Money Guide: ಈಗಷ್ಟೇ ಕೆಲಸಕ್ಕೆ ಸೇರಿದವರೂ ಹಣ ಉಳಿಸಬಹುದು; ಇಲ್ಲಿವೆ ಸರಳ ಸೂತ್ರಗಳು - Vistara News

ಮನಿ-ಗೈಡ್

Money Guide: ಈಗಷ್ಟೇ ಕೆಲಸಕ್ಕೆ ಸೇರಿದವರೂ ಹಣ ಉಳಿಸಬಹುದು; ಇಲ್ಲಿವೆ ಸರಳ ಸೂತ್ರಗಳು

ಹಣವನ್ನು ಉಳಿಸುವ ಅಭ್ಯಾಸಗಳನ್ನು (saving practices) ಬೆಳೆಸಿಕೊಳ್ಳುವುದರತ್ತ ನಾವು ಮನ ಮಾಡಬೇಕು. ಮಿಲೇನಿಯಲ್ಸ್ ಮತ್ತು GenZ ಹಣವನ್ನು ಉಳಿಸುವಲ್ಲಿ ಗಮನಿಸಬೇಕಾದ ಕೆಲವು ಸೂತ್ರಗಳು ಇಲ್ಲಿವೆ.

VISTARANEWS.COM


on

savings
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನೀವು ಹೊಸದಾಗಿ ಮೊದಲ ಸಂಬಳ (First salary) ಪಡೆಯುತ್ತಿರುವವರೇ? ನೀವು ಮಿಲೇನಿಯಲ್ಸ್ (millennials) ಮತ್ತು GenZನವರಾ? ಹಾಗಿದ್ದರೆ ನೀವು ಚಿಂತಿಸಬೇಕಾದ್ದು ಇಲ್ಲಿದೆ. ಭವಿಷ್ಯದ ಗುರಿಗಳಿಗಾಗಿ ನೀವು ಯೋಜಿಸುತ್ತಿದ್ದರೆ ಹಣವನ್ನು ಉಳಿಸುವುದು (savings) ಬಹಳ ಮುಖ್ಯ. ಆದರೂ ಆಧುನಿಕ ಯುವ ಪೀಳಿಗೆ ಅಂದರೆ ಮಿಲೇನಿಯಲ್ಸ್ ಮತ್ತು Generation Z ಈ ವಿಷಯವನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಇವರು ಭವಿಷ್ಯದ ಆರ್ಥಿಕ ಗುರಿಗಳನ್ನು ಕೇಂದ್ರೀಕರಿಸುವ ಬದಲು ಆ ಕ್ಷಣದ ಸಂತೋಷದ ಬಗ್ಗೆ ಹೆಚ್ಚಿನ ಗಮನವಿಡುತ್ತಾರೆ. ಉಳಿಸಲು ಬೇಕಾದಷ್ಟು ಹಣವಿಲ್ಲ ಎಂದು ಇವರು ಹೇಳುತ್ತಾರೆ. ಆದರೆ ಇದು ನಿಜವಲ್ಲ.

ಸಂಬಳದ ಅಥವಾ ಬೇರೆ ಆದಾಯಗಳ ಮೂಲಕ ಗಳಿಸಿದ ಹಣವನ್ನು ಉಳಿಸಲು (saving tips) ಬಹಳ ಪ್ರಯತ್ನಗಳು ಬೇಕು. ನಮ್ಮ ಸುತ್ತಲಿನ ಪರಿಸರ ವ್ಯವಸ್ಥೆ ಖಂಡಿತವಾಗಿಯೂ ಪ್ರಲೋಭನಕಾರಿ. “ಎರಡನ್ನು ಖರೀದಿಸಿ ಮೂರು ಉಚಿತ ಪಡೆಯಿರಿ” ಅಥವಾ “ಫ್ಲಾಟ್ 70 ಶೇಕಡಾ ರಿಯಾಯಿತಿ”ಯಂತಹ ಕೊಡುಗೆಗಳ ಆಮಿಷ ಮೀರುವುದು ಖಂಡಿತವಾಗಿಯೂ ಕಷ್ಟ. ಅದೇನೇ ಇದ್ದರೂ, ಹಣವನ್ನು ಉಳಿಸುವ ಅಭ್ಯಾಸಗಳನ್ನು (saving practices) ಬೆಳೆಸಿಕೊಳ್ಳುವುದರತ್ತ ನಾವು ಮನ ಮಾಡಬೇಕು. ಮಿಲೇನಿಯಲ್ಸ್ ಮತ್ತು GenZ ಹಣವನ್ನು ಉಳಿಸುವಲ್ಲಿ ಗಮನಿಸಬೇಕಾದ ಕೆಲವು ಸೂತ್ರಗಳು ಇಲ್ಲಿವೆ:

  1. ಬಜೆಟ್ ಮಾಡಿಕೊಳ್ಳಿ, ಅದಕ್ಕೇ ಅಂಟಿಕೊಳ್ಳಿ

ಹಣವನ್ನು ಉಳಿಸುವ ಮೊದಲ ಹೆಜ್ಜೆ ಬಜೆಟ್ ಮಾಡಿಕೊಳ್ಳುವುದು. ನಿಮ್ಮ ಮಾಸಿಕ ಆದಾಯವನ್ನು ಅವಲಂಬಿಸಿ, ಬಜೆಟ್ ತಯಾರಿಸಲು ಮರೆಯದಿರಿ. ನಿಮ್ಮ ಆದಾಯದ ಕನಿಷ್ಠ 20 ಪ್ರತಿಶತವನ್ನು ಪ್ರತ್ಯೇಕ ಖಾತೆಯಲ್ಲಿ ಕಟ್ಟುನಿಟ್ಟಾಗಿ ಇಡಬೇಕು. ಆನ್‌ಲೈನ್‌ನಲ್ಲಿ ಲಭ್ಯವಿರುವ ಯಾವುದೇ ಅಪ್ಲಿಕೇಶನ್‌ಬಳಸಿಕೊಂಡು ನಿಮ್ಮ ದೈನಂದಿನ ಹಣಕಾಸು ವೆಚ್ಚಗಳನ್ನು ಟ್ರ್ಯಾಕ್ ಮಾಡಿ, ಅಗತ್ಯವಿದ್ದರೆ ತಿದ್ದುಪಡಿಗಳನ್ನು ಮಾಡಿ. ಆರಂಭದಲ್ಲಿ ನೀವು ಬಜೆಟ್‌ನೊಳಗೆ ಬದುಕಲು ಇಷ್ಟಪಡದಿರಬಹುದು. ಆದರೆ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಕಾಲಾನಂತರದಲ್ಲಿ ಹೆಚ್ಚಾದಂತೆ, ನೀವು ಆ ಸಾಧನೆಯನ್ನು ಸುಖವನ್ನು ಅನುಭವಿಸುವಿರಿ.

  1. ಆರು ತಿಂಗಳ ಖರ್ಚುಗಳನ್ನು ಸ್ಕ್ಯಾನ್ ಮಾಡಿ

ಹೆಚ್ಚು ಉಳಿಸಲು ನೀವು ಎರಡು ಮಾರ್ಗಗಳಲ್ಲಿ ಒಂದನ್ನು ಅಳವಡಿಸಿಕೊಳ್ಳಬಹುದು. ಒಂದೋ ಹೆಚ್ಚು ಸಂಪಾದಿಸಿ ಅಥವಾ ಕಡಿಮೆ ಖರ್ಚು ಮಾಡಿ. ಹಣವನ್ನು ಗಳಿಸುವುದು ನೆಟ್‌ಫ್ಲಿಕ್ಸ್ ನೋಡುವಷ್ಟು ಸುಲಭವಲ್ಲ. ಆದ್ದರಿಂದ, ಸ್ಪಷ್ಟ ಗಮನವು ಎರಡನೆಯದರ ಮೇಲೆ ಬೀಳುತ್ತದೆ. ಅಂದರೆ ಕಡಿಮೆ ಖರ್ಚು ಮಾಡುವುದು ಅಥವಾ ಲೆಕ್ಕಾಚಾರದ ರೀತಿಯಲ್ಲಿ ಖರ್ಚು ಮಾಡುವುದು.

ಕನಿಷ್ಠ ಕಳೆದ ಆರು ತಿಂಗಳ ನಿಮ್ಮ ವೆಚ್ಚಗಳ ಮಾದರಿಯನ್ನು ಗಮನಿಸಿ. ಅದರಿಂದ ನೀವು ಎಲ್ಲಿ ವೆಚ್ಚ ಮೊಟಕುಗೊಳಿಸಬಹುದು ಎಂಬುದನ್ನು ಕಾಣಬಹುದು. ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್‌ಗಳನ್ನು ಆಗಾಗ್ಗೆ ಬಳಸುವ ಎಲ್ಲರಿಗೂ ಇದು ಅತ್ಯಂತ ಉಪಯುಕ್ತ. ಕಳೆದ ಕೆಲವು ತಿಂಗಳುಗಳ ಸ್ಟೇಟ್‌ಮೆಂಟ್‌ ಹೊರತೆಗೆದು ನೋಡಿದರೆ ನೀವು ಹೆಚ್ಚುವರಿ ಹಣವನ್ನು ಎಲ್ಲಿ ಖರ್ಚು ಮಾಡಿದ್ದೀರಿ ಎಂದು ನಿಮಗೆ ತಿಳಿಯುತ್ತದೆ!

savings

ಅನಗತ್ಯ ಖರ್ಚು ಎಂದರೇನು? ನೀವು ಸುಲಭವಾಗಿ ತಪ್ಪಿಸಬಹುದಾದ ವೆಚ್ಚಗಳು ಇವು. ಉದಾಹರಣೆಗೆ, ನೀವು ಕೇವಲ 600 ಮೀಟರ್ ದೂರ ಪ್ರಯಾಣಿಸಲು ರಿಕ್ಷಾ ಹಿಡಿಯುವುದು; ಅಥವಾ 2.5 ಕಿಮೀ ಪ್ರಯಾಣಕ್ಕಾಗಿ ಓಲಾ ಅಥವಾ ಉಬರ್ ಬುಕ್ ಮಾಡುವುದು ಇತ್ಯಾದಿ. ಈ ಮೊತ್ತವು ಚಿಕ್ಕದಾಗಿ ಕಾಣಿಸಬಹುದು. ಆದರೆ ಪ್ರತಿ ಬಾರಿ ಇದೇ ಕೆಲಸವನ್ನು ನೀವು ಮಾಡಿದಾಗ ಒಟ್ಟು ಮೊತ್ತ ಬಹಳಷ್ಟು ಹೆಚ್ಚಾಗುತ್ತದೆ. 80 ರೂ.ಗೆ 14 ಸಲ ಉಬರ್ ರೈಡ್‌ ಮಾಡಿದರೆ ಅದರ ಮೊತ್ತ 1000ಕ್ಕಿಂತ ಅಧಿಕವಾಗುತ್ತದೆ. ನೀವು ಸ್ವಲ್ಪ ಜಾಗರೂಕರಾಗಿದ್ದರೆ ಈ ಮೊತ್ತವನ್ನು ಸುಲಭವಾಗಿ ಉಳಿಸಬಹುದಿತ್ತು. ಆ ಮೊತ್ತದೊಂದಿಗೆ ನೀವು SIP ಅನ್ನು ಪ್ರಾರಂಭಿಸಬಹುದಿತ್ತು.

  1. ಸ್ವಯಂಚಾಲಿತ ಪೇಮೆಂಟ್‌ಗಳು

ನೀವು ಪ್ರತಿದಿನ ಬಳಸುವ ಪಾಪ್-ಅಪ್ ಟೋಸ್ಟರ್ ಅಥವಾ ನಿಮಿಷಗಳಲ್ಲಿ ಆಹಾರವನ್ನು ಬಿಸಿ ಮಾಡುವ ಉಪಯುಕ್ತ ಮೈಕ್ರೋವೇವ್ ಓವನ್‌ ಗಮನಿಸಿರಬಹುದು. ಕಡಿಮೆ ಮಾನವ ಹಸ್ತಕ್ಷೇಪದ ಇಂತಹ ಅಭ್ಯಾಸಗಳು ವಾಸ್ತವವಾಗಿ ಜೀವನವನ್ನು ಸುಲಭಗೊಳಿಸಿವೆ. ಹಣಕಾಸಿನ ಹೂಡಿಕೆಯ ವಿಷಯದಲ್ಲೂ ಇದನ್ನೇ ಏಕೆ ಕಾರ್ಯಗತಗೊಳಿಸಬಾರದು? ಅಂದರೆ ಉಳಿತಾಯವನ್ನೂ ಸ್ವಯಂಚಾಲಿತವಾಗಿ ಮಾಡಿ. ನಿಮ್ಮ ಮಾಸಿಕ SIPಗಳು ಸ್ವಯಂ- ಡೆಬಿಟ್ ಆಗುವಂತೆ ನಿಮ್ಮ ಬ್ಯಾಂಕ್‌ಗೆ ಸೂಚಿಸಿ.

ಇದು ಯಾಕೆ ಮುಖ್ಯ ಎಂದರೆ, ಪಾವತಿಗೆ ಡೆಡ್‌ಲೈನ್‌ಗಿಂತ ಒಂದೊಂದು ದಿನ ಹೆಚ್ಚಾದರೂ ಬಡ್ಡಿ ಅಥವಾ ದಂಡ ಬೀಳುತ್ತದೆ. ಸ್ವಯಂ ಪಾವತಿ ಇದ್ದರೆ ತನ್ನಷ್ಟಕ್ಕೇ ಕಡಿತಗೊಳ್ಳುತ್ತದೆ. 12 ತಿಂಗಳ ಅಂತ್ಯದಲ್ಲಿ ನೀವು ವೆಚ್ಚ ಮಾಡಿದ ಒಟ್ಟು ಮೊತ್ತವನ್ನು ನೀವು ಗಮನಿಸಬಹುದು.

ಹಣವನ್ನು ಉಳಿಸಲು ಕೂಡ ಅದನ್ನು ಗಳಿಸುವಷ್ಟೇ ಶ್ರಮ ಬೇಕಾಗುತ್ತದೆ. ಮೇಲಿನ ಸಲಹೆಗಳನ್ನು ಜಾರಿ ಮಾಡಲು ಆಳವಾದ ಆರ್ಥಿಕ ಜ್ಞಾನದ ಅಗತ್ಯವಿಲ್ಲ. ನೀವು ಮಾಡಬೇಕಾಗಿರುವುದು ನಿಮ್ಮ ಹಣಕಾಸಿನ ಯೋಜನೆಯಲ್ಲಿ ಸ್ವಲ್ಪ ಜಾಗರೂಕರಾಗಿರುವುದು ಮತ್ತು ಈ ಮೂಲಕ ಸುರಕ್ಷಿತ ಭವಿಷ್ಯವನ್ನು ಖಚಿತಪಡಿಸಿಕೊಳ್ಳುವುದು.

ಇದನ್ನೂ ಓದಿ: Money Guide: ಪಿಪಿಎಫ್‌, ಅಂಚೆ ಕಚೇರಿ; ಮಧ್ಯಮ ವರ್ಗದವರ ಹೂಡಿಕೆಗೆ ಇವು ಬೆಸ್ಟ್‌ ಪ್ಲಾನ್‌ಗಳು!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಮನಿ ಗೈಡ್

Bal Jeevan Bima: ಮಕ್ಕಳ ಹೆಸರಲ್ಲಿ ನಿತ್ಯ 6 ರೂ.ನಂತೆ ಕಟ್ಟಿದರೆ 1 ಲಕ್ಷ ರೂ. ವಿಮೆಯ ರಕ್ಷಣೆ

ಬಾಲ ಜೀವನ್ ವಿಮಾ ಯೋಜನೆಯು ಭಾರತೀಯ ಅಂಚೆ ಕಚೇರಿಯು ಮಕ್ಕಳಿಗಾಗಿ ನೀಡುವ ಜೀವ ವಿಮಾ (Bal Jeevan Bima) ಯೋಜನೆಯಾಗಿದೆ. ಈ ಯೋಜನೆಯಡಿಯಲ್ಲಿ, ಪೋಷಕರು ಪೋಸ್ಟ್ ಆಫೀಸ್ ಖಾತೆಯಲ್ಲಿ ದಿನಕ್ಕೆ 6 ರೂ. ನಷ್ಟು ಕಡಿಮೆ ಹಣವನ್ನು ಠೇವಣಿ ಮಾಡಬಹುದು

VISTARANEWS.COM


on

By

Bal Jeevan Bima
Koo

ಮಗುವಿನ ಜನನದ (child birth) ಅನಂತರ ಅನೇಕ ಪೋಷಕರು ತಮ್ಮ ಮಗುವಿನ ಭವಿಷ್ಯಕ್ಕಾಗಿ ವಿವಿಧ ಯೋಜನೆಯಲ್ಲಿ (insurance scheme) ಹೂಡಿಕೆಯನ್ನು ಮಾಡಲು ಪ್ರಾರಂಭಿಸುತ್ತಾರೆ. ಇದಕ್ಕಾಗಿ ಹೂಡಿಕೆಯ (Bal Jeevan Bima) ವಿವಿಧ ಮಾರ್ಗಗಳನ್ನು ಅನ್ವೇಷಿಸುತ್ತಾರೆ. ಹೆಣ್ಣು ಮಕ್ಕಳಿಗಾಗಿ (girl child) ಹಲವು ಉಳಿತಾಯ ಯೋಜನೆಗಳಿವೆ. ಅಂತೆಯೇ ಎಲ್ಲ ಮಕ್ಕಳಿಗೂ ಪ್ರಯೋಜನವಾಗುವ ಕೆಲವು ಯೋಜನೆಗಳಿವೆ. ಅದರಲ್ಲಿ ಅಂಚೆ ಕಚೇರಿಯಲ್ಲಿ ಸಿಗುವ ಬಾಲ ಜೀವನ್ ವಿಮಾ ಯೋಜನೆಯೂ ಒಂದು. ಇದು ಮಕ್ಕಳಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ಜೀವ ವಿಮಾ ಯೋಜನೆಯಾಗಿದೆ.

ಬಾಲ ಜೀವನ್ ವಿಮಾ ಯೋಜನೆಯು ಭಾರತೀಯ ಅಂಚೆ ಕಚೇರಿಯು ಮಕ್ಕಳಿಗಾಗಿ ನೀಡುವ ಜೀವ ವಿಮಾ ಯೋಜನೆಯಾಗಿದೆ. ಈ ಯೋಜನೆಯಡಿಯಲ್ಲಿ, ಪೋಷಕರು ಪೋಸ್ಟ್ ಆಫೀಸ್ ಖಾತೆಯಲ್ಲಿ ದಿನಕ್ಕೆ 6 ರೂ. ನಷ್ಟು ಕಡಿಮೆ ಹಣವನ್ನು ಠೇವಣಿ ಮಾಡಬಹುದು. ಮಗುವಿನ ಅಕಾಲಿಕ ಅಥವಾ ದುರದೃಷ್ಟಕರ ಮರಣದ ಸಂದರ್ಭದಲ್ಲಿ ನಾಮನಿರ್ದೇಶಿತ ಫಲಾನುಭವಿಗೆ ಒಟ್ಟು 1 ಲಕ್ಷ ರೂ. ಪರಿಹಾರ ವಿಮೆ ದೊರೆಯುವುದು. ಶಿಕ್ಷಣ ಶುಲ್ಕ ಕಟ್ಟುವ ಸಂದರ್ಭದಲ್ಲೂ ಇದು ನೆರವಾಗುತ್ತದೆ. ಪಾಲಿಸಿ ಅವಧಿ ಮುಗಿದ ಬಳಿಕವೂ 1 ಲಕ್ಷ ರೂ. ಸಿಗುತ್ತದೆ. ಪೋಷಕರು ಗರಿಷ್ಠ ಇಬ್ಬರು ಮಕ್ಕಳಿಗೆ ಈ ವಿಮೆ ಮಾಡಿಸಬಹುದು.

ಬಾಲ ಜೀವನ್ ವಿಮಾ ಯೋಜನೆಯು 5ರಿಂದ 20 ವರ್ಷ ವಯಸ್ಸಿನ ಮಕ್ಕಳಿಗೆ ನೀಡಲಾಗುತ್ತದೆ. 20 ವರ್ಷ ವಯಸ್ಸಿನವರೆಗೆ ಇದು ಅವರಿಗೆ ಆರ್ಥಿಕ ಭದ್ರತೆಯನ್ನು ಒದಗಿಸುತ್ತದೆ. ಈ ಯೋಜನೆಯ ಗಮನಾರ್ಹ ವೈಶಿಷ್ಟ್ಯವೆಂದರೆ ಕೈಗೆಟುಕುವಿಕೆ ದರದಲ್ಲಿ ಇದನ್ನು ಪ್ರಾರಂಭಿಸಬಹುದು. ತ್ರೈಮಾಸಿಕ, ಅರ್ಧ ವಾರ್ಷಿಕ ಮತ್ತು ವಾರ್ಷಿಕವಾಗಿ ಪ್ರೀಮಿಯಂ ಕಟ್ಟಬಹುದು.

ಏನು ಲಾಭ?

ಪ್ರತಿನಿತ್ಯ 6 ರೂ. ನಂತೆ ಹೂಡಿಕೆ ಮಾಡಿ ಇದನ್ನು ಪ್ರಾರಂಭಿಸಬಹುದು. 20 ವರ್ಷಕ್ಕಿಂತ ಮೊದಲು ವಿಮೆ ಮಾಡಲಾದ ಮಗುವಿನ ಯಾವುದೇ ಕಾರಣದಿಂದ ಮೃತಪಟ್ಟರೆ 1 ಲಕ್ಷ ರೂ. ವರೆಗೆ ವಿಮಾ ರಕ್ಷಣೆಯನ್ನು ಭರವಸೆ ನೀಡುತ್ತದೆ. ಮಗುವು 20 ವರ್ಷಗಳ ವಯಸ್ಸಿನ ಮಿತಿಯನ್ನು ದಾಟಿದ ಅನಂತರವೂ ಈ ಪ್ರಯೋಜನ ಪಡೆಯಬಹುದು. ಅದರ ಅನಂತರ ವಿಮೆ ಪಾವತಿಗೆ ಯಾವುದೇ ನಿಬಂಧನೆ ಇಲ್ಲ.

ಇದು ಮಗುವಿನ ಶಿಕ್ಷಣ ಅಥವಾ ಇತರ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದ ವೆಚ್ಚಗಳನ್ನು ಭರಿಸಲು ಸಹಾಯ ಮಾಡುತ್ತದೆ.

ಮಕ್ಕಳಲ್ಲಿ ಉಳಿತಾಯ ಮತ್ತು ಆರ್ಥಿಕ ಶಿಸ್ತನ್ನು ಉತ್ತೇಜಿಸಲು ಇದು ಸಹಾಯ ಮಾಡುತ್ತದೆ. ಖಾತೆಗೆ ನಿಯಮಿತ ಠೇವಣಿಗಳನ್ನು ಮಾಡುವ ಮೂಲಕ ಮಕ್ಕಳು ಚಿಕ್ಕ ವಯಸ್ಸಿನಲ್ಲೇ ಉಳಿತಾಯ ಮತ್ತು ಆರ್ಥಿಕ ಯೋಜನೆಗಳ ಮಹತ್ವವನ್ನು ಕಲಿಯುತ್ತಾರೆ.

ಅರ್ಜಿ ಸಲ್ಲಿಸುವುದು ಹೇಗೆ?

ಬಾಲ ಜೀವನ್ ವಿಮಾ ಯೋಜನೆಗೆ ಅರ್ಜಿ ಸಲ್ಲಿಸಲು ಪೋಷಕರು ತಮ್ಮ ಹತ್ತಿರದ ಅಂಚೆ ಕಚೇರಿಗೆ ಭೇಟಿ ನೀಡಿ ಅರ್ಜಿ ನಮೂನೆಯನ್ನು ಭರ್ತಿ ಮಾಡಬೇಕಾಗುತ್ತದೆ. ಫಾರ್ಮ್‌ ನಲ್ಲಿ ಹೆಸರು, ವಯಸ್ಸು ಮತ್ತು ವಿಳಾಸದಂತಹ ಮಗುವಿನ ಬಗ್ಗೆ ವಿವರಗಳು ಮತ್ತು ನಾಮನಿರ್ದೇಶಿತ ಫಲಾನುಭವಿಯ ವಿವರಗಳನ್ನು ಸಲ್ಲಿಸಬೇಕು. ಅರ್ಜಿದಾರರು ಗುರುತಿನ ಮತ್ತು ವಿಳಾಸದ ಪುರಾವೆಯನ್ನು ಸಹ ಒದಗಿಸಬೇಕಾಗುತ್ತದೆ.


ನಿಯಮ ಏನಿದೆ?

ಈ ಯೋಜನೆಯು ಪಾಲಿಸಿದಾರರ ಮಕ್ಕಳಿಗೆ ಜೀವ ವಿಮಾ ರಕ್ಷಣೆಯನ್ನು ಒದಗಿಸುತ್ತದೆ. ಪಾಲಿಸಿದಾರರ (ಪೋಷಕರ) ಗರಿಷ್ಠ ಇಬ್ಬರು 5 ರಿಂದ 20 ವರ್ಷದೊಳಗಿನ ಮಕ್ಕಳು ಅರ್ಹರಾಗಿರುತ್ತಾರೆ.
ಗರಿಷ್ಠ ವಿಮಾ ಮೊತ್ತ 1 ಲಕ್ಷ ರೂ. ಅಥವಾ ಪೋಷಕರ ವಿಮಾ ಮೊತ್ತಕ್ಕೆ ಸಮ. ಯಾವುದು ಕಡಿಮೆಯೋ ಅದು. ಪಾಲಿಸಿದಾರರ (ಪೋಷಕರು) 45 ವರ್ಷಕ್ಕಿಂತ ಮೇಲ್ಪಟ್ಟಿರಬಾರದು.
ಪಾಲಿಸಿದಾರರ (ಪೋಷಕರ) ಮರಣದ ಬಳಿಕ ಮಕ್ಕಳ ಪಾಲಿಸಿಗೆ ಯಾವುದೇ ಪ್ರೀಮಿಯಂ ಪಾವತಿಸಬೇಕಾಗಿಲ್ಲ. ಪೂರ್ಣ ವಿಮಾ ಮೊತ್ತ ಮತ್ತು ಸಂಚಿತ ಬೋನಸ್ ಅನ್ನು ಅವಧಿಯ ಪೂರ್ಣಗೊಂಡ ಅನಂತರ ಪಾವತಿಸಲಾಗುತ್ತದೆ
ಮಕ್ಕಳ ಪಾಲಿಸಿಯ ಪಾವತಿಗೆ ಪಾಲಿಸಿದಾರರು (ಪೋಷಕರು) ಜವಾಬ್ದಾರರಾಗಿರುತ್ತಾರೆ. ಯಾವುದೇ ಸಾಲವನ್ನು ಸ್ವೀಕರಿಸಲಾಗುವುದಿಲ್ಲ
5 ವರ್ಷಗಳ ಕಾಲ ನಿರಂತರವಾಗಿ ಪ್ರೀಮಿಯಂ ಪಾವತಿಸಿದರೆ ಅದನ್ನು ಪಾವತಿಸುವ ಸೌಲಭ್ಯವಿದೆ. ಪಾಲಿಸಿಯನ್ನು ಮಧ್ಯೆ ನಿಲ್ಲಿಸುವ ಸೌಲಭ್ಯವಿಲ್ಲ. ಅರ್ಜಿ ಸಲ್ಲಿಸಲು ಮಗುವಿನ ವೈದ್ಯಕೀಯ ಪರೀಕ್ಷೆ ಅಗತ್ಯವಿಲ್ಲ. ಆದರೂ ಮಗು ಆರೋಗ್ಯವಾಗಿರಬೇಕು. ಪ್ರಸ್ತಾಪವನ್ನು ಸ್ವೀಕರಿಸಿದ ದಿನದಿಂದ ರಿಸ್ಕ್ ಕವರ್ ಪ್ರಾರಂಭವಾಗುತ್ತದೆ. ಬೋನಸ್ ದರವು ಪ್ರತಿ ವರ್ಷಕ್ಕೆ 1000 ರೂ. ಗೆ 48 ರೂ. ಆಗಿರುತ್ತದೆ.

ಇದನ್ನೂ ಓದಿ: Money Guide: ಎಫ್‌ಡಿಯಲ್ಲಿ ಹೂಡಿಕೆ ಮಾಡುವ ಮುನ್ನ ವಿವಿಧ ಬ್ಯಾಂಕ್‌ಗಳ ಬಡ್ಡಿದರ ಪರಿಶೀಲಿಸಿ

ಯಾರು ಅರ್ಜಿ ಸಲ್ಲಿಸಬಹುದು?

ಬಾಲ ಜೀವನ್ ವಿಮಾ ಯೋಜನೆಯು 5 ರಿಂದ 20 ವರ್ಷದೊಳಗಿನ ಮಕ್ಕಳಿಗಾಗಿ. ಹೀಗಾಗಿ ಅರ್ಜಿ ನೀಡುವ ಸಮಯದಲ್ಲಿ ಮಗುವಿನ ವಯಸ್ಸನ್ನು ಪರಿಗಣಿಸಲಾಗುತ್ತದೆ ಮತ್ತು ಮಗುವಿಗೆ 20 ವರ್ಷ ತುಂಬುವವರೆಗೆ ವಿಮಾ ರಕ್ಷಣೆಯನ್ನು ಒದಗಿಸಲಾಗುತ್ತದೆ.

ಪೋಷಕರು ತಮ್ಮ 10 ವರ್ಷದ ಮಗುವಿಗೆ ಬಾಲ ಜೀವನ್ ವಿಮಾ ಯೋಜನೆಗೆ ಸೇರಿಸಲು ಬಯಸಿದರೆ ಪೋಷಕರು ತಮ್ಮ ಹತ್ತಿರದ ಅಂಚೆ ಕಚೇರಿಗೆ ಭೇಟಿ ನೀಡಬಹುದು. ಅರ್ಜಿ ನಮೂನೆಯನ್ನು ಭರ್ತಿ ಮಾಡಿ ದಿನಕ್ಕೆ 6 ರೂ.ಗಳ ಠೇವಣಿಗಳನ್ನು ಮಾಡಲು ಪ್ರಾರಂಭಿಸಬಹುದು.

Continue Reading

ಮನಿ-ಗೈಡ್

Money Guide: ಎನ್‌ಪಿಎಸ್‌ಗೆ 15 ವರ್ಷ; ಇಲ್ಲಿದೆ ಯೋಜನೆಯ ಸಂಪೂರ್ಣ ವಿವರ

Money Guide: ದೇಶದ ಜನರಲ್ಲಿನ ಉಳಿತಾಯ ಪ್ರವೃತ್ತಿಯನ್ನು ಉತ್ತೇಜಿಸಲು ಸರ್ಕಾರ ಜಾರಿಗೆ ತಂದ ಯೋಜನೆಗಳಲ್ಲಿ ರಾಷ್ಟ್ರೀಯ ಪಿಂಚಣಿ ಯೋಜನೆ ಕೂಡ ಒಂದು. 18ರಿಂದ 70 ವರ್ಷ ವಯಸ್ಸಿನವರು ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಜತೆಗೆ ಇದರಲ್ಲಿ ಹೂಡಿಕೆ ಮಾಡಿದರೆ ಹಲವು ರೀತಿಯ ತೆರಿಗೆ ಪ್ರಯೋಜನಗಳೂ ಲಭ್ಯ. ಇಂತಹ ಅತ್ಯುತ್ತಮ ಯೋಜನೆ ಜಾರಿಗೆ ಬಂದು ಇಂದಿಗೆ 15 ವರ್ಷ ಪೂರ್ಣಗೊಂಡಿದೆ. ಈ ಯೋಜನೆ ಕುರಿತಾದ ಕೆಲವು ಆಸಕ್ತಿದಾಯಕ ಸಂಗತಿಗಳ ವಿವರ ಇಲ್ಲಿದೆ

VISTARANEWS.COM


on

Money Guide
Koo

ಬೆಂಗಳೂರು: ದೇಶದ ಜನರಲ್ಲಿನ ಉಳಿತಾಯ ಪ್ರವೃತ್ತಿಯನ್ನು ಉತ್ತೇಜಿಸಲು ಸರ್ಕಾರ ಜಾರಿಗೆ ತಂದ ಯೋಜನೆಗಳಲ್ಲಿ ರಾಷ್ಟ್ರೀಯ ಪಿಂಚಣಿ ಯೋಜನೆ (NPS) ಕೂಡ ಒಂದು. 18ರಿಂದ 70 ವರ್ಷ ವಯಸ್ಸಿನವರು ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಜತೆಗೆ ಇದರಲ್ಲಿ ಹೂಡಿಕೆ ಮಾಡಿದರೆ ಹಲವು ರೀತಿಯ ತೆರಿಗೆ ಪ್ರಯೋಜನಗಳೂ ಲಭ್ಯ. ಇಂತಹ ಅತ್ಯುತ್ತಮ ಯೋಜನೆ ಜಾರಿಗೆ ಬಂದು ಇಂದಿಗೆ 15 ವರ್ಷ ಪೂರ್ಣಗೊಂಡಿದೆ. 2009ರ ಮೇ 1ರಂದು ಈ ಯೋಜನೆಯನ್ನು ದೇಶದಲ್ಲಿ ಜಾರಿಗೊಳಿಸಲಾಯಿತು. ಈ ಯೋಜನೆ ಕುರಿತಾದ ಕೆಲವು ಆಸಕ್ತಿದಾಯಕ ಸಂಗತಿಗಳ ವಿವರ ಇಲ್ಲಿದೆ (Money Guide).

ಭಾರತ ಸರ್ಕಾರ 2004ರ ಜನವರಿ 1ರಂದು ಎನ್‌ಪಿಎಸ್‌ ಅನ್ನು ಪರಿಚಯಿಸಿತು ಮತ್ತು ಐದು ವರ್ಷಗಳ ನಂತರ (2009) ಅದನ್ನು ಸಾರ್ವಜನಿಕರಿಗಾಗಿ ಮುಕ್ತಗೊಳಿಸಲಾಯಿತು. ಈ ಯೋಜನೆಯು ಭಾರತದ ನಾಗರಿಕರಿಗೆ ವೃದ್ಧಾಪ್ಯದ ಭದ್ರತೆಯಾಗಿ ಪಿಂಚಣಿ ಮತ್ತು ಹೂಡಿಕೆಯನ್ನು ಒದಗಿಸುವ ಗುರಿಯನ್ನು ಹೊಂದಿದೆ. ಇದನ್ನು ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (PFRDA) ನಿಯಂತ್ರಿಸುತ್ತದೆ.

ಯಾರೆಲ್ಲ ಅರ್ಹರು?

ಭಾರತೀಯ ಮತ್ತು ಆನಿವಾಸಿ ಭಾರತೀಯ ನಾಗರಿಕರು ಈ ಯೋಜನೆಯಲ್ಲಿ ಹೀಡಿಕೆ ಮಾಡಬಹುದಾಗಿದೆ. 18ರಿಂದ 70 ವರ್ಷದವರು ಈ ಯೋಜನೆಗೆ ಅರ್ಹರು. ವೃದ್ಧಾಪ್ಯ ಆದಾಯವನ್ನು ಒದಗಿಸುವುದು, ದೀರ್ಘಾವಧಿಯಲ್ಲಿ ಮಾರುಕಟ್ಟೆ ಆಧಾರಿತ ಆದಾಯ ನೀಡುವುದು ಮತ್ತು ಎಲ್ಲ ನಾಗರಿಕರಿಗೆ ವೃದ್ಧಾಪ್ಯ ಭದ್ರತಾ ವ್ಯಾಪ್ತಿಯನ್ನು ವಿಸ್ತರಿಸುವುದು ಕೂಡ ಈ ಯೋಜನೆಯ ಉದ್ದೇಶ.

ಎನ್‌ಆರ್‌ಐ ಕೂಡ ಹೂಡಿಕೆ ಮಾಡಬಹುದೆ?

ವಿಶೇಷ ಎಂದರೆ ಆನಿವಾಸಿ ಭಾರತೀಯರು ಕೂಡ ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಅದಾಗ್ಯೂ ಆರ್‌ಬಿಐ ಮತ್ತು ಫೆಮಾ ಸೂಚಿಸುವ ಷರತ್ತುಗಳು ಅನ್ವಯವಾಗುತ್ತವೆ. ಇನ್ನು ಒಸಿಐ (ಓವರ್‌ಸೀಸ್‌ ಸಿಟಿಜನ್ಸ್ ಆಫ್ ಇಂಡಿಯಾ) ಮತ್ತು ಪಿಐಒ (ಪರ್ಸನ್ ಆಫ್ ಇಂಡಿಯನ್ ಒರಿಜಿನ್) ಕಾರ್ಡ್ ಹೊಂದಿರುವವರು ಈ ಯೋಜನೆಗೆ ಅರ್ಹರಲ್ಲ.

ಎನ್‌ಪಿಎಸ್‌ ಖಾತೆ ತೆರೆಯುವುದು ಹೇಗೆ?

ಆಫ್‌ಲೈನ್‌

  • ನಿಮ್ಮ ಮನೆ ಹತ್ತಿರದ ಪಿಒಪಿ (PoP) ಅಥವಾ ಪೋಸ್ಟ್‌ ಆಫೀಸ್‌ಗೆ ತೆರಳಿ.
  • ಅಪ್ಲಿಕೇಷನ್‌ ಫಾರಂ ಭರ್ತಿ ಮಾಡಿ.
  • ಅಗತ್ಯ ಡಾಕ್ಯುಮೆಂಟ್‌ ಒದಗಿಸಿ.
  • ಟೈರ್‌ 1 ಖಾತೆಗೆ ಕನಿಷ್ಠ 500 ರೂ. ಹೂಡಿಕೆ ಮಾಡಿ.
  • ಅಪ್ಲಿಕೇಷನ್‌ ಫಾರಂ ಸಲ್ಲಿಸಿ.

ಆನ್‌ಲೈನ್‌

  • ಇಲ್ಲಿ ಕ್ಲಿಕ್‌ ಮಾಡಿ
  • ಹೆಸರು ನೋಂದಾಯಿಸಿ.
  • ಮೊಬೈಲ್‌ ನಂಬರ್‌, ಪ್ಯಾನ್‌ ಕಾರ್ಡ್‌ ನಂಬರ್‌ ಮತ್ತು ಇಮೇಲ್‌ ಐಡಿ ನಮೂದಿಸಿ.
  • ಮೊಬೈಲ್‌ಗೆ ಬಂದ ಒಟಿಪಿ ನಮೂದಿಸಿ.
  • ಅಗತ್ಯ ವಿವರಗಳನ್ನು ಭರ್ತಿ ಮಾಡಿ. ಈಗ ನಿಮಗೆ PRAN (Permanent Retirement Account Number) ಸಂಖ್ಯೆ ದೊರೆಯುತ್ತದೆ. ಇದನ್ನು ಬಳಸಿ ಲಾಗಿನ್‌ ಆಗಬಹುದು.

ಯಾವೆಲ್ಲ ದಾಖಲೆ ಅಗತ್ಯ?

  • ಇತ್ತೀಚಿನ ಭಾವಚಿತ್ರ
  • ಪ್ಯಾನ್‌ ಕಾರ್ಡ್‌
  • ವಿಳಾಸದ ಪುರಾವೆ
  • ಬ್ಯಾಂಕ್‌ ಅಕೌಂಟ್‌ ವಿವರ

ರಾಷ್ಟ್ರೀಯ ಪಿಂಚಣಿ ಯೋಜನೆಯಲ್ಲಿ ಹೂಡಿಕೆ ಮಾಡುವುದರಿಂದ ಸೆಕ್ಷನ್ 80C ಅಡಿಯಲ್ಲಿ ತೆರಿಗೆ ವಿನಾಯಿತಿ ಸೌಲಭ್ಯ ಸಿಗಲಿದೆ. ಈ ಯೋಜನೆಯಲ್ಲಿ ಗರಿಷ್ಠ 1.5 ಲಕ್ಷ ರೂಪಾಯಿವರೆಗಿನ ಹೂಡಿಕೆಗೆ ತೆರಿಗೆ ವಿನಾಯಿತಿ ಪಡೆಯಬಹುದು.

ಇದನ್ನೂ ಓದಿ: Money Guide: ನಿಮ್ಮ ಎನ್‌ಪಿಎಸ್‌ ಖಾತೆ ಸ್ಥಗಿತಗೊಂಡಿದ್ದರೆ ಚಿಂತಿಸಬೇಡಿ; ಮನೆಯಲ್ಲೇ ಕೂತು ಸಕ್ರಿಯಗೊಳಿಸುವ ವಿಧಾನ ಇಲ್ಲಿದೆ

Continue Reading

ಮನಿ ಗೈಡ್

EPF Withdraw Rule: ಪಿಎಫ್‌ ಮುಂಗಡ ಹಣ ಪಡೆಯುವುದು ಈಗ ಮತ್ತಷ್ಟು ಸುಲಭ; ಹೊಸ ಬದಲಾವಣೆಯ ಸಂಪೂರ್ಣ ಮಾಹಿತಿ

ಉದ್ಯೋಗಿಗಳ ಭವಿಷ್ಯ ನಿಧಿ ಹೊಂದಿರುವ ಸದಸ್ಯರಿಗೆ ಇಲ್ಲಿದೆ ಗುಡ್ ನ್ಯೂಸ್. ಶಿಕ್ಷಣ, ಮದುವೆ ಮತ್ತು ವಸತಿಗಾಗಿ ಪಿಎಫ್ ನಿಂದ ಮುಂಗಡ ಹಣವನ್ನು ಪಡೆಯುವುದು ಈಗ ಸುಲಭವಾಗಿದೆ. ಈ ಬಗ್ಗೆ ನಿಯಮಗಳು (EPF Withdraw Rule) ಏನು ಹೇಳಿವೆ ಗೊತ್ತೇ? ಈ ಕುರಿತ ಉಪಯುಕ್ತ ಮಾಹಿತಿ ಇಲ್ಲಿದೆ.

VISTARANEWS.COM


on

By

EPF Withdrawal Rule
Koo

ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPF Withdraw Rule) ಶಿಕ್ಷಣ, ಮದುವೆ ಮತ್ತು ವಸತಿಗೆ ಸಂಬಂಧಿಸಿ ಮುಂಗಡ ಕ್ಲೈಮ್‌ಗಳಿಗಾಗಿ (advance claims) ಸ್ವಯಂ-ಮೋಡ್ ಸೆಟಲ್‌ಮೆಂಟ್ (auto-mode settlement ) ಅನ್ನು ಪರಿಚಯಿಸುವುದಾಗಿ ಘೋಷಿಸಿದೆ. ಈ ವ್ಯವಸ್ಥೆಯಲ್ಲಿ ಯಾರದೇ ಹಸ್ತಕ್ಷೇಪವಿಲ್ಲದೆ ಕಾರ್ಮಿಕರು ತಮ್ಮ ಹಕ್ಕುಗಳನ್ನು ಪಡೆಯಬಹುದು ಎಂದು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ ಹೇಳಿಕೆಯ ಪ್ರಕಾರ, ಅನಿರುದ್ಧ್ ಪ್ರಸಾದ್ ಎಂಬುವರು 2024ರ ಮೇ 9ರಂದು ಪ್ಯಾರಾ 68J ಅಡಿಯಲ್ಲಿ ಅನಾರೋಗ್ಯಕ್ಕಾಗಿ ಮುಂಗಡವಾಗಿ ಅರ್ಜಿ ಸಲ್ಲಿಸಿದ್ದರು. ಅವರ ಮುಂಗಡ ಕ್ಲೈಮ್ ಅನ್ನು 2024ರ ಮೇ 11 ರಂದು 92,143 ರೂ. ಅನ್ನು ಮೂರು ದಿನಗಳ ಒಳಗೆ ಇತ್ಯರ್ಥಪಡಿಸಲಾಗಿದೆ. ಇಂತಹ ಹಲವು ಮಂದಿ ಇಪಿಎಫ್‌ಒನಲ್ಲಿ ಮುಂಗಡ ಕ್ಲೈಮ್ ಪಾವತಿಯ ಪ್ರಯೋಜನವನ್ನು ಪಡೆದಿದ್ದಾರೆ.

ಇಪಿಎಫ್‌ಒ ಆಟೋ ಮೋಡ್ ಸೆಟಲ್ಮೆಂಟ್

ಅನಾರೋಗ್ಯದ ಕಾರಣಕ್ಕಾಗಿ ಮುಂಗಡ ಕ್ಲೈಮ್ ಮಾಡಲು 2020ರ ಏಪ್ರಿಲ್ ನಲ್ಲಿ ಕ್ಲೈಮ್ ಸೆಟ್ಲ್ ಮೆಂಟ್ ಸ್ವಯಂ ಮೋಡ್ ಅನ್ನು ಪರಿಚಯಿಸಲಾಯಿತು. ಈಗ ಈ ಮಿತಿಯನ್ನು 1 ಲಕ್ಷ ರೂ. ಗೆ ಹೆಚ್ಚಿಸಲಾಗಿದೆ. ಪ್ರಸಕ್ತ ವರ್ಷದಲ್ಲಿ ಸುಮಾರು 2.25 ಕೋಟಿ ಸದಸ್ಯರು ಈ ಸೌಲಭ್ಯದ ಲಾಭವನ್ನು ಪಡೆದುಕೊಳ್ಳುವ ನಿರೀಕ್ಷೆಯಿದೆ.

2023- 24ರ ಹಣಕಾಸು ವರ್ಷದಲ್ಲಿ ಇಪಿಎಫ್‌ಒ ಸುಮಾರು 4.45 ಕೋಟಿ ಕ್ಲೈಮ್‌ಗಳನ್ನು ಇತ್ಯರ್ಥಪಡಿಸಿದೆ. ಅದರಲ್ಲಿ ಶೇ. 60ಕ್ಕಿಂತ ಹೆಚ್ಚು ಮಂದಿ ಒಟ್ಟು 2.84 ಕೋಟಿ ಕ್ಲೈಮ್‌ಗಳು ಮುಂಗಡ ಕ್ಲೈಮ್‌ಗಳಾಗಿವೆ. ವರ್ಷದಲ್ಲಿ ಇತ್ಯರ್ಥವಾದ ಒಟ್ಟು ಮುಂಗಡ ಕ್ಲೇಮ್‌ಗಳಲ್ಲಿ ಸುಮಾರು 89.52 ಲಕ್ಷ ಕ್ಲೇಮ್‌ಗಳನ್ನು ಇತ್ಯರ್ಥಗೊಳಿಸಲಾಗಿದೆ.

ಪಿಎಫ್ ಹಿಂಪಡೆಯುವುದು ಹೇಗೆ?

ಇಪಿಎಫ್ ಸದಸ್ಯರು ನಿಯಮ 68J ಅಡಿಯಲ್ಲಿ ವೈದ್ಯಕೀಯ ಕಾಯಿಲೆಗಳಿಗೆ ಇಪಿಎಫ್ ಹಿಂತೆಗೆದುಕೊಳ್ಳುವಿಕೆಗೆ ಅನ್ವಯಿಸಲು ನಿಯಮಗಳನ್ನು ತಿಳಿದಿರಬೇಕು, ನಿಯಮ 68K ಅಡಿಯಲ್ಲಿ ಮದುವೆ ಅಥವಾ ಉನ್ನತ ಶಿಕ್ಷಣ ಮತ್ತು ನಿಯಮ 68B ಅಡಿಯಲ್ಲಿ ವಸತಿ ಸೌಲಭ್ಯಕ್ಕಾಗಿ ಮುಂಗಡವನ್ನು ಪಡೆಯಬಹುದು.

ನಿಯಮ 68 ಜೆ

ಇಪಿಎಫ್ ಸದಸ್ಯರು ಉದ್ಯೋಗದಾತ ಅಥವಾ ವೈದ್ಯರಿಂದ ಸಹಿ ಮಾಡಿದ ಪ್ರಮಾಣಪತ್ರವನ್ನು ಸಲ್ಲಿಸಬೇಕಾಗುತ್ತದೆ. ವೈದ್ಯಕೀಯ ಕ್ಲೈಮ್‌ಗಾಗಿ, ಇಪಿಎಫ್ ಯೋಜನೆಗೆ ಎಷ್ಟು ವರ್ಷಗಳವರೆಗೆ ಅನ್ವಯಿಸಲಾಗಿದೆ ಎಂಬ ನಿಯಮವಿಲ್ಲ.

ಇದನ್ನೂ ಓದಿ: Money Guide: ಎಫ್‌ಡಿಯಲ್ಲಿ ಹೂಡಿಕೆ ಮಾಡುವ ಮುನ್ನ ವಿವಿಧ ಬ್ಯಾಂಕ್‌ಗಳ ಬಡ್ಡಿದರ ಪರಿಶೀಲಿಸಿ

ನಿಯಮ 68K

ಮದುವೆ ಅಥವಾ ಉನ್ನತ ಶಿಕ್ಷಣದ ಉದ್ದೇಶಗಳಿಗಾಗಿ ಪಿಎಫ್ ಹಣವನ್ನು ಹಿಂಪಡೆಯಲು ಇಪಿಎಫ್ ಸದಸ್ಯರು ಇಪಿಎಫ್‌ಒನೊಂದಿಗೆ 7 ವರ್ಷಗಳನ್ನು ಪೂರ್ಣಗೊಳಿಸಬೇಕು. ಇಪಿಎಫ್ ಸದಸ್ಯರು ಅದನ್ನು ಆನ್‌ಲೈನ್ ಸ್ವರೂಪದಲ್ಲಿ ಘೋಷಿಸಬೇಕಾಗುತ್ತದೆ. ಆದ್ದರಿಂದ ಅವರು ತಮ್ಮ ಷೇರಿನ ಗರಿಷ್ಠ ಶೇ. 50ರಷ್ಟನ್ನು ಬಡ್ಡಿಯೊಂದಿಗೆ ಹಿಂತೆಗೆದುಕೊಳ್ಳಬಹುದು.

ನಿಯಮ 68B

ಫ್ಲಾಟ್/ಮನೆಯನ್ನು ಖರೀದಿಸಲು ಅಥವಾ ನಿರ್ಮಿಸಲು, ಇಪಿಎಫ್ ಸದಸ್ಯರು ಇಪಿಎಫ್‌ಒನೊಂದಿಗೆ ಐದು ವರ್ಷಗಳನ್ನು ಪೂರ್ಣಗೊಳಿಸಬೇಕು. ಇಪಿಎಫ್‌ಒ ಮನೆಯ ದುರಸ್ತಿ ಮತ್ತು ನವೀಕರಣಕ್ಕಾಗಿ ಮುಂಗಡ ಹಿಂತೆಗೆದುಕೊಳ್ಳುವಿಕೆಯನ್ನು ಸಹ ಅನುಮತಿಸುತ್ತದೆ. ಇದನ್ನು ಎರಡು ಬಾರಿ ಮಾಡಬಹುದು. ಹಿಂಪಡೆಯಬಹುದಾದ ಮೊತ್ತವು ಉದ್ದೇಶವನ್ನು ಅವಲಂಬಿಸಿರುತ್ತದೆ. ಶೇ.90ರವರೆಗೂ ಹಣ ಹಿಂಪಡೆಯಲು ಸಾಧ್ಯ.

Continue Reading

ಮನಿ-ಗೈಡ್

Money Guide: ಪ್ಯಾನ್‌ ಕಾರ್ಡ್‌ ಕಳೆದುಹೋದರೆ ಚಿಂತೆ ಬೇಡ; ಮನೆಯಲ್ಲೇ ಕೂತು ಡುಪ್ಲಿಕೇಟ್‌ ಪಡೆಯುವ ವಿಧಾನ ಇಲ್ಲಿದೆ

Money Guide: ನಮ್ಮ ಆರ್ಥಿಕ ಚಟುವಟಿಕೆಗೆ ಪ್ಯಾನ್‌ ನಂಬರ್‌ ಕಡ್ಡಾಯಗೊಳಿಸಲಾಗಿದೆ. ಅಂದರೆ ಪ್ಯಾನ್‌ ಕಾರ್ಡ್ ಇಲ್ಲದೆ ಇನ್‌ಕಮ್‌ ಟ್ಯಾಕ್ಸ್, ಬ್ಯಾಂಕಿನ ವಹಿವಾಟನ್ನು ನಡೆಸಲು ಸಾಧ್ಯವಾಗುವುದಿಲ್ಲ. ಹಾಗಾದರೆ ಆಕಸ್ಮಿಕವಾಗಿ ಪ್ಯಾನ್‌ ಕಾರ್ಡ್‌ ಕಳೆದು ಹೋದರೆ ಏನು ಮಾಡಬೇಕು? ಮರಳಿ ಪಡೆಯುವುದು ಹೇಗೆ? ಡುಬ್ಲಿಕೇಟ್‌ ಕಾರ್ಡ್‌ಗೆ ಆನ್‌ಲೈನ್‌ನಲ್ಲೇ ಹೇಗೆ ಅಪ್ಲೈ ಮಾಡಬಹುದು? ಮುಂತಾದ ನಿಮ್ಮ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.

VISTARANEWS.COM


on

Money Guide
Koo

ಬೆಂಗಳೂರು: ಕೇಂದ್ರ ಸರ್ಕಾರವು ನಾಗರಿಕರಿಗೆ ಹಲವು ರೀತಿಯ ದಾಖಲೆಗಳನ್ನು ನೀಡಿದೆ. ಇವುಗಳಲ್ಲಿ ಆಧಾರ್ ಕಾರ್ಡ್, ವೋಟರ್ ಐಡಿ ಹಾಗೂ ಪ್ಯಾನ್ ಕಾರ್ಡ್ ಮುಖ್ಯವಾದುದು. ಹಣ ವರ್ಗಾವಣೆಯಿಂದ ಹಿಡಿದು ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಈ ದಾಖಲೆಗಳು ಅಗತ್ಯ. ಅದರಲ್ಲೂ ನಮ್ಮ ಆರ್ಥಿಕ ಚಟುವಟಿಕೆಗೆ ಪ್ಯಾನ್‌ ನಂಬರ್‌ (Permanent Account Number) ಕಡ್ಡಾಯಗೊಳಿಸಲಾಗಿದೆ. ಅಂದರೆ ಪ್ಯಾನ್‌ ಕಾರ್ಡ್ ಇಲ್ಲದೆ ಇನ್‌ಕಮ್‌ ಟ್ಯಾಕ್ಸ್, ಬ್ಯಾಂಕಿನ ವಹಿವಾಟನ್ನು ನಡೆಸಲು ಸಾಧ್ಯವಾಗುವುದಿಲ್ಲ. ಹಾಗಾದರೆ ಆಕಸ್ಮಿಕವಾಗಿ ಪ್ಯಾನ್‌ ಕಾರ್ಡ್‌ ಕಳೆದು ಹೋದರೆ ಏನು ಮಾಡಬೇಕು? ಮರಳಿ ಪಡೆಯುವುದು ಹೇಗೆ? ಡುಬ್ಲಿಕೇಟ್‌ ಕಾರ್ಡ್‌ಗೆ ಆನ್‌ಲೈನ್‌ನಲ್ಲೇ ಹೇಗೆ ಅಪ್ಲೈ ಮಾಡಬಹುದು? ಮುಂತಾದ ನಿಮ್ಮ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ (Money Guide).

ಮೊದಲು ಏನು ಮಾಡಬೇಕು?

ನಿಮ್ಮ ಪ್ಯಾನ್‌ ಕಾರ್ಡ್‌ ಕಳೆದುಹೋಗಿದ್ದರೆ ಅಥವಾ ಕಳವಾಗಿದ್ದರೆ ಮೊದಲು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಬೇಕು. ಇದರಿಂದ ಬೇರೆಯವರು ನಿಮ್ಮ ಪ್ಯಾನ್ ಕಾರ್ಡ್ ದುರ್ಬಳಕೆ ಮಾಡದಂತೆ ತಡೆಯಲು ಸಾಧ್ಯವಾಗುತ್ತದೆ. ಇತ್ತೀಚೆಗೆ ಪ್ಯಾನ್ ಕಾರ್ಡ್ ದುರ್ಬಳಕೆ ಪ್ರಕರಣಗಳು ಹೆಚ್ಚುತ್ತಿರುವುದುರಿಂದ ಈ ಬಗ್ಗೆ ಸಾಕಷ್ಟು ಎಚ್ಚರಿಕೆ ವಹಿಸಬೇಕು ಎಂದು ಆದಾಯ ತೆರಿಗೆ ಇಲಾಖೆ ಸೂಚಿಸಿದೆ. ಬಳಿಕ ನಕಲಿ ಪ್ಯಾನ್‌ ಕಾರ್ಡ್‌ಗೆ ಅಪ್ಲೈ ಮಾಡಬಹುದು. ನಕಲಿ ಪ್ಯಾನ್‌ ಕಾರ್ಡ್‌ನ ಅನುಕೂಲವೆಂದರೆ ನಿಮಗೆ ಹಳೆ ನಂಬರ್ ಸಿಗಲಿದೆ. ಅದು ನಿಮ್ಮ ಕಳೆದು ಹೋದ ಪಾನ್ ಕಾರ್ಡ್‌ನ ನಕಲಿಯಾಗಿರುತ್ತದೆ.

ಆನ್‌ಲೈನ್‌ನಲ್ಲಿ ಡುಬ್ಲಿಕೇಟ್‌ ಪ್ಯಾನ್‌ ಕಾರ್ಡ್‌ ಪಡೆಯುವ ರೀತಿ

  • ಡುಬ್ಲಿಕೇಟ್‌ ಪ್ಯಾನ್‌ ಕಾರ್ಡ್‌ ಅಪ್ಲಿಕೇಷನ್‌ ಪಡೆಯಲು ಇಲ್ಲಿ ಕ್ಲಿಕ್‌ ಮಾಡಿ.
  • ನಿಮ್ಮ ಪ್ಯಾನ್‌ ನಂಬರ್‌, ಆಧಾರ್‌ ನಂಬರ್‌ ಮತ್ತು ಡೇಟ್‌ ಆಫ್‌ ಬರ್ತ್‌ ಕಾಲಂ ಭರ್ತಿ ಮಾಡಿ.
  • ಗಮನವಿಟ್ಟು ಷರತ್ತುಗಳನ್ನು ಓದಿ ಮನನ ಮಾಡಿಕೊಳ್ಳಿ.
  • ಕ್ಯಾಪ್ಚಾ ಕೋಡ್‌ ಭರ್ತಿ ಮಾಡಿ.
  • Submit ಬಟನ್‌ ಕ್ಲಿಕ್‌ ಮಾಡಿ.
  • ಈಗ ಹೊಸ ಪುಟ ತೆರೆದುಕೊಳ್ಳಲಿದ್ದು, ಅದರಲ್ಲಿ ನಿಮ್ಮ ಪ್ಯಾನ್‌ ಕಾರ್ಡ್‌ನ ವಿವರ ಕಂಡು ಬರುತ್ತದೆ.
  • ಪುಟದ ಕೆಳಗೆ ಕಂಡು ಬರುವ OTP on Email ID, Mobile Number ಆಯ್ಕೆಯನ್ನು ಸೆಲೆಕ್ಟ್‌ ಮಾಡಿ.
  • Generate OTP ಆಪ್ಶನ್‌ ಕ್ಲಿಕ್‌ ಮಾಡಿ.
  • ಒಟಿಪಿ ನಮೂದಿಸಿ Validate ಬಟನ್‌ ಆಯ್ಕೆ ಮಾಡಿ.

ಆಫ್‌ಲೈನ್‌ನಲ್ಲಿ ಡುಬ್ಲಿಕೇಟ್‌ ಪ್ಯಾನ್‌ ಕಾರ್ಡ್‌ ಪಡೆಯುವ ರೀತಿ

  • ಪ್ಯಾನ್ ಸೆಂಟರ್, ಐಟಿ ಪ್ಯಾನ್ ಸೇವಾ ಕೇಂದ್ರಕ್ಕೆ ತೆರಳಿ.
  • ‘Request for New PAN Changes or Correction in PAN Data’ ಅರ್ಜಿ ಪಡೆದು ಭರ್ತಿ ಮಾಡಿ.
  • ಗಮನಿಸಿ ಬ್ಲಾಕ್ ಲೆಟರ್‌ನಲ್ಲಿ, ಕಪ್ಪು ಶಾಹಿಯಲ್ಲಿ, ಆಂಗ್ಲ ಭಾಷೆಯಲ್ಲೇ ಫಾರ್ಮ್ ಭರ್ತಿ ಮಾಡಬೇಕು.
  • ಪ್ಯಾನ್ ಸಂಖ್ಯೆ ನಮೂದಿಸಿ. ಜತೆಗೆ ಇತ್ತೀಚಿನ ಛಾಯಾಚಿತ್ರ, ಸಹಿ ಅಗತ್ಯ.
  • ಬಳಿಕ ಅರ್ಜಿ ಸಲ್ಲಿಸಿ.

ಯಾವೆಲ್ಲ ದಾಖಲೆ ಅಗತ್ಯ?

  • ಐಡಿ ಪುರಾವೆ: ಆಧಾರ್, ವೋಟರ್ ಐಡಿ, ಡ್ರೈವಿಂಗ್ ಲೈಸೆನ್ಸ್, ಪಾಸ್‌ಪೋರ್ಟ್, ರೇಷನ್ ಕಾರ್ಡ್
  • ವಯಸ್ಸು ಪುರಾವೆ: ಜನನ ಪ್ರಮಾಣ ಪತ್ರ, ಪಿಂಚಣಿ ಪತ್ರ, ವಿವಾಹ ಪ್ರಮಾಣ ಪತ್ರ, ಪಾಸ್‌ಪೋರ್ಟ್, ಡ್ರೈವಿಂಗ್ ಲೈಸೆನ್ಸ್
  • ಅಫಿಡವೀತ್ ವಿಳಾಸ ಪುರಾವೆ: ಆಧಾರ್ ಕಾರ್ಡ್, ವೋಟರ್ ಐಡಿ, ಡ್ರೈವಿಂಗ್ ಲೈಸೆನ್ಸ್, ಪಾಸ್‌ಪೋರ್ಟ್, ರೇಷನ್ ಕಾರ್ಡ್, ಪಿಂಚಣಿ ಪತ್ರ

ಇದನ್ನೂ ಓದಿ: Money Guide: ನಿಮ್ಮ ಎನ್‌ಪಿಎಸ್‌ ಖಾತೆ ಸ್ಥಗಿತಗೊಂಡಿದ್ದರೆ ಚಿಂತಿಸಬೇಡಿ; ಮನೆಯಲ್ಲೇ ಕೂತು ಸಕ್ರಿಯಗೊಳಿಸುವ ವಿಧಾನ ಇಲ್ಲಿದೆ

Continue Reading
Advertisement
Konkani Book Release
ಕಲೆ/ಸಾಹಿತ್ಯ2 mins ago

Konkani Book Release: ಇಟಾಲಿಯನ್-ಬ್ರಿಟಿಷ್ ಲೇಖಕ ರಚಿಸಿರುವ ಜಿಎಸ್‌ಬಿ ಕೊಂಕಣಿ ಮಾರ್ಗದರ್ಶಿ ಕೃತಿ ಬಿಡುಗಡೆ

MLC Meeting
ರಾಜಕೀಯ10 mins ago

MLC Election: ಬೆಂಗಳೂರು ಪದವೀಧರ ಕ್ಷೇತ್ರದ ಚುನಾವಣಾ ಪೂರ್ವಸಿದ್ಧತೆ ಸಭೆ; ಬಿಜೆಪಿ ಅಭ್ಯರ್ಥಿ ಅ. ದೇವೇಗೌಡ ಗೆಲುವಿಗೆ ರಣತಂತ್ರ

Arvind Kejriwal
ದೇಶ15 mins ago

Arvind Kejriwal: ಅಬಕಾರಿ ಕೇಸ್‌: ಕೇಜ್ರಿವಾಲ್‌ಗೆ ಬಿಗ್ ಶಾಕ್; ಇ.ಡಿ ಚಾರ್ಜ್‌ಶೀಟ್‌ನಲ್ಲಿ ಇವರೇ ಆರೋಪಿ!

HD Revanna case Hearing in Holenarasipura sexual assault case adjourned to Monday
ಹಾಸನ51 mins ago

HD Revanna Case: ಹೊಳೆನರಸೀಪುರದ ಲೈಂಗಿಕ ದೌರ್ಜನ್ಯ ಕೇಸ್‌ ವಿಚಾರಣೆ ಸೋಮವಾರಕ್ಕೆ ಮುಂದೂಡಿಕೆ; ರೇವಣ್ಣಗೆ ಜೈಲಾ? ಬೇಲಾ?

Kanguva Film Suriya-Bobby Deol's war scene with 10,000 people
ಕಾಲಿವುಡ್54 mins ago

Kanguva Film: 10,000 ಜನರನ್ನು ಒಳಗೊಂಡಿತ್ತು ʻಕಂಗುವʼ ಚಿತ್ರದ ಸೂರ್ಯ-ಬಾಬಿ ಡಿಯೋಲ್‌ರ ಈ ದೃಶ್ಯ!

karnataka weather Forecast
ಮಳೆ56 mins ago

Karnataka Weather : ತುಮಕೂರಲ್ಲಿ ಸಿಡಿಲಿಗೆ ಜಾನುವಾರು ಬಲಿ; ಚಿಕ್ಕಮಗಳೂರಲ್ಲಿ ಮಳೆ ಅವಾಂತರಕ್ಕೆ ಜನ ತತ್ತರ

Narendra Modi
ದೇಶ57 mins ago

ಪಾಕ್‌ ಬಳಿ ಅಣು ಬಾಂಬ್‌ ಇದೆ, ಆದ್ರೆ, ಮೆಂಟೇನ್ ಮಾಡೋಕೂ ಅವರ ಬಳಿ ದುಡ್ಡಿಲ್ಲ ಎಂದ ಮೋದಿ; ಕಾಂಗ್ರೆಸ್‌ಗೆ ಚಾಟಿ

IPL 2024
ಪ್ರಮುಖ ಸುದ್ದಿ59 mins ago

IPL 2024 : ಆರ್​ಸಿಬಿ ವಿರುದ್ಧ ವೇಗದ ಬೌಲರ್​ ಕಣಕ್ಕೆ; ಚೆನ್ನೈ ತಂಡದಲ್ಲಿ ಸಂಭ್ರಮ

SubAir facility
ಕ್ರೀಡೆ1 hour ago

SubAir facility: ಸಬ್‌ ಏರ್‌ ಸಿಸ್ಟಮ್‌ ಹೇಗೆ ಕಾರ್ಯನಿರ್ವಹಿಸುತ್ತದೆ?; ಮಳೆ ನಿಂತು ಎಷ್ಟು ಗಂಟೆಯಲ್ಲಿ ಪಂದ್ಯ ಆರಂಭ?

Lokayukta Raid
ಕರ್ನಾಟಕ1 hour ago

Lokayukta Raid: ಲೋಕಾಯುಕ್ತ ದಾಳಿ; 30 ಸಾವಿರ ರೂ. ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಎಫ್‌ಡಿಎ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka weather Forecast
ಮಳೆ12 hours ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

Dina Bhavishya
ಭವಿಷ್ಯ13 hours ago

Dina Bhavishya : ಈ ರಾಶಿಯ ಪ್ರೇಮಿಗಳಿಗೆ ಮನೆಯಿಂದ ಸಿಗುತ್ತೆ ಗ್ರೀನ್‌ ಸಿಗ್ನಲ್‌

Karnataka Weather Forecast
ಮಳೆ1 day ago

Karnataka Weather : ಭಾರಿ ಮಳೆಗೆ ಕೊಟ್ಟೂರು ಬಸ್ ಸ್ಟ್ಯಾಂಡ್‌ ಜಲಾವೃತ; ‌ ತಾಯಿ-ಮಗ ಗ್ರೇಟ್‌ ಎಸ್ಕೇಪ್‌

Drowned in water
ಹಾಸನ1 day ago

Drowned in water : ಕೆರೆಯಲ್ಲಿ ಈಜಲು ಹೋದ ನಾಲ್ವರು ನೀರುಪಾಲು; ಓರ್ವ ಬಾಲಕ ಪಾರು

Suspicious Case
ಬೆಂಗಳೂರು1 day ago

Suspicious Case : ಬಾತ್‌ ರೂಂನಲ್ಲಿತ್ತು ಕಾಲೇಜು ಹುಡುಗಿ ಡೆಡ್‌ ಬಾಡಿ; ಕುತ್ತಿಗೆ ಕೊಯ್ದು ಸಾಯಿಸಿದವರು ಯಾರು?

Prajwal Revanna Case
ಕರ್ನಾಟಕ2 days ago

Prajwal Revanna Case: ಪ್ರಜ್ವಲ್‌ ರೇವಣ್ಣ ಇಂದೇ ಜರ್ಮನಿಯಿಂದ ಭಾರತಕ್ಕೆ? ಎಸ್‌ಐಟಿ ಅಲರ್ಟ್‌

Dina Bhavishya
ಭವಿಷ್ಯ3 days ago

Dina Bhavishya : ಭೂ ವ್ಯವಹಾರಕ್ಕೆ ಇದು ಸೂಕ್ತ ಸಮಯ; ವ್ಯಾಪಾರದಲ್ಲಿ ಡಬಲ್‌ ಲಾಭ

HD Revanna Released first reaction after release will be acquitted of all charges
ರಾಜಕೀಯ3 days ago

HD Revanna Released: ರಿಲೀಸ್‌ ಬಳಿಕ ರೇವಣ್ಣ ಫಸ್ಟ್‌ ರಿಯಾಕ್ಷನ್;‌ ನ್ಯಾಯಾಂಗದ ಮೇಲೆ ನಂಬಿಕೆ ಇದೆ; ಆರೋಪ ಮುಕ್ತನಾಗುವೆ

CM Siddaramaiah says Our government is stable for 5 years BJP will disintegrate
Lok Sabha Election 20243 days ago

CM Siddaramaiah: ನಮ್ಮ ಸರ್ಕಾರ 5 ವರ್ಷ ಸುಭದ್ರ; ಚುನಾವಣೆ ಬಳಿಕ ಬಿಜೆಪಿ ಛಿದ್ರ ಎಂದ ಸಿಎಂ ಸಿದ್ದರಾಮಯ್ಯ!

I dont want to go to other states for Lok Sabha Election 2024 campaign for Congress says CM Siddaramaiah
Lok Sabha Election 20243 days ago

CM Siddaramaiah: ಕಾಂಗ್ರೆಸ್‌ ಪರ ಬೇರೆ ರಾಜ್ಯಗಳಿಗೆ ಪ್ರಚಾರಕ್ಕೆ ಹೋಗಲು ನನಗೆ ಇಷ್ಟವಿಲ್ಲ: ಸಿಎಂ ಸಿದ್ದರಾಮಯ್ಯ!

ಟ್ರೆಂಡಿಂಗ್‌