Hair Care Tips: ಕೂದಲು ಚೆನ್ನಾಗಿರಬೇಕೆಂದರೆ ಯಾವ ಆಹಾರ ಸೇವಿಸಬೇಕು? - Vistara News

ಆರೋಗ್ಯ

Hair Care Tips: ಕೂದಲು ಚೆನ್ನಾಗಿರಬೇಕೆಂದರೆ ಯಾವ ಆಹಾರ ಸೇವಿಸಬೇಕು?

ಈಗಿನ ಗುಜರಿ ತಿಂಡಿಗಳ (Hair care tips) ಭರಾಟೆಯಲ್ಲಿ ಸತ್ವಯುತ ಆಹಾರಗಳ ಬಗ್ಗೆ ಗಮನ ನೀಡುವುದೇ ಅಪರೂಪ ಆಗಿರುವಾಗ ಕೂದಲು ಉದುರುವುದು ಸಾಮಾನ್ಯ ತಾನೆ? ಕೂದಲ ಆರೋಗ್ಯ ಸುಧಾರಿಸಬೇಕಾದರೆ ಎಂಥಾ ಆಹಾರ (nutrition for hair care) ಅಗತ್ಯ? ಇಲ್ಲಿದೆ ಉಪಯುಕ್ತ ಮಾಹಿತಿ.

VISTARANEWS.COM


on

Hair Care Tips
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಕೂದಲೆಂದರೆ (Hair care tips) ಕೇವಲ ತಲೆ ಮೇಲೆ ಕೂತಿರುವ ವಸ್ತುವಲ್ಲ. ಅದು ಎಂಥೆಂಥ ಕೆಲಸಕ್ಕೆಲ್ಲಾ ಸಂಗಾತಿ ಗೊತ್ತೇ… ವಯ್ಯಾರ ಮಾಡಲು, ಜಗಳ ಕಾಯಲು, ನಾಚಿಕೆ ತೋರಲು, ಚಂದ ಕಾಣಲು, ಬೇಸರ ಕಳೆಯಲು, ಹೊತ್ತು ಹಾಳುಮಾಡಲು, ಹೆರಳು ಹಾಕುವ ನೆವದಲ್ಲಿ ಹರಟೆ ಹೊಡೆಯಲು, ಕೋಪ ತೋರಲು… ಒಂದೇ ಎರಡೇ! ಈಗಿನವರಿಗೆ ಉದ್ದ ಕೂದಲೇ ಅಪರೂಪ, ಹಾಗಾದರೆ ಈ ಭಾವಗಳನ್ನೆಲ್ಲಾ ತೋರಿಸುವುದಿಲ್ಲವೇ ಎಂದರೆ, ಹಾಗಲ್ಲ. ನೀಳವೇಣಿಯ ಝಳಪಿಲ್ಲದೆಯೇ ಇದಿಷ್ಟೂ ಭಾವಗಳನ್ನು ಪ್ರಕಟಿಸುವುದು ಅನಿವಾರ್ಯ. ಆದರೆ ಉದ್ದ ಕೂದಲು ಇದ್ದವರ ಸಂಖ್ಯೆ ಕಡಿಮೆಯಾಗಿರುವುದಂತೂ ಹೌದು. ಈಗಿನ ಗುಜರಿ ತಿಂಡಿಗಳ ಭರಾಟೆಯಲ್ಲಿ ಸತ್ವಯುತ ಆಹಾರಗಳ ಬಗ್ಗೆ ಗಮನ ನೀಡುವುದೇ ಅಪರೂಪ ಆಗಿರುವಾಗ ಕೂದಲು ಉದುರುವುದು ಸಾಮಾನ್ಯ ತಾನೆ? ಕೂದಲ ಆರೋಗ್ಯ ಸುಧಾರಿಸಬೇಕಾದರೆ ಎಂಥಾ ಆಹಾರ ಅಗತ್ಯ?

Malnutrition food

ಅಪೌಷ್ಟಿಕ ಆಹಾರದಿಂದ ಪ್ರಯೋಜನವಿಲ್ಲ

ಅಪೌಷ್ಟಿಕ ಆಹಾರದಿಂದ ಕೂದಲು ಉದುರುವುದನ್ನು ತಡೆಗಟ್ಟಲಾಗದು. ಸಮತೋಲಿತ ಆಹಾರದ ಸೇವನೆಯಿಂದ ಮಾತ್ರವೇ ಕೂದಲುಗಳ ಆರೋಗ್ಯವನ್ನು ಹೆಚ್ಚಿಸಿಕೊಳ್ಳಬಹುದು. ಕೇಶ ಸಮೃದ್ಧಿಗೆ ವಿಟಮಿನ್‌ ಡಿ, ಬಿ12, ಕಬ್ಬಿಣ, ಬಯೋಟಿನ್‌, ರೈಬೋಫ್ಲೇವಿನ್‌ ಮತ್ತು ಕೆಲವು ಸೂಕ್ಷ್ಮ ಪೋಷಕಾಂಶಗಳು ಅಗತ್ಯವಾಗಿ ಬೇಕು. ಇವೆಲ್ಲವಕ್ಕೂ ಪೂರಕವಾದ ಆಹಾರಗಳ ಪಟ್ಟಿ ಇಲ್ಲಿದೆ.

ಋತುಮಾನದ ಹಣ್ಣುಗಳು

ಋತುಮಾನದಲ್ಲಿ ದೊರೆಯುವ ಹಲವು ರೀತಿಯ ಕಾಡು ಹಣ್ಣುಗಳು ಸೂಕ್ಷ್ಮ ಪೌಷ್ಟಿಕಾಂಶಗಳು ಮತ್ತು ವಿಟಮಿನ್‌ ಸಿ ಗಳ ಆಗರ. ಚಳಿಗಾಲದಲ್ಲಿ ದೊರೆಯುವ ಬೆಟ್ಟದ ನೆಲ್ಲಿಕಾಯಿ, ನೇರಳೆ, ಅಮಟೆ, ಬಿಂಬಲದಂಥ ಹಲವು ಕಾಡು ಫಲಗಳು ಎ ಮತ್ತು ಸಿ ವಿಟಮಿನ್‌ ಹೇರಳವಾಗಿ ಹೊಂದಿವೆ. ಇದಲ್ಲದೆ, ಚೆರ್ರಿ, ಸ್ಟ್ರಾಬೆರ್ರಿಯಂಥ ಹಣ್ಣುಗಳೂ ಸಹ ವಿಟಮಿನ್‌ ಸಿ ಜೀವಸತ್ವದ ಖನಿಗಳು. ಇದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಸುವುದೇ ಅಲ್ಲದೆ, ಕೂದಲ ಆರೋಗ್ಯಕ್ಕೆ ಅಗತ್ಯವಾಗಿ ಬೇಕಾದ ಕೊಲಾಜಿನ್‌ ಉತ್ಪತ್ತಿಗೆ ಮತ್ತು ಕಬ್ಬಿಣದ ಅಂಶವನ್ನು ಹೀರಿಕೊಳ್ಳುವುದಕ್ಕೆ ಸಹಾಯಕವಾಗಿತ್ತದೆ.

the egg

ಮೊಟ್ಟೆ

ಕೂದಲುಗಳ ಬೆಳವಣಿಗೆಗೆ ಅಗತ್ಯವಾಗಿ ಬೇಕಾದ ಪ್ರೊಟೀನ್‌ ಮತ್ತು ಬಯೋಟಿನ್‌ಗಳು ಮೊಟ್ಟಯಲ್ಲಿ ಸಮೃದ್ಧವಾಗಿವೆ. ಕೂದಲು ಉದುರುವುದು ದೇಹದಲ್ಲಿ ಪ್ರೊಟೀನ್‌ ಕೊರತೆಯ ಸಂಕೇತವೂ ಆಗಿರಬಹುದು. ಕೂದಲ ಬೆಳವಣಿಗೆಗೆ ಅಗತ್ಯವಾಗಿ ಬೇಕಾದ ಕೆರಾಟಿನ್‌ ಎಂಬ ಪ್ರೊಟೀನ್‌ ಉತ್ಪತ್ತಿ ಮಾಡಲು ಬಯೋಟಿನ್‌ ಅವಶ್ಯಕ. ಮೊಟ್ಟೆಯಲ್ಲಿ ಜಿಂಕ್‌, ಸೆಲೆನಿಯಂ ಮುಂತಾದ ಹಲವು ಬಗೆಯ ಅಗತ್ಯ ಪೋಷಕಾಂಶಗಳಿದ್ದು, ದೇಹಾರೋಗ್ಯ ಉತ್ತಮಗೊಳ್ಳಲು ನೆರವಾಗುತ್ತವೆ.

ಸೊಪ್ಪು, ಹಸಿರು ತರಕಾರಿಗಳು

ಪಾಲಕ್‌, ಮೆಂತೆ, ಸಬ್ಬಸಿಗೆ ಮುಂತಾದ ಸೊಪ್ಪುಗಳು ಕಬ್ಬಿಣ, ವಿಟಮಿನ್‌ಗಳು ಮತ್ತು ಫೋಲೇಟ್‌ಗಳನ್ನು ಹೊಂದಿರುವಂಥವು. ಈ ಆಹಾರಗಳು ಮಾತ್ರವೇ ಅಲ್ಲ, ಬೀಟಾ ಕ್ಯಾರೋಟಿನ್‌ ಸಾಕಷ್ಟು ಪ್ರಮಾಣದಲ್ಲಿರುವ ಬೀಟ್‌ರೂಟ್‌, ಸಿಹಿ ಗೆಣಸು ಮುಂತಾದ ತರಕಾರಿಗಳು ಸಹ ಕೂದಲ ಆರೋಗ್ಯ ವೃದ್ಧಿಗೆ ನೆರವಾಗುತ್ತವೆ. ಜೊತೆಗೆ ಬ್ರೊಕೊಲಿ, ಎಲೆಕೋಸು, ನುಗ್ಗೆಕಾಯಿ ಮುಂತಾದ ಹಸಿರು ತರಕಾರಿಗಳು ಅಗತ್ಯ.

seeds and castor oil

ಎಣ್ಣೆ ಬೀಜಗಳು

ಒಮೇಗಾ 3 ಮತ್ತು ವಿಟಮಿನ್‌ ಇ ವಿಫುಲವಾಗಿರುವ ಬಾದಾಮಿ, ಸೂರ್ಯಕಾಂತಿ ಬೀಜ, ಚಿಯಾ ಮತ್ತು ಅಗಸೆ ಬೀಜ ಮುಂತಾದವು ನಮ್ಮ ಆಹಾರದ ಅಗತ್ಯ ಭಾಗ ಆಗಿರಲೇ ಬೇಕಾದಂಥವು. ಜಿಂಕ್‌ ಸೆಲೆನಿಯಂನಂಥ ಇನ್ನಿತರ ಪೌಷ್ಟಿಕಾಂಶಗಳನ್ನೂ ಹೊಂದಿರುವ ಈ ಎಣ್ಣೆ ಬೀಜಗಳು, ನಮ್ಮ ದೇಹಕ್ಕೆ ಹೆಚ್ಚುವರಿ ಕ್ಯಾಲರಿಗಳನ್ನು ಅಷ್ಟಾಗಿ ಸೇರಿಸದೆಯೇ ಉಪಕಾರ ಮಾಡುತ್ತವೆ. ನಾವೇನು ತಿನ್ನುತ್ತೇವೆ ಎಂಬುದಕ್ಕೆ ಬೇರೆ ಸಾಕ್ಷಿ ಬೇಕಿಲ್ಲ, ನಮ್ಮ ಆರೋಗ್ಯವೇ ಸಾಕು. ನಳನಳಿಸುವ ಸೊಂಪಾದ ಕೂದಲು ಬೇಕೆ? ಸತ್ವಯುತ ಆಹಾರ ತಿನ್ನುವುದೊಂದೇ ಮಾರ್ಗ.

ಇದನ್ನೂ ಓದಿ: Improve Oral Health: ಹಣ್ಣುಗಳ ಸೇವನೆಯಿಂದ ಬಾಯಿಯ ಆರೋಗ್ಯ ಸುಧಾರಿಸುತ್ತದೆಯೆ?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

Shikakai For Hair: ತಲೆ ಕೂದಲಿಗೆ ಶ್ಯಾಂಪೂ ಒಳ್ಳೆಯದೋ ಸೀಗೆಕಾಯಿ ಸೂಕ್ತವೋ?

ʻಎಣ್ಣೆ-ಸೀಗೆಕಾಯಿ ಸಂಬಂಧʼ ಎಂಬ ನುಡಿಗಟ್ಟೇ ಸಾಕು ಸ್ವಚ್ಛತೆಯಲ್ಲಿ ಸೀಗೆಕಾಯಿಯ ಸಾಮರ್ಥ್ಯ ಎಷ್ಟು ಎನ್ನುವುದನ್ನು ತಿಳಿಯುವುದಕ್ಕೆ. ಕೂದಲಿನ ಆರೈಕೆಯಲ್ಲಿ ಶತಮಾನಗಳಿಂದ ಇದು ಪ್ರಮಾಣೀಕೃತಗೊಂಡಿದೆ. ಆದರೆ ಕೂದಲಿಗೆ ಬೇಕಾದಂಥ ಒಳ್ಳೆಯ ಸತ್ವಗಳು ಏನಿವೆ ಸೀಗೆಕಾಯಿಯಲ್ಲಿ? ಈ ಕುರಿತ ಉಪಯುಕ್ತ (Shikakai For Hair) ಮಾಹಿತಿ ಇಲ್ಲಿದೆ.

VISTARANEWS.COM


on

Shikakai For Hair
Koo

ಹಳೆಯ ಕಾಲದಿಂದಲೂ ತಲೆಗೂದಲ ಆರೈಕೆಗೆ ಸೀಗೆಕಾಯಿ ಅಥವಾ ಶಿಕಾಕಾಯಿ ಬಳಕೆಯಲ್ಲಿದೆ. ಈಗಿನಂತೆ ಕಡಿಮೆ ಜಿಡ್ಡಿನ ಎಣ್ಣೆಗಳು ಇಲ್ಲದ ಕಾಲದಲ್ಲಿ, ದಿನವೂ ಎಣ್ಣೆಯನ್ನು ನಿಯಮಿತವಾಗಿ ಕೂದಲಿಗೆ ಲೇಪಿಸುತ್ತಿದ್ದ ಕಾಲದಲ್ಲಿ ತಲೆಯ ಸ್ವಚ್ಛತೆಯ ಹೊಣೆಯನ್ನು ಶತಮಾನಗಳ ಕಾಲ ನಿರ್ವಹಿಸಿದ್ದು ಸೀಗೆಕಾಯಿಯೆ. ಯಾವುದೇ ಜಾಹೀರಾತುಗಳ ಪ್ರಚಾರವಿಲ್ಲದೆ, ಬಣ್ಣದ ಪ್ಯಾಕಿಂಗ್‌ಗಳ ಅಬ್ಬರವಿಲ್ಲದೆ ಅಜ್ಜಿ-ಅಮ್ಮಂದಿರು ತುಂಬಿಡುತ್ತಿದ್ದ ಡಬ್ಬಿಗಳಿಂದ ನೇರವಾಗಿ ತರಳೆಯರ ಹೆರಳನ್ನು ಶುಚಿ ಮಾಡಿ, ಕೇಶರಾಶಿಯನ್ನು ಆರೋಗ್ಯವಾಗಿ ಇರಿಸುತ್ತಿತ್ತು. ಬ್ಯಾಕ್ಟೀರಿಯ ವಿರೋಧಿ, ಫಂಗಸ್‌ ನಿರೋಧಕ ಸಾಮರ್ಥ್ಯವಿರುವ ಇದು ಉರಿಯೂತ ಶಾಮಕ ಗುಣವನ್ನು ಸಹ ಹೊಂದಿಗೆ. ಹಾಗಾಗಿ ತಲೆಯ ಚರ್ಮವನ್ನು ತುರಿಕೆ, ಹೊಟ್ಟು, ಸೋಂಕುಗಳಿಂದ ಮುಕ್ತವಾಗಿರಿಸುವುದಕ್ಕೆ ಸೀಗೆಕಾಯಿಗೆ ಸಾಧ್ಯ. ಇನ್ನೂ ಏನೆಲ್ಲಾ ಗುಣಗಳಿವೆ ಇದರಲ್ಲಿ (Shikakai For Hair) ಕೇಶಗಳ ಆರೈಕೆಗೆ ಬೇಕಾಗುವಂಥದ್ದು.

Shikakai

ಸ್ವಚ್ಛತೆಯಲ್ಲಿ ಮುಂದೆ

ʻಎಣ್ಣೆ ಸೀಗೆಕಾಯಿ ಸಂಬಂಧʼ ಎಂಬ ನುಡಿಗಟ್ಟೇ ನಮಗೆ ಇದರ ಸ್ವಚ್ಛತೆಯ ಸಾಮರ್ಥ್ಯಕ್ಕೆ ನೀಡಿದ ಪ್ರಮಾಣಪತ್ರದಂತಿದೆ. ವಾತಾವರಣದ ಧೂಳು, ಮಣ್ಣು, ಹೊಗೆಯಂಥ ಕೊಳೆಗಳನ್ನು ನಾಜೂಕಾಗಿಯೇ ಸ್ವಚ್ಛಗೊಳಿಸುವ ಕ್ಷಮತೆ ಇದರದ್ದು. ತಲೆಯ ಚರ್ಮದ ನೈಸರ್ಗಿಕ ತೈಲದಂಶವನ್ನು ತೆಗೆಯದಂತೆ, ಕೊಳೆಯನ್ನಷ್ಟೇ ತೆಗೆದು ಕೂದಲಿಗೆ ಸ್ವಚ್ಛ ಮತ್ತು ತಾಜಾ ಅನುಭವ ನೀಡುತ್ತದೆ.

Hair Growth Tips

ಕೇಶವರ್ಧನೆ

ಕೂದಲಿನ ಬೆಳವಣಿಗೆಗೆ ಸೀಗೆಕಾಯಿ ನೆರವು ನೀಡುತ್ತದೆ. ವಿಟಮಿನ್‌ ಎ, ಸಿ ಮತ್ತು ಕೆ ಜೀವಸತ್ವದ ಅಂಶಗಳು ಇದರಲ್ಲಿವೆ. ಇವುಗಳು ಕೂದಲಿನ ಬುಡವನ್ನು ಬಿಗಿ ಮಾಡಿ, ಕೂದಲೆಳೆಗಳನ್ನು ಸುದೃಢಗೊಳಿಸುತ್ತವೆ. ಇದರಿಂದ ಕೂದಲು ಉದುರುವುದು ಕಡಿಮೆಯಾಗಿ, ಬೆಳವಣಿಗೆ ಹೆಚ್ಚುತ್ತದೆ. ಜಾಹೀರಾತುಗಳಲ್ಲಿ ತೋರಿಸಿದಷ್ಟು ಅಲ್ಲದಿದ್ದರೂ, ಆರೋಗ್ಯಕರವಾದ ಉದ್ದ ಕೂದಲನ್ನಂತೂ ಹೊಂದಬಹುದು.

dandruff

ಹೊಟ್ಟು ನಿವಾರಣೆ

ಒಮ್ಮೆ ತಲೆ ಹೊಟ್ಟಿನ ಸಮಸ್ಯೆ ಪ್ರಾರಂಭವಾದರೆ, ಅದರಿಂದ ಪಾರಾಗುವುದಕ್ಕೆ ಏನೇನೋ ಒದ್ದಾಟಗಳನ್ನು ಮಾಡಬೇಕಾಗುತ್ತದೆ. ಹೊಟ್ಟು ಹೋಗಿಸುವಂಥ ಹತ್ತಾರು ಶಾಂಪೂಗಳನ್ನು ಬಳಸುತ್ತೇವೆ. ಕೆಲವೊಮ್ಮೆ ವೈದ್ಯರ ಬಳಿ ಔಷಧಿಯನ್ನೂ ತೆಗೆದುಕೊಳ್ಳುವ ಪ್ರಮೇಯ ಬರುತ್ತದೆ. ಇಷ್ಟಾಗಿ ಹೊಟ್ಟು ದೂರ ಮಾಡಲು ಆಗದೇ ಇರಬಹುದು. ಆದರೆ ಫಂಗಸ್‌ ವಿರೋಧಿ ಗುಣವನ್ನು ಹೊಂದಿರುವ ಸೀಗೆಕಾಯಿಯ ನಿಯಮಿತವಾದ ಬಳಕೆಯಿಂದ ಹೊಟ್ಟು ಕ್ರಮೇಣ ಮಾಯವಾಗುತ್ತದೆ.

ಕಂಡೀಶನರ್

ಸೀಗೆಕಾಯಿಯಲ್ಲಿರುವ ಸಪೋನಿನ್‌ ಎಂಬ ಅಂಶವು ಕೂದಲಿನ ಕಂಡೀಶನರ್‌ ರೀತಿಯಲ್ಲಿ ಕೆಲಸ ಮಾಡುತ್ತದೆ. ಕೂದಲುಗಳ ಪಿಎಚ್‌ ಸಹ ಸಮತೋಲನದಲ್ಲಿ ಇರುವಂತೆ ನೋಡಿಕೊಳ್ಳುತ್ತದೆ. ಯಾವುದೇ ರಾಸಾಯನಿಕವಿಲ್ಲದ ಈ ನೈಸರ್ಗಿಕ ಕಂಡೀಶನರ್‌ ಬಳಕೆಯಿಂದ ಕೂದಲಿನ ಹೊಳಪು ಹೆಚ್ಚಿ, ಮೃದುವಾಗುತ್ತದೆ. ಇದರಿಂದ ಕೂದಲು ಒರಟಾಗಿ ಬಾಚುವಾಗ ತುಂಡಾಗುವುದನ್ನು ತಪ್ಪಿಸಬಹುದು.

Shikakai photo

ತುದಿ ಕವಲಿಲ್ಲ

ಕೂದಲಿಗೆ ಅಗತ್ಯ ಪೋಷಣೆ ದೊರೆಯದಿದ್ದರೆ, ಕೇಶಗಳ ತುದಿ ಕವಲಾಗಬಹುದು. ಇದರಿಂದ ಕೂದಲು ನಿರ್ಜೀವವಾದಂತಾಗಿ, ತುಂಡಾಗುತ್ತವೆ. ಸೀಗೆಕಾಯಿಯ ಬಳಕೆಯಿಂದ ಕೂದಲಿಗೆ ಸೂಕ್ತ ಆರೈಕೆ ದೊರೆತು, ತುದಿ ಸೀಳಿದಂತಾಗಿ ಕೂದಲು ತುಂಡಾಗುವುದು ಕಡಿಮೆಯಾಗುತ್ತದೆ. ಜೊತೆಗೆ ಕೂದಲೆಳೆಗಳು ದಪ್ಪವಾಗಿಯೂ ಬೆಳೆದು, ಕೂದಲಿನ ಒಟ್ಟಾರೆ ಗಾತ್ರ ಹೆಚ್ಚುತ್ತದೆ.

ಎಲ್ಲರಿಗೂ ಸೂಕ್ತ

ರಾಸಾಯನಿಕ ಭರಿತ ಶಾಂಪೂ ಮತ್ತು ಕಂಡೀಶನರ್‌ಗಳು ಎಲ್ಲ ರೀತಿಯ ಚರ್ಮ ಮತ್ತು ಕೂದಲುಗಳಿಗೆ ಹೊಂದುವಂಥವಲ್ಲ. ಸೂಕ್ಷ್ಮ ಕೂದಲಿನವರು ಯಾವ ಶಾಂಪೂ ತಮಗೆ ಹೊಂದುತ್ತದೆ ಎಂಬ ಪ್ರಯೋಗದಲ್ಲಿಯೇ ಕೂದಲು ಕಳೆದುಕೊಳ್ಳುವುದು ಸಾಮಾನ್ಯ. ಆದರೆ ಸೌಮ್ಯ ಮತ್ತು ನೈಸರ್ಗಿಕವಾದ ಸೀಗೇಕಾಯಿ ಬಳಕೆಯಿಂದ ಇಂಥ ಸಮಸ್ಯೆಗಳಿಗೆ ಅವಕಾಶವಿಲ್ಲ.

ಇದನ್ನೂ ಓದಿ: 5:2 Diet: ಏನಿದು 5:2 ಮಧ್ಯಂತರ ಉಪವಾಸ? ಇದರ ಪ್ರಯೋಜನಗಳೇನು?

ಪರಿಸರ ಸ್ನೇಹಿ ಆಯ್ಕೆ

ಯಾವುದೇ ರಾಸಾಯನಿಕ, ಪ್ಲಾಸ್ಟಿಕ್‌ಗಳ ಹಾವಳಿಯಿಲ್ಲ ಸೀಗೆಕಾಯಿಯ ಬಳಕೆಯಲ್ಲಿ. ಪರಿಸರಕ್ಕೆ ಮಾರುಕವಾಗುವಂಥ ಯಾವುದೇ ಅಂಶ ಇದರಲ್ಲಿ ಇಲ್ಲ. ಇದನ್ನು ಬಳಸಿನ ನಂತರ ಉಳಿವಂಥ ಶೇಷವೆಲ್ಲ ವಾತಾವರಣದಲ್ಲಿ ಕರಗುವಂಥವು. ಹಾಗಾಗಿ ಕೂದಲಿನ ಸ್ವಚ್ಛತೆಗೆ ಅತ್ಯಂತ ಸೂಕ್ತವಾದ ಆಯ್ಕೆಯೆಂದರೆ ಸೀಗೆಕಾಯಿ.

Continue Reading

ಆರೋಗ್ಯ

Health Tips Kannada: ಉಪ್ಪು ತಿನ್ನುವುದು ರುಚಿಗೆ ಮಾತ್ರವಲ್ಲ, ಆರೋಗ್ಯಕ್ಕೂ ಮುಖ್ಯ!

ನಾವು ಉಪ್ಪನ್ನೇಕೆ ತಿನ್ನುತ್ತೇವೆ? ಆಹಾರದ ರುಚಿ ಹೆಚ್ಚಿಸುವುದಕ್ಕೆ ಎಂದು ಸುಲಭವಾಗಿ ಹೇಳಬಹುದು. ಆದರೆ ಅದಷ್ಟಕ್ಕೆ ಮಾತ್ರ ಉಪ್ಪು ಬೇಕೆ ನಮಗೆ? ಉಪ್ಪು ಇಲ್ಲದಿದ್ದರೆ ಕಷ್ಟವಾಗುವ ಹಾಗೆ, ಉಪ್ಪು ಹೆಚ್ಚಾದರೂ ತಿನ್ನಲಾಗದು ತಾನೇ? ಆದರೆ ಎಷ್ಟು ಉಪ್ಪು ತಿಂದರೆ ಹೆಚ್ಚು ಅಥವಾ ಕಡಿಮೆ ಎನ್ನುವುದು ಹೇಗೆ ತಿಳಿಯಬೇಕು ನಾವು? ಈ ಬಗ್ಗೆ (Health Tips Kannada) ಇಲ್ಲಿದೆ ಮಾಹಿತಿ.

VISTARANEWS.COM


on

Health Tips Kannada
Koo

ʻರುಚಿಗೆ ತಕ್ಕಷ್ಟು ಉಪ್ಪುʼ ಎಂದು (Health Tips Kannada) ಹೇಳುವುದು ಹೌದಾದರೂ ಉಪ್ಪು ಬಾಯಿಯ ರುಚಿಗೆ ಮಾತ್ರವಲ್ಲ, ದೇಹದಲ್ಲಿ ಬಹಳಷ್ಟು ಕೆಲಸಗಳನ್ನು ಮಾಡುತ್ತದೆ. ಹಾಗೆಂದು ಅದನ್ನು ಸಿಕ್ಕಾಪಟ್ಟೆ ತಿನ್ನುವಂತಿಲ್ಲ. ಆದರೆ ನಾವು ತಿನ್ನುತ್ತಿರುವ ಉಪ್ಪಿನ ಪ್ರಮಾಣ ಮಿತಿಮೀರುತ್ತಿಲ್ಲ ಎಂಬುದನ್ನು ತಿಳಿಯುವುದು ಹೇಗೆ? ಇಲ್ಲಿದೆ ಮಾಹಿತಿ.
ನಾವು ಉಪ್ಪನ್ನೇಕೆ ತಿನ್ನುತ್ತೇವೆ? ಆಹಾರದ ರುಚಿ ಹೆಚ್ಚಿಸುವುದಕ್ಕೆ ಎಂದು ಸುಲಭವಾಗಿ ಹೇಳಬಹುದು. ಆದರೆ ಅದಷ್ಟಕ್ಕೆ ಮಾತ್ರ ಉಪ್ಪು ಬೇಕೆ ನಮಗೆ? ಉಪ್ಪು ಇಲ್ಲದಿದ್ದರೆ ಕಷ್ಟವಾಗುವ ಹಾಗೆ, ಉಪ್ಪು ಹೆಚ್ಚಾದರೂ ತಿನ್ನಲಾಗದು ತಾನೇ? ಆದರೆ ಎಷ್ಟು ಉಪ್ಪು ತಿಂದರೆ ಹೆಚ್ಚು ಅಥವಾ ಕಡಿಮೆ ಎನ್ನುವುದು ಹೇಗೆ ತಿಳಿಯಬೇಕು ನಾವು? ಬಾಯಿ ರುಚಿಯ ಮೂಲಕ ಮಾತ್ರವೇ? ಕೆಲವು ಪಾಕಗಳಲ್ಲಿ ಉಪ್ಪಿನ ರುಚಿ ಹೆಚ್ಚಿಲ್ಲದಿದ್ದರೂ, ಸೋಡಿಯಂ ಅಂಶ ಹೆಚ್ಚಿದೆ ಎನ್ನುತ್ತಾರಲ್ಲ, ಇದನ್ನು ಹೇಗೆ ತಿಳಿಯಬೇಕು? ಎಷ್ಟು ಉಪ್ಪು ತಿಂದರೆ ಹೆಚ್ಚು ಎನ್ನುವುದಕ್ಕೆ ಏನಾದರೂ ಸೂಚನೆಗಳಿವೆಯೇ?

ಉಪ್ಪೇಕೆ ಬೇಕು?

ಮೊದಲಿಗೆ ಉಪ್ಪು ಎಂದರೆ ರುಚಿಗೆ ಮಾತ್ರವಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳೋಣ. ಉಪ್ಪು ಅಥವಾ ಸೋಡಿಯಂಗೆ ನಮ್ಮ ದೇಹದಲ್ಲಿ ಹೆಚ್ಚಿನ ಕೆಲಸವಿದೆ. ನಮ್ಮ ಶರೀರದ ಕೋಶಗಳಲ್ಲಿರುವ ನೀರಿನಂಶದ ನಿರ್ವಹಣೆಗೆ, ಸ್ನಾಯುಗಳ ಸಂಚಲನಕ್ಕೆ, ನರಗಳ ಕ್ಷಮತೆಗೆ, ಸಣ್ಣ ಕರುಳಿನಲ್ಲಿ ಕೆಲವು ಸತ್ವಗಳು ಹೀರಲ್ಪಡುವುದಕ್ಕೆ, ರಕ್ತದೊತ್ತಡ ನಿರ್ವಹಣೆಗೆ- ಹೀಗೆ ಬಹಳಷ್ಟು ಕೆಲಸಗಳಿಗೆ ಸೋಡಿಯಂ ಆವಶ್ಯಕ. ಇವೆಲ್ಲ ನಮಗೆ ದೊರೆಯುವ ಮುಖ್ಯ ಮೂಲವೆಂದರೆ ಉಪ್ಪು. ಆದರೆ ಅದನ್ನಾದರೂ ತಿನ್ನುವುದು ಹೆಚ್ಚಾಗಬಾರದು. ತಿನ್ನುತ್ತಿರುವ ಉಪ್ಪಿನ ಪ್ರಮಾಣ ಹೆಚ್ಚು ಎಂಬುದಕ್ಕೆ ದೇಹ ಕೆಲವು ಲಕ್ಷಣಗಳನ್ನು ತೋರಿಸುತ್ತದೆ. ಏನು ಆ ಲಕ್ಷಣಗಳು?

Blood Pressure

ರಕ್ತದೊತ್ತಡ

ಬಿಪಿ ಅಥವಾ ರಕ್ತದೊತ್ತಡ ಹೆಚ್ಚಿದೆಯೇ? ಉಪ್ಪು ನೇರವಾಗಿ ಅಲ್ಲದಿದ್ದರೂ, ಪರೋಕ್ಷವಾಗಿ ತಿನ್ನುತ್ತಿರುವ ಪ್ರಮಾಣ ಹೆಚ್ಚಿದೆಯೇ ಎಂಬುದನ್ನು ಗಮನಿಸಿ. ಹೆಚ್ಚು ಉಪ್ಪಿನಕಾಯಿ, ಚಿಪ್ಸ್‌, ಬೇಕರಿ ತಿಂಡಿಗಳು ಹೊಟ್ಟೆ ಸೇರುತ್ತಿವೆಯೇ? ಹೌದೆಂದಾದರೆ, ರಕ್ತದೊತ್ತಡ ಹೆಚ್ಚುವುದಕ್ಕೆ ಅದೂ ಕಾರಣವಾಗಿರಬಹುದು.

ಊದಿಕೊಳ್ಳುವುದು

ಕೈಬೆರಳುಗಳು, ಪಾದ, ಕಾಲುಗಳು, ಕಿಬ್ಬೊಟ್ಟೆಯಲ್ಲಿ ಊತ ಕಾಣುತ್ತಿದೆಯೇ? ಇದು ದೇಹದಲ್ಲಿ ದೇಹದಲ್ಲಿ ಹೆಚ್ಚಿನ ಪ್ರಮಾಣದ ನೀರಿನಂಶ ಉಳಿಯುತ್ತಿದೆ ಎಂಬುದನ್ನು ಸೂಚಿಸುತ್ತಿದೆ. ದೇಹಕ್ಕೆ ಹೆಚ್ಚಿನ ಪ್ರಮಾಣದ ಉಪ್ಪಿನಂಶ ದೊರೆತಾಗ, ಹೆಚ್ಚು ನೀರಿನಂಶ ಶರೀರದಲ್ಲಿ ಉಳಿಯುವುದು ಸಾಮಾನ್ಯ. ಹಾಗಾಗಿ ಉಪ್ಪು ಎಷ್ಟು ತಿನ್ನುತ್ತಿದ್ದೀರಿ ಎಂಬುದನ್ನು ಪರಿಶೀಲಿಸಲು ಇದು ಸಕಾಲ.

drinking water

ಬಾಯಾರಿಕೆ

ಉಪ್ಪು ತಿಂದವ ನೀರು ಕುಡಿಯಲೇ ಬೇಕೆಂಬ ಗಾದೆ ಸುಳ್ಳಲ್ಲ. ಅತಿಯಾಗಿ ಉಪ್ಪು ತಿಂದರೆ ಬಾಯಾರಿಕೆ ತಪ್ಪಿದ್ದಲ್ಲ. ಅತಿಯಾಗಿ ದಾಹ ಕಾಡುತ್ತಿದೆ ಎಂದಾದರೆ ಉಪ್ಪೆಷ್ಟು ತಿನ್ನುತ್ತಿದ್ದೀರಿ ಎಂಬುದನ್ನು ಗಮನಿಸುವುದು ಅಗತ್ಯ. ರಕ್ತದಲ್ಲಿರುವ ಅಧಿಕ ಸೋಡಿಯಂ ಅಂಶವನ್ನು ತೆಗೆಯುವ ಭರದಲ್ಲಿ ಕೋಶಗಳಲ್ಲಿರುವ ನೀರಿನಂಶವೆಲ್ಲ ಕೆಲವೊಮ್ಮೆ ಖಾಲಿಯಾಗಿಬಿಡುತ್ತದೆ. ಆಗ ಬಾಯಾರಿಕೆ ಹೆಚ್ಚುತ್ತದೆ.

Heart Health Fish Benefits

ಹೃದಯದ ಬಡಿತ ಏರುಪೇರು

ಸೋಡಿಯಂ ಮತ್ತು ಪೊಟಾಶಿಯಂನಂಥ ಖನಿಜಗಳ ಸಮತೋಲನ ವ್ಯತ್ಯಾಸವಾಗಬಹುದು ಅಧಿಕ ಉಪ್ಪು ತಿನ್ನುವುದರಿಂದ. ಇದರಿಂದ ಹೃದಯದ ಬಡಿತದಲ್ಲೂ ಏರುಪೇರು ಉಂಟಾಗಬಹುದು. ಅದರಲ್ಲೂ ಹೃದಯದ ಸಮಸ್ಯೆಗಳು ಇರುವವರಲ್ಲಿ ಈ ತೊಂದರೆ ಇನ್ನೂ ಹೆಚ್ಚಬಹುದು.

Unexplained frequent headaches Excessive Use Of Electronic Gadgets

ತಲೆನೋವು

ಯಾವುದೇ ಕಾರಣಕ್ಕೂ ತಲೆನೋವು ಬರುವುದು ಸಾಮಾನ್ಯವಾದರೂ, ದೇಹದಲ್ಲಿ ನೀರಿನಂಶ ಕಡಿಮೆಯಾದಾಗ ಬರುವುದು ಹೆಚ್ಚು. ಉಪ್ಪು ತಿನ್ನುವುದು ಹೆಚ್ಚಿದರೆ, ದೇಹದಲ್ಲಿ ನೀರಿನಂಶ ಕಡಿಮೆಯಾಗುವ ಸಾಧ್ಯತೆಯೂ ಇರುವುದರಿಂದ, ಪದೇಪದೆ ನಿರ್ಜಲೀಕರಣದಿಂದ ತಲೆನೋವು ಬರುತ್ತಿದೆ ಎಂದಾದರೆ, ತಿನ್ನುತ್ತಿರುವ ಉಪ್ಪಿನ ಪ್ರಮಾಣವೆಷ್ಟು ಎಂಬುದನ್ನು ಪರಿಶೀಲಿಸುವುದು ಮುಖ್ಯ.

ಇದನ್ನೂ ಓದಿ: Cardamom Benefits: ಏಲಕ್ಕಿ ಕೇವಲ ಘಮದಲ್ಲಷ್ಟೇ ಅಲ್ಲ, ಇದರ ಪ್ರಯೋಜನಗಳು ಎಷ್ಟೊಂದು!

ಕಿಡ್ನಿ ಸಮಸ್ಯೆ

ದೇಹಕ್ಕೆ ಅನಗತ್ಯ ಎನಿಸಿದ ಬಹಳಷ್ಟನ್ನು ವಿಸರ್ಜಿಸಲು ಮೂತ್ರಪಿಂಡಗಳು ಹಗಲಿರುಳು ಶ್ರಮಿಸುತ್ತಲೇ ಇರುತ್ತವೆ. ಉಪ್ಪಿನಂಶ ಹೆಚ್ಚು ಉಳಿಯುತ್ತಿದೆ ದೇಹದಲ್ಲಿ ಎಂದಾದರೆ ಅದನ್ನು ವಿಸರ್ಜಿಸಲು ಸಹ ಕಿಡ್ನಿಗಳು ಹೆಚ್ಚುವರಿ ಕೆಲಸ ಮಾಡಬೇಕು. ಹೀಗೆ ಅತಿಯಾಗಿ ಕೆಲಸ ಮಾಡುವುದರಿಂದ ಕ್ರಮೇಣ ಮೂತ್ರಪಿಂಡಗಳು ಸೋತು, ರೋಗಗಳಿಗೆ ಈಡಾಗಬಹುದು.

Continue Reading

ಆರೋಗ್ಯ

Health Tips: ಆರೋಗ್ಯಕರ ಆಗಿರಬೇಕಿದ್ದರೆ ನಾವು ಪ್ರತಿದಿನ ಎಷ್ಟು ಪ್ರಮಾಣದಲ್ಲಿ ಆಹಾರ ಸೇವಿಸಬೇಕು?

ನಾವು ದಿನಕ್ಕೆ ಮೂರು ಹೊತ್ತು ತಿನ್ನುವುದು ಅಧಿಕೃತವಾದರೂ, ಆಗಾಗ ಮಧ್ಯದಲ್ಲಿ ತಿನ್ನುವ ತಿಂಡಿಗಳ, ಕುರುಕಲುಗಳ, ಲೆಕ್ಕ ಇಡುವವರಲ್ಲ. ರುಚಿರುಚಿಯಾಗಿ ಏನಾದರೂ ತಿನ್ನುವುದು, ಸಂಜೆಯ ಹೊತ್ತಿನಲ್ಲಿ ಗೆಳೆಯರ ಜೊತೆ ಹೋಗಿ ರಸ್ತೆಬದಿಯಲ್ಲಿ ಏನಾದರೂ ತಿನ್ನುವುದು, ನಡುವೆ ಬಿಸಿ ಬಿಸಿ ಕಾಫಿ, ಚಹಾಗಳು ಒಂದಾದ ಮೇಲೆ ಒಂದರಂತೆ ನಾವು ಎಷ್ಟು ತಿನ್ನುತ್ತಿದ್ದೇವೆ, ಕುಡಿಯುತ್ತಿದ್ದೇವೆ ಎಂಬ ಲೆಕ್ಕ ಹಾಕಲು ಆಸ್ಪದ ನೀಡುವುದೇ ಇಲ್ಲ. ಹಾಗಾದರೆ ನಾವು ಎಷ್ಟು ಉಣ್ಣಬೇಕು? ಇಲ್ಲಿದೆ (Health Tips) ಮಾಹಿತಿ.

VISTARANEWS.COM


on

Health Tips
Koo

ಪ್ರತಿ ನಿತ್ಯವೂ ನಾವು (Health Tips) ಎಷ್ಟು ತಿನ್ನಬೇಕು? ಇದು ಎಲ್ಲರಿಗೂ ಸದಾ ಕಾಲ ಗೊಂದಲ ಇರುವ ಮಿಲಿಯನ್‌ ಡಾಲರ್‌ ಪ್ರಶ್ನೆ. ಯಾಕೆಂದರೆ, ನಾವು ದಿನಕ್ಕೆ ಮೂರು ಹೊತ್ತು ತಿನ್ನುವುದು ಅಧಿಕೃತವಾದರೂ, ಆಗಾಗ ಮಧ್ಯದಲ್ಲಿ ತಿನ್ನುವ ತಿಂಡಿಗಳ, ಕುರುಕಲುಗಳ, ಲೆಕ್ಕ ಇಡುವವರಲ್ಲ. ರುಚಿರುಚಿಯಾಗಿ ಏನಾದರೂ ತಿನ್ನುವುದು, ಸಂಜೆಯ ಹೊತ್ತಿನಲ್ಲಿ ಗೆಳೆಯರ ಜೊತೆ ಹೋಗಿ ರಸ್ತೆಬದಿಯಲ್ಲಿ ಏನಾದರೂ ತಿನ್ನುವುದು, ನಡುವೆ ಬಿಸಿ ಬಿಸಿ ಕಾಫಿ, ಚಹಾಗಳು ಒಂದಾದ ಮೇಲೆ ಒಂದರಂತೆ ನಾವು ಎಷ್ಟು ತಿನ್ನುತ್ತಿದ್ದೇವೆ, ಕುಡಿಯುತ್ತಿದ್ದೇವೆ ಎಂಬ ಲೆಕ್ಕ ಹಾಕಲು ಆಸ್ಪದ ನೀಡುವುದೇ ಇಲ್ಲ. ದಿನಗಳೆದಂತೆ ತೂಕದಲ್ಲಿ ಗಣನೀಯ ಬದಲಾವಣೆಯಾದಾಗ, ಏನಾದರೊಂದು ಆರೋಗ್ಯ ಸಮಸ್ಯೆ ಬಂದಾಗ, ನಾವು ಆರೋಗ್ಯಕರ ಜೀವನಶೈಲಿಯನ್ನು ರೂಢಿಸಿಕೊಂಡಿಲ್ಲ ಎಂದು ಜ್ಞಾನೋದಯವಾದಾಗ ನಾವೇನು ತಿನ್ನುತ್ತಿದ್ದೇವೆ ಅಥವಾ ಕುಡಿಯುತ್ತಿದ್ದೇವೆ ಎಂಬ ಬಗ್ಗೆ ಆತ್ಮವಿಮರ್ಶೆ ಮಾಡಲು ತೊಡಗುತ್ತೇವೆ. ಹಾಗೆ ನೋಡಿದರೆ, ತೂಕ ಇಳಿಸುವಿಕೆ ಇತ್ಯಾದಿಗಳ ವಿಚಾರ ಬಂದಾಗಿನಿಂದ ನಾವು ಕ್ಯಾಲರಿಗಳ ಲೆಕ್ಕ ಹಾಕಲು ಶುರು ಮಾಡುತ್ತೇವೆ. ಆಗ ನಮಗೆ, ನಾವು ದಿನಕ್ಕೆ ನಿಜಕ್ಕೂ ಎಷ್ಟೆಲ್ಲ ಕ್ಯಾಲರಿ ಆಹಾರ ಸೇವಿಸುತ್ತಾ ಇದ್ದೇವೆ ಎಂಬುದರ ಅರಿವಾಗುತ್ತದೆ. ಒಬ್ಬ ಸಾಮಾನ್ಯ ಆರೋಗ್ಯವಂತ ಪುರುಷನಿಗೆ ದಿನಕ್ಕೆ 2,400ರಿಂದ 3000 ಹಾಗೂ ಆರೋಗ್ಯವಂತ ಮಹಿಳೆಗೆ ದಿನಕ್ಕೆ 1,800ರಿಂದ 2,400 ಕ್ಯಾಲರಿವರೆಗೆ ಆಹಾರ ಬೇಕು ಎಂಬುದನ್ನು ತಜ್ಞರು ಲೆಕ್ಕ ಹಾಕಿದರೂ, ತೂಕ ಇಳಿಸಬೇಕಾದ ಮಂದಿಯ ಲೆಕ್ಕಾಚಾರ ಬೇರೆಯೇ ಇರುತ್ತದೆ. ಎಷ್ಟೇ ಈ ವಿಚಾರದಲ್ಲಿ ಅರಿಯಲು ಹೊರಟರೂ ಹೊಸ ಹೊಸ ವಿಚಾರಗಳು ತಿಳಿಯುವ ಮೂಲಕ ತಲೆ ಗೊಂದಲದ ಗೂಡಾಗುತ್ತದೆ. ಆಹಾರ ತಜ್ಞರ ಪ್ರಕಾರ ತೂಕ ಇಳಿಸುವ ಮಂದಿ ಕ್ಯಾಲರಿ ಲೆಕ್ಕಾಚಾರದಲ್ಲಿ ತಿನ್ನುವ ಅಗತ್ಯವಿಲ್ಲ. ದಿನಕ್ಕೆ ಇಷ್ಟೇ ಕ್ಯಾಲರಿಯ ಆಹಾರವನ್ನಷ್ಟೇ ಹೊಟ್ಟೆಗೆ ಕಳಿಸಬೇಕು ಎಂಬ ಲೆಕ್ಕಾಚಾರದಲ್ಲಿ ತಿನ್ನುವುದರಿಂದ ಮಾತ್ರ ತೂಕ ಇಳಿಯುತ್ತದೆ ಎಂಬುದು ಸತ್ಯವಲ್ಲ. ಹಲವು ವಿಚಾರಗಳ ಪೈಕಿ ಕ್ಯಾಲರಿ ಕೌಂಟ್‌ ಕೂಡಾ ಒಂದು ಅಷ್ಟೇ, ಆದರೆ ಏನು ತಿನ್ನುತ್ತೇವೆ ಎಂಬುದು ಹೆಚ್ಚು ಮುಖ್ಯವಾಗುತ್ತದೆ.

Eating Style

ಎಷ್ಟು ತಿನ್ನಬೇಕು?

ಹಾಗಾದರೆ ಏನು ಎಷ್ಟು ತಿನ್ನಬೇಕು ಎಂಬ ಗೊಂದಲಕ್ಕೆ ಅವರ ಉತ್ತರ ಹೀಗಿದೆ. ತೂಕ ಇಳಿಸುವ ಗಡಿಬಿಡಿಯಲ್ಲಿ, ಏನೆಲ್ಲ ಸರ್ಕಸ್‌ ಮಾಡಿ, ತಮ್ಮ ಆಹಾರ ಶೈಲಿಯನ್ನೇ ಬದಲಾಯಿಸಿಕೊಂಡು ಕಷ್ಟಪಡುವ ಮಂದಿಗೆ ಅವರು ಸರಳವಾಗಿ ಆರೋಗ್ಯವಾಗಿರಲು ತಿನ್ನಬೇಕಾದ ಆಹಾರ ಏನು ಎಂಬುದನ್ನು ವಿವರಿಸುತ್ತಾರೆ.

Indian girl eating rice

ಉಣ್ಣುವ ಕ್ರಮ ಮುಖ್ಯ

ಅವರು ಹೇಳುವ ಕೆಲವು ಮಂತ್ರಗಳ ಪೈಕಿ, ನಿಧಾನವಾಗಿ ಉಣ್ಣುವ ಕ್ರಮ ಮುಖ್ಯವಾದುದು. ನಿಧಾನವಾಗಿ, ಪ್ರತಿಯೊಂದು ತುತ್ತನ್ನೂ ಅನುಭವಿಸಿ ತಿನ್ನುವುದರಿಂದ ನಮ್ಮ ದೇಹಕ್ಕೆ ಅಗತ್ಯವಿದ್ದಷ್ಟೇ ತಿನ್ನಲು ಸಾಧ್ಯವಾಗುತ್ತದೆ. ಆಹಾರ ಹೊಟ್ಟೆಗೆ ಸೇರಿ ಅದು ಸರಿಯಾಗಿ ಜೀರ್ಣವಾಗುತ್ತದೆ. ಆದರೆ, ಗಬಗಬನೆ ತಿನ್ನುವುದರಿಂದ ನಮ್ಮ ಅಗತ್ಯಕ್ಕಿಂತ ಹೆಚ್ಚು ತಿನ್ನುವ ಸಾಧ್ಯತೆಗಳೇ ಹೆಚ್ಚು. ಅದಕ್ಕೊಂದು ಸರಳವಾದ ಟ್ರಿಕ್‌ ಕೂಡಾ ಅವರು ಹೇಳುತ್ತಾರೆ. ನಮಗೆಷ್ಟು ಬೇಕೋ ಅದಕ್ಕಿಂತ ಅರ್ಧದಷ್ಟು ಪ್ರಮಾಣವನ್ನು ನಾವು ಬಡಿಸಿಕೊಂಡು, ನಾವು ಅದನ್ನು ಉಣ್ಣಲು ಸಾಮಾನ್ಯವಾಗಿ ಎಷ್ಟು ಸಮಯ ತೆಗೆದುಕೊಳ್ಳುತ್ತೇವೋ ಅದರ ದುಪ್ಪಟ್ಟು ಸಮಯ ತೆಗೆದುಕೊಂಡು ಉಣ್ಣುವುದು!
ಇನ್ನೊಂದು ಬಹುಮುಖ್ಯ ಅಂಶವೆಂದರೆ, ಕುಳಿತು ಉಣ್ಣುವುದು. ನಿಂತು ಉಣ್ಣುವುದಕ್ಕಿಂತ ಕುಳಿತು ಉಣ್ಣುವ ಕ್ರಮ ಒಳ್ಳೆಯದು ಎಂದೂ ಅವರು ಹೇಳುತ್ತಾರೆ.

ಇದನ್ನೂ ಓದಿ: Food Tips Kannada: ಇನ್‌ಸ್ಟಂಟ್‌ ನೂಡಲ್ಸ್‌ ತಿಂದರೆ ಆರೋಗ್ಯಕ್ಕೆ ತೊಂದರೆ ಇದೆಯೆ?

ನಿಮ್ಮ ತಟ್ಟೆಯಲ್ಲಿ ಏನೇನಿರಬೇಕು?

ನಿಮ್ಮ ತಟ್ಟೆಯಲ್ಲಿ ಏನೇನಿರಬೇಕು ಎಂಬುದನ್ನೂ ಅವರು ಎಲ್ಲರಿಗೂ ಅರ್ಥವಾಗುವಂತೆ ಬಹಳ ಸರಳವಾಗಿ ಹೇಳುತ್ತಾರೆ. ನಿಮ್ಮ ಆಹಾರದ ಶೇ.50ರಷ್ಟು ಪ್ರಮಾಣ ಧಾನ್ಯಗಳು ಅಥವಾ ಸಿರಿಧಾನ್ಯಗಳಿರಬೇಕು. ಶೇ ೩೫ರಷ್ಟು ಪ್ರಮಾಣ ತರಕಾರಿಗಳು, ಮೊಳಕೆ ಕಾಳು ಹಾಗೂ ಬೇಳೆಗಳಿರಬೇಕು. ಉಳಿದಂತೆ ಶೇ.೧೫ರಷ್ಟು ಕೆಲವು ಇತರ ರುಚಿಕರ ಆಹಾರವನ್ನು ಸೇರಿಸಬಹುದು. ಉದಾಹರಣೆಗೆ ಉಪ್ಪಿನಕಾಯಿ, ಚಟ್ನಿ, ಹಪ್ಪಳ ಇತ್ಯಾದಿಗಳು. ಸಾಮಾನ್ಯವಾಗಿ ಹೆಚ್ಚು ಚಿಂತೆ ಮಾಡದೆ ಆರೋಗ್ಯದ ಕಾಳಜಿ ವಹಿಸುವ ಮಂದಿ ಈ ಮಾದರಿಯಲ್ಲಿ ಉಣ್ಣುವ ಕ್ರಮ ರೂಢಿಸಿಕೊಂಡರೆ ಒಳ್ಳೆಯದು ಎಂದು ಅವರು ಎಲ್ಲರ ದೃಷ್ಟಿಯಿಂದ ಸರಳವಾಗಿ ವಿವರಿಸುತ್ತಾರೆ. ಇನ್ನುಳಿದಂತೆ, ಹೆಚ್ಚು ಈ ಬಗ್ಗೆ ಆಸ್ತೆ ವಹಿಸುತ್ತಿದ್ದರೆ, ಪ್ರತಿಯೊಬ್ಬರೂ ಅವರವರ ಆಯ್ಕೆಗೆ ಅನುಗುಣವಾಗಿ ಆಹಾರ ಅಭ್ಯಾಸಗಳನ್ನು ಆಹಾರ ತಜ್ಞರ ಶಿಫಾರಸಿನ ಮೇಲೆ ರೂಢಿಸಿಕೊಳ್ಳಬಹುದು ಎಂದೂ ಅವರು ಹೇಳುತ್ತಾರೆ.

Continue Reading

ಆರೋಗ್ಯ

5:2 Diet: ಏನಿದು 5:2 ಮಧ್ಯಂತರ ಉಪವಾಸ? ಇದರ ಪ್ರಯೋಜನಗಳೇನು?

ನಮ್ಮ ಜೀರ್ಣಾಂಗಗಳು ಅವಿಶ್ರಾಂತವಾಗಿ ದುಡಿಯುವಂತೆ ಹೊಟ್ಟೆಗೆ ಆಹಾರ ನೀಡುತ್ತಲೇ ಇದ್ದರೆ, ದೇಹದ ಚಯಾಪಚಯ ವ್ಯವಸ್ಥೆ ಕ್ರಮೇಣ ಕುಸಿಯುತ್ತವೆ. ಹೀಗಾದರೆ ತೂಕ, ಬೊಜ್ಜು ಇಳಿಸುವುದು ಅಸಾಧ್ಯ. ಬದಲಿಗೆ, ನಿಗದಿತವಾಗಿ ಹೊಟ್ಟೆಯನ್ನು ಖಾಲಿ ಬಿಡುವುದು ಮತ್ತು ಆಹಾರ ಸೇವನೆಯ ಸಂದರ್ಭದಲ್ಲಿ ಸಮತೋಲನೆಯತ್ತ ಗಮನ ನೀಡುವುದು ಮಧ್ಯಂತರ ಉಪವಾಸದ ಕ್ರಮ. ಈ ಬಗ್ಗೆ ಹೆಚ್ಚಿನ (5:2 Diet)ವಿವರಗಳು ಇಲ್ಲಿವೆ.

VISTARANEWS.COM


on

5:2 Diet
Koo

ತೂಕ ಇಳಿಕೆಯ ಭರಾಟೆಯಲ್ಲಿ ಯಾರು ಏನು ಸಲಹೆಯನ್ನು ಕೊಟ್ಟರೂ ಕೇಳಬೇಕೆನಿಸುತ್ತದೆ. ಅದು ಒಳ್ಳೆಯದೇ, ಕೆಟ್ಟದ್ದೇ, ಇದರಿಂದ ಆರೋಗ್ಯ ಏನಾಗುತ್ತದೆ- ಇಂಥ ವಿಷಯಗಳನ್ನು ಅಷ್ಟಾಗಿ ಯೋಚಿಸುವುದಿಲ್ಲ. ತೂಕ ಇಳಿಸುವಾಗ ದೇಹದ ಸ್ವಾಸ್ಥ್ಯ ಕ್ಷೀಣಿಸದಂತೆ ನೋಡಿಕೊಳ್ಳುವುದು ಮುಖ್ಯ. ಅಂದರೆ, ಊಟ ಬಿಟ್ಟು ಉಪವಾಸ ಮಾಡುವುದು, ಯಾವುದೋ ಒಂದೇ ರೀತಿಯ ಆಹಾರ ತಿನ್ನುವುದು ಮುಂತಾದ ಹುಚ್ಚು ಖಯಾಲಿಗಳು ದೇಹವನ್ನು ಅಪಾಯಕ್ಕೆ ದೂಡುವಂಥವು. ಈ ಎಲ್ಲವುಗಳ ಹಿನ್ನೆಲೆಯಲ್ಲಿ, ಮಧ್ಯಂತರ ಉಪವಾಸಕ್ಕೆ ಪೋಷಕಾಂಶ ತಜ್ಞರು ಹೆಚ್ಚಿನ ಅಂಕಗಳನ್ನು ನೀಡುತ್ತಾರೆ. ಅದೇ ಹಿನ್ನೆಲೆಯಲ್ಲಿ ಜಾರಿಯಲ್ಲಿ ಇರುವಂಥದ್ದು 5:2 (5:2 Diet) ಉಪವಾಸ.

Dieting concept. Healthy Food. Beautiful Young Asian Woman

ಏನಿದು?

ಇದು ಸಹ ಮಧ್ಯಂತರ ಉಪವಾಸದ ಒಂದು ಕ್ರಮ. ಇದನ್ನು ತಿಳಿಯುವ ಮುನ್ನ ಮಧ್ಯಂತರ ಉಪವಾಸ ಎಂದರೇನು ಎಂಬುದನ್ನು ತಿಳಿಯೋಣ. ಈ ಕ್ರಮದಲ್ಲಿ ಇಂಥದ್ದೇ ಆಹಾರಗಳನ್ನು ತಿನ್ನಬೇಕೆಂಬ ಕಟ್ಟುನಿಟ್ಟಿಲ್ಲ. ಬದಲಿಗೆ ಆಹಾರ ಸೇವಿಸುವ ಹೊತ್ತಿನಲ್ಲಿ ವ್ಯತ್ಯಾಸ ಮಾಡಲಾಗುತ್ತದೆ. ನಮ್ಮ ಜೀರ್ಣಾಂಗಗಳು ಅವಿಶ್ರಾಂತವಾಗಿ ದುಡಿಯುವಂತೆ ಹೊಟ್ಟೆಗೆ ಆಹಾರ ನೀಡುತ್ತಿಲೇ ಇದ್ದರೆ, ದೇಹದ ಚಯಾಪಚಯ ವ್ಯವಸ್ಥೆ ಕ್ರಮೇಣ ಕುಸಿಯುತ್ತವೆ. ಹೀಗಾದರೆ ತೂಕ, ಬೊಜ್ಜು ಇಳಿಸುವುದು ಅಸಾಧ್ಯ. ಬದಲಿಗೆ, ನಿಗದಿತವಾಗಿ ಹೊಟ್ಟೆಯನ್ನು ಖಾಲಿ ಬಿಡುವುದು ಮತ್ತು ಆಹಾರ ಸೇವನೆಯ ಸಂದರ್ಭದಲ್ಲಿ ಸಮತೋಲನೆಯತ್ತ ಗಮನ ನೀಡುವುದು. ಉದಾ, ಒಂದು ಊಟದಿಂದ ಇನ್ನೊಂದು ಊಟಕ್ಕೆ 4 ತಾಸುಗಳ ಬಿಡುವು ಸಾಮಾನ್ಯವಾಗಿದ್ದರೆ, ಅದನ್ನು 6 ತಾಸುಗಳಿಗೆ, ನಂತರ 8, ಆಮೇಲೆ 12 ತಾಸುಗಳಿಗೆ ಹೆಚ್ಚಿಸುವುದು… ಹೀಗೆ.

5:2 ಎಂದರೆ…:

ಇದೇ ಕ್ರಮದ ಮುಂದುವರಿಕೆಯಾಗಿ 5:2 ಉಪವಾಸ ಚಾಲ್ತಿಯಲ್ಲಿದೆ. ಅಂದರೆ ವಾರದಲ್ಲಿ 5 ದಿನ ಸಾಮಾನ್ಯ ಮತ್ತು ಸಮತೋಲಿತ ಆಹಾರವನ್ನು ಸೇವಿಸುವುದು; 2 ದಿನ ಹೊಟ್ಟೆಗೆ ಕೊಂಚ ಬಿಡುವು ನೀಡುವುದು. ಎರಡು ದಿನಗಳನ್ನು ವಾರದಲ್ಲಿ ಬೇಕಾದಂತೆ ಇರಿಸಿಕೊಳ್ಳಬಹುದು. ಅಂದರೆ ಒಂದು ಭಾನುವಾರ, ಇನ್ನೊಂದು ಬುಧವಾರ… ಹೀಗೆ. ಆ ದಿನಗಳಲ್ಲೂ ಪೂರ್ಣ ಉಪವಾಸವಲ್ಲ, ಮಹಿಳೆಯರು 500-600 ಕ್ಯಾಲರಿಯಷ್ಟು ಆಹಾರ ಮತ್ತು ಪುರುಷರು 600-800 ಕ್ಯಾಲರಿಯಷ್ಟು ಆಹಾರ ಸೇವಿಸಬಹುದು. ಉಳಿದ ಐದು ದಿನಗಳಲ್ಲಿ ಇಡೀ ಧಾನ್ಯಗಳು, ಸಲಾಡ್‌ಗಳು, ಹಣ್ಣುಗಳು, ಡೇರಿ ಉತ್ಪನ್ನಗಳು, ಕಾಳು-ಬೇಳೆಗಳು, ಬೀಜಗಳು, ಮೀನು-ಮೊಟ್ಟೆಯಂಥವು ಹೊಟ್ಟೆ ಸೇರಬೇಕು. ಅಲ್ಲಿಯೂ ಸಂಸ್ಕರಿತ ಪಿಷ್ಟಗಳು, ಸಕ್ಕರೆ, ಕೆಟ್ಟ ಕೊಬ್ಬುಗಳನ್ನೆಲ್ಲ ತಿನ್ನುವುದಕ್ಕೆ ಅವಕಾಶವಿಲ್ಲ. ಹಾಗಾದರೆ ಉಪವಾಸದ ಎರಡು ದಿನಗಳಲ್ಲಿ ಏನು ತಿನ್ನಬಹುದು? ಬೇಕಾದಷ್ಟು ಹಸಿ ತರಕಾರಿಗಳು, ಕೋಸಂಬರಿ, ಸಿಹಿ ಸೇರಿಲ್ಲದ ಯೋಗರ್ಟ್‌, ಮನೆಯಲ್ಲಿ ಮಾಡಿದ ಮೊಸರು-ಮಜ್ಜಿಗೆ, ಬೇಯಿಸಿದ ಮೊಟ್ಟೆ, ತರಕಾರಿ ಸೂಪ್‌ಗಳು, ಸ್ವಲ್ಪ ಪ್ರಮಾಣದ ಧಾನ್ಯ- ಅಂದರೆ ಒಂದು ಚಪಾತಿ ಅಥವಾ ಸಣ್ಣ ಕಪ್‌ನಲ್ಲಿ ಅನ್ನ- ಇಂಥವುಗಳಲ್ಲಿ ಒಂದೆರಡನ್ನು ಆಯ್ದುಕೊಳ್ಳಬಹುದು.

diet woman with salad and measuring tape

ಲಾಭಗಳೇನು?

ಯಾವುದೇ ಕಾರಣಕ್ಕೆ ಇಂಥ ಮಧ್ಯಂತರ ಉಪವಾಸಗಳನ್ನು ಮಾಡುತ್ತಿದ್ದರೂ, ಊಟ ಮಾಡುವಾಗ ಆಹಾರದಲ್ಲಿ ಸಮತೋಲನ ಕಾಯ್ದುಕೊಳ್ಳುವುದು ಮಹತ್ವದ್ದು. ಉಪವಾಸದ ಹೆಸರಿನಲ್ಲಿ ಶರೀರವನ್ನು ನಿಶ್ಶಕ್ತಗೊಳಿಸುವುದಲ್ಲ; ಬದಲಿಗೆ, ಚೈತನ್ಯವನ್ನು ಹೆಚ್ಚಿಸಿಕೊಳ್ಳುವುದು ನಮ್ಮ ಉದ್ದೇಶ. ತೂಕ ಇಳಿಸುವವರು ಇದನ್ನು ಹೆಚ್ಚಾಗಿ ನೆಚ್ಚಿಕೊಳ್ಳುತ್ತಿರುವುದರಿಂದ, ದೇಹದ ಕೊಬ್ಬು ಮಾತ್ರವೇ ಕರಗಬೇಕೆ ಹೊರತು, ಚರ್ಮ ಸುಕ್ಕಾಗುವುದು, ಕೂದಲುದುರುವುದು ಮುಂತಾದ ಸಮಸ್ಯೆಗಳು ಹೆಚ್ಚುವರಿಯಾಗಿ ಬರಬಾರದು.

ಇದನ್ನೂ ಓದಿ: Food Tips Kannada: ಇನ್‌ಸ್ಟಂಟ್‌ ನೂಡಲ್ಸ್‌ ತಿಂದರೆ ಆರೋಗ್ಯಕ್ಕೆ ತೊಂದರೆ ಇದೆಯೆ?

ರೋಗಗಳು ದೂರ

ಈಗಾಗಲೇ ಮಧುಮೇಹ ಇರುವವರು ಉಪವಾಸ ಮಾಡುವಂತಿಲ್ಲ. ಹಾಗಾಗಿ ಮಧ್ಯಂತರ ಉಪವಾಸಗಳು ಅವರಿಗೆ ಹೇಳಿಸಿದ್ದಲ್ಲ. ಆದರೆ ಇಂಥ ಕ್ರಮಗಳನ್ನು ಅನುಸರಿಸುವುದರಿಂದ, ಆರೋಗ್ಯವಂತರಿಗೆ ಮಧುಮೇಹ ಬರುವಂಥ ಸಾಧ್ಯತೆಗಳು ಕಡಿಮೆ ಎನ್ನುತ್ತವೆ ಅಧ್ಯಯನಗಳು. ಕಾರಣ, ತನಗೆ ದೊರೆಯುವ ಗ್ಲೂಕೋಸ್‌ ಮತ್ತು ಉತ್ಪತ್ತಿಯಾಗುವ ಇನ್‌ಸುಲಿನ್‌ ಪ್ರಮಾಣಗಳನ್ನು ಶರೀರ ಸಮರ್ಥವಾಗಿ ನಿಭಾಯಿಸುತ್ತದೆ.
ಮಧ್ಯಂತರ ಉಪವಾಸಗಳು ರಕ್ತದೊತ್ತಡವನ್ನು ನಿಯಂತ್ರಿಸಿ, ಶರೀರದಲ್ಲಿರುವ ಕೊಬ್ಬು ಕರಗಿಸಬಲ್ಲವು. ಇವೆರಡೂ ಅಂಶಗಳು ಹೃದಯದ ಆರೋಗ್ಯಕ್ಕೆ ಪೂರಕವಾದಂಥವು. ಆಹಾರ ತೆಗೆದುಕೊಳ್ಳುವ ಸಮಯದಲ್ಲಿ ಆರೋಗ್ಯಕರ ಕೊಬ್ಬುಗಳನ್ನು ಸೇವಿಸಿದರೆ, ದೇಹದ ಮೇಲೆ ಅತ್ಯಂತ ಒಳ್ಳೆಯ ಪರಿಣಾಮವನ್ನು ಈ ಉಪವಾಸದ ಕ್ರಮ ನೀಡಬಲ್ಲದು.

Continue Reading
Advertisement
Yuva Rajkumar Allegation of cruelty against wife
ಸ್ಯಾಂಡಲ್ ವುಡ್9 mins ago

Yuva Rajkumar: ರಾಘಣ್ಣ ದಂಪತಿ ವಿರೋಧದ ನಡುವೆಯೂ ಯುವನಿ​ಗೆ ಮದ್ವೆ ಮಾಡಿಸಿದ್ದು ‘ಅಪ್ಪು’!

UGCET 2024
ಬೆಂಗಳೂರು11 mins ago

UGCET 2024: ಸಿಇಟಿ ಅಪ್‌ಡೇಟ್‌; ಮೊದಲ ದಿನ 250 ವಿಕಲಚೇತನರ ವೈದ್ಯಕೀಯ ತಪಾಸಣೆ

Reasi Terror Attack
ಪ್ರಮುಖ ಸುದ್ದಿ18 mins ago

Reasi Terror Attack : ಉಗ್ರರ ಮುಂದೆ ಸತ್ತಂತೆ ನಟಿಸಿ ಬದುಕುಳಿದ ಹಿಂದೂ ಯಾತ್ರಿಗಳು…

murder case
ಮೈಸೂರು34 mins ago

Murder Case : ಮೈಸೂರಿನಲ್ಲಿ ಅನ್ನದಾನೇಶ್ವರ ಮಠದ ಹಿರಿಯ ಸ್ವಾಮೀಜಿಯ ಬರ್ಬರ ಕೊಲೆ

pm narendra modi leopord
ಪ್ರಮುಖ ಸುದ್ದಿ34 mins ago

PM Narendra Modi: ಮೋದಿ ಪ್ರಮಾಣ ವಚನ ಸಮಾರಂಭದಲ್ಲಿ ಕಾಣಿಸಿಕೊಂಡ ನಿಗೂಢ ಪ್ರಾಣಿ! ವಿಡಿಯೋ ಇದೆ ನೋಡಿ

Yuva Rajkumar son of raghavendra Rajkumar yuva divorce
ಸ್ಯಾಂಡಲ್ ವುಡ್40 mins ago

Yuva Rajkumar: ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಯುವ ರಾಜ್​ಕುಮಾರ್​ ; ಅಣ್ಣಾವ್ರ ಕುಟುಂಬದಲ್ಲಿ ಇದೇ ಮೊದಲ ಪ್ರಕರಣ!

Congress Guaratee
ಕರ್ನಾಟಕ49 mins ago

Congress Guarantee: ಗ್ಯಾರಂಟಿ ನಿಲ್ಲಿಸುವ ಮಾತು ಬೇಡ: ಕೈ ನಾಯಕರಿಗೆ ಎಚ್.ಎಂ ರೇವಣ್ಣ ಎಚ್ಚರಿಕೆ

Suresh Gopi
ದೇಶ50 mins ago

Suresh Gopi : ಪ್ರಮಾಣವಚನ ಸ್ವೀಕರಿಸಿದ ಒಂದೇ ಗಂಟೆಯೊಳಗೆ ಸಚಿವ ಸ್ಥಾನ ಬೇಡ ಎಂದ ಸುರೇಶ್​ ಗೋಪಿ!

Physical Abuse
ಮೈಸೂರು1 hour ago

Physical Abuse : ಪಿಕ್‌ ಅಪ್, ಡ್ರಾಪ್ ನೆಪದಲ್ಲಿ ಸಲುಗೆ; ಅಂಕಲ್ ಗಾಳಕ್ಕೆ ಸಿಲುಕಿದ ಬಾಲಕಿಯ ನರಳಾಟ

Election Commission
ಪ್ರಮುಖ ಸುದ್ದಿ1 hour ago

Election Commission : ಜುಲೈ 10ರಂದು 7 ರಾಜ್ಯಗಳ 13 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka weather Forecast
ಮಳೆ3 days ago

Karnataka weather : ಮಳೆಯಲ್ಲೆ ತಪಸ್ಸಿಗೆ ಕುಳಿತ ವೃದ್ಧ; ಇನ್ನೊಂದು ವಾರ ನಾನ್‌ ಸ್ಟಾಪ್‌ ವರುಣನ ಅಬ್ಬರ

Sigandur launch
ಶಿವಮೊಗ್ಗ3 days ago

Sigandur launch: ಸಿಗಂದೂರು ಲಾಂಚ್‌ನಲ್ಲಿ ಭಾರಿ ವಾಹನಗಳಿಗೆ ನಿರ್ಬಂಧ

Karnataka Rain
ಮಳೆ4 days ago

Karnataka Rain : ಭಾರಿ ಮಳೆಗೆ ಮರ ಬಿದ್ದು ಮೇಕೆಗಳು ಸಾವು; ಸಿಡಿಲಿಗೆ ಎಲೆಕ್ಟ್ರಿಕ್‌ ಅಂಗಡಿ ಸುಟ್ಟು ಭಸ್ಮ

Lok Sabha Election Result 2024 Live
ದೇಶ6 days ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

Karnataka Rain
ಮಳೆ7 days ago

Karnataka Rain : 133 ವರ್ಷದ ರೆಕಾರ್ಡ್ ಬ್ರೇಕ್ ಮಾಡಿದ ʻಬೆಂಗಳೂರು ಮಳೆʼ

Snake Rescue Snakes spotted in heavy rain
ಮಳೆ7 days ago

Snake Rescue: ಮಳೆ ನೀರಿನಲ್ಲಿ ಹರಿದು ಬಂದು ಬೈಕ್‌ನಲ್ಲಿ ಸೇರಿಕೊಂಡ ಹಾವು; ಮನೆಗಳಲ್ಲೂ ಪ್ರತ್ಯಕ್ಷ

Karnataka Rain
ಮಳೆ1 week ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು1 week ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ2 weeks ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ2 weeks ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

ಟ್ರೆಂಡಿಂಗ್‌