Business Ideas : ಕೇವಲ 5000 ರೂ.ಗಳಲ್ಲಿ ಆರಂಭಿಸಬಹುದಾದ ಹೊಸ ಬಿಸಿನೆಸ್‌ ಐಡಿಯಾ - Vistara News

ಮನಿ-ಗೈಡ್

Business Ideas : ಕೇವಲ 5000 ರೂ.ಗಳಲ್ಲಿ ಆರಂಭಿಸಬಹುದಾದ ಹೊಸ ಬಿಸಿನೆಸ್‌ ಐಡಿಯಾ

ಸಣ್ಣ ಬಂಡವಾಳದಲ್ಲಿ ಒಂದು ಒಳ್ಳೆಯ ಬಿಸಿನೆಸ್‌ ಮಾಡಲು ಬಯಸುತ್ತಿದ್ದರೆ ಈ ಲೇಖನವನ್ನು ತಪ್ಪದೆ ಓದಿ. ಇಲ್ಲಿದೆ ಕೇವಲ ( Business Ideas ) ಐದು ಸಾವಿರ ರೂ.ಗಳಲ್ಲಿ ಆರಂಭಿಸಬಹುದಾದ ಬಿಸಿನೆಸ್‌ ಐಡಿಯಾ.

VISTARANEWS.COM


on

business
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಭಾರತದಲ್ಲಿ ಇತ್ತೀಚಿನ ವರ್ಷಗಳಲ್ಲಿ ಸಣ್ಣ ಬಂಡವಾಳದಲ್ಲಿ ( Business Ideas ) ಯಾವುದಾದರೂ ಸ್ವಂತ ವ್ಯಾಪಾರ ಶುರು ಮಾಡಿ ಲಾಭ ಗಳಿಸಬೇಕು. ತಮ್ಮ ಕಾಲಮೇಲೆ ತಾವೇ ನಿಲ್ಲಬೇಕು. ಸಾಧ್ಯವಾದರೆ ಹತ್ತಾರು ಜನರಿಗೆ ಕೆಲಸವನ್ನೂ ಕೊಡಬೇಕು ಎಂಬ ಆಕಾಂಕ್ಷೆ ಅನೇಕ ಮಂದಿಯಲ್ಲಿ ಉಂಟಾಗುತ್ತಿದೆ. ಆದರೆ ಅಂಥ ಬಿಸಿನೆಸ್‌ ಯಾವುದು ಎಂಬ ಬಗ್ಗೆ ಸೂಕ್ತ ಮಾಹಿತಿ ಮತ್ತು ಮಾರ್ಗದರ್ಶನದ ಕೊರತೆಯನ್ನು ಕಾಣಬಹುದು. ಈ ನಿಟ್ಟಿನಲ್ಲಿ ವಿಸ್ತಾರ ಬಿಸಿನೆಸ್‌ & ಪ್ರಾಪರ್ಟಿ ಚಾನೆಲ್‌ನಲ್ಲಿ ಕೇವಲ 5,000 ರೂ. ಗಳ ಚಿಕ್ಕ ಬಂಡವಾಳದಲ್ಲಿ ಆರಂಭಿಸಬಹುದಾದ ಹತ್ತು ಬಿಸಿನೆಸ್‌ ಐಡಿಯಾಗಳ ವಿವರಗಳನ್ನು ನೀಡಲಾಗುತ್ತಿದೆ. ಅದರ ವಿವರಗಳನ್ನು ನೋಡೋಣ.

ಮೊದಲ ಐಡಿಯಾ- ಟಿಫಿನ್‌ ಸರ್ವೀಸ್:‌ ನೀವು 5 ಸಾವಿರ ರೂ.ಗಳಲ್ಲಿ ಒಂದಷ್ಟು ಅಡುಗೆ ಪಾತ್ರೆಗಳನ್ನು ಖರೀದಿಸಬಹುದು. ಒಂದಷ್ಟು ಕರಪತ್ರ ಅಥವಾ ಬ್ರೋಶರ್‌ಗಳನ್ನು ಸಿದ್ಧಪಡಿಸಬಹುದು. ಜತೆಗೆ ನೀವು ಚೆನ್ನಾಗಿ ಅಡುಗೆ ಮಾಡಲು ಕಲಿತಿದ್ದರೆ, ಟಿಫಿನ್‌ ಸರ್ವೀಸ್‌ ಅನ್ನು ಸುಲಭವಾಗಿ ಆರಂಭಿಸಬಹುದು. ಜನರಿಗೆ ಮನೆಯೂಟವನ್ನು ಪೂರೈಸಬಹುದು. ಆರಂಭದಲ್ಲಿ ತಿಂಗಳಿಗೆ 20 ಸಾವಿರ ರೂ.ಗಳಿಂದ 30 ಸಾವಿರ ರೂ. ತನಕ ಗಳಿಸಬಹುದು. ನಗರ ಪ್ರದೇಶಗಳಲ್ಲಿ ಈ ಬಿಸಿನೆಸ್‌ ಜನಪ್ರಿಯವಾಗುತ್ತಿದೆ.

ಎರಡನೇ ಐಡಿಯಾ- ಕನ್ಸಲ್ಟೆಂಟ್‌ ಸರ್ವೀಸ್:‌ ನೀವು ಯಾವುದೇ ವೃತ್ತಿಯಲ್ಲಿ 10-15 ವರ್ಷ ಕೆಲಸ ಮಾಡಿದರೆ, ಅದೇ ನಿಮಗೆ ಕನ್ಸಲ್ಟೆಂಟ್‌ ಸರ್ವೀಸ್‌ ಮಾಡಲು ಮೊದಲ ಅರ್ಹತೆಯಾಗುತ್ತದೆ. ಉದಾಹರಣೆಗೆ ಯಾವುದಾದರೂ ಕಂಪನಿಯಲ್ಲಿ ಹತ್ತಾರು ವರ್ಷಗಳ ಕಾಲ ಕ್ವಾಲಿಟಿ ಕಂಟ್ರೋಲರ್‌ ಅಥವಾ ನಿರ್ದಿಷ್ಟ ವಿಭಾಗದಲ್ಲಿ ಮ್ಯಾನೇಜರ್‌ ಹಂತದ ತನಕ ಕೆಲಸ ಮಾಡಿದ್ದರೆ, ನೀವು ಕ್ವಾಲಿಟಿ ಕಂಟ್ರೋಲ್‌, ಬಿಸಿನೆಸ್‌ ಮ್ಯಾನೇಜ್‌ ಮೆಂಟ್‌ ಬಗ್ಗೆ ಕನ್ಸಲ್ಸೆನ್ಸಿಯಾಗಿ ನಿಮ್ಮದೇ ಸರ್ವೀಸ್‌ ಬಿಸಿನೆಸ್‌ ಆರಂಭಿಸಬಹುದು. ಪ್ರತಿಯಾಗಿ ನಿರ್ದಿಷ್ಟ ಶುಲ್ಕವನ್ನು ಪಡೆಯಬಹುದು. ಇದಕ್ಕೆ ನಿಮ್ಮ ಕೌಶಲವನ್ನು, ಜ್ಞಾನವನ್ನು ಬಳಸಿದರೆ ಸಾಕು. ಮನೆಯಿಂದಲೇ ಈ ಬಿಸಿನೆಸ್‌ ಆರಂಭಿಸಬಹುದು.

ಮೂರನೇ ಐಡಿಯಾ – ಟ್ರಾನ್ಸ್‌ಲೇಶನ್‌ ಸರ್ವೀಸ್‌ ಬಿಸಿನೆಸ್:‌ ನೀವು ಎರಡು ಭಾಷೆಗಳ ನಡುವೆ ಅನುವಾದ ಮಾಡುವ ಸಾಮರ್ಥ್ಯ ಗಳಿಸಿದ್ದರೆ, ಅದನ್ನೇ ನಿಮ್ಮ ಹೊಸ ಬಿಸಿನೆಸ್‌ ಮಾಡಬಹುದು. ಉದಾಹರಣೆಗೆ ಇಂಗ್ಲಿಷ್‌ನಿಂದ ಕನ್ನಡಕ್ಕೆ, ಕನ್ನಡದಿಂದ ಇಂಗ್ಲಿಷ್‌ಗೆ ಭಾಷಾಂತರ ಮಾಡಲು ಗೊತ್ತಿದ್ದರೆ, ಅದರಿಂದಲೇ ಹಣ ಗಳಿಸಬಹುದು. ಪುಸ್ತಕಗಳನ್ನು ಅನುವಾದಿಸಬಹುದು. ಪಬ್ಲಿಕ್‌ ರಿಲೇಶನ್‌ಶಿಪ್‌ ಕಂಪನಿಗಳಿಗೆ ಪ್ರಕಟಣೆಗಳನ್ನು ಅನುವಾದಿಸಿ ಕೊಡಬಹುದು. ಜಾಹೀರಾತು ಕಂಪನಿಗಳಿಗೂ ಅನುವಾದ ಸೇವೆಯ ಅಗತ್ಯ ಇರುತ್ತದೆ. ಇಲ್ಲೂ ನಿಮ್ಮ ಭಾಷಾಂತರ ಕೌಶಲವೇ ಮೂಲ ಬಂಡವಾಳ.

ಇದನ್ನೂ ಓದಿ: Money Guide: ಹೊಸ ವರ್ಷದಲ್ಲಿ ಆರ್ಥಿಕ ಶಿಸ್ತು ರೂಢಿಸಿಕೊಳ್ಳಲು ಇಲ್ಲಿದೆ ಟಿಪ್ಸ್‌

ನಾಲ್ಕನೇ ಐಡಿಯಾ- ಪ್ಯಾಕಿಂಗ್‌ ಬಿಸಿನೆಸ್:‌ ವಿದ್ಯಾರ್ಥಿಗಳು, ಗೃಹಿಣಿಯರು, ನಿರುದ್ಯೋಗಿಗಳು, ಕಡಿಮೆ ಸಂಬಳ ಬರುತ್ತಿದ್ದು, ಏನಾದರೂ ಪಾರ್ಟ್‌ ಟೈಮ್‌ ಬಿಸಿನೆಸ್‌ ಅನ್ನು ಮಾಡಬೇಕು ಹಾಗೂ ಕಡಿಮೆ ಬಂಡವಾಳದಲ್ಲಿ ಮಾಡಬೇಕು ಎಂದು ಬಯಸುವವರು ಅತ್ಯಂತ ಸುಲಭವಾಗಿ ಮಾಡಬಹುದಾದ ಬಿಸಿನೆಸ್‌ ಪ್ಯಾಕಿಂಗ್‌ ಬಿಸಿನೆಸ್.‌ ನೀವು ಕಿರಾಣಿ ಅಂಗಡಿ ಅಥವಾ ದಿನಸಿ ಅಂಗಡಿಗಳಲ್ಲಿ ಜೀರಿಗೆ, ಚಕ್ಕೆ, ಲವಂಗ, ಸಾಸಿವೆ, ಸೊಂಪು, ಡ್ರೈ ಫ್ರುಟ್ಸ್‌, ಸ್ನ್ಯಾಕ್ಸ್‌ಗಳನ್ನು ಸಣ್ಣ ಸಣ್ಣ ಪ್ಯಾಕೇಟ್‌ಗಳಲ್ಲಿ ಮಾರಾಟ ಮಾಡುವುದನ್ನು ನೋಡಬಹುದು. ಈ ರೀತಿಯ ಪದಾರ್ಥಗಳನ್ನು ನೀವು ಪ್ಯಾಕಿಂಗ್‌ ಮಾಡಿ ಅಂಗಡಿಗಳಿಗೆ ಮಾರಾಟ ಮಾಡಬಹುದು. ಇದಕ್ಕೆ ಬೇಕಾಗುವ ಎಲ್ಲ ಸಾಮಾಗ್ರಿಗಳೂ ಮಾರುಕಟ್ಟೆಯಲ್ಲಿ ಹೋಲ್‌ ಸೇಲ್‌ ದರದಲ್ಲಿ ಸಿಗುತ್ತವೆ. ದಿನಕ್ಕೆ ಎರಡು ಸಾವಿರ ರೂಪಾಯಿ ತನಕ ಇದರಲ್ಲಿ ಸಂಪಾದನೆ ಮಾಡಬಹುದು.

ಐದನೇ ಐಡಿಯಾ- ಮನೆಯಲ್ಲಿಯೇ ತಯಾರಿಸುವ ಸೋಪ್: ಮನೆಯಲ್ಲಿಯೇ ಸೋಪುಗಳನ್ನು ತಯಾರಿಸಿ ಮಾರಾಟ ಮಾಡಬಹುದು. ಇದಕ್ಕೆ ಆನ್‌ಲೈನ್‌ ಮಾರುಕಟ್ಟೆಯನ್ನೂ ಕಂಡುಕೊಳ್ಳಬಹುದು. ಇದರ ವಿಶೇಷತೆ ಏನೆಂದರೆ ಸೋಪು ತಯಾರಿಕೆಗೆ ಬೇಕಾಗುವ ಕಚ್ಚಾ ವಸ್ತುಗಳ ಬೆಲೆ ಕಡಿಮೆ. ನುಗ್ಗೆ ಸೊಪ್ಪನ್ನು ಒಣಗಿಸಿ ಪೌಡರ್‌ ಮಾಡಿ, ಅಲೆವೆರಾ, ಆಲಿವ್‌ ಆಯಿಲ್‌, ರೋಸ್‌ ವಾಟರ್ ಹಾಕಿಯೂ ಸೋಪ್‌ ತಯಾರಿಸಬಹುದು.‌ ಕೆಮಿಕಲ್‌ ಹಾಕದೆ ತಯಾರಿಸುವ ಸೋಪಿನಲ್ಲಿ ನೊರೆ ಕಡಿಮೆ ಇರಬಹುದು, ಆದರೆ ಚರ್ಮದ ಆರೋಗ್ಯಕ್ಕೆ ಉತ್ತಮ. ಈ ಅಂಶವನ್ನೇ ಮಾರ್ಕೆಟ್‌ ಸ್ಟ್ರಾಟಜಿಯಾಗಿ ಬಳಸಬಹುದು. ಸ್ವದೇಶಿ ಚಿಂತನೆಗೆ ಒತ್ತು ನೀಡುವ ಮಳಿಗೆಗಳೂ ಇಂಥ ಸೋಪ್‌ ಗಳನ್ನು ಖರೀದಿಸುತ್ತವೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಮನಿ ಗೈಡ್

EPF Death Claim: ಆಧಾರ್ ದೃಢೀಕರಣ ಇಲ್ಲದೇ ಇದ್ದರೂ ಇಪಿಎಫ್‌ಒ ಡೆತ್ ಕ್ಲೈಮ್ ಸಾಧ್ಯವೆ? ಇಲ್ಲಿದೆ ಮಾಹಿತಿ

ಉದ್ಯೋಗಿಗಳ ಭವಿಷ್ಯ ನಿಧಿ ಖಾತೆ ಹೊಂದಿರುವ ಸದಸ್ಯರ ಮರಣದ ಬಳಿಕ ಅವರ ಆಧಾರ್ ದೃಢೀಕರಣ ಇಲ್ಲದೆಯೂ ಡೆತ್ ಕ್ಲೈಮ್ ಸೆಟ್ಲ್ ಮೆಂಟ್ (EPF Death Claim) ಮಾಡಿಕೊಳ್ಳಬಹುದು. ಇದಕ್ಕಾಗಿ ಇಪಿಎಫ್‌ಒ ಪ್ರಮುಖ ಬದಲಾವಣೆಯನ್ನು ಮಾಡಿದೆ. ಈ ಕುರಿತ ಉಪಯುಕ್ತ ಮಾಹಿತಿ ಇಲ್ಲಿದೆ.

VISTARANEWS.COM


on

By

EPF Death Claim
Koo

ಉದ್ಯೋಗಿಗಳ ಭವಿಷ್ಯ ನಿಧಿ (Employees Provident Fund) ಖಾತೆ ಹೊಂದಿರುವ ಸದಸ್ಯರ ಮರಣದ ಬಳಿಕ ಆಧಾರ್ ( Aadhaar) ದೃಢೀಕರಣಕ್ಕೆ ಸಂಬಂಧಿಸಿ ಎದುರಾಗಿರುವ ಪ್ರಮುಖ ಸವಾಲುಗಳ ಹಿನ್ನೆಲೆಯಲ್ಲಿ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯು ಡೆತ್ ಕ್ಲೈಮ್ (EPF Death Claim) ಮಾಡುವ ಪ್ರಕ್ರಿಯೆಯಲ್ಲಿ ಪ್ರಮುಖ ಬದಲಾವಣೆಯನ್ನು ಮಾಡಿದೆ. ಇದು ಆಧಾರ್ ಲಿಂಕ್ ಮಾಡದ ಹಲವಾರು ಸದಸ್ಯರಿಗೆ ಅನುಕೂಲವಾಗಲಿದೆ.

ಮೇ 17ರಂದು ಹೊರಡಿಸಲಾದ ಸುತ್ತೋಲೆಯಲ್ಲಿ ಈ ಪ್ರಕಟಣೆ ಹೊರಡಿಸಲಾಗಿದೆ. ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯು ಇ- ಆಫೀಸ್ ಫೈಲ್ ಮೂಲಕ ಪ್ರಭಾರ ಅಧಿಕಾರಿಯಿಂದ (OIC) ಅನುಮೋದನೆ ಪಡೆದ ಬಳಿಕವೇ ಈ ಸೌಲಭ್ಯ ಲಭ್ಯವಿರುತ್ತದೆ ಎಂದು ಪ್ರಕಟಣೆಯಲ್ಲಿ ಉಲ್ಲೇಖಿಸಿದೆ.

ಸತ್ತವರ ಸದಸ್ಯತ್ವ ಮತ್ತು ಹಕ್ಕುದಾರರ ನ್ಯಾಯಸಮ್ಮತತೆಯನ್ನು ದೃಢೀಕರಿಸಲು ಕೈಗೊಂಡ ಪರಿಶೀಲನಾ ಕಾರ್ಯವಿಧಾನಗಳನ್ನು ಕಡತವು ಸೂಕ್ಷ್ಮವಾಗಿ ದಾಖಲಿಸಬೇಕು. ಇದರಲ್ಲಿ ವಂಚನೆಯ ಅಪಾಯವನ್ನು ಕಡಿಮೆ ಮಾಡಲು ಒಐಸಿ ನಿರ್ದೇಶಿಸಿದಂತೆ ಈ ಪ್ರೋಟೋಕಾಲ್ ಅನ್ನು ಎಚ್ಚರಿಕೆಯಿಂದ ಕಾರ್ಯಗತಗೊಳಿಸಲಾಗುವುದು ಎಂದು ಇಪಿಎಫ್‌ಒ ತಿಳಿಸಿದೆ.

ಯುಎಎನ್ ನಲ್ಲಿ ಸದಸ್ಯರ ವಿವರಗಳು ನಿಖರವಾಗಿದ್ದರೂ ಯುಐಡಿ ಡೇಟಾಬೇಸ್‌ನಲ್ಲಿ ನಿಖರವಾಗಿಲ್ಲದ ಸಂದರ್ಭಗಳಲ್ಲಿ ಮಾತ್ರ ಈ ನಿರ್ದೇಶನಗಳು ಅನ್ವಯಿಸುತ್ತವೆ ಎಂದು ಸೂಚನೆಯು ಉಲ್ಲೇಖಿಸುತ್ತದೆ.

ಸಮಸ್ಯೆಗಳು ಏನು?

ಇಪಿಎಫ್‌ಒ ಸುತ್ತೋಲೆಯಲ್ಲಿ ಉಲ್ಲೇಖಿಸಿರುವಂತೆ ಸಾವಿನ ಸಂದರ್ಭದಲ್ಲಿ ಆಧಾರ್‌ನ ದೃಢೀಕರಣದ ಕುರಿತು ಕ್ಷೇತ್ರ ಕಚೇರಿಗಳು ಹಲವಾರು ಸವಾಲುಗಳನ್ನು ಎದುರಿಸುತ್ತಿವೆ. ಇವುಗಳಲ್ಲಿ ಕೆಲವು ಆಧಾರ್ ದಾಖಲೆಯಲ್ಲಿನ ಅಸಮರ್ಪಕತೆ ಮತ್ತು ಅಪೂರ್ಣ ವಿವರಗಳು, ಆಧಾರ್ ಅನುಷ್ಠಾನದ ಮೊದಲು ವಿವರಗಳ ಅಲಭ್ಯತೆ, ನಿಷ್ಕ್ರಿಯಗೊಳಿಸಿದ ಖಾತೆಗಳು ಮತ್ತು ಆಧಾರ್ ಮೌಲ್ಯೀಕರಿಸುವಲ್ಲಿ ತಾಂತ್ರಿಕ ಸಮಸ್ಯೆಗಳು ಸೇರಿವೆ.

ಈ ಸಮಸ್ಯೆಗಳು ಉಲ್ಲೇಖಿಸಲಾದ ಕ್ಲೈಮ್‌ಗಳನ್ನು ಪ್ರಕ್ರಿಯೆಗೊಳಿಸುವಲ್ಲಿ ಅನಗತ್ಯ ವಿಳಂಬವನ್ನು ಉಂಟು ಮಾಡುತ್ತವೆ. ಅವುಗಳನ್ನು ಪರಿಹರಿಸಲು ಇಪಿಎಫ್‌ಒ ಈಗ ಈ ಷರತ್ತುಗಳೊಂದಿಗೆ ಆಧಾರ್ ಅನ್ನು ಸೀಡಿಂಗ್ ಮಾಡದೆಯೇ ಭೌತಿಕ ಇಪಿಎಫ್‌ ಕ್ಲೈಮ್‌ಗಳನ್ನು ಪಡೆದುಕೊಳ್ಳಲು ಅನುಮತಿಸುತ್ತದೆ.

ಇದನ್ನೂ ಓದಿ: Reservation in Outsourcing: ಇನ್ನು ಹೊರಗುತ್ತಿಗೆ ನೇಮಕಾತಿಯಲ್ಲೂ ಮೀಸಲಾತಿ; ಸಿದ್ದರಾಮಯ್ಯ ಸರ್ಕಾರದ ಮಹತ್ವದ ಆದೇಶ

ಪರಿಹಾರ ಹೇಗೆ?

ಇಪಿಎಫ್‌ ಹೊಂದಿರುವ ಸದಸ್ಯನ ಸಾವಿನ ಸಂದರ್ಭದಲ್ಲಿ ಆಧಾರ್ ದೃಢೀಕರಣಕ್ಕೆ ಇಲ್ಲದೆ ಭೌತಿಕ ಕ್ಲೈಮ್‌ ಗಳ ಮೂಲಕ ತಾತ್ಕಾಲಿಕ ಭತ್ಯೆಯನ್ನು ಒದಗಿಸಲು ಒಐಸಿ ಅನುಮೋದನೆ ಕಡ್ಡಾಯವಾಗಿದೆ. ಮೃತರ ಸದಸ್ಯತ್ವ ಮತ್ತು ಹಕ್ಕುದಾರರ ದೃಢೀಕರಣವನ್ನು ಖಚಿತಪಡಿಸಲು ವಿವರವಾದ ಪರಿಶೀಲನೆಯು ಮುಖ್ಯವಾಗಿದೆ. ವಂಚನೆಯನ್ನು ತಡೆಗಟ್ಟಲು ಒಐಸಿ ನಿರ್ದೇಶನದಂತೆ ಸರಿಯಾದ ಕ್ರಮ ಕೈಗೊಳ್ಳಲಾಗುವುದು.

ಆಧಾರ್ ಇಲ್ಲದೇ ಇದ್ದರೆ ಏನು ಮಾಡಬಹುದು?

ಇಪಿಎಫ್‌ಒ ವೆಬ್‌ಸೈಟ್ ಮಾಹಿತಿ ಪ್ರಕಾರ, ಆಧಾರ್ ಇಲ್ಲದ ಸದಸ್ಯರ ಮರಣದ ಸಂದರ್ಭದಲ್ಲಿ ನಾಮಿನಿಯ ಆಧಾರ್ ವಿವರಗಳನ್ನು ದಾಖಲಿಸಲಾಗುತ್ತದೆ ಮತ್ತು ಅವನು ಅಥವಾ ಅವಳು ಜೆಡಿ ಫಾರ್ಮ್‌ಗೆ ಸಹಿ ಮಾಡಬೇಕು. ಇತರ ಪ್ರಕ್ರಿಯೆಗಳು ಒಂದೇ ಆಗಿರುತ್ತವೆ. ನಾಮನಿರ್ದೇಶನವು ಗೈರುಹಾಜರಾಗಿದ್ದರೆ ಕುಟುಂಬದ ಸದಸ್ಯರು ಅಥವಾ ಕಾನೂನುಬದ್ಧ ಉತ್ತರಾಧಿಕಾರಿಗಳು ಜೆಡಿಗೆ ದೃಢೀಕರಿಸಬಹುದು ಮತ್ತು ಅವರ ವಿವರಗಳನ್ನು ಸಲ್ಲಿಸಬೇಕು.

Continue Reading

ಮನಿ-ಗೈಡ್

Money Guide: 1 ಕೋಟಿ ರೂ. ದುಡಿಯಬೇಕೆ? ಈ ಅಪಾಯ ರಹಿತ ಯೋಜನೆಯಲ್ಲಿ ಹೂಡಿಕೆ ಮಾಡಿ

Money Guide: ಭವಿಷ್ಯಕ್ಕಾಗಿ ಹೂಡಿಕೆ ಮಾಡಬೇಕು ಎನ್ನುವುದು ಬಹುತೇಕರ ಆಗ್ರಹ. ಆದರೆ ಯಾವ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಉತ್ತಮ ಎನ್ನವ ಬಗ್ಗೆ ಗೊಂದಲ ಮೂಡುತ್ತದೆ. ಇಲ್ಲಿ ನಾವು ನಿಮಗೆ ಪರಿಚಯಿಸುವ ಯೋಜನೆ ಸರ್ಕಾರಿ ಬೆಂಬಲಿತ ಪ್ಲಾನ್‌ ಆಗಿದ್ದು, ಇಲ್ಲಿ ಹೂಡಿಕೆ ಮಾಡುವುದರಿಂದ ಯಾವುದೇ ಆತಂಕವಿಲ್ಲ. ಈ ಯೋಜನೆಯಲ್ಲಿ ಹೂಡಿಕೆ ಮಾಡುವ ಮೂಲಕ ನೀವು 1 ಕೋಟಿ ರೂ.ಗಿಂತ ಹೆಚ್ಚು ಸಂಗ್ರಹಿಸಬಹುದು. ಹಾಗಾದರೆ ಇದು ಯಾವ ಯೋಜನೆ? ಯಾರೆಲ್ಲ ಹೂಡಿಕೆ ಮಾಡಬಹುದು? ನಿಮ್ಮ ಪ್ರಶ್ನೆಗೆ ಇಲ್ಲಿದೆ ಉತ್ತರ.

VISTARANEWS.COM


on

Money Guide
Koo

ಬೆಂಗಳೂರು: ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಬೆಲೆ, ದುಬಾರಿ ಜೀವನ ಶೈಲಿಯಿಂದಾಗಿ ಹಣಕಾಸಿನ ವಿಚಾರದಲ್ಲಿ ಎಲ್ಲರೂ ಎಚ್ಚರಿಕೆ ವಹಿಸಲೇಬೇಕಾದ ಅನಿವಾರ್ಯತೆ ಎದುರಾಗಿದೆ. ಹೀಗಾಗಿ ಪ್ರತಿಯೊಬ್ಬರೂ ಉಳಿತಾಯ ಮಾಡುವತ್ತ ಗಮನ ಹರಿಸಬೇಕು ಎನ್ನುವುದು ಆರ್ಥಿಕ ತಜ್ಞರ ಸಲಹೆ. ಹಾಗಾದರೆ ಉಳಿತಾಯ, ನಿವೃತ್ತಿ ಯೋಜನೆಗಳಲ್ಲಿ ಹೂಡಿಕೆ ಮಾಡುವುದಾದರೆ ಯಾವುದು ಉತ್ತಮ? ಎನ್ನುವ ಪ್ರಶ್ನೆ ಸಹಜವಾಗಿ ಎದುರಾಗುತ್ತದೆ. ಇದಕ್ಕೆ ತಜ್ಞರು ನೀಡುವ ಉತ್ತರ ಸಾರ್ವಜನಿಕ ಭವಿಷ್ಯ ನಿಧಿ (Public Provident Fund). ಇದು ಕೇಂದ್ರ ಸರ್ಕಾರ ಬೆಂಬಲಿತ ಪ್ಲಾನ್‌ ಆಗಿದ್ದು, ಸಣ್ಣ ಹೂಡಿಕೆದಾರರು ಈ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳಬಹುದು. ಸರ್ಕಾರಿ ಬೆಂಬಲಿತ ಪ್ಲಾನ್‌ ಆದ ಕಾರಣ ಇಲ್ಲಿ ಹೂಡಿಕೆ ಮಾಡುವುದು ಅಪಾಯಕಾರಿ ಅಲ್ಲ ಎನ್ನುವುದು ಬಹು ದೊಡ್ಡ ಪ್ಲಸ್‌ ಪಾಯಿಂಟ್‌. ಪಿಪಿಎಫ್‌ ಖಾತೆ ತೆರೆಯುವವರಿಗೆ ವಾರ್ಷಿಕ ಶೇ. 7.1ರಷ್ಟು ಬಡ್ಡಿ ದೊರೆಯಲಿದೆ. ಅಲ್ಲದೆ ಈ ಹೂಡಿಕೆಯ ಮೂಲಕ ಸಾಲವನ್ನೂ ಪಡೆಯಬಹುದು. ಜತೆಗೆ ತೆರಿಗೆ ವಿನಾಯಿತಿಯೂ ಲಭಿಸುತ್ತದೆ. ವಿಶೇಷ ಎಂದರೆ ನಿಯತಕಾಲಿಕ ಹೂಡಿಕೆಗಳು ಮತ್ತು ಸಂಯೋಜನೆಯ ಮೂಲಕ ನೀವು ಪಿಪಿಎಫ್‌ನಿಂದ 1 ಕೋಟಿ ರೂ.ಗಿಂತ ಹೆಚ್ಚಿನ ಹಣವನ್ನು ಸಂಗ್ರಹಿಸಬಹುದು. ಅದು ಹೇಗೆ ಎನ್ನುವ ವಿವರ ಇಲ್ಲಿದೆ (Money Guide).

1 ಕೋಟಿ ರೂ. ಪಡೆಯುವ ವಿಧಾನ

ಹೂಡಿಕೆ ಅವಧಿಒಟ್ಟು ಪಿಪಿಎಫ್‌
ಹೂಡಿಕೆ
ಒಟ್ಟು ಬಡ್ಡಿಮೆಚ್ಯೂರಿಟಿ ಮೊತ್ತ
15 ವರ್ಷ1.5 ಲಕ್ಷ ರೂ.18.18 ಲಕ್ಷ ರೂ.40.68 ಲಕ್ಷ ರೂ.
20 ವರ್ಷ1.5 ಲಕ್ಷ ರೂ.36.58 ಲಕ್ಷ ರೂ.66.58 ಲಕ್ಷ ರೂ.
30 ವರ್ಷ1.5 ಲಕ್ಷ ರೂ.1.09 ಕೋಟಿ ರೂ.1.54 ಕೋಟಿ ರೂ.

ವಿವಿಧ ಅವಧಿಗಳಲ್ಲಿ ವಾರ್ಷಿಕವಾಗಿ 1.5 ಲಕ್ಷ ರೂ. ಹೂಡಿಕೆ ಮಾಡುವ ಮೂಲಕ ನಿಮ್ಮ ಮೆಚ್ಯೂರಿಟಿ ಮೊತ್ತವು 40 ಲಕ್ಷ ರೂ.ಯಿಂದ 1.5 ಕೋಟಿ ರೂ.ಗೆ ಹೇಗೆ ಬೆಳೆಯಬಹುದು ಎಂಬುದನ್ನು ಮೇಲಿನ ಉದಾಹರಣೆ ವಿವರಿಸುತ್ತದೆ.

ತೆರಿಗೆ ವಿನಾಯಿತಿ

ಇನ್ನು ಸೆಕ್ಷನ್‌ 80 ಸಿ ಅಡಿಯಲ್ಲಿ 1.5 ಲಕ್ಷ ರೂ. ತನಕ ತೆರಿಗೆ ವಿನಾಯಿತಿ ಸಿಗಲಿದೆ. ಅಂದರೆ ಯೋಜನೆಯಲ್ಲಿ ಮಾಡಿದ ಸಂಪೂರ್ಣ ಹೂಡಿಕೆಯ ಮೇಲೆ ತೆರಿಗೆ ವಿನಾಯಿತಿಯ ಪ್ರಯೋಜನವನ್ನು ನೀವು ಪಡೆಯುತ್ತೀರಿ. ಇದಲ್ಲದೆ, ಹೂಡಿಕೆಯಿಂದ ಪಡೆದ ಬಡ್ಡಿಗೂ ಯಾವುದೇ ತೆರಿಗೆ ಪಾವತಿಸಬೇಕಾಗಿಲ್ಲ. ಅಲ್ಲದೆ ಯೋಜನೆ ಮುಕ್ತಾಯವಾದ ಬಳಿಕ ಪಡೆದಯುವ ಮೊತ್ತವೂ ತೆರಿಗೆಮುಕ್ತವಾಗಿರುತ್ತದೆ.

ಸಾಲ ಪಡೆಯಲಿರುವ ಅರ್ಹತೆ

ಪಬ್ಲಿಕ್‌ ಪ್ರಾವಿಡೆಂಟ್‌ ಫಂಡ್‌ನಲ್ಲಿ ನೀವು ಮಾಡುವ ಇನ್ವೆಸ್ಟ್‌ಮೆಂಟ್‌ ಮೇಲೆ ಸಾಲ ಪಡೆಯಬಹುದು. ಖಾತೆ ತೆರೆದ 3-6ನೇ ವರ್ಷದಲ್ಲಿ ಸಾಲ ಪಡೆಯಲು ನೀವು ಅರ್ಹರಾಗಿರುತ್ತೀರಿ. ಇಂಥ ಸಾಲದ ಗರಿಷ್ಠ ಅವಧಿ 36 ತಿಂಗಳು. ಅಕೌಂಟ್‌ನಲ್ಲಿರುವ ಮೊತ್ತದ 25% ಅಥವಾ ಕಡಿಮೆ ಮೊತ್ತವನ್ನು ಮಾತ್ರ ಸಾಲಕ್ಕಾಗಿ ಕ್ಲೈಮ್‌ ಮಾಡಿಕೊಳ್ಳಬಹುದು.‌

ಯಾರೆಲ್ಲ ತೆರೆಯಬಹುದು?

ಭಾರತೀಯ ನಾಗರಿಕರು ಪಿಪಿಎಫ್‌ ಖಾತೆಯನ್ನು ತೆರೆಯಬಹುದು. ಅಪ್ರಾಪ್ತ ವಯಸ್ಕರ ಹೆಸರಿನಲ್ಲಿಯೂ ಖಾತೆ ತೆರೆಯುವ ಸೌಕರ್ಯವಿದೆ. ಅನಿವಾಸಿ ಭಾರತೀಯರು ಹೊಸ ಪಿಪಿಎಫ್‌ ಅಕೌಂಟ್‌ ತೆರೆಯುವಂತಿಲ್ಲ. ಹೀಗಿದ್ದರೂ ಈಗಾಗಲೇ ಇದ್ದರೆ ಅದು ಪೂರ್ಣವಾಗುವ ತನಕ ಸಕ್ರಿಯವಾಗಿರುತ್ತದೆ. ಆದರೆ 5 ವರ್ಷಗಳ ಹೆಚ್ಚುವರಿ ಅವಧಿ ಇರುವುದಿಲ್ಲ. ಈ ಯೋಜನೆಯಲ್ಲಿ ನೀವು ವರ್ಷಕ್ಕೆ ಕನಿಷ್ಠ 500 ರೂ ಮತ್ತು ಗರಿಷ್ಠ 1.5 ಲಕ್ಷ ರೂ.ಗಳನ್ನು ಹೂಡಿಕೆ ಮಾಡಬಹುದು. ಒಂದು ಹಣಕಾಸು ವರ್ಷದಲ್ಲಿ ನೀವು ಗರಿಷ್ಠ 12 ಕಂತುಗಳಲ್ಲಿ ಹಣವನ್ನು ಠೇವಣಿ ಇಡುವ ಸೌಲಭ್ಯವೂ ಇದೆ. ಆಫ್‌ಲೈನ್‌ ಹಾಗೂ ಆನ್‌ಲೈನ್‌ ವಿಧಾನದಲ್ಲಿ ಪಿಪಿಎಫ್‌ ಖಾತೆಯನ್ನು ತೆರೆಯಬಹುದು. 

ಇದನ್ನೂ ಓದಿ: Money Guide: ತೆರಿಗೆ ವಿನಾಯಿತಿ ಪಡೆಯಬೇಕೆ? ಮಾ. 31ರೊಳಗೆ ಪಿಪಿಎಫ್‌ನಲ್ಲಿ ಹೂಡಿಕೆ ಮಾಡಿ

Continue Reading

ಮನಿ-ಗೈಡ್

Money Guide: ಜನಪ್ರಿಯವಾಗುತ್ತಿದೆ ʼಈಗ ಖರೀದಿಸಿ, ನಂತರ ಪಾವತಿಸಿʼ ಆಯ್ಕೆ: ಏನಿದು ಬಿಎನ್‌ಪಿಎಲ್‌? ಬಳಕೆ ಹೇಗೆ? ಇಲ್ಲಿದೆ ವಿವರ

Money Guide: ಯಾವುದೇ ಒಂದು ವಸ್ತು ಖರೀದಿಸಲು ತಕ್ಷಣಕ್ಕೆ ನಿಮ್ಮ ಬಳಿ ಹಣ ಇಲ್ಲದಿದ್ದರೆ ಹೆಸರೇ ಹೇಳುವಂತೆ ಈಗ ಖರೀದಿಸಿ ನಂತರ ಪಾವತಿಸಬಹುದು ಆಯ್ಕೆಯನ್ನು ಬಳಸಿಕೊಳ್ಳಬಹುದು. ಇ-ಕಾಮರ್ಸ್ ತಾಣಗಳು ಈ ವಿಧಾನದ ಮೂಲಕ ಗ್ರಾಹಕರಿಗೆ ವಸ್ತುಗಳ ಖರೀದಿಗೆ ಬಡ್ಡಿರಹಿತ ಕಿರು ಅವಧಿಯ ಸಾಲಗಳನ್ನು ಒದಗಿಸುತ್ತಿವೆ. ಅಂದರೆ ನೀವು ವಸ್ತು ಖರೀದಿಸಿದ ಬಳಿಕ ಹಂತ ಹಂತವಾಗಿ ಕಂತುಗಳಲ್ಲಿ ದುಡ್ಡು ಪಾವತಿಸದರಾಯ್ತು. ಅಂದರೆ ಈ ಸಾಲ ಬಳಸಿಕೊಂಡು ಗ್ರಾಹಕರು ವಸ್ತುಗಳನ್ನು ಖರೀದಿಸಿ, ಆ ಬಳಿಕ ಬಡ್ಡಿರಹಿತ ಇಎಂಐಗಳ ಮೂಲಕ ಪಾವತಿ ಮಾಡಬಹುದು.

VISTARANEWS.COM


on

Money Guide
Koo

ಬೆಂಗಳೂರು: ಬಿಎನ್‌ಪಿಎಲ್‌ (BNPL) ಬಗ್ಗೆ ನಿಮಗೆ ಗೊತ್ತೆ? ಬಿಎಸ್‌ಎಸ್‌ಎಲ್‌ ಗೊತ್ತು. ಇದೇನಿದು ಬಿಎನ್‌ಪಿಎಲ್‌ ಎಂದು ಎಂದು ಜಾಸ್ತಿ ತಲೆ ಕೆಡಿಸಿಕೊಳ್ಳಬೇಡಿ. ʼಈಗ ಖರೀದಿಸಿ, ನಂತರ ಪಾವತಿಸಿʼ (Buy Now, Pay Later)ಯ ಸಂಕ್ಷಿಪ್ತ ರೂಪವೇ ಬಿಎನ್‌ಪಿಎಲ್‌. ಯಾವುದೇ ಒಂದು ವಸ್ತು ಖರೀದಿಸಲು ತಕ್ಷಣಕ್ಕೆ ನಿಮ್ಮ ಬಳಿ ಹಣ ಇಲ್ಲದಿದ್ದರೆ ಹೆಸರೇ ಹೇಳುವಂತೆ ಈಗ ಖರೀದಿಸಿ ನಂತರ ಪಾವತಿಸಬಹುದು ಆಯ್ಕೆಯನ್ನು ಬಳಸಿಕೊಳ್ಳಬಹುದು. ಇ-ಕಾಮರ್ಸ್ ತಾಣಗಳು ಈ ವಿಧಾನದ ಮೂಲಕ ಗ್ರಾಹಕರಿಗೆ ವಸ್ತುಗಳ ಖರೀದಿಗೆ ಬಡ್ಡಿರಹಿತ ಕಿರು ಅವಧಿಯ ಸಾಲಗಳನ್ನು ಒದಗಿಸುತ್ತಿವೆ. ಅಂದರೆ ನೀವು ವಸ್ತು ಖರೀದಿಸಿದ ಬಳಿಕ ಹಂತ ಹಂತವಾಗಿ ಕಂತುಗಳಲ್ಲಿ ದುಡ್ಡು ಪಾವತಿಸದರಾಯ್ತು. ಅಂದರೆ ಈ ಸಾಲ ಬಳಸಿಕೊಂಡು ಗ್ರಾಹಕರು ವಸ್ತುಗಳನ್ನು ಖರೀದಿಸಿ, ಆ ಬಳಿಕ ಬಡ್ಡಿರಹಿತ ಇಎಂಐಗಳ ಮೂಲಕ ಪಾವತಿ ಮಾಡಬಹುದು. ಸದ್ಯ ಇದು ಭಾರತೀಯ ಮಧ್ಯಮ ವರ್ಗದ ಜನರ ನೆಚ್ಚಿನ ಆಯ್ಕೆ ಎನಿಸಿಕೊಂಡಿದೆ. ಈ ಬಗೆಗಿನ ವಿವರ ಇಲ್ಲಿದೆ (Money Guide).

ಗಮನ ಸೆಳೆಯುತ್ತಿದೆ

ಈ ಬಿಎನ್‌ಪಿಎಲ್‌ ಸಾಂಪ್ರದಾಯಿಕ ಕ್ರೆಡಿಟ್ ಕಾರ್ಡ್‌ ಮತ್ತು ಸಾಲಗಳಿಗೆ ಪರ್ಯಾಯವಾಗಿ ಗುರುತಿಸಿಕೊಂಡಿದೆ. ಬಡ್ಡಿ ಪಾವತಿಸಬೇಕಾಗಿಲ್ಲ ಎನ್ನುವ ಅಂಶವೇ ಈ ಪಾವತಿ ವಿಧಾನದ ಬಹುದೊಡ್ಡ ಪ್ಲಸ್‌ ಪಾಯಿಂಟ್‌. ಅಲ್ಲದೆ ಬಿಎನ್‌ಪಿಎಲ್ ಸೇವೆ ಸಾಮಾನ್ಯವಾಗಿ ತ್ವರಿತ ಮತ್ತು ಸುಲಭವಾಗಿ ಮಂಜೂರಾಗುತ್ತದೆ. ಇದಕ್ಕೆ ಕನಿಷ್ಠ ಕ್ರೆಡಿಟ್ ಚೆಕ್ ಗಳ ಅಗತ್ಯವಿರುತ್ತದೆ. ಆದರೆ ಗಮನಿಸಿ ಬಿಎನ್‌ಪಿಎಲ್ ತಿಂಗಳ ಮರುಪಾವತಿಯನ್ನು ಮಿಸ್ ಮಾಡಿದರೆ ಅದು ನಿಮ್ಮ ಸಿಬಿಲ್ ಸ್ಕೋರ್ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಹೀಗಾಗಿ ಸೂಕ್ತ ಸಮಯದಲ್ಲಿ ಮರು ಪಾವತಿಗೆ ಗಮನ ಹರಿಸಿ. ಅಲ್ಲದೆ ಕ್ರೆಡಿಟ್‌ ಕಾರ್ಡ್‌ಗೆ ಹೋಲಿಸಿದರೆ ಬಿಎನ್‌ಪಿಎಲ್‌ ಕಾರ್ಡ್‌ಗಳಿಗೆ ಆರಂಭದಲ್ಲಿ ಅಲ್ಪ ಮೊತ್ತವಷ್ಟೇ ಲಭಿಸುತ್ತದೆ.

ಗಮನಿಸಬೇಕಾದ ಅಂಶ

ಬಿಎನ್‌ಪಿಎಲ್‌ ಕಾರ್ಡ್‌ ಪಡೆಯುವ ಮುನ್ನ ಈ ಅಂಶಗಳನ್ನು ಗಮನಿಸಿ.

  • ಬಜೆಟ್ ಮುಖ್ಯ: ಬಿಎನ್‌ಪಿಎಲ್ ಮೇಲ್ನೋಟಕ್ಕೆ ಅನುಕೂಲಕವೆಂದು ತೋರಬಹುದು. ಆದರೆ ನಿಮ್ಮ ಸಾಲ ಹೆಚ್ಚಾಗಲು ಇದು ಕಾರಣವಾಗಬಹುದು. ಬಿಎನ್‌ಪಿಎಲ್‌ ಕಾರ್ಡ್‌ ಪಡೆಯುವ ಮುನ್ನ ಅಸ್ತಿತ್ವದಲ್ಲಿರುವ ಸಾಲ ಮತ್ತು ಬಾಧ್ಯತೆಗಳನ್ನು ಪರಿಗಣಿಸಿ.
  • ಷರತ್ತುಗಳನ್ನು ಗಮನಿಸಿ: ಬಡ್ಡಿ-ಮುಕ್ತ ಎಂದು ಜಾಹೀರಾತು ನೀಡಲಾಗಿದ್ದರೂ ಪಾವತಿಯ ವಿಳಂಬಕ್ಕೆ ಹೆಚ್ಚಿನ ದಂಡ ಪಾವತಿಸಬೇಕಾಗುತ್ತದೆ. ಈ ದಂಡಗಳು ಮತ್ತು ಯಾವುದೇ ಪೂರ್ವಪಾವತಿ ನಿರ್ಬಂಧಗಳನ್ನು ಅರ್ಥ ಮಾಡಿಕೊಳ್ಳಲು ನಿಯಮಗಳು ಮತ್ತು ಷರತ್ತುಗಳನ್ನು ಸಂಪೂರ್ಣವಾಗಿ ಓದಿ.
  • ಸಿಬಿಲ್‌ ಸ್ಕೋರ್‌ ಮೇಲೆ ಪರಿಣಾಮ: ವಿಳಂಬ ಪಾವತಿ ನಿಮ್ಮ ಸಿಬಿಲ್‌ ಸ್ಕೋರ್‌ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಈ ಬಗ್ಗೆ ಎಚ್ಚರ ವಹಿಸಿ.
  • ಎಲ್ಲ ಶುಲ್ಕಗಳನ್ನು ಅರ್ಥ ಮಾಡಿಕೊಳ್ಳಿ: ಕೆಲವು ಬಿಎನ್‌ಪಿಎಲ್‌ ಸೇವೆಗಳು ಸಂಸ್ಕರಣಾ ಶುಲ್ಕಗಳನ್ನು ಹೊಂದಿರುತ್ತವೆ. ಇದರಲ್ಲಿ ಒಳಗೊಂಡಿರುವ ಎಲ್ಲ ವೆಚ್ಚಗಳನ್ನು ಅರ್ಥಮಾಡಿಕೊಳ್ಳಿ. ವಿಳಂಬ ಪಾವತಿ ಶುಲ್ಕಗಳು, ಸಂಸ್ಕರಣಾ ಶುಲ್ಕಗಳು ಅಥವಾ ದಂಡಗಳಂತಹ ಗುಪ್ತ ಶುಲ್ಕಗಳನ್ನು ಗಮನಿಸಿ.
  • ಸೀಮಿತ ಬಳಕೆ: ಬಿಎನ್‌ಪಿಎಲ್ ಎಲ್ಲೆಡೆ ಇಲ್ಲದಿರಬಹುದು. ಕ್ರೆಡಿಟ್ ಕಾರ್ಡ್‌ಗಳಿಗಿಂತ ಭಿನ್ನವಾಗಿ, ಬಿಎನ್‌ಪಿಎಲ್ ಕಾರ್ಡ್‌ ಅನ್ನು ನಿರ್ದಿಷ್ಟ ವ್ಯಾಪಾರಿಗಳು ಅಥವಾ ಪ್ಲಾಟ್‌ಫಾರ್ಮ್‌ಗಳು ಮಾತ್ರವೇ ಬಳಸುತ್ತವೆ. ನಿಮ್ಮ ನೆಚ್ಚಿನ ಅಂಗಡಿಗಳು ಮತ್ತು ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳು ಬಿಎನ್‌ಪಿಎಲ್ ಆಯ್ಕೆಯನ್ನು ಸ್ವೀಕರಿಸುತ್ತವೆಯೇ ಎಂದು ಪರಿಶೀಲಿಸಿ. ಅಲ್ಲದೆ ಇದು ವಿದೇಶದಲ್ಲಿ ಉಪಯೋಗಕ್ಕೆ ಬರುವುದಿಲ್ಲ.

ಪ್ರಮುಖ ಬ್ರ್ಯಾಂಡ್‌ಗಳು

ಭಾರತದಲ್ಲಿ ಲೇಜಿ ಪೇ, ಸಿಂಪ್ಲ, ಅಮೆಜಾನ್ ಪೇ ಲೇಟರ್, ಫ್ಲಿಪ್ ಕಾರ್ಟ್ ಪೇ ಲೇಟರ್ ಹಾಗೂ ಝೆಸ್ಟ್ ಮನಿ ಪ್ರಮುಖ ಬಿಎನ್‌ಪಿಎಲ್ ಬ್ರ್ಯಾಂಡ್ ಎನಿಸಿಕೊಂಡಿವೆ. ಈ ಎಲ್ಲ ಬ್ರ್ಯಾಂಡ್‌ಗಳು ಕಾರ್ಯವೈಖರಿ ಸಾಮಾನ್ಯವಾಗಿ ಒಂದೇ ರೀತಿಯಲ್ಲಿ ಇರುತ್ತದೆ. ನಿರ್ದಿಷ್ಟ ಇ-ಕಾಮರ್ಸ್ ತಾಣದಿಂದ ಖರೀದಿಸುವಾಗ ನೀವು ‘Buy now, pay later’ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು. ಒಟ್ಟು ಮೊತ್ತದಲ್ಲಿ ಸಣ್ಣ ಮೊತ್ತವನ್ನು ಆರಂಭದಲ್ಲಿ ಡೌನ್ ಪೇಮೆಂಟ್ ಮಾಡಬೇಕು. ಉಳಿದ ಮೊತ್ತವನ್ನು ಬಡ್ಡಿರಹಿತ ಇಎಂಐ ಮೂಲಕ ನಿರ್ದಿಷ್ಟ ಅವಧಿಯೊಳಗೆ ಪಾವತಿಸಬೇಕು.

ಯಾರು ಖರೀದಿಸಬಹುದು?

ಬಿಎನ್‌ಪಿಎಲ್‌ ಕಾರ್ಡ್‌ ಅನ್ನು ಖರೀದಿಸಲು ಬೇಕಾದ ಅರ್ಹತೆಗಳು: ಭಾರತದ ಟೈರ್ 1 ಅಥವಾ ಟೈರ್ 2 ನಗರದ ನಿವಾಸಿಯಾಗಿರಬೇಕು, ಕನಿಷ್ಠ 18 ವರ್ಷ ವಯಸ್ಸಾಗಿರಬೇಕು, ವೇತನ ಪಡೆಯುತ್ತಿರಬೇಕು, ನಿಮ್ಮ ಬ್ಯಾಂಕ್ ಖಾತೆ ಹಾಗೂ ಇತರ ಕೆವೈಸಿ ದಾಖಲೆಗಳನ್ನು ಹೊಂದಿರಬೇಕು.

ಇದನ್ನೂ ಓದಿ: Money Guide: ಮನೆಯಲಿ ಇದ್ದರೆ ಚಿನ್ನ ಈ ನಿಯಮ ಅರಿತಿರುವುದು ಚೆನ್ನ: ಗೋಲ್ಡ್‌ ಟ್ಯಾಕ್ಸ್‌ ಏನು ಹೇಳುತ್ತದೆ?

Continue Reading

ಮನಿ-ಗೈಡ್

Money Guide: ಉಮಂಗ್ ಆ್ಯಪ್‌ ಮೂಲಕ ಪಿಎಫ್‌ ಮೊತ್ತ ಹೀಗೆ ವಿತ್‌ಡ್ರಾ ಮಾಡಬಹುದು

Money Guide: ನೌಕರರ ಭವಿಷ್ಯ ನಿಧಿ ಉದ್ಯೋಗಿಗಳ ಪಾಲಿಗೆ ಅತ್ಯುತ್ತಮ ನಿವೃತ್ತಿ ಉಳಿತಾಯ ಆಯ್ಕೆ ಎನಿಸಿಕೊಂಡಿದೆ. ಉದ್ಯೋಗಿಗಳ ಪಾಲಿಗೆ ಅತ್ಯುತ್ತಮ ನಿವೃತ್ತಿ ಉಳಿತಾಯ ಆಯ್ಕೆ ಎನಿಸಿಕೊಂಡಿದೆ. ಈ ಯೋಜನೆಯಲ್ಲಿ ಉದ್ಯೋಗಿಗಳು ಮತ್ತು ಉದ್ಯೋಗದಾತರಿಂದ ನಿರ್ದಿಷ್ಟ ಮೊತ್ತವನ್ನು ಹೂಡಿಕೆ ಮಾಡುವ ಮೂಲಕ ನೌಕರರ ಉಳಿತಾಯ ಮನೋಭಾವವನ್ನು ಉತ್ತೇಜಿಸಲಾಗುತ್ತದೆ. ಪ್ರತಿ ತಿಂಗಳು ತಮ್ಮ ಮೂಲ ವೇತನದ ಶೇ. 12ರಷ್ಟು ಕೊಡುಗೆ ನೀಡುವ ಉದ್ಯೋಗಿಗಳಿಗೆ ಈ ಯೋಜನೆಯು ಶೇ. 8.15 ಬಡ್ಡಿದರವನ್ನು ನೀಡುತ್ತದೆ. ಉದ್ಯೋಗಿಗಳು ನಿವೃತ್ತರಾದ ನಂತರ ತಮ್ಮ ಪಿಎಫ್‌ ಖಾತೆಯಲ್ಲಿ ಸಂಗ್ರಹವಾದ ಸಂಪೂರ್ಣ ಮೊತ್ತವನ್ನು ಹಿಂಪಡೆಯಬಹುದು. ಅದಕ್ಕಾಗಿ ನೀವು ಉಮಾಂಗ್ ಆ್ಯಪ್‌ ಬಳಸಬಹುದು. ಉಮಾಂಗ್ ಆ್ಯಪ್‌ ಬಳಕೆಯ ಸಂಪೂರ್ಣ ವಿವರ ಇಲ್ಲಿದೆ.

VISTARANEWS.COM


on

Money Guide
Koo

ಬೆಂಗಳೂರು: ಪಿಎಫ್ (PF) ಎಂದೂ ಕರೆಯಲ್ಪಡುವ ನೌಕರರ ಭವಿಷ್ಯ ನಿಧಿ (Employees Provident Fund-EPFಉದ್ಯೋಗಿಗಳ ಪಾಲಿಗೆ ಅತ್ಯುತ್ತಮ ನಿವೃತ್ತಿ ಉಳಿತಾಯ ಆಯ್ಕೆ ಎನಿಸಿಕೊಂಡಿದೆ. ಈ ಯೋಜನೆಯಲ್ಲಿ ಉದ್ಯೋಗಿಗಳು ಮತ್ತು ಉದ್ಯೋಗದಾತರಿಂದ ನಿರ್ದಿಷ್ಟ ಮೊತ್ತವನ್ನು ಹೂಡಿಕೆ ಮಾಡುವ ಮೂಲಕ ನೌಕರರ ಉಳಿತಾಯ ಮನೋಭಾವವನ್ನು ಉತ್ತೇಜಿಸಲಾಗುತ್ತದೆ. ಪ್ರತಿ ತಿಂಗಳು ತಮ್ಮ ಮೂಲ ವೇತನದ ಶೇ. 12ರಷ್ಟು ಕೊಡುಗೆ ನೀಡುವ ಉದ್ಯೋಗಿಗಳಿಗೆ ಈ ಯೋಜನೆಯು ಶೇ. 8.15 ಬಡ್ಡಿದರವನ್ನು ನೀಡುತ್ತದೆ. ಉದ್ಯೋಗಿಗಳು ನಿವೃತ್ತರಾದ ನಂತರ ತಮ್ಮ ಪಿಎಫ್‌ ಖಾತೆಯಲ್ಲಿ ಸಂಗ್ರಹವಾದ ಸಂಪೂರ್ಣ ಮೊತ್ತವನ್ನು ಹಿಂಪಡೆಯಬಹುದು. ಅದಾಗ್ಯೂ ಅನಾರೋಗ್ಯದಂತಹ ತುರ್ತು ಸಂದರ್ಭಗಳಲ್ಲಿ ಪಿಎಫ್ ಅಕೌಂಟ್‌ನಿಂದ ಒಂದಷ್ಟು ದುಡ್ಡು ಹಿಂಪಡೆಯಬಹುದು. ಹೀಗ ಹಣ ಹಿಂಪಡೆಯುವುದು ಈಗ ಸುಲಭ. ಕೂತಲ್ಲಿಯೇ, ಮೊಬೈಲ್‌ ಮೂಲಕವೇ ಅಪ್ಲೈ ಮಾಡಬಹುದು. ಆ ಕುರಿತಾದ ವಿವರ ಇಲ್ಲಿದೆ (Money Guide).

ಇ-ನಾಮಿನೇಷನ್‌ ಮಾಡಿಕೊಂಡಿರುವ ಪಿಎಫ್‌ ಸದಸ್ಯರು ತಮ್ಮ ಖಾತೆಯಿಂದ ಒಂದಷ್ಟು ಮೊತ್ತ, ಅಡ್ವಾನ್ಸ್‌ ಮತ್ತು ಪೆನ್ಶನ್‌ ಪಡೆಯಲು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು. ಇದಕ್ಕಾಗಿ ಇಪಿಎಫ್‌ಒ ವೆಬ್‌ಸೈಟ್‌ ಅಥವಾ ಉಮಾಂಗ್ ಆ್ಯಪ್‌ ಬಳಸಬಹುದು. ಅದರಲ್ಲಿಯೂ ಉಮಂಗ್ ಆ್ಯಪ್‌ ಅನ್ನು ಹೆಚ್ಚು ಅನುಕೂಲ ಎಂದೇ ಪರಿಗಣಿಸಲಾಗುತ್ತದೆ. ಹೀಗಾಗಿ ಇದರ ಬಳಕೆಗೆ ತಜ್ಞರು ಶಿಫಾರಸ್ಸು ಮಾಡುತ್ತಾರೆ. ಹಣ ವಿತ್‌ಡ್ರಾ ಮಾತ್ರವಲ್ಲ ಉಮಾಂಗ್ ಆ್ಯಪ್‌ ಮೂಲಕ ಬ್ಯಾಲೆನ್ಸ್‌ ಕೂಡ ಚೆಕ್‌ ಮಾಡಬಹುದು ಎನ್ನುವುದು ವಿಶೇಷ.

ಉಮಾಂಗ್ ಆ್ಯಪ್‌ ಬಳಕೆಯ ವಿಧಾನ

  • ಗೂಗಲ್‌ ಪ್ಲೇ ಸ್ಟೋರ್‌ ಅಥವಾ ಆ್ಯಪಲ್‌ ಆ್ಯಪ್‌ ಸ್ಟೋರ್‌ನಿಂದ ಉಮಂಗ್ ಆ್ಯಪ್‌ ಡೌನ್‌ಲೋಡ್‌ ಮಾಡಿ.
  • ಆ್ಯಪ್‌ ಓಪನ್‌ ಮಾಡಿ ಆಧಾರ್‌ ನಂಬರ್‌ ಮತ್ತು ಪಾಸ್‌ವರ್ಡ್‌ ಮೂಲಕ ಲಾಗಿನ್‌ ಆಗಿ.
  • ಲಾಗಿನ್‌ ಆದ ಬಳಿಕ ಸರ್ವಿಸ್‌ ಲಿಸ್ಟ್‌ನಲ್ಲಿನ EPFO ಆಯ್ಕೆ ಸೆಲೆಕ್ಟ್‌ ಮಾಡಿ.
  • ಈಗ ಪಿಎಫ್‌ ಬ್ಯಾಲನ್ಸ್‌, ನಾಮಿನೇಷನ್‌ ಅಥವಾ ಕೆವೈಸಿ ಅಪ್‌ಡೇಟ್‌ ಆಯ್ಕೆ ಕಾಣಿಸಿಕೊಳ್ಳಲಿದ್ದು, ನಿಮಗೆ ಅಗತ್ಯವಿರುವುದನ್ನು ಸೆಲೆಕ್ಟ್‌ ಮಾಡಿ.
  • ಬಳಿಕ ಸ್ಕ್ರೀನ್‌ನಲ್ಲಿ ಕಾಣಿಸುವ ಸ್ಟೆಪ್‌ ಫಾಲೋ ಮಾಡಿ.

ಹಣ ವಿತ್‌ಡ್ರಾ ಮಾಡುವ ವಿಧಾನ

  • ಉಮಂಗ್ ಆ್ಯಪ್‌ ಓಪನ್‌ ಮಾಡಿ ಆಧಾರ್‌ ನಂಬರ್‌, ಪಾಸ್‌ವರ್ಡ್‌ ನಮೂದಿಸಿ ಲಾಗಿನ್‌ ಆಗಿ.
  • ಸರ್ವಿಸ್‌ ಲಿಸ್ಟ್‌ನಲ್ಲಿನ EPFO ಆಯ್ಕೆ ಸೆಲೆಕ್ಟ್‌ ಮಾಡಿ.
  • Raise Claim ಆಯ್ಕೆಯನ್ನು ಸೆಲೆಕ್ಟ್‌ ಮಾಡಿ.
  • ಈಗ UAN ನಂಬರ್‌ ನಮೂದಿಸಿ. ಅದಾದ ಬಳಿಕ ನಿಮ್ಮ ಮೊಬೈಲ್‌ ನಂಬರ್‌ಗೆ ಬರುವ ಒಟಿಪಿಯನ್ನು ನಮೂದಿಸಿ.
  • ಯಾವ ರೀತಿಯ ವಿತ್‌ಡ್ರಾ ಅಗತ್ಯ ಎನ್ನುವುದನ್ನು ಆಯ್ಕೆ ಮಾಡಿಕೊಳ್ಳಿ
  • ಅಗತ್ಯ ಮಾಹಿತಿಗಳನ್ನು ತುಂಬಿ.

ಉಮಾಂಗ್ ಆ್ಯಪ್‌ ಮೂಲಕ ನೀವು ಪಡೆಯಬಹುದಾದ ಇತರ ಸೇವೆಗಳು

  • ಪಿಎಫ್‌ ಬ್ಯಾಲನ್ಸ್‌ ಪರಿಶೀಲನೆ
  • ಕೆವೈಸಿ ಮಾಹಿತಿಯ ಅಪ್‌ಡೇಟ್‌
  • ಪಾಸ್‌ಬುಕ್‌ ಪರಿಶೀಲನೆ
  • ಜೀವನ್‌ ಪ್ರಮಾಣ್‌ ಸರ್ಟಿಫಿಕೆಟ್‌ ಪಡೆಯಲು
  • ಪೆನ್ಶನ್‌ ಪೇಮೆಂಟ್‌ ಆರ್ಡರ್‌ (PPO) ಡೌನ್‌ಲೋಡ್‌ ಮಾಡಲು

ಇಪಿಎಫ್‌ ಖಾತೆಯ ವೈಶಿಷ್ಟ್ಯ

  • ಉದ್ಯೋಗಿಗಳ ಕೊಡುಗೆ ಸಾಮಾನ್ಯವಾಗಿ ಮೂಲ ವೇತನದ ಶೇ. 12ರಷ್ಟಿರುತ್ತದೆ.
  • ಉದ್ಯೋಗದಾತರ ಕೊಡುಗೆ ನಿಮ್ಮ ಮೂಲ ವೇತನ ಮತ್ತು ತುಟ್ಟಿಭತ್ಯೆಯ ಶೇ. 12ಕ್ಕೆ ಸಮನಾಗಿರುತ್ತದೆ. ಉದ್ಯೋಗದಾತರ ಕೊಡುಗೆಯನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ: ಅವೆಂದರೆ- ಇಪಿಎಫ್ ಮತ್ತು ನೌಕರರ ಪಿಂಚಣಿ ಯೋಜನೆ(ಇಪಿಎಸ್).
  • ಹೀಗೆ ನಿಮ್ಮ ಮತ್ತು ಉದ್ಯೋಗದಾತರ ಕೊಡುಗೆಗಳೊಂದಿಗೆ ಪ್ರತಿ ತಿಂಗಳು ನಿವೃತ್ತಿಗಾಗಿ ಗಣನೀಯ ಮೊತ್ತವನ್ನು ಮೀಸಲಿಡಲಾಗುತ್ತದೆ. ಇದು ಭಾರತದಲ್ಲಿ ಕಡ್ಡಾಯ.

ಇದನ್ನೂ ಓದಿ: Money Guide: ಮೊಬೈಲ್‌ನಲ್ಲಿಯೇ ಪಿಎಫ್‌ ಮೊತ್ತ ಪರಿಶೀಲಿಸಬೇಕೆ?; ಜಸ್ಟ್‌ ಹೀಗೆ ಮಾಡಿ ಸಾಕು

Continue Reading
Advertisement
Porsche Crash
ದೇಶ5 mins ago

Porsche Crash: ಕಾರು ಅಪಘಾತ; ದುಡ್ಡಿಗಾಗಿ ರಕ್ತದ ಮಾದರಿಯನ್ನು ಡಸ್ಟ್‌ಬಿನ್‌ಗೆ ಎಸೆದ ಗುಮಾಸ್ತನ ಬಂಧನ!

Prajwal Revanna Case
ಪ್ರಮುಖ ಸುದ್ದಿ25 mins ago

Prajwal Revanna Case: ಪ್ರಜ್ವಲ್‌ ಪ್ರತ್ಯಕ್ಷವಾದ ಬೆನ್ನಲ್ಲೇ ನಿರೀಕ್ಷಣಾ ಜಾಮೀನಿಗೆ ಭವಾನಿ ರೇವಣ್ಣ ಅರ್ಜಿ

Hemchand Manjhi
ದೇಶ43 mins ago

Hemchand Manjhi: ಕಳೆದ ತಿಂಗಳು ಪಡೆದಿದ್ದ ಪದ್ಮಶ್ರೀ ಪ್ರಶಸ್ತಿ ವಾಪಸ್‌ ನೀಡಿದ ಹೇಮಚಂದ್‌ ಮಾಂಝಿ; ಏಕೆ?

Prajwal Revanna Case
ಕರ್ನಾಟಕ1 hour ago

Prajwal Revanna Case: ವಿಚಾರಣೆಗೆ ಬರುವ ಪ್ರಜ್ವಲ್‌ ನಿರ್ಧಾರ ಸ್ವಾಗತಿಸುವೆ ಎಂದ ಸಚಿವ ಪರಮೇಶ್ವರ್‌

Rahul Gandhi
ದೇಶ1 hour ago

Rahul Gandhi: ರಾಹುಲ್‌ ಗಾಂಧಿ ಜಿಂದಾಬಾದ್‌ ಎನ್ನುತ್ತಲೇ ಕುಸಿದ ವೇದಿಕೆ; ತಬ್ಬಿಬ್ಬಾದ ಕಾಂಗ್ರೆಸ್‌ ನಾಯಕ, ವಿಡಿಯೊ ಇಲ್ಲಿದೆ

Karnataka Weather Forecast
ಮಳೆ2 hours ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

HairStyle Craze
ಫ್ಯಾಷನ್2 hours ago

Hairstyle Craze: ಸೋಷಿಯಲ್‌ ಮೀಡಿಯಾದಲ್ಲಿ ರಂಗೇರಿದ ಹೇರ್‌ ಸ್ಟೈಲ್ಸ್

Lok Sabha Election 2024
ಕರ್ನಾಟಕ2 hours ago

Lok Sabha Election 2024: ಲೋಕಸಭೆ ಚುನಾವಣೆ ಮತ ಎಣಿಕೆ; ಜೂ. 4ರಂದು ಬೆಂಗಳೂರಿನಲ್ಲಿ ನಿಷೇಧಾಜ್ಞೆ

Prajwal Revanna Video
ಕರ್ನಾಟಕ2 hours ago

Prajwal Revanna Video: ಪ್ರಜ್ವಲ್‌ ಪ್ರತ್ಯಕ್ಷನಾಗಿದ್ದಕ್ಕೆ ಸಮಾಧಾನ ಆಯ್ತು ಎಂದ ಎಚ್‌ಡಿಕೆ; ಫಸ್ಟ್‌ ರಿಯಾಕ್ಷನ್‌ ಹೀಗಿದೆ

Mouthwashes
ಆರೋಗ್ಯ2 hours ago

Mouthwashes: ಬಾಯಿಯ ಎಲ್ಲ ಸಮಸ್ಯೆಗಳಿಗೂ ಮೌತ್‌ವಾಷ್‌ ಪರಿಹಾರವೆ? ಇದರ ಇತಿಮಿತಿ ಬಗ್ಗೆಯೂ ತಿಳಿದಿರಲಿ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Weather Forecast
ಮಳೆ2 hours ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ1 day ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು1 day ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ2 days ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ5 days ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ6 days ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ6 days ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು6 days ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

Contaminated Water
ಮೈಸೂರು6 days ago

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

Karnataka Rain
ಮಳೆ1 week ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

ಟ್ರೆಂಡಿಂಗ್‌