Navaratri 2023: ನವರಾತ್ರಿಗೆ ಗೊಂಬೆ ತಿಂಡಿ ಮಾಡುತ್ತೀರಾ? ಇಲ್ಲಿವೆ 9 ಸಾಂಪ್ರದಾಯಿಕ ಪಾಕ! - Vistara News

ಆಹಾರ/ಅಡುಗೆ

Navaratri 2023: ನವರಾತ್ರಿಗೆ ಗೊಂಬೆ ತಿಂಡಿ ಮಾಡುತ್ತೀರಾ? ಇಲ್ಲಿವೆ 9 ಸಾಂಪ್ರದಾಯಿಕ ಪಾಕ!

ನವರಾತ್ರಿಯ (Navaratri 2023) ಗೊಂಬೆಗಳನ್ನು ನೋಡುವುದಕ್ಕೆಂದೇ ಗೊಂಬೆಗಳಂತೆ ಅಲಂಕರಿಸಿಕೊಂಡ ಮಕ್ಕಳು ಮನೆಮನೆಯ ಬಾಗಿಲು ತಟ್ಟುವ ಸಂಪ್ರದಾಯ ಈಗೆಲ್ಲ ಮರೆಯಾಗಿದೆ. ಆದರೂ, ಗೊಂಬೆ ದರ್ಶನಕ್ಕೆಂದು ಭೇಟಿ ನೀಡುವ ಬಂಧು-ಮಿತ್ರರಿಗೆ ಗೊಂಬೆ ತಿಂಡಿ ಕೊಡುವ ಪದ್ಧತಿ ಪೂರ್ಣ ಮರೆಯಾಗಿಲ್ಲ.

VISTARANEWS.COM


on

Navratri 2023 Special Sweets
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವರಾತ್ರಿಯ (Navaratri 2023) ಆಚರಣೆಯಲ್ಲಿ ಕರ್ನಾಟಕದ ಸಂಸ್ಕೃತಿಯಲ್ಲಿ ಹಾಸುಹೊಕ್ಕಾಗಿರುವ ಪದ್ಧತಿಯೆಂದರೆ ಗೊಂಬೆ ಕೂರಿಸುವುದು. ಪಟ್ಟದ ಗೊಂಬೆಗಳಿಂದ ಆರಂಭವಾಗಿ ಕಣ್ಮನ ಸೆಳೆಯುವಂಥ ಗೊಂಬೆ ಅಲಂಕಾರ ಮಾಡುವುದರ ಜೊತೆಗೆ, ಗೊಂಬೆ ನೋಡುವುದಕ್ಕೆ ಬಂದವರಿಗೆಲ್ಲಾ ಗೊಂಬೆ ತಿಂಡಿ ನೀಡುವ ಪದ್ಧತಿಯೂ ಇದೆ. ನವರಾತ್ರಿಯ ಗೊಂಬೆಗಳನ್ನು ನೋಡುವುದಕ್ಕೆಂದೇ ಗೊಂಬೆಗಳಂತೆ ಅಲಂಕರಿಸಿಕೊಂಡ ಮಕ್ಕಳು ಮನೆಮನೆಯ ಬಾಗಿಲು ತಟ್ಟುವ ಸಂಪ್ರದಾಯ ಈಗೆಲ್ಲ ಮರೆಯಾಗಿದೆ. ಆದರೂ, ಗೊಂಬೆ ದರ್ಶನಕ್ಕೆಂದು ಭೇಟಿ ನೀಡುವ ಬಂಧು-ಮಿತ್ರರಿಗೆ ಗೊಂಬೆ ತಿಂಡಿ ಕೊಡುವ ಪದ್ಧತಿ ಪೂರ್ಣ ಮರೆಯಾಗಿಲ್ಲ. ನವರಾತ್ರಿಯ ಒಂಬತ್ತು ದಿನಗಳು ವ್ರತ, ಉಪವಾಸ ಮಾಡುವ ಸಂಪ್ರದಾಯವೂ ಇದೆ. ಹೀಗೆ ಉಪವಾಸದಲ್ಲಿರುವವರು ಈರುಳ್ಳಿ, ಬೆಳ್ಳುಳ್ಳಿ ರಹಿತವಾದ ಅಡುಗೆ ಮಾಡುವುದು ಸಾಮಾನ್ಯ. ಹೀಗೆ ನವರಾತ್ರಿಯ ಆಚರಣೆಗೆ ಪೂರಕವಾಗುವಂಥ, ಗೊಂಬೆ ತಿಂಡಿಗಳಿಗೆ ಒದಗುವಂಥ, ಉಪವಾಸಕ್ಕೂ ಸಲ್ಲುವಂತೆ, ಒಂಬತ್ತು ದಿನಕ್ಕೆ ಒಂಬತ್ತು ಸಾಂಪ್ರದಾಯಿಕ ಪಾಕಗಳು ಇಲ್ಲಿವೆ.

Coconut Barfi

ತೆಂಗಿನಕಾಯಿ ಬರ್ಫಿ

ಹೆಚ್ಚು ಹೊತ್ತು ಬೇಡದೆ, ದಿಢೀರನೆ ಮಾಡಲಾಗುವ ಸಿಹಿ ಖಾದ್ಯವಿದು. ಇದಕ್ಕೆ ಬೇಕಾಗುವ ವಸ್ತುಗಳು: ತೆಂಗಿನಕಾಯಿ ತುರಿ- 3 ಕಪ್‌, ಸಕ್ಕರೆ- 3 ಕಪ್‌, ಗೋಧಿ ಹಿಟ್ಟು- 2 ಚಮಚ, ತುಪ್ಪ- ಸ್ವಲ್ಪ, ಗೋಡಂಬಿ ಮತ್ತು ಏಲಕ್ಕಿ- ಸ್ವಲ್ಪ

ವಿಧಾನ: ಸಕ್ಕರೆ ಮುಳುಗುವಷ್ಟು ನೀರು ಹಾಕಿ ಪಾಕಕ್ಕಿಡಿ. ಮೂರೆಳೆ ಪಾಕ ಬರುತ್ತಿದ್ದಂತೆಯೇ ಇದಕ್ಕೆ ತೆಂಗಿನ ತುರಿ ಸೇರಿಸಿ, ಈ ಮಿಶ್ರಣ ಗಟ್ಟಿಯಾಗುತ್ತಿದ್ದಂತೆ ತುಪ್ಪ ಸೇರಿಸಿ ಮಗುಚುತ್ತಾ ಬನ್ನಿ, ಮಿಶ್ರಣ ಗಟ್ಟಿಯಾಗದಿದ್ದರೆ 2 ಚಮಚ ಗೋದಿಹಿಟ್ಟು ಸೇರಿಸಿ ಮಗುಚಿ. ಮಿಶ್ರಣ ತಳ ಬಿಡುವ ಮುನ್ನ ಗೋಡಂಬಿ, ಏಲಕ್ಕಿ ಪುಡಿ ಸೇರಿಸಿಕೊಳ್ಳಿ. ಇದಕ್ಕೆ ತುಪ್ಪ ಸವರಿದ ತಟ್ಟೆಗೆ ಹಾಕಿಕೊಂಡು ಮಟ್ಟ ಮಾಡಿಕೊಳ್ಳಿ. ಕೊಂಚ ಗಟ್ಟಿಯಾಗುತ್ತಿದ್ದಂತೆ ಬೇಕಾದ ಆಕಾರಕ್ಕೆ ಕತ್ತರಿಸಿ.

Dry fruits laddu

ಡ್ರೈ ಫ್ರೂಟ್ಸ್‌ ಲಡ್ಡು

ಇದನ್ನು ಮಾಡಿ ಡಬ್ಬಿ ತುಂಬಿಟ್ಟುಕೊಂಡರೆ, ನವರಾತ್ರಿಯ ಗೊಂಬೆ ತಿಂಡಿ ಮತ್ತು ಉಪವಾಸಕ್ಕೂ ಸಲ್ಲುವಂಥ ಆರೋಗ್ಯಕರ ತಿನಿಸಿದು. ಬೇಕಾಗುವ ವಸ್ತುಗಳು: ಗೋಡಂಬಿ- 50 ಗ್ರಾಂ, ಖರ್ಜೂರ- 50 ಗ್ರಾಂ, ಒಣದ್ರಾಕ್ಷಿ- 50 ಗ್ರಾಂ, ಪಿಸ್ತಾ- 50 ಗ್ರಾಂ, ಗಸಗಸೆ- 3 ಚಮಚ, ಏಲಕ್ಕಿ- ಸ್ವಲ್ಪ, ಬೆಲ್ಲ- 200 ಗ್ರಾಂ, ಒಣಕೊಬ್ಬರಿ- ಕಾಲು ಗಿಟುಕು

ವಿಧಾನ: ಎಲ್ಲಾ ಬೀಜ ಮತ್ತು ಒಣಹಣ್ಣುಗಳನ್ನು ಸಣ್ಣಗೆ ಕತ್ತರಿಸಿಕೊಳ್ಳಿ. ಎಲ್ಲವನ್ನೂ ಪ್ರತ್ಯೇಕವಾಗಿ ಬಿಸಿ ಮಾಡಿಕೊಳ್ಳಿ. ಬೆಲ್ಲವನ್ನು ಹದ ಪಾಕ ಮಾಡಿಕೊಳ್ಳಿ; ತೀರ ಗಟ್ಟಿಯೂ ಬೇಡ, ಎಳೆಪಾಕವೂ ಬೇಡ. ಪಾಕ ಬಂದ ನಂತರ ಹುರಿದಿಟ್ಟ ಎಲ್ಲಾ ವಸ್ತುಗಳನ್ನು ಒಟ್ಟಿಗೆ ಸೇರಿಸಿ ಮಗುಚಿಕೊಳ್ಳಿ. ಈ ಮಿಶ್ರಣ ಬೆಚ್ಚಗಿದ್ದಾಗಲೇ ಉಂಡೆ ಮಾಡಿ.

gasagase payasa

ಗಸಗಸೆ ಪಾಯಸ

ಹೊಟ್ಟೆಯನ್ನು ತಂಪಾಗಿಸಿ, ಸೊಂಪಾಗಿ ನಿದ್ದೆ ಬರಿಸುವಂಥ ಗಸಗಸೆ ಪಾಯಸವನ್ನು ಮಾಡುವುದು ಕಷ್ಟವಲ್ಲ. ಬೇಕಾಗುವ ವಸ್ತುಗಳು: ಗಸಗಸೆ- 1 ಕಪ್‌, ಅಕ್ಕಿ- 1 ಚಮಚ, ತೆಂಗಿನ ಕಾಯಿ- 1, ಏಲಕ್ಕಿ- ಸ್ವಲ್ಪ, ಬೆಲ್ಲ- 2 ಕಪ್‌

ವಿಧಾನ: ಗಸೆಗಸೆಯನ್ನು ಚೆನ್ನಾಗಿ ಹುರಿದುಕೊಳ್ಳಿ. ಅಕ್ಕಿಯನ್ನು ಎರಡು ತಾಸು ನೆನೆಸಿಡಿ. ಅಚ್ಚು ಬೆಲ್ಲವಾದರೆ ಪುಡಿ ಮಾಡಿಕೊಳ್ಳಿ. ತೆಂಗಿನ ಕಾಯಿ ತುರಿದು, ಮಿಕ್ಸಿಗೆ ಹಾಕಿ, ಅದರ ಹಾಲು ಹಿಂಡಿ ಇರಿಸಿಕೊಳ್ಳಿ. ಈಗ ಹುರಿದ ಗಸಗಸೆ, ಏಲಕ್ಕಿ, ನೆನೆಸಿ ಅಕ್ಕಿಯನ್ನು ಕಾಯಿ ಹಾಲಿನಲ್ಲಿ ನುಣ್ಣಗೆ ರುಬ್ಬಿಕೊಳ್ಳಿ. ಅಗತ್ಯವಿದ್ದರೆ ನೀರು ಸೇರಿಸಿ. ರುಬ್ಬಿದ ಈ ಮಿಶ್ರಣವನ್ನು ಬಾಣಲೆಗೆ ಹಾಕಿ ಕುದಿಸಿ. ಕುದಿ ಬರುವ ಮುನ್ನವೇ ಬೆಲ್ಲ ಸೇರಿಸಿ. ಬೆಲ್ಲ ಸೇರಿಸಿದ ಮೇಲೆ ಮಿಶ್ರಣ ಕುದಿಯಲಿ. ಇದೀಗ ಪಾಯಸದಂಥ ಖಾದ್ಯ ಸಿದ್ಧವಾಗುತ್ತದೆ. ಗಸಗಸೆಯನ್ನು ಖೀರಿನಂತೆ ಕುಡಿಯುವುದು ಇಷ್ಟವೆಂದರೆ ಕುದಿಯುವಾಗಲೇ ಅಗತ್ಯವಿದ್ದಷ್ಟು ಹಾಲು ಸೇರಿಸಿ.

Bellada anna

ಬೆಲ್ಲದನ್ನ

ದಸರೆಯ ಅತ್ಯಂತ ಸಾಂಪ್ರದಾಯಿಕ ಸಿಹಿಯಿದು. ಇದನ್ನು ಸಕ್ಕರೆಯಲ್ಲಿಯೂ ತಯಾರಿಸಬಹುದಾದರೂ ಬೆಲ್ಲದ್ದೇ ರುಚಿ ಮತ್ತು ಆರೋಗ್ಯಕ್ಕೆ ಶ್ರೇಷ್ಠ. ಬೇಕಾಗುವ ವಸ್ತುಗಳು: ಅಕ್ಕಿ- 1/2 ಕಪ್‌, ಬೆಲ್ಲ- 1/2 ಕಪ್‌, ತೆಂಗಿನಕಾಯಿ ತುರಿ- 1/2 ಕಪ್‌, ಉಪ್ಪು- ಚಿಟಿಕೆ, ದ್ರಾಕ್ಷಿ, ಗೋಡಂಬಿ, ತುಪ್ಪ, ಏಲಕ್ಕಿ- ಸ್ವಲ್ಪ. ಬೆಲ್ಲದ ಪಾಕಕ್ಕೆ ಸ್ವಲ್ಪ ನೀರು.

ವಿಧಾನ: ತೀರಾ ಮೆತ್ತಗೂ ಅಲ್ಲದ, ಅಗುಳಾಗೂ ಇರದಂತೆ ಅನ್ನ ಮಾಡಿಟ್ಟುಕೊಳ್ಳಿ. ಬೆಲ್ಲವನ್ನು ಪಾಕಕ್ಕಿಡಿ. ಎಳೆಪಾಕ ಬರುತ್ತಿದ್ದಂತೆ ಇದಕ್ಕೆ ಅನ್ನವನ್ನು ಸೇರಿಸಿ. ಕೆಲವು ಕ್ಷಣಗಳ ನಂತರ ತೆಂಗಿನ ತುರಿಯನ್ನು ಸೇರಿಸಿ, ಈ ಮಿಶ್ರಣವನ್ನು ಮಗುಚುತ್ತಾ ಇರಿ. ತಳ ಹಿಡಿಯದಂತೆ ತುಪ್ಪ ಸೇರಿಸಿಕೊಳ್ಳಿ. ಪಾಕ ಹದವಾಗುವುದರೊಳಗೆ ಏಲಕ್ಕಿ ಪುಡಿ ಸೇರಿಸಿ. ಕೊನೆಯಲ್ಲಿ ಹುರಿದಿಟ್ಟುಕೊಂಡ ದ್ರಾಕ್ಷಿ, ಗೋಡಂಬಿ ಸೇರಿಸಿ.

kayi holige

ಕಾಯಿ ಹೋಳಿಗೆ/ ಒಬ್ಬಟ್ಟು

ಕಣಕಕ್ಕೆ ಬೇಕಾಗುವ ವಸ್ತುಗಳು: ತೌಡಿಲ್ಲದ ಗೋದಿಹಿಟ್ಟು ಅಥವಾ ಮೈದಾ- 2 ಕಪ್‌, ಎಣ್ಣೆ- 6 ಚಮಚ, ಅರಿಶಿನ- 1/2 ಚಮಚ, ನೀರು ಮತ್ತು ಉಪ್ಪು. ಹೂರಣಕ್ಕೆ ಬೇಕಾಗುವ ವಸ್ತುಗಳು: ತೆಂಗಿನ ಕಾಯಿ ತುರಿ- 2 ಕಪ್‌, ಬೆಲ್ಲದ ಪುಡಿ- 2 ಕಪ್‌, ಏಲಕ್ಕಿ – 20.

ವಿಧಾನ: ಮೊದಲಿಗೆ ಕಣಕ ಮಾಡಿಕೊಳ್ಳೋಣ. ಎಲ್ಲಾ ವಸ್ತುಗಳನ್ನು ಸೇರಿಸಿ ಚಪಾತಿ ಹಿಟ್ಟಿಗಿಂತ ಮೃದುವಾಗಿ ಕಲೆಸಿಕೊಳ್ಳಿ. ಮೇಲಿನಿಂದ ನಾಲ್ಕಾರು ಚಮಚ ಎಣ್ಣೆ ಹಾಕಿ, ಚೆನ್ನಾಗಿ ನಾದಿ. ಇದನ್ನು ಮುಚ್ಚಿ, ಬದಿಗಿರಿಸಿ. ಈಗ ಹೂರಣ ಸಿದ್ಧಪಡಿಸೋಣ. ತೆಂಗಿನತುರಿ, ಬೆಲ್ಲ ಮತ್ತು ಏಲಕ್ಕಿಯನ್ನು ಮಿಕ್ಸಿ ಅಥವಾ ಗ್ರೈಂಡರ್‌ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಅಗತ್ಯವಿದ್ದಷ್ಟೇ ನೀರು ಹಾಕಿ. ರುಬ್ಬಿದ ಮಿಶ್ರಣವನ್ನು ಬಾಣಲೆಗೆ ಸ್ವಲ್ಪ ಕಾಯಿಸಿ, ನೀರಿನಂಶವೆಲ್ಲಾ ಹೋಗಿ, ಉಂಡೆ ಮಾಡಲು ಬರುವಷ್ಟು ಕಣಕ ಗಟ್ಟಿಯಾಗಲಿ. ತೀರಾ ಕಾಯಿಸಿದರೆ ಪಾಕ ಹೆಚ್ಚಾದೀತು, ಎಚ್ಚರ. ಮಿಶ್ರಣ ಬೆಚ್ಚಗಿರುವಾಗಲೇ ಬೇಕಾದಷ್ಟು ದೊಡ್ಡ ಉಂಡೆ ಮಾಡಿಕೊಳ್ಳಿ. ಕಣಕವನ್ನೂ ಸಣ್ಣ ಉಂಡೆಗಳನ್ನಾಗಿ ಮಾಡಿಕೊಳ್ಳಿ. ಕಣಕವನ್ನು ಅಂಗೈಯಲ್ಲೇ ಅಗಲವಾಗಿ ತಟ್ಟಿಕೊಂಡು, ನಡುವೆ ಹೂರಣದ ಉಂಡೆಯನ್ನಿಟ್ಟು ಕಣಕದೊಳಗೆ ತುಂಬಿಸಿ, ಹಿಟ್ಟು ಹಾಕಿ ಲಟಿಸಿ. ಹೊಂಬಣ್ಣ ಬರುವವರೆಗೆ ತವೆಯಲ್ಲಿ ಬೇಯಿಸಿ. ತಾಜಾ ತುಪ್ಪದೊಂದಿಗೆ ಬಡಿಸಿ.

Pineapple payasam

ಅನಾನಸ್‌ ಪಾಯಸ

ಹಬ್ಬವೆಂದ ಮೇಲೆ ತರಹೇವಾರಿ ಪಾಯಸಗಳನ್ನು ಮಾಡುವುದು ಸಾಮಾನ್ಯ. ಬಾಯಿ ಚಪ್ಪರಿಸುವಂಥ ಮತ್ತೊಂದು ಸಹಿ ಖಾದ್ಯ ಇಲ್ಲಿದೆ. ಬೇಕಾಗುವ ವಸ್ತುಗಳು: ಅನಾನಸ್‌ ಹಣ್ಣು- 1 ಕಪ್‌ ಸಣ್ಣಗೆ ಹೆಚ್ಚಿದ್ದು, ಅಕ್ಕಿ ಹಿಟ್ಟು- 2 ಚಮಚ, ತೆಂಗಿನಕಾಯಿ ಹಾಲು- 2 ಕಪ್‌, ಬೆಲ್ಲ- 1 ಕಪ್‌, ತುಪ್ಪ- ಸ್ವಲ್ಪ, ಚಿಟಿಕೆ ಉಪ್ಪು, ದ್ರಾಕ್ಷಿ, ಗೋಡಂಬಿ- ಸ್ವಲ್ಪ

ವಿಧಾನ: ಬೆಲ್ಲವನ್ನು ನೀರಲ್ಲಿ ಕರಗಿಸಿಟ್ಟುಕೊಳ್ಳಿ. ಅಕ್ಕಿಹಿಟ್ಟನ್ನು ಸ್ವಲ್ಪ ನೀರಲ್ಲಿ ಕಲಕಿ ಪೇಸ್ಟ್‌ ಮಾಡಿಕೊಳ್ಳಿ. ಅನಾನಸ್‌ ಹೋಳುಗಳನ್ನು ತುಪ್ಪದಲ್ಲಿ ಬಾಡಿಸಿಕೊಳ್ಳಿ. ಇದಕ್ಕೆ ಬೆಲ್ಲದ ನೀರನ್ನು ಸೇರಿಸಿ ಕುದಿಸಿ. ಅನಾನಸ್‌ ಹೋಳುಗಳು ಪೂರ್ಣ ಮೆತ್ತಗಾಗಲಿ. ಇದಕ್ಕೆ ತೆಂಗಿನ ಹಾಲು ಮತ್ತು ಅಕ್ಕಿ ಹಿಟ್ಟಿನ ಮಿಶ್ರಣ ಸೇರಿಸಿ ಕುದಿಸಿ. ಇದು ಪಾಯಸದ ಹದಕ್ಕೆ ಬರುತ್ತಿದ್ದಂತೆ, ಹುರಿದಿಟ್ಟುಕೊಂಡ ಗೋಡಂಬಿ, ದ್ರಾಕ್ಷಿಗಳನ್ನು ಸೇರಿಸಿ.

chattambade

ಚಟ್ಟಂಬಡೆ

ಹಬ್ಬವೆಂದರೆ ಬರೀ ಸಿಹಿಯನ್ನೇ ತಿನ್ನಬೇಕೆಂದಿಲ್ಲ. ಬಾಯಿಗೆ ಸ್ವಲ್ಪ ಖಾರವೂ ಬೇಕಲ್ಲ. ಹಾಗಾಗಿ ಸಾಂಪ್ರದಾಯಿಕ ಚಟ್ಟಂಬಡೆ ಇಲ್ಲಿದೆ. ಬೇಕಾಗುವ ವಸ್ತುಗಳು: ಕಡಲೆ ಬೇಳೆ- 1/2 ಕಪ್‌, ಎಲೆಕೋಸು- 1/2 ಹೆಚ್ಚಿದ್ದು, ಹಸಿಮೆಣಸಿನಕಾಯಿ- 2, ಕರಿಬೇವಿನ ಸೊಪ್ಪು- ಸ್ವಲ್ಪ, ಕೊತ್ತಂಬರಿ ಸೊಪ್ಪು- ಸ್ವಲ್ಪ, ಇಂಗು- ದೊಡ್ಡ ಚಿಟಿಕೆ, ಸಬ್ಬಸಿಗೆ ಸೊಪ್ಪು- ಅರ್ಧ ಕಟ್ಟು, ಸಣ್ಣಗೆ ಹೆಚ್ಚಿದ್ದು, ರುಚಿಗೆ ತಕ್ಕಷ್ಟು ಉಪ್ಪು ಮತ್ತು ಕರಿಯಲು ಎಣ್ಣೆ

ಮಾಡುವ ವಿಧಾನ: ಕಡಲೆ ಬೇಳೆಯನ್ನು 4 ತಾಸು ನೆನೆಸಿಡಿ. ನೆನೆದ ಬೇಳೆಯನ್ನು ನೀರು ಬಸಿದು ಬೇರೆ ನೀರು ಹಾಕದೆ ತರಿಯಾಗಿ ರುಬ್ಬಿಕೊಳ್ಳಿ. ಎಣ್ಣೆಯ ಹೊರತಾಗಿ ಉಳಿದೆಲ್ಲಾ ವಸ್ತುಗಳನ್ನು ಕಡಲೆಬೇಳೆಯ ಹಿಟ್ಟಿಗೆ ಹಾಕಿ ಚೆನ್ನಾಗಿ ಕೈಯಾಡಿಸಿ. ಈ ಹಿಟ್ಟನ್ನು ಸಣ್ಣ ಉಂಡೆಗಳಾಗಿ ಮಾಡಿ, ಅಂಗೈಯಲ್ಲಿ ತಟ್ಟಿ ಚಟ್ಟೆಯಾಗಿಸಿ ಕಾದ ಎಣ್ಣೆಯಲ್ಲಿ ಕೆಂಪಾಗುವವರೆಗೆ ಕರಿಯಿರಿ

Sabbakki Khichdi

ಸೀಮೆಅಕ್ಕಿಯ/ ಸಬ್ಬಕ್ಕಿ ಖಿಚಡಿ

ಉಪವಾಸದ ದಿನಗಳಲ್ಲಿ ಸೀಮೆ ಅಕ್ಕಿಯ ಬಳಕೆ ದೇಶದೆಲ್ಲೆಡೆ ವ್ಯಾಪಕವಾಗಿದೆ. ಅದನ್ನು ಕರಿದು ವಡೆ ಮಾಡುವುದಕ್ಕಿಂತಲೂ ಬೇಯಿಸಿ ಖಿಚಡಿ ಮಾಡುವುದು ಆರೋಗ್ಯಕರ ಆಯ್ಕೆ ಎನಿಸುತ್ತದೆ. ಬೇಕಾಗುವ ವಸ್ತುಗಳು: ಸೀಮೆ ಅಕ್ಕಿ- 1 ಕಪ್‌, ಶೇಂಗಾ- ಕಾಲು ಕಪ್‌ (ಹುರಿದು ತರಿಯಾಗಿ ಒಡೆದುಕೊಂಡಿದ್ದು), ತುಪ್ಪ- 3 ಚಮಚ, ಒಗ್ಗರಣೆಗೆ- ಜೀರಿಗೆ, ಸಾಸಿವೆ, ಕರಿಬೇವಿನ ಎಲೆಗಳು, ಹಸಿ ಮೆಣಸಿನ ಕಾಯಿ- 2, ರುಚಿಗೆ ಉಪ್ಪು, ಕೊತ್ತಂಬರಿ ಸೊಪ್ಪು- ಸ್ವಲ್ಪ, ನಿಂಬೆಹಣ್ಣು- 1

ವಿಧಾನ: ಸೀಮೆ ಅಕ್ಕಿಯನ್ನು ಚೆನ್ನಾಗಿ ತೊಳೆದು, ಅಕ್ಕಿಯ ಮೇಲೆ ಅರ್ಧ ಇಂಚು ನೀರು ನಿಲ್ಲುವಂತೆ ಒಂದು ತಾಸು ನೆನೆಸಿಡಿ. ಒಂದು ತಾಸಿನ ಬಳಿಕ ಸೀಮೆ ಅಕ್ಕಿಯಲ್ಲಿ ಉಳಿದಿರುವ ನೀರನ್ನು ಬಸಿದಿಡಿ. ಒಗ್ಗರಣೆಗೆ ಬಾಣಲೆ ಇಟ್ಟು ತುಪ್ಪ ಹಾಕಿ. ಒಗ್ಗರಣೆಯ ಪರಿಕರಗಳನ್ನು ಒಂದೊಂದೇ ಹಾಕಿ. ಶೇಂಗಾ ಪುಡಿಯನ್ನು ಒಗ್ಗರಣೆಗೆ ಹಾಕಿ ಚೆನ್ನಾಗಿ ಹುರಿದುಕೊಳ್ಳಿ. ಸೀಮೆ ಅಕ್ಕಿಯನ್ನು ಬಾಣಲೆಗೆ ಹಾಕಿ ಸ್ವಲ್ಪ ಹೊತ್ತು ಕೈಯಾಡಿ. ಒಗ್ಗರಣೆಯೆಲ್ಲಾ ಅದಕ್ಕೆ ಸರಿಯಾಗಿ ಹಿಡಿದ ಮೇಲೆ ಕಡೆಯಲ್ಲಿ ನಿಂಬೆರಸ ಮತ್ತು ಕೊತ್ತಂಬರಿ ಸೊಪ್ಪು ಹಾಕಿ ಕೈಯಾಡಿಸಿ.

ಇದನ್ನೂ ಓದಿ: Navaratri: ರಾಜ್ಯದ ವಿವಿಧೆಡೆ ನವರಾತ್ರಿ ಉತ್ಸವಕ್ಕೆ ಚಾಲನೆ; ದೇವಾಲಯಗಳಲ್ಲಿ ವಿಶೇಷ ಪೂಜೆ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಧಾರ್ಮಿಕ

Shravan 2024: ಶ್ರಾವಣ ಮಾಸದಲ್ಲಿ ಯಾವ ಆಹಾರ ತಿನ್ನಬೇಕು, ಯಾವುದನ್ನು ತಿನ್ನಬಾರದು?

Shravan 2024: ಶ್ರಾವಣ ಮಾಸದಲ್ಲಿ (Shravan Month 2024) ಹೆಚ್ಚಾಗಿ ದೇವರ ಭಕ್ತಿ, ಪ್ರಾರ್ಥನೆಯಲ್ಲಿ ತೊಡಗುವುದರಿಂದ ಆಹಾರ ನಿಯಮಗಳನ್ನು ಕಠಿಣವಾಗಿ ಅನುಸರಿಸಲಾಗುತ್ತದೆ. ಉಪವಾಸ ಇರುವವರು ಈ ಸಂದರ್ಭದಲ್ಲಿ ಆಹಾರದ ಮಾರ್ಗಸೂಚಿಗಳನ್ನು ಅನುಸರಿಸಿ ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಆಧ್ಯಾತ್ಮಿಕ ಗಮನವನ್ನು ಕೇಂದ್ರೀಕರಿಸಬಹುದು.

VISTARANEWS.COM


on

By

Shravan Month 2024
Koo

ಶ್ರಾವಣಾ ಬಂತು ಕಾಡಿಗೆ.. ಬಂತು ನಾಡಿಗೆ.. ಬಂತು ಬೀಡಿಗೆ.. ಕವಿ ದ. ರಾ. ಬೇಂದ್ರೆಯವರ (da.ra. bendre) ಕವನದ ಸಾಲುಗಳು ಶ್ರಾವಣ ಮಾಸದ (Shravan 2024) ಸಂಭ್ರಮವನ್ನು ವರ್ಣಿಸುವಂತೆ ಶ್ರಾವಣ ಮಾಸವು (Shravan Month) ಹಬ್ಬ ಹರಿದಿನಗಳನ್ನು ಹೊತ್ತುಕೊಂಡು ಬರುತ್ತದೆ. ಈ ಮಾಸವು ಶಿವನಿಗೆ ಸಮರ್ಪಿತವಾಗಿದ್ದು, ಈ ಸಂದರ್ಭದಲ್ಲಿ ಹಿಂದೂಗಳು ಉಪವಾಸ, ಪ್ರಾರ್ಥನೆಯಲ್ಲಿ ಕಳೆಯುತ್ತಾರೆ.

ಈ ಬಾರಿ ಆಗಸ್ಟ್ 4ರಿಂದ ಶ್ರಾವಣ ಮಾಸ ಆರಂಭಗೊಳ್ಳಲಿದ್ದು, ಈ ಮಂಗಳಕರ ಅವಧಿಯಲ್ಲಿ ವಿಶೇಷ ಪ್ರಾರ್ಥನೆ, ಆಚರಣೆ ಮತ್ತು ಆಹಾರದ ನಿರ್ಬಂಧ ಇರುತ್ತದೆ. ಶ್ರಾವಣ ಮಾಸದಲ್ಲಿ ಭಕ್ತರು ತಮ್ಮ ದೇಹ ಮತ್ತು ಮನಸ್ಸನ್ನು ಶುದ್ಧೀಕರಿಸಲು ನಿರ್ದಿಷ್ಟ ಆಹಾರ ಮಾರ್ಗಸೂಚಿಗಳನ್ನು ಅನುಸರಿಸುತ್ತಾರೆ. ಈ ಪವಿತ್ರ ಮಾಸದಲ್ಲಿ ಯಾವ ಆಹಾರಗಳನ್ನು ಸೇವಿಸಬೇಕು ಮತ್ತು ತಪ್ಪಿಸಬೇಕು ಎಂಬುದರ ಕುರಿತು ಮಾಹಿತಿ ಇಲ್ಲಿದೆ.

ಶ್ರಾವಣ ಮಾಸದಲ್ಲಿ ತಿನ್ನಬಹುದಾದ ಆಹಾರಗಳು

Shravan Month 2024
Shravan Month 2024


ತಾಜಾ ಹಣ್ಣುಗಳು: ಶ್ರಾವಣ ಮಾಸದಲ್ಲಿ ತಾಜಾ ಹಣ್ಣುಗಳು ಆಹಾರದ ಅತ್ಯಗತ್ಯ ಭಾಗವಾಗಿದೆ. ಅವುಗಳನ್ನು ಶುದ್ಧ ಮತ್ತು ಜೀರ್ಣಿಸಿಕೊಳ್ಳಲು ಸುಲಭವೆಂದು ಪರಿಗಣಿಸಲಾಗುತ್ತದೆ. ಅಗತ್ಯವಾದ ಪೋಷಕಾಂಶಗಳು ಮತ್ತು ಜಲಸಂಚಯನವನ್ನು ಒದಗಿಸುತ್ತದೆ.ಇದರಲ್ಲಿ ಬಾಳೆಹಣ್ಣು, ಸೇಬು, ದಾಳಿಂಬೆ ಮತ್ತು ಕಲ್ಲಂಗಡಿಗಳು ಸೇರಿವೆ.

ಡೇರಿ ಉತ್ಪನ್ನಗಳು: ಹಾಲು, ಮೊಸರು, ಪನೀರ್ ಮತ್ತು ತುಪ್ಪವನ್ನು ಶ್ರಾವಣ ಮಾಸದಲ್ಲಿ ಸೇವಿಸಬಹುದು. ಈ ಡೇರಿ ಉತ್ಪನ್ನಗಳು ಪೌಷ್ಟಿಕಾಂಶ ಮಾತ್ರವಲ್ಲದೇ ದೇಹವನ್ನು ತಂಪಾಗಿಸುತ್ತದೆ.

ಸಾಬುದಾನ: ಉಪವಾಸದ ಸಮಯದಲ್ಲಿ ಸಾಬುದಾನ ಖಿಚಡಿ ಅಥವಾ ವಡಾ ಶ್ರಾವಣ ಮಾಸದ ಮುಖ್ಯವಾದ ಆಹಾರವಾಗಿದೆ. ಸಾಬುದಾನವು ಕಾರ್ಬೋಹೈಡ್ರೇಟ್‌ಗಳು ಸಮೃದ್ಧವಾಗಿದ್ದು ದಿನವಿಡೀ ಶಕ್ತಿಯನ್ನು ನೀಡುತ್ತದೆ.

ಹುರುಳಿಕಾಳಿನ ಹಿಟ್ಟು: ಪೂರಿ, ಚಪಾತಿ ಅಥವಾ ಪ್ಯಾನ್ ಕೇಕ್‌ಗಳನ್ನು ತಯಾರಿಸಲು ಹುರುಳಿಕಾಳಿನ ಹಿಟ್ಟನ್ನು ಬಳಸಲಾಗುತ್ತದೆ. ಇದು ಜೀರ್ಣಿಸಿಕೊಳ್ಳಲು ಸುಲಭವಾಗಿದೆ ಮತ್ತು ಉಪವಾಸಕ್ಕೆ ಸೂಕ್ತವಾಗಿದೆ.

ಚೆಸ್ ನೆಟ್ ಹಿಟ್ಟು: ಹುರುಳಿ ಹಿಟ್ಟಿನಂತೆಯೇ ಇದು ಪೂರಿ ಮತ್ತು ಹಲ್ವಾದಂತಹ ವಿವಿಧ ಭಕ್ಷ್ಯಗಳನ್ನು ತಯಾರಿಸಲು ಬಳಸುವ ಮತ್ತೊಂದು ಉಪವಾಸ ಸ್ನೇಹಿ ಹಿಟ್ಟಾಗಿದೆ.

ಆಲೂಗಡ್ಡೆಗಳು ಮತ್ತು ಸಿಹಿ ಆಲೂಗಡ್ಡೆಗಳು: ಇದನ್ನು ವಿವಿಧ ಪಾಕವಿಧಾನಗಳಲ್ಲಿ ಬಳಸಬಹುದು. ಇದರಿಂದ ಉಪವಾಸದಲ್ಲಿರುವವರು ಅಗತ್ಯ ಶಕ್ತಿಯನ್ನು ತುಂಬುತ್ತಾರೆ ಮತ್ತು ಒದಗಿಸುತ್ತಾರೆ.

ಬೀಜಗಳು ಮತ್ತು ಒಣ ಹಣ್ಣುಗಳು: ಬಾದಾಮಿ, ವಾಲ್ ನಾಟ್, ಒಣದ್ರಾಕ್ಷಿ ಮತ್ತು ಇತರ ಒಣ ಹಣ್ಣುಗಳು ಲಘು ಆಹಾರಕ್ಕಾಗಿ ಮತ್ತು ಹೆಚ್ಚುವರಿ ಪೌಷ್ಟಿಕಾಂಶ ಮತ್ತು ಶಕ್ತಿಗಾಗಿ ಭಕ್ಷ್ಯಗಳಿಗೆ ಸೇರಿಸಲು ಉತ್ತಮವಾಗಿದೆ.

ತೆಂಗಿನಕಾಯಿ: ಶ್ರಾವಣ ಮಾಸದಲ್ಲಿ ತಾಜಾ ತೆಂಗಿನಕಾಯಿ, ತೆಂಗಿನ ನೀರು ಮತ್ತು ತೆಂಗಿನ ಹಾಲು ಸಾಮಾನ್ಯವಾಗಿ ಸೇವಿಸಲಾಗುತ್ತದೆ.

Shravan Month 2024
Shravan Month 2024


ಶ್ರಾವಣ ಮಾಸದಲ್ಲಿ ತಪ್ಪಿಸಬೇಕಾದ ಆಹಾರಗಳು

ಮಾಂಸಾಹಾರ: ಮಾಂಸ, ಮೀನು ಮತ್ತು ಮೊಟ್ಟೆಗಳನ್ನು ಶ್ರಾವಣ ಮಾಸದಲ್ಲಿ ಕಟ್ಟುನಿಟ್ಟಾಗಿ ತಪ್ಪಿಸಲಾಗುತ್ತದೆ. ಶುದ್ಧತೆ ಮತ್ತು ಆಧ್ಯಾತ್ಮಿಕ ಬೆಳವಣಿಗೆಯನ್ನು ಉತ್ತೇಜಿಸಲು ಸಸ್ಯಾಹಾರಿ ಆಹಾರಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುತ್ತದೆ.

ಈರುಳ್ಳಿ ಮತ್ತು ಬೆಳ್ಳುಳ್ಳಿ: ಇವುಗಳು ದೇಹದಲ್ಲಿ ಶಾಖವನ್ನು ಉಂಟುಮಾಡುತ್ತವೆ ಎಂದು ನಂಬಲಾಗಿದೆ. ಆದ್ದರಿಂದ ಶ್ರಾವಣ ಮಾಸದಲ್ಲಿ ಅವುಗಳನ್ನು ತಪ್ಪಿಸಲಾಗುತ್ತದೆ. ಇದು ನಕಾರಾತ್ಮಕ ಶಕ್ತಿಯನ್ನು ಉತ್ತೇಜಿಸುತ್ತದೆ.

ಧಾನ್ಯಗಳು ಮತ್ತು ಬೇಳೆಕಾಳುಗಳು: ಗೋಧಿ, ಅಕ್ಕಿ, ಧಾನ್ಯ ಮತ್ತು ಬೇಳೆಕಾಳುಗಳನ್ನು ಸಾಮಾನ್ಯವಾಗಿ ಶ್ರಾವಣ ಮಾಸದಲ್ಲಿ ಬಳಸಲಾಗುವುದಿಲ್ಲ. ಇದರ ಬದಲು ಹುರುಳಿ ಕಾಳು, ಚೆಸ್ಟ್ ಹಿಟ್ಟನ್ನು ಬಳಸಲಾಗುತ್ತದೆ.

ಮದ್ಯ ಮತ್ತು ತಂಬಾಕು: ಶ್ರಾವಣ ಮಾಸ ಪವಿತ್ರ ತಿಂಗಳಾಗಿರುವುದರಿಂದ ಮದ್ಯ ಮತ್ತು ತಂಬಾಕು ಸೇವನೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.

ಇದನ್ನೂ ಓದಿ: Home Remedies for Dengue: ಡೆಂಗ್ಯು ಜ್ವರ ಬಂದರೂ ಪ್ಲೇಟ್‌ಲೆಟ್‌ ಸಂಖ್ಯೆ ಕುಸಿಯದಿರಲು ಯಾವ ಆಹಾರ ಸೇವಿಸಬೇಕು?

ಸಂಸ್ಕರಿಸಿದ ಮತ್ತು ಜಂಕ್ ಆಹಾರಗಳು: ಆರೋಗ್ಯಕರ ಮತ್ತು ನೈಸರ್ಗಿಕ ಆಹಾರಕ್ಕೆ ಹೆಚ್ಚಿನ ಒತ್ತು ನೀಡುವುದರಿಂದ ಚಿಪ್ಸ್, ಪ್ಯಾಕೆಟ್ ತಿಂಡಿಗಳು ಮತ್ತು ಇತರ ಸಂಸ್ಕರಿಸಿದ ಆಹಾರಗಳನ್ನು ಸೇವಿಸಲಾಗುವುದಿಲ್ಲ.

ಮಸಾಲೆಯುಕ್ತ ಮತ್ತು ಎಣ್ಣೆಯುಕ್ತ ಆಹಾರಗಳು: ಮಸಾಲೆಯುಕ್ತ ಮತ್ತು ಎಣ್ಣೆಯುಕ್ತ ಆಹಾರವನ್ನು ಸಾಮಾನ್ಯವಾಗಿ ತಪ್ಪಿಸಲಾಗುತ್ತದೆ ಏಕೆಂದರೆ ಅವು ಜೀರ್ಣಕ್ರಿಯೆಗೆ ಅಡ್ಡಿಪಡಿಸಬಹುದು ಮತ್ತು ಉಪವಾಸಕ್ಕೆ ತೊಂದರೆ ಉಂಟು ಮಾಡುವುದು.

Continue Reading

ಆಹಾರ/ಅಡುಗೆ

Shawarma Recipe: ಬೀದಿಬದಿಯ ಶವರ್ಮಾ ಏಕೆ? ಮನೆಯಲ್ಲೇ ರುಚಿಯಾದ ಶವರ್ಮಾವನ್ನು ಹೀಗೆ ಮಾಡಿ!

Shawarma recipe: ಗೋಬಿ ಮಂಚೂರಿ, ಪಾನಿಪುರಿಯಲ್ಲಿ ಕ್ಯಾನ್ಸರ್‌ಕಾರಕ ರಾಸಾಯನಿಕಗಳ ಪತ್ತೆಯೂ ಆಯಿತು. ಇದೀಗ ಶವರ್ಮಾ ಸರದಿ. ಮಾಂಸಾಹಾರ ಇಷ್ಟಪಡುವ ಮಂದಿ, ಅದರಲ್ಲೂ, ಶವರ್ಮಾ ಇಷ್ಟಪಡುವ ಮಂದಿಗೆ, ಅದು ರಾಜ್ಯದಲ್ಲಿ ರದ್ದಾಗುವ ಸುದ್ದಿ ಕೇಳಿ ಆಘಾತವಾಗಿದೆ. ಬಾಯಿ ಚಪ್ಪರಿಸಿಕೊಂಡು ಶವರ್ಮಾ ತಿನ್ನುತ್ತಿದ್ದ ಮಂದಿ ಇದೀಗ ತಮ್ಮ ಮೆಚ್ಚಿನ ತಿನಿಸು ರದ್ದಾದರೆ ಬಾಯಿ ಚಪಲಕ್ಕೇನು ಮಾಡುವುದು ಎಂದು ಚಿಂತೆ ಮಾಡುತ್ತಿದ್ದಾರೆ. ಬನ್ನಿ, ಸಿಂಪಲ್‌ ಆಗಿ, ಹೊಟೇಲ್‌ಗಿಂತ ಇನ್ನೂ ರುಚಿಕಟ್ಟಾಗಿ, ಅಷ್ಟೇ ಆರೋಗ್ಯಕರವಾಗಿ ಶವರ್ಮಾ ಮಾಡುವ ವಿಧಾನ ಇಲ್ಲಿದೆ.

VISTARANEWS.COM


on

Shawarma Recipe
Koo

ಇದೀಗ ಆಹಾರದ ಗುಣಮಟ್ಟವೇ ಸಮಸ್ಯೆ. ಹೊರಗೆ ತಿನ್ನುವ ಎಲ್ಲರೂ ಈ ಬಗ್ಗೆ ಗಂಭೀರವಾಗಿ ಯೋಚಿಸಬೇಕಾದ್ದೇ. ಯಾಕೆಂದರೆ ಒಂಟಿಯಾಗಿ ಬದುಕುವ, ಮನೆಯಿಂದ ದೂರವಿರುವ, ಕೆಲಸದ ಒತ್ತಡದಲ್ಲಿ ಬ್ಯುಸಿಯಾಗಿರುವ ಮಂದಿ ಹೊರಗಿನ ತಿಂಡಿಗಳನ್ನು ಅವಲಂಬಿಸುವುದೇ ಹೆಚ್ಚು. ಬೀದಿಬದಿಯ ತಿನಿಸುಗಳು, ಚಾಟ್‌ಗಳು, ಕಡಿಮೆ ದರದಲ್ಲಿ ಲಭ್ಯವಾಗುವ ತಿನಿಸುಗಳು ಇತ್ಯಾದಿಗಳು ಸುಲಭವಾಗಿ ಆಕರ್ಷಿಸುತ್ತವೆ ನಿಜವಾದರೂ, ಕೆಲವೊಮ್ಮೆ ಇಂತಹ ಆಹಾರಗಳೇ ಅನಾರೋಗ್ಯವನ್ನೂ ತರುತ್ತವೆ. ಮಳೆಗಾಲದಲ್ಲಿ ಈ ಸಂಭವ ಇನ್ನೂ ಹೆಚ್ಚು. ಕಲುಷಿತ ನೀರು, ಕಲುಷಿತ ಆಹಾರ, ಹೆಚ್ಚು ಕಾಲ ಶೇಖರಿಟ್ಟ ಆಹಾರಗಳಿಂದ ತಯಾರಿಸುವ ತಿಂಡಿ ತಿನಿಸುಗಳು, ವಾತಾವರಣದ ತೇವಾಂಶಕ್ಕೆ ಹಾಳಾಗಿ, ಹೊಟ್ಟೆ ಕೆಡುತ್ತದೆ. ಕೆಲವೊಮ್ಮೆ ದೊಡ್ಡ ಸಮಸ್ಯೆಯನ್ನೂ ಹುಟ್ಟುಹಾಕಿ, ಪ್ರಾಣಕ್ಕೂ ಸಂಚಕಾರ ಬರಬಹುದು. ಇತ್ತೀಚೆಗೆ, ಎಫ್‌ಎಸ್‌ಎಸ್‌ಎಐ ನಿಯಮಿತವಾಗಿ ಭಾರತದ ಹಲವು ಆಹಾರಗಳ ಪರೀಕ್ಷೆ ನಡೆಸುತ್ತಿದ್ದು, ಎಚ್ಚರಿಕೆಯನ್ನು ನೀಡುತ್ತಲೇ ಇದೆ. ಬಣ್ಣಬಣ್ಣದ ಕಾಟನ್‌ ಕ್ಯಾಂಡಿ ರದ್ದಾಯಿತು. ಗೋಬಿ ಮಂಚೂರಿ, ಪಾನಿಪುರಿಯಲ್ಲಿ ಕ್ಯಾನ್ಸರ್‌ಕಾರಕ ರಾಸಾಯನಿಕಗಳ ಪತ್ತೆಯೂ ಆಯಿತು. ಇದೀಗ ಶವರ್ಮಾ ಸರದಿ. ಮಾಂಸಾಹಾರ ಇಷ್ಟಪಡುವ ಮಂದಿ, ಅದರಲ್ಲೂ, ಶವರ್ಮಾ ಇಷ್ಟಪಡುವ ಮಂದಿಗೆ, ಅದು ರಾಜ್ಯದಲ್ಲಿ ರದ್ದಾಗುವ ಸುದ್ದಿ ಕೇಳಿ ಆಘಾತವಾಗಿದೆ. ಬಾಯಿ ಚಪ್ಪರಿಸಿಕೊಂಡು ಶವರ್ಮಾ ತಿನ್ನುತ್ತಿದ್ದ ಮಂದಿ ಇದೀಗ ತಮ್ಮ ಮೆಚ್ಚಿನ ತಿನಿಸು ರದ್ದಾದರೆ ಬಾಯಿ ಚಪಲಕ್ಕೇನು ಮಾಡುವುದು ಎಂದು ಚಿಂತೆ ಮಾಡುತ್ತಿದ್ದಾರೆ. ಬನ್ನಿ, ಸಿಂಪಲ್‌ ಆಗಿ, ಹೊಟೇಲ್‌ಗಿಂತ ಇನ್ನೂ ರುಚಿಕಟ್ಟಾಗಿ, ಅಷ್ಟೇ ಆರೋಗ್ಯಕರವಾಗಿ ಶವರ್ಮಾ ಮನೆಯಲ್ಲೇ (shawarma recipe) ನೀವು ಹೇಗೆ ಮಾಡಬಹುದು ಎಂಬುದನ್ನು ನೋಡೋಣ ಬನ್ನಿ.

Shawarma

ಹೆಚ್ಚು ಕಷ್ಟವೇನಿಲ್ಲ

ಶವರ್ಮಾ ಮಾಡಲು ಹೆಚ್ಚು ಕಷ್ಟವೇನಿಲ್ಲ. ಶವರ್ಮಾದ ಮಸಾಲೆ ಮಿಕ್ಸ್‌ ನೀವೊಮ್ಮೆ ರೆಡಿ ಮಾಡಿಟ್ಟುಕೊಂಡರೆ ನಿಮ್ಮ ಕೆಲಸ ಅರ್ಧ ಆದಂತೆ. ಈ ಮಸಾಲೆಯ ಮಿಕ್ಸ್‌ ಹೇಗೆ ಮಾಡೋದು ಎಂದು ತಿಳಿಯೋಣ ಬನ್ನಿ.

ಇದನ್ನೂ ಓದಿ: How To Cook With Garlic: ಅಡುಗೆಗೆ ಬೆಳ್ಳುಳ್ಳಿ ಬಳಸುವಾಗ ಈ 5 ಟಿಪ್ಸ್‌‌ಗಳನ್ನು ಮರೆಯಲೇಬೇಡಿ!

ಶವರ್ಮಾ ಮಸಾಲೆ

ಕಾಶ್ಮೀರಿ ಕೆಂಪು ಮೆಣಸಿನಕಾಯಿಯನ್ನು ಹುರಿದಿಡಿ. ನಂತರ ಏಲಕ್ಕಿ, ಕರಿಮೆಣಸು, ಸೋಂಪು, ಜೀರಿಗೆ, ಕೊತ್ತಂಬರಿ ಇವೆಲ್ಲವನ್ನೂ ಒಂದೊಂದಾಗಿ ಹುರಿಯಿರಿ. ಇವೆಲ್ಲವೂ ತಣಿದ ಕೂಡಲೇ ಮಿಕ್ಸಿಗೆ ಹಾಕಿ ಚೆನ್ನಾಗಿ ಪುಡಿ ಮಾಡಿ. ಈಗ ಶವರ್ಮಾ ಮಸಾಲೆ ರೆಡಿ. ಒಂದು ಗಾಳಿಯಾಡದ ಡಬ್ಬದಲ್ಲಿ ಈ ಮಸಾಲೆ ಪುಡಿಯನ್ನು ಕೆಲಕಾಲ ಫ್ರಿಡ್ಜ್‌ನಲ್ಲಿ ಶೇಖರಿಸಿಯೂ ಇಡಬಹುದು. ಇನ್ನು ರುಚಿಯಾದ, ಅಷ್ಟೇ ಆರೋಗ್ಯಕರವಾದ ಶವರ್ಮಾ ಮಾಡುವುದು ಹೇಗೆಂದು ತಿಳಿಯೋಣ. ಒಂದು ಬೇಕಿಂಗ್ ಪಾತ್ರೆಯಲ್ಲಿ ಕಾಲು ಕಪ್‌ ಮಾಲ್ಟ್‌ ವಿನೆಗರ್‌, ಕಾಲು ಕಪ್‌ ಮೊಸರು, ಒಂದು ಚಮಚ ಎಣ್ಣೆ, ಶವರ್ಮಾ ಮಸಾಲೆ ಪುಡಿ, ರುಚಿಗೆ ಉಪ್ಪು ಇವಿಷ್ಟನ್ನು ಮಿಕ್ಸ್‌ ಮಾಡಿ ಇದರ ಮೇಲೆ ಫ್ರೆಶ್‌ ಚಿಕನ್‌ ತೊಡೆ ಮಾಂಸವನ್ನು ಹಾಕಿ ಮಿಕ್ಸ್‌ ಮಾಡಿ ಚೆನ್ನಾಗಿ ಎಲ್ಲ ಬದಿಯೂ ಕೋಟಿಂಗ್‌ ಆಗುವಂತೆ ನೋಡಿಕೊಂಡು ಇದನ್ನು ಸುಮಾರು ನಾಲ್ಕು ಗಂಟೆಗಳ ಕಾಲ ಚೆನ್ನಾಗಿ ಮಾರಿನೇಟ್‌ ಆಗುವಂತೆ ಬಿಡಿ.
ನಂತರ 350 ಡಿಗ್ರಿ ಫ್ಯಾರನ್‌ಹೀಟ್‌ನಲ್ಲಿ ಅವನ್‌ ಅನ್ನು ಪ್ರಿಹೀಟ್‌ ಮಾಡಿಕೊಳ್ಳಿ. ಸಣ್ಣ ಬೌಲ್‌ನಲ್ಲಿ ತಾಹಿನಿ, ಕಾಲು ಕಪ್‌ ಮೊಸರು, ಬೆಳ್ಳುಳ್ಳಿ, ನಿಂಬೆ ರಸ, ಆಲಿವ್‌ ಆಯಿಲ್‌ ಹಾಗೂ ಪಾರ್ಸ್ಲೇ ತೆಗೆದುಕೊಳ್ಳಿ. ರುಚಿಗೆ ತಕ್ಕಷ್ಟು ಉಪ್ಪು, ಕರಿಮೆಣಸು ಹಾಕಿ ರೆಫ್ರಿಜರೇಟ್‌ ಮಾಡಿ. ಇದನ್ನು ಚಿಕನ್‌ಗೆ ಕವರ್‌ ಮಾಡಿ. ೩೦ ನಿಮಿಷಗಳ ಕಾಲ ಅವನ್‌ನಲ್ಲಿ ಬೇಕ್‌ ಮಾಡಿ. ಒಮ್ಮೆ ನೋಡಿಕೊಂಡು ಚಿಕನ್‌ ಕಂದು ಬಣ್ಣಕ್ಕೆ ತಿರುಗದಿದ್ದರೆ ಮತ್ತೆ ೧೦ ನಿಮಿಷ ಬೇಕ್‌ ಮಾಡಿ. ಹೊರತೆಗೆದು ಆಕಾರಕ್ಕೆ ಕತ್ತರಿಸಿಕೊಳ್ಳಿ. ಟೊಮೆಟೋ, ಈರುಳ್ಳಿ, ಕ್ಯಾಬೇಜ್‌ ತುರಿಯಿಂದ ಅಲಂಕರಿಸಿ. ರೋಲ್‌ ಮಾಡಿ ತಾಹಿನಿ ಸಾಸ್‌ ಜೊತೆ ತಿನ್ನಿ. ಇಂತಹ ಪರ್ಫೆಕ್ಟ್‌ ರುಚಿಯನ್ನು ನೀವು ರೆಸ್ಟೋರೆಂಟ್‌ನಲ್ಲೂ ಅಪರೂಪಕ್ಕಷ್ಟೇ ಕಂಡಿರಬಹುದು. ಈಗ ಯಾವ ಭಯವೂ ಇಲ್ಲದೆ, ಶವರ್ಮಾ ತಿನ್ನಬಹುದು. ಮಳೆಗಾಲಕ್ಕೆ ಪರ್ಫೆಕ್ಟ್‌ ರುಚಿಯಾದ ಖಾದ್ಯವಿದು.

Continue Reading

ಆಹಾರ/ಅಡುಗೆ

How To Cook With Garlic: ಅಡುಗೆಗೆ ಬೆಳ್ಳುಳ್ಳಿ ಬಳಸುವಾಗ ಈ 5 ಟಿಪ್ಸ್‌‌ಗಳನ್ನು ಮರೆಯಲೇಬೇಡಿ!

How To Cook With Garlic: ಬೆಳ್ಳುಳ್ಳಿ ಕೇವಲ ಘಮ ಹಾಗೂ ರುಚಿಯಲ್ಲಷ್ಟೇ ಅಲ್ಲ, ಗುಣದಲ್ಲೂ ಎತ್ತಿದ ಕೈಯೇ. ಸಾಕಷ್ಟು ವೈದ್ಯಕೀಯ ಗುಣಗಳಿಂದ ಸಮೃದ್ಧವಾಗಿರುವ ಬೆಳ್ಳಿಳ್ಳಿಯಲ್ಲಿ ನಮ್ಮ ದೇಹಕ್ಕೆ ಅಗತ್ಯವಾಗಿ ಬೇಕಾಗುವ ಪೋಷಕ ತತ್ವಗಳನ್ನೂ ಹೊಂದಿದೆ. ಅಷ್ಟೇ ಅಲ್ಲ, ಹಲವು ಸಮಸ್ಯೆಗಳಿಗೆ ಉತ್ತರವನ್ನು ಕೊಡುವ ಶಕ್ತಿಯೂ ಇದರಲ್ಲಿದೆ. ಹೃದಯದ ಸಮಸ್ಯೆಯಿಂದ ಹಿಡಿದು, ಜೀರ್ಣಶಕ್ತಿಗೆ, ತೂಕ ಇಳಿಸಲು, ಶೀತ ನೆಗಡಿ ಕಫ ಇತ್ಯಾದಿ ಎಲ್ಲದಕ್ಕೂ ಬೆಳ್ಳುಳ್ಳಿಯಲ್ಲಿ ಉತ್ತರವಿದೆ. ಇಂತಹ ಬೆಳ್ಳುಳ್ಳಿಯನ್ನು ಅಡುಗೆ ಮನೆಯಲ್ಲಿ ನಾವು ಸರಿಯಾಗಿ ಬಳಸಿಕೊಳ್ಳಬೇಕು.

VISTARANEWS.COM


on

How To Cook With Garlic
Koo

ವಾಸನೆ ಗಾಢವೇ ಆದರೂ ಬೆಳ್ಳುಳ್ಳಿ ಕಿಚನ್‌ನ ಸೂಪರ್‌ ಸ್ಟಾರ್‌. ಅಡುಗೆಗೆ ಒಂದು ವಿಶಿಷ್ಟ ಘಮವನ್ನೂ ರುಚಿಯನ್ನು ಕೊಟ್ಟು ಯಾವುದೇ ಅಡುಗೆಯಲ್ಲಾದರೂ ತನ್ನತನವನ್ನು ಗಾಢವಾಗಿ ಎತ್ತಿ ತೋರಿಸುವ ಗುಣ ಇದಕ್ಕಿದೆ. ಗುಂಪಿನಲ್ಲಿ ಗೋವಿಂದವಾಗದೆ, ಗುಂಪಿನಲ್ಲಿದ್ದೂ ಪ್ರತ್ಯೇಕವಾಗಿ ನಿಲ್ಲುವ ಗುಣ ಇದಕ್ಕಿದೆ. ಇಂತಹ ಬೆಳ್ಳುಳ್ಳಿ ಕೇವಲ ಘಮ ಹಾಗೂ ರುಚಿಯಲ್ಲಷ್ಟೇ ಅಲ್ಲ, ಗುಣದಲ್ಲೂ ಎತ್ತಿದ ಕೈಯೇ. ಸಾಕಷ್ಟು ವೂದ್ಯಕೀಯ ಗುಣಗಳಿಂದ ಸಮೃದ್ಧವಾಗಿರುವ ಬೆಳ್ಳಿಳ್ಳಿಯಲ್ಲಿ ನಮ್ಮ ದೇಹಕ್ಕೆ ಅಗತ್ಯವಾಗಿ ಬೇಕಾಗುವ ಪೋಷಕ ತತ್ವಗಳನ್ನೂ ಹೊಂದಿದೆ. ಅಷ್ಟೇ ಅಲ್ಲ, ಹಲವು ಸಮಸ್ಯೆಗಳಿಗೆ ಉತ್ತರವನ್ನು ಕೊಡುವ ಶಕ್ತಿಯೂ ಇದರಲ್ಲಿದೆ. ಹೃದಯದ ಸಮಸ್ಯೆಯಿಂದ ಹಿಡಿದು, ಜೀರ್ಣಶಕ್ತಿಗೆ, ತೂಕ ಇಳಿಸಲು, ಶೀತ ನೆಗಡಿ ಕಫ ಇತ್ಯಾದಿ ಎಲ್ಲದಕ್ಕೂ ಬೆಳ್ಳುಳ್ಳಿಯಲ್ಲಿ ಉತ್ತರವಿದೆ. ಇಂತಹ ಬೆಳ್ಳುಳ್ಳಿಯನ್ನು ಅಡುಗೆ ಮನೆಯಲ್ಲಿ ನಾವು ಸರಿಯಾಗಿ ಬಳಸಿಕೊಳ್ಳಬೇಕು. ಬನ್ನಿ, ಬೆಳ್ಳುಳ್ಳಿಯನ್ನು ಬಳಸುವಾಗ ನೆನಪಿನಲ್ಲಿಡಬೇಕಾದ ಕೆಲವು ಮುಖ್ಯವಾದ (How To Cook With Garlic) ಅಂಶಗಳು ಇಲ್ಲಿವೆ.

ಬೆಳ್ಳುಳ್ಳಿಯನ್ನು ಅಡುಗೆಗೆ ಬಳಸುವ ಮೊದಲು ತೊಳೆದುಕೊಳ್ಳಿ. ಅಡುಗೆ ಮಾಡುವ ಮೊದಲು ಯಾವುದೇ ತರಕಾರಿ, ಧಾನ್ಯ, ಬೇಳೆ ಕಾಳುಗಳೇ ಇರಲಿ ತೊಳೆದುಕೊಳ್ಳುವುದು ಆರೋಗ್ಯಕ್ಕೆ ಒಳ್ಳೆಯದು. ಆಹಾರ ಸ್ವಚ್ಛವಾಗಿರುವುದು ಬಹಳ ಮುಖ್ಯ. ಆದರೆ ಬೆಳ್ಳುಳ್ಳಿಯನ್ನು ತೊಳೆದು ಸಿಪ್ಪೆ ತೆಗೆದು ಕತ್ತರಿಸಲು ಇರುವ ಸುಲಭ ವಿಧಾನ ಎಂದರೆ ಅದನ್ನು ನೀರಿನಲ್ಲಿ ಅರ್ಧ ಗಂಟೆ ನೆನೆ ಹಾಕುವುದು. ಇದರಿಂದ ಸಿಪ್ಪೆ ಸುಲಭವಾಗಿ ಬಿಡಿಸಲು ಸಾಧ್ಯವಾಗುತ್ತದೆ. ಅಷ್ಟೇ ಅಲ್ಲ, ಕತ್ತರಿಸಲು ಸುಲಭವಾಗುತ್ತದೆ.

ಕೆಲವೊಮ್ಮೆ ನಾವು ತರಕಾರಿಯನ್ನು ಹೇಗೆ ಕತ್ತರಿಸುತ್ತೇವೆ ಎಂಬುದರಲ್ಲಿಯೂ ಅದರ ರುಚಿ ಅಡಗಿದೆ. ಕೆಲವಕ್ಕೆ ಬೆಳ್ಳುಳ್ಳಿಯನ್ನು ಹಾಗೆಯೇ ಹಾಕಿದರೆ ರುಚಿಯೆನಿಸಿದರೆ, ಇನ್ನೂ ಕೆಲವಕ್ಕೆ ಕತ್ತರಿಸಿ ಹಾಕಬೇಕು. ಕೆಲವಕ್ಕೆ ಸಣ್ಣದಾಗಿ ಹೆಚ್ಚಿ ಹಾಕಬೇಕು. ಇನ್ನೂ ಕೆಲವಕ್ಕೆ ಪೇಸ್ಟ್‌ ಮಾಡಿ ಹಾಕಬೇಕು. ಯಾವುದಕ್ಕೆ ಹೇಗಿರಬೇಕೋ ಹಾಗೆಯೇ ಮಾಡಿ. ಬೆಳ್ಳುಳ್ಳಿ ವಿಚಾರದಲ್ಲಿ ಇದು ಅಕ್ಷರಶಃ ಸತ್ಯ.

Garlic

ಬೆಳ್ಳುಳ್ಳಿಯ ಘಮ ಹಾಗೂ ರುಚಿ ಸರಿಯಾಗಿ ಬರಬೇಕೆಂದರೆ ಅದನ್ನು ಯಾವಾಗ ಅಡುಗೆಗೆ ಸೇರಿಸಬೇಕು ಎಂಬುದು ನಮಗೆ ಗೊತ್ತಿರಬೇಕು. ಬಹಳಷ್ಟು ಅಡುಗೆಗಳಲ್ಲಿ ಮುಂಚಿತವಾಗಿ ಬೆಳ್ಳುಳ್ಳಿಯನ್ನು ಸೇರಿಸಿ, ಅದರ ಹಸಿ ವಾಸನೆ ಹೋಗುವವರೆಗೂ ಹುರಿದುಕೊಂಡು ಬೇರೆ ಪದಾರ್ಥಗಳನ್ನು ಸೇರಿಸಲಾಗುತ್ತದೆ. ಈ ಪ್ರಕ್ರಿಯೆ ಸ್ವಲ್ಪ ಹೆಚ್ಚು ಕಮ್ಮಿಯಾದರೂ ಬೆಳ್ಳುಳ್ಳಿಯ ಕೆಟ್ಟ ವಾಸನೆ ಅಡುಗೆಯಲ್ಲಿ ಮೇಳೈಸುತ್ತದೆ. ಇನ್ನೂ ಕೆಲವಕ್ಕೆ ಒಗ್ಗರಣೆಯೊಂದಿಗೆ ಹುರಿದುಕೊಂಡು ಹಾಕುತ್ತೇವೆ. ಹಾಗಾಗಿ, ಈ ಕ್ರಮವನ್ನು ಸರಿಯಾಗಿಯೇ ಪಾಲಿಸಿ.

Garlic

ಬೆಳ್ಳುಳ್ಳಿಯನ್ನು ಎಣ್ಣೆಯಲ್ಲಿ ಹುರದುಕೊಳ್ಳುವಾಗ ಸದಾ ಎಚ್ಚರವಾಗಿರಬೇಕು. ಯಾಕೆಂದರೆ ಹುರಿದದ್ದು ಕಡಿಮೆಯಾಗಲೂಬಾರದು. ಹೆಚ್ಚಾಗಲೂಬಾರದು. ಕಡಿಮೆ ಹುರಿದರೆ ಹಸಿ ವಾಸನೆ ಹೋಗದು. ಹೆಚ್ಚಾದರೆ ಸುಟ್ಟು ಬಿಡುತ್ತದೆ. ಹಾಗಾಗಿ, ಬೆಳ್ಳುಳ್ಳಿಯನ್ನು ಕಪ್ಪಾಗುವವರೆಗೆ ಹುರಿಯಬೇಡಿ. ಅದರ ಪೋಷಕಾಂಶಗಳನ್ನು ಸರಿಯಾಗಿ ಬಳಸಬೇಕೆಂದರೆ ಹದವಾಗಿ ಹುರಿಯಿರಿ.

ಇದನ್ನೂ ಓದಿ: Curd Rice Recipe: ಮೊಸರನ್ನ ರುಚಿಕರವಾಗಿರಲು ಹೀಗೆ ಮಾಡಿ!

ಇಡಿಯಾದ ಬೆಳ್ಳುಳ್ಳಿಯನ್ನು ಅಡುಗೆಗೆ ಹಾಗೆಯೇ ಬಳಸಿವುದನ್ನು ಆದಷ್ಟು ಕಡಿಮೆ ಮಾಡಿ. ಇದರಿಂದ ಬೆಳ್ಳುಳ್ಳಿಯಲ್ಲಿರುವ ಎನ್‌ಝೈಮ್‌ಗಳು ಸರಿಯಾಗಿ ಆಹಾರದೊಂದಿಗೆ ಮಿಳಿತವಾಗದು. ಇದಕ್ಕಾಗಿ, ಬೆಳ್ಳುಳ್ಳಿ ಆಹಾರದಲ್ಲಿ ಹಾಗೆಯೇ ಇರಬೇಕೆಂದು ಬಯಸಿದರೆ ಅದನ್ನು ಕತ್ತರಿಸಿ ಹುರಿದುಕೊಳ್ಳಿ. ಕತ್ತರಿಸಿದ ಬೆಳ್ಳುಳ್ಳಿಯಲ್ಲಿ ಬಹುಬೇಗನೆ ಅದರಲ್ಲಿರುವ ಅಲ್ಲಿನಾಸ್‌ ಎಂಬ ಎನ್‌ಝೈಮ್‌ ಅಲ್ಲಿನ್‌ ಆಗಿ ನಂತರ ಅಲ್ಲಿಸಿನ್‌ ಪರಿವರ್ತನೆಗೊಳ್ಳಲು ಸುಲಭವಾಗುತ್ತದೆ. ಅಲ್ಲಿಸಿನ್‌ ರಕ್ತದಲ್ಲಿರುವ ಸಕ್ಕರೆಯ ಪ್ರಮಾಣವನ್ನು ಹಾಗೂ ರ್ಕತದೊತ್ತಡವನ್ನು ಸಮತೋಲನಗೊಳಿಸಲು ನೆರವಾಗುತ್ತದೆ.

Continue Reading

ಆಹಾರ/ಅಡುಗೆ

Curd Rice Recipe: ಮೊಸರನ್ನ ರುಚಿಕರವಾಗಿರಲು ಹೀಗೆ ಮಾಡಿ!

Curd Rice Recipe: ಮೊಸರನ್ನ ಹೊಟ್ಟೆಗೆ ಮನಸ್ಸಿಗೆ ಹಿತವಾಗಿರುತ್ತದೆ. ತಿಂದ ಮೇಲೆ ಸಂತೃಪ್ತಿಯ ಭಾವ. ಯಾವ ತಳಮಳವೂ ಇಲ್ಲದೆ ಹೊಟ್ಟೆ ಹಗುರಾದ ಭಾವ. ಅದಕ್ಕೇ ಮೊಸರನ್ನವೆಂದರೆ ಕೇವಲ ಆಹಾರವಲ್ಲ. ಅದೊಂದು ಭಾವನೆ. ಆದರೆ ಬಹಳ ಮಂದಿ ಅದ್ಭುತ ರುಚಿಯ ಮೊಸರನ್ನವನ್ನು ಮನೆಯಲ್ಲಿ ಮಾಡುವಲ್ಲಿ ಸೋಲುತ್ತಾರೆ. ಹೊರಗೆ ಹೊಟೇಲಿನಲ್ಲಿ ತಿಂದ ಮೊಸರನ್ನದ ರುಚಿ, ಮನೆಯಲ್ಲಿ ಕೆಲವೊಮ್ಮೆ ಬರದು. ಮೊಸರನ್ನ ರುಚಿಕರ ಮಾಡಲು ಏನು ಮಾಡಬೇಕು? ಇಲ್ಲಿದೆ ಮಾಹಿತಿ.

VISTARANEWS.COM


on

Curd Rice Recipe
Koo

ದಕ್ಷಿಣ ಭಾರತೀಯರಿಗೆ ಮೊಸರನ್ನ ಎಂದರೆ ಅಮೃತದ ಹಾಗೆ. ಏನೂ ಇಲ್ಲದ ಹೊತ್ತಲ್ಲಿ, ಹೊಟ್ಟೆ ತಣ್ಣಗಿರಲು ಬಯಸುವ ಹೊತ್ತಲ್ಲಿ, ಬೇಸಿಗೆಯ ಬಿಸಿಲಿಗೆ ದಣಿದು ಬಂದಾಗ ನೆನಪಾಗುವುದು ಮೊಸರನ್ನ. ಮೊಸರನ್ನ ಹೊಟ್ಟೆಗೆ ಮನಸ್ಸಿಗೆ ಹಿತವಾಗಿರುತ್ತದೆ. ತಿಂದ ಮೇಲೆ ಸಂತೃಪ್ತಿಯ ಭಾವ. ಯಾವ ತಳಮಳವೂ ಇಲ್ಲದೆ ಹೊಟ್ಟೆ ಹಗುರಾದ ಭಾವ. ಅದಕ್ಕೇ ಮೊಸರನ್ನವೆಂದರೆ ಕೇವಲ ಆಹಾರವಲ್ಲ. ಅದೊಂದು ಭಾವನೆ. ಆದರೆ ಬಹಳ ಮಂದಿ ಅದ್ಭುತ ರುಚಿಯ ಮೊಸರನ್ನವನ್ನು ಮನೆಯಲ್ಲಿ ಮಾಡುವಲ್ಲಿ ಸೋಲುತ್ತಾರೆ. ಹೊರಗೆ ಹೊಟೇಲಿನಲ್ಲಿ ತಿಂದ ಮೊಸರನ್ನದ ರುಚಿ, ಮನೆಯಲ್ಲಿ ಕೆಲವೊಮ್ಮೆ ಬರದು. ಇಷ್ಟು ಸಿಂಪಲ್‌ ಮೊಸರನ್ನವನ್ನು ಮಾಡುವುದೂ ಕೂಡಾ ಯಾಕೆ ಬರುವುದಿಲ್ಲ ಎಂದು ಕೆಲವೊಮ್ಮೆ ಗೊಂದಲವೂ ಆಗಬಹುದು. ಆದರೆ, ಎಷ್ಟೇ ಸಿಂಪಲ್‌ ಆದರೂ ರುಚಿಯಾದ ಮೊಸರನ್ನ ಮಾಡುವುದೂ ಕೂಡಾ ಒಂದು ಕಲೆ. ಯಾಕೆಂದರೆ ರುಚಿಯಾದ ಮೊಸರನ್ನದ ಗುಟ್ಟು ಅಡಗಿರುವುದು ಅದರ ಕ್ರೀಮೀಯಾದ ಸ್ವರೂಪದಲ್ಲಿ. ಅದು ಹೆಚ್ಚು ತೆಳುವೂ ಆಗಿರಬಾರದು, ಗಟ್ಟಿಯೂ ಆಗಿರಬಾರದು. ಹದವಾದ ಕ್ರೀಮಿನಂತೆ ಬಾಯಿಗಿಟ್ಟರೆ ಐಸ್‌ಕ್ರೀಮಿನಂತೆ ಕರಗುವ, ಹೊಟ್ಟೆ ತಂಪೆನಿಸುವ ಮೊಸರನ್ನವನ್ನು ನೀವು ಮನೆಯಲ್ಲಿ ಮಾಡುವುದಿದ್ದರೆ ಈ ಸಿಂಪಲ್‌ (Curd Rice Recipe) ವಿಚಾರಗಳನ್ನು ಮರೆಯದಿರಿ.

Health Benefits Of Curd Rice

ಅನ್ನ ಒಳ್ಳೆಯ ಗುಣಮಟ್ಟದ್ದಾಗಿರಲಿ

ಯಾವುದೋ ಅನ್ನವನ್ನು ಮೊಸರನ್ನಕ್ಕೆ ಬಳಸಬೇಡಿ. ಮೊಸರನ್ನಕ್ಕೆ ಬಳಸುವ ಅನ್ನ ಒಳ್ಳೆಯ ಗುಣಮಟ್ಟದ್ದಾಗಿರಲಿ. ಯಾಕೆಂದರೆ ಇಲ್ಲಿ ಅನ್ನಕ್ಕೆ ಬಹಳ ಮುಖ್ಯ ಪಾತ್ರವಿದೆ. ಬಾಸುಮತಿ ಅಕ್ಕಿಯ ಅನ್ನವಾದರೆ ಒಳ್ಳೆಯ ಘಮ ಹಾಘೂ ರುಚಿಯೂ ಬರುತ್ತದೆ. ಅಷ್ಟೇ ಅಲ್ಲ, ಅಕ್ಕಿಗೆ ಬೇಯಲು ಸರಿಯಾದ ಸಮಯ ಕೊಡಿ. ಅತಿಯಾಗದಂತೆ, ಹಾಗೆ ಕಡಿಮೆಯೂ ಆಗದಂತೆ ಅಕ್ಕಿಯನ್ನು ಬೇಯಿಸಬೇಕು.

ತಾಜಾ ಮೊಸರನ್ನೇ ಬಳಸಿ

ಯಾವಾಗಲೂ, ಉಳಿದ ಮೊಸರನ್ನು, ಬೇಡವಾದ ಮೊಸರನ್ನು ಮೊಸರನ್ನಕ್ಕೆ ಬಳಸಬೇಡಿ. ತಾಜಾ ಮೊಸರನ್ನೇ ಬಳಸಿ. ಹುಳಿ ಬಂದ ಮೊಸರು ಇದಕ್ಕೆ ಸಲ್ಲ. ಮನೆಯಲ್ಲೇ ಮಾಡಿದ ಮೊಸರಾದರೆ ಒಳ್ಳೆಯದು. ಅನ್ನ ಬೆಂದು ತಣಿದ ಮೇಲಷ್ಟೇ ಮೊಸರನ್ನು ಅನ್ನಕ್ಕೆ ಸೇರಿಸಿ. ಇಷ್ಟು ತಾಳ್ಮೆ ನಿಮ್ಮಲ್ಲಿದ್ದರೆ ರುಚಿಯಾದ ಮೊಸರನ್ನ ಮಾಡಬಹುದು.

Curd Rice

ಕೆನೆಯನ್ನೂ ಇದಕ್ಕೆ ಹಾಕಬಹುದು

ಮೊಸರನ್ನ ರುಚಿಯಾಗಿ ಬರಬೇಕೆಂದರೆ ಹಾಲಿನ ಕೆನೆಯನ್ನೂ ಇದಕ್ಕೆ ಹಾಕಬಹುದು. ಫ್ರೆಶ್‌ ಕ್ರೀಮನ್ನು ಇದಕ್ಕೆ ಹಾಕಿದರೆ ಅಂತಹ ಟೆಕ್ಷ್ಚರ್‌ ಪಡೆಯಬಹುದು. ಇಷ್ಟವಾಗದೆ ಇದ್ದರೆ ಹಾಕದೆಯೂ ಇರಬಹುದು. ಇದು ಅವರವರ ಆಯ್ಕೆಗೆ ಬಿಟ್ಟದ್ದು. ಆದರೆ, ಕ್ರೀಂ ಹಾಕುವಾಗ ಹಾಲನ್ನೂ ಸ್ವಲ್ಪ ಸೇರಿಸಲು ಮರೆಯದಿರಿ.

ಮೊಸರಿಗೆ ಏನು ಹಾಕಬೇಕು?

ಮೊಸರನ್ನ ಎಂದರೆ ಬಹಳ ಮಂದಿ, ಮೊಸರು ಹಾಗೂ ಅನ್ನ ಎಂದಷ್ಟೇ ತಿಳಿದುಕೊಳ್ಳುವವರಿದ್ದಾರೆ. ಆದರೆ, ಮೊಸರನ್ನ ರುಚಿಯಾಗಲು ಇದು ಬಿಟ್ಟು ಬೇರೆ ಕೆಲವು ವಿಚಾರಗಳೂ ಮುಖ್ಯವಾಗುತ್ತದೆ. ಕೆಲವು ತರಕಾರಿ, ಹಣ್ಣುಗಳನ್ನು ಸೇರಿಸುವ ಮೂಲಕವೂ ಮೊಸರನ್ನ ಅಮೃತವಾಗಿ ಬದಲಾಗುತ್ತದೆ. ಮುಖ್ಯವಾಗಿ, ಕ್ಯಾರೆಟ್‌, ಸೌತೆಕಾಯಿ, ಮಾವು, ದಾಳಿಂಬೆ ಇತ್ಯಾದಿಗಳು ಮೊಸರನ್ನಕ್ಕೆ ಚೆನ್ನಾಗಿ ಹೊಂದಿಕೊಳ್ಳುತ್ತದೆ.

ಇದನ್ನೂ ಓದಿ: Hair Growth Tips: ಕೂದಲಿನ ಆರೈಕೆಯಲ್ಲಿ ಮೆಂತೆಯ ಜಾದೂ ಕಂಡಿದ್ದೀರಾ?

ಒಗ್ಗರಣೆ ಮರೆಯಬೇಡಿ

ಒಗ್ಗರಣೆ ಹಾಕುವುದರಲ್ಲಿ ಕಂಜೂಸಿತನ ತೋರಿಸಬೇಡಿ. ಎಣ್ಣೆಯಲ್ಲಿ ಸಾಸಿವೆ, ಉದ್ದಿನಬೇಳೆ, ಗೋಡಂಬಿ, ಕರಿಬೇವನ್ನು ಧಾರಾಳವಾಗಿ ಹಾಕಿ ಒಗ್ಗರಣೆ ಮಾಡಿ. ಒಗ್ಗರಣೆಯಿಂದ ಮೊಸರನ್ನಕ್ಕೆ ನಿಜವಾದ ಅರ್ಥ ಬರುತ್ತದೆ ಎಂಬುದನ್ನು ನೆನಪಿಡಿ. ಕರಿಬೇವು ಇಲ್ಲವಾದರೆ ಚಿಂತಿಸಬೇಡಿ. ಕೊತ್ತಂಬರಿ ಸೊಪ್ಪಾದರೂ ಸೈ. ಆದರೆ, ಒಗ್ಗರಣೆಯನ್ನು ಎಂದಿಗೂ ಮರೆಯಬೇಡಿ.

Continue Reading
Advertisement
Mukesh Ambani
ವಾಣಿಜ್ಯ7 seconds ago

Mukesh Ambani: ಮುಕೇಶ್ ಅಂಬಾನಿಯ ಒಂದು ದಿನದ ಆದಾಯ 163 ಕೋಟಿ ರೂ! ಒಟ್ಟು ಸಂಪತ್ತೆಷ್ಟು?

Minister Dinesh Gundurao drives for the 5th Kannada Sahitya Sammelana in Bengaluru
ಬೆಂಗಳೂರು11 mins ago

Kannada Sahitya Sammelana: ಬೆಂಗಳೂರಿನಲ್ಲಿ 5ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಚಿವ ದಿನೇಶ್ ಗುಂಡೂರಾವ್ ಚಾಲನೆ

The woman shows gray hair on her head. Hair with fragments of gray hair, hair roots requiring dyeing
ಆರೋಗ್ಯ12 mins ago

Ways to Prevent Gray Hair: 30 ದಾಟುವ ಮೊದಲೇ ಕೂದಲು ಬೆಳ್ಳಗಾಗುತ್ತಿದೆಯೇ? ಇದಕ್ಕಿದೆ ಸರಳ ಪರಿಹಾರ

Yadgiri News Kolluru bridge inundation MLA Channareddy Patil tunnuru visit inspection
ಯಾದಗಿರಿ12 mins ago

Yadgiri News: ಕೃಷ್ಣಾ ನದಿ ಪ್ರವಾಹದಿಂದ ಕೊಳ್ಳುರು ಸೇತುವೆ ಮುಳುಗಡೆ; ಶಾಸಕ ಚನ್ನಾರೆಡ್ಡಿ ಪಾಟೀಲ ಭೇಟಿ

Nirmala Sahaya Hasta programme by Okkaliga Yuva Brigade on 28th July and 1st 3rd and 5th August
ಬೆಂಗಳೂರು13 mins ago

Bengaluru News: ಒಕ್ಕಲಿಗ ಯುವ ಬ್ರಿಗೇಡ್‌ನಿಂದ ಜು.28ರಂದು ʼನಿರ್ಮಲ ಸಹಾಯ ಹಸ್ತʼ ಕಾರ್ಯಕ್ರಮ

Karnataka weather Forecast
ಮಳೆ14 mins ago

Karnataka Weather : ವೀಕೆಂಡ್‌ ಮೋಜಿಗೆ ಮಳೆರಾಯ ಅಡ್ಡಿ; ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

Drowned in water
ಬಳ್ಳಾರಿ27 mins ago

Drowned in water : ಮೀನು ಹಿಡಿಯುವಾಗ ಫಿಟ್ಸ್‌ ಬಂದು ನದಿಗೆ ಬಿದ್ದ ಮೀನುಗಾರ

HD Kumaraswamy
ಪ್ರಮುಖ ಸುದ್ದಿ50 mins ago

HD Kumaraswamy: ರಾಜ್ಯದಲ್ಲಿ ನಾಳೆ ಚುನಾವಣೆ ನಡೆದ್ರೂ ಕಾಂಗ್ರೆಸ್‌ ಮನೆಗೆ; ಭವಿಷ್ಯ ನುಡಿದ ಕುಮಾರಸ್ವಾಮಿ

Paris Olympics 2024
ಪ್ರಮುಖ ಸುದ್ದಿ54 mins ago

Paris Olympics 2024 : ಶೂಟಿಂಗ್​ನಲ್ಲಿ ಭಾರತಕ್ಕೆ ಖುಷಿ ಸುದ್ದಿ; ಮಹಿಳೆಯರ 10 ಮೀಟರ್ ಏರ್​ ಪಿಸ್ತೂಲ್ ವಿಭಾಗದಲ್ಲಿ ಮನು ಭಾಕರ್​ ಫೈನಲ್​ಗೆ

Paris Olympics 2024
ಫ್ಯಾಷನ್56 mins ago

Paris Olympics 2024: ಭಾರತೀಯ ಅಥ್ಲೀಟ್‌ಗಳ ಡ್ರೆಸ್‌ ಕೋಡ್‌ ವಿನ್ಯಾಸಕ್ಕೆ ಜನರ ಮಿಶ್ರ ಪ್ರತಿಕ್ರಿಯೆ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka weather Forecast
ಮಳೆ14 mins ago

Karnataka Weather : ವೀಕೆಂಡ್‌ ಮೋಜಿಗೆ ಮಳೆರಾಯ ಅಡ್ಡಿ; ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

ramanagara news
ರಾಮನಗರ5 hours ago

Ramanagar News : ರಾಮನಗರದಲ್ಲಿ ಎರಡು ಜಡೆ ಹಾಕಿಲ್ಲವೆಂದು ವಿದ್ಯಾರ್ಥಿನಿಯರ ಕೂದಲು ಕತ್ತರಿಸಿದ ಶಿಕ್ಷಕರು ಅಮಾನತು

karnataka rain
ಮಳೆ6 hours ago

Karnataka Rain : ಕಾವೇರಿ ನದಿ ತೀರದಲ್ಲಿ ಪ್ರವಾಹ ಭೀತಿ; ಮುತ್ತತ್ತಿಗೆ ಪ್ರವಾಸಿಗರ ನಿಷೇಧ, ಶ್ರೀರಂಗಪಟ್ಟಣದಲ್ಲಿ ಪಿಂಡ ಪ್ರದಾನಕ್ಕೆ ಬ್ರೇಕ್

Ankola landslide
ಉತ್ತರ ಕನ್ನಡ1 day ago

Ankola landslide: ಅಂಕೋಲಾ-ಶಿರೂರು ಗುಡ್ಡ ಕುಸಿತ; ನಾಳೆಯಿಂದ ಪ್ಲೋಟಿಂಗ್ ಪ್ಲಾಟ್‌ಫಾರಂ ಕಾರ್ಯಾಚರಣೆ

karnataka rain
ಮಳೆ1 day ago

Karnataka Rain : ಉಕ್ಕಿ ಹರಿಯುವ ನೇತ್ರಾವತಿ ನದಿಯಲ್ಲಿ ತೇಲಿ ಬಂದ ಜೀವಂತ ಹಸು

Karnataka Rain
ಮಳೆ1 day ago

Karnataka Rain: ವಿದ್ಯುತ್‌ ದುರಸ್ತಿಗಾಗಿ ಪ್ರಾಣದ ಹಂಗು ತೊರೆದು ಉಕ್ಕಿ ಹರಿಯುವ ನೀರಿಗೆ ಧುಮುಕಿದ ಲೈನ್‌ ಮ್ಯಾನ್‌!

Karnataka rain
ಮಳೆ1 day ago

Karnataka Rain : ಹಾಸನದಲ್ಲಿ ಹೇಮಾವತಿ, ಚಿಕ್ಕಮಗಳೂರಲ್ಲಿ ಭದ್ರೆಯ ಅಬ್ಬರಕ್ಕೆ ಜನರು ತತ್ತರ

karnataka Rain
ಮಳೆ2 days ago

Karnataka Rain : ಮನೆಯೊಳಗೆ ನುಗ್ಗಿದ ಮಳೆ ನೀರು; ಕಾಲು ಜಾರಿ ಬಿದ್ದು ವೃದ್ಧೆ ಸಾವು

Actor Darshan
ಸ್ಯಾಂಡಲ್ ವುಡ್2 days ago

Actor Darshan: ನಟ ದರ್ಶನ್ ಇರುವ ಜೈಲು ಕೋಣೆ ಹೇಗಿದೆ?

Actor Darshan
ಸಿನಿಮಾ2 days ago

Actor Darshan : ಹೆಂಡ್ತಿ ಮಕ್ಕಳೊಟ್ಟಿಗೆ ಚೆನ್ನಾಗಿರು.. ಸಹಕೈದಿ ಜತೆಗೆ 12 ನಿಮಿಷ ಕಳೆದ ನಟ ದರ್ಶನ್‌

ಟ್ರೆಂಡಿಂಗ್‌