ರಾಜಮಾರ್ಗ ಅಂಕಣ: ದೃಷ್ಟಿ ವಿಕಲತೆಯನ್ನು ಮೆಟ್ಟಿ ನಿಂತು ಐಎಎಸ್ ಅಧಿಕಾರಿ ಆದ ಪ್ರಾಂಜಲ್ ಪಾಟೀಲ್! - Vistara News

ಅಂಕಣ

ರಾಜಮಾರ್ಗ ಅಂಕಣ: ದೃಷ್ಟಿ ವಿಕಲತೆಯನ್ನು ಮೆಟ್ಟಿ ನಿಂತು ಐಎಎಸ್ ಅಧಿಕಾರಿ ಆದ ಪ್ರಾಂಜಲ್ ಪಾಟೀಲ್!

ರಾಜಮಾರ್ಗ ಅಂಕಣ: ಅತ್ಯಂತ ಪ್ರಬಲ ಇಚ್ಛಾಶಕ್ತಿ, ನಿರಂತರ ಪ್ರಯತ್ನ, ಎಂದಿಗೂ ಬತ್ತಿ ಹೋಗದ ಸ್ಫೂರ್ತಿ, ಬೆಟ್ಟದಷ್ಟು ಆತ್ಮವಿಶ್ವಾಸ ಇವುಗಳ ಜೊತೆಗೆ 2016ರಲ್ಲಿ ಅವರು ಮೊದಲ ಬಾರಿಗೆ ಐಎಎಸ್ ಪರೀಕ್ಷೆಯನ್ನು ಬರೆದು ಮೊದಲನೆಯ ಪ್ರಯತ್ನದಲ್ಲಿಯೇ ತೇರ್ಗಡೆಯಾದರು!

VISTARANEWS.COM


on

pranjal patil ರಾಜಮಾರ್ಗ ಅಂಕಣ
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಆಕೆಯ ಯಾವ ಕನಸಿಗೂ ಕುರುಡುತನ ಅಡ್ಡಿ ಆಗಲೇ ಇಲ್ಲ!

Rajendra-Bhat-Raja-Marga-Main-logo

ರಾಜಮಾರ್ಗ ಅಂಕಣ: ಭಾರತದ ಅತ್ಯಂತ ಕ್ಲಿಷ್ಟವಾದ ಪರೀಕ್ಷೆ ಅಂದರೆ ಐಎಎಸ್. ಕೇಂದ್ರ ಸರಕಾರದ ಅಧೀನ ಸಂಸ್ಥೆಯಾದ UPSC ನಡೆಸುವ ಈ ಪರೀಕ್ಷೆಯಲ್ಲಿ ಪ್ರತೀ ವರ್ಷವೂ 7ರಿಂದ 8 ಲಕ್ಷದಷ್ಟು ಯುವಕ – ಯುವತಿಯರು ತಮ್ಮ ಪ್ರತಿಭೆಯನ್ನು ನಿಕಷಕ್ಕೆ ಒಡ್ಡುತ್ತಿದ್ದು ತೇರ್ಗಡೆ ಆಗುವವರ ಪ್ರಮಾಣ 2-3% ಮಾತ್ರ! ಅಂತಹ ಕ್ಲಿಷ್ಟವಾದ ಪರೀಕ್ಷೆಯಲ್ಲಿ ಸಂಪೂರ್ಣ ಕುರುಡುತನ (Visually impaired) ಇರುವ ಹುಡುಗಿಯೊಬ್ಬಳು ಎರಡೆರಡು ಬಾರಿ ತೇರ್ಗಡೆ ಆದರು (Pranjal Patil IAS) ಅಂದರೆ ನಂಬೋದು ಹೇಗೆ?

ಆಕೆ ಪ್ರಾಂಜಲ್ ಪಾಟೀಲ್, ಮಹಾರಾಷ್ಟ್ರದವರು

ಆಕೆ ಮಹಾರಾಷ್ಟ್ರದ ಉಲ್ಲಾಸ ನಗರದವರು. ಹುಟ್ಟುವಾಗ ಆಕೆಗೆ ಮಸುಕು ಮಸುಕಾಗಿ ಕಾಣುತ್ತಿತ್ತು. ಆರು ವರ್ಷ ಪ್ರಾಯ ಆದಾಗ ಪೂರ್ತಿಯಾಗಿ ಕುರುಡುತನ ಆವರಿಸಿತ್ತು. ಸಣ್ಣ ಪ್ರಾಯದಲ್ಲಿಯೇ ಆಕೆಯ ದೊಡ್ಡ ಕನಸುಗಳಿಗೆ ಕೊಳ್ಳಿ ಇಟ್ಟ ಅನುಭವ ಆಗಿತ್ತು. ಆದರೆ ಮನೆಯವರು ಮತ್ತು ಹೆತ್ತವರು ಆಕೆಯ ಮನೋಸ್ಥೈರ್ಯವನ್ನು ಕುಸಿಯಲು ಬಿಡಲಿಲ್ಲ.

ಆಕೆ ಮಹಾನ್ ಪ್ರತಿಭಾವಂತೆ. ದಾದರ್ ನಗರದ ಕಮಲ ಮೆಹ್ತಾ ಕುರುಡು ಮಕ್ಕಳ ಶಾಲೆಗೆ ಸೇರಿ ಪ್ರಾಥಮಿಕ ಶಿಕ್ಷಣ ಪೂರ್ತಿ ಮಾಡುತ್ತಾರೆ. ಬ್ರೈಲ್ ಲಿಪಿಯಲ್ಲಿ ಓದಲು ಮತ್ತು ಬರೆಯಲು ಕಲಿಯುತ್ತಾರೆ. ಮುಂದೆ ಸೈಂಟ್ ಕ್ಸೇವಿಯರ್ ಕಾಲೇಜಿನಲ್ಲಿ ರಾಜನೀತಿ ಶಾಸ್ತ್ರದಲ್ಲಿ ಪದವಿ ಪಡೆಯುತ್ತಾರೆ.

ಆಗ ಏನೂ ಕಾಣದಿದ್ದರೂ ಉಲ್ಲಾಸ ನಗರದ ಮನೆಯಿಂದ ಹೊರಟು ಒಬ್ಬಳೇ ಛತ್ರಪತಿ ಶಿವಾಜಿ ಟರ್ಮಿನಲನವರೆಗೆ ಹೋಗಿ ಹಿಂದೆ ಬರುತ್ತಿದ್ದರು. ಮುಂಬೈ ನಗರದ ಜನರು ತನ್ನ ಬಗ್ಗೆ ತುಂಬಾ ಅನುಕಂಪವನ್ನು ಹೊಂದಿದ್ದರು ಅನ್ನುತ್ತಾರೆ ಆಕೆ.

ಆಕೆಯ ಕನಸುಗಳಿಗೆ ಆಕಾಶವೂ ಮಿತಿ ಅಲ್ಲ!

ಮುಂದೆ ಪ್ರಾಂಜಲ್ ಪಾಟೀಲ್ ಹೊರಟದ್ದು ರಾಜಧಾನಿ ದೆಹಲಿಗೆ. ಅಲ್ಲಿನ ಜವಾಹರಲಾಲ್ ನೆಹರು ವಿವಿಯ ಮೂಲಕ ಆಕೆಯು ಅಂತಾರಾಷ್ಟ್ರೀಯ ಸಂಬಂಧಗಳಲ್ಲಿ ಸ್ನಾತಕೋತ್ತರ ಪದವಿ ಮತ್ತು ಡಾಕ್ಟರೇಟ್ ಪದವಿಯನ್ನು ಪಡೆಯುತ್ತಾರೆ.

ಅದೇ ಹೊತ್ತಿಗೆ ವಿದುಷಿ ಎಂಬ ತನ್ನ ಗೆಳತಿಯ ಮಾತಿನಿಂದ ಆಕೆಯು ಪ್ರಭಾವಿತರಾಗುತ್ತಾರೆ. ಐಎಎಸ್ ಪರೀಕ್ಷೆಗೆ ಗಂಭೀರವಾದ ಸಿದ್ಧತೆ ನಡೆಸುವಂತೆ ವಿದುಷಿ ಆಕೆಗೆ ಸಲಹೆ ಕೊಡುತ್ತಾರೆ. ಪ್ರಾಂಜಲ್ ಎಷ್ಟು ವೇಗವಾಗಿ ಹೇಳುತ್ತಿದ್ದಳೋ ಅಷ್ಟೇ ವೇಗವಾಗಿ ವಿದುಷಿ ಪ್ರಾಜೆಕ್ಟ ನೋಟ್ಸ್ ಬರೆದು ಕೊಡುತ್ತಿದ್ದಳು.

ಆಗ ಆಕೆಗೆ JAWS ( Job Access With Speech) ಎಂಬ ಸಾಫ್ಟವೇರ್ ನೆರವಿಗೆ ಬರುತ್ತದೆ. ಅದು ಯಾವುದೇ ಪುಸ್ತಕವನ್ನು ಗಟ್ಟಿಯಾಗಿ ಓದಿ ಹೇಳುವ ಸಾಫ್ಟವೇರ್. ತನ್ನ ಆಲಿಸುವ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡು ಆಕೆಯು ಆ ಸಾಫ್ಟವೇರ್ ಬಳಸಿಕೊಂಡು ದಿನಕ್ಕೆ 10-12 ಘಂಟೆಯಷ್ಟು ಪುಸ್ತಕಗಳನ್ನು ಓದುತ್ತಾರೆ. ತುಂಬಾ ವಿಡಿಯೋ ಪಾಠಗಳನ್ನು ಕೇಳುತ್ತಾರೆ. ತನ್ನ ಗೆಳತಿಯ ನೆರವನ್ನು ಪಡೆಯುತ್ತಾರೆ.

ರೈಲ್ವೇಸ್ ಅವರಿಗೆ ಉದ್ಯೋಗವನ್ನು ನಿರಾಕರಿಸಿತು

2016ರಲ್ಲೀ ಅವರು ಭಾರತೀಯ ರೈಲ್ವೇ ಸೇವೆಗೆ ಅರ್ಜಿ ಹಾಕುತ್ತಾರೆ. ಆದರೆ ಆಕೆ ಕುರುಡಿ ಎಂಬ ಕಾರಣಕ್ಕೆ ರೈಲ್ವೇಸ್ ಅವರಿಗೆ ಉದ್ಯೋಗವನ್ನು ನಿರಾಕರಣೆ ಮಾಡುತ್ತದೆ. ಆಗ ಸಿಟ್ಟಿಗೆದ್ದ ಆಕೆ ಪ್ರಧಾನಿ ನರೇಂದ್ರ ಮೋದಿಗೆ ಮತ್ತು ಆಗಿನ ರೈಲ್ವೇ ಮಂತ್ರಿ ಸುರೇಶ್ ಪ್ರಭು ಅವರಿಗೆ ನೇರವಾಗಿ ಪತ್ರವನ್ನು ಬರೆಯುತ್ತಾರೆ. ಆಗ ಸುರೇಶ್ ಪ್ರಭು ಅವರು ಆಕೆಯನ್ನು ಸಂಪರ್ಕ ಮಾಡಿ ನಿಮ್ಮ ವಿದ್ಯೆಗೆ ತಕ್ಕದಾದ ಉದ್ಯೋಗ ಕೊಡುವ ಭರವಸೆ ನೀಡಿದ್ದರು. ಆದರೆ ಆಗಲೇ ಐಎಎಸ್ ಪರೀಕ್ಷೆಯ ತಯಾರಿಯಲ್ಲಿ ಮುಳುಗಿದ್ದ ಪ್ರಾಂಜಲ್ ಆ ಪ್ರಸ್ತಾಪವನ್ನು ಸ್ವೀಕಾರ ಮಾಡುವುದಿಲ್ಲ.

ಆಕೆ ಎರಡು ಬಾರಿ ಐಎಎಸ್ ಪರೀಕ್ಷೆ ತೇರ್ಗಡೆ ಆದರು!

ಅತ್ಯಂತ ಪ್ರಬಲ ಇಚ್ಛಾಶಕ್ತಿ, ನಿರಂತರ ಪ್ರಯತ್ನ, ಎಂದಿಗೂ ಬತ್ತಿ ಹೋಗದ ಸ್ಫೂರ್ತಿ, ಬೆಟ್ಟದಷ್ಟು ಆತ್ಮವಿಶ್ವಾಸ ಇವುಗಳ ಜೊತೆಗೆ 2016ರಲ್ಲಿ ಅವರು ಮೊದಲ ಬಾರಿಗೆ ಐಎಎಸ್ ಪರೀಕ್ಷೆಯನ್ನು ಬರೆದು ಮೊದಲನೆಯ ಪ್ರಯತ್ನದಲ್ಲಿಯೇ ತೇರ್ಗಡೆಯಾದರು! ಅದೂ ಯಾವ ಕೋಚಿಂಗ್ ಇಲ್ಲದೆ! ಆದರೆ ಆಲ್ ಇಂಡಿಯಾ ರಾಂಕಿಂಗ್ 744 ಬಂದಿತ್ತು. ಅದು ಅವರಿಗೆ ತೃಪ್ತಿ ತರಲಿಲ್ಲ. ಯಾವುದೋ ಒಂದು ಅಜ್ಞಾತ ಇಲಾಖೆಯಲ್ಲಿ ಒಬ್ಬ ಸಾಮಾನ್ಯ ಅಧಿಕಾರಿಯಾಗಿ ಕೆಲಸ ಮಾಡಲು ಆಕೆ ರೆಡಿ ಇರಲಿಲ್ಲ. ಅದಕ್ಕೋಸ್ಕರ ಎರಡನೇ ಬಾರಿಗೆ ಅಷ್ಟೇ ಪ್ರಯತ್ನ ಮಾಡಿ 2017ರಲ್ಲಿ ಮತ್ತೆ ಐಎಎಸ್ ಪರೀಕ್ಷೆ ಬರೆದರು. ಈ ಬಾರಿ ಕೂಡ ತೇರ್ಗಡೆ ಆದರು. ಈ ಬಾರಿ ರಾಂಕಿಂಗ್ 124 ಬಂದಿತ್ತು!

ಅವರ ಕನಸಿನ ರೆಕ್ಕೆಗೆ ಸಾವಿರ ಗರಿಗಳು!

ಪ್ರಾಂಜಲ್ ಭಾರತದ ಮೊಟ್ಟ ಮೊದಲ ದೃಷ್ಟಿ ವಿಕಲತೆಯ ಸಾಧಕಿಯಾಗಿ ಐಎಎಸ್ ಪರೀಕ್ಷೆ ತೇರ್ಗಡೆ ಆಗಿದ್ದರು! ಲಿಖಿತ ಪರೀಕ್ಷೆಯಲ್ಲಿ ಆಕೆಯು ಪಡೆದ ಅಂಕಗಳು 854! ಹಾಗೂ ಸಂದರ್ಶನದಲ್ಲಿ ಪಡೆದ ಅಂಕಗಳು 179! ಒಟ್ಟು 1033 ಅನ್ನುವುದು ಕೂಡ ಆಕೆಯ ನಿಜವಾದ ಕ್ರೆಡಿಟ್.

ನಂತರ ತರಬೇತಿಯನ್ನು ಮುಗಿಸಿ ಮೇ 28, 2018ರಂದು ಅವರು ಕೇರಳದ ಎರ್ನಾಕುಲಂ ಜಿಲ್ಲೆಯಲ್ಲಿ ಅಸಿಸ್ಟಂಟ್ ಕಲೆಕ್ಟರ್ ಆಗಿ ನೇಮಕ ಪಡೆಯುತ್ತಾರೆ. ಅದರ ನಂತರ ಅಕ್ಟೋಬರ್ 14, 2019ರಂದು ಸಬ್ ಕಲೆಕ್ಟರ್ ಆಗಿ ತಿರುವನಂತಪುರಂ ಜಿಲ್ಲೆಗೆ ನೇಮಕ ಪಡೆಯುತ್ತಾರೆ!

ಯಾರ ಸಹಾಯ ಇಲ್ಲದೆ ತನ್ನ ಎಲ್ಲ ಕೆಲಸಗಳನ್ನು ತಾನೇ ಮಾಡುವ, ಅದ್ಭುತವಾದ ಮೆಮೊರಿ ಪವರ್ ಹೊಂದಿರುವ, ಸಮಾಜ ಸೇವೆಯ ತೀವ್ರವಾದ ತುಡಿತವನ್ನು ಹೊಂದಿರುವ, ಬೆಟ್ಟವನ್ನು ಕರಗಿಸುವ ಧೈರ್ಯ ಮತ್ತು ಆತ್ಮವಿಶ್ವಾಸಗಳನ್ನು ಹೊಂದಿರುವ ಪ್ರಾಂಜಲ್ ಪಾಟೀಲ್ ಮತ್ತು ಆಕೆಯ ಗಂಡ ಕೋಮಲ್ ಸಿಂಗ್ ಪಾಟೀಲ್ ಅವರು ಇತ್ತೀಚೆಗೆ ತಮ್ಮ ಅಂಗದಾನಕ್ಕೆ ಜೊತೆಯಾಗಿ ಸಹಿ ಹಾಕಿ ಸುದ್ದಿ ಆಗಿದ್ದಾರೆ.

ಆಕೆಯ ಒಂದು ಮಾತು ನನಗೆ ಭಾರೀ ಕನೆಕ್ಟ್ ಆಗಿದ್ದು ಅದನ್ನು ಇಲ್ಲಿ ಉಲ್ಲೇಖ ಮಾಡುತ್ತೇನೆ.

SUCCESS doesn’t give us INSPIRATION. But the STRUGGLE behind the SUCCESS gives us the INSPIRATION.

ಹೌದು ತಾನೇ?

ಇದನ್ನೂ ಓದಿ: ರಾಜಮಾರ್ಗ ಅಂಕಣ: ನಾಗಾರಾಧನೆ- ಪ್ರಕೃತಿಯ ಆರಾಧನೆ ಆಗಲಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಅಂಕಣ

ರಾಜಮಾರ್ಗ ಅಂಕಣ: ನಾಗಾರಾಧನೆ- ಪ್ರಕೃತಿಯ ಆರಾಧನೆ ಆಗಲಿ

ರಾಜಮಾರ್ಗ ಅಂಕಣ: ಮನುಷ್ಯನ ಬೆನ್ನು ಮೂಳೆಯು ದೇಹದ ಮೂಲಾಧಾರ ಚಕ್ರದ ಕೇಂದ್ರ. ಮನುಷ್ಯನ ಎಲ್ಲ ಸಂವೇದನೆಗಳ ಕೇಂದ್ರವೂ ಹೌದು. ಅದರ ತುದಿಯಲ್ಲಿ ಇರುವ ಮೆದುಳು ನಾಗದೇವರ ಹೆಡೆಗೆ ಹೋಲಿಕೆ ಪಡೆಯುತ್ತದೆ. ಬೆನ್ನು ಮೂಳೆಯನ್ನು ನಾಗನ ದೇಹಕ್ಕೆ ಹೋಲಿಕೆ ಮಾಡುತ್ತಾರೆ. ನಾಗದೇವರ ಆರಾಧನೆಯನ್ನು ಮಾಡುವುದರಿಂದ ಬೆನ್ನು ಮೂಳೆಯ ಆರೋಗ್ಯದ ಮೇಲೆ ಧನಾತ್ಮಕ ಪರಿಣಾಮ ಉಂಟಾಗುತ್ತದೆ.

VISTARANEWS.COM


on

ರಾಜಮಾರ್ಗ ಅಂಕಣ nagara panchami
Koo

ತುಳುನಾಡಿನ ನಾಗಾರಾಧನೆಗೆ – ನೂರಾರು ಆಯಾಮಗಳು

Rajendra-Bhat-Raja-Marga-Main-logo

ರಾಜಮಾರ್ಗ ಅಂಕಣ: ತಮಗೆಲ್ಲರಿಗೂ ನಾಗರಪಂಚಮಿ (Nagara Panchami) ಹಬ್ಬದ ಶುಭಾಶಯಗಳು. ನಾಗಾರಾಧನೆಯು ನಮ್ಮ ಹಿರಿಯರ ಪ್ರಕೃತಿ ಪ್ರೇಮ, ಕೃತಜ್ಞತೆಯ ಪ್ರತೀಕ ಎಂದೇ ಭಾವಿಸಲಾಗುತ್ತದೆ. ಜಗತ್ತಿನಾದ್ಯಂತ ನಾಗಾರಾಧನೆಯು ಇದ್ದರೂ ತುಳುನಾಡಿನ (Tulunadu) ನಾಗಾರಾಧನೆಯ (nagaradhane) ವಿಸ್ತಾರ ಮತ್ತು ಹರಹು ದೊಡ್ಡದು. ಅದಕ್ಕೆ ನೂರಾರು ಕಾರಣಗಳೂ ಇವೆ.

ತುಳುನಾಡು ಅಂದರೆ ನಾಗದೇವರ ಭೂಮಿ

ಭಾರತದ ಎಲ್ಲ 18 ಪುರಾಣಗಳಲ್ಲಿ ನಾಗದೇವರ ಉಲ್ಲೇಖವು ಬರುತ್ತದೆ ಅನ್ನುತ್ತದೆ ಒಂದು ಆಯಾಮ. ಇನ್ನೊಂದು ಈ ಕರಾವಳಿಯ ಭಾಗವು ‘ನಾಗರಖಂಡ ‘ಎಂದು ಕರೆಯಲ್ಪಟ್ಟಿದೆ. ಈ ಭೂಮಿಯನ್ನು ನಾಗದೇವರು ನಮಗೆ ದಾನವಾಗಿ ನೀಡಿದರು ಅನ್ನುವುದು ಇನ್ನೊಂದು ಆಯಾಮ. ಅದರಿಂದಾಗಿ ನಾಗಾರಾಧನೆ ಅಂದರೆ ನಮ್ಮ ಹಿರಿಯರ ಕೃತಜ್ಞತೆಯ ಸಂಕೇತವೇ ಆಗಿದೆ. ಇಲ್ಲಿನ ಸಡಿಲ ಮಣ್ಣು, ತೇವಾಂಶ ಮತ್ತು ವಾತಾವರಣದ ಉಷ್ಣತೆ ಇವುಗಳು ನಾಗನ ನಡೆಗೆ ಪೂರಕವಾಗಿಯೇ ಇವೆ. ಆದ್ದರಿಂದ ಇಡೀ ತುಳುನಾಡು ನಾಗದೇವರ ನಡೆಯೇ ಆಗಿದೆ. ನಾಗದೇವರು ನಮ್ಮ ಪೂರ್ವಜ ಎಂಬಲ್ಲಿಗೆ ಸರ್ಪ ಸಂಸ್ಕಾರ ಇತ್ಯಾದಿ ವಿಧಿಗಳೂ ನಡೆದುಬಂದವು. ಭೂಮಿಯನ್ನು ಹೊತ್ತವನು ಮಹಾಶೇಷ ಎಂಬ ಕಾರಣಕ್ಕೆ ಕೂಡ ನಾಗದೇವರ ಆರಾಧನೆಯು ಪ್ರಾಮುಖ್ಯತೆ ಪಡೆಯುತ್ತದೆ.

ತುಳುನಾಡಿನಲ್ಲಿ ನಾಗದೇವರು ಮತ್ತು ದೈವಗಳೇ ಸಾರ್ವಭೌಮರು. ಇಲ್ಲಿನ ಜನಗಳು ಅವೆರಡನ್ನು ನಂಬಿದಷ್ಟು ಬೇರೆ ಯಾವುದನ್ನೂ ನಂಬುವುದಿಲ್ಲ. ಕುಟುಂಬದ ಹಿರಿಯರು ಮೂಲನಾಗನಿಗೆ ತನು ಹಾಕುವುದನ್ನು ಎಂದಿಗೂ ತಪ್ಪಿಸುವುದಿಲ್ಲ. ನಾಗನ ಬಗ್ಗೆ ಇರುವ ಭಕ್ತಿ, ಗೌರವ ಮತ್ತು ಭಯಗಳು ನಮ್ಮ ಜನ್ಮದಿಂದಲೂ ನಮ್ಮ ಹೊಕ್ಕಳಬಳ್ಳಿಯ ಒಳಗೇ ಕೂತಿರುತ್ತವೆ.

ತುಳುನಾಡಿನ ನಾಗಾರಾಧನೆ ನೂರು ವಿಧ

ಹುತ್ತಪೂಜೆ, ನಾಗದೇವರ ಶಿಲಾ ಪೂಜನ, ತನು ಹಾಕುವುದು, ಆಶ್ಲೇಷಾ ಪೂಜೆ, ನಾಗಮಂಡಲ, ತಂಬಿಲ ನೀಡುವುದು, ಢಕ್ಕೆಬಲಿ, ಸರ್ಪ ಸಂಸ್ಕಾರ…ಹೀಗೆ ನೂರಾರು ಆಯಾಮಗಳಲ್ಲಿ ತುಳುನಾಡಿನ ನಾಗಾರಾಧನೆಯು ಸಾಗಿಬಂದಿದೆ. ಇವೆಲ್ಲವೂ ತುಳುನಾಡಿನಲ್ಲಿ ಅನೂಚಾನವಾಗಿ ನಡೆದುಕೊಂಡು ಬರುತ್ತಿವೆ. ಶ್ರಾವಣ ಶುಕ್ಲ ಪಂಚಮಿಯಂದು ನಡೆಸುವ ನಾಗಬನದಲ್ಲಿ ತನು ಹಾಕುವ ವಿಧಿಯನ್ನು ಯಾವ ಕುಟುಂಬವೂ ತಪ್ಪಿಸಿಕೊಳ್ಳುವುದಿಲ್ಲ. ಶ್ರದ್ಧೆ ಒಂದಿಂಚೂ ಕಡಿಮೆ ಆಗುವುದಿಲ್ಲ. ಇಡೀ ಕುಟುಂಬವು ಮೂಲನಾಗನನ್ನು ಹುಡುಕಿಕೊಂಡು ಬಂದು ಭಾಗವಹಿಸುವುದರಿಂದ ನಾಗರಪಂಚಮಿಯು ಕೂಡು ಕುಟುಂಬದ ಹಬ್ಬ.

ನಾಗಾರಾಧನೆಯ ವೈಜ್ಞಾನಿಕ ಹಿನ್ನೆಲೆ

ಮನುಷ್ಯನ ಬೆನ್ನು ಮೂಳೆಯು ದೇಹದ ಮೂಲಾಧಾರ ಚಕ್ರದ ಕೇಂದ್ರ. ಮನುಷ್ಯನ ಎಲ್ಲ ಸಂವೇದನೆಗಳ ಕೇಂದ್ರವೂ ಹೌದು. ಅದರ ತುದಿಯಲ್ಲಿ ಇರುವ ಮೆದುಳು ನಾಗದೇವರ ಹೆಡೆಗೆ ಹೋಲಿಕೆ ಪಡೆಯುತ್ತದೆ. ಬೆನ್ನು ಮೂಳೆಯನ್ನು ನಾಗನ ದೇಹಕ್ಕೆ ಹೋಲಿಕೆ ಮಾಡುತ್ತಾರೆ. ನಾಗದೇವರ ಆರಾಧನೆಯನ್ನು ಮಾಡುವುದರಿಂದ ಬೆನ್ನು ಮೂಳೆಯ ಆರೋಗ್ಯದ ಮೇಲೆ ಧನಾತ್ಮಕ ಪರಿಣಾಮ ಉಂಟಾಗುತ್ತದೆ. ನಾಗಾರಾಧನೆಯ ಬಣ್ಣ ಬಣ್ಣದ ಮಂಡಲಗಳು, ಸುವಾಸನೆ ಬೀರುವ ಹೂವುಗಳು, ಆ ಬಣ್ಣಗಳ ವಿನ್ಯಾಸಗಳು, ನಾಗದೇವರ ಬನದ ಪರಿಸರ, ಅಲ್ಲಿರುವ ಔಷಧಿಯ ಸಸ್ಯಗಳು ಇವೆಲ್ಲವೂ ಸೇರಿ ನಮ್ಮ ದೇಹದ ಮತ್ತು ಮಾನಸಿಕ ಆರೋಗ್ಯವು ಅಭಿವೃದ್ದಿ ಆಗುತ್ತದೆ ಎನ್ನುತ್ತದೆ ವಿಜ್ಞಾನ. ನಾಗನ ನಡೆಯ ಮಣ್ಣು ಔಷಧೀಯ ಗುಣವನ್ನು ಹೊಂದಿದ್ದು ಅದರ ಸ್ಪರ್ಶದಿಂದ ಚರ್ಮರೋಗ ಗುಣವಾಗುವುದು ಸಾಬೀತು ಆಗಿದೆ. ಹಾಗೆಯೇ ಸಂತಾನ ದೋಷ ಪರಿಹಾರ, ದೃಷ್ಟಿದೋಷ ಪರಿಹಾರ ಕೂಡ ಆಗಿರುವ ಸಾವಿರಾರು ಉದಾಹರಣೆಗಳು ನಮಗೆ ಇಲ್ಲಿ ದೊರೆಯುತ್ತವೆ. ನಾಗಾರಾಧನೆಯ ವಿಷಯದಲ್ಲಿ ನಂಬಿಕೆ ಮತ್ತು ವಿಜ್ಞಾನಗಳು ಜೊತೆ ಜೊತೆಯಾಗಿ ಮುನ್ನಡೆಯುತ್ತವೆ.

ಕಾಂಕ್ರೀಟ್ ಕಾಡುಗಳು ಮತ್ತು ನಾಗದೇವರ ಬನ

ಸಾವಿರಾರು ವರ್ಷಗಳಿಂದ ಹರಿದುಬಂದ ‘ನಾಗದೇವರ ನೈಸರ್ಗಿಕ ಬನದ ಕಲ್ಪನೆ ‘ಯು ಇತ್ತೀಚೆಗೆ ಮತ್ತೆ ಮುನ್ನೆಲೆಗೆ ಬಂದಿದೆ. ನಾಗನನ್ನು ಕೃತಕವಾದ ಕಾಂಕ್ರೀಟ್ ಕಾಡನ್ನು ಮಾಡಿ ಪೂಜೆ ಮಾಡುವುದಕ್ಕಿಂತ ನೈಸರ್ಗಿಕವಾದ ನಾಗನ ಬನ (ಬನ ಅಂದರೆ ಕಾಡು ಎಂದರ್ಥ)ದಲ್ಲಿಯೇ ನಾಗನ ಪೂಜೆ ನೆರವೇರಿಸಬೇಕು ಎಂಬ ಬೃಹತ್ ಅಭಿಯಾನವು ಇಂದು ಕರಾವಳಿಯ ಉದ್ದಕ್ಕೂ ಜಾಗೃತಿ ಮೂಡಿಸುತ್ತಿದೆ. ಅಂದರೆ ನಿರ್ದಿಷ್ಟವಾದ ಗಿಡಗಳ ಜೊತೆಗೆ ಔಷಧೀಯ ಸಸ್ಯಗಳನ್ನು ಅಲ್ಲಿ ಬೆಳೆಸಿ ಅಲ್ಲಿಯೇ ತಂಪಾದ ಜಾಗದಲ್ಲಿ ನಾಗನ ಆವಾಸ ಸ್ಥಾನವನ್ನು ನಿರ್ಮಾಣ ಮಾಡುವ ಮತ್ತು ಅಲ್ಲಿಯೇ ನಾಗಾರಾಧನೆ ಮಾಡುವ ಅದ್ಭುತ ಕಲ್ಪನೆ ಇಂದು ಜನಪ್ರಿಯತೆ ಪಡೆಯುತ್ತಿದೆ. ಅದು ವೈಜ್ಞಾನಿಕವಾಗಿ ಕೂಡ ಪುಷ್ಟಿಯನ್ನು ಪಡೆಯುತ್ತಿದೆ. ವಿಶೇಷವಾಗಿ ಉಡುಪಿಯ ಉರಗತಜ್ಞರಾದ ಗುರುರಾಜ್ ಸನಿಲ್ ಹಲವಾರು ಪುಸ್ತಕಗಳನ್ನು ಬರೆದು ಮತ್ತು ಉಪನ್ಯಾಸಗಳ ಮೂಲಕ ಜಾಗೃತಿ ಮೂಡಿಸುತ್ತಿರುವುದು ಅಭಿನಂದನೀಯ. ಅವರು ಮತ್ತು ಅವರ ಗೆಳೆಯರು ಅಂತಹ ಹತ್ತಾರು ಕಡೆ ನಾಗಬನ ನಿರ್ಮಾಣ ಕೂಡ ಮಾಡಿದ್ದಾರೆ. ಹಾಗೆಯೇ ಉಡುಪಿಯ ಸಂವೇದನಾ ಫೌಂಡೇಶನ್ (ಸಂಚಾಲಕರು – ಪ್ರಕಾಶ್ ಮಲ್ಪೆ) ನೂರು ಪ್ರಾಕೃತಿಕ ನಾಗಬನಗಳನ್ನು ನಿರ್ಮಿಸುವ ಸಂಕಲ್ಪ ಮಾಡಿಕೊಂಡು ಮುಂದುವರೆಯುತ್ತಿದ್ದಾರೆ. ಅವರಿಗೆ ನಮ್ಮ ನೆರವು ದೊರೆಯಲಿ.

ನಾಡಿನ ಎಲ್ಲ ಧಾರ್ಮಿಕ ಬಂಧುಗಳಿಗೆ ನಾಡಿನ ಅತೀ ದೊಡ್ಡ ಹಬ್ಬ ನಾಗರಪಂಚಮಿಯ ಹಾರ್ದಿಕ ಶುಭಾಶಯಗಳು.

ಇದನ್ನೂ ಓದಿ: ರಾಜಮಾರ್ಗ ಅಂಕಣ: ವಿನೇಶ್ ಪೋಗಟ್ ತೂಕ ಇದ್ದಕ್ಕಿದ್ದಂತೆ 2 ಕೆ.ಜಿ ಹೆಚ್ಚಿದ್ದು ಹೇಗೆ? ಉತ್ತರ ಸಿಗದ ಪ್ರಶ್ನೆ!

Continue Reading

ಅಂಕಣ

ರಾಜಮಾರ್ಗ ಅಂಕಣ: ವಿನೇಶ್ ಪೋಗಟ್ ತೂಕ ಇದ್ದಕ್ಕಿದ್ದಂತೆ 2 ಕೆ.ಜಿ ಹೆಚ್ಚಿದ್ದು ಹೇಗೆ? ಉತ್ತರ ಸಿಗದ ಪ್ರಶ್ನೆ!

ರಾಜಮಾರ್ಗ ಅಂಕಣ: ಆಕೆಗೆ ಪದಕವು ಸಿಗಲಿಲ್ಲ ಎಂಬ ನೋವಿನ ನಡುವೆಯೂ ಆಕೆಯು ಪ್ಯಾರಿಸ್ ನಗರದಲ್ಲಿ ಮಾಡಿದ ಹೋರಾಟವನ್ನು ನಾವು ಕಣ್ಣಾರೆ ನೋಡಿದ್ದೇವೆ. ಇದುವರೆಗೂ ಸೋಲೇ ಕಾಣದ ವಿಶ್ವ ಚಾಂಪಿಯನ್ ಆಟಗಾರ್ತಿಯನ್ನು ಆಕೆಯು ಸೋಲಿಸಿದ್ದು, ಸೆಮಿಯಲ್ಲಿ ಒಂದು ಅಂಕವನ್ನು ಬಿಟ್ಟುಕೊಡದೆ ಗೆದ್ದದ್ದು ಇದನ್ನೆಲ್ಲ ನಾವು ನೋಡಿದ್ದೇವೆ. ಇದೇನೂ ಸಣ್ಣ ಗೆಲುವಲ್ಲ.

VISTARANEWS.COM


on

Vinesh Phogat ರಾಜಮಾರ್ಗ ಅಂಕಣ
Koo

ಭಾರತವು ತನ್ನ ಮನೆಮಗಳನ್ನು ವೀರೋಚಿತವಾಗಿ ಸ್ವಾಗತಿಸಬೇಕು

Rajendra-Bhat-Raja-Marga-Main-logo

:: ರಾಜೇಂದ್ರ ಭಟ್‌ ಕೆ.

ರಾಜಮಾರ್ಗ ಅಂಕಣ: ಭಾರತೀಯರು ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಬುಧವಾರ ಆಗಿರುವ ಆಘಾತದಿಂದ ಇನ್ನೂ ಹೊರಬಂದಿಲ್ಲ. ಮಂಗಳವಾರ ರಾತ್ರಿ ಆಕೆಯ (Vinesh Phogat) ಮೂರು ಪಂದ್ಯಗಳನ್ನು ನೋಡಿದವರು ಆಕೆಯನ್ನು ‘ಹೆಣ್ಣುಹುಲಿ’ ಎಂದು ಕರೆದಿದ್ದರು. ಆಕೆ ಫೈನಲ್ ಪ್ರವೇಶ ಮಾಡಿದ್ದಾಗ ‘ಚಿನ್ನವನ್ನೇ ಗೆದ್ದು ಬಾ’ ಎಂಬ ಕನವರಿಕೆಯು ದೇಶದಾದ್ಯಂತ ಆರಂಭ ಆಗಿತ್ತು. ಆಕೆಯನ್ನು ಭಾರತವು ಮನೆಮಗಳಾಗಿ ಸ್ವೀಕಾರ ಮಾಡಿತ್ತು.

ಆಕೆಯ ತೂಕವು ಅಷ್ಟೊಂದು ವೇಗವಾಗಿ ಏರಿದ್ದು ಹೇಗೆ?

ಸೆಮಿಸ್ ಗೆಲ್ಲುವತನಕ ಆಕೆಯ ದೇಹತೂಕ ಸರಿ ಇತ್ತು.ಆದರೆ ರಾತ್ರಿ ಸ್ಪರ್ಧೆಗಳು ಮುಗಿದು ಊಟ ಮುಗಿಸಿದಾಗ ಆಕೆಯ ತೂಕವು ಎರಡು ಕೆಜಿ ಹೆಚ್ಚು ಇರುವುದು ಆಕೆಗೆ ಗೊತ್ತಾಗಿದೆ. ಅದನ್ನವಳು ತನ್ನ ವಿದೇಶಿ ಕೋಚಗೆ ತಕ್ಷಣ ತಿಳಿಸಿದ್ದಾರೆ. ರಾತ್ರಿ ಇಡೀ ಕೋಚ್ ಸಲಹೆ ಪಡೆದು ತೂಕವನ್ನು ಇಳಿಸಲು ಭಾರೀ ಬೆವರು ಬಸಿದಿದ್ದಾರೆ. ಇಡೀ ರಾತ್ರಿ ಜಾಗಿಂಗ್, ಸೈಕ್ಲಿಂಗ್, ವಾರ್ಮ್ ಅಪ್ ಎಲ್ಲವನ್ನೂ ಮಾಡಿದ್ದಾರೆ. ಮಾಧ್ಯಮಗಳು ವರದಿ ಮಾಡಿದ ಪ್ರಕಾರ ಆಕೆ ತಲೆಕೂದಲು ಕಟ್ ಮಾಡಿದ್ದಾರೆ. ರಕ್ತವನ್ನೂ ನೀಡಿದ್ದಾರೆ! ಒಂದು ಘಂಟೆ ಸ್ಟೀಮ್ ಬಾತ್ ಮಾಡಿದ್ದಾರೆ. ಇಡೀ ರಾತ್ರಿ ಆಕೆ ಮಲಗಲೇ ಇಲ್ಲ.

ಆಕೆಯು ಹರ್ಯಾಣದ ರಣ ಭೂಮಿಯಿಂದ ಬಂದವರು!

ಆಕೆ ಹುಟ್ಟು ಹೋರಾಟಗಾರ್ತಿ ಎನ್ನುವುದು ಹಿಂದೆ ಕೂಡ ಹಲವು ಬಾರಿ ಸಾಬೀತಾಗಿದೆ. ಆಮೀರ್ ಖಾನ್ ಅಭಿನಯಿಸಿದ ಅತ್ಯಂತ ಯಶಸ್ವೀ ಚಿತ್ರ ದಂಗಲ್ ಈಕೆಯ ಅಪ್ಪನ ಸಾಧನೆಯ ಕುರಿತು ಹೆಣೆದ ಕಥೆಯಾದರೂ ಮಿಂಚಿದ್ದು ಇದೇ ವಿನೇಶ್ ಫೊಗಟ್!

ಆಕೆಯು ಈಗಾಗಲೇ ಮೂರು ಕಾಮನ್ ವೆಲ್ತ್ ಕೂಟಗಳಲ್ಲಿ ಚಿನ್ನದ ಪದಕ ಪಡೆದಿದ್ದಾರೆ. ಏಷಿಯಾಡ್ ಕೂಟದಲ್ಲಿ ಕೂಡ ಆಕೆ ಚಿನ್ನವನ್ನು ಗೆದ್ದು ಭಾರತವನ್ನು ಗೆಲ್ಲಿಸಿದ್ದಾರೆ. ಕುಸ್ತಿ ವಿಶ್ವ ಚಾಂಪಿಯನ್ ಸ್ಪರ್ಧೆಯಲ್ಲಿ ಕೂಡ
ಆಕೆ ಪದಕವನ್ನು ಗೆದ್ದಿದ್ದಾರೆ. ಆದರೆ ಕಳೆದ ಒಲಿಂಪಿಕ್ಸ್ ಕೂಟದಲ್ಲಿ ಆಕೆಯು ಕ್ವಾರ್ಟರ್ ಫೈನಲ್ ತನಕ ಬಂದು ಇಂಜುರಿ ಆಗಿ ಕಣ್ಣೀರು ಹಾಕುತ್ತಾ ಹಿಂದೆ ಬಂದದ್ದನ್ನು ಭಾರತವು ಇನ್ನೂ ಮರೆತಿಲ್ಲ. ಅಂತಹ ವಿನೇಶ್ ಈ ಬಾರಿ ದೇಹತೂಕದ ಕಾರಣಕ್ಕೆ ಅನರ್ಹರಾಗಿದ್ದಾರೆ. ಅದು ದುರಂತ.

ಆಕೆಗೆ ಈಗಲೇ 29 ವರ್ಷ ವಯಸ್ಸು. ಮುಂದಿನ ಒಲಿಂಪಿಕ್ಸ್ ಸ್ಪರ್ಧೆಗೆ ಆಕೆಯು ಮತ್ತೆ ಸ್ಪರ್ಧಿಸುವುದು ತುಂಬಾ ಕಷ್ಟ. ಇದು ಆಕೆಗೂ ಗೊತ್ತಿದೆ. ಅದಕ್ಕಾಗಿ ಇಡೀ ರಾತ್ರಿ ದೇಹತೂಕವನ್ನು ಇಳಿಸಲು ಆಕೆಯು ಹೋರಾಟಕ್ಕೆ ಇಳಿದಿದ್ದಾರೆ. ಏನೆಲ್ಲ ಮಾಡಲು ಸಾಧ್ಯವೋ ಅದನ್ನೆಲ್ಲ ಮಾಡಿದ್ದಾರೆ. ಒಂದು ರಾತ್ರಿಯ ಅವಧಿಯಲ್ಲಿ ಒಂದು ಕೆಜಿ ಒಂಬೈನೂರು ಗ್ರಾಂ ಇಳಿಸುವುದು ಸುಲಭದ ಮಾತಲ್ಲ. ಇನ್ನೂ ನೂರು ಗ್ರಾಮ್ ಇಳಿಸಲು ಆಗಿಲ್ಲ ಎಂಬ ನೋವಿಗಿಂತ ಭಾರತವು ಪದಕವನ್ನು ಮಿಸ್ ಮಾಡಿಕೊಂಡಿತು ಎಂಬ ನೋವು ಆಕೆಗೆ ದೊಡ್ಡದು. ನಮಗೆ ಅದಕ್ಕಿಂತ ದೊಡ್ಡ ನೋವು ಎಂದರೆ ಆಕೆಯು ತನ್ನ ದೇಹದ ಮೇಲೆ ಮಾಡಿದ ಅಮಾನುಷ ಪ್ರಯೋಗಗಳು! ಅದಕ್ಕಿಂತ ದೊಡ್ಡ ನೋವು ಭಾರತೀಯರಿಗೆ ಅಂದರೆ ನಮ್ಮ ಮನೆಮಗಳು ಫೈನಲಿಗೂ ಮೊದಲು ಅನರ್ಹ ಆದದ್ದು!

ಆಕೆಯ ದೇಹತೂಕವು ಸಡನ್ನಾಗಿ ಎರಡು ಕೆಜಿ ಹೆಚ್ಚಾದದ್ದು ಹೇಗೆ?

ಓರ್ವ ಅಂತಾರಾಷ್ಟ್ರೀಯ ವೃತ್ತಿಪರ ಕ್ರೀಡಾಪಟು ಯಾವ ಆಹಾರವನ್ನು ತೆಗೆದುಕೊಳ್ಳುವ ಮೊದಲು ತನ್ನ ಕೋಚ್‌ಗೆ ತೋರಿಸಿ ನಂತರ ತಿನ್ನಬೇಕು. ಇದು ನಿಯಮ. ಭಾರತೀಯ ಒಲಿಂಪಿಕ್ ತಂಡದಲ್ಲಿ ವೈದ್ಯರು, ಡಯಟೀಶಿಯನ್, ಫಿಸಿಯೋ ಎಲ್ಲರೂ ಇರುತ್ತಾರೆ. ಕ್ರೀಡಾಪಟುಗಳು ತಿನ್ನುವ ಪ್ರತಿಯೊಂದು ಆಹಾರ ಪದಾರ್ಥವು ಪರೀಕ್ಷೆಗೆ ಒಳಗಾಗುತ್ತದೆ. ಒಂದು ಮಾತ್ರೆ, ಒಂದು ಇಂಜೆಕ್ಷನ್ ಕೂಡ ಅನುಮತಿ ಪಡೆಯದೆ ತೆಗೆದುಕೊಳ್ಳುವ ಹಾಗೆ ಇಲ್ಲ. ಹಾಗಿರುವಾಗ ಆಕೆಯ ದೇಹತೂಕ ಅಷ್ಟೊಂದು ಹೆಚ್ಚಳ ಆದದ್ದು ಹೇಗೆ? ಅದರಲ್ಲಿ ಯಾರ ಕೈವಾಡವು ಇದೆ ಅನ್ನುವುದು ವಿಚಾರಣೆಗೆ ಒಳಗಾಗಬೇಕಾದ ವಿಷಯ. ಆ ದಿಸೆಯಲ್ಲಿ ಭಾರತೀಯ ಒಲಿಂಪಿಕ್ ಸಮಿತಿಯು ಸರಿಯಾಗಿ ವಿಚಾರಣೆ ನಡೆದು ವಿವರಣೆ ನೀಡಬೇಕು. ಆಗ ಮಾತ್ರ ಆಕೆಗೆ ಮತ್ತು ಭಾರತಕ್ಕೆ ಸ್ವಲ್ಪ ಮಟ್ಟದ ನೆಮ್ಮದಿ ಸಿಗಬಹುದು.

ಆಕೆಯನ್ನು ವೀರೋಚಿತವಾಗಿಯೇ ಭಾರತ ಬರಮಾಡಿಕೊಳ್ಳಬೇಕು!

ಆಕೆಗೆ ಪದಕವು ಸಿಗಲಿಲ್ಲ ಎಂಬ ನೋವಿನ ನಡುವೆಯೂ ಆಕೆಯು ಪ್ಯಾರಿಸ್ ನಗರದಲ್ಲಿ ಮಾಡಿದ ಹೋರಾಟವನ್ನು ನಾವು ಕಣ್ಣಾರೆ ನೋಡಿದ್ದೇವೆ. ಇದುವರೆಗೂ ಸೋಲೇ ಕಾಣದ ವಿಶ್ವ ಚಾಂಪಿಯನ್ ಆಟಗಾರ್ತಿಯನ್ನು ಆಕೆಯು ಸೋಲಿಸಿದ್ದು, ಸೆಮಿಯಲ್ಲಿ ಒಂದು ಅಂಕವನ್ನು ಬಿಟ್ಟುಕೊಡದೆ ಗೆದ್ದದ್ದು ಇದನ್ನೆಲ್ಲ ನಾವು ನೋಡಿದ್ದೇವೆ. ಇದೇನೂ ಸಣ್ಣ ಗೆಲುವಲ್ಲ. ಆದ್ದರಿಂದ ವಿನೆಶ್ ಫೊಗಾಟ್ ಭಾರತದ ಮನೆಮಗಳಾಗಿ ಭಾರತಕ್ಕೆ ಹಿಂದಿರುಗುತ್ತಾಳೆ. ಒಲಿಂಪಿಕ್ ಪದಕ ವಿಜೇತರಿಗೆ ಸಿಗುವ ಗೌರವ ಮತ್ತು ಬಹುಮಾನಗಳು ಆಕೆಗೂ ದೊರಕಬೇಕು ಎನ್ನುವುದೇ ಆಶಯ.

ಏನಂತೀರಿ?

ರಾಜಮಾರ್ಗ ಅಂಕಣ: ನಾವು ನಾಶ ಆಗೋದು ಯಾವಾಗ?ಇದನ್ನೂ ಓದಿ:

Continue Reading

ಅಂಕಣ

ರಾಜಮಾರ್ಗ ಅಂಕಣ: ನಾವು ನಾಶ ಆಗೋದು ಯಾವಾಗ?

ರಾಜಮಾರ್ಗ ಅಂಕಣ: ಕೆಲವೊಮ್ಮೆ ನಮ್ಮ ಸಾವು ನಮಗೆ ತಿಳಿಯುವುದೇ ಇಲ್ಲ. ಆದರೆ ವ್ಯಕ್ತಿಗಳ ಬದುಕಿನ ಚೈತನ್ಯಮಯಿ ಕ್ಷಣಗಳ ನಾಶ ನಾನಾ ಬಗೆಯಲ್ಲಿ ಸಾಧ್ಯ. ಅವು ಹೇಗೆ ಅಂತ ಇಲ್ಲಿ ನೋಡೋಣ.

VISTARANEWS.COM


on

change ರಾಜಮಾರ್ಗ ಅಂಕಣ
Koo

ಬನ್ನಿ ಬದಲಾಗೋಣ. ಆಗದಿದ್ದರೆ ಅದಕ್ಕೆ ನಾವೇ ಹೊಣೆ!

Rajendra-Bhat-Raja-Marga-Main-logo

:: ರಾಜೇಂದ್ರ ಭಟ್ ಕೆ.

ರಾಜಮಾರ್ಗ ಅಂಕಣ: 1) ನಾನು ಏನು ಬರೆದರೂ ಜನರು ಓದುತ್ತಾರೆ ಎಂದು ನಂಬಲು ತೊಡಗಿದ ಕ್ಷಣಕ್ಕೆ ಒಬ್ಬ ಬರಹಗಾರ ಸಾಯುತ್ತಾನೆ.

2) ತಾನು ಏನು ಮಾಡಿದರೂ ಜನರು ಓಟು ಹಾಕ್ತಾರೆ ಎಂದು ನಂಬಿದ ಕ್ಷಣಕ್ಕೆ ಓರ್ವ ರಾಜಕಾರಣಿ ನಾಶವಾಗುತ್ತಾನೆ.

3) ತಾನು ಎಲ್ಲವೂ ಕಲಿತಾಗಿದೆ, ಹೊಸದಾಗಿ ಕಲಿಯುವುದು ಏನಿಲ್ಲ ಎಂದು ನಂಬಿದ ಕ್ಷಣಕ್ಕೆ ಒಬ್ಬ ಗುರುವು ಸಾವನ್ನು ಕಾಣುತ್ತಾನೆ.

4) ತಾನು ಉಪದೇಶ ಮಾಡುವುದರಿಂದ ಜಗತ್ತು ಬದಲಾಗುತ್ತದೆ ಎಂದು ನಂಬಿದ ಕ್ಷಣಕ್ಕೆ ಓರ್ವ ಧರ್ಮಗುರುವು ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತಾನೆ.

5) ಬೇರೆಯವರ ಖಾಸಗಿ ಜೀವನದಲ್ಲಿ ಇಣುಕಿ ನೋಡುವುದೇ ಸುದ್ದಿ ಎಂದು ನಿರ್ಧಾರ ಮಾಡಿದ ಕ್ಷಣಕ್ಕೆ ಓರ್ವ ಪತ್ರಕರ್ತನು ನಾಶವಾಗುತ್ತಾನೆ.

6) ನಾನು ಪ್ರಯತ್ನ ಮಾಡದೆ ಎಲ್ಲರನ್ನೂ ದೇವರೇ ಗುಣಪಡಿಸುತ್ತಾನೆ ಎಂದು ನಂಬಿ ಕೂತ ಕ್ಷಣಕ್ಕೆ ಓರ್ವ ವೈದ್ಯನು ತನ್ನ ಮೌಲ್ಯ ಕಳೆದುಕೊಳ್ಳುತ್ತಾನೆ.

7) ಪರಿಶ್ರಮವಿಲ್ಲದೆ ಕೀರ್ತಿ ಬರಲಿ ಎಂದು ಹಾರೈಸಿದ ಕ್ಷಣಕ್ಕೆ ಒಂದು ಪ್ರತಿಭೆಯು ಸಾಯುತ್ತದೆ.

8) ತಾನಿರುವುದೇ ಆದೇಶ ನೀಡಲು, ಉಳಿದವರೆಲ್ಲರೂ ನನ್ನನ್ನು ಫಾಲೋ ಮಾಡಬೇಕು ಎಂದು ನಂಬಿದ ಕ್ಷಣಕ್ಕೆ ಒಬ್ಬ ಲೀಡರ್ ಸಾಯುತ್ತಾನೆ.

9) ತಾನು ಕಂಫರ್ಟ್ ವಲಯದಲ್ಲಿ ಇರ್ತೇನೆ, ರಿಸ್ಕ್ ಯಾರಿಗೆ ಬೇಕು? ಎಂದು ನಂಬಿ ಕೂತ ಕ್ಷಣಕ್ಕೆ ಓರ್ವ ಉದ್ಯಮಿಯು ನಾಶವಾಗುತ್ತಾನೆ.

10) ಸೃಜನಶೀಲವಾಗಿ ಯೋಚನೆ ಮಾಡುವುದನ್ನು ಬಿಟ್ಟ ಕ್ಷಣದಲ್ಲಿ ಓರ್ವ ಕಲಾವಿದನು ಸಾಯುತ್ತಾನೆ.

11) ತನ್ನ ಸಾಮರ್ಥ್ಯವನ್ನು ನಂಬದೆ ಬೇರೆಯವರನ್ನು ಅನುಕರಣೆ ಮಾಡುತ್ತಾ ಹೋದಾಗ ಓರ್ವ ಸಾಧಕನು ನಿಧಾನವಾಗಿ ನಾಶವಾಗುತ್ತಾನೆ.

12) ತನ್ನ ಉತ್ಪನ್ನಗಳಲ್ಲಿ ನಂಬಿಕೆ ಇಡದೆ ಜಾಹೀರಾತುಗಳನ್ನು ನಂಬಿ ಕೂತಾಗ ಓರ್ವ ವ್ಯಾಪಾರಿಯು ಖಾಲಿ ಆಗುತ್ತಾನೆ.

13) ಕ್ಷಣ ಕ್ಷಣಕ್ಕೆ ಅಪ್ಡೇಟ್ ಆಗದೇ ಅದೇ ಸವಕಲು ಮಾದರಿಗಳನ್ನು ನಂಬಿ ಕೂತಿರುವ ಸಂಶೋಧಕನು ಔಟ್ ಡೇಟ್ ಆಗುವುದು ಖಂಡಿತ.

14) ತನಗೆ ಬಂದ ಸೋಲುಗಳಿಗೆ ಆತ್ಮಾವಲೋಕನ ಮಾಡಿಕೊಳ್ಳದೆ ಬೇರೆಯವರನ್ನು ದೂರುತ್ತಾ ಕೂತಾಗ ಒಬ್ಬ ಮ್ಯಾನೇಜರ್ ಸಾಯುತ್ತಾನೆ.

15) ಗುರುಗಳ ಮೇಲೆ ನಂಬಿಕೆ ಇಲ್ಲದೆ ಎಲ್ಲವನ್ನೂ ನಾನೇ ಕಲಿಯುತ್ತೇನೆ ಎಂದು ಹೊರಡುವ ಶಿಷ್ಯ ಸೋಲುವುದು ಖಂಡಿತ.

16) ಗೆಲುವಿನ ದಾರಿಯನ್ನು ಹೇಳಿಕೊಡದೆ ಕೇವಲ ಮೋಟಿವೇಶನ್ ಮಾತ್ರ ಮಾಡುತ್ತಾ ಹೋಗುವ ತರಬೇತುದಾರನು ನಿಧಾನಕ್ಕೆ ಖಾಲಿ ಆಗುತ್ತಾನೆ.

17) ತನಗೆ ದೊರೆತ ಪ್ರತೀಯೊಂದು ಅವಕಾಶವನ್ನು ವ್ಯರ್ಥ ಮಾಡುತ್ತಾ ಇನ್ನೊಂದು ಅವಕಾಶ ಬೇಕಿತ್ತು ಎಂದು ಕಾಯುತ್ತಾ ಕುಳಿತ ಕ್ರೀಡಾಪಟುವು ನಿಧಾನವಾಗಿ ಮೌಲ್ಯ ಕಳೆದುಕೊಳ್ಳುತ್ತಾನೆ.

Morning sun light and get up early
Morning sun light and get up early

18) ತನ್ನ ಮತದಾನದ ಹಕ್ಕನ್ನು ಸರಿಯಾಗಿ ಚಲಾವಣೆ ಮಾಡದೆ ಸರಕಾರ ಸರಿಯಿಲ್ಲ ಎಂದು ಟೀಕೆ ಮಾಡುವ ಮತದಾರನು ತಾನು ನಾಶವಾಗುವುದು ಮಾತ್ರವಲ್ಲ, ಪ್ರಜಾಪ್ರಭುತ್ವದ ನಾಶಕ್ಕೆ ಕೂಡ ಕಾರಣ ಆಗುತ್ತಾನೆ.

19) ಬೇರೆಯವರ ಮಾತುಗಳನ್ನು ಆಲಿಸದೇ ಎಲ್ಲವನ್ನೂ ತನ್ನ ಮೂಗಿನ ನೇರಕ್ಕೆ ನಿರ್ಧಾರ ಮಾಡುವ ಅರಸನು ನಿಧಾನವಾಗಿ ನಾಶವಾಗುತ್ತಾನೆ.

20) ತನ್ನ ಸಾಮರ್ಥ್ಯಗಳ ಮೇಲೆ ನಂಬಿಕೆ ಇಡದೆ ಯಾರ್ಯಾರನ್ನೋ ಅವಲಂಬನೆ ಮಾಡುವ ಬಾಸ್ ನಿಧಾನವಾಗಿ ನಾಶವಾಗಿ ಬಿಡುತ್ತಾನೆ.

21) ಬೇರೆ ಯಾರನ್ನೂ ಬೆಳೆಸದೆ ತಾನು ಮಾತ್ರ ಬೆಳೆದರೆ ಸಾಕು ಎಂದು ಯೋಚಿಸುವ ವ್ಯಕ್ತಿಯು ನಿಧಾನವಾಗಿ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತಾನೆ.

22) ತಾನು ಆಡುವ ಮಾತುಗಳು ಬೇರೆಯವರಿಗೆ, ತನ್ನ ಅನುಷ್ಠಾನಕ್ಕೆ ಅಲ್ಲ ಎಂದು ನಂಬುತ್ತ ಕೂತರೆ ಒಬ್ಬ ಭಾಷಣಕಾರ ನಾಶವಾಗಲು ಹೆಚ್ಚು ಸಮಯ ಬೇಕಾಗಿಲ್ಲ.

23) ರಾಷ್ಟ್ರಕ್ಕೆ ತನ್ನ ನಿಷ್ಠೆಯನ್ನು ಮರೆತು, ರಾಷ್ಟ್ರ ಮೊದಲು ಎಂದು ನಂಬಿಕೆ ಇಲ್ಲದ ಸೈನಿಕನು ಯುದ್ಧವನ್ನು ಮಾಡದೆ ಸಾಯುತ್ತಾನೆ.

ಯೋಚಿಸಿ ಮತ್ತು ಬದಲಾಗಿ.

ಇದನ್ನೂ ಓದಿ: ರಾಜಮಾರ್ಗ ಅಂಕಣ: ಕೃತಜ್ಞತೆ ಎಂಬ ಮಹಾನ್ ಪ್ರವಾಹ

Continue Reading

ಅಂಕಣ

ನನ್ನ ದೇಶ ನನ್ನ ದನಿ ಅಂಕಣ: ಜಿಹಾದಿ, ಮಿಷನರಿಗಳ ಸಾವಿರ ಹಿರೋಷಿಮಾಗಳು ಕಾಯುತ್ತಿವೆ

ನನ್ನ ದೇಶ ನನ್ನ ದನಿ ಅಂಕಣ: ಇಂದು ಭಾರತದ ಮೇಲೆ, ನೂರೆಂಟು ಹಿರೋಷಿಮಾಗಳನ್ನು ಸುರಿದುಬಿಡಲು ಜಿಹಾದೀ – ಮಿಷನರಿ – ಕಮ್ಯೂನಿಸ್ಟ್ ದುಃಶಕ್ತಿಗಳು ಹವಣಿಸುತ್ತಿವೆ. ಆಕ್ರಮಣಕಾರಿ ದುಃಶಕ್ತಿಗಳನ್ನು ಅರ್ಥ ಮಾಡಿಕೊಳ್ಳದ ಮತ್ತು ಅನಗತ್ಯ ಔದಾರ್ಯದಿಂದ ಸ್ವತಃ ನಾಶವಾಗಿಹೋದ ನಾವು ಇನ್ನಾದರೂ ಜಾಗೃತರಾಗೋಣ, ನಿಜ-ಭಾರತವನ್ನು ಉಳಿಸಿಕೊಳ್ಳೋಣ.

VISTARANEWS.COM


on

chamanlal book ನನ್ನ ದೇಶ ನನ್ನ ದನಿ ಅಂಕಣ
Koo

ಈ ಅಂಕಣವನ್ನು ಇಲ್ಲಿ ಆಲಿಸಿ:

ajjampura manjunath ನನ್ನ ದೇಶ ನನ್ನ ದನಿ

:: ಮಂಜುನಾಥ ಅಜ್ಜಂಪುರ

ನನ್ನ ದೇಶ ನನ್ನ ದನಿ ಅಂಕಣ: ನಮ್ಮದು ಅತಿ-ವಿಶಿಷ್ಟ ಸಾಂಸ್ಕೃತಿಕ (Cultural) ಪರಂಪರೆ. ಭಾರತವನ್ನು – ಭಾರತದ ಆತ್ಮವನ್ನು (soul of India) ಅರ್ಥ ಮಾಡಿಕೊಳ್ಳಲು, ಪಾಶ್ಚಾತ್ಯ ಮಾನಸಿಕತೆಯನ್ನು ಮತ್ತು ಆ ವಾಹಿನಿಯಿಂದ ಬಂದ ಸಾಮ್ರಾಜ್ಯಶಾಹಿ ಪರಿಕಲ್ಪನೆಗಳನ್ನು ಪಕ್ಕಕ್ಕಿರಿಸಿ, ಸಾಂಸ್ಕೃತಿಕ ಭಾರತವನ್ನು ಕಣ್ಮುಂದೆ ತಂದುಕೊಳ್ಳಲು ನಾವು ಪ್ರಾಮಾಣಿಕ ಪ್ರಯತ್ನ ಮಾಡಿದಾಗ ಮಾತ್ರ, ನಮ್ಮ ಅಸ್ಮಿತೆ – ನಮ್ಮ ವೈಶಿಷ್ಟ್ಯಗಳು ಆತ್ಮಗತವಾಗುತ್ತವೆ.

ಆಕ್ರಮಣಕಾರಿ ಅಬ್ರಹಾಮಿಕ್ ಮತಗಳಿಂದ ನಮಗೆ ಬಹಳ ದೊಡ್ಡ ಆಘಾತವೇ ಮುಗಿಬಿದ್ದಿದೆ. ಲಕ್ಷ ಲಕ್ಷ ಗ್ರಂಥಗಳು ಜಿಹಾದಿಗಳಿಂದ ನಾಶವಾಗಿಹೋಗಿವೆ. ನಮ್ಮ ಪರಂಪರೆಯ ಸರಿಯಾದ ಚಿತ್ರವೇ ಇನ್ನೂ ಸಿಕ್ಕಿಲ್ಲ. ನಮ್ಮ ಇತಿಹಾಸದ, ನಮ್ಮ ಪರಂಪರೆಯ ತುಂಬ ತುಂಬ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸುವ ಸಂಶೋಧಿಸುವ ಮಹತ್ಕಾರ್ಯ ಇನ್ನೂ ಆರಂಭವಾಗಿಯೇ ಇಲ್ಲ.

ನಮಗೆ ಗ್ರಂಥನಾಶಕ್ಕಿಂತ ದೊಡ್ಡ ಪೆಟ್ಟು ಬಿದ್ದದ್ದು ಮೆಕಾಲೆವಾದಿ – ಜಿಹಾದೀ – ಕಮ್ಯೂನಿಸ್ಟ್ ದೇಶದ್ರೋಹಿ ಇತಿಹಾಸಕಾರರಿಂದ. ಇವರೆಲ್ಲಾ ನಮ್ಮ ಇತಿಹಾಸ ಪಠ್ಯಪುಸ್ತಕಗಳಲ್ಲಿ ಬರೀ ಅನೃತವನ್ನೇ ತುಂಬಿದುದರಿಂದ, ಸತ್ಯಕಥನಗಳಿಗಾಗಿ ಬೇರೆ ಬೇರೆ ಸಾಕ್ಷ್ಯಾಧಾರಗಳನ್ನು ನಾವೀಗ ಆಶ್ರಯಿಸಬೇಕಾಗಿದೆ. ಜಗತ್ತಿನ ಶ್ರೇಷ್ಠ ಇತಿಹಾಸಕಾರರಾದ ವಿಲ್ ಡ್ಯೂರಾಂಟ್ ಭಾರತವನ್ನು ಅರ್ಥ ಮಾಡಿಕೊಂಡವರಲ್ಲಿ ಒಬ್ಬರು. ಇಸ್ಲಾಮೀ ದುರಾಕ್ರಮಣಗಳಿಂದ ರಕ್ತಸಿಕ್ತವಾಗಿಹೋಗಿದ್ದ ಭಾರತಕ್ಕಾಗಿ ಅವರು ಮಿಡಿದಿದ್ದರು.

“ಭಾರತವು ನಮ್ಮ ಜನಾಂಗದ ಮಾತೃಭೂಮಿ. ಸಂಸ್ಕೃತ ಭಾಷೆಯು ಯೂರೋಪಿನ ಭಾಷೆಗಳ ತಾಯಿ. ನಮ್ಮ ತತ್ತ್ವಶಾಸ್ತ್ರ, ಗಣಿತ, ಸ್ವಯಮಾಡಳಿತ ಮತ್ತು ಜನತಂತ್ರಗಳ ಪರಿಕಲ್ಪನೆಯ ಮೂಲವು ಭಾರತವೇ. ಅನೇಕ ರೀತಿಯಲ್ಲಿ ಭಾರತವೇ ನಮ್ಮೆಲ್ಲರ ತಾಯಿ” ಎಂದಿದ್ದರು ವಿಲ್ ಡ್ಯೂರಾಂಟ್.

ಈ ಮಾತುಗಳಿಂದ ಪ್ರೇರಣೆ ಪಡೆದ ಭಿಕ್ಷು ಚಮನ್ ಲಾಲ್ ಅವರು “India Mother of us all” (ಪ್ರಕಟಣೆ 1968) ಎಂಬ ಮಹತ್ತ್ವದ ಕೃತಿಯನ್ನು ನೀಡಿದ್ದಾರೆ. ಎಲ್.ವಿ. ಶಾಂತಕುಮಾರಿ ಅವರು “ನಮ್ಮೆಲ್ಲರ ತಾಯಿ ಭಾರತ” ಎಂಬ ತುಂಬ ಚಂದದ ಕನ್ನಡಾನುವಾದವನ್ನು ನೀಡಿದ್ದಾರೆ. ಬೇರೆಬೇರೆ ದೇಶಗಳ ಅನೇಕ ವಿದ್ವಾಂಸರ ಅಭಿಮತ ಮತ್ತು ಸತ್ಯನಿಷ್ಠ ಮೆಚ್ಚುಗೆಗಳನ್ನು ಇಲ್ಲಿ ದಾಖಲಿಸಲಾಗಿದೆ.

“ಭಾರತದ ಜನರು ಧಾರ್ಮಿಕರು, ವಾತ್ಸಲ್ಯಮಯ ವ್ಯಕ್ತಿತ್ವದವರು, ಅತಿಥಿ ಸತ್ಕಾರ ಮಾಡುವವರು, ಸ್ನೇಹಪರರು, ಮುಚ್ಚುಮರೆಯಿರದ ಸರಳಜೀವಿಗಳು. ಭಾರತೀಯರು ಪ್ರಾಂಜಲ ಸ್ವಭಾವದವರು, ವೈಜ್ಞಾನಿಕ ಸಂಶೋಧನೆಗಳಲ್ಲಿ ನಿರತರಾಗಿರುವವರು, ಜೀವನದಲ್ಲಿ ಕಠಿಣ ನಿಯಮಗಳನ್ನು ಅನುಸರಿಸುವವರು, ನ್ಯಾಯಾನ್ವೇಷಿಗಳು, ತೃಪ್ತರು, ಉದ್ಯಮಶೀಲರು, ವ್ಯವಹಾರ ಸಮರ್ಥರು, ನಿಷ್ಠರು, ಸತ್ಯಸಂಧರು ಮತ್ತು ಸ್ಥಿರವಾಗಿ ನಿಲ್ಲುವವರು. ಈ ಜನಗಳ ನಿಜವಾದ ಜೀವನಮೌಲ್ಯವು ವಿಪತ್ಕಾಲದಲ್ಲಿ ಎದ್ದುತೋರುತ್ತದೆ. ಇಲ್ಲಿನ ಯೋಧರಿಗೆ ರಣರಂಗದಿಂದ ಹಿಮ್ಮೆಟ್ಟುವುದು ಗೊತ್ತೇ ಇಲ್ಲ. ಯುದ್ಧರಂಗದಲ್ಲಿ ಗಟ್ಟಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾದಾಗ ಅವರು ಕುದುರೆಗಳಿಂದ ಕೆಳಗಿಳಿದು ತಮ್ಮ ಜೀವಗಳನ್ನೇ ಅಪಾಯಕ್ಕೆ ಒಡ್ಡಿಕೊಂಡು ದೃಢನಿರ್ಧಾರ ತೆಗೆದುಕೊಳ್ಳುತ್ತಾರೆ. ಯುದ್ಧಭೂಮಿಯಿಂದ ಓಡಿಹೋಗುವುದು ಸಾವಿಗಿಂತಲೂ ಹೆಚ್ಚು ಭಯಂಕರವಾದುದು, ಎಂದು ಭಾರತೀಯರು ಪರಿಗಣಿಸುತ್ತಾರೆ” ಎಂದು ತನ್ನ “ಐನ್ ಈ ಅಕ್ಬರಿ” ಕೃತಿಯಲ್ಲಿ, ಸಾಮಾನ್ಯ ಯುಗದ 16ನೆಯ ಶತಮಾನದ ಮುಸ್ಲಿಂ ಇತಿಹಾಸಕಾರ ಅಬು ಫಝಲ್ ಅಲ್ಲಮಿ ದಾಖಲಿಸಿದ್ದಾನೆ.

ಅನೀತಿಯುತವಾದ ಭಾರತ-ವಿರೋಧೀ ಪರಿಕಲ್ಪನೆಗಳ ವಿಕೃತ ಶಿಕ್ಷಣ ವ್ಯವಸ್ಥೆಯಲ್ಲಿ ಕಲಿತ ನಮಗೆಲ್ಲಾ ಈ ದಾಖಲೆಗಳು “ನಿಜವೇ?” ಎಂಬ ವಿಸ್ಮಯವನ್ನು ಹುಟ್ಟಿಸುತ್ತವೆ. ಕಳೆದ ಎರಡು ಶತಮಾನಗಳ ಕಾಲಾವಧಿಯ, ಬ್ರಿಟಿಷರ ಮತ್ತು ಅವರ “ಪ್ರೀತಿಪಾತ್ರರ” ದುರಾಡಳಿತದಲ್ಲಿ ನಮ್ಮ ಸಮಾಜವು ಹೇಗಿದೆಯೆಂದರೆ, ಈ ಜೀವನಮೌಲ್ಯಗಳು ಹಿಂದೆ ನಮ್ಮಲ್ಲಿ ಇದ್ದವೇ, ಎಂಬ ಅನುಮಾನವು ನಮ್ಮಲ್ಲಿಯೇ ಮೂಡುತ್ತದೆ.

ಸಾಮಾನ್ಯಯುಗಪೂರ್ವ 4ನೆಯ ಶತಮಾನದ ಗ್ರೀಕ್ ಇತಿಹಾಸಕಾರ ಮತ್ತು ಜನಾಂಗಶಾಸ್ತ್ರಜ್ಞ ಮೆಗಾಸ್ತನೀಸ್ ಭಾರತೀಯ ಪುರುಷರ ಧೈರ್ಯವನ್ನು, ಸ್ತ್ರೀಯರ ಪರಿಶುದ್ಧತೆಯನ್ನು ಮತ್ತು ಮುಖ್ಯವಾಗಿ ಗುಲಾಮಗಿರಿಯ ಅನುಪಸ್ಥಿತಿಯನ್ನು ಗುರುತಿಸಿದ್ದಾನೆ. “ಪರಾಕ್ರಮದಲ್ಲಿ ಏಷಿಯಾದ ಉಳಿದೆಲ್ಲರನ್ನೂ ಮೀರಿಸಿದ ಭಾರತೀಯರು ಶಾಂತಚಿತ್ತರು, ಉದ್ಯಮಶೀಲರು, ಉತ್ತಮ ರೈತರು ಮತ್ತು ಕುಶಲ ಕಸಬುದಾರರು. ಅವರು ಎಂದೂ ದಾವೆ, ಖಟ್ಲೆಗಳನ್ನು ಅವಲಂಬಿಸಿದವರಲ್ಲ ಮತ್ತು ತಮ್ಮ ಸ್ಥಳೀಯ ಮುಖ್ಯಸ್ಥರ ಮಾರ್ಗದರ್ಶನದಲ್ಲಿ ಶಾಂತಿಯಿಂದ ಜೀವಿಸುತ್ತಿದ್ದರು” ಎಂದು ಸಹ ಗಮನಿಸಿದ್ದಾನೆ, ಮೆಚ್ಚಿದ್ದಾನೆ.

ಇನ್ನೋರ್ವ ಗ್ರೀಕ್ ತತ್ತ್ವಶಾಸ್ತ್ರಜ್ಞ ಎಪಿಕ್ಟೆಟಸ್ ಶಿಷ್ಯ ಅರ್ರೇನ್ (ಸಾಮಾನ್ಯ ಯುಗದ 2ನೆಯ ಶತಮಾನ) “ಪ್ರಾಚೀನ ಭಾರತದಲ್ಲಿ ಕಳ್ಳತನವೆಂಬುದು ಇರಲೇ ಇಲ್ಲ. ಜನರು ಪರಿಪೂರ್ಣ ಸುರಕ್ಷತೆಯಿಂದ ಜೀವಿಸುತ್ತಿದ್ದರು. ಹಿಂದೂಗಳು ಎಷ್ಟು ಪ್ರಾಮಾಣಿಕರೆಂದರೆ, ಅವರ ಮನೆಯ ಬಾಗಿಲುಗಳಿಗೆ ಬೀಗದ ಆವಶ್ಯಕತೆಯಿರಲಿಲ್ಲ. ಪರಸ್ಪರರಲ್ಲಿ ಅವರು ಮಾಡಿಕೊಳ್ಳುತ್ತಿದ್ದ ಒಪ್ಪಂದಗಳನ್ನು ಖಾತ್ರಿಪಡಿಸಲು ಲಿಖಿತ ಪುರಾವೆಗಳ ಆವಶ್ಯಕತೆಯೂ ಅವರಿಗಿರಲಿಲ್ಲ. ಯಾವೊಬ್ಬ ಭಾರತೀಯನೂ ಅಸತ್ಯವಾಡಿದ್ದನ್ನು ಎಂದೂ ಕಂಡಿಲ್ಲ, ಕೇಳಿಲ್ಲ” ಎಂದು ಮೆಚ್ಚಿ ದಾಖಲಿಸಿದ್ದಾನೆ.

ಚೀನಾದ ಯಾತ್ರಿಕರಲ್ಲಿ ಅತ್ಯಂತ ಪ್ರಸಿದ್ಧನಾದವನು, ಸಾಮಾನ್ಯ ಯುಗದ 7ನೆಯ ಶತಮಾನಕ್ಕೆ ಸೇರಿದ ಯುವಾನ್ ಚ್ವಾಂಗ್ (ಇದು ಸರಿಯಾದ ಉಚ್ಚಾರಣೆ, ಹಿಂದೆ ಹ್ಯೂಎನ್ ತ್ಸಾಂಗ್ ಎನ್ನಲಾಗುತ್ತಿತ್ತು). ಅವನು “ಭಾರತೀಯರು ತಮ್ಮ ನಿಷ್ಕಪಟ ನೇರ ನಡೆನುಡಿ ಮತ್ತು ಪ್ರಾಮಾಣಿಕ ಚಾರಿತ್ರ್ಯದಿಂದಾಗಿ ಪ್ರಸಿದ್ಧರಾಗಿದ್ದಾರೆ. ಸಂಪತ್ತಿಗೆ ಸಂಬಂಧಿಸಿದಂತೆ ಅವರು ಏನನ್ನೂ ಅನ್ಯಾಯವಾಗಿ ತೆಗೆದುಕೊಳ್ಳುವುದಿಲ್ಲ. ನ್ಯಾಯವನ್ನು ಅವರು ಗೌರವಿಸುತ್ತಾರೆ. ನೇರ ನಡವಳಿಕೆ ಅವರ ಆಡಳಿತದ ಮುಖ್ಯ ಲಕ್ಷಣವಾಗಿದೆ” ಎಂದು ಮೆಚ್ಚಿದ್ದಾನೆ.

gurukula Shikshana
gurukula Shikshana

ಡಿಸೆಂಬರ್ 1861ರ “ದಿ ಕೊಲ್ಕತ್ತಾ ರಿವ್ಯೂ” ಹೀಗೆ ಹೇಳುತ್ತದೆ: ” ಹಿಂದಿನ ಕಾಲದಲ್ಲಿ ಹಿಂದೂಗಳು ವ್ಯವಹಾರನಿಪುಣರಾಗಿದ್ದರು. ಭಾರತದ ಮಗ್ಗಗಳಲ್ಲಿನ ಪರಿಶ್ರಮವನ್ನು ಜಗತ್ತಿನೆಲ್ಲೆಡೆ ಗೌರವಿಸಲಾಗುತ್ತಿತ್ತು ಮೆಚ್ಚಲಾಗುತ್ತಿತ್ತು, ಎನ್ನುವುದಕ್ಕೆ ಹೇರಳವಾದ ಸಾಕ್ಷ್ಯಾಧಾರಗಳಿವೆ. ಪ್ರಾಚೀನ ಕಾಲದಿಂದಲೇ ಹಿಂದೂಗಳು ರೇಷ್ಮೆಯನ್ನು ತಯಾರಿಸುತ್ತಿದ್ದಾರೆ. ಭಾರತೀಯರು ಅತ್ಯಂತ ಪ್ರಾಜ್ಞರು, ಅಧ್ಯಾತ್ಮಜ್ಞಾನದಲ್ಲಿ ಅತ್ಯಂತ ಶ್ರೇಷ್ಠರು. ಖಗೋಳ ಶಾಸ್ತ್ರ ಹಾಗೂ ಅಂಕಗಣಿತದಲ್ಲಿಯೂ ಅಷ್ಟೇ ಪರಿಣತರು, ಎಂದು ಗ್ರೀಕ್ ಲೇಖಕರು ಹೇಳಿದ್ದಾರೆ”.

ಭಾರತೀಯರ ಬಗೆಗೆ ಡಯೋನಿಸಿಯಸ್ ಹೀಗೆ ಹೇಳಿದ್ದಾನೆ: “ಅವರು ಮೊದಲು ಸಾಗರವನ್ನು ಪರಿಶೋಧಿಸಿದರು. ಗೊತ್ತಿರದ ತೀರಗಳಿಗೂ ಸರಕುಗಳನ್ನು ಸಾಗಿಸಿದರು. ಭಾರತೀಯರು ಮೊದಲು ತಾರಾಮಂಡಲವನ್ನು ಅರಿತು ಅರಗಿಸಿಕೊಂಡರು. ಅವುಗಳ ಚಲನೆಯನ್ನು ಗುರುತಿಸಿದರು ಮತ್ತು ಬೇರೆ ಬೇರೆ ಹೆಸರುಗಳಲ್ಲಿ ಅವುಗಳನ್ನು ಕರೆದರು. ಪುರಾತನ ಕಾಲದಿಂದಲೂ, ಹಿಂದೂಸ್ತಾನವು ವಿಶ್ವದಲ್ಲಿ ಅತ್ಯಂತ ಹೆಚ್ಚು ಮೆಚ್ಚುಗೆಗೆ ಪಾತ್ರವಾದ ದೇಶಗಳಲ್ಲಿ ಒಂದು, ಎಂದು ಪ್ರಖ್ಯಾತಿ ಹೊಂದಿದೆ.

ಎಲ್ಲ ಜ್ಞಾನಶಾಖೆಗಳಲ್ಲಿಯೂ ಪಾಶ್ಚಾತ್ಯರ ಹಳಸಲನ್ನೇ ತಿಂದು ಅದನ್ನೇ ವಿದ್ಯಾರ್ಥಿಗಳ ಮೇಲೆ ವಾಂತಿ ಮಾಡಿಕೊಳ್ಳುವ ನಮ್ಮ ಅಕೆಡೆಮಿಕ್ ಪ್ರಭೃತಿಗಳಿಗೆ, ಪ್ರಾಚೀನ ಹಿಂದೂ ಭಾರತದ ಯಾವ ಸಾಧನೆಗಳೂ – ಯಾವ ಚಿತ್ರಗಳೂ ಪಥ್ಯವಾಗುವುದಿಲ್ಲ. ಹಿಂದೆ ನಮ್ಮಲ್ಲಿದ್ದುದು ಬರೀ ಅಸ್ಪೃಶ್ಯತೆ, ಜಾತೀಯತೆ, ಸ್ತ್ರೀ ಅಸಮಾನತೆ, ಸತಿ ಸಹಗಮನ, ಮೂಢನಂಬಿಕೆಗಳು ಅಷ್ಟೇ, ಎನ್ನುತ್ತಾರೆ. ಮೇಲೆ ಹೇಳಿದ ಯಾವ ಸಂಗತಿಗಳನ್ನು ಪ್ರಸ್ತಾಪಿಸಿದರೂ ಅದೊಂದು ಜೋಕೆಂಬಂತೆ ಗಹಗಹಿಸಿ ನಗುತ್ತಾರೆ.

ಹಿರೋಷಿಮಾ ಮೇಲೆ ಅಣುಬಾಂಬ್ ಆಸ್ಫೋಟವಾದ ದುರ್ದಿನ ಆಗಸ್ಟ್ 6. ಮನುಕುಲದ ಮಹಾದುರಂತದ ದಿನವಿದು.

ವಿವೇಕಾನಂದರ, ಮಹರ್ಷಿ ಅರವಿಂದರ, ರವೀಂದ್ರರ, ಬಂಕಿಮ ಚಂದ್ರರ, ಸುಭಾಷರ, ಸತ್ಯಜಿತ್ ರಾಯ್ ಅಂತಹವರ ಅತ್ಯದ್ಭುತ ಪರಂಪರೆ – ಸಂಸ್ಕೃತಿ – ಸಂಗೀತ – ಸಾಹಿತ್ಯ – ಚಲನಚಿತ್ರ – ನೃತ್ಯಗಳ ಬಂಗಾಳ ಬಾಂಗ್ಲಾಗಳು ಕಳೆದ ನೂರು ವರ್ಷಗಳಲ್ಲಿ ನಮ್ಮ ಕಣ್ಮುಂದೆಯೇ ನಾಶವಾಗಿಬಿಟ್ಟಿವೆ. ಈಗ ಅಲ್ಲಿ ಕೇವಲ ಕಲ್ಲೆಸೆಯುವವರೇ ತುಂಬಿಕೊಂಡುಬಿಟ್ಟಿದ್ದಾರೆ.

ಇಂದು ಭಾರತದ ಮೇಲೆ, ನೂರೆಂಟು ಹಿರೋಷಿಮಾಗಳನ್ನು ಸುರಿದುಬಿಡಲು ಜಿಹಾದೀ – ಮಿಷನರಿ – ಕಮ್ಯೂನಿಸ್ಟ್ ದುಃಶಕ್ತಿಗಳು ಹವಣಿಸುತ್ತಿವೆ. ಆಕ್ರಮಣಕಾರಿ ದುಃಶಕ್ತಿಗಳನ್ನು ಅರ್ಥ ಮಾಡಿಕೊಳ್ಳದ ಮತ್ತು ಅನಗತ್ಯ ಔದಾರ್ಯದಿಂದ ಸ್ವತಃ ನಾಶವಾಗಿಹೋದ ನಾವು ಇನ್ನಾದರೂ ಜಾಗೃತರಾಗೋಣ, ನಿಜ-ಭಾರತವನ್ನು ಉಳಿಸಿಕೊಳ್ಳೋಣ.

ಇದನ್ನೂ ಓದಿ: ನನ್ನ ದೇಶ ನನ್ನ ದನಿ ಅಂಕಣ: ಗೋವಾದಲ್ಲಿ ಹಿಂದೂಗಳ ಮೇಲಿತ್ತು ಜುಟ್ಟಿನ ತೆರಿಗೆ!

Continue Reading
Advertisement
Bangladesh Unrest hindus protest
ವಿದೇಶ7 mins ago

Bangladesh Unrest: ಶೇಖ್‌ ಹಸೀನಾ ಓಡಿ ಬಂದ ಬಳಿಕ ಬಾಂಗ್ಲಾದೇಶದಲ್ಲಿ 232 ಜನರ ಕಗ್ಗೊಲೆ, ಹಿಂದೂಗಳೇ ಟಾರ್ಗೆಟ್

Tharun Sudhir And Sonal Montero Haldi Shastra Photos
ಸ್ಯಾಂಡಲ್ ವುಡ್31 mins ago

Tharun Sudhir: ತರುಣ್ ಸುಧೀರ್-ಸೋನಲ್ ಮದುವೆ ಸಂಭ್ರಮ; ಅದ್ಧೂರಿಯಾಗಿ ನಡೆದ ಅರಿಶಿಣ ಶಾಸ್ತ್ರ!

bjp-jds padayatra
ಪ್ರಮುಖ ಸುದ್ದಿ58 mins ago

BJP-JDS Padayatra: ಇಂದು ಬಿಜೆಪಿ-ಜೆಡಿಎಸ್‌ ಪಾದಯಾತ್ರೆಗೆ ತೆರೆ, ಮೈಸೂರಿನಲ್ಲಿ ಬೃಹತ್‌ ಸಮಾವೇಶ

Sharara Fashion
ಫ್ಯಾಷನ್60 mins ago

Sharara Fashion: ಲಾಂಗ್‌ ಸ್ಕರ್ಟ್‌‌ನಂತೆ ರೂಪ ಬದಲಿಸಿದ ಶರಾರ!

cat bite shimogga news
ಶಿವಮೊಗ್ಗ2 hours ago

Cat Bite: ಸಾಕಿದ ಬೆಕ್ಕು ಕಚ್ಚಿ ಮಹಿಳೆ ಸಾವು; ಬೆಕ್ಕು ಪರಚಿದರೆ ಹುಷಾರ್

pranjal patil ರಾಜಮಾರ್ಗ ಅಂಕಣ
ಅಂಕಣ2 hours ago

ರಾಜಮಾರ್ಗ ಅಂಕಣ: ದೃಷ್ಟಿ ವಿಕಲತೆಯನ್ನು ಮೆಟ್ಟಿ ನಿಂತು ಐಎಎಸ್ ಅಧಿಕಾರಿ ಆದ ಪ್ರಾಂಜಲ್ ಪಾಟೀಲ್!

knuckle cracking
ಆರೋಗ್ಯ3 hours ago

Knuckle Cracking: ನೆಟಿಕೆ ಮುರಿಯುವುದು ಒಳ್ಳೆಯದೇ ಕೆಟ್ಟದ್ದೇ? ಇದರಿಂದ ಸಂಧಿವಾತ ಬರುತ್ತದೆಯೇ?

Paris Olympics 2024
ಪ್ರಮುಖ ಸುದ್ದಿ3 hours ago

Paris Olympics 2024 : ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಇಂದು ಭಾರತಕ್ಕೆ ಯಾವ್ಯಾವ ಸ್ಪರ್ಧೆಗಳಿವೆ? ಇಲ್ಲಿದೆ ಎಲ್ಲ ವಿವರ

karnataka weather Forecast
ಮಳೆ3 hours ago

Karnataka Weather : ಭಾರಿ ಮಳೆ ಸೂಚನೆ; ಕರಾವಳಿಗೆ ಯೆಲ್ಲೋ ಅಲರ್ಟ್‌ ಘೋಷಣೆ

Dina Bhavishya
ಭವಿಷ್ಯ4 hours ago

Dina Bhavishya : ಈ ರಾಶಿಯ ಉದ್ಯೋಗಿಗಳಿಗೆ ಫುಲ್‌ ಟೆನ್ಷನ್‌; ದಿನದ ಮಟ್ಟಿಗೆ ಖರ್ಚು ಹೆಚ್ಚು

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka Weather Forecast
ಮಳೆ2 days ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 days ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 days ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು4 days ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ4 days ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ6 days ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ7 days ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ1 week ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ1 week ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ1 week ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

ಟ್ರೆಂಡಿಂಗ್‌