Tips For Rainy Season: ಮಳೆಗಾಲದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವುದು ಹೇಗೆ? - Vistara News

ಆರೋಗ್ಯ

Tips For Rainy Season: ಮಳೆಗಾಲದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವುದು ಹೇಗೆ?

ಹೊರಗೆ ಮೋಡ ಕಟ್ಟಿದಂತೆಯೇ ಒಳಗೆ ಮೂಗು ಕಟ್ಟಿ, ಹೊರಗಿನಂತೆ ಒಳಗೂ ಧಾರಾಕಾರ ಹರಿದು, ಗುಡುಗು-ಸಿಡಿಲಿನಂತೆ ಕೆಮ್ಮು ಪ್ರಾರಂಭವಾದರೆ- ಮಳೆಯನ್ನು ಪ್ರೀತಿಸಲು ಹೇಗೆ ಸಾಧ್ಯ? ಮಳೆಗಾಲದ ಸೋಂಕುಗಳನ್ನು ದೂರ ಇರಿಸುವುದಕ್ಕೆ ಎಂಥ ಆಹಾರ ಒಳ್ಳೆಯದು? ಈ ಲೇಖನ (Tips For Rainy Season) ಓದಿ.

VISTARANEWS.COM


on

Tips For Rainy Season
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮುಂಗಾರು ಚುರುಕಾಗುತ್ತಿದೆ. ಮಳೆಗಾಲವನ್ನು ಸಿಕ್ಕಾಪಟ್ಟೆ ಪ್ರೀತಿಸುವವರು ಇದ್ದಷ್ಟೇ ಮುಖ ಹಿಂಡುವವರೂ ಇದ್ದಾರೆ. ಇದಕ್ಕೆ ಕಾರಣಗಳು ಬಹಳಷ್ಟಿದ್ದರೂ, ಈ ಒದ್ದೆ-ಥಂಡಿ-ಶೀತದ ದಿನಗಳಲ್ಲಿ ಕಾಡುವ ಸೋಂಕುಗಳು ಅವುಗಳಲ್ಲಿ ಒಂದು ಪ್ರಮುಖ ಕಾರಣ. ಹೊರಗೆ ಮೋಡ ಕಟ್ಟಿದಂತೆಯೇ ಒಳಗೆ ಮೂಗು ಕಟ್ಟಿ, ಹೊರಗಿನಂತೆ ಒಳಗೂ ಧಾರಾಕಾರ ಹರಿದು, ಗುಡುಗು-ಸಿಡಿಲಿನಂತೆ ಕೆಮ್ಮು ಪ್ರಾರಂಭವಾದರೆ- ಮಳೆಯನ್ನು ಪ್ರೀತಿಸಲು ಹೇಗೆ ಸಾಧ್ಯ? ರೋಗಾಣುಗಳನ್ನು ತಡೆಯಲು ಸಾಧ್ಯವಿಲ್ಲದಿದ್ದರೂ, ನಮ್ಮ ದೇಹವನ್ನು ಸದೃಢವಾಗಿ ಇರಿಸಿಕೊಳ್ಳಬಹುದಲ್ಲ. ರೋಗ ನಿರೋಧಕ ಶಕ್ತಿಗೆ ಬಲ ಬರುವುದೇ ನಮ್ಮ ಆಹಾರದಿಂದ. ಸೋಂಕು ದೂರ ಇರಿಸುವುದಕ್ಕೆ (Tips For Rainy Season) ಎಂಥ ಆಹಾರ ಒಳ್ಳೆಯದು?

Vitamin C foods

ವಿಟಮಿನ್‌ ಸಿ ಆಹಾರಗಳು

ದೇಹದ ರೋಗ ನಿರೋಧಕ ಶಕ್ತಿಯನ್ನು ಉದ್ದೀಪಿಸುವಲ್ಲಿ ಸಿ ಜೀವಸತ್ವ ಪ್ರಧಾನವಾಗಿ ಬೇಕು. ಅದರಲ್ಲೂ ನೆಗಡಿ, ಕೆಮ್ಮು, ಜ್ವರದಂಥ ಮಳೆಗಾಲದ ಸೋಂಕು ರೋಗಗಳನ್ನು ದೂರ ಇಡುವುದಕ್ಕೆ ವಿಟಮಿನ್‌ ಸಿ ಅಗತ್ಯವಾಗಿ ಬೇಕು. ಹಾಗಾಗಿ ಕಿತ್ತಳೆ, ನಿಂಬೆ, ದಾಳಿಂಬೆ, ಪಪ್ಪಾಯ, ಪೇರಳೆ, ಬ್ರೊಕೊಲಿ, ದಪ್ಪಮೆಣಸು, ಮೊಳಕೆ ಕಟ್ಟಿದ ಕಾಳುಗಳನ್ನು ತಪ್ಪದೆ ಆಹಾರದಲ್ಲಿ ಸೇರಿಸಿಕೊಳ್ಳಬೇಕು.

ginger

ಶುಂಠಿ

ಇದಕ್ಕೆ ಹಲವಾರು ಔಷಧೀಯ ಗುಣಗಳಿವೆ. ಅದರಲ್ಲೂ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ, ಬ್ಯಾಕ್ಟೀರಿಯ ನಿರೋಧಕ ಮತ್ತು ಉರಿಯೂತ ಶಾಮಕ ಗುಣಗಳು ಇದರಲ್ಲಿ ಧಾರಾಳವಾಗಿವೆ. ಕೆಮ್ಮು, ನೆಗಡಿ, ಕಫದಂಥ ಸಮಸ್ಯೆಗಳಿಗೆ ಶುಂಠಿ ಚಹಾ, ಶುಂಠಿ ಕಷಾಯಗಳು ಉಪಶಮನ ನೀಡಬಲ್ಲವು. ಗಂಟಲು ಕಟ್ಟಿದ್ದರೆ, ಗಂಟಲಲ್ಲಿ ನೋವಿದ್ದರೆ ಬೆಚ್ಚಗಿನ ಶುಂಠಿಯ ಕಷಾಯಕ್ಕೆ ಕೊಂಚ ಜೇನುತುಪ್ಪ ಸೇರಿಸಿ ಕುಡಿದರೆ ಆರಾಮ ದೊರೆತೀತು.

iamge of Zinc Foods

ಜಿಂಕ್‌ ಆಹಾರಗಳು

ನಮ್ಮ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಸತುವಿನಂಶ ಇರುವ ಆಹಾರಗಳು ಸಹ ಅಗತ್ಯ. ಇದನ್ನು ಸಿ ಜೀವಸತ್ವದಂತೆ ಹೇರಳವಾಗಿ ಪಡೆಯಲಾಗದು. ಬದಲಿಗೆ, ಹಲವಾರು ಆಹಾರಗಳಿಂದ ಮಿಲಿ ಗ್ರಾಂ ಗಳ ಲೆಕ್ಕದಲ್ಲಿಯೇ ಪಡೆಯಬೇಕು ನಾವು. ಇದಕ್ಕಾಗಿ ಅಣಬೆಗಳು, ಪಾಲಕ್‌ ಸೊಪ್ಪು, ದ್ವಿದಳ ಧಾನ್ಯಗಳು, ಮೊಸರು, ಹಾಲು, ಗೋಡಂಬಿ, ಕುಂಬಳಕಾಯಿ ಬೀಜ, ಶೇಂಗಾ, ಬಾದಾಮಿಯಂಥ ಆಹಾರಗಳ ಮೂಲಕ ಈ ಸತ್ವವನ್ನು ಪಡೆಯಬಹುದು.

ಒಮೇಗಾ 3 ಕೊಬ್ಬಿನಾಮ್ಲ

ಇದು ನಮ್ಮ ಮೆದುಳು ಮತ್ತು ಹೃದಯದ ಯೋಗಕ್ಷೇಮ ನೋಡಿಕೊಳ್ಳುವುದಷ್ಟೇ ಅಲ್ಲ, ಸೋಂಕುಗಳನ್ನು ದೂರ ಮಾಡುವ ಸಾಮರ್ಥ್ಯವನ್ನೂ ಹೊಂದಿದೆ. ಇದಕ್ಕಾಗಿ ಮಳೆಗಾಲದ ಆರಂಭದಲ್ಲಿ ದೊರೆಯುವ ಬೆಣ್ಣೆ ಹಣ್ಣುಗಳನ್ನು ಯಥೇಚ್ಛವಾಗಿ ಸೇವಿಸಿ. ಜೊತೆಗೆ ವಾಲ್‌ನಟ್‌, ಬಾದಾಮಿ, ಅಗಸೆಬೀಜ, ಕೊಬ್ಬಿರುವ ಮೀನುಗಳನ್ನು ಸೇವಿಸುವುದರಿಂದ ಒಮೇಗಾ ೩ ಕೊಬ್ಬಿನಾಮ್ಲ ವಿಫುಲವಾಗಿ ಲಭಿಸುತ್ತದೆ.

Probiotic foods

ಪ್ರೊಬಯಾಟಿಕ್‌ ಆಹಾರಗಳು

ನಮ್ಮ ಜೀರ್ಣಾಂಗಗಳ ಆರೋಗ್ಯ ಚೆನ್ನಾಗಿದ್ದರೆ ಮಾತ್ರವೇ ದೇಹದ ಪ್ರತಿರೋಧಕ ಶಕ್ತಿ ಬಲವಾಗಿರುತ್ತದೆ. ಜೀರ್ಣಾಂಗಗಳಲ್ಲಿ ಒಳ್ಳೆಯ ಬ್ಯಾಕ್ಟೀರಿಯಗಳ ಸಂಖ್ಯೆ ಭರಪೂರ ಇದ್ದಷ್ಟೂ ದೇಹ ರೋಗಮುಕ್ತವಾಗಿರುತ್ತದೆ ಎನ್ನುತ್ತವೆ ಅ‍ಧ್ಯಯನಗಳು. ಹಾಗಾಗಿ ಪ್ರೊಬಯಾಟಿಕ್‌ ಆಹಾರಗಳು ನಮ್ಮ ದೇಹಕ್ಕೆ ಬೇಕೇಬೇಕು. ಇದಕ್ಕಾಗಿ ಮೊಸರು, ಮಜ್ಜಿಗೆಯಂಥ ಹುದುಗು ಬರಿಸಿದ ಆಹಾರಗಳನ್ನು ಪ್ರತಿದಿನ ಸೇವಿಸಿ.

infusions

ಕಷಾಯಗಳು

ಶೀತದ ದಿನಗಳಲ್ಲಿ ದೇಹವನ್ನು ಬೆಚ್ಚಗೆ ಇರಿಸಿಕೊಳ್ಳುವುದಕ್ಕೆ ತರಹೇವಾರಿ ಕಷಾಯಗಳನ್ನು ಮಾಡಿಕೊಳ್ಳಬಹುದು. ಇದರಿಂದಲೂ ನಮ್ಮ ದೇಹದ ಸೋಂಕು ನಿರೋಧಕ ಶಕ್ತಿ ಪ್ರಬಲವಾಗುತ್ತದೆ. ಇದಕ್ಕಾಗಿ ಯಾವೆಲ್ಲ ವಸ್ತುಗಳನ್ನು ಉಪಯೋಗಿಸಬಹುದು ಎನ್ನುವುದಕ್ಕೆ ಉಪಯುಕ್ತ ವಿವರಗಳು ಇಲ್ಲಿವೆ. ಈ ಯಾವುದೇ ವಸ್ತುಗಳನ್ನು ಬಳಸಿ ಕಷಾಯ ಮಾಡಿಕೊಳ್ಳಬಹುದು.

Raw Turmeric with Powder Cutout

ಅರಿಶಿನ

ಇದರಲ್ಲಿರುವ ಕರ್ಕುಮಿನ್‌ ಎಂಬ ಪ್ರಬಲ ಉತ್ಕರ್ಷಣ ನಿರೋಧಕವು ಸೋಂಕುಗಳನ್ನು ಹೊಡೆದೋಡಿಸುತ್ತದೆ

Benefits Of Ginger

ಶುಂಠಿ

ಇದರ ಜಿಂಜರಾಲ್‌ ಅಂಶದಲ್ಲಿ ಉರಿಯೂತ ಶಮನ ಮಾಡಿ, ಪ್ರತಿರೋಧಕ ಶಕ್ತಿ ಹೆಚ್ಚಿಸುತ್ತದೆ

Garlic

ಬೆಳ್ಳುಳ್ಳಿ

ಇದರ ಅಲ್ಲಿಸಿನ್‌ ಅಂಶದಲ್ಲಿ ವೈರಸ್‌ ಮತ್ತು ಬ್ಯಾಕ್ಟೀರಿಯ ನಿರೋಧಕ ಗುಣವಿದೆ

Cinnamon sticks Anti Infective Foods

ದಾಲ್ಚಿನ್ನಿ ಚಕ್ಕೆ

ಇದರಲ್ಲಿರುವ ಉರಿಯೂತ ಶಾಮಕ ಸತ್ವಗಳು ರೋಗನಿರೋಧಕವೂ ಹೌದು

black pepper

ಕಾಳು ಮೆಣಸು

ಇದರ ಕ್ಯಾಪ್ಸೈಸಿನ್‌ನಲ್ಲಿ ದೇಹದ ಪ್ರತಿರೋಧಕತೆಯನ್ನು ವೃದ್ಧಿಸುವ ಸಾಮರ್ಥ್ಯವಿದೆ

cumin

ಜೀರಿಗೆ

ಇದರ ಉತ್ಕರ್ಷಣ ನಿರೋಧಕಗಳು ಸೋಂಕಗಳ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ಹೆಚ್ಚಿಸುತ್ತವೆ

coriander Coriander Benefits

ಧನಿಯ

ಇದರ ಉತ್ಕರ್ಷಣ ನಿರೋಧಕ ಸತ್ವಗಳು ಸೋಂಕುಗಳನ್ನು ನಿವಾರಿಸುತ್ತವೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

Herbal Supplement: ಅರಿಶಿನ ಸೇರಿದಂತೆ ಹರ್ಬಲ್‌ ಸಪ್ಲಿಮೆಂಟ್‌ ಸೇವಿಸುತ್ತಿದ್ದೀರಾ? ಹಾಗಾದರೆ ಎಚ್ಚರ!

Herbal supplement: ಅರಿಶಿನ ಎಂಬುದು ಆರೋಗ್ಯದ ವಿಚಾರದಲ್ಲಿ ಚಿನ್ನ ಹೌದೇ ಆದರೂ, ಅತಿಯಾದರೆ ಏನೇನು ಸಮಸ್ಯೆಗಳನ್ನು ತಂದೊಡ್ಡಬಹುದು ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ಅರಿಶಿನದ ಸಪ್ಲಿಮೆಂಟ್‌ಗಳನ್ನು ಉತ್ತಮ ಆರೋಗ್ಯಕ್ಕಾಗಿ ಎಂಬ ದೃಷ್ಟಿಯಿಂದ ತೆಗೆದುಕೊಳ್ಳುತ್ತಿದ್ದರೆ ಅದರಿಂದ ಪಿತ್ತಕೋಶಕ್ಕೆ ಸಮಸ್ಯೆಯಾಗಬಹುದು ಎಂದು ಇತ್ತೀಚೆಗಿನ ಸಮೀಕ್ಷೆಯೊಂದು ವರದಿ ಮಾಡಿದೆ.

VISTARANEWS.COM


on

Herbal Supplement
Koo

ಅತಿಯಾದರೆ ಅಮೃತವೂ ವಿಷವೇ ಎಂಬ ಮಾತಿಗೆ ಸರಿಯಾದ ಉದಾಹರಣೆಯಿದು. ಅರಿಶಿನ ಎಂಬುದು ಆರೋಗ್ಯದ ವಿಚಾರದಲ್ಲಿ ಚಿನ್ನ ಹೌದೇ ಆದರೂ, ಅತಿಯಾದರೆ ಏನೇನು ಸಮಸ್ಯೆಗಳನ್ನು ತಂದೊಡ್ಡಬಹುದು ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ಅರಿಶಿನದ ಸಪ್ಲಿಮೆಂಟ್‌ಗಳನ್ನು ಉತ್ತಮ ಆರೋಗ್ಯಕ್ಕಾಗಿ ಎಂಬ ದೃಷ್ಟಿಯಿಂದ ತೆಗೆದುಕೊಳ್ಳುತ್ತಿದ್ದರೆ ಅದರಿಂದ ಪಿತ್ತಕೋಶಕ್ಕೆ ಸಮಸ್ಯೆಯಾಗಬಹುದು ಎಂದು ಇತ್ತೀಚೆಗಿನ ಸಮೀಕ್ಷೆಯೊಂದು ವರದಿ ಮಾಡಿದೆ. ಅರಿಶಿನ, ಗ್ರೀನ್‌ ಟೀ ಎಕ್‌ಟ್ರ್ಯಾಕ್ಟ್‌, ಅಶ್ವಗಂಧ, ಗಾರ್ಸಿನಿಯಾ ಕಾಂಬೋಜಿಯಾ ಇತ್ಯಾದಿಗಳ ಸಪ್ಲಿಮೆಂಟ್‌ಗಳನ್ನು (Herbal Supplement) ಇಂದು ವ್ಯಾಪಕವಾಗಿ ಅಮೆರಿಕವೂ ಸೇರಿದಂತೆ ವಿಶ್ವದೆಲ್ಲೆಡೆ ಜನರು ಸೇವಿಸುತ್ತಿದ್ದು, ಇದರ ಬಳಕೆ ಅನೇಕ ಆರೋಗ್ಯದ ಸಮಸ್ಯೆಗಳನ್ನು ಹುಟ್ಟುಹಾಕಬಹುದು ಎಂದು ವರದಿ ಹೇಳಿದೆ. ವೈದ್ಯರ ಸಲಹೆಯಿಲ್ಲದೆ, ನೇರವಾಗಿ ತಾವೇ ತಾವಾಗಿ ಇಂತಹ ಸಪ್ಲಿಮೆಂಟ್‌ಗಳನ್ನು ಬಳಸುವುದು ಸಾಮಾನ್ಯವಾಗಿದೆ. ಅಗತ್ಯವಿಲ್ಲದೆ ಇವುಗಳನ್ನು ಸೇವನೆ ಮಾಡುವುದರಿಂದ ಪಿತ್ತಕೋಶದ ಮೇಲೆ ಹೆಚ್ಚು ಒತ್ತಡ ಬೀಳುತ್ತದೆ. ಸಂಧಿವಾತದಂತಹ ಸಮಸ್ಯೆಗೆ ಅರಿಶಿನದ ಸಪ್ಲಿಮೆಂಟ್‌, ಶಕ್ತಿವರ್ಧನೆಗೆ ಗ್ರೀನ್‌ಟೀ ಸಪ್ಲಿಮೆಂಟ್‌, ಒತ್ತಡವನ್ನು ಕಡಿಮೆ ಮಾಡಲು ಅಶ್ವಗಂಧ, ತೂಕ ಇಳಿಕೆಗೆ ಗಾರ್ಸಿನಿಯಾ ಕಾಂಬೋಜಿಯಾ, ಹೃದಯದ ಆರೋಗ್ಯಕ್ಕೆ ಕೆಂಪು ಈಸ್ಟ್‌ ಅನ್ನ ಇತ್ಯಾದಿಗಳು ಇತ್ತೀಚೆಗೆ ಟ್ರೆಂಡ್‌ ಆಗುತ್ತಿದ್ದು, ಜನರು ವ್ಯಾಪಕವಾಗಿ ಬಳಸುತ್ತಿದ್ದಾರೆ. ಗ್ರೀನ್‌ಟೀ ಕುಡಿಯುವುದಕ್ಕೂ ಇದಕ್ಕೂ ಬಹಳ ವ್ಯತ್ಯಾಸವಿದೆ. ಇದು ಗ್ರೀನ್‌ ಟೀ ಎಕ್ಟ್ರ್ಯಾಕ್ಟ್‌ ಸಪ್ಲಿಮೆಂಟ್‌ ಕುರಿತಾಗಿದೆ ಎಂದು ಯುನಿವರ್ಸಿಟಿ ಆಫ್‌ ಮಿಚಿಗನ್‌ ತನ್ನ ವರದಿಯಲ್ಲಿ ಹೇಳಿದೆ.

gall bladder

ಪಿತ್ತಕೋಶಕ್ಕೆ ಹಾನಿ

ವರದಿಯಲ್ಲಿ ಇನ್ನೂ ಅನೇಕ ವಿವರಗಳೂ ಉಲ್ಲೇಖವಾಗಿವೆ. ಸಪ್ಲಿಮೆಂಟ್‌ಗಳಿಂದಾಗಿ ಪಿತ್ತಕೋಶಕ್ಕೆ ಹಾನಿಯಾಗುವುದು ಇದೇ ಮೊದಲಲ್ಲ. ಆದರೆ, ಇತ್ತೀಚೆಗಿನ ದಿನಗಳಲ್ಲಿ ಇವುಗಳ ಬಳಕೆ ಅಧಿಕವಾಗಿದೆ. ಅಗತ್ಯವಿಲ್ಲದಲ್ಲೂ ಆರೋಗ್ಯದ ನೆಪದಲ್ಲಿ ಅತಿಯಾಗಿ ಸೇವನೆ ಮಾಡುವುದು ಅಧಿಕವಾಗಿದೆ. ವೈದ್ಯರು ಸೂಚಿಸದೇ ಇದ್ದರೂ, ತಾವೇ ತಾವಾಗಿ ಕೊಂಡುಕೊಂಡು ನಿತ್ಯವೂ ಸೇವನೆ ಮಾಡುವುದರಿಂದ ದೇಹದ ಅಂಗಾಂಗಳ ಮೇಳೆ ಒತ್ತಡ ಬೀರುತ್ತದೆ. ಸಪ್ಲಿಮೆಂಟ್‌ಗಳ ಓವರ್‌ಡೋಸ್‌ ಆಗಿ, ಈ ಕಾರಣದಿಂದ ಆಸ್ಪತ್ರೆ ಸೇರುವ ಪ್ರಕರಣಗಳೂ ನಡೆದಿವೆ ಎಂದು ಅದು ಹೇಳಿದೆ.

ಇದನ್ನೂ ಓದಿ: Tea vs Coffee: ಟೀ ಒಳ್ಳೆಯದಾ ಕಾಫಿ ಒಳ್ಳೆಯದಾ? ಇಲ್ಲಿದೆ ಉತ್ತರ

ಅಡ್ಡ ಪರಿಣಾಮ

ಹರ್ಬಲ್‌ ಹೆಸರಿನಲ್ಲಿ ಇಂದು ಮಾರುಕಟ್ಟೆಗೆ ಬಗೆಬಗೆಯ ಸಪ್ಲಿಮೆಂಟ್‌ಗಳು ದಾಳಿ ಮಾಡುತ್ತಿದ್ದು, ಇದರಿಂದ ಹಲವು ಅಡ್ಡ ಪರಿಣಾಮಗಳೂ ಆಗುತ್ತಿವೆ. ಇದನ್ನು ತಿಳಿಯದೆ ಜನರು ಸೇವಿಸುತ್ತಿದ್ದಾರೆ. ವೈದ್ಯರ ನೆರವನ್ನೂ ಕೇಳುತ್ತಿಲ್ಲವಾದ್ದರಿಂದ, ಈ ಸಮಸ್ಯೆ ಉದ್ಭವಿಸಿದೆ ಎಂದು ಹೇಳಿದೆ. ಜೊತೆಗೆ, ಕೆಲವು ಹರ್ಬಲ್‌ ಪ್ರಾಡಕ್ಟ್‌ಗಳು ನಿಜಕ್ಕೂ ಉಪಯೋಗಕರವೇ ಆಗಿದ್ದರೂ, ಅದನ್ನು ಎಷ್ಟು, ಯಾವಾಗ ತೆಗೆದುಕೊಳ್ಳಬಹುದು ಎಂಬುದೂ ಸರಿಯಾಗಿ ತಿಳಿಯದೆ ಓವರ್‌ ಡೋಸ್‌ ಆಗುತ್ತಿದೆ. ಜನರು ಅಗತ್ಯವಿದ್ದರೆ, ವೈದ್ಯರ ಸಲಹೆಯನ್ನು ಪಡೆದುಕೊಂಡು ಸಪ್ಲಿಮೆಂಟ್‌ಗಳ ಮೊರೆ ಹೋಗಬೇಕು. ಅನಗತ್ಯ ಸಂದರ್ಭಗಳಲ್ಲಿ ಸೇವಿಸಬಾರದು. ದೇಹಕ್ಕೆ ಅತಿಯಾದರೆ ಆರೋಗ್ಯಕರವಾದ ಸಪ್ಲಿಮೆಂಟ್‌ಗಳೂ ಕೂಡಾ ತೊಂದರೆಯನ್ನೇ ಉಂಟು ಮಾಡಬಹುದು. ಹಾಗಾಗಿ ಈ ಬಗ್ಗೆ ಎಚ್ಚರ ಅಗತ್ಯ ಎಂದು ಅದು ಹೇಳಿದೆ.

Continue Reading

ಲೈಫ್‌ಸ್ಟೈಲ್

Tips For Parents: ಮಗುವಿಗೆ ಕನ್ನಡಕ ಬೇಕೆಂಬುದು ಪಾಲಕರಿಗೆ ತಿಳಿಯುವುದು ಹೇಗೆ?

Tips for Parents: ಮಕ್ಕಳಿಗೆ ದೃಷ್ಟಿ ಸಮಸ್ಯೆಯಿದೆ, ಕನ್ನಡದ ಅಗತ್ಯವಿದೆ ಎನ್ನುವುದೇ ಕೆಲವೊಮ್ಮೆ ಪಾಲಕರಿಗೆ ತಿಳಿಯುವುದಿಲ್ಲ. ತಮಗೇನಾಗುತ್ತಿದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಮಕ್ಕಳಿಗೆ ಆಗುವುದಿಲ್ಲ. ಇಂಥ ಪರಿಸ್ಥಿತಿಯಲ್ಲಿ ಮಕ್ಕಳಲ್ಲಿನ ಕಣ್ಣಿನ ತೊಂದರೆಯು ಪಾಲಕರ ಗಮನಕ್ಕೆ ಬರುವುದು ಹೇಗೆ? ಅದಕ್ಕೆ ಇಲ್ಲಿದೆ ಉತ್ತರ.

VISTARANEWS.COM


on

Koo

ಚಿಕ್ಕ ಮಕ್ಕಳ ಮುಖದ ಮೇಲೆ (Tips for Parents) ಕನ್ನಡಕ ಕಾಣುವುದು ಆಧುನಿಕ ಕಾಲದ ಸಾಮಾನ್ಯ ವಿಷಯಗಳಲ್ಲಿ ಒಂದು. ಅಗತ್ಯಕ್ಕಿಂತ ಎಷ್ಟೋಪಟ್ಟು ಅಧಿಕವಾಗಿ ಪರದೆಗೆ ಕಣ್ಣು ಕೀಲಿಸಿಕೊಂಡಿರುವುದಕ್ಕೆ ಮಕ್ಕಳ ಮುಗ್ಧ ಮುಖಕ್ಕೆ ʻಸುಲೋಚನʼ ಬರುವುದು ಮಾಮೂಲಿ ಎಂಬಂತಾಗಿದೆ. ಆದರೆ ಎಷ್ಟೋ ಬಾರಿ ಮಕ್ಕಳಿಗೆ ಕನ್ನಡದ ಅಗತ್ಯವಿದೆ, ದೃಷ್ಟಿ ಸಮಸ್ಯೆಯಿದೆ ಎನ್ನುವುದೇ ಪಾಲಕರಿಗೆ ತಿಳಿಯುವುದಿಲ್ಲ. ತಮಗೇನಾಗುತ್ತಿದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಮಕ್ಕಳಿಗೆ ಆಗುವುದಿಲ್ಲ. ಹಾಗಾಗಿ ಅವರ ವರ್ತನೆಯಲ್ಲಿ ಹಠ, ಅಳು, ಕಿರಿಕಿರಿಯಂಥವು ಕಾಣಬಹುದು. ತಮ್ಮ ಸಮಸ್ಯೆಯನ್ನು ಹೇಳಿಕೊಳ್ಳುವುದಕ್ಕೆ ತಿಳಿಯದ ಚಿಣ್ಣರು, ತಮಗೆ ತೋಚಿದಂತೆ ಅದನ್ನು ವ್ಯಕ್ತಪಡಿಸುತ್ತಾರಷ್ಟೆ. ಬೆಳೆಯುವ ವಯಸ್ಸಿನಲ್ಲಿ ಕಾಣಿಸಿಕೊಳ್ಳುವ ಈ ತೊಂದರೆಯನ್ನು ಶೀಘ್ರ ಚಿಕಿತ್ಸೆಗೆ ಒಳಪಡಿಸಿದರೆ, ಮಗುವಿಗೇ ಅನುಕೂಲ ತಾನೆ? ಆದರೆ ನಿತ್ಯದ ಬದುಕಿನಲ್ಲಿ ವ್ಯತ್ಯಾಸವಾಗುವಷ್ಟು ಢಾಳಾಗಿ ದೃಷ್ಟಿದೋಷಗಳು ಇರದಿದ್ದರೆ, ಅಲ್ಪಸ್ವಲ್ಪ ಕಣ್ಣಿನ ತೊಂದರೆಯು ಪಾಲಕರ ಗಮನಕ್ಕೆ ಬರುವುದು ಹೇಗೆ? ಇಂಥ ಕೆಲವು ಸೂಚನೆಗಳು ಮಕ್ಕಳಲ್ಲಿ ಕಾಣುವುದೇ ಎಂಬುದನ್ನು ಹೆತ್ತವರು, ಶಿಕ್ಷಕರು, ಪಾಲಕರು ಗಮನಿಸುವುದು ಅಗತ್ಯ.

Child at eye sight test. Kid at optitian. Eyewear for kids.

ಏಕಾಗ್ರತೆಯ ಕೊರತೆ

ಮಕ್ಕಳಲ್ಲಿ ಏಕಾಗ್ರತೆ ಇದ್ದರೆ ಅದೇ ದೊಡ್ಡ ವಿಷಯ! ಮರ್ಕಟನಂಥ ಮನಸ್ಸಿಗೆ ನೂರೆಂಟು ಕಡೆ ಹಾರುವ ಉತ್ಸಾಹ ಇರುವಾಗ, ಅದನ್ನು ಒಂದೆಡೆ ನಿಲ್ಲಿಸುವುದು ಕಷ್ಟವೇ. ಆದಾಗ್ಯೂ, ಆಯಾ ಮಕ್ಕಳ ನಿಗದಿತ ಮಟ್ಟಕ್ಕಿಂತಲೂ ಕಡಿಮೆ ಏಕಾಗ್ರತೆ ಇದ್ದರೆ, ಅದು ಸರಿಯಾಗಿ ಗೋಚರಿಸುತ್ತಿಲ್ಲ ಎನ್ನುವ ಕಾರಣಕ್ಕೂ ಇರಬಹುದು. ಹಾಗಾಗಿ ಅದರ ದೃಷ್ಟಿಯನ್ನೊಮ್ಮೆ ಪರಿಶೀಲಿಸಿ.

ಪಠ್ಯ ಚಟುವಟಿಕೆಯಲ್ಲಿ ತೊಂದರೆ

ಈವರೆಗಿನ ಶಾಲಾ ಚಟುವಟಿಕೆಗಳಿಗಿಂತ ಈಗೀಗಿನದ್ದು ಕಡಿಮೆಯಾಗಿದ್ದರೆ, ಮಗು ಪುಸ್ತಕದಲ್ಲಿ ಬರೆಯುವಾಗ ತಪ್ಪು ಮಾಡುವುದು ಹೆಚ್ಚಾದರೆ, ಶಾಲೆಯಲ್ಲಿ ಶಿಕ್ಷಕರು ಬೋರ್ಡ್‌ ಮೇಲೆ ಬರೆದಿದ್ದನ್ನು ಕಾಪಿ ಮಾಡಿಕೊಳ್ಳುವಾಗಲೂ ಮಗು ತಪ್ಪು ಮಾಡುತ್ತಿದ್ದರೆ, ಬೋರ್ಡಿನಲ್ಲಿದ್ದಿದ್ದನ್ನು ಅಳಿಸಬಾರದೆಂದು ಪದೇಪದೆ ಶಿಕ್ಷಕರನ್ನು ಒತ್ತಾಯಿಸುತ್ತಿದ್ದರೆ, ನೇತ್ರ ತಜ್ಞರಲ್ಲಿ ಮಗುವನ್ನು ಕರೆದೊಯ್ಯುವುದು ಸೂಕ್ತ.

kids headache

ತಲೆನೋವು

ಬೇರಾವುದೇ ಸಮಸ್ಯೆ ಇಲ್ಲದೆಯೂ ಆಗಾಗ ತಲೆನೋವಿನ ಬಾಧೆ ಇದ್ದರೆ, ಆಗಾಗ ಕಣ್ಣುಜ್ಜುತ್ತಿದ್ದರೆ, ಓದುವಾಗ ಮೆಳ್ಳೆಗಣ್ಣು ಅಥವಾ ಸಣ್ಣ ಕಣ್ಣು ಮಾಡುತ್ತಿದ್ದರೆ- ಇವೆಲ್ಲವೂ ದೃಷ್ಟಿ ದೋಷದ ಸಂಕೇತ ಆಗಿರಬಹುದು. ಹಾಗಾಗಿ ಇಂಥ ಲಕ್ಷಣಗಳನ್ನೂ ಗಮನಿಸಿ, ದೃಷ್ಟಿ ತಪಾಸಣೆಯನ್ನು ಮಾಡಿಸುವುದು ಒಳ್ಳೆಯದು.

ತಲೆ ಸೊಟ್ಟ ಮಾಡುವುದು

ಇಂಥ ಕೆಲವು ದೈಹಿಕ ಸ್ವರೂಪದ ಬದಲಾವಣೆಗಳು ಮಕ್ಕಳಲ್ಲಿ ಕಂಡರೆ ಹೆತ್ತವರು ಜಾಗ್ರತೆ ಮಾಡುವುದು ಕ್ಷೇಮ. ಓದುವಾಗ, ಬರೆಯುವಾಗ ಯಾವುದೋ ಒಂದು ಕೋನದಲ್ಲಿ, ಉಳಿದ ಕಡೆಗಿಂತ ದೃಷ್ಟಿ ಚೆನ್ನಾಗಿ ಗೋಚರಿಸುತ್ತದೆ ಎಂದಾದರೆ- ಅದಕ್ಕೆ ಪೂರಕವಾಗಿ ತಲೆ ಸೊಟ್ಟ ಮಾಡುವುದು, ಅದರಲ್ಲೂ ದೂರದ ವಸ್ತುಗಳನ್ನು ನೋಡುವುದಾಗ, ಅಂಗಡಿಗಳ ಫಲಕ ಓದುವಾಗ ಅವರು ಪಡುವ ಕಷ್ಟವು, ಅವರ ದೃಷ್ಟಿ ಸಮಸ್ಯೆಯತ್ತಲೇ ಬೆರಳು ಮಾಡುತ್ತದೆ.

kids eye pain

ಕಣ್ಣು ನೋವು

ಇದಂತೂ ನೇರವಾಗಿ ಕಣ್ಣಿನ ಸಮಸ್ಯೆಯನ್ನೇ ಪ್ರತಿನಿಧಿಸುತ್ತದೆ. ಇದರ ಜೊತೆಗೆ ತಲೆನೋವೂ ಇರಬಹುದು, ಹೊಟ್ಟೆ ತೊಳೆಸುವುದು, ವಾಂತಿಯಂಥ ಲಕ್ಷಣಗಳು ಕಂಡರೆ ವೈದ್ಯರ ದರ್ಶನ ಅಗತ್ಯ. ಸರಿಯಾಗಿ ಗೋಚರಿಸದೆ ಇದ್ದಾಗ, ಕಣ್ಣುಗಳ ಮೇಲೆ ಬೀಳುವ ಅಧಿಕ ಒತ್ತಡದಿಂದ ಉಂಟಾಗುವಂಥ ಸಮಸ್ಯೆಗಳು ಇವೆಲ್ಲ.

ಹತ್ತಿರ ಹಿಡಿಯುವುದು

ಪುಸ್ತಕವನ್ನು ಹತ್ತಿರಕ್ಕೆ ಹಿಡಿದು ಓದುವುದು, ಮೊಬೈಲ್‌ ಅಥವಾ ಟ್ಯಾಬ್‌ಗಳನ್ನು ಮುಖದ ಸಮೀಪಕ್ಕೆ ತಂದುಕೊಳ್ಳುವುದು ಇಲ್ಲವೇ ಅವುಗಳಲ್ಲಿನ ಅಕ್ಷರಗಳನ್ನು ಹಿಗ್ಗಿಸಿ ದೊಡ್ಡದು ಮಾಡಿಕೊಳ್ಳುವುದು, ಟಿವಿ ನೋಡುವಾಗ ಮುಂದೆ ಹೋಗಿ ನಿಂತುಕೊಳ್ಳುವುದು- ಇವೆಲ್ಲವೂ ಕಣ್ಣಿನ ತೊಂದರೆ ಇರಬಹುದೆಂಬ ಸೂಚನೆಗಳು. ಇಂಥವನ್ನು ತಮಗರಿವಿಲ್ಲದಂತೆಯೇ ಮಕ್ಕಳು ಮಾಡುತ್ತಿರುತ್ತಾರೆ.

ಇದನ್ನೂ ಓದಿ: Nita Ambani Beauty Secrets: ನೀತಾ ಅಂಬಾನಿ ನಿತ್ಯವೂ ಕುಡಿಯುವ ಆರೋಗ್ಯಕರ ಮ್ಯಾಜಿಕ್‌ ಡ್ರಿಂಕ್‌ ಯಾವುದು ಗೊತ್ತೇ? ನಾವೂ ಕುಡಿಯಬಹುದು!

ವರ್ತನೆಯಲ್ಲಿನ ಬದಲಾವಣೆ

ಇದ್ದಕ್ಕಿದ್ದಂತೆ ಅಳು, ಹಠ, ಕಿರಿಕಿರಿ, ಕೋಪ ಮಾಡಿಕೊಳ್ಳುವುದು, ಶಾಲೆಯ ಬಗ್ಗೆ ಮುನಿಸು, ಓದುವ ವಿಷಯದಲ್ಲಿ ಅಸಹನೆ- ಇಂಥವೆಲ್ಲ ದೃಷ್ಟಿ ಸರಿಯಾಗಿರದ ಕಾರಣ ತೋರುವ ಹತಾಶೆ ವರ್ತನೆಗಳಿರಬಹುದು. ಮಗುವನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವಳು/ನು ಹೀಗೇಕೆ ಮಾಡುತ್ತಿದ್ದಾರೆಂಬುದನ್ನು ತಿಳಿಯಿರಿ. ಸರಿಯಾಗಿ ಕಾಣಿಸುತ್ತಿಲ್ಲ ಎಂದಾದರೆ ನೇತ್ರ ತಜ್ಞರಲ್ಲಿ ಕರೆದೊಯ್ಯಿರಿ.

Continue Reading

ಆರೋಗ್ಯ

Foods For Weight Loss: ಈ ಆಹಾರಗಳನ್ನು ಸೇವಿಸಿ; ಸಲೀಸಾಗಿ ತೂಕ ಇಳಿಸಿ!

Foods For Weight Loss: ತೂಕ ಇಳಿಸುವುದು ಕೆಲವೊಮ್ಮ ಎಂಥವರನ್ನೂ ಮರೀಚಿಕೆಯಾಗಿ ಕಾಡಬಲ್ಲದು. ದುರದೃಷ್ಟ ಬೆನ್ನು ಹಿಡಿದರೆ 100 ಗ್ರಾಂ ತೂಕವೂ ಭೂಮಿ ತೂಕ ಎನಿಸುವುದನ್ನು ಕಂಡು ಕಣ್ಣೀರಿಟ್ಟಿದ್ದೇವೆ ನಾವು. ಹಾಗೆಂದು ನಮ್ಮಂಥ ಸಾಮಾನ್ಯರು ತೂಕ ನಿಯಂತ್ರಿಸುವ ಶ್ರಮವನ್ನು ಬಿಡುವಂತಿಲ್ಲವಲ್ಲ. ಇದಕ್ಕೆ ನೆರವಾಗುವ ಆಹಾರಗಳ ಪೈಕಿ ಕೆಲವೊಂದನ್ನು ಇಲ್ಲಿ ವಿವರಿಸಲಾಗಿದೆ.

VISTARANEWS.COM


on

Weight Loss Tips kannada
Koo

ತೂಕ ಇಳಿಕೆಯ ಬಗ್ಗೆ ಸಾಕಷ್ಟು (Foods for Weight Loss) ಕಂಡು ಕೇಳಿದ್ದಾಗಿದೆ. ದುರದೃಷ್ಟ ಬೆನ್ನು ಹಿಡಿದರೆ 100 ಗ್ರಾಂ ತೂಕವೂ ಭೂಮಿ ತೂಕ ಎನಿಸುವುದನ್ನು ಕಂಡು ಕಣ್ಣೀರಿಟ್ಟಿದ್ದೂ ಆಗಿದೆ. ಫಿಟ್‌ನೆಸ್‌ ಮಾರ್ಗದಲ್ಲಿ ಇಡೀ ಬದುಕನ್ನೇ ಸವೆಸಿದವರಿಗೆ ತೂಕ ಇಳಿಸುವುದು ಇಷ್ಟು ತೊಂದರೆ ನೀಡಿದರೆ, ನಮ್ಮಂಥ ಸಾಮಾನ್ಯರ ಪಾಡೇನು ಎಂಬ ಭಾವ ಬಂದರೆ ಅಚ್ಚರಿಯಿಲ್ಲ. ಹಾಗೆಂದು ನಮ್ಮ ತೂಕ ನಿಯಂತ್ರಿಸುವ ಶ್ರಮವನ್ನು ನಾವು ಬಿಡುವಂತಿಲ್ಲವಲ್ಲ. ತರಹೇವಾರಿ ರೋಗಗಳಿಂದ ತಪ್ಪಿಸಿಕೊಳ್ಳುವುದಕ್ಕೆ ತೂಕವನ್ನು ನಿಯಂತ್ರಣದಲ್ಲಿ ಇರಿಸುವುದು ಮಹತ್ವದ್ದು. ಇದಕ್ಕೆ ಪೂರಕವಾದಂಥ ಆಹಾರಗಳು ಯಾವುವು?

Oatmeal Abdominal Obesity

ಓಟ್‌ಮೀಲ್‌

ಬಹಳಷ್ಟು ಸತ್ವಗಳಿರುವ ಈ ಧಾನ್ಯದಲ್ಲಿ ಕ್ಯಾಲರಿ ಕಡಿಮೆ. ಇದರಲ್ಲಿರುವ ನಾರು ಮತ್ತು ಪ್ರೊಟೀನ್‌ ಅಂಶಗಳು ದೀರ್ಘ ಕಾಲದವರೆಗೆ ಹೊಟ್ಟೆ ತುಂಬಿದ ಅನುಭವವನ್ನು ನೀಡುತ್ತವೆ ಹಾಗೂ ದೇಹಕ್ಕೆ ದಣಿವಾಗದಂತೆ ಶಕ್ತಿಯನ್ನು ಪೂರೈಸುತ್ತವೆ. ಅರ್ಧ ಕಪ್‌ನಷ್ಟು ಬೇಯಿಸಿದ ಓಟ್ಸ್‌ನಲ್ಲಿ ಕೇವಲ 150 ಗ್ರಾಂ ಕ್ಯಾಲರಿ ದೊರೆಯುತ್ತದೆ. 4 ಗ್ರಾಂನಷ್ಟು ನಾರು ಲಭಿಸುತ್ತದೆ. ಬೆಳಗಿನ ತಿಂಡಿಗೆ ಇದನ್ನು ಸೇವಿಸುವುದರಿಂದ ಕಾರಣವಿಲ್ಲದೆ ಕಾಡುವ ಹಸಿವನ್ನು ದೂರ ಮಾಡಿ, ಮಧ್ಯಾಹ್ನದವರೆಗೆ ಶಕ್ತಿ ಕುಸಿಯದೆ, ಕೆಲಸಕಾರ್ಯಗಳಲ್ಲಿ ತೊಡಗಿಸಿಕೊಳ್ಳಬಹುದು.

ಬ್ಲ್ಯಾಕ್‌ ಬೀನ್‌

ರಾಜ್ಮಾದಂಥ ಕಂದು/ಕಪ್ಪು ಬಣ್ಣದ ಯಾವುದೇ ಕಾಳುಗಳನ್ನು ಈ ಸಾಲಿಗೆ ಸೇರಿಸಬಹುದು. ನಾರು ಮತ್ತು ಪ್ರೊಟೀನ್‌ ಭರಪೂರ ಇರುತ್ತವೆ ಈ ಕಾಳುಗಳಲ್ಲಿ. ಇಂಥ ಒಂದು ಕಪ್‌ ಕಾಳುಗಳಲ್ಲಿ ಸುಮಾರು 17 ಗ್ರಾಂ ನಾರು ಮತ್ತು 14 ಗ್ರಾಂ ಪ್ರೊಟೀನ್‌ ದೊರೆಯುತ್ತದೆ. ಇಷ್ಟೊಂದು ಪ್ರಮಾಣದ ಕಾಳುಗಳನ್ನು ಒಬ್ಬ ವ್ಯಕ್ತಿಗೆ ತಿನ್ನಲಾಗದು ಎನ್ನುವುದು ಹೌದಾದರೂ, ಇದರದ್ದೇ ಪಲ್ಯ, ಭಾಜಿಗಳನ್ನು ಮಾಡುವುದು ಕುಟುಂಬದ ಆರೋಗ್ಯಕ್ಕೆ ಸೂಕ್ತ.

Walnuts Dry Fruits For Hair Fall

ವಾಲ್‌ನಟ್‌

ಆರೋಗ್ಯಕರ ಕೊಬ್ಬು, ಪ್ರೊಟೀನ್‌ ಮತ್ತು ನಾರಿನಂಶ ಹೊಂದಿರುವ ಈ ನಟ್‌ಗಳು ಆರೋಗ್ಯಕ್ಕೆ ಬಹಳಷ್ಟು ರೀತಿಯ ಲಾಭಗಳನ್ನು ಒದಗಿಸಬಲ್ಲವು. ತನ್ನಲ್ಲಿರುವ ಒಮೇಗಾ 3 ಕೊಬ್ಬಿನಾಮ್ಲದಿಂದ ದೇಹದಲ್ಲಿರುವ ಕೊಲೆಸ್ಟ್ರಾಲ್‌ ಕಡಿಮೆ ಮಾಡಿ, ಹೃದಯದ ಆರೋಗ್ಯ ಸುಧಾರಿಸುವುದರಿಂದ ಹಿಡಿದು, ತೂಕ ಇಳಿಸುವವರೆಗೆ ಹಲವಾರು ರೀತಿಯಲ್ಲಿ ಸ್ವಾಸ್ಥ್ಯ ರಕ್ಷಣೆಗೆ ನೆರವಾಗುತ್ತದೆ ಇದು.

ನಿಂಬೆ ನೀರು

ಬೆಳಗಿನ ಹೊತ್ತು ನಿಂಬೆ ನೀರಿನ ಸೇವನೆಯ ಬಗ್ಗೆ ಬಹಳಷ್ಟು ಪರ-ವಿರೋಧದ ಚರ್ಚೆಗಳು ಚಾಲ್ತಿಯಲ್ಲಿವೆ. ಆದರೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದರಿಂದ ತೊಡಗಿ, ಉತ್ಕರ್ಷಣ ನಿರೋಧಕಗಳನ್ನು ದೇಹಕ್ಕೆ ಪೂರೈಸುವವರೆಗೆ ಹಲವು ರೀತಿಯಲ್ಲಿ ಇದು ನಮಗೆ ಉಪಕಾರ ಮಾಡಬಲ್ಲದು. ದೇಹದ ಚಯಾಪಚಯ ಹೆಚ್ಚಿಸುವ ಮೂಲಕ ತೂಕ ಇಳಿಕೆಗೂ ಇದು ನೆರವಾಗುತ್ತದೆ. ಆದರೆ ಆಸಿಡಿಟಿಯಂಥ ಸಮಸ್ಯೆ ಇರುವವರಿಗೆ ಬೆಳಗಿನ ಖಾಲಿ ಹೊಟ್ಟೆಯಲ್ಲಿ ನಿಂಬೆರಸದ ನೀರು ಕುಡಿಯುವುದು ಸಮಸ್ಯೆಗಳನ್ನು ತರಬಲ್ಲದು.

Greens vegetables

ಸೊಪ್ಪುಗಳು

ಪಾಲಕ್‌, ಮೆಂತೆ, ಸಬ್ಬಸಿಗೆ, ನುಗ್ಗೆ, ದಂಟು, ಹೊನಗನ್ನೆ, ಚಕ್ಕೋತ, ಕೀರೆ, ಬಸಳೆ ಮುಂತಾದ ಲೆಕ್ಕವಿಲ್ಲದಷ್ಟು ಸೊಪ್ಪುಗಳು ನಮ್ಮ ನಾಡಿನ ಉದ್ದಗಲಕ್ಕೆ ಲಭ್ಯವಿವೆ. ಸ್ಥಳೀಯವಾಗಿ ಬಳಸುವ ಸೊಪ್ಪುಗಳು ಇನ್ನೂ ಬಹಳಷ್ಟು ಇರಬಹುದು. ಇವೆಲ್ಲವೂ ನಮ್ಮ ಆರೋಗ್ಯಕ್ಕೆ ಪೂರಕವಾದಂಥವು. ಕಡಿಮೆ ಕ್ಯಾಲರಿಯಲ್ಲಿ ದಂಡಿಯಾಗಿ ವಿಟಮಿನ್‌ ಮತ್ತು ಖನಿಜಗಳನ್ನು ಪೂರೈಸಬಲ್ಲವು. ನಾರು ಮತ್ತು ನೀರನ್ನು ನೀಡಬಲ್ಲವು. ಈ ಮೂಲಕ ತೂಕ ಇಳಿಕೆಗೆ ನೆರವಾಗಬಲ್ಲವು.

ಇದನ್ನೂ ಓದಿ: Mushroom Benefits: ಅಣಬೆ ಎಂಬ ವಿಟಮಿನ್‌ ಡಿ! ಇದರ ಆರೋಗ್ಯ ಲಾಭ ತಿಳಿದರೆ ನೀವು ತಿನ್ನದೆ ಇರಲಾರಿರಿ!

ಮೊಟ್ಟೆ

ದೇಹದಲ್ಲಿ ಅಧಿಕ ಸ್ನಾಯುಗಳು ಇದ್ದಷ್ಟೂ ಕ್ಯಾಲರಿ ಕರಗುವುದು ಹೆಚ್ಚು. ಸ್ನಾಯುಗಳನ್ನು ಹುರಿಗಟ್ಟಿಸಲು ಮೊಟ್ಟೆಯಂಥ ಆಹಾರಗಳು ನೆರವಾಗುತ್ತವೆ. ಒಮ್ಮೆ ಹೊಟ್ಟೆ ತುಂಬಿದರೆ ದೀರ್ಘ ಕಾಲದವರೆಗೆ ಶಕ್ತಿಯನ್ನು ಒದಗಿಸುತ್ತಾ, ಹಸಿವೆ ಕಾಡದಂತೆ ಕಾಪಾಡುತ್ತವೆ. ಜೊತೆಗೆ ಅಗತ್ಯವಾದ ಕೊಬ್ಬು ಮತ್ತು ಖನಿಜಗಳನ್ನೂ ದೇಹಕ್ಕೆ ಪೂರೈಸುತ್ತವೆ.

Continue Reading

ಆರೋಗ್ಯ

Bluetooth Side Effects: ಬ್ಲೂಟೂತ್‌ ಹೆಡ್‌ಫೋನ್‌ ರೇಡಿಯೊ ಕಿರಣಗಳಿಂದ ಕ್ಯಾನ್ಸರ್‌?

Bluetooth Side Effects: ಬ್ಲೂಟೂತ್‌ ಹೆಡ್‌ಫೋನ್‌ಗಳ ಬಗೆಗಿನ ಪ್ರಮುಖ ಆತಂಕವೆಂದರೆ ಅವು ಸೂಸುವ ಕಿರಣಗಳು ನಮ್ಮ ಆರೋಗ್ಯಕ್ಕೆ ಎನಾದರೂ ತೊಂದರೆ ಮಾಡುತ್ತವೆಯೇ ಎಂಬುದು. ಅದರಲ್ಲೂ ವಿಶ್ವದೆಲ್ಲೆಡೆ ಕ್ಯಾನ್ಸರ್‌ ಪ್ರಕರಣಗಳು ರಾಕೆಟ್‌ನಂತೆ ಮೇಲೇರಿರುವ ಹಿನ್ನೆಲೆಯಲ್ಲಿ, ಬ್ಲೂಟೂತ್‌ ಕಿರಣಗಳಿಂದ ಈ ಅಪಾಯ ಹೆಚ್ಚುತ್ತದೆಯೇ? ಇಲ್ಲಿದೆ ಉತ್ತರ.

VISTARANEWS.COM


on

Bluetooth Side Effects
Koo

ಯಾವುದೇ ಸಾರ್ವಜನಿಕ ಸ್ಥಳದಲ್ಲಿ (Bluetooth Side Effects) ಓಡಾಡುತ್ತಿರುವವರನ್ನು ಗಮನಿಸಿದರೂ ಕೈಯಲ್ಲೊಂದು ಮೊಬೈಲ್‌ ಹಿಡಿದು, ಕಿವಿಗೊಂದು ಬ್ಲೂಟೂತ್‌ ಇಯರ್‌ಫೋನ್‌ ಸಿಕ್ಕಿಸಿಕೊಂಡು ಇರುವವರೇ ಕಾಣುತ್ತಾರೆ. ಬಸ್ಸಲ್ಲಿ, ರೈಲಲ್ಲಿ, ಕ್ಯಾಬ್‌ನಲ್ಲಿ, ನಡೆದು ಹೋಗುವವರು- ಯಾರೇ ಆದರೂ ಕಿವಿಗಳನ್ನು ಬ್ಲೂಟೂತ್‌ ಇಯರ್‌ಪ್ಲಗ್‌ಗಳಲ್ಲಿ ಮುಚ್ಚುಕೊಂಡಿರುವವರೇ. ವಯಸ್ಸು, ಲಿಂಗ, ಜಾತಿ-ಮತಗಳ ಭೇದವಿಲ್ಲದ ಜಾತ್ಯತೀತ ಪ್ರಪಂಚವಿದು. ಆದರೆ ಹೀಗೆ ದಿನದ ಎಷ್ಟೋ ಹೊತ್ತು ಕಿವಿಗಳಿಗೆ ಬ್ಲೂಟೂತ್‌ ಸ್ಪೀಕರ್‌ಗಳನ್ನು ಬಳಸುವುದು ಕ್ಷೇಮವೇ? ಈ ಉಪಕರಣಗಳು ಹೊರಹೊಮ್ಮಿಸುವ ವಿಕಿರಣದಿಂದ ಕ್ಯಾನ್ಸರ್‌ ಬರುತ್ತದೆಂಬ ಮಾತುಗಳಿವೆಯಲ್ಲ?

Image Of Headphones Side Effects

ಬ್ಲೂಟೂತ್‌ ಪ್ರವರ

2.4 ಗಿಗಾ ಹರ್ಟ್ಸ್‌ ತರಂಗಾಂತರದ ರೇಡಿಯೊ ಕಿರಣಗಳನ್ನು ಉಪಯೋಗಿಸಿ ಕೆಲಸ ಮಾಡುವ ತಂತ್ರಜ್ಞಾನವಿದು. ಇದನ್ನು ವೈಫೈ ರೂಟರ್‌, ಕಾರಿನ ಸ್ಪೀಕರ್‌, ಪ್ರಿಂಟರ್‌, ಮೈಕ್ರೋವೇವ್‌ಗಳಿಂದ ಹಿಡಿದು ಹಲವು ಉಪಕರಣಗಳಲ್ಲಿ ಬಳಸಲಾಗುತ್ತದೆ. ಹಾಗೆಯೇ, ಒಂದು ಫೋನ್‌ನಿಂದ ಇನ್ನೊಂದಕ್ಕೆ, ಹೆಡ್‌ಫೋನ್‌, ಸ್ಪೀಕರ್‌ಗಳ ಜೊತೆಗೆಲ್ಲ ಈ ತಂತ್ರಜ್ಞಾನದಿಂದ ಸುಲಭಕ್ಕೆ ಸಂಪರ್ಕ ಸಾಧಿಸಬಹುದು. ಕಡಿಮೆ ದೂರದಲ್ಲಿ ನಿಸ್ತಂತು ಆಗಿ ಸಂಪರ್ಕ ಸಾಧಿಸುವಂಥ ಸಮರ್ಥ ವಿಧಾನವಿದು. ಆದರೆ ಇದು ಸುರಕ್ಷಿತ ವಿಧಾನವೇ ಎಂಬುದೀಗ ಪ್ರಶ್ನೆ.
ಬ್ಲೂಟೂತ್‌ ಹೆಡ್‌ಫೋನ್‌ಗಳ ಬಗೆಗಿನ ಪ್ರಮುಖ ಆತಂಕವೆಂದರೆ, ಅವು ಸೂಸುವ ಕಿರಣಗಳು ನಮ್ಮ ಆರೋಗ್ಯಕ್ಕೆ ಎನಾದರೂ ತೊಂದರೆ ಮಾಡುತ್ತವೆಯೇ ಎಂಬುದು. ಅದರಲ್ಲೂ ವಿಶ್ವದೆಲ್ಲೆಡೆ ಕ್ಯಾನ್ಸರ್‌ ಪ್ರಕರಣಗಳು ರಾಕೆಟ್‌ನಂತೆ ಮೇಲೇರಿರುವ ಹಿನ್ನೆಲೆಯಲ್ಲಿ, ಬ್ಲೂಟೂತ್‌ ಕಿರಣಗಳಿಂದ ಈ ಅಪಾಯ ಹೆಚ್ಚುತ್ತದೆಯೇ? ಎಂಥಾ ವಿಕಿರಣಗಳನ್ನು ಬ್ಲೂಟೂತ್‌ ಸೂಸುತ್ತದೆ ಎಂಬುದನ್ನು ಮೊದಲು ಅರ್ಥ ಮಾಡಿಕೊಳ್ಳೋಣ. ಅಯಾನೀಕರಿಸದ (non-ionizing radiation) ಕಿರಣಗಳನ್ನು ಮಾತ್ರವೇ ಬ್ಲೂಟೂತ್‌ ಉಪಕರಣಗಳು ಹೊರಸೂಸುತ್ತವೆ. ಇದಕ್ಕಿರುವ ಶಕ್ತಿಯ ಪ್ರಮಾಣ ಅತಿ ಕಡಿಮೆ. ಒಂದು ಹಂತದವರೆಗೆ ಮಾನವರಿಗೆ ಇದರಿಂದ ಯಾವುದೇ ಅಪಾಯವಿಲ್ಲ, ಇವು ಕ್ಯಾನ್ಸರ್‌ಕಾರಕ ಅಲ್ಲ ಎಂದೇ ಪರಿಣತರು ಪ್ರತಿಪಾದಿಸುತ್ತಾರೆ. ಅಯಾನೀಕರಿಸಿದ (ionizing radiation) ವಿಕಿರಣಗಳಾದರೆ, ಅಂದರೆ ಎಕ್ಸ್‌-ರೇ ಯಂಥವಾದರೆ ಕೊಂಚ ಯಾಮಾರಿದರೂ ಅಪಾಯ ಆಗುವ ಸಾಧ್ಯತೆಯಿದೆ.
ಈ ರೀತಿಯ ಅಯಾನೀಕರಿಸದ ಕಿರಣಗಳು ರೇಡಿಯೊ ತರಂಗಾಂತರದ ಸ್ಪೆಕ್ಟ್ರಮ್‌ನಲ್ಲಿ ಬರುತ್ತವೆ. ಇಂಥ ಕಿರಣಗಳನ್ನು ಬಹಳಷ್ಟು ಎಲೆಕ್ಟ್ರಾನಿಕ್‌ ಉಪಕರಣಗಳು ಸೂಸುತ್ತವೆ, ಬ್ಲೂಟೂತ್‌ ಮಾತ್ರವಲ್ಲ. ಹಾಗೆ ನೋಡಿದರೆ, ಮೊಬೈಲ್‌ ದೂರವಾಣಿಗಳಿಗಿಂತ ಕಡಿಮೆ ಶಕ್ತಿಯ ಕಿರಣಗಳನ್ನು ಬ್ಲೂಟೂತ್‌ ಉಪಕರಣಗಳು ಸೂಸುತ್ತವೆ. ಅದೂ ಅಲ್ಲದೆ, ಮಾನವರಿಗೆ ಸುರಕ್ಷಿತ ಎನಿಸುವ ಕಿರಣಗಳ ಮಿತಿಯ ಒಳಗೇ ಬ್ಲೂಟೂತ್‌ ಕಿರಣಗಳೂ ಇವೆ ಎನ್ನುವುದು ತಜ್ಞರ ಮಾತು. ಆದಾಗ್ಯೂ ಈ ಕುರಿತಾದ ಅಧ್ಯಯನಗಳು ಪೂರ್ಣ ಪ್ರಮಾಣದ ಮತ್ತು ದೀರ್ಘಕಾಲೀನ ವಿಷಯಗಳನ್ನು ಗಮನದಲ್ಲಿ ಇರಿಸಿಕೊಂಡಿವೆಯೇ ಎನ್ನುವುದು ಪ್ರಶ್ನಾರ್ಹವಾಗಿದೆ.

ಹಾಗಾದರೆ ಸುರಕ್ಷಿತವೇ?

ಮತ್ತದೇ ಪ್ರಶ್ನೆ- ಹಾಗಾದರೆ ಬ್ಲೂಟೂತ್‌ ಹೆಡ್‌ಫೋನ್‌ಗಳು ಸುರಕ್ಷಿತವೇ? ಹೌದು ಎನ್ನಬಹುದು. ಆದರೆ ಅವುಗಳನ್ನು ಹೊಣೆ ಅರಿತು ಬಳಸುವ ಜವಾಬ್ದಾರಿ ಬಳಕೆದಾರರದ್ದು. ಕಿವಿಗಡಚಿಕ್ಕುವಂಥ ಇಯರ್‌ಪ್ಲಗ್‌ಗಳನ್ನು ಹಾಕಿಕೊಂಡು ರಸ್ತೆಯಲ್ಲಿ ನಡೆಯುತ್ತಾ, ಆಚೀಚಿನ ವಾಹನಗಳಿಂದ ಅಪಾಯ ತಂದುಕೊಳ್ಳುವುದು ಮುಂದೆಂದೋ ಬರಬಹುದಾದ ರೋಗಕ್ಕಿಂತ ತೀವ್ರ ಪರಿಣಾಮವನ್ನು ಉಂಟುಮಾಡಬಲ್ಲದು. ಹಾಗಾಗಿ ಕಿವಿಗಳಿಗೆ ಅಪಾಯವಾಗದಂತೆ, ಮಿತವಾಗಿ ಯಾವುದೇ ಹೆಡ್‌ಫೋನನ್ನಾದರೂ ಬಳಸುವ ಸಂಕಲ್ಪ ಮಾಡಿಕೊಳ್ಳಿ. ಆಗ ಬ್ಲೂಟೂತ್‌ ಸೂಸುವ ಕಿರಣಗಳು ಸಹ ಬೆಚ್ಚಿ ಬೀಳಿಸುವದಿಲ್ಲ.

Poor Posture Headphones Side Effects

ವಿಕಿರಣಗಳು ಇನ್ನೆಲ್ಲಿ?

ಹಾಗಾದರೆ ಆಧುನಿಕ ಜೀವನಶೈಲಿಯಲ್ಲಿ ಇನ್ನೂ ಎಲ್ಲೆಲ್ಲಿ ನಾವು ವಿಕಿರಣಗಳಿಗೆ ಒಡ್ಡಿಕೊಳ್ಳುತ್ತಿದೇವೆ ಎಂಬ ಕುತೂಹಲ ಇರಬಹುದು. ಮೊಬೈಲ್‌ ದೂರವಾಣಿ, ಮೈಕ್ರೋವೇವ್‌ ಅವನ್‌ಗಳು, ಇಂಡಕ್ಷನ್‌ ಕುಕ್‌ಟಾಪ್‌ಗಳು- ಇಂಥವು ಕಡಿಮೆ ವಿಕಿರಣಗಳನ್ನು ಹೊಮ್ಮಿಸುವಂಥವು. ಆರೋಗ್ಯ ತಪಾಸಣೆಗಾಗಿ ಎಕ್ಸ್‌ ರೇ ಅಥವಾ ಸಿಟಿ ಸ್ಕ್ಯಾನ್‌ ಸೇರಿದಂತೆ ನಡೆಸಲಾಗುವ ನಾನಾ ರೀತಿಯ ಪರೀಕ್ಷೆಗಳು ಇವೆಲ್ಲದಕ್ಕಿಂತ ಹೆಚ್ಚಿನ ರೇಡಿಯೇಶನ್‌ ಹೊಮ್ಮಿಸುತ್ತವೆ. ಸೈದ್ಧಾಂತಿಕವಾಗಿ ಹೇಳುವುದಾದರೆ, ಆರೋಗ್ಯ ತಪಾಸಣೆಯಲ್ಲಿ ಬಳಸಲಾಗುವ ಹಲವು ರೀತಿಯ ವಿಕಿರಣಗಳು ಅಯಾನೀಕರಿಸಿದ ವರ್ಗಕ್ಕೆ ಬರುವಂಥವು ಮತ್ತು ದೇಹಕ್ಕೆ ಹಾನಿಯುಂಟುಮಾಡಬಲ್ಲವು. ಅದರಲ್ಲೂ, ದೇಹವನ್ನು ಒಡ್ಡಿಕೊಳ್ಳಬಹುದಾದ ಕನಿಷ್ಟ ಅಥವಾ ಗರಿಷ್ಟ ಮಟ್ಟದ ವಿಕಿರಣ ಎಂಬುದಿಲ್ಲ. ಎಲ್ಲಿ ಸಾಧ್ಯವೋ ಅಲ್ಲಿ ವಿಕಿರಣಗಳಿಂದ ದೂರವಿರುವುದು ಕ್ಷೇಮ. ಈ ನಿಟ್ಟಿನಲ್ಲಿ ಎಂಆರ್‌ಐ ಪರೀಕ್ಷೆ ಎಲ್ಲದಕ್ಕಿಂತ ಸುರಕ್ಷಿತ ಎನಿಸಿದೆ.

ಇದನ್ನೂ ಓದಿ: Chia seeds: ಚಿಯಾ ಬೀಜಗಳನ್ನು ಸೇವಿಸುತ್ತಿದ್ದೀರಾ? ಹಾಗಾದರೆ, ಈ ಎಚ್ಚರಿಕೆ ನಿಮ್ಮಲ್ಲಿರಲಿ!

Continue Reading
Advertisement
Theft Case
ಬೆಂಗಳೂರು3 mins ago

Theft Case : ಬೆಂಗಳೂರಿನಲ್ಲಿ ಪ್ರೇಯಸಿಗಾಗಿ ಕಳ್ಳತನಕ್ಕೆ ಇಳಿದ ಪ್ರಿಯತಮ! ಮದುವೆಯಾಗಲು ಹೊರಟವರು ಜೈಲುಪಾಲು

Actor Yash called the actor that if you grow beyond all of us dance karnataka dance
ಸ್ಯಾಂಡಲ್ ವುಡ್9 mins ago

Actor Yash: ನಮ್ಮನ್ನೆಲ್ಲ ಮೀರಿಸಿ ನೀವು ಬೆಳೆದರೆ ಅದೇ ನಮಗೆ ನೀವು ಕೊಡುವ ಗೌರವ ಎಂದು ನಟನಿಗೆ ಕರೆ ಮಾಡಿದ ‘ರಾಕಿಂಗ್ ಸ್ಟಾರ್’ ಯಶ್!

bangalore traffic signal
ಪ್ರಮುಖ ಸುದ್ದಿ11 mins ago

Bangalore Traffic: ಬೆಂಗಳೂರಿನ ಟ್ರಾಫಿಕ್‌ ಸಿಗ್ನಲ್‌ನಲ್ಲಿ 15 ನಿಮಿಷ ನಿಲ್ಲೋ ಪರಿಸ್ಥಿತಿ ಬರಲಿದೆ, ಎಚ್ಚರ!

Vinesh Phogat
ಕ್ರೀಡೆ29 mins ago

Vinesh Phogat: ಕೆಲವೇ ಗಂಟೆಗಳಲ್ಲಿ ವಿನೇಶ್ ಫೋಗಟ್​ ಬೆಳ್ಳಿ ಪದಕದ ತೀರ್ಪು ಪ್ರಕಟ

Manish Sisodia
ದೇಶ39 mins ago

Manish Sisodia: ದೆಹಲಿ ಅಬಕಾರಿ ನೀತಿ ಅಕ್ರಮ: ಮನೀಶ್‌ ಸಿಸೋಡಿಯಾಗೆ ಜಾಮೀನು

Antim Panghal
ಕ್ರೀಡೆ1 hour ago

Antim Panghal: 3 ವರ್ಷ ನಿಷೇಧ ಶಿಕ್ಷೆಯಿಂದ ಪಾರಾದ ಕುಸ್ತಿಪಟು ಅಂತಿಮ್‌ ಪಂಘಲ್‌

train service
ಹಾಸನ1 hour ago

Train services: ಎಡಕುಮೇರಿಯಲ್ಲಿ ದುರಸ್ಥಿ ಪೂರ್ಣ; ರೈಲುಗಳ ಪುನರ್‌ ಆರಂಭವಾದರೂ ವೇಗದ ಮಿತಿಗೆ ನಿರ್ಬಂಧ

ದೇಶ1 hour ago

Kangana v/s Rahul Gandhi: ರಾಹುಲ್‌ ಗಾಂಧಿಯ ತಿರುಚಿದ ಫೊಟೋ ಶೇರ್‌; ಕಂಗನಾ ವಿರುದ್ಧ ಮಾನನಷ್ಟ ಮೊಕದ್ದಮೆ

ಪ್ರಮುಖ ಸುದ್ದಿ2 hours ago

CM Siddaramaiah: ಮೈಸೂರು ಜನಾಂದೋಲನ ಸಮಾವೇಶ ಸ್ಥಳಕ್ಕೆ ಆಗಮಿಸುತ್ತಿರುವ ಕಾಂಗ್ರೆಸ್‌ ಪಡೆ; ಲೈವ್‌ ಇಲ್ಲಿದೆ ವೀಕ್ಷಿಸಿ

Laapataa Ladies to be screened in Supreme Court
ಬಾಲಿವುಡ್2 hours ago

Laapataa Ladies: ಇಂದು ಸುಪ್ರೀಂ ಕೋರ್ಟ್‌ನಲ್ಲಿ ಪ್ರದರ್ಶನಗೊಳ್ಳುತ್ತಿದೆ ‘ಲಾಪತಾ ಲೇಡೀಸ್’!

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka Weather Forecast
ಮಳೆ19 hours ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ21 hours ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ22 hours ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು3 days ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ3 days ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ5 days ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ6 days ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ1 week ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ1 week ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ1 week ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

ಟ್ರೆಂಡಿಂಗ್‌