Ram Halwa: ರಾಮಮಂದಿರ ಉದ್ಘಾಟನೆಗಾಗಿ ಸಿದ್ಧವಾಗಲಿದೆ 7 ಸಾವಿರ ಕೆಜಿ ರಾಮ ಹಲ್ವಾ; ವಿಶೇಷ ಏನು? - Vistara News

ಆಹಾರ/ಅಡುಗೆ

Ram Halwa: ರಾಮಮಂದಿರ ಉದ್ಘಾಟನೆಗಾಗಿ ಸಿದ್ಧವಾಗಲಿದೆ 7 ಸಾವಿರ ಕೆಜಿ ರಾಮ ಹಲ್ವಾ; ವಿಶೇಷ ಏನು?

Ram Halwa: ರಾಮಮಂದಿರ ಉದ್ಘಾಟನೆಯ ಹಿನ್ನೆಲೆಯಲ್ಲಿ ಅಯೋಧ್ಯೆಯಲ್ಲಿ ಅಂತಾರಾಷ್ಟ್ರೀಯ ಖ್ಯಾತಿಯ ಬಾಣಸಿಗರೊಬ್ಬರು ವಿಶೇಷ ‘ರಾಮ ಹಲ್ವಾ’ ತಯಾರಿಸಲಿದ್ದಾರೆ.

VISTARANEWS.COM


on

Ram Halwa
ಸಾಂದರ್ಭಿಕ ಚಿತ್ರ.
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಅಯೋಧ್ಯೆ: ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಜನವರಿ 22ರಂದು ನಡೆಯಲಿರುವ ರಾಮಮಂದಿರ (Ram Mandir) ಉದ್ಘಾಟನೆಗೆ ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ (Narendra Modi) ಸೇರಿ ಆಗಮಿಸುವ ಸಾವಿರಾರು ಗಣ್ಯರಿಗೆ ಸಕಲ ವ್ಯವಸ್ಥೆ, ಭದ್ರತೆ ಸೇರಿ ಎಲ್ಲ ರೀತಿಯ ಸಿದ್ಧತೆ ಕೈಗೊಳ್ಳಲಾಗುತ್ತಿದೆ. ಇನ್ನು ರಾಮಮಂದಿರ ಲೋಕಾರ್ಪಣೆ ದಿನ ವಿಶೇಷ ‘ರಾಮ ಹಲ್ವಾ’ (Ram Halwa) ತಯಾರಿಸಲಾಗುತ್ತದೆ. ವಿಶೇಷ ಪ್ರಸಾದವನ್ನು ನಾಗ್ಪುರ ಮೂಲದ, ಅಂತಾರಾಷ್ಟ್ರೀಯ ಖ್ಯಾತಿಯ ಬಾಣಸಿಗ (Chef) ವಿಷ್ಣು ಮನೋಹರ್‌ (Vishnu Manohar) ಅವರು ತಯಾರಿಸಲಿದ್ದಾರೆ.

ಹೌದು, ವಿಷ್ಣು ಮನೋಹರ್‌ ಅವರು ರಾಮಮಂದಿರ ಉದ್ಘಾಟನೆಯ ದಿನ ಸುಮಾರು 7 ಸಾವಿರ ಕೆ.ಜಿ ರಾಮ ಹಲ್ವಾ ತಯಾರಿಸಲಿದ್ದಾರೆ. ಇದಕ್ಕಾಗಿ ಅವರು 12 ಸಾವಿರ ಲೀಟರ್‌ ನೀರಿನ ಸಾಮರ್ಥ್ಯದ ಬೃಹತ್‌ ಕಡಾಯಿಯೊಂದನ್ನು ಕೂಡ ತಯಾರಿಸಿದ್ದಾರೆ. “900 ಕೆಜಿ ರವೆ, 1 ಸಾವಿರ ಕೆಜಿ ತುಪ್ಪ, ಸಾವಿರ ಕೆಜಿ ಸಕ್ಕರೆ, 2 ಸಾವಿರ ಲೀಟರ್‌ ಹಾಲು, 2,500 ಲೀಟರ್‌ ನೀರು, 300 ಕೆಜಿ ಡ್ರೈ ಫ್ರೂಟ್ಸ್‌, 75 ಕೆಜಿ ಏಲಕ್ಕಿ ಪೌಡರ್‌ ಬಳಸಿಕೊಂಡು ವಿಶೇಷ ರಾಮ ಹಲ್ವಾ ತಯಾರಿಸಲಾಗುವುದು” ಎಂದು ವಿಷ್ಣು ಮನೋಹರ್‌ ತಿಳಿಸಿದ್ದಾರೆ.

“ಸುಮಾರು ಒಂದೂವರೆ ಲಕ್ಷ ಜನರಿಗೆ ರಾಮ ಹಲ್ವಾ ಪ್ರಸಾದ ವಿತರಣೆ ಮಾಡುವ ಕಾರಣ ದೊಡ್ಡ ಕಡಾಯಿಯನ್ನು ತಯಾರಿಸಲಾಗಿದೆ. ಕಡಾಯಿಯ ತೂಕವೇ 1,300-1,400 ಕೆಜಿ ಇದೆ. ಇದು 10 ಅಡಿ ಎತ್ತರ ಹಾಗೂ 10 ಅಡಿ ಅಗಲ ಇದೆ. ಇದನ್ನು ಕ್ರೇನ್‌ ಮೂಲಕವೇ ಎತ್ತಬೇಕಾಗುತ್ತದೆ. ನಮ್ಮ ತಂಡವು ರಾಮ ಹಲ್ವಾ ತಯಾರಿಸಲು ಉತ್ಸಾಹದಿಂದ ಸಜ್ಜಾಗಿದೆ. ಇದಕ್ಕಾಗಿ ಬೇಕಾಗುವ ಎಲ್ಲ ವಸ್ತುಗಳನ್ನು ಖರೀದಿಸಲಾಗಿದೆ” ಎಂದು ವಿಷ್ಣು ಮನೋಹರ್‌ ಮಾಹಿತಿ ನೀಡಿದ್ದಾರೆ. ಹಾಗೆಯೇ, ಅಯೋಧ್ಯೆಯಲ್ಲಿ, ರಾಮಮಂದಿರ ಆವರಣದಲ್ಲಿ ರಾಮಾಯಣ ಕಾಲದ ತಳಿಯ ಸಸಿಗಳನ್ನು ನೆಡಲಾಗುತ್ತದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Rama Mandir : ರಾಮಲಲ್ಲಾನ ಯಾವ ವಿಗ್ರಹ ವಿಗ್ರಹ‌ ಪ್ರತಿಷ್ಠಾಪನೆ?; ಜ. 17ರಂದು ಘೋಷಣೆ

ರಾಮಮಂದಿರ ಲೋಕಾರ್ಪಣೆಯ ದಿನ ಉತ್ತರ ಪ್ರದೇಶ ಪೊಲೀಸರು ಹಾಗೂ ಪ್ಯಾರಾ ಮಿಲಿಟರಿ ಸಿಬ್ಬಂದಿ ಸೇರಿ ಒಟ್ಟು 11 ಸಾವಿರ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತದೆ. ಇದರ ಜತೆಗೆ ಹೆಚ್ಚಿನ ನಿಗಾ ಇರಿಸಲು, ಪ್ರತಿಯೊಂದು ಚಲನವಲನಗಳನ್ನು ಗಮನಿಸಲು ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗುತ್ತದೆ. ರಾಮಮಂದಿರ ಉದ್ಘಾಟನೆ ದಿನ ಪ್ರಾಯೋಗಿಕವಾಗಿ ಇದನ್ನು ಬಳಸಿಕೊಳ್ಳಲಾಗುತ್ತದೆ. ಮುಂದಿನ ದಿನಗಳಲ್ಲಿ ಶಾಶ್ವತವಾಗಿ ಇದೇ ತಂತ್ರಜ್ಞಾನ ಅಳವಡಿಸಿಕೊಳ್ಳುವ ಚಿಂತನೆ ಇದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

Seeds For Weight Loss: ತೂಕ ಇಳಿಸಿಕೊಳ್ಳಬೇಕೆ? ಈ 7 ಬೀಜಗಳನ್ನು ನಿಯಮಿತವಾಗಿ ಸೇವಿಸಿ

seeds for weight loss: ಬೀಜಗಳ ಸೇವನೆಯಿಂದಲೂ ತೂಕ ಇಳಿಸಬಹುದು. ಆದರೆ, ಯಾವ ಬೀಜಗಳನ್ನು ತಿನ್ನುವುದರಿಂದ ತೂಕವನ್ನು ನಿಮ್ಮ ಹತೋಟಿಗೆ ತರಲು ಪ್ರಯತ್ನಿಸಬಹುದು ಎಂಬುದು ಮಾತ್ರ ತಿಳಿದಿರಬೇಕು. ಅಷ್ಟೇ ಅಲ್ಲ, ಈ ಬೀಜಗಳಲ್ಲಿರುವ ಎಲ್ಲ ಬಗೆಯ ಪೋಷಕಾಂಶಗಳಿಂದ ಆರೋಗ್ಯಕರ ವಿಧಾನದಲ್ಲಿಯೇ ತೂಕ ಇಳಿಸುವುದು ಬಹಳ ಮುಖ್ಯವಾದದ್ದು. ಯಾವ ಬೀಜಗಳ ಸೇವನೆಯಿಂದ ನಿಮ್ಮ ತೂಕ ಆರೋಗ್ಯಕರವಾಗಿಯೇ ಇಳಿಯುತ್ತದೆ ಎಂಬುದನ್ನು ನೋಡೋಣ.

VISTARANEWS.COM


on

Seeds For Weight Loss
Koo

ತೂಕ ಇಳಿಸುವುದು ಎಂಬುದು ಅತ್ಯಂತ ಶಿಸ್ತು ಬೇಡುವ ಪಯಣ. ಎಷ್ಟೇ ಶಿಸ್ತಿನಿಂದ ಇದ್ದರೂ ನಾಲಿಗೆ ರುಚಿಯನ್ನು ಬೇಡುತ್ತದೆ. ರುಚಿಯ ಜೊತೆಗೂ ದೇಹವನ್ನು ಆರೋಗ್ಯವಾಗಿಡಬಹುದು ಹಾಗೂ ದೇಹದ ತೂಕವನ್ನು ಹತೋಟಿಗೆ ತರಬಹುದು ಎಂದರೆ ಆಗ ನೆನಪಾಗುವುದು ಈ ಬೀಜಗಳು. ಹೌದು ಬೀಜಗಳ ಸೇವನೆಯಿಂದಲೂ ತೂಕ ಇಳಿಸಬಹುದು (seeds for weight loss). ಆದರೆ, ಯಾವ ಬೀಜಗಳನ್ನು ತಿನ್ನುವುದರಿಂದ ತೂಕವನ್ನು ನಿಮ್ಮ ಹತೋಟಿಗೆ ತರಲು ಪ್ರಯತ್ನಿಸಬಹುದು ಎಂಬುದು ಮಾತ್ರ ತಿಳಿದಿರಬೇಕು. ಅಷ್ಟೇ ಅಲ್ಲ, ಈ ಬೀಜಗಳಲ್ಲಿರುವ ಎಲ್ಲ ಬಗೆಯ ಪೋಷಕಾಂಶಗಳಿಂದ ಆರೋಗ್ಯಕರ ವಿಧಾನದಲ್ಲಿಯೇ ತೂಕ ಇಳಿಸುವುದು ಬಹಳ ಮುಖ್ಯವಾದದ್ದು. ಬನ್ನಿ, ಯಾವ ಬೀಜಗಳ ಸೇವನೆಯಿಂದ ನಿಮ್ಮ ತೂಕ ಆರೋಗ್ಯಕರವಾಗಿಯೇ ಇಳಿಯುತ್ತದೆ ಎಂಬುದನ್ನು ನೋಡೋಣ.

Chia Seeds Black Foods

ಚಿಯಾ ಬೀಜಗಳು

ಚಿಯಾ ಬೀಜಗಳು ಪೋಷಕಾಂಶಗಳ ಪವರ್‌ ಹೌಸ್‌ ಇದ್ದ ಹಾಗೆ. ಇವುಗಳಲ್ಲಿ ಬಹುತೇಕ ಎಲ್ಲ ಪೋಷಕಾಂಶಗಳೂ ಇದ್ದು, ನಾರಿನಂಶವೂ ಇರುವುದರಿಂದ ತೂಕ ಇಳಿಕೆಗೆ ನೆರವಾಗುತ್ತದೆ, ನೀರಿನಲ್ಲಿ ನೆನೆ ಹಾಕಿದಾಗ ಚಿಯಾ ಬೀಜಗಳು ಉಬ್ಬಿಕೊಂಡು ಜೆಲ್‌ನಂತ ಕವಚವನ್ನು ಪಡೆದುಕೊಳ್ಳುತ್ತದೆ. ಹಾಗೆಯೇ ತಿಂದರೂ ದೇಹದಲ್ಲಿರುವ ನೀರಿನಂಶವನ್ನು ಪಡೆದುಕೊಂಡು ಉಬ್ಬುತ್ತದೆ. ಹಾಗಾಗಿ ಇದು ಹೊಟ್ಟೆ ತುಂಬಿದ ಭಾವವನ್ನು ನೀಡುತ್ತದೆ. ಇದರಲ್ಲಿರುವ ಕರಗಬಲ್ಲ ನಾರಿನಂಶವು ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ನಿಯಂತ್ರಿಸುತ್ತದೆ.

Flaxseed Different Types of Seeds with Health Benefits

ಅಗಸೆ ಬೀಜಗಳು

ಅಗಸೆ ಬೀಜ ಅಥವಾ ಫ್ಲ್ಯಾಕ್‌ಸೀಡ್‌ಗಳಲ್ಲಿ ಒಮೆಗಾ ೩ ಫ್ಯಾಟಿ ಆಸಿಡ್‌ಗಳಿದ್ದು, ಜೊತೆಗೆ ಕರಗಬಲ್ಲ ನಾರಿನಂಶವೂ ಇದೆ. ಇದು ತೂಕ ಇಳಿಕೆಗೆ ಪೂರಕ. ಒಮೆಗಾ ೩ ಫ್ಯಾಟಿ ಆಸಿಡ್‌ಗಳು ದೇಹದ ಉರಿಯೂತವನ್ನೂ ಕಡಿಮೆಕೊಳಿಸಿದರೆ, ಕರಗಬಲ್ಲ ನಾರಿನಂಶವು ಜೀರ್ಣಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಹೀಗಾಗಿ ಹಸಿವು ನಿಯಂತ್ರಣದಲ್ಲಿದ್ದು ಅತಿಯಾಗಿ ತಿನ್ನುವುದು ಹತೋಟಿಗೆ ಬರುತ್ತದೆ.

Hemp seed Different Types of Seeds with Health Benefits

ಹೆಂಪ್‌ ಬೀಜಗಳು

ಹೆಂಪ್‌ ಬೀಜಗಳಲ್ಲಿ ಸಾಕಷ್ಟು ಪ್ರೊಟೀನ್‌ ಇರುವುದರಿಂದ ತೂಕ ಇಳಿಸುವ ಮಂದಿಗೆ ಇದು ಪೂರಕ. ಪ್ರೊಟೀನ್‌ ಕರಗಲು ಹೆಚ್ಚು ಶಕ್ತಿ ಬೇಕು. ಹೀಗಾಗಿ ನಿಮ್ಮ ಕ್ಯಾಲರಿ ಇಲ್ಲಿ ಹೆಚ್ಚು ಬಳಸಲ್ಪಡುತ್ತದೆ. ಪ್ರೊಟೀನ್‌ನಿಂದ ಮಾಂಸಖಂಡಗಳು ಬಲವರ್ಧನೆಗೊಳ್ಳುವ ಜೊತೆಗೆ, ಈ ಬೀಜಗಳಲ್ಲಿರುವ ಫ್ಯಾಟಿ ಆಸಿಡ್‌ನ ಪರಿಣಾಮ ಹಸಿವೂ ಕೂಡಾ ನಿಯಂತ್ರಣದಲ್ಲಿರುತ್ತದೆ.

Pumpkin seeds in white bowl Pumpkin Seeds Benefits

ಕುಂಬಳಕಾಯಿ ಬೀಜ

ಕುಂಬಳಕಾಯಿ ಬೀಜದಲ್ಲಿ ಪ್ರೊಟೀನ್‌, ನಾರಿನಂಶ ಹಾಗೂ ಆರೋಗ್ಯಕರ ಕೊಬ್ಬು ಶ್ರೀಮಂತವಾಗಿದೆ. ಇದರಿಂದ ಹೊಟ್ಟೆ ತುಂಬಿದ ಅನುಭವವಾಗಿ ಹಸಿವು ನಿಯಂತ್ರಣದಲ್ಲಿರುತ್ತದೆ. ಪರಿಣಾಮ ಅತಿಯಾಗಿ ತಿನ್ನುವುದಕ್ಕೆ ಬ್ರೇಕ್‌ ಬಿದ್ದು ತೂಕ ಇಳಿಯುತ್ತದೆ. ಇದರಲ್ಲಿ ಮೆಗ್ನೀಶಿಯಂ ಕೂಡಾ ಇದ್ದು, ಇದರಿಂದ ಇನ್ಸುಲಿನ್‌ ಮಟ್ಟವು ಸಮತೋಲನದಲ್ಲಿರುತ್ತದೆ.

Sunflower seed Zinc Foods It also provides protein, minerals and antioxidants along with zinc

ಸೂರ್ಯಕಾಂತಿ ಬೀಜ

ಸೂರ್ಯಕಾಂತಿ ಬೀಜಗಳಲ್ಲಿ ಪ್ರೊಟೀನ್‌, ನಾರಿನಂಶ, ಖನಿಜಾಂಶಗಳ ಜೊತೆಗೆ ಎಲ್ಲ ಬಗೆಯ ಪೋಷಕಾಂಶಗಳೂ ಇವೆ. ಇದರಲ್ಲಿರುವ ಪ್ರೊಟೀನ್‌ ಹಾಗೂ ನಾರಿನಂಶ ಹೆಚ್ಚು ಹಸಿವಾಗದಂತೆ ತಡೆಯುವುದರಿಂದ ತೂಕ ಇಳಿಯುತ್ತದೆ. ಇದರಲ್ಲಿರುವ ವಿಟಮಿನ್‌ ಇ ಹಾಗೂ ಸೆಲೆನಿಯಂ ಕೊಬ್ಬು ಕರಗಿಸಲು ಸಹಾಯ ಮಾಡುತ್ತದೆ. ಜೊತೆಗೆ ಚಯಾಪಚಯ ಕ್ರಿಯೆ ಸರಾಗವಾಗಿ ಆಗುತ್ತದೆ.

Imager Of Sesame Benefits

ಎಳ್ಳು

ಎಳ್ಳಿನಲ್ಲಿ ಲಿಗ್ನೆನ್‌ ಎಂಬ ಸಸ್ಯಾಧಾರಿತ ಕಾಂಪೌಂಡ್‌ ಇದ್ದು ಇದು ದೇಹದಲ್ಲಿರುವ ಕೊಬ್ಬಿನ ಅಂಶವನ್ನು ಕಡಿಮೆ ಮಾಡುತ್ತದೆ. ಎಳ್ಳಿನಲ್ಲಿ ಕ್ಯಾಲ್ಶಿಯಂ ಹಾಗೂ ಪ್ರೊಟೀನ್‌ ಹೇರಳವಾಗಿದೆ. ಒಳ್ಳೆಯ ಕೊಬ್ಬು ಕೂಡಾ ಇದ್ದು, ಇದರಿಂದ ಹೊಟ್ಟೆ ತುಂಬಿದ ಭಾವ ನೀಡುತ್ತದೆ.

Parasite Removal Papaya Seeds Benefits

ಪಪ್ಪಾಯಿ ಬೀಜ

ಪಪ್ಪಾಯಿ ಬೀಗಳಲ್ಲಿ ಜೀರ್ಣಕಾರಿ ಕಿಣ್ವಗಳು ಹೇರಳವಾಗಿದ್ದು, ಇದು ತೂಕ ಇಳಿಕೆಗೆ ಸಾಕಷ್ಟು ಸಹಾಯ ಮಾಡುತ್ತದೆ. ಈ ಕಿಣ್ವಗಳು ದೇಹದಲ್ಲಿರುವ ಪ್ರೊಟೀನ್‌ ಅನ್ನು ಕರಗಿಸಲು ಸಹಾಯ ಮಾಡುವ ಮೂಲಕ ಆರೋಗ್ಯಕಾರಿ ಜೀರ್ಣಕ್ರಿಯೆಗೆ ಸಹಕಾರ ನೀಡುತ್ತದೆ. ಹೊಟ್ಟೆಯುಬ್ಬರವನ್ನೂ ಇದು ಕಡಿಮೆ ಮಾಡುತ್ತದೆ. ಕಡಿಮೆ ಕ್ಯಾಲರಿಯ ಪಪ್ಪಾಯ ಬೀಜಗಳು ತೂಕ ಇಳಿಕೆಗೆ ತಮ್ಮದೇ ಆದ ಕಾಣಿಕೆ ನೀಡುತ್ತವೆ.

ಇದನ್ನೂ ಓದಿ: Oats For Weight Loss: ಓಟ್ಸ್‌ ತಿನ್ನುವುದರಿಂದ ತೂಕ ಇಳಿಯುತ್ತದೆಯೇ? ಉತ್ತರ ಇಲ್ಲಿದೆ

Continue Reading

ಆರೋಗ್ಯ

Weight Loss Tips: ದಕ್ಷಿಣ ಭಾರತೀಯ ಶೈಲಿಯ ಬೆಳಗಿನ ತಿಂಡಿಯಲ್ಲೂ ನೀವು ತೂಕ ಇಳಿಸಬಹುದು!

Weight Loss Tips: ತೂಕ ಇಳಿಸುವುದೆಂದರೆ, ನಾಲಿಗೆಯ ಚಪಲಕ್ಕೆ ಗುಡ್‌ಬೈ ಹೇಳಿ, ರುಚಿಯಿಲ್ಲದ ಆಹಾರಗಳನ್ನು ಹಿತಮಿತವಾಗಿ ತಿನ್ನುವುದು ಎಂಬ ನಂಬಿಕೆ ಬಹುತೇಕ ಎಲ್ಲರದ್ದು. ಆದರೆ, ಇತ್ತೀಚೆಗಿನ ದಿನಗಳಲ್ಲಿ ತೂಕ ಇಳಿಕೆಯ ಬಗೆಗಿನ ಈ ಎಲ್ಲ ನಂಬಿಕೆಗಳನ್ನೂ ಡಯಟೀಶಿಯನ್‌ಗಳು ಸುಳ್ಳಾಗಿಸಿದ್ದಾರೆ. ಈ ನಿಟ್ಟಿನಲ್ಲಿ, ಹಲವು ಪ್ರಯೋಗಗಳೂ ಕೂಡಾ ಆಗುತ್ತಲೇ ಇವೆ. ನೀವು ಮೆಚ್ಚುವ, ನಿತ್ಯವೂ ತಿನ್ನುವ ಆಹಾರದಲ್ಲಿಯೇ ಕೊಂಚ ಮಾರ್ಪಾಡುಗಳನ್ನು ಮಾಡಿಕೊಂಡು ಸರಿಯಾದ ಆರೋಗ್ಯಕರ ಜೀವನಶೈಲಿ ಹಾಗೂ ವ್ಯಾಯಾಮಗಳನ್ನು ಮಾಡಿಕೊಂಡಿದ್ದರೆ ತೂಕ ಖಂಡಿತವಾಗಿಯೂ ಇಳಿಯುತ್ತದೆ ಎನ್ನುತ್ತಾರೆ ಇವರು.

VISTARANEWS.COM


on

Weight Loss Tips
Koo

ತೂಕ ಇಳಿಯಬೇಕು (Weight Loss Tips), ಆದರೆ, ಆಹಾರ ರುಚಿಯಾಗಿರಬೇಕು ಎಂದು ಯಾರಿಗೆ ತಾನೇ ಅನಿಸುವುದಿಲ್ಲ ಹೇಳಿ! ಯಾಕೆಂದರೆ, ತೂಕ ಇಳಿಸುವುದೆಂದರೆ, ನಾಲಿಗೆಯ ಚಪಲಕ್ಕೆ ಗುಡ್‌ಬೈ ಹೇಳಿ, ರುಚಿಯಿಲ್ಲದ ಆಹಾರಗಳನ್ನು ಹಿತಮಿತವಾಗಿ ತಿನ್ನುವುದು ಎಂಬ ನಂಬಿಕೆ ಬಹುತೇಕ ಎಲ್ಲರದ್ದು. ಆದರೆ, ಇತ್ತೀಚೆಗಿನ ದಿನಗಳಲ್ಲಿ ತೂಕ ಇಳಿಕೆಯ ಬಗೆಗಿನ ಈ ಎಲ್ಲ ನಂಬಿಕೆಗಳನ್ನೂ ಡಯಟೀಶಿಯನ್‌ಗಳು ಸುಳ್ಳಾಗಿಸಿದ್ದಾರೆ. ಈ ನಿಟ್ಟಿನಲ್ಲಿ, ಹಲವು ಪ್ರಯೋಗಗಳೂ ಕೂಡಾ ಆಗುತ್ತಲೇ ಇವೆ. ನೀವು ಮೆಚ್ಚುವ, ನಿತ್ಯವೂ ತಿನ್ನುವ ಆಹಾರದಲ್ಲಿಯೇ ಕೊಂಚ ಮಾರ್ಪಾಡುಗಳನ್ನು ಮಾಡಿಕೊಂಡು ಸರಿಯಾದ ಆರೋಗ್ಯಕರ ಜೀವನಶೈಲಿ ಹಾಗೂ ವ್ಯಾಯಾಮಗಳನ್ನು ಮಾಡಿಕೊಂಡಿದ್ದರೆ ತೂಕ ಖಂಡಿತವಾಗಿಯೂ ಇಳಿಯುತ್ತದೆ ಎನ್ನುತ್ತಾರೆ ಇವರು. ಇದನ್ನು ಹಲವರು ಮಾಡಿ ತೋರಿಸಿದ್ದಾರೆ ಕೂಡ.

Weight Loss Slim Body Healthy Lifestyle Concept Benefits Of Saffron

ಇತ್ತೀಚೆಗೆ ದಕ್ಷಿಣ ಭಾರತೀಯ ಶೈಲಿಯ ಅಡುಗೆಗಳು, ಬೆಳಗಿನ ಉಪಹಾರಗಳು ಸಾಕಷ್ಟು ಪ್ರಸಿದ್ಧಿಗೆ ಬರುತ್ತಿದೆ. ದಕ್ಷಿಣ ಭಾರತೀಯ ಶೈಲಿಯ ಬೆಳಗ್ಗಿನ ಉಪಾಹಾರ ತೂಕ ಇಳಿಕೆಗೆ ಪೂರಕವಾಗಿದ್ದು, ಹಲವರು ಈಚೆಗೆ ಈ ಶೈಲಿಯ ಆಹಾರಕ್ರಮಕ್ಕೆ ವಾಲುತ್ತಿದ್ದಾರೆ ಕೂಡ. ಇದರಿಂದ ನಮ್ಮ ದೇಹಕ್ಕೆ ಅತ್ಯುತ್ತಮ ಪೋಷಣೆ ಲಭ್ಯವಾಗುತ್ತದೆ. ಹೀಗಾಗಿ ದಕ್ಷಿಣ ಭಾರತೀಯರಾದ ನಾವು ತೂಕ ಇಳಿಸಬೇಕಿದ್ದರೆ, ನಮ್ಮ ನಾಲಿಗೆಯ ಮಾತನ್ನು ಧಾರಾಳವಾಗಿ ಕೇಳಬಹುದು.
ದಕ್ಷಿಣ ಭಾರತೀಯ ತಿನಿಸುಗಳು ಯಾಕೆ ಆರೋಗ್ಯಕರ ಗೊತ್ತೇ? ಉಪ್ಪಿಟ್ಟು, ಇಡ್ಲಿ, ಪೊಂಗಲ್‌, ಉತ್ತಪ್ಪ, ಪಡ್ಡು, ಬಗೆಬಗೆಯ ದೋಸೆಗಳು ನಮ್ಮ ದಕ್ಷಿಣ ಭಾರತೀಯರ ಮನೆಗಳ ಬೆಳಗ್ಗಿನ ಆರಾಧ್ಯ ದೈವಗಳು. ಈ ಎಲ್ಲ ಬಗೆಯ ಆಹಾರಗಳಲ್ಲೂ ಬಗೆಬಗೆಯ ಧಾನ್ಯಗಳು, ಬೇಳೆ ಕಾಳುಗಳ ಬಳಕೆಯಿದೆ. ತೆಂಗಿನಕಾಯಿ, ಕರಿಬೇವು, ಕೊಂತ್ತಂಬರಿ ಸೊಪ್ಪು, ಬಗೆಬಗೆಯ ತರಕಾರಿಗಳು ಇತ್ಯಾದಿಗಳ ಬಳಕೆಯಿದೆ. ಇವೆಲ್ಲವೂ ಇಡೀ ಉಪಹಾರದ ಪೋಷಕಾಂಶಗಳ ಮಟ್ಟವನ್ನು ಮತ್ತಷ್ಟು ಹೆಚ್ಚಿಸುತ್ತವೆ. ಇನ್ನೂ ಮುಖ್ಯವಾದ ಇನ್ನೊಂದು ಅಂಶವೆಂದರೆ, ದಕ್ಷಿಣ ಭಾರತೀಯರಾದ ನಮ್ಮ ಶೈಲಿಯ ತಿಂಡಿಗಳ ಹಿಟ್ಟು ತಯಾರಿಕೆಯಲ್ಲಿ ಹುಳಿಬರಿಸುವ ಪ್ರಕ್ರಿಯೆಯೂ ಇದೆ. ಎಣ್ಣೆಯಲ್ಲಿ ಹುರಿಯುವುದಕ್ಕಿಂತಲೂ ಹಬೆಯಲ್ಲಿ ಬೇಯಿಸುವ ಪ್ರಕ್ರಿಯೆಯಿದೆ. ಇವೆಲ್ಲ ಪ್ರಕ್ರಿಯೆಗಳೂ ಆರೋಗ್ಯಕ್ಕೆ ಪೂರಕವಾದವುಗಳು.
ಆದರೆ, ದಕ್ಷಿಣ ಭಾರತೀಯ ಈ ತಿನಿಸುಗಳಲ್ಲಿ ಕಾರ್ಬೋಹೈಡ್ರೇಟ್‌ ಅಧಿಕ ಎಂಬ ವಾದವೂ ಇದೆ. ಇದು ನಿಜ ಕೂಡಾ. ಆದರೂ, ತೂಕ ಇಳಿಕೆಯ ವಿಚಾರಕ್ಕೆ ಬಂದರೆ, ಖಂಡಿತವಾಗಿಯೂ ಈ ತಿಂಡಿಗಳನ್ನೇ ಹಿತಮಿತವಾಗಿ ತಿಂದರೆ, ತೂಕ ಇಳಿಸಲು ಸಾಧ್ಯವಾಗುತ್ತದೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಹಾಗಾಗಿ ರುಚಿಯ ವಿಷಯದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ ನಮ್ಮದೇ ಆಹಾರ ಶೈಲಿಯಲ್ಲೂ, ತೂಕ ಇಳಿಕೆ ಸಾಧ್ಯವಿದೆ ಎಂಬುದನ್ನು ಇತ್ತೀಚೆಗೆ ಹಲವರು ಸಾಧ್ಯವಾಗಿಸಿ ತೋರಿಸುತ್ತಿದ್ದಾರೆ ಕೂಡ.

idli sambar

ಇಡ್ಲಿ ಸಾಂಬಾರ್‌

ಇಡ್ಲಿ ಅತ್ಯಂತ ಪೋಷಕಾಂಶಯುಕ್ತ ಹಬೆಯಲ್ಲಿ ಬೇಯಿಸಿ ಮಾಡು ಆರೋಗ್ಯಕರ ತಿನಿಸು. ಬೆಳಗ್ಗಿನ ಹೊತ್ತಿಗೆ ಇದು ಪ್ರಶಸ್ತ. ಅಕ್ಕಿ ಹಾಗೂ ಉದ್ದಿನ ಬೇಳೆಯಿಂದ ಮಾಡಿದ ಇಡ್ಲಿಗೆ ತರಕಾರಿ ಹಾಕಿದ ಸಾಂಬಾರು, ತೆಂಗಿನಕಾಯಿಯ ಚಟ್ನಿ ಇದ್ದರೆ ಸ್ವರ್ಗ. ಪೋಷಕಾಂಶಗಳ ವಿಚಾರದಲ್ಲೂ ಇದು ಯಾವುದೇ ಮೋಸ ಮಾಡದು.

Masala Dosa Dish

ದೋಸೆ

ಇಡ್ಲಿಯ ಹಿಟ್ಟಿನಿಂದಲೇ ಮಾಡಬಹುದಾದ ದೋಸೆಯೂ ಕೂಡಾ ಅಷ್ಟೇ ಆರೋಗ್ಯಕರ. ಪ್ರೊಟೀನ್‌ ಹಾಗೂ ಸಾಕಷ್ಟು ಕಾರ್ಬೋಹೈಡ್ರೇಟ್‌ ಇರುವ ಇದು ಬೆಳಗ್ಗೆಗೆ ಒಳ್ಳೆಯ ಆಹಾರ. ಕೇವಲ ಈ ಹಿಟ್ಟಲ್ಲದೆ, ನೂರಾರು ಬಗೆಯ ದೋಸೆಗಳನ್ನೂ ತರಕಾರಿ ಹಾಗೂ ಬೇರೆ ಬೇರೆ ಧಾನ್ಯಗಳನ್ನು ಬಳಸಿ ಮಾಡಬಹುದು ಎಂಬುದೇ ದೋಸೆಯ ವಿಶೇಷತೆ.

uppittu

ಉಪ್ಪಿಟ್ಟು

ಗೋಧಿ/ರವೆಯಿಂದ ಮಾಡಬಹುದಾದ ಉಪ್ಪಿಟ್ಟು ಕೂಡಾ ಬೆಳಗ್ಗೆಗೆ ಹೇಳಿ ಮಾಡಿಸಿದ ತಿಂಡಿ. ಬಗೆಬಗೆಯ ತರಕಾರಿಗಳನ್ನು ಹಾಕಿ ಮಾಡಬಹುದು. ಇದೂ ಕೂಡಾ ಪೋಷಕಾಂಶಯುಕ್ತ ಆಹಾರ. ತೂಕ ಇಳಿಕೆಗೂ ಪೂರಕ.

ಇದನ್ನೂ ಓದಿ: Health Tips Kannada: ಕುಂಬಳಕಾಯಿ ಬೀಜದಲ್ಲಿದೆ ನಮ್ಮ ಆರೋಗ್ಯದ ಗುಟ್ಟು!

ಉತ್ತಪ್ಪ, ಪಡ್ಡು, ಪೊಂಗಲ್

ಈ ಎಲ್ಲ ತಿನಿಸುಗಳೂ ಕೂಡಾ ಇಡ್ಲಿ ದೋಸೆಗಳಂತೆಯೇ ನಿರುಪದ್ರವಿ. ಪೋಷಕಾಂಶಭರಿತವಾದವು. ಇವುಗಳನ್ನು ಹಿತಮಿತವಾಗಿ ತಿಂದರೆ, ಹೊಟ್ಟೆಗೂ ಹಿತ, ನಾಲಿಗೆಗೂ ರುಚಿ. ತೂಕವನ್ನೂ ಸಮತೋಲನದಲ್ಲಿಟ್ಟುಕೊಳ್ಳಬಹುದು.

Continue Reading

ಕರ್ನಾಟಕ

Chemicals in Food: ಗೋಬಿ- ಕಬಾಬ್‌ ಆಯ್ತು‌, ಈಗ ಪಾನಿಪುರಿಯಲ್ಲೂ ಕ್ಯಾನ್ಸರ್‌ಕಾರಿ ವಿಷ ಪತ್ತೆ; ಸದ್ಯದಲ್ಲೇ ಬ್ಯಾನ್?

Chemicals in Food: ರಾಜ್ಯದ ನಾನಾ ಭಾಗದಲ್ಲಿ ಪಾನಿಪುರಿ ಮಾದರಿಗಳನ್ನು ಸಂಗ್ರಹ ಮಾಡಿಕೊಂಡು ಟೆಸ್ಟ್ ಮಾಡಲಾಗಿದೆ. ಬೆಂಗಳೂರಿನ 19 ಕಡೆಗಳಲ್ಲಿ ಕ್ಯಾನ್ಸರ್ ಕಾರಕ ಇರುವ ಸಾಸ್ ಮತ್ತು ಮೀಟಾ ಖಾರದ ಪುಡಿ ಬಳಕೆ ಮಾಡುತ್ತಿರುವುದು ಕಂಡುಬಂದಿದೆ.

VISTARANEWS.COM


on

chemicals in food panipuri
Koo

ಬೆಂಗಳೂರು: ಮಳೆ ಬರುತ್ತಿದೆ, ಸ್ವಲ್ಪ ಚಳಿ ಇದೆ. ಸಂಜೆ ಬಿಸಿಬಿಸಿ ಪಾನಿಪುರಿ (Panipuri) ಸವಿಯೋಣ ಎಂದು ಸವಾರಿ ಹೊರಡುವವರಿಗೆ ಬೆಚ್ಚಿ ಬೀಳಿಸುವಂಥ ಸುದ್ದಿ ಇಲ್ಲಿದೆ. ಪಾನಿಪುರಿ ಪ್ರಿಯರಿಗೆ ಬಿಗ್ ಶಾಕ್ ಕೊಡಲು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ (food safety and standards authority of india) ತಯಾರಿ ಮಾಡಿಕೊಳ್ಳುತ್ತಿದೆ. ಅದಕ್ಕೆ ಕಾರಣ, ಪಾನಿಪುರಿಯಲ್ಲಿ ಕಂಡುಬಂದಿರುವ ಕ್ಯಾನ್ಸರ್‌ಕಾರಕ (Carcinogenic), ಹಾನಿಕಾರಕ ರಾಸಾಯನಿಕ (Chemicals in Food) ವಿಷಗಳು.

ಹೌದು. ಗೋಬಿ ಮಂಚೂರಿ (Gobi Manchurian) ಹಾಗೂ ಕಬಾಬ್ (Kebab) ಬಳಿಕ ಇದೀಗ ಪಾನಿಪುರಿಯಲ್ಲಿಯೂ ಕ್ಯಾನ್ಸರ್ ಕಾರಕ ಅಂಶಗಳು ಇರುವುದನ್ನು ಪತ್ತೆ ಮಾಡಲಾಗಿದೆ. ಇದರ ಪರಿಶೀಲನೆಗಾಗಿ ಬೆಂಗಳೂರಿನ 49 ಪ್ರದೇಶಗಳಿಂದ ಸ್ಯಾಂಪಲ್‌ಗಳನ್ನು ಸಂಗ್ರಹಿಸಲಾಗಿದೆ. ಇವುಗಳನ್ನು ಪರಿಶೀಲಿಸಿದಾಗ, ಎಲ್ಲ 19 ಕಡೆಯ ಪಾನಿಪೂರಿ ತಯಾರಿಕೆ ಪದಾರ್ಥಗಳಲ್ಲಿ ಕ್ಯಾನ್ಸರ್ ಕಾರಕ ಇರೋದು ಪತ್ತೆಯಾಗಿದೆ.

ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ನಡೆಸಿದ ಲ್ಯಾಬ್‌ ಟೆಸ್ಟಿಂಗ್‌ನಲ್ಲಿ, ಪಾನಿಪೂರಿಗೆ ಬಳಸುವ ಐದು ಸಾಸ್, ಮೀಟಾ ಖಾರದಲ್ಲಿ ಐದು ಬಗೆಯ ರಾಸಾಯನಿಕ ಅಂಶಗಳಿರುವುದು ಪತ್ತೆಯಾಗಿದೆ. ಹೀಗಾಗಿ ಶೀಘ್ರದಲ್ಲೇ ಪಾನಿಪೂರಿಗೆ ಬಳಸುವ ಕ್ಯಾನ್ಸರ್ ಕಾರಕ ಅಂಶಗಳನ್ನು ಬ್ಯಾನ್ ಮಾಡಲು ನಿರ್ಧರಿಸಲಾಗಿದೆ. ಕ್ಯಾನ್ಸರ್ ಕಾರಕಗಳು ಇರುವ ಸಾಸ್, ಮೀಟಾ ಖಾರದ ಪುಡಿ ಬ್ಯಾನ್ ಮಾಡಲಾಗುತ್ತದೆ.

ರಾಜ್ಯದ ನಾನಾ ಭಾಗದಲ್ಲಿ ಪಾನಿಪುರಿ ಮಾದರಿಗಳನ್ನು ಸಂಗ್ರಹ ಮಾಡಿಕೊಂಡು ಟೆಸ್ಟ್ ಮಾಡಲಾಗಿದೆ. ಬೆಂಗಳೂರಿನ 19 ಕಡೆಗಳಲ್ಲಿ ಕ್ಯಾನ್ಸರ್ ಕಾರಕ ಇರುವ ಸಾಸ್ ಮತ್ತು ಮೀಟಾ ಖಾರದ ಪುಡಿ ಬಳಕೆ ಮಾಡುತ್ತಿರುವುದು ಕಂಡುಬಂದಿದೆ. ಈ ಹಾನಿಕಾರಕ ಅಂಶಗಳು ಮನುಷ್ಯನ ದೇಹ ಸೇರಿದರೆ ಆರೋಗ್ಯ ಕ್ಷೀಣಿಸುತ್ತಾ ಹೋಗುತ್ತದೆ. ಹೀಗಾಗಿ, ಇನ್ನೊಂದು ವಾರದಲ್ಲಿ ಪಾನಿಪುರಿಗೆ ಹಾಕುವ ಸಾಸ್ ಮತ್ತು ಮಿಟಾ ಬ್ಯಾನ್ ಮಾಡಲು ನಿರ್ಧರಿಸಲಾಗಿದ್ದು, ಅಧಿಕೃತ ಘೋಷಣೆಯಷ್ಟೆ ಬಾಕಿ ಇದೆ.

ಪಾನಿಪುರಿಯಲ್ಲಿ ವಿಷಕಾರಕ ಅಂಶಗಳು ಪತ್ತೆಯಾದ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಇಲಾಖೆ ಆಯುಕ್ತ ಶ್ರೀನಿವಾಸ್, ಜನತೆ ವಿವೇಚನೆಯಿಂದ ಈ ಆಹಾರ ಸೇವಿಸಬೇಕು ಎಂದಿದ್ದಾರೆ.

“ನಾವು ರಾಜ್ಯಾದ್ಯಂತ ಸುಮಾರು 260 ಪಾನಿಪುರಿ ಮಾದರಿಗಳನ್ನು ಸಂಗ್ರಹ ಮಾಡಿದ್ದೆವು. ಸಂಗ್ರಹ ಮಾಡಿದ ಮಾದರಿಗಳನ್ನು ಲ್ಯಾಬ್‌ಗಳಿಗೆ ಕಳುಹಿಸಿಕೊಟ್ಟಿದ್ದೆವು. ಪಾನಿಪುರಿ ಸಾಸ್ ಅಥವಾ ಪಾನಿಗಳನ್ನು ನಾವು ಟೆಸ್ಟ್ ಮಾಡಿಸಿದ್ದೇವೆ. ಬಿಬಿಎಂಪಿ ವ್ಯಾಪ್ತಿಯಲ್ಲಿನ ಮಾದರಿಗಳು ಹೆಚ್ಚಾಗಿ ಅಪಾಯಕಾರಿ ಅಂತ ಕಂಡುಬಂದಿವೆ. ಜನರನ್ನು ಭಯಭೀತರಾಗಿ ಮಾಡುವ ಉದ್ದೇಶ ನಮಗಿಲ್ಲ. ಈ ರೀತಿಯ ಸ್ಟ್ರೀಟ್ ಫುಡ್‌ಗಳು ನಿಧಾನವಾಗಿ ದೇಹಕ್ಕೆ ಅಪಾಯ ತಂದೊಡ್ಡುತ್ತವೆ. ಕ್ಯಾನ್ಸರ್ ಸೇರಿ ಡೇಂಜರ್ ರೋಗಗಳನ್ನು ತರುತ್ತವೆ. ಹೀಗಾಗಿ ಜನರೂ ಸಹ ಈ ಬಗ್ಗೆ ಯೋಚನೆ ಮಾಡಿ ಹೊರಗಿನ ಆಹಾರ ಸೇವನೆ ಮಾಡಬೇಕು” ಎಂದು ಶ್ರೀನಿವಾಸ್‌ ಹೇಳಿದ್ದಾರೆ.

ಗೋಬಿ ಬಳಿಕ ಕಬಾಬ್‌ಗೂ ಕೃತಕ ಬಣ್ಣ ನಿಷೇಧ

ಗೋಬಿ ಬಳಿಕ ಕಬಾಬ್‌ಗೂ ಕೃತಕ ಬಣ್ಣ (Artificial Colours Ban) ಬಳಕೆಗೂ ರಾಜ್ಯ ಸರ್ಕಾರ ನಿಷೇಧ ಹೇರಿದೆ. ರಾಜ್ಯಾದ್ಯಂತ ಮಾರಾಟವಾಗುತ್ತಿರುವ ವೆಜ್/ಚಿಕನ್/ಫಿಶ್ ಇತರೆ ಕಬಾಬ್‌ಗಳಲ್ಲಿ ಕೃತಕ ಬಣ್ಣದ ಬೆರೆಸುವಿಕೆಯಿಂದಾಗಿ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಕಬಾಬ್‌ (chicken, fish kebab) ತಯಾರಿಕೆಯಲ್ಲಿ ಕೃತಕ ಬಣ್ಣಗಳನ್ನು ಬೆರೆಸುವುದನ್ನು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ನಿರ್ಬಂಧಿಸಿದೆ.

ಬಾಯಿ ಚಪ್ಪರಿಸಿಕೊಂಡು ತಿನ್ನುವ ಗೋಬಿ ಮಂಚೂರಿ, ಬಾಂಬೆ ಮಿಠಾಯಿಗೆ ಕಲರ್‌ ಹಾಕುವುದನ್ನು ಬ್ಯಾನ್ ಮಾಡಿದ ಬೆನ್ನಲ್ಲೇ ಇದೀಗ ಕಬಾಬ್‌ ಸರದಿಯಾಗಿದೆ. ರಾಜ್ಯಾದ್ಯಂತ ಮಾರಾಟ ಮಾಡಲಾಗುತ್ತಿರುವ ಕಬಾಬ್‌ಗೆ (artificial colours in Kebab) ಬೆರಸುವ ಕೃತಕ ಬಣ್ಣ ಕಳಪೆಯಾಗಿದ್ದು, ಇದರಿಂದ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ. ಹೀಗಾಗಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯು ರಾಜ್ಯಾದ್ಯಂತ ಮಾರಾಟ ಮಾಡಲಾಗುತ್ತಿರುವ ಕಬಾಬ್‌ಗಳ ಮಾದರಿಗಳನ್ನು ಸಂಗ್ರಹಿಸಿ ಲ್ಯಾಬ್‌ಗೆ ಕಳುಹಿಸಿತ್ತು.

ರಾಜ್ಯಾದ್ಯಂತ 39 ಕಬಾಬ್‌ಗಳ ಮಾದರಿಗಳನ್ನು ಸಂಗ್ರಹಿಸಿ ಲ್ಯಾಬ್‌ಗೆ ಕಳಿಸಿದಾಗ, ಅದರಲ್ಲಿ 8 ಕಬಾಬ್‌ನ ಮಾದರಿಗಳು ಕೃತಕ ಬಣ್ಣದಿಂದ (ಸನ್‌ಸೆಟ್ ಯೆಲ್ಲೋ – 7 ಮಾದರಿಗಳು ಹಾಗೂ ಸನ್‌ಸೆಟ್ ಯೆಲ್ಲೋ ಮತ್ತು ಕಾರ್ಮೋಸಿನ್ ಹೊಂದಿರುವ ಮಾದರಿಗಳು 1) ಕೂಡಿರುವುದರಿಂದ ಅಸುರಕ್ಷಿತ ಎಂದು ವರದಿಗಳಲ್ಲಿ ಕಂಡುಬಂದಿದೆ. ಹೀಗಾಗಿ ಯಾವುದೇ ಕೃತಕ ಬಣ್ಣಗಳನ್ನು ಉಪಯೋಗಿಸುವಂತಿರುವುದಿಲ್ಲ ಎಂದು ಸೂಚಿಸಿದೆ.

ಇದನ್ನೂ ಓದಿ | Sleep After Lunch: ಊಟದ ನಂತರ ನಮಗೆ ಆಕಳಿಕೆ, ನಿದ್ದೆ ಬರುವುದೇಕೆ?

Continue Reading

ಆಹಾರ/ಅಡುಗೆ

Empty Stomach Foods: ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಈ ಆಹಾರಗಳನ್ನು ಸೇವಿಸಿದರೆ ಆರೋಗ್ಯಕ್ಕೆ ಉತ್ತಮ!

Empty Stomach Foods: ಬೆಳಗ್ಗೆ ಒಳ್ಳೆಯ ಆಹಾರ ತಿಂದರೆ, ಸಹಜವಾಗಿಯೇ ಇಡೀ ದಿನ ನಿಮ್ಮ ದೇಹ ಉಲ್ಲಸಿತವಾಗಿರುತ್ತದೆ. ಇಲ್ಲವಾದರೆ, ಉತ್ಸಾಹ ಕಡಿಮೆಯಾಗುತ್ತದೆ. ದೇಹ ಬಳಸುತ್ತದೆ. ಉದಾಸೀನತೆ, ಮೈಗಳ್ಳತನ ಕಾಡುತ್ತದೆ. ನಿದ್ದೆ, ಸೋಮಾರಿತನ ಎಳೆಯುತ್ತದೆ. ದೇಹ ಚುರುಕಾಗಿರಬೇಕಾದರೆ, ಬೆಳಗ್ಗೆ ಎದ್ದ ಕೂಡಲೇ ಖಾಲಿ ಹೊಟ್ಟೆಯಲ್ಲಿ ಏನು ತಿನ್ನಬೇಕು ಎಂಬುದು ನಮಗೆ ಗೊತ್ತಿರಬೇಕು. ಈ ಕುರಿತ ಮಾಹಿತಿ ಇಲ್ಲಿದೆ.

VISTARANEWS.COM


on

Empty Stomach Foods
Koo

ಬೆಳಗ್ಗೆ ಎದ್ದ ಕೂಡಲೇ ಏನು ತಿನ್ನುತ್ತೇವೆ (Empty Stomach Foods) ಎಂಬುದರ ಮೇಲೆ ಇಡೀ ದಿನ ನಮ್ಮ ದೇಹ ಹೇಗಿರುತ್ತದೆ ಎಂಬುದು ಅವಲಂಬಿತವಾಗುತ್ತದೆ ಎಂಬುದು ತಿಳಿದವರ ಮಾತು. ಆರೋಗ್ಯದ ವಿಚಾರಕ್ಕೆ ಬಂದರೆ ಈ ಮಾತು ನೂರಕ್ಕೆ ನೂರರಷ್ಟು ಸತ್ಯ. ಯಾಕೆಂದರೆ, ಬೆಳಗ್ಗೆ ಒಳ್ಳೆಯ ಆಹಾರ ತಿಂದರೆ, ಸಹಜವಾಗಿಯೇ ಇಡೀ ದಿನ ನಿಮ್ಮ ದೇಹ ಉಲ್ಲಸಿತವಾಗಿರುತ್ತದೆ. ಇಲ್ಲವಾದರೆ, ಉತ್ಸಾಹ ಕಡಿಮೆಯಾಗುತ್ತದೆ. ದೇಹ ಬಳಸುತ್ತದೆ. ಉದಾಸೀನತೆ, ಮೈಗಳ್ಳತನ ಕಾಡುತ್ತದೆ. ನಿದ್ದೆ, ಸೋಮಾರಿತನ ಎಳೆಯುತ್ತದೆ. ದೇಹ ಚುರುಕಾಗಿರಬೇಕಾದರೆ, ಬೆಳಗ್ಗೆ ಎದ್ದ ಕೂಡಲೇ ಖಾಲಿ ಹೊಟ್ಟೆಯಲ್ಲಿ ಏನು ತಿನ್ನಬೇಕು ಎಂಬುದು ನಮಗೆ ಗೊತ್ತಿರಬೇಕು. ಬಹಳಷ್ಟು ಮಂದಿ ಬೆಳಗ್ಗೆದ್ದ ಕೂಡಲೇ ಚಹಾದ ಮೊರೆ ಹೋಗುವುದು ಸಾಮಾನ್ಯವೇ ಆದರೂ, ಅದನ್ನು ಬಿಟ್ಟು ಒಳ್ಳೆಯ ಆಹಾರದತ್ತ ಗಮನ ಹರಿಸುವುದಿದ್ದರೆ, ನೀವು ಖಾಲಿ ಹೊಟ್ಟೆಯಲ್ಲಿ ಏನೇನೆಲ್ಲ ತಿಂದರೆ ನಿಮ್ಮ ಆರೋಗ್ಯ ವೃದ್ಧಿಯಾಗುತ್ತದೆ ಎಂದು ನೋಡೋಣ ಬನ್ನಿ.

Egg Protein Foods

ಮೊಟ್ಟೆ

ದಿನದ ಆರಂಭವನ್ನು ಮಾಡುವುದಿದ್ದಲ್ಲಿ ಮೊಟ್ಟೆ ಅತ್ಯುತ್ತಮ ಆಹಾರ. ಮೊಟ್ಟೆಯಲ್ಲಿ ಪ್ರೊಟೀನ್‌ ಸೇರಿದಂತೆ ದೇಹಕ್ಕೆ ಬೇಕಾದ ಬಹಳಷ್ಟು ಪೋಷಕಾಂಶಗಳು ಇವೆ. ದೇಹ ಜಡವಾಗಿದ್ದಾಗ, ಮಲಗಿ ಎದ್ದ ಕೂಡಲೇ ಚುರುಕುಗೊಳಿಸಲು, ಉಲ್ಲಾಸ ನೀಡಿ ತಕ್ಷಣ ಚಿಗಿತುಕೊಳ್ಳಲು ಮೊಟ್ಟೆ ಬಹಳ ಒಳ್ಳೆಯದು. ಬೇಯಿಸಿ, ಆಮ್ಲೆಟ್‌ ಮಾಡಿ, ಅಥವಾ ಇನ್ನಾವುದೇ ತಿನಿಸಿನ ರೂಪದಲ್ಲಿ ಅದನ್ನು ನೀವು ತಿನ್ನಬಹುದು. ಹಾಗಾಗಿ ಇದು ಒಂದು ಅತ್ಯುತ್ತಮವಾದ ಬ್ರೇಕ್‌ಫಾಸ್ಟ್‌ ಆಯ್ಕೆ.

Mixed Nuts and Seeds Weight Loss Snacks

ಬೀಜಗಳು

ಒಂದು ಮುಷ್ಟಿ ಒಂದು ಬೀಜಗಳನ್ನು ಬೆಳಗ್ಗೆ ಎದ್ದ ಕೂಡಲೇ ಬಾಯಿಗೆ ಹಾಕಿಕೊಳ್ಳುವುದು ಒಳ್ಳೆಯ ಅಭ್ಯಾಸ. ಇದು ನಿಮ್ಮ ಶಕ್ತಿಯನ್ನು ಹೆಚ್ಚಿಸುತ್ತದೆ. ಬೆಳಗ್ಗೆ ಬೇಕಾದ ಶಕ್ತಿಯನ್ನು ಇದು ಒಡನೆಯೇ ನೀಡುತ್ತದೆ. ರಾತ್ರಿ ಬೀಜಗಳನ್ನು ನೆನೆ ಹಾಕಿ ಬೆಳಗ್ಗೆ ಎದ್ದ ಕೂಡಲೇ ತಿನ್ನುವುದರಿಂದ ಬೀಜಗಳ ಎಲ್ಲ ಬಗೆಯ ಪೋಷಕಾಂಶಗಳ ಲಾಭವನ್ನೂ ದೇಹ ಪಡೆದುಕೊಳ್ಳುತ್ತದೆ.

Papaya Digestive Boosting Foods

ಪಪ್ಪಾಯಿ

ಖಾಲಿ ಹೊಟ್ಟೆಯಲ್ಲಿ ಪಪ್ಪಾಯಿ ತಿನ್ನುವುದು ಕೂಡಾ ಒಳ್ಳೆಯದು. ಪಪ್ಪಾಯಿಯಲ್ಲಿ ಕಡಿಮೆ ಕ್ಯಾಲರಿಯಿದ್ದು, ಅತ್ಯಂತ ಹೆಚ್ಚು ಪೋಷಕಾಂಶಗಳನ್ನು ಹೊಂದಿದೆ. ಇದು ಹೊಟ್ಟೆ ಹಾಗೂ ಜೀರ್ಣಾಂಗವ್ಹೂಹಕ್ಕೆ ಒಳ್ಳೆಯದು. ತೂಕ ಇಳಿಸುವ ಮಂದಿಗೂ ಅತ್ಯಂತ ಒಳ್ಳೆಯದು.

Berries Abdominal Obesity

ಬೆರ್ರಿ

ಬೆಳಗಿನ ಖಾಲಿ ಹೊಟ್ಟೆಗೆ ಬೆರ್ರಿ ಹಣ್ಣುಗಳು ಉತ್ತಮ. ಬೆರ್ರಿ ಹಣ್ಣುಗಳಲ್ಲಿ ಹೆಚ್ಚು ನಾರಿನಂಶ ಇರುವುದರಿಂದ ಇದು ನಿಮ್ಮನ್ನು ಹೆಚ್ಚು ಹೊತ್ತು ಹೊಟ್ಟೆ ತುಂಬಿರುವಂತೆ ನೋಡಿಕೊಳ್ಳುತ್ತದೆ. ಕಡಿಮೆ ಕ್ಯಾಲರಿಯ ಆಹಾರ ಇದಾಗಿದ್ದು, ಸ್ವಲ್ಪ ಹೆಚ್ಚು ತಿಂದರೂ ತಲೆಕೆಡಿಸಿಕೊಳ್ಳಬೇಕಾಗಿಲ್ಲ. ಸ್ಟ್ರಾಬೆರ್ರಿ, ಬ್ಲೂಬೆರ್ರಿ ಮತ್ತಿರರ ಯಾವುದೇ ಬೆರ್ರಿ ವಿಧಗಳನ್ನು ಬೆಳಗ್ಗೆ ಸೇವಿಸುವುದು ಉತ್ತಮ.

Oats Vegetarian foods for stamina

ಓಟ್ಸ್‌

ಓಟ್ಸ್‌ ಅಥವಾ ಓಟ್‌ಮೀಲ್‌ ಬೆಳಗ್ಗೆ ತಿನ್ನುವುದು ಒಳ್ಳೆಯದು. ಇದರಲ್ಲೂ ನಾರಿನಂಶ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿದ್ದು, ಹೊಟ್ಟೆ ತುಂಬಿಸಲು ಸರಿಯಾದ ಆಹಾರ. ಇದರ ಜೊತೆಗೆ ಒಣ ಬೀಜಗಳು ಹಾಗೂ ನಿಮ್ಮ ಇಷ್ಟ ಹಣ್ಣುಗಳನ್ನೂ ಸೇರಿಸಬಹುದು. ಸಕ್ಕರೆ ಸೇರಿಸದೆ, ಹಾಗೆಯೇ ಹಾಲಿನ ಜೊತೆಗೆ ಮಾಡಿ ತಿಂದರೆ ಆರೋಗ್ಯಕ್ಕೆ ಒಳ್ಳೆಯದು. ಗ್ಯಾಸ್‌, ಹೊಟ್ಟೆಯುಬ್ಬರ ಇತ್ಯಾದಿ ಸಮಸ್ಯೆಯಿರುವ ಮಂದಿಗೂ ಇದು ಒಳ್ಳೆಯದು.

ಇದನ್ನೂ ಓದಿ: Menopausal Weight Gain: ಋತುಚಕ್ರ ನಿಂತ ಬಳಿಕ ತೂಕ ಹೆಚ್ಚುವುದನ್ನು ತಡೆಯಬಹುದೇ?

Continue Reading
Advertisement
UGC NET Exam
ದೇಶ3 hours ago

UGC NET Exam: ರದ್ದಾಗಿದ್ದ ಯುಜಿಸಿ ನೆಟ್‌ ಪರೀಕ್ಷೆಗೆ ಹೊಸ ದಿನಾಂಕ ಘೋಷಣೆ; ಪರೀಕ್ಷೆಗೆ ಹೊಸ ವಿಧಾನ, ಇಲ್ಲಿದೆ ವಿವರ‌

Vodafone Idea
ದೇಶ3 hours ago

Vodafone Idea: ಜಿಯೋ, ಏರ್‌ಟೆಲ್‌ ಬೆನ್ನಲ್ಲೇ ವೋಡಾಫೋನ್‌ ಐಡಿಯಾ ಪ್ಲಾನ್‌ ಬೆಲೆ ಏರಿಕೆ; ಹೀಗಿದೆ ವಿವರ

T20 World Cup 2024
ಪ್ರಮುಖ ಸುದ್ದಿ3 hours ago

T20 World Cup 2024 : ಭಾರತ ತಂಡವನ್ನು ಟೀಕಿಸಿದ ಮೈಕೆಲ್​ ವಾನ್​ಗೆ ತಿರುಗೇಟು ಕೊಟ್ಟ ಗಂಗೂಲಿ

CM SIddaramaiah
ಪ್ರಮುಖ ಸುದ್ದಿ3 hours ago

Siddaramaiah: ಅಮಿತ್‌ ಶಾ-ಸಿದ್ದರಾಮಯ್ಯ ಭೇಟಿ; ರಾಜ್ಯದ 5 ನಗರಗಳಲ್ಲಿ ಸೇಫ್‌ ಸಿಟಿ ಯೋಜನೆ ಜಾರಿಗೆ ಒತ್ತಾಯ

Religious Freedom
ದೇಶ5 hours ago

Religious Freedom: ಧಾರ್ಮಿಕ ಸ್ವಾತಂತ್ರ್ಯದ ಕುರಿತು ಅಮೆರಿಕ ಹುಸಿ ಕಳವಳ; ಭಾರತ ತಿರುಗೇಟು

Virat Kohli
ಪ್ರಮುಖ ಸುದ್ದಿ5 hours ago

Virat Kohli : ಫಾರ್ಮ್​ ಕಳೆದುಕೊಂಡಿರುವ ವಿರಾಟ್​ ಕೊಹ್ಲಿಯ ಬೆಂಬಲಕ್ಕೆ ನಿಂತ ಗಂಗೂಲಿ

Application Invitation to Join Air Wing NCC July 09 is the last day for submission of application
ಕರ್ನಾಟಕ5 hours ago

Air Wing NCC: ಏರ್ ವಿಂಗ್ ಎನ್‌ಸಿಸಿ ಸೇರಲು ಅರ್ಜಿ ಆಹ್ವಾನ; ಜುಲೈ 9 ಕೊನೆಯ ದಿನ

Tulu language
ತಂತ್ರಜ್ಞಾನ6 hours ago

Tulu Translate Google: ಗೂಗಲ್ ಟ್ರಾನ್ಸ್‌ಲೇಟ್‌ನಲ್ಲಿ ತುಳು ಭಾಷೆ ಸೇರ್ಪಡೆ

India is a secular nation because Hindus are the majority says Union Minister Pralhad Joshi
ಕರ್ನಾಟಕ6 hours ago

Pralhad Joshi: ಹಿಂದೂಗಳು ಅಲ್ಪಸಂಖ್ಯಾತರಾದ ದಿನ ಭಾರತ ಜಾತ್ಯತೀತವಾಗಿ ಉಳಿಯದು; ಪ್ರಲ್ಹಾದ್‌ ಜೋಶಿ ಆತಂಕ

IND vs SA
ಪ್ರಮುಖ ಸುದ್ದಿ6 hours ago

IND vs SA: ದಕ್ಷಿಣ ಆಫ್ರಿಕಾದ ಬೌಲಿಂಗ್​ ಶಕ್ತಿ ಭಾರತದ ಬ್ಯಾಟಿಂಗ್​ಗೆ ಲೆಕ್ಕಕ್ಕೇ ಇಲ್ಲ; ಮಾಜಿ ಆಟಗಾರನ ಭವಿಷ್ಯ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast
ಮಳೆ9 hours ago

Karnataka Weather : ಅಬ್ಬಬ್ಬಾ.. ಮುಲ್ಕಿಯಲ್ಲಿ 30 ಸೆಂ.ಮೀ ಮಳೆ ದಾಖಲು; ವಾರಾಂತ್ಯದಲ್ಲೂ ಭಾರಿ ವರ್ಷಧಾರೆ

karnataka Rain
ಮಳೆ15 hours ago

Karnataka Rain : ಭಾರಿ ಮಳೆಗೆ ಪಾತಾಳ ಸೇರಿದ ಬಾವಿ; ಅಲೆಗಳ ಹೊಡೆತಕ್ಕೆ ಸಮುದ್ರಪಾಲಾದ ಮನೆ

Karnataka Weather Forecast
ಮಳೆ1 day ago

Karnataka Weather : ಭಾರಿ ಮಳೆ ಹಿನ್ನೆಲೆ ದಕ್ಷಿಣ ಕನ್ನಡಕ್ಕೆ ರೆಡ್ ಅಲರ್ಟ್; ಶುಕ್ರವಾರವೂ ಶಾಲೆಗಳಿಗೆ ರಜೆ ಘೋಷಣೆ

karnataka Weather Forecast
ಮಳೆ1 day ago

Karnataka Weather : ಭಾರಿ ಮಳೆಗೆ ಸೇತುವೆಯಿಂದ ಹೊಳೆಗೆ ಬಿದ್ದ ಕಾರು; ಮರ ಹಿಡಿದು ಪ್ರಾಣ ಉಳಿಸಿಕೊಂಡ ಸವಾರರು

Heart Attack
ಕೊಡಗು1 day ago

Heart Attack : ಕೊಡಗಿನಲ್ಲಿ ಹೃದಯಾಘಾತಕ್ಕೆ ಯುವತಿ ಬಲಿ; ಹೆಚ್ಚಾಯ್ತು ಅಲ್ಪಾಯುಷ್ಯದ ಭಯ

karnataka Rains Effected
ಮಳೆ2 days ago

Karnataka Rain : ಧಾರಾಕಾರ ಮಳೆಗೆ ಸಡಿಲಗೊಂಡ ಗುಡ್ಡಗಳು; ಧರೆ ಕುಸಿದು ಮಣ್ಣಿನಡಿ ಸಿಲುಕಿದ ಇಬ್ಬರು ಮಕ್ಕಳು

karnataka Weather Forecast
ಮಳೆ4 days ago

Karnataka Weather : ಕರಾವಳಿಯಲ್ಲಿ ಮುಂದುವರಿದ ವರುಣಾರ್ಭಟ; ಸಾಂಪ್ರದಾಯಿಕ ಮೀನುಗಾರಿಕೆಗೂ ಬ್ರೇಕ್

karnataka weather Forecast
ಮಳೆ1 week ago

Karnataka Weather : ರಭಸವಾಗಿ ಹರಿಯುವ ನೀರಲ್ಲಿ ಸಿಲುಕಿದ ಬೊಲೆರೋ; ಬಿರುಗಾಳಿ ಸಹಿತ ಮಳೆ ಎಚ್ಚರಿಕೆ

International Yoga Day 2024
ಕರ್ನಾಟಕ1 week ago

International Yoga Day 2024: ಎಲ್ಲೆಲ್ಲೂ ಯೋಗಾಯೋಗ‌ಕ್ಕೆ ಮಂಡಿಯೂರಿದ ಜನತೆ

Karnataka Weather Forecast
ಮಳೆ1 week ago

Karnataka Weather : ಬಾಗಲಕೋಟೆ, ಬೆಂಗಳೂರು ಸೇರಿ ಚಿಕ್ಕಮಗಳೂರಲ್ಲಿ ಸುರಿದ ಗಾಳಿ ಸಹಿತ ಮಳೆ

ಟ್ರೆಂಡಿಂಗ್‌