Raja Marga Column : ಅವರು ಕೇವಲ ಟಿ.ಎನ್‌ ಸೇಷನ್‌ ಅಲ್ಲ, ಪ್ರಜಾಪ್ರಭುತ್ವದ ಆಲ್ಸೇಷನ್‌! - Vistara News

ಸ್ಫೂರ್ತಿ ಕತೆ

Raja Marga Column : ಅವರು ಕೇವಲ ಟಿ.ಎನ್‌ ಸೇಷನ್‌ ಅಲ್ಲ, ಪ್ರಜಾಪ್ರಭುತ್ವದ ಆಲ್ಸೇಷನ್‌!

Raja Marga Column : ಪ್ರತಿ ಚುನಾವಣೆ ಬಂದಾಗಲೂ ದೇಶದಲ್ಲಿ ಒಂದು ಹೆಸರು ನೆನಪಾಗುತ್ತದೆ. ಅದುವೇ ಟಿ.ಎನ್‌.ಸೇಷನ್‌. ಭಾರತದ ಚುನಾವಣಾ ಸುಧಾರಣೆಗಳ ಪಿತಾಮಹ ಆಗಿರುವ ಅವರು ತನ್ನನ್ನು ತಾನು ಪ್ರಜಾಪ್ರಭುತ್ವದ ಆಲ್ಸೇಷನ್‌ ಎಂದೇ ಕರೆದುಕೊಂಡಿದ್ದರು!

VISTARANEWS.COM


on

Raja marga Column TN Seshan2
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo
RAJA MARGA COLUMN Rajendra Bhat

Raja Marga Column : ಭಾರತದ ಮುಖ್ಯ ಚುನಾವಣಾ ಕಮಿಷನರ್‌ (Former Chief Election Commissioner of India) ಆಗಿ ಭ್ರಷ್ಟಾಚಾರ ಮತ್ತು ಲಂಚಾವತಾರದಲ್ಲಿ ಮುಳುಗಿ ಹೋಗಿದ್ದ ಭಾರತದ ಚುನಾವಣೆಗಳನ್ನು ಮೊದಲ ಬಾರಿಗೆ ಶುದ್ಧ ಮಾಡಿದ ಕೀರ್ತಿ ಅದು ಖಂಡಿತವಾಗಿ ಟಿ.ಎನ್ ಸೇಷನ್ (T.N. Seshan) ಅವರಿಗೆ ಸಲ್ಲಬೇಕು. 1990-1996ರ ಅವಧಿಯಲ್ಲಿ ಭಾರತದ ಮುಖ್ಯ ಚುನಾವಣಾ ಕಮೀಷನರ್ ಆಗಿ ಕ್ರಾಂತಿಕಾರಕ ಕ್ರಮಗಳನ್ನು ಆರಂಭ ಮಾಡಿದ ಅವರು ಚುನಾವಣೆಗಳಲ್ಲಿ ಭಾರೀ ಸುಧಾರಣೆಗಳನ್ನು (Electoral Reforms) ತಂದರು.

Raja marga Column TN Seshan4

Raja Marga Column : ಯಾರೀ ಟಿ.ಎನ್ ಸೇಷನ್?

ಅವರ ಆತ್ಮಚರಿತ್ರೆಯ ಪುಸ್ತಕ THROUGH THE BROKEN GLASS ಓದುತ್ತಾ ಹೋದಂತೆ ಅವರ ದಿಟ್ಟತನ, ನೆವರ್ ಕಾಂಪ್ರೋ ನಡೆಗಳು ಕಣ್ಣಿಗೆ ರಾಚುತ್ತವೆ.

ಕೇರಳದ ಪಾಲ್ಛಾಟ್ ಜಿಲ್ಲೆಯ ತಿರುನೆಲ್ಲೈ ಎಂಬ ಸಣ್ಣ ಊರಲ್ಲಿ ಜನಿಸಿದ (1932 ಡಿಸೆಂಬರ್ 15ರಂದು) ಅವರು ಬಾಲ್ಯದಲ್ಲಿ ಅತ್ಯಂತ ಕಷ್ಟದ ದಿನಗಳನ್ನು ಕಳೆದವರು. ಒಮ್ಮೆ ಒಂದು ಹೋಟೆಲಿನಲ್ಲಿ ಊಟ ಮಾಡಲು ಅವರು 25 ಪೈಸೆ ಖರ್ಚು ಮಾಡಿದ್ದರು. ಆಗ ಅವರ ತಾಯಿಯು ದುಂದು ವೆಚ್ಚ ಮಾಡಿದ್ದಕ್ಕೆ ಅವರನ್ನು ಚೆನ್ನಾಗಿ ಹೊಡೆದಿದ್ದರು. ಈ ಘಟನೆಯು ಅವರಿಗೆ ಆರ್ಥಿಕ ಶಿಸ್ತನ್ನು ಕಲಿಸಿತು ಎಂದು ಸೇಷನ್ ಹೇಳಿದ್ದಾರೆ. ಅವರು ಚುನಾವಣಾ ಕಮಿಷನರ್‌ ಆಗಿದ್ದಾಗಲೂ ‘ನನ್ನ ಬ್ಯಾಂಕ್ ಖಾತೆಯಲ್ಲಿ ನನ್ನ ಸಂಪಾದನೆಗಿಂತ ಒಂದು ರೂಪಾಯಿ ಜಾಸ್ತಿ ಇದ್ದರೆ ನಾನು ರಾಜೀನಾಮೆ ಕೊಟ್ಟು ತೆರಳುತ್ತೇನೆ ‘ ಎಂದಿದ್ದರು! ಅವರ ಪ್ರಾಮಾಣಿಕತೆಯನ್ನು ಯಾರೂ ಪ್ರಶ್ನೆ ಮಾಡಲು ಸಾಧ್ಯವೇ ಇರಲಿಲ್ಲ.

Raja marga Column TN Seshan

ಐಪಿಎಸ್ ಹುದ್ದೆಗೆ ರಾಜೀನಾಮೆ ಕೊಟ್ಟರು ಸೇಷನ್!

ಬಾಲ್ಯದಿಂದಲೂ ತುಂಬಾ ಪ್ರತಿಭಾವಂತ ಆಗಿದ್ದ ಸೇಷನ್ ಐಪಿಎಸ್ ಪರೀಕ್ಷೆಯನ್ನು ಪ್ರಥಮ ಪ್ರಯತ್ನದಲ್ಲಿಯೇ ಪ್ರಥಮ ಶ್ರೇಣಿಯಲ್ಲಿ ಪಾಸ್ ಆಗಿದ್ದರು (1953). ಆದರೆ ಅವರಿಗೆ ಆ ಹುದ್ದೆ ಇಷ್ಟ ಆಗದೆ ರಾಜೀನಾಮೆ ಕೊಟ್ಟು ಹೊರಬಂದರು. 1955ರಲ್ಲಿ ಐಎಎಸ್ ಪರೀಕ್ಷೆಯನ್ನು ಬರೆದು ಮತ್ತೆ ಪ್ರಥಮ ಪ್ರಯತ್ನದಲ್ಲೇ ಪಾಸ್ ಆದರು. ಮುಂದೆ ಹಾರ್ವರ್ಡ್ ವಿವಿಗೆ ಹೋಗಿ ಸ್ನಾತಕೋತ್ತರ ಪದವಿ ಪಡೆದು ಭಾರತಕ್ಕೆ ಬಂದರು.

ಮುಂದೆ ತಮಿಳುನಾಡು ರಾಜ್ಯದ ವಿವಿಧ ಇಲಾಖೆಗಳಲ್ಲಿ ನಿಷ್ಠೆಯಿಂದ ಕೆಲಸ ಮಾಡಿದರು. ಭ್ರಷ್ಟರ ಕಾರುಬಾರು ಹೆಚ್ಚಾದಾಗ ತಮಿಳುನಾಡು ಬಿಟ್ಟು ದೆಹಲಿಗೆ ಪ್ರಯಾಣ ಮಾಡಿದರು. ಅಲ್ಲಿ ಅವರಿಗೆ ದೊರಕಿದ ಅತೀ ದೊಡ್ಡ ಹುದ್ದೆ ಎಂದರೆ ಕೇಂದ್ರ ಕ್ಯಾಬಿನೆಟ್ ಸೆಕ್ರೆಟರಿ ಹುದ್ದೆ. ಆಗ ಅವರ ಅತ್ಯಂತ ಆತ್ಮೀಯರಾದ ಸುಬ್ರಹ್ಮಣ್ಯಂ ಸ್ವಾಮಿ ಅವರ ಸಲಹೆಯಂತೆ 1990ರಲ್ಲಿ ಭಾರತದ ಮುಖ್ಯ ಚುನಾವಣಾ ಕಮೀಷನರ್ ಆಗಿ ಆಯ್ಕೆಯಾದರು.

Raja marga Column TN Seshan1

ಅದುವರೆಗೆ ಆ ಹುದ್ದೆ ಇದೆ ಎಂದು ಯಾರಿಗೂ ಗೊತ್ತಿರಲಿಲ್ಲ!

ಸೇಷನ್ ಅವರ ಮಹತ್ವ ನಮಗೆ ತಿಳಿಯಬೇಕು ಎಂದಾದರೆ ಅವರಿಗಿಂತ ಮೊದಲು ಭಾರತದ ಚುನಾವಣಾ ವ್ಯವಸ್ಥೆ ಹೇಗಿತ್ತು ಎಂದು ತಿಳಿಯಬೇಕು. ಗೂಂಡಾಗಿರಿ, ದುಡ್ಡು, ಜಾತೀಯ ವ್ಯವಸ್ಥೆ, ಪ್ರಲೋಭನೆ ಒಡ್ಡಿ ಮತ ಪಡೆಯುವುದು, ಮತಗಟ್ಟೆ ಕ್ಯಾಪ್ಚರಿಂಗ್, ಮಾಧ್ಯಮಗಳ ದುರ್ಬಳಕೆ ಎಲ್ಲವೂ ನಡೆಯುತ್ತಿತ್ತು. ಬಿಹಾರ್ ಮತ್ತು ಪಂಜಾಬ್ ರಾಜ್ಯದಲ್ಲಿ ಗೂಂಡಾರಾಜ್ ನಡೆಯುತ್ತಿತ್ತು. 1971ರಷ್ಟು ಹಿಂದೆ ಚುನಾವಣಾ ಆಯೋಗ ನೀತಿ ಸಂಹಿತೆಯನ್ನು ಜಾರಿಗೆ ತಂದಿದ್ದರೂ ಅದು ದುರ್ಬಳಕೆ ಆದದ್ದೇ ಹೆಚ್ಚು. ಮಧ್ಯರಾತ್ರಿಯತನಕ ರಾಜಕೀಯ ಸಭೆಗಳು ನಡೆಯುತ್ತಿದ್ದವು. ಮೈಕಾಸುರನ ಆರ್ಭಟವು ಮೇರೆ ಮೀರುತ್ತಿತ್ತು. ಯಾರ್ಯಾರ ಹೆಸರಿನಲ್ಲಿ ಯಾರ್ಯಾರೋ ಬಂದು ವೋಟ್ ಮಾಡಿ ಹೋಗುತ್ತಿದ್ದರು.

Raja Marga Column : ಆ ಭ್ರಷ್ಟ ವ್ಯವಸ್ಥೆಯ ನಿರ್ಮೂಲನಕ್ಕೆ ಸೇಷನ್ ಸಂಕಲ್ಪ

ತಮಗೆ ಸಿಕ್ಕಿದ ಆರು ವರ್ಷಗಳ ಅಧಿಕಾರದ ಅವಧಿಯಲ್ಲಿ ಅವರು ಎಲ್ಲ ರಾಜಕೀಯ ಪಕ್ಷಗಳಿಗೆ ನಡುಕ ಹುಟ್ಟಿಸಿದರು ಎಂದರೆ ಅದು ಸೇಷನ್ ಪವರ್. ಅವರು ಭಾರತದ ಹಿಂದಿನ ಚುನಾವಣೆಗಳನ್ನು ಅಧ್ಯಯನ ಮಾಡಿ ಆಗ್ತಾ ಇದ್ದ ನೂರು ಅಕ್ರಮಗಳ ಪಟ್ಟಿ ಮಾಡಿದರು. ಒಂದೊಂದಾಗಿ ಅವುಗಳಿಗೆ ಕಾನೂನು ಬಿಗಿ ಮಾಡುತ್ತ ಹೋದರು. ಭಾರತದ ಚುನಾವಣೆಗಳಲ್ಲಿ ಮೊದಲ ಬಾರಿಗೆ (ಫೋಟೋ ಸಹಿತ) ವೋಟರ್ ಐಡಿ ಬಳಸಿದ ಕೀರ್ತಿಯು ಅವರಿಗೆ ಸಲ್ಲಬೇಕು. ಆ ಕಾರ್ಡುಗಳನ್ನು ಈಗಲೂ ಕೆಲವರು ಸೇಷನ್ ಕಾರ್ಡ್ ಎಂದು ಕರೆಯುತ್ತಾರೆ.

ಆದರೆ ಅದು ಸುಲಭದ ಕೆಲಸ ಆಗಿರಲಿಲ್ಲ. ಆಗಲೇ ಭಾರತದಲ್ಲಿ 50-55 ಕೋಟಿ ಮತದಾರರು ಇದ್ದರು. ಅವರೆಲ್ಲರ ಫೋಟೋ ತೆಗೆದು ವೋಟರ್ ಐಡಿ ಮುದ್ರಿಸಿ ಕೊಡುವುದು ಸುಲಭದ ಮಾತಾಗಿರಲಿಲ್ಲ. ಆದರೆ ಅವರು ಹಿಡಿದ ಹಠವನ್ನು ಬಿಡುವವರೆ ಅಲ್ಲ!

ಯಾವುದೇ ಅಭ್ಯರ್ಥಿಯು ಚುನಾವಣೆ ಮುಗಿದ ತಕ್ಷಣ ತನ್ನ ಖರ್ಚಿನ ವಿವರವನ್ನು ಚುನಾವಣಾ ಆಯೋಗಕ್ಕೆ ಕೊಡಬೇಕು ಎಂಬ ಕಾನೂನು ಇತ್ತು. ಆದರೆ ಅದನ್ನು ಯಾರೂ ಗಂಭೀರವಾಗಿ ಪಾಲಿಸುತ್ತಿರಲಿಲ್ಲ. ಆದರೆ ಸೇಷನ್ 40,000ಕ್ಕಿಂತ ಅಧಿಕ ಅಭ್ಯರ್ಥಿಗಳು ನೀಡಿದ ಖರ್ಚಿನ ವಿವರಗಳನ್ನು ಸ್ವತಃ ಪರಿಶೀಲನೆ ಮಾಡಿದರು. ಅದರಲ್ಲಿ 14,000 ಅಭ್ಯರ್ಥಿಗಳು ಕೊಟ್ಟ ದುಡ್ಡಿನ ವಿವರವು ಪೂರ್ತಿ ಫೇಕ್ ಆಗಿತ್ತು. ಅದರಲ್ಲಿ 1488 ಅಭ್ಯರ್ಥಿಗಳನ್ನು ವಜಾ ಮಾಡಿದ್ದು ಮಾತ್ರವಲ್ಲ ಮುಂದಿನ ಮೂರು ವರ್ಷ ಅವರು ಚುನಾವಣೆಗೆ ಸ್ಪರ್ಧೆ ಮಾಡದಂತೆ ಪ್ರತಿಬಂಧಿಸುವ ಐತಿಹಾಸಿಕ ಕ್ರಮವನ್ನು ಸೇಷನ್ ತೆಗೆದುಕೊಂಡಾಗ ಎಲ್ಲ ರಾಜಕೀಯ ಪಕ್ಷಗಳು ಬೆವರಲು ಆರಂಭ ಮಾಡಿದವು.

ಇದನ್ನೂ ಓದಿ : Raja Marga Column : ಎಲಿಸ್‌ ಪೆರ‍್ರಿ RCBಗೆ ಅದೃಷ್ಟ ತಂದ ಸುಂದರಿ; ಕ್ರಿಕೆಟ್‌, ಫುಟ್ಬಾಲ್‌ ವಿಶ್ವಕಪ್‌ ಆಡಿದ ಏಕೈಕ ಮಹಿಳೆ!

ನಾನು ‘ಡೆಮಾಕ್ರಸಿಯ ಆಲ್ಸೇಶನ್ ನಾಯಿ ‘ಎಂದು ಸ್ವತಃ ಅವರು ಕರೆಸಿಕೊಂಡರು.

ಚುನಾವಣಾ ಅಕ್ರಮಗಳಿಗೆ ಕುಖ್ಯಾತಿ ಪಡೆದಿದ್ದ ಬಿಹಾರ್ ಮತ್ತು ಪಂಜಾಬ್ ವಿಧಾನ ಸಭೆಗಳಿಗೆ ಚುನಾವಣೆ ರದ್ದು ಮಾಡಿ ಅವರು ಶುದ್ಧೀಕರಣಕ್ಕೆ ಇಳಿದಾಗ ಮತ್ತೆ ರಾಜಕೀಯ ಪಕ್ಷಗಳು ದಿಗಿಲಾದವು.

ಚುನಾವಣಾ ನೀತಿ ಸಂಹಿತೆಯನ್ನು ಬಿಗಿ ಮಾಡಿ ಅಭ್ಯರ್ಥಿಗಳು ಧಾರ್ಮಿಕ ಕ್ಷೇತ್ರಗಳನ್ನು ದುರ್ಬಳಕೆ ಮಾಡಿ ವೋಟ್ ಕೇಳುವುದನ್ನು ನಿಲ್ಲಿಸಿದ್ದು ಅವರೇ! ಜಾತಿ, ಮತಗಳ ಹೆಸರಿನಲ್ಲಿ ವೋಟ್ ಕೇಳುವುದನ್ನು ತಡೆದ ಕೀರ್ತಿಯೂ ಅವರಿಗೆ ಸಲ್ಲಬೇಕು. ಧ್ವನಿವರ್ಧಕಗಳ ಶಬ್ದಮಾಲಿನ್ಯ ತಡೆಗಟ್ಟಿದ್ದು, ಎಲ್ಲೆಂದರಲ್ಲಿ ಪೋಸ್ಟರ್ ಅಂಟಿಸಿ ಪರಿಸರ ಕೆಡಿಸುವುದಕ್ಕೆ ಬ್ರೇಕ್ ಹಾಕಿದ್ದು ಕೂಡ ಅವರೇ! ಚುನಾವಣಾ ಆಯೋಗದಲ್ಲಿ ದೂರು ಪೆಟ್ಟಿಗೆ ತೆರೆದು ಜನಸಾಮಾನ್ಯರ ಪ್ರತೀ ದೂರನ್ನು ಆಲಿಸಿ ಪರಿಹಾರ ಕೊಟ್ಟದ್ದು ಅವರೇ!

Raja marga Column TN Seshan2

ಸಾಮಾಜಿಕ ಜಾಲತಾಣಗಳು ಇಲ್ಲದ ಆ ಕಾಲದಲ್ಲಿಯೂ ಕೂಡ ಆಯೋಗದ ಕೊಠಡಿಯಲ್ಲಿ ಕುಳಿತು ಇಡೀ ಭಾರತದ ಮೆಗಾ ಚುನಾವಣೆಗಳನ್ನು ನಿಯಂತ್ರಣ ಮಾಡಿದ್ದು ಸಣ್ಣ ಸಾಧನೆ ಅಲ್ಲ. ಅವರ ನಂತರ ಬಂದ ಎಲ್ಲ ಆಯುಕ್ತರೂ ಸೇಷನ್ ಆರಂಭ ಮಾಡಿದ ಕ್ರಮಗಳನ್ನು ಮುಂದುವರಿಸಿಕೊಂಡು ಹೋದದ್ದು ಸೇಷನ್ ಅವರ ಗೆಲುವು.

‘ಪ್ರತೀ ಭಾರತೀಯನೂ ನಿರ್ಭೀತಿಯಿಂದ ಮತದಾನ ಮಾಡಬೇಕು. ಅದಕ್ಕೆ ಪೂರಕವಾದ ವಾತಾವರಣ ಕಲ್ಪಿಸುವುದು ಚುನಾವಣಾ ಆಯೋಗದ ಕರ್ತವ್ಯ. ಭಾರತದಲ್ಲಿ 50% ಜನರು ಮಾತ್ರ ವೋಟ್ ಮಾಡಲು ಬರುತ್ತಾರೆ. ಇದರಿಂದ ಎಷ್ಟೋ ಬಾರಿ ಯೋಗ್ಯರು ಆರಿಸಿ ಬಾರದೆ ಡೆಮಾಕ್ರಸಿ ಸೋಲುತ್ತದೆ. ಮತದಾನದ ಪ್ರಮಾಣವನ್ನು ಹೆಚ್ಚು ಮಾಡುವುದೂ ನಮ್ಮ ಆಯೋಗದ ಕರ್ತವ್ಯ’ ಎಂದವರು ಹೇಳಿದ್ದಾರೆ.

ಮುಂದೆ ನಿವೃತ್ತಿ ಆದ ನಂತರ ಅವರು ಶಿಕ್ಷಕರಾಗಿ ಪಾಠ ಮಾಡಿದರು. ಒಮ್ಮೆ ರಾಷ್ಟ್ರಪತಿ ಚುನಾವಣೆಗೆ ಸ್ಪರ್ಧೆ ಮಾಡಿ ಸೋತರು. (ಅವರಿಂದ ಸಂತ್ರಸ್ತರಾದ ರಾಜಕಾರಣಿಗಳು ಅವರಿಗೆ ವೋಟ್ ಮಾಡಲು ಸಾಧ್ಯವೇ ಇರಲಿಲ್ಲ! ಇದು ಅವರಿಗೆ ಗೊತ್ತಿತ್ತು). ಅವರಿಗೆ 1996ರಲ್ಲಿ ಅಂತಾರಾಷ್ಟ್ರೀಯ ರಾಮನ್ ಮ್ಯಾಗ್ಸೆಸೆ ಪ್ರಶಸ್ತಿಯು ಒಲಿದು ಬಂದಿತು. ಮುಂದೆ 2019ರಲ್ಲೀ ಅವರು ನಮ್ಮನ್ನು ಆಗಲಿದರು.

ಭಾರತೀಯ ಚುನಾವಣಾ ವ್ಯವಸ್ಥೆಯನ್ನು ತಕ್ಕ ಮಟ್ಟಿಗೆ ಶುದ್ಧೀಕರಣ ಮಾಡಿದ ಕೀರ್ತಿಪುರುಷ ಟಿ.ಎನ್ ಸೇಷನ್ ಅವರಿಗೆ ನಮ್ಮ ಶೃದ್ಧಾಂಜಲಿ ಮೀಸಲಿರಲಿ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಅಂಕಣ

ರಾಜಮಾರ್ಗ ಅಂಕಣ: ಕಣ್ಣಿಲ್ಲದೆ ಉದ್ಯಮ ಸಾಮ್ರಾಜ್ಯವನ್ನು ಕಟ್ಟಿದ ಶ್ರೀಕಾಂತ್ ಬೊಳ್ಳಾ

ರಾಜಮಾರ್ಗ ಅಂಕಣ: ಕುರುಡರಾಗಿ ಹುಟ್ಟಿದ ಕಾರಣಕ್ಕೆ ನೋವು, ತಿರಸ್ಕಾರ ಅನುಭವಿಸುತ್ತಿದ್ದ ಶ್ರೀಕಾಂತ್‌ ಬೊಳ್ಳಾ ಹಿಡಿದ ಛಲದ ಹಾದಿ ಇಂದು ಅವರನ್ನು ದೊಡ್ಡ ಕಂಪನಿಗಳ ಮಾಲಿಕರಾಗುವತ್ತ, ನೂರಾರು ದಿವ್ಯಾಂಗರಿಗೆ ಕೆಲಸ ನೀಡುವವರೆಗೆ ಮುನ್ನಡೆಸಿದೆ. ನಾವೆಲ್ಲರೂ ಓದಿ ರೋಮಾಂಚಿತರಾಗಬಹುದಾದ ಸ್ಫೂರ್ತಿ ಕಥೆಯಿದು.

VISTARANEWS.COM


on

rajamarga column srikant bolla
Koo

ಕಣ್ಣಿಲ್ಲ ಎಂಬ ಕಾರಣಕ್ಕೆ ಐಐಟಿ ರಿಜೆಕ್ಟ್ ಆಗಿದ್ದ ಯುವಕನು ಕೋಟಿ ಕೋಟಿ ಸಂಪಾದನೆ ಮಾಡಿದ್ದು ಹೇಗೆ?

Rajendra-Bhat-Raja-Marga-Main-logo

ರಾಜಮಾರ್ಗ ಅಂಕಣ: ಮೂರು ವರ್ಷಗಳ ಹಿಂದೆ ಇವರನ್ನು ಬೆಂಗಳೂರಿನ ಒಂದು ಬಿಸಿನೆಸ್ ಸಮ್ಮೇಳನದ ವೇದಿಕೆಯಲ್ಲಿ ಭೇಟಿಯಾಗಿದ್ದೆ. ಅವರ ಹೋರಾಟದ ಕಥೆಯನ್ನು ಅವರ ಮಾತಲ್ಲೇ ಕೇಳಿ ರೋಮಾಂಚನವಾಗಿತ್ತು.

ಶ್ರೀಕಾಂತ್ ಬೊಳ್ಳ ಅವರ ಹೋರಾಟದ ಅದ್ಭುತವಾದ ಕಥೆಯನ್ನು ಅವರದ್ದೇ ಮಾತುಗಳಲ್ಲಿ ಕೇಳೋಣ.

ನಾನು ಹುಟ್ಟಿದ್ದು ಆಂಧ್ರಪ್ರದೇಶದ ಮಚಲಿ ಪಟ್ಟಣದ ಒಂದು ಪುಟ್ಟ ಗ್ರಾಮದಲ್ಲಿ (1992). ನನ್ನ ಹುಟ್ಟು ಕುರುಡುತನ ನನ್ನ ಕೃಷಿಕ ಕುಟುಂಬಕ್ಕೆ ದೊಡ್ಡ ಸವಾಲು ಆಗಿತ್ತು. ನಮ್ಮ ಕುಟುಂಬದ ವಾರ್ಷಿಕ ಆದಾಯ 20,000 ರೂಪಾಯಿಗಿಂತ ಕಡಮೆ ಇದ್ದ ಕಾಲ ಅದು!

ಅಪಮಾನ, ತಿರಸ್ಕಾರ ಮತ್ತು ತಾರತಮ್ಯ

ನಾನು ಕುರುಡ ಎಂಬ ಕಾರಣಕ್ಕೆ ತಿರಸ್ಕಾರ, ಅಪಮಾನ ತುಂಬಾ ನೋವು ಕೊಡುತ್ತಿತ್ತು. ತರಗತಿಯಲ್ಲಿ ಕೊನೆಯ ಬೆಂಚು ಖಾಯಂ. ಆಟಕ್ಕೆ ಅವಕಾಶವನ್ನೇ ಕೊಡುತ್ತಿರಲಿಲ್ಲ. ಇದರಿಂದ ಅಪ್ಪ ನೊಂದುಕೊಂಡು ನನ್ನನ್ನು ಹೈದರಾಬಾದ್ ನಗರದ ವಿಶೇಷ ಮಕ್ಕಳ ಶಾಲೆಗೆ ಸೇರಿಸಿದರು. ಅಲ್ಲಿ ನನ್ನ ಜೀವನದ ಹಲವು ಟರ್ನಿಂಗ್ ಪಾಯಿಂಟಗಳು ಆರಂಭ! ಕಲಿಕೆಯಲ್ಲಿ ನಾನು ನನ್ನ ತರಗತಿಗೆ ಪ್ರಥಮ ಬರಲು ಆರಂಭಿಸಿದೆ. ಕುರುಡು ಮಕ್ಕಳ ಕ್ರಿಕೆಟ್ ತಂಡದಲ್ಲಿ ನಾನು ರಾಷ್ಟ್ರೀಯ ತಂಡದಲ್ಲಿ ಆಡಿದೆ.

ಅಬ್ದುಲ್ ಕಲಾಂ ಭೇಟಿ ಮಿಂಚು ಹರಿಸಿತು

ನಾನು ಪ್ರೌಢಶಾಲೆಯಲ್ಲಿ ಓದುವಾಗ ನಮ್ಮ ಶಾಲೆಗೊಮ್ಮೆ ಅಬ್ದುಲ್ ಕಲಾಂ ಭೇಟಿ ನೀಡಿದರು. ಅವರ ಮಾತುಗಳಿಂದ ನಾನು ಪ್ರಭಾವಿತನಾದೆ. ಅವರ ‘ಲೀಡ್ ಇಂಡಿಯಾ 2020’ ಎಂಬ ವಿದ್ಯಾರ್ಥಿ ಅಭಿಯಾನಕ್ಕೆ ನಾನು ಸದಸ್ಯತನ ಪಡೆದೆ. ನನಗೆ ಎಸೆಸೆಲ್ಸಿ ಪರೀಕ್ಷೆಯಲ್ಲಿ 90% ಅಂಕಗಳು ಬಂದವು. ವಿಜ್ಞಾನದಲ್ಲಿ ಪಿಯುಸಿ ಮಾಡಬೇಕೆಂದು ನನ್ನ ಆಸೆ. ಆದರೆ ನಾನು ಕುರುಡ ಎಂಬ ಕಾರಣಕ್ಕೆ ನನಗೆ ಯಾವುದೇ ಕಾಲೇಜಿನಲ್ಲಿ ವಿಜ್ಞಾನದ ಸೀಟ್ ಸಿಗಲಿಲ್ಲ.

ನನಗೆ ಅಬ್ದುಲ್ ಕಲಾಂ ಅವರ ಮಾತುಗಳು ನೆನಪಾದವು – ಹಕ್ಕಿ ಹಾರುವುದು ರೆಕ್ಕೆಗಳ ಬಲದಿಂದಲ್ಲ. ಅದು ಹಾರುವುದು ಭರವಸೆಗಳ ಬಲದಿಂದ!

ಸರಕಾರದ ವಿರುದ್ಧ ಬೀದಿಗೆ ಇಳಿದು ಹೋರಾಟ.

ನಾನು ಹೈದರಾಬಾದ್ ಸರಕಾರದ ವಿರುದ್ಧ ರಸ್ತೆಗಿಳಿದು ಪ್ರತಿಭಟನೆಯನ್ನು ಮಾಡಿದೆ. ಆರು ತಿಂಗಳ ನಂತರ ನನಗೆ ವಿಜ್ಞಾನದ ಸೀಟ್ ದೊರೆಯಿತು. ಸತತವಾಗಿ ಕಷ್ಟ ಪಟ್ಟೆ. ಬ್ರೈಲ್ ಲಿಪಿಯಲ್ಲಿ ಪರೀಕ್ಷೆಯನ್ನು ಬರೆದು ದ್ವಿತೀಯ ಪಿಯುಸಿಯಲ್ಲಿ ನನಗೆ 98% ಅಂಕಗಳು ಬಂದವು!

ಐಐಟಿ ಸಂಸ್ಥೆಗಳು ಬಾಗಿಲು ತೆರೆಯಲಿಲ್ಲ

ನನಗೆ ಐಐಟಿಯಲ್ಲಿ BE ಮಾಡುವ ಆಸೆ. ಆದರೆ ಭಾರತದ ಯಾವುದೇ ಐಐಟಿ ಕಾಲೇಜುಗಳು ನನಗೆ ಕುರುಡ ಎಂಬ ಕಾರಣಕ್ಕೆ ಎಂಟ್ರೆನ್ಸ್ ಪರೀಕ್ಷೆಗೂ ಅವಕಾಶ ನೀಡಲಿಲ್ಲ. ನಾನು ಕೈಚೆಲ್ಲಲಿಲ್ಲ. ಅಮೆರಿಕಾದ ನಾಲ್ಕು ಪ್ರಸಿದ್ಧವಾದ ಯೂನಿವರ್ಸಿಟಿಗಳ ಬಾಗಿಲು ಬಡಿದೆ. ಎಲ್ಲವೂ ಆಹ್ವಾನ ನೀಡಿದವು.

ನಾನು ಮಸ್ಸಾಚುಸೆಟ್ಸ್ ವಿವಿ ಆರಿಸಿಕೊಂಡೆ. ಅಮೆರಿಕಾದ ವಿವಿಯಲ್ಲಿ BE ಪ್ರವೇಶ ಪಡೆದ ಜಗತ್ತಿನ ಮೊದಲ ಕುರುಡ ವಿದ್ಯಾರ್ಥಿ ನಾನಾಗಿದ್ದೆ! ನನಗೆ ಇಷ್ಟವಾದ BE ಕೋರ್ಸನ್ನು ಮುಗಿಸಿದೆ. ಅಲ್ಲಿ ಈಜು ಮತ್ತು ಡೈವಿಂಗಲ್ಲಿ ವಿವಿ ದಾಖಲೆ ಕೂಡ ಮಾಡಿದ್ದೆ. ಅಮೆರಿಕಾದ ಕೆಲವು ಕಾರ್ಪೊರೇಟ್ ಕಂಪೆನಿಗಳು ನನಗೆ ಉದ್ಯೋಗ ನೀಡಲು ಮುಂದೆ ಬಂದವು.

ಆದರೆ ನನ್ನ ಕನಸುಗಳು ಭಾರತದಲ್ಲಿ ಇದ್ದವು!

2011ರಲ್ಲಿ ಭಾರತಕ್ಕೆ ಬಂದು ಮತ್ತೆ ಅಬ್ದುಲ್ ಕಲಾಂ ಅವರನ್ನು ಭೇಟಿ ಮಾಡಿದೆ. ಅವರ ಸಲಹೆಯಂತೆ ಬಹು ವಿಕಲತೆಯ ಮಕ್ಕಳಿಗಾಗಿ “ಸಮನ್ವೈ ಸೆಂಟರ್” ಎಂಬ ಸೇವಾ ಸಂಸ್ಥೆ ಆರಂಭಿಸಿದೆ. ಬ್ರೈಲ್ ಪ್ರಿಂಟಿಂಗ್ ಪ್ರೆಸ್ ತೆರೆದೆ. 3000 ಅಶಕ್ತ ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ನೆರವಿಗೆ ನಿಂತೆ. ಅಷ್ಟಕ್ಕೇ ಸುಮ್ಮನಾಗಲಿಲ್ಲ.

ಆರಂಭ ಆಯಿತು ಅವರದ್ದೇ ಕಂಪೆನಿ

2011ರಲ್ಲಿ ‘ BOLLANT INDUSTRY’ ಎಂಬ ಸಣ್ಣ ಉದ್ಯಮವನ್ನು ಆರಂಭಿಸಿದೆ. ನಗರಪಾಲಿಕೆಯ ತ್ಯಾಜ್ಯ ವಸ್ತುಗಳಿಂದ ಮತ್ತು ಆಡಕೆಯಿಂದ ಕ್ರಾಫ್ಟ್ ಪೇಪರ್ ತಯಾರಿಸುವ ಕಂಪೆನಿ ಅದು. ಹಣ ಮಾಡುವುದು ನನ್ನ ಉದ್ದೇಶ ಆಗಿರಲಿಲ್ಲ. ನನ್ನ ಕಂಪೆನಿಯಲ್ಲಿ ಕುರುಡರಿಗೆ ಮತ್ತು ವಿಕಲಚೇತನರಿಗೆ ಉದ್ಯೋಗ ನೀಡಿದೆ. ರತನ್ ಟಾಟಾ ಅವರು ನನ್ನ ಕಂಪೆನಿಯಲ್ಲಿ ಹೂಡಿಕೆ ಮಾಡಲು ಮುಂದೆ ಬಂದರು. ನನ್ನ ಐಕಾನ್ ಎಪಿಜೆ ಅಬ್ದುಲ್ ಕಲಾಂ ಅವರು ಬಂದು ದೀಪ ಹಚ್ಚಿದರು. ಮುಂದೆ ಆ ಕಂಪೆನಿಯು ಪ್ರತೀ ತಿಂಗಳು 20% ಪ್ರಗತಿ ದಾಖಲಿಸುತ್ತಾ ಬಂದಿತು.

ದಿವ್ಯಾಂಗರಿಗೆ ಉದ್ಯೋಗ ನೀಡಿದರು

ಇಂದು ನನ್ನ ಕಂಪೆನಿಗೆ ನಾಲ್ಕು ರಾಜ್ಯಗಳಲ್ಲಿ 20 ಶಾಖೆಗಳು ಇವೆ. 100 ಕೋಟಿ ರೂಪಾಯಿ ವಾರ್ಷಿಕ ಟರ್ನ್ ಓವರ್ ಇದೆ! ನೂರಕ್ಕೆ ನೂರು ಸೌರಶಕ್ತಿ ಆಧಾರಿತವಾಗಿದೆ ಮತ್ತು ಪರಿಸರಸ್ನೇಹಿ ಆಗಿದೆ. ಅಶಕ್ತ ದಿವ್ಯಾಂಗರಿಗೆ ಸ್ವಾವಲಂಬಿ ಬದುಕಿನ ಅವಕಾಶವನ್ನು ನೀಡಿದ ಖುಷಿ ಇದೆ. ಭಾರತದ ಸಮಸ್ಯೆಗಳಾದ ಬಡತನ, ನಿರಕ್ಷರತೆ, ನಿರುದ್ಯೋಗಗಳ ನಿವಾರಣೆಗೆ ನಮ್ಮಿಂದಾದಷ್ಟು ಪ್ರಯತ್ನ ಪ್ರತಿಯೊಬ್ಬರೂ ಮಾಡಬೇಕು. ‘ಪಂಚೀ ಉಡತೀ ಹೈ ಪಂಖೋ ಕೀ ತಾಕತ್ ಸೆ ನಹೀಂ. ಹೌಸಲೆ ಸೇ!’ ಎಂಬ ಅಬ್ದುಲ್ ಕಲಾಂ ಅವರ ಮಾತಿನೊಂದಿಗೆ ಅವರು ತನ್ನ ಮಾತು ನಿಲ್ಲಿಸಿದರು. ಅವರ ಆಳವಾದ ಕಣ್ಣುಗಳಲ್ಲಿ ಗೆದ್ದ ಖುಷಿ ಇತ್ತು.

ಭರತ ವಾಕ್ಯ

ಅಂದ ಹಾಗೆ ಶ್ರೀಕಾಂತ್ ಅವರಿಗೆ ಫೋರ್ಬ್ಸ್ ಮಾಗಜ್ಹಿನ್ 2017ರಲ್ಲಿ ನಡೆಸಿದ ಏಷಿಯಾದ 30 ಅತ್ಯಂತ ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಸ್ಥಾನವನ್ನು ದೊರೆತಿದೆ. ‘NDTV ಇಂಡಿಯನ್ ಆಫ್ ದಿ ಇಯರ್’ ಪ್ರಶಸ್ತಿ, ‘ಪ್ರೈಡ್ ಆಫ್ ತೆಲಂಗಾಣ’ ಪ್ರಶಸ್ತಿ, ‘ಟಿವಿ 9 ನವನಕ್ಷತ್ರ’ ಪ್ರಶಸ್ತಿ……. ಮೊದಲಾದ ನೂರಾರು ಪ್ರಶಸ್ತಿಗಳು ಅವರಿಗೆ ದೊರೆತಿವೆ. ಶ್ರೀಕಾಂತ್ ಬೊಳ್ಳ ಅವರ ಬದುಕು ಸಾವಿರಾರು ಯುವಕ ಯುವತಿಯರಿಗೆ ಸ್ಫೂರ್ತಿ ನೀಡಿದೆ.

ಇದನ್ನೂ ಓದಿ: ರಾಜಮಾರ್ಗ ಅಂಕಣ: ರಿಶಭ್ ಪಂತ್ – ಕಮ್ ಬ್ಯಾಕ್ ಅಂದರೆ ಹೀಗಿರಬೇಕು!

Continue Reading

ಪ್ರಮುಖ ಸುದ್ದಿ

ರಾಜಮಾರ್ಗ ಅಂಕಣ: ಮೊಂಡು ಕೈಗಳಿಂದ ಜಗತ್ತನ್ನು ಗೆಲ್ಲಲು ಹೊರಟ ಹೋರಾಟಗಾರನ ಕಥೆ

ರಾಜಮಾರ್ಗ ಅಂಕಣ: ‘ಈಸಬೇಕು ಇದ್ದು ಜೈಸಬೇಕು’ ಎಂಬ ದಾಸವಾಣಿಯಂತೆ ನೀರಿಗೆ ಧುಮುಕಿದಾಗ ತನಗೆ ಕೈಗಳು ಇಲ್ಲ ಎಂಬುದನ್ನು ಮರೆಯುವ ಅವರು ಈಗಾಗಲೇ ಅಂತಾರಾಷ್ಟ್ರೀಯ ಪಾರಾ ಈಜು ಸ್ಪರ್ಧೆಯಲ್ಲಿ ಎಂಟು ಪದಕಗಳನ್ನು ಗೆದ್ದಿದ್ದಾರೆ. ಏಳು ಸಾಗರಗಳನ್ನು ಈಜಿ ಬಂದಿದ್ದಾರೆ ವಿಶ್ವಾಸ್.

VISTARANEWS.COM


on

vishwas ks rajamarga
Koo

ಪಾರಾ ಸ್ವಿಮ್ಮರ್ ವಿಶ್ವಾಸ್ ಕೆ.ಎಸ್ ಅವರ ಹೃದಯ ಗೆಲ್ಲುವ ಕಥನ

Rajendra-Bhat-Raja-Marga-Main-logo

ರಾಜಮಾರ್ಗ ಅಂಕಣ: ಯು ಟ್ಯೂಬ್ (Youtube) ವೇದಿಕೆಗಳಲ್ಲಿ ಈ ವಿಶ್ವಾಸ್ ಕೆ.ಎಸ್ (Vishwas KS) ಅವರ ಟೆಡ್ ಟಾಕ್ (Ted Talk) ಕೇಳುತ್ತಾ ಹೋದಂತೆ ಕಣ್ಣು ತುಂಬಿ ಬಂದು ಗಲ್ಲ ಒದ್ದೆಯಾದ ಅನುಭವ ನನಗಾಗಿದೆ. ಅವರ ಬದುಕೇ ಒಂದು ರೋಚಕವಾದ ಯಶೋಗಾಥೆ.

ಈ ವಿಶ್ವಾಸ್ ಬಿಕಾಂ ಪದವೀಧರ. ಎರಡೂ ಕೈಗಳು ಇಲ್ಲದ ಅನೇಕ ವ್ಯಕ್ತಿಗಳು ಭಿಕ್ಷೆಯನ್ನು ಬೇಡಿ ಬದುಕುತ್ತಿರುವ ಇಂದಿನ ದಿನಗಳಲ್ಲಿ ಕೋಲಾರದ ಕಾಳಹಸ್ತಿಪುರದ ಯುವಕ ವಿಶ್ವಾಸ್ ತನ್ನ ಬದುಕನ್ನು ತಾನೇ ರೂಪಿಸಿಕೊಂಡಿದ್ದಾರೆ. ಅದಕ್ಕೆ ಅವರು ಆರಿಸಿಕೊಂಡ ಕ್ಷೇತ್ರ ಅಂದರೆ ಈಜು. ‘ಈಸಬೇಕು ಇದ್ದು ಜೈಸಬೇಕು’ ಎಂಬ ದಾಸವಾಣಿಯಂತೆ ನೀರಿಗೆ ಧುಮುಕಿದಾಗ ತನಗೆ ಕೈಗಳು ಇಲ್ಲ ಎಂಬುದನ್ನು ಮರೆಯುವ ಅವರು ಈಗಾಗಲೇ ಅಂತಾರಾಷ್ಟ್ರೀಯ ಪಾರಾ ಈಜು ಸ್ಪರ್ಧೆಯಲ್ಲಿ ಎಂಟು ಪದಕಗಳನ್ನು ಗೆದ್ದಿದ್ದಾರೆ. ಏಳು ಸಾಗರಗಳನ್ನು ಈಜಿ ಬಂದಿದ್ದಾರೆ.

ಅದೇ ರೀತಿ ಮಾರ್ಷಿಯಲ್ ಆರ್ಟಿನಲ್ಲಿ ರೆಡ್ ಬೆಲ್ಟ್ ಪಡೆದಿದ್ದಾರೆ. ‘ಡಾನ್ಸ್ ಕರ್ನಾಟಕ ಡಾನ್ಸ್’ ರಿಯಾಲಿಟಿ ಶೋʼದಲ್ಲಿ ನೃತ್ಯ ಮಾಡಿದ್ದಾರೆ. ಕಾಲಿನಲ್ಲಿಯೇ ಅಡುಗೆ ಮಾಡುತ್ತಾರೆ. ಕಾಲಿನ ಬೆರಳುಗಳ ನಡುವೆ ಪೆನ್ನು ಹಿಡಿದು ಬರೆಯುತ್ತಾರೆ. ಮೊಬೈಲ್ ಆಪರೇಟ್ ಮಾಡುತ್ತಾರೆ. ಬಟ್ಟೆ ಒಗೆಯುತ್ತಾರೆ. ತನ್ನ ಕೆಲಸವನ್ನು ತಾನೇ ಮಾಡುತ್ತಾರೆ. ವೇದಿಕೆಯಲ್ಲಿ ನಿಂತು ಮೋಟಿವೇಶನ್ ಮಾತು ಆಡುತ್ತಾರೆ. ಅವರಿಗೆ ತನಗೆ ಕೈಗಳು ಇಲ್ಲ ಅನ್ನುವುದು ಮರೆತೇ ಹೋಗಿದೆ ಎಂದು ನನ್ನ ಭಾವನೆ.

ಸಣ್ಣ ಪ್ರಾಯದಲ್ಲಿ ದುರಂತ

ನಾಲ್ಕನೇ ತರಗತಿಯಲ್ಲಿ ಆದ ದುರಂತ ಅದು. ವಿಶ್ವಾಸ್ ನಾಲ್ಕನೇ ತರಗತಿಯಲ್ಲಿ ಇರುವಾಗ ಕಾಂಕ್ರೀಟ್ ಆಗ್ತಾ ಇದ್ದ ಒಂದು ಕಟ್ಟಡವನ್ನು ಹತ್ತುತ್ತಿದ್ದಾಗ ಕಾಲು ಜಾರಿ ಬೀಳುತ್ತಾರೆ. ಆಗ ಹೈ ಟೆನ್ಶನ್ ಕೇಬಲ್ ಹಿಡಿದು ನೇತಾಡುವ ಪ್ರಸಂಗ ಬರುತ್ತದೆ. ಆಗ ಅವರನ್ನು ಬಿಡಿಸುವ ಪ್ರಯತ್ನ ಮಾಡಿದ ಅವರ ಅಪ್ಪ ವಿದ್ಯುತ್ ಆಘಾತಕ್ಕೆ ಸಿಲುಕಿ ಪ್ರಾಣ ಕಳೆದುಕೊಳ್ಳುತ್ತಾರೆ. ಈ ಹುಡುಗನು ಎರಡೂ ಕೈ ಸುಟ್ಟು ಹೋಗಿ ಈ ಸ್ಥಿತಿಗೆ ಬರುತ್ತಾರೆ.

ಆಸ್ಪತ್ರೆಯಲ್ಲಿ ಹಲವಾರು ತಿಂಗಳು ನೋವು ಪಟ್ಟು ಮಲಗಿ ಹೊರಬರುವಾಗ ಆತನ ಕೈಗೆ ಪ್ಲಾಸ್ಟಿಕ್ ಕೈ ಜೋಡಿಸಿರುತ್ತಾರೆ. ಅದು ಕೈಗಳ ಫೀಲ್ ಕೊಡದೆ ಹೋದಾಗ ಮತ್ತು ಯಾವ ಕೆಲಸಕ್ಕೂ ಬೇರೆಯವರನ್ನು ಅವಲಂಬನೆ ಮಾಡುವ ಪ್ರಸಂಗ ಬಂದಾಗ ಅದನ್ನು ಕಿತ್ತು ಬಿಸಾಡಿ ಮೊಂಡು ಕೈ ಹಿಡಿದೇ ಇಲ್ಲಿಯವರೆಗೆ ಬಂದಿದ್ದಾರೆ.

ಹಲವು ಕಡೆಯಲ್ಲಿ ಉದ್ಯೋಗ ಪ್ರಯತ್ನ ಪಟ್ಟು ಸೋತಾಗ ಡಿಪ್ರೆಸ್ ಆದದ್ದೂ ಇದೆ. ಹೊಟ್ಟೆಪಾಡಿಗಾಗಿ ಹಲವು ವೃತ್ತಿಗಳನ್ನು ಮಾಡಲು ಪ್ರಯತ್ನ ಪಟ್ಟು ಸೋತದ್ದು ಇದೆ. ಆದರೆ ಅವರ ಅದ್ಭುತವಾದ ಇಚ್ಛಾಶಕ್ತಿ ಅವರನ್ನು ಇಲ್ಲಿಯವರೆಗೆ ಕರೆದುಕೊಂಡು ಬಂದಿದೆ. ಈ ಹೋರಾಟದ ಪ್ರತೀ ಹಂತದಲ್ಲೂ ಅವರ ಅಮ್ಮ ಅವರ ಜೊತೆಗೆ ನಿಂತಿದ್ದಾರೆ. ಇತ್ತೀಚೆಗೆ ಒಬ್ಬರು ಶಿಕ್ಷಕಿ, ಲಕ್ಷ್ಮಿ ಎಂದು ಅವರ ಹೆಸರು, ಅವರನ್ನು ಪ್ರೀತಿಸಿ ಮದುವೆ ಆಗಿದ್ದಾರೆ. ಆ ದಂಪತಿಗೆ ಒಬ್ಬ ಮಗನೂ ಇದ್ದಾನೆ. ಪತ್ನಿ ಲಕ್ಷ್ಮಿ ಈಗ ವಿಶ್ವಾಸ್ ಅವರ ಸಾಧನೆಗಳಿಗೆ ಸ್ಫೂರ್ತಿಯಾಗಿ ನಿಂತಿದ್ದಾರೆ.

ಬದುಕಿನ ಕಥೆ ಸಿನೆಮಾ ಆಯಿತು.

ವಿಶ್ವಾಸ್ ಅವರ ಬದುಕಿನ ಕಥೆಯು ʻಅರಬ್ಬೀ’ ಎಂಬ ಸಿನೆಮಾ ಆಗಿ ಜನಪ್ರಿಯ ಆಗಿದೆ. ಮುಂದಿನ ಪಾರಾ ಒಲಿಂಪಿಕ್ಸನಲ್ಲಿ ಭಾಗವಹಿಸಬೇಕು ಎನ್ನುವ ಹಠದಲ್ಲಿ ವಿಶ್ವಾಸ್ ಬೆಂಗಳೂರಿನ ಬಸವನಗುಡಿಯ ಈಜುಕೊಳದಲ್ಲಿ ದಿನಕ್ಕೆ ಹಲವಾರು ಗಂಟೆ ಕಠಿಣ ಅಭ್ಯಾಸ ಮಾಡುತ್ತಿದ್ದಾರೆ. ಒಬ್ಬ ಒಳ್ಳೆಯ ಕೋಚ್ ಅವರ ನೆರವಿಗೆ ನಿಂತಿದ್ದಾರೆ.

ವಿಶ್ವಾಸದ ಕಡಲಲ್ಲಿ ಈಜುತ್ತಿರುವ ಈ ವಿಶ್ವಾಸ್ ಅವರಿಗೆ ನಿಮ್ಮ ಒಂದು ಶಾಭಾಷ್ ಹೇಳಿ ಮುಂದೆ ಹೋಗೋಣ ಅಲ್ಲವೇ?

ಇದನ್ನೂ ಓದಿ: ರಾಜಮಾರ್ಗ ಅಂಕಣ: ಭಾರತೀಯ ಸೇನೆಯ ಬಗ್ಗೆ ಎದೆ ಉಬ್ಬಿಸಿ ನಡೆಯಲು ಇನ್ನೊಂದು ಕಾರಣ

Continue Reading

ಸ್ಫೂರ್ತಿ ಕತೆ

Raja Marga Column :‌ ಕಣ್ಣೇ ಕಾಣದ ಆಕೆ ಎರಡು ಬಾರಿ ಐಎಎಸ್‌ ಪಾಸ್‌ ಮಾಡಿದ್ದರು!

Raja marga Column : ಆ ಹೆಣ್ಮಗಳಿಗೆ ಕಣ್ಣೇ ಕಾಣಿಸುವುದಿಲ್ಲ. ಆದರೆ, ಛಲದಿಂದ ಆಕೆ ಒಳಗಿನ ಕಣ್ಣಿಂದ ಓದಿಗಳು. ಒಂದಲ್ಲ ಎರಡು ಬಾರಿ ಯುಪಿಎಸ್ಸಿ ಪಾಸ್‌ ಮಾಡಿದಳು. ಈಗ ಆಕೆ ಜಿಲ್ಲಾಧಿಕಾರಿ.

VISTARANEWS.COM


on

Raja Marga Column Pranjal pateel
Koo
RAJAMARGA

Raja Marga Column : ಭಾರತದ ಅತ್ಯಂತ ಕ್ಲಿಷ್ಟವಾದ ಪರೀಕ್ಷೆ ಅಂದರೆ ಐಎಎಸ್. ಕೇಂದ್ರ ಸರಕಾರದ ಅಧೀನ ಸಂಸ್ಥೆಯಾದ UPSC ನಡೆಸುವ ಈ ಪರೀಕ್ಷೆಯಲ್ಲಿ‌ (UPSC Exam) ಪ್ರತೀ ವರ್ಷ 7ರಿಂದ 8 ಲಕ್ಷ ಯುವಕ – ಯುವತಿಯರು ತಮ್ಮ ಪ್ರತಿಭೆಯನ್ನು ನಿಕಷಕ್ಕೆ ಒಡ್ಡುತ್ತಿದ್ದು ತೇರ್ಗಡೆ ಆಗುವವರ ಪ್ರಮಾಣ 2-3% ಮಾತ್ರ! ಅಂತಹ ಪರೀಕ್ಷೆಯಲ್ಲಿ ಪೂರ್ಣ ಕುರುಡುತನ ಇರುವ ಪ್ರಾಂಜಲ್‌ ಪಾಟೀಲ್‌ (Pranjal Patil) ಎಂಬ ಹುಡುಗಿಯೊಬ್ಬಳು ಎರಡು ಬಾರಿ ತೇರ್ಗಡೆಯಾದರು (IAS officer) ಅಂದರೆ ನಂಬೋದು ಹೇಗೆ? ಇಲ್ಲಿದೆ ಅವರ ಕತೆ,

Raja Marga Column: ಆಕೆ ಮಹಾರಾಷ್ಟ್ರದವರು

ಪ್ರಾಂಜಲ್‌ ಪಾಟೀಲ್ ಮಹಾರಾಷ್ಟ್ರದ ಉಲ್ಲಾಸ ನಗರದವರು. ಹುಟ್ಟುವಾಗ ಆಕೆಗೆ ಮಸುಕು ಮಸುಕಾಗಿ ಕಾಣುತ್ತಿತ್ತು. ಆರು ವರ್ಷ ಪ್ರಾಯ ಆದಾಗ ಪೂರ್ತಿಯಾಗಿ ಕುರುಡುತನ ಆವರಿಸಿತ್ತು. ಸಣ್ಣ ಪ್ರಾಯದಲ್ಲಿಯೇ ಆಕೆಯ ದೊಡ್ಡ ಕನಸುಗಳಿಗೆ ಕೊಳ್ಳಿ ಇಟ್ಟ ಅನುಭವ ಆಗಿತ್ತು. ಆದರೆ ಮನೆಯವರು ಮತ್ತು ಹೆತ್ತವರು ಆಕೆಯ ಮನೋಸ್ಥೈರ್ಯವನ್ನು ಕುಸಿಯಲು ಬಿಡಲಿಲ್ಲ.

ಆಕೆ ಮಹಾ ಪ್ರತಿಭಾವಂತೆ. ದಾದರ್ ನಗರದ ಕಮಲ ಮೆಹ್ತಾ ಕುರುಡು ಮಕ್ಕಳ ಶಾಲೆಗೆ ಸೇರಿ ಪ್ರಾಥಮಿಕ ಶಿಕ್ಷಣ ಪಡೆಯುತ್ತಾರೆ. ಬ್ರೈಲ್ ಲಿಪಿಯಲ್ಲಿ ಓದಲು ಮತ್ತು ಬರೆಯಲು ಕಲಿಯುತ್ತಾರೆ. ಮುಂದೆ ಸೈಂಟ್ ಕ್ಸೇವಿಯರ್ ಕಾಲೇಜಿನಲ್ಲಿ ರಾಜನೀತಿ ಶಾಸ್ತ್ರದಲ್ಲಿ ಪದವಿ ಪಡೆಯುತ್ತಾರೆ.

Raja Marga Column Pranjal Pateel
ತಂದೆ ಮತ್ತು ತಾಯಿ ಜತೆ ಪ್ರಾಂಜಲ್‌ ಪಾಟೀಲ್‌

ಆಗ ಏನೂ ಕಾಣದಿದ್ದರೂ ಉಲ್ಲಾಸ ನಗರದ ಮನೆಯಿಂದ ಹೊರಟು ಒಬ್ಬಳೇ ಛತ್ರಪತಿ ಶಿವಾಜಿ ಟರ್ಮಿನಲ್ ನವರೆಗೆ ಹೋಗಿ ಹಿಂದೆ ಬರುತ್ತಿದ್ದರು. ಮುಂಬೈ ನಗರದ ಜನರು ತನ್ನ ಬಗ್ಗೆ ತುಂಬಾನೇ ಅನುಕಂಪವನ್ನು ಹೊಂದಿದ್ದರು ಅನ್ನುತ್ತಾರೆ ಆಕೆ.

Raja Marga Column: ಆಕೆಯ ಕನಸುಗಳಿಗೆ ಆಕಾಶವೂ ಮಿತಿ ಅಲ್ಲ!

ಮುಂದೆ ಪ್ರಾಂಜಲ್ ಹೊರಟದ್ದು ದೆಹಲಿಗೆ. ಜವಾಹರಲಾಲ್ ನೆಹರು ವಿವಿಯ ಮೂಲಕ ಆಕೆ ಅಂತಾರಾಷ್ಟ್ರೀಯ ಸಂಬಂಧಗಳಲ್ಲಿ ಸ್ನಾತಕೋತ್ತರ ಪದವಿ ಮತ್ತು ಡಾಕ್ಟರೇಟ್ ಪದವಿ ಪಡೆಯುತ್ತಾರೆ. ಅದೇ ಹೊತ್ತಿಗೆ ವಿದುಷಿ ಎಂಬ ಗೆಳತಿಯ ಮಾತಿನಿಂದ ಆಕೆ ಪ್ರಭಾವಿತರಾಗುತ್ತಾರೆ. ಐಎಎಸ್ ಪರೀಕ್ಷೆಗೆ ಗಂಭೀರವಾದ ಸಿದ್ಧತೆ ನಡೆಸುವಂತೆ ವಿದುಷಿ ಆಕೆಗೆ ಸಲಹೆ ಕೊಡುತ್ತಾರೆ.

Raja Marga Column Pranjal Pateel

ಆಗ ಆಕೆಗೆ JAWS (Job Access With Speech) ಎಂಬ ಸಾಫ್ಟವೇರ್ ನೆರವಿಗೆ ಬರುತ್ತದೆ. ಅದು ಯಾವುದೇ ಪುಸ್ತಕವನ್ನು ಗಟ್ಟಿಯಾಗಿ ಓದಿ ಹೇಳುವ ಸಾಫ್ಟ್‌ವೇರ್. ತನ್ನ ಆಲಿಸುವ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡು ಆಕೆ ದಿನಕ್ಕೆ 10-12 ಗಂಟೆ ಪುಸ್ತಕಗಳನ್ನು ಓದುತ್ತಾರೆ. ವಿಡಿಯೋ ಪಾಠಗಳನ್ನು ಕೇಳುತ್ತಾರೆ. ತನ್ನ ಗೆಳತಿಯ ನೆರವನ್ನು ಪಡೆಯುತ್ತಾರೆ.

ರೈಲ್ವೇಸ್ ಅವರಿಗೆ ಉದ್ಯೋಗವನ್ನು ನಿರಾಕರಿಸುತ್ತದೆ

2016ರಲ್ಲೀ ಅವರು ಭಾರತೀಯ ರೈಲ್ವೇ ಸೇವೆಗೆ ಅರ್ಜಿ ಹಾಕುತ್ತಾರೆ. ಆದರೆ ಆಕೆ ಕುರುಡಿ ಎಂಬ ಕಾರಣಕ್ಕೆ ರೈಲ್ವೇಸ್ ಅವರಿಗೆ ಉದ್ಯೋಗವನ್ನು ನಿರಾಕರಣೆ ಮಾಡುತ್ತದೆ. ಆಗ ಸಿಟ್ಟಿಗೆದ್ದ ಆಕೆ ಪ್ರಧಾನಿ ನರೇಂದ್ರ ಮೋದಿಗೆ ಮತ್ತು ರೈಲ್ವೇ ಮಂತ್ರಿ ಸುರೇಶ್ ಪ್ರಭು ಅವರಿಗೆ ನೇರವಾಗಿ ಪತ್ರ ಬರೆಯುತ್ತಾರೆ. ಆಗ ಸುರೇಶ್ ಪ್ರಭು ಅವರು ಆಕೆಯನ್ನು ಸಂಪರ್ಕ ಮಾಡಿ ನಿಮ್ಮ ವಿದ್ಯೆಗೆ ತಕ್ಕದಾದ ಉದ್ಯೋಗ ಕೊಡುವ ಭರವಸೆ ನೀಡಿದ್ದರು. ಆದರೆ ಆಗಲೇ ಐಎಎಸ್ ಪರೀಕ್ಷೆಯ ತಯಾರಿಯಲ್ಲಿ ಮುಳುಗಿದ್ದ ಪ್ರಾಂಜಲ್ ಆ ಪ್ರಸ್ತಾಪವನ್ನು ಸ್ವೀಕಾರ ಮಾಡುವುದಿಲ್ಲ.

Raja Marga Column Pranjal Pateel
ಸೀರೆ ಉಟ್ಟಾಗ ಹೀಗಿದ್ದಾರೆ ನೋಡಿ ಪ್ರಾಂಜಲ್‌ ಪಾಟೀಲ್

ಆಕೆ ಎರಡು ಬಾರಿ ಐಎಎಸ್ ಪರೀಕ್ಷೆ ತೇರ್ಗಡೆ ಆದರು!

ಅತ್ಯಂತ ಪ್ರಬಲ ಇಚ್ಛಾಶಕ್ತಿ, ನಿರಂತರ ಪ್ರಯತ್ನ, ಎಂದಿಗೂ ಬತ್ತಿ ಹೋಗದ ಸ್ಫೂರ್ತಿ, ಬೆಟ್ಟದಷ್ಟು ಆತ್ಮವಿಶ್ವಾಸ ಇವುಗಳ ಜೊತೆಗೆ 2016ರಲ್ಲಿ ಅವರು ಮೊದಲ ಬಾರಿಗೆ ಐಎಎಸ್ ಪರೀಕ್ಷೆ ಬರೆದು ಮೊದಲ ಪ್ರಯತ್ನದಲ್ಲಿಯೇ ತೇರ್ಗಡೆಯಾದರು! ಅದೂ ಯಾವ ಕೋಚಿಂಗ್ ಇಲ್ಲದೆ! ಆದರೆ ಆಲ್ ಇಂಡಿಯಾ ರ‍್ಯಾಂಕಿಂಗ್ 744 ಬಂದಿತ್ತು. ಅದು ಅವರಿಗೆ ತೃಪ್ತಿ ತರಲಿಲ್ಲ. ಯಾವುದೋ ಒಂದು ಅಜ್ಞಾತ ಇಲಾಖೆಯಲ್ಲಿ ಸಾಮಾನ್ಯ ಅಧಿಕಾರಿಯಾಗಿ ಕೆಲಸ ಮಾಡಲು ಆಕೆ ರೆಡಿ ಇರಲಿಲ್ಲ. ಅದಕ್ಕೋಸ್ಕರ ಎರಡನೇ ಬಾರಿಗೆ ಅಷ್ಟೇ ಪ್ರಯತ್ನ ಮಾಡಿ 2017ರಲ್ಲಿ ಮತ್ತೆ ಐಎಎಸ್ ಪರೀಕ್ಷೆ ಬರೆದರು. ಈ ಬಾರಿ ಕೂಡ ತೇರ್ಗಡೆ ಆದರು. ಈ ಬಾರಿ ರ‍್ಯಾಂಕಿಂಗ್ 124 ಬಂದಿತ್ತು!

Visually impaired IAS officer Pranjal pateel

ಅವರ ಕನಸಿನ ರೆಕ್ಕೆಗೆ ಸಾವಿರ ಗರಿಗಳು!

ಭಾರತದ ಮೊಟ್ಟ ಮೊದಲ ದೃಷ್ಟಿ ವಿಕಲತೆಯ ಸಾಧಕಿಯಾಗಿ ಆಕೆ ಐಎಎಸ್ ಪರೀಕ್ಷೆ ತೇರ್ಗಡೆ ಆಗಿದ್ದರು! ಲಿಖಿತ ಪರೀಕ್ಷೆಯಲ್ಲಿ ಆಕೆ ಪಡೆದ ಅಂಕಗಳು 854! ಹಾಗೂ ಸಂದರ್ಶನದಲ್ಲಿ ಆಕೆ ಪಡೆದ ಅಂಕಗಳು 179! ಒಟ್ಟು 1033 ಅನ್ನುವುದು ಕೂಡ ನಿಜವಾದ ಕ್ರೆಡಿಟ್. ತರಬೇತಿಯನ್ನು ಮುಗಿಸಿ ಮೇ 28, 2018ರಂದು ಅವರು ಕೇರಳದ ಎರ್ನಾಕುಲಂ ಜಿಲ್ಲೆಯಲ್ಲಿ ಅಸಿಸ್ಟಂಟ್ ಕಲೆಕ್ಟರ್ ಆಗಿ ನೇಮಕ ಪಡೆಯುತ್ತಾರೆ. ಮುಂದೆ ಅಕ್ಟೋಬರ್ 14, 2019ರಂದು ಸಬ್ ಕಲೆಕ್ಟರ್ ಆಗಿ ತಿರುವನಂತಪುರಂ ಜಿಲ್ಲೆಗೆ ನೇಮಕ ಪಡೆಯುತ್ತಾರೆ!

Pranjal pateel with Komal sing pateel
ಕೋಮಲ್‌ ಸಿಂಗ್‌ ಪಾಟೀಲ್‌ ಜತೆ ಮದುವೆಯಾದ ಕ್ಷಣ

ಯಾರ ಸಹಾಯ ಇಲ್ಲದೆ ತನ್ನ ಕೆಲಸಗಳನ್ನು ತಾನೇ ಮಾಡುವ, ಅದ್ಭುತವಾದ ಮೆಮೊರಿ ಪವರ್ ಹೊಂದಿರುವ, ಸಮಾಜ ಸೇವೆಯ ತೀವ್ರವಾದ ತುಡಿತ ಹೊಂದಿರುವ, ಬೆಟ್ಟವನ್ನು ಕರಗಿಸುವ ಧೈರ್ಯ ಮತ್ತು ಆತ್ಮವಿಶ್ವಾಸಗಳನ್ನು ಹೊಂದಿರುವ ಪ್ರಾಂಜಲ್ ಪಾಟೀಲ್ ಮತ್ತು ಆಕೆಯ ಗಂಡ ಕೋಮಲ್ ಸಿಂಗ್ ಪಾಟೀಲ್ ಅವರು ಇತ್ತೀಚೆಗೆ ತಮ್ಮ ಅಂಗದಾನಕ್ಕೆ ಜೊತೆಯಾಗಿ ಸಹಿ ಹಾಕಿ ಸುದ್ದಿ ಆಗಿದ್ದಾರೆ.

ಆಕೆಯ ಒಂದು ಮಾತು ನನಗೆ ಭಾರೀ ಕನೆಕ್ಟ್ ಆಗಿದ್ದು ಅದನ್ನು ಇಲ್ಲಿ ಉಲ್ಲೇಖ ಮಾಡುತ್ತೇನೆ.

SUCCESS doesn’t give us INSPIRATION. But the STRUGGLE behind the SUCCESS gives us the INSPIRATION. ಹೌದು ತಾನೇ?

ಇದನ್ನೂ ಓದಿ : Raja Marga Column : ಈ ಶಾರ್ಪ್‌ ಶೂಟರ್‌ ಅಜ್ಜಿ ಮೊದಲ ಬಾರಿ ಗನ್‌ ಹಿಡಿದದ್ದು 67ನೇ ವಯಸ್ಸಲ್ಲಿ!

Continue Reading

ಅಂಕಣ

Raja Marga Column : ಈ ಶಾರ್ಪ್‌ ಶೂಟರ್‌ ಅಜ್ಜಿ ಮೊದಲ ಬಾರಿ ಗನ್‌ ಹಿಡಿದದ್ದು 67ನೇ ವಯಸ್ಸಲ್ಲಿ!

Raja Marga Column : ಅವರೊಬ್ಬರು ಶೂಟರ್‌ ಅಜ್ಜಿ. ವಿಶ್ವದ ಮಟ್ಟದ ಸ್ಪರ್ಧೆಯಲ್ಲಿ ಮಿಂಚಿದವರು. ಅವರು ಶಾರ್ಪ್‌ ಶೂಟಿಂಗ್‌ಗಾಗಿ ಗನ್‌ ಕೈಯಲ್ಲಿ ಹಿಡಿದಾಗ ವಯಸ್ಸು 67.

VISTARANEWS.COM


on

Raja Marga Column Chandro Tomar Sharp Shooter
Koo
RAJAMARGA

Raja Marga Column : ಉತ್ತರ ಪ್ರದೇಶದ ಭಾಗಪಥ್ ಜಿಲ್ಲೆಯ ಒಂದು ಸಣ್ಣ ಹಳ್ಳಿಯು ಜೋಹ್ಹರಿ. ಅಲ್ಲಿಯ ಒಬ್ಬರು ಅಜ್ಜಿ ಶೂಟಿಂಗ್‌ನಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರಿ ಹೆಸರು ಮಾಡಿದ್ದರು. ಆಕೆ ಬದುಕಿದ್ದಾಗ ಜಗತ್ತಿನ ಅತ್ಯಂತ ಹಿರಿಯ ಶಾರ್ಪ್‌ ಶೂಟರ್ (Worlds oldest Sharp Shooter) ತಪ್ಪಿದ್ದೆ ಇಲ್ಲ ಅನ್ನೋದು ಅವರ ಹಿರಿಮೆ! ವಯಸ್ಸು ಆಕೆಯ ಮಟ್ಟಿಗೆ ಬರೇ ಒಂದು ನಂಬರ್ ಆಗಿ ಬಿಟ್ಟಿದೆ! ಅವರ ಹೆಸರು ಚಂದ್ರಾ ತೋಮರ್‌ (Chandro tomar) ಜನ ಅವರನ್ನು ಪ್ರೀತಿಯಿಂದ ‘ಶೂಟರ್ ಅಜ್ಜಿ’ (Shooter Ajji) ಎಂದು ಕರೆಯುತ್ತಾರೆ! ಏಕೆಂದರೆ ಎಂಬತ್ತರ ಹರೆಯದಲ್ಲಿ ಕೂಡ ಅವರು ಚಾಂಪಿಯನ್‌ಷಿಪ್ ಸೋತವರಲ್ಲ!

ಆಕೆ ತುಂಬಿದ ಮನೆಯ ಅಜ್ಜಿ!

ಆಕೆ ಹಳ್ಳಿಯ ಹೆಂಗಸು. ಶಾಲೆಗೆ ಹೋದವರಲ್ಲ. ತುಂಬಿದ ಮನೆಗೆ ಸೊಸೆಯಾಗಿ ಬಂದವರು. ಪ್ರೀತಿಸುವ ಗಂಡ, 5 ಮಕ್ಕಳು, 12 ಮೊಮ್ಮಕ್ಕಳು ಇರುವ ಸಂಸಾರದಲ್ಲಿ ಅವರು ಮುಳುಗಿ ಬಿಟ್ಟಿದ್ದರು. ಮನೆ ವಾರ್ತೆ, ಮನೆಯವರ ಕ್ಷೇಮ, ಅಡುಗೆ ಮಾಡುವುದು, ದನಗಳ ಚಾಕರಿ ಇಷ್ಟೆ ಗೊತ್ತು ಅವರಿಗೆ. ಶೂಟಿಂಗ್ ಬಗ್ಗೆ ಯೋಚನೆಯನ್ನು ಕೂಡ ಮಾಡಿದವರಲ್ಲ.

Raja Marga Column Chandro Tomar Sharp Shooter1

ಅವರ ಬದುಕಿನಲ್ಲಿ ತಿರುವು ಬಂದಾಗ ವಯಸ್ಸು 67!

ಅವರ ಹಳ್ಳಿಯಲ್ಲಿ ಒಂದು ಶಾರ್ಪ್ ಶೂಟರ್ ಕ್ಲಬ್ ಇತ್ತು. ಅದಕ್ಕೆ ಅವರ ಮೊಮ್ಮಗಳು ಶಿಫಾಲಿ ಆಸಕ್ತಿಯಿಂದ ಹೋಗಿ ಸೇರಿದ್ದರು. ಅಲ್ಲಿ ಹುಡುಗರೇ ಹೆಚ್ಚು ಬರುತ್ತಿದ್ದ ಕಾರಣ ಮೊಮ್ಮಗಳಿಗೆ ಜೊತೆಯಾಗಿ ಅಜ್ಜಿ ಹೋಗುತ್ತಿದ್ದರು. ದೂರದಲ್ಲಿ ನಿಂತು ಶೂಟಿಂಗ್ ನೋಡುವುದು ಮಾತ್ರ ಅಜ್ಜಿಯ ಕೆಲಸ. ಒಂದು ದಿನ ಮೊಮ್ಮಗಳು ಗನ್ ಲೋಡ್ ಆಗದೆ ಕಷ್ಟ ಪಡುತ್ತಿದ್ದಳು. ಹತ್ತಿರ ಬಂದ ಅಜ್ಜಿ ಯಾವುದೋ ಒಂದು ಮಾಯೆಯಿಂದ ಗನ್ ಲೋಡ್ ಮಾಡಿದ್ದು ಮಾತ್ರವಲ್ಲ ಬುಲ್ ಐಗೆ ಗುರಿಯಿಟ್ಟು ಶೂಟ್ ಮಾಡಿಬಿಟ್ಟರು. ಅದು ಪರ್ಫೆಕ್ಟ್ ಶೂಟ್ ಆಗಿತ್ತು! ಆ ಕ್ಲಬ್ಬಿನ ಕೋಚ್ ಫಾರೂಕ್ ಪಠಾಣ್ ಮತ್ತು ಎಲ್ಲಾ ಹುಡುಗರು ಬಿಟ್ಟ ಕಣ್ಣು ಬಿಟ್ಟು ಬೆರಗಾಗಿ ನಿಂತರು! ಅದು ಅಜ್ಜಿಯ ಜೀವನದ ಮೊದಲ ಶೂಟ್ ಆಗಿತ್ತು ಮತ್ತು ಆಗ ಅವರ ವಯಸ್ಸು ಕೇವಲ 67 ಆಗಿತ್ತು!

ಶೂಟ್ ಮಾಡಲು ಸ್ಪಷ್ಟವಾದ ದೃಷ್ಟಿ ಮತ್ತು ಕೈಗಳ ನಿಯಂತ್ರಣಗಳು ಇರಬೇಕು. ಅದು ಆ ವಯಸ್ಸಲ್ಲಿ ಅಜ್ಜಿಗೆ ಹೇಗೆ ಸಾಧ್ಯವಾಯಿತು? ನನಗಂತೂ ಅರ್ಥವಾಗದ ಪ್ರಶ್ನೆ!

Raja Marga Column : ಅಜ್ಜಿ ಮತ್ತು ಮೊಮ್ಮಗಳ ಶೂಟಿಂಗ್ ತರಬೇತಿ!

ಮುಂದೆ ಅಜ್ಜಿ ಮೊಮ್ಮಗಳ ಜೊತೆಗೆ ಶೂಟರ್ ಕ್ಲಬ್ಬಿಗೆ ಸೇರಿದರು. 1200 ಡಾಲರ್ ಬೆಲೆಯ ಪಿಸ್ತೂಲನ್ನು ಹಠ ಹಿಡಿದು ತರಿಸಿಕೊಂಡರು. ಮನೆಯ ಅಂಗಳದಲ್ಲಿ ಪ್ರೈವೇಟ್ ಶೂಟರ್ ರೇಂಜ್ ಸಿದ್ಧವಾಯಿತು. ಅಜ್ಜಿಯ ಉತ್ಸಾಹ ದಿನದಿಂದ ದಿನಕ್ಕೆ ಅಧಿಕವಾಯಿತು. ಮನೆಕೆಲಸ ಮುಗಿಸಿಕೊಂಡು ಮಧ್ಯಾಹ್ನ ಅಜ್ಜಿ ಗನ್ ಹಿಡಿದು ತರಬೇತಿಗೆ ಇಳಿದರೆ ಜಗತ್ತನ್ನೇ ಮರೆತು ಬಿಡುತ್ತಿದ್ದರು. ಮನೆಯ ಎಲ್ಲರ ಪೂರ್ಣ ಬೆಂಬಲವು ಅವರಿಗೆ ದೊರೆಯಿತು ಮತ್ತು ಸಾಧನೆಗಳ ಮೆರವಣಿಗೆಯು ಆಗಲೇ ಶುರುವಾಗಿ ಬಿಟ್ಟಿತು!
1999ರಿಂದ ನಿರಂತರ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ಹಿರಿಯರ ಶೂಟಿಂಗ್ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಾ ಬಂದಿರುವ ಅಜ್ಜಿಗೆ ಈವರೆಗೆ 30 ರಾಷ್ಟ್ರಮಟ್ಟದ ಸ್ವರ್ಣ ಪದಕಗಳು ದೊರೆತಿವೆ!

Raja Marga Column Chandro Tomar Sharp Shooter1Raja Marga Column Chandro Tomar Sharp Shooter1

ಅಜ್ಜಿ ಜಗತ್ತಿನ ಅತ್ಯಂತ ಹಿರಿಯ ಶೂಟರ್ ಆದರು!

2010ರಲ್ಲಿ ವಿಶ್ವ ಹಿರಿಯರ ಶೂಟಿಂಗ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿ ರೈಫಲ್ ಮತ್ತು ಪಿಸ್ತೂಲ್ ಎರಡೂ ವಿಭಾಗಗಳಲ್ಲಿ ಚಿನ್ನ ಮತ್ತು ಬೆಳ್ಳಿಯ ಪದಕಗಳನ್ನು ಗೆದ್ದಿರುವ ಅಜ್ಜಿ ಮುಂದೆ ಜಗತ್ತಿನ ಅತ್ಯಂತ ಹಿರಿಯ ಶೂಟರ್ ಆದರು. ಅವರು ಗೆದ್ದಿರುವ ಒಟ್ಟು 146 ಶೂಟಿಂಗ್ ಪದಕಗಳು ಅವರ ಶೋಕೇಸಲ್ಲಿ ಇವೆ! ಅದರಲ್ಲಿ ರಾಷ್ಟ್ರಮಟ್ಟದ ಪದಕಗಳು ಮೂವತ್ತಕ್ಕೂ ಹೆಚ್ಚು! 88ರ ಹರೆಯದಲ್ಲಿ ಕೂಡ ರಾಷ್ಟ್ರ ಮತ್ತು ವಿಶ್ವ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಾ ಬಂದಿರುವ ಆಕೆ ಪದಕದ ಮೇಲೆ ಪದಕಗಳನ್ನು ಗೆದ್ದಿದ್ದಾರೆ. ಮುಂದೆ ಅದೇ ಜೋಹರಿ ಶೂಟಿಂಗ್ ಕ್ಲಬ್ಬಿನ ಮುಖ್ಯ ಕೋಚ್ ಆಗಿ ಅಜ್ಜಿ ದೀರ್ಘಕಾಲ ದುಡಿದರು.

Raja Marga Column Chanra tomar with Tapsi Pannu
ತಾಪ್ಸಿ ಪನ್ನು ಜತೆ ಚಂದ್ರಾ ತೋಮರ್‌

ಇಡೀ ಕುಟುಂಬವೇ ಶೂಟರ್ ಕುಟುಂಬ ಆಯಿತು!

ಅವರಿಂದ ಸ್ಫೂರ್ತಿ ಪಡೆದು ಅವರ ಸೊಸೆ ಸೀಮಾ ತೋಮರ್, ಮೊಮ್ಮಗಳು ಶಿಫಾಲಿ ಇಬ್ಬರು ಕೂಡ ವಿಶ್ವ ಮಟ್ಟದ ಶೂಟರ್ ಆಗಿ ಬೆಳೆದಿದ್ದಾರೆ. ಅವರ ತಂಗಿ ಪ್ರಕಾಶಿ ತೋಮರ್ ಕೂಡ ಇಂದು ಶೂಟಿಂಗ್ ಸ್ಪರ್ಧೆಗಳಲ್ಲಿ ಭಾಗವಹಿಸಿ ಪದಕ ಗೆಲ್ಲುತ್ತಿದ್ದಾರೆ. ಅಜ್ಜಿಯ ಸ್ಫೂರ್ತಿಯಿಂದ ಮುಂದೆ ಇಡೀ ತೋಮರ್ ಕುಟುಂಬ ಶೂಟರ್ ಕುಟುಂಬವೇ ಆಗಿಬಿಟ್ಟಿದೆ! ನಾನು ಸಾಯುವ ತನಕ ಶೂಟಿಂಗ್ ಬಿಡುವುದಿಲ್ಲ ಎಂದು ಅಜ್ಜಿ ಗನ್ನು ಹಿಡಿದು ನುಡಿದರೆ ಅವರ ಕಂಗಳಲ್ಲಿ ಗೆದ್ದ ನಗು ಕಾಣುತ್ತಿತ್ತು!

ಇದನ್ನೂ ಓದಿ : Raja Marga Column : ಲಸಿಕೆ ಪ್ರಯೋಗಕ್ಕಾಗಿ ಮಗನ ಪ್ರಾಣವನ್ನೇ ಒತ್ತೆ ಇಟ್ಟ ಎಡ್ವರ್ಡ್‌ ಜೆನ್ನರ್‌!

ಅಜ್ಜಿಯ ಸಾಧನೆ ಜನಪ್ರಿಯ ಸಿನೆಮಾ ಆಯಿತು!

ಅಂದ ಹಾಗೆ ಅಜ್ಜಿಯ ಬದುಕು ಮತ್ತು ಸಾಧನೆಯಿಂದ ಸ್ಫೂರ್ತಿ ಪಡೆದು ಹಿಂದಿಯಲ್ಲಿ ‘ಸಾಂಡ ಕಿ ಆಂಖ್ ‘ಎಂಬ ಸಿನಿಮಾ(2019) ಕೂಡ ಬಂದಿದ್ದು ಅದರಲ್ಲಿ ಪ್ರಖ್ಯಾತ ನಟಿಯರಾದ ತಾಪ್ಸಿ ಪನ್ನು ಮತ್ತು ಭೂಮಿ ಪೆಡ್ನೇಕರ್ ಅವರು ಪ್ರಮುಖವಾದ ಪಾತ್ರಗಳನ್ನು ಮಾಡಿದ್ದರು.

ಅಂತಹ ಅಜ್ಜಿ ಚಂದ್ರೋ ತೋಮರ್ 2021ನೆಯ ಇಸವಿಯಲ್ಲಿ ತನ್ನ 89ನೇ ವಯಸ್ಸಿಗೆ ನಿಧನರಾದರು. ಅತ್ಯಂತ ಬಡ ಕುಟುಂಬದಿಂದ ಬಂದ, ಶಾಲೆಗೆ ಹೋಗದೆ ಈ ಸಾಧನೆ ಮಾಡಿದ ಶೂಟರ್ ದಾದಿ ನಿಜಕ್ಕೂ ಗ್ರೇಟ್ ಅಲ್ವಾ?

Raja Marga Column Chandra tomar
#image_title
Continue Reading
Advertisement
Maldives anti-India stance
ಪ್ರಮುಖ ಸುದ್ದಿ24 mins ago

Maldives anti-India stance : ಭಾರತ ವಿರೋಧಿ ಕ್ರಮಕ್ಕೆ ಪಶ್ಚಾತಾಪ ವ್ಯಕ್ತಪಡಿಸಿದ ಮಾಲ್ಡೀವ್ಸ್​​

Self Harming Guest lecturer hangs herself to death
ಕರ್ನಾಟಕ45 mins ago

Self Harming: ನೇಣು ಬಿಗಿದುಕೊಂಡು ಅತಿಥಿ ಉಪನ್ಯಾಸಕಿ ಸಾವು

karnataka weather Forecast
ಮಳೆ49 mins ago

Karnataka Weather : ಕೊಡಗು, ಕೊಪ್ಪಳ ಸೇರಿ ಹಲವೆಡೆ ಅಬ್ಬರಿಸುತ್ತಿರುವ ಗಾಳಿ- ಮಳೆ; ನಾಳೆಗೂ ವಾರ್ನಿಂಗ್‌

Dog bite
Latest59 mins ago

Dog Bite : ಮಗುವಿಗೆ ಕಚ್ಚಿದ ನಾಯಿ; ಬೀದಿ ನಾಯಿಗಳಿಗೆ ಆಹಾರ ನೀಡುತ್ತಿದ್ದ ದಂಪತಿಗೆ ಥಳಿತ, ಇಲ್ಲಿದೆ ವಿಡಿಯೊ

Toxic Shawarma
ಆರೋಗ್ಯ1 hour ago

Toxic Shawarma: ಚಿಕನ್‌ ಶವರ್ಮಾ ತಿಂದರೆ ಸಾಯುತ್ತಾರೆಯೆ? ಏನು ಕಾರಣ?

Sensex crash
ಪ್ರಮುಖ ಸುದ್ದಿ1 hour ago

Sensex Crash : ಷೇರು ಮಾರುಕಟ್ಟೆಯಲ್ಲಿ ಭಾರೀ ಕುಸಿತ, ಸೆನ್ಸೆಕ್ಸ್​ 1100 ಅಂಕಗಳಷ್ಟು ಪತನ

Dietary Guidelines
ಆರೋಗ್ಯ2 hours ago

Dietary Guidelines: ಭಾರತೀಯರ ಆಹಾರ ಹೇಗಿರಬೇಕು? ಐಸಿಎಂಆರ್ ಮಾರ್ಗಸೂಚಿ ಹೀಗಿದೆ

Bananas mangoes crops and houses damaged due to heavy rain in Gangavathi
ಮಳೆ2 hours ago

Heavy Rain: ಗಂಗಾವತಿಯಲ್ಲಿ ಭಾರೀ ಬಿರುಗಾಳಿ ಮಳೆಗೆ ಬಾಳೆ, ಮಾವು, ಮನೆಗಳಿಗೆ ಹಾನಿ

New fashion Trend
ಫ್ಯಾಷನ್2 hours ago

New Fashion Trend: ಕ್ವೀನ್‌ ಲುಕ್‌ ನೀಡುವ ಡಿಸೈನರ್‌ ಪರ್ಲ್ ಶೈಲಿಯ ಹೆಡ್‌ಬ್ಯಾಂಡ್‌

Akshattadigi Amavasya Devotees darshan of Sri Guru Kottureswara Swamy
ವಿಜಯನಗರ2 hours ago

Vijayanagara News: ಅಕ್ಷತ್ತದಿಗಿ ಅಮವಾಸ್ಯೆ; ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿ ದರ್ಶನ ಪಡೆದ ಭಕ್ತರು

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

SSLC Result 2024 what is the reason for most of the students fail in SSLC
ಕರ್ನಾಟಕ6 hours ago

SSLC Result 2024: ಎಸ್‌ಎಸ್‌ಎಲ್‌ಸಿಯಲ್ಲಿ ಹೆಚ್ಚಿನ ಮಕ್ಕಳು ಫೇಲ್‌ ಆಗಲು ಶಿಕ್ಷಣ ಇಲಾಖೆಯ ಈ ನಿರ್ಧಾರವೇ ಕಾರಣ!

Sslc exam Result 2024
ಶಿಕ್ಷಣ6 hours ago

SSLC Result 2024 : ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಫೇಲಾದರೂ, ಕಡಿಮೆ ಅಂಕ ಬಂದರೂ ಡೋಂಟ್‌ ವರಿ; ಇನ್ನೂ ಇದೆ ಎರಡು ಚಾನ್ಸ್‌!

SSLC Result 2024 secret behind 20 percent grace marks
ಕರ್ನಾಟಕ7 hours ago

SSLC Result 2024: ಎಸ್‌ಎಸ್‌ಎಲ್‌ಸಿಯಲ್ಲಿ ಈ ಬಾರಿ ನೂರಕ್ಕೆ 25 ಅಂಕ ಪಡೆದವರೂ ಪಾಸ್! ಶೇ. 20 ಗ್ರೇಸ್ ಮಾರ್ಕ್ಸ್ ಕೊಟ್ಟಿದ್ದರ ಹಿಂದಿದೆ ಇಂಟರೆಸ್ಟಿಂಗ್ ಕತೆ!

SSLC Result 2024 78 schools get zero results in SSLC exams
ಬೆಂಗಳೂರು7 hours ago

SSLC Result 2024: ಎಸ್‌ಎಸ್‌ಎಲ್‌ಸಿ ಎಕ್ಸಾಂನಲ್ಲಿ ಸಿಕ್ಸರ್‌ ಬಾರಿಸಿದ ಗ್ರಾಮೀಣ ಪ್ರತಿಭೆಗಳು; 78 ಶಾಲೆಗಳಲ್ಲಿ ಶೂನ್ಯ ರಿಸಲ್ಟ್‌!

SSLC Result 2024 SSLC students get 20 percent grace marks but result is very poor
ಶಿಕ್ಷಣ7 hours ago

SSLC Result 2024: ಎಸ್‌ಎಸ್‌ಎಲ್‌ಸಿ ಮಕ್ಕಳಿಗೆ ಸಿಕ್ತು 20 ಪರ್ಸೆಂಟ್ ಗ್ರೇಸ್ ಮಾರ್ಕ್ಸ್‌! ಆದ್ರೂ ಫಲಿತಾಂಶ ತೀರಾ ಕಳಪೆ

SSLC Exam Result 2024 Announce
ಬೆಂಗಳೂರು9 hours ago

SSLC Result 2024: ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ; ಶೇ. 73.40 ವಿದ್ಯಾರ್ಥಿಗಳು ಪಾಸ್‌, ಉಡುಪಿ ಫಸ್ಟ್‌, ಯಾದಗಿರಿ ಲಾಸ್ಟ್‌

Dina Bhavishya
ಭವಿಷ್ಯ2 days ago

Dina Bhavishya : ಅಮಾವಾಸ್ಯೆ ದಿನ ಈ ರಾಶಿಯವರಿಗೆ ಅದೃಷ್ಟ; ಹಣ ಗಳಿಕೆಗೆ ಪುಷ್ಟಿ

Prajwal Revanna Case HD Revanna has severe chest pain Admission in Victoria
ರಾಜಕೀಯ2 days ago

Prajwal Revanna Case: ಎಚ್.ಡಿ. ರೇವಣ್ಣಗೆ ಹೆಚ್ಚಾದ ಎದೆ ನೋವು; ಸಲೈನ್‌ ಹಾಕಿ ಕಳಿಸಿದ ವೈದ್ಯರು

Karnataka Weather Forecast
ಮಳೆ2 days ago

Karnataka Weather : ಹಾಸನ, ಚಿಕ್ಕಮಗಳೂರಲ್ಲಿ ಆಲಿಕಲ್ಲು ಸಹಿತ ಭಾರಿ ಮಳೆ; ನಾಳೆ ಬಿರುಗಾಳಿ ಎಚ್ಚರಿಕೆ

Prajwal Revanna Case Government work against Revanna HD Kumaraswamy gives details of the case
ರಾಜಕೀಯ2 days ago

Prajwal Revanna Case: ರೇವಣ್ಣರಿಗೆ ಖೆಡ್ಡಾ ತೋಡಿದ್ದು ಸರ್ಕಾರ; ಎಲ್ಲೆಲ್ಲಿ ಏನೇನು ಮಾಡಲಾಯಿತೆಂಬ ಇಂಚಿಂಚು ಡಿಟೇಲ್ಸ್‌ ಕೊಟ್ಟ ಎಚ್‌ಡಿಕೆ!

ಟ್ರೆಂಡಿಂಗ್‌