Foods For Glowing Skin: ಚರ್ಮದ ಕಾಂತಿ ಹೆಚ್ಚಿಸುವ ಕೊಲಾಜೆನ್ ಸಪ್ಲಿಮೆಂಟ್‌ಗಳೇಕೆ? ಈ ಆಹಾರಗಳ ಮೂಲಕವೇ ಕೊಲಾಜೆನ್‌ ಪಡೆಯಿರಿ! - Vistara News

ಆರೋಗ್ಯ

Foods For Glowing Skin: ಚರ್ಮದ ಕಾಂತಿ ಹೆಚ್ಚಿಸುವ ಕೊಲಾಜೆನ್ ಸಪ್ಲಿಮೆಂಟ್‌ಗಳೇಕೆ? ಈ ಆಹಾರಗಳ ಮೂಲಕವೇ ಕೊಲಾಜೆನ್‌ ಪಡೆಯಿರಿ!

Foods For Glowing Skin: ಜಾಹೀರಾತುಗಳಲ್ಲಿ ಕಂಡ ಹಾಗೂ ಹೊರಗೆ ಸುಲಭವಾಗಿ ಸಿಗುವ ಸಪ್ಲಿಮೆಂಟ್‌ಗಳನ್ನು ತಂದು ನಿರಾಯಾಸವಾಗಿ ತಿಂದು ಚರ್ಮಕ್ಕೆ ಮತ್ತೆ ಹೊಳಪನ್ನು ಕೊಡುವ ಪ್ರಯತ್ನ, ಆಸೆ ಎಲ್ಲರದ್ದು. ಆದರೆ, ಕೊಲಾಜೆನ್‌ ಉತ್ಪತ್ತಿಯನ್ನು ಹೆಚ್ಚಿಸಲು ಇಂತಹ ಸಪ್ಲಿಮೆಂಟ್‌ಗಳ ಅಗತ್ಯವೇ ಇದೆಯೇ? ಕೊಲಾಜೆನ್‌ ಪ್ರೊಟೀನ್‌ ಉತ್ಪತ್ತಿಯನ್ನು ನಮ್ಮ ದೇಹದಲ್ಲಿ ನೈಸರ್ಗಿಕವಾಗಿ ಹೇಗೆ ಹೆಚ್ಚಿಸಿಕೊಳ್ಳಬಹುದು. ಯಾವೆಲ್ಲ ಆಹಾರ ಸೇವನೆಯ ಮೂಲಕ ನಾವು ನಮ್ಮ ದೇಹದಲ್ಲಿ ಕೊಲಾಜೆನ್‌ ಉತ್ಪತ್ತಿಯನ್ನು ಪ್ರಚೋದಿಸಬಹುದು ಎಂಬುದರ ಬಗ್ಗೆ ಉಪಯುಕ್ತ ಮಾಹಿತಿ ಇಲ್ಲಿದೆ.

VISTARANEWS.COM


on

Foods For Glowing Skin
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ʻಕೊಲಾಜೆನ್‌ʼ ಎಂಬ ಹೆಸರನ್ನು ನೀವು ಇತ್ತೀಚೆಗೆ ಹೆಚ್ಚು ಕೇಳಿರಬಹುದು. ಕೊಲಾಜೆನ್‌ ಸಪ್ಲಿಮೆಂಟ್‌ಗಳನ್ನೂ ಮಾರು ಕಟ್ಟೆಯಲ್ಲಿ ನೋಡಿರಬಹುದು. ನಿಮ್ಮ ಓರಗೆಯವರು, ಗೆಳೆಯ ಗೆಳತಿಯರು ಕೊಲಾಜೆನ್‌ ಸಪ್ಲಿಮೆಂಟ್‌ಗಳನ್ನು ತಿನ್ನುವುದನ್ನೂ ಕಂಡಿರಬಹುದು. ಹಾಗಾದರೆ ಈ ಕೊಲಾಜೆನ್‌ ಎಂದರೆ ಏನು, ಯಾಕಿದು ಬೇಕು ಎಂಬ ಸಂಶಯ ನಿಮಗೆ ಬಂದಿರಲೂಬಹುದು, ಅಥವಾ ಗೊತ್ತಿರಲೂಬಹುದು. ಕೊಲಾಜೆನ್‌ ಎಂಬುದು ಚರ್ಮದ ರಚನೆ ಹಾಗೂ ಎಲಾಸ್ಟಿಸಿಟುಗೆ ಬೇಕಾಗಿರುವ ನಮ್ಮ ದೇಹದಲ್ಲಿರುವ ಒಂದು ಪ್ರೊಟೀನ್‌. ನಮ್ಮ ದೇಹದಲ್ಲಿ ಹಲವು ಬಗೆಯ ಕೊಲಾಜೆನ್‌ಗಳಿವೆ. ನಮಗೆ ವಯಸ್ಸಾಗುತ್ತಾ ಬಂದಂತೆ, ನಮ್ಮ ದೇಹ ಕೊಲಾಜೆನ್‌ ಉತ್ಪತ್ತಿಯನ್ನು ಕಡಿಮೆ ಮಾಡುತ್ತಾ ಬರುತ್ತದೆ. ಆಗ, ನಮ್ಮ ಚರ್ಮದಲ್ಲಿ ಸುಕ್ಕು, ನಿರಿಗೆಗಳು ಆರಂಭವಾಗುತ್ತವೆ. ಚರ್ಮದ ಪದರ ತೆಳುವಾಗಲು ಆರಂಭವಾಗುತ್ತದೆ. ಹೀಗಾಗಿ ಬಹುಮುಖ್ಯವಾಗಿ ಸುಂದರವಾಗಿ ಕಾಣಲು, ವಯಸ್ಸಾಗದಂತೆ ಚರ್ಮ ನುಣುಪಾಗಿ ಹೊಳೆಯಲು, ವಯಸ್ಸು 35-40 ದಾಟುತ್ತಿದ್ದಂತೆ ಕೊಲಾಜೆನ್‌ ಬೂಸ್ಟ್‌ ಸಪ್ಲಿಮೆಂಟ್‌ಗಳ ಸೇವನೆಯನ್ನು ಬಹುತೇಕರು ಆರಂಭಿಸುತ್ತಾರೆ. ಜಾಹಿರಾತುಗಳಲ್ಲಿ ಕಂಡ ಹಾಗೂ ಹೊರಗೆ ಸುಲಭವಾಗಿ ಸಿಗುವ ಸಪ್ಲಿಮೆಂಟ್‌ಗಳನ್ನು ತಂದು ನಿರಾಯಾಸವಾಗಿ ತಿಂದು ಚರ್ಮಕ್ಕೆ ಮತ್ತೆ ಹೊಳಪನ್ನು ಕೊಡುವ ಪ್ರಯತ್ನ, ಆಸೆ ಎಲ್ಲರದ್ದು. ಆದರೆ, ಕೊಲಾಜೆನ್‌ ಉತ್ಪತ್ತಿಯನ್ನು ಹೆಚ್ಚಿಸಲು ಇಂತಹ ಸಪ್ಲಿಮೆಂಟ್‌ಗಳ ಅಗತ್ಯವೇ ಇದೆಯೇ? ಕೊಲಾಜೆನ್‌ ಪ್ರೊಟೀನ್‌ ಉತ್ಪತ್ತಿಯನ್ನು ನಮ್ಮ ದೇಹದಲ್ಲಿ ನೈಸರ್ಗಿಕವಾಗಿ ಹೇಗೆ ಹೆಚ್ಚಿಸಿಕೊಳ್ಳಬಹುದು. ಯಾವೆಲ್ಲ ಆಹಾರ ಸೇವನೆಯ ಮೂಲಕ ನಾವು ನಮ್ಮ ದೇಹದಲ್ಲಿ ಕೊಲಾಜೆನ್‌ ಉತ್ಪತ್ತಿಯನ್ನು ಪ್ರಚೋದಿಸಬಹುದು ಎಂಬುದನ್ನು ನೋಡೋಣ. ಇತ್ತೀಚೆಗೆ ನಡೆದ ಸಂಶೋಧನೆಗಳ ಪ್ರಕಾರ ಕೊಲಾಜೆನ್‌ ಉತ್ಪತ್ತಿಯನ್ನು ಪ್ರಚೋದಿಸಲು ಅತ್ಯಂತ ಸಹಜವಾದ, ನೈಸರ್ಗಿಕವಾದ ಹಾಗೂ ಯಾವುದೇ ಬಾಧಕಗಳಿಲ್ಲದ ಆಹಾರ ಸೇವನೆಯಿಂದಲೂ ಮಾಡಬಹುದು. ಯಾವೆಲ್ಲ ಆಹಾರಗಳಲ್ಲಿ ಕೊಲಾಜೆನ್‌ ಪ್ರಮಾಣ ಹೆಚ್ಚಿದೆ ಎಂಬುದನ್ನು ತಿಳಿದರೆ, ಅಂತಹ ಆಹಾರ ಸೇವನೆಯಿಂದಲೂ ಕೊಲಾಜೆನ್‌ ವೃದ್ಧಿ ಮಾಡಿಕೊಂಡು ಆರೋಗ್ಯಯುತ ಚರ್ಮವನ್ನು (Foods For Glowing Skin) ಪಡೆಯಬಹುದು.

Bone broth

ಬೋನ್‌ ಬ್ರೋತ್

ಪ್ರಾಣಿಗಳ ಎಲುಬಿನ ಬ್ರೋತ್‌ ಅಂದರೆ ನೀರು ತಯಾರಿಸಿ ಕುಡಿಯುವುದು ಕೂಡಾ ಅತ್ಯಂತ ಪ್ರಸಿದ್ಧಿ ಪಡೆದಿರುವ ಕೊಲಾಜೆನ್‌ ಪ್ರಚೋದನಕಾರಿ ಪೇಯ.

chicken

ಚಿಕನ್

ಚಿಕನ್‌ನಿಂದ ತಯಾರಿಸಲ್ಪಟ್ಟ ಕೊಲಾಜೆನ್‌ ಸಪ್ಲಿಮೆಂಟ್‌ಗಳೂ ಇಂದು ಮಾರುಕಟ್ಟೆಯಲ್ಲಿ ಲಭ್ಯವಿವೆ. ಹಾಗಾಗಿ ಚಿಕನ್‌ ಸೇವನೆಯಿಂದಲೂ ಕೊಲಾಜೆನ್‌ ಪಡೆಯಬಹುದು.

fish

ಮೀನು

ಬೇರೆ ಪ್ರಾಣಿಗಳಂತೆ ಮೀನಿನಲ್ಲಿಯೂ ಕೊಲಾಜೆನ್‌ ಅಧಿಕವಾಗಿದೆ. ಮೀನಿನ ಮೂಳೆಯ ಲಿಗಮೆಂಟ್‌ಗಳಲ್ಲಿ ಕೊಲಾಜೆನ್‌ ಸಾಕಷ್ಟು ಪ್ರಮಾಣದಲ್ಲಿದ್ದು, ಸಮುದ್ರ ಜೀವಿಗಳ ಮೂಲಕ ಬಂದ ಕೊಲಾಜೆನ್‌ ಅನ್ನು ನಮ್ಮ ದೇಹ ಬಹುಬೇಗನೆ ಹೀರಿಕೊಳ್ಳುತ್ತದೆ ಕೂಡಾ.

Super Food For Kids

ಮೊಟ್ಟೆ

ಮೊಟ್ಟೆಯ ಬಿಳಿ ಲೋಳೆಯಲ್ಲಿ ಪ್ರೊಲೈನ್‌ ಎಂಬ ಒಂದು ಬಗೆಯ ಅಮೈನೋ ಆಸಿಡ್‌ ಇದ್ದು ಇದು ಕೊಲಾಜೆನ್‌ ಉತ್ಪತ್ತಿಗೆ ಸಹಾಯ ಮಾಡುತ್ತದೆ.

Citrus fruits

ಸಿಟ್ರಸ್‌ ಹಣ್ಣುಗಳು

ವಿಟಮಿನ್‌ ಸಿ ಹೇರಳವಾಗಿರುವ ಹಣ್ಣುಗಳೆಲ್ಲವೂ ಕೂಡಾ ಕೊಲಾಜೆನ್‌ ಉತ್ಪತ್ತಿಯನ್ನು ಪ್ರಚೋದಿಸುತ್ತವೆ. ಕಿತ್ತಳೆ, ಮುಸಂಬಿ, ನಿಂಬೆ ಮತ್ತಿತರ ಹಣ್ಣುಗಳಲ್ಲಿ ವಿಟಮಿನ್‌ ಸಿ ಹೇರಳವಾಗಿದ್ದು, ನಿತ್ಯ ಜೀವನದಲ್ಲಿ ಈ ಹಣ್ಣುಗಳನ್ನು ನಿಯಮಿತವಾಗಿ ಬಳಸುವುದರಿಂದ ಉತ್ತಮ ಪರಿಣಾಮ ಕಾಣಬಹುದು.

Berries

ಬೆರ್ರಿಗಳು

ಸಿಟ್ರಸ್‌ ಹಣ್ಣುಗಳಂತೆಯೇ, ಬೆರ್ರಿ ಜಾತಿಗೆ ಸೇರಿದ ಹಣ್ಣುಗಳಲ್ಲೂ ವಿಟಮಿನ್‌ ಸಿ ಹೇರಳವಾಗಿದೆ. ಉದಾಹರಣೆಗೆ ರಸಬೆರ್ರಿ, ಸ್ಟ್ರಾಬೆರಿ, ಬ್ಲೂಬೆರ್ರಿ ಇತ್ಯಾದಿ.

ಇದನ್ನೂ ಓದಿ: Health Tips Kannada: ಕುಂಬಳಕಾಯಿ ಬೀಜದಲ್ಲಿದೆ ನಮ್ಮ ಆರೋಗ್ಯದ ಗುಟ್ಟು!

ಸೀಸನಲ್‌ ಹಣ್ಣುಗಳು

ಆಯಾ ಋತುಮಾನಗಳಲ್ಲಿ ಸಿಗುವ ಹಣ್ಣುಗಳನ್ನು ಕಾಲಕಾಲಕ್ಕೆ ತಿನ್ನಿ. ಮಾವಿನಹಣ್ಣು, ಪೇರಳೆ, ಕಿವಿ, ಅನನಾಸು ಇತ್ಯಾದಿಗಳ ಸೇವನೆ ಒಳ್ಳೆಯದು. ಪೇರಳೆಯಲ್ಲಿ ಝಿಂಕ್‌ ಇದ್ದು, ಇದೂ ಕೂಡಾ ಕೊಲಾಜೆನ್‌ ಉತ್ಪಾದನೆಗೆ ಪ್ರಚೋದಿಸುತ್ತದೆ.

Garlic cloves

ಬೆಳ್ಳುಳ್ಳಿ

ಬೆಳ್ಳುಳ್ಳಿಯಲ್ಲಿ ಸಲ್ಫರ್‌ ಹೇರಳವಾಗಿದ್ದು, ಇದು ಕೊಲಾಜೆನ್‌ ಕಡಿಮೆಯಾಗದಂತೆ ನೋಡಿಕೊಳ್ಳುತ್ತದೆ.

Fresh Vegetables

ತರಕಾರಿ

ವಿಟಮಿನ್‌ ಸಿ ಯುಕ್ತ ತರಕಾರಿಗಳಾದ, ಕ್ಯಾಪ್ಸಿಕಂ, ಟೊಮೇಟೋ ಇತ್ಯಾದಿಗಳೂ ಕೂಡಾ ಕೊಲಾಜೆನ್‌ ಉತ್ಪತ್ತಿಯನ್ನು ಪ್ರಚೋದಿಸುತ್ತದೆ.

cashew nuts

ಗೋಡಂಬಿ

ಗೋಡಂಬಿಯಲ್ಲಿ ಝಿಂಕ್‌ ಹಾಗೂ ತಾಮ್ರವಿದ್ದು ಇದು ಕೊಲಾಜೆನ್‌ ಹೆಚ್ಚಳಕ್ಕೆ ಸಹಾಯ ಮಾಡುತ್ತದೆ. ಇವಿಷ್ಟೇ ಅಲ್ಲದೆ, ಸೊಪ್ಪು ತರಕಾರಿಗಳು, ಹಸಿರು ಬಣ್ಣದ ಸೊಪ್ಪುಗಳು ಹಾಗೂ ಕಾಳುಗಳು ಕೂಡಾ, ಈ ನಿಟ್ಟಿನಲ್ಲಿ ಸಹಾಯ ಮಾಡುತ್ತವೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

Bengaluru News: ಬೆಂಗಳೂರಿನಲ್ಲಿ 2ನೇ ರಾಷ್ಟ್ರೀಯ ಮಕ್ಕಳ ಪಾರ್ಶ್ವವಾಯುವಿನ ಶೃಂಗ 2024ಕ್ಕೆ ಚಾಲನೆ

Bengaluru News: ಬೆಂಗಳೂರಿನಲ್ಲಿ ಎರಡು ದಿನಗಳ 2ನೇ ರಾಷ್ಟ್ರೀಯ ಪೀಡಿಯಾಟ್ರಿಕ್ ಸ್ಟ್ರೋಕ್ ಕಾನ್ ಕ್ಲೇವ್ 2024 (ಮಕ್ಕಳ ಪಾರ್ಶ್ವವಾಯು ಶೃಂಗ 2024) ಸಮ್ಮೇಳನಕ್ಕೆ ಚಾಲನೆ ನೀಡಲಾಯಿತು. ಇಂಡಿಯನ್ ಸ್ಟ್ರೋಕ್ ಅಸೋಸಿಯೇಷನ್ (ಐ.ಎಸ್.ಎ) ಅಧ್ಯಕ್ಷ ಡಾ.ನಿರ್ಮಲ್ ಸೂರ್ಯ ಉದ್ಘಾಟಿಸಿದರು.

VISTARANEWS.COM


on

2nd National Pediatric Stroke Conclave 2024 inauguration in Bengaluru
Koo

ಬೆಂಗಳೂರು: ನಗರದಲ್ಲಿ ಎರಡು ದಿನಗಳ 2ನೇ ರಾಷ್ಟ್ರೀಯ ಪೀಡಿಯಾಟ್ರಿಕ್ ಸ್ಟ್ರೋಕ್ ಕಾನ್ ಕ್ಲೇವ್ 2024 (ಮಕ್ಕಳ ಪಾರ್ಶ್ವವಾಯು ಶೃಂಗ 2024) ಸಮ್ಮೇಳನಕ್ಕೆ ಚಾಲನೆ ನೀಡಲಾಯಿತು. ಇಂಡಿಯನ್ ಸ್ಟ್ರೋಕ್ ಅಸೋಸಿಯೇಷನ್ (ಐ.ಎಸ್.ಎ) ಅಧ್ಯಕ್ಷ ಡಾ. ನಿರ್ಮಲ್ ಸೂರ್ಯ (Bengaluru News) ಉದ್ಘಾಟಿಸಿದರು.

ಮಕ್ಕಳ ಪಾರ್ಶ್ವವಾಯು ರೋಗತಡೆ, ಆರೈಕೆ ಮತ್ತು ಚಿಕಿತ್ಸೆಯ ಕ್ಷೇತ್ರಗಳ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪರಿಣಿತರು ಒಂದೇ ಸೂರಿನಡಿ ಸೇರುವ ಅಪೂರ್ವ ಸಂದರ್ಭಕ್ಕೆ ಈ ಸಮ್ಮೇಳನ ಸಾಕ್ಷಿಯಾಯಿತು.

ಜಾಗತಿಕವಾಗಿ ಮಕ್ಕಳ ಪಾರ್ಶ್ವವಾಯು ಮಕ್ಕಳಲ್ಲಿ ಮರಣಕ್ಕೆ ಆರನೇ ಮುಂಚೂಣಿಯ ಕಾರಣವಾಗಿದೆ. ಸುಮಾರು ಐವತ್ತರಿಂದ ಅರವತ್ತು ಶೇಕಡಾ ಮಕ್ಕಳ ಪಾರ್ಶ್ವವಾಯು ಪ್ರಕರಣಗಳಿಗೆ ಚಿಕಿತ್ಸೆ ನೀಡಲು ಮತ್ತು ತಡೆಯಲು ಸಾಧ್ಯ.

ಪ್ರತಿ ನಿಮಿಷ ಭಾರತದಲ್ಲಿ ಸುಮಾರು 52 ಶಿಶುಗಳು ಜನಿಸುತ್ತಿದ್ದು ಮಕ್ಕಳ ಪಾರ್ಶ್ವವಾಯುವಿನ ಸಾಮಾಜಿಕ-ಆರ್ಥಿಕ ಪರಿಣಾಮಗಳು ಅಪಾರವಾಗಿವೆ. ಭಾರತದಲ್ಲಿ ಪ್ರಕಟವಾದ ಕೆಲ ಅಧ್ಯಯನಗಳ ಪ್ರಕಾರ ಮಕ್ಕಳ ಪಾರ್ಶ್ವವಾಯು ಮಕ್ಕಳ ಆಸ್ಪತ್ರೆ ಸೇರ್ಪಡೆಯ ಶೇ.1ಕ್ಕಿಂತ ಕಡಿಮೆ ಇದೆ ಮತ್ತು ಎಲ್ಲ ಯುವ ಪಾರ್ಶ್ವವಾಯು ಪ್ರಕರಣಗಳ ಶೇಕಡಾ ಐದರಿಂದ ಹತ್ತರಷ್ಟು (40 ವರ್ಷಗಳ ವಯಸ್ಸಿಗಿಂತ ಕಿರಿಯರು) ಹೊಂದಿವೆ. ಈ ಸಂಖ್ಯೆಗಳು ಬರೀ ಅಂದಾಜು ಆಗಿದೆ ಮತ್ತು ವಾಸ್ತವ ಸಂಖ್ಯೆ ಇನ್ನೂ ಹೆಚ್ಚಾಗಿರುವ ಸಾಧ್ಯತೆ ಇದ್ದು ಸಾಕಷ್ಟು ಪ್ರಕರಣಗಳು ವರದಿಯಾಗುವುದಿಲ್ಲ ಮತ್ತು ಪತ್ತೆಯಾಗುವುದಿಲ್ಲ.

ಇದನ್ನೂ ಓದಿ: Press Day: ಸುಳ್ಳು ಸುದ್ದಿಗಳ ಮೇಲೆ ನಿಗಾ ಇಡಲು ಪ್ರತೀ ಜಿಲ್ಲೆಗಳಲ್ಲೂ ವಿಶೇಷ ಘಟಕ: ಸಿದ್ದರಾಮಯ್ಯ

ವಯಸ್ಕರಲ್ಲಿ ಹೆಚ್ಚು ರಕ್ತದೊತ್ತಡ, ಕರೊನರಿ ಆರ್ಟರಿ ರೋಗ, ಧೂಮಪಾನ, ಬೊಜ್ಜು, ಹೆಚ್ಚಿನ ಕೊಲೆಸ್ಟರಾಲ್ ಮತ್ತು ದುರ್ಬಲ ಜೀವನಶೈಲಿ ಇತ್ಯಾದಿ ರಿಸ್ಕ್ ಅಂಶಗಳಿರುತ್ತವೆ ಆದರೆ ಮಕ್ಕಳ ಪಾರ್ಶ್ವವಾಯುವಿಗೆ ಕಾರಣಗಳನ್ನು ಗುರುತಿಸುವುದು ಬಹಳ ಸಂಕೀರ್ಣ ಮತ್ತು ಹಲವು ಅಂಶಗಳನ್ನು ಹೊಂದಿದೆ.

ಸಮ್ಮೇಳನದಲ್ಲಿ ಉಪನ್ಯಾಸ ನೀಡುವ ತಜ್ಞರಲ್ಲಿ ಐ.ಎಸ್.ಎ ಅಧ್ಯಕ್ಷ ಡಾ.ನಿರ್ಮಲ್ ಸೂರ್ಯ, ಸಂಘಟನಾ ಅಧ್ಯಕ್ಷ ಡಾ.ವಿಕ್ರಮ್ ಹುಡೇದ್, ಡಾ.ಅರವಿಂದ್ ಶರ್ಮಾ, ಡಾ.ಮಿನಲ್ ಕೆಕಟ್ ಪುರೆ, ಡಾ.ವಿನಯನ್ ಕೆ.ಪಿ., ಡಾ.ಶೆಫಾಲಿ ಗುಲಾಟಿ ಮತ್ತು ಡಾ.ಪ್ರತಿಭಾ ಸಿಂಘಿ, ಡಾ.ಹೆಲ್ತರ್ ಫುಲ್ಲರ್ ಟನ್‌ ಮತ್ತು ಡಾ.ಮಜಾ ಸ್ಟೀನ್ಲಿನ್ ಅಂತಾರಾಷ್ಟ್ರೀಯ ತಜ್ಞರು ಪಾಲ್ಗೊಂಡಿದ್ದಾರೆ.

2ನೇ ನ್ಯಾಷನಲ್ ಪೀಡಿಯಾಟ್ರಿಕ್ ಕಾನ್ ಕ್ಲೇವ್ ಆರೋಗ್ಯ ಸೇವಾ ವೃತ್ತಿಪರರಿಗೆ ಮಕ್ಕಳ ಪಾರ್ಶ್ವವಾಯುವಿನ ರೋಗ ತಡೆ, ಆರೈಕೆ ಮತ್ತು ಚಿಕಿತ್ಸೆ ಕುರಿತು ಅವರ ಜ್ಞಾನ ಹಂಚಿಕೊಳ್ಳಲು, ಅರ್ಥಪೂರ್ಣ ಚರ್ಚೆಗಳಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸುತ್ತದೆ. ಈ ಸಮ್ಮೇಳನವು ದೇಶಾದ್ಯಂತ ಪೂರೈಸುವ ಮಕ್ಕಳ ಆರೈಕೆಯ ಗುಣಮಟ್ಟ ಸುಧಾರಿಸುವ ಮತ್ತು ಈ ಕ್ಷೇತ್ರದ ಪ್ರಮುಖ ಸಮಸ್ಯೆಗಳನ್ನು ನಿವಾರಿಸುವ ಗುರಿ ಹೊಂದಿದೆ. ಈ ಎರಡು ದಿನಗಳ ಸಮ್ಮೇಳನದಲ್ಲಿ ಪೀಡಿಯಾಟ್ರಿಕ್ ಸ್ಟ್ರೋಕ್ ನ ನ್ಯೂರೋಇಮೇಜಿಂಗ್, ಪೀಡಿಯಾಟ್ರಿಕ್ ವ್ಯಾಸ್ಕುಲೈಟಿಸ್ ಮತ್ತು ವ್ಯಾಸ್ಕುಲೊಪಥೀಸ್, ಕಾರ್ಡಿಯೊಎಂಬೊಲಿಕ್ ಸ್ಟ್ರೋಕ್, ಹೈಪರಕ್ಯೂಟ್ ಮ್ಯಾನೇಜ್ಮೆಂಟ್ ಆಫ್ ಪೀಡಿಯಾಟ್ರಿಕ್ ಸ್ಟ್ರೋಕ್, ನ್ಯೂರೋಇಂಟರ್ವೆನ್ಷನ್ಸ್ ಇನ್ ಪೀಡಿಯಾಟ್ರಿಕ್ ಸ್ಟ್ರೋಕ್ ಮತ್ತಿತರೆ ಒಳಗೊಂಡಿವೆ.

ಇದನ್ನೂ ಓದಿ: Kannada New Movie: ಪ್ರವೀಣ್ ತೇಜ್ ಅಭಿನಯದ ʼಜಿಗರ್ ಚಿತ್ರ ಜುಲೈ 5ರಂದು ಬಿಡುಗಡೆ

ಇಂಡಿಯನ್ ಸ್ಟ್ರೋಕ್ ಅಸೋಸಿಯೇಷನ್ (ಐ.ಎಸ್.ಎ) ನಿಯಮಿತವಾಗಿ ಮಕ್ಕಳ ಪಾರ್ಶ್ವವಾಯುವಿನ ಅರಿವು ಹೆಚ್ಚಿಸುವ, ರೋಗನಿರ್ಣಯ ಸುಧಾರಿಸುವ, ಮಕ್ಕಳ ಪಾರ್ಶ್ವವಾಯು ನಿರ್ವಹಿಸುವ ವೈದ್ಯಕೀಯ ಸಿಬ್ಬಂದಿಗೆ ಶಿಕ್ಷಣ ನೀಡುವ ಉದ್ದೇಶದಿಂದ ಹಲವಾರು ಉಪಕ್ರಮಗಳನ್ನು ಕೈಗೊಳ್ಳುತ್ತಿದ್ದು ಸುವರ್ಣ ಘಳಿಗೆಯಲ್ಲಿ ಚಿಕಿತ್ಸೆ ನೀಡುವ ಕುರಿತು ಅರಿವನ್ನು ಮೂಡಿಸುತ್ತದೆ ಮತ್ತು ಬಾಧಿತ ಮಕ್ಕಳ ಅಂಗವಿಕಲತೆ ಮಿತಿಗೊಳಿಸಲು ಕಾರ್ಯತಂತ್ರಗಳನ್ನು ವಿನೂತನ ಮಕ್ಕಳ ಪಾರ್ಶ್ವವಾಯುವಿನ ರಾಷ್ಟ್ರೀಯ ಸಮ್ಮೇಳನ ಆಯೋಜಿಸುವ ಮೂಲಕ ಕಾರ್ಯಪ್ರವೃತ್ತವಾಗಿದೆ.

Continue Reading

ಆರೋಗ್ಯ

Hyperpigmentation: ಕಾಡುವ ಈ ‘ಕಪ್ಪುಕಲೆ’ ಸಮಸ್ಯೆಗೆ ಇಲ್ಲಿದೆ ಪರಿಹಾರ

Hyperpigmentation: ಹೆಣ್ಣು ಗಂಡೆನ್ನದೆ ಕಾಡುವ ಇದು ಬಹುತೇಕರ ಸಾಮಾನ್ಯ ಸಮಸ್ಯೆ ಎಂದರೆ ಚರ್ಮದ ಮೇಲೆ ಅಲ್ಲಲ್ಲಿ ಗಾಢವಾದ ಪ್ಯಾಚ್. ಸೌಂದರ್ಯ ಸಮಸ್ಯೆಯಾಗಿರುವುದರಿಂದ ಹಲವರನ್ನು ಮಾನಸಿಕವಾಗಿಯೂ ಬಾಧಿಸುತ್ತದೆ. ಮುಖ್ಯವಾಗಿ ಹೆಣ್ಣುಮಕ್ಕಳು ತಮ್ಮ ಚರ್ಮದ ಕಾಂತಿ ಮಾಯವಾಗಿ ಮುಖದ ಮೇಲೆ ಹೀಗೆ ಕಪ್ಪನೆಯ ಪ್ಯಾಚ್‌ಗಳು ಮೂಡಿದ್ದನ್ನು ಮತ್ತೆ ಇಲ್ಲವಾಗಿಸುವುದು ಹೇಗೆ ಎಂಬ ಸುಳಿಯಲ್ಲಿ ಸಿಲುಕಿ ಒದ್ದಾಡುತ್ತಾರೆ. ಇದಕ್ಕೆ ಪರಿಹಾರ ಏನು? ಇಲ್ಲಿದೆ ಉತ್ತರ.

VISTARANEWS.COM


on

Hyperpigmentation
Koo

ತಾನು ಸುಂದರವಾಗಿ ಕಾಣಬೇಕು (Hyperpigmentation) ಎಂಬ ಇಚ್ಛೆ ಯಾರಿಗಿಲ್ಲ ಹೇಳಿ? ಆದರೆ, ಈ ಆಸೆಗೆ ತಣ್ಣೀರೆರಚುವಂತೆ ಕಾಡುವ ಚರ್ಮದ ಸಮಸ್ಯೆ ಎಂದರೆ ಅದು ಹೈಪರ್‌ ಪಿಗ್ನೆಂಟೇಶನ್‌ ಅಥವಾ ಮೆಲಾಸ್ಮಾ. ಹೆಣ್ಣು ಗಂಡೆನ್ನದೆ ಕಾಡುವ ಇದು ಬಹುತೇಕರ ಸಾಮಾನ್ಯ ಸಮಸ್ಯೆ. ಚರ್ಮದ ಮೇಲೆ ಅಲ್ಲಲ್ಲಿ ಗಾಢವಾದ ಪ್ಯಾಚ್, ಕಪ್ಪು ಕಲೆಗಳು ಮೂಡುವುದೇ ಈ ಸಮಸ್ಯೆ. ಇದು ಹೇಳಿಕೊಳ್ಳುವಂಥ ಸಮಸ್ಯೆ ಅಲ್ಲವಾದರೂ, ಚರ್ಮದ ಸೌಂದರ್ಯ ಸಮಸ್ಯೆಯಾಗಿರುವುದರಿಂದ ಹಲವರನ್ನು ಮಾನಸಿಕವಾಗಿಯೂ ಬಾಧಿಸುತ್ತದೆ. ಮುಖ್ಯವಾಗಿ ಹೆಣ್ಣುಮಕ್ಕಳು ತಮ್ಮ ಚರ್ಮದ ಕಾಂತಿ ಮಾಯವಾಗಿ ಮುಖದ ಮೇಲೆ ಹೀಗೆ ಕಪ್ಪನೆಯ ಪ್ಯಾಚ್‌ಗಳು ಮೂಡಿದ್ದನ್ನು ಮತ್ತೆ ಇಲ್ಲವಾಗಿಸುವುದು ಹೇಗೆ ಎಂಬ ಸುಳಿಯಲ್ಲಿ ಸಿಲುಕಿ ಒದ್ದಾಡುತ್ತಾರೆ. ಚರ್ಮದಲ್ಲಿ ಮೆಲನಿನ್‌ ಉತ್ಪಾದನೆ ಹೆಚ್ಚಾಗುವುದರಿಂದ ಹೀಗಾಗುತ್ತದೆ. ಸಾಮಾನ್ಯವಾಗಿ ಎಲ್ಲ ಬಗೆಯ ಚರ್ಮದ ಮಂದಿಗೂ ಈ ಸಮಸ್ಯೆ ಬರಬಹುದಾಗಿದ್ದು, ಚರ್ಮವನ್ನು ಹೆಚ್ಚು ಹೊತ್ತು ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದರಿಂದ ಹಾಗೂ ಹಾಗೂ ಕೆಲವು ಹಾರ್ಮೋನಿನ ಸಮಸ್ಯೆಗಳಿಂದ ೩೫- ೪೦ ವಯಸ್ಸು ದಾಟುವ ಸಂದರ್ಭ ಹಲವರಲ್ಲಿ ಕಾಣಿಸಿಕೊಳ್ಳಬಹುದು. ಇನ್ನೂ ಕೆಲವರಿಗೆ ಗರ್ಭಿಣಿಯರಾಗಿದ್ದಾಗಲೂ ಹಾರ್ಮೋನಿನ ಏರುಪೇರಿನಿಂದ ಕಾಣಿಸಬಹುದು. ಬನ್ನಿ, ಹೈಪರ್‌ಪಿಗ್ಮೆಂಟೇಶನ್‌ ಸಮಸ್ಯೆ ಕಾಣಿಸಿಕೊಂಡಾಗ ನೀವು ನಿಮ್ಮ ಚರ್ಮಕ್ಕೆ ಏನು ಮಾಡಬೇಕು ಹಾಗೂ ಏನು ಮಾಡಬಾರದು ಎಂಬುದನ್ನು ತಿಳಿದುಕೊಳ್ಳೋಣ.

Dark spots, freckles,hyperpigmentation

ಏನು ಮಾಡಬೇಕು?

ನಿತ್ಯವೂ ಸನ್‌ಸ್ಕ್ರೀನ್‌ ಧರಿಸಿ

ಸೂರ್ಯನ ಹಾನಿಕಾರಕ ಯುವಿ ಕಿರಣಗಳಿಂದ ನಮ್ಮ ಚರ್ಮವನ್ನು ರಕ್ಷಿಸಿಕೊಳ್ಳಲು ದಿನವೂ ಸನ್‌ಸ್ಕ್ರೀನ್‌ ಹಚ್ಚಿ. ಇದು ಮೆಲನಿನ್‌ ಉತ್ಪಾದನೆಯನ್ನು ಹೆಚ್ಚದಂತೆ ನೋಡಿಕೊಳ್ಳುತ್ತದೆ. ಪರಿಣಾಮವಾಗಿ ಹೈಪರ್‌ಪಿಗ್ಮೆಂಟೇಶನ್‌ ಹೆಚ್ಚಾಗುವುದಿಲ್ಲ.

ಮೆದುವಾದ ಸ್ಕಿನ್‌ಕೇರ್‌ ವಸ್ತುಗಳನ್ನು ಬಳಸಿ. ನಿಮ್ಮ ಚರ್ಮದ ಮೇಲೆ ಗಾಢವಾದ, ರಾಸಾಯನಿಕಯುಕ್ತ ತೀಕ್ಷ್ಣ ಕ್ರೀಮ್‌ಗಳನ್ನು ಬಳಸಬೇಡಿ. ಹಗುರವಾದ, ಮೆದುವಾದ, ನೈಸರ್ಗಿಕ ಗುಣಗಳುಳ್ಳ ವಸ್ತುಗಳ್ನೇ ಬಳಸಿ.

ಆಂಟಿಆಕ್ಸಿಡೆಂಟ್‌ ಸೇವಿಸಿ: ನೀವು ಸೇವಿಸುವ ಆಹಾರದಲ್ಲಿ ಹೇರಳವಾಗಿ ಆಂಟಿ ಆಕ್ಸಿಡೆಂಟ್‌ಗಳಿರಲಿ. ಮುಖ್ಯವಾಗಿ ವಿಟಮಿನ್‌ ಸಿ ಆಕ್ಸಿಡೇಟಿವ್‌ ಒತ್ತಡದಿಂದ ಪಾರು ಮಾಡುತ್ತದೆ. ವಿಟಮಿನ್‌ ಸಿ ಯುಕ್ತ ಆಹಾರ ಸೇವಿಸಿ. ಹಾಗೂ ವಿಟಮಿನ್‌ ಸಿ ಇರುವ ಸೌಂದರ್ಯವರ್ಧಕಗಳನ್ನು ನೀವು ಬಳಸಬಹುದು.

drink water

ಹೆಚ್ಚು ನೀರು ಕುಡಿಯಿರಿ

ಹೆಚ್ಚು ನೀರು ಕುಡಿಯುವುದು, ಚರ್ಮಕ್ಕೆ ಸರಿಯಾದ ನೀರು ಪೂರೈಕೆ ಮಾಡುವುದು ಒಳ್ಳೆಯದು. ಇದು ನೈಸರ್ಗಿಕವಾಗಿ ಒಳಗಿನಿಂದಲೇ ಚರ್ಮವನ್ನು ರಿಪೇರಿ ಮಾಡುತ್ತದೆ.

ಚರ್ಮಕ್ಕೆ ಹೊಳಪನ್ನು ನೀಡುವ ನಿಯಾಸಿನಮೈಡ್‌, ಕೋಜಿಕ್‌ ಆಸಿಡ್‌, ಲೈಕೋರೈಸ್‌ ಇತ್ಯಾದಿಗಳಿರುವ ಸೌಂದರ್ಯವರ್ಧಕಗಳನ್ನು ಬಳಸಬಹುದು. ಇದು ಹೈಪರ್‌ಪಿಗ್ಮೆಂಟೇಶನ್‌ ಅನ್ನು ಕಡಿಮೆ ಮಾಡಿ ಚರ್ಮವನ್ನು ನಿಮ್ಮ ಹಳೆಯ ಬಣ್ಣಕ್ಕೆ ತರಲು ಸಹಾಯ ಮಾಡುತ್ತದೆ. ಕಲೆಗಳನ್ನು ಹೋಗಲಾಡಿಸುತ್ತವೆ.

ಆಗಾಗ ಎಕ್ಸ್‌ಫಾಲಿಯೇಟ್‌ ಮಾಡಿ. ಅರ್ಥಾತ್‌, ಒಳ್ಳೆಯ ನೈಸರ್ಗಿಕ ಗುಣಗಳುಳ್ಳ ಸ್ಕ್ರಬಿಂಗ್‌ ಲೋಷನ್‌ ಬಳಸಿ ವಾರಕ್ಕೆರಡು ಬಾರಿ ಸ್ಕ್ರಬ್‌ ಮಾಡಿ.

ಹೈಪರ್‌ ಪಿಗ್ಮೆಂಟೇಶನ್‌ಗೆ ಈಗ ಸಾಕಷ್ಟು ಸೌಂದರ್ಯ ಚಿಕಿತ್ಸೆಗಳೂ ಲಭ್ಯವಿವೆ. ಕೆಮಿಕಲ್‌ ಪೀಲ್‌, ಲೇಸರ್‌ ಥೆರಪಿ, ಮೈಕ್ರೋಡರ್ಮಾಬ್ರೇಶನ್‌ ಇತ್ಯಾದಿಗಳು ಈ ಸಮಸ್ಯೆಯನ್ನು ಸಾಕಷ್ಟು ಕಡಿಮೆ ಮಾಡುತ್ತವೆ. ಒಳ್ಳೆಯ ನುರಿತ ವೈದ್ಯರನ್ನು ಸಂಪರ್ಕಿಸಿ ಇವನ್ನು ಮಾಡಿಸಿಕೊಳ್ಳಬಹುದು.

ಇದನ್ನೂ ಓದಿ: Weight Loss Tips: ಕಪ್ಪು ಬಣ್ಣದ ಆಹಾರಗಳಿಂದ ತೂಕ ಇಳಿಸಿ!

ಇವನ್ನು ಮಾಡಬೇಡಿ

  • ಯಾವತ್ತೂ ಸನ್‌ಸ್ಕ್ರೀನ್‌ ಹಚ್ಚದೆ ಇರಬೇಡಿ. ಸನ್‌ಸ್ಕ್ರೀನ್‌ ಬಹಳ ಮುಖ್ಯ.
  • ಚರ್ಮವನ್ನು ಚಿವುಟಬೇಡಿ. ಮೊಡವೆ, ಕಜ್ಜಿಗಳಿದ್ದರೆ, ಅವುಗಳನ್ನು ಉಗುರಿನಿಂದ ಕೆರೆಯಬೇಡಿ. ಇವು ಕಲೆಯನ್ನು ಉಳಿಸಿಬಿಡುತ್ತವೆ.
  • ಆಲ್ಕೋಹಾಲ್‌, ಸಲ್ಫೇಟ್‌, ಹಾಗೂ ಗಾಢ ಪರಿಮಳಗಳುಳ್ಳ ಸೌಂದರ್ಯವರ್ಧಕ, ಕ್ರೀಂಗಳನ್ನು ಬಳಸಬೇಡಿ.
  • ನಿತ್ಯವೂ ಮಾಯ್‌ಶ್ಚರೈಸ್‌ ಮಾಡಿಕೊಳ್ಳುವುದನ್ನು ಮರೆಯಬೇಡಿ.
  • ಅತಿಯಾಗಿ ಎಕ್ಸ್‌ಫಾಲಿಯೇಟ್‌ ಮಾಡಬೇಡಿ.
  • ನಿಮ್ಮ ಚರ್ಮ ತೋರುವ ಪ್ರತಿಕ್ರಿಯೆಯನ್ನು ನಿರ್ಲಕ್ಷಿಸಬೇಡಿ. ಏನೇ ಅಲರ್ಜಿಯಿದ್ದರೂ ಕೂಡಲೇ ಸೂಕ್ತ ವೈದ್ಯರನ್ನು ಕಾಣಿ.
  • ಯಾವತ್ತಿಗೂ ದಿನಾಂಕ ಮುಗಿದುಹೋದ ಸೌಂದರ್ಯವರ್ಧಕಗಳನ್ನು ಬಳಸಬೇಡಿ.
Continue Reading

ಆರೋಗ್ಯ

National Doctor’s Day: ಇಂದು ರಾಷ್ಟ್ರೀಯ ವೈದ್ಯರ ದಿನ; ಕಾಳಜಿಯ ಕೈಗಳಿಗೆ ಕೃತಜ್ಞತೆ ಹೇಳುವ ದಿನ

National Doctor’s Day: ಆರೋಗ್ಯವೆಂಬ ಭಾಗ್ಯ ಕೈಕೊಟ್ಟಾಗಲೇ ನಮಗೆ ವೈದ್ಯರ ನೆನಪಾಗುವುದು. ವ್ಯಕ್ತಿಗತವಾಗಿ ಮತ್ತು ಸಮುದಾಯಗಳ ಕುರಿತಾಗಿ ವೈದ್ಯರು ತೋರಿಸುವ ಕಾಳಜಿ, ಕರ್ತವ್ಯಪರತೆಯನ್ನು ಸ್ಮರಿಸಿಕೊಂಡು, ಅವರಿಗೆ ಆಭಾರಿಗಳಾಗಿರುವುದಕ್ಕೆ ಜುಲೈ ತಿಂಗಳ ಈ ಮೊದಲ ದಿನವನ್ನು ಮೀಸಲಿಡಲಾಗಿದೆ. ಈ ಕುರಿತ ವಿಶೇಷ ಲೇಖನ ಇಲ್ಲಿದೆ.

VISTARANEWS.COM


on

National Doctor’s Day
Koo

ವೈದ್ಯರನ್ನು ನಾರಾಯಣನೆಂದು ಕರೆಯುವ ವಾಡಿಕೆಯಿದೆ ಭಾರತದಲ್ಲಿ. ಹಾಗೆಲ್ಲ ದೇವರೆಂದು ಪೂಜಿಸುವ ವೃತ್ತಿಯಲ್ಲಿರುವವರಿಗೂ ʻಸಾಕಪ್ಪಾʼ ಎನಿಸುವಂತೆ ವೈದ್ಯರ ಮೇಲಿನ ದಾಳಿಗಳು, ನೀಟ್‌ ಪರೀಕ್ಷೆಗಳ ಅವಾಂತರ ಮುಂತಾದವು ಇತ್ತೀಚಿನ ದಿನಗಳಲ್ಲಿ ಸುದ್ದಿ ಮಾಡುತ್ತಿವೆ. ಅವುಗಳ ನಡುವೆಯೇ, ಈ ಗುಣ ಪಡಿಸುವ ಕೈಗಳಿಗೆ ಕೃತಜ್ಞತೆ ಸಲ್ಲಿಸುವ ದಿನವೂ ಬಂದಿದೆ. ಇಂದು ರಾಷ್ಟ್ರೀಯ ವೈದ್ಯರ ದಿನ (National Doctor’s Day).
ಆರೋಗ್ಯವೆಂಬ ಭಾಗ್ಯ ಕೈಕೊಟ್ಟಾಗಲೇ ನಮಗೆ ವೈದ್ಯರ ನೆನಪಾಗುವುದು. ವ್ಯಕ್ತಿಗತವಾಗಿ ಮತ್ತು ಸಮುದಾಯಗಳ ಕುರಿತಾಗಿ ವೈದ್ಯರು ತೋರಿಸುವ ಕಾಳಜಿ, ಕರ್ತವ್ಯಪರತೆಯನ್ನು ಸ್ಮರಿಸಿಕೊಂಡು, ಅವರಿಗೆ ಆಭಾರಿಗಳಾಗಿರುವುದಕ್ಕೆ ಈ ದಿನವನ್ನು ಮೀಸಲಿಡಲಾಗಿದೆ. ಇದೊಂದೇ ದಿನ ಸಾಕು ಎನ್ನುವ ಅರ್ಥದಲ್ಲಿ ಅಲ್ಲ, ಆದರೆ ಇಂದಾದರೂ ನೆನಪಿನಿಂದ ನಿಂನಿಮ್ಮ ವೈದ್ಯರಿಗೆ ಸಣ್ಣದೊಂದು ʻಥ್ಯಾಂಕ್ಸ್‌ʼ ಹೇಳಲು, ಅವರ ಕಾಳಜಿಯ ಕುರಿತಾಗಿ ಕೃತಜ್ಞತೆ ಸಲ್ಲಿಸಲು ಮರೆಯದಿರಿ ಎನ್ನುವ ಉದ್ದೇಶ ಇದರ ಹಿಂದಿದೆ.

Doctor’s Day

ಇಂದೇ ಏಕೆ?

ಜುಲೈ ಮೊದಲ ದಿನವೇ ವೈದ್ಯರ ದಿನವನ್ನಾಗಿ ಏಕೆ ಆಚರಿಸಲಾಗುತ್ತದೆ? ರೋಗಿಗಳ ನೋವನ್ನು ಶಮನ ಮಾಡುವ, ಗುಣಪಡಿಸುವ ಮತ್ತು ಬದುಕನ್ನು ಸಹನೀಯಗೊಳಿಸುವ ವೈದ್ಯರಿಗೆ ಇಂದೇ ಕೃತಜ್ಞತೆ ಸಲ್ಲಿಸುವುದಕ್ಕೆ ಕಾರಣಗಳಿವೆ. ಡಾ. ಬಿಪಿನ್‌ ಚಂದ್ರ ರಾಯ್‌ ಅವರ ಸಂಸ್ಮರಣಾರ್ಥವಾಗಿ ಭಾರತ ಸರಕಾರ ಈ ದಿನವನ್ನು ವೈದ್ಯರ ದಿನವೆಂದು 1991ರಲ್ಲಿ ಘೋಷಿಸಿದೆ. ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿಯಾಗಿದ್ದ ಡಾ. ಬಿಪಿನ್‌ ಚಂದ್ರ ರಾಯ್‌, ಖ್ಯಾತ ವೈದ್ಯರು ಮತ್ತು ಸ್ವಾತಂತ್ರ ಹೋರಾಟಗಾರರೂ ಆಗಿದ್ದರು.

ಇದನ್ನೂ ಓದಿ: Swim Benefits: ನಿತ್ಯವೂ ಈಜಿದರೆ ಸಾಕು; ಇದಕ್ಕಿಂತ ದೊಡ್ಡ ಬೇರೆ ವ್ಯಾಯಾಮ ಇನ್ನೊಂದು ಬೇಡ!

ಭಾರತೀಯ ವೈದ್ಯಕೀಯ ಸಂಘ, ಭಾರತೀಯ ವೈದ್ಯಕೀಯ ಮಂಡಳಿ ಸೇರಿದಂತೆ ಹಲವು ಪ್ರಮುಖ ಸಂಸ್ಥೆಗಳನ್ನು ಹುಟ್ಟುಹಾಕಿ, ವೈದ್ಯಕೀಯ ಕ್ಷೇತ್ರಕ್ಕೆ ಸಾಂಸ್ಥಿಕ ಬಲವನ್ನು ನೀಡುವಲ್ಲಿ ಡಾ. ರಾಯ್‌ ಪ್ರಮುಖರಾಗಿದ್ದರು. ತಾವೇ ಸ್ವತಃ ಒಳ್ಳೆಯ ವೈದ್ಯರಾಗಿ, ಬಹಳಷ್ಟು ಜೀವಗಳನ್ನು ಉಳಿಸಿದ್ದರು. ಸ್ವಾತಂತ್ರ ಹೋರಾಟದಲ್ಲೂ ಅವರು ಪಾಲ್ಗೊಂಡಿದ್ದರು. ದೇಶಕ್ಕೆ ಅವರು ನೀಡಿದ ಕೊಡುಗೆಗಾಗಿ, ಭಾರತದ ಅತ್ತ್ಯುನ್ನತ ನಾಗರಿಕ ಪ್ರಶಸ್ತಿ ʻಭಾರತ ರತ್ನʼ ಪುರಸ್ಕಾರವನ್ನು ನೀಡಿ ಗೌರವಿಸಲಾಗಿದೆ. ಆರೋಗ್ಯಕ್ಷೇತ್ರ ಮತ್ತು ನಾಗರಿಕ ಆರೋಗ್ಯ ವಲಯದಲ್ಲಿ ವೃತ್ತಿಪರತೆ ಮತ್ತು ಮಾನವೀಯತೆಯ ಉನ್ನತ ಆದರ್ಶಗಳನ್ನು ಸೃಷ್ಟಿಸಿರುವ ಸಾವಿರಾರು ವೈದ್ಯರು ನಮ್ಮ ಕಣ್ಣೆದುರಿಗಿದ್ದಾರೆ. ನೂರೆಂಟು ಸವಾಲುಗಳ ನಡುವೆ, ಜೀವ ಉಳಿಸುವ ಕೈಂಕರ್ಯದಲ್ಲಿ ನಿಸ್ವಾರ್ಥವಾಗಿ ತೊಡಗಿಸಿಕೊಂಡು, ಅದರಲ್ಲೇ ತೃಪ್ತಿಯನ್ನು ಕಂಡವರ ಕತೆಗಳನ್ನು, ದೃಷ್ಟಾಂತಗಳನ್ನು ನಾವೆಲ್ಲರೂ ಕೇಳಿರುತ್ತೇವೆ. ಕೋವಿಡ್‌ ಮಹಾಮಾರಿಯ ಸಂದರ್ಭದಲ್ಲೇ ಜೀವ ಒತ್ತಡ ಇಟ್ಟು ಹಗಲಿರುಳು ದುಡಿದ ವೈದ್ಯರು ಜಗತ್ತಿನ ಉದ್ದಗಲಕ್ಕೆ ಕಾಣಸಿಗುತ್ತಾರೆ. ಸಮಾಜಕ್ಕೆ ಈ ವೃತ್ತಿ ನೀಡುತ್ತಿರುವ ಕೊಡುಗೆಗೆ ಧನ್ಯವಾದ ಹೇಳುವುದೂ ಅಗತ್ಯವಲ್ಲವೇ? ಈ ವರ್ಷದ ಘೋಷವಾಕ್ಯ: ಗುಣಪಡಿಸುವ ಕೈಗಳು, ಕಾಳಜಿಯ ಹೃದಯಗಳು.

Continue Reading

ಪ್ರಮುಖ ಸುದ್ದಿ

Dengue Fever: ರಾಜಧಾನಿಯಲ್ಲಿ ಡೆಂಗ್ಯು ಜ್ವರಕ್ಕೆ ಒಂದು ಬಲಿ, ರಾಜ್ಯದಲ್ಲಿ ಸಾವಿನ ಸಂಖ್ಯೆ 6ಕ್ಕೆ ಏರಿಕೆ

Dengue Fever: ಹೊಸದಾಗಿ 213 ಡೆಂಗ್ಯು ಪ್ರಕರಣಗಳ ಪತ್ತೆಯಾಗಿದ್ದು, ಜೂನ್ ತಿಂಗಳಲ್ಲಿ 1742 ಜನರಿಗೆ ಡೆಂಗ್ಯು ಸೋಂಕು ತಗುಲಿದೆ. ಮಹಿಳೆಯರು ಮತ್ತು ಮಕ್ಕಳು ಡೆಂಗ್ಯು ಸೋಂಕಿಗೆ ಬೇಗ ಒಳಗಾಗುತ್ತಿದ್ದಾರೆ ಎನ್ನಲಾಗಿದ್ದು, ಗರ್ಭಿಣಿಯರಲ್ಲಿ ಡೆಂಗ್ಯು ಹೆಚ್ಚಿನ ಹಾನಿ ಎಸಗುತ್ತಿರುವುದರಿಂದಾಗಿ ಹೆಚ್ಚಿನ ಎಚ್ಚರ ವಹಿಸಲು ಸಲಹೆ ನೀಡಲಾಗಿದೆ.

VISTARANEWS.COM


on

Dengue fever rises across the state including Bengaluru BBMP Commissioner also get fever
Koo

ಬೆಂಗಳೂರು: ಕಗ್ಗದಾಸಪುರದ 27 ವರ್ಷದ ಯುವಕ ಡೆಂಗ್ಯು ಸೋಂಕಿನಿಂದಲೇ (Dengue Fever) ಸಾವಿಗೀಡಾಗಿದ್ದಾರೆ ಎಂದು ಬಿಬಿಎಂಪಿ (BBMP) ಖಚಿತಪಡಿಸಿದೆ. ಕಳೆದ ಶುಕ್ರವಾರ ಎರಡು ಡೆಂಗ್ಯು ಶಂಕಿತ ಸಾವಿನ ಪ್ರಕರಣಗಳು ಸಂಭವಿಸಿದ್ದವು. ಇದರಲ್ಲಿ ಒಂದು ಸಾವು ಡೆಂಗ್ಯುವಿನಿಂದಾಗಿದೆ ಎಂದು ಬಿಬಿಎಂಪಿ ಹೆಲ್ತ್ ಆಡಿಟ್ (BBMP Health Audit) ಖಚಿತಪಡಿಸಿದೆ.

ಕಗ್ಗದಾಸಪುರದ ಯುವಕನ ಸಾವಿಗೆ ಡೆಂಗ್ಯು ಕಾರಣವವಾಗಿದೆ. ಆದರೆ 80ರ ವೃದ್ಧೆಯ ಸಾವಿಗೆ ಕ್ಯಾನ್ಸರ್ ಕಾರಣ ಎಂದು ಬಿಬಿಎಂಪಿ ಹೆಲ್ತ್ ಆಡಿಟ್ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ನಗರದಲ್ಲಿ ಸದ್ಯ 1743 ಆಕ್ಟಿವ್ ಡೆಂಗ್ಯು ಕೇಸ್‌ಗಳು ಇವೆ.

ಹೊಸದಾಗಿ 213 ಡೆಂಗ್ಯು ಪ್ರಕರಣಗಳ ಪತ್ತೆಯಾಗಿದ್ದು, ಜೂನ್ ತಿಂಗಳಲ್ಲಿ 1742 ಜನರಿಗೆ ಡೆಂಗ್ಯು ಸೋಂಕು ತಗುಲಿದೆ. ಮಹಿಳೆಯರು ಮತ್ತು ಮಕ್ಕಳು ಡೆಂಗ್ಯು ಸೋಂಕಿಗೆ ಬೇಗ ಒಳಗಾಗುತ್ತಿದ್ದಾರೆ ಎನ್ನಲಾಗಿದ್ದು, ಗರ್ಭಿಣಿಯರಲ್ಲಿ ಡೆಂಗ್ಯು ಹೆಚ್ಚಿನ ಹಾನಿ ಎಸಗುತ್ತಿರುವುದರಿಂದಾಗಿ ಹೆಚ್ಚಿನ ಎಚ್ಚರ ವಹಿಸಲು ಸಲಹೆ ನೀಡಲಾಗಿದೆ.

ಇದೂವರೆಗೂ ನಗರದಲ್ಲಿ ಇಬ್ಬರು ಡೆಂಗ್ಯು ಜ್ವರಕ್ಕೆ ಬಲಿಯಾಗಿದ್ದಾರೆ. ಸಿವಿ ರಾಮನ್ ನಗರದ 27 ವರ್ಷದ ಯುವಕ ಡೆಂಗ್ಯು ಜ್ವರಕ್ಕೆ ಬಲಿಯಾಗಿದ್ದು, ಈತ ತೀವ್ರ ಜ್ವರದಿಂದ ಬಳಲಿ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾನೆ ಎಂದು ಬಿಬಿಎಂಪಿ ಮೂಲಗಳು ಮಾಹಿತಿ ನೀಡಿವೆ.

4 ಸಾವಿರ ಗಡಿ ದಾಟಿದ ಡೆಂಗ್ಯೂ; ಐವರು ಸಾವು

ಹವಾಮಾನ ವೈಪರೀತ್ಯ ಮತ್ತು ಮಳೆಯಿಂದಾಗಿ ಡೆಂಗ್ಯೂ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿರುವುದು ಆತಂಕ ಮೂಡಿಸಿದೆ. 2024ರಲ್ಲಿ ಈ ವರೆಗೆ (ಜೂನ್‌) 93,012 ಶಂಕಿತವಾಗಿದ್ದು, ಇದರಲ್ಲಿ 40,918 ಮಂದಿಯ ರಕ್ತ ಮಾದರಿಯನ್ನು ಸಂಗ್ರಹಿಸಲಾಗಿತ್ತು. ಆ ಪ್ರಕಾರ 4364 ಮಂದಿಗೆ ಡೆಂಗ್ಯೂ ಜ್ವರ ದೃಢಪಟ್ಟಿದೆ. ಡೆಂಗ್ಯೂ ಜ್ವರಕ್ಕೆ ಚಿಕಿತ್ಸೆ ಫಲಿಸದೇ ಐವರು ಮೃತಪಟ್ಟಿದ್ದಾರೆ. ಶಿವಮೊಗ್ಗ, ಬಾಗಲಕೋಟೆ, ಗದಗದಲ್ಲಿ ತಲಾ ಒಬ್ಬರು ಹಾಗೂ ಹಾಸನದಲ್ಲಿ ಇಬ್ಬರು ಮೃತಪಟ್ಟಿದ್ದಾರೆ.

ಡೆತ್‌ ಆಡಿಟಿಂಗ್‌ಗೆ ಮುಂದಾದ ಬಿಬಿಎಂಪಿ

ರಾಜ್ಯ ರಾಜಧಾನಿಯಲ್ಲಿ ಡೆಂಗ್ಯೂ ಪ್ರಕರಣಗಳು ವಿಪರೀತ ಏರಿಕೆ ಆಗಿವೆ. ಬೆಂಗಳೂರಲ್ಲಿ ಜನವರಿಯಿಂದ ಈವರೆಗೆ 1,385 ಮಂದಿಗೆ ಡೆಂಗ್ಯೂ ಜ್ವರ ಕಂಡು ಬಂದಿದೆ. ಈವರೆಗೆ ಡೆಂಗ್ಯೂನಿಂದ ಮೃತಪಟ್ಟ ವರದಿ ಆಗಿಲ್ಲ. ಆದರೆ ಇಬ್ಬರು ಡೆಂಗ್ಯೂ ಜ್ವರದಿಂದ ಮೃತಪಟ್ಟಿರುವ ಶಂಕೆ ಇದ್ದು, ಸಾವಿಗೆ ಕಾರಣ ತಿಳಿಯುವ ಸಲುವಾಗಿ ಡೆತ್ ಆಡಿಟ್‌ಗೆ ಬಿಬಿಎಂಪಿ ಮುಂದಾಗಿದೆ.

ಇನ್ನೂ 3,470 ಲಾರ್ವಾ ಉತ್ಪತ್ತಿ ತಾಣ ಪತ್ತೆಯಾಗಿದ್ದು, ಇದರಲ್ಲಿ 2,004 ತಾಣಗಳ ನಾಶ ಮಾಡಲಾಗಿದೆ ಎಂದು ಬಿಬಿಎಂಪಿ ಆರೋಗ್ಯ ವಿಭಾಗ ಮಾಹಿತಿ ನೀಡಿದೆ. ಪಾಲಿಕೆಯ ಆರೋಗ್ಯ ಸಿಬ್ಬಂದಿ ನಿನ್ನೆವರೆಗೂ 17,877 ಮನೆಗಳ ಸಮೀಕ್ಷೆ ನಡೆಸಿದ್ದಾರೆ. ಆಡಿಟ್ ಬಳಿಕ ವರದಿಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ರವಾನೆ ಮಾಡಲಾಗುತ್ತದೆ.

ಡೆಂಗ್ಯೂ ಹೇಗೆ ಹರಡುತ್ತದೆ?

ಡೆಂಗ್ಯೂ ಜ್ವರ ಸೊಳ್ಳೆಯಿಂದ ಹರಡುವ ವೈರಲ್ ಸೋಂಕು ಆಗಿದೆ. ಇದು ಈಡಿಪಸ್‌ ಎಂಬ ಹೆಣ್ಣು ಸೊಳ್ಳೆಗಳ ಕಡಿತದಿಂದ ಹರಡುತ್ತದೆ. ಸೊಳ್ಳೆ ಕಚ್ಚಿದ 4-7 ದಿನಗಳ ನಂತರ ರೋಗ ಲಕ್ಷಣಗಳು ಸಾಮಾನ್ಯವಾಗಿ ಕಂಡು ಬರುತ್ತವೆ. ಇದರ ಪ್ರಭಾವ 10 ದಿನಗಳವರೆಗೆ ಇರುತ್ತದೆ. ಹೀಗಾಗಿ ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳುವುದು, ಸ್ವಚ್ಛತೆಗೆ ಆದ್ಯತೆ ನೀಡುವುದು ಉತ್ತಮವಾಗಿದೆ.

ಡೆಂಗ್ಯೂ ಜ್ವರ ತಲೆನೋವಿನಂತಹ ರೋಗಲಕ್ಷಣಗಳನ್ನು ಉಂಟು ಮಾಡಬಹುದು. ಡೆಂಗ್ಯೂವನ್ನು ಹೆಮರಾಜಿಕ್ ಜ್ವರ ಎಂದೂ ಕರೆಯಲಾಗುತ್ತದೆ. ಡೆಂಗ್ಯೂ ಜ್ವರದ ತೀವ್ರ ಸ್ವರೂಪವು ತೀವ್ರ ರಕ್ತಸ್ರಾವ, ರಕ್ತದೊತ್ತಡ ಹಾಗೂ ರಕ್ತಕಣಗಳ ಸಂಖ್ಯೆಯಲ್ಲಿ ಭಾರಿ ಕುಸಿತವಾಗಿ ವ್ಯಕ್ತಿಯ ಸಾವಿಗೂ ಕಾರಣವಾಗಬಹುದು. ಅಧಿಕ ಜ್ವರ, ತೀವ್ರ ತಲೆನೋವು, ವಾಂತಿ, ದೇಹದ ವಿವಿಧ ಭಾಗಗಳಲ್ಲಿ ದದ್ದುಗಳು, ಗ್ರಂಥಿಗಳಲ್ಲಿ ಊತ, ಮೂಳೆ ಮತ್ತು ಕೀಲು ನೋವು, ರಕ್ತಸ್ರಾವವಾಗವುದು ರೋಗ ಲಕ್ಷಣಗಳಾಗಿವೆ.

ಇದನ್ನೂ ಓದಿ: World Malaria Day: ಮಲೇರಿಯಾ ಮತ್ತು ಡೆಂಗ್ಯು ನಡುವಿನ ವ್ಯತ್ಯಾಸ ಏನು? ಗುರುತಿಸುವುದು ಹೇಗೆ?

Continue Reading
Advertisement
T20 World Cup 2024
ಪ್ರಮುಖ ಸುದ್ದಿ4 hours ago

T20 World Cup 2024: ಟಿ-20 ಸ್ವಯಂವರದ ಮಂಟಪದಲ್ಲಿ ವಿಶ್ವಸುಂದರಿಗೆ ಮಾಲೆ ತೊಡಿಸಿದ ರೋಹಿತ್ ಬಳಗ

GST Collection
ಪ್ರಮುಖ ಸುದ್ದಿ4 hours ago

GST Collection : ಜೂನ್​ನಲ್ಲಿ 1.74 ಲಕ್ಷ ಕೋಟಿ ರೂಪಾಯಿ ಜಿಎಸ್​ಟಿ ಸಂಗ್ರಹ, ಶೇಕಡಾ 8 ಏರಿಕೆ

2nd National Pediatric Stroke Conclave 2024 inauguration in Bengaluru
ಕರ್ನಾಟಕ4 hours ago

Bengaluru News: ಬೆಂಗಳೂರಿನಲ್ಲಿ 2ನೇ ರಾಷ್ಟ್ರೀಯ ಮಕ್ಕಳ ಪಾರ್ಶ್ವವಾಯುವಿನ ಶೃಂಗ 2024ಕ್ಕೆ ಚಾಲನೆ

Maharashtra Politics
ಪ್ರಮುಖ ಸುದ್ದಿ4 hours ago

Maharashtra Politics : ವಿಧಾನ ಪರಿಷತ್​ನಲ್ಲಿ ಬಿಜೆಪಿಯನ್ನು ಸೋಲಿಸಿದ ಉದ್ಧವ್​ ಠಾಕ್ರೆಯ ಶಿವಸೇನೆ

Press Day and Pratibha Puraskara programme in Ballari
ಬಳ್ಳಾರಿ5 hours ago

Press Day: ಮಾಧ್ಯಮ ಕ್ಷೇತ್ರಕ್ಕೆ ಬಳ್ಳಾರಿಯ ಕೊಡುಗೆ ಅಪಾರ: ಡಾ.ಕರಿಯಪ್ಪ ಮಾಳಿಗಿ

Manufacturing of auto parts in the state Increased propensity for capital investment
ಕರ್ನಾಟಕ5 hours ago

Foreign Investment: ರಾಜ್ಯದಲ್ಲಿ ವಾಹನ ಬಿಡಿಭಾಗ ತಯಾರಿಕೆ; ಬಂಡವಾಳ ಹೂಡಿಕೆಗೆ ದ.ಕೊರಿಯಾ ಒಲವು

Kannada New Movie kagada film released on 5th July
ಕರ್ನಾಟಕ5 hours ago

Kannada New Movie: ಮೊಬೈಲ್ ಮುಂಚಿನ ಪ್ರೇಮಕಥೆ ‘ಕಾಗದ’ ಜುಲೈ 5ರಂದು ಬಿಡುಗಡೆ

Afghanistan cricket
ಪ್ರಮುಖ ಸುದ್ದಿ5 hours ago

Afghanistan cricket : ನಮಗೂ ಒಂದು ತಂಡ ರಚಿಸಿ ಎಂದು ಐಸಿಸಿಗೆ ಪತ್ರ ಬರೆದ ಅಫಘಾನಿಸ್ತಾನದ ಮಹಿಳಾ ಕ್ರಿಕೆಟಿಗರು

IND vs SA
ಪ್ರಮುಖ ಸುದ್ದಿ6 hours ago

IND vs SA : ಭಾರತ ವಿರುದ್ಧ ಟಿ20 ಸರಣಿಗೆ ದಕ್ಷಿಣ ಆಫ್ರಿಕಾ ಮಹಿಳಾ ತಂಡ ಪ್ರಕಟ

Mangalore Jail
ಕರ್ನಾಟಕ6 hours ago

Mangalore Jail: ಮಂಗಳೂರು ಜೈಲಲ್ಲಿ 2 ಗುಂಪುಗಳ ನಡುವೆ ಮಾರಾಮಾರಿ; ಇಬ್ಬರಿಗೆ ಗಾಯ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast
ಮಳೆ10 hours ago

Karnataka Weather : ಕೊಡಗು, ದಾವಣಗೆರೆಯಲ್ಲಿ ಮಳೆಯಾಟ; ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

karnataka Weather Forecast
ಮಳೆ1 day ago

Karnataka Weather : ಬೆಂಗಳೂರು, ಕಲಬುರಗಿ ಸೇರಿದಂತೆ ಹಲವೆಡೆ ವರ್ಷಧಾರೆ; ನಾಳೆಗೂ ಮಳೆ ಅಲರ್ಟ್‌

Actor Darshan
ಬೆಂಗಳೂರು2 days ago

Actor Darshan : ಖೈದಿ ನಂ.6106ಕ್ಕೆ ಡಿಮ್ಯಾಂಡ್‌! ದರ್ಶನ್‌ ಫ್ಯಾನ್ಸ್‌ಗೆ ಕಾನೂನು ಕಂಟಕ, ರೂಲ್ಸ್‌ ಬ್ರೇಕ್‌ ಮಾಡಿದ್ರೆ ಬೀಳುತ್ತೆ ಕೇಸ್‌‌!

karnataka weather Forecast
ಮಳೆ2 days ago

Karnataka Weather : ಮಳೆಗೆ ಸ್ಕಿಡ್‌ ಆಗಿ ಹೇಮಾವತಿ ನದಿಗೆ ಹಾರಿದ ಕಾರು; ಕರಾವಳಿಗೆ ಎಚ್ಚರಿಕೆ ಕೊಟ್ಟ ತಜ್ಞರು

karnataka Rain
ಮಳೆ3 days ago

Karnataka Rain: ಭಾರಿ ಮಳೆಗೆ ಮನೆಗಳ ಗೋಡೆ ಕುಸಿತ; ಕೂದಲೆಳೆ ಅಂತರದಲ್ಲಿ ವೃದ್ಧ ಪಾರು

karnataka Weather Forecast
ಮಳೆ3 days ago

Karnataka Weather : ಅಬ್ಬಬ್ಬಾ.. ಮುಲ್ಕಿಯಲ್ಲಿ 30 ಸೆಂ.ಮೀ ಮಳೆ ದಾಖಲು; ವಾರಾಂತ್ಯದಲ್ಲೂ ಭಾರಿ ವರ್ಷಧಾರೆ

karnataka Rain
ಮಳೆ4 days ago

Karnataka Rain : ಭಾರಿ ಮಳೆಗೆ ಪಾತಾಳ ಸೇರಿದ ಬಾವಿ; ಅಲೆಗಳ ಹೊಡೆತಕ್ಕೆ ಸಮುದ್ರಪಾಲಾದ ಮನೆ

Karnataka Weather Forecast
ಮಳೆ4 days ago

Karnataka Weather : ಭಾರಿ ಮಳೆ ಹಿನ್ನೆಲೆ ದಕ್ಷಿಣ ಕನ್ನಡಕ್ಕೆ ರೆಡ್ ಅಲರ್ಟ್; ಶುಕ್ರವಾರವೂ ಶಾಲೆಗಳಿಗೆ ರಜೆ ಘೋಷಣೆ

karnataka Weather Forecast
ಮಳೆ4 days ago

Karnataka Weather : ಭಾರಿ ಮಳೆಗೆ ಸೇತುವೆಯಿಂದ ಹೊಳೆಗೆ ಬಿದ್ದ ಕಾರು; ಮರ ಹಿಡಿದು ಪ್ರಾಣ ಉಳಿಸಿಕೊಂಡ ಸವಾರರು

Heart Attack
ಕೊಡಗು4 days ago

Heart Attack : ಕೊಡಗಿನಲ್ಲಿ ಹೃದಯಾಘಾತಕ್ಕೆ ಯುವತಿ ಬಲಿ; ಹೆಚ್ಚಾಯ್ತು ಅಲ್ಪಾಯುಷ್ಯದ ಭಯ

ಟ್ರೆಂಡಿಂಗ್‌