Tips For Rainy Season: ಮಳೆಗಾಲದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವುದು ಹೇಗೆ? - Vistara News

ಆರೋಗ್ಯ

Tips For Rainy Season: ಮಳೆಗಾಲದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವುದು ಹೇಗೆ?

ಹೊರಗೆ ಮೋಡ ಕಟ್ಟಿದಂತೆಯೇ ಒಳಗೆ ಮೂಗು ಕಟ್ಟಿ, ಹೊರಗಿನಂತೆ ಒಳಗೂ ಧಾರಾಕಾರ ಹರಿದು, ಗುಡುಗು-ಸಿಡಿಲಿನಂತೆ ಕೆಮ್ಮು ಪ್ರಾರಂಭವಾದರೆ- ಮಳೆಯನ್ನು ಪ್ರೀತಿಸಲು ಹೇಗೆ ಸಾಧ್ಯ? ಮಳೆಗಾಲದ ಸೋಂಕುಗಳನ್ನು ದೂರ ಇರಿಸುವುದಕ್ಕೆ ಎಂಥ ಆಹಾರ ಒಳ್ಳೆಯದು? ಈ ಲೇಖನ (Tips For Rainy Season) ಓದಿ.

VISTARANEWS.COM


on

Tips For Rainy Season
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮುಂಗಾರು ಚುರುಕಾಗುತ್ತಿದೆ. ಮಳೆಗಾಲವನ್ನು ಸಿಕ್ಕಾಪಟ್ಟೆ ಪ್ರೀತಿಸುವವರು ಇದ್ದಷ್ಟೇ ಮುಖ ಹಿಂಡುವವರೂ ಇದ್ದಾರೆ. ಇದಕ್ಕೆ ಕಾರಣಗಳು ಬಹಳಷ್ಟಿದ್ದರೂ, ಈ ಒದ್ದೆ-ಥಂಡಿ-ಶೀತದ ದಿನಗಳಲ್ಲಿ ಕಾಡುವ ಸೋಂಕುಗಳು ಅವುಗಳಲ್ಲಿ ಒಂದು ಪ್ರಮುಖ ಕಾರಣ. ಹೊರಗೆ ಮೋಡ ಕಟ್ಟಿದಂತೆಯೇ ಒಳಗೆ ಮೂಗು ಕಟ್ಟಿ, ಹೊರಗಿನಂತೆ ಒಳಗೂ ಧಾರಾಕಾರ ಹರಿದು, ಗುಡುಗು-ಸಿಡಿಲಿನಂತೆ ಕೆಮ್ಮು ಪ್ರಾರಂಭವಾದರೆ- ಮಳೆಯನ್ನು ಪ್ರೀತಿಸಲು ಹೇಗೆ ಸಾಧ್ಯ? ರೋಗಾಣುಗಳನ್ನು ತಡೆಯಲು ಸಾಧ್ಯವಿಲ್ಲದಿದ್ದರೂ, ನಮ್ಮ ದೇಹವನ್ನು ಸದೃಢವಾಗಿ ಇರಿಸಿಕೊಳ್ಳಬಹುದಲ್ಲ. ರೋಗ ನಿರೋಧಕ ಶಕ್ತಿಗೆ ಬಲ ಬರುವುದೇ ನಮ್ಮ ಆಹಾರದಿಂದ. ಸೋಂಕು ದೂರ ಇರಿಸುವುದಕ್ಕೆ (Tips For Rainy Season) ಎಂಥ ಆಹಾರ ಒಳ್ಳೆಯದು?

Vitamin C foods

ವಿಟಮಿನ್‌ ಸಿ ಆಹಾರಗಳು

ದೇಹದ ರೋಗ ನಿರೋಧಕ ಶಕ್ತಿಯನ್ನು ಉದ್ದೀಪಿಸುವಲ್ಲಿ ಸಿ ಜೀವಸತ್ವ ಪ್ರಧಾನವಾಗಿ ಬೇಕು. ಅದರಲ್ಲೂ ನೆಗಡಿ, ಕೆಮ್ಮು, ಜ್ವರದಂಥ ಮಳೆಗಾಲದ ಸೋಂಕು ರೋಗಗಳನ್ನು ದೂರ ಇಡುವುದಕ್ಕೆ ವಿಟಮಿನ್‌ ಸಿ ಅಗತ್ಯವಾಗಿ ಬೇಕು. ಹಾಗಾಗಿ ಕಿತ್ತಳೆ, ನಿಂಬೆ, ದಾಳಿಂಬೆ, ಪಪ್ಪಾಯ, ಪೇರಳೆ, ಬ್ರೊಕೊಲಿ, ದಪ್ಪಮೆಣಸು, ಮೊಳಕೆ ಕಟ್ಟಿದ ಕಾಳುಗಳನ್ನು ತಪ್ಪದೆ ಆಹಾರದಲ್ಲಿ ಸೇರಿಸಿಕೊಳ್ಳಬೇಕು.

ginger

ಶುಂಠಿ

ಇದಕ್ಕೆ ಹಲವಾರು ಔಷಧೀಯ ಗುಣಗಳಿವೆ. ಅದರಲ್ಲೂ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ, ಬ್ಯಾಕ್ಟೀರಿಯ ನಿರೋಧಕ ಮತ್ತು ಉರಿಯೂತ ಶಾಮಕ ಗುಣಗಳು ಇದರಲ್ಲಿ ಧಾರಾಳವಾಗಿವೆ. ಕೆಮ್ಮು, ನೆಗಡಿ, ಕಫದಂಥ ಸಮಸ್ಯೆಗಳಿಗೆ ಶುಂಠಿ ಚಹಾ, ಶುಂಠಿ ಕಷಾಯಗಳು ಉಪಶಮನ ನೀಡಬಲ್ಲವು. ಗಂಟಲು ಕಟ್ಟಿದ್ದರೆ, ಗಂಟಲಲ್ಲಿ ನೋವಿದ್ದರೆ ಬೆಚ್ಚಗಿನ ಶುಂಠಿಯ ಕಷಾಯಕ್ಕೆ ಕೊಂಚ ಜೇನುತುಪ್ಪ ಸೇರಿಸಿ ಕುಡಿದರೆ ಆರಾಮ ದೊರೆತೀತು.

iamge of Zinc Foods

ಜಿಂಕ್‌ ಆಹಾರಗಳು

ನಮ್ಮ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಸತುವಿನಂಶ ಇರುವ ಆಹಾರಗಳು ಸಹ ಅಗತ್ಯ. ಇದನ್ನು ಸಿ ಜೀವಸತ್ವದಂತೆ ಹೇರಳವಾಗಿ ಪಡೆಯಲಾಗದು. ಬದಲಿಗೆ, ಹಲವಾರು ಆಹಾರಗಳಿಂದ ಮಿಲಿ ಗ್ರಾಂ ಗಳ ಲೆಕ್ಕದಲ್ಲಿಯೇ ಪಡೆಯಬೇಕು ನಾವು. ಇದಕ್ಕಾಗಿ ಅಣಬೆಗಳು, ಪಾಲಕ್‌ ಸೊಪ್ಪು, ದ್ವಿದಳ ಧಾನ್ಯಗಳು, ಮೊಸರು, ಹಾಲು, ಗೋಡಂಬಿ, ಕುಂಬಳಕಾಯಿ ಬೀಜ, ಶೇಂಗಾ, ಬಾದಾಮಿಯಂಥ ಆಹಾರಗಳ ಮೂಲಕ ಈ ಸತ್ವವನ್ನು ಪಡೆಯಬಹುದು.

ಒಮೇಗಾ 3 ಕೊಬ್ಬಿನಾಮ್ಲ

ಇದು ನಮ್ಮ ಮೆದುಳು ಮತ್ತು ಹೃದಯದ ಯೋಗಕ್ಷೇಮ ನೋಡಿಕೊಳ್ಳುವುದಷ್ಟೇ ಅಲ್ಲ, ಸೋಂಕುಗಳನ್ನು ದೂರ ಮಾಡುವ ಸಾಮರ್ಥ್ಯವನ್ನೂ ಹೊಂದಿದೆ. ಇದಕ್ಕಾಗಿ ಮಳೆಗಾಲದ ಆರಂಭದಲ್ಲಿ ದೊರೆಯುವ ಬೆಣ್ಣೆ ಹಣ್ಣುಗಳನ್ನು ಯಥೇಚ್ಛವಾಗಿ ಸೇವಿಸಿ. ಜೊತೆಗೆ ವಾಲ್‌ನಟ್‌, ಬಾದಾಮಿ, ಅಗಸೆಬೀಜ, ಕೊಬ್ಬಿರುವ ಮೀನುಗಳನ್ನು ಸೇವಿಸುವುದರಿಂದ ಒಮೇಗಾ ೩ ಕೊಬ್ಬಿನಾಮ್ಲ ವಿಫುಲವಾಗಿ ಲಭಿಸುತ್ತದೆ.

Probiotic foods

ಪ್ರೊಬಯಾಟಿಕ್‌ ಆಹಾರಗಳು

ನಮ್ಮ ಜೀರ್ಣಾಂಗಗಳ ಆರೋಗ್ಯ ಚೆನ್ನಾಗಿದ್ದರೆ ಮಾತ್ರವೇ ದೇಹದ ಪ್ರತಿರೋಧಕ ಶಕ್ತಿ ಬಲವಾಗಿರುತ್ತದೆ. ಜೀರ್ಣಾಂಗಗಳಲ್ಲಿ ಒಳ್ಳೆಯ ಬ್ಯಾಕ್ಟೀರಿಯಗಳ ಸಂಖ್ಯೆ ಭರಪೂರ ಇದ್ದಷ್ಟೂ ದೇಹ ರೋಗಮುಕ್ತವಾಗಿರುತ್ತದೆ ಎನ್ನುತ್ತವೆ ಅ‍ಧ್ಯಯನಗಳು. ಹಾಗಾಗಿ ಪ್ರೊಬಯಾಟಿಕ್‌ ಆಹಾರಗಳು ನಮ್ಮ ದೇಹಕ್ಕೆ ಬೇಕೇಬೇಕು. ಇದಕ್ಕಾಗಿ ಮೊಸರು, ಮಜ್ಜಿಗೆಯಂಥ ಹುದುಗು ಬರಿಸಿದ ಆಹಾರಗಳನ್ನು ಪ್ರತಿದಿನ ಸೇವಿಸಿ.

infusions

ಕಷಾಯಗಳು

ಶೀತದ ದಿನಗಳಲ್ಲಿ ದೇಹವನ್ನು ಬೆಚ್ಚಗೆ ಇರಿಸಿಕೊಳ್ಳುವುದಕ್ಕೆ ತರಹೇವಾರಿ ಕಷಾಯಗಳನ್ನು ಮಾಡಿಕೊಳ್ಳಬಹುದು. ಇದರಿಂದಲೂ ನಮ್ಮ ದೇಹದ ಸೋಂಕು ನಿರೋಧಕ ಶಕ್ತಿ ಪ್ರಬಲವಾಗುತ್ತದೆ. ಇದಕ್ಕಾಗಿ ಯಾವೆಲ್ಲ ವಸ್ತುಗಳನ್ನು ಉಪಯೋಗಿಸಬಹುದು ಎನ್ನುವುದಕ್ಕೆ ಉಪಯುಕ್ತ ವಿವರಗಳು ಇಲ್ಲಿವೆ. ಈ ಯಾವುದೇ ವಸ್ತುಗಳನ್ನು ಬಳಸಿ ಕಷಾಯ ಮಾಡಿಕೊಳ್ಳಬಹುದು.

Raw Turmeric with Powder Cutout

ಅರಿಶಿನ

ಇದರಲ್ಲಿರುವ ಕರ್ಕುಮಿನ್‌ ಎಂಬ ಪ್ರಬಲ ಉತ್ಕರ್ಷಣ ನಿರೋಧಕವು ಸೋಂಕುಗಳನ್ನು ಹೊಡೆದೋಡಿಸುತ್ತದೆ

Benefits Of Ginger

ಶುಂಠಿ

ಇದರ ಜಿಂಜರಾಲ್‌ ಅಂಶದಲ್ಲಿ ಉರಿಯೂತ ಶಮನ ಮಾಡಿ, ಪ್ರತಿರೋಧಕ ಶಕ್ತಿ ಹೆಚ್ಚಿಸುತ್ತದೆ

Garlic

ಬೆಳ್ಳುಳ್ಳಿ

ಇದರ ಅಲ್ಲಿಸಿನ್‌ ಅಂಶದಲ್ಲಿ ವೈರಸ್‌ ಮತ್ತು ಬ್ಯಾಕ್ಟೀರಿಯ ನಿರೋಧಕ ಗುಣವಿದೆ

Cinnamon sticks Anti Infective Foods

ದಾಲ್ಚಿನ್ನಿ ಚಕ್ಕೆ

ಇದರಲ್ಲಿರುವ ಉರಿಯೂತ ಶಾಮಕ ಸತ್ವಗಳು ರೋಗನಿರೋಧಕವೂ ಹೌದು

black pepper

ಕಾಳು ಮೆಣಸು

ಇದರ ಕ್ಯಾಪ್ಸೈಸಿನ್‌ನಲ್ಲಿ ದೇಹದ ಪ್ರತಿರೋಧಕತೆಯನ್ನು ವೃದ್ಧಿಸುವ ಸಾಮರ್ಥ್ಯವಿದೆ

cumin

ಜೀರಿಗೆ

ಇದರ ಉತ್ಕರ್ಷಣ ನಿರೋಧಕಗಳು ಸೋಂಕಗಳ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ಹೆಚ್ಚಿಸುತ್ತವೆ

coriander Coriander Benefits

ಧನಿಯ

ಇದರ ಉತ್ಕರ್ಷಣ ನಿರೋಧಕ ಸತ್ವಗಳು ಸೋಂಕುಗಳನ್ನು ನಿವಾರಿಸುತ್ತವೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

Oats or Quinoa: ಓಟ್ಸ್‌, ಕಿನೊವಾ- ಇವೆರೆಡರಲ್ಲಿ ಯಾವುದು ಬೆಸ್ಟ್?

Oats or Quinoa: ಓಟ್‌ಮೀಲ್‌ ಮತ್ತು ಕಿನೊವಾ ನಡುವೆ ಆರೋಗ್ಯಕ್ಕಾಗಿ ಸ್ಪರ್ಧೆಯೊಂದು ನಡೆಯಿತು ಅಂತಿಟ್ಟುಕೊಳ್ಳಿ. ಗೆದ್ದವರನ್ನು ನಿರ್ಧರಿಸುವುದು ಹೇಗೆ? ಸ್ಪರ್ಧಿಗಳ ಸಾಮರ್ಥ್ಯ, ಸದ್ಗುಣಗಳನ್ನು ನೋಡಿಯೇ ತಾನೇ? ಆ ಎಲ್ಲಾ ಪರೀಕ್ಷೆಗಳೂ ನಡೆದ ಮೇಲೆ ವಿಜೇತರನ್ನು ಘೋಷಿಸಲಾದ್ದು, ಯಾರು ಎಂಬ ಕುತೂಹಲವಿದ್ದರೆ, ಇದನ್ನು ಓದಿ!

VISTARANEWS.COM


on

Oats or Quinoa
Koo

ಆರೋಗ್ಯಕರ ಸ್ಪರ್ಧೆ ಒಳ್ಳೆಯದು; ಆರೋಗ್ಯಕ್ಕಾಗಿ ಸ್ಪರ್ಧೆ ಇನ್ನೂ ಒಳ್ಳೆಯದು; ಆರೋಗ್ಯಕರ ತಿನಿಸುಗಳಲ್ಲೇ ಸ್ಪರ್ಧೆ ಏರ್ಪಟ್ಟರೆ ತಿನ್ನುವವರಿಗೆಲ್ಲ ಒಳ್ಳೆಯದು! ಇದೇನೋ ಒಗಟು ಅಂದುಕೊಳ್ಳಬೇಡಿ, ಎರಡು ಆರೋಗ್ಯಕರ ತಿನಿಸುಗಳ ನಡುವೆ ʻಯಾವುದು ಹೆಚ್ಚು ಒಳ್ಳೆಯದು?ʼ ಎನ್ನುವ ಸ್ಪರ್ಧೆ ಏರ್ಪಟ್ಟರೆ ಹೇಗಿರುತ್ತದೆಂಬ ಕುತೂಹಲ ಇರುವುದಿಲ್ಲವೇ? ಉದಾ, ಓಟ್ಸ್‌ ಮತ್ತು ಕಿನೊವಾ ನಡುವೆ ಯಾವುದನ್ನೂ ನಂಬರ್‌ 1 ಎಂದು ನಿರ್ಧರಿಸುವುದು ಹೇಗೆ? ಇವೆರಡರಲ್ಲಿ ಗೆಲ್ಲುವವರು ಯಾರು? ಇದನ್ನು ನಿರ್ಧರಿಸುವ ಮುನ್ನ, ಯಾವುದರ ಗುಣಗಳು ಏನೇನು (Oats or Quinoa) ಎಂಬುದನ್ನು ಅರ್ಥ ಮಾಡಿಕೊಳ್ಳೋಣ.

Oats For Weight Loss

ಓಟ್ಸ್‌

ಬೀಟಾ ಗ್ಲೂಕನ್‌ ಎಂಬ ಉತ್ಕೃಷ್ಟವಾದ ಕರಗಬಲ್ಲ ನಾರಿನ ಆಗರವಿದು. ದೇಹದಲ್ಲಿ ಜಮೆಯಾಗಿರುವ ಕೊಲೆಸ್ಟ್ರಾಲ್‌ ಕಡಿಮೆ ಮಾಡಿ, ಹೃದಯದ ಆರೋಗ್ಯ ಚೆನ್ನಾಗಿರಿಸುವಲ್ಲಿ ಇದು ಮಹತ್ವದ ಪಾತ್ರ ವಹಿಸುತ್ತದೆ. ನಾರು ಮಾತ್ರವಲ್ಲ, ಮೆಗ್ನೀಶಿಯಂ, ಮ್ಯಾಂಗನೀಸ್‌, ಫಾಸ್ಫರಸ್‌, ಕಬ್ಬಿಣದಂಥ ಅಗತ್ಯ ಖನಿಜಗಳು ಇದರಲ್ಲಿ ಭರಪೂರ ಇವೆ. ಗ್ಲೂಟೆನ್‌ ರಹಿತವಾದ ಆಹಾರವಾದ್ದರಿಂದ, ಗೋದಿಯಂಥ ಧಾನ್ಯಗಳ ಅಲರ್ಜಿ ಇರುವವರಿಗೆ ಇದು ಸೂಕ್ತವಾದ ಆಹಾರ. ಬೆಳಗಿನ ತಿಂಡಿಗೆ, ಬೇಕ್‌ ಮಾಡುವಾಗ, ಸ್ಮೂದಿಗಳಲ್ಲಿ, ಗ್ರನೋಲಾ ಬಾರ್‌ಗಳಲ್ಲಿ- ಹೀಗೆ ಹಲವು ಬಗೆಯ ಅಡುಗೆಗಳಲ್ಲಿ ಇದನ್ನು ಉಪಯೋಗಿಸಲು ಸಾಧ್ಯವಿದೆ. ಇದು ಹೃದಯದ ಆರೋಗ್ಯಕ್ಕೆ ಪೂರಕ ಮಾತ್ರವಲ್ಲ, ತನ್ನ ನಾರಿನಂಶದಿಂದಾಗಿ ಮಧುಮೇಹ ನಿಯಂತ್ರಣಕ್ಕೂ ಸೂಕ್ತವಾದ ಆಹಾರವಿದು. ಜೀರ್ಣವಾಗಲು ದೀರ್ಘಕಾಲ ತೆಗೆದುಕೊಂಡು, ರಕ್ತದಲ್ಲಿ ಸಕ್ಕರೆಯಂಶ ಏರಿಳಿಯದಂತೆ ನೋಡಿಕೊಳ್ಳುತ್ತದೆ. ಜೀರ್ಣವಾಗಲು ಹೆಚ್ಚು ಸಮಯ ಬೇಕು ಎನ್ನುವ ಕಾರಣಕ್ಕಾಗಿಯೇ ತೂಕ ಇಳಿಸುವವರಿಗೆ ಇದು ಅಚ್ಚುಮೆಚ್ಚು. ಹೆಚ್ಚು ಸಮಯದವರೆಗೆ ಹೊಟ್ಟೆ ತುಂಬಿದ ಅನುಭವವನ್ನೇ ನೀಡುತ್ತದೆ. ಹೆಚ್ಚು ನಾರಿನಂಶ ಇರುವ ಆಹಾರಗಳೆಲ್ಲವೂ ಜೀರ್ಣಾಂಗಗದ ಆರೋಗ್ಯವನ್ನು ಚೆನ್ನಾಗಿ ಇಡುವಂಥವು. ಇದರಲ್ಲಿರುವ ಉತ್ಕರ್ಷಣ ನಿರೋಧಕಗಳು ದೇಹದಲ್ಲಿನ ಉರಿಯೂತ ಕಡಿಮೆ ಮಾಡುವ ಸಾಮರ್ಥ್ಯವನ್ನು ಹೊಂದಿವೆ. ಹಾಗಾಗಿ ಬೆಳಗಿನ ಹೊತ್ತು ಒಂದು ಬೌಲ್‌ ತುಂಬಾ ಬಿಸಿಯಾದ ಓಟ್‌ಮೀಲ್‌ ಸವಿಯುವುದಕ್ಕೆ ಯಾವ ತಡೆಯೂ ಇರಲಾರದು.

Quinoa
Quinoa

ಕಿನೊವಾ

ಎಲ್ಲಾ ಒಂಬತ್ತು ಪ್ರಮುಖ ಅಮೈನೋ ಆಮ್ಲಗಳನ್ನು ಹೊಂದಿರುವ ಸಂಪೂರ್ಣ ಪ್ರೊಟೀನ್‌ ಇದರಲ್ಲಿದೆ. ಹಾಗಾಗಿ ಸಸ್ಯಾಹಾರಿಗಳು ಮತ್ತು ವೇಗನ್‌ಗಳು ಅಧಿಕ ಪ್ರೊಟೀನ್‌ ಆಹಾರಗಳಲ್ಲಿ ಇದನ್ನು ನಿಶ್ಚಿತವಾಗಿ ಪರಿಗಣಿಸಬಹುದು. ಇದರಲ್ಲಿ ಕರಗದಿರುವ ಹಾಗೂ ಕರಗಬಲ್ಲ- ಈ ಎರಡೂ ರೀತಿಯ ನಾರುಗಳಿವೆ. ಕರಗದಿರುವ ನಾರುಗಳು ಜೀರ್ಣಾಂಗಗಳನ್ನು ಸಶಕ್ತ ಮಾಡಿ, ಮಲಬದ್ಧತೆಯನ್ನು ದೂರ ಮಾಡುತ್ತವೆ. ಕರಗಬಲ್ಲ ನಾರುಗಳು ದೇಹದಲ್ಲಿ ಜಮೆಯಾಗಿರುವ ಕೊಬ್ಬಿನಂಶವನ್ನು ಖಾಲಿ ಮಾಡಿಸುತ್ತವೆ. ಮೆಗ್ನೀಶಿಯಂ, ಪೊಟಾಶಿಯಂ, ಕಬ್ಬಿಣ, ಹಲವು ರೀತಿಯ ಬಿ ವಿಟಮಿನ್‌ಗಳು ಮತ್ತು ಉತ್ಕರ್ಷಣ ನಿರೋಧಕಗಳನ್ನು ಇದು ಹೊಂದಿದೆ.
ಪ್ರೋಟನ್‌ ಮತ್ತು ನಾರು- ಈ ಎರಡೂ ಸತ್ವಗಳು ಹೆಚ್ಚಿರುವ ಆಹಾರಗಳು ಬಹುವಿಧಗಳಲ್ಲಿ ನಮ್ಮ ಆರೋಗ್ಯ ಸುಧಾರಣೆಯನ್ನು ಮಾಡಬಲ್ಲವು. ಮಧುಮೇಹ ನಿಯಂತ್ರಣಕ್ಕೆ ಇದು ಸೂಕ್ತವಾದ ಆಹಾರ. ತೂಕ ಇಳಿಸುವವರಿಗಂತೂ ಇದೇ ನಂಬರ್‌ 1. ಗ್ಲೂಟೆನ್‌ ಅಂಶ ಲವಲೇಶವೂ ಇಲ್ಲದಿರುವುದಕ್ಕೆ ಅಲರ್ಜಿಗಳ ರಗಳೆ ಇದರಿಂದ ಕಾಡುವುದಿಲ್ಲ. ಕ್ವೆರ್ಸೆಟಿನ್‌, ಕೆಂಫೆರಾಲ್‌ನಂಥ ಉತ್ಕರ್ಷಣ ನಿರೋಧಕಗಳು ದೇಹದಲ್ಲಿನ ಉರಿಯೂತ ಶಮನ ಮಾಡಿ, ಸ್ವಾಸ್ಥ್ಯ ಕಾಪಾಡುತ್ತವೆ. ಇಂಥ ಒಳ್ಳೆಯ ಆಹಾರವನ್ನು ಬಳಸುವುದು ಹೇಗೆ ಎಂಬ ಸಮಸ್ಯೆ ಹಲವರಿಗೆ ಇರಬಹುದು. ನೋಡುವುದಕ್ಕೆ ಸಿರಿಧಾನ್ಯಗಳ ಅಣ್ಣ-ತಮ್ಮನಂತೆ ಕಾಣುವ ಇದನ್ನು ಹಲವು ರೀತಿಯ ಭಾರತೀಯ ಅಡುಗೆಗಳಲ್ಲಿ ಬಳಸಬಹುದು. ಸಲಾಡ್‌, ಸ್ಮೂದಿಗಳಿಂದ ಹಿಡಿದು, ಉಪ್ಪಿಟ್ಟು, ಅವಲಕ್ಕಿಗಳವರೆಗೆ ಇದನ್ನು ಉಪಯೋಗಿಸಬಹುದು. ಅನ್ನದಂತೆ ಸಾರು, ಪಲ್ಯಗಳೊಂದಿಗೆ ಊಟ ಮಾಡಬಹುದು. ಕಿಚಡಿ, ಬಿಸಿಬೇಳೆಭಾತ್‌, ಪಲಾವಿಗೂ ಇದು ಒದಗಿ ಬರುತ್ತದೆ.

ಇದನ್ನೂ ಓದಿ: Foods For Weight Loss: ಈ ಆಹಾರಗಳನ್ನು ಸೇವಿಸಿ; ಸಲೀಸಾಗಿ ತೂಕ ಇಳಿಸಿ!

ಗೆದ್ದವರು ಯಾರು?

ಇವೆರಡರ ಪ್ರವರಗಳನ್ನೆಲ್ಲ ನೋಡಿದ್ದಾಯಿತು. ಈಗ ವಿಜೇತರನ್ನು ಘೋಷಿಸುವ ಸಮಯ… ಇವೆರಡರಲ್ಲಿ ಯಾವುದನ್ನೇ ತಿಂದರೂ ಅಥವಾ ಎರಡನ್ನೂ ತಿಂದರೂ, ಗೆಲ್ಲುವುದು ಮಾತ್ರ ತಿಂದವರು! ಕಾರಣ, ಆರೋಗ್ಯ ಸುಧಾರಿಸುವುದು ಅವರದ್ದೇ ತಾನೆ?

Continue Reading

ಆರೋಗ್ಯ

Hair Oil Tips: ನಮ್ಮ ತಲೆಗೂದಲಿಗೆ ಬೇಕಾದ ತೈಲವನ್ನು ಆಯ್ದುಕೊಳ್ಳುವುದು ಹೇಗೆ?

Hair Oil Tips: ನಮ್ಮ ತಲೆಗೂದಲು ಹೇಗಿದೆ? ಉದ್ದ, ಗಿಡ್ಡ, ದಪ್ಪ, ಸಪೂರ, ಕಪ್ಪು, ಕೆಂಚು- ಇಂಥ ಉತ್ತರಗಳೇ ಬರಬಹುದು, ತಪ್ಪೇನಿಲ್ಲ. ಆದರೆ ನಮ್ಮ ಕೂದಲಿಗೆ ಎಂಥಾ ತೈಲ ಸರಿಹೊಂದುತ್ತದೆ ಎಂಬುದು ನಮಗೆ ತಿಳಿದಿದೆಯೇ? ತಲೆಯ ಚರ್ಮದ ಹೇಗಿದ್ದರೆ, ಅದಕ್ಕೆ ಯಾವ ತೈಲ ಒಳ್ಳೆಯದು ಗೊತ್ತೇ? ಗೊತ್ತಿಲ್ಲದಿದ್ದರೆ, ಇಲ್ಲಿದೆ ವಿವರಗಳು.

VISTARANEWS.COM


on

Hair Oil Tips
Koo

ʻಸರ್ವ ರೋಗಕ್ಕೆ ಒಂದೇ ಮದ್ದುʼ ಅಂತ ಆಗುವುದುಂಟೇ? ಕೆಲವೊಮ್ಮೆ ಉಂಟು! ಉದಾ, ತಲೆಕೂದಲ ಸಮಸ್ಯೆ ಏನೇ ಇದ್ದರೂ ನಮ್ಮ ಅಜ್ಜಿಯರ ಕಾಲದಲ್ಲಿ ಇರುತ್ತಿದ್ದುದು ಒಂದೇ ಮದ್ದು- ತಲೆಗೆ ಹದವಾದ ಎಣ್ಣೆ ಮಸಾಜ್‌ ಮಾಡುವುದು! ನಿಜ, ತಲೆ ನೋವಿನಿಂದ ಪ್ರಾರಂಭವಾಗಿ, ಕೂದಲು ಉದುರುವುದಕ್ಕೆ, ತಲೆ ಹೊಟ್ಟಿಗೆ, ಸೀಳುಗೂದಲಿಗೆ, ಬಾಲನೆರೆಗೆ- ಹೀಗೆ ಎಲ್ಲದಕ್ಕೂ ಎಣ್ಣೆ ಮಸಾಜ್‌ ಅವರ ಉತ್ತರವಾಗಿತ್ತು. ಆದರೆ ಎಣ್ಣೆಗಳನ್ನು ಅವರೇ ತಯಾರು ಮಾಡುತ್ತಿದ್ದರಿಂದ, ಯಾವ ಸಮಸ್ಯೆಗೆ ಎಂಥಾ ಎಣ್ಣೆ ಬೇಕು ಎನ್ನುವುದು ಅವರಿಗೆ ಗೊತ್ತಿರುತ್ತಿತ್ತು. ನಮಗೀಗ ಗೊತ್ತಿಲ್ಲವಲ್ಲ, ಇದು ಸಮಸ್ಯೆ. ಎಂಥಾ ಕೂದಲಿಗೆ ಯಾವ ರೀತಿಯ ಎಣ್ಣೆ ಸೂಕ್ತ? (Hair Oil Tips) ವಿವರಗಳು ಈ ಲೇಖನದಲ್ಲಿವೆ.

ಯಾವ ರೀತಿಯ ಕೂದಲು?

Hair Oil Tips

ನೇರ ಕೂದಲು

ಯಾವುದೇ ಗುಂಗುರು, ಸುರುಳಿಗಳಿಲ್ಲದೇ ನೇರವಾಗಿ ಇಳಿಬೀಳುವ ಕೂದಲುಗಳಿವು. ಇವು ನೋಡುವುದಕ್ಕೆ ಮೃದುವಾದ, ಹೊಳೆಯುವ ಗುಚ್ಛದಂತೆ ಕಾಣುವ ಕೇಶಗಳು. ಪರಿಣಾಮವಾಗಿ, ಕೂದಲಿಗೆ ಸ್ವಲ್ಪ ಎಣ್ಣೆ ಹಾಕಿದರೂ, ತೈಲವನ್ನು ಹಿಡಿದಿಟ್ಟುಕೊಳ್ಳದೆ ಹೊರಸೂಸುತ್ತವೆ, ಅಂಟಾಗಿ ಜಿಡ್ಡಾಗಿ ಕಾಣುತ್ತವೆ. ಇವುಗಳಿಗೆ ಹೆಚ್ಚು ಜಿಡ್ಡಿಲ್ಲದ ಲಘುವಾದ ತೈಲಗಳು ಸೂಕ್ತ. ಬಾದಾಮಿ ಎಣ್ಣೆ, ಜೊಜೂಬಾ ಎಣ್ಣೆ, ಆರ್ಗಾನ್‌ ಎಣ್ಣೆಯಂಥವು ಇದಕ್ಕೆ ಸೂಕ್ತ.

wavy hair

ಅಲೆಯಾದ ಕೂದಲು

“S” ಆಕಾರದಲ್ಲಿ ಕಾಣುವ ಕೂದಲುಗಳಿವು. ಅಲ್ಲಲ್ಲಿ ಸುರುಳಿಗಳಿದ್ದು ನೋಡುವುದಕ್ಕೆ ಸುಂದರ ಕೂದಲುಗಳಿವು. ಆದರೆ ಕೂದಲು ಒಣಗುವ ಮತ್ತು ಸಿಕ್ಕಾಗುವ ಸಾಧ್ಯತೆ ನೇರ ಕೂದಲಿಗಿಂತ ಅಧಿಕ. ಹಾಗಾಗಿ ಹೆಚ್ಚು ಉದುರಲೂಬಹುದು. ಇಂಥ ಕೂದಲಿಗೆ ಮಧ್ಯಮ ಪ್ರಮಾಣದಲ್ಲಿ ಜಿಡ್ಡಿರುವಂಥ ತೈಲಗಳು ಬೇಕು. ತೀರಾ ಲಘುವಾದ ತೈಲಗಳು ನಾಟುವುದೇ ಇಲ್ಲ. ಕೊಬ್ಬರಿ ಎಣ್ಣೆ ಇದಕ್ಕೆ ತಕ್ಕುದಾದದ್ದು. ಬೇರಾವುದೇ ತೈಲಗಳನ್ನು ಮಾಡಿಕೊಳ್ಳುವುದಾದರೂ ಅದಕ್ಕೆ ಆಧಾರವಾಗಿ ಕೊಬ್ಬರಿ ಎಣ್ಣೆಯನ್ನೇ ಉಪಯೋಗಿಸುವುದು ಸೂಕ್ತ.

Thick, curly hair

ದಪ್ಪ, ಗುಂಗುರು ಕೂದಲು

ಇಂಥ ಕೂದಲು ಹೆಚ್ಚು ಉದ್ದ ಬೆಳೆಯಲಾರದು. ಬದಲಿಗೆ ದಪ್ಪನಾಗಿ ಬೆಳೆದು, ಗುಂಗುರಾಗಿ ಭುಜಕ್ಕಿಂತ ಸ್ವಲ್ಪ ಕೆಳಗಿಳಿಯಬಲ್ಲದಷ್ಟೆ. ಇದನ್ನು ಸರಿಗಾಣಿಸಿ ಇರಿಸಿಕೊಳ್ಳುವುದು ಸವಾಲಿನ ಕೆಲಸ. ಇದಕ್ಕೆ ಘನವಾದ ತೈಲಗಳೇ ಬೇಕು. ಇಲ್ಲದಿದ್ದರೆ ಬಾಚಣಿಕೆ ಮೇಲಿಂದ ಕೆಳಕ್ಕಿಳಿಯುವುದೂ ಕಷ್ಟವಾಗಬಹುದು. ಹಾಗಾಗಿ ಆಲಿವ್‌ ಎಣ್ಣೆ, ಎಳ್ಳೆಣ್ಣೆ, ಹರಳೆಣ್ಣೆಯಂಥ ದಿವಿನಾದ ತೈಲಗಳ ಮೊರೆ ಹೋಗುವುದು ಒಳ್ಳೆಯದು. ಒಂದೊಮ್ಮೆ ಈ ತೈಲಗಳ ವಾಸನೆ ಇಷ್ಟವಾಗದಿದ್ದರೆ, ಕೊಬ್ಬರಿ ಎಣ್ಣೆಯನ್ನೇ ನಿತ್ಯವೂ ಲೇಪಿಸಬೇಕಾಗುತ್ತದೆ.

thin hair
Young Woman Takes Care of Her Hair Using Natural Oils and Conditioners for Hair Care

ಸಪೂರ ಕೂದಲು

ಇದು ಕೂದಲು ಉದುರಿ ತೆಳ್ಳಗಾಗಿದ್ದಲ್ಲ, ಇದ್ದಿದ್ದೇ ಸಪೂರ. ಇವು ಸಹ ಬೇಗ ತುಂಡಾಗಿ, ಶಕ್ತಿಹೀನವಾದಂತೆ ಕಾಣುತ್ತವೆ. ಇವುಗಳಿಗೂ ಲಘುವಾದ ತೈಲಗಳೇ ಸೂಕ್ತ. ಜೊಜೂಬಾ ತೈಲ, ತೆಂಗಿನ ಹಾಲಿನ ತೈಲ ಮುಂತಾದ ತೀರಾ ಜಿಡ್ಡಿಲ್ಲದ, ಅಂಟಾಗದಂಥ ಎಣ್ಣೆಗಳು ಇಂಥ ಕೂದಲಿಗೆ ಬೇಕಾಗುತ್ತದೆ. ಅಂಟಾಗುತ್ತದೆಂದು ಎಣ್ಣೆಯನ್ನೇ ಹಾಕದಿದ್ದರೆ ಕೂದಲ ಆರೋಗ್ಯ ಬಿಗಡಾಯಿಸುವುದು ನಿಶ್ಚಿತ.

ತಲೆಯ ಚರ್ಮದಲ್ಲೂ ವಿಧಗಳಿವೆ!: ನಿಮ್ಮದು ಹೇಗಿದೆ?

ಸಾಮಾನ್ಯ ಚರ್ಮ

ಇಂಥ ತಲೆಚರ್ಮಗಳಲ್ಲಿ ಅಧಿಕವಾದ ತೈಲ ಉತ್ಪಾದನೆ ಆಗುವುದಿಲ್ಲ. ತಲೆಸ್ನಾನ ಮಾಡುವುದು ಒಂದೆರಡು ದಿನ ಆಚೀಚೆಯಾದರೆ, ಕೂದಲೆಲ್ಲ ಅಂಟಾಗಿ, ಜಲೀಜಾಗಿ ಮುಂದ್ದೆಯಾಗುವುದಿಲ್ಲ. ಇಂಥವರಿಗೆ ಕೊಬ್ಬರಿ ಎಣ್ಣೆ ಒಳ್ಳೆಯ ಆಯ್ಕೆ.

Young Woman Takes Care of Her Hair Using Natural Oils and Conditioners for Hair Care
Young Woman Takes Care of Her Hair Using Natural Oils and Conditioners for Hair Care

ಎಣ್ಣೆ ಚರ್ಮ

ತಲೆಯ ಚರ್ಮದಲ್ಲಿ ತೈಲ ಅಥವಾ ಸೇಬಂ ಅತಿಯಾಗಿ ಉತ್ಪಾದನೆ ಆಗುತ್ತದೆ ಕೆಲವರಿಗೆ. ಬೇಗನೆ ಕೂದಲು ಕೊಳೆಯಾಗುವುದು, ಅಂಟಾಗುವುದು, ಜೀವವೇ ಇಲ್ಲದಂತೆ ಕಾಣುವುದು, ಹೊಟ್ಟಾಗುವುದೆಲ್ಲ ಇದರ ಅಡ್ಡ ಪರಿಣಾಮಗಳು. ಇಂಥವರು ಲಘುವಾದ ಎಣ್ಣೆಗಳನ್ನೇ ಕೂದಲಿಗೆ ಲೇಪಿಸಬೇಕು. ಜೊಊಬಾ ಎಣ್ಣೆ, ಟೀಟ್ರೀ ಎಣ್ಣೆ, ಗ್ರೇಪ್‌ಸೀಡ್‌ ಎಣ್ಣೆಯಂಥವು ಸೂಕ್ತ.

ಇದನ್ನೂ ಓದಿ: Herbal Supplement: ಅರಿಶಿನ ಸೇರಿದಂತೆ ಹರ್ಬಲ್‌ ಸಪ್ಲಿಮೆಂಟ್‌ ಸೇವಿಸುತ್ತಿದ್ದೀರಾ? ಹಾಗಾದರೆ ಎಚ್ಚರ!

ಒಣ ಚರ್ಮ

ಇವರಲ್ಲಿ ತಲೆಯ ಚರ್ಮಕ್ಕೆ ಹೆಚ್ಚು ತೇವವೇ ಇರುವುದಿಲ್ಲ; ಹಾಗಾಗಿ ಒಣಗಿ ಜೀವವಿಲ್ಲದಂತೆ ಕಾಣುತ್ತದೆ. ಇದರಿಂದಾಗಿ ತಲೆಯಲ್ಲಿ ಹೊಟ್ಟಾಗುವುದು, ತುರಿಕೆ, ಕಿರಿಕಿರಿ ಮಾಮೂಲಾಗುತ್ತದೆ. ಹಾಗೆಯೇ ಬಿಟ್ಟರೆ ಎಕ್ಸಿಮಾ, ಸೋರಿಯಾಸಿಸ್‌ನಂಥ ತೊಂದರೆಗಳು ಬರಬಹುದು. ಹಾಗಾಗಿ ಕೊಬ್ಬರಿ ಎಣ್ಣೆ, ಅವಕಾಡೊ ಎಣ್ಣೆ, ಆಲಿವ್‌ ಎಣ್ಣೆಯಂಥವು ಇವರಿಗೆ ಒಳ್ಳೆಯದ ಆಯ್ಕೆ.

Continue Reading

ಆರೋಗ್ಯ

Herbal Supplement: ಅರಿಶಿನ ಸೇರಿದಂತೆ ಹರ್ಬಲ್‌ ಸಪ್ಲಿಮೆಂಟ್‌ ಸೇವಿಸುತ್ತಿದ್ದೀರಾ? ಹಾಗಾದರೆ ಎಚ್ಚರ!

Herbal supplement: ಅರಿಶಿನ ಎಂಬುದು ಆರೋಗ್ಯದ ವಿಚಾರದಲ್ಲಿ ಚಿನ್ನ ಹೌದೇ ಆದರೂ, ಅತಿಯಾದರೆ ಏನೇನು ಸಮಸ್ಯೆಗಳನ್ನು ತಂದೊಡ್ಡಬಹುದು ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ಅರಿಶಿನದ ಸಪ್ಲಿಮೆಂಟ್‌ಗಳನ್ನು ಉತ್ತಮ ಆರೋಗ್ಯಕ್ಕಾಗಿ ಎಂಬ ದೃಷ್ಟಿಯಿಂದ ತೆಗೆದುಕೊಳ್ಳುತ್ತಿದ್ದರೆ ಅದರಿಂದ ಪಿತ್ತಕೋಶಕ್ಕೆ ಸಮಸ್ಯೆಯಾಗಬಹುದು ಎಂದು ಇತ್ತೀಚೆಗಿನ ಸಮೀಕ್ಷೆಯೊಂದು ವರದಿ ಮಾಡಿದೆ.

VISTARANEWS.COM


on

Herbal Supplement
Koo

ಅತಿಯಾದರೆ ಅಮೃತವೂ ವಿಷವೇ ಎಂಬ ಮಾತಿಗೆ ಸರಿಯಾದ ಉದಾಹರಣೆಯಿದು. ಅರಿಶಿನ ಎಂಬುದು ಆರೋಗ್ಯದ ವಿಚಾರದಲ್ಲಿ ಚಿನ್ನ ಹೌದೇ ಆದರೂ, ಅತಿಯಾದರೆ ಏನೇನು ಸಮಸ್ಯೆಗಳನ್ನು ತಂದೊಡ್ಡಬಹುದು ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ಅರಿಶಿನದ ಸಪ್ಲಿಮೆಂಟ್‌ಗಳನ್ನು ಉತ್ತಮ ಆರೋಗ್ಯಕ್ಕಾಗಿ ಎಂಬ ದೃಷ್ಟಿಯಿಂದ ತೆಗೆದುಕೊಳ್ಳುತ್ತಿದ್ದರೆ ಅದರಿಂದ ಪಿತ್ತಕೋಶಕ್ಕೆ ಸಮಸ್ಯೆಯಾಗಬಹುದು ಎಂದು ಇತ್ತೀಚೆಗಿನ ಸಮೀಕ್ಷೆಯೊಂದು ವರದಿ ಮಾಡಿದೆ. ಅರಿಶಿನ, ಗ್ರೀನ್‌ ಟೀ ಎಕ್‌ಟ್ರ್ಯಾಕ್ಟ್‌, ಅಶ್ವಗಂಧ, ಗಾರ್ಸಿನಿಯಾ ಕಾಂಬೋಜಿಯಾ ಇತ್ಯಾದಿಗಳ ಸಪ್ಲಿಮೆಂಟ್‌ಗಳನ್ನು (Herbal Supplement) ಇಂದು ವ್ಯಾಪಕವಾಗಿ ಅಮೆರಿಕವೂ ಸೇರಿದಂತೆ ವಿಶ್ವದೆಲ್ಲೆಡೆ ಜನರು ಸೇವಿಸುತ್ತಿದ್ದು, ಇದರ ಬಳಕೆ ಅನೇಕ ಆರೋಗ್ಯದ ಸಮಸ್ಯೆಗಳನ್ನು ಹುಟ್ಟುಹಾಕಬಹುದು ಎಂದು ವರದಿ ಹೇಳಿದೆ. ವೈದ್ಯರ ಸಲಹೆಯಿಲ್ಲದೆ, ನೇರವಾಗಿ ತಾವೇ ತಾವಾಗಿ ಇಂತಹ ಸಪ್ಲಿಮೆಂಟ್‌ಗಳನ್ನು ಬಳಸುವುದು ಸಾಮಾನ್ಯವಾಗಿದೆ. ಅಗತ್ಯವಿಲ್ಲದೆ ಇವುಗಳನ್ನು ಸೇವನೆ ಮಾಡುವುದರಿಂದ ಪಿತ್ತಕೋಶದ ಮೇಲೆ ಹೆಚ್ಚು ಒತ್ತಡ ಬೀಳುತ್ತದೆ. ಸಂಧಿವಾತದಂತಹ ಸಮಸ್ಯೆಗೆ ಅರಿಶಿನದ ಸಪ್ಲಿಮೆಂಟ್‌, ಶಕ್ತಿವರ್ಧನೆಗೆ ಗ್ರೀನ್‌ಟೀ ಸಪ್ಲಿಮೆಂಟ್‌, ಒತ್ತಡವನ್ನು ಕಡಿಮೆ ಮಾಡಲು ಅಶ್ವಗಂಧ, ತೂಕ ಇಳಿಕೆಗೆ ಗಾರ್ಸಿನಿಯಾ ಕಾಂಬೋಜಿಯಾ, ಹೃದಯದ ಆರೋಗ್ಯಕ್ಕೆ ಕೆಂಪು ಈಸ್ಟ್‌ ಅನ್ನ ಇತ್ಯಾದಿಗಳು ಇತ್ತೀಚೆಗೆ ಟ್ರೆಂಡ್‌ ಆಗುತ್ತಿದ್ದು, ಜನರು ವ್ಯಾಪಕವಾಗಿ ಬಳಸುತ್ತಿದ್ದಾರೆ. ಗ್ರೀನ್‌ಟೀ ಕುಡಿಯುವುದಕ್ಕೂ ಇದಕ್ಕೂ ಬಹಳ ವ್ಯತ್ಯಾಸವಿದೆ. ಇದು ಗ್ರೀನ್‌ ಟೀ ಎಕ್ಟ್ರ್ಯಾಕ್ಟ್‌ ಸಪ್ಲಿಮೆಂಟ್‌ ಕುರಿತಾಗಿದೆ ಎಂದು ಯುನಿವರ್ಸಿಟಿ ಆಫ್‌ ಮಿಚಿಗನ್‌ ತನ್ನ ವರದಿಯಲ್ಲಿ ಹೇಳಿದೆ.

gall bladder

ಪಿತ್ತಕೋಶಕ್ಕೆ ಹಾನಿ

ವರದಿಯಲ್ಲಿ ಇನ್ನೂ ಅನೇಕ ವಿವರಗಳೂ ಉಲ್ಲೇಖವಾಗಿವೆ. ಸಪ್ಲಿಮೆಂಟ್‌ಗಳಿಂದಾಗಿ ಪಿತ್ತಕೋಶಕ್ಕೆ ಹಾನಿಯಾಗುವುದು ಇದೇ ಮೊದಲಲ್ಲ. ಆದರೆ, ಇತ್ತೀಚೆಗಿನ ದಿನಗಳಲ್ಲಿ ಇವುಗಳ ಬಳಕೆ ಅಧಿಕವಾಗಿದೆ. ಅಗತ್ಯವಿಲ್ಲದಲ್ಲೂ ಆರೋಗ್ಯದ ನೆಪದಲ್ಲಿ ಅತಿಯಾಗಿ ಸೇವನೆ ಮಾಡುವುದು ಅಧಿಕವಾಗಿದೆ. ವೈದ್ಯರು ಸೂಚಿಸದೇ ಇದ್ದರೂ, ತಾವೇ ತಾವಾಗಿ ಕೊಂಡುಕೊಂಡು ನಿತ್ಯವೂ ಸೇವನೆ ಮಾಡುವುದರಿಂದ ದೇಹದ ಅಂಗಾಂಗಳ ಮೇಳೆ ಒತ್ತಡ ಬೀರುತ್ತದೆ. ಸಪ್ಲಿಮೆಂಟ್‌ಗಳ ಓವರ್‌ಡೋಸ್‌ ಆಗಿ, ಈ ಕಾರಣದಿಂದ ಆಸ್ಪತ್ರೆ ಸೇರುವ ಪ್ರಕರಣಗಳೂ ನಡೆದಿವೆ ಎಂದು ಅದು ಹೇಳಿದೆ.

ಇದನ್ನೂ ಓದಿ: Tea vs Coffee: ಟೀ ಒಳ್ಳೆಯದಾ ಕಾಫಿ ಒಳ್ಳೆಯದಾ? ಇಲ್ಲಿದೆ ಉತ್ತರ

ಅಡ್ಡ ಪರಿಣಾಮ

ಹರ್ಬಲ್‌ ಹೆಸರಿನಲ್ಲಿ ಇಂದು ಮಾರುಕಟ್ಟೆಗೆ ಬಗೆಬಗೆಯ ಸಪ್ಲಿಮೆಂಟ್‌ಗಳು ದಾಳಿ ಮಾಡುತ್ತಿದ್ದು, ಇದರಿಂದ ಹಲವು ಅಡ್ಡ ಪರಿಣಾಮಗಳೂ ಆಗುತ್ತಿವೆ. ಇದನ್ನು ತಿಳಿಯದೆ ಜನರು ಸೇವಿಸುತ್ತಿದ್ದಾರೆ. ವೈದ್ಯರ ನೆರವನ್ನೂ ಕೇಳುತ್ತಿಲ್ಲವಾದ್ದರಿಂದ, ಈ ಸಮಸ್ಯೆ ಉದ್ಭವಿಸಿದೆ ಎಂದು ಹೇಳಿದೆ. ಜೊತೆಗೆ, ಕೆಲವು ಹರ್ಬಲ್‌ ಪ್ರಾಡಕ್ಟ್‌ಗಳು ನಿಜಕ್ಕೂ ಉಪಯೋಗಕರವೇ ಆಗಿದ್ದರೂ, ಅದನ್ನು ಎಷ್ಟು, ಯಾವಾಗ ತೆಗೆದುಕೊಳ್ಳಬಹುದು ಎಂಬುದೂ ಸರಿಯಾಗಿ ತಿಳಿಯದೆ ಓವರ್‌ ಡೋಸ್‌ ಆಗುತ್ತಿದೆ. ಜನರು ಅಗತ್ಯವಿದ್ದರೆ, ವೈದ್ಯರ ಸಲಹೆಯನ್ನು ಪಡೆದುಕೊಂಡು ಸಪ್ಲಿಮೆಂಟ್‌ಗಳ ಮೊರೆ ಹೋಗಬೇಕು. ಅನಗತ್ಯ ಸಂದರ್ಭಗಳಲ್ಲಿ ಸೇವಿಸಬಾರದು. ದೇಹಕ್ಕೆ ಅತಿಯಾದರೆ ಆರೋಗ್ಯಕರವಾದ ಸಪ್ಲಿಮೆಂಟ್‌ಗಳೂ ಕೂಡಾ ತೊಂದರೆಯನ್ನೇ ಉಂಟು ಮಾಡಬಹುದು. ಹಾಗಾಗಿ ಈ ಬಗ್ಗೆ ಎಚ್ಚರ ಅಗತ್ಯ ಎಂದು ಅದು ಹೇಳಿದೆ.

Continue Reading

ಲೈಫ್‌ಸ್ಟೈಲ್

Tips For Parents: ಮಗುವಿಗೆ ಕನ್ನಡಕ ಬೇಕೆಂಬುದು ಪಾಲಕರಿಗೆ ತಿಳಿಯುವುದು ಹೇಗೆ?

Tips for Parents: ಮಕ್ಕಳಿಗೆ ದೃಷ್ಟಿ ಸಮಸ್ಯೆಯಿದೆ, ಕನ್ನಡದ ಅಗತ್ಯವಿದೆ ಎನ್ನುವುದೇ ಕೆಲವೊಮ್ಮೆ ಪಾಲಕರಿಗೆ ತಿಳಿಯುವುದಿಲ್ಲ. ತಮಗೇನಾಗುತ್ತಿದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಮಕ್ಕಳಿಗೆ ಆಗುವುದಿಲ್ಲ. ಇಂಥ ಪರಿಸ್ಥಿತಿಯಲ್ಲಿ ಮಕ್ಕಳಲ್ಲಿನ ಕಣ್ಣಿನ ತೊಂದರೆಯು ಪಾಲಕರ ಗಮನಕ್ಕೆ ಬರುವುದು ಹೇಗೆ? ಅದಕ್ಕೆ ಇಲ್ಲಿದೆ ಉತ್ತರ.

VISTARANEWS.COM


on

Koo

ಚಿಕ್ಕ ಮಕ್ಕಳ ಮುಖದ ಮೇಲೆ (Tips for Parents) ಕನ್ನಡಕ ಕಾಣುವುದು ಆಧುನಿಕ ಕಾಲದ ಸಾಮಾನ್ಯ ವಿಷಯಗಳಲ್ಲಿ ಒಂದು. ಅಗತ್ಯಕ್ಕಿಂತ ಎಷ್ಟೋಪಟ್ಟು ಅಧಿಕವಾಗಿ ಪರದೆಗೆ ಕಣ್ಣು ಕೀಲಿಸಿಕೊಂಡಿರುವುದಕ್ಕೆ ಮಕ್ಕಳ ಮುಗ್ಧ ಮುಖಕ್ಕೆ ʻಸುಲೋಚನʼ ಬರುವುದು ಮಾಮೂಲಿ ಎಂಬಂತಾಗಿದೆ. ಆದರೆ ಎಷ್ಟೋ ಬಾರಿ ಮಕ್ಕಳಿಗೆ ಕನ್ನಡದ ಅಗತ್ಯವಿದೆ, ದೃಷ್ಟಿ ಸಮಸ್ಯೆಯಿದೆ ಎನ್ನುವುದೇ ಪಾಲಕರಿಗೆ ತಿಳಿಯುವುದಿಲ್ಲ. ತಮಗೇನಾಗುತ್ತಿದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಮಕ್ಕಳಿಗೆ ಆಗುವುದಿಲ್ಲ. ಹಾಗಾಗಿ ಅವರ ವರ್ತನೆಯಲ್ಲಿ ಹಠ, ಅಳು, ಕಿರಿಕಿರಿಯಂಥವು ಕಾಣಬಹುದು. ತಮ್ಮ ಸಮಸ್ಯೆಯನ್ನು ಹೇಳಿಕೊಳ್ಳುವುದಕ್ಕೆ ತಿಳಿಯದ ಚಿಣ್ಣರು, ತಮಗೆ ತೋಚಿದಂತೆ ಅದನ್ನು ವ್ಯಕ್ತಪಡಿಸುತ್ತಾರಷ್ಟೆ. ಬೆಳೆಯುವ ವಯಸ್ಸಿನಲ್ಲಿ ಕಾಣಿಸಿಕೊಳ್ಳುವ ಈ ತೊಂದರೆಯನ್ನು ಶೀಘ್ರ ಚಿಕಿತ್ಸೆಗೆ ಒಳಪಡಿಸಿದರೆ, ಮಗುವಿಗೇ ಅನುಕೂಲ ತಾನೆ? ಆದರೆ ನಿತ್ಯದ ಬದುಕಿನಲ್ಲಿ ವ್ಯತ್ಯಾಸವಾಗುವಷ್ಟು ಢಾಳಾಗಿ ದೃಷ್ಟಿದೋಷಗಳು ಇರದಿದ್ದರೆ, ಅಲ್ಪಸ್ವಲ್ಪ ಕಣ್ಣಿನ ತೊಂದರೆಯು ಪಾಲಕರ ಗಮನಕ್ಕೆ ಬರುವುದು ಹೇಗೆ? ಇಂಥ ಕೆಲವು ಸೂಚನೆಗಳು ಮಕ್ಕಳಲ್ಲಿ ಕಾಣುವುದೇ ಎಂಬುದನ್ನು ಹೆತ್ತವರು, ಶಿಕ್ಷಕರು, ಪಾಲಕರು ಗಮನಿಸುವುದು ಅಗತ್ಯ.

Child at eye sight test. Kid at optitian. Eyewear for kids.

ಏಕಾಗ್ರತೆಯ ಕೊರತೆ

ಮಕ್ಕಳಲ್ಲಿ ಏಕಾಗ್ರತೆ ಇದ್ದರೆ ಅದೇ ದೊಡ್ಡ ವಿಷಯ! ಮರ್ಕಟನಂಥ ಮನಸ್ಸಿಗೆ ನೂರೆಂಟು ಕಡೆ ಹಾರುವ ಉತ್ಸಾಹ ಇರುವಾಗ, ಅದನ್ನು ಒಂದೆಡೆ ನಿಲ್ಲಿಸುವುದು ಕಷ್ಟವೇ. ಆದಾಗ್ಯೂ, ಆಯಾ ಮಕ್ಕಳ ನಿಗದಿತ ಮಟ್ಟಕ್ಕಿಂತಲೂ ಕಡಿಮೆ ಏಕಾಗ್ರತೆ ಇದ್ದರೆ, ಅದು ಸರಿಯಾಗಿ ಗೋಚರಿಸುತ್ತಿಲ್ಲ ಎನ್ನುವ ಕಾರಣಕ್ಕೂ ಇರಬಹುದು. ಹಾಗಾಗಿ ಅದರ ದೃಷ್ಟಿಯನ್ನೊಮ್ಮೆ ಪರಿಶೀಲಿಸಿ.

ಪಠ್ಯ ಚಟುವಟಿಕೆಯಲ್ಲಿ ತೊಂದರೆ

ಈವರೆಗಿನ ಶಾಲಾ ಚಟುವಟಿಕೆಗಳಿಗಿಂತ ಈಗೀಗಿನದ್ದು ಕಡಿಮೆಯಾಗಿದ್ದರೆ, ಮಗು ಪುಸ್ತಕದಲ್ಲಿ ಬರೆಯುವಾಗ ತಪ್ಪು ಮಾಡುವುದು ಹೆಚ್ಚಾದರೆ, ಶಾಲೆಯಲ್ಲಿ ಶಿಕ್ಷಕರು ಬೋರ್ಡ್‌ ಮೇಲೆ ಬರೆದಿದ್ದನ್ನು ಕಾಪಿ ಮಾಡಿಕೊಳ್ಳುವಾಗಲೂ ಮಗು ತಪ್ಪು ಮಾಡುತ್ತಿದ್ದರೆ, ಬೋರ್ಡಿನಲ್ಲಿದ್ದಿದ್ದನ್ನು ಅಳಿಸಬಾರದೆಂದು ಪದೇಪದೆ ಶಿಕ್ಷಕರನ್ನು ಒತ್ತಾಯಿಸುತ್ತಿದ್ದರೆ, ನೇತ್ರ ತಜ್ಞರಲ್ಲಿ ಮಗುವನ್ನು ಕರೆದೊಯ್ಯುವುದು ಸೂಕ್ತ.

kids headache

ತಲೆನೋವು

ಬೇರಾವುದೇ ಸಮಸ್ಯೆ ಇಲ್ಲದೆಯೂ ಆಗಾಗ ತಲೆನೋವಿನ ಬಾಧೆ ಇದ್ದರೆ, ಆಗಾಗ ಕಣ್ಣುಜ್ಜುತ್ತಿದ್ದರೆ, ಓದುವಾಗ ಮೆಳ್ಳೆಗಣ್ಣು ಅಥವಾ ಸಣ್ಣ ಕಣ್ಣು ಮಾಡುತ್ತಿದ್ದರೆ- ಇವೆಲ್ಲವೂ ದೃಷ್ಟಿ ದೋಷದ ಸಂಕೇತ ಆಗಿರಬಹುದು. ಹಾಗಾಗಿ ಇಂಥ ಲಕ್ಷಣಗಳನ್ನೂ ಗಮನಿಸಿ, ದೃಷ್ಟಿ ತಪಾಸಣೆಯನ್ನು ಮಾಡಿಸುವುದು ಒಳ್ಳೆಯದು.

ತಲೆ ಸೊಟ್ಟ ಮಾಡುವುದು

ಇಂಥ ಕೆಲವು ದೈಹಿಕ ಸ್ವರೂಪದ ಬದಲಾವಣೆಗಳು ಮಕ್ಕಳಲ್ಲಿ ಕಂಡರೆ ಹೆತ್ತವರು ಜಾಗ್ರತೆ ಮಾಡುವುದು ಕ್ಷೇಮ. ಓದುವಾಗ, ಬರೆಯುವಾಗ ಯಾವುದೋ ಒಂದು ಕೋನದಲ್ಲಿ, ಉಳಿದ ಕಡೆಗಿಂತ ದೃಷ್ಟಿ ಚೆನ್ನಾಗಿ ಗೋಚರಿಸುತ್ತದೆ ಎಂದಾದರೆ- ಅದಕ್ಕೆ ಪೂರಕವಾಗಿ ತಲೆ ಸೊಟ್ಟ ಮಾಡುವುದು, ಅದರಲ್ಲೂ ದೂರದ ವಸ್ತುಗಳನ್ನು ನೋಡುವುದಾಗ, ಅಂಗಡಿಗಳ ಫಲಕ ಓದುವಾಗ ಅವರು ಪಡುವ ಕಷ್ಟವು, ಅವರ ದೃಷ್ಟಿ ಸಮಸ್ಯೆಯತ್ತಲೇ ಬೆರಳು ಮಾಡುತ್ತದೆ.

kids eye pain

ಕಣ್ಣು ನೋವು

ಇದಂತೂ ನೇರವಾಗಿ ಕಣ್ಣಿನ ಸಮಸ್ಯೆಯನ್ನೇ ಪ್ರತಿನಿಧಿಸುತ್ತದೆ. ಇದರ ಜೊತೆಗೆ ತಲೆನೋವೂ ಇರಬಹುದು, ಹೊಟ್ಟೆ ತೊಳೆಸುವುದು, ವಾಂತಿಯಂಥ ಲಕ್ಷಣಗಳು ಕಂಡರೆ ವೈದ್ಯರ ದರ್ಶನ ಅಗತ್ಯ. ಸರಿಯಾಗಿ ಗೋಚರಿಸದೆ ಇದ್ದಾಗ, ಕಣ್ಣುಗಳ ಮೇಲೆ ಬೀಳುವ ಅಧಿಕ ಒತ್ತಡದಿಂದ ಉಂಟಾಗುವಂಥ ಸಮಸ್ಯೆಗಳು ಇವೆಲ್ಲ.

ಹತ್ತಿರ ಹಿಡಿಯುವುದು

ಪುಸ್ತಕವನ್ನು ಹತ್ತಿರಕ್ಕೆ ಹಿಡಿದು ಓದುವುದು, ಮೊಬೈಲ್‌ ಅಥವಾ ಟ್ಯಾಬ್‌ಗಳನ್ನು ಮುಖದ ಸಮೀಪಕ್ಕೆ ತಂದುಕೊಳ್ಳುವುದು ಇಲ್ಲವೇ ಅವುಗಳಲ್ಲಿನ ಅಕ್ಷರಗಳನ್ನು ಹಿಗ್ಗಿಸಿ ದೊಡ್ಡದು ಮಾಡಿಕೊಳ್ಳುವುದು, ಟಿವಿ ನೋಡುವಾಗ ಮುಂದೆ ಹೋಗಿ ನಿಂತುಕೊಳ್ಳುವುದು- ಇವೆಲ್ಲವೂ ಕಣ್ಣಿನ ತೊಂದರೆ ಇರಬಹುದೆಂಬ ಸೂಚನೆಗಳು. ಇಂಥವನ್ನು ತಮಗರಿವಿಲ್ಲದಂತೆಯೇ ಮಕ್ಕಳು ಮಾಡುತ್ತಿರುತ್ತಾರೆ.

ಇದನ್ನೂ ಓದಿ: Nita Ambani Beauty Secrets: ನೀತಾ ಅಂಬಾನಿ ನಿತ್ಯವೂ ಕುಡಿಯುವ ಆರೋಗ್ಯಕರ ಮ್ಯಾಜಿಕ್‌ ಡ್ರಿಂಕ್‌ ಯಾವುದು ಗೊತ್ತೇ? ನಾವೂ ಕುಡಿಯಬಹುದು!

ವರ್ತನೆಯಲ್ಲಿನ ಬದಲಾವಣೆ

ಇದ್ದಕ್ಕಿದ್ದಂತೆ ಅಳು, ಹಠ, ಕಿರಿಕಿರಿ, ಕೋಪ ಮಾಡಿಕೊಳ್ಳುವುದು, ಶಾಲೆಯ ಬಗ್ಗೆ ಮುನಿಸು, ಓದುವ ವಿಷಯದಲ್ಲಿ ಅಸಹನೆ- ಇಂಥವೆಲ್ಲ ದೃಷ್ಟಿ ಸರಿಯಾಗಿರದ ಕಾರಣ ತೋರುವ ಹತಾಶೆ ವರ್ತನೆಗಳಿರಬಹುದು. ಮಗುವನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವಳು/ನು ಹೀಗೇಕೆ ಮಾಡುತ್ತಿದ್ದಾರೆಂಬುದನ್ನು ತಿಳಿಯಿರಿ. ಸರಿಯಾಗಿ ಕಾಣಿಸುತ್ತಿಲ್ಲ ಎಂದಾದರೆ ನೇತ್ರ ತಜ್ಞರಲ್ಲಿ ಕರೆದೊಯ್ಯಿರಿ.

Continue Reading
Advertisement
Oats or Quinoa
ಆರೋಗ್ಯ33 mins ago

Oats or Quinoa: ಓಟ್ಸ್‌, ಕಿನೊವಾ- ಇವೆರೆಡರಲ್ಲಿ ಯಾವುದು ಬೆಸ್ಟ್?

Waqf Bill
ದೇಶ55 mins ago

Waqf Bill: ವಕ್ಫ್‌ ಕಾಯ್ದೆಗೆ ತಿದ್ದುಪಡಿ; 21 ಸದಸ್ಯರ ಸಮಿತಿ ರಚಿಸಿದ ಕೇಂದ್ರ, ಓವೈಸಿ, ತೇಜಸ್ವಿ ಸೂರ್ಯಗೆ ಸ್ಥಾನ

Neeraj Chopra
ಕ್ರೀಡೆ55 mins ago

Neeraj Chopra : ವಿನೇಶ್ ಪೋಗಟ್​​ಗೆ ಅನರ್ಹತೆ ಬಗ್ಗೆ ಮಾತನಾಡಿದ ನೀರಜ್ ಚೋಪ್ರಾ; ಏನಂದ್ರು ಅವರು?

LOve case
ಬಾಗಲಕೋಟೆ60 mins ago

Love Case : ಮದುವೆಗೆ ಪೋಷಕರ ವಿರೋಧ; ಮರಕ್ಕೆ ನೇಣು ಬಿಗಿದುಕೊಂಡು ಪ್ರೇಮಿಗಳು ಆತ್ಮಹತ್ಯೆ

Muda Scam
ಪ್ರಮುಖ ಸುದ್ದಿ1 hour ago

Muda Scam: ಸಿಎಂ ವಿರುದ್ಧದ ಖಾಸಗಿ ದೂರಿನ ಅರ್ಜಿ ವಿಚಾರಣೆ; ಆ.13ಕ್ಕೆ ಆದೇಶ ಕಾಯ್ದಿರಿಸಿದ ಕೋರ್ಟ್‌

Israel-Hamas War
ವಿದೇಶ1 hour ago

Israel-Hamas War: ಪುತ್ರರ ವೀರ್ಯವನ್ನು ಸಂಗ್ರಹಿಸಿಡುತ್ತಿರುವ ಇಸ್ರೇಲ್ ಪೋಷಕರು! ಯಾಕೆ ಹೀಗೆ?

Karnataka Nataka Akademi Award
ಉತ್ತರ ಕನ್ನಡ2 hours ago

Karnataka Nataka Akademi Award: ಉ.ಕ ಜಿಲ್ಲೆಯ ಮೂವರು ಕಲಾವಿದರಿಗೆ ಕರ್ನಾಟಕ ನಾಟಕ ಅಕಾಡೆಮಿ ವಾರ್ಷಿಕ ಪ್ರಶಸ್ತಿ

Duniya Vijay bheema movie review
ಸ್ಯಾಂಡಲ್ ವುಡ್2 hours ago

Duniya Vijay: ಹೇಗಿದೆ ‘ಭೀಮ’ ಸಿನಿಮಾ? ಪ್ರೇಕ್ಷಕರು ಹೇಳೋದೇನು?

Bengaluru power cut
ಬೆಂಗಳೂರು2 hours ago

Bengaluru Power Cut: ಆ.11ರಂದು ಬೆಂಗಳೂರಿನ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ

Kannada New Movie
ಬೆಂಗಳೂರು2 hours ago

Kannada New Movie: ‘ಕೇದಾರ್ ನಾಥ್ ಕುರಿಫಾರಂ’ ಚಿತ್ರದ ಟ್ರೇಲರ್, ಹಾಡುಗಳು ರಿಲೀಸ್‌

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka Weather Forecast
ಮಳೆ1 day ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ1 day ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ1 day ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು3 days ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ3 days ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ5 days ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ6 days ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ1 week ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ1 week ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ1 week ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

ಟ್ರೆಂಡಿಂಗ್‌