Bone Health In Winter: ಚಳಿಗಾಲದಲ್ಲಿ ಮೂಳೆಗಳ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ? - Vistara News

ಆರೋಗ್ಯ

Bone Health In Winter: ಚಳಿಗಾಲದಲ್ಲಿ ಮೂಳೆಗಳ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ?

ಪ್ರಾಯ ಸಣ್ಣದಿರುವಾಗ ಮೂಳೆಗಳ ಸಾಂದ್ರತೆ ಚೆನ್ನಾಗಿ ಇರುವುದರಿಂದ ಋತುಮಾನ ಯಾವುದಾದರೂ ಹೆಚ್ಚಿನ ತೊಂದರೆ ಕಾಣುವುದಿಲ್ಲ. ಆದರೆ ಪ್ರಾಯ ಹೆಚ್ಚುತ್ತಿದ್ದಂತೆ ಮೂಳೆಗಳ ಸಾಂದ್ರತೆ ಸಹಜವಾಗಿ ಕಡಿಮೆಯಾಗುತ್ತದೆ. ಅದನ್ನು ಸರಿಯಾಗಿ ಕಾಳಜಿ (Bone health in winter) ಮಾಡದಿದ್ದರೆ, ಚಳಿಗಾಲಗಳು ಇನ್ನಿಲ್ಲದ ತೊಂದರೆ ನೀಡುತ್ತವೆ.

VISTARANEWS.COM


on

Bone Health In Winter
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನಮ್ಮ ಕೆಲಸಗಳು ಯಾವುದೇ ಇದ್ದರೂ ಅದಕ್ಕೆ ಮೂಳೆಗಳು ಬಲವಾಗಿರಬೇಕು. ಅದರಲ್ಲೂ ಚಳಿಗಾಲದಲ್ಲಿ ಕೀಲು ಮತ್ತು ಮೂಳೆಗಳ ಮೇಲೆ ಹೆಚ್ಚಿನ ಒತ್ತಡ ಬೀಳುತ್ತದೆ. ಕಾರಣ, ಸೂರ್ಯನ ಬಿಸಿಲಿಗೆ ಒಡ್ಡಿಕೊಳ್ಳದೆ ವಿಟಮಿನ್‌ ಡಿ ಕಡಿಮೆಯಾಗುವುದು. ಅದರಲ್ಲೂ ಅರ್ಥರೈಟಿಸ್‌ನಂಥ ಸಮಸ್ಯೆ ಇರುವವರಿಗೆ ಚಳಿಗಾಲದಲ್ಲಿ ಮೂಳೆಗಳ ಆರೋಗ್ಯ ಮತ್ತಷ್ಟು ನಾಜೂಕಾಗುತ್ತದೆ. ಪ್ರಾಯ ಸಣ್ಣದಿರುವಾಗ ಮೂಳೆಗಳ ಸಾಂದ್ರತೆ ಚೆನ್ನಾಗಿ ಇರುವುದರಿಂದ ಋತುಮಾನ ಯಾವುದಾದರೂ ಹೆಚ್ಚಿನ ತೊಂದರೆ ಕಾಣುವುದಿಲ್ಲ. ಆದರೆ ಪ್ರಾಯ ಹೆಚ್ಚುತ್ತಿದ್ದಂತೆ ಮೂಳೆಗಳ ಸಾಂದ್ರತೆ ಸಹಜವಾಗಿ ಕಡಿಮೆಯಾಗುತ್ತದೆ. ಅದನ್ನು ಸರಿಯಾಗಿ ಕಾಳಜಿ ಮಾಡದಿದ್ದರೆ, ಚಳಿಗಾಲಗಳು ಇನ್ನಿಲ್ಲದ ತೊಂದರೆ ನೀಡುತ್ತವೆ. ಈ ಹಿನ್ನೆಲೆಯಲ್ಲಿ, ಮೂಳೆಗಳ ಆರೋಗ್ಯ ಕಾಪಾಡಿಕೊಳ್ಳಲು ಚಳಿಗಾಲದಲ್ಲಿ ಮಾಡಬೇಕಾದ್ದೇನು ಎಂಬುದನ್ನು ಗಮನಿಸೋಣ.

Dairy products

ಡೈರಿ ಉತ್ಪನ್ನಗಳು

ಹಾಲು-ಹೈನಗಳ ಸೇವನೆಯು ಮೂಳೆಗಳ ಆರೋಗ್ಯ ರಕ್ಷಣೆಗೆ ಸರಳ ಉಪಾಯ. ಇದರಲ್ಲಿರುವ ಕ್ಯಾಲ್ಶಿಯಂ,ಪ್ರೊಟೀನ್‌, ವಿಟಮಿನ್‌ ಡಿ, ಪೊಟಾಶಿಯಂ ಮತ್ತು ಫಾಸ್ಫರಸ್‌ ಅಂಶಗಳು ಎಲುಬುಗಳ ಆರೋಗ್ಯಕ್ಕೆ ಆವಶ್ಯಕ ಸತ್ವಗಳು. ಕ್ಯಾಲ್ಶಿಯಂಗಾಗಿ ಹೈನವನ್ನೇ ನೆಚ್ಚಕೊಂಡಿದ್ದರೆ, ದಿನಕ್ಕೆ ಮೂರು ಗ್ಲಾಸ್‌ ಹಾಲು ಕುಡಿಯುವುದು ಅಗತ್ಯ. ಜೊತೆಗೆ ದಿನವೂ ತಪ್ಪದೆ ಬಿಸಿಲಿಗೂ ಒಡ್ಡಿಕೊಳ್ಳಲೇಬೇಕು. ಚಳಿಯಲ್ಲಿ ಬಿಸಿಲು ಕಾಯಿಸುವುದು ಹಿತ!

ಪಾಲಕ್‌ ಸೊಪ್ಪು

ಪೌಷ್ಟಿಕಾಂಶದ ಖಜಾನೆ ಎಂದೇ ಕರೆಸಿಕೊಳ್ಳುವ ಸೊಪ್ಪಿದು. ಕ್ಯಾಲ್ಶಿಯಂ, ಕಬ್ಬಿಣ, ವಿಟಮಿನ್‌ಗಳು ಮತ್ತು ಖನಿಜಗಳುಇದರಲ್ಲಿ ಹೇರಳವಾಗಿವೆ. ವಾರಕ್ಕೆ ಮೂರು ಸರ್ವಿಂಗ್‌ ಪಾಲಕ್‌ ಸೊಪ್ಪು ಹಲವು ರೀತಿಯ ಕೊರತೆಗಳನ್ನು ತುಂಬಿಕೊಡಬಲ್ಲದು. ಸರಳ ಸೂಪ್‌ನಿಂದ ಹಿಡಿದು, ಖಿಚಡಿ, ಗ್ರೇವಿ, ಪರಾಠಗಳವರೆಗೆ ಹಲವಾರು ರೀತಿಯಲ್ಲಿ ಇದನ್ನು ಅಡುಗೆಗೆ ಉಪಯೋಗಿಸಬಹುದು.

ಕಾಯಿ-ಬೀಜಗಳು

ಕ್ಯಾಲ್ಶಿಯಂ ನೀಡುವಂಥ ಹಲವು ಬೀಜಗಳನ್ನು ಆಗೀಗ ಮೆಲ್ಲುವುದು ಮೂಳೆಗಳ ಬಲವರ್ಧನೆಗೆ ಸಹಕಾರಿ. ಈಪಟ್ಟಿಯಲ್ಲಿ ಎಳ್ಳು, ಚಿಯಾ, ಹೆಂಪ್‌, ಕುಂಬಳಕಾಯಿ ಬೀಜ, ಅಗಸೆ, ತಾವರೆಬೀಜ ಮತ್ತು ಪಿಸ್ತಾಗಳು ಮುಂಚೂಣಿಯಲ್ಲಿವೆ. ಉಳಿದಂತೆ ಬಾದಾಮಿ, ವಾಲ್‌ನಟ್‌, ಪೆಕಾನ್‌, ಚೆಸ್ಟ್‌ನಟ್‌ಗಳು ಸಹ ಮೂಳೆಗಳ ಸಾಂದ್ರತೆ ಕುಸಿಯದಂತೆ ಕಾಪಾಡುತ್ತವೆ.

Green vegetables

ಹಸಿರು ತರಕಾರಿಗಳು

ಮೂಲಂಗಿ ಸೊಪ್ಪಿನಂಥ ಗಡ್ಡೆಗಳ ಮೇಲಿನ ಸೊಪ್ಪುಗಳು, ಬೆಂಡೆಕಾಯಿ, ಬ್ರೊಕೊಲಿ, ಎಲೆಕೋಸು ಮುಂತಾದ ಹಸಿರುತರಕಾರಿಗಳು ಮೂಳೆಗಳ ಆರೋಗ್ಯ ಕಾಪಾಡುವುದಕ್ಕೆ ನೆರವಾಗುತ್ತವೆ. ಈ ತರಕಾರಿಗಳಲ್ಲಿರುವ ಕ್ಯಾಲ್ಶಿಯಂ ಹೀರಿಕೊಳ್ಳುವುದು ದೇಹಕ್ಕೆ ಸುಲಭ. ಪಾಲಕ್‌ನಲ್ಲಿನ ಕ್ಯಾಲ್ಶಿಯಂ ಕೆಲವೊಮ್ಮೆ ಹೀರಲಾಗದೆ ಸಮಸ್ಯೆಯಾದ ಉದಾಹರಣೆಗಳೂ ಇವೆ.

ಬೇಳೆ-ಕಾಳುಗಳು

ಮೊಳಕೆ ಕಾಳುಗಳು ಮತ್ತು ಇಡೀ ಧಾನ್ಯಗಳು ಮೂಳೆಗಳಿಗೆ ಪ್ರಿಯವಾದ ಆಹಾರಗಳು. ಇವುಗಳಲ್ಲಿರುವ ಪ್ರೊಟೀನ್‌,ವಿಟಮಿನ್‌ ಮತ್ತು ಖನಿಜಗಳು ದೇಹದ ಒಟ್ಟಾರೆ ಸ್ಯಾಸ್ಥ್ಯವನ್ನು ಹೆಚ್ಚಿಸಿ, ಮಾಂಸಪೇಶಿಗಳನ್ನು ಬಲಗೊಳಿಸಿ, ಈ ಮೂಲಕ ಮೂಳೆಗಳಿಗೆ ಹೆಚ್ಚಿನ ಬಲ ದೊರಕಿಸುತ್ತವೆ. ಇದಿಷ್ಟೇ ಅಲ್ಲ, ಮಧುಮೇಹದಂಥ ರೋಗಗಳನ್ನು ದೂರ ಇರಿಸಿ, ಹೃದಯವನ್ನು ಬಲಗೊಳಿಸುತ್ತವೆ. ಹಾಗಾಗಿ ಇಡೀ ಧಾನ್ಯಗಳು ಮತ್ತು ಮೊಳಕೆ ಕಾಳುಗಳ ಲಾಭ ಇಮ್ಮುಖವಾದದ್ದು.

Soya bean

ಸೋಯಾ ಬೀನ್‌

ಸಾಮಾನ್ಯವಾಗಿ ಪ್ರೊಟೀನ್‌ ಹೆಚ್ಚಿಸುವಂಥ ಆಹಾರಗಳ ಪಟ್ಟಿಯಲ್ಲಿ ಮಾತ್ರವೇ ಸೋಯಾ ಉತ್ಪನ್ನಗಳುಕಾಣಸಿಗುತ್ತವೆ. ಆದರೆ ಮೂಳೆಗಳ ಸಬಲತೆಗೂ ಇದು ನೆರವಾಗುತ್ತದೆ. ಸೋಯಾ ಕಾಳು, ಹಾಲು, ತೋಫು… ಹೀಗೆ ಹಲವು ರೀತಿಯಲ್ಲಿ ಸೋಯ ಬಳಕೆ ಮಾಡಲು ಸಾಧ್ಯವಿದೆ. ಇದರಿಂದ ಮಾಂಸಖಂಡಗಳು, ಕೀಲು ಮತ್ತು ಮೂಳೆಗಳು ಸೇರಿದಂತೆ ದೇಹದ ಸಂಪೂರ್ಣ ಆರೋಗ್ಯ ಸುಧಾರಿಸುತ್ತದೆ.

ಇದನ್ನೂ ಓದಿ: Men’s Health After 40: 40ರ ನಂತರ ಪುರುಷರ ಆರೋಗ್ಯ ಕಾಳಜಿ ಹೀಗಿರಲಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಪ್ರಮುಖ ಸುದ್ದಿ

Parenting Tips: ನೀವು ಹೊಸ ಅಪ್ಪ ಅಮ್ಮಂದಿರೇ? ನಿಮಗಿದೆ ಇಲ್ಲಿ ಮುಖ್ಯವಾದ ಟಿಪ್ಸ್!

Parenting Tips: ನಿದ್ದೆಯಿಲ್ಲದ ರಾತ್ರಿಗಳು, ಬಿಡುವಿಲ್ಲದ ಕೆಲಸ, ರಚ್ಚೆ ಹಿಡಿದು ಅಳುವ ರಾತ್ರಿಗಳು ಹೀಗೆ ಪ್ರತಿದಿನವೂ ಒಂದಿಲ್ಲೊಂದು ಸಮಸ್ಯೆಗಳು. ಮನೆಯಲ್ಲಿ ಹಿರಿಯರ ಮಾರ್ಗದರ್ಶನ, ಸಹಾಯ ಇದ್ದರೆ ಇಂತಹ ತೊಂದರೆಗಳಲ್ಲಿ ಕೊಂಚ ಧೈರ್ಯ, ನೆಮ್ಮದಿ ಇರಬಹುದಾದರೂ ಈ ಸಂದರ್ಭ ಸವಾಲೂ ಹೌದು. ಒಂಟಿಯಾಗಿ ನಗರಗಳಲ್ಲಿ ಇರುವ ಸಣ್ಣ ವಯಸ್ಸಿನ ಅಪ್ಪ ಅಮ್ಮಂದಿರಿಗೆ ಈ ಹೊಸ ಬದುಕು ಆರಂಭದಲ್ಲಿ ಬಹು ಕಷ್ಟವೂ ಹೌದು. ಅಂಥ ಹೊಸ ಹೆತ್ತವರಿಗೆ ಇಲ್ಲಿವೆ ಬಹುಮುಖ್ಯವಾದ ಟಿಪ್ಸ್‌.

VISTARANEWS.COM


on

Parenting Tips
Koo

ಅಪ್ಪ ಅಮ್ಮನಾಗುವುದು ಪ್ರತಿಯೊಬ್ಬರ ಜೀವನದ ಬಹುಮುಖ್ಯ ಘಟ್ಟ. ಆಗಷ್ಟೇ ಹೊಟ್ಟೆಯಿಂದ ಹೊರಬಂದ ಮಗುವಿಗೆ ಹೇಗೆ ಈ ಜಗತ್ತು ಹೊಸದೋ ಹಾಗೆಯೇ ಅಪ್ಪ ಅಮ್ಮಂದಿರಿಗೂ ಈ ಜಗತ್ತು ಹೊಸದೇ. ಮಗುವಿನ ಹಾಗೆ ಅವರೂ ಮಕ್ಕಳ ಲೋಕವನ್ನು ಕಣ್ಣು ಬಿಟ್ಟು ನೋಡಲು ಶುರು ಮಾಡುವ ಹೊತ್ತಿದು. ಮಗು ಬಂದ ಮೇಲೆ ಹೇಗಿರಬಹುದು ಎಂದು ಕನಸು ಕಾಣುತ್ತಾ ಒಂಬತ್ತು ತಿಂಗಳು ಕಳೆದ ಜೋಡಿಗೆ ಮಗುವಿನ ಲೋಕದ ಬಗ್ಗೆ ಕಂಡಿದ್ದ ಕನಸುಗಳೆಲ್ಲವೂ ಒಮ್ಮೆಲೆ ವಾಸ್ತವದಿಂದ ದೂರ ಇದೆ ಅನಿಸಬಹುದು. ಯಾಕೆಂದರೆ, ಆ ಸಮಯ ಬದುಕಿನ ಅತ್ಯಂತ ಮುಖ್ಯವಾದ ನೆನಪಿನಲ್ಲಿಟ್ಟುಕೊಳ್ಳುವ ಖುಷಿಯ ಗಳಿಗೆ ಎಂಬುದು ನಿಜವೇ ಆದರೂ, ಹೊಸ ಅಪ್ಪ ಅಮ್ಮಂದಿರಿಗೆ (Parenting Tips) ಈ ಹೊಸ ಲೋಕದಲ್ಲಿ ಸಾಕಷ್ಟು ಸವಾಲುಗಳು ದಿಢೀರ್‌ ಎದುರಾಗುತ್ತವೆ. ನಿದ್ದೆಯಿಲ್ಲದ ರಾತ್ರಿಗಳು, ಬಿಡುವಿಲ್ಲದ ಕೆಲಸ, ರಚ್ಚೆ ಹಿಡಿದು ಅಳುವ ರಾತ್ರಿಗಳು ಹೀಗೆ ಪ್ರತಿದಿನವೂ ಒಂದಿಲ್ಲೊಂದು ಸಮಸ್ಯೆಗಳು. ಮನೆಯಲ್ಲಿ ಹಿರಿಯರ ಮಾರ್ಗದರ್ಶನ, ಸಹಾಯ ಇದ್ದರೆ ಇಂತಹ ತೊಂದರೆಗಳಲ್ಲಿ ಕೊಂಚ ಧೈರ್ಯ, ನೆಮ್ಮದಿ ಇರಬಹುದಾದರೂ ಈ ಸಂದರ್ಭ ಸವಾಲೂ ಹೌದು. ಒಂಟಿಯಾಗಿ ನಗರಗಳಲ್ಲಿ ಇರುವ ಸಣ್ಣ ವಯಸ್ಸಿನ ಅಪ್ಪ ಅಮ್ಮಂದಿರಿಗೆ ಈ ಹೊಸ ಬದುಕು ಆರಂಭದಲ್ಲಿ ಬಹು ಕಷ್ಟವೂ ಹೌದು. ಅಂಥ ಹೊಸ ಹೆತ್ತವರಿಗೆ (Parents) ಇಲ್ಲಿವೆ ಬಹುಮುಖ್ಯವಾದ ಟಿಪ್ಸ್‌.

  1. ಮಗುವಿನ ಆಗಮನವಾದಾಗ ಅಷ್ಟರವರೆಗೆ ಮನೆಯಲ್ಲಿದ್ದ ಬದುಕಿನ ಕ್ರಮ, ವೇಳಾಪಟ್ಟಿ ಎಲ್ಲವೂ ಅಲ್ಲೋಲ ಕಲ್ಲೋಲವಾಗುತ್ತದೆ. ಇಂಥ ಸಂದರ್ಭ ಗಂಡ ತನ್ನ ಹೆಂಡತಿಯ ಬದಲಾದ ಹೊಸ ಪ್ರಪಂಚವನ್ನು ಪರಿಪೂರ್ಣ ಮನಸ್ಸಿನಿಂದ ಅರ್ಥ ಮಾಡಿಕೊಳ್ಳಬೇಕು. ಯಾಕೆಂದರೆ ಆಕೆಯ ದಿನಚರಿ ಸಂಪೂರ್ಣ ಬದಲಾಗಿರುತ್ತದೆಯಷ್ಟೇ ಅಲ್ಲ, ಆಕೆ, ಆಗಷ್ಟೇ ಹೆರಿಗೆಯಿಂದ ಮರುಜನ್ಮ ಪಡೆದಿರುತ್ತಾಳೆ. ಹೀಗಾಗಿ ಮಗುವಿಗೆ ಹೇಗೆ ಹೊಸ ಪ್ರಪಂಚವೋ ತಾಯಿಗೂ ಇದು ತಾಯಿಯಾಗಿ ಹೊಸ ಪ್ರಪಂಚ. ಹೊಸ ಜೀವದ ಪಾಲನೆ ಪೋಷಣೆ ಅಷ್ಟು ಸುಲಭದ ಕೆಲಸವಲ್ಲ. ಮಗುವಿನ ಪಾಲನೆಯಲ್ಲಿ ಆಕೆಗೆ ನೆರವಿನ ಹಸ್ತವಾಗಿ ಗಂಡ ಯಾವಾಗಲೂ ಜೊತೆಗಿರಬೇಕು.
  2. ಮಾನಸಿಕವಾಗಿ, ದೈಹಿಕವಾಗಿ ಆತನ ಸಪೋರ್ಟ್‌ ಅತ್ಯಂತ ಅಗತ್ಯ. ಮುಖ್ಯವಾಗಿ ಹೆಂಡತಿಯ ನಿದ್ದೆಗಾಗಿ ಗಂಡನಾದವನು ಕೊಂಚ ತನ್ನ ನಿದ್ದೆಯನ್ನೂ, ಕೆಲಸದ ಒತ್ತಡವನ್ನೂ ಬದಿಗಿಡಬೇಕಾಗುತ್ತದೆ. ಹೆಂಡತಿ ಇಡೀ ದಿನ ಮಗುವನ್ನು ನೋಡಿಕೊಂಡು ಸುಸ್ತಾಗಿರುತ್ತಾಳೆ ಎಂಬುದನ್ನು ಅರಿತುಕೊಂಡು, ಕೆಲ ಗಂಟೆಗಳ ಕಾಲ ತಾನು ಮಗುವನ್ನು ನೋಡಿಕೊಳ್ಳುವುದು, ಆ ಸಮಯದಲ್ಲಿ ಹೆಂಡತಿ ಮಲಗುವುದು ಮಾಡಿದರೆ ಆಕೆಗೂ ವಿಶ್ರಾಂತಿ ಸಿಗುತ್ತದೆ. ರಾತ್ರಿಯಲ್ಲಿ ನಾಲ್ಕಾರು ಬಾರಿ ಎದ್ದು ಮಗುವಿಗೆ ಹಾಲುಣಿಸುವ ಸಂದರ್ಭ ಮಗುವಿನ ಅಮ್ಮನಿಗೆ ನಿದ್ದೆ ಸರಿಯಾಗಿ ಆಗಿರುವುದಿಲ್ಲ ಎಂಬುದನ್ನು ಅರಿಯುವ ಗಂಡನಿದ್ದರೆ ಹೆಂಡತಿಗೆ ಅದೇ ದೊಡ್ಡ ಸಪೋರ್ಟ್‌. ಒಂದಿಷ್ಟು ಹೊತ್ತು ಮಗುವನ್ನು ನೋಡಿಕೊಳ್ಳುವ ಕೆಲಸವನ್ನು ಗಂಡನಾದವನು ಹಂಚಿಕೊಂಡರೆ, ಅದು ದೊಡ್ಡ ಸಹಾಯವಾಗುತ್ತದೆ. ಉದಾಹರಣೆಗೆ ವೀಕೆಂಡಿನಲ್ಲಿ ಅಥವಾ ರಜಾ ದಿನಗಳಲ್ಲಿ, ಅಥವಾ ನಿತ್ಯವೂ ಅಪ್ಪ ಆಫೀಸಿನಿಂದ ಬಂದ ಮೇಲಿನ ಸ್ವಲ್ಪ ಹೊತ್ತು ಅಪ್ಪನ ಜೊತೆಗಿನ ಸಮಯ ಎಂದು ನಿಗದಿ ಮಾಡಿದರೆ ಕೊಂಚ ಅಮ್ಮನಿಗೂ ಸಮಯ ಸಿಗುತ್ತದೆ.
  3. ತಾಯಿಯಾದವಳು ಆರಂಭದಲ್ಲಿ ಮಗು ಮಲಗುವಾಗ ನಿದ್ದೆ ಮಾಡಿಬಿಡಬೇಕು. ಇದು ಹಿರಿಯರಾದಿಯಾಗಿ ಎಲ್ಲರೂ ನೀಡುವ ಬೆಸ್ಟ್‌ ಸಲಹೆ. ಯಾಕೆಂದರೆ, ಮಗು ಎದ್ದರೆ, ಆಕೆಗೆ ನಿದ್ದೆ ಸಿಗದು. ಮಗುವಿಗೆ ಒಂದು ನಿಗದಿತ ಸಮಯದಲ್ಲಿ ಮಲಗುವ ಅಭ್ಯಾಸ ಮಾಡಿಸಿದರೆ ಒಳ್ಳೆಯದು. ಅದೇ ಸಮಯದಲ್ಲಿ ಬೇರೆ ಕೆಲಸಗಳಿಗೆ ಕೈ ಹಾಕದೆ, ನಿದ್ದೆಯ ಮೇಲೆ ಗಮನ ಕೊಡುವುದು ಹೊಸ ತಾಯಂದಿರಿಗೆ ಅತ್ಯಂತ ಸೂಕ್ತ.
  4. ಬಾಟಲಿ ಹಾಲೂ ಅಭ್ಯಾಸ ಮಾಡಿ. ಎದೆ ಹಾಲು ಕುಡಿಸುವುದು ಒಂದು ದಿವ್ಯ ಅನುಭವ ಹೌದಾದರೂ ಅದು ಬೆಳೆಯುತ್ತಾ ಹೋದ ಮೇಲೆ ಕಷ್ಟ. ಆರಂಭದ ಆರು ತಿಂಗಳಲ್ಲಿ ಎದೆ ಹಾಲೇ ಹೆಚ್ಚು ಕುಡಿಸಿದರೂ ನಂತರ ನಿಧಾನವಾಗಿ ಬಾಟಲಿಯನ್ನು ಮಧ್ಯೆ ಮಧ್ಯೆ ಅಭ್ಯಾಸ ಮಾಡಿಸಿದರೆ, ಅಮ್ಮ ಹೊರಗೆ ಹೋಗಬೇಕಾದಾಗ ಸುಲಭವಾಗುತ್ತದೆ. ಮಗು ಬೇಗನೆ ಪರಿಸ್ಥಿತಿಗೆ ಹೊಂದಿಕೊಳ್ಳುತ್ತದೆ.
  5. ತೂಗುವ ತೊಟ್ಟಿಲನ್ನು ಮಗುವಿಗೆ ಬಳಸಿ. ಮಗುವನ್ನು ತೂಗಿ ಮಲಗಿಸುವುದನ್ನು ಅಭ್ಯಾಸ ಮಾಡಿ. ಕೈಯಲ್ಲಿ ಹಿಡಿದೇ ಮಲಗಿಸುವುದನ್ನು ಅಭ್ಯಾಸ ಮಾಡಿಸಿ ಬಿಟ್ಟರೆ ಮಗು ಬೇಗನೆ ಅಮ್ಮನ ಬೆಚ್ಚನೆಯ ಸ್ಪರ್ಶಕ್ಕೇ ಹೊಂದಿಕೊಂಡು ಬಿಡುತ್ತದೆ. ಅಮ್ಮ ಇಲ್ಲದಿದ್ದರೆ, ಸ್ಪರ್ಶ ಸಿಗದಿದ್ದರೆ ನಿದ್ದೆ ಮಾಡುವುದೇ ಇಲ್ಲ.
  6. ಮಗುವಿಗೆ ಹಾಲುಣಿಸುವ ಸಂದರ್ಭ ಆಗಾಗ ಏಳುವ ಕಾರಣ ಅಮ್ಮಂದಿರಿಗೆ ಹಸಿವಾಗುತ್ತದೆ. ಇಂತಹ ಸಂದರ್ಭಕ್ಕಾಗಿ, ಒಂದಿಷ್ಟು ಆರೋಗ್ಯಕರ ಹಣ್ಣು, ಒಣಹಣ್ಣು- ಬೀಜಗಳು ಇತ್ಯಾದಿಗಳನ್ನು ಜೊತೆಗಿಡಿ. ಇಲ್ಲವಾದರೆ ಹಾಲುಣಿಸುವ ತಾಯಿಗೇ ನಿಶ್ಯಕ್ತಿಯ ಸಮಸ್ಯೆ ಆರಂಭವಾಗುತ್ತದೆ.

ಇದನ್ನೂ ಓದಿ | Health Tips: ಮಳೆಗಾಲದಲ್ಲಿ ಆರೋಗ್ಯವಾಗಿರಲು ಈ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ

Continue Reading

Latest

Apple With sticker: ಸೇಬು ಹಣ್ಣುಗಳ ಮೇಲೆ ಸ್ಟಿಕ್ಕರ್; ಏನಿದರ ಹಿಂದಿರುವ ರಹಸ್ಯ?

Apple With sticker: ಸೇಬು ಹಣ್ಣು ಎಂದರೆ ಯಾರಿಗೆ ಇಷ್ಟವಿರಲ್ಲ? ದಿನಕ್ಕೊಂದು ಸೇಬು ತಿನ್ನಿ ವೈದ್ಯರಿಂದ ದೂರವಿರಿ ಇರುತ್ತಾರೆ. ಇದೆಲ್ಲಾ ಸರಿ ಮಾರುಕಟ್ಟೆಯಲ್ಲಿ ಹಣ್ಣು ತರಲು ಹೋದಾಗ ಈ ಸೇಬು ಹಣ್ಣುಗಳ ಮೇಲೆ ಚಿಕ್ಕದಾದ ಸ್ಟಿಕ್ಕರ್‌ವೊಂದು ಹಚ್ಚಿರುತ್ತಾರೆ ಅಲ್ವಾ ಅದರ ಹಿಂದಿರುವ ರಹಸ್ಯವೇನೆಂದು ನಿಮಗೆ ಗೊತ್ತಾ? ಆ ಭಾಗ ಹಾಳಾದ ಕಾರಣ ಸ್ಟಿಕರ್‌ನಿಂದ ಮುಚ್ಚಿರುತ್ತಾರೆ ಎನ್ನುತ್ತಾರೆ ಕೆಲವರು ಅದರ ನಿಜವಾದ ಕಾರಣ ಬೇರೆಯೇ ಇದೆ. ಈ ಕುರಿತ ವಿವರ ಇಲ್ಲಿದೆ.

VISTARANEWS.COM


on

Apple With sticker
Koo

ಬೆಂಗಳೂರು : ಮಾರುಕಟ್ಟೆಯಲ್ಲಿ ಸೇಬುಹಣ್ಣುಗಳು ಹಲವು ವಿಧಗಳಲ್ಲಿ ಕಂಡುಬರುತ್ತದೆ. ಕೆಲವು ಸೇಬುಗಳು ಹಸಿರು ಬಣ್ಣದಲ್ಲಿರುತ್ತದೆ. ಕೆಲವು ಸೇಬುಗಳು ಕೆಂಪು ಬಣ್ಣದಲ್ಲಿರುತ್ತದೆ. ಹಾಗೇ ಕೆಲವು ಸೇಬು ಹಣ್ಣಿನ (Apple With sticker) ಮೇಲೆ ಸ್ಟಿಕ್ಕರ್‌ಗಳನ್ನು ಅಂಟಿಸಿರುತ್ತಾರೆ. ಅದಕ್ಕೆ ಬೆಲೆ ಕೂಡ ಹೆಚ್ಚಾಗಿರುತ್ತದೆ. ಹಾಗಾಗಿ ಕೆಲವರು ಅದು ಉತ್ತಮವಾಗಿರುವುದು, ಆರೋಗ್ಯಕ್ಕೆ ಒಳ್ಳೆಯದು ಎಂದು ಅದನ್ನೇ ಕಂಡುಕೊಳ್ಳುತ್ತಾರೆ. ಆದರೆ ಕೆಲವರು ಅದು ಹಾಳಾದ ಕಾರಣ ಆ ಭಾಗವನ್ನು ಸ್ಟಿಕರ್ ನಿಂದ ಮುಚ್ಚಿದ್ದಾರೆ ಎಂದು ಭಾವಿಸುತ್ತಾರೆ. ಸೇಬಿನ ಮೇಲೆ ಸ್ಟಿಕ್ಕರ್ ಯಾಕೆ ಅಂಟಿಸುತ್ತಾರೆ. ಅದು ಏನನ್ನು ಸೂಚಿಸುತ್ತದೆ ಎಂಬುದನ್ನು ಮೊದಲು ತಿಳಿಯಿರಿ.

ಸ್ಟಿಕ್ಕರ್ ಇರುವ ಸೇಬು ಒಳ್ಳೆಯ ಗುಣಮಟ್ಟದಾಗಿರುತ್ತದೆ ಮತ್ತು ಅದಕ್ಕೆ ಬೆಲೆ ಕೂಡ ಹೆಚ್ಚು ಎಂದು ವ್ಯಾಪಾರಿಗಳು ಮಾರಾಟ ಮಾಡುತ್ತಾರೆ. ಆದರೆ ವಾಸ್ತವಾಗಿ ಕೆಟ್ಟ ಭಾಗವನ್ನು ಮುಚ್ಚಲು ಅಥವಾ ಕೊಳೆತ ಭಾಗವನ್ನು ಮರೆಮಾಚಲು ಸ್ಟಿಕ್ಕರ್ ಅನ್ನು ಅಂಟಿಸಿರುವುದಿಲ್ಲ.

ತಜ್ಞರು ತಿಳಿಸಿದ ಪ್ರಕಾರ, ಸೇಬು ಮಾತ್ರವಲ್ಲ ಕಿತ್ತಳೆ ಹಣ್ಣುಗಳನ್ನು ಸಹ ಸ್ಟಿಕ್ಕರ್‌ಗಳೊಂದಿಗೆ ಮಾರಾಟ ಮಾಡಲಾಗುತ್ತದೆ. ಸ್ಟಿಕ್ಕರ್ ನೋಡಿದವರು ಅದು ದುಬಾರಿ ಎಂದು ಭಾವಿಸುತ್ತಾರೆ. ಆದರೆ ಸ್ಟಿಕ್ಕರ್ ನೇರವಾಗಿ ಆರೋಗ್ಯಕ್ಕೆ ಸಂಬಂಧಿಸಿದ್ದಾಗಿದೆಯಂತೆ. ಹಾಗಾಗಿ ನೀವು ಸೇಬು ಖರೀದಿಸುವಾಗ ಅದರ ಮೇಲಿರುವ ಸ್ಟಿಕ್ಕರ್ ಅನ್ನು ಓದಿ.

ಸೇಬಿನ ಮೇಲಿನ ಸ್ಟಿಕ್ಕರ್‌ನಲ್ಲಿ ಸೇಬಿನ ಗುಣಮಟ್ಟ ಹಾಗೂ ಅದನ್ನು ಹೇಗೆ ಬೆಳೆಸಲಾಗಿದೆ ಎಂಬುದರ ಕುರಿತು ಮಾಹಿತಿ ಇದೆಯಂತೆ. ಕೆಲವು ಸ್ಟಿಕ್ಕರ್ ಗಳ ಮೇಲೆ ನಾಲ್ಕು ಸಂಖ್ಯೆಯ ನಂಬರ್ ಇರುತ್ತದೆ. ಅಂದರೆ ಅವು 4026 ಅಥವಾ 4987 ನಂತಹ ಸಂಖ್ಯೆ ಇರುತ್ತದೆ. ಇದು ಕೀಟ ನಾಶಕ ಮತ್ತು ರಾಸಾಯನಿಕಗಳನ್ನು ಬಳಸಿ ಬೆಳೆಸಲಾಗಿದೆ ಎಂದು ಸೂಚಿಸುತ್ತದೆಯಂತೆ. ಈ ಹಣ್ಣುಗಳ ಮೇಲೆ ಕೀಟನಾಶಕವನ್ನು ಹೆಚ್ಚಾಗಿ ಬಳಸಿರುತ್ತಾರಂತೆ. ಈ ಹಣ್ಣು ಅಗ್ಗವಾಗಿರುತ್ತದೆ.

ಕೆಲವು ಹಣ್ಣುಗಳ ಮೇಲೆ ಐದು ಅಂಕಿಯ ಸಂಖ್ಯೆಯನ್ನು ಬರೆಯಲಾಗುತ್ತದೆ. ಅಂದರೆ 84131 ಅಥವಾ 86532 ಹೀಗೆ 8ರಿಂದ ಪ್ರಾರಂಭವಾಗುವ ನಂಬರ್ ಇರುತ್ತದೆ. ಈ ಹಣ್ಣುಗಳು ನೈಸರ್ಗಿಕವಲ್ಲ. ಇವುಗಳನ್ನು ರಾಸಾಯನಿಕಗಳಿಂದ ಸಂಸ್ಕರಿಸಿದ್ದು, ಇದು ತುಂಬಾ ದುಬಾರಿಯಾಗಿರುತ್ತದೆ.

ಕೆಲವು ಹಣ್ಣುಗಳಲ್ಲಿ 9ರಿಂದ ಪ್ರಾರಂಭವಾಗುವ ಐದು ಅಂಕಿಯ ನಂಬರ್ ಇರುತ್ತದೆ. ಅದು 93435 ಇರುತ್ತದೆ. ಈ ಹಣ್ಣು ಸಾವಯವವಾಗಿ ಬೆಳೆದಿರುತ್ತದೆ. ಇದಕ್ಕೆ ಕೀಟನಾಶಕ ಮತ್ತು ರಾಸಾಯನಿಕ ಬಳಸಿಲ್ಲ ಎಂಬುದನ್ನು ಸೂಚಿಸುತ್ತದೆ. ಇದಕ್ಕೆ ಬೆಲೆ ಜಾಸ್ತಿಯಾದರೂ ಇದು ಆರೋಗ್ಯಕ್ಕೆ ಒಳ್ಳೆಯದು.

ಇದನ್ನೂ ಓದಿ: Viral Video: ಜೀವಂತ ಹಾವನ್ನೇ ತರಕಾರಿಯಂತೆ ಕಚ್ಚಿ ತಿಂದ ಬೆಡಗಿ! ಈ ವಿಡಿಯೊ ನೋಡುವ ಮುನ್ನ ಯೋಚಿಸಿ!

ಹೀಗೆ ಒಂದೊಂದು ಸ್ಟಿಕ್ಕರ್‌ಗೂ ಬೇರೆ ಬೇರೆ ಅರ್ಥವಿದ್ದರೂ ಕೂಡ ಕೆಲವೊಮ್ಮೆ ನಕಲಿ ಸ್ಟಿಕ್ಕರ್‌ಗಳನ್ನು ಅಂಟಿಸಿ ಮಾರಾಟ ಮಾಡುತ್ತಾರೆ. ಹಾಗಾಗಿ ಯಾವುದೇ ಹಣ್ಣುಗಳನ್ನು ಖರೀದಿಸುವಾಗ ತುಂಬಾ ಜಾಗರೂಕರಾಗಿರಿ.

Continue Reading

Latest

Health Tips: ಮಳೆಗಾಲದಲ್ಲಿ ಆರೋಗ್ಯವಾಗಿರಲು ಈ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ

Health Tips: ಒಂದೊಂದು ಋತುವಿನಲ್ಲೂ ಒಂದೊಂದು ರೀತಿಯ ಹವಾಮಾನವಿರುತ್ತದೆ. ಆಯಾಯ ಕಾಲಕ್ಕೆ ತಕ್ಕ ಹಾಗೇ ನಮ್ಮ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಾಗುತ್ತದೆ. ಬೇಸಿಗೆಯಲ್ಲಿ ಸೇವಿಸುವ ತಂಪು ಪಾನೀಯವನ್ನು ಮಳೆಗಾಲದಲ್ಲಿ ಸೇವಿಸಿದರೆ ಕಂಬಳಿ ಹೊದ್ದು ಮಲಗಬೇಕಾಗುತ್ತದೆ, ಹಾಗಾಗಿ ಆಯಾಯ ಕಾಲಕ್ಕೆ ತಕ್ಕ ಹಾಗೇ ಇರಬೇಕಾಗುತ್ತದೆ. ಮಳೆಗಾಲ ಕಾಲಿಟ್ಟಾಗಿದೆ. ಸೊಳ್ಳೆಗಳ ಕಾಟವೂ ಶುರುವಾಗಿದೆ. ಧೋ ಎಂದು ಸುರಿಯುವ ಮಳೆಯನ್ನು ನೋಡುವುದರ ಜೊತೆಗೆ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಕೂಡ ಅಷ್ಟೇ ಮುಖ್ಯವಾಗಿರುತ್ತದೆ.

VISTARANEWS.COM


on

Health Tips
Koo

ಬೆಂಗಳೂರು: ಬೇಸಿಗೆ ಕಾಲದ ನಂತರ ಬರುವ ಮಳೆಗಾಲ ನಿಮ್ಮನ್ನು ಶಾಖದಿಂದ ಮುಕ್ತಗೊಳಿಸಿ ತಂಪನ್ನು ನೀಡುತ್ತದೆ ನಿಜ. ಆದರೆ ಈ ಸಮಯದಲ್ಲಿ ಬ್ಯಾಕ್ಟೀರಿಯಾ, ವೈರಸ್‌ಗಳ ಹಾವಳಿ ಹೆಚ್ಚಾಗಿರುತ್ತದೆ. ಹಾಗಾಗಿ ಅನೇಕ ಕಾಯಿಲೆಗಳು ಕೂಡ ಹರಡುತ್ತದೆ. ಇದರಿಂದ ನೀವು ಬಹಳ ಬೇಗನೆ ಅನಾರೋಗ್ಯಕ್ಕೊಳಗಾಗುತ್ತೀರಿ. ಹಾಗಾಗಿ ಮಳೆಗಾಲದಲ್ಲಿ ನೀವು ಕೆಲವು ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಬೇಕಾಗುತ್ತದೆ. ಇದರಿಂದ ನೀವು ಫಿಟ್ ಆಗಿ ಆರೋಗ್ಯ (Health Tips) ವಾಗಿರಬಹುದು.

ಶುದ್ಧ ಮತ್ತು ಕುದಿಸಿದ ನೀರನ್ನು ಕುಡಿಯಿರಿ

ಮಳೆಗಾಲದಲ್ಲಿ ನೀರು ತುಂಬಾ ಕಲುಷಿತವಾಗಿರುತ್ತದೆ. ಹಾಗಾಗಿ ಅದರಲ್ಲಿ ಬ್ಯಾಕ್ಟೀರಿಯಾಗಳು ಬೆಳೆಯುತ್ತವೆ. ಈ ನೀರನ್ನು ನೀವು ಹಾಗೇ ಕುಡಿಯುವುದರಿಂದ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು, ಜ್ವರದಂತಹ ಸಾಮಾನ್ಯ ಆರೋಗ್ಯ ಸಮಸ್ಯೆಗಳು ಕಾಡುತ್ತವೆ. ಹಾಗಾಗಿ ಮಳೆಗಾಲದಲ್ಲಿ ಶುದ್ಧವಾದ ನೀರನ್ನು ಬಳಸಿ ಮತ್ತು ಕುದಿಸಿ ಆರಿಸಿದ ನೀರನ್ನೇ ಕುಡಿಯಿರಿ. ಹಾಗೇ ಹೊರಗಡೆ ಹೋದಾಗ ಅಲ್ಲಲ್ಲಿ ನೀರನ್ನು ಕುಡಿಯುವ ಬದಲು ಮನೆಯ ನೀರನ್ನು ತೆಗೆದುಕೊಂಡು ಹೋಗಿ ಬಳಸಿ.

Health Tips

ಬೀದಿ ಬದಿಯ ಆಹಾರ ಮತ್ತು ಜಂಕ್ ಫುಡ್ ಸೇವನೆಯನ್ನು ತಪ್ಪಿಸಿ

ಹೆಚ್ಚಿನ ಜನರು ಬೀದಿಗಳಲ್ಲಿ ಮಾರಾಟ ಮಾಡುತ್ತಿರುವ ಆಹಾರವನ್ನು ಸೇವಿಸುತ್ತಾರೆ. ಆದರೆ ಬೀದಿಗಳಲ್ಲಿ ಆಹಾರಗಳನ್ನು ತೆರೆದಿಡುತ್ತಾರೆ. ಹಾಗಾಗಿ ಅದರಲ್ಲಿ ಬ್ಯಾಕ್ಟೀರಿಯಾಗಳು ಸೇರಿಕೊಳ್ಳುತ್ತದೆ. ಅದನ್ನು ಸೇವಿಸಿದರೆ ನಿಮ್ಮ ಆರೋಗ್ಯ ಕೆಡುತ್ತದೆ. ಹಾಗಾಗಿ ಅವುಗಳನ್ನು ತಿನ್ನುವುದನ್ನು ತಪ್ಪಿಸಿ.

ಮನೆಯ ಸುತ್ತಮುತ್ತ ನೀರು ನಿಲ್ಲುವುದನ್ನು ತಪ್ಪಿಸಿ

ಮಳೆಗಾಲದಲ್ಲಿ ಮನೆಯ ಸುತ್ತಮುತ್ತಲಿರುವ ಹೊಂಡಗಳು, ಮಡಿಕೆಗಳು, ಪ್ಲಾಸ್ಟಿಕ್ ಡಬ್ಬಗಳು, ಬಾಟಲಿಗಳು ಮುಂತಾದವುಗಳಲ್ಲಿ ನೀರು ಸಂಗ್ರಹವಾಗುತ್ತದೆ. ಹಾಗಾಗಿ ಇಂತಹ ನೀರಿನಲ್ಲಿ ಸೊಳ್ಳೆಗಳು ಮೊಟ್ಟಯಿಟ್ಟು ಮರಿ ಮಾಡುತ್ತವೆ. ಈ ಸೊಳ್ಳೆಗಳ ಕಡಿತದಿಂದ ಡೆಂಗ್ಯೂ, ಮಲೇರಿಯಾದಂತಹ ಹಲವಾರು ಕಾಯಿಲೆಗಳು ಹರಡುತ್ತವೆ. ಹಾಗಾಗಿ ಈ ನೀರು ಶೇಖರಣೆಯಾಗುವುದನ್ನು ತಪ್ಪಿಸಿ.

Health Tips

ಹಣ್ಣುಗಳು-ತರಕಾರಿಗಳನ್ನು ತೊಳೆದು ಬಳಸಿ

ಮಾರುಕಟ್ಟೆಯಿಂದ ತಂದ ಹಣ್ಣುಗಳು ಮತ್ತು ತರಕಾರಿಗಳ ಮೇಲ್ಮೈ ಮೇಲೆ ಬ್ಯಾಕ್ಟೀರಿಯಾಗಳು ಇರುತ್ತವೆ. ಇದನ್ನು ಹಾಗೇ ಸೇವಿಸಿದರೆ ಹೊಟ್ಟೆ ಕೆಡುತ್ತದೆ. ಹಾಗಾಗಿ ಅವುಗಳನ್ನು ಉಪ್ಪನ್ನು ಬೆರೆಸಿದ ನೀರಿನಲ್ಲಿ ಚೆನ್ನಾಗಿ ತೊಳೆದು ಉಪಯೋಗಿಸಿ. ಮತ್ತು ತರಕಾರಿಗಳನ್ನು ಚೆನ್ನಾಗಿ ಬೇಯಿಸಿ ತಿನ್ನಿ. ಹಸಿ ತರಕಾರಿ ತಿನ್ನುವುದನ್ನು ತಪ್ಪಿಸಿ.

Health Tips

ಸುಖಕರವಾಗಿ ನಿದ್ರೆ ಮಾಡಿ

ನಿದ್ರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ದೇಹಕ್ಕೆ ವಿಶ್ರಾಂತಿಯನ್ನು ನೀಡುತ್ತದೆ. ತಡವಾಗಿ ನಿದ್ರೆ ಮಾಡುವುದು , ಕಡಿಮೆ ನಿದ್ರೆ ನಿಮ್ಮ ದೇಹದ ರೋಗ ನಿರೋಧಕ ಶಕ್ತಿಯ ಮಟ್ಟವನ್ನು ಕಡಿಮೆ ಮಾಡುತ್ತದೆ. ಇದರಿಂದ ನೀವು ಜ್ವರ, ಶೀತದಂತಹ ಸಾಮಾನ್ಯ ಕಾಯಿಲೆಯಿಂದ ಬಳಲುತ್ತೀರಿ. ಹಾಗಾಗಿ ದಿನದಲ್ಲಿ 8 ಗಂಟೆಗಳ ಕಾಲ ನಿದ್ರಿಸಿ.

Health Tips

ನಿಯಮಿತವಾದ ವ್ಯಾಯಾಮ

ಮಳೆಗಾಲದಲ್ಲಿ ಹೊರಗಡೆ ಮಳೆ ಸುರಿಯುವುದರಿಂದ ವಾಕಿಂಗ್, ಸೈಕ್ಲಿಂಗ್, ಯೋಗ ಮುಂತಾದ ವ್ಯಾಯಾಮಗಳನ್ನು ಮಾಡಲು ಅಡ್ಡಿಯಾಗುತ್ತದೆ. ಆದರೆ ನೀವು ಪ್ರತಿದಿನದ ವ್ಯಾಯಾಮವನ್ನು ತಪ್ಪಿಸಬೇಡಿ. ಮನೆಯೊಳಗೆ ನಿಮಗೆ ಸಾಧ್ಯವಾದಷ್ಟು ವ್ಯಾಯಾಮ ಮಾಡಿ. ಇದು ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಹಾಗೂ ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ.

ನಿಮ್ಮ ಕೈಗಳನ್ನು ಚೆನ್ನಾಗಿ ತೊಳೆಯಿರಿ

ನೀವು ಹೊರಗಡೆಯಿಂದ ಬಂದಾಗ ಕೈಕಾಲುಗಳನ್ನು ಸ್ವಚ್ಛ ಗೊಳಿಸುವುದನ್ನು ಮರೆಯಬೇಡಿ. ಹಾಗೇ ಯಾವುದೇ ಆಹಾರವನ್ನು ಸೇವಿಸುವ ಮುನ್ನ ಕೈಗಳನ್ನು ಚೆನ್ನಾಗಿ ತೊಳೆಯಿರಿ. ಇದು ನಿಮ್ಮನ್ನು ಹಾನಿಕಾರಕ ಬ್ಯಾಕ್ಟೀರಿಯಾಗಳಿಂದ ಕಾಪಾಡುತ್ತದೆ.

ಆಗಾಗ ಮಳೆಯಲ್ಲಿ ನೆನೆಯುವುದನ್ನು ತಪ್ಪಿಸಿ

ಮಳೆಗಾಲದಲ್ಲಿ ಹೊರಗಡೆ ಮಳೆ ಧಾರಕಾರವಾಗಿ ಸುರಿಯುತ್ತಿರುತ್ತದೆ. ಹಾಗಾಗಿ ನೀವು ಹೊರಗಡೆ ಹೋಗುವಾಗ ಛತ್ರಿ, ರೈನ್ ಕೋಟ್ ಧರಿಸುವುದನ್ನು ಮರೆಯಬೇಡಿ. ಇಲ್ಲವಾದರೆ ನೀವು ಮಳೆಯಲ್ಲಿ ನೆನೆಯಬೇಕಾಗುತ್ತದೆ. ಇದರಿಂದ ನೀವು ಅನಾರೋಗ್ಯಕ್ಕೊಳಗಾಗಬಹುದು.

ಇದನ್ನೂ ಓದಿ: Viral News: 80ರ ಅಜ್ಜನನ್ನು ಪ್ರೀತಿಸಿ ಮದುವೆಯಾದ 23ರ ಸುಂದರಿ! ಆಕೆ ಕೊಟ್ಟ ಕಾರಣ ಮಜವಾಗಿದೆ!

ಹಾಗಾಗಿ ಮಳೆಗಾಲದಲ್ಲಿ ನೀವು ಆರೋಗ್ಯವಾಗಿರಲು ಪ್ರಯತ್ನಿಸಿ. ಅದಕ್ಕಾಗಿ ಈ ಸಲಹೆಗಳನ್ನು ತಪ್ಪದೇ ಪಾಲಿಸಿ. ಇವು ನಿಮ್ಮನ್ನು ರೋಗಗಳಿಂದ ಕಾಪಾಡಲು ಸಹಾಯ ಮಾಡುತ್ತವೆ.

Continue Reading

ಆರೋಗ್ಯ

Morning Nutrition: ಆರೋಗ್ಯಕರ ಆಗಿರಬೇಕಿದ್ದರೆ ನಮ್ಮ ಬೆಳಗಿನ ತಿಂಡಿ ಹೇಗಿರಬೇಕು?

ರಾತ್ರಿಯಿಡೀ ದೇಹಕ್ಕೆ ಅಗತ್ಯವಾದ ವಿಶ್ರಾಂತಿಯನ್ನು ನೀಡಿದ್ದಾಗಿದೆ. ಇನ್ನೀಗ ಮುಂಜಾನೆ (Morning Nutrition) ಎದ್ದು ದಿನವನ್ನು ಪ್ರಾರಂಭಿಸಬೇಕು ಎನ್ನುವಾಗ, ದೇಹಕ್ಕೆ ನೀಡುವಂಥ ಗ್ರಾಸ ಹೇಗಿರಬೇಕು? ಒಂದು ಆಮ್ಲೇಟ್‌ ಸಾಕೇ? ಜೊತೆಗೆರಡು ಬ್ರೆಡ್‌…? ಅಥವಾ ಎರಡು ದೋಸೆ? ಹೀಗೆ ಗೊಂದಲಗಳು ಬಹಳಷ್ಟು ಇರಬಹುದು. ಅದಕ್ಕೆ ಉತ್ತರ ಇಲ್ಲಿದೆ.

VISTARANEWS.COM


on

Morning Nutrition
Koo

ಹೆಚ್ಚಿನ ಜನಕ್ಕೆ ಬೆಳಗಿನ ತಿಂಡಿಯ ಮಹತ್ವವೇ ತಿಳಿದಿರುವುದಿಲ್ಲ. ಈ ಮಾತನ್ನು ಹೇಳುವುದಕ್ಕೂ ಕಾರಣವಿದೆ. ಬೆಳಗ್ಗೆ (Morning Nutrition) ತಿಂಡಿಯನ್ನು ಎದ್ದ ನಾಲ್ಕು ತಾಸುಗಳ ನಂತರ ತಿನ್ನುವುದು, ಕೆಲವೊಮ್ಮೆ ತಿಂಡಿಯನ್ನೇ ತಿನ್ನದಿರುವುದು, ದಿನದ ಪ್ರಾರಂಭಕ್ಕೆ ಸೂಕ್ತ ಅಲ್ಲದ್ದನ್ನು ತಿನ್ನುವುದು, ಕೇವಲ ಕಾಫಿ/ಟೀ ಕುಡಿದು ಮಧ್ಯಾಹ್ನ ಊಟ ಮಾಡುವುದು- ಇಂಥ ಉದಾಹರಣೆಗಳು ಕಡಿಮೆಯೇನಿಲ್ಲ. ಆದರೆ ಬೆಳಗಿನ ತಿಂಡಿಯನ್ನು ದಿನದ ಅತ್ಯಂತ ಆರೋಗ್ಯಕರ ಊಟವನ್ನಾಗಿ ಮಾಡುವುದು ಮಹತ್ವದ್ದು ಎನ್ನುತ್ತಾರೆ ಪೌಷ್ಟಿಕಾಂಶ ತಜ್ಞರು. ರಾತ್ರಿಡೀ ದೇಹಕ್ಕೆ ಅಗತ್ಯವಾದ ವಿಶ್ರಾಂತಿಯನ್ನು ನೀಡಿದ್ದಾಗಿದೆ. ಇನ್ನೀಗ ಮುಂಜಾನೆದ್ದು ದಿನವನ್ನು ಪ್ರಾರಂಭಿಸಬೇಕು ಎನ್ನುವಾಗ, ದೇಹಕ್ಕೆ ನೀಡುವಂಥ ಗ್ರಾಸ ಹೇಗಿರಬೇಕು? ಅಧಿಕ ಸತ್ವಗಳನ್ನು ಹೊಂದಿದ ಆಹಾರವನ್ನೇ ತಿನ್ನಬೇಕು ಎಂದಾದರೆ, ಏಕೆ ಹಾಗೆ? ಬೆಳಗ್ಗೆ ತಿಂಡಿ ತಿನ್ನದಿದ್ದರೆ ತೂಕ ಇಳಿಸುವುದು ಸಾಧ್ಯವಿಲ್ಲವೇ? ಇಂತಹ ಹಲವಾರು ಪ್ರಶ್ನೆಗಳು ಮನದಲ್ಲಿದ್ದರೆ, ಅವಕ್ಕೆಲ್ಲ ಉತ್ತರ ಹುಡುಕುವ ಪ್ರಯತ್ನ ಇಲ್ಲಿದೆ. ಬೆಳಗಿನ ತಿಂಡಿಗೆ ಆರೋಗ್ಯಕರ ಕೊಬ್ಬುಗಳು, ಸಂಕೀರ್ಣ ಪಿಷ್ಟ ಮತ್ತು ಪ್ರೊಟೀನ್‌ ಇರುವಂಥ ಆಹಾರ ಅಗತ್ಯ. ಈ ಸತ್ವಗಳ ಮಿಶ್ರಣವು ದೇಹವು ದೀರ್ಘಕಾಲದವರೆಗೆ ಬಳಲದಂತೆ ನೋಡಿಕೊಳ್ಳುತ್ತದೆ. ದಿನವಿಡೀ ಅಗತ್ಯವಾದ ಚೈತನ್ಯವನ್ನು ದೇಹಕ್ಕೆ ನೀಡುತ್ತದೆ ಮತ್ತು ಆಹಾರ ತಿಂದ ತೃಪ್ತಿಯನ್ನು ಒದಗಿಸುತ್ತದೆ. ಜೊತೆಗೆ, ಬೇಗ ಹಸಿವಾಗುವುದನ್ನು ತಡೆಯುತ್ತದೆ. ಇಂಥ ಆಹಾರವು ದೇಹಕ್ಕೆ ಮಾತ್ರವಲ್ಲ, ಮನಸ್ಸಿಗೂ ಬೇಕಾದ ಗ್ರಾಸವನ್ನು ಒದಗಿಸಿಕೊಡುತ್ತದೆ. ಈ ಬಗ್ಗೆ ವಿವರಣೆ ಇಲ್ಲಿದೆ.

South Indian breakfast

ಸಂಕೀರ್ಣ ಪಿಷ್ಟಗಳು

ನಮ್ಮೆಲ್ಲ ಚಟುವಟಿಕೆಗಳನ್ನು ಮಾಡುವುದಕ್ಕೆ ನಮಗೆ ಪಿಷ್ಟ ಅಥವಾ ಕಾರ್ಬೊಹೈಡ್ರೇಟ್‌ಗಳು ಬೇಕು. ಆದರೆ ಮೈದಾ ಅಥವಾ ಸಂಸ್ಕರಿತ ತಿನಿಸುಗಳಿಂದ ಬರುವಂಥ ಸರಳ ಪಿಷ್ಟವಲ್ಲ, ದೀರ್ಘ ಕಾಲದವರೆಗೆ ಶಕ್ತಿಯನ್ನು ಉಣಿಸುವಂಥ ಸಂಕೀರ್ಣವಾದ ಪಿಷ್ಟಗಳು ಬೇಕು. ಇದನ್ನು ಇಡೀ ಧಾನ್ಯಗಳು, ಓಟ್ಸ್‌, ಸಿರಿ ಧಾನ್ಯಗಳು, ಕಿನೊವಾ, ರಾಗಿ ಮುಂತಾದ ನಾರುಭರಿತ ಅಂದರೆ ತೌಡು ಸಹಿತವಾದ ಧಾನ್ಯಗಳಿಂದ ಪಡೆಯಬಹುದು. ಈ ಧಾನ್ಯಗಳಿಂದ ಉಪ್ಪಿಟ್ಟು, ಅವಲಕ್ಕಿ, ದೋಸೆ, ಇಡ್ಲಿ, ಚಿತ್ರಾನ್ನ… ನಿಮಗೆ ಇಷ್ಟವಾದ ಯಾವುದನ್ನಾದರೂ ಮಾಡಿ.

ಪ್ರೊಟೀನ್‌

ಬೆಳಗಿನ ತಿಂಡಿಗೆ ಹೆಚ್ಚಿನ ಪ್ರಮಾಣದ ಪ್ರೊಟೀನ್‌ ಅಗತ್ಯ. ಇದರಿಂದ ದೇಹದ ರಿಪೇರಿ ಕೆಲಸ, ಹಾರ್ಮೋನುಗಳ ಕ್ಷಮತೆ, ಕಿಣ್ವಗಳ ಉತ್ಪಾದನೆ ಮುಂತಾದ ಮಹತ್ವದ ಕೆಲಸಗಳೆಲ್ಲವೂ ಮಟ್ಟಸವಾಗಿ ಇರುತ್ತದೆ. ಇದಕ್ಕಾಗಿ ಹಾಲು, ಮೊಸರು, ಗ್ರೀಕ್‌ ಯೋಗರ್ಟ್‌, ಪನೀರ್‌, ತೋಫು, ಮೊಟ್ಟೆ, ಕಾಳುಗಳು, ಸೋಯಾ, ಕಾಯಿ ಮತ್ತು ಬೀಜಗಳು ಬೆಳಗಿನ ಆಹಾರದಲ್ಲಿ ಇರಬೇಕು. ಆಮ್ಲೆಟ್‌ ಜೊತೆಗೆ ಇಡೀಧಾನ್ಯದ ಬ್ರೆಡ್‌ ಅಥವಾ ಚಪಾತಿಯಂಥವು ಬೇಕು ಎನ್ನುವುದು ಸ್ಪಷ್ಟವಾಗಿದೆಯಲ್ಲವೇ?

ಇದನ್ನೂ ಓದಿ: World Blood Donor Day: ರಕ್ತದಾನ ಯಾರು ಮಾಡಬಹುದು? ಯಾರು ಮಾಡಬಾರದು?

ಆರೋಗ್ಯಕರ ಕೊಬ್ಬು

ಇದು ಸಹ ಅತಿ ಮುಖ್ಯವಾದ ಸತ್ವ. ದೇಹದ ತೂಕವನ್ನು ನಿಯಂತ್ರಿಸಲು, ಹೆಚ್ಚಿನ ಕೊಬ್ಬು ದೇಹದಲ್ಲಿ ಜಮೆಯಾಗದಂತೆ ಕಾಯ್ದುಕೊಳ್ಳಲು ಇದು ಅಗತ್ಯ. ದೇಹದ ಅಂಗಾಂಗಗಳೆಲ್ಲ ಸರಿಯಾಗಿ ಕೆಲಸ ಮಾಡಲು ಈ ಕೊಬ್ಬು ಬೇಕೇಬೇಕು. ಇದಕ್ಕಾಗಿ ಅವಕಾಡೊ, ಕಾಯಿ-ಬೀಜಗಳು, ತುಪ್ಪ, ಕೊಬ್ಬರಿ ಎಣ್ಣೆಯಂಥ ಆರೋಗ್ಯಕರ ತೈಲಗಳು, ಪೀನಟ್‌ಬಟರ್‌ ಅಥವಾ ಇನ್ನಾವುದಾದರೂ ಬೀಜಗಳ ತುಪ್ಪ- ಇವೆಲ್ಲ ಶರೀರಕ್ಕೆ ಬೇಕು. ಮೆದುಳಿನ ಆರೋಗ್ಯ ರಕ್ಷಣೆಗಂತೂ ಇವು ತೀರಾ ಅಗತ್ಯವಾದವು. ಇವುಗಳಲ್ಲಿರುವ ಒಮೇಗಾ ೩ ಕೊಬ್ಬಿನಾಮ್ಲವು ಇಡೀ ದೇಹದ ಸ್ವಾಸ್ಥ್ಯಕ್ಕೆ ಅಗತ್ಯವಾಗಿದ್ದು.

drinking water

ನೀರು

ಇದಿಷ್ಟರ ಜೊತೆಗೆ ದಿನಕ್ಕೆ ಮೂರು ಲೀ. ನೀರು ಕುಡಿಯುವುದು ಬಹುಮುಖ್ಯ. ರಾತ್ರಿಡೀ ನೀರಿಲ್ಲದೆ ಇರುವಂಥ ದೇಹಕ್ಕೆ ಬೆಳಗಿನ ಹೊತ್ತು ಒಂದೆರಡು ಗ್ಲಾಸ್‌ ನೀರು ಕುಡಿಸಿ. ಬರೀ ನೀರು ಕುಡಿಯುವುದು ಕಷ್ಟ ಎನಿಸಿದರೆ, ಸಕ್ಕರೆ ರಹಿತವಾದ ಯಾವುದೇ ರಸಗಳನ್ನು ಸೇರಿಸಿಕೊಳ್ಳಬಹುದು. ಜೊತೆಗೆ, ದಿನವಿಡೀ ಹರ್ಬಲ್‌ ಚಹಾಗಳು, ಎಳನೀರು, ರಸಭರಿತ ಹಣ್ಣು-ತರಕಾರಿಗಳು, ಮಜ್ಜಿಗೆ- ಇಂಥವೆಲ್ಲ ದಿನದ ಮೂರು ಲೀ. ನೀರು ಕುಡಿಯುವ ಗುರಿಯನ್ನು ಪೂರ್ಣಗೊಳಿಸಲು ನೆರವಾಗುತ್ತವೆ.

Continue Reading
Advertisement
Dina Bhavishya
ಭವಿಷ್ಯ12 mins ago

Dina Bhavishya : ಗೌಪ್ಯ ವಿಷಯವನ್ನು ಹಂಚಿಕೊಂಡರೆ ಈ ರಾಶಿಯವರಿಗೆ ಅಪಾಯ ಗ್ಯಾರಂಟಿ!

World War 3
ಪ್ರಮುಖ ಸುದ್ದಿ6 hours ago

World War 3: ಜೂನ್ 18ರಿಂದ 3ನೇ ಮಹಾಯುದ್ಧ ಶುರು; ಖ್ಯಾತ ಜ್ಯೋತಿಷಿಯ ಭವಿಷ್ಯವಾಣಿ ಸಂಚಲನ

Cholera outbreak
ಕರ್ನಾಟಕ8 hours ago

Cholera outbreak: ಕಲುಷಿತ ನೀರು ಸೇವನೆ; ಮಧುಗಿರಿಯ ಚಿನ್ನೇನಹಳ್ಳಿಯಲ್ಲಿ ವ್ಯಕ್ತಿಗೆ ಕಾಲರಾ ದೃಢ

NCERT Textbooks
ಪ್ರಮುಖ ಸುದ್ದಿ8 hours ago

NCERT Textbooks: ರಾಜಕೀಯ ಶಾಸ್ತ್ರದ ಪಠ್ಯದಿಂದ ‘ಬಾಬ್ರಿ ಮಸೀದಿ’ ಅಧ್ಯಾಯ ತೆಗೆದ ಎನ್‌ಸಿಇಆರ್‌ಟಿ!

Parenting Tips
ಪ್ರಮುಖ ಸುದ್ದಿ9 hours ago

Parenting Tips: ನೀವು ಹೊಸ ಅಪ್ಪ ಅಮ್ಮಂದಿರೇ? ನಿಮಗಿದೆ ಇಲ್ಲಿ ಮುಖ್ಯವಾದ ಟಿಪ್ಸ್!

Drowns in Lake
ಕರ್ನಾಟಕ9 hours ago

Drowns in lake: ಸ್ನೇಹಿತರ ಜತೆ ಕೆರೆಗೆ ಈಜಲು ಹೋದ ಬಾಲಕ ನೀರುಪಾಲು

Petrol Diesel Price
ಕರ್ನಾಟಕ10 hours ago

Petrol Diesel Price: ಪೆಟ್ರೋಲ್, ಡೀಸೆಲ್ ದರ ಏರಿಕೆಗೂ ಚುನಾವಣಾ ಫಲಿತಾಂಶಕ್ಕೂ ಸಂಬಂಧವಿಲ್ಲ ಎಂದ ಸಿಎಂ

Amit Shah
ದೇಶ10 hours ago

Amit Shah: ಕಾಶ್ಮೀರದಲ್ಲಿ ಒಬ್ಬನೇ ಒಬ್ಬ ಉಗ್ರ ಉಳಿಯಬಾರದು; ಖಡಕ್‌ ಆದೇಶ ಕೊಟ್ಟ ಅಮಿತ್‌ ಶಾ

Karnataka Weather Forecast
ಮಳೆ10 hours ago

Karnataka weather : ಭಾನುವಾರ ರಾಯಚೂರಿನಲ್ಲಿ ಅಬ್ಬರಿಸಿದ ವರುಣ; ನಾಳೆಗೂ ಇದೆ ಮಳೆ ಅಲರ್ಟ್‌

Actor Darshan
ಪ್ರಮುಖ ಸುದ್ದಿ10 hours ago

Actor Darshan: ರೇಣುಕಾಸ್ವಾಮಿ ಕುಟುಂಬಕ್ಕಷ್ಟೇ ಅಲ್ಲ, ಚಿತ್ರರಂಗಕ್ಕೂ ನ್ಯಾಯ ಸಿಗಬೇಕು: ಕಿಚ್ಚ ಸುದೀಪ್‌

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Renukaswamy murder case The location of the accused is complete
ಸಿನಿಮಾ11 hours ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ12 hours ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ17 hours ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ2 days ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

Karnataka Weather Forecast
ಮಳೆ2 days ago

Karnataka Weather : ಕರಾವಳಿ, ಉತ್ತರ ಒಳನಾಡಿನಲ್ಲಿ ವರುಣಾರ್ಭಟ; ನಾಳೆಯು ಹಲವೆಡೆ ಸಿಕ್ಕಾಪಟ್ಟೆ ಮಳೆ

Actor Darshan
ಬೆಂಗಳೂರು3 days ago

Actor Darshan : ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿ ಕರೆತರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ!

actor Darshan
ಬೆಂಗಳೂರು3 days ago

Actor Darshan : ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಮತ್ತಿಬ್ಬರು ಸರೆಂಡರ್‌; ಆರೋಪಿಗಳ ಸಂಖ್ಯೆ 16ಕ್ಕೆ ಏರಿಕೆ

Actor Darshan
ಸಿನಿಮಾ3 days ago

Actor Darshan : ರೇಣುಕಾಸ್ವಾಮಿ ‌ಮೃತದೇಹ ಬಿಸಾಡಿ ಬಳಿಕ ಸಾಕ್ಷ್ಯಇದ್ದ 2 ಮೊಬೈಲ್‌ಗಳನ್ನು ಮೋರಿಗೆ ಎಸೆದ್ರಾ ಆರೋಪಿಗಳು?

karnataka weather Forecast
ಮಳೆ5 days ago

Karnataka Weather : ಭಾರಿ ಮಳೆಗೆ ಗುಡ್ಡದಿಂದ ಉರುಳಿ ಬಿದ್ದ ಬಂಡೆಗಲ್ಲು; ಬೆಂಗಳೂರಲ್ಲೂ ಸಂಜೆ ವರ್ಷಧಾರೆ

actor Darshan
ಚಿತ್ರದುರ್ಗ6 days ago

Actor Darshan: ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್‌ ಅರೆಸ್ಟ್‌; ಪ್ರಕರಣವನ್ನು ಸಿಬಿಐಗೆ ವಹಿಸಲು ಒತ್ತಾಯ

ಟ್ರೆಂಡಿಂಗ್‌