Health Tips: ಈ ಹಣ್ಣು ಮತ್ತು ತರಕಾರಿಗಳನ್ನು ಎಂದಿಗೂ ಜೊತೆಯಾಗಿ ಇಡಲೇಬಾರದು! - Vistara News

ಆರೋಗ್ಯ

Health Tips: ಈ ಹಣ್ಣು ಮತ್ತು ತರಕಾರಿಗಳನ್ನು ಎಂದಿಗೂ ಜೊತೆಯಾಗಿ ಇಡಲೇಬಾರದು!

ಹಣ್ಣು ಮತ್ತು ತರಕಾರಿಗಳು ಹೆಚ್ಚು ಕಾಲ ಫ್ರೆಷ್‌ ಆಗಿ ಇರಬೇಕೆಂದರೆ ಅವುಗಳನ್ನು ಶೇಖರಿಸಿ ಇಡುವ ವಿಧಾನವೂ ಸೂಕ್ತವಾಗಿ ಇರಬೇಕಾಗುತ್ತದೆ. ಈ ಬಗ್ಗೆ (Health Tips) ಇಲ್ಲಿದೆ ಉಪಯುಕ್ತ ಮಾಹಿತಿ.

VISTARANEWS.COM


on

Fruits and Vegetables Spilling from Paper Bag
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಆಹಾರವನ್ನು ಸರಿಯಾದ ಕ್ರಮದಲ್ಲಿ ಶೇಖರಿಸಿಡುವುದೇ ನಾವು ಅಷ್ಟಾಗಿ ಗಮನ ಕೊಡದ ವಿಚಾರ. ಅಂಗಡಿಯಿಂದ ಕೊಂಡು ತಂದ ಮೇಲೆ ಒಡೆದ ಪ್ಯಾಕೆಟ್ಟುಗಳನ್ನು ಬಳಸಿ ಹಾಗೆಯೇ ಬಿಡುವುದು, ಡಬ್ಬಗಳಲ್ಲಿ ತುಂಬಿಸದೇ ಇಡುವುದು, ಸರಿಯಾದ ಡಬ್ಬದಲ್ಲಿ ಹಾಕದಿರುವುದು, ಮುಚ್ಚಳ ಸರಿಯಾಗಿ ಭದ್ರಪಡಿಸದೇ ಇರುವುದು ಅಥವಾ ಈಗ ಒಡೆದ ಪ್ಯಾಕೆಟ್ಟನ್ನು ಅಡುಗೆ ಕೋಣೆಯಲ್ಲಿ ಬಹಳ ಗಂಟೆಗಳ ಕಾಲ ಹಾಗೆಯೇ ಬಿಟ್ಟಿರುವುದು ಇತ್ಯಾದಿ ಇತ್ಯಾದಿ ತಪ್ಪುಗಳು ನಿತ್ಯವೂ ಆಗುತ್ತಲೇ ಇರುತ್ತವೆ. ಇದನ್ನು ಗಂಭೀರವಾಗಿ ನಾವು ಪರಿಗಣಿಸದೇ ಇರುವುದೇ ಆಹಾರ ವಸ್ತುಗಳು ಬಹುಬೇಗನೆ ಕೆಡುವುದು, ಹುಳ ಹಿಡಿಯುವುದು ಇತ್ಯಾದಿಗಳಿಗೆ ಆಹ್ವಾನ ನೀಡುತ್ತದೆ. ಆದರೆ ಸರಿಯಾಗಿ ಶೇಖರಿಸುವ ವಿಧಾನ ಕಲಿತುಕೊಂಡರೆ (Health Tips) ಆಹಾರದ ಬಾಳಿಕೆ ಹೆಚ್ಚಾಗುತ್ತದೆ.

Vibrant Produce Vegetables and Fruits

ಈ ಸಂಗತಿ ಮುಖ್ಯ

ಇದು ಕೇವಲ ಆಹಾರ ಧಾನ್ಯಗಳು, ಬೇಳೆಕಾಳುಗಳ ವಿಚಾರಕ್ಕೆ ಮಾತ್ರ ಸಂಬಂಧಿಸಿದ್ದಲ್ಲ, ತರಕಾರಿ ಹಣ್ಣುಗಳ ಶೇಖರಣೆಯ ವಿಚಾರಕ್ಕೂ ಸಂಬಂಧಿಸಿದ್ದೂ ಹೌದು. ಕೊಯ್ದ ಮೇಲೂ ಹಣ್ಣು ತರಕಾರಿಗಳು ಹಣ್ಣಾಗುವ, ಬೆಳೆಯುವ, ಮಾಗುವ ಪ್ರಕ್ರಿಯೆಯಲ್ಲಿ ಇರುವುದರಿಂದ ನಾವು ಇವುಗಳನ್ನು ಸರಿಯಾದ ಕ್ರಮದಲ್ಲಿ ಶೇಖರಿಸದಿದ್ದಲ್ಲಿ ಖಂಡಿತ ಬಹುಬೇಗನೆ ಹಾಳಾಗುತ್ತದೆ. ಅದರಲ್ಲೂ, ಕೆಲವು ಹಣ್ಣು ತರಕಾರಿಗಳನ್ನು ಬೇರೆಯದರ ಜೊತೆಗೆ ಸೇರಿಸಿ ಇಟ್ಟಿದ್ದಕ್ಕಾಗಿ ಬಹುಬೇಗನೆ ಕೆಡುತ್ತದೆ. ಹಲವು ಸಂಶೋಧನೆಗಳು, ತರಕಾರಿ ಹಾಗೂ ಹಣ್ಣುಗಳನ್ನು ಜೊತೆಯಾಗಿ ಶೇಖರಿಸಿಡುವುದರಿಂದ ಅತ್ಯಂತ ಹೆಚ್ಚು ಈಥೈಲೀನ್‌ ಗ್ಯಾಸ್‌ ಅನ್ನು ಉತ್ಪತ್ತಿ ಮಾಡುವುದರಿಂದ ಅವುಗಳನ್ನು ಒಟ್ಟಿಗೆ ಶೇಖರಿಸಿಡಬಾರದು ಎಂದೂ ಹೇಳಿವೆ. ಈ ಗ್ಯಾಸ್‌ ಹಣ್ಣಾಗುವ ಪ್ರಕ್ರಿಯೆಯನ್ನು ಇನ್ನಷ್ಟು ತೀವ್ರಗೊಳಿಸುತ್ತವೆ. ಹಾಗಾಗಿ, ಹೆಚ್ಚು ಕಾಲ ಕೆಡದೆ ಇಡಲು ಯಾವೆಲ್ಲ ಹಣ್ಣು ತರಕಾರಿಗಳನ್ನು ಜೊತೆಯಾಗಿ ಶೇಖರಿಸಿಡುವ ತಪ್ಪನ್ನು ಮಾಡಬಾರದು ಎಂಬುದನ್ನು ನೋಡೋಣ.

ಈರುಳ್ಳಿ ಹಾಗೂ ಆಲೂಗಡ್ಡೆ

ಇವೆರಡನ್ನೂ ಫ್ರಿಡ್ಜ್‌ನಲ್ಲಿ ಇಡದ ಕಾರಣ ಬಹುತೇಕರು ತಮ್ಮ ಅಡುಗೆ ಕೋಣೆಯಲ್ಲಿ ಜೊತೆಯಾಗಿರಿಸುವುದುದೇ ಹೆಚ್ಚು. ಆದರೆ, ಇವೆರಡನ್ನೂ ಜೊತೆಯಾಗಿರಿಸಿದರೆ, ಈಥೈಲೀನ್‌ ಗ್ಯಾಸ್‌ ಉತ್ಪತ್ತಿಯಾಗಿ ಬಹುಬೇಗನೆ ಆಲೂಗಡ್ಡೆಯಲ್ಲಿ ಮೊಳಕೆಗಳೇಳುತ್ತವೆ. ಜೊತೆಗೆ ಬೇಗನೆ ಕೊಳೆತುಹೋಗುವುದೂ ಹೆಚ್ಚು.

ಟೊಮೆಟೋ ಹಾಗೂ ಸೌತೆಕಾಯಿ

ಟೊಮೆಟೋ ಹಾಗೂ ಸೌತೆಕಾಯಿಯನ್ನು ಜೊತೆಯಾಗಿ ಇಡಬೇಡಿ. ಈ ಎರಡೂ ತರಕಾರಿಗಳ ಮಾಗುವಿಕೆ ಅಥವಾ ಹಣ್ಣಾಗುವಿಕೆ ಪ್ರಕ್ರಿಯೆ ಒಂದರ ಮೇಲೆ ಮತ್ತೊಂದರ ಪ್ರಭಾವ ಬೀರುವ ಸಂಭವ ಹೆಚ್ಚಿರುವುರಿಂದ ಬಹುಬೇಗನೆ ಎರಡೂ ಹಾಳಾಗಬಹುದು. ಸೌತೆಕಾಯಿ ಹೆಚ್ಚು ತೇವಾಂಶದ ತರಕಾರಿಯಾದ್ದರಿಂದ ಇದರಿಂದಾಗಿ ಟೊಮೇಟೋ ಬಹುಬೇಗನೆ ಹಾಳಾಗಬಹುದು. ಸೌತೆಕಾಯಿಯನ್ನು ಫ್ರಿಡ್ಜ್‌ನಲ್ಲೂ, ಟೊಮೆಟೋವನ್ನು ಹೊರಗೂ ಇಡಬಹುದು.

ಸೇಬು ಹಾಗೂ ಕ್ಯಾರೆಟ್‌

ಕ್ಯಾರೆಟ್‌ ಹಾಗೂ ಸೇಬು ಹಣ್ಣನ್ನು ಜೊತೆಯಾಗಿಸಲು ಹೊರಡಬೇಡಿ. ಸೇಬು ಈಥೈಲೀನ್‌ ಗ್ಯಾಸ್‌ ಬಿಡುಗಡೆ ಮಾಡುವ ಮೂಲಕ ಕ್ಯಾರೆಟ್ಟನ್ನು ಬಹುಬೇಗನೆ ಹಾಳಾಗುವಂತೆ ಮಾಡಬಹುದು. ಕ್ಯಾರೆಟ್‌ ತನ್ನ ಕ್ರಿಸ್ಪೀನೆಸ್‌ ಕಳೆದುಕೊಂಡು ಮೆತ್ತಗಾಗಿ ಹಾಳಾಗುತ್ತದೆ.

ಪೀಚ್‌ ಹಾಗೂ ಬಾಳೆಹಣ್ಣು

ಪೀಚ್‌ ಹಣ್ಣು ಹಾಗೂ ಬಾಳೆಹಣ್ಣನ್ನು ಜೊತೆಯಾಗಿ ಇಟ್ಟರೆ ಪೀಚ್‌ ಹಣ್ಣು ಬಹುಬೇಗನೆ ಮೆತ್ತಗಾಗಿ ಹಣ್ಣಾಗಿ ಹಾಳುತ್ತದೆ. ಇವೆರಡನ್ನೂ ಪ್ರತ್ಯೇಕವಾಗಿ ಇಡಬೇಕು.

ಬ್ಲೂಬೆರ್ರಿ ಹಾಗೂ ಸ್ಟ್ರಾಬೆರ್ರಿ

ಈ ಎರಡೂ ಬಗೆಯ ಬೆರ್ರಿಗಳು ಒಂದೇ ಬಗೆಯದ್ದಾದ್ದರಿಂದ ಜೊತೆಗೇ ಇಟ್ಟರೆ ಏನೂ ಆಗದು ಎಂದು ಅಂದುಕೊಂಡರೆ ಅದು ಸುಳ್ಳಾದೀತು. ಇವೆರಡನ್ನೂ ಜೊತೆಗಿಟ್ಟರೆ ಬ್ಲೂಬೆರ್ರಿ ಸ್ಟ್ರಾಬೆರ್ರಿಯ ಹೊಡೆತಕ್ಕೆ ಮೆತ್ತಗಾಗಿ, ಅಪ್ಪಚ್ಚಿಯಾಗಿ ಹಾಳಾಗಿಬಿಡುತ್ತದೆ.

ಇದನ್ನೂ ಓದಿ: Healthy Cooking Tips: ರಾಜ್ಮಾ, ಚೆನ್ನಾದಂತಹ ಕಾಳುಗಳ ಅಡುಗೆಯಿಂದ ಹೊಟ್ಟೆಯುಬ್ಬರವೇ? ಹೀಗೆ ಮಾಡಿ!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಆಹಾರ/ಅಡುಗೆ

Summer Food Tips: ಬೇಸಿಗೆಯಲ್ಲಿ ನಮ್ಮ ದೇಹವನ್ನು ತಂಪಾಗಿರಿಸುವ ಸರಳ ಆಹಾರಗಳಿವು!

ಹೊರಗೆ ಕಾಲಿಟ್ಟರೆ ಸಾಕು, ಸ್ನಾನ ಮಾಡಿದಂತೆ ಬೆವರಿನಿಂದಲೇ ತೊಯ್ದು ಹೋಗುವ ಮಂದಿ ಬಿಸಿಲನ್ನು ನೋಡಿ ಉಸ್ಸಪ್ಪ ಎನ್ನುತ್ತಿದ್ದಾರೆ. ಇಂತಹ ಬಿಸಿಲಿನ ವಿರುದ್ಧ ನಮ್ಮ ದೇಹವನ್ನು ಶಕ್ತವನ್ನಾಗಿ ಮಾಡಲು, ದೇಹವನ್ನು ತಂಪಾಗಿರಿಸಲು ಸೂಕ್ತ ಆಹಾರ ಸೇವನೆಯೂ ಮುಖ್ಯ. ಯಾವೆಲ್ಲ ಸರಳ ಆಹಾರಕ್ರಮ ನಮ್ಮ ದೇಹವನ್ನು ತಂಪಾಗಿರಿಸುತ್ತದೆ ಎಂಬುದನ್ನು ನೋಡೋಣ. ಈ ಆಹಾರ ಸೇವನೆಯಿಂದ ಬೇಸಿಗೆಯಲ್ಲಿ ನೀವು ಅಸಿಡಿಟಿ, ತಲೆಸುತ್ತು, ನಿತ್ರಾಣ, ನಿದ್ರಾಹೀನತೆ, ಹಸಿವಿನ ಕೊರತೆಯಂತಹ (summer food tips) ಸಮಸ್ಯೆಗಳಿಂದಲೂ ಪಾರಾಗಬಹುದು.

VISTARANEWS.COM


on

Summer Food Tips
Koo

ಬಹಳಷ್ಟು ಮಂದಿಯ ಬಾಯಿಯಲ್ಲಿ ಈಗ ಬರುವ ಮಾತು ಒಂದೇ: ಏನು ಸೆಖೆಯಪ್ಪಾ ಈ ಬಾರಿ! ಸೂರ್ಯ ಉದಯಿಸಿದ ಕೆಲವೇ ಗಂಟೆಗಳಲ್ಲಿ ಧಗಧಗಿಸಿ ಉರಿದು ಈ ಬಾರಿಯ ಬಿಸಿಲನ್ನು ಇನ್ನಷ್ಟು ತೀವ್ರಗೊಳಿಸಿದ್ದು ಸುಳ್ಳಲ್ಲ. ಬೆಂಗಳೂರಿಗರೂ ಕೂಡ ಈ ಬಾರಿಯ ಸೆಖೆಯಿಂದ ತತ್ತರಿಸಿ ಹೋಗಿದ್ದಾರೆ. ಹೊರಗೆ ಕಾಲಿಟ್ಟರೆ ಸಾಕು, ಸ್ನಾನ ಮಾಡಿದಂತೆ ಬೆವರಿನಿಂದಲೇ ತೊಯ್ದು ಹೋಗುವ ಮಂದಿ ಬಿಸಿಲನ್ನು ನೋಡಿ ಉಸ್ಸಪ್ಪ ಎನ್ನುತ್ತಿದ್ದಾರೆ. ಇಂತಹ ಬಿಸಿಲಿನ ವಿರುದ್ಧ ನಮ್ಮ ದೇಹವನ್ನು ಶಕ್ತವನ್ನಾಗಿ ಮಾಡಲು, ದೇಹವನ್ನು ತಂಪಾಗಿರಿಸಲು ಸೂಕ್ತ ಆಹಾರ (summer food tips) ಸೇವನೆಯೂ ಕೂಡ ಮುಖ್ಯ. ಹಾಗೆ ನೋಡಿದರೆ ನಾವು ಸಾಂಪ್ರದಾಯಿಕ ಶೈಲಿಯತ್ತ ಮುಖ ಮಾಡಿದರೆ ನಮ್ಮ ಪೂರ್ವಜರು, ಹಿರಿಯರು, ಋತುಮಾನಕ್ಕೆ ಅನುಗುಣವಾಗಿ ಆಹಾರವನ್ನು ತೆಗೆದುಕೊಳ್ಳುವ ಬಗೆಯನ್ನು ನಮಗೆ ದಾಟಿಸಿದ್ದಾರೆ. ಆದರೆ ಬಹಳಷ್ಟು ಬಾರಿ ಅವರ ಅಂತಹ ಸಂದೇಶವನ್ನು ನಾವು ನಿರಾಕರಿಸಿ ನಮ್ಮದೇ ಹಾದಿಯಲ್ಲಿ ಸಾಗಿದ್ದೂ ಕೂಡ ಇಂತಹ ಸಮಸ್ಯೆಗಳಿಗೆ ಕಾರಣವೇನೋ ಅನ್ನಬಹುದು. ನಾವು ಎಸಿ ಸ್ವಿಚ್‌ ಆನ್‌ ಮಾಡಿ ದೇಹವನ್ನು ಹೊರಗಿನಿಂದ ತಂಪಾಗಿಸಬಹುದು ನಿಜವೇ ಆಗಿದ್ದರೂ, ಒಳಗಿನಿಂದ ದೇಹವನ್ನು ತಂಪಾಗಿರಿಸಲು ಕೆಲವು ಆಹಾರ ಸೇವನೆಯ ಮೊರೆ ಹೋಗಲೇಬೇಕು. ಬನ್ನಿ, ಯಾವೆಲ್ಲ ಸರಳ ಆಹಾರಕ್ರಮ ನಮ್ಮ ದೇಹವನ್ನು ತಂಪಾಗಿರಿಸುತ್ತದೆ ಎಂಬುದನ್ನು ನೋಡೋಣ. ಈ ಆಹಾರ ಸೇವನೆಯಿಂದ ಬೇಸಿಗೆಯಲ್ಲಿ ನೀವು ಅಸಿಡಿಟಿ, ತಲೆಸುತ್ತು, ನಿತ್ರಾಣ, ನಿದ್ರಾಹೀನತೆ, ಹಸಿವಿನ ಕೊರತೆಯಂತ ಸಮಸ್ಯೆಗಳ ವಿರುದ್ಧ ಹೋರಾಡಿ ಫಲವನ್ನೂ ಕಾಣಬಹುದು.

Citrus fruits

ಸ್ಥಳೀಯ ಹಣ್ಣುಗಳು

ಬೆಳಗ್ಗಿನ ತಿಂಡಿಯ ನಂತರ ಮಧ್ಯಾಹ್ನದೂಟದ ಮೊದಲು ಏನಾದರೂ ಸ್ನ್ಯಾಕ್ಸ್‌ ತಿನ್ನುವ ಅಭ್ಯಾಸ ನಿಮಗಿದೆ ಎಂದಾದಲ್ಲಿ ಬೇಸಿಗೆಯಲ್ಲಿ ನಿಮ್ಮ ಸ್ಥಳೀಯ ಹಣ್ಣುಗಳನ್ನು ತಿನ್ನಲು ಮರೆಯಬೇಡಿ. ಸ್ಥಳೀಯವಾಗಿ ಸಿಗುವ, ಬೇಸಿಗೆಯಲ್ಲಿ ಮಾತ್ರ ಲಭ್ಯವಿರುವ ಹಣ್ಣುಗಳನ್ನು ಹೊಟ್ಟೆಗಿಳಿಸಿದರೆ ನಿಮ್ಮ ದೇಹ ತಂಪಾಗುತ್ತದೆ. ಬಿಸಿಲಿನಲ್ಲಿ ಓಡಾಡಿದರೂ ದೇಹಕ್ಕೆ ಶಕ್ತಿ ಸಾಮರ್ಥ್ಯ ಬರುತ್ತದೆ. ನಿತ್ರಾಣಗೊಳ್ಳುವ, ತಲೆಸುತ್ತಿ ಬವಳಿ ಬೀಳುವಂಥ ಸಮಸ್ಯೆಗಳು ನಿಮ್ಮನ್ನು ಕಾಡದು. ಉದಾಹರಣೆಗೆ, ತಾಳೆಹಣ್ಣು ಅಥವಾ ತಾಟಿನಿಂಗು, ಕಲ್ಲಂಗಡಿ ಹಣ್ಣು, ಖರ್‌ಬೂಜ, ಸೌತೆಕಾಯಿ ಇತ್ಯಾದಿಗಳ ಸೇವನೆ ಚೈತನ್ಯ ನೀಡುತ್ತದೆ. ಯಾವುದೇ ರಸಭರಿತವಾಗಿರುವ ಹಣ್ಣು ನೀವು ತಿನ್ನಬಹುದು. ಇವು ನಿಮ್ಮ ದೇಹವನ್ನು ಅಷ್ಟೇ ಅಲ್ಲ, ಮನಸ್ಸನ್ನೂ ತಂಪಾಗಿಯೇ ಇರಿಸುತ್ತದೆ. ಯಾವಾಗಲೂ ತಾಜಾ ಆಗಿರಿಸಲು ಸಹಾಯ ಮಾಡುತ್ತದೆ.

Health Benefits Of Curd Rice

ಮೊಸರನ್ನ

ಬಹಳಷ್ಟು ಮಂದಿ ಬೇಸಿಗೆಯಲ್ಲಿ ಹಸಿವನ್ನೇ ಕಳೆದುಕೊಳ್ಳುತ್ತಾರೆ. ಏನಾದರೂ ಕುಡಿದರೆ ಸಾಕು, ತಿನ್ನುವ ಮನಸ್ಸಾಗುವುದೇ ಇಲ್ಲ ಎನ್ನುತ್ತಾರೆ. ಬೇಸಿಗೆಯ ಬಿಸಿಲಿಗೆ ಇದು ಸಹಜ ಕೂಡಾ. ಆದರೆ, ಇಂತಹ ಸಂದರ್ಭ ಬೇಸಿಗೆಯಲ್ಲಿ ನಿಮಗೆ ಒಳ್ಳೆಯದನ್ನೇ ಬಯಸುವ ಅತ್ಯುತ್ತಮ ಮಧ್ಯಾಹ್ನದೂಟ ಎಂದರೆ ಅದು ಮೊಸರನ್ನ. ಮೊಸರನ್ನಕ್ಕೆ ಒಂದಿಷ್ಟು ಉಪ್ಪಿನಕಾಯಿ, ಹಪ್ಪಳ ಸೇರಿಸಿಕೊಂಡು ತಿಂದರೆ ಸ್ವರ್ಗಸುಖ. ಇದಲ್ಲವಾದರೆ ಗಂಜಿ ಉಪ್ಪಿನಕಾಯಿಯ ಊಟವಾದರೂ ಸರಿ, ಒಡನೆಯೇ ದೇಹಕ್ಕೆ ಶಕ್ತಿ ಚೈತನ್ಯವನ್ನು ನೀಡುತ್ತದೆ. ಹೊಟ್ಟೆಯನ್ನು ತಂಪಾಗಿರಿಸುತ್ತದೆ. ಮೊಸರನ್ನ ಒಳ್ಳೆಯ ಪ್ರೊಬಯಾಟಿಕ್‌ ಕೂಡಾ ಆಗಿರುವುದರಿಂದ ಇದು ಉತ್ತಮ ಅನುಭವ ನೀಡುತ್ತದೆ. ಹೊಟ್ಟೆಗೆ ಆರಾಮದಾಯಕ ಆಹಾರದ ಅನುಭವ ನೀಡುತ್ತದೆ.

ಇದನ್ನೂ ಓದಿ: Summer Health Tips: ಬಿಸಿಲ ಬೇಗೆ ತಣಿಸಿಕೊಳ್ಳಲು ಬೇಕು ನೆಲ್ಲಿಕಾಯಿ!

ಗುಲ್ಕಂಡ್‌ ನೀರು

ಬೇಸಿಗೆಯಲ್ಲಿ ಅಸಿಡಿಟಿ, ಹೊಟ್ಟೆಯಲ್ಲಿ ಬೆಂಕಿ ಬಿದ್ದಂತೆ ಉರಿ ಇತ್ಯಾದಿ ಸಮಸ್ಯೆಗಳು ಕಾಣಿಸುತ್ತಿದ್ದರೆ ಹಾಗೂ ನಿಮ್ಮ ನಿದ್ರೆಯ ಗುಣಮಟ್ಟ, ಕಣ್ಣು ಊದಿದಂತಾಗುವುದು, ಕೈಕಾಲು ಜೋಮು ಹಿಡಿದಂತಾಗುವುದು, ಅಲ್ಲಲ್ಲಿ ನೋವು, ಉರಿಯೂತ ಇತ್ಯಾದಿ ಸಮಸ್ಯೆಗಳಿಗೆ ಪರಿಹಾರ ಬೇಕೆಂದರೆ ಒಂದು ಚಮಚ ಗುಲ್ಕಂಡ್‌ ಅನ್ನು ನೀರಿನಲ್ಲಿ ಬೆರೆಸಿ ಮಲಗುವ ಮುನ್ನ ಕುಡಿಯಿರಿ. ಈ ಗುಲಾಬಿಯ ದಳದ ಡ್ರಿಂಕ್‌ ನಿಮ್ಮ ಈ ಸಮಸ್ಯೆಗಳಿಂದ ಬಚಾವು ಮಾಡುವುದಷ್ಟೇ ಅಲ್ಲ, ಒಂದು ರಿಲ್ಯಾಕ್ಸ್‌ ಅನುಭವವನ್ನೂ ನೀಡುತ್ತದೆ.

Continue Reading

ಲೈಫ್‌ಸ್ಟೈಲ್

Weight Loss Tips Kannada: ಈ ಐದರಲ್ಲಿ ಒಂದು ಜ್ಯೂಸ್‌ ಕುಡಿಯುತ್ತಿದ್ದರೂ ಸಾಕು, ನಿಮ್ಮ ದೇಹ ತೂಕ ಇಳಿಯುತ್ತದೆ!

ಒಮ್ಮೆ ಹೆಚ್ಚಾದ ತೂಕವನ್ನು ನಿಯಂತ್ರಿಸುವುದು ಬಹು ಕಷ್ಟ. ಆದರೆ ನಿತ್ಯ ಈ ಐದು ಪಾನೀಯಗಳನ್ನು ಸೇವಿಸುವುದರಿಂದ ಉತ್ತಮ ಆರೋಗ್ಯದೊಂದಿಗೆ ದೇಹದ ತೂಕ ನಷ್ಟವನ್ನು (Weight Loss Tips Kannada) ಸುಲಭವಾಗಿ ಮಾಡಬಹುದು. ತೂಕ ಇಳಿಸುವ ಸುಲಭ ವಿಧಾನಗಳ ಪರಿಚಯ ಇಲ್ಲಿದೆ.

VISTARANEWS.COM


on

By

Weight Loss Tips kannada
Koo

ದೇಹದ ತೂಕವನ್ನು ಸಮತೋಲನದಲ್ಲಿ ಇರಿಸುವುದು ಸುಲಭದ ಕೆಲಸವೇನಲ್ಲ. ಅದಕ್ಕಾಗಿ ನಾವು ತಿನ್ನುವ ಆಹಾರ (food), ನಿತ್ಯದ ದೈಹಿಕ ಚಟುವಟಿಕೆ (exercise) ಕೂಡ ಕಾರಣವಾಗುತ್ತದೆ. ಒಮ್ಮೆ ತೂಕ ಹೆಚ್ಚಾದರೆ ಅದನ್ನು ಇಳಿಸುವುದು ಸುಲಭದ ಪ್ರಕ್ರಿಯೆಯಲ್ಲ. ದೇಹದ ತೂಕ ಹೆಚ್ಚಳವು ಸಾಮಾನ್ಯವಾಗಿ ಆತಂಕ ಉಂಟು ಮಾಡುತ್ತದೆ. ಆದರೆ ಸರಿಯಾದ ಆಹಾರ ಮತ್ತು ದೈಹಿಕ ಚಟುವಟಿಕೆಯಿಂದ ದೇಹದ ತೂಕವನ್ನು ನಿಯಂತ್ರಿಸಿ (Weight Loss Tips Kannada) ಮತ್ತೆ ಹಿಂದಿನಂತೆ ಸ್ಮಾರ್ಟ್ ಆಂಡ್ ಸ್ಲಿಮ್ (smart and slim) ಆಗಲು ಸಾಧ್ಯವಿದೆ.

ತೂಕ ಇಳಿಸುವ ಪ್ರಕ್ರಿಯೆಯಲ್ಲಿ ಒಂದು ಆಹಾರದ ಸಲಹೆಯನ್ನು ನಿತ್ಯ ಪಾಲಿಸಿದರೆ ಆರೋಗ್ಯವಾಗಿಯೂ ಇರಬಹುದು ಮತ್ತು ದೇಹದ ತೂಕವನ್ನು ಸಮತೋಲನದಲ್ಲಿಯೂ ಇರಿಸಬಹುದು. ನಿತ್ಯವೂ ಬೆಳಗ್ಗೆ ಖಾಲಿ ಹೊಟ್ಟೆಗೆ ಕೆಲವು ಫ್ರೆಶ್ ಜ್ಯೂಸ್‌ಗಳನ್ನು ಕುಡಿಯುವುದರಿಂದ ದೇಹಕ್ಕೆ ಬೇಕಾದ ಫೈಬರ್, ಖನಿಜಾಂಶ ಮತ್ತು ವಿಟಮಿನ್‌ ಗಳನ್ನು ಪಡೆಯಬಹುದು. ಅಲ್ಲದೇ ಇದು ಚಯಾಪಚಯ ಕ್ರಿಯೆಯನ್ನು ಹೆಚ್ಚಿಸಿ ಆರೋಗ್ಯವನ್ನು ಸುಸ್ಥಿತಿಯಲ್ಲಿ ಇಡುತ್ತದೆ. ದೇಹದ ತೂಕ ಇಳಿಸಬೇಕು ಎನ್ನುವ ಯೋಜನೆ ಇದ್ದರೆ ನಿತ್ಯವೂ ಕುಡಿಯಬೇಕಾದ ಕೆಲವು ಅದ್ಭುತ ಜ್ಯೂಸ್‌ ಗಳಿವೆ.


ಕೊತ್ತಂಬರಿ ನೀರು

ಖಾಲಿ ಹೊಟ್ಟೆಯಲ್ಲಿ ಬೆಳಗ್ಗೆ ಒಂದು ಲೋಟ ಕೊತ್ತಂಬರಿ ಸೊಪ್ಪಿನ ನೀರನ್ನು ಸೇವಿಸಿ. ಕೊತ್ತಂಬರಿ ನೈಸರ್ಗಿಕ ಮೂತ್ರವರ್ಧಕವಾಗಿ ಕಾರ್ಯನಿರ್ವಹಿಸುತ್ತದೆ, ದೇಹದಲ್ಲಿ ನೀರಿನ ಧಾರಣವನ್ನು ಕಡಿಮೆ ಮಾಡಲು ಇದು ಸಹಾಯ ಮಾಡುತ್ತದೆ. ಯಕೃತ್ತಿನ ಆರೋಗ್ಯ ಮತ್ತು ಇನ್ಸುಲಿನ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಚಯಾಪಚಯವನ್ನು ಧನಾತ್ಮಕವಾಗಿ ವೃದ್ಧಿಸುತ್ತದೆ.


ನಿಂಬೆ ನೀರು

ತೂಕ ನಷ್ಟ ಮಾಡಬೇಕು ಎಂದು ಬಯಸುವವರು ನಿಂಬೆ ನೀರಿನ ಬಗ್ಗೆ ಸಾಕಷ್ಟು ಕೇಳಿರುತ್ತಾರೆ. ಆದರೆ ಬಹುತೇಕ ಮಂದಿ ಪ್ರಯೋಗ ಮಾಡಿರುವುದಿಲ್ಲ. ಮಾಡಿದ್ದರೂ ಒಂದೆರಡು ದಿನ ಮಾಡಿ ಸುಮ್ಮನಾಗಿರುತ್ತಾರೆ. ನಿಂಬೆ ನೀರು ತೂಕವನ್ನು ಅತ್ಯಂತ ವೇಗವಾಗಿ ನಷ್ಟ ಮಾಡುತ್ತದೆ. ಇದು ದೇಹದಲ್ಲಿ ಚಯಾಪಚಯ ಕ್ರಿಯೆಯನ್ನು ವೃದ್ಧಿಸುತ್ತದೆ.


ನೆಲ್ಲಿಕಾಯಿ ಜ್ಯೂಸ್

ನೆಲ್ಲಿಕಾಯಿ ಚಯಾಪಚಯವನ್ನು ಉತ್ತೇಜಿಸಲು ಮತ್ತು ಜೀರ್ಣಕ್ರಿಯೆಯ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ತ್ವರಿತವಾಗಿ ತೂಕವನ್ನು ಕಳೆದುಕೊಳ್ಳಲು ಬಯಸುವವರು ಆರೋಗ್ಯಕರ ಚಯಾಪಚಯವನ್ನು ಹೊಂದಿರುವುದು ಅಗತ್ಯ. ನೈಸರ್ಗಿಕ ಸಕ್ಕರೆಯ ರೂಪದಲ್ಲಿ ಒಂದು ಹನಿ ಜೇನುತುಪ್ಪವನ್ನು ಸೇರಿಸಿ ಸೇವಿಸಿದರೆ ಅದು ದಿನವಿಡೀ ನಮ್ಮನ್ನು ಶಕ್ತಿಯುತವಾಗಿರಿಸುತ್ತದೆ.


ಹಾಗಲಕಾಯಿ ಜ್ಯೂಸ್

ಹಾಗಲಕಾಯಿಯ ರಸವು ತೂಕ ನಷ್ಟಕ್ಕೆ ಉತ್ತಮವಾದ ಕೊಬ್ಬನ್ನು ಸುಡುವ ರಸಗಳಲ್ಲಿ ಒಂದಾಗಿದೆ. ಹಾಗಲಕಾಯಿ ಜ್ಯೂಸ್ ಅನ್ನು ನಿಯಮಿತವಾಗಿ ಕುಡಿಯುವುದರಿಂದ ಚಯಾಪಚಯ ಕ್ರಿಯೆಯಲ್ಲಿ ಸುಧಾರಣೆಯಾಗುತ್ತದೆ. ಇದು ಕಡಿಮೆ ಕ್ಯಾಲೋರಿಗಳನ್ನು ಹೊಂದಿದೆ. ತೂಕವನ್ನು ಕಳೆದುಕೊಳ್ಳಲು ಸಾಕಷ್ಟು ಪ್ರಯೋಜನಕಾರಿಯಾಗಿದೆ.


ಇದನ್ನೂ ಓದಿ: Blood Pressure: ರಕ್ತದೊತ್ತಡ ನಿಯಂತ್ರಿಸಲು ಈ ಆಹಾರಗಳು ಸೂಕ್ತ

ಸೌತೆಕಾಯಿ ಜ್ಯೂಸ್

ನೀರು ಸಮೃದ್ಧವಾಗಿರುವ ಕಡಿಮೆ ಕ್ಯಾಲೋರಿಗಳನ್ನು ಹೊಂದಿರುವ ಸೌತೆಕಾಯಿ ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಅದ್ಭುತವಾದ ಆಹಾರ. ಇದರಲ್ಲಿರುವ ಅತಿಯಾದ ನೀರು ಮತ್ತು ನಾರಿನಂಶವು ನಿಮ್ಮನ್ನುದೀರ್ಘಕಾಲದವರೆಗೆ ಹಸಿವನ್ನು ತಡೆಯಲು ಸಹಾಯ ಮಾಡುತ್ತದೆ. ಇದರಿಂದಾಗಿ ಅನಗತ್ಯ ಕಡುಬಯಕೆಗಳನ್ನು ನಿಯಂತ್ರಿಸಿ ದೇಹದ ತೂಕ ನಿರ್ವಹಣೆ ಮಾಡಬಹುದು.

Continue Reading

ಆರೋಗ್ಯ

No Diet Day: ಬೇಕಾಬಿಟ್ಟಿ ಡಯಟ್‌ ಮಾಡಿದರೆ ಏನಾಗುತ್ತದೆ? ಈ ಸಂಗತಿ ತಿಳಿದಿರಲಿ

ಹಲವರು ತಪ್ಪು ಸಲಹೆಗಳಿಂದ ಡಯಟ್‌ ಮಾಡಲು ಹೋಗಿ ಬೇಗ ತೂಕ ಇಳಿಸಿಕೊಳ್ಳುವ ಆಹಾರ ಕ್ರಮಗಳನ್ನು ಅನುಸರಿಸುತ್ತಾರೆ. ಇದರಿಂದ ತೂಕ ಕಡಿಮೆಯಾಗುವ ಬದಲು ಆಸ್ಪತ್ರೆಗೆ ಸೇರಬೇಕಾದ ಪರಿಸ್ಥಿತಿ ಎದುರಾಗುತ್ತದೆ. ಡಯಟ್ ಮಾಡುವುದು ಮುಖ್ಯ, ಆದರೆ ಪರಿಶೀಲಿಸದೆ ವಾಟ್ಸಾಪ್ ಅಥವಾ ಬೇರೆ ಎಲ್ಲೋ ಕೇಳಿದ ಮಾಹಿತಿಯನ್ನು ಅನುಸರಿಸುವುದಕ್ಕಿಂತ, ನಿಪುಣ ಆಹಾರ ತಜ್ಞರು ಅಥವಾ ವೈದ್ಯರ ಶಿಫಾರಸ್ಸುಗಳನ್ನು ಪಾಲಿಸುವುದು ಮುಖ್ಯವಾಗಿರುತ್ತದೆ. ಈ ಕುರಿತು (No Diet Day) ತಜ್ಞ ವೈದ್ಯರ ಸಲಹೆ ಇಲ್ಲಿದೆ.

VISTARANEWS.COM


on

No Diet Day
Koo

ಡಯಟ್‌ ಎಂಬುದು ಇಂದಿನ ಜೀವನಶೈಲಿಯ ಭಾಗವಾಗಿ ಮಾರ್ಪಟ್ಟಿದೆ. ಏನು ತಿನ್ನಬೇಕು? ಏಷ್ಟು ತಿನ್ನಬೇಕು..? ಎಂಬುದರ ಕುರಿತಂತೆ ತರಹೇವಾರಿ ಪುಕ್ಕಟೆ ಸಲಹೆಗಳು ಇಂಟರ್‌ನೆಟ್‌ ತುಂಬಾ ಹರದಾಡುತ್ತವೆ. ಇಂಥ ಸಮಯದಲ್ಲಿ ಹಲವರು ತಪ್ಪು ಸಲಹೆಗಳಿಂದ ಬೇಗ ತೂಕ ಇಳಿಸಿಕೊಳ್ಳುವ ಆಹಾರ ಕ್ರಮಗಳನ್ನು ಅನುಸರಿಸುತ್ತಾರೆ, ಇದರಿಂದ ತೂಕ ಕಡಿಮೆಯಾಗುವ ಬದಲು ಆಸ್ಪತ್ರೆಗೆ ಸೇರಬೇಕಾದ ಪರಿಸ್ಥಿತಿ ಎದುರಾಗುತ್ತದೆ. ಡಯಟ್ ಮಾಡುವುದು ಮುಖ್ಯ, ಆದರೆ ಪರಿಶೀಲಿಸದೆ ವಾಟ್ಸಾಪ್ ಅಥವಾ ಬೇರೆ ಎಲ್ಲೋ ಕೇಳಿದ ಮಾಹಿತಿಯನ್ನು ಅನುಸರಿಸುವುದಕ್ಕಿಂತ, ನಿಪುಣ ಆಹಾರ ತಜ್ಞರು ಅಥವಾ ವೈದ್ಯರ ಶಿಫಾರಸ್ಸುಗಳನ್ನು ಪಾಲಿಸುವುದು (No Diet Day) ಮುಖ್ಯವಾಗಿರುತ್ತದೆ.

Girl having a cheat day

ಪ್ರತಿ ವರ್ಷ ಮೇ 6 ರಂದು ಅಂತಾರಾಷ್ಟ್ರೀಯ ನೋ ಡಯಟ್ ದಿನವನ್ನು ಆಚರಿಸಲಾಗುತ್ತದೆ. ಈ ಮೂಲಕ ಉತ್ತಮ ಆಹಾರ ಸೇವನೆಯೊಂದಿಗೆ ಆರೋಗ್ಯಕರ ಜೀವನಶೈಲಿಯನ್ನು ರೂಢಿಸಿಕೊಳ್ಳಲು ಪ್ರೇರಣೆ ನೀಡುವುದಾಗಿದೆ. ಈ ಕುರಿತಂತೆ ಕಿಂಡರ್‌ ಆಸ್ಪತ್ರೆಯ ಡಯಟಿಷಿಯನ್ ತಜ್ಞೆ ಆಗಿರುವ ಡಾ. ಸಂಜನಾ ಪ್ರೇಮಲಾಲ್‌ ಮಾತನಾಡಿ, ಎಲ್ಲದಕ್ಕೂ ಡಯಟ್‌ ನೆಪವೊಡ್ಡಿ ನಿರಾಕರಿಸುವುದಕ್ಕಿಂತ ಸಮತೋಲಿತ ಪೋಷಣೆಯುಳ್ಳ ಆಹಾರ ಸೇವನೆಯ ಬಗ್ಗೆ ಈ ದಿನ ಅರಿವು ಮೂಡಿಸುವುದಾಗಿದೆ.
ಸಾಮಾನ್ಯವಾಗಿ ಬಹುಪಾಲು ಜನರ ಡಯಟ್‌ ಕೆಲ ದಿನ, ತಿಂಗಳು ಅವಧಿಗೆ ಮಾತ್ರ ಸೀಮಿತವಾಗಿರುತ್ತದೆ. ತೂಕ ಇಳಿಸಿಕೊಳ್ಳಲು ಅಥವಾ ಸಮಾಜದಲ್ಲಿ ದೈಹಿಕ ಸೌಂದರ್ಯಕ್ಕೆ ಪ್ರಾಧಾನ್ಯತೆ ನೀಡಲಾಗುತ್ತದೆ ಎಂಬ ಕಾರಣಕ್ಕೆ. ಆದ್ರೆ ನೋ ಡಯಟ್‌ ಡೇ ದೈಹಿಕ ಕ್ಷಮತೆ ಕಾಪಾಡಿಕೊಳ್ಳುವುದರ ಜೊತೆಗೆ ಕೆಟ್ಟ ಡಯಟ್‌ ಪದ್ಧತಿಗಳನ್ನ ತಿರಸ್ಕರಿಸುವ ಕುರಿತಂತೆ ಜಾಗೃತಿ ಮೂಡಿಸುತ್ತದೆ ಎಂದವರು ಹೇಳುತ್ತಾರೆ.

Diet women

ಅಸಂಬದ್ಧ ಡಯಟ್‌ನಿಂದ ಆಸ್ಪತ್ರೆ ಸೇರಬಹುದು

ಹಲವು ಕಾರಣಗಳಿಗಾಗಿ ಆರೋಗ್ಯಕರವಲ್ಲದ ಡಯಟ್‌ ಮಾಡಿ ಜನರು ಆಸ್ಪತ್ರೆಗೆ ದಾಖಲಾಗುತ್ತಾರೆ. ಸಾಮಾನ್ಯ ಸನ್ನಿವೇಶಗಳಲ್ಲಿ ಅಗತ್ಯ ಪೋಷಕಾಂಶಗಳನ್ನ ಸೇವಿಸದೆ, ಕ್ಯಾಲೋರಿಗಳುಳ್ಳ ಆಹಾರದಿಂದ ದೂರ ಉಳಿಯುವ ಮೂಲಕ ಅಪೌಷ್ಟಿಕತೆಗೆ ತುತ್ತಾಗುತ್ತಾರೆ. ಇದಲ್ಲದೆ, ಬಹುಅಂಗಾಂಗ ವೈಫಲ್ಯ ಉಂಟಾಗಬಹುದು. ಎಲೆಕ್ಟ್ರೋಲೈಟ್‌ ಅಸಮತೋಲನ, ಹೃದಯಾಘಾತ ಹಾಗೂ ಮೂತ್ರಪಿಂಡದ ಸಮಸ್ಯೆಗಳು ಕೂಡ ಎದುರಾಗುತ್ತವೆ. ಅಗತ್ಯ ಆಹಾರ ಪದಾರ್ಥಗಳನ್ನು ಸೇವಿಸದಿದ್ದರೆ, ನಿರ್ಜಲೀಕರಣ, ದೌರ್ಬಲ್ಯ, ವಾಕರಿಕೆ, ಮಲಬದ್ಧತೆ ಜೊತೆಗೆ ವಿಟಮಿನ್ಸ್‌ ಹಾಗೂ ಖನಿಜಗಳ ಅಸರ್ಮಕ ಸೇವನೆಯಿಂದ ಪೋಷಕಾಂಶಗಳ ಕೊರತೆ ಉಂಟಾಗುತ್ತದೆ. ಉತ್ತಮ ಆಹಾರ ಸೇವನೆಯನ್ನು ಬಿಡುವುದು ಎಂದರೆ ದೇಹದ ರಕ್ಷಣಾ ವ್ಯವಸ್ಥೆಗೆ ಹಾನಿ ಮಾಡುವುದಾಗಿದೆ. ಉತ್ತಮ ಆಹಾರ ಪದ್ದತಿ ದೀರ್ಘಕಾಲ ಪರಿಣಾಮಕಾರಿಯಾಗುವುದರ ಜೊತೆಗೆ ಸಮತೋಲಿತ ಆಹಾರ ಕ್ರಮವನ್ನು ಅಳವಡಿಸಿಕೊಳ್ಳುವ ಅಗತ್ಯವನ್ನು ಎತ್ತಿ ತೋರಿಸುತ್ತದೆ ಎಂದು ಡಾ. ಸಂಜನಾ ಪ್ರೇಮ್‌ಲಾಲ್‌ ಹೇಳಿದರು.

ಸೇವನೆಯಲ್ಲಿ ತಪ್ಪಾದ ಕ್ರಮಗಳು

ಅತಿಯಾದ ಡಯಟ್‌ನಿಂದಾಗಿ ಅನೋರೆಕ್ಸಿಯಾ ನರ್ವೋಸಾ ಅಥವಾ ಬುಲಿಮಿಯಾ ನರ್ವೋಸಾದಂತಹ ಸೇವನೆಯ ಅಸ್ವಸ್ಥತೆ ಉಂಟಾಗುತ್ತದೆ. ಇದರಿಂದ ಗಂಭೀರವಾದ ದೈಹಿಕ ಮತ್ತು ಮಾನಸಿಕ ಪರಿಣಾಮಗಳು ಉಂಟಾಗುತ್ತವೆ. ಆಗ ವೈದ್ಯರ ಸಲಹೆ ಹಾಗೂ ಚಿಕಿತ್ಸೆಯ ಮೊರೆ ಹೋಗುವುದು ಅನಿವಾರ್ಯವಾಗುತ್ತದೆ. ಕೆಲ ಸಂದರ್ಭಗಳಲ್ಲಿ ಅಸಮರ್ಪಕ ಪೋಷಣೆಯೊಂದಿಗೆ ಅತಿಯಾದ ವ್ಯಾಯಾಮದಿಂದ ಗಾಯಗಳು, ನಿರ್ಜಲೀಕರಣ ಮತ್ತು ಎಲೆಕ್ಟ್ರೋಲೈಟ್ ಅಸಮತೋಲನ ಕೂಡ ಉಂಟಾಗುತ್ತದೆ. ಆಗ ವೈದ್ಯರನ್ನ ಕಾಣಬೇಕಾಗುತ್ತದೆ. ತಪ್ಪಾದ ಡಯಟ್ನಿಂದ ಆಸ್ಪತ್ರೆಗೆ ದಾಖಲಾಗುವುದನ್ನು ತಪ್ಪಿಸಲು ನಿಪುಣ ಆರೋಗ್ಯ ತಜ್ಞರಿಂದ ಮಾಗರ್ದರ್ಶನ ಪಡೆದುಕೊಳ್ಳುವುದು ಮುಖ್ಯವಾಗಿರುತ್ತದೆ. ಜೊತೆಗೆ ಪೋಷಣೆ ಹಾಗೂ ತೂಕ ನಿರ್ವಹಣೆಗೆ ಸಮತೋಲಿತ ಆಹಾರ ಸೇವನೆಯ ವಿಧಾನಗಳನ್ನು ಅಳವಡಿಸಿಕೊಳ್ಳಬೇಕು ಎಂದು ಡಾ. ಸಂಜನಾ ಪ್ರೇಮ್‌ಲಾಲ್ ಸಲಹೆ ನೀಡುತ್ತಾರೆ.

Woman dieting and eating a salad

ಋಣಾತ್ಮಕ ಪರಿಣಾಮಗಳು

ತಪ್ಪಾದ ಡಯಟ್‌ ಅನುಸರಿಸುವುದು ಹಾಗೂ ಕಡಿಮೆ ಕ್ಯಾಲೋರಿ ಆಹಾರ ಸೇವನೆಯಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ನೆಗೆಟಿವ್ ಪರಿಣಾಮಗಳು ಉಂಟಾಗುತ್ತವೆ. ಅತೃಪ್ತಿ, ಸ್ವಗೌರವ ಕಡಿಮೆ ಆಗುವುದು, ತಿನ್ನುವ ಅಸ್ವಸ್ಥತೆ, ಮಾಂಸಖಂಡಗಳು ಬಲಹೀನವಾಗುವುದು, ಮೂಳೆಗಳು ದುರ್ಬಲಗೊಳ್ಳುವುದು, ಹೃದ್ರೋಗ ಹಾಗೂ ಹಾರ್ಮೋನ್‌ಗಳ ಅಸಮತೋಲನದಂತಹ ಹಾನಿಕಾರಕ ಅಡ್ಡಪರಿಣಾಮಗಳು ಎದುರಾಗುತ್ತವೆ. ಇವುಗಳನ್ನು ತಡೆಗಟ್ಟಲು ಕೆಟೋಜೆನಿಕ್‌ ಆಹಾರವನ್ನು ಸೇವಿಸುವುದು ಉತ್ತಮ ಪರಿಣಾಮಗಳನ್ನು ಉಂಟು ಮಾಡುತ್ತದೆ. ಆದರೆ ತುಂಬಾ ದಿನಗಳ ಕಾಲ ಸೇವಿಸುವುದರಿಂದ ಹೆಪಾಟಿಕ್ ಸ್ಟೀಟೋಸಿಸ್, ಮೂತ್ರಪಿಂಡದ ಕಲ್ಲುಗಳು, ಹೈಪೋಪ್ರೋಟೀನೆಮಿಯಾ ಮತ್ತು ವಿಟಮಿನ್ ಕೊರತೆಯಂತಹ ದೀರ್ಘಕಾಲಿಕ ಪರಿಣಾಮಗಳು ಎದುರಾಗುತ್ತವೆ. ಆಗ ಕೆಟೋಜೆನಿಕ್‌ ಆಹಾರ ಸೇವಿಸುವುದನ್ನು ನಿಲ್ಲಿಸಬೇಕಾಗುತ್ತದೆ ಎಂದು ಡಾ.. ಸಂಜನಾ ಪ್ರೇಮ್‌ಲಾಲ್‌ ಹೇಳುತ್ತಾರೆ

ಇದನ್ನೂ ಓದಿ: Pain Relievers: ಸೈಡ್‌ ಎಫೆಕ್ಟ್‌ ಇಲ್ಲದ ಪ್ರಕೃತಿದತ್ತ ನೋವು ನಿವಾರಕಗಳಿವು

ಪರಿಪೂರ್ಣ ಆರೋಗ್ಯ

ತಪ್ಪಾದ ಡಯಟ್ ಆರೋಗ್ಯ ಮತ್ತು ದೈಹಿಕ ಕ್ಷಮತೆಯ ಮೇಲೆ ದುಷ್ಪಾರಿಣಾಮವನ್ನು ಬೀರುತ್ತದೆ. ಹೀಗಾಗಿ ಜೀವಶೈಲಿಗೆ ಅನುಗುಣವಾಗಿ ಪೋಷಣೆಗೆ ಬೇಕಾದಂತಹ ಸಮತೋಲಿತ ಆಹಾರ ಸೇವಿಸುವ ವಿಧಾನಕ್ಕೆ ಆದ್ಯತೆ ನೀಡಿದರೆ ಹಲವು ಆರೋಗ್ಯಕರ ಪ್ರಯೋಜನಗಳನ್ನ ಪಡೆದುಕೊಳ್ಳಬಹುದು ಎನ್ನುತ್ತಾರೆ ಡಾ. ಸಂಜನಾ ಪ್ರೇಮ್‌ಲಾಲ್‌.

Continue Reading

ಆರೋಗ್ಯ

No Diet Day 2024: ಇಂದು ಡಯೆಟ್‌ ರಹಿತ ದಿನ ಆಚರಿಸುವುದೇಕೆ?

ಸಮಾಜದಲ್ಲಿ ಎಲ್ಲರೂ ಒಪ್ಪುವಂಥ, ಮೆಚ್ಚುವಂಥ ದೇಹವನ್ನು ಹೊಂದಬೇಕೆಂಬ (No Diet Day 2024) ಆಸೆ ಜನರಿಗೆ ಇರುತ್ತದೆ. ಹಾಗಾಗಿ, ಹೇಗೆಹೇಗೋ ಡಯೆಟ್‌ ಮಾಡುತ್ತಾ, ಹಲವು ರೀತಿಯ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುತ್ತಾರೆ. ಇದನ್ನು ತಡೆದು ದೇಹದ ಬಗ್ಗೆ ಧನಾತ್ಮಕ ಚಿಂತನೆ ಬೆಳೆಸಿಕೊಳ್ಳಲೆಂದು ʻಡಯೆಟ್‌ ರಹಿತ ದಿನʼ ಆಚರಿಸಲಾಗುತ್ತದೆ. ʻನೊ ಡಯೆಟ್‌ʼ ಎನ್ನುತ್ತಿದ್ದಂತೆ ಸಿಕ್ಕಿದ್ದೆಲ್ಲಾ ಕಬಳಿಸುವ ದಿನ ಎಂದು ಗ್ರಹಿಸುವುದಲ್ಲ. ಧನಾತ್ಮಕವಾಗಿ ದೇಹವನ್ನು ಗ್ರಹಿಸುವ ಮತ್ತು ಸೌಂದರ್ಯದ ಭ್ರಮೆಯಲ್ಲಿ ಶರೀರದ ಮೇಲೆ ಹುಚ್ಚು ಡಯೆಟ್‌ ಪ್ರಯೋಗಗಳನ್ನು ಮಾಡುವುದನ್ನು ನಿಲ್ಲಿಸಬೇಕೆಂಬ ಸಂದೇಶವನ್ನು ಸಾರುವ ದಿನವಿದು. ಈ ಕುರಿತ ವಿವರ ಇಲ್ಲಿದೆ.

VISTARANEWS.COM


on

No Diet Day 2024
Koo

ಪ್ರತಿಯೊಬ್ಬರಿಗೂ ಲೋಕದ ಅತಿ ಸುಂದರ (No Diet Day 2024) ಕಾಯವನ್ನೇ ಹೊಂದಬೇಕೆಂಬ ಅಭಿಲಾಷೆ ಇದ್ದರೆ, ಅದೇನು ಅತಿಯಲ್ಲ. ಫ್ಯಾಷನ್‌ ನಿಯತಕಾಲಿಕಗಳಲ್ಲಿ ಫೋಟೋಶಾಪ್‌ ಮಾಡಿದ ತಾರೆಗಳ ಚಿತ್ರಗಳು ಇದಕ್ಕೆ ಇನ್ನಷ್ಟು ಪ್ರೇರಣೆ ನೀಡುತ್ತವೆ. ಹುಡುಗಿಯರಿಗೆ ಬೆನ್ನು-ಹೊಟ್ಟೆ ಒಂದಾಗಿರುವಂತೆ, ಬಳುಕುವ ದೇಹ ಹೊಂದುವ ಮಹದಾಸೆಯಿದ್ದರೆ, ಹುಡುಗರಿಗೆ ದೇಹದ ನರ-ನರಗಳೆಲ್ಲ ಎದ್ದುಬರುವಂತೆ ಸ್ನಾಯುಗಳನ್ನು ಬೆಳೆಸಬೇಕೆಂಬ ಬಯಕೆ ಇರುತ್ತದೆ. ಇವುಗಳ ಹಿಂದೆ ಫಿಟ್‌ನೆಸ್‌ ಉದ್ದೇಶ ಇದ್ದರೆ ಒಂದು ಲೆಕ್ಕ. ಹೆಚ್ಚಿನ ಬಾರಿ ಹಾಗಾಗುವುದೇ ಇಲ್ಲ. ಬದಲಿಗೆ, ಸಮಾಜದಲ್ಲಿ ಎಲ್ಲರೂ ಒಪ್ಪುವಂಥ ಮೆಚ್ಚುವಂಥ ದೇಹವನ್ನು ಹೊಂದಬೇಕೆಂಬ ಆಸೆ ಇದರ ಹಿಂದಿರುತ್ತದೆ. ಹಾಗಾಗಿ, ಹುಕಿಗೆ ಬಿದ್ದವರಂತೆ ಏನಕ್ಕೇನೋ ಡಯೆಟ್‌ ಮಾಡುತ್ತಾ, ಹಲವು ರೀತಿಯ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುತ್ತಾರೆ ಅಥವಾ ಜೀವವನ್ನೇ ಕಳೆದುಕೊಳ್ಳುತ್ತಾರೆ. ಇಂಥ ಅನಾರೋಗ್ಯಕರ ಪ್ರವೃತ್ತಿಗೆ ಕಡಿವಾಣ ಹಾಕುವ ಉದ್ದೇಶದಿಂದಲೇ ʻಅಂತಾರಾಷ್ಟ್ರೀಯ ಡಯೆಟ್‌ ರಹಿತ ದಿನʼವನ್ನಾಗಿ ಮೇ ತಿಂಗಳ 6ನೇ ದಿನವನ್ನು ಗುರುತಿಸಲಾಗಿದೆ.

Girl having a cheat day

ಏನಿದರರ್ಥ?

ʻನೊ ಡಯೆಟ್‌ʼ ಎನ್ನುತ್ತಿದ್ದಂತೆ ಸಿಕ್ಕಿದ್ದೆಲ್ಲಾ ಕಬಳಿಸುವ ದಿನ ಎಂದು ಗ್ರಹಿಸುವುದಲ್ಲ. ನಮ್ಮ ದೇಹದ ಬಗೆಗಿನ ಕೀಳರಿಮೆಯನ್ನು ಬಿಟ್ಟು, ಧನಾತ್ಮಕವಾಗಿ ದೇಹವನ್ನು ಗ್ರಹಿಸುವ ಮತ್ತು ಸೌಂದರ್ಯದ ಭ್ರಮೆಯಲ್ಲಿ ಶರೀರದ ಮೇಲೆ ಹುಚ್ಚು ಡಯೆಟ್‌ ಪ್ರಯೋಗಗಳನ್ನು ಮಾಡುವುದನ್ನು ನಿಲ್ಲಿಸಬೇಕೆಂಬ ಸಂದೇಶವನ್ನು ಸಾರುವ ದಿನವಿದು. ನಾವಿದ್ದಂತೆಯೇ ನಮ್ಮನ್ನು ಒಪ್ಪಿಕೊಳ್ಳುವುದು ಸಕಾರಾತ್ಮಕ ಜೀವನಕ್ಕೆ ಎಷ್ಟು ಮುಖ್ಯ ಎಂಬ ಜಾಗೃತಿ ಮೂಡಿಸುವುದು ಈ ದಿನದ ಉದ್ದೇಶ. ಸೌಂರ್ಯದ ಹೆಸರಿನಲ್ಲಿ ಎಲ್ಲರೂ ಒಂದೇ ಮಾನದಂಡಕ್ಕೆ ಒಳಪಡುವುದು ಸಾಧ್ಯವಿಲ್ಲ. ಬದಲಿಗೆ, ವಿವಿಧತೆಯೇ ಸೌಂದರ್ಯ ಎಂಬ ಸರಳ ಸೂತ್ರ ಇದರ ಹಿಂದಿದೆ.

ಯಾಕೆ ಬಂತು ಈ ದಿನ?

ಇದು ಪ್ರಾರಂಭವಾಗಿದ್ದು ಬ್ರಿಟನ್‌ನಲ್ಲಿ 1992ರಲ್ಲಿ. ಅಲ್ಲಿನ ಮೇರಿ ಇವಾನ್ಸ್‌ ಯಂಗ್‌ ಈ ದಿನವನ್ನು ಮೊದಲಿಗೆ ಉದ್ದೇಶಿಸಿದ್ದು. ತನ್ನ ದೇಹ ಇರುವ ರೀತಿಯನ್ನು ಒಪ್ಪಿಕೊಳ್ಳಲಾರದೆ, ಆಹಾರ ಕ್ರಮವನ್ನು ಸಿಕ್ಕಾಪಟ್ಟೆ ಏರುಪೇರಾಗಿಸಿಕೊಂಡು, ಅದರಿಂದ ಅನೊರೆಕ್ಸಿಯ ರೋಗಕ್ಕೆ ಆಕೆ ತುತ್ತಾಗಿದ್ದರು. ಇದರಿಂದ ಚೇತರಿಸಿಕೊಂಡ ನಂತರ, ಸೌಂದರ್ಯದ ಹೆಸರಿನಲ್ಲಿ ಅವೈಜ್ಞಾನಿಕ ಡಯೆಟ್‌ಗಳನ್ನು ಪಾಲಿಸುವ ಪದ್ಧತಿಯ ವಿರುದ್ಧ ಜಾಗೃತಿ ಮೂಡಿಸುವ ಉದ್ದೇಶದಿಂದ, ಲಂಡನ್‌ನ ಹೈಡ್‌ ಪಾರ್ಕ್‌ನಲ್ಲಿ ಇದನ್ನು ಪ್ರಾರಂಭಿಸಿದರು. ಅದೊಂದು, ಹತ್ತಿಪ್ಪತ್ತು ಮಂದಿ ಮಹಿಳೆಯರು ಭಾಗವಹಿಸಿದ್ದ, ಸಣ್ಣ ಪಿಕ್‌ನಿಕ್‌ ರೂಪದಲ್ಲಿ ಮೊದಲಾಯಿತು. ಡಯೆಟ್‌ ಹೆಸರಿನಲ್ಲಿ ತಲೆಬುಡವಿಲ್ಲದ ಆಹಾರ ಕ್ರಮಗಳಿಂದ ದೇಹ-ಮನಸ್ಸುಗಳ ಮೇಲೆ ಆಗುವ ವಿಪರೀತ ಪರಿಣಾಮಗಳನ್ನು ತಿಳಿಸುವುದು ಅಂದಿನ ಉದ್ದೇಶವಾಗಿತ್ತು. ತೂಕದ ವಿಷಯಕ್ಕೆ ಅತಿ ಮಹತ್ವ ನೀಡುವುದು, ಯಾವುದೋ ಒಪ್ಪಿತ ಅಳತೆಗಳಿಗೆ ಒಗ್ಗದವರತ್ತ ತಾರತಮ್ಯ ಮಾಡುವುದು ಇಂಥವನ್ನೆಲ್ಲ ಬಿಟ್ಟು, ಆಹಾರದೊಂದಿಗೆ ಆರೋಗ್ಯಕರ ನಂಟು ಬೆಳೆಸಿಕೊಳ್ಳುವುದು ಅಗತ್ಯ. ಇದನ್ನೇ ಇಂದು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಚಾರ ಮಾಡಲಾಗುತ್ತಿದೆ. ಆದರೆ ಡಯೆಟ್‌ ಮಾಡಬಾರದೆಂದರೆ ಏನೆಂಬುದನ್ನು ಇನ್ನಷ್ಟು ನಿಖರವಾಗಿ ಸ್ಪಷ್ಟಪಡಿಸುವ ಅಗತ್ಯವಿದೆ. ಹಾಗಲ್ಲದಿದ್ರೆ ತಪ್ಪು ಕಲ್ಪನೆಗಳಿಗೆ ಎಡೆಯಾಗಬಹುದು.

Woman dieting and eating a salad

ಏನು ಮಾಡಬೇಕು?

ಮನಸ್ಸಿಗೆ ಬಂದಿದ್ದೆಲ್ಲ ತಿನ್ನುವುದನ್ನು ಪ್ರಚಾರ ಮಾಡುವ ದಿನವಲ್ಲ ಇದು. ಬದಲಿಗೆ ಆರೋಗ್ಯಕರ ಆಹಾರ ಕ್ರಮವನ್ನು ರೂಢಿಸಿಕೊಳ್ಳಲು ಅಂದು ಪ್ರೋತ್ಸಾಹ ನೀಡುವುದು ಮಹತ್ವದ್ದು. ದೇಹ-ಮನಸ್ಸಿಗೆ ಚೈತನ್ಯ ನೀಡುವಂಥ ಸಮತೋಲಿತ ಆಹಾರವನ್ನು ಸೇವಿಸುವುದಕ್ಕಿಂತ ದೇಹದ ತೂಕ, ಸಪೂರ ಕಾಣುವುದು ಮುಖ್ಯವಲ್ಲ. ದೇಹದ ತೂಕ ಕೆಲವೊಮ್ಮೆ ಆನುವಂಶಿಕವಾಗಿ ಬರಬಹುದು, ಹಾರ್ಮೋನುಗಳ ಏರುಪೇರಿನಿಂದ ಬರಬಹುದು, ಔಷಧಿಗಳ ಅಡ್ಡ ಪರಿಣಾಮಗಳಾಗಿರಬಹುದು. ಹಾಗಾಗಿ ಎಲ್ಲವನ್ನೂ ಒಂದೇ ತಕ್ಕಡಿಯಲ್ಲಿ ಹಾಕದೆ, ಆರೋಗ್ಯಕರ ಜೀವನಶೈಲಿ ರೂಢಿಸಿಕೊಳ್ಳುವತ್ತ ಗಮನ ಕೊಡಿ. ಯಾರದ್ದೋ ಫೋಟೋಶಾಪ್‌ ಮಾಡಿದ ದೇಹಗಳಂತೆ ತಮ್ಮದಿಲ್ಲ ಎಂದು ಕೊರಗಬೇಡಿ. ಒತ್ತಡ ರಹಿತವಾಗಿ ಬದುಕುವತ್ತ ಗಮನ ನೀಡಿ. ಧನಾತ್ಮಕ ಸಿಂತನೆಗಳನ್ನು ಬೆಳೆಸಿಕೊಳ್ಳಿ. ಆರೋಗ್ಯವಂತ ದೇಹದ ಸುಂದರ ನಗುವಿಗಿಂತ ಸುಂದರವಾಗಿದ್ದು ಲೋಕದಲ್ಲಿ ಇನ್ನಾವುದೂ ಇಲ್ಲ.

ಇದನ್ನೂ ಓದಿ: Cooking Oils: ಈ 5 ಅಡುಗೆ ಎಣ್ಣೆಗಳು ನಮ್ಮ ಆರೋಗ್ಯಕ್ಕೆ ಅಪಾಯಕಾರಿ!

Continue Reading
Advertisement
Lok Sabha Election 2024
Lok Sabha Election 202418 mins ago

Lok Sabha Election 2024: ಮೂರನೇ ಹಂತದ ಮತದಾನ ಆರಂಭ; ಇಂದು ವೋಟು ಮಾಡಲಿದ್ದಾರೆ ಮೋದಿ, ಅಮಿತ್‌ ಶಾ

rajamarga column voting 1
ಪ್ರಮುಖ ಸುದ್ದಿ31 mins ago

ರಾಜಮಾರ್ಗ ಅಂಕಣ: ಭಾರತದಲ್ಲಿ ಕಡ್ಡಾಯ ಮತದಾನ ಕಾನೂನು ಯಾಕೆ ಸಾಧ್ಯವಿಲ್ಲ?

Summer Food Tips
ಆಹಾರ/ಅಡುಗೆ59 mins ago

Summer Food Tips: ಬೇಸಿಗೆಯಲ್ಲಿ ನಮ್ಮ ದೇಹವನ್ನು ತಂಪಾಗಿರಿಸುವ ಸರಳ ಆಹಾರಗಳಿವು!

lok sabha election 2025 voting
Lok Sabha Election 20241 hour ago

Lok Sabha Election 2024 Live news: ರಾಜ್ಯದಲ್ಲಿ ಎರಡನೇ ಹಂತದ ಮತದಾನ ಆರಂಭ

Lok Sabha Election
ಪ್ರಮುಖ ಸುದ್ದಿ1 hour ago

Lok Sabha Election : ಇಂದು 2ನೇ ಹಂತದ ವೋಟಿಂಗ್​; ನಿಮ್ಮ ‘ಮತ’ ಕಳವಾದರೆ ಹೀಗೆ ಮಾಡಿ..

karnataka weather Forecast
ಮಳೆ1 hour ago

karnataka Weather : ಇಂದು ಮಳೆಗೂ ಮುನ್ನವೇ ವೋಟ್‌ ಹಾಕಿಬಿಡಿ; ಸಂಜೆಗೆ ಭಾರಿ ವರ್ಷಧಾರೆ

Lok Sabha Election
ಪ್ರಮುಖ ಸುದ್ದಿ2 hours ago

Lok Sabha Election 2024: ಇಂದು ರಾಜ್ಯದ 14 ಕ್ಷೇತ್ರಗಳಲ್ಲಿ ಮತದಾನ; ಅದೃಷ್ಟ ಪರೀಕ್ಷೆಗಿಳಿದ 227 ಅಭ್ಯರ್ಥಿಗಳು

Lok Sabha Election-2024
ಕರ್ನಾಟಕ2 hours ago

ಇಂದು 2ನೇ ಹಂತದ ಮತದಾನ; ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಮೊಬೈಲ್‌ನಲ್ಲೇ ಚೆಕ್ ಮಾಡಿ

SSLC exam results to be announced soon
ಕರ್ನಾಟಕ2 hours ago

SSLC Exam Result 2024: ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಶೀಘ್ರ; ಇಲ್ಲಿದೆ ಮಹತ್ವದ ಮಾಹಿತಿ

Lemon picking⁠
ಲೈಫ್‌ಸ್ಟೈಲ್2 hours ago

Tips To Find The Juiciest Lemon: ಜ್ಯೂಸಿಯಾದ ನಿಂಬೆಹಣ್ಣನ್ನು ಮಾರುಕಟ್ಟೆಯಿಂದ ಆರಿಸಿ ತರುವುದೂ ಒಂದು ಕಲೆ! ಇಲ್ಲಿವೆ ಟಿಪ್ಸ್

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Prajwal Revanna Case 2nd accused in KR Nagar victim abduction case sent to SIT custody Trouble for Revanna
ಕ್ರೈಂ13 hours ago

Prajwal Revanna Case: ಕೆ.ಆರ್.‌ ನಗರ ಸಂತ್ರಸ್ತೆ ಕಿಡ್ನ್ಯಾಪ್‌ ಕೇಸ್‌ನ 2ನೇ ಆರೋಪಿ SIT ಕಸ್ಟಡಿಗೆ; ರೇವಣ್ಣಗೆ ಸಂಕಷ್ಟ?

karnataka weather forecast
ಮಳೆ14 hours ago

Karnataka Weather : ಬೆಂಗಳೂರು ಸೇರಿ ಹಲವೆಡೆ ಮತ್ತೆ ಅಬ್ಬರಿಸುತ್ತಿರುವ ಮಳೆ; ಇನ್ನೊಂದು ವಾರ ಅಲರ್ಟ್‌

Prajwal Revanna Case DK Shivakumar behind Prajwal video leak Devaraje Gowda demands CBI probe
ಕ್ರೈಂ14 hours ago

Prajwal Revanna Case: ಪ್ರಜ್ವಲ್‌ ವಿಡಿಯೊ ಲೀಕ್‌ ಹಿಂದೆ ಇರೋದು ಡಿಕೆಶಿ; ದಾಖಲೆ ತೋರಿಸಿ, ಸಿಬಿಐಗೆ ಕೇಸ್‌ ವಹಿಸಲು ದೇವರಾಜೇಗೌಡ ಆಗ್ರಹ

Dina bhavishya
ಭವಿಷ್ಯ1 day ago

Dina Bhavishya : ಈ ರಾಶಿಯವರಿಗೆ ಇಂದು ಹುಡುಕಿಕೊಂಡು ಬರಲಿವೆ ಹೊಸ ಅವಕಾಶಗಳು

Prajwal Revanna Case HD Revanna sent to judicial custody Shift to Parappana Agrahara
ಕ್ರೈಂ2 days ago

Prajwal Revanna Case: ಎಸ್‌ಐಟಿ ಕಸ್ಟಡಿಗೆ ಮಾಜಿ ಸಚಿವ ಎಚ್‌.ಡಿ. ರೇವಣ್ಣ; ಮತ್ತೆ ತೀವ್ರ ವಿಚಾರಣೆ

Prajwal Revanna Case No evidence against me its a conspiracy says HD Revanna
ಕರ್ನಾಟಕ2 days ago

Prajwal Revanna Case: ನನ್ನ ವಿರುದ್ಧ ಯಾವುದೇ ಸಾಕ್ಷಿಗಳಿಲ್ಲ, ಇದೊಂದು ಷಡ್ಯಂತ್ರ: ಎಚ್‌.ಡಿ. ರೇವಣ್ಣ ಫಸ್ಟ್‌ ರಿಯಾಕ್ಷನ್‌!

Narendra Modi
ದೇಶ2 days ago

Narendra Modi: ರಾಮನಗರಿ ಅಯೋಧ್ಯೆಯಲ್ಲಿ ಮೋದಿ ಭರ್ಜರಿ ರೋಡ್‌ ಶೋ; ಲೈವ್‌ ಇಲ್ಲಿ ವೀಕ್ಷಿಸಿ

Dina Bhavishya
ಭವಿಷ್ಯ2 days ago

Dina Bhavishya : ಈ ರಾಶಿಯವರಿಗೆ ಆಪ್ತರಿಂದ ಸಿಗಲಿದೆ ಸಿಹಿ ಸುದ್ದಿ

Dina Bhavishya
ಭವಿಷ್ಯ3 days ago

Dina Bhavishya: ವೀಕೆಂಡ್‌ನಲ್ಲೂ ಬಾಸ್‌ ಕಾಟ ತಪ್ಪಲ್ಲ; ಈ ರಾಶಿಯವರಿಗೆ ಇಡೀ ದಿನ ಕೆಲಸದ ಒತ್ತಡ

Bengaluru Rains
ಮಳೆ4 days ago

Bengaluru Rains:‌ ಅಬ್ಬಾಬ್ಬ ಲಾಟ್ರಿ.. ಕಂಗ್ರಾಜುಲೇಷನ್ ಬ್ರದರ್.. ಬೆಂಗಳೂರು ಮಳೆಗೆ ನೆಟ್ಟಿಗರ ವಿಷ್‌, ಫುಲ್ ಖುಷ್‌

ಟ್ರೆಂಡಿಂಗ್‌