲಿ ಗೋಡೆಗಳ ಮೇಲೆ ಸ್ಪ್ರೇ ಮಾಡಿದರೂ ಸಾಕು.

4. ಹಲ್ಲಿಗಳು ಸದಾ ಬೆಚ್ಚಗಿನ ವಾತಾವರಣದಲ್ಲಿರಲು ಇಷ್ಟಪಡುತ್ತವೆ. ಹಾಗಾಗಿ ಹಲ್ಲಿಗಳನ್ನು ಕಂಡಾಗ ಅವುಗಳ ಮೇಲೆ ಫ್ರಿಡ್ಜ್‌ನ ತಣ್ಣೀರು ಚಿಮುಕಿಸಿಬಿಡಿ. ಹಲ್ಲಿಗಳು ಓಡಿಹೋಗುತ್ತವೆ.

5. ಕರಿಮೆಣಸು ಹಾಗೂ ಕೆಂಪು ಮೆಣಸು ಎರಡರನ್ನೂ ಕಂಡರೆ ಹಲ್ಲಿಗಳಿಗೆ ಆಗುವುದಿಲ್ಲ. ಹಾಗಾಗಿ ಕರಿಮೆಣಸಿನ ಪುಡಿ ಹಾಗೂ ಮೆಣಸಿನ ಪುಡಿಯನ್ನು ನೀರಿನ ಜೊತೆ ಮಿಕ್ಸ್‌ ಮಾಡಿ ಹಲ್ಲಿಗಳು ಹೆಚ್ಚಾಗಿ ಕಂಡುಬರುವಲ್ಲಿ ಸ್ಪ್ರೇ ಮಾಡಬಹುದು. ಇದಾಗದಿದ್ದರೆ, ಒಣಗಿಸಿದ ಮೆಣಸನ್ನು ಅಲ್ಲಲ್ಲಿ ತೂಗುಹಾಕಬಹುದು.

6. ಕಾಫಿಯ ಪರಿಮಳವೂ ಹಲ್ಲಿಗಳಿಗೆ ಆಗದು. ಹೀಗಾಗಿ ಕಾಫಿಯ ನೀರನ್ನೂ ಹಲ್ಲಿಗಳು ಬರುವ ಜಾಗದಲ್ಲಿ ಸ್ಪ್ರೇ ಮಾಡಬಹುದು. ಅಥವಾ ಕೆಲವೆಡೆ ಕಾಫಿ ಪುಡಿಯನ್ನು ಚೆಲ್ಲಬಹುದು.

7. ಇದ್ಯಾವ ಉಪಾಯವೂ ನಿಮಗೆ ಸರಿ ಬರದಿದ್ದರೆ ನ್ಯಾಪ್ತಲಿನ್‌ ಗುಳಿಯನ್ನೂ ಬಳಸಬಹುದು. ಅಂಗಡಿಗಳಲ್ಲಿ ಸಿಗುವ ನ್ಯಾಪ್ತಲೀನ್‌ ಗುಳಿಗೆಯಲ್ಲಿ ಅಲ್ಲಲ್ಲಿ ಇಡುವ ಮೂಲಕ ಹಲ್ಲಿಗಳು ಬರದಂತೆ ತಡೆಯಬಹುದು. ಆದರೆ ಇದನ್ನು ಬಳಸುವಾಗ ಮನೆಯಲ್ಲಿ ಮಕ್ಕಳು, ಸಾಕುಪ್ರಾಣಿಗಳು ಇರದಂತೆ ಜಾಗ್ರತೆ ವಹಿಸಿ.

8. ಸೊಳ್ಳೆಗಳಿಗಾಗಿ ಬಳಸುವ ಸ್ಪ್ರೇಗಳು ಕೂಡಾ ಹಲ್ಲಿಗಳಿಂದ ನಿಮ್ಮನ್ನು ಕಾಪಾಡುತ್ತವೆ. ಅವುಗಳನ್ನು ಗೋಡೆಯಮೇಲೆ ಸಿಂಪಡಿಸುವುದರಿಂದ ಸೊಳ್ಲೆಯಷ್ಟೇ ಅಲ್ಲ, ಹಲ್ಲಿಗಳೂ ಬರುವುದಿಲ್ಲ.

ಇದನ್ನೂ ಓದಿ: Lifestyle Tips: ನಿಮಗೆ 30 ಆಗುವ ಮೊದಲು ಅರಿಯಲೇಬೇಕಾದ 6 ಸತ್ಯಗಳು!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

Cardamom Benefits: ಏಲಕ್ಕಿ ಕೇವಲ ಘಮದಲ್ಲಷ್ಟೇ ಅಲ್ಲ, ಇದರ ಪ್ರಯೋಜನಗಳು ಎಷ್ಟೊಂದು!

ಯಾವುದೇ ಆಹಾರ ತಯಾರಿಸುವ ಸಂದರ್ಭ ಚಿಟಿಕೆ ಏಲಕ್ಕಿಯನ್ನು ಅದಕ್ಕೆ ಹಾಕಿದರೂ ಸಾಕು, ಅದು ಏಲಕ್ಕಿಯ ಘಮವನ್ನು ಪಡೆದುಕೊಂಡುಬಿಡುತ್ತದೆ. ಅದಕ್ಕಾಗಿಯೇ, ಇದು ಸಿಹಿತಿಂಡಿಗಳಿಗೆ ಹೇಳಿ ಮಾಡಿಸಿದ ಮಸಾಲೆ. ಒಂದು ಚಿಟಿಕೆ ಏಲಕ್ಕಿ ಹಾಕಿದ ಪಾಯಸದ ರುಚಿಯೇ ಬೇರೆ. ಆದರೆ, ಏಲಕ್ಕಿ, ಕೇವಲ ತನ್ನ ಘಮದಲ್ಲಷ್ಟೇ ಶ್ರೀಮಂತಿಕೆ ಮೆರೆದಿಲ್ಲ. ಗುಣದಲ್ಲೂ ಏಲಕ್ಕಿ ಶ್ರೀಮಂತಿಕೆಯಲ್ಲಿ ಯಾವುದಕ್ಕೂ (cardamom benefits) ಕಡಿಮೆಯಿಲ್ಲ.

VISTARANEWS.COM


on

Cardamom Benefits
Koo

ಮಸಾಲೆಗಳ ರಾಣಿ ಎಂದೇ ಹೆಸರಾದ ಏಲಕ್ಕಿಗೆ ಒಂದು ಅಪರೂಪದ ಘಮವಿದೆ. ತನ್ನ ಘಮದ ಮೂಲಕ ಯಾವುದೇ ಆಹಾರವನ್ನು ಕ್ಷಣ ಮಾತ್ರದಲ್ಲಿ ತನ್ನತನವನ್ನು ಅದಕ್ಕೆ ಕೊಡುವ ಶಕ್ತಿಯಿದೆ. ಯಾವುದೇ ಆಹಾರ ತಯಾರಿಸುವ ಸಂದರ್ಭ ಚಿಟಿಕೆ ಏಲಕ್ಕಿಯನ್ನು ಅದಕ್ಕೆ ಹಾಕಿದರೂ ಸಾಕು, ಅದು ಏಲಕ್ಕಿಯ ಘಮವನ್ನು ಪಡೆದುಕೊಂಡುಬಿಡುತ್ತದೆ. ಅದಕ್ಕಾಗಿಯೇ, ಇದು ಸಿಹಿತಿಂಡಿಗಳಿಗೆ ಹೇಳಿ ಮಾಡಿಸಿದ ಮಸಾಲೆ. ಒಂದು ಚಿಟಿಕೆ ಏಲಕ್ಕಿ ಹಾಕಿದ ಪಾಯಸದ ರುಚಿಯೇ ಬೇರೆ. ಆದರೆ, ಏಲಕ್ಕಿ, ಕೇವಲ ತನ್ನ ಘಮದಲ್ಲಷ್ಟೇ ಶ್ರೀಮಂತಿಕೆ ಮೆರೆದಿಲ್ಲ. ಗುಣದಲ್ಲೂ ಏಲಕ್ಕಿ ಶ್ರೀಮಂತಿಕೆಯಲ್ಲಿ ಯಾವುದಕ್ಕೂ ಕಡಿಮೆಯಿಲ್ಲ. ಬನ್ನಿ, ಏಲಕ್ಕಿಯ ಆರೋಗ್ಯಕರ ಲಾಭಗಳನ್ನು (cardamom benefits) ತಿಳಿಯೋಣ.

Blood Pressure Regulation Cucumber Benefits

ರಕ್ತದೊತ್ತಡಕ್ಕೆ ಪರಿಹಾರ

ಅಧಿಕ ರಕ್ತದೊತ್ತಡ ಇರುವ ಮಂದಿಗೆ ಏಲಕ್ಕಿಯಿಂದ ಲಾಭಗಳಿವೆ. ಒಂದು ಸಂಶೋಧನೆಯ ಪ್ರಕಾರ, ಅಧಿಕ ರಕ್ತದೊತ್ತಡ ಸಮಸ್ಯೆ ಆರಂಭವಾದ 20 ಮಂದಿಗೆ ಪ್ರತಿದಿನ ಮೂರು ಗ್ರಾಂಗಳಷ್ಟು ಏಲಕ್ಕಿ ಪುಡಿ ಪ್ರತಿಯೊಬ್ಬರೂ ಸೇವಿಸದಾಗ 12 ವಾರಗಳಲ್ಲೇ ಅವರ ರಕ್ತದೊತ್ತಡ ಸಮತೋಲನಕ್ಕೆ ಬಂದಿರುವುದು ಸಾಬೀತಾಗಿದೆ. ಇದಕ್ಕೆ ಕಾರಣ, ಏಲಕ್ಕಿಯಲ್ಲಿರುವ ಆಂಟಿ ಆಕ್ಸಿಡೆಂಟ್‌ಗಳು.

ealthy internal organs of human digestive system / highlighted blue organs

ಜೀರ್ಣಕಾರಿ ಗುಣಗಳಿವೆ

ಏಲಕ್ಕಿಯಲ್ಲಿ ಜೀರ್ಣಕಾರಿ ಗುಣಗಳಿವೆ. ಏಲಕ್ಕಿಯಲ್ಲಿರುವ ಮೆಂಥೋನ್‌ ಎಂಬ ಎಣ್ಣೆಯಂಶಕ್ಕೆ ಜೀರ್ಣಕ್ರಿಯೆಗೆ ಸಹಾಯ ಮಾಡುವ ಗುಣವಿದೆ. ಇದು ಅಸಿಡಿಟಿ, ಅಜೀರ್ಣ ಹಾಗೂ ಹೊಟ್ಟೆ ನೋವಿನಂಥ ಸಮಸ್ಯೆಗಳಿಗೆ ಪರಿಹಾರ ಒದಗಿಸುತ್ತದೆ. ಇದಕ್ಕೆ ಜೀರ್ಣಕ್ರಿಯೆಯನ್ನು ಪ್ರಚೋದಿಸುವ ಗುಣವಿದೆ.

ವಾಂತಿಗೆ ಪರಿಹಾರ

ಏಲಕ್ಕಿಯಲ್ಲಿ ವಾಂತಿ ಹಾಗೂ ತಲೆಸುತ್ತಿನಂಥ ಸಮಸ್ಯೆಗೆ ಪರಿಹಾರವಿದೆ. ವಾಂತಿಯಾದ ಮೇಲೆ ಆಗುವ ಗಂಟಲಿನ ಹುಳಿ ರುಚಿಯಂಥ ಕಿರಿಕಿರಿ ಗಂಟಲು ಕೆರೆತದ ಭಾವಕ್ಕೆ ಏಲಕ್ಕಿ ಒಳ್ಳೆಯ ಪರಿಹಾರ. ಅಷ್ಟೇ ಅಲ್ಲ, ಪ್ರಯಾಣದಲ್ಲಿ ಆಗುವ ವಾಂತಿಯಂಥ ಸಮಸ್ಯೆಗೂ ಏಲಕ್ಕಿಯನ್ನು ಬಾಯಲ್ಲಿ ಇಟ್ಟುಕೊಳ್ಳುವುದರಿಂದ ಈ ಸಮಸ್ಯೆಗೆ ಪರಿಹಾರ ಸಿಗುತ್ತದೆ.

Woman Suffering from Toothache Benefits Of Drinking Green Tea

ಹಲ್ಲು ನೋವು ನಿವಾರಣೆ

ಏಲಕ್ಕಿಯಲ್ಲಿ ಆಂಟಿ ಸೆಪ್ಟಿಕ್‌ ಹಾಗೂ ಆಂಟಿ ಮೈಕ್ರೋಬಿಯಲ್‌ ಗುಣಗಳಿವೆ. ಇದರಿಂದಾಗಿ ಇದು ಹಲ್ಲಿನ ಸಮಸ್ಯೆಗಳಿಗೆ ಒಳ್ಳೆಯದು. ಏಲಕ್ಕಿಯಲ್ಲಿರುವ ಎಣ್ಣೆಯ ಅಂಶ ಹಲ್ಲು ನೋವಿಗೆ ಒಳ್ಳೆಯ ಔಷಧಿ. ಯಾಕೆಂದರೆ ಇದರಲ್ಲಿರುವ ಆಂಟಿ ಸೆಪ್ಟಿಕ್‌ ಗುಣವು ಕ್ಯಾವಿಟಿಗೆ ಬಹಳ ಒಳ್ಳೆಯದು. ಅಷ್ಟೇ ಅಲ್ಲ, ಹಲ್ಲು ಹುಳುಕಾಗುವುದನ್ನೂ ಇದು ತಡೆಯುತ್ತದೆ.

ಶೀತ ಬಾಧೆ ನಿವಾರಣೆ

ಶೀತ ಹಾಗೂ ನೆಗಡಿಗೂ ಏಲಕ್ಕಿ ಒಳ್ಳೆಯದು ಎಂದರೆ ನಂಬುತ್ತೀರಾ? ಹೌದು, ನಂಬಲೇಬೇಕು. ಏಲಕ್ಕಿಯಲ್ಲಿರುವ ವಿಶೇಷ ಗುಣವು ಕಫ ಕಟ್ಟುವುದನ್ನು ತಡೆಯುತ್ತದೆ. ಇದು ಶ್ವಾಸಕೋಶದಲ್ಲಿ ರಕ್ತ ಪರಿಚಲನೆಯನ್ನು ಚುರುಕಾಗಿಸುತ್ತದೆ. ಇದರಿಂದ ಉಸಿರಾಟದ ಗತಿಯೂ ಚುರುಕಾಗುತ್ತದೆ.

ಅತ್ಯುತ್ತಮ ಡಿಟಾಕ್ಸ್‌

ಏಲಕ್ಕಿ ಅತ್ಯುತ್ತಮ ಡಿಟಾಕ್ಸ್‌ ಕೂಡಾ ಹೌದು. ಇದು ರಕ್ತದಲ್ಲಿರುವ ವಿಷಕಾರಿ ಅಂಶವನ್ನು ದೇಹದಿಂದ ಹೊರಕ್ಕೆ ಕಳುಹಿಸುತ್ತದೆ. ಏಲಕ್ಕಿಯಲ್ಲಿರುವ ಏಸೆನ್ಶಿಯಲ್ ಆಯಿಲ್‌ ಹಾಗೂ ಫೈಟೋಕೆಮಿಕಲ್‌ಗಳಲ್ಲಿ ಡಿಟಾಕ್ಸ್‌ ಗುಣವಿದೆ.

ನಿಕೋಟಿನ್‌ನಿಂದ ಹೊರ ಬರಲು ಮದ್ದು

ನಿಕೋಟಿನ್‌ ಚಟಕ್ಕೆ ಬಿದ್ದ ಮಂದಿ, ಇದರಿಂದ ಹೊರಬರುವ ಇಚ್ಛೆಯಿದ್ದರೆ ನೈಸರ್ಗಿಕ ಉಪಾಯ ಎಂದರೆ ಅದು ಏಲಕ್ಕಿ. ಏಲಕ್ಕಿಯನ್ನು ದಿನಕ್ಕೆ ನಾಲ್ಕೈದು ಬಾರಿ ಜಗಿಯುವ ಮೂಲಕ ನಿಕೋಟಿನ್‌ ಬಯಕೆಯನ್ನು ನಿಧಾನವಾಗಿ ಹತ್ತಿಕ್ಕಬಹುದು. ಖಿನ್ನತೆಯಂತ ಸಮಸ್ಯೆ ಇರುವ ಮಂದಿಯ ನಿದ್ದೆಗೂ ಇದು ಒಳ್ಳೆಯದು.

Women with Breast Cancer Prevention Benefits Of Drinking Green Tea

ಕ್ಯಾನ್ಸರ್‌ ವಿರೋಧಿ ಗುಣ

ಏಲಕ್ಕಿಯಲ್ಲಿ ಕ್ಯಾನ್ಸರ್‌ ವಿರೋಧಿ ಗುಣಗಳೂ ಇವೆ. ದೇಹದಲ್ಲಿರುವ ಕ್ಯಾನ್ಸರ್‌ ವಿರೋಧಿ ಕಿಣ್ವಗಳನ್ನು ಮತ್ತಷ್ಟು ಚುರುಕಾಗಿಸುವ ಮೂಲಕ ಏಲಕ್ಕಿ ಕ್ಯಾನ್ಸರ್‌ನಂತಹ ಕಾಯಿಲೆಯ ವಿರುದ್ಧವೂ ಹೋರಾಡುವ ಗುಣ ಹೊಂದಿದೆ. ಇತ್ತೀಚೆಗೆ ನಡೆದ ಅಧ್ಯಯನವೊಂದು ಇದನ್ನು ಪುಷ್ಠೀಕರಿಸುತ್ತದೆ. ಕ್ಯಾನ್ಸರ್‌ನ ಗಡ್ಡೆಯ ಅಂಗಾಂಶಗಳನ್ನು ಕೊಲ್ಲಲು ಏಲಕ್ಕಿಯಲ್ಲಿರುವ ವಿಶೇಷ ಗುಣವು ಸಹಾಯ ಮಾಡುತ್ತದೆ.

ಇದನ್ನೂ ಓದಿ: Mouthwashes: ಬಾಯಿಯ ಎಲ್ಲ ಸಮಸ್ಯೆಗಳಿಗೂ ಮೌತ್‌ವಾಷ್‌ ಪರಿಹಾರವೆ? ಇದರ ಇತಿಮಿತಿ ಬಗ್ಗೆಯೂ ತಿಳಿದಿರಲಿ

ಏನು ಮಾಡಬಹುದು?

ಏಲಕ್ಕಿಯ ಈ ಆರೋಗ್ಯಕರ ಗುಣಗಳನ್ನು ಪಡೆಯಲು ನಾವು ಏನು ಮಾಡಬಹುದು, ಹೇಗೆ ಇದನ್ನು ಸೇವಿಸಬೇಕು ಎಂಬುದು ಈಗ ಬಹುತೇಕರಲ್ಲಿರುವ ಪ್ರಶ್ನೆ. ಏಲಕ್ಕಿಯ ಒಂದೆರಡು ಬೀಜಗಳನು ಬಾಯಲ್ಲಿ ಹಾಕಿ ಮೌತ್‌ ಫ್ರೆಶ್ನರ್‌ನ ಹಾಗೆ ಬಳಸಬಹುದು. ಅಥವಾ ಏಲಕ್ಕಿ, ಜಾಯಿಕಾಯಿ, ಅರಿಶಿನ, ಕರಿಮೆಣಸು ಇತ್ಯಾದಿಗಳ ಪುಡಿ ಮಾಡಿ ಇಟ್ಟುಕೊಂಡು ರಾತ್ರಿ ಮಲಗುವ ಮುನ್ನ ಕುಡಿಯುವ ಹಾಲಿಗೆ ಚಿಟಿಕೆ ಪುಡಿ ಸೇರಿಸಿ ಕುಡಿಯಬಹುದು. ಇದರಿಂದ ಸೊಂಪಾದ ನಿದ್ರೆಯೂ ಬರುತ್ತದೆ. ಅಥವಾ ನಿತ್ಯವೂ ಕುಡಿಯುವ ನೀರಿಗೆ ಏಲಕ್ಕಿಯ ಎಸಳೊಂದನ್ನು ಹಾಕಿಡಬಹುದು. ಇನ್ನುಳಿದಂತೆ, ಆಹಾರದ ಮೂಲಕ, ಸಿಹಿತಿಂಡಿಗಳ ಮೂಲಕ ಏಲಕ್ಕಿ ಆಗಾಗ ದೇಹ ಸೇರುತ್ತಲೇ ಇರುತ್ತದೆ. ಈ ಎಲ್ಲ ವಿಧಾನಗಳ ಮೂಲಕ ಏಲಕ್ಕಿಯ ಲಾಭವನ್ನು ನಾವು ಪಡೆಯಬಹುದು.

Continue Reading

ಆಹಾರ/ಅಡುಗೆ

Healthy Salad Tips: ನೀವು ಸಲಾಡ್‌ ಪ್ರಿಯರೇ? ಸಲಾಡ್‌ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ!

ಕೆಲವು ಬಗೆಯ ಹಣ್ಣುಗಳು, ಒಣಬೀಜಗಳು, ಒಣಹಣ್ಣುಗಳು, ಹಸಿ ತರಕಾರಿಗಳು, ಮೊಳಕೆ ಕಾಳುಗಳು, ಬೇಯಿಸಿದ ಕಾಳುಗಳು ಹೀಗೆ ಹತ್ತು ಹಲವು ಬಗೆಯ ಕಾಂಬಿನೇಶನ್ನಿನ ಸಲಾಡ್‌ಗಳನ್ನು ನಿತ್ಯವೂ ತಯಾರಿಸಬಹುದು. ಕಡಿಮೆ ಕ್ಯಾಲರಿಯ, ಪ್ರೊಟೀನ್‌ ಹಾಗೂ ಸಾಕಷ್ಟು ಪೋಷಕಾಂಶಗಳನ್ನು ನಮ್ಮ ದೇಹಕ್ಕೆ ಒದಗಿಸಬಲ್ಲ ಆಹಾರವಾದ ಈ ಸಲಾಡ್‌ಗಳು ಆರೋಗ್ಯಕರ ಎಂಬುದರಲ್ಲಿ ಎರಡು ಮಾತೇ ಇಲ್ಲ. ಹಸಿವಾದಾಗ ತಕ್ಷಣ ಹಸಿವು ಕಡಿಮೆ ಮಾಡಬಲ್ಲ ಆಪದ್ಬಾಂಧವ ಕೂಡಾ ಈ ಸಲಾಡ್‌ಗಳೇ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಈ ಆರೋಗ್ಯ ವರ್ಧಿಸುವ ಸಲಾಡ್‌ಗಳನ್ನು ಮಾಡುವ ಸಮಯದಲ್ಲಿ (healthy salad tips) ಕೆಲವು ತಪ್ಪುಗಳನ್ನು ಮಾಡುವ ಅಪಾಯವೂ ಇದೆ.

VISTARANEWS.COM


on

Healthy Salad Tips
Koo

ಪೋಷಕಾಂಶಯುಕ್ತ ಆಹಾರ ಎಂದಾಕ್ಷಣ ಸುಲಭವಾಗಿ ನೆನಪಿಗೆ ಬರುವುದು ಸಲಾಡ್‌ಗಳು. ಸುಲಭವಾಗಿ ಮಾಡಬಹುದಾದ, ಹೆಚ್ಚೂ ಶ್ರಮ ಬೇಡದ, ಬೇಗ ಹೊಟ್ಟೆ ತುಂಬಿಸುವ ಗುಣ ಉಳ್ಳ ಸಲಾಡ್‌ಗಳು ತೂಕ ಇಳಿಸುವ ಮಂದಿಯ ಪರಮಾಪ್ತ ಸ್ನೇಹಿತನಂತೆ. ಕಚೇರಿಗಳಿಗೆ ಬಿಡು ಹೊತ್ತಿನಲ್ಲಿ ತಿನ್ನಬಹುದಾದ ಸ್ನ್ಯಾಕ್‌ಗಳ ಬದಲಿಗೂ ಈ ಸಲಾಡ್‌ಗಳು ಅನೇಕರಿಗೆ ಸುಲಭವಾಗಿ ಮಾಡಬಹುದಾದ ಆಹಾರವೇ ಆಗಿದೆ. ಕೆಲವು ಬಗೆಯ ಹಣ್ಣುಗಳು, ಒಣಬೀಜಗಳು, ಒಣಹಣ್ಣುಗಳು, ಹಸಿ ತರಕಾರಿಗಳು, ಮೊಳಕೆ ಕಾಳುಗಳು, ಬೇಯಿಸಿದ ಕಾಳುಗಳು ಹೀಗೆ ಹತ್ತು ಹಲವು ಬಗೆಯ ಕಾಂಬಿನೇಶನ್ನಿನ ಸಲಾಡ್‌ಗಳನ್ನು ನಿತ್ಯವೂ ತಯಾರಿಸಬಹುದು. ಕಡಿಮೆ ಕ್ಯಾಲರಿಯ, ಪ್ರೊಟೀನ್‌ ಹಾಗೂ ಸಾಕಷ್ಟು ಪೋಷಕಾಂಶಗಳನ್ನು ನಮ್ಮ ದೇಹಕ್ಕೆ ಒದಗಿಸಬಲ್ಲ ಆಹಾರವಾದ ಈ ಸಲಾಡ್‌ಗಳು ಆರೋಗ್ಯಕರ ಎಂಬುದರಲ್ಲಿ ಎರಡು ಮಾತೇ ಇಲ್ಲ. ಹಸಿವಾದಾಗ ತಕ್ಷಣ ಹಸಿವು ಕಡಿಮೆ ಮಾಡಬಲ್ಲ ಆಪದ್ಬಾಂಧವ ಕೂಡಾ ಈ ಸಲಾಡ್‌ಗಳೇ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಈ ಆರೋಗ್ಯ ವರ್ಧಿಸುವ ಸಲಾಡ್‌ಗಳನ್ನು ಮಾಡುವ ಸಮಯದಲ್ಲಿ ಕೆಲವು ತಪ್ಪುಗಳನ್ನು ಮಾಡುವ ಅಪಾಯವೂ ಇದೆ. ಬನ್ನಿ, ನೀವು ಸಲಾಡ್‌ಗಳನ್ನು ಮಾಡುವ ಸಂದರ್ಭ ಈ ಕೆಳಗಿನ ತಪ್ಪುಗಳನ್ನು ಮಾಡುತ್ತಿದ್ದೀರಿ ಎಂದಾದಲ್ಲಿ, ಆರೋಗ್ಯಕ್ಕೆ ಒಳಿತಾಗುವ ರೀತಿಯಲ್ಲಿ ತಿದ್ದಿಕೊಳ್ಳಿ. ಬನ್ನಿ, ಸಲಾಡ್‌ ಮಾಡುವ ಸಮಯದಲ್ಲಿ ಸಾಮಾನ್ಯವಾಗಿ (healthy salad tips) ಮಾಡುವ ತಪ್ಪುಗಳೇನು ಎಂಬುದನ್ನು ನೋಡೋಣ.

Greek Salad

ಡ್ರೆಸ್ಸಿಂಗ್‌ ಅತಿಯಾಗಿ ಮಾಡುವುದು

ಹೌದು, ಸಲಾಡ್‌ ಎಂದಾಕ್ಷಣ ಡ್ರೆಸ್ಸಿಂಗ್‌ ಸಹಜ. ಯಾಕೆಂದರೆ ಸಲಾಡ್‌ಗೆ ಒಂದು ರುಚಿಯನ್ನು ನೀಡುವುದೇ ಈ ಡ್ರೆಸ್ಸಿಂಗ್‌. ಆದರೆ, ಅತಿಯಾದ ಡ್ರೆಸ್ಸಿಂಗ್‌ ಮಾಡುವುದರಿಂದ ಸಲಾಡ್‌ನಲ್ಲಿ ಕೊಬ್ಬು ಜಾಸ್ತಿಯಾಗಬಹುದು. ಹೆಚ್ಚು ಕ್ಯಾಲರಿ ಸೇರಿಕೊಳ್ಳಬಹುದು. ಕೇವಲ ರುಚಿಗೆ ತಕ್ಕಷ್ಟೇ ಡ್ರೆಸ್ಸಿಂಗ್‌ ಮಾಡಿ.

ತರಕಾರಿಗಳನ್ನು ತೊಳೆಯದೆ ಇರುವುದು

ಹಸಿಯಾದ ತರಕಾರಿಗಳನ್ನು ಹಾಗೆಯೇ ಸಲಾಡ್‌ಗೆ ಬಳಸುವುದರಿಂದ ತರಕಾರಿಗಳನ್ನು ತೊಳೆಯುವುದು ಅತ್ಯಂತ ಮುಖ್ಯವಾದ ಘಟ್ಟ. ಹಾಗಾಗಿ ತರಕಾರಿಗಳನ್ನು ಒಮ್ಮೆ ಉಪ್ಪು ನೀರಿನಲ್ಲಿ ಹಾಕಿಟ್ಟು ತೊಳೆಯುವುದನ್ನು ರೂಢಿ ಮಾಡಿಕೊಳ್ಳಿ. ಯಾಕೆಂದರೆ ಇಲ್ಲಿ ತರಕಾರಿ ಬೇಯುವುದಿಲ್ಲವಾದ್ದರಿಂದ ಕೆಲವು ರಾಸಾಯನಿಕಗಳು ತರಕಾರಿಗೆ ಸಿಂಪಡಿಸಲ್ಪಟ್ಟದ್ದು ಹಾಗೆಯೇ ಉಳಿದಿರುವ ಸಾಧ್ಯತೆಯೂ ಇದೆ. ಹಾಗಾಗಿ, ತರಕಾರಿಯನ್ನು ಎರಡೆರಡು ಬಾರಿ ತೊಳೆದುಕೊಂಡು ಬಳಸಿ.

ಇದನ್ನೂ ಓದಿ: Which Type Of Roti Is Best: ಯಾರಿಗೆ ಯಾವ ರೊಟ್ಟಿ ಸೂಕ್ತ? ತಿನ್ನುವ ಮೊದಲು ತಿಳಿದುಕೊಂಡಿರಿ!

ಅತಿಯಾಗಿ ತರಕಾರಿಗಳನ್ನು ಬಳಸುವುದು

ಸಲಾಡ್‌ ಎಂದಾಕ್ಷಣ ಬೇಕಾದ ಹಾಗೆ ತರಕಾರಿಗಳನ್ನು ಬಳಸಬಹುದು ಎಂಬ ನಿಮ್ಮ ಎಣಿಕೆಯಾಗಿದ್ದರೆ ಅದು ತಪ್ಪು. ತರಕಾರಿಗಳ ಸಂಖ್ಯೆಯೂ ಅತಿಯಾಗಬಾರದು. ಒಂದಕ್ಕೊಂದು ಹೊಂದಿಕೊಳ್ಳುವ ಮೂರ್ನಾಲ್ಕು ಬಗೆಯ ತರಕಾರಿಗಳಿಗಿಂತ ಹೆಚ್ಚು ಬಳಸಬೇಡಿ. ತರಕಾರಿಗಳು ಅತಿಯಾದರೆ, ಅವು ಹಸಿಯಾಗಿರುವುದರಿಂದ ಇವು ಗ್ಯಾಸ್‌ನಂತಹ ಸಮಸಯೆಯನ್ನು ತಂದೊಡ್ಡಬಹುದು. ಜೀರ್ಣದ ಸಮಸ್ಯೆಗಳೂ ತಲೆದೋರಬಹುದು. ಕೆಲವರಿಗೆ ಹಸಿ ತರಕಾರಿಗಳು ಕರಗುವುದಿಲ್ಲ. ಇಂಥ ಮಂದಿ ತರಕಾರಿಗಳನ್ನು ಸ್ವಲ್ಪ ಬೇಯಿಸಿಕೊಂಡು ತಿನ್ನಬಹುದು. ಹೀಗೆ ಮಾಡುವುದರಿಂದ ಜೀರ್ಣ ಸಮಸ್ಯೆಗಳು ಬರದು.

Continue Reading

ಪ್ರವಾಸ

Kanyakumari Tour: ನಿಮ್ಮ ಕನ್ಯಾಕುಮಾರಿ ಪ್ರವಾಸದ ಪಟ್ಟಿಯಲ್ಲಿರಲಿ ಈ 10 ಸಂಗತಿಗಳು

ಆಧ್ಯಾತ್ಮಿಕ ಸಾರ, ನೈಸರ್ಗಿಕ ವೈಭವ, ಐತಿಹಾಸಿಕ ಹೆಗ್ಗುರುತುಗಳಿಂದ ಖ್ಯಾತಿ ಪಡೆದಿರುವ ಕನ್ಯಾಕುಮಾರಿ (Kanyakumari Tour) ಭೇಟಿಯನ್ನು ಸ್ಮರಣೀಯವಾಗಿಸಲು ಈ ಹತ್ತು ಚಟುವಟಿಕೆಗಳು ನಿಮ್ಮ ಪ್ರವಾಸದ ಪಟ್ಟಿಯಲ್ಲಿ ಸೇರ್ಪಡೆಯಾಗಲಿ.

VISTARANEWS.COM


on

By

Kanyakumari Tour
Koo

ದಕ್ಷಿಣ ಭಾರತದಲ್ಲಿ (South India) ನೀವು ಪ್ರವಾಸ (tour) ಮಾಡುವ ಯೋಜನೆ ರೂಪಿಸುತ್ತಿದ್ದರೆ ಭಾರತದ ದಕ್ಷಿಣದ ತುದಿಯಾದ ಕನ್ಯಾಕುಮಾರಿ (Kanyakumari Tour) ನಿಮ್ಮ ಆದ್ಯತೆ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರಲಿ. ತಮಿಳುನಾಡಿನ (tamilnadu) ಕರಾವಳಿಯಲ್ಲಿರುವ ಈ ರತ್ನವು ಭೌಗೋಳಿಕ ಅದ್ಭುತ ಮಾತ್ರವಲ್ಲದೆ ಸಂಸ್ಕೃತಿ, ಇತಿಹಾಸ ಮತ್ತು ನೈಸರ್ಗಿಕ ಸೌಂದರ್ಯದ ಸಂಗಮವಾಗಿದೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಧ್ಯಾನದ ಕಾರಣಕ್ಕಾಗಿ ಕನ್ಯಾಕುಮಾರಿ ಈಗ ಸುದ್ದಿಯ ಕೇಂದ್ರವಾಗಿದೆ.

ಕನ್ಯಾಕುಮಾರಿಯಲ್ಲಿ ನೀವು ಮಿಸ್ ಮಾಡಿಕೊಳ್ಳಲೇಬಾರದ ಪ್ರಮುಖ 10 ಸಂಗತಿಗಳಿವೆ. ಇವೆಲ್ಲ ನಿಮ್ಮ ಪ್ರವಾಸದ ಪಟ್ಟಿಯಲ್ಲಿ ಇರಲಿ.

ತ್ರಿವೇಣಿ ಸಂಗಮ

ಕನ್ಯಾಕುಮಾರಿಯು ತನ್ನ ವಿಶಿಷ್ಟ ಭೌಗೋಳಿಕ ಸ್ಥಾನಕ್ಕೆ ಹೆಸರುವಾಸಿಯಾಗಿದೆ. ಅಲ್ಲಿ ಸಮುದ್ರದ ಮೇಲೆ ಸೂರ್ಯೋದಯ ಮತ್ತು ಸೂರ್ಯಾಸ್ತ ಎರಡನ್ನೂ ವೀಕ್ಷಿಸಬಹುದು. ಅರಬ್ಬೀ ಸಮುದ್ರ, ಬಂಗಾಳಕೊಲ್ಲಿ ಮತ್ತು ಹಿಂದೂ ಮಹಾಸಾಗರದ ಸಂಗಮವಾಗಿರುವ ತ್ರಿವೇಣಿ ಸಂಗಮವು ನಯನ ಮನೋಹರ ದೃಶ್ಯವನ್ನು ಒದಗಿಸುತ್ತದೆ.

ವಿವೇಕಾನಂದ ಕಲ್ಲಿನ ಸ್ಮಾರಕ

ಕರಾವಳಿಯ ಕಲ್ಲಿನ ದ್ವೀಪದಲ್ಲಿ ನೆಲೆಗೊಂಡಿರುವ ಈ ಸ್ಮಾರಕವನ್ನು ಸ್ವಾಮಿ ವಿವೇಕಾನಂದರಿಗೆ ಸಮರ್ಪಿಸಲಾಗಿದೆ. ಸಣ್ಣ ದೋಣಿ ಸವಾರಿಯ ಮೂಲಕ ಅದನ್ನು ತಲುಪಿ ಮತ್ತು ವಿಹಂಗಮ ದೃಶ್ಯವನ್ನು ಕಣ್ತುಂಬಿಕೊಳ್ಳಬಹುದು. ಆಧ್ಯಾತ್ಮಿಕ ಮತ್ತು ಐತಿಹಾಸಿಕ ಮಹತ್ವವನ್ನು ಇಲ್ಲಿ ನೆನಪಿಸಿಕೊಳ್ಳಿ.

ತಿರುವಳ್ಳುವರ್ ಪ್ರತಿಮೆ

ವಿವೇಕಾನಂದ ಬಂಡೆಯ ಪಕ್ಕದಲ್ಲಿರುವ ಈ 133 ಅಡಿ ಎತ್ತರದ ತಮಿಳು ಕವಿ-ಸಂತ ತಿರುವಳ್ಳುವರ್ ಪ್ರತಿಮೆ ಕಲೆ ಮತ್ತು ವಾಸ್ತುಶಿಲ್ಪದ ಅದ್ಭುತವಾಗಿದೆ. ಇಲ್ಲಿಗೆ ಭೇಟಿ ನೀಡಲು ತಪ್ಪಿಸದಿರಿ.

ಸುಂದರ ಕಡಲತೀರ

ಕನ್ಯಾಕುಮಾರಿ ಕಡಲತೀರವು ಬಹು-ಬಣ್ಣದ ಮರಳು ಮತ್ತು ಕಲ್ಲಿನ ತೀರವನ್ನು ಹೊಂದಿದೆ. ಪ್ರಶಾಂತವಾದ ವಾತಾವರಣದಲ್ಲಿ ಸುತ್ತಾಡಲು ಬಯಸುವವರು ಸಂಗುತುರೈ ಬೀಚ್, ಸೋತವಿಲೈ ಬೀಚ್ ನಲ್ಲಿ ಕೆಲಕಾಲ ಕಳೆಯಬಹುದು.


ಪದ್ಮನಾಭಪುರಂ ಅರಮನೆ

ಕನ್ಯಾಕುಮಾರಿಯಿಂದ ಸ್ವಲ್ಪ ದೂರದಲ್ಲಿ 16ನೇ ಶತಮಾನದ ಈ ಅರಮನೆಯು ಸಾಂಪ್ರದಾಯಿಕ ಕೇರಳ ವಾಸ್ತುಶಿಲ್ಪಕ್ಕೆ ಸಾಕ್ಷಿಯಾಗಿದೆ ಮತ್ತು ದಕ್ಷಿಣ ಭಾರತದ ಪ್ರವಾಸದ ವೇಳೆ ತಪ್ಪಿಸಿಕೊಳ್ಳಲೇ ಬಾರದ ಅತ್ಯಂತ ಸುಂದರ ತಾಣವಾಗಿದೆ.

ತನುಮಲಯನ್ ದೇವಾಲಯ

ಸ್ಥಾನುಮಲಯನ್ ಕೋವಿಲ್ ಎಂದೂ ಕರೆಯಲ್ಪಡುವ ಈ ದೇವಾಲಯದ ವಾಸ್ತುಶಿಲ್ಪದ ಅದ್ಭುತವು ಅದರ ಅಂದವಾದ ಕೆತ್ತನೆಗಳು ಮತ್ತು ವಿಶಿಷ್ಟವಾದ ಸಂಗೀತ ಸ್ತಂಭಗಳಿಗೆ ಗಮನಾರ್ಹವಾಗಿ. ಇದು ದಕ್ಷಿಣ ಭಾರತದಲ್ಲಿನ ಸಾಂಸ್ಕೃತಿಕ ಪ್ರವಾಸದಲ್ಲಿ ಪ್ರಮುಖ ಅಂಶವಾಗಿದೆ.

ಗಾಂಧಿ ಸ್ಮಾರಕ

ಮಹಾತ್ಮಾ ಗಾಂಧಿಯವರ ಚಿತಾಭಸ್ಮವನ್ನು ಮುಳುಗಿಸುವ ಮೊದಲು ಇರಿಸಲಾಗಿದ್ದ ಸ್ಥಳದಲ್ಲಿ ನಿರ್ಮಿಸಲಾದ ಈ ಸ್ಮಾರಕವು ಭಾರತದ ಶ್ರೀಮಂತ ಇತಿಹಾಸದಲ್ಲಿ ಆಸಕ್ತಿ ಹೊಂದಿರುವವರಿಗೆ ಅತ್ಯಂತ ಸುಂದರ, ಶಾಂತವಾದ ತಾಣವಾಗಿದೆ.


ಕನ್ಯಾಕುಮಾರಿ ವ್ಯಾಕ್ಸ್ ಮ್ಯೂಸಿಯಂ

ವಿನೋದ ಮತ್ತು ಶೈಕ್ಷಣಿಕ ಅನುಭವ ಪಡೆಯಲು ಈ ವಸ್ತುಸಂಗ್ರಹಾಲಯಕ್ಕೆ ಭೇಟಿ ನೀಡಿ. ಇಲ್ಲಿ ಪ್ರಸಿದ್ಧ ವ್ಯಕ್ತಿಗಳ ಮೇಣದ ಪ್ರತಿಮೆಗಳು ಆಕರ್ಷಣೀಯವಾಗಿದೆ.

ಇದನ್ನೂ ಓದಿ: Wildlife Sanctuaries: ಮಳೆ ಬರುವ ಮುನ್ನ ಈ ವನ್ಯಜೀವಿಧಾಮಗಳನ್ನು ನೋಡಲು ಪ್ರಯತ್ನಿಸಿ

ಮರುಂತುವಜ್ ಮಲೈ

ಕನ್ಯಾಕುಮಾರಿಯ ಸಮೀಪದಲ್ಲಿರುವ ಈ ಸಣ್ಣ ಗುಡ್ಡಗಾಡು ಪ್ರದೇಶವು ಪುರಾಣದ ಮಹತ್ವವನ್ನು ಹೊಂದಿದೆ. ರಮಣೀಯ ನೋಟವನ್ನು ಒದಗಿಸಿಯುವ ಇದು ದಕ್ಷಿಣ ಭಾರತ ಪ್ರವಾಸದಲ್ಲಿರುವ ಸಾಹಸ ಪ್ರಿಯರ ಪಟ್ಟಿಗೆ ಪರಿಪೂರ್ಣ ಸೇರ್ಪಡೆಯಾಗಿದೆ.

ಸ್ಥಳೀಯ ಖಾದ್ಯ ಸವಿಯಿರಿ

ಕೋತು ಪರೋಟಾ, ಬಾಳೆಹಣ್ಣು ಚಿಪ್ಸ್ ಮತ್ತು ಸಮುದ್ರಾಹಾರ ಭಕ್ಷ್ಯಗಳಂತಹ ಸ್ಥಳೀಯ ಭಕ್ಷ್ಯಗಳನ್ನು ಇಲ್ಲಿ ಸವಿಯಬಹುದು.

Continue Reading

ಆರೋಗ್ಯ

Vijayanagara News: ದಡಾರ, ರುಬೆಲ್ಲಾ ಲಸಿಕಾ ಅಭಿಯಾನಕ್ಕೆ ಸಿದ್ಧತೆ

Vijayanagara News: ದಡಾರಾ ಮತ್ತು ರುಬೆಲ್ಲಾ ಲಸಿಕಾ ಅಭಿಯಾನವು ಜಿಲ್ಲೆಯಲ್ಲಿ ಅಚ್ಚುಕಟ್ಟಾಗಿ ನಡೆಯಬೇಕು ಎಂದು ವಿಜಯನರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸದಾಶಿವ ಪ್ರಭು ಬಿ., ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

VISTARANEWS.COM


on

Vijayanagara ZP CEO Sadashiva Prabhu instructed that Dadara Rubella Lasika Abhiyan should be conducted neatly
Koo

ಹೊಸಪೇಟೆ: ದಡಾರಾ ಮತ್ತು ರುಬೆಲ್ಲಾ ಲಸಿಕಾ ಅಭಿಯಾನವು ಜಿಲ್ಲೆಯಲ್ಲಿ (Vijayanagara News) ಅಚ್ಚುಕಟ್ಟಾಗಿ ನಡೆಯಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸದಾಶಿವ ಪ್ರಭು ಬಿ., ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಅಂತರ ಇಲಾಖಾ ಸಮನ್ವಯ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.

ದಡಾರಾ ಮತ್ತು ರುಬೆಲ್ಲಾ 2024 ಡಿಸೆಂಬರ್‌ದೊಳಗೆ ನಿರ್ಮೂಲನೆಯಾಗಬೇಕು. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಕಾರ್ಯಕ್ರಮಗಳು ಶಿಸ್ತುಬದ್ಧವಾಗಿ ನಡೆಯಬೇಕು. ಮಗುವಿಗೆ 9 ತಿಂಗಳ ತುಂಬಿದ ನಂತರ ಮೊದಲನೇ ಡೋಸ್ ನೀಡಬೇಕು. ಆ ಬಳಿಕ ಒಂದೂವರೆ ವರ್ಷಕ್ಕೆ ಎರಡನೇ ಡೋಸ್ ನೀಡುವ ಕಾರ್ಯವು ಜಿಲ್ಲೆಯಲ್ಲಿ ಶೇ. 100ರಷ್ಟು ಆಗಬೇಕು ಎಂದು ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.

ಇದನ್ನೂ ಓದಿ: Forest Man Of India: ಇವರೇ ನೋಡಿ ಭಾರತದ ಫಾರೆಸ್ಟ್‌ ಮ್ಯಾನ್‌; ಏಕಾಂಗಿಯಾಗಿ 1,360 ಎಕ್ರೆಯಲ್ಲಿ ಕಾಡು ಬೆಳೆಸಿದ ಸಾಹಸಿ

ಮಕ್ಕಳಿಗೆ ಲಸಿಕೆಯನ್ನು ಹಾಕಿಸಲು ಕೆಲವೊಮ್ಮೆ ಗ್ರಾಮೀಣ ಪ್ರದೇಶದ ಜನರು ಸಹಕರಿಸುವುದಿಲ್ಲ. ಆದ್ದರಿಂದ ದಡಾರ ಮತ್ತು ರುಬೆಲ್ಲಾ ಲಸಿಕೆಯ ಬಗ್ಗೆ ಜನರಿಗೆ ಸರಿಯಾದ ಮಾಹಿತಿ ನೀಡಬೇಕು. ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳು ಅಂಗನವಾಡಿ ಕಾರ್ಯಕರ್ತೆಯರ, ಮಹಿಳಾ ಸಂಘ-ಸಂಸ್ಥೆಗಳ, ಆಶಾ ಕಾರ್ಯಕರ್ತೆಯರ ಸಹಕಾರ ಪಡೆದುಕೊಂಡು ಜಾಗೃತಿ ಕಾರ್ಯಕ್ರಮಗಳನ್ನು ನಡೆಸಬೇಕು ಎಂದು ಸೂಚನೆ ನೀಡಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಡಾ. ಶಂಕರ್ ನಾಯ್ಕ್ ಎಲ್. ಮಾತನಾಡಿ, ಗ್ರಾಮೀಣ ಭಾಗದ ಕೆಲ ಜನರು ಮೂಢ ನಂಬಿಕೆಗಳಿಂದ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಕೊಡುವುದಿಲ್ಲ. ಆರೋಗ್ಯ ಇಲಾಖೆಯ ಯಾವುದೇ ಲಸಿಕೆ ಮತ್ತು ಅದರ ಮಹತ್ವದ ಕುರಿತು ವ್ಯಾಪಕವಾಗಿ ಜನರಿಗೆ ತಿಳಿವಳಿಕೆ ಮೂಡಿಸುವ ಕಾರ್ಯವು ಲಸಿಕಾ ಅಭಿಯಾನದ ಜತೆಜತೆಗೆ ಸಾಗಬೇಕು ಎಂದು ಸಲಹೆ ಮಾಡಿದರು.

ಜಿಲ್ಲಾ ಆರ್.ಸಿ.ಎಚ್. ಅಧಿಕಾರಿ ಡಾ.ಜಂಬಯ್ಯ ಮಾತನಾಡಿ, ಮಕ್ಕಳಲ್ಲಿ ಜ್ವರ ಮತ್ತು ತದ್ದು ಕಂಡು ಬರುತ್ತಿದ್ದಲ್ಲಿ ಪಾಲಕರು ನಿರ್ಲಕ್ಷ್ಯ ಮಾಡಬಾರದು. ಅಂತಹ ಮಕ್ಕಳಿದ್ದಲ್ಲಿ ಅವರನ್ನು ಕೂಡಲೇ ಹತ್ತಿರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಬೇಕು. ಆರೋಗ್ಯ ಇಲಾಖೆಯ ಗಮನಕ್ಕೆ ತರಬೇಕು. ಜ್ವರ ಮತ್ತು ತದ್ದು ಕಂಡು ಬರುವ ಮಕ್ಕಳೇನಾದರು ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾಗಿದ್ದರೆ ಈ ಬಗ್ಗೆ ಖಾಸಗಿ ಆಸ್ಪತ್ರೆಗಳು ಸರ್ಕಾರಿ ಆಸ್ಪತ್ರೆಗಳಿಗೆ ವರದಿ ಮಾಡಬೇಕು ಎಂದು ತಿಳಿಸಿದರು.

ಎನ್‌ಪಿಎಸ್‌ಪಿ ಸರ್ವೆಲನ್ಸ್ ನೋಡಲ್ ಅಧಿಕಾರಿ ಡಾ.ಶ್ರೀಧರ ಆರ್.ಎಸ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಇದನ್ನೂ ಓದಿ: Karnataka Weather : ರಾಜ್ಯದಲ್ಲಿ ತಗ್ಗಿದ ಮಳೆ ಪ್ರಮಾಣ; ಸ್ವಲ್ಪ ಕಡೆ ವರುಣ ಸಾಧಾರಣ, ಗಾಳಿ ರಭಸ ಅಸಾಧಾರಣ

ಈ ಸಂದರ್ಭದಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಅಧಿಕಾರಿ ಡಾ.ಷಣ್ಮುಖ ನಾಯ್ಕ ಬಿ., ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ದೊಡ್ಡಮನಿ ಎಂ.ಪಿ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿ ಡಾ.ಕೆ.ಕಮಲಮ್ಮ, ಜಿಲ್ಲಾ ಕುಷ್ಟರೋಗ ನಿರ್ಮೂಲನಾ ಅಧಿಕಾರಿ ಡಾ. ರಾಧಿಕಾ, ಹೊಸಪೇಟೆ ತಾಲೂಕು ಆರೋಗ್ಯಾಧಿಕಾರಿ ಡಾ. ಭಾಸ್ಕರ್, ಕ್ಷಯರೋಗ ನಿರ್ಮೂಲನಾ ಅಧಿಕಾರಿ ಡಾ.ಜಗದೀಶ್ ಪಾಟ್ನೆ ಸೇರಿದಂತೆ ಇತರರು ಇದ್ದರು.

Continue Reading
Advertisement
IND vs BAN
ಕ್ರೀಡೆ1 min ago

IND vs BAN: ಇಂದು ಬಾಂಗ್ಲಾ ವಿರುದ್ಧ ಅಭ್ಯಾಸ ಪಂದ್ಯ; ಕೊಹ್ಲಿ ಆಡುವುದು ಅನುಮಾನ

Exit Poll
Lok Sabha Election 202413 mins ago

Exit Poll: ಇಂದು ಸಂಜೆ 6.30ಕ್ಕೆ ಎಕ್ಸಿಟ್ ಪೋಲ್ ರಿಸಲ್ಟ್; ಮತಗಟ್ಟೆ ಸಮೀಕ್ಷೆ ಹೇಗೆ ನಡೆಸುತ್ತಾರೆ?

Kannada Cinema In OTT bad manners 02 Kannada Movie
ಸ್ಯಾಂಡಲ್ ವುಡ್18 mins ago

Kannada Cinema In OTT: ಒಟಿಟಿಗೆ ಲಗ್ಗೆ ಇಟ್ಟ ʼಬ್ಯಾಡ್‌ ಮ್ಯಾನರ್ಸ್‌ʼ, ‘O2’; ಸ್ಟ್ರೀಮಿಂಗ್ ಎಲ್ಲಿ?

hum do humare barah
ಕರ್ನಾಟಕ20 mins ago

Hum Do Humare Barah: ʼಹಮ್ ದೋ, ಹಮಾರೇ ಬಾರಹ್ʼ ಚಿತ್ರ ಬಿಡುಗಡೆಗೆ ಮುಸ್ಲಿಮರ ವಿರೋಧ: “ಪೆನ್‌ಡ್ರೈವ್‌ ಕೇಸ್‌ ಮೇಲೆ ಮಾಡಿ” ಎಂದು ಗರಂ!

Neeraj Chopra
ಕ್ರೀಡೆ36 mins ago

Neeraj Chopra: 2 ತಿಂಗಳು ವಿದೇಶದಲ್ಲಿ ಕಠಿಣ ತರಬೇತಿ ಪಡೆಯಲಿದ್ದಾರೆ ನೀರಜ್ ಚೋಪ್ರಾ

Neha Gowda is pregnant the actress shared the good news
ಕಿರುತೆರೆ45 mins ago

Neha Gowda: ಮೊದಲ ಮಗುವಿನ ನಿರೀಕ್ಷೆಯಲ್ಲಿ ಗೊಂಬೆ-ಚಂದನ್‌ ದಂಪತಿ

Vastu Tips
ಧಾರ್ಮಿಕ45 mins ago

Vastu Tips: ಮನೆಯ ಯಾವ ಕೋಣೆಗೆ ಯಾವ ಬಣ್ಣ ಇದ್ದರೆ ನೆಮ್ಮದಿ ಸಿಗುತ್ತದೆ? ವಾಸ್ತು ಸಲಹೆ ಹೀಗಿದೆ

prajwal revanna case mobile
ಪ್ರಮುಖ ಸುದ್ದಿ46 mins ago

Prajwal Revanna Case: ಪ್ರಜ್ವಲ್‌ ರೇವಣ್ಣ ಮೊಬೈಲ್‌ ಮಂಗಮಾಯ! ಏನಂತಾರೆ ಪ್ರಜ್ವಲ್ಲು?

LPG Price Cut
ವಾಣಿಜ್ಯ54 mins ago

LPG Price Cut: ಎಲ್‌ಪಿಜಿ ಗ್ರಾಹಕರಿಗೆ ಗುಡ್‌ನ್ಯೂಸ್‌; ಕಮರ್ಷಿಯಲ್ ಅಡುಗೆ ಅನಿಲ ದರ ಇಳಿಕೆ

Paris Olympics 2024
ಕ್ರೀಡೆ1 hour ago

Paris Olympics 2024: ಒಲಿಂಪಿಕ್ಸ್‌ಗೆ‌ ಅರ್ಹತೆ ಪಡೆದ ಬಾಕ್ಸರ್ ನಿಶಾಂತ್ ದೇವ್

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Assault Case in Shivamogga
ಕ್ರೈಂ2 days ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ4 days ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು4 days ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ5 days ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ6 days ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು6 days ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ7 days ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ1 week ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ1 week ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ2 weeks ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

ಟ್ರೆಂಡಿಂಗ್‌