Guava Leaves Benefits: ಕೇವಲ ಸೀಬೆ ಹಣ್ಣಲ್ಲ, ಎಲೆಯಿಂದಲೂ ಎಷ್ಟೊಂದು ಪ್ರಯೋಜನಗಳು! - Vistara News

ಆರೋಗ್ಯ

Guava Leaves Benefits: ಕೇವಲ ಸೀಬೆ ಹಣ್ಣಲ್ಲ, ಎಲೆಯಿಂದಲೂ ಎಷ್ಟೊಂದು ಪ್ರಯೋಜನಗಳು!

ಸೀಬೆಯ ಎಲೆಯಿಂದ (guava leaves benefits) ನಿಮ್ಮ ಕೂದಲೂ ಸೇರಿದಂತೆ ನಿತ್ಯವೂ ಕಾಡುವ ಹಲವಾರು ಆರೋಗ್ಯ ಸಮಸ್ಯೆಗಳಿಗೆ ರಾಮಬಾಣದಂತಹ ಉತ್ತರವಿದೆ. ಇದರಿಂದ ಆಗಬಹುದಾದ ಲಾಭಗಳನ್ನು ನೀವು ತಿಳಿದುಕೊಂಡರೆ ಖಂಡಿತಾ ನೀವು ಸೀಬೆ ಮರವನ್ನು ಅರಸಿಕೊಂಡು ಹೋಗುವುದರಲ್ಲಿ ಯಾವ ಸಂಶಯವೂ ಇಲ್ಲ. ಬನ್ನಿ ಸೀಬೆ ಮರದ ಎಲೆಯ ಲಾಭಗಳನ್ನು ತಿಳಿದುಕೊಳ್ಳೋಣ.

VISTARANEWS.COM


on

guava leaves benefits
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಪೇರಳೆ ಅಥವಾ ಸೀಬೆ ಹಣ್ಣಿನ (guava leaves benefits) ಮಹತ್ವದ ಬಗ್ಗೆ ನಿಮಗೆ ಕೇಳಿ ಗೊತ್ತಿರಬಹುದು. ಅದರ ಆರೋಗ್ಯದ ಲಾಭಗಳನ್ನು ನೀವು ಕೇಳಿ ತಿಳಿದುಕೊಂಡು ತಿನ್ನುತ್ತಲೂ ಇರಬಹುದು. ಆದರೆ ಸೀಬೆಕಾಯಿಯ ಎಲೆಯ ಲಾಭಗಳ ಬಗ್ಗೆ ನಿಮಗೆ ಗೊತ್ತೇ? ಸೀಬೆಯ ಎಲೆಯಿಂದ ನಿಮ್ಮ ಕೂದಲೂ ಸೇರಿದಂತೆ ನಿತ್ಯವೂ ಕಾಡುವ ಹಲವಾರು ಆರೋಗ್ಯ ಸಮಸ್ಯೆಗಳಿಗೆ ರಾಮಬಾಣದಂತಹ ಉತ್ತರವಿದೆ. ಇದರಿಂದ ಆಗಬಹುದಾದ ಲಾಭಗಳನ್ನು ನೀವು ತಿಳಿದುಕೊಂಡರೆ ಖಂಡಿತಾ ನೀವು ಸೀಬೆ ಮರವನ್ನು ಅರಸಿಕೊಂಡು ಹೋಗುವುದರಲ್ಲಿ ಯಾವ ಸಂಶಯವೂ ಇಲ್ಲ. ಬನ್ನಿ ಸೀಬೆ ಮರದ ಎಲೆಯ ಲಾಭಗಳನ್ನು ತಿಳಿದುಕೊಳ್ಳೋಣ.

Guava Leaves

ಪೋಷಕಾಂಶಗಳು

ಸೀಬೆಯ ಎಲೆಯಲ್ಲಿ ಸಾಕಷ್ಟು ವಿಟಮಿನ್‌ಗಳೂ ಪೋಷಕಾಂಶಗಳೂ ಇರುವುದರಿಂದ ಕೂದಲನ್ನು ಶಕ್ತಿಯುತವಾಗಿಸುವಲ್ಲಿ ಇದರ ಪಾತ್ರ ದೊಡ್ಡದು. ಕೂದಲನ್ನು ಬೇರಿನಿಂದಲೇ ಶಕ್ತಿಯುತಗೊಳಿಸಿ ಗಟ್ಟಿಗೊಳಿಸುತ್ತದೆ. ಬುಡದಿಂದಲೇ ಕೂದಲನ್ನು ಆರೋಗ್ಯಯುತವಾಗಿಸಿ ಕೂದಲುದುರುವಿಕೆಯನ್ನು ತಡೆಯುತ್ತದೆ. ಕೂದಲು ಸೊಂಪಾಗಿ ದೃಢವಾಗಿ ಬೆಳೆಯುತ್ತದೆ.

ಕೂದಲು ದೃಢ

ಫ್ರೀ ರ್ಯಾಡಿಕಲ್ಸ್‌ ವಿರುದ್ಧ ಹೋರಾಡುವ ಗುಣವನ್ನು ಇದು ಹೊಂದಿರುವುದರಿಂದ ಕೂದಲಿನ ಬುಡಕ್ಕಾಗುವ ಹಾನಿಯನ್ನು ಇದು ತಪ್ಪಿಸುತ್ತದೆ. ಆ ಮೂಲಕ ಕೂದಲು ದೃಢವಾಗಿ ಬೆಳೆಯುತ್ತದೆ.

Image Of Guava Leaves Benefits

ರಕ್ತ ಸಂಚಾರ ಚುರುಕು

ಸೀಬೆ ಎಲೆಯು ಕೂದಲ ಬುಡದಲ್ಲಿ ರಕ್ತಸಂಚಾರವನ್ನು ಚುರುಕುಗೊಳಿಸುವಲ್ಲಿ ನೆರವಾಗುತ್ತದೆ. ಇದರಿಂದ ಕೂದಲ ಆರೋಗ್ಯ ಹೆಚ್ಚುತ್ತದೆ. ಕೂದಲಿಗೆ ಪೋಷಣೆ ಸರಿಯಾಗಿ ಆಗುವ ಮೂಲಕ ಸಂಪೂರ್ಣವಾಗಿ ಕೂದಲ ಆರೋಗ್ಯ ದ್ವಿಗುಣಗೊಳ್ಳುತ್ತದೆ.

ಕೂದಲ ಹೊಟ್ಟು ನಿವಾರಣೆ

ನಿಮಗೆ ಕೂದಲ ಹೊಟ್ಟಿನ ಸಮಸ್ಯೆ ಇದ್ದರೆ ಸೀಬೆ ಎಲೆ ಅತ್ಯುತ್ತಮ ಮನೆಮದ್ದು. ಸೀಬೆ ಎಲೆಯು ಕೂದಲ ಹೊಟ್ಟನ್ನು ತರುವ ಬ್ಯಾಕ್ಟೀರಿಯಾದ ವಿರುದ್ಧ ಹೋರಾಡಿ ಕೂದಲ ಬುಡವನ್ನು ನಯವಾಗಿಸುತ್ತದೆ. ಕೂದಲ ಬುಡದ ಚರ್ಮ ಒಣಗಿ ಏಳುವುದನ್ನು ಇದು ತಡೆಯುತ್ತದೆ. ತುರಿಕೆ ಮತ್ತು ಕಜ್ಜಿಯ ಸಮಸ್ಯೆಗಳಿಗೂ ಇದು ಒಳ್ಳೆಯದು.

Hair Growth Tips

ಕೂದಲ ಬೆಳವಣಿಗೆ

ಸೀಬೆ ಎಲೆಯನ್ನು ಆಗಾಗ ಬಳಸುವ ಮೂಲಕ ಕೂದಲ ತುದಿ ಕವಲೊಡೆಯವ ಸಮಸ್ಯೆಯಿಂದಲೂ ಮುಕ್ತಿ ಪಡೆಯಬಹುದು. ಕೂದಲು ನಯವಾಗಿ ಉದ್ದ ಬೆಳೆಯುತ್ತದೆ.

ಮಿದುಳಿನ ಆರೋಗ್ಯಕ್ಕೆ ಸಹಕಾರಿ

ಸೀಬೆ ಎಲೆಯಲ್ಲಿ ವಿಟಮಿನ್‌ ಬಿ3 ಹಾಗೂ ಬಿ6 ಇರುವುದರಿಂದ ಮಿದುಳಿನ ಆರೋಗ್ಯಕ್ಕೂ ಇದು ಒಳ್ಳೆಯದು.

ಹೊಟ್ಟೆ ನೋವಿಗೆ ಪರಿಹಾರ

ಕೇವಲ ಇವಷ್ಟೇ ಅಲ್ಲ, ಸೀಬೆಯ ಎಲೆಗಳಿಂದ ಹೊಟ್ಟೆಯ ಸಮಸ್ಯೆಗಳಿಗೆ ಪರಿಹಾರ ಕಾಣಬಹುದು. ಹೊಟ್ಟೆಯಲ್ಲಿ ಹುಣ್ಣು, ಅಲ್ಸರ್‌, ಹೊಟ್ಟೆ ನೋವು ಮತ್ತಿತರ ಸಮಸ್ಯೆಗಳನ್ನು ನಿವಾರಿಸುವ ಶಕ್ತಿ ಸೀಬೆ ಎಲೆಗಿದೆ.

heart attack and Diabetes control

ಮಧುಮೇಹಕ್ಕೂ ಮದ್ದು

ಸೀಬೆ ಎಲೆ ಮಧುಮೇಹಕ್ಕೆ ಒಳ್ಳೆಯ ಮನೆಮದ್ದು. ಸೀಬೆ ಎಲೆಯ ಚಹಾ ಮಾಡಿ ಕುಡಿಯುವುದರಿಂದ ರಕ್ತದಲ್ಲಿರುವ ಸಕ್ಕರೆಯ ಪ್ರಮಾಣವನ್ನು ಸಮತೋಲನಕ್ಕೆ ತರಬಹುದು.

ಗಾಯಕ್ಕೆ ಔಷಧ

ಗಾಯ ಮಾಗಲು, ಗುಣವಾಗಲು, ನೋವು ನಿವಾರಕವಾಗಿ, ರೋಗ ನಿರೋಧಕವಾಗಿಯೂ ಸೀಬೆ ಎಲೆಯು ಸಹಾಯ ಮಾಡುತ್ತದೆ.

Anti-inflammatory properties Guava Leaves Benefits

ಬಾಯಿ ಹುಣ್ಣು ನಿವಾರಣೆ

ಬಾಯಿಯ ಆರೋಗ್ಯಕ್ಕೂ ಸೀಬೆ ಎಲೆ ಒಳ್ಳೆಯದು. ಬಾಯಿಹುಣ್ಣು, ಹಲ್ಲು ನೋವು, ವಸಡಿನ ಸಮಸ್ಯೆ ಮತ್ತಿತರ ಸಮಸ್ಯೆಗಳಿಗೆ ಸೀಬೆ ಎಲೆ ರಾಮಬಾಣವಾಗಿ ಕೆಲಸ ಮಾಡುತ್ತದೆ. ಒಂದೆಡರಡು ಸೀಬೆ ಎಲೆಯನ್ನು ಅಥವಾ ಸೀಬೆಯ ಎಳೆ ಎಲೆಯನ್ನು ಬಾಯಲ್ಲಿಟ್ಟು ಜಗಿಯುವ ಮೂಲಕ ಇದರ ಪ್ರಯೋಜನ ಪಡೆಯಬಹುದು.

ಭೇದಿಗೆ ತಡೆ

ಭೇದಿಯ ಸಮಸ್ಯೆಗೆ ಸೀಬೆ ಎಲೆ ಒಳ್ಳೆಯ ಮನೆಮದ್ದು. ಇದು ಬೇದಿಯನ್ನು ತರುವ ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ತಡೆಯುವ ಮೂಲಕ ಭೇದಿಯನ್ನು ತಡೆಯುತ್ತದೆ. ಖಾಲಿ ಹೊಟ್ಟೆಯಲ್ಲಿ ಸೀಬೆ ಎಲೆಯ ಟೀ ಮಾಡಿ ಕುಡಿಯುವ ಮೂಲಕ ಪರಿಹಾರ ಕಾಣಬಹುದು.

happy woman hand in heart

ಹೃದಯ ಆರೋಗ್ಯಕ್ಕೆ ಪೂರಕ

ಹೃದಯದ ಆರೋಗ್ಯಕ್ಕೂ ಸೀಬೆ ಎಲೆಯ ಉಪಯೋಗದಿಂದ ಫಲ ಕಾಣಬಹುದು. ಇದು ರೋಗ ನಿರೋಧಕ ಶಕ್ತಿ ಹೆಚ್ಚಿಸುವುದಲ್ಲದೆ, ಕೊಲೆಸ್ಟೆರಾಲ್‌ ಅನ್ನೂ ಕಡಿಮೆಗೊಳಿಸುವ ತಾಕತ್ತನ್ನು ಹೊಂದಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

Drinking Water Tips: ನೀರು ಕುಡಿಯುವುದೇ ನಿಮ್ಮ ಸಮಸ್ಯೆಯೇ? ಇಲ್ಲಿವೆ ಸರಳ ಉಪಾಯಗಳು!

Drinking water tips: ಕೆಲವರು ಸಹಜವಾಗಿಯೇ ಹೆಚ್ಚು ನೀರು ಕುಡಿದರೆ, ಇನ್ನೂ ಕೆಲವರು ಸ್ವಭಾವತಃ ನೀರು ಕುಡಿಯುವುದು ಹೆಚ್ಚು. ಆದರೆ, ಕಾಲ ಯಾವುದೇ ಆಗಿರಲಿ, ದೇಹಕ್ಕೆ ನಿತ್ಯ ನೀರು ಬೇಕೇ ಬೇಕು. ನೀರು ಹೆಚ್ಚು ಕುಡಿದರೆ, ಒಳ್ಳೆಯದು ಎಂಬ ಸತ್ಯ ತಿಳಿದಿದ್ದರೂ ಹೆಚ್ಚು ನೀರು ಕುಡಿಯುವ ಪರಿ ಹೇಗೆ, ಈ ಅಭ್ಯಾಸವನ್ನು ಬೆಳೆಸಿಕೊಳ್ಳುವುದು ಹೇಗೆ ಎಂದು ತಿಳಿಯುವುದಿಲ್ಲ. ಈ ಕುರಿತ ಉಪಯುಕ್ತ ಮಾಹಿತಿ ಇಲ್ಲಿದೆ.

VISTARANEWS.COM


on

Positive woman drinking water
Koo

ನೀರು ಕುಡಿಯುವುದು (Drinking water tips) ಅತ್ಯಂತ ಮುಖ್ಯ ಎಂಬುದು ಎಲ್ಲರಿಗೂ ತಿಳಿದಿದೆ. ಆದರೆ, ಕೆಲವೊಮ್ಮೆ ನೀರು ಕುಡಿಯುವುದೂ ಕೂಡ ಕಷ್ಟದ ಕೆಲಸವೇ. ಕೆಲವರು ಸಹಜವಾಗಿಯೇ ಹೆಚ್ಚು ನೀರು ಕುಡಿದರೆ, ಇನ್ನೂ ಕೆಲವರು ಸ್ವಭಾವತಃ ನೀರು ಕುಡಿಯುವುದು ಹೆಚ್ಚು. ಆದರೆ, ಕಾಲ ಯಾವುದೇ ಆಗಿರಲಿ, ದೇಹಕ್ಕೆ ನಿತ್ಯ ನೀರು ಬೇಕೇ ಬೇಕು. ನೀರು ಹೆಚ್ಚು ಕುಡಿದರೆ, ಒಳ್ಳೆಯದು ಎಂಬ ಸತ್ಯ ತಿಳಿದಿದ್ದರೂ ಹೆಚ್ಚು ನೀರು ಕುಡಿಯುವ ಪರಿ ಹೇಗೆ, ಈ ಅಭ್ಯಾಸವನ್ನು ಬೆಳೆಸಿಕೊಳ್ಳುವುದು ಹೇಗೆ ಎಂದು ತಿಳಿಯುವುದಿಲ್ಲ. ನೀರು ಕುಡಿಯಲು ಕಷ್ಟವಾಗುವ, ತನ್ನ ದೇಹಕ್ಕೆ ಬೇಕಾದಷ್ಟು ನೀರು ಸೇವಿಸದೆ ಇರುವ, ಆದರೆ, ಹೆಚ್ಚು ನೀರು ಕುಡಿಯಲು ಮನಸ್ಸಿರುವ ಆ ಬಗ್ಗೆ ಪ್ರಾಮಾಣಿಕ ಪ್ರಯತ್ನ ಮಾಡುವ ಮಂದಿ ಹೆಚ್ಚು ನೀರು ಕುಡಿಯಲು ಹೀಗೆ ಮಾಡಬಹುದು.

drinking water
  • ನೀವು ಎಲ್ಲಿಗೇ ಹೊರಗೆ ಹೋಗುವುದಿದ್ದರೂ ಕೈಯಲ್ಲೊಂದು ನೀರಿನ ಬಾಟಲಿ ಇಟ್ಟುಕೊಳ್ಳಿ. ಬಿಸಿಲಿರಲಿ, ಮಳೆಯಿರಲಿ, ಚಳಿಯಿರಲಿ ನೀರಿನ ಬಾಟಲಿ ನಿಮ್ಮ ಜೊತೆಗಿರಲಿ. ಆ ಮೂಲಕ ಆಗಾಗ ನೀವು ಸ್ವಲ್ಪ ಸ್ವಲ್ಪ ನೀರು ಕುಡಿಯುತ್ತಿರಬಹುದು. ಹೊರಗೆ ಹೋದಾಗ, ನೀರಿನ ಮೂಲವನ್ನು ಹುಡುಕಿಕೊಂಡು ಹೋಗುವುದು ಸಾಧ್ಯವಾಗದು. ಅಥವಾ ನೀರು ಕುಡಿಯಬೇಕೆನ್ನುವ ಯೋಚನೆಯೂ ಬಾರದು. ಇಂತಹ ಸಂದರ್ಭ ನಿಮ್ಮ ಬಳಿ ಬಾಟಲಿಯಲ್ಲಿ ನೀರಿದ್ದರೆ, ಆಗಾಗ ಕುಡಿಯುವ ಮೂಲಕ ಒಂದಿಷ್ಟು ನೀರು ನಿಮ್ಮ ದೇಹದ ಅಗತ್ಯಕ್ಕೆ ತಕ್ಕಂತೆ ನಿಮ್ಮ ಹೊಟ್ಟೆ ಸೇರುತ್ತದೆ. ಅಥವಾ ನಿಮಗೆ ನಿಜವಾಗಿ ಬಾಯಾರಿಕೆಯಾದಾಗಲೂ ನಿಮ್ಮ ಸಹಾಯಕ್ಕೆ ಬರುತ್ತದೆ.
  • ಈಗ ನೀರು ಕುಡಿಯಲು ರಿಮೈಂಡರ್‌ಗಳನ್ನೂ ಹಾಕಬಹುದು. ಅನೇಕ ಆಪ್‌ಗಳೂ ನಿಮ್ಮ ಸಹಾಯಕ್ಕಿವೆ. ಅವು ಆಗಾಗ ಎಷ್ಟು ನೀರು ಕುಡಿಯಬೇಕೆಂದು ನಿಮ್ಮನ್ನು ನೆನಪಿಸುತ್ತಿರುತ್ತವೆ. ಹಾಗಾಗಿ, ನಿಮಗೆ ನೆನಪಾಗದಿದ್ದರೂ, ಕೆಲಸದಲ್ಲಿ ಬ್ಯುಸಿ ಆದರೂ, ಈ ಅಲರಾಂಗಳು ನಿಮ್ಮನ್ನು ನೀರು ಕುಡಿಯಲು ನಿಮ್ಮ ಅಮ್ಮನಂತೆ ನಿಮಗೆ ನೆನಪು ಮಾಡುವ ಕೆಲಸವನ್ನು ಮಾಡುತ್ತದೆ.
  • ಸೋಡಾ, ಕಾರ್ಬೋನೇಟೆಡ್‌ ಡ್ರಿಂಕ್‌ಗಳ ಬದಲಾಗಿ ನೀರನ್ನೇ ಕುಡಿಯಿರಿ. ಬಾಯಾರಿದಾಗ ನೀರಿಗಿಂತ ಒಳ್ಲೆಯ ದ್ರವಾಹಾರ ಇನ್ನೊಂದಿಲ್ಲ. ಹಾಗಾಗಿ ನೀರನ್ನೇ ಸೇವಿಸಿ.
  • ನೀರು ಕುಡಿಯಲು ಸಾಧ್ಯವಾಗದಿದ್ದರೆ, ನೀರು ಹೆಚ್ಚಿರುವ ಹಣ್ಣು ಹಂಪಲುಗಳನ್ನು ಸೇವಿಸಿ. ಕಲ್ಲಂಗಡಿ ಹಣ್ಣು, ಅನಾನಾಸು, ಖರ್‌ಬೂಜ, ಸೌತೆಕಾಯಿ ಇತ್ಯಾದಿಗಳನ್ನು ಸೇವಿಸಿ. ಇವುಗಳಲ್ಲಿ ನೀರಿನ ಪ್ರಮಾಣ ಹೆಚ್ಚಿದ್ದು, ನಿಮ್ಮ ದೇಹಕ್ಕೆ ಒಳ್ಳೆಯದನ್ನೇ ಮಾಡುತ್ತದೆ. ಇವುಗಳಲ್ಲಿ ಕ್ಯಾಲರಿಯೂ ಕಡಿಮೆ ಇರುವುದರಿಂದ ಹೊಟ್ಟೆ ಫುಲ್‌ ಆದ ಅನುಭವವನ್ನೂ ನೀಡುತ್ತವೆ.
  • ಖಾಲಿ ನೀರನ್ನೇ ಕುಡಿಯುವುದು ನಿಮ್ಮ ಸಮಸ್ಯೆ ಆದಲ್ಲಿ, ನೀರಿಗೆ ಫ್ಲೇವರ್‌ ಬರಿಸಿ. ಅರ್ಥಾತ್ ಇನ್‌ಫ್ಯೂಸ್ಡ್‌ ನೀರನ್ನು ತಯಾರು ಮಾಡಿ. ನೀರಿಗೆ, ಕೊಂಚ ಪುದಿನ ಎಲೆಗಳನ್ನು ಹಾಕಿಡಿ. ಅಥವಾ ಸೌತೆಕಾಯಿ, ಲಿಂಬೆರಸ, ಕಿತ್ತಳೆ ಹೀಗೆ ಬಗೆಬಗೆಯ ನೈಸರ್ಗಿಕ ರಿಫ್ರೆಶಿಂಗ್‌ ಅನುಭವ ನೀಡುವ ಐಡಿಯಾಗಳನ್ನು ಮಬಹುದು. ಪುದಿನ ಎಲೆ ಹಾಕಿದ ನೀರು ತಾಜಾ ಅನುಭವವನ್ನು ನೀಡುವ ಜೊತೆಗೆ ದೇಹವನ್ನು ತಂಪಾಗಿಡುತ್ತದೆ. ಮನಸ್ಸಿಗೂ ಮುದ ನೀಡುತ್ತದೆ. ಹೀಗೆ ಮಾಡುವುದು ಆರೋಗ್ಯದ ದೃಷ್ಟಿಯಿಂದ ದೇಹಕ್ಕೂ ಒಳ್ಳೆಯದು.
Continue Reading

ಪ್ರಮುಖ ಸುದ್ದಿ

Dengue Fever: ಇನ್ನೂ ಏರಲಿದೆ ಡೆಂಗ್ಯು ಕೇಸ್‌ ಎಂದ ಆರೋಗ್ಯ ಸಚಿವರು; ಇದುವರೆಗೆ 6 ಸಾವು

Dengue Fever: ಕಳೆದ ವರ್ಷಕ್ಕೆ ಹೋಲಿಸಿದ್ರೆ ಈ ಬಾರಿ ಪ್ರಕರಣಗಳು ಡಬಲ್ ಆಗಿವೆ. ಜನವರಿಯಿಂದ ಜುಲೈ 1ರ ತನಕ ಒಟ್ಟು 6187 ಕೇಸ್ ಪಾಸಿಟಿವ್ ಇದೆ. ಕಳೆದ ವರ್ಷ 2903 ಇತ್ತು. ಇಷ್ಟೇ ಅಲ್ಲ ರಾಜ್ಯದಲ್ಲಿ ಮತ್ತಷ್ಟು ಡೆಂಗ್ಯು ಕೇಸ್ ಇರಬಹುದು. 47% ಟೆಸ್ಟಿಂಗ್ ರೇಟ್ ಹೆಚ್ಚಳ ಮಾಡಲಾಗಿದೆ.

VISTARANEWS.COM


on

dengue fever Dinesh Gundu Rao
Koo

ಬೆಂಗಳೂರು: ಇದುವರೆಗೆ ರಾಜ್ಯದಲ್ಲಿ ಡೆಂಗ್ಯು ಜ್ವರದಿಂದಾಗಿ (Dengue Fever) 6 ಜನ ಸತ್ತಿದ್ದಾರೆ. ಸೆಪ್ಟೆಂಬರ್‌ನಲ್ಲಿ ಡೆಂಗ್ಯು ಜ್ವರ ಪ್ರಕರಣಗಳು (Dengue Positive) ಇನ್ನೂ ಏರಬಹುದು ಎಂದು ಆರೋಗ್ಯ ಸಚಿವ (Health Minister) ದಿನೇಶ್‌ ಗುಂಡೂರಾವ್‌ (dinesh Gundu Rao) ಎಚ್ಚರಿಸಿದ್ದಾರೆ.

ಡೆಂಗ್ಯು ಹರಡುವಿಕೆ ನಿಯಂತ್ರಣದ ಬಗ್ಗೆ ವಿವಿಧ ಇಲಾಖೆಗಳ ಜೊತೆ ಸಭೆ ಮಾಡಿದ ಬಳಿಕ ಅವರು ಸುದ್ದಿಗೋಷ್ಠಿ ನಡೆಸಿದರು. ಡೆಂಗ್ಯು ಕಳೆದ ವರ್ಷಕ್ಕಿಂತ ಈ ಬಾರಿ ದುಪ್ಪಟ್ಟಾಗಿದೆ. ಇಲ್ಲಿಯವರೆಗೂ ರಾಜ್ಯದಲ್ಲಿ 6187 ಪ್ರಕರಣ ದಾಖಲಾಗಿದೆ. 6 ಜನ ಸತ್ತಿದ್ದಾರೆ. ಇದರಲ್ಲಿ ಕೋಮಾರ್ಬಿಡಿಟೀಸ್‌ (ಬಿಪಿ, ಮಧುಮೇಹ, ಹೃದಯ ಕಾಯಿಲೆ) ಇದ್ದ ಮೂವರೂ ಸೇರಿದ್ದಾರೆ ಎಂದು ಸಚಿವರು ತಿಳಿಸಿದರು.

ಕಳೆದ ವರ್ಷಕ್ಕೆ ಹೋಲಿಸಿದ್ರೆ ಈ ಬಾರಿ ಪ್ರಕರಣಗಳು ಡಬಲ್ ಆಗಿವೆ. ಜನವರಿಯಿಂದ ಜುಲೈ 1ರ ತನಕ ಒಟ್ಟು 6187 ಕೇಸ್ ಪಾಸಿಟಿವ್ ಇದೆ. ಕಳೆದ ವರ್ಷ 2903 ಇತ್ತು. ಇಷ್ಟೇ ಅಲ್ಲ ರಾಜ್ಯದಲ್ಲಿ ಮತ್ತಷ್ಟು ಡೆಂಗ್ಯು ಕೇಸ್ ಇರಬಹುದು. 47% ಟೆಸ್ಟಿಂಗ್ ರೇಟ್ ಹೆಚ್ಚಳ ಮಾಡಲಾಗಿದೆ. ಸದಾ ಮಳೆ ಬರುತ್ತಿದ್ದರೆ ಡೆಂಗ್ಯು ಸೊಳ್ಳೆ ಬರುವುದಿಲ್ಲ. ಮಳೆ ಬಿಟ್ಟು ಬಿಟ್ಟು ಬರುವ ಹಿನ್ನೆಲೆಯಲ್ಲಿ ಡೆಂಗ್ಯುವಿಗೆ ಅನುಕೂಲ ವಾತಾವರಣ ಇದೆ. ನಿಂತು ಬೀಳುವ ಮಳೆಯಿಂದಾಗಿ ಸೊಳ್ಳೆ ಹರಡುವಿಕೆ ಹೆಚ್ಚಾಗುತ್ತದೆ. ಇದು ಅನುಕೂಲ ಮಾಡಿಕೊಡುತ್ತದೆ. ಹವಾಮಾನ ಬದಲಾವಣೆಯಿಂದ ರೋಗ ಉಲ್ಬಣಗೊಳ್ಳುತ್ತಿದೆ ಎಂದು ಸಚಿವರು ತಿಳಿಸಿದರು.

ರಾಜ್ಯದಲ್ಲಿ ಒಟ್ಟು 6187 ಪ್ರಕರಣಗಳು ಇವೆ. 3463 ಪ್ರಕರಣ ನಗರ ಪ್ರದೇಶಗಳಲ್ಲಿ ಕಂಡು ಬಂದಿವೆ. 56% ನಗರ ಪ್ರದೇಶದಲ್ಲಿ, 44% ಗ್ರಾಮೀಣ ಪ್ರದೇಶದಲ್ಲಿ ಪೊಸಿಟಿವ್‌ ಬಂದಿವೆ. ಒಂದು ವರ್ಷದ ಒಳಗಿನ 123 ಮಕ್ಕಳಿಗೆ, 1-18 ವರ್ಷದ 2301 ಮಂದಿಗೆ, 19- 60 ವರ್ಷದ 3313 ಮಂದಿಗೆ, 61 ವರ್ಷ ಮೇಲಿನ 450 ಮಂದಿಗೆ ಪಾಸಿಟಿವ್‌ ಬಂದಿದೆ ಎಂದು ಮಾಹಿತಿ ನೀಡಿದರು.

ಡೆಂಗ್ಯು ಜ್ವರ ಇನ್ನಷ್ಟು ಹೆಚ್ಚಾಗಬಹುದು. ಸೆಪ್ಟಂಬರ್‌ನಲ್ಲಿ ಮತ್ತೆ ಹೆಚ್ಚಾಗುವ ಸಾಧ್ಯತೆ ಇದೆ. ಮುಖ್ಯಮಂತ್ರಿಗಳು ಮುಂಜಾಗ್ರತಾ ಕ್ರಮಕ್ಕೆ ಸೂಚಿಸಿದ್ದಾರೆ. ಟೆಸ್ಟಿಂಗ್ ಕಿಟ್ ಹೆಚ್ಚುವರಿ ಇರಿಸಲಾಗಿದೆ. ಪ್ಲೇಟ್‌ಲೆಟ್ಸ್‌ ಕೊಡುವುದಕ್ಕೆ ತಿಳಿಸಿದ್ದೇವೆ. ಡೆಂಗ್ಯುವಿಗೆ ನಿರ್ದಿಷ್ಟ ಚಿಕಿತ್ಸೆ ಇಲ್ಲ. ಪ್ಲೇಟ್ ಲೆಟ್ಸ್ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದೇವೆ. ಬ್ಲಡ್ ಯೂನಿಟ್‌ಗಳ ಜತೆ ಮಾತುಕತೆ ಮಾಡಲಾಗಿದೆ. ಐವಿ ಫ್ಲೂವಿಡ್‌ಗಳನ್ನು ಕೊಡಲಾಗುತ್ತದೆ. ಇದು ನಮ್ಮ ಬಳಿ ಸಾಕಷ್ಟು ಇದೆ. ಆರಂಭದಲ್ಲಿ ಪ್ಯಾರಸಿಟಮಲ್ ಕೊಟ್ಟರೆ ಸಾಕಾಗುತ್ತದೆ ಎಂದು ತಿಳಿಸಿದರು.

ಖಾಸಗಿ ಆಸ್ಪತ್ರೆಗಳಿಗೆ ಎಚ್ಚರಿಕೆ

ಖಾಸಗಿ ಆಸ್ಪತ್ರೆಗಳು ಡೆಂಗ್ಯು ಕೇಸ್ ರಿಪೋರ್ಟ್ ಮಾಡುತ್ತಿಲ್ಲ. ಕೆಪಿಎಂ ಆಕ್ಟ್ ಪ್ರಕಾರ ಖಾಸಗಿ ಆಸ್ಪತ್ರೆಗಳು ಡೆಂಗ್ಯು ಕೇಸ್ ರಿಪೋರ್ಟ್ ಮಾಡುವುದು ಕಡ್ಡಾಯ. IHIPಯಲ್ಲಿ ಅನೇಕ ಖಾಸಗಿ ಆಸ್ಪತ್ರೆಗಳು ಅಪ್ಲೋಡ್ ಮಾಡುತ್ತಿಲ್ಲ. ಇನ್ನು ಮುಂದೆ ಖಾಸಗಿ ಆಸ್ಪತ್ರೆಗಳು ಕಡ್ಡಾಯವಾಗಿ ಅಪ್ಲೋಡ್ ಮಾಡಬೇಕು. ಖಾಸಗಿ ಆಸ್ಪತ್ರೆಯಲ್ಲಿ ಡೆಂಗ್ಯು ತಪಾಸಣೆಗೆ ದರ ನಿಗದಿ ಮಾಡುವ ಬಗ್ಗೆ ಚರ್ಚೆ ಮಾಡಿಲ್ಲ. ಆ ಬಗ್ಗೆ ಮುಂದೆ ಚರ್ಚೆ ಮಾಡುತ್ತೇವೆ ಎಂದು ಅವರು ತಿಳಿಸಿದರು.

ನಮ್ಮ ವೆಬ್‌ಸೈಟಿನಲ್ಲಿ ಡೆಂಗ್ಯು ಬುಲೆಟಿನ್ ಬಿಡುಗಡೆ ಮಾಡುತ್ತೇವೆ. ಪ್ರತಿ ದಿನ ಎಷ್ಟು ಕೇಸ್ ಬಂದಿದೆ ಎನ್ನುವ ಮಾಹಿತಿ ಹಾಕುತ್ತೇವೆ. ದಿನ ನಿತ್ಯ ಡೆಂಗ್ಯು ಬುಲೆಟಿನ್ ಕೊಡಲಾಗುತ್ತದೆ. ಬೆಂಗಳೂರು ನಗರದಲ್ಲಿ ಬಿಬಿಎಂಪಿ ಎಲ್ಲಾ ಮನೆಗಳ ಸರ್ವೆ ಮಾಡುತ್ತಿದೆ. ಸೂಕ್ಷ್ಮ ಪ್ರದೇಶಗಳು ಮಾತ್ರವಲ್ಲ ಎಲ್ಲಾ ಮನೆಗಳ ಸರ್ವೆ ನಡೆಸಲು ನಾನು ಬಿಬಿಎಂಪಿಗೆ ಸೂಚನೆ ನೀಡಿದ್ದೇನೆ. ಮನೆ ಮನೆಗೆ ಭೇಟಿ ಕೊಡಲು ಸೂಚಿಸಿದ್ದೇನೆ. ರಾಜ್ಯಾದ್ಯಂತ ಡೆಂಗ್ಯು ಬಗ್ಗೆ ಕಟ್ಟೆಚ್ಚರ ವಹಿಸಲು ಸೂಚನೆ ಕೊಡಲಾಗಿದೆ. ಪ್ರತಿ ಶುಕ್ರವಾರ ಡೆಂಗ್ಯು ವಿಚಾರದಲ್ಲಿ ಫೀಲ್ಡ್‌ನಲ್ಲಿ ಇದ್ದು, ಮಾನಿಟರ್ ಮಾಡಲು ಸೂಚಿಸಿದ್ದೇನೆ. ಪ್ರತಿ ಶುಕ್ರವಾರ ಮನೆ ಮನೆ ಸಮೀಕ್ಷೆ ನಡೆಸಲಾಗುತ್ತದೆ ಎಂದು ಮಾಹಿತಿ ನೀಡಿದರು.

ಎಲ್ಲೆಲ್ಲಿ ಪಾಸಿಟಿವ್ ಕೇಸ್ ಬರುತ್ತದೆಯೋ ಅಲ್ಲಿ ತೀವ್ರ ಕ್ರಮಕ್ಕೆ ಸೂಚನೆ ನೀಡಲಾಗಿದೆ. ಲಾರ್ವ ನಾಶ, ಫಾಗಿಂಗ್ ಸೇರಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸೂಚಿಸಲಾಗಿದೆ. RWA, ಕ್ರೆಡೈ ಸೇರಿ ಕಟ್ಟಡ ಮಾಲೀಕರು ಸೇರಿ ಅವರನ್ನು ಒಳಗೊಂಡು ಸಭೆ ನಡೆಸಲು ತೀರ್ಮಾನಿಸಿದ್ದೇವೆ. ಮೆಡಿಕಲ್ ಆಫೀಸರ್, MOH, ಸೈನ್ಸ್ ಟೀಚರ್ಸ್‌ಗೆ ಡೆಂಗ್ಯು ವಿಚಾರದಲ್ಲಿ ವಿಶೇಷ ತರಬೇತಿ ನೀಡಲಾಗಿದೆ. ಮಕ್ಕಳಿಗೆ ಡೆಂಗ್ಯು ಕುರಿತು ತಿಳಿವಳಿಕೆ ನೀಡಲಾಗಿದೆ. ಡಿಪೋಗಳಲ್ಲಿ ಟಯರ್‌ಗಳಲ್ಲಿ ಸೊಳ್ಳೆ ಉತ್ಪತ್ತಿ ಆಗುತ್ತಿರುವುದು ಕಂಡು ಬಂದಿದೆ. ಡಿಪೋಗಳಿಂದ ಸ್ಯಾಂಪಲ್ ಕಲೆಕ್ಟ್ ಮಾಡಲಾಗಿದೆ. ಹೆಚ್ಚು ಸಕ್ರಿಯ ಪ್ರಕರಣಗಳು ಕಂಡು ಬರ್ತಿದೆ. ಹೀಗಾಗಿ ಎಚ್ಚರಿಕೆ ವಹಿಸಲು ಸಾರಿಗೆ ಇಲಾಖೆಗೆ ಸೂಚಿಸಿದ್ದೇವೆ. ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತೆಯರು ಜನರಿಗೆ ಅರಿವು ಮೂಡಿಸುವಂತೆ ತಿಳಿಸಲಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ: Dengue fever: ಮಾರಕ ಡೆಂಗ್ಯು ಜ್ವರಕ್ಕೆ ಬಾಲಕಿ ಬಲಿ

Continue Reading

ಆರೋಗ್ಯ

Sour Curd: ಹುಳಿ ಬಂದ ಮೊಸರಿನ ಸೇವನೆ ಆರೋಗ್ಯಕ್ಕೆ ಒಳ್ಳೆಯದೋ ಕೆಟ್ಟದ್ದೋ?

sour curd: ನಿತ್ಯವೂ ಊಟದ ಕೊನೆಯಲ್ಲಿ ಮೊಸರನ್ನ ತಿನ್ನುವುದು ಬಹುತೇಕರಿಗೆ ಅಭ್ಯಾಸ. ಅಷ್ಟೇ ಅಲ್ಲ, ಅನೇಕ ಬಗೆಯಲ್ಲಿ ಮೊಸರಿನ ಬಳಗೆ ನಮ್ಮ ಮನೆಗಳಲ್ಲಿ ನಿತ್ಯವೂ ಇದೆ. ಬೇಸಿಗೆಯಲ್ಲಿ ಮಜ್ಜಿಗೆ ಮಾಡಿ ಕುಡಿಯಲು, ತಂಪಾದ ಲಸ್ಸಿ ಹೊಟ್ಟೆಗಿಳಿಸಲು ಮೊಸರು ಬೇಕೇ ಬೇಕು. ಇಂತಹ ಮೊಸರಿನಲ್ಲಿರುವ ಪ್ರೊಬಯಾಟಿಕ್‌ ಗುಣಗಳಿರುವುದರಿಂದ, ಈ ಒಳ್ಳೆಯ ಬ್ಯಾಕ್ಟೀರಿಯಾಗಳು ಹೊಟ್ಟೆಯನ್ನು, ಪಚನಕ್ರಿಯೆಯನ್ನು ಆರೋಗ್ಯವಾಗಿಡುತ್ತದೆ. ಆದರೆ, ಮೊಸರು ಬಹುಬೇಗನೆ ಹುಳಿ ಬರುತ್ತದೆ. ಹೀಗೆ ಹೆಚ್ಚು ಹುಳಿ ಬಂದ ಮೊಸರನ್ನು ಸೇವಿಸಬಹುದೇ ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ.

VISTARANEWS.COM


on

Sour Curd
Koo

ಮೊಸರು ಭಾರತೀಯರ ಅಡುಗೆ ಮನೆಯ ಆರಾಧ್ಯ ದೈವ. ಅದರಲ್ಲೂ ದಕ್ಷಿಣ ಭಾರತೀಯರಿಗೆ ಮೊಸರಿಲ್ಲದೆ ಜೀವನ ಬಲು ದುಸ್ತರ. ನಿತ್ಯವೂ ಊಟದ ಕೊನೆಯಲ್ಲಿ ಮೊಸರನ್ನ ತಿನ್ನುವುದು ಬಹುತೇಕರಿಗೆ ಅಭ್ಯಾಸ. ಅಷ್ಟೇ ಅಲ್ಲ, ಅನೇಕ ಬಗೆಯಲ್ಲಿ ಮೊಸರಿನ ಬಳಗೆ ನಮ್ಮ ಮನೆಗಳಲ್ಲಿ ನಿತ್ಯವೂ ಇದೆ. ಬೇಸಿಗೆಯಲ್ಲಿ ಮಜ್ಜಿಗೆ ಮಾಡಿ ಕುಡಿಯಲು, ತಂಪಾದ ಲಸ್ಸಿ ಹೊಟ್ಟೆಗಿಳಿಸಲು ಮೊಸರು ಬೇಕೇ ಬೇಕು. ಇಂತಹ ಮೊಸರಿನಲ್ಲಿರುವ ಪ್ರೊಬಯಾಟಿಕ್‌ ಗುಣಗಳಿರುವುದರಿಂದ, ಈ ಒಳ್ಳೆಯ ಬ್ಯಾಕ್ಟೀರಿಯಾಗಳು ಹೊಟ್ಟೆಯನ್ನು, ಪಚನಕ್ರಿಯೆಯನ್ನು ಆರೋಗ್ಯವಾಗಿಡುತ್ತದೆ. ಆದರೆ, ಮೊಸರು ಬೇಸಿಗೆಯಲ್ಲಿ ಬಹುಬೇಗನೆ ಹುಳಿ ಬರುತ್ತದೆ. ಹೆಚ್ಚು ಕಾಲ ಹೊರಗೇ ಇಟ್ಟರೆ, ಹುಳಿಯಾಗುತ್ತದೆ. ಕೆಲವೊಮ್ಮೆ ಇದು ಅತಿ ಹುಳಿಯಾಗಿ ತನ್ನ ವಾಸನೆಯನ್ನೂ, ರುಚಿಯನ್ನೂ ಬದಲಾಯಿಸಿಬಿಡುತ್ತದೆ. ಹೀಗೆ ಹುಳಿಯಾದ ಮೊಸರೂ ಕೂಡಾ ಆರೋಗ್ಯಕ್ಕೆ ಒಳ್ಳೆಯದನ್ನೇ ಮಾಡುತ್ತದೋ ಎಂಬ ಗೊಂದಲ ಕೆಲವರಲ್ಲಿ ಇರಬಹುದು. ಬನ್ನಿ, ಈ ಬಗ್ಗೆ (sour curd) ತಿಳಿಯೋಣ.

homemade curd in a clay pot Stomach Bloating Relief

ಆರೋಗ್ಯಕ್ಕೆ ಹಾನಿಯೇ?

ಹುಳಿ ಮೊಸರಿನ ಸೇವನೆಯಿಂದ ಆರೋಗ್ಯಕ್ಕೆ ಯಾವುದೇ ಹಾನಿಯಿಲ್ಲ. ಇದು ತೀರಾ ರುಚಿ ಕೆಡದೇ ಇದ್ದರೆ ಹಾಗೂ ಹಾಳಾಗದಿದ್ದರೆ, ಇದನ್ನು ಸೇವಿಸಬಹುದು. ಇದರಲ್ಲಿರುವ ಅಸಿಡಿಟಿ ಮಟ್ಟ ಹೆಚ್ಚಾದಷ್ಟು ಇದರಲ್ಲಿರುವ ಪ್ರೊಬಯಾಟಿಕ್‌ ಗುಣ ಹೆಚ್ಚುತ್ತದೆ ಎನ್ನುತ್ತಾರೆ ಆರೋಗ್ಯ ತಜ್ಞರು. ಆದರೂ, ಇಂಥ ಮೊಸರನ್ನು ಸೇವಿಸುವ ಮುನ್ನ ಕೆಲವು ವಿಚಾರಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಬನ್ನಿ ಅವು ಯಾವುವು ನೋಡೋಣ.

curd in bowl
  • ಹುಳಿ ಬಂದ ಮೊಸರನ್ನು ಫ್ರಿಡ್ಜ್‌ನಲ್ಲಿಟ್ಟಿರಬೇಕು ಹಾಗೂ ಅದನ್ನು ಗಾಳಿಯಾಡದ ಡಬ್ಬದಲ್ಲಿ ಹಾಕಿ ಇಟ್ಟಿರಬೇಕು. ಇಲ್ಲವಾದರೆ, ಇದರಲ್ಲಿ ಕೆಟ್ಟ ಬ್ಯಾಕ್ಟೀರಿಯಾಗಳೂ ಬೆಳೆಯುವ ಸಂಭವ ಹೆಚ್ಚು.
  • ಮೊಸರಿನ ರೂಪ ಹಾಗೂ ಅದರ ಪರಿಮಳದಲ್ಲಿ ವ್ಯತ್ಯಾಸವಾಗಿದ್ದರೆ, ವಾಸನೆ ಬೀರುತ್ತಿದ್ದರೆ ಸೇವನೆ ಒಳ್ಳೆಯದಲ್ಲ. ಅಥವಾ ಹಳದಿ ಬಣ್ಣಕ್ಕೆ ತಿರುಗಿದ್ದರೂ ಕೂಡಾ ಇದನ್ನು ಸೇವಿಸಬಾರದು.
  • ಲ್ಯಾಕ್ಟೋಸ್‌ಗೆ ಬ್ಯಾಕ್ಟೀರಿಯಾ ಸೇರಿ ಹುದುಗು ಬಂದು ಲ್ಯಾಕ್ಟಿಕ್‌ ಆಸಿಡ್‌ ಆದಾಗ ಮೊಸರು ಹುಳಿ ಬರುತ್ತದೆ. ಇದು ನೈಸರ್ಗಿಕವಾದ, ಸಹಜವಾದ ಪ್ರಕ್ರಿಯೆ. ಇದಕ್ಕೆ ಕಾಲಾವಕಾಶ ಬೇಕು. ಎಷ್ಟು ಹೊತ್ತು ಹುಳಿಬರುವಿಕೆಯಲ್ಲಿ ತೆಗೆದುಕೊಂಡಿದೆ ಎಂಬುದರ ಮೇಲೆ ಮೊಸರಿನ ಹುಳಿ ನಿರ್ಧರಿತವಾಗುತ್ತದೆ.
  • ಹುಳಿ ಬರಲು ಆರಂಭವಾದ ಮೊಸರನ್ನು ಫ್ರಿಡ್ಜ್‌ನಲ್ಲಿಡುವ ಮೂಲಕ ಹುಳಿ ಬರುವಿಕೆಯ ಹಂತವನ್ನು ನಿಧಾನವಾಗಿಸಬಹುದು. ಹೆಚ್ಚು ಹೊತ್ತು ಹೊರಗೇ ಇಟ್ಟರೆ ಮತ್ತೆ ಹೆಚ್ಚು ಹುಳಿ ಬಂದು ಸೇವಿಸಲು ಅಯೋಗ್ಯವಾಗುತ್ತದೆ.
  • ಮೊಸರನ್ನು ತೆಗೆಯಲು ಬಳಸುವ ಸೌಟು ಯಾವಾಗಲೂ ಶುದ್ಧವಾಗಿರಲಿ. ಮೊಸರು ಬಹುಬೇಗನೆ ಬೇರೆ ವಸ್ತುಗಳ ಮೂಲಕ ಕಲುಷಿತಗೊಂಡು ಹಾಳಾಗುವ ಸಂಭವವಿದೆ.
  • ಹುಳಿ ಮೊಸರನ್ನು ತಿಂದು ಅಭ್ಯಾಸವಿಲ್ಲದಿದ್ದರೆ ಒಮ್ಮೆಲೆ ಹೆಚ್ಚು ಸೇವಿಸಬೇಡಿ. ಸ್ವಲ್ಪ ಸ್ವಲ್ಪವೇ ನಿಮ್ಮ ಆಹಾರದಲ್ಲಿ ಸೇರಿಸಿ.
  • ಹುಳಿ ಮೊಸರನ್ನು ಹಾಗೆಯೇ ತಿನ್ನಲು ಸಾಧ್ಯವಾಗದಿದ್ದರೆ, ಬೇರೆ ಆಹಾರಗಳ ಜೊತೆಗೆ ಸೇವಿಸಿ. ಆಗ ಅದರ ಪರಿಣಾಮ ಕಡಿಮೆಯಾಗುತ್ತದೆ.
  • ಎಲ್ಲಕ್ಕಿಂತ ಮುಖ್ಯವಾಗಿ ಹುಳಿ ಮೊಸರನ್ನು ಹಗಲಿನಲ್ಲಿ ಸೇವಿಸಿ. ರಾತ್ರಿಯ ಸಮಯ ಆದಷ್ಟೂ ಸೇವಿಸದೆ ಇರುವುದು ಒಳ್ಳೆಯದು. ನೀವು ಹೆಚ್ಚು ಆಕ್ಟಿವ್‌ ಆಗಿದ್ದಾಗ ಹಗಲು ಹೊತ್ತಿನಲ್ಲಿ ಅಥವಾ ಮಧ್ಯಾಹ್ನದೂಟದ ಜೊತೆಗೆ ಸೇವಿಸಬಹುದು.
  • ನಿಮ್ಮ ದೇಹಕ್ಕೆ ಹುಳಿ ಮೊಸರಿನಿಂದ ಏನಾದರೂ ತೊಂದರೆಯಾಗುತ್ತದೆಯೋ ಗಮನಿಸಿ. ಏನಾದರೂ ಸಮಸ್ಯೆಯಾದರೆ, ದಯವಿಟ್ಟು ಸೇವಿಸಬೇಡಿ. ನಿಮ್ಮ ದೇಹಕ್ಕೆ ಹೊಂದುತ್ತಿಲ್ಲ ಎಂದೇ ಅರ್ಥ.

ಇದನ್ನೂ ಓದಿ: Internet Addiction: ಈ 10 ಲಕ್ಷಣಗಳು ನಿಮ್ಮಲ್ಲಿದ್ದರೆ, ನೀವೂ ಇಂಟರ್ನೆಟ್‌ ಚಟಕ್ಕೆ ಬಿದ್ದಿದ್ದೀರಿ ಎಂದರ್ಥ!

Continue Reading

ಆರೋಗ್ಯ

Pancreatitis: ಏನಿದು ಪ್ಯಾಂಕ್ರಿಯಾಟೈಟಿಸ್‌ನಿಂದ ಉಂಟಾಗುವ ಉರಿಯೂತ? ಇದಕ್ಕೇನು ಪರಿಹಾರ?

Pancreatitis: ಹೊಟ್ಟೆಯಲ್ಲಿರುವ ಪ್ರಮುಖ ಅಂಗಗಳಲ್ಲಿ ಮೇದೋಜ್ಜೀರಕ ಗ್ರಂಥಿ (Pancreas)ಯೂ ಒಂದು. ಮೇದೋಜ್ಜೀರಕ ಗ್ರಂಥಿಯು ಹೊಟ್ಟೆಯ ಹಿಂದೆ ಮತ್ತು ಸಣ್ಣ ಕರುಳಿನ ಬಳಿ ಇರುವ ಉದ್ದವಾದ ಗ್ರಂಥಿ ಆಗಿದೆ. ಪ್ಯಾಂಕ್ರಿಯಾಟೈಟಿಸ್‌ ಅಂದರೆ ಮೇದೋಜ್ಜೀರಕ ಗ್ರಂಥಿಯ ಉರಿಯೂತದ ಕಾಯಿಲೆ ಎಂದರ್ಥ. ಇದಕ್ಕೆ ಏನು ಕಾರಣ? ಪರಿಹಾರ ಏನು? ಈ ಕುರಿತು ಪರಿಣತ ವೈದ್ಯರು ನೀಡಿರುವ ಸಲಹೆ ಇಲ್ಲಿದೆ.

VISTARANEWS.COM


on

Pancreatitis
Koo

-ಡಾ. ಕಿಶೋರ್ ಜಿಎಸ್‌ಬಿ, ಹಿರಿಯ ಸಲಹೆಗಾರ ಮತ್ತು ಕ್ಲಿನಿಕಲ್ ಲೀಡ್
ಡಾ. ಪಿಯೂಷ್ ಕುಮಾರ್ ಸಿನ್ಹಾ, ಹಿರಿಯ ಸಲಹೆಗಾರ, ಎಚ್‌ಪಿಬಿ ಸರ್ಜರಿ ಮತ್ತು ಲಿವರ್ ಟ್ರಾನ್ಸ್‌ಪ್ಲಾಂಟೇಶನ್ ವಿಭಾಗ, ಫೋರ್ಟಿಸ್‌ ಆಸ್ಪತ್ರೆ

ಹೊಟ್ಟೆಯಲ್ಲಿರುವ ಪ್ರಮುಖ ಅಂಗಗಳಲ್ಲಿ ಮೇದೋಜ್ಜೀರಕ ಗ್ರಂಥಿ (Pancreatitis)ಯೂ ಒಂದು. ಮೇದೋಜ್ಜೀರಕ ಗ್ರಂಥಿಯು ಹೊಟ್ಟೆಯ ಹಿಂದೆ ಮತ್ತು ಸಣ್ಣ ಕರುಳಿನ ಬಳಿ ಇರುವ ಉದ್ದವಾದ ಗ್ರಂಥಿ ಆಗಿದೆ. ಪ್ಯಾಂಕ್ರಿಯಾಟೈಟಿಸ್‌ ಅಂದರೆ ಮೇದೋಜ್ಜೀರಕ ಗ್ರಂಥಿಯ ಉರಿಯೂತದ ಕಾಯಿಲೆ ಎಂದರ್ಥ.

Pancreatitis

ಮೇದೋಜ್ಜೀರಕ ಗ್ರಂಥಿಯ ಪ್ರಮುಖ ಕೆಲಸಗಳು

ಕಿಣ್ವ ಉತ್ಪಾದನೆ

ಇದು ನಿಮ್ಮ ಸಣ್ಣ ಕರುಳಿನಲ್ಲಿರುವ ಪ್ರೋಟೀನ್‌, ಕಾರ್ಬೋಹೈಡ್ರೇಟ್‌ಗಳು ಮತ್ತು ಕೊಬ್ಬನ್ನು ಒಡೆಯುವ ಜೀರ್ಣಕಾರಿ ಕಿಣ್ವಗಳನ್ನು ಉತ್ಪಾದಿಸುತ್ತದೆ. ಈ ಕಿಣ್ವಗಳು ಸರಿಯಾದ ಪೋಷಕಾಂಶಗಳ ಹೀರಿಕೊಳ್ಳಲಿದೆ.

ಹಾರ್ಮೋನ್ ನಿಯಂತ್ರಣ

ಇದು ಇನ್ಸುಲಿನ್ ಮತ್ತು ಗ್ಲುಕಗನ್‌ನಂತಹ ಹಾರ್ಮೋನ್‌ಗಳನ್ನು ಸಹ ಉತ್ಪಾದಿಸುತ್ತದೆ, ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ.

ಉರಿಯೂತಕ್ಕೆ ಕಾರಣಗಳು

ಮೇದೋಜ್ಜೀರಕ ಗ್ರಂಥಿಯು ಉರಿಯೂತವಾದಾಗ ತೀವ್ರವಾದ ಪ್ಯಾಂಕ್ರಿಯಾಟೈಟಿಸ್ ಸಂಭವಿಸುತ್ತದೆ. ಈ ಉರಿಯೂತವು ಅದರ ಸಾಮಾನ್ಯ ಕಾರ್ಯಚಟುವಟಿಕೆಗೆ ಅಡ್ಡಿಪಡಿಸುತ್ತದೆ, ಜೀರ್ಣಕಾರಿ ಕಿಣ್ವಗಳು ಮೇದೋಜ್ಜೀರಕ ಗ್ರಂಥಿಯೊಳಗೆ ಗೊತ್ತಿಲ್ದೇ ಸಕ್ರಿಯವಾಗಲು ಕಾರಣವಾಗುತ್ತದೆ. ಅಂದರೆ, ಸ್ವಯಂ ಜೀರ್ಣಕ್ರಿಯೆಗೆ ಕಾರಣವಾಗುತ್ತದೆ. ಉರಿಯೂತದ ತೀವ್ರತೆಯು ರೋಗದ ಕೋರ್ಸ್ ಅನ್ನು ನಿರ್ಧರಿಸುತ್ತದೆ.

Pancreatitis photo

ಈ ಅಂಶಗಳು ಉರಿಯೂತವನ್ನು ಪ್ರಚೋದಿಸಬಹುದು

ಪಿತ್ತಗಲ್ಲುಗಳು

ಪಿತ್ತಗಲ್ಲು ಸಾಮಾನ್ಯ ಪಿತ್ತರಸ ನಾಳದಲ್ಲಿ ನೆಲೆಸಬಹುದು, ಪಿತ್ತರಸ ಮತ್ತು ಪ್ಯಾಂಕ್ರಿಯಾಟಿಕ್ ಕಿಣ್ವಗಳ ಹರಿವನ್ನು ತಡೆಯುತ್ತದೆ. ಈ ಬ್ಯಾಕಪ್ ಮೇದೋಜ್ಜೀರಕ ಗ್ರಂಥಿಯನ್ನು ಉರಿಯುವಂತೆ ಮಾಡುತ್ತದೆ.

Alcohol and cigarette Snoring Solution

ಆಲ್ಕೋಹಾಲ್ ಸೇವನೆ

ಕಾಲಾನಂತರದಲ್ಲಿ ಅತಿಯಾದ ಆಲ್ಕೊಹಾಲ್ ಸೇವನೆಯು ಮೇದೋಜ್ಜೀರಕ ಗ್ರಂಥಿಯನ್ನು ಹಾನಿಗೊಳಿಸಿ, ಉರಿಯುತ್ತಕ್ಕೆ ಕಾರಣವಾಗಬಹುದು. ಕೆಲವೊಮ್ಮೆ ಒಂದು ಪಾನೀಯವು ತೀವ್ರವಾದ ಪ್ಯಾಂಕ್ರಿಯಾಟೈಟಿಸ್ನ ಸಂಚಿಕೆಯನ್ನು ಪ್ರಚೋದಿಸಬಹುದು.

ಇತರ ಕಾರಣಗಳು

ಅತಿಯಾದ ಔಷಧಿಗಳ ಸೇವನೆ, ದೇಹಕದಲ್ಲಿ ಕಾಣಿಸಿಕೊಳ್ಳುವ ಸೋಂಕುಗಳು (ಮಂಪ್ಸ್), ಅಧಿಕ ರಕ್ತದ ಟ್ರೈಗ್ಲಿಸರೈಡ್ ಮಟ್ಟ ಮತ್ತು ಕೆಲವು ಶಸ್ತ್ರಚಿಕಿತ್ಸಾ ವಿಧಾನಗಳು ಕಾರಣವಾಗಬಹುದು.

ತೀವ್ರವಾದ ಪ್ಯಾಂಕ್ರಿಯಾಟೈಟಿಸ್‌ನ ರೋಗಲಕ್ಷಣ

  • ಹೊಟ್ಟೆಯ ಮೇಲ್ಭಾಗದಲ್ಲಿ ತೀವ್ರವಾದ ನೋವು, ಈ ನೋವು ಬೆನ್ನಿನ ಕಡೆಗೂ ಹರಡಬಹುದು,
  • ವಾಕರಿಕೆ ಮತ್ತು ವಾಂತಿ
  • ಹಸಿವು ಆಗದೇ ಇರುವುದು
  • ಜ್ವರ
  • ಹೃದಯ ಬಡಿತ ಹೆಚ್ಚಳ
  • ಅಸ್ವಸ್ಥತೆ ಅಥವಾ ಆಯಾಸ
  • ಕಿಬ್ಬೊಟ್ಟೆಯ ಊತ
  • ಪರೀಕ್ಷೆ ಅಗತ್ಯ

ರಕ್ತ ಪರೀಕ್ಷೆ: ನಿಮ್ಮ ರಕ್ತದಲ್ಲಿನ ಪ್ಯಾಂಕ್ರಿಯಾಟಿಕ್ ಕಿಣ್ವಗಳ (ಅಮೈಲೇಸ್ ಮತ್ತು ಲಿಪೇಸ್) ಮಟ್ಟ (ಸಾಮಾನ್ಯ ಮೇಲಿನ ಮಿತಿಗಿಂತ ಮೂರು ಪಟ್ಟು ಹೆಚ್ಚು) ಹೆಚ್ಚಳವಾಗುತ್ತಿರುವ ಪರೀಕ್ಷೆ ಮಾಡಿಸಿಕೊಳ್ಳುವುದು

ಅಲ್ಟ್ರಾಸೌಂಡ್, CT ಸ್ಕ್ಯಾನ್, ಅಥವಾ MRI ಸ್ಕ್ಯಾನ್‌ನ ಮೂಲಕ ಮೇದೋಜ್ಜೀರಕ ಗ್ರಂಥಿಯನ್ನು ದೃಶ್ಯೀಕರಿಸಿ ಪಿತ್ತಗಲ್ಲು, ಉರಿಯೂತ ಅಥವಾ ತೊಡಕುಗಳನ್ನು ಗುರುತಿಸುವುದು

Pancreatitis image

ಚಿಕಿತ್ಸೆಗಳೇನು?

ನೋವು ನಿವಾರಣೆ: ಮೇದೋಜ್ಜೀರಕದಲ್ಲಿ ಉಂಟಾದ ನೋವನ್ನು ನಿವಾರಿಸಲು ವೈದ್ಯರು ಸೂಕ್ತ ಔಷಧ ನೀಡುತ್ತಾರೆ. ಔಷಧಗಳು ಮತ್ತು ನೋವು ನಿರ್ವಹಣೆ ತಂತ್ರಗಳು ಅಸ್ವಸ್ಥತೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ.

ಮೇದೋಜ್ಜೀರಕ ಗ್ರಂಥಿಯನ್ನು ಶಾಂತಿಗೊಳಿಸುವುದು: ಅತಿಯಾದ ಉರಿಯೂತವಿದ್ದ ಸಂದರ್ಭದಲ್ಲಿ ವೈದ್ಯರು, ಮೊದಲು ಮೇದೋಜ್ಜೀರಕ ಗ್ರಂಥಿ ಶಾಂತಿಗೊಳಿಸಲು ಊಟ ಹಾಗೂ ನೀರು ಸೇವಿಸುವುದನ್ನು ನಿಲ್ಲಿಸಲು ಸೂಚಿಸುತ್ತಾರೆ. ಇದಕ್ಕೆ ಪರ್ಯಾಯವಾಗಿ ನಿಮ್ಮನ್ನು ಹೈಡ್ರೀಕರಿಸಲು ದ್ರವಗಳನ್ನು ಅಭಿದಮನಿ ಮೂಲಕ ಒದಗಿಸಲಾಗುತ್ತದೆ.

ಔಷಧಿಗಳು: ವಾಕರಿಕೆ ಮತ್ತು ವಾಂತಿಯನ್ನು ನಿಯಂತ್ರಿಸಲು ಔಷಧಿಗಳನ್ನು ನೀಡಬಹುದು.

ಪ್ರಕರಣದ ತೀವ್ರತೆ ಆಧಾರದ ಮೇಲೆ ಸೂಕ್ತ ಚಿಕಿತ್ಸೆ ನೀಡಲಿದ್ದಾರೆ.

ಇದನ್ನೂ ಓದಿ: Sabja Seeds Benefits: ಸಬ್ಜಾ ಬೀಜವನ್ನು ನೆನೆಹಾಕಿ ಸೇವಿಸಿದರೆ ಹಲವು ಆರೋಗ್ಯ ಸಮಸ್ಯೆ ದೂರ

ತಡೆಗಟ್ಟುವ ಕ್ರಮಗಳೇನು?

  • ಧೂಮಪಾನವನ್ನು ತ್ಯಜಿಸಿ – ಧೂಮಪಾನವು ಮಾರಕವಾಗಬಹುದು. ಆದ್ದರಿಂದ, ಧೂಮಪಾನವನ್ನು ನಿಲ್ಲಿಸಿ. ನಿಮಗೆ ಸಾಧ್ಯವಾಗದಿದ್ದರೆ, ನಿಮ್ಮ ವೈದ್ಯರಿಂದ ಸಹಾಯ ಪಡೆಯಿರಿ.
  • ಆಲ್ಕೋಹಾಲ್ ಸೇವನೆಯನ್ನು ನಿಲ್ಲಿಸಿ – ಮೇದೋಜ್ಜೀರಕ ಗ್ರಂಥಿಯ ಉರಿಯೂತದೊಂದಿಗೆ ಆಲ್ಕೊಹಾಲ್ ಕುಡಿಯುವುದು ಜೀವಕ್ಕೆ ಅಪಾಯಕಾರಿ.
  • ನಿಮ್ಮನ್ನು ಹೈಡ್ರೀಕರಿಸಿಟ್ಟುಕೊಳ್ಳಿ – ನಿಮ್ಮನ್ನು ಹೈಡ್ರೀಕರಿಸಲು ಸಾಕಷ್ಟು ನೀರು ಮತ್ತು ಇತರ ದ್ರವಗಳನ್ನು ಕುಡಿಯಿರಿ.
  • ಕಡಿಮೆ ಕೊಬ್ಬಿನ ಆಹಾರವನ್ನು ಸೇವಿಸಿ – ಧಾನ್ಯಗಳು, ತಾಜಾ ತರಕಾರಿಗಳು, ಹಣ್ಣುಗಳು ಮತ್ತು ಸೀಸದ ಪ್ರೋಟೀನ್‌ಗಳನ್ನು ಒಳಗೊಂಡಿರುವ ಕಡಿಮೆ-ಕೊಬ್ಬಿನ ಆಹಾರವನ್ನು ಅನುಸರಿಸಿ.
Continue Reading
Advertisement
Lokayukta Raid Honnavara Pattana Panchayat Chief Executive Engineer caught by lokayukta while recieving money
ಉತ್ತರ ಕನ್ನಡ5 mins ago

Lokayukta Raid: ಹೊನ್ನಾವರ ಪ.ಪಂ ʼಲಂಚ ಪ್ರವೀಣʼ ಮುಖ್ಯ ಕಾರ್ಯನಿರ್ವಾಹಕ ಎಂಜಿನಿಯರ್ ಲೋಕಾಯುಕ್ತ ಬಲೆಗೆ

Viral Video
ವೈರಲ್ ನ್ಯೂಸ್20 mins ago

Viral Video: ಸರ್ಕಾರಿ ಕಚೇರಿಯಲ್ಲಿ ಡ್ಯಾನ್ಸ್‌ ಮಾಡಿ ರೀಲ್ಸ್; 8 ನೌಕರರಿಗೆ ನೋಟಿಸ್‌ ಬಿಸಿ!

Pradhan Mantri Awas Yojana CM Siddaramaiah instructs to complete work on incomplete houses on priority
ಪ್ರಮುಖ ಸುದ್ದಿ38 mins ago

CM Siddaramaiah: ಪ್ರಧಾನಮಂತ್ರಿ ಆವಾಸ್‌ ಯೋಜನೆ; ಅಪೂರ್ಣ ಮನೆಗಳ ಕಾಮಗಾರಿ ಪೂರ್ಣಗೊಳಿಸಲು ಸಿಎಂ ಸೂಚನೆ

Toyota Kirloskar Motor has joined hands with the IISC to support the establishment of a Mobility Engineering Laboratory
ಬೆಂಗಳೂರು42 mins ago

Toyota Kirloskar Motor: ಮೊಬಿಲಿಟಿ ಎಂಜಿನಿಯರಿಂಗ್ ಲ್ಯಾಬ್ ಸ್ಥಾಪಿಸಲು ಐಐಎಸ್‌ಸಿಯೊಂದಿಗೆ ಕೈಜೋಡಿಸಿದ ಟಿಕೆಎಂ

BJP Muslim Candidate
ಪ್ರಮುಖ ಸುದ್ದಿ1 hour ago

BJP Muslim Candidate: ಉತ್ತರ ಪ್ರದೇಶದಲ್ಲಿ ಮೊದಲ ಬಾರಿಗೆ ಮುಸ್ಲಿಂ ಅಭ್ಯರ್ಥಿಗೆ ಬಿಜೆಪಿ ಟಿಕೆಟ್? ಏನಿದರ ಗುಟ್ಟು?

Uttar pradesh Politics
ದೇಶ1 hour ago

Uttar Pradesh Politics: ಉತ್ತರಪ್ರದೇಶದಲ್ಲಿ ಬಿಜೆಪಿಗೆ ಹೀನಾಯ ಸೋಲು; ಟಾಸ್ಕ್‌ಫೋರ್ಸ್‌ ವರದಿಯಲ್ಲಿ ಗಂಭೀರ ಅಂಶಗಳು ಬಯಲು

Mangalore News
ಕರ್ನಾಟಕ2 hours ago

Mangalore News: ಫಲಿಸದ ಸತತ 6-7 ಗಂಟೆ ಕಾರ್ಯಾಚರಣೆ; ಮಣ್ಣಿನಡಿ ಸಿಲುಕಿದ್ದ ಕಾರ್ಮಿಕ ಸಾವು

Positive woman drinking water
ಆರೋಗ್ಯ2 hours ago

Drinking Water Tips: ನೀರು ಕುಡಿಯುವುದೇ ನಿಮ್ಮ ಸಮಸ್ಯೆಯೇ? ಇಲ್ಲಿವೆ ಸರಳ ಉಪಾಯಗಳು!

Poverty In India
ದೇಶ2 hours ago

Poverty In India: ಭಾರತದಲ್ಲಿ ಒಂದು ದಶಕದಲ್ಲೇ ಬಡತನ ಪ್ರಮಾಣ 21.2%ರಿಂದ 8.5%ಕ್ಕೆ ಇಳಿಕೆ

Monsoon Jacket Styling Tips
ಫ್ಯಾಷನ್2 hours ago

Monsoon Jacket Styling Tips: ಮಳೆಗಾಲದ ಜಾಕೆಟ್‌ನಲ್ಲೂ ಸ್ಟೈಲಿಶ್‌ ಆಗಿ ಕಾಣಿಸುವುದು ಹೇಗೆ?

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ1 day ago

Karnataka Weather : ಮಳೆ ಅಬ್ಬರಕ್ಕೆ ಹೆಚ್ಚಾದ ಗುಡ್ಡ ಕುಸಿತ; ಬಂಗ್ರ ಕೂಳೂರಿನಲ್ಲಿ ರಸ್ತೆ ಬಂದ್‌

karnataka Weather Forecast
ಮಳೆ2 days ago

Karnataka Weather : ಕೊಡಗು, ದಾವಣಗೆರೆಯಲ್ಲಿ ಮಳೆಯಾಟ; ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

karnataka Weather Forecast
ಮಳೆ3 days ago

Karnataka Weather : ಬೆಂಗಳೂರು, ಕಲಬುರಗಿ ಸೇರಿದಂತೆ ಹಲವೆಡೆ ವರ್ಷಧಾರೆ; ನಾಳೆಗೂ ಮಳೆ ಅಲರ್ಟ್‌

Actor Darshan
ಬೆಂಗಳೂರು3 days ago

Actor Darshan : ಖೈದಿ ನಂ.6106ಕ್ಕೆ ಡಿಮ್ಯಾಂಡ್‌! ದರ್ಶನ್‌ ಫ್ಯಾನ್ಸ್‌ಗೆ ಕಾನೂನು ಕಂಟಕ, ರೂಲ್ಸ್‌ ಬ್ರೇಕ್‌ ಮಾಡಿದ್ರೆ ಬೀಳುತ್ತೆ ಕೇಸ್‌‌!

karnataka weather Forecast
ಮಳೆ4 days ago

Karnataka Weather : ಮಳೆಗೆ ಸ್ಕಿಡ್‌ ಆಗಿ ಹೇಮಾವತಿ ನದಿಗೆ ಹಾರಿದ ಕಾರು; ಕರಾವಳಿಗೆ ಎಚ್ಚರಿಕೆ ಕೊಟ್ಟ ತಜ್ಞರು

karnataka Rain
ಮಳೆ5 days ago

Karnataka Rain: ಭಾರಿ ಮಳೆಗೆ ಮನೆಗಳ ಗೋಡೆ ಕುಸಿತ; ಕೂದಲೆಳೆ ಅಂತರದಲ್ಲಿ ವೃದ್ಧ ಪಾರು

karnataka Weather Forecast
ಮಳೆ5 days ago

Karnataka Weather : ಅಬ್ಬಬ್ಬಾ.. ಮುಲ್ಕಿಯಲ್ಲಿ 30 ಸೆಂ.ಮೀ ಮಳೆ ದಾಖಲು; ವಾರಾಂತ್ಯದಲ್ಲೂ ಭಾರಿ ವರ್ಷಧಾರೆ

karnataka Rain
ಮಳೆ5 days ago

Karnataka Rain : ಭಾರಿ ಮಳೆಗೆ ಪಾತಾಳ ಸೇರಿದ ಬಾವಿ; ಅಲೆಗಳ ಹೊಡೆತಕ್ಕೆ ಸಮುದ್ರಪಾಲಾದ ಮನೆ

Karnataka Weather Forecast
ಮಳೆ6 days ago

Karnataka Weather : ಭಾರಿ ಮಳೆ ಹಿನ್ನೆಲೆ ದಕ್ಷಿಣ ಕನ್ನಡಕ್ಕೆ ರೆಡ್ ಅಲರ್ಟ್; ಶುಕ್ರವಾರವೂ ಶಾಲೆಗಳಿಗೆ ರಜೆ ಘೋಷಣೆ

karnataka Weather Forecast
ಮಳೆ6 days ago

Karnataka Weather : ಭಾರಿ ಮಳೆಗೆ ಸೇತುವೆಯಿಂದ ಹೊಳೆಗೆ ಬಿದ್ದ ಕಾರು; ಮರ ಹಿಡಿದು ಪ್ರಾಣ ಉಳಿಸಿಕೊಂಡ ಸವಾರರು

ಟ್ರೆಂಡಿಂಗ್‌