Viral News: ಮುಖಕ್ಕೆ ಎಂಜಲು ಉಗಿದು ಫೇಸ್ ಮಸಾಜ್ ಮಾಡಿದ ಅಮ್ಜದ್ ಅರೆಸ್ಟ್! - Vistara News

Latest

Viral News: ಮುಖಕ್ಕೆ ಎಂಜಲು ಉಗಿದು ಫೇಸ್ ಮಸಾಜ್ ಮಾಡಿದ ಅಮ್ಜದ್ ಅರೆಸ್ಟ್!

Viral News: ಕ್ರೀಂ, ಲೋಷನ್ ಹಚ್ಚಿ ಫೇಸ್ ಮಸಾಜ್ ಮಾಡುವುದರ ಬಗ್ಗೆ ಕೇಳಿರುತ್ತೀರಿ. ಆದರೆ ಉತ್ತರಪ್ರದೇಶದ ಈ ಮುಸ್ಲಿಂ ಕ್ಷೌರಿಕ ತನ್ನ ಬಳಿ ಫೇಸ್ ಮಸಾಜ್ ಮಾಡಿಸಿಕೊಳ್ಳಲು ಬಂದ ಯುವಕನ ಮುಖಕ್ಕೆ ಎಂಜಲು ಹಚ್ಚಿ ಮಸಾಜ್ ಮಾಡಿದ್ದಾನೆ, ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈತನ ಕೃತ್ಯಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದ್ದು, ಆರೋಪಿ ವಿರುದ್ಧ ಪೊಲೀಸರು ಎಫ್ ಐಆರ್ ದಾಖಲಿಸಿ ಆತನನ್ನು ಬಂಧಿಸಿದ್ದಾರೆ.

VISTARANEWS.COM


on

Viral News
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಹುಡುಗಿಯರ ಹಾಗೇ ಹುಡುಗರಿಗೂ ಸುಂದರವಾಗಿ ಕಾಣಬೇಕೆಂಬ ಆಸೆ ಇರುತ್ತದೆ. ಹಾಗಾಗಿ ಹುಡುಗಿಯರು ಬ್ಯೂಟಿ ಪಾರ್ಲರ್ ನಲ್ಲಿ ಫೇಸ್ ಮಸಾಜ್, ಫೇಶಿಯಲ್ ಮಾಡಿಸಿಕೊಂಡ ಹಾಗೆ ಹುಡುಗರು ಕ್ಷೌರದ ಅಂಗಡಿಯಲ್ಲಿ ಫೇಸ್ ಮಸಾಜ್, ಫೇಶಿಯಲ್ ಮಾಡಿಸಿಕೊಳ್ಳುತ್ತಾರೆ. ಆದರೆ ಇತ್ತೀಚೆಗೆ ವ್ಯಕ್ತಿಯೊಬ್ಬ ಕ್ಷೌರದಂಗಡಿಯಲ್ಲಿ ಫೇಸ್ ಮಸಾಜ್ ಮಾಡಿಕೊಳ್ಳಲು ಹೋಗಿ ಅವಾಂತರ ಮಾಡಿಕೊಂಡ ವಿಡಿಯೊವೊಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ (Viral News) ಆಗಿದೆ.

ಫೇಸ್‌ ಮಸಾಜ್‌ ಮಾಡಿಕೊಂಡರೆ ಮುಖದಲ್ಲಿ ರಕ್ತಸಂಚಲನ ಚೆನ್ನಾಗಿ ಆಗುತ್ತದೆ. ದಣಿದ ಮುಖಕ್ಕೆ ರಿಲೀಫ್‌ ಆಗುತ್ತೆ ಎಂದು ಕೆಲವರು ದುಡ್ಡು ಸುರಿದು ಮಸಾಜ್‌ ಮಾಡಿಕೊಳ್ಳುತ್ತಾರೆ. ಹೀಗೆ ಉತ್ತರ ಪ್ರದೇಶದ ಶಾಮ್ಲಿ ಎಂಬಲ್ಲಿನ ಕ್ಷೌರದಂಗಡಿಗೆ ವ್ಯಕ್ತಿಯೊಬ್ಬ ಫೇಸ್ ಮಸಾಜ್ ಮಾಡಿಕೊಳ್ಳಲು ಹೋಗಿದ್ದಾನೆ. ಆದರೆ ಕ್ಷೌರದಂಗಡಿಯವನು ಕ್ರೀಂ, ಲೋಷನ್‌ಗಳನ್ನು ಹಚ್ಚಿ ಮುಖಕ್ಕೆ ಮಸಾಜ್‌ ಮಾಡುವುದರ ಬದಲು ಎಂಜಲು ಉಗಿದು ಮಸಾಜ್‌ ಮಾಡಿದ್ದಾನಂತೆ. . ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಆರೋಪಿ ಅಮ್ಜದ್ ಎಂಬುದಾಗಿ ತಿಳಿದುಬಂದಿದೆ. @TruestoryUP ಎಂಬ ಹೆಸರಿನ ಖಾತೆಯಲ್ಲಿ ಈ ವಿಡಿಯೊ ಹಂಚಿಕೊಳ್ಳಲಾಗಿದೆ. ಈತನ ಘೋರ ಕೃತ್ಯದ ದೃಶ್ಯ ವೈರಲ್ ಆಗಿದ್ದು, ಈತನ ಕೃತ್ಯಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದ್ದು, ಆರೋಪಿ ವಿರುದ್ಧ ಪೊಲೀಸರು ಎಫ್ ಐಆರ್ ದಾಖಲಿಸಿ ಆತನನ್ನು ಬಂಧಿಸಿದ್ದಾರೆ.

ಇದನ್ನೂ ಓದಿ:James Wan: ಜೇಮ್ಸ್‌ ವಾನ್‌ ನಿರ್ದೇಶನದ ಈ 6 ಥ್ರಿಲ್ಲರ್‌ ಚಿತ್ರಗಳನ್ನು ತಪ್ಪದೇ ನೋಡಿ!

ಜೂನ್ 8ರಂದು ಈ ವಿಡಿಯೊ ಹಂಚಿಕೊಂಡಿದ್ದು, ಇದನ್ನು16 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ ಮತ್ತು ಈತನ ಕೃತ್ಯದ ವಿರುದ್ಧ ವೀಕ್ಷಕರು ಪ್ರತಿಕ್ರಿಯೆ ನೀಡಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವಿದೇಶ

World’s Newest Countries: ಇವು ವಿಶ್ವದ 10 ಹೊಸ ರಾಷ್ಟ್ರಗಳು! ಏನು ಈ ರಾಷ್ಟ್ರಗಳ ವಿಶೇಷ?

ಸಮಯದೊಂದಿಗೆ ಜಾಗತಿಕವಾಗಿಯೂ ಹಲವಾರು ಬದಲಾವಣೆಗಳು ಆಗುತ್ತಲೇ ಇರುತ್ತದೆ. ಪ್ರಸ್ತುತ ಜಗತ್ತಿನಲ್ಲಿ 195 ದೇಶಗಳಿವೆ. ಇವುಗಳಲ್ಲಿ ಕೆಲವು ಸಾಕಷ್ಟು ಹಳೆಯವು ಮತ್ತು ಕೆಲವು ಸಾಕಷ್ಟು ಹೊಸದು. ಇದರಲ್ಲಿ ಹತ್ತು ರಾಷ್ಟ್ರಗಳು ಕಳೆದ ಎರಡು ದಶಕಗಳಲ್ಲಿ (World’s Newest Countries) ಸ್ಥಾಪನೆಯಾಗಿರುವುದು. ಈ ಹತ್ತು ದೇಶಗಳ ಸಂಕ್ಪಿಪ್ತ ಪರಿಚಯ ಇಲ್ಲಿದೆ.

VISTARANEWS.COM


on

By

World's Newest Countries
Koo

ಕಳೆದ ಎರಡು ದಶಕಗಳಲ್ಲಿ ವಿಶ್ವದಲ್ಲಿ ಹತ್ತು ಹೊಸ ರಾಷ್ಟ್ರಗಳು (World’s Newest Countries) ರೂಪುಗೊಂಡಿದ್ದು, ಇದರಲ್ಲಿ ದಕ್ಷಿಣ ಸುಡಾನ್ (South Sudan) ಇತ್ತೀಚೆಗೆಷ್ಟೇ ಹುಟ್ಟಿಕೊಂಡಿದೆ. ಸಾಕಷ್ಟು ಸವಾಲುಗಳನ್ನು ಎದುರಿಸಿ ರೂಪುಗೊಂಡಿರುವ ಈ ಹೊಸ ರಾಷ್ಟ್ರಗಳು ಅನೇಕ ಅವಕಾಶಗಳನ್ನೂ ಸೃಷ್ಟಿಸಿದೆ.

ದಕ್ಷಿಣ ಸೂಡಾನ್ ಇದೀಗ ವಿಶ್ವದ ಹೊಸ ದೇಶಗಳ ಪಟ್ಟಿಯಲ್ಲಿದೆ. 2011ರ ಜುಲೈ 9ರಂದು ಸ್ವತಂತ್ರಗೊಂಡ (gained independence) ದಕ್ಷಿಣ ಸುಡಾನ್ ಈಗ ವಿಶ್ವದಲ್ಲಿ ಅಸ್ತಿತ್ವದಲ್ಲಿರುವ ಹೊಸ ದೇಶವಾಗಿದೆ. ಇದರೊಂದಿಗೆ ಹೊಸ ದೇಶಗಳ ಪಟ್ಟಿಯಲ್ಲಿ ಕೊಸೊವೊ (Kosovo), ಮಾಂಟೆನೆಗ್ರೊ (Montenegro), ಸೆರ್ಬಿಯಾ (Serbia), ಪೂರ್ವ ಟಿಮೋರ್ (East Timor) , ಪಲಾವ್ (Palau), ಎರಿಟ್ರಿಯಾ (Eritrea), ಜೆಕ್ ರಿಪಬ್ಲಿಕ್ (Czech Republic), ಸ್ಲೋವಾಕಿಯಾ (Slovakia) ಮತ್ತು ಕ್ರೊಯೇಷಿಯಾ (Croatia) ಕೂಡ ಸೇರ್ಪಡೆಯಾಗಿದೆ.

ಸಮಯದೊಂದಿಗೆ ಜಾಗತಿಕವಾಗಿಯೂ ಹಲವಾರು ಬದಲಾವಣೆಗಳು ಆಗುತ್ತಲೇ ಇರುತ್ತದೆ. ಪ್ರಸ್ತುತ ಜಗತ್ತಿನಲ್ಲಿ 195 ದೇಶಗಳಿವೆ. ಇವುಗಳಲ್ಲಿ ಕೆಲವು ಸಾಕಷ್ಟು ಹಳೆಯವು ಮತ್ತು ಕೆಲವು ಸಾಕಷ್ಟು ಹೊಸದು. ಇದರಲ್ಲಿ ಹತ್ತು ರಾಷ್ಟ್ರಗಳು ಕಳೆದ ಎರಡು ದಶಕಗಳಲ್ಲಿ ಸ್ಥಾಪನೆಯಾಗಿರುವುದು.

ಇತ್ತೀಚಿಗೆ ಸ್ಥಾಪನೆಯಾಗಿರುವ ಪ್ರಪಂಚದ ಹೊಸ ಅಥವಾ ಕಿರಿಯ ರಾಷ್ಟ್ರಗಳು ಅನನ್ಯ ಸವಾಲುಗಳನ್ನು ಎದುರಿಸುತ್ತಿರುವ ನಡುವೆ ಇಲ್ಲಿ ಸಾಕಷ್ಟು ಅವಕಾಶಗಳೂ ಎದ್ದು ಕಾಣುತ್ತಿವೆ. ದಶಕಗಳ ಸಂಘರ್ಷದಿಂದ ಹುಟ್ಟಿದ ದಕ್ಷಿಣ ಸುಡಾನ್‌ನಿಂದ ಹಿಡಿದು ಕೊಸೊವೊ ಅಂತಾರಾಷ್ಟ್ರೀಯ ಮನ್ನಣೆಯ ಹಾದಿಯನ್ನು ಪಡೆಯುವವರೆಗೆ ಪ್ರತಿಯೊಂದು ದೇಶಗಳು ವಿಶಿಷ್ಟವಾದ ಇತಿಹಾಸವನ್ನು ಹೊಂದಿವೆ.

ದಕ್ಷಿಣ ಸುಡಾನ್

2011ರ ಜುಲೈ 9ರಂದು ಸ್ವಾತಂತ್ರ್ಯ ಪಡೆದ ದಕ್ಷಿಣ ಸುಡಾನ್ ಈ ಮೂಲಕ ದಶಕಗಳ ಅಂತರ್ಯುದ್ಧದಕ್ಕೆ ಅಂತ್ಯವನ್ನು ಹಾಡಿತ್ತು. ವೈವಿಧ್ಯಮಯ ಜನಾಂಗೀಯ ಗುಂಪುಗಳಿಗೆ ಮತ್ತು ರಾಜಕೀಯ ಸ್ಥಿರತೆಯ ಹೋರಾಟಗಳಿಗೆ ಈ ರಾಷ್ಟ್ರ ಹೆಸರುವಾಸಿಯಾಗಿದೆ.


ಕೊಸೊವೊ

2008ರ ಫೆಬ್ರವರಿ 17ರಂದು ಸೆರ್ಬಿಯಾದಿಂದ ಕೊಸೊವೊ ಸ್ವಾತಂತ್ರ್ಯವನ್ನು ಘೋಷಿಸಿತು. ಅನೇಕ ದೇಶಗಳಿಂದ ಗುರುತಿಸಲ್ಪಟ್ಟಿದ್ದರೂ ಅಂತಾರಾಷ್ಟ್ರೀಯ ಮನ್ನಣೆ ಪಡೆಯುವಲ್ಲಿ ಸವಾಲುಗಳನ್ನು ಎದುರಿಸುತ್ತಿದೆ.


ಮಾಂಟೆನೆಗ್ರೊ

2006ರ ಜೂನ್ 3ರಂದು ಜನಾಭಿಪ್ರಾಯ ಸಂಗ್ರಹಣೆಯ ಅನಂತರ ಮಾಂಟೆನೆಗ್ರೊ ಸ್ಟೇಟ್ ಯೂನಿಯನ್ ಆಫ್ ಸರ್ಬಿಯಾ ಮತ್ತು ಮಾಂಟೆನೆಗ್ರೊದಿಂದ ಸ್ವಾತಂತ್ರ್ಯವನ್ನು ಘೋಷಿಸಿತು. ಇದು ಆಡ್ರಿಯಾಟಿಕ್ ಕರಾವಳಿಗಳಿಗೆ ಹೆಸರುವಾಸಿಯಾಗಿದೆ ಮತ್ತು ಯುರೋಪಿಯನ್ ಯೂನಿಯನ್ ಸದಸ್ಯತ್ವಕ್ಕಾಗಿ ಅಭ್ಯರ್ಥಿಯಾಗಿದೆ.


ಸೆರ್ಬಿಯಾ

ಸೆರ್ಬಿಯಾ ಮತ್ತು ಮಾಂಟೆನೆಗ್ರೊ ರಾಜ್ಯ ಒಕ್ಕೂಟದ ವಿಸರ್ಜನೆಯ ಅನಂತರ ಸೆರ್ಬಿಯಾ 2006ರ ಜೂನ್ 5ರಂದು ಸ್ವಾತಂತ್ರ್ಯವನ್ನು ಘೋಷಿಸಿತು. ಇದು ಆರ್ಥಿಕ ಸುಧಾರಣೆಗಳು ಮತ್ತು ಯುರೋಪಿಯನ್ ಏಕೀಕರಣದ ಮೇಲೆ ಕೇಂದ್ರೀಕರಿಸಿದೆ.


ಪೂರ್ವ ಟಿಮೋರ್

2002ರ ಮೇ 20ರಂದು ರೂಪುಗೊಂಡ ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಟಿಮೋರ್- ಲೆಸ್ಟೆ, ಆಗ್ನೇಯ ಏಷ್ಯಾದ ಒಂದು ಸುಂದರವಾದ ದ್ವೀಪ ರಾಷ್ಟ್ರವಾಗಿದೆ.


ಪಲಾವ್

1994ರ ಅಕ್ಟೋಬರ್ 1ರಂದು ಪಲಾವ್ ರಾಷ್ಟ್ರ ಕಾಂಪ್ಯಾಕ್ಟ್ ಆಫ್ ಫ್ರೀ ಅಸೋಸಿಯೇಷನ್ ​​ಅಡಿಯಲ್ಲಿ ಯುನೈಟೆಡ್ ಸ್ಟೇಟ್ಸ್ ನಿಂದ ಸ್ವತಂತ್ರವಾಯಿತು. ಇದು ಸಮುದ್ರದ ಜೀವವೈವಿಧ್ಯತೆ ಮತ್ತು ಪರಿಸರ ಸಂರಕ್ಷಣೆಯಲ್ಲಿನ ಪ್ರಯತ್ನಗಳಿಗೆ ಹೆಸರುವಾಸಿಯಾಗಿದೆ.


ಎರಿಟ್ರಿಯಾ

ಸುದೀರ್ಘ ಸ್ವಾತಂತ್ರ್ಯ ಹೋರಾಟದ ಅನಂತರ 1993ರ ಮೇ 24ರಂದು ಎರಿಟ್ರಿಯಾ ಇಥಿಯೋಪಿಯಾದಿಂದ ಸ್ವಾತಂತ್ರ್ಯ ಪಡೆಯಿತು. ಇದು ಆಡಳಿತ, ಮಾನವ ಹಕ್ಕುಗಳು ಮತ್ತು ಆರ್ಥಿಕ ಅಭಿವೃದ್ಧಿಯಲ್ಲಿ ಸವಾಲುಗಳನ್ನು ಎದುರಿಸುತ್ತಿದೆ.


ಜೆಕ್ ಗಣರಾಜ್ಯ

ಜೆಕೊಸ್ಲೊವಾಕಿಯಾದ ಶಾಂತಿಯುತ ವಿಸರ್ಜನೆಯ ಅನಂತರ 1993ರ ಜನವರಿ 1ರಂದು ಜೆಕ್ ರಿಪಬ್ಲಿಕ್ ಅಥವಾ ಜೆಕಿಯಾ ಸ್ವತಂತ್ರ ರಾಷ್ಟ್ರವಾಗಿ ಹೊರಹೊಮ್ಮಿತು. ಪ್ರಾಗ್ ಅದರ ರಾಜಧಾನಿ. ಇದು ವಾಸ್ತುಶಿಲ್ಪದ ಸೌಂದರ್ಯಕ್ಕೆ ಹೆಸರುವಾಸಿಯಾಗಿದೆ.

ಇದನ್ನೂ ಓದಿ: Sam Pitroda: ಸಾಗರೋತ್ತರ ಕಾಂಗ್ರೆಸ್‌ ಅಧ್ಯಕ್ಷರಾಗಿ ಸ್ಯಾಮ್‌ ಪಿತ್ರೋಡಾ ಮತ್ತೆ ನೇಮಕ; ದಕ್ಷಿಣ ಭಾರತೀಯರನ್ನು ಆಫ್ರಿಕನ್ನರಿಗೆ ಹೋಲಿಸಿದ್ದ ನಾಯಕ


ಸ್ಲೋವಾಕಿಯಾ

ಜೆಕೊಸ್ಲೊವಾಕಿಯಾದ ಇತರ ಅರ್ಧಭಾಗವಾದ ಸ್ಲೋವಾಕಿಯಾ ಕೂಡ 1993ರ ಜನವರಿ 1ರಂದು ಸ್ವಾತಂತ್ರ್ಯವನ್ನು ಗಳಿಸಿತು. ಜೆಕ್ ಗಣರಾಜ್ಯದೊಂದಿಗೆ ಪ್ರತ್ಯೇಕ ರಾಷ್ಟ್ರವಾಯಿತು.


ಕ್ರೊಯೇಷಿಯಾ

ಕ್ರೊಯೇಷಿಯಾ ಗಣರಾಜ್ಯವು 1991ರ ಜೂನ್ 25ರಂದು ಸ್ವಾತಂತ್ರ್ಯವನ್ನು ಘೋಷಿಸಿತು. ಕ್ರೊಯೇಷಿಯಾ ಯುರೋಪ್‌ನಲ್ಲಿ ರೋಮಾಂಚಕ ಪ್ರವಾಸಿ ತಾಣವಾಗಿ ಹೆಚ್ಚು ಜನಪ್ರಿಯವಾಗುತ್ತಿದೆ.

Continue Reading

ಸಿನಿಮಾ

Kalki 2898AD: ಕಲಿಯುಗದಲ್ಲಿ ʼಕಲ್ಕಿʼಯ ಆಗಮನದ ಚರ್ಚೆ ಹುಟ್ಟು ಹಾಕಿದ ‘ಕಲ್ಕಿ 2898ಎಡಿ’ ಸಿನಿಮಾ!

ಭಗವಾನ್ ವಿಷ್ಣುವಿನ 10ನೇ ಅವತಾರವಾದ ಕಲ್ಕಿಯು ಕಲಿಯುಗವನ್ನು ಕೊನೆಗೊಳಿಸಿ ಸತ್ಯಯುಗವನ್ನು ಪ್ರಾರಂಭಿಸಲು ಕಲಿಯುಗದ ಕೊನೆಯಲ್ಲಿ ಅವತಾರವೆತ್ತುತ್ತಾನೆ ಎಂದೇ ನಂಬಲಾಗಿದೆ. ಈಗ ಬಿಡುಗಡೆಯಾಗಿರುವ ಕಲ್ಕಿ 2898ಎಡಿ (Kalki 2898AD) ಚಿತ್ರ ಹಿಂದುಗಳಲ್ಲಿ ಕಲ್ಕಿಯ ಆಗಮನದ ಕುರಿತು ಚರ್ಚೆಯನ್ನು ಹುಟ್ಟು ಹಾಕಿದೆ. ಈ ಕುರಿತ ಕುತೂಹಲಕರ ಮಾಹಿತಿಯ ವರದಿ ಇಲ್ಲಿದೆ.

VISTARANEWS.COM


on

By

Kalki 2898AD
Koo

ವಿಶ್ವದಾದ್ಯಂತ (world) ತೆರೆಗೆ ಬಂದ ಅತ್ಯಂತ ದುಬಾರಿ ಚಿತ್ರ (film) ʼಕಲ್ಕಿ 2898 ಎಡಿʼ (Kalki 2898AD) ಈಗ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಇದಕ್ಕೆ ಮುಖ್ಯ ಕಾರಣ ಇದು ಹಿಂದೂ ಧರ್ಮದ (hindu dharma) ವಿಷಯದ ಮೇಲೆ ಕೇಂದ್ರೀಕೃತವಾಗಿರುವುದು. ಭಗವಾನ್ ವಿಷ್ಣುವಿನ (baghavan vishnu) 10ನೇ ಅವತಾರ ಕಲ್ಕಿ (kalki). ಸದಾಚಾರ ಮತ್ತು ನೈತಿಕ ನಡವಳಿಕೆಯನ್ನು ಉತ್ತೇಜಿಸುವ ಕಲ್ಕಿ, ಕಲಿಯುಗವನ್ನು ಕೊನೆಗೊಳಿಸಿ ಮತ್ತೆ ಸತ್ಯಯುಗದ ಸುವರ್ಣ ಯುಗವನ್ನು ಪ್ರಾರಂಭಿಸುತ್ತಾನೆ ಎಂದು ನಂಬಲಾಗಿದೆ.

Kalki 2898AD

ಕಲ್ಕಿಯ ಆಗಮನವು ಹಿಂದೂಗಳಲ್ಲಿ ಹೆಚ್ಚು ಚರ್ಚೆಯ ವಿಷಯವಾಗಿದೆ. ಈತ ಕಲಿಯುಗದ ಅಂತ್ಯದಲ್ಲಿ ಕಾಣಿಸಿಕೊಳ್ಳುತ್ತಾನೆ ಎಂದೇ ಭಾವಿಸಲಾಗಿದೆ. ಕಲಿಯುಗ ವಂಚನೆ, ಪಾಪ ಮತ್ತು ಅನೈತಿಕತೆಯಿಂದ ತುಂಬಿರುವ ಯುಗವಾಗಿದೆ. ಇದೀಗ ತೆರೆಗೆ ಬಂದಿರುವ ‘ಕಲ್ಕಿ 2898 ಎಡಿ’ ಈ ಕುರಿತು ಸಾಕಷ್ಟು ಚರ್ಚೆಯನ್ನು ಹುಟ್ಟು ಹಾಕಿದೆ. ತೆಲುಗು ಸೂಪರ್‌ಸ್ಟಾರ್ ಪ್ರಭಾಸ್, ಬಾಲಿವುಡ್ ತಾರೆಗಳಾದ ಅಮಿತಾಬ್ ಬಚ್ಚನ್, ದೀಪಿಕಾ ಪಡುಕೋಣೆ ಮತ್ತು ತಮಿಳಿನ ಹಿರಿಯ ನಟ ಕಮಲ್ ಹಾಸನ್ ಒಳಗೊಂಡ ಈ ಚಿತ್ರದಲ್ಲಿ ಪೌರಾಣಿಕ ಕಥೆ ಮತ್ತು ವಿಜ್ಞಾನವನ್ನು ಹದವಾಗಿ ಬೆರೆಸಿ ಅದ್ಭುತವಾಗಿ ನಿರ್ಮಿಸಲಾಗಿದೆ. ನಾಗ್ ಅಶ್ವಿನ್ ನಿರ್ದೇಶನದ ಬಹುತೇಕ ಎಲ್ಲಾ ಪ್ರಮುಖ ಪಾತ್ರಗಳನ್ನು ಹಿಂದೂ ಧರ್ಮಗ್ರಂಥಗಳಲ್ಲಿ ಗುರುತಿಸಬಹುದು. ಟ್ರೇಲರ್‌ನಲ್ಲಿ ಭವಿಷ್ಯ ನುಡಿದ ಕಲ್ಕಿಯ ಗುರುತಿನ ಬಗ್ಗೆ ಅಶ್ವಿನ್ ಯಾವುದೇ ಸುಳಿವು ನೀಡಲಿಲ್ಲ.

ಕಲ್ಕಿಯ ಆಗಮನವು ಹಿಂದೂಗಳಲ್ಲಿ ಹೆಚ್ಚು ಚರ್ಚಾಸ್ಪದ ವಿಷಯಗಳಲ್ಲಿ ಒಂದಾಗಿದೆ. ಕಲ್ಕಿಯ ಆಗಮನ ಮತ್ತು ಪ್ರಸ್ತುತ ಕಲಿಯುಗ ಹೌದೋ ಅಲ್ಲವೋ ಎಂಬುದು ಇನ್ನೂ ಚರ್ಚೆಯಲ್ಲೇ ಇದೆ. ಈ ಘಟನೆಗಳ ನಿಖರವಾದ ಕಾಲಮಿತಿಯನ್ನು ಕೆಲವು ವಿದ್ವಾಂಸರು ಒಪ್ಪುವುದಿಲ್ಲ. ಕಲ್ಕಿಯ ಆಗಮನಕ್ಕೆ ಹಿಂದೂಗಳಲ್ಲಿ ಸಾಕಷ್ಟು ಮಂದಿ ಅತ್ಯಂತ ಕುತೂಹಲದಿಂದ ಕಾಯುತ್ತಿದ್ದಾರೆ. ಈ ನಿಗೂಢ ವ್ಯಕ್ತಿಯ ಬಗ್ಗೆ ತಿಳಿದುಕೊಳ್ಳಬೇಕಾದ ಕೆಲವು ವಿಷಯಗಳು ಇಲ್ಲಿವೆ.

ಯಾವುದರಲ್ಲಿದೆ ಕಲ್ಕಿಯ ಮಾಹಿತಿ?

ಕಲ್ಕಿಯನ್ನು ಮೊದಲು ಉಲ್ಲೇಖಿಸಿದ್ದು ಮಹಾಕಾವ್ಯ ‘ಮಹಾಭಾರತ’. ಮಹಾಭಾರತದಲ್ಲಿ ಕಲ್ಕಿಯ ಉಲ್ಲೇಖವು 3.188.85-3.189.6 ಪದ್ಯಗಳಲ್ಲಿ ಒಮ್ಮೆ ಮಾತ್ರ ಕಾಣ ಸಿಗುತ್ತದೆ. ಗರುಡ ಪುರಾಣದಂತಹ ಹಲವಾರು ಪವಿತ್ರ ಹಿಂದೂ ಗ್ರಂಥಗಳಲ್ಲಿ ಆತನನ್ನು ಉಲ್ಲೇಖಿಸಲಾಗಿದೆ. ಗರುಡ ಪುರಾಣವು ಕಲ್ಕಿಯನ್ನು ವಿಷ್ಣುವಿನ ಹತ್ತನೇ ಅವತಾರ ಎಂದು ವಿವರಿಸುತ್ತದೆ. ಅವನು ಭೂಮಿಯ ಮೇಲೆ ಕಾಣಿಸಿಕೊಳ್ಳುತ್ತಾನೆ ಮತ್ತು ಕಲಿಯುಗವನ್ನು ಕೊನೆಗೊಳಿಸುತ್ತಾನೆ. ಸತ್ಯ ಯುಗ ಅಥವಾ ಸದ್ಗುಣ ಮತ್ತು ಸದಾಚಾರದ ಯುಗವನ್ನು ಪ್ರಾರಂಭಿಸುತ್ತಾನೆ.

Kalki

ಕಲ್ಕಿಯು ದೇವದತ್ತ ಎಂಬ ಬಿಳಿ ಕುದುರೆಯ ಮೇಲೆ ಸವಾರಿ ಮಾಡುತ್ತಾ ಮತ್ತು ಖಡ್ಗವನ್ನು ಹಿಡಿದುಕೊಂಡು ಬರುವ ಅದ್ಭುತ ವ್ಯಕ್ತಿ ಎಂದು ವಿವರಿಸಲಾಗಿದೆ. ಶ್ರೀಮದ್ ಭಾಗವತ ಪುರಾಣದ ಪ್ರಕಾರ ಕಲ್ಕಿಯು ಶಂಬಲಾ ಗ್ರಾಮದಲ್ಲಿ ಕಲಿತ ಬ್ರಾಹ್ಮಣ ವಿಷ್ಣುಯಾಶ ಮತ್ತು ಅವನ ಹೆಂಡತಿ ಸುಮತಿಯ ಕುಟುಂಬದಲ್ಲಿ ಹದಿಮೂರನೇ ದಿನದಂದು ಬೆಳೆಯುತ್ತಿರುವ ಚಂದ್ರನ ಹದಿನೈದನೇ ದಿನದಂದು ಜನಿಸುತ್ತಾನೆ. ಪರಾಕ್ರಮಿ ಯೋಧನ ಹೊರತಾಗಿ ಕಲ್ಕಿ ಹೆಸರಾಂತ ವಿದ್ವಾಂಸನೂ ಆಗಿರುತ್ತಾನೆ. ಅವನು ಪವಿತ್ರ ಗ್ರಂಥಗಳ ಬಗ್ಗೆ ಜ್ಞಾನವನ್ನು ಪಡೆಯುತ್ತಾನೆ. ಭಗವಾನ್ ವಿಷ್ಣುವಿನ ಆರನೇ ಅವತಾರವಾದ ಪರಶುರಾಮನ ಆಶ್ರಯದಲ್ಲಿ ತರಬೇತಿಯನ್ನು ಪಡೆಯುತ್ತಾನೆ. ಕಲ್ಕಿ ಕೂಡ ಭಕ್ತ ಶೈವನಾಗಿರುತ್ತಾನೆ. ಅವನಿಗೆ ಶಿವನು ಎರಡು ಉಡುಗೊರೆಗಳನ್ನು ನೀಡುತ್ತಾನೆ. ದೇವದತ್ತ ಎಂಬ ಬಿಳಿ ಕುದುರೆ, ಶುಕ ಎಂಬ ಗಿಳಿ. ಇದು ಭೂತ, ವರ್ತಮಾನ ಮತ್ತು ಭವಿಷ್ಯದ ಬಗ್ಗೆ ಜ್ಞಾನವನ್ನು ಹೊಂದಿರುತ್ತದೆ ಮತ್ತು ಹೊಳೆಯುವ, ರತ್ನಖಚಿತ ಖಡ್ಗವನ್ನು ನೀಡುತ್ತದೆ ಎಂಬ ಉಲ್ಲೇಖವಿದೆ.

ಇದನ್ನೂ ಓದಿ: Kalki 2898 AD: ಕ್ಯೂ ನಿಂತು ಟಿಕೆಟ್‌ ಖರೀದಿಸಿ ʼಕಲ್ಕಿʼ ವೀಕ್ಷಿಸಿದ ಸ್ಟಾರ್‌ ನಿರ್ದೇಶಕ! ವೈರಲ್‌ ಫೋಟೊ ಇಲ್ಲಿದೆ

ಕಲ್ಕಿಯು ತಪ್ಪು ಮಾಡುವವರ ವಿರುದ್ಧ ಹೋರಾಡುತ್ತಾನೆ. ಶಂಬಲಕ್ಕೆ ಹಿಂದಿರುಗಿ ಅಲ್ಲಿ ಅವನು ಸತ್ಯ ಯುಗವನ್ನು ಸ್ಥಾಪಿಸುತ್ತಾನೆ. ಅದು ಸದಾಚಾರ ಮತ್ತು ನೈತಿಕ ನಡವಳಿಕೆಯನ್ನು ಉತ್ತೇಜಿಸುತ್ತದೆ. ಅಂತಿಮವಾಗಿ ವಿಷ್ಣುವಿನ ವಾಸಸ್ಥಾನವೆಂದು ಪರಿಗಣಿಸಲಾದ ವೈಕುಂಠಕ್ಕೆ ತೆರಳುತ್ತಾನೆ ಎಂದು ಉಲ್ಲೇಖಿಸಲಾಗಿದೆ.

ಕಲ್ಕಿ ಯಾವಾಗ ಬರುತ್ತಾನೆ?

ಕಲ್ಕಿಯ ಆಗಮನದ ಸಂಭವನೀಯ ಸಮಯದ ಬಗ್ಗೆ ಚರ್ಚೆ ನಡೆಯುತ್ತಿದೆ. ಶ್ರೀಕೃಷ್ಣನ ಮರಣದ ಅನಂತರ 5,125 ವರ್ಷಗಳ ಹಿಂದೆ ಕಲಿಯುಗ ಪ್ರಾರಂಭವಾಯಿತು ಎಂದು ಅನೇಕ ಹಿಂದೂಗಳು ನಂಬುತ್ತಾರೆ. ಇದು 4,32,000 ವರ್ಷಗಳವರೆಗೆ ಇರುತ್ತದೆ. ಆದ್ದರಿಂದ ಕಲ್ಕಿಯು ಜನನದ ಮೊದಲು 4,26,875 ವರ್ಷಗಳು ಪೂರ್ಣವಾಗಬೇಕು ಎಂದೂ ಹೇಳಲಾಗುತ್ತದೆ. ಅಂತೂ Kalki 2898AD ಚಿತ್ರ ಕಲ್ಕಿ ಮತ್ತು ಆತನ ಆಗಮನದ ಬಗ್ಗೆ ಚರ್ಚೆಗೆ ಕಾರಣವಾಗಿದೆ.

Continue Reading

Latest

Railway New Rules: ರೈಲು ಪ್ರಯಾಣಿಕರೇ, ಬರ್ತ್‌ನಲ್ಲಿ ಮಲಗುವ ಕುರಿತ ಈ ಹೊಸ ರೂಲ್ಸ್‌ ನೆನಪಿನಲ್ಲಿರಲಿ!

Railway New Rules : ಇನ್ನು ಮುಂದೆ ರೈಲಿನ ಮಧ್ಯದ ಸೀಟ್‌ನಲ್ಲಿ ಪ್ರಯಾಣಿಸುವ ಪ್ರಯಾಣಿಕರು ತಮ್ಮ ಸೀಟ್ ಅನ್ನು ತೆರೆದ ನಂತರ ಉಕ್ಕಿನ ಚೌಕಟ್ಟಿಗೆ ಲಗತ್ತಿಸಲಾದ 2 ಸರಪಳಿಗಳಿಂದ ಭದ್ರಗೊಳಿಸಿದ್ದು ಖಚಿತಪಡಿಸಿಕೊಳ್ಳಬೇಕು. ಪ್ರಯಾಣ ಮುಗಿದ ನಂತರ ಅಥವಾ ಮಲಗಿದ ನಂತರ ಅದನ್ನು ಮೊದಲಿನಂತೆ ಮಡಚಿ ಇಡಬೇಕು. ಕೆಳಗಿನ ಪ್ರಯಾಣಿಕರಿಗೆ ಹಗಲಿನಲ್ಲಿ ಕುಳಿತುಕೊಳ್ಳಲು ಅನಾನುಕೂಲ ಆಗುತ್ತಿರುವ ಹಿನ್ನೆಲೆಯಲ್ಲಿ ಭಾರತೀಯ ರೈಲ್ವೆ ಈ ಬದಲಾವಣೆ ಮಾಡಿದೆ.

VISTARANEWS.COM


on

Railway New Rules
Koo

ನವದೆಹಲಿ: ಭಾರತೀಯ ರೈಲ್ವೆಯು (Railway) ಎಸಿ ಮತ್ತು ಸ್ಲೀಪರ್ ಕೋಚ್‌ಗಳಲ್ಲಿ ಮಧ್ಯಮ ಬರ್ತ್‌ನಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಕೆಲವು ನಿಯಮವನ್ನು (Railway New Rules) ಜಾರಿಗೆ ತಂದಿದೆ. ಪ್ರಯಾಣಿಕರ ಸೌಕರ್ಯಗಳನ್ನು ಗಮನದಲ್ಲಿಟ್ಟುಕೊಂಡು ಮತ್ತು ರೈಲು ಪ್ರಯಾಣವನ್ನು ಆರಾಮದಾಯಕವಾಗಿಲು ಈ ಬದಲಾವಣೆಗಳನ್ನು ತರಲಾಗಿದೆ. ಮಧ್ಯಮ ಬರ್ತ್‌ನಲ್ಲಿ ಪ್ರಯಾಣಿಸುವ ಪ್ರಯಾಣಿಕರು ತಮ್ಮ ಬರ್ತ್ ಅನ್ನು ತೆರೆದ ನಂತರ ಉಕ್ಕಿನ ಚೌಕಟ್ಟಿಗೆ ಲಗತ್ತಿಸಲಾದ 2 ಸರಪಳಿಗಳಿಂದ ನಿಮ್ಮ ಬರ್ತ್ ಅನ್ನು ಭದ್ರಗೊಳಿಸಬೇಕು. ಪ್ರಯಾಣ ಮುಗಿದ ನಂತರ ಅಥವಾ ಮಲಗಿದ ನಂತರ ಅದನ್ನು ಮೊದಲಿನಂತೆ ಮಡಚಿ ಇಡಬೇಕು.

ಭಾರತೀಯ ರೈಲ್ವೆಯ ಕೈಪಿಡಿ, ಸಂಪುಟ-1ರ ಪ್ಯಾರಾ 652ರ ತಿದ್ದುಪಡಿಯ ಮೂಲಕ 3 ಹಂತದ ಸ್ಲೀಪರ್ ಕೋಚ್ ಗಳ ಮಧ್ಯಮ ಬರ್ತ್ ಗಳಲ್ಲಿ ಮಲಗುವ ಪ್ರಯಾಣಿಕರ ವಸತಿಗೆ ಸಂಬಂಧಿಸಿದ ಸುತ್ತೋಲೆಯಲ್ಲಿ ಭಾರತೀಯ ರೈಲ್ವೆ ಈ ತಿದ್ದುಪಡಿಯನ್ನು ಮಾಡಿದೆ. ಎಸಿ ಮತ್ತು ಸ್ಲೀಪರ್ ಕೋಚ್ ಗಳಲ್ಲಿ ಮಧ್ಯಮ ಬರ್ತ್ ಅನ್ನು ನಿಗದಿಪಡಿಸಿದ ಪ್ರಯಾಣಿಕರು ರೈಲು ಪ್ರಯಾಣದ ಸಮಯದಲ್ಲಿ ರಾತ್ರಿ 10ರಿಂದ ಬೆಳಗ್ಗೆ 6ರವರೆಗೆ ಮಾತ್ರ ಬರ್ತ್ ಅನ್ನು ತೆರೆದಿರಬೇಕು ಎಂದು ಷರತ್ತು ವಿಧಿಸಲಾಗಿದೆ.

ಈ ಹಿಂದೆ ರಾತ್ರಿ 9ರಿಂದ ಬೆಳಗ್ಗೆ 6ರವರೆಗೆ ಒಟ್ಟು 9 ಗಂಟೆಗಳ ಕಾಲ ತೆರೆದಿಡಬಹುದಾಗಿದ್ದ ಬರ್ತ್ ಅನ್ನು 8 ಗಂಟೆಗಳ ಕಾಲಾವಧಿಗೆ ಇಳಿಸಲಾಗಿದೆ. ಕೆಳ ಬರ್ತ್ ನ ಪ್ರಯಾಣಿಕರಿಗೆ ಹಗಲಿನಲ್ಲಿ ಕುಳಿತುಕೊಳ್ಳಲು ಸಾಧ್ಯವಾಗದ ಹಿನೆಲೆಯಲ್ಲಿ ಈ ಬಗ್ಗೆ ಪ್ರಯಾಣಿಕರು ದೂರು ದಾಖಲಿಸಿದ ಕಾರಣ ಭಾರತೀಯ ರೈಲ್ವೆ ಈ ಬದಲಾವಣೆ ಮಾಡಿದೆ. ಈ ಷರತ್ತಿನ ಮೂಲಕ ಕೆಳ ಬರ್ತ್ ಪ್ರಯಾಣಿಕರು ಬೆಳಗ್ಗೆ 6 ಗಂಟೆಯ ನಂತರ ತಮ್ಮ ಬರ್ತ್ ಅನ್ನು ಮಡಚುವಂತೆ ಮಧ್ಯಮ ಬರ್ತ್ ಪ್ರಯಾಣಿಕರಿಗೆ ವಿನಂತಿಸಬಹುದು. ಸೈಡ್ ಲೋವರ್ ಬರ್ತ್ ನ ಪ್ರಯಾಣಿಕರು ಹಗಲಿನಲ್ಲಿ ಸೈಡ್ ಮೇಲಿನ ಬರ್ತ್ ಪ್ರಯಾಣಿಕರಿಗೆ ಕುಳಿತುಕೊಳ್ಳಲು ಅವಕಾಶ ನೀಡಬೇಕು. ಆದರೆ ಸೈಡ್ ಮೇಲಿನ ಬರ್ತ್ ಪ್ರಯಾಣಿಕರು ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ಸೈಡ್ ಲೋವರ್ ಬರ್ತ್ ನಲ್ಲಿ ಕುಳಿತುಕೊಳ್ಳುವಂತಿಲ್ಲ ಎಂದು ಭಾರತೀಯ ರೈಲ್ವೆ ಸುತ್ತೋಲೆಯಲ್ಲಿ ತಿಳಿಸಿದೆ. ಇದು ಎಲ್ಲಾ ವಿಧದ ಸೈಡ್ ಬರ್ತ್ ಪ್ರಯಾಣಿಕರಿಗೂ ಅನ್ವಯಿಸುತ್ತದೆ.

ಇದನ್ನೂ ಓದಿ: ಸರ್ಜಾಪುರ-ಹೆಬ್ಬಾಳದ 3ಎ ಮೆಟ್ರೋ ಮಾರ್ಗ ಯಾವಾಗ ಪೂರ್ಣ?

ಆದರೆ ಭಾರತೀಯ ರೈಲ್ವೆಯ ಈ ನಿಯಮ ಅನಾರೋಗ್ಯ ಪೀಡಿತ ವ್ಯಕ್ತಿಗಳು, ಗರ್ಭಿಣಿಯರು ಹಾಗೂ ಅಂಗವಿಕಲರಿಗೆ ವಿನಾಯಿತಿ ನೀಡಲು ಹಾಗೂ ಅವರಿಗೆ ಹೆಚ್ಚು ಕಾಲ ಮಲಗಲು ಅವಕಾಶ ನೀಡುವಂತೆಯೂ ಅವಕಾಶ ಕಲ್ಪಿಸಿದೆ.
ಇತ್ತೀಚೆಗೆ ನವದೆಹಲಿಗೆ ತೆರಳುತ್ತಿದ್ದ ರೈಲಿನಲ್ಲಿ ಮಧ್ಯಮ ಬರ್ತ್ ನಲ್ಲಿ ಮಲಗಿದ್ದ ಪ್ರಯಾಣಿಕ ಸರಿಯಾಗಿ ಸರಪಳಿಯನ್ನು ಹಾಕದೇ ಇದ್ದ ಕಾರಣ ಬರ್ತ್ ಕುಸಿದು ಕೆಳ ಬರ್ತ್‌ನಲ್ಲಿ ಮಲಗಿದ್ದ 62 ವರ್ಷದ ವ್ಯಕ್ತಿಯ ಮೇಲೆ ಬಿದ್ದಿತ್ತು. ಇದರಿಂದ ಆ ವ್ಯಕ್ತಿಯ ಕತ್ತಿನ ಮೂಳೆ ಮುರಿದು ಆತ ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದ್ದನ್ನು ಸ್ಮರಿಸಬಹುದು.

Continue Reading

Latest

Viral News: ಆರ್ಡರ್ ಮಾಡಿ 6 ವರ್ಷ ಕಳೆದರೂ ವಸ್ತು ಕಳುಹಿಸದ ಫ್ಲಿಪ್‌ಕಾರ್ಟ್!

Viral News: ಈಗ ಮನೆಗೆ ಬೇಕಾಗಿರುವ ವಸ್ತುಗಳಿಂದ ಹಿಡಿದು ತಿನ್ನುವುದಕ್ಕೆ ಬೇಕಾಗಿರುವ ಆಹಾರದವರೆಗೆ ಎಲ್ಲವನ್ನೂ ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿ ತರಿಸಿಕೊಳ್ಳುವ ಕಾಲ! ಕಣ್ಣು ಮುಚ್ಚಿ ತೆರೆಯುವುದರೊಳಗೆ ಮನೆಬಾಗಿಲಿಗೆ ನೀವು ಆರ್ಡರ್ ಮಾಡಿದ ವಸ್ತು ಬಂದು ಬೀಳುತ್ತೆ. ಅಂಥದ್ದರಲ್ಲಿ ಇಲ್ಲೊಬ್ಬರಿಗೆ ಆರ್ಡರ್ ಮಾಡಿ 6 ವರ್ಷದ ಬಳಿಕ ಪೇಡಿಂಗ್‌ ಆರ್ಡರ್‌ ಕುರಿತು ಫ್ಲಿಪ್‌ಕಾರ್ಟ್‌ನಿಂದ ಕರೆ ಬಂದಿದೆಯಂತೆ. ಅಹ್ಸಾನ್ ಖರ್ಬಾಯಿ ಎಂಬ ಮುಂಬೈ ನಿವಾಸಿ ತಮ್ಮ ಇನ್ ಸ್ಟಾಗ್ರಾಂ ಪೇಜ್ ನಲ್ಲಿ ಅವರ ಆರ್ಡರ್ ಹಿಸ್ಟ್ರಿಯನ್ನು ಸ್ಕ್ರೀನ್ ಶಾಟ್ ತೆಗೆದು ಪೋಸ್ಟ್ ಮಾಡಿ ತಮಗಾದ ಈ ವಿಚಿತ್ರ ಅನುಭವವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

VISTARANEWS.COM


on

Viral News
Koo

ಮುಂಬೈ: ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರು ಆನ್‌ಲೈನ್ ವೆಬ್‌ಸೈಟ್‌ಗಳಲ್ಲಿ ವಸ್ತುಗಳನ್ನು ಆರ್ಡರ್ ಮಾಡುತ್ತಾರೆ. ಬಹುತೇಕ ಸಮಯ ಈ ಆರ್ಡರ್ ಅವರು ತಿಳಿಸಿದ ಸಮಯಕ್ಕೆ ಸರಿಯಾಗಿ ಬರುತ್ತದೆ, ಕೆಲವೊಮ್ಮೆ ಅದಕ್ಕೂ ಮುಂಚಿತವಾಗಿ ಬರುತ್ತದೆ. ಆದರೆ ಮುಂಬೈ ವ್ಯಕ್ತಿಯೊಬ್ಬರಿಗೆ ವಸ್ತುವನ್ನು ಆರ್ಡರ್ ಮಾಡಿದ 6 ವರ್ಷಗಳ ನಂತರ ಕಸ್ಟಮರ್ ಕೇರ್‌ನಿಂದ ಕರೆ ಬಂದಿದೆಯಂತೆ. ಅಂದ ಹಾಗೆ ಆರು ವರ್ಷ ಕಳೆದರೂ ಅವರಿಗೆ ಆರ್ಡರ್‌ ಮಾಡಿದ ವಸ್ತು ಬಂದಿರಲಿಲ್ಲ. ಈ ಸುದ್ದಿಯನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಇದು ವೈರಲ್(Viral News) ಆಗಿದೆ.

ಅಹ್ಸಾನ್ ಖರ್ಬಾಯಿ ಎಂಬ ಮುಂಬೈ ನಿವಾಸಿ ತಮ್ಮ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ಅವರ ಆರ್ಡರ್ ಹಿಸ್ಟ್ರಿಯನ್ನು ಸ್ಕ್ರೀನ್ ಶಾಟ್ ತೆಗೆದು ಪೋಸ್ಟ್ ಮಾಡಿ ತಮಗಾದ ಈ ವಿಚಿತ್ರ ಅನುಭವವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಪೋಸ್ಟ್ ನಲ್ಲಿ ಅವರು ತಿಳಿಸಿದಂತೆ 2018ರಲ್ಲಿ ಫ್ಲಿಪ್ ಕಾರ್ಟ್ ಇ ಕಾಮರ್ಸ್ ವೆಬ್ ಸೈಟ್‌ನಲ್ಲಿ ಅಹ್ಸಾನ್ ಸ್ಪಾರ್ಕ್ಸ್ ಚಪ್ಪಲಿಯನ್ನು ಆರ್ಡರ್ ಮಾಡಿದ್ದರಂತೆ. ಆದರೆ ಚಪ್ಪಲಿಯನ್ನು ಅವರು ಇಂದಿಗೂ ಡೆಲಿವರಿ ನೀಡಲಿಲ್ಲ. ಆದರೆ 6 ವರ್ಷಗಳು ಕಳೆದ ನಂತರ ಅದು ಡೆಲಿವರಿ ಆಗಲಿದೆ ಎಂದು ತೋರಿಸುತ್ತಿದ್ದ ಕಾರಣ ಅವರು ಅದನ್ನು ಕ್ಲಿಕ್ ಮಾಡಿದ್ದಾರೆ. ಆಗ ಫ್ಲಿಪ್ ಕಾರ್ಟ್ ಕಸ್ಟಮರ್ ಕೇರ್ ನಿಂದ ಕರೆ ಬಂದಿದೆಯಂತೆ. “ನೀವು ಆರ್ಡರ್ ನೊಂದಿಗೆ ಯಾವ ಸಮಸ್ಯೆಯನ್ನು ಎದುರಿಸುತ್ತಿದ್ದೀರಾ?” ಎಂದು ಕೇಳುವ ಕರೆಯನ್ನು ಸ್ವೀಕರಿಸಿದ ಅಹ್ಸಾನ್ ಅದಕ್ಕೆ ಉತ್ತರಿಸಿದ್ದಕ್ಕೆ “ಫ್ಲಿಪ್ ಕಾರ್ಟ್ ನಿಂದ ನಿಮಗೆ ಯಾವುದೇ ಕರೆ ಬರಲಿಲ್ಲವೇ? ಇದಕ್ಕಾಗಿ ನಾವು ವಿಷಾದಿಸುತ್ತೇವೆ ಸರ್” ಎಂದು ಹೇಳಿ ಕರೆ ಕಟ್ ಆಗಿದೆಯಂತೆ.

ಅಹ್ಸಾನ್ ಅವರು ಆರ್ಡರ್ ಅನ್ನು ಕ್ಯಾಶ್ ಆನ್ ಡೆಲಿವರಿಗೆ ಮಾಡಿದ್ದರಿಂದ ಅವರು ಆ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಲು ಹೋಗಲಿಲ್ಲವಂತೆ. ಆದರೆ ಅದನ್ನು ರದ್ದುಗೊಳಿಸಲು ಅದರಲ್ಲಿ ಯಾವುದೇ ಆಯ್ಕೆ ಇರಲಿಲ್ಲ ಎಂಬುದಾಗಿ ಅವರು ತಿಳಿಸಿದ್ದಾರೆ. ಆದರೆ ಅವರ ಆರ್ಡರ್ ಲಿಸ್ಟ್ ತೆಗೆದಾಗ ಮೊದಲು ಅದೇ ಆರ್ಡರ್ ಬರುವ ಕಾರಣ ಅದನ್ನು ಅವರೇ ರದ್ದುಗೊಳಿಸಬೇಕೆಂದು ಅಹ್ಸಾನ್ ಕೇಳಿಕೊಂಡಿದ್ದಾರೆ.

Viral News

ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಪೋಸ್ಟ್ ಗೆ 1.3 ಲಕ್ಷಕ್ಕೂ ಹೆಚ್ಚು ವೀವ್ಸ್ ಬಂದಿದೆ. ಜೊತೆಗೆ ಅನೇಕ ಕಾಮೆಂಟ್ ಗಳು ಕೂಡ ಬಂದಿದೆ. ಅದರಲ್ಲಿ ಕೆಲವರು ಫ್ಲಿಪ್ ಕಾರ್ಟ್ ನಲ್ಲಿ ತಮಗೂ ಇದೇ ರೀತಿಯ ಅನುಭವವಾಗಿರುವುದಾಗಿ ತಿಳಿಸಿದ್ದಾರೆ. ಆದರೆ ಅದರಲ್ಲಿ ಯಾವುದೂ 6 ವರ್ಷಗಳ ದೀರ್ಘಕಾಲದವರೆಗೆ ವಿಳಂಬವಾಗಿರಲಿಲ್ಲ.

ಇದನ್ನೂ ಓದಿ: ಸರ್ಜಾಪುರ-ಹೆಬ್ಬಾಳದ 3ಎ ಮೆಟ್ರೋ ಮಾರ್ಗ ಯಾವಾಗ ಪೂರ್ಣ?

ಹಾಗಾಗಿ ಫ್ಲಿಪ್ ಕಾರ್ಟ್ ಸೇರಿದಂತೆ ಯಾವುದೇ ಆನ್ ಲೈನ್ ವೆಬ್ ಸೈಟ್ ಗಳಲ್ಲಿ ಮೋಸ, ವಂಚನೆ ನಡೆಯುತ್ತಿರುತ್ತದೆ. ಆದಕಾರಣ ಇವುಗಳಲ್ಲಿ ಯಾವುದೇ ವಸ್ತುಗಳನ್ನು ಆರ್ಡರ್ ಮಾಡುವಾಗ ಕ್ಯಾಶ್ ಆನ್ ಡೆಲಿವರಿ ಗೆ ಆರ್ಡರ್ ಮಾಡಿ. ಇದರಿಂದ ನಿಮಗೆ ಯಾವುದೇ ನಷ್ಟವಾಗುವುದಿಲ್ಲ.

Continue Reading
Advertisement
World's Newest Countries
ವಿದೇಶ6 mins ago

World’s Newest Countries: ಇವು ವಿಶ್ವದ 10 ಹೊಸ ರಾಷ್ಟ್ರಗಳು! ಏನು ಈ ರಾಷ್ಟ್ರಗಳ ವಿಶೇಷ?

Dina Bhavishya
ಭವಿಷ್ಯ1 hour ago

Dina Bhavishya : ಕುಟುಂಬದಲ್ಲಿ ಮೂರನೇ ವ್ಯಕ್ತಿಗಳ ಹಸ್ತಕ್ಷೇಪವಾಗದಂತೆ ಎಚ್ಚರ ವಹಿಸಿ

IND vs ENG Semi Final
ಕ್ರೀಡೆ5 hours ago

IND vs ENG Semi Final: ಇಂಗ್ಲೆಂಡ್​ ಮಣಿಸಿ 10 ವರ್ಷಗಳ ಬಳಿಕ ಫೈನಲ್​ ಪ್ರವೇಶಿಸಿದ ಭಾರತ

Abhyas Trial
ದೇಶ6 hours ago

Abhyas Trial: ದೇಶದ ಕ್ಷಿಪಣಿ ವ್ಯವಸ್ಥೆಗೆ ಬಲ ತುಂಬುವ ‘ಅಭ್ಯಾಸ್’‌ ಪ್ರಯೋಗಾರ್ಥ ಪರೀಕ್ಷೆ ಯಶಸ್ವಿ

Congress Protest
ಕರ್ನಾಟಕ7 hours ago

ಹಾಲು, ಪೆಟ್ರೋಲ್‌ ಬೆಲೆ ಏರಿಸಿ, ಎಸಿ ಬಸ್‌ನಲ್ಲಿ ಪ್ರತಿಭಟನೆಗೆ ಹೊರಟ ಕಾಂಗ್ರೆಸ್‌ ಹಣದ ಮೂಲ ಏನು? ಬಿಜೆಪಿ ಪ್ರಶ್ನೆ

NEET Aspirant
ದೇಶ7 hours ago

NEET Aspirant: ನೀಟ್‌ ಅಕ್ರಮ ಬಯಲಾದ ಬೆನ್ನಲ್ಲೇ 17 ವರ್ಷದ NEET ಅಭ್ಯರ್ಥಿ ಆತ್ಮಹತ್ಯೆ; ಸಾವಿಗೆ ಯಾರು ಹೊಣೆ?

Tata Motors has taken the lead in the SUV market with Nexon Punch
ಕರ್ನಾಟಕ8 hours ago

Tata Motors: ನೆಕ್ಸಾನ್, ಪಂಚ್‌ ಮೂಲಕ ಎಸ್‌ಯುವಿ ಮಾರುಕಟ್ಟೆಯಲ್ಲಿ ಮುನ್ನಡೆ ಸಾಧಿಸಿದ ಟಾಟಾ ಮೋಟಾರ್ಸ್

Rohit Sharma
ಕ್ರೀಡೆ8 hours ago

Rohit Sharma: ಟಿ20 ವಿಶ್ವಕಪ್​ ಟೂರ್ನಿಯಲ್ಲಿ ವಿಶ್ವ ದಾಖಲೆ ಬರೆದ ಹಿಟ್​ಮ್ಯಾನ್ ರೋಹಿತ್

virat kohli
ಕ್ರೀಡೆ8 hours ago

Virat Kohli: ಮೊದಲ ಬಾರಿಗೆ ಸೆಮಿಫೈನಲ್​ನಲ್ಲಿ ಸಿಂಗಲ್​ ಡಿಜಿಟ್​ಗೆ ಔಟ್​ ಆದ​ ಕೊಹ್ಲಿ; ಸಮಾಧಾನಪಡಿಸಿದ ಕೋಚ್​

DCM DK Shivakumar latest statement about CM change issue
ಪ್ರಮುಖ ಸುದ್ದಿ8 hours ago

DK Shivakumar: ಸಿಎಂ ಬದಲಾವಣೆ; ಹೈಕಮಾಂಡ್ ತೀರ್ಮಾನಕ್ಕೆ ಬದ್ಧ ಎಂದ ಡಿ.ಕೆ. ಶಿವಕುಮಾರ್

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Weather Forecast
ಮಳೆ11 hours ago

Karnataka Weather : ಭಾರಿ ಮಳೆ ಹಿನ್ನೆಲೆ ದಕ್ಷಿಣ ಕನ್ನಡಕ್ಕೆ ರೆಡ್ ಅಲರ್ಟ್; ಶುಕ್ರವಾರವೂ ಶಾಲೆಗಳಿಗೆ ರಜೆ ಘೋಷಣೆ

karnataka Weather Forecast
ಮಳೆ13 hours ago

Karnataka Weather : ಭಾರಿ ಮಳೆಗೆ ಸೇತುವೆಯಿಂದ ಹೊಳೆಗೆ ಬಿದ್ದ ಕಾರು; ಮರ ಹಿಡಿದು ಪ್ರಾಣ ಉಳಿಸಿಕೊಂಡ ಸವಾರರು

Heart Attack
ಕೊಡಗು14 hours ago

Heart Attack : ಕೊಡಗಿನಲ್ಲಿ ಹೃದಯಾಘಾತಕ್ಕೆ ಯುವತಿ ಬಲಿ; ಹೆಚ್ಚಾಯ್ತು ಅಲ್ಪಾಯುಷ್ಯದ ಭಯ

karnataka Rains Effected
ಮಳೆ18 hours ago

Karnataka Rain : ಧಾರಾಕಾರ ಮಳೆಗೆ ಸಡಿಲಗೊಂಡ ಗುಡ್ಡಗಳು; ಧರೆ ಕುಸಿದು ಮಣ್ಣಿನಡಿ ಸಿಲುಕಿದ ಇಬ್ಬರು ಮಕ್ಕಳು

karnataka Weather Forecast
ಮಳೆ3 days ago

Karnataka Weather : ಕರಾವಳಿಯಲ್ಲಿ ಮುಂದುವರಿದ ವರುಣಾರ್ಭಟ; ಸಾಂಪ್ರದಾಯಿಕ ಮೀನುಗಾರಿಕೆಗೂ ಬ್ರೇಕ್

karnataka weather Forecast
ಮಳೆ6 days ago

Karnataka Weather : ರಭಸವಾಗಿ ಹರಿಯುವ ನೀರಲ್ಲಿ ಸಿಲುಕಿದ ಬೊಲೆರೋ; ಬಿರುಗಾಳಿ ಸಹಿತ ಮಳೆ ಎಚ್ಚರಿಕೆ

International Yoga Day 2024
ಕರ್ನಾಟಕ7 days ago

International Yoga Day 2024: ಎಲ್ಲೆಲ್ಲೂ ಯೋಗಾಯೋಗ‌ಕ್ಕೆ ಮಂಡಿಯೂರಿದ ಜನತೆ

Karnataka Weather Forecast
ಮಳೆ1 week ago

Karnataka Weather : ಬಾಗಲಕೋಟೆ, ಬೆಂಗಳೂರು ಸೇರಿ ಚಿಕ್ಕಮಗಳೂರಲ್ಲಿ ಸುರಿದ ಗಾಳಿ ಸಹಿತ ಮಳೆ

Actor Darshan
ಮೈಸೂರು2 weeks ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Bakrid 2024
ಬೆಂಗಳೂರು2 weeks ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

ಟ್ರೆಂಡಿಂಗ್‌