Benefits of Kasoori Methi: ಕಸೂರಿ ಮೇಥಿ ರುಚಿ ಹೆಚ್ಚಿಸಲು ಮಾತ್ರವಲ್ಲ, ಆರೋಗ್ಯ ವೃದ್ಧಿಗೂ ಸೂಕ್ತ - Vistara News

ಆರೋಗ್ಯ

Benefits of Kasoori Methi: ಕಸೂರಿ ಮೇಥಿ ರುಚಿ ಹೆಚ್ಚಿಸಲು ಮಾತ್ರವಲ್ಲ, ಆರೋಗ್ಯ ವೃದ್ಧಿಗೂ ಸೂಕ್ತ

ಪಾಕದ ಸವಿ ಹೆಚ್ಚಿಸುವ ಕಸೂರಿ ಮೇಥಿ ಯಾವುದೇ ರೀತಿಯ ಅಡುಗೆಗೂ ಹೊಂದಿಕೊಳ್ಳುತ್ತದೆ. ಉಪ್ಪಿಟ್ಟು, ಅವಲಕ್ಕಿಗಳಿಂದ ಹಿಡಿದು ಉತ್ತರಭಾರತೀಯ ಶೈಲಿಯ ಸಬ್ಜಿಗಳವರೆಗೆ ಎಲ್ಲದರ ರುಚಿಯನ್ನು ಹೆಚ್ಚಿಸುವ ಈ ಮೆಂತೆಯ (Benefits of Kasoori Methi) ಉಪಯೋಗ ಬಹಳಷ್ಟಿದೆ.

VISTARANEWS.COM


on

Benefits of Kasoori Methi
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಅಡುಗೆಗಳ ಘಮ ಹೆಚ್ಚಿಸುವುದಕ್ಕೆಂದು ಹಲವಾರು ಸೊಪ್ಪುಗಳನ್ನು ಬಳಸುವುದು ವಿಶ್ವದೆಲ್ಲೆಡೆಯ ಅಡುಗೆಮನೆಗಳ ವಾಡಿಕೆ. ಪಶ್ಚಿಮ ದೇಶಗಳಲ್ಲಿ ಥೈಮ್‌, ರೋಸ್‌ಮೆರಿ, ಬೆಸಿಲ್‌ ಮುಂತಾದ ಎಲೆಗಳನ್ನು ತಾಜಾ ಅಥವಾ ಒಣಗಿಸಿದ್ದು ಅಡುಗೆಗಳಲ್ಲಿ ಬಳಸಲಾಗುತ್ತದೆ. ಭಾರತೀಯ ಅಡುಗೆಮನೆಗಳಲ್ಲೂ ಕೊತ್ತಂಬರಿ, ಕರಿಬೇವು, ಪುದೀನಾ ಮುಂತಾದವು ಬಳಕೆಯಲ್ಲಿವೆ. ಇವೆಲ್ಲ ಸಾಮಾನ್ಯವಾಗಿ ತಾಜಾ ಆಗಿಯೇ ಬಳಸುವ ಸೊಪ್ಪುಗಳು. ಆದರೆ ಮೆಂತೆ ಸೊಪ್ಪು ಹಸಿಯಾಗಿ ಬಳಸಿದಂತೆಯೇ ಒಣಗಿದ್ದೂ ಬಳಕೆಯಲ್ಲಿದೆ. ಕಸೂರಿ ಮೇಥಿ ಎಂದು ಕರೆಯಲಾಗುವ ಈ ಸೊಪ್ಪು ಬಹಳಷ್ಟು ಅಡುಗೆಗಳ ಘಮ, ರುಚಿ ಹೆಚ್ಚಿಸುತ್ತದೆ. ಆದರೆ ಅಷ್ಟೇ ಅಲ್ಲ, ಆರೋಗ್ಯಕ್ಕೂ ಬಹಳಷ್ಟು ಲಾಭಗಳನ್ನು ಕಸೂರಿ ಮೇಥಿ (Benefits of Kasoori Methi) ತರಬಲ್ಲದು. ತೂಕ ಇಳಿಸುವಲ್ಲಿ ಮತ್ತು ರಕ್ತದಲ್ಲಿ ಸಕ್ಕರೆಯಂಶ ನಿಯಂತ್ರಿಸುವಲ್ಲಿ ಮೆಂತೆಯ ಗುಣಗಳು ಪ್ರಸಿದ್ಧವಾದವು. ಮೆಂತೆಯ ಬೀಜಗಳನ್ನು ಸೇವಿಸಿದರೂ, ಸೊಪ್ಪು ಬಳಸಿದರೂ ಪರಿಣಾಮ ಇದ್ದೇಇದೆ. ಬೆಳಗಿನ ಖಾಲಿ ಹೊಟ್ಟೆಯಲ್ಲಿ ಮೆಂತೆಯ ನೀರು ಕುಡಿಯುವುದು, ಕಷಾಯ ಸೇವಿಸುವುದು ಮುಂತಾದ ಕ್ರಮಗಳು ತೂಕ ಇಳಿಸುವವರಿಗೆ ಈಗಾಗಲೇ ತಿಳಿದಿರುವಂಥದ್ದೇ. ರುಚಿಯಲ್ಲಿ ಕಿರುಕಹಿಯನ್ನು ಹೊಂದಿರುವ ಇದು ಬಹಳಷ್ಟು ರೀತಿಯ ಅಡುಗೆಗಳಿಗೆ ಹೊಂದಿಕೊಳ್ಳುತ್ತದೆ.

Weight Loss Kantola Benefits

ಕ್ಯಾಲರಿ ಕಡಿಮೆ

ಆದರೆ ಸತ್ವಗಳು ಹೆಚ್ಚು. ಒಂದಿಡೀ ಟೇಬಲ್‌ ಚಮಚ ಕಸೂರಿ ಮೇಥಿಯಲ್ಲಿ ಕೇವಲ 20 ಕ್ಯಾಲರಿ ದೇಹ ಸೇರುತ್ತದೆ. ಮೆಂತೆಯಲ್ಲಿರುವ ಎಲ್ಲ ಸೂಕ್ಷ್ಮ ಪೋಷಕಾಂಶಗಳ ಜೊತೆಗೆ ದೇಹಕ್ಕೆ ದೊರೆಯುವುದು ಹೆಚ್ಚಿನ ಕ್ಯಾಲರಿಗಳಲ್ಲ. ಹಾಗಾಗಿ ಯಾವುದೇ ಅಡುಗೆಗೆ ಇದನ್ನು ಸೇರಿಸಿದರೂ, ಹೆಚ್ಚಿನ ಯೋಚನೆ ಇಲ್ಲದೆಯೆ ಇದನ್ನು ಸವಿಯಬಹುದು.

ನಾರು ಹೆಚ್ಚು

ತೂಕ ಇಳಿಕೆಯಾಗಲೀ ಮಧುಮೇಹವನ್ನು ನಿಯಂತ್ರಿಸುವುದಾಗಲೀ ಆಹಾರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನಾರು ಇರುವುದು ಆವಶ್ಯಕ. ಇದು ಜೀರ್ಣಾಂಗಗಳನ್ನು ಸುಸ್ಥಿತಿಯಲ್ಲಿ ಇರಿಸಿ, ಸತ್ವಗಳನ್ನು ಹೀರಿಕೊಳ್ಳಲು ನೆರವಾಗುತ್ತದೆ. ಜೊತೆಗೆ ಹಸಿವಾಗುವುದನ್ನು ಮುಂದೂಡಿ, ಕಳ್ಳ ಹಸಿವೆಯನ್ನು ನಿಯಂತ್ರಿಸುತ್ತದೆ. ಮಾತ್ರವಲ್ಲ, ರಕ್ತದಲ್ಲಿ ಸಕ್ಕರೆಯ ಮಟ್ಟ ತ್ವರಿತವಾಗಿ ಏರಿಳಿಯುವುದನ್ನು ತಡೆಯುತ್ತದೆ.

Kasoori methi or Dried fenugreek Leaves

ರುಚಿ, ಘಮ

ತಿನ್ನುವ ಆಹಾರಕ್ಕೆ ಘಮ, ರುಚಿ ಎರಡೂ ಚೆನ್ನಾಗಿದ್ದರೆ ತಿಂದ ತೃಪ್ತಿಯೂ ಹೆಚ್ಚುತ್ತದೆ. ಆಗ ಮತ್ತೆ ಮತ್ತೆ ತಿನ್ನುತ್ತಿರಬೇಕೆಂಬ ಬಯಕೆಯೂ ಕಾಡುವುದಿಲ್ಲ. ಹೆಚ್ಚಿನ ಎಣ್ಣೆ, ಕೊಬ್ಬು ಮತ್ತು ಸಾಸೇಜ್‌ಗಳನ್ನು ಉಪಯೋಗಿಸಿ ಆಹಾರವನ್ನು ರುಚಿಕಟ್ಟಾಗಿಸಿದರೆ ಕ್ಯಾಲರಿ ಹೆಚ್ಚಾಗಿಬಿಡುತ್ತದೆ. ಆದರೆ ಕಸೂರಿ ಮೇಥಿ ಹೆಚ್ಚಿನ ಕ್ಯಾಲರಿ ಇಲ್ಲದೆಯೂ ಆಹಾರದ ರುಚಿ ಹೆಚ್ಚಿಸುತ್ತದೆ ಎನ್ನುವುದು ಮುಖ್ಯ.

ಮಧುಮೇಹ ನಿಯಂತ್ರಣ

ರಕ್ತದಲ್ಲಿ ಸಕ್ಕರೆಯ ಮಟ್ಟ ಏರಿಳಿಯುವುದು ತೀವ್ರವಾದರೆ ಹಸಿವನ್ನು ನಿಯಂತ್ರಿಸುವುದು ಕಷ್ಟ. ಆದರೆ ಹೆಚ್ಚಿನ ನಾರುಭರಿತ ಆಹಾರಗಳ ಸೇವನೆಯಿಂದ ರಕ್ತಕ್ಕೆ ಗ್ಲೂಕೋಸ್‌ ತ್ವರಿತವಾಗಿ ಸೇರುವುದಿಲ್ಲ. ಹಾಗಾಗಿ ಕಸೂರಿ ಮೇಥಿ ಸೇವನೆಯಿಂದ ರೋಗ ನಿಯಂತ್ರಣಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ದೊರೆತು, ದೇಹ ಸ್ವಾಸ್ಥ್ಯ ಹೆಚ್ಚುತ್ತದೆ.

healthy internal organs of human digestive system

ಪಚನಕಾರಿ

ತೂಕ ಇಳಿಸುವುದಕ್ಕೆ ಜೀರ್ಣಾಂಗಗಳ ಕ್ಷಮತೆ ಹೆಚ್ಚಿರುವುದು ಅಗತ್ಯ. ಪಚನಾಂಗಗಳ ಸಾಮರ್ಥ್ಯ ಹೆಚ್ಚಿಸುವಲ್ಲಿ ಮೆಂತೆಯ ಶಕ್ತಿ ದೊಡ್ಡದು. ಪರಂಪರಾಗತ ಔಷಧಿಯಲ್ಲಿ ಅಜೀರ್ಣ ಸಂಬಂಧಿ ತೊಂದರೆಗಳಿಗೆ ಮೆಂತೆಯನ್ನು ಮದ್ದಾಗಿ ಬಳಸಲಾಗುತ್ತದೆ. ಅಜೀರ್ಣ ಮಾತ್ರವೇ ಅಲ್ಲ, ಹೊಟ್ಟೆನೋವು, ಹೊಟ್ಟೆ ಉಬ್ಬರ, ಮಲಬದ್ಧತೆಗೂ ಮೆಂತೆ ದಿವ್ಯೌಷಧ. ಜಠರವನ್ನು ಆರೋಗ್ಯಕರವಾಗಿ ಇರಿಸುವ ಮೆಂತೆ ಇಡೀ ದೇಹದ ಆರೋಗ್ಯವನ್ನು ವೃದ್ಧಿಸಬಲ್ಲದು.

Kasoori methi

ಉತ್ಕರ್ಷಣ ನಿರೋಧಕಗಳು

ಕಸೂರಿ ಮೇಥಿಯಲ್ಲಿ ಹಲವಾರು ಬಗೆಯ ಉತ್ಕರ್ಷಣ ನಿರೋಧಕಗಳಿವೆ. ಹಾಗಾಗಿ ಶರೀರದಲ್ಲಿನ ಉರಿಯೂತ ಶಮನಕ್ಕೆ ಅಗತ್ಯ ಕೆಲಸವನ್ನಿದು ಮಾಡಬಲ್ಲದು. ಇದರಿಂದ ಕೀಲುಗಳಲ್ಲಿ ನೋವು ಕಡಿಮೆಯಾಗಿ, ಹೆಚ್ಚು ಚಟುವಟಿಕೆಯಿಂದ ಇರುವುದಕ್ಕೆ ಸಾಧ್ಯ. ಊಟ, ಆರೋಗ್ಯ ಸೇರಿದಂತೆ ಬದುಕಿನ ಒಟ್ಟಾರೆ ಸೌಂದರ್ಯ ಹೆಚ್ಚಿಸುವಲ್ಲಿ ಇದು ನೆರವಾಗುತ್ತದೆ. ಯಾವುದೋ ಒಂದು ವಸ್ತು ಅಥವಾ ಆಹಾರದಿಂದ ತೂಕ ಇಳಿಸುವುದು ಅಸಾಧ್ಯ. ಜೀವನದ ಗುಣಮಟ್ಟ ಸುಧಾರಿಸುವುದಕ್ಕೆ ಸರಿಯಾದ ಆಹಾರ, ನಿದ್ದೆ ಮತ್ತು ವ್ಯಾಯಾಮ ಮುಖ್ಯವಾಗುತ್ತವೆ. ಆದರೆ ಕಸೂರಿ ಮೇಥಿಯಂಥ ಸಣ್ಣ ವಸ್ತುಗಳ ಸಹ ಆಹಾರದ ರುಚಿ, ಘಮ ಹೆಚ್ಚಿಸಿ, ಸ್ವಾಸ್ಥ್ಯ ವೃದ್ಧಿಸುವಂಥ ಕೆಲಸ ಮಾಡಬಲ್ಲವು.

ಇದನ್ನೂ ಓದಿ: Snake Bites: ಅಕಸ್ಮಾತ್‌ ಹಾವು ಕಚ್ಚಿದರೆ ಏನು ಮಾಡಬೇಕು? ಏನು ಮಾಡಬಾರದು?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

Toxic Shawarma: ಚಿಕನ್‌ ಶವರ್ಮಾ ತಿಂದರೆ ಸಾಯುತ್ತಾರೆಯೆ? ಏನು ಕಾರಣ?

2022ರ ಏಪ್ರಿಲ್‌ನಲ್ಲಿ ‘ವಿಷಕಾರಿ’ ಶವರ್ಮಾ ಸೇವಿಸಿ 52ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದರು. ಕೇರಳದ ಚೆರುವತ್ತೂರ್‌ನಲ್ಲಿ ಯುವಕ, ಕಳೆದ ವರ್ಷ ತಮಿಳುನಾಡಿನಲ್ಲಿ ಬಾಲಕಿಯೊಬ್ಬಳು ಮೃತಪಟ್ಟಿದ್ದಳು. ಹಾಗಾದರೆ ಶವರ್ಮಾ ಆಹಾರ ಪ್ರಿಯರಿಗೆ ವಿಷಕಾರಿವಾಗುತ್ತಿರುವುದು (Toxic Shawarma) ಯಾಕೆ? ಈ ಕುರಿತು ಮಾಹಿತಿ ಇಲ್ಲಿದೆ.

VISTARANEWS.COM


on

By

Toxic Shawarma
Koo

ಮುಂಬಯಿನ (mumbai) ಮಂಖುರ್ದ್ ಪ್ರದೇಶದಲ್ಲಿ 19 ವರ್ಷದ ಯುವಕನೊಬ್ಬ ರಸ್ತೆ ಬದಿಯ ವ್ಯಾಪಾರಿಯಿಂದ ಚಿಕನ್‌ ಶವರ್ಮಾ ಸೇವಿಸಿದ (Toxic Shawarma) ಬಳಿಕ ಹೊಟ್ಟೆನೋವು (stomach pain), ವಾಂತಿ (vomiting) ಕಾಣಿಸಿಕೊಂಡು ಸಾವನ್ನಪ್ಪಿದ ಘಟನೆ ನಡೆದಿತ್ತು. ಶವರ್ಮಾಗೆ ಬಳಸಿದ ಚಿಕನ್ ಕೆಟ್ಟುಹೋಗಿರುವುದು ಇದಕ್ಕೆ ಕಾರಣ ಎನ್ನಲಾಗಿದೆ.

ಪ್ರಥಮೇಶ್ ಭೋಕ್ಸೆ ಮೃತ ಯುವಕ. ಆತ ಸೇವಿಸಿದ ಆಹಾರ ವಿಷಪೂರಿತವಾಗಿತ್ತು ಎಂದು ವೈದ್ಯರು ಹೇಳಿದ್ದಾರೆ. ಹೊಟ್ಟೆ ನೋವು ಮತ್ತು ವಾಂತಿ ಕಾಣಿಸಿಕೊಂಡ ಬಳಿಕ ಭೋಕ್ಸೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಎರಡು ಬಾರಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಅವರು ಮೂರನೇ ಬಾರಿಗೆ ಮತ್ತೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾಗ ಮಂಗಳವಾರ ಮೃತಪಟ್ಟಿದ್ದಾರೆ.

ಸ್ಥಳೀಯ ಪೊಲೀಸರು ಈ ಸಂಬಂಧ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ ಮತ್ತು ಇಬ್ಬರು ಆಹಾರ ಮಾರಾಟಗಾರರನ್ನು ಬಂಧಿಸಿದ್ದಾರೆ. ಆನಂದ್ ಕಾಂಬ್ಳೆ ಮತ್ತು ಅಹ್ಮದ್ ಶೇಖ್ ಬಂಧಿತರು. ಇವರ ವಿರುದ್ಧ ವಿವಿಧ ಐಪಿಸಿ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ.

ಇದೇ ಮೊದಲಲ್ಲ

ಶವರ್ಮಾದಿಂದ ಸಾವು ಸಂಭವಿಸಿರುವುದು ಇದೇ ಮೊದಲ ಘಟನೆಯಲ್ಲ. 2022ರ ಏಪ್ರಿಲ್‌ನಲ್ಲಿ 52ಕ್ಕೂ ಹೆಚ್ಚು ಮಂದಿ ಶವರ್ಮಾ ಸೇವಿಸಿ ಅಸ್ವಸ್ಥರಾಗಿದ್ದರು. ಕೇರಳದ ಚೆರುವತ್ತೂರಿನಲ್ಲಿ ಶವರ್ಮಾವನ್ನು ತಿಂದು ಒಬ್ಬರು ಮೃತಪಟ್ಟಿದ್ದರು. 16 ವರ್ಷದ ದೇವಾನಂದ ಎಂಬ ಬಾಲಕಿ ಶವರ್ಮಾ ಖಾದ್ಯವನ್ನು ಸೇವಿಸಿದ ಬಳಿಕ ಪ್ರಾಣ ಕಳೆದುಕೊಂಡಿದ್ದಳು.

ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ತಮಿಳುನಾಡಿನ ನಾಮಕ್ಕಲ್‌ನ ರೆಸ್ಟೋರೆಂಟ್‌ನಲ್ಲಿ ಚಿಕನ್ ಶವರ್ಮಾ ಸೇವಿಸಿದ 14 ವರ್ಷದ ಬಾಲಕಿ ತನ್ನ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದಳು. ಇದಲ್ಲದೆ, ಖಾದ್ಯವನ್ನು ಸೇವಿಸಿದ ಅನಂತರ ಸಂತ್ರಸ್ತೆಯ ಕುಟುಂಬದ ನಾಲ್ವರು ಸೇರಿದಂತೆ ಒಟ್ಟು 43 ಮಂದಿ ತೀವ್ರ ಜ್ವರ, ವಾಂತಿ, ಹೊಟ್ಟೆ ನೋವು ಮತ್ತು ಅತಿಸಾರದಿಂದ ಆಸ್ಪತ್ರೆಗೆ ದಾಖಲಾಗಿದ್ದರು.

2023ರ ಅಕ್ಟೋಬರ್‌ನಲ್ಲಿ ಕೊಚ್ಚಿಯ ಯುವಕ ಕೇರಳದ ಮಾವೇಲಿಪುರಂನಲ್ಲಿರುವ ರೆಸ್ಟೋರೆಂಟ್‌ನಿಂದ ಶವರ್ಮಾ ಸೇವಿಸಿದ ಅನಂತರ ಸಾವನ್ನಪ್ಪಿದರು. 22 ವರ್ಷದ ಯುವಕನ ಮರಣೋತ್ತರ ಪರೀಕ್ಷೆಯ ವರದಿಯು ಅವನ ಸಾವಿಗೆ ಕಾರಣವನ್ನು ಸೆಪ್ಟಿಸೆಮಿಯಾ ಎಂದು ಉಲ್ಲೇಖಿಸಿದೆ. ಇದು ಗಂಭೀರ ರಕ್ತಪ್ರವಾಹದ ಸೋಂಕಾಗಿದೆ.


ಶವರ್ಮಾ ಏಕೆ ಸಾವಿಗೆ ಕಾರಣ?

ಶವರ್ಮಾ ಭಕ್ಷ್ಯದಲ್ಲಿ ಯಾವುದೇ ಸಮಸ್ಯೆ ಇಲ್ಲ. ಆದರೆ ಅದರಲ್ಲಿ ಬಳಸುವ ಪದಾರ್ಥಗಳು ಇದಕ್ಕೆ ಕಾರಣವಾಗಿದೆ. ವಿಶೇಷವಾಗಿ ಕೋಳಿಮಾಂಸವನ್ನು ತಯಾರಿಸುವ, ನಿರ್ವಹಿಸುವ ಮತ್ತು ಸಂಗ್ರಹಿಸುವ ವಿಧಾನ ಸರಿಯಾಗಿ ಇಲ್ಲದೇ ಇದ್ದುದರಿಂದ ಶವರ್ಮಾವನ್ನು ತಿಂದ ಬಳಿಕ ಹಲವು ಮಂದಿ ಸಾವನ್ನಪ್ಪಿದ್ದಾರೆ. ಕಡಿಮೆ ಬೇಯಿಸಿದ ಮಾಂಸ ಅಥವಾ ಮಾಂಸದ ಅಸಮರ್ಪಕ ಶೈತ್ಯೀಕರಣದ ಕಾರಣದಿಂದಾಗಿ ಆಹಾರ ವಿಷವಾಗಿದೆ.

ಬೇಯಿಸದ ಮಾಂಸ ಕಾರಣ

ಶವರ್ಮಾಕ್ಕೆ ಬಳಸಲಾಗುವ ಮಾಂಸವನ್ನು ಆಳವಾಗಿ ಭೇದಿಸದ ಜ್ವಾಲೆಯನ್ನು ಬಳಸಿ ಗಂಟೆಗಳ ಕಾಲ ನಿಧಾನವಾಗಿ ಹುರಿಯಲಾಗುತ್ತದೆ. ಇದರಿಂದ ಹೆಚ್ಚಿನ ಗ್ರಾಹಕರು ಹಲವು ಸಂದರ್ಭದಲ್ಲಿ ಸರಿಯಾಗಿ ಬೇಯಿಸದ ಮಾಂಸವನ್ನು ಪಡೆಯುತ್ತಾರೆ. ಶವರ್ಮಾದಿಂದ ಆಹಾರ ವಿಷಕ್ಕೆ ಮಾಂಸದ ಅಸಮರ್ಪಕ ಶೈತ್ಯೀಕರಣ, ಮಾಲಿನ್ಯ, ಅಥವಾ ಸಾಲ್ಮೊನೆಲ್ಲಾ ಅಥವಾ ಇ. ಕೋಲಿಯಂತಹ ಹಾನಿಕಾರಕ ಬ್ಯಾಕ್ಟೀರಿಯಾಕ್ಕೆ ಕಾರಣವಾಗುತ್ತದೆ. ಇದು ಆಹಾರವನ್ನು ವಿಷಗೊಳಿಸುವುದು ಮಾತ್ರವಲ್ಲ ಗಂಭೀರವಾದ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು ಎಂದು ವೈದ್ಯರೊಬ್ಬರು ಹೇಳುತ್ತಾರೆ.

ಅನೈರ್ಮಲ್ಯ, ಸರಿಯಾಗಿ ಬೇಯಿಸದ ಅಥವಾ ಕಲುಷಿತ ಆಹಾರ ಕರುಳಿನ ಸೋಂಕನ್ನು ಉಂಟುಮಾಡಬಹುದು. ಅದು ತುಂಬಾ ಸಾಂಕ್ರಾಮಿಕವಾಗಿರುತ್ತದೆ. ಅಲ್ಲದೇ ಕಲುಷಿತ ಪಾತ್ರೆಗಳು, ಅಸಮರ್ಪಕ ಸಾಸ್ ಅಥವಾ ಪದಾರ್ಥಗಳ ಬಳಕೆ ಗಂಭೀರ ಆರೋಗ್ಯ ಪರಿಸ್ಥಿತಿಗಳಿಗೆ ಕಾರಣವಾಗಬಹುದು. ಫ್ರಿಡ್ಜ್‌ ನಲ್ಲಿ ಮಾಂಸವನ್ನು ದೀರ್ಘಕಾಲದವರೆಗೆ ಬಿಟ್ಟರೂ ಅದು ಹಾನಿಕಾರಕ ಬ್ಯಾಕ್ಟೀರಿಯಾಗಳ ಸಂತಾನೋತ್ಪತ್ತಿಗೆ ಕಾರಣವಾಗುತ್ತದೆ.

ಇದನ್ನೂ ಓದಿ: Juices Side Effect: ಅಂಗಡಿಯಲ್ಲಿ ಸಿಗುವ ಜ್ಯೂಸ್‌ ಕುಡಿದರೆ ಏನಾಗುತ್ತದೆ?

ಸುರಕ್ಷಿತ ಶವರ್ಮಾ ಸೇವಿಸಿ

ಶವರ್ಮಾ ತಿನ್ನಬೇಕಿದ್ದರೆ ಉತ್ತಮ ಆಹಾರ ಸುರಕ್ಷತಾ ಅಭ್ಯಾಸಗಳ ಇತಿಹಾಸ ಹೊಂದಿರುವ ಆರೋಗ್ಯಕರ ಮತ್ತು ಪ್ರತಿಷ್ಠಿತ ಆಹಾರ ಮಳಿಗೆಗಳು ಮತ್ತು ಮಾರಾಟಗಾರರನ್ನು ಆಯ್ಕೆ ಮಾಡಿ. ಹೊಟೇಲ್‌ನಲ್ಲಿನ ಶುಚಿತ್ವ ಮತ್ತು ಆಹಾರ ನಿರ್ವಹಣೆಯ ಬಗ್ಗೆ ಗಮನ ಕೊಡಿ. ಮಾಂಸದ ಬಗ್ಗೆ ಜಾಗರೂಕರಾಗಿರಿ. ವಿಶೇಷವಾಗಿ ಅದು ಕಚ್ಚಾ ಅಥವಾ ಕಡಿಮೆ ಬೇಯಿಸಿರುವುದನ್ನು ತಿನ್ನಬೇಡಿ.

Continue Reading

ಆರೋಗ್ಯ

Dietary Guidelines: ಭಾರತೀಯರ ಆಹಾರ ಹೇಗಿರಬೇಕು? ಐಸಿಎಂಆರ್ ಮಾರ್ಗಸೂಚಿ ಹೀಗಿದೆ

ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR) ಭಾರತೀಯರ ಆಹಾರದಲ್ಲಿ ಏನೆಲ್ಲಾ ಒಳಗೊಂಡಿರಬೇಕು ಎಂಬ ಮಾರ್ಗಸೂಚಿಯನ್ನು (Dietary Guidelines) ಬಿಡುಗಡೆ ಮಾಡಿದ್ದು, ಇದನ್ನು ಪಾಲಿಸಿದರೆ ರೋಗಗಳಿಂದ ದೂರವಿರಬಹುದು ಎನ್ನುತ್ತದೆ ಅಧ್ಯಯನ. ಈ ಕುರಿತ ವಿಸ್ತೃತ ಮಾಹಿತಿ ಇಲ್ಲಿದೆ.

VISTARANEWS.COM


on

By

Dietary Guidelines
Koo

ತರಕಾರಿ, ಧಾನ್ಯ, ಕಾಳುಗಳು, ಬೀನ್ಸ್, ಬೀಜಗಳು, ಮೊಸರು ಭಾರತೀಯರಿಗೆ (indians) ಉತ್ತಮ ಆಹಾರ ಎಂದು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR) ತಿಳಿಸಿದೆ. ಆಧುನಿಕ ಆಹಾರ ಪದ್ಧತಿಗೆ ಸರಿ ಹೊಂದುವಂತೆ ಭಾರತೀಯರಿಗೆ ನವೀಕರಿಸಿದ ಆಹಾರ ಮಾರ್ಗ ಸೂಚಿಗಳನ್ನು (Dietary Guidelines) ಬಿಡುಗಡೆ ಮಾಡಿದೆ.

ICMRನ ಆಹಾರ ಮಾರ್ಗಸೂಚಿಗಳ ಪ್ರಕಾರ, ಆರೋಗ್ಯಕರ ಊಟವು ಹೆಚ್ಚಿನ ತರಕಾರಿಗಳು, ಸಾಕಷ್ಟು ಧಾನ್ಯ, ಕಾಳು, ಬೀನ್ಸ್, ಬೀಜಗಳು, ಹಣ್ಣುಗಳೊಂದಿಗೆ ಸರಿಯಾದ ವಿಧಾನದಲ್ಲಿ ಮಾಡಿರುವ ಮೊಸರು ಉತ್ತಮ ಆಯ್ಕೆಯಾಗಿದೆ. ಇದು ಹೆಚ್ಚುವರಿ ಸಕ್ಕರೆಗಳಿಂದ ಮುಕ್ತವಾಗಿದೆ ಅಥವಾ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಎಣ್ಣೆ, ಕೊಬ್ಬು ಮತ್ತು ಉಪ್ಪನ್ನು ಹೊಂದಿರುತ್ತದೆ.

ಹೈದರಾಬಾದ್ ಮೂಲದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ನ್ಯೂಟ್ರಿಷನ್ (ಎನ್‌ಐಎನ್‌) ನ ಸಂಶೋಧಕರು ತಯಾರಿಸಿರುವ ಆಧುನಿಕ ಆಹಾರ ಮಾರ್ಗಸೂಚಿಗಳು ಜನರು ದೈಹಿಕವಾಗಿ ಸಕ್ರಿಯವಾಗಿರಲು, ನಿಯಮಿತವಾಗಿ ವ್ಯಾಯಾಮ ಮಾಡಲು, ಉಪ್ಪು ಸೇವನೆಯನ್ನು ನಿರ್ಬಂಧಿಸಲು, ಹೆಚ್ಚಿನ ಕೊಬ್ಬು, ಸಕ್ಕರೆ ಮತ್ತು ಸಂಸ್ಕರಿಸಿದ ಆಹಾರಗಳನ್ನು ಕಡಿಮೆ ಮಾಡಲು ಕ್ರಮಗಳನ್ನು ತೆಗೆದುಕೊಳ್ಳುವಂತೆ ಸಲಹೆ ನೀಡುತ್ತವೆ. ಈ ಆಹಾರ ಕ್ರಮವು ಹೊಟ್ಟೆಯ ಬೊಜ್ಜು, ಅಧಿಕ ತೂಕವನ್ನು ನಿಯಂತ್ರಿಸುತ್ತದೆ.


ಆಹಾರ ಮಾರ್ಗಸೂಚಿ

ಎನ್‌ಐಎನ್‌ 17 ಆಹಾರ ಮಾರ್ಗಸೂಚಿಗಳನ್ನು ರೂಪಿಸಿದೆ. ಅದು ಆರೋಗ್ಯಕರ ಆಹಾರದ ಮೇಲೆ ವಿಶೇಷ ಗಮನವನ್ನು ಹೊಂದಿರುವ ಎಲ್ಲಾ ವಯೋಮಾನದವರಲ್ಲಿ ಆರೋಗ್ಯಕರ ಜೀವನ ಮತ್ತು ರೋಗ ತಡೆಗಟ್ಟಲು ಒತ್ತು ನೀಡುತ್ತದೆ. ಐಸಿಎಂಆರ್‌ನ ಡಿಜಿ ಡಾ. ರಾಜೀವ್ ಬಹ್ಲ್ ಅವರು ವರದಿಯನ್ನು ಬಿಡುಗಡೆ ಮಾಡಿದ್ದು, ಕಳೆದ ದಶಕಗಳಲ್ಲಿ ಭಾರತೀಯರ ಆಹಾರ ಪದ್ಧತಿಯು ಗಮನಾರ್ಹ ಬದಲಾವಣೆಗಳಿಗೆ ಒಳಗಾಗಿದೆ. ಇದು ಸಾಂಕ್ರಾಮಿಕವಲ್ಲದ ರೋಗಗಳ ಹರಡುವಿಕೆ ಹೆಚ್ಚಳಕ್ಕೆ ಕಾರಣವಾಗಿದೆ.

ತಾಜಾ ಆಹಾರದ ಮಾರ್ಗಸೂಚಿಗಳು ಆಹಾರ ಸುರಕ್ಷತೆಯನ್ನು ನಿಭಾಯಿಸಲು ಪ್ರಾಯೋಗಿಕ ಸಂದೇಶಗಳು ಮತ್ತು ಸಲಹೆಗಳನ್ನು ಸೇರಿಸುವುದರೊಂದಿಗೆ ಬದಲಾಗುತ್ತಿರುವ ಆಹಾರದ ಸನ್ನಿವೇಶಕ್ಕೆ ಪ್ರಸ್ತುತವಾಗಿವೆ. ಕನಿಷ್ಠ ಸಂಸ್ಕರಿಸಿದ ಆಹಾರಗಳ ಆಯ್ಕೆ, ಆಹಾರ ಲೇಬಲ್‌ಗಳ ಪ್ರಾಮುಖ್ಯತೆ ಮತ್ತು ದೈಹಿಕ ಚಟುವಟಿಕೆ ಅತ್ಯಗತ್ಯ ಎಂಬುದಾಗಿ ಆಹಾರ ಮಾರ್ಗ ಸೂಚಿಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: Covishield: ಭಾರತದಲ್ಲಿ ಕೋವಿಶೀಲ್ಡ್‌ ಸೈಡ್‌ ಎಫೆಕ್ಟ್‌ನ ಎಲ್ಲ ಮಾಹಿತಿ ಬಹಿರಂಗ ಎಂದ ಕಂಪನಿ, ಉತ್ಪಾದನೆಯೂ ಸ್ಥಗಿತ!

ದೈಹಿಕ ಚಟುವಟಿಕೆ ಅತ್ಯಗತ್ಯ

ಮಾರ್ಗಸೂಚಿಗಳ ಪ್ರಕಾರ ಎಲ್ಲಾ ವಯಸ್ಸಿನ ವ್ಯಕ್ತಿಗಳು ಉತ್ತಮ ಆರೋಗ್ಯಕ್ಕಾಗಿ ಕನಿಷ್ಠ 30 ರಿಂದ 45 ನಿಮಿಷಗಳ ದೈಹಿಕ ಚಟುವಟಿಕೆಯನ್ನು ಮಧ್ಯಮ ತೀವ್ರತೆಯ ದೈಹಿಕ ಚಟುವಟಿಕೆಯನ್ನು ಅನುಸರಿಸಬೇಕು. ಮಕ್ಕಳಲ್ಲಿ ದಿನಕ್ಕೆ ಕನಿಷ್ಠ 60 ನಿಮಿಷಗಳ ನಿಯಮಿತ ದೈಹಿಕ ಚಟುವಟಿಕೆಯು ಅಧಿಕ ತೂಕ ಮತ್ತು ಸ್ಥೂಲಕಾಯತೆಯನ್ನು ತಡೆಯುತ್ತದೆ.

ಉಪ್ಪಿನ ಬಳಕೆಗೆ ಮಿತಿ ಇರಲಿ

ಐಸಿಎಂಆರ್-ಎನ್ಐಎನ್ ಜನರಿಗೆ ಅಯೋಡಿಕರಿಸಿದ ಉಪ್ಪನ್ನು ಸೇವಿಸುವಂತೆ ಸಲಹೆ ನೀಡಿದೆ. ದಿನಕ್ಕೆ ಗರಿಷ್ಠ 5 ಗ್ರಾಂಗಿಂತ ಹೆಚ್ಚು ಉಪ್ಪನ್ನು ಸೇವಿಸುವುದನ್ನು ನಿರ್ಬಂಧಿಸುತ್ತದೆ. ಚಿಕ್ಕ ವಯಸ್ಸಿನಿಂದಲೇ ಉಪ್ಪು ಕಡಿಮೆ ಇರುವ ಆಹಾರಗಳ ಬಗ್ಗೆ ಅಭಿರುಚಿಯನ್ನು ಬೆಳೆಸಿಕೊಳ್ಳುವಂತೆ ಜನರನ್ನು ಒತ್ತಾಯಿಸಿದೆ.

Continue Reading

ಆರೋಗ್ಯ

Silent Heart Attack: ಏನಿದು ಸೈಲೆಂಟ್‌ ಹಾರ್ಟ್‌ ಅಟ್ಯಾಕ್‌? ಇದರ ಲಕ್ಷಣಗಳೇನು?

ಮಧ್ಯಪ್ರದೇಶದ ಇಂದೋರ್‌ನಲ್ಲಿ ಯುವಕನೊಬ್ಬ ಮೌನ ಹೃದಯಾಘಾತವಾಗಿ ಮೃತಪಟ್ಟಿರುವ ಘಟನೆ ನಡೆದಿದೆ. ಯಾವುದೇ ಹೃದಯಾಘಾತದ ಲಕ್ಷಣವಿಲ್ಲದೆಯೇ ಸಾವನ್ನಪ್ಪುತ್ತಿರುವ (Silent Heart Attack) ಪ್ರಕರಣ ಇತ್ತೀಚೆಗೆ ಹೆಚ್ಚಾಗುತ್ತಿದ್ದು ಆತಂಕ ಮೂಡಿಸಿದೆ. ಏನು ಈ ಬಗೆಯ ಹೃದಯಾಘಾತದ ಲಕ್ಷಣ? ಇಲ್ಲಿದೆ ವರದಿ.

VISTARANEWS.COM


on

By

Silent Heart Attack
Koo

ಮಧ್ಯಪ್ರದೇಶದ ಇಂದೋರ್‌ನ 35 ವರ್ಷದ ವ್ಯಕ್ತಿಯೊಬ್ಬರು ತೀವ್ರ ಎದೆನೋವಿನ ಲಕ್ಷಣಗಳು ಇಲ್ಲದೆಯೇ ಹೃದಯಾಘಾತದಿಂದ (Silent Heart Attack) ಸಾವನ್ನಪ್ಪಿದ್ದಾರೆ. ಸೌಮ್ಯವಾದ ರೋಗಲಕ್ಷಣ ಅಥವಾ ಯಾವುದೇ ತೀವ್ರವಾದ ಎದೆನೋವಿನಂತಹ ವಿಶಿಷ್ಟ ಲಕ್ಷಣಗಳಿಲ್ಲದೆಯೇ ಹೃದಯಾಘಾತಗಳು ಸಂಭವಿಸುತ್ತದೆ ಎನ್ನುವುದಕ್ಕೆ ಇದು ಸಾಕ್ಷಿಯಾಗಿದೆ.

ಸಾಮಾನ್ಯವಾಗಿ ಎದೆ ನೋವಿನ ಲಕ್ಷಣಗಳು ಕಂಡು ಬಂದರೆ ECGಯಿಂದ ರೋಗ ಲಕ್ಷಣಗಳು ಪತ್ತೆಯಾಗುತ್ತದೆ. ಎಚ್ಚರಿಕೆಯ ಚಿಹ್ನೆಗಳು ಎದೆಯ ಮಧ್ಯದಲ್ಲಿ ಅಥವಾ ದೇಹದ ಮೇಲ್ಭಾಗದ ಅಸ್ವಸ್ಥತೆ, ಉಸಿರಾಟದ ತೊಂದರೆ ಮತ್ತು ತಣ್ಣನೆಯ ಬೆವರು ಕಂಡು ಬರುತ್ತದೆ. ಆದರೆ ಇದ್ಯಾವುದು ಇಲ್ಲದೆಯೇ ಸಾವನ್ನಪ್ಪುತ್ತಿರುವವರು ಹೆಚ್ಚಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಬೈಕ್ ನಲ್ಲಿ ಹೋಗುತ್ತಿದ್ದ ವ್ಯಕ್ತಿಯೊಬ್ಬ ಯಾವ ಸೂಚನೆಯೂ ಇಲ್ಲದೆ ಹೃದಯಾಘಾತವಾಗಿ ಸಾವನ್ನಪ್ಪಿದ್ದಾರೆ. ತೀರ್ಥ ರಾಮ್ (35) ಮೃತರು.

ತೀರ್ಥ ರಾಮ್ ಬೈಕ್‌ನಲ್ಲಿ ಹೋಗುತ್ತಿದ್ದಾಗ ರಸ್ತೆ ಮಧ್ಯೆ ಏಕಾಏಕಿ ಕೆಳಗೆ ಬಿದ್ದಿದ್ದಾನೆ. ರಸ್ತೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ಆತನನ್ನು ಗಮನಿಸಿದ ಸ್ಥಳೀಯರು ಕೂಡಲೇ ಆಂಬ್ಯುಲೆನ್ಸ್‌ಗೆ ಕರೆ ಮಾಡಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಆದರೆ ಅವರು ಆಸ್ಪತ್ರೆಗೆ ತಲುಪುವ ಮೊದಲು ನಿಧನರಾಗಿದ್ದಾರೆ. ಮೃತನ ಕುಟುಂಬದವರು ಆತನ ಮರಣೋತ್ತರ ಪರೀಕ್ಷೆಗೆ ನಿರಾಕರಿಸಿದ್ದಾರೆ. ಗೋವಿಂದ್ ನಗರದ ನಿವಾಸಿ ಬಿಹಾರಿ ಲಾಲ್ ಸೋನ್ವಾನೆ ಅವರ ಪುತ್ರ ತೀರ್ಥ ರಾಮ್ ಎಂದು ಮೃತನನ್ನು ಗುರುತಿಸಲಾಗಿದೆ.

ಮಂಗಳವಾರ ಬೆಳಗ್ಗೆ ಯಾವುದೋ ಕೆಲಸದ ನಿಮಿತ್ತ ತೀರ್ಥರಾಮ್ ಮನೆಯಿಂದ ಬೈಕ್ ನಲ್ಲಿ ತೆರಳಿದ್ದರು. ಕೆಲವೇ ನಿಮಿಷಗಳಲ್ಲಿ ಆತ ರಸ್ತೆಯಲ್ಲಿ ಪ್ರಜ್ಞಾಹೀನನಾಗಿ ಬಿದ್ದಿದ್ದಾನೆ ಎಂಬ ಸುದ್ದಿ ಮನೆಯವರಿಗೆ ತಿಳಿಯಿತು. ಕುಟುಂಬ ಸದಸ್ಯರು ಸ್ಥಳಕ್ಕೆ ಧಾವಿಸಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ದರು. ಆದರೆ ಅವರು ಬರುವಷ್ಟರಲ್ಲಿ ಆತ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು. ಮೌನ ಹೃದಯಾಘಾತವೇ (ಸೈಲೆಂಟ್‌ ಹಾರ್ಟ್‌ ಆಟ್ಯಾಕ್‌) ಆತನ ಸಾವಿಗೆ ಎಂದು ಪ್ರಾಥಮಿಕ ವರದಿಗಳಿಂದ ತಿಳಿದು ಬಂದಿದೆ.


ಸೈಲೆಂಟ್‌ ಹಾರ್ಟ್‌ ಅಟ್ಯಾಕ್‌ ಎಂದರೇನು?

ಮೌನ ಹೃದಯಾಘಾತವನ್ನು ಸಾಮಾನ್ಯವಾಗಿ ವೈದ್ಯಕೀಯ ಪರಿಭಾಷೆಯಲ್ಲಿ ಸೈಲೆಂಟ್ ಮಯೋಕಾರ್ಡಿಯಲ್ ಇನ್ಫಾರ್ಕ್ಷನ್ (SMI) ಎಂದು ಕರೆಯಲಾಗುತ್ತದೆ. ಈ ಸ್ಥಿತಿಯಲ್ಲಿ ಹೃದಯಾಘಾತ ಸಂಭವಿಸಿದಾಗ ವ್ಯಕ್ತಿ ಎದೆಯಲ್ಲಿ ನೋವಿನ ಸಂವೇದನೆಯನ್ನು ಅನುಭವಿಸುವುದಿಲ್ಲ. ಆದರೆ ಇತರ ಕೆಲವು ಲಕ್ಷಣಗಳು ಕಂಡುಬರುತ್ತವೆ.

ಇದನ್ನೂ ಓದಿ: Self Harming: ಅಪ್ಪನಿಗೆ ಗುಡ್ ಬೈ ಹೇಳಿಸಿ ಮಗುವನ್ನು ಕೊಂದ ತಾಯಿ!

ಮೌನ ಹೃದಯಾಘಾತದ ಲಕ್ಷಣಗಳು

ಮೌನ ಹೃದಯಾಘಾತದ ಲಕ್ಷಣಗಳು ಇಂತಿವೆ. ಶೀತ ಜ್ವರ, ಎದೆಯ ಬಳಿ ಅಥವಾ ಭುಜಗಳ ಬಳಿ ಮೇಲಿನ ಬೆನ್ನಿನ ಬಳಿ ಊತ, ಪಾದದ ಬಳಿ ನೋವು, ತೋಳು ಅಥವಾ ಮೇಲಿನ ಬೆನ್ನಿನಲ್ಲಿ ಸ್ನಾಯು ನೋವು, ಸುಸ್ತಾಗಿರುವ ಭಾವನೆ ಕಂಡು ಬರುತ್ತದೆ.

ಸಾಮಾನ್ಯ ಹೃದಯಾಘಾತದ ಲಕ್ಷಣಗಳು

ಕೆಲವು ನಿಮಿಷಗಳಿಗಿಂತ ಹೆಚ್ಚು ಎದೆ ನೋವು, ಉಸಿರಾಟದ ತೊಂದರೆ, ಚಡಪಡಿಕೆ ಭಾವನೆ, ಲಘುವಾದ ಹಠಾತ್ ಬೆವರುವಿಕೆ, ವಾಂತಿ, ತುಂಬಾ ದಣಿದ ಭಾವನೆ ಮತ್ತು ಸುಸ್ತು ಕೆಲವು ದಿನಗಳವರೆಗೆ ಇರುತ್ತದೆ.

Continue Reading

ಆರೋಗ್ಯ

Olive Oil Benefits: ಆಲಿವ್‌ ಎಣ್ಣೆ ಕೇವಲ ಅಡುಗೆಗಲ್ಲ, ಮುಖದ ಚರ್ಮ ಹಾಗೂ ಕೂದಲ ಸೌಂದರ್ಯಕ್ಕೂ ಬೇಕು!

ಆಲಿವ್‌ ಎಣ್ಣೆಯನ್ನು ಬಹುತೇಕರು ಉತ್ತಮ ಆರೋಗ್ಯಕ್ಕಾಗಿ ತಮ್ಮ ಮನೆಗಳಲ್ಲಿ ಅಡುಗೆಗೆ ಇಂದು ಬಳಸುತ್ತಿದ್ದಾರೆ. ಹೃದಯಸ್ನೇಹಿ ಎಣ್ಣೆಯಾಗಿರುವ ಇದರ ಉಪಯೋಗ ಕೇವಲ ಆಹಾರವಾಗಿ ಅಷ್ಟೇ ಅಲ್ಲ, ಕೂದಲು ಹಾಗೂ ಚರ್ಮದ ಸೌಂದರ್ಯದಲ್ಲೂ ಪಾತ್ರವಿದೆ. ಬನ್ನಿ, ಆಲಿವ್‌ ಎಣ್ಣೆಯಿಂದ ಕೂದಲಿಗೆ ಹಾಗೂ ಚರ್ಮಕ್ಕೆ ಆಗುವ ಅನುಕೂಲಗಳ ಬಗ್ಗೆ (Olive oil benefits) ಇಲ್ಲಿದೆ ಮಾಹಿತಿ.

VISTARANEWS.COM


on

Olive Oil benefits
Koo

ಆಲಿವ್‌ಗಳು ನಮಗೆ ದೇಸೀ ನೆಲದ ಆಹಾರವಲ್ಲದಿದ್ದರೂ ಇದರ ಆರೋಗ್ಯದ ಲಾಭಗಳು ಅನೇಕ. ಹಾಗೂ ಇದು ದೇಶಗಳ ಗಡಿಯ ಹಂಗಿಲ್ಲದೆ ಇಂದು ಪ್ರಪಂಚದಾದ್ಯಂತ ಬಳಕೆಯಾಗುತ್ತಿದೆ. ಹಸಿರು ಬಣ್ಣದ ಆಲಿವ್‌ ಆಗಿರಬಹುದು, ಕಪ್ಪು ಬಣ್ಣದ್ದಾಗಿರಬಹುದು. ಗುಣದಲ್ಲಿ ಎರಡೂ ಚಿನ್ನವೇ. ಎಲುಬು ಸವೆತವನ್ನು ತಡೆಯುವ ಗುಣ ಇದರಲ್ಲಿದ್ದು, ರಕ್ತದೊತ್ತಡವನ್ನೂ ಇದು ಕಡಿಮೆಗೊಳಿಸುತ್ತದೆ. ಅಷ್ಟೇ ಅಲ್ಲ, ಕ್ಯಾನ್ಸರ್‌ ನಿರೋಧಕ ಗುಣಗಳನ್ನೂ ಇದು ಹೊಂದಿದ್ದು, ಚರ್ಮಕ್ಕೆ, ಕೂದಲಿಗೆ ಸೇರಿದಂತೆ, ಆರೋಗ್ಯಕ್ಕೆ ಒಳ್ಳೆಯ ಪರಿಣಾಮವನ್ನು ಬೀರುವ ಆಹಾರವಿದು. ಆಲಿವ್‌ ಎಣ್ಣೆಯನ್ನು ಬಹುತೇಕರು ಉತ್ತಮ ಆರೋಗ್ಯಕ್ಕಾಗಿ ತಮ್ಮ ಮನೆಗಳಲ್ಲಿ ಅಡುಗೆಗೆ ಇಂದು ಬಳಸುತ್ತಿದ್ದಾರೆ. ಹೃದಯಸ್ನೇಹಿ ಎಣ್ಣೆಯಾಗಿರುವ ಇದರ ಉಪಯೋಗ ಕೇವಲ ಆಹಾರವಾಗಿ ಅಷ್ಟೇ ಅಲ್ಲ, ಕೂದಲು ಹಾಗೂ ಚರ್ಮದ ಸೌಂದರ್ಯದಲ್ಲೂ ಪಾತ್ರವಿದೆ. ಬನ್ನಿ, ಆಲಿವ್‌ ಎಣ್ಣೆಯಿಂದ ಕೂದಲಿಗೆ ಹಾಗೂ ಚರ್ಮಕ್ಕೆ ಆಗುವ ಅನುಕೂಲಗಳನ್ನು (Olive oil benefits) ತಿಳಿಯೋಣ.

Olive Oil

ಸುಕ್ಕು ನಿವಾರಣೆ

ಆಲಿವ್‌ ಎಣ್ಣೆಯಲ್ಲಿರುವ ಪಾಲಿಫಿನಾಲ್‌ ಕಾಂಪೌಂಡ್‌ಗಳಿಂದಾಗಿ ಇದು ಆಕ್ಸಿಡೇಟಿವ್‌ ಒತ್ತಡಗಳನ್ನು ದೂರವಿರಿಸುತ್ತದೆ. ಪ್ರತಿ ನಿತ್ಯ ಆಲಿವ್‌ ಎಣ್ಣೆಯಿಂದ ಮಸಾಜ್‌ ಮಾಡುವುದರಿಂದ ಚರ್ಮದ ಮೇಲಿನ ಸುಕ್ಕು, ಕಪ್ಪು ಕಲೆಗಳು ದೂರವಾಗಿ ಚರ್ಮ ತಾಜಾ ಆಗಿ ಕಂಗೊಳಿಸುತ್ತದೆ.

ಅತ್ಯುತ್ತಮ ಮಾಯ್‌ಶ್ಚರೈಸರ್‌

ಆಲಿವ್‌ ಎಣ್ಣೆಯಲ್ಲಿ ವಿಟಮಿನ್‌ ಇ ಮತ್ತು ಎ ಹೇರಳವಾಗಿದ್ದು, ಇದು ಅತ್ಯುತ್ತಮ ಮಾಯ್‌ಶ್ಚರೈಸರ್‌ ಆಗಿ ಕೆಲಸ ಮಾಡುತ್ತದೆ. ಮುಖದ ಚರ್ಮಕ್ಕೆ ಸರಿಯಾದ ತೇವಾಂಶವನ್ನು ಒದಗಿಸಲು ಈ ಎಣ್ಣೆಯ ಮಸಾಜ್‌ ಸೂಕ್ತ. ಅಷ್ಟೇ ಅಲ್ಲ, ಇದು ಚರ್ಮವನ್ನು ಇನ್ನಷ್ಟು ಆರೋಗ್ಯಯುತವಾಗಿ ನಳನಳಿಸುವಂತೆ ಮಾಡುತ್ತದೆ.

ಕಪ್ಪು ಕಲೆ ನಿವಾರಣೆ

ಬಿಸಿಲಿಗೆ ಚರ್ಮ ಬಹುಬೇಗನೆ ಹಾಳಾಗಿತ್ತದೆ, ಕಪ್ಪುಕಲೆ, ಸುಕ್ಕಾಗುವುದು ಎಲ್ಲವೂ ಬಿಸಿಲಿನ ಝಳಕ್ಕೆ. ಆಲಿವ್‌ ಎಣ್ಣೆಯಲ್ಲಿ ಸಾಷ್ಟು ಪ್ರಮಾಣದಲ್ಲಿ ಆಂಟಿ ಆಕ್ಸಿಡೆಂಟ್‌ಗಳು ಇರುವುದರಿಂದ ಇದು ಚರ್ಮವನ್ನು ಸೂರ್ಯನ ಬಿಸಿಲಿನಿಂದಾಗುವ ಹಾನಿಯಿಂದ ತಪ್ಪಿಸುತ್ತದೆ. ನಿತ್ಯವೂ ಆಲಿವ್‌ ಎಣ್ಣೆಯಿಂದ ಮುಖ, ಕೈಕಾಲು, ಕುತ್ತಿಗೆಗೆ ಲೇಪಿಸಿ ಮಸಾಜ್‌ ಮಾಡುವುದುರಿಂದ ಉತ್ತಮ ಫಲ ಕಾಣಬಹುದು. ರಾತ್ರಿ ಮಲಗುವ ಮುಂಚೆ ಹೀಗೆ ಮಾಡಿ ಬೆಳಗ್ಗೆ ಇದನ್ನು ತೊಳೆಯಿರಿ.

image Olive Oil Benefits

ಕಜ್ಜಿ ನಿವಾರಣೆ

ಕೆಲವರಿಗೆ ಚರ್ಮದಲ್ಲಿ ತುರಿಕೆ ಇರುತ್ತದೆ. ಬಿಸಿಲಿನ ಝಳದಿಂದ ತುರಿಕೆ ಹೆಚ್ಚಾಗಿ ಚರ್ಮದ ತುಂಬ ಕಜ್ಜಿಗಳೇಳಬಹುದು. ಅಂಥ ಮಂದಿಗೆ ಈ ಎಣ್ಣೆ ಸೂಕ್ತ. ಇದು ತುರಿಕೆಯ ಪ್ರಮಾಣವನ್ನು ಕಡಿಮೆ ಮಾಡಿ, ಕಜ್ಜಿಯನ್ನು ಹೊಡೆದೋಡಿಸಿ ಚರ್ಮವನ್ನು ನಯವಾಗಿಸುತ್ತದೆ. ಮಕ್ಕಳಿಗೆ ಡಯಪರ್‌ನಿಂದಾಗುವ ಕಜ್ಜಿಗಳಿಗೂ ಈ ಎಣ್ಣೆ ಬಳಸಬಹುದು.

ಆಫ್ಟರ್‌ ಕ್ರೀಮ್‌ಗೆ ಪರ್ಯಾಯ

ಶೇವ್‌ ಮಾಡಿದ ಮೇಲೆ ತುರಿಕೆ, ಗಾಯ ಇತ್ಯಾದಿಗಳಿ ಇದ್ದಿದ್ದೇ. ಹಾಗಾಗಿ ಇದನ್ನು ಆಫ್ಟರ್‌ ಕ್ರೀಮ್‌ನ ಬದಲಾಗಿಯೂ ಬಳಸಬಹುದು. ಇದರಂದ ಚರ್ಮಕ್ಕೆ ಉತ್ತಮ ಮಾಯ್‌ಶ್ಚರೈಸರ್‌ ಸಿಗುವುದಷ್ಟೇ ಅಲ್ಲ ಇನ್‌ಫೆಕ್ಷನ್‌ ಕೂಡ ದೂರ ಉಳಿಯುತ್ತದೆ. ಕೇವಲ 2-3 ಬಿಂದು ಎಣ್ಣೆಯನ್ನು ಒದ್ದೆ ಮುಖದ ಮೇಲೆಯೇ ಹಚ್ಚಿಕೊಳ್ಳಿ, ಕೂಡಲೇ ಇದು ಚರ್ಮದ ರಂಧ್ರಗಳ ಮೂಲಕ ಹೀರಿಕೊಳ್ಳಲ್ಪಡುತ್ತದೆ.

ಇದನ್ನೂ ಓದಿ: Juices Side Effect: ಅಂಗಡಿಯಲ್ಲಿ ಸಿಗುವ ಜ್ಯೂಸ್‌ ಕುಡಿದರೆ ಏನಾಗುತ್ತದೆ?

ಹೊಟ್ಟಿನ ಸಮಸ್ಯೆ ಮಾಯ

ತಲೆಹೊಟ್ಟು ಇರುವ ಮಂದಿಗೆ ಆಲಿವ್‌ ಎಣ್ಣೆ ಬಹಳ ಒಳ್ಳೆಯದು. ವಾರಕ್ಕೆರಡು ಬಾರಿ ಆಲಿವ್‌ ಎಣ್ಣೆಯಿಂದ ಮಸಾಜ್‌ ಮಾಡಿದರೆ ಕೆಲವೇ ವಾರಗಳಲ್ಲಿ ಹೊಟ್ಟಿನ ಸಮಸ್ಯೆ ಮಾಯ.

Hair Growth Tips

ಕೂದಲಿಗೆ ಪೋಷಣೆ

ಕೂದಲು ಒರಟೊರಟಾಗಿ ಸಂಭಾಳಿಸಲು ಕಷ್ಟವಾಗುತ್ತದೆ ಎಂದಾದಲ್ಲಿ, ತಲೆಗೆ ಸ್ನಾನ ಮಾಡುವ ಒಂದೆರಡು ಗಂಟೆ ಆಲಿವ್‌ ಎಣ್ಣೆಯನ್ನು ಹಚ್ಚಿ ಮಸಾಜ್‌ ಮಾಡಿ. ಇದು ತಲೆ ಬುಡಕ್ಕೆ ಸಾಕಷ್ಟು ರಕ್ತಸಂಚಾರವನ್ನು ನೀಡಿ ಕೂದಲಿಗೆ ಉತ್ತಮ ಪೋಷಣೆ ನೀಡುತ್ತದೆ. ಕೂದಲು ನಯವಾಗುತ್ತದೆ. ಗಾಳಿಗೆ ಹಾರುವ ಕೂದಲು, ಚೆನ್ನಾಗಿ ನಯವಾಗಿ ನಿಮ್ಮ ತಲೆಯೇ ಮೇಲೆಯೇ ಕೂರುತ್ತದೆ. ಮೊಟ್ಟೆಯ ಬಿಳಿ ಲೋಳೆಯೊಂದಿಗೆ ಆಲಿವ್‌ ಎಣ್ಣೆಯನ್ನೂ ಸೇರಿಸಿ ಹೇರ್‌ಪ್ಯಾಕ್‌ ಹಾಕಿ ತಲೆಗೆ ಸ್ನಾ ಮಾಡುವುದರಿಂದ ಕೂದಲು ಫಳಪಳನೆ ಹೊಳೆಯುತ್ತದೆ. ಈ ಪೋಷಣೆ ಯಾವ ಹೇರ್‌ ಸ್ಪಾಗೂ ಕಡಿಮೆಯಿಲ್ಲ.

Continue Reading
Advertisement
Prajwal Revanna case Revanna bail plea to be heard on Monday Advocate Nagesh argument was as follows
ಕ್ರೈಂ36 mins ago

Prajwal Revanna Case: ರೇವಣ್ಣ ಜಾಮೀನು ಅರ್ಜಿ ಸೋಮವಾರಕ್ಕೆ: ಎಸ್‌ಐಟಿಗೆ ಹಿಗ್ಗಾಮುಗ್ಗಾ ತರಾಟೆ; ವಕೀಲ ನಾಗೇಶ್‌ ವಾದ ಹೀಗಿತ್ತು!

T20 World Cup 2024
ಪ್ರಮುಖ ಸುದ್ದಿ41 mins ago

T20 World Cup : ವಿಶ್ವ ಕಪ್​ಗೆ ತಂಡ ಪ್ರಕಟಿಸಿದ ಶ್ರೀಲಂಕಾ, ಸಿಎಸ್​​ಕೆ ಆಟಗಾರನಿಗೂ ಚಾನ್ಸ್​​

ಉತ್ತರ ಕನ್ನಡ51 mins ago

SSLC Result 2024: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಸಾರ್ವಭೌಮ ಗುರುಕುಲಕ್ಕೆ ಶೇ.100 ಫಲಿತಾಂಶ

Yallapur Vishwadarshana Group of institutions performed well in SSLC Result 2024
ಉತ್ತರ ಕನ್ನಡ1 hour ago

SSLC Result 2024: ಯಲ್ಲಾಪುರದ ವಿಶ್ವದರ್ಶನ ಶಿಕ್ಷಣ ಸಮೂಹ ಪ್ರೌಢಶಾಲೆಗಳ ಉತ್ತಮ ಸಾಧನೆ

women's Cricket team
ಕ್ರೀಡೆ1 hour ago

Womens Cricket Team : ಬಾಂಗ್ಲಾ ವಿರುದ್ಧ 5-0 ಕ್ಲೀನ್​ ಸ್ವೀಪ್ ಸಾಧನೆ ಮಾಡಿದ ಭಾರತದ ವನಿತೆಯರು

Mother passed SSLC exam with her son in Hassan
ಕರ್ನಾಟಕ1 hour ago

SSLC Result 2024: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಮಗನ ಜತೆ ತಾಯಿಯೂ ಪಾಸ್!

Failed in SSLC Exam Student suicide in mandya
ಮಂಡ್ಯ2 hours ago

SSLC Result 2024: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಫೇಲ್‌; ನೇಣಿಗೆ ಶರಣಾದ ವಿದ್ಯಾರ್ಥಿ

Ranveer Singh
Latest2 hours ago

Ranveer Singh: 2 ಕೋಟಿ ರೂ. ಮೌಲ್ಯದ ವಜ್ರದ ನೆಕ್ಲೇಸ್ ಧರಿಸಿ ಗಮನ ಸೆಳೆದ ರಣವೀರ್ ಸಿಂಗ್

Prajwal Revanna Case Hasanambe is going to destroy this government HD Kumaraswamy curse
ರಾಜಕೀಯ2 hours ago

Prajwal Revanna Case: ಈ ಸರ್ಕಾರವನ್ನು ಹಾಸನಾಂಬೆ ಧ್ವಂಸ ಮಾಡಲಿದ್ದಾಳೆ: ಎಚ್‌ಡಿಕೆ ಶಾಪ

Racial Comments
ಪ್ರಮುಖ ಸುದ್ದಿ2 hours ago

Racist Comment : ಭಾರತದಲ್ಲಿ ನೀಗ್ರೊಗಳಿದ್ದಾರೆ…; ಇದೀಗ ಬಂಗಾಳ ಕಾಂಗ್ರೆಸ್​​ ಅಧ್ಯಕ್ಷರ ಸರದಿ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Prajwal Revanna case Revanna bail plea to be heard on Monday Advocate Nagesh argument was as follows
ಕ್ರೈಂ36 mins ago

Prajwal Revanna Case: ರೇವಣ್ಣ ಜಾಮೀನು ಅರ್ಜಿ ಸೋಮವಾರಕ್ಕೆ: ಎಸ್‌ಐಟಿಗೆ ಹಿಗ್ಗಾಮುಗ್ಗಾ ತರಾಟೆ; ವಕೀಲ ನಾಗೇಶ್‌ ವಾದ ಹೀಗಿತ್ತು!

Prajwal Revanna Case Hasanambe is going to destroy this government HD Kumaraswamy curse
ರಾಜಕೀಯ2 hours ago

Prajwal Revanna Case: ಈ ಸರ್ಕಾರವನ್ನು ಹಾಸನಾಂಬೆ ಧ್ವಂಸ ಮಾಡಲಿದ್ದಾಳೆ: ಎಚ್‌ಡಿಕೆ ಶಾಪ

Prajwal Revanna Case DK Shivakumar alleged mastermind in 25000 pen drive allotment
ಹಾಸನ3 hours ago

Prajwal Revanna Case: 25,000 ಪೆನ್ ಡ್ರೈವ್ ಹಂಚಿಕೆಯಲ್ಲಿ ಡಿ.ಕೆ. ಶಿವಕುಮಾರ್ ಮಾಸ್ಟರ್ ಮೈಂಡ್ ಎಂದು ರಾಜ್ಯಪಾಲರಿಗೆ ದೂರು!

SSLC Result 2024 what is the reason for most of the students fail in SSLC
ಕರ್ನಾಟಕ9 hours ago

SSLC Result 2024: ಎಸ್‌ಎಸ್‌ಎಲ್‌ಸಿಯಲ್ಲಿ ಹೆಚ್ಚಿನ ಮಕ್ಕಳು ಫೇಲ್‌ ಆಗಲು ಶಿಕ್ಷಣ ಇಲಾಖೆಯ ಈ ನಿರ್ಧಾರವೇ ಕಾರಣ!

Sslc exam Result 2024
ಶಿಕ್ಷಣ9 hours ago

SSLC Result 2024 : ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಫೇಲಾದರೂ, ಕಡಿಮೆ ಅಂಕ ಬಂದರೂ ಡೋಂಟ್‌ ವರಿ; ಇನ್ನೂ ಇದೆ ಎರಡು ಚಾನ್ಸ್‌!

SSLC Result 2024 secret behind 20 percent grace marks
ಕರ್ನಾಟಕ10 hours ago

SSLC Result 2024: ಎಸ್‌ಎಸ್‌ಎಲ್‌ಸಿಯಲ್ಲಿ ಈ ಬಾರಿ ನೂರಕ್ಕೆ 25 ಅಂಕ ಪಡೆದವರೂ ಪಾಸ್! ಶೇ. 20 ಗ್ರೇಸ್ ಮಾರ್ಕ್ಸ್ ಕೊಟ್ಟಿದ್ದರ ಹಿಂದಿದೆ ಇಂಟರೆಸ್ಟಿಂಗ್ ಕತೆ!

SSLC Result 2024 78 schools get zero results in SSLC exams
ಬೆಂಗಳೂರು10 hours ago

SSLC Result 2024: ಎಸ್‌ಎಸ್‌ಎಲ್‌ಸಿ ಎಕ್ಸಾಂನಲ್ಲಿ ಸಿಕ್ಸರ್‌ ಬಾರಿಸಿದ ಗ್ರಾಮೀಣ ಪ್ರತಿಭೆಗಳು; 78 ಶಾಲೆಗಳಲ್ಲಿ ಶೂನ್ಯ ರಿಸಲ್ಟ್‌!

SSLC Result 2024 SSLC students get 20 percent grace marks but result is very poor
ಶಿಕ್ಷಣ10 hours ago

SSLC Result 2024: ಎಸ್‌ಎಸ್‌ಎಲ್‌ಸಿ ಮಕ್ಕಳಿಗೆ ಸಿಕ್ತು 20 ಪರ್ಸೆಂಟ್ ಗ್ರೇಸ್ ಮಾರ್ಕ್ಸ್‌! ಆದ್ರೂ ಫಲಿತಾಂಶ ತೀರಾ ಕಳಪೆ

SSLC Exam Result 2024 Announce
ಬೆಂಗಳೂರು12 hours ago

SSLC Result 2024: ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ; ಶೇ. 73.40 ವಿದ್ಯಾರ್ಥಿಗಳು ಪಾಸ್‌, ಉಡುಪಿ ಫಸ್ಟ್‌, ಯಾದಗಿರಿ ಲಾಸ್ಟ್‌

Dina Bhavishya
ಭವಿಷ್ಯ2 days ago

Dina Bhavishya : ಅಮಾವಾಸ್ಯೆ ದಿನ ಈ ರಾಶಿಯವರಿಗೆ ಅದೃಷ್ಟ; ಹಣ ಗಳಿಕೆಗೆ ಪುಷ್ಟಿ

ಟ್ರೆಂಡಿಂಗ್‌