Solar Eclipse : ಮಹಾಲಯ ಅಮಾವಾಸ್ಯೆ ದಿನ ಸೂರ್ಯಗ್ರಹಣ; ಭಾರತಕ್ಕಿದೆಯೇ ಎಫೆಕ್ಟ್?‌ - Vistara News

ಪ್ರಮುಖ ಸುದ್ದಿ

Solar Eclipse : ಮಹಾಲಯ ಅಮಾವಾಸ್ಯೆ ದಿನ ಸೂರ್ಯಗ್ರಹಣ; ಭಾರತಕ್ಕಿದೆಯೇ ಎಫೆಕ್ಟ್?‌

Solar Eclipse : ಭಾರತದ ಕಾಲಮಾನಕ್ಕೆ ತಕ್ಕಂತೆ ನೋಡುವುದಾದರೆ ಸೂರ್ಯಗ್ರಹಣವು ರಾತ್ರಿ 8:34ಕ್ಕೆ ಆರಂಭವಾಗಿ ಮಧ್ಯರಾತ್ರಿ 2:25ಕ್ಕೆ ಅಂತ್ಯವಾಗಲಿದೆ. ಆದರೆ, ಈ ಗ್ರಹಣವು ಭಾರತದಲ್ಲಿ ಗೋಚರಿಸುತ್ತಿಲ್ಲ. ಈ ಹಿನ್ನೆಲೆಯಲ್ಲಿ ಭಾರತೀಯರು ನಿರಾಳರಾಗಿರಬಹುದು.

VISTARANEWS.COM


on

solar eclipse 2023
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ

ಜ್ಯೋತಿಷ್ಯ ಶಾಸ್ತ್ರದ (Astrology) ಪ್ರಕಾರ ಗ್ರಹಣಕ್ಕೆ ವಿಶೇಷವಾದ ಮಹತ್ವವಿದೆ. ಆ ಬಾರಿ ಇದೇ ಅಕ್ಟೋಬರ್ 14ರಂದು ಸೂರ್ಯ ಗ್ರಹಣ (Solar Eclipse) ಸಂಭವಿಸಲಿದೆ. ಅಲ್ಲದೆ, ಅಂದೇ ಮಹಾಲಯ ಅಮಾವಾಸ್ಯೆ ಸಹ ಇದೆ. ಭಾರತದ ಕಾಲಮಾನಕ್ಕೆ ತಕ್ಕಂತೆ ನೋಡುವುದಾದರೆ ಸೂರ್ಯಗ್ರಹಣವು ರಾತ್ರಿ 8:34ಕ್ಕೆ ಆರಂಭವಾಗಿ ಮಧ್ಯರಾತ್ರಿ 2:25ಕ್ಕೆ ಅಂತ್ಯವಾಗಲಿದೆ. ಆದರೆ, ಈ ಗ್ರಹಣವು ಭಾರತದಲ್ಲಿ ಗೋಚರಿಸುತ್ತಿಲ್ಲ. ಈ ಹಿನ್ನೆಲೆಯಲ್ಲಿ ಭಾರತೀಯರು ನಿರಾಳರಾಗಿರಬಹುದು.

ಹೀಗಾಗಿ ಅಂದು ಭಾರತದಲ್ಲಿ ಯಾವುದೇ ರೀತಿಯಾದಂತಹ ಸೂತಕದ ಆಚರಣೆ ಸಹ ಇರುವುದಿಲ್ಲ. ವೈದಿಕ ಜ್ಯೋತಿಷ್ಯ ಶಾಸ್ತ್ರದ ಅನುಸಾರ ಇದೇ ದಿನ ಅಂದರೆ ಅಕ್ಟೋಬರ್ 14ರ ಶನಿವಾರ ಪಿತೃ ಪಕ್ಷದ (Pitru Paksha) ಕೊನೇ ದಿನವಾಗಿದೆ. ಜತೆಗೆ ಮಹಾಲಯ ಅಮಾವಾಸ್ಯೆಯೂ (Mahalaya Amavasya) ಇದ್ದು, ಈ ಸಂದರ್ಭದಲ್ಲಿ ಗ್ರಹಣ ಸಂಭವಿಸುತ್ತಿರುವುದು ವಿಶೇಷವೆಂದೇ ಹೇಳಲಾಗುತ್ತದೆ. ಇದರ ಜತೆ ಜತೆಗೆ ಭಾರತದಲ್ಲಿ ಇದರ ಪರಿಣಾಮ ಇಲ್ಲದೇ ಇರುವುದು ನೆಮ್ಮದಿಗೆ ಕಾರಣವಾಗಿದೆ. ಇನ್ನು ಅಕ್ಟೋಬರ್ 15ರಿಂದ ನವರಾತ್ರಿ ಆರಂಭವಾಗುತ್ತಿದೆ.

ಗ್ರಹಣ ಗೋಚಾರ ಎಲ್ಲೆಲ್ಲಿದೆ?

ಸೂರ್ಯ ಗ್ರಹಣವು ಟೆಕ್ಸಾಸ್‌ನಲ್ಲಿ ಆರಂಭವಾಗಿ ಮೆಕ್ಸಿಕೋ, ಯುಕಾಟಾನ್ ಪೆನಿನ್ಸುಲಾ, ಗ್ವಾಟೆಮಾಲಾ, ಹೊಂಡಾರುಸ್, ನಿಕರಾಗುವಾ, ಕೋಸ್ಟರಿಕಾ, ಪನಾಮ, ಮಧ್ಯ ಅಮೆರಿಕ, ಉತ್ತರ ಅಮೆರಿಕ, ಕೊಲಂಬಿಯಾ ಮತ್ತು ಬ್ರೆಜಿಲ್‌ನಲ್ಲಿ ಇತ್ಯಾದಿ ದೇಶಗಳಲ್ಲಿ ಗೋಚರಿಸುವುದರ ಜತೆಗೆ ಅಲಾಸ್ಕಾ ಮತ್ತು ಅರ್ಜೆಂಟೀನಾದಲ್ಲೂ ಗ್ರಹಣ ಸಂಭವಿಸಲಿದೆ. ಹೀಗಾಗಿ ಈ ಭಾಗದಲ್ಲಿ ಮಾತ್ರ ಗ್ರಹಣ ಪರಿಣಾಮ ಉಂಟಾಗಲಿದೆ.

ಒಂದು ವೇಳೆ ಭಾರತದಲ್ಲಿ ಗ್ರಹಣ ಗೋಚಾರವಾಗಿದ್ದರೆ ಕೆಲವೊಂದಿಷ್ಟು ಆಚರಣೆಯನ್ನು ಮಾಡಲೇಬೇಕಾಗುತ್ತದೆ. ಅಂದರೆ, ಭಾರತ ಎಂದಲ್ಲ ಎಲ್ಲೆಲ್ಲಿ ಗೋಚಾರ ಆಗಲಿದೆಯೋ ಅಲ್ಲೆಲ್ಲ ಕಡೆ ಕೆಲವು ಕೆಲಸಗಳನ್ನು ಮಾಡುವುದು ನಿಷಿದ್ಧ ಎಂದು ಹೇಳಲಾಗಿದೆ.

ಗ್ರಹಣದ ಸೂತಕ ಇದ್ದರೆ ಏನು ಮಾಡಬೇಕು? ಮಾಡಬಾರದು?

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಣ ಕಾಲದಲ್ಲಿ ವಸ್ತುಗಳೆಲ್ಲವಕ್ಕೂ ಗ್ರಹಣದ ಪ್ರಭಾವ ಉಂಟಾಗುತ್ತದೆ. ಹೀಗಾಗಿ ಈ ಸಮಯದಲ್ಲಿ ಕೆಲವು ಕಾರ್ಯಗಳನ್ನು ಮಾಡಬಾರದು ಎಂದು ಹೇಳಲಾಗಿದೆ. ಭಾರತದಲ್ಲಿ ಈ ಸೂರ್ಯ ಗ್ರಹಣ ಗೋಚಾರ ಆಗದೇ ಇರುವುದರಿಂದ ಸೂತಕ ಕಾಲವನ್ನು ಇಲ್ಲಿ ಆಚರಿಸುವ ಅಗತ್ಯ ಇಲ್ಲ. ಆದರೆ, ಗ್ರಹಣವಂತೂ ಸಂಭವಿಸುವುದರಿಂದ ಆ ಸಮಯದಲ್ಲಿ ಕೆಲವು ಜಾಗ್ರತೆಗಳನ್ನು ವಹಿಸಿಕೊಳ್ಳಬೇಕು.

ಧರ್ಮ ಶಾಸ್ತ್ರದ ಅನುಸಾರ ಗ್ರಹಣದ ವೇಳೆ ಇವುಗಳನ್ನು ಮಾಡಬಾರದು!

ಗ್ರಹಣದ ಸಂದರ್ಭದಲ್ಲಿ ಮಲಗಬಾರದು. ಇದಲ್ಲದೆ, ಹೊಲಿಗೆ ಮಾಡುವುದು (ಅಂದರೆ ಸೂಜಿ ದಾರ ಬಳಸಿ ಹೊಲಿಯುವುದು), ಹೊರಗೆ ಸಂಚರಿಸುವುದು ನಿಷಿದ್ಧ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.

ಹೊಸ ಕಾರ್ಯಕ್ಕೆ ಚಾಲನೆ ಚಾಲನೆ ನೀಡುವುದಿಲ್ಲ

ಹಿಂದು ಧರ್ಮದ ಪ್ರಕಾರ ಗ್ರಹಣದ ವೇಳೆ ಹೊಸ ಕಾರ್ಯವನ್ನು ಇಲ್ಲವೇ ಶುಭ ಕಾರ್ಯವನ್ನು ಇಟ್ಟುಕೊಳ್ಳುವುದಿಲ್ಲ. ಆ ವೇಳೆ ನಕಾರಾತ್ಮಕ ಶಕ್ತಿ (Negative energy) ಹೆಚ್ಚಿಗೆ ಇರುವುದರಿಂದ ಇಂಥವುಗಳನ್ನು ಮಾಡಬಾರದು ಎಂದು ಶಾಸ್ತ್ರದ ಮುಖೇನ ಹೇಳಲಾಗಿದೆ. ಇನ್ನು ಗ್ರಹಣ ಹಿಡಿದಿರುವಾಗ ಉಗುರು ಕತ್ತರಿಸುವುದು, ತಲೆ ಬಾಚುವುದದನ್ನು ಸಹ ಮಾಡಬಾರದು.

ಆಹಾರ ಸೇವನೆಗೂ ಇದೆ ನಿಷೇಧ

ಗ್ರಹಣದ ಸಮಯದಲ್ಲಿ ಆಹಾರ ಸೇವನೆಯನ್ನು ನಿಷೇಧಿಸಲಾಗಿದೆ. ಏಕೆಂದರೆ ಗ್ರಹಣದ ವೇಳೆ ನಕಾರಾತ್ಮಕ ವಿಕಿರಣಗಳು ಉಂಟಾಗುವುದರಿಂದ ಅವುಗಳ ಪ್ರಭಾವಕ್ಕೊಳಪಟ್ಟ ಆಹಾರ ಸೇವನೆ ಮಾಡುವುದರಿಂದ ನಕಾರಾತ್ಮಕ ಪ್ರಭಾವ ಅಂಥವರ ಮೇಲಾಗುತ್ತದೆ. ಒಂದೊಮ್ಮೆ ಸಿದ್ಧಮಾಡಿದ ಆಹಾರವಿದ್ದರೂ ಅದನ್ನು ಗ್ರಹಣದ ನಂತರ ಸೇವಿಸಬಾರದು ಎಂದು ಹೇಳಲಾಗಿದೆ.

ಗರ್ಭಿಣಿಯರಿದ್ದರೆ ಏನು ಮಾಡಬೇಕು?

ಗ್ರಹಣದ ವೇಳೆ ಗರ್ಭಿಣಿಯರಿಗೆ ಕೆಲವೊಂದು ಸಲಹೆಗಳನ್ನು ನೀಡಲಾಗಿದೆ. ಅವರು ಆ ವೇಳೆ ಹರಿತ ವಸ್ತುಗಳಾದ ಚಾಕು, ಚೂರಿ, ಕತ್ತಿ ಮುಂತಾದವುಗಳನ್ನು ಬಳಸಕೂಡದು. ಇದರಿಂದ ಗರ್ಭದಲ್ಲಿರುವ ಶಿಶುವಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ಶಾಸ್ತ್ರ ಹೇಳುತ್ತದೆ. ಈ ವೇಳೆ ದೇವರ ಸ್ತೋತ್ರ ಪಠಣ, ಧ್ಯಾನ, ಭಜನೆ ಇತ್ಯಾದಿಗಳಲ್ಲಿ ತೊಡಗಿಕೊಳ್ಳಬಹುದಾಗಿದೆ.

ಮುಂದಿನ ʻರಿಂಗ್ ಆಫ್ ಫೈರ್ʼ ಯಾವಾಗ?

ಈ ಗ್ರಹಣ ಸಂಭವಿಸಿದ ನಂತರ ಮುಂದಿನ ಈ ಸೂರ್ಯ ಗ್ರಹಣ ಅಮೆರಿಕದಲ್ಲಿ ಜೂನ್ 21, 2039ಕ್ಕೆ ಸಂಭವಿಸಲಿದೆ. ‌ರಿಂಗ್ ಆಫ್ ಫೈರ್ ಎಂಬ ಈ ಗ್ರಹಣವನ್ನು ಅಮೆರಿಕದಲ್ಲಿ ನೋಡಲು ಇನ್ನೂ 15 ವರ್ಷ ಕಾಯಬೇಕು.

ಇದನ್ನೂ ಓದಿ: ತಾತಯ್ಯ ತತ್ವಾಮೃತಂ: ಭಕ್ತ ಜನರಿಗೆ ಯಾತರ ಭಯವೂ ಇಲ್ಲ

ಇದೇ ತಿಂಗಳು ಇದೆ ಚಂದ್ರಗ್ರಹಣ

ಇದೇ ಅಕ್ಟೋಬರ್‌ 28ರಂದು ಚಂದ್ರ ಗ್ರಹಣ ಇದೆ. ಅಂದರೆ, ಹಿಂದು ಧರ್ಮದ ಅನುಸಾರ ಅ. 28ಕ್ಕೆ ಚಂದ್ರ ಗ್ರಹಣ ಇದೆ ಎಂದು ಪಂಚಾಂಗಗಳಲ್ಲಿ ಉಲ್ಲೇಖಿಸಲಾಗಿದೆ. ಇಲ್ಲಿ ಹಿಂದು ಆಚರಣೆ ಪ್ರಕಾರ ಮುಂಜಾನೆ 6 ಗಂಟೆಯಿಂದ ಮರು ದಿನ ಮುಂಜಾನೆ 6 ಗಂಟೆವರೆಗೆ ಒಂದು ದಿನ ಎಂದು ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಹಾಗಾಗಿ ಈ ಬಾರಿ ಎರಡನೇ ಮತ್ತು ಕೊನೆಯ ಚಂದ್ರಗ್ರಹಣವು ಅಕ್ಟೋಬರ್ 28ರಂದು ಮಧ್ಯ ರಾತ್ರಿ ಸಂಭವಿಸುತ್ತದೆ. ಚಂದ್ರನು ಭಾರತೀಯ ಕಾಲಮಾನದ ಪ್ರಕಾರ ರಾತ್ರಿ 1.06 ಮತ್ತು 2.23ರ ನಡುವೆ ಭೂಮಿಯ ನೆರಳಿನ ಮೂಲಕ ಹಾದುಹೋಗಲಿದ್ದು, ಚಂದ್ರಗ್ರಹಣ ಸಂಭವಿಸಲಿದೆ. ಇಲ್ಲಿ ರಾತ್ರಿ 1.06ಕ್ಕೆ ಬರುವುದರಿಂದ ಮುಂದಿನ ದಿನದ ಲೆಕ್ಕವನ್ನು ಪಡೆಯುವುದರಿಂದ ಅಕ್ಟೋಬರ್‌ 29ಕ್ಕೆ ಚಂದ್ರ ಗ್ರಹಣ ಎಂದೂ ಹೇಳಲಾಗುತ್ತದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

ಶಾಲೆಗಳಲ್ಲಿ ಅಶ್ಲೀಲ ಹಾಡು, ನೃತ್ಯಕ್ಕೆ ಬ್ರೇಕ್: ಶಿಕ್ಷಣ ಇಲಾಖೆ ಮಹತ್ವದ ಆದೇಶ

VISTARANEWS.COM


on

ಶಾಲೆಗಳಲ್ಲಿ ಅಶ್ಲೀಲ ಹಾಡು, ನೃತ್ಯಕ್ಕೆ ಬ್ರೇಕ್: ಶಿಕ್ಷಣ ಇಲಾಖೆ ಮಹತ್ವದ ಆದೇಶ

ಬೆಂಗಳೂರು: ಶಾಲೆಗಳಲ್ಲಿ ಇನ್ನು ಮುಂದೆ ಅಶ್ಲೀಲ ಹಾಡು ಮತ್ತು ಅಸಭ್ಯ ನೃತ್ಯಗಳಿಗೆ ಅವಕಾಶ ನೀಡದಂತೆ ಕರ್ನಾಟಕ ಶಾಲಾ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ಸಾಂಸ್ಕೃತಿಕ ಕಾರ್ಯಕ್ರಮದ ಹೆಸರಿನಲ್ಲಿ ದ್ವಂದ್ವಾರ್ಥದ ಸಿನಿಮಾ ಹಾಡು ಹಾಗೂ ನೃತ್ಯಗಳನ್ನು ಪ್ರದರ್ಶಿಸುವುದರಿಂದ ಮಕ್ಕಳ ಮನಸ್ಸಿನ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ ಎಂಬ ದೂರುಗಳ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಂಡಿದೆ. ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳಲ್ಲಿ ಈ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಅಧಿಕೃತ ಆದೇಶ ಹೊರಡಿಸಲಾಗಿದೆ.
ಶಿಕ್ಷಣ ಇಲಾಖೆ ಬಿಡುಗಡೆ ಮಾಡಿರುವ ಹೊಸ ಮಾರ್ಗಸೂಚಿಯ ಪ್ರಕಾರ, ಶಾಲಾ ಕಾರ್ಯಕ್ರಮಗಳಲ್ಲಿ ಕೇವಲ ಜಾನಪದ, ದೇಶಭಕ್ತಿ ಗೀತೆಗಳು, ಪರಿಸರ ಕಾಳಜಿಯ ಹಾಡುಗಳು ಮತ್ತು ಸಮಾಜಮುಖಿ ಚಿಂತನೆಯುಳ್ಳ ಸಂಗೀತಕ್ಕೆ ಮಾತ್ರ ಆದ್ಯತೆ ನೀಡಬೇಕು. ನೃತ್ಯದ ಸಮಯದಲ್ಲಿ ವಿದ್ಯಾರ್ಥಿಗಳು ಧರಿಸುವ ಉಡುಪುಗಳು ಕೂಡ ಸಭ್ಯವಾಗಿರಬೇಕು ಹಾಗೂ ಅರೆಬರೆ ವಸ್ತ್ರಗಳನ್ನು ಧರಿಸುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಮನರಂಜನೆಯ ಹೆಸರಿನಲ್ಲಿ ಸಮಾಜಕ್ಕೆ ತಪ್ಪು ಸಂದೇಶ ನೀಡುವ ಅಥವಾ ಮಕ್ಕಳ ನೈತಿಕ ಹಾಗೂ ಮಾನಸಿಕ ಆರೋಗ್ಯ ಕೆಡಿಸುವ ಯಾವುದೇ ಹಾಡುಗಳನ್ನು ಬಳಸದಂತೆ ಶಾಲೆಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಈ ನಿಯಮಗಳನ್ನು ಜಾರಿಗೆ ತರುವ ಸಂಪೂರ್ಣ ಜವಾಬ್ದಾರಿಯನ್ನು ಶಾಲಾ ಮುಖ್ಯಸ್ಥರು ಮತ್ತು ಆಡಳಿತ ಮಂಡಳಿಗೆ ವಹಿಸಲಾಗಿದೆ.

Continue Reading

ರಾಜಕೀಯ

ಮೋದಿ ಅಥವಾ ದೀದಿ? ಪ.ಬಂಗಾಳದ ಭವಿಷ್ಯ ನಿರ್ಧರಿಸಲಿದೆ 142 ಸೀಟು

VISTARANEWS.COM


on

ಪಶ್ಚಿಮ ಬಂಗಾಳವನ್ನು ಈ ಸಲ ಗೆದ್ದೇ ಗೆಲ್ಲಬೇಕು ಎಂಬ ಬಿಜೆಪಿ ಹಠ-ನಾಲ್ಕನೇ ಬಾರಿಯೂ ಸಿಎಂ ಪಟ್ಟ ಉಳಿಸಿಕೊಳ್ಳಬೇಕು ಎಂಬ ಮಮತಾ ಬ್ಯಾನರ್ಜಿ ಛಲ – ಈ ಸಲ ಪಶ್ಚಿಮ ಬಂಗಾಲದಲ್ಲಿ ಮೋದಿಯಾ..ದೀದಿಯಾ ಅನ್ನೋ ಪ್ರಶ್ನೆಗೆ ಬುಧವಾರದ ವೋಟಿಂಗ್‌ ನಿರ್ಧರಿಸಲಿದೆ. ಬುಧವಾರ 142 ಸೀಟುಗಳೇ ಬಂಗಾಳದ ರಾಜಕೀಯ ಭವಿಷ್ಯ ಬರೆಯಲಿವೆ.

ಯಾಕೆ ಬುಧವಾರ ನಿರ್ಣಾಯಕ?:
ಬುಧವಾರ ಎರಡನೇ ಹಂತದಲ್ಲಿ ಬಂಗಾಳದ 8 ಜಿಲ್ಲೆಗಳಲ್ಲಿ ಮತದಾನ ನಡೆಯಲಿವೆ. ಕೋಲ್ಕತ್ತಾ ಉತ್ತರ, ಕೋಲ್ಕತ್ತಾ ದಕ್ಷಿಣ, ಹೌರಾ, ನಾಡಿಯಾ, ಉತ್ತರ 24 ಪರಗಣ, ದಕ್ಷಿಣ 24 ಪರಗಣ, ಹೂಗ್ಲಿ ಮತ್ತು ಪೂರ್ವ ಬರ್ಧಮನ್‌ ಜಿಲ್ಲೆಗಳಲ್ಲಿ ಮತಯುದ್ಧ ನಡೆಯಲಿವೆ. ಹಾಗೆ ನೋಡಿದರೆ ಈ ಎಂಟೂ ಜಿಲ್ಲೆಗಳು ಟಿಎಂಸಿಯ ಭದ್ರಕೋಟೆ. 2021ರ ಫಲಿತಾಂಶ ಒಮ್ಮೆ ನೋಡಿದರೆ, 142 ಸೀಟುಗಳಲ್ಲಿ ಟಿಎಂಸಿ 123ನ್ನು ಗೆದ್ದಿದೆ. ಬಿಜೆಪಿ ಗೆಲುವಿನ ನಗೆ ಬೀರಿದ್ದು ಕೇವಲ 18 ಸೀಟುಗಳಲ್ಲಿ. ಮತ್ತೊಂದು ಸೀಟು ಐಎಸ್‌ಎಫ್‌ ಪಾಲಾಗಿದೆ. ಹಾಗಾಗಿ, ಅಧಿಕಾರ ಉಳಿಸಿಕೊಳ್ಳಲು ಟಿಎಂಸಿಗೆ, ಅಧಿಕಾರ ಕಿತ್ತುಕೊಳ್ಳಲು ಬಿಜೆಪಿಗೆ ಈ 142 ಸೀಟುಗಳೇ ನಿರ್ಣಾಯಕ.
ವೋಟಿನ ಲೆಕ್ಕಾಚಾರ ಗಮನಿಸಿದರೆ ಎರಡನೇ ಹಂತದ ಮತದಾನದಲ್ಲಿ ಟಿಎಂಸಿ ಮುಂದೆ ಬಿಜೆಪಿ ಲೆಕ್ಕಕ್ಕೇ ಇಲ್ಲ. 2021ರಲ್ಲಿ ಎರಡನೇ ಹಂತದ ಕ್ಷೇತ್ರಗಳಲ್ಲಿ ಟಿಎಂಸಿಯದ್ದು ಅಭೂತಪೂರ್ವ ಶೇ. 82ರ ಸ್ಟ್ರೈಕ್‌ ರೇಟ್‌ (142ರಲ್ಲಿ 123 ಸೀಟು). ಬಿಜೆಪಿಯದ್ದು ಏನಿದ್ದರೂ ಶೇ. 17 ( 142ರಲ್ಲಿ 18 ಸೀಟು). ಆದರೆ, ಲೋಕಸಭಾ ಚುನಾವಣೆಯ ಹೊತ್ತಿಗೆ ಈ ಎಂಟು ಜಿಲ್ಲೆಗಳಲ್ಲಿ ಬಿಜೆಪಿಯ ವೋಟ್‌ ಶೇರಿಂಗ್‌ ಗಣನೀಯವಾಗಿ ಸುಧಾರಿಸಿದೆ. ಹಾಗಾಗಿ ಎರಡನೇ ಹಂತ ಮಮತಾ ಬ್ಯಾನರ್ಜಿಗೆ ಸುಲಭದ ತುತ್ತಲ್ಲ.

ಎರಡನೇ ಹಂತದ ಮೇಲೆ ಬಿಜೆಪಿ ಕಣ್ಣೇಕೆ?
ಪಶ್ಚಿಮ ಬಂಗಾಳದಲಿ ಬಿಜೆಪಿ ಧ್ವಜ ಹಾರಿಸಬೇಕಾದರೆ ಬುಧವಾರ ಮತದಾನವನ್ನು ಗೆಲ್ಲಲೇಬೇಕು ಎಂಬ ಸತ್ಯ ಬಿಜೆಪಿಗೆ ಅರಿವಿದೆ. ದೀದಿಯಿಂದ ಅಧಿಕಾರ ಕಿತ್ತುಕೊಳ್ಳಬೇಕಾದರೆ ಬಂಗಾಳದ ದಕ್ಷಿಣದ 8 ಜಿಲ್ಲೆಗಳಲ್ಲಿ ಬಿಜೆಪಿ ಪರಾಕ್ರಮ ತೋರಲೇ ಬೇಕಿದೆ. ಯಾಕಂದರೆ, ಉತ್ತರ ಬಂಗಾಳದಲ್ಲಿ ಬಿಜೆಪಿ ತನ್ನ ಸಾಮರ್ಥ್ಯವನ್ನು ಈಗಾಗಲೇ ಸಾಬೀತುಪಡಿಸಿದೆ. ಅಲ್ಲಿ 59 ಸೀಟುಗಳನ್ನು ಬಿಜೆಪಿ ಗೆದ್ದುಕೊಂಡಿದೆ. ಆದರೆ, ದಕ್ಷಿಣ ಬಂಗಾಳದಲ್ಲಿ ಆ ಪಾರಮ್ಯವನ್ನು ಸಾಬೀತುಪಡಿಸಬೇಕಿದೆ. ಹಾಗಿದ್ದರೆ ಮಾತ್ರ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಧ್ವಜ ರಾರಾಜಿಸಬಹುದು.

ಪ. ಬಂಗಾಳದಲ್ಲಿ ಬಿಜೆಪಿ ಗುಪ್ತಗಾಮಿನಿ:
ದೀದಿನಾಡಲ್ಲಿ ಬಿಜೆಪಿ ಮತ್ತು ಟಿಎಂಸಿ ನಡುವೆ ನೇರಾನೇರ ಹಣಾಹಣಿ ಇದೆ. ಮೂರು ಸಲ ಸತತ ಸಿಎಂ ಆಗಿರುವ ಮಮತಾ ಬ್ಯಾನರ್ಜಿ ವಿರುದ್ಧ ಆಡಳಿತ ವಿರೋಧಿ ಅಲೆಯೂ ಇದೆ. ಕಳೆದ ಸಲ ಈ ಆಡಳಿತ ವಿರೋಧಿ ಅಲೆಯನ್ನು ಬಳಸಿಕೊಳ್ಳುವಲ್ಲಿ ಬಿಜೆಪಿ ವಿಫಲವಾಗಿತ್ತು. ಆದರೂ ಅದರ ಸೀಟು ಮೂರರಿಂದ 77ಕ್ಕೆ ಏರಿತ್ತು. ಇದು ಕೂಡಾ ಗಮನಾರ್ಹ ಸಾಧನೆಯೇ. ಒಮ್ಮೆ ಪಶ್ಚಿಮ ಬಂಗಾಳದ ಅತಿದೊಡ್ಡ ಶಕ್ತಿಯಾಗಿ ಮೆರೆದಿದ್ದ ಎಡಪಕ್ಷಗಳು ಈಗ ಆಟಕ್ಕೆ ಉಂಟು ಲೆಕ್ಕಕ್ಕೆ ಇಲ್ಲ. ಕಾಂಗ್ರೆಸ್‌ ಕೂಡಾ ಕಣದಲ್ಲಿದೆಯಾದರೂ ಆ ಪಕ್ಷಕ್ಕೇ ಗೆಲ್ಲುವ ಯಾವುದೇ ಆತ್ಮವಿಶ್ವಾಸ ಇಲ್ಲ. ಆದರೆ, ಬಿಜೆಪಿ ಈ ಸಲ ತನ್ನ ರಣತಂತ್ರ ಬದಲಾಯಿಸಿದೆ. ಗುಪ್ತಗಾಮಿನಿಯಾಗಿ ಬಿಜೆಪಿಯ ಕಾರ್ಯಕರ್ತರು ಜನರ ನಡುವೆ ಸೇರಿದ್ದು, ಪಕ್ಷದ ಪರ ಸೈಲೆಂಟಾಗಿ ಪ್ರಚಾರ ನಡೆಸುತ್ತಿದ್ದಾರೆ. ಹೈವೋಲ್ಟೇಜ್‌ ಪ್ರಚಾರದಿಂದ ಬಿಜೆಪಿ ದೂರ ಉಳಿದಿದೆ. ಜೊತೆಗೆ ಮಮತಾ ಬ್ಯಾನರ್ಜಿಗೆ ವ್ಯಕ್ತಿಗತ ನಿಂದನೆಯಿಂದ ಹಿಂದೆ ಸರಿದಿದೆ. ಮಮತಾ ಆಡಳಿತ ವಿರೋಧಿ ಅಲೆ, ನುಸುಳುಕೋರರ ಸಮಸ್ಯೆ, ತುಷ್ಟೀಕರಣ ನೀತಿಯನ್ನೇ ಹೈಲೈಟ್‌ ಮಾಡಿ ಪ್ರಚಾರ ನಡೆಸುತ್ತಿದೆ. ಮತದಾರರ ಧ್ರುವೀಕರಣಕ್ಕೂ ಬಿಜೆಪಿ ರಣತಂತ್ರ ರೂಪಿಸಿದೆ. ಇದು ಫಲನೀಡಿದ್ರೆ, ಕಮಲ ಅರಳುವ ಎಲ್ಲಾ ಸಾಧ್ಯತೆಗಳಿವೆ.

ದಾಖಲೆ ವೋಟಿಂಗ್‌ ಯಾರಿಗೆ ವರ?
ಮೊದಲ ಹಂತದಲ್ಲಿ ಪ. ಬಂಗಾಳದಲ್ಲಿ ಶೇ. 93.19ರಷ್ಟು ಮತದಾನವಾಗಿದೆ. ಇದೊಂದು ಮಹಾ ದಾಖಲೆ. ಯಾಕೆ ಇಷ್ಟೊಂದು ಪ್ರಮಾಣದ ವೋಟಿಂಗ್‌ ಆಗಿದೆ ಅನ್ನೋದಕ್ಕೆ ಮೊದಲು ಸಿಗುವ ಉತ್ತರ ಎಸ್‌ಐಆರ್‌. ಮತಪಟ್ಟಿಯ ನವೀಕರಣ ಸಂದರ್ಭದಲ್ಲಿ ಅನರ್ಹ ಮತದಾರರನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಸುಮಾರು 90 ಲಕ್ಷ ಮತದಾರರು ಪಟ್ಟಿಯಿಂದ ಡಿಲೀಟ್‌ ಆಗಿದ್ದಾರೆ. ಇದು ಕೂಡಾ ಮತದಾನದ ದಾಖಲೆಗೆ ಕಾರಣ. ಈ ದಾಖಲೆ ವೋಟಿಂಗ್‌ ಲಾಭ ಬಿಜೆಪಿ ಪಡೆಯುತ್ತಾ? ಟಿಎಂಸಿಗೆ ಸಿಗುತ್ತಾ ಎಂಬುದಕ್ಕೆ ಹಲವು ತರ್ಕಗಳಿವೆ. ಇದಕ್ಕೆ ಉತ್ತರ ಮೇ 4ಕ್ಕೆ ಸಿಗಲಿದೆ

Continue Reading

ಕರ್ನಾಟಕ

ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ: ಉಗ್ರ ಮೊಹಮ್ಮದ್ ಶಾರಿಕ್‌ಗೆ 10 ವರ್ಷ ಕಠಿಣ ಶಿಕ್ಷೆ ವಿಧಿಸಿದ NIA ನ್ಯಾಯಾಲಯ

VISTARANEWS.COM


on

ಮಂಗಳೂರು ನಗರವನ್ನು ಬೆಚ್ಚಿಬೀಳಿಸಿದ್ದ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಮೊಹಮ್ಮದ್ ಶಾರಿಕ್‌ಗೆ ಬೆಂಗಳೂರಿನ ಎನ್‌ಐಎ (NIA) ವಿಶೇಷ ನ್ಯಾಯಾಲಯವು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ಮಹತ್ವದ ತೀರ್ಪು ನೀಡಿದೆ. 2022ರ ನವೆಂಬರ್ 19ರಂದು ಮಂಗಳೂರಿನ ಕಂಕನಾಡಿ ಬಳಿ ಆಟೋರಿಕ್ಷಾದಲ್ಲಿ ಈ ಸ್ಫೋಟ ಸಂಭವಿಸಿತ್ತು. ಆರೋಪಿ ಶಾರಿಕ್ ಸ್ಫೋಟಕ ತುಂಬಿದ್ದ ಕುಕ್ಕರ್ ಅನ್ನು ಸಾಗಿಸುತ್ತಿದ್ದಾಗಲೇ ಅದು ಆಕಸ್ಮಿಕವಾಗಿ ಸ್ಫೋಟಗೊಂಡಿದ್ದರಿಂದ, ನಗರದಲ್ಲಿ ಸಂಭವಿಸಬಹುದಾಗಿದ್ದ ಭಾರಿ ಅನಾಹುತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿತ್ತು. ಈ ಘಟನೆಯಲ್ಲಿ ಶಾರಿಕ್ ಮತ್ತು ಆಟೋ ಚಾಲಕ ಇಬ್ಬರೂ ಗಾಯಗೊಂಡಿದ್ದರು.

ದೇಶದ ಭದ್ರತೆಗೆ ಧಕ್ಕೆ ತರುವ ಮತ್ತು ಸಾರ್ವಜನಿಕರಲ್ಲಿ ಭೀತಿ ಹುಟ್ಟಿಸುವ ಉದ್ದೇಶದಿಂದ ಈ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಲಾಗಿತ್ತು. ಪ್ರಕರಣದ ಗಾಂಭೀರ್ಯವನ್ನು ಪರಿಗಣಿಸಿ ಕೇಂದ್ರ ಸರ್ಕಾರವು ಇದರ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳಕ್ಕೆ (NIA) ವಹಿಸಿತ್ತು. ತನಿಖೆಯ ವೇಳೆ ಶಾರಿಕ್ ನಿಷೇಧಿತ ಉಗ್ರಗಾಮಿ ಸಂಘಟನೆಗಳಿಂದ ಪ್ರೇರಿತನಾಗಿದ್ದದ್ದು ಮತ್ತು ಡಾರ್ಕ್ ವೆಬ್ ಮೂಲಕ ವಿದೇಶಿ ಹ್ಯಾಂಡ್ಲರ್‌ಗಳ ಸಂಪರ್ಕದಲ್ಲಿದ್ದು ಬಾಂಬ್ ತಯಾರಿಕಾ ತರಬೇತಿ ಪಡೆದಿದ್ದ ಎಂಬ ಆಘಾತಕಾರಿ ಸತ್ಯಗಳು ಹೊರಬಂದಿದ್ದವು.

ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಾಲಯವು, ಎನ್‌ಐಎ ಸಲ್ಲಿಸಿದ್ದ ಸಾಕ್ಷ್ಯಧಾರಗಳನ್ನು ಪುರಸ್ಕರಿಸಿ ಶಾರಿಕ್ ದೋಷಿ ಎಂದು ತೀರ್ಪು ನೀಡಿದೆ. ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (UAPA) ಸೇರಿದಂತೆ ವಿವಿಧ ಕಠಿಣ ಸೆಕ್ಷನ್‌ಗಳ ಅಡಿಯಲ್ಲಿ ಶಿಕ್ಷೆ ಪ್ರಕಟಿಸಿದೆ.

Continue Reading

Latest

ಶ್ರೀ ಶ್ರೀ ಡಾ. ಪ್ರಕಾಶನಾಥ ಸ್ವಾಮೀಜಿ ಅವರಿಂದ ವಿಸ್ತಾರ ನ್ಯೂಸ್ ಕಚೇರಿ ಉದ್ಘಾಟನೆ

VISTARANEWS.COM


on

ಬೆಂಗಳೂರು: ಕನ್ನಡ ಜನಮನಗಳಲ್ಲಿ ಈಗಾಗಲೇ ನೆಲೆಯೂರಿರುವ ವಿಸ್ತಾರ ನ್ಯೂಸ್‌ ಹೊಸ ಸ್ವರೂಪದೊಂದಿಗೆ ನಿಮ್ಮ ಮುಂದೆ ಬರಲಿದೆ.

ಈಗಾಗಲೇ ನಿಮ್ಮೆಲ್ಲರ ಮನೆ ಮನಗಳಲ್ಲಿ ಸ್ಥಾನ ಪಡೆದುಕೊಂಡಿದ್ದ ವಿಶ್ವಾಸಾರ್ಹ ಸುದ್ದಿವಾಹಿನಿಯಾದ ವಿಸ್ತಾರ ನ್ಯೂಸ್‌, ಹೊಸ ಹುರುಪು ಮತ್ತು ಛಲದೊಂದಿಗೆ ಸಮಾಜದ ಪರವಾಗಿ ನಿಲ್ಲಲು ಸಜ್ಜಾಗಿದೆ. ಪರಿಣಾಮಕಾರಿ ಪತ್ರಿಕೋದ್ಯಮಕ್ಕೆ ಬದ್ಧವಾಗಿ ಜನಕೇಂದ್ರಿತವಾದ ಪತ್ರಿಕೋದ್ಯಮವನ್ನು ಮುನ್ನೆಲೆಗೆ ತರಲು ವಿಸ್ತಾರ ನ್ಯೂಸ್‌ ಸಿದ್ದ.

ಈ ಸಂದರ್ಭದಲ್ಲಿ ಶ್ರೀ ಶ್ರೀ ಡಾ. ಪ್ರಕಾಶನಾಥ ಸ್ವಾಮೀಜಿರವರ ಬೆಂಬಲ, ಆಶೀರ್ವಾದದ ಜೊತೆಗೆ ಸಂಸ್ಥೆಯ ಎಂ.ಡಿ ಯಾದ ಧರ್ಮೇಶ್‌ ಮತ್ತು ಸಿಇಒ ಹೆಚ್‌ ಜಿ ಪವಿತ್ರ ಗೌಡರವರ ಉಪಸ್ಥಿತಿಯಲ್ಲಿ ವಿಶೇಷ ಪೂಜೆ ಮತ್ತು ದೀಪ ಬೆಳಗುವುದರ ಮೂಲಕ ಕಚೇರಿಯನ್ನು ಉದ್ಘಾಟಿಸಲಾಯಿತು. ಈ ಶುಭ ಘಳಿಗೆಯಲ್ಲಿ ಮಾನ್ಯರು ವಿಸ್ತಾರ ನ್ಯೂಸ್‌ ಡಿಜಿಟಲ್‌ ವೇದಿಕೆಯನ್ನು ಸಕ್ರಿಯಗೊಳಿಸಿದರು.

ಮಾಹಿತಿ ಜೊತೆ ಮನರಂಜನೆ, ನಿಖರ ನಿರೂಪಣೆ, ಪ್ರಖರ ವಿಶ್ಲೇಷಣೆ ಎಂಬ ಸುದ್ದಿ ಸೂತ್ರದೊಂದಿಗೆ ಅತಿ ಶೀಘ್ರದಲ್ಲಿ ನಿಮ್ಮ ಮನೆಯಂಗಳ ಪ್ರವೇಶಿಸಲಿದ್ದೇವೆ. ನಿಮ್ಮ ಸ್ವಾಗತ ಮತ್ತು ಬೆಂಬಲ ಬಯಸುವ ವಿಸ್ತಾರ ನ್ಯೂಸ್‌ ಟೀಂ.





Continue Reading
Advertisement
Latest49 minutes ago

ಜಾಮೀನು ಪಡೆಯಲು ಸುಪ್ರೀಂ ಕೋರ್ಟ್‌ ಮೊರೆ ಹೋದ ದರ್ಶನ್‌.

Latest2 hours ago

ಯಶ್ ಫ್ಯಾನ್ಸ್‌ಗೆ ಶಾಕ್: ಮತ್ತೆ ಮುಂದೂಡಲ್ಪಟ್ಟ ‘ಟಾಕ್ಸಿಕ್’ ರಿಲೀಸ್ ಡೇಟ್! ಹೊಸ ದಿನಾಂಕದ ಬಗ್ಗೆ ಅಪ್‌ಡೇಟ್ ನೀಡಿದ ಚಿತ್ರತಂಡ

Rakshit Shetty Richard Anthony Produce By Hombale
ಅವಿಭಾಗೀಕೃತ2 hours ago

ವಿಭಿನ್ನ ಕಾರ್ಯಯೋಜನೆಯೊಂದಿಗೆ ಸಮಾಜದ ಪ್ರತಿನಿಧಿ ರೂಪದಲ್ಲಿ ಸಿದ್ಧಗೊಳ್ಳುತ್ತಿದೆ ವಿಸ್ತಾರ ನ್ಯೂಸ್-ಸದಾ ನಿಮ್ಮ ಪರ:

ಕರ್ನಾಟಕ2 hours ago

ಶಾಲೆಗಳಲ್ಲಿ ಅಶ್ಲೀಲ ಹಾಡು, ನೃತ್ಯಕ್ಕೆ ಬ್ರೇಕ್: ಶಿಕ್ಷಣ ಇಲಾಖೆ ಮಹತ್ವದ ಆದೇಶ

ರಾಜಕೀಯ19 hours ago

ಮೋದಿ ಅಥವಾ ದೀದಿ? ಪ.ಬಂಗಾಳದ ಭವಿಷ್ಯ ನಿರ್ಧರಿಸಲಿದೆ 142 ಸೀಟು

Latest19 hours ago

ಸಿದ್ದರಾಮಯ್ಯನವರು ಹೈಕಮಾಂಡ್ ನಿರ್ಧಾರಕ್ಕೆ ಬದ್ಧ’: ಸಿಎಂ ಬದಲಾವಣೆ ಬಗ್ಗೆ ರಾಜಣ್ಣ ನೀಡಿದ ಹೇಳಿಕೆಯ ಮರ್ಮವೇನು?

ಕ್ರೀಡೆ21 hours ago

ಕಿಂಗ್ ಕೊಹ್ಲಿಗೆ ಟಕ್ಕರ್ ಕೊಟ್ಟ ಯುವ ಕಿಡಿ: ಆರೆಂಜ್ ಕ್ಯಾಪ್ ರೇಸ್‌ನಲ್ಲಿ ವಿರಾಟ್ ಹಿಂದಿಕ್ಕಿದ ವೈಭವ್ ಸೂರ್ಯವಂಶಿ!

Latest21 hours ago

ಅಪ್ಪು ಸರ್ ಕೊಟ್ಟ ಆ ಪ್ರೋತ್ಸಾಹವೇ ನನ್ನ ಯಶಸ್ಸಿನ ಗುಟ್ಟು: ಕನ್ನಡಿಗರ ನೆಚ್ಚಿನ ‘ಅಂಜನಿಪುತ್ರ’ನ ಬಗ್ಗೆ ‘ನ್ಯಾಷನಲ್ ಕ್ರಶ್’ ರಶ್ಮಿಕಾ ಹೇಳಿದ್ದೇನು?

bigbreaking21 hours ago

20 ಸಾವಿರ ಕೋಟಿ ಹಗರಣದ ಮೂಲ ದಾಖಲೆಗಳೇ ನಾಪತ್ತೆ. ಎನ್‌.ಆರ್‌.ರಮೇಶ್‌ ಗಂಭೀರ ಆರೋಪ.

Latest22 hours ago

ಕಿಂಗ್ ಕೊಹ್ಲಿಗಾಗಿ ಪುಟಾಣಿ ಫ್ಯಾನ್ ಹಠ: ಹೋಟೆಲ್ ಸಿಬ್ಬಂದಿ ತಡೆದಿದ್ದಕ್ಕೆ ಕಣ್ಣೀರು ಹಾಕಿದ ಬಾಲಕ

galipata neetu
ಕಿರುತೆರೆ2 years ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ3 years ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ3 years ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ3 years ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Bigg Boss- Saregamapa 20 average TRP
ಕಿರುತೆರೆ3 years ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ2 years ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ2 years ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Action Prince Dhruva Sarja much awaited film Martin to hit the screens on October 11
ಸಿನಿಮಾ2 years ago

Martin Movie : ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ʻಮಾರ್ಟಿನ್ʼ ಚಿತ್ರ ಅಕ್ಟೋಬರ್ 11ರಂದು ತೆರೆಗೆ

Sudeep's birthday location shift
ಸ್ಯಾಂಡಲ್ ವುಡ್2 years ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್2 years ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ2 years ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ2 years ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 years ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 years ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 years ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 years ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 years ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

ಟ್ರೆಂಡಿಂಗ್‌