T20 World Cup 2024: ಟಿ-20 ಸ್ವಯಂವರದ ಮಂಟಪದಲ್ಲಿ ವಿಶ್ವಸುಂದರಿಗೆ ಮಾಲೆ ತೊಡಿಸಿದ ರೋಹಿತ್ ಬಳಗ - Vistara News

ಪ್ರಮುಖ ಸುದ್ದಿ

T20 World Cup 2024: ಟಿ-20 ಸ್ವಯಂವರದ ಮಂಟಪದಲ್ಲಿ ವಿಶ್ವಸುಂದರಿಗೆ ಮಾಲೆ ತೊಡಿಸಿದ ರೋಹಿತ್ ಬಳಗ

T20 World Cup 2024: ಐಸಿಸಿ ಟಿ-20 ಕ್ರಿಕೆಟ್ ಸ್ವಯಂವರದ ಅವಿಸ್ಮರಣೀಯ ದೃಶ್ಯಗಳನ್ನು ನೋಡಲು ಕ್ರಿಕೆಟ್ ಜಗತ್ತು ಕಾತರದಿಂದ ಕಾಯುತ್ತಿತ್ತು. ಇತ್ತ ಭಾರತದ ಪ್ರತಿಯೊಬ್ಬ ಅಭಿಮಾನಿಯ ಹೃದಯಬಡಿತದಲ್ಲೂ ಏರುಪೇರು ನಡೆದೇ ಇತ್ತು. ಅದೊಂದು ಮಹೋನ್ನತ ಕ್ಷಣಕ್ಕೆ ಸಾಕ್ಷಿಯಾಗಿತ್ತು ಕೆರೆಬಿಯನ್ ನಾಡಿನ ಬಾರ್ಬೊಡಸ್‍ನ ಕೆನ್ಸಿಂಗ್ಟನ್ ಓವಲ್ ಅಂಗಣ.

VISTARANEWS.COM


on

T20 World Cup 2024
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಸನತ್ ರೈ, ಬೆಂಗಳೂರು

2024ರ ಜೂನ್ 29. ಭಾರತೀಯ ಕಾಲಮಾನ ರಾತ್ರಿ 8 ಗಂಟೆ., ಟಿ-20 ವಿಶ್ವಕಪ್ ಟೂರ್ನಿಯ (T20 World Cup 2024) ಅಶ್ವಮೇಧ ಯಾಗದ ಕೊನೆಯ ಪರ್ವ. ವಿಜಯಲಕ್ಷ್ಮಿ ಸ್ವಯಂವರದ ತಹತಹಿಕೆ ಭಾರತೀಯ ಮಕ್ಕಳ ಹೃದಯದ ಭಾವಕೋಶದಲ್ಲಿ ಅವ್ಯಾಹತವಾಗಿ ಪುಟಿಯುತ್ತಲೇ ಇತ್ತು.. ಸತತ ಗೆಲುವಿನ ನಾಗಾಲೋಟದಲ್ಲಿದ್ದ ವಿಶ್ವದ ಬಲಿಷ್ಠ ಎರಡು ತಂಡಗಳು ಅಂತಿಮ ಹಂತದ ಸಿದ್ಧತೆ ಮಾಡಿಕೊಂಡಿದ್ದವು. ನಾಲ್ಕನೇ ಬಾರಿ ಚಂಚಲೆ ಚೆಲುವೆಯನ್ನು ಒಲಿಸಿಕೊಳ್ಳಲು ತುದಿಗಾಲಿನಲ್ಲಿ ನಿಂತಿದ್ದರು ಭಾರತದ ರೋಹಿತ್ ಶರ್ಮಾ ಹುಡುಗರು.

ಇನ್ನೊಂದೆಡೆ ಐಸಿಸಿ ಅಖಾಡದಲ್ಲಿ ಯಾವತ್ತೂ ಭಗ್ನ ಪ್ರೇಮಿಗಳಾಗಿದ್ದ ದಕ್ಷಿಣ ಆಫ್ರಿಕಾ ಹುಡುಗರು ಇದೇ ಮೊದಲ ಬಾರಿ ವಿಶ್ವ ಸುಂದರಿಯ ಸ್ವಯಂವರದ ಮಂಟಪದ ಕೊನೆಯ ಮೆಟ್ಟಿಲು ಹತ್ತಿ ನಿಂತಿದ್ದರು. ಐಸಿಸಿ ಟಿ-20 ಕ್ರಿಕೆಟ್ ಸ್ವಯಂವರದ ಅವಿಸ್ಮರಣೀಯ ದೃಶ್ಯಗಳನ್ನು ನೋಡಲು ಕ್ರಿಕೆಟ್ ಜಗತ್ತು ಕಾತರದಿಂದ ಕಾಯುತ್ತಿತ್ತು. ಇತ್ತ ಭಾರತದ ಪ್ರತಿಯೊಬ್ಬ ಅಭಿಮಾನಿಯ ಹೃದಯಬಡಿತದಲ್ಲೂ ಏರುಪೇರು ನಡೆದೇ ಇತ್ತು. ಅದೊಂದು ಮಹೋನ್ನತ ಕ್ಷಣಕ್ಕೆ ಸಾಕ್ಷಿಯಾಗಿತ್ತು ಕೆರೆಬಿಯನ್ ನಾಡಿನ ಬಾರ್ಬೊಡಸ್‍ನ ಕೆನ್ಸಿಂಗ್ಟನ್ ಓವಲ್ ಅಂಗಣ.

ಹೌದು, ಈ ಬಾರಿ ಟಿ-20 ವಿಶ್ವಕಪ್ ಟ್ರೋಫಿಗೆ ಗೆಲುವಿನ ಮಾಲೆ ಹಾಕಿ ಭಾರತಾಂಬೆಯ ಪಾದದಡಿಯಲ್ಲಿಡಲು ರೋಹಿತ್ ಹುಡುಗರು ಭೀಷ್ಮ ಶಪಥ ಮಾಡಿದ್ದರು. ಸಮರ್ಥ ನಾಯಕ ರೋಹಿತ್, ಗುರು ದ್ರಾವಿಡಾಚಾರ್ಯರಿಗೆ ಗೆಲುವೊಂದೇ ಉಡುಗೊರೆ ಅನ್ನುವುದು ತಂಡದ ಎಲ್ಲಾ ಆಟಗಾರರ ಅಂಬೋಣವಾಗಿತ್ತು.

ಹತ್ತು ವರ್ಷಗಳ ಹಿಂದೆ ಸ್ವಯಂವರ ಮಂಟಪದಿಂದ ಹೊರದಬ್ಬಿದ್ದ ಚಂಚಲ ಚೆಲುವೆ, ಎರಡು ಬಾರಿ ಮದರಂಗಿ ಶಾಸ್ತ್ರದ ವೇಳೆಯಲ್ಲೇ ಕೈಕೊಟ್ಟಿದ್ದಳು (ಸೆಮಿಫೈನಲ್ ನಿರ್ಣಾಯಕ ಘಟ್ಟದಲ್ಲಿ). ಆದ್ರೆ ಈ ಬಾರಿ ಗುರು ರಾಹುಲ್ ದ್ರಾವಿಡ್ ಮಾರ್ಗದರ್ಶನದಲ್ಲಿ ರೋಹಿತ್ ಹುಡುಗರು ಪಕ್ಕಾ ರಣತಂತ್ರ ಹಣೆದು ಅಂತಿಮ ಅಂಕಣಕ್ಕೆ ಕಂಕಣ ಕಟ್ಟಿಕೊಂಡು ಇಳಿದಿದ್ದರು.

ಬ್ಯಾಟಿಂಗ್ ಆಯ್ಕೆ

ಮಹತ್ವದ ಟಾಸ್ ಗೆದ್ದ ರೋಹಿತ್ ಹಿಂದು ಮುಂದು ಯೋಚನೆ ಮಾಡದೇ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ್ರು. ಯಾಕಂದ್ರೆ ಬ್ಯಾಟಿಂಗ್ ಶಕ್ತಿ ಮತ್ತು ಬೌಲಿಂಗ್ ಯುಕ್ತಿಯ ಮೇಲೆ ರೋಹಿತ್ ಅಪಾರ ನಂಬಿಕೆಯನ್ನಿಟ್ಟುಕೊಂಡಿದ್ದರು. ಮಿನುಗು ತಾರೆಯಂತೆ ಹೊಳೆಯುವ ಚೆಂದುಳ್ಳಿ ಚೆಲುವೆಯ ಕೊರಳಿಗೆ ಮಾಲೆ ಹಾಕಲು ಗುರು ದ್ರಾವಿಡ್ ಕೊಟ್ಟ ದಾರದಲ್ಲಿ ಪುಷ್ಪಮಾಲೆಗಳ ಪೋಣಿಸಲು ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಶುರು ಮಾಡಿದ್ರು.

ಆರಂಭದಲ್ಲೇ ವಿರಾಟ್ ಕೊಹ್ಲಿ ಮಲ್ಲಿಗೆಯ ಕಂಪನ್ನು ಪಸರಿಸಿದ್ರು. ಒಂದರೆಗಳಿಗೆಯೂ ಮೈಮರೆಯಲಿಲ್ಲ. ತಾಳ್ಮೆ, ಏಕಾಗ್ರತೆಯೊಂದಿಗೆ ಘಮಘಮಿಸುವ ಬ್ಯಾಟಿಂಗ್ ವೈಖರಿಗೆ ಅಭಿಮಾನಿಗಳು ಕೂಡ ಮೈಮರೆತು ಕುಣಿದಾಡಿದರು. ಆದ್ರೆ ದುರದೃಷ್ಟವಶಾತ್ ಗುಲಾಬಿ ಹೂವಿನಂತೆ ಆಕರ್ಷಿಸುವ ರೋಹಿತ್ ಬ್ಯಾಟಿಂಗ್ ಅಂತಿಮ ಹಣಾಹಣಿಯಲ್ಲಿ ಹೆಚ್ಚು ಸುವಾಸನೆ ಬೀರಲಿಲ್ಲ. ಕೇಶವ್ ಮಹಾರಾಜ್ ಎಂಬ ಹರಿಣಪಾಳೆಯದ ಪತಂಗವೊಂದು ಗುಲಾಬಿಯ ಮಕರಂದವನ್ನು ಹೀರುತ್ತಿದ್ದಂತೆ ರೋಹಿತ್ ಪೋಣಿಸುವಿಕೆ ಮುಗಿದಂತಾಯ್ತು. ಹಿಟ್ ಮ್ಯಾನ್, ಗೆಲುವಿನ ಮಾಲೆಗೆ 9 (ರನ್) ಗುಲಾಬಿ ಪೋಣಿಸಿ ಪೆವಿಲಿಯನ್‍ನತ್ತ ಹೆಜ್ಜೆ ಹಾಕಿದಾಗ ಇಡೀ ಓವಲ್ ಅಂಗಳ ಒಂದು ಕ್ಷಣ ಸ್ತಬ್ದಗೊಂಡಿತ್ತು. ಮರು ಕ್ಷಣದಲ್ಲೇ (ಕೇಶವ್ ಮಹಾರಾಜ್) ಪತಂಗದ ಚೆಲ್ಲಾಟಕ್ಕೆ ಶೂನ್ಯ ಸುತ್ತಿದ ರಿಷಬ್ ಪಂತ್ ಸುಗಂಧ ರಾಜನಂತೆ ಬ್ಯಾಟಿಂಗ್‍ನಲ್ಲಿ ಪರಿಮಳ ಬೀರಲಿಲ್ಲ. ಹಿಂದೆಯೇ ಕೇವಲ 3 (ರನ್) ಸೂರ್ಯಕಾಂತಿಗಳಷ್ಟೇ ಮಾಲೆಗೆ ಪೋಣಿಸಿದ ಸೂರ್ಯಕುಮಾರ್ ಬಂದ ದಾರಿಗೆ ಸುಂಕವಿಲ್ಲದೆ ಹಿಂತಿರುಗಿದ್ರು. ಜೇನುನೋಣದಂತೆ ದಾಳಿ ಮಾಡಿದ ರಬಾಡ ಸ್ಕೈ ವಿಕೆಟ್ ಉರುಳಿಸಿ ಟೀಮ್ ಇಂಡಿಯಾದ ಅಭಿಮಾನಿಗಳ ಹೃದಯವನ್ನು ಘಾಸಿ ಮಾಡಿದ್ದರು. ಹೀಗೆ, ದುಂಬಿ, ಪತಂಗ, ಜೇಣುನೋಣದ ಆಕ್ರಮಣಕ್ಕೆ ಟೀಮ್ ಇಂಡಿಯಾದ ಗೆಲುವಿನ ಮಾಲೆಗೆ ಹೂ ಪೋಣಿಸುವ ಕಾರ್ಯ ನಿಧಾನವಾಗಿ ಸಾಗುತ್ತಿತ್ತು.

ಇದನ್ನೂ ಓದಿ: Afghanistan cricket : ನಮಗೂ ಒಂದು ತಂಡ ರಚಿಸಿ ಎಂದು ಐಸಿಸಿಗೆ ಪತ್ರ ಬರೆದ ಅಫಘಾನಿಸ್ತಾನದ ಮಹಿಳಾ ಕ್ರಿಕೆಟಿಗರು

ಆದ್ರೂ ಮಲ್ಲಿಗೆಯ ಕಂಪಿನಂತೆ ಬ್ಯಾಟ್ ಬೀಸುತ್ತಿದ್ದ ಕೊಹ್ಲಿಗೆ ಅಕ್ಸರ್ ಪಟೇಲ್ ಸಾಥ್ ನೀಡಿದ್ರು. ಲಯ ಪಡೆದುಕೊಂಡ ವಿರಾಟ್ ಕೊಹ್ಲಿ ಗೆಲುವಿನ ಹಾರಕ್ಕೆ ಮಲ್ಲಿಗೆಯನ್ನು ಪೋಣಿಸಿಕೊಂಡು ಹೋದ್ರೆ, ಇತ್ತ ಅಕ್ಸರ್ ಪಟೇಲ್ ಹೆಚ್ಚು ಸುವಾಸನೆ ಇಲ್ಲದ ಕನಕಾಂಬರ ಹೂವಿನಂತೆ ಯಾರು ಕೂಡ ಊಹೆ ಮಾಡದ ರೀತಿಯಲ್ಲಿ ಬ್ಯಾಟ್ ಬೀಸಿದ್ರು. ವಿರಾಟನ ಮಲ್ಲಿಗೆಯ ಜೊತೆಗೆ ಅಕ್ಸರ್ ಪಟೇಲ್ ಕನಕಾಂಬರವನ್ನು ಪೋಣಿಸಿ ಗೆಲುವಿನ ಹಾರದ ಅಲಂಕಾರವನ್ನು ಹೆಚ್ಚಿಸಿದ್ರು. ಆದ್ರೆ 47 (ರನ್) ಕನಕಾಂಬರ ಹೂಗಳನ್ನು ಗೆಲುವಿನ ಹಾರಕ್ಕೆ ಸೇರಿಸಿ ಮರಳಿ ಪೆವಿಲಿಯನ್ ಸೇರಿಕೊಂಡ್ರು.

ಇನ್ನೊಂದೆಡೆ ವಿರಾಟನ ಮಲ್ಲಿಗೆಯ ಸುವಾಸನೆ ಜೊತೆ ಸೇವಂತಿ ಹೂವಿನಂತೆ ಘಮ್ಮಂತ ಪಸರಿಸಿದ್ದು ಶಿವಂ ದುಬೆ. ಅದರಲ್ಲೂ ಕಿಂಗ್ ಕೊಹ್ಲಿ, ಬೆಳಂದಿಗಳ ಚಂದಿರನ ಬೆಳಕಿನಲ್ಲಿ ಫಳಫಳನೆ ಹೊಳೆವ ಮಲ್ಲಿಗೆಯಂತೆ ಕಂಗೊಳಿಸುತ್ತಿದ್ದರು. ಅಷ್ಟರಲ್ಲೇ ಜಾನ್ಸೆನ್ ಎಂಬ ದುಂಬಿ ಮಲ್ಲಿಗೆ ಪೋಣಿಸುತ್ತಿದ್ದ ವಿರಾಟನ ಏಕಾಗ್ರತೆಗೆ ಭಂಗವನ್ನುಂಟು ಮಾಡಿತು. ಅಷ್ಟೊತ್ತಿಗಾಗಲೇ 76 (ರನ್) ಮಲ್ಲಿಗೆ ಹೂಗಳು ಭಾರತದ ಗೆಲುವಿನ ಹಾರದಲ್ಲಿ ಸೇರಿಕೊಂಡಿದ್ದವು.

ಬಳಿಕ ಸೇವಂತಿಯ (ಶಿವಂ ದುಬೆ) ಜೊತೆ ಹಾರ್ದಿಕ್ ಪಾಂಡ್ಯ ಎಂಬ ಕೆಂಡ ಸಂಪಿಗೆಯೂ ಸ್ವಯಂವರ ಮಾಲೆಗೆ ಇನ್ನಷ್ಟು ಮೆರಗು ನೀಡಿತು. 27 ಸೇವಂತಿ ಹೂ ಪೋಣಿಸಿ ಹೂ ಮಾಲೆಗೆ ಶೃಂಗಾರ ಹೆಚ್ಚಿಸಿದ ಶಿವಂ ದುಬೆಗೆ ಮಕರಂದ ಹೀರುವ ಚತುರ ಸನ್ ಬರ್ಡ ಹಕ್ಕಿಯಂತೆ ಆನ್ರಿಚ್ ನೋರ್ಟೆಜೆ ಕುಟುಕಿದ್ರು.
ಅಂತಿಮವಾಗಿ ಪಾಂಡ್ಯ ಅವರ 5* (ರನ್) ಕೆಂಡ ಸಂಪಿಗೆಯ ಜೊತೆ ಸುಂದರ ಮಾಲೆಗೆ ಕೇವಲ 2 ಜಾಜಿ ಮಲ್ಲಿಗೆ ಹೂ ಪೋಣಿಸಿದ ರವೀಂದ್ರ ಜಡೇಜಾಗೂ ಸನ್‍ಬರ್ಡ ನೊರ್ಟೆಜೆ ಅಡ್ಡಿಯನ್ನುಂಟು ಮಾಡಿದ್ರು. ಅಷ್ಟರಲ್ಲಾಗಲೇ ರೋಹಿತ್ ಹುಡುಗರು 176 ಮಾರುದ್ದದ ಹೂಮಾಲೆಯನ್ನು ತಯಾರಿಸಿ ಇಟ್ಟಿದ್ದರು.
*
ಮುಂದಿನ ಪಾರಿ ನೀಲಿ ಜೆರ್ಸಿ ಹುಡುಗರ ಬೌಲಿಂಗ್ ಪಡೆಯದ್ದಾಗಿತ್ತು. ತಮ್ಮ ಪಾಲಿನ ಪುಷ್ಪಗಳನ್ನು ಸುಮಮಾಲೆಗೆ ಪೋಣಿಸಲು ಬುಮ್ರಾ ನೇತೃತ್ವದ ಬೌಲಿಂಗ್ ಸೈನಿಕರು ಸಿದ್ಧರಾಗಿದ್ದರು.

ವಿಶ್ವ ಕ್ರಿಕೆಟ್ ಬೌಲಿಂಗ್ ನ ನಾಯಕ ಶಿರೋಮಣಿ ಜಸ್ಪ್ರಿತ್ ಬೂಮ್ರಾ ಎರಡು (ವಿಕೆಟ್) ಗೊಂಚಲು ಚೆಂಡು ಹೂಗಳನ್ನು ಕಿತ್ತುಕೊಂಡು ಕೈ ಜಾರುತ್ತಿದ್ದ ವಿಜಯ ಮಾಲೆಗೆ ಮೆರಗು ನೀಡಿದ್ರು. ಇನ್ನೊಂದೆಡೆ ಅರ್ಶಾದೀಪ್ ಸಿಂಗ್ ಕೂಡ ಎರಡು (ವಿಕೆಟ್) ಗೊಂಚಲು ತುಳಸಿದಳಗಳನ್ನು ಪೋಣಿಸಿ ಗೆಲುವಿನ ಮಾಲೆಯ ಅಂದವನ್ನು ಹೆಚ್ಚಿಸಿದ್ರು. ಹಾಗೇ ಕುಲದೀಪ್ ಯಾದವ್ ಮೂರು (ಕ್ಯಾಚ್) ಗಂಟು ಪಾರಿಜಾತ ಹೂಗಳನ್ನು ಗೆಲುವಿನ ಹಾರಕ್ಕೆ ಪೋಣಿಸಿ ಸುವಾಸನೆಯನ್ನು ಇಮ್ಮಡಿಗೊಳಿಸಿದ್ರು. ಮತ್ತೊಂದೆಡೆ ಬ್ಯಾಟಿಂಗ್ ನಲ್ಲಿ ಶೂನ್ಯ ಸುತ್ತಿದ್ದ ರಿಷಬ್ ಪಂತ್ ಕೂಡ ಎರಡು (ಕ್ಯಾಚ್) ಸುಗಂಧರಾಜ ಹೂ ಸೇರಿಸಿ ಪರಿಮಳ ಹೆಚ್ಚಿಸಿದ್ರು. ಜೊತೆಗೆ ಅಕ್ಸರ್ ಪಟೇಲ್ 1 (ವಿಕೆಟ್) ಗಂಟು ಕನಕಾಂಬರ ಹೂ ಪೋಣಿಸಿ ದೃಷ್ಟಿ ಬೊಟ್ಟು ಇಟ್ರು. ಮಗದೊಂದು ಕಡೆ ಕಳೆಗುಂದಿದ್ದ ಸೂರ್ಯಕಾಂತಿ ಪುಷ್ಪ, ಉಗ್ರ ಸೂರ್ಯನ ಪ್ರಖರತೆಗೆ ನಾಚಿನೀರಾಗಿ ಹೋಯ್ತು. ಸೂರ್ಯನ ತೇಜೋಪುಂಜದ ಪ್ರಭಾವಳಿಗೆ ಸೂರ್ಯಕಾಂತಿ ಕೂಡ ಸದ್ದಿಲ್ಲದೆ ಬಂದು ಗೆಲುವಿನ ಹಾರ ಸೇರಿಕೊಂಡಿತ್ತು.

ಸೂರ್ಯಕುಮಾರ್ ಕ್ಯಾಚ್​

ಗೆಲುವಿನ ಹಾರ ಕಟ್ಟುವಲ್ಲಿ ಲಯ ತಪ್ಪಿದ್ದ ರೋಹಿತ್ ಹುಡುಗರನ್ನು ಸುಗ್ಗಿಯ ಸಂಕ್ರಾಂತಿ ಮಾಡುವಂತೆ ಮಾಡಿದ್ದು ಕೂಡ ಸೂರ್ಯನೇ. ಚಿಗರೆಯಂತೆ ಜಿಗಿದು ಸಮಯ ಪ್ರಜ್ಞೆಯಿಂದ ಸೂರ್ಯಕಾಂತಿಯನ್ನು (ಕ್ಯಾಚ್) ಹಿಡಿದು ಅಂದವಾದ ಮಾಲೆಗೆ ಹೊಳಪು ನೀಡಿದ್ರು. ಹೂವಿನ ಮಾಲೆಯ ಅಂದವನ್ನು ಹೆಚ್ಚಿಸಲು ಪಾಂಡ್ಯ ಮತ್ತೆ ಮೂರು (ವಿಕೆಟ್) ಕೆಂಡಸಂಪಿಗೆಯನ್ನು ಸೇರಿಸಿದ್ರು. ಕೊನೆಗೆ ಗೆಲುವಿನ ಮಾಲೆಗೆ ದಾರ ಕೊಟ್ಟಿದ್ದ ಗುರು ರಾಹುಲ್ ದ್ರಾವಿಡ್ ಆಚಾರ್ಯ ಬ್ರಹ್ಮಕಮಲವನ್ನು ಪೋಣಿಸಿ ಫಿನಿಶಿಂಗ್ ಟಚ್ ನೀಡಿಬಿಟ್ಟರು.

ಅಂತಿಮವಾಗಿ ಬಗೆ ಬಗೆಯ ಅಂದ ಚೆಂದದ ಸುಂದರ ಹೂ ಮಾಲೆಯನ್ನು ಚಂಚಲ ಚೆಲುವೆಯ ಕೊರಳಿಗೆ ಟೀಮ್ ಇಂಡಿಯಾ ಹುಡುಗರು ಹಾಕಿ ನಲಿದರು. ವೈಯ್ಯಾರದಿಂದ ಬೀಗುತ್ತಿದ್ದ ಐಸಿಸಿ ಟಿ-20ಯ ಪಟ್ಟದರಸಿಯನ್ನು ಒಲಿಸಿಕೊಂಡಾಗಿನ ಕ್ಷಣ ಇತಿಹಾಸ ಪುಟಗಳಲ್ಲಿ ಶಾಶ್ವತವಾಗಿ ನೆನಪಿನಲ್ಲಿರುತ್ತದೆ.

ಗೆಲುವಿನ ಸಂಭ್ರಮ.. ಸಡಗರ.. ಕಣ್ಣೀರು, ಭಾವುಕ, ಆನಂದಭಾಷ್ಪ, ಉತ್ಸಾಹ, ಉನ್ಮಾದ, ವಿದಾಯ, ಹತಾಶೆ, ಸೋಲು, ಬೇಸರ.. ಅಬ್ಬಾಬ್ಬಾ.. ಬಣ್ಣಿಸಲು ಪದಗಳಿಲ್ಲ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

MyMUL President: ಸಚಿವ ಕೆ.ವೆಂಕಟೇಶ್ ಕಿರುಕುಳದಿಂದಲೇ ಮೈಮುಲ್‌ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ: ಪಿ.ಎಂ.ಪ್ರಸನ್ನ

MyMUL President: ಮೈಸೂರು ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ (ಮೈಮುಲ್) ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಪಿ.ಎಂ.ಪ್ರಸನ್ನ ಅವರು ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದ್ದಾರೆ.

VISTARANEWS.COM


on

MyMUL President
Koo

ಮೈಸೂರು: ಮೈಸೂರು ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ (ಮೈಮುಲ್-Mysuru Milk Union Ltd) ಅಧ್ಯಕ್ಷ ಸ್ಥಾನಕ್ಕೆ ದಿಢೀರನೆ ರಾಜೀನಾಮೆ ನೀಡಿರುವ ಕುರಿತು ಪಿ.ಎಂ.ಪ್ರಸನ್ನ ಅವರು ಸ್ಪಷ್ಟನೆ ನೀಡಿದ್ದಾರೆ. ಪಶು ಸಂಗೋಪನೆ ಸಚಿವ ಕೆ.ವೆಂಕಟೇಶ್ ಕಿರುಕುಳದಿಂದಲೇ ರಾಜೀನಾಮೆ ನೀಡಿದ್ದೇನೆ ಎಂದು ಅರೋಪಿಸಿರುವ ಅವರು, ಸಚಿವರು ರಾಜಕೀಯ ಕಾರಣಕ್ಕೆ ನನಗೆ ಬಹಳ ಕಿರುಕುಳ ಕೊಡುತ್ತಿದ್ದಾರೆ. ಹೀಗಾಗಿ ಮೈಮುಲ್‌ ಅಧ್ಯಕ್ಷ (MyMUL President) ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು ಪಿ.ಎಂ.ಪ್ರಸನ್ನ ತಿಳಿಸಿದ್ದಾರೆ.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿರುವ ಅವರು, ವಾಸಸ್ಥಳ ದೃಢೀಕರಣ ಪತ್ರದ ವಿಚಾರದಲ್ಲಿ ಪದೇ ಪದೇ ನೋಟಿಸ್ ಕೊಟ್ಟು ಕಿರುಕುಳ ನೀಡಲಾಗಿದೆ. ನಾನು ರಾಜೀನಾಮೆ ಕೊಡದೆ ಇದ್ದರೆ ಎಲ್ಲಾ ಪದಾಧಿಕಾರಿಗಳ ವಜಾಕ್ಕೆ ವಾಮಮಾರ್ಗದ ಮೂಲಕ ಯತ್ನಿಸಲು ಮುಂದಾಗಿದ್ದಾರೆ. ಈ ಕಾರಣಕ್ಕೆ ರಾಜೀನಾಮೆ ಕೊಟ್ಟಿದ್ದೇನೆ ಎಂದು ಹೇಳಿದ್ದಾರೆ.

ರಾಜೀನಾಮೆ ಕೊಟ್ಟ ನಂತರವೂ ತನಿಖೆಗೆ ನೋಟಿಸ್ ಕೊಟ್ಟಿದ್ದಾರೆ. ಪಿರಿಯಾಪಟ್ಟಣದಲ್ಲಿ ಸಿಎಂ ಆಪ್ತ ಸಚಿವ ಕೆ.ವೆಂಕಟೇಶ್ ದ್ವೇಷ ರಾಜಕಾರಣ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ನಾನು ಅವರಿಗೆ ಪ್ರತಿಸ್ಪರ್ಧಿಯಾಗುತ್ತೇನೆ ಎಂದು ಈ ರೀತಿ ಮಾಡುತ್ತಿದ್ದಾರೆ. ನಾನು ಇರುವವರೆಗೂ ಅವರ ವಿರುದ್ಧವೇ ಹೋರಾಟ ಮಾಡುತ್ತೇನೆ. ನಾನು ರಾಜಕೀಯವಾಗಿ ಅವರ ಮಗನಿಗೆ ಎದುರಾಳಿಯಾಗುತ್ತೇನೆ ಎಂದು ಈ ರೀತಿ ನನ್ನ ಮತ್ತು ನನ್ನ ಕುಟುಂಬದ ಜೊತೆ ದ್ವೇಷ ಸಾಧಿಸುತ್ತಿದ್ದಾರೆ. ನಾನು ಇದಕ್ಕೆ ಹೆದರಲ್ಲ, ನನ್ನ ನಂಬಿ, ನನ್ನನ್ನು ಈ ಸ್ಥಾನಕ್ಕೆ ಕೂರಿಸಿರುವ ಒಕ್ಕೂಟದ ಸದಸ್ಯರಿಗೆ ಯಾವುದೇ ತೊಂದರೆ ಆಗಬಾರದು ಅಂತ ನಾನು ರಾಜೀನಾಮೆ ಸಲ್ಲಿಸಿದ್ದೇನೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ | Closure of Madrasas: ಮದರಸಾಗಳನ್ನು ಮುಚ್ಚಲು ನಿರ್ಣಯ ಮಂಡನೆ; ಕಾಂಗ್ರೆಸ್‌ ಕಿಡಿ

ಸಹಕಾರಿ ಕ್ಷೇತ್ರದಲ್ಲಿ ನಮಗೆ ಜಿ.ಟಿ. ದೇವೇಗೌಡರೇ ಗುರುಗಳು. ಅವರ ಗಮನಕ್ಕೆ ತಂದು ರಾಜೀನಾಮೆ ಕೊಟ್ಟಿದ್ದೇನೆ. ಅವರು ಬೇಡ ಇರು ಅಂತ ಹೇಳಿದರು, ಆದೂ ನಾನು ರಾಜೀನಾಮೆ ಕೊಟ್ಟಿದ್ದೇನೆ ಎಂದು ಹೇಳಿದ್ದಾರೆ.

ದಲಿತ ಸಮುದಾಯಕ್ಕೆ ಮೋಸ ಮಾಡುತ್ತಿರುವ ರಾಜ್ಯ ಸರಕಾರ: ಬೊಮ್ಮಾಯಿ

Petrol Diesel Price Hike

ಹಾವೇರಿ: ರಾಜ್ಯ ಸರಕಾರ ದಿವಾಳಿ ಆಗಿರುವುದು ಪ್ರತಿಯೊಂದು ಹೆಜ್ಜೆಯಲ್ಲಿ ಪ್ರದರ್ಶನ ಮಾಡುತ್ತಿದೆ. ಇದೀಗ ದಲಿತ ಸಮುದಾಯಕ್ಕೆ ಮೀಸಲಿಡಬೇಕಾದ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ (Guarantee Schemes) ವೆಚ್ಚ ಮಾಡಿದ್ದು, ಆ ಮೂಲಕ ಎಸ್‌ಸಿ/ಎಸ್‌ಟಿ (SC/ST) ಜನಾಂಗಕ್ಕೆ ಮೋಸ ಮಾಡಿದೆ ಎಂದು ಸಂಸದ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಹರಿಹಾಯ್ದಿದ್ದಾರೆ.

ಶಿಗ್ಗಾಂವಿಯಲ್ಲಿ ಸಂಸದ ಬಸವರಾಜ್ ಬೊಮ್ಮಾಯಿ ಸುದ್ದಿಗೋಷ್ಠಿ ನಡೆಸಿ ಈ ಬಗೆಗೆ ಹೇಳಿಕೆ ನೀಡಿದರು. ಎಸ್ಸಿ ಎಸ್ಟಿಯವರ ಹಣ 14 ಸಾವಿರ ಕೋಟಿಯನ್ನು ಗ್ಯಾರಂಟಿ ಯೋಜನೆಗಳಿಗೆ ವರ್ಗಾವಣೆ ಮಾಡಿದ್ದಾರೆ. ಎಸ್ಸಿ ಎಸ್ಟಿ ಜನಾಂಗಕ್ಕೆ ಸರಕಾರ ಮೋಸ ಮಾಡುತ್ತಿದೆ. ಈ ಹಣ ದಲಿತ ಜನಾಂಗದ ಅಭಿವೃದ್ಧಿಗೆ ಬಳಕೆ ಆಗಬೇಕಿತ್ತು. ಆ ಎಲ್ಲಾ ಹಣ ಗ್ಯಾರಂಟಿಗೆ ಹೋಗುತ್ತಿದೆ ಎಂದು ಬೊಮ್ಮಾಯಿ ಟೀಕಿಸಿದರು.

ಹಿಂದುಳಿದ ವರ್ಗಗಳ ಚಾಂಪಿಯನ್ ಅಂತ ಹೇಳುತ್ತಾರೆ. ಹಿಂದುಳಿದ ವರ್ಗಗಳಿಗೆ ಕಡಿಮೆ ಹಣ ಇಟ್ಟಿದ್ದಾರೆ. ಎಸ್ಸಿ ಎಸ್ಟಿ ಹಣ ಬಳಕೆಯಲ್ಲಿ ಕಾನೂನು ಉಲ್ಲಂಘನೆ ಆಗಿದೆ. ರಾಜಕಾರಣಕ್ಕಾಗಿ, ವೋಟಿಗಾಗಿ ಎಸ್ಸಿ ಎಸ್ಟಿ ಹಣ ದುರ್ಬಳಕೆ ಆಗುತ್ತಿದೆ. ಖಜಾನೆ ಸುಭದ್ರವಾಗಿದೆ ಅಂತಾರೆ, ಹಾಗಾದ್ರೆ ಎಸ್ಸಿ ಎಸ್ಟಿಯವರ ಜೇಬಿಗೆ ಯಾಕೆ ಕೈ ಹಾಕಿದ್ದೀರಿ? ಎಂದು ಬೊಮ್ಮಾಯಿ ಪ್ರಶ್ನಿಸಿದರು.

ಡೆಂಗ್ಯು ಜ್ವರ ಪ್ರಕರಣದಲ್ಲಿ ಜಿಲ್ಲಾಡಳಿತ ಮುಂಜಾಗ್ರತಾ ಕ್ರಮ ಕೈಗೊಳ್ತಿಲ್ಲ. ಮಂತ್ರಿಗಳು ಕೇವಲ ಸಭೆ ಮಾಡುತ್ತಿದ್ದಾರೆ. ಚಿಕಿತ್ಸೆ ಸಿಗದಿದ್ದರೆ ಸಾವು ನೋವುಗಳಾಗುತ್ತದೆ, ಜನ ಪರದಾಡುತ್ತಿದ್ದಾರೆ. ಆರೋಗ್ಯ ಇಲಾಖೆ ಸಂಪೂರ್ಣ ವಿಫಲವಾಗಿದೆ, ಡಿಹೆಚ್‌ಓ ವರ್ಗಾವಣೆ ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ | Dengue Fever: ಡೆಂಗ್ಯುಗೆ ಕೋವಿಡ್‌ ಮಾದರಿ ಉಚಿತ ಚಿಕಿತ್ಸೆ ಕೊಡಿ, ಮೆಡಿಕಲ್‌ ಎಮರ್ಜೆನ್ಸಿ ಘೋಷಿಸಿ: ಡಾ. ಮಂಜುನಾಥ್

ಅಶೋಕ‌ ಅವರ ನೇತೃತ್ವದಲ್ಲಿ ಶಿಗ್ಗಾಂವಿ ಉಪಚುನಾವಣೆ ವಿಚಾರ ಸಮಿತಿ ಮಾಡಿದ್ದೇವೆ. ಧನ್ಯವಾದ ಯಾತ್ರೆ ಶಿಗ್ಗಾಂವಿಯಲ್ಲಿ ಮಾಡುತ್ತೇನೆ. ಜುಲೈ 12ರಿಂದ ಯಾತ್ರೆ ಆರಂಭ ಮಾಡುತ್ತೇನೆ. ಒಂದುವರೆ ತಿಂಗಳುಗಳ‌ ಕಾಲ ಕ್ಷೇತ್ರದಲ್ಲಿ ಯಾತ್ರೆ ನಡೆಯಲಿದೆ. ಶಿಗ್ಗಾಂವಿಯಲ್ಲಿ ಪೋಸ್ಟರ್ ಭರಾಟೆ ನಡೆಯುವುದಿಲ್ಲ ಎಂದರು.

Continue Reading

ಪ್ರಮುಖ ಸುದ್ದಿ

Basavaraj Bommai: ದಲಿತ ಸಮುದಾಯಕ್ಕೆ ಮೋಸ ಮಾಡುತ್ತಿರುವ ರಾಜ್ಯ ಸರಕಾರ: ಬೊಮ್ಮಾಯಿ

Basavaraj Bommai: ಶಿಂಗ್ಗಾವಿಯಲ್ಲಿ ಸಂಸದ ಬಸವರಾಜ್ ಬೊಮ್ಮಾಯಿ ಸುದ್ದಿಗೋಷ್ಠಿ ನಡೆಸಿ ಈ ಬಗೆಗೆ ಹೇಳಿಕೆ ನೀಡಿದರು. ಎಸ್ಸಿ ಎಸ್ಟಿಯವರ ಹಣ 14 ಸಾವಿರ ಕೋಟಿಯನ್ನು ಗ್ಯಾರಂಟಿ ಯೋಜನೆಗಳಿಗೆ ವರ್ಗಾವಣೆ ಮಾಡಿದ್ದಾರೆ. ಎಸ್ಸಿ ಎಸ್ಟಿ ಜನಾಂಗಕ್ಕೆ ಸರಕಾರ ಮೋಸ ಮಾಡುತ್ತಿದೆ. ಈ ಹಣ ದಲಿತ ಜನಾಂಗದ ಅಭಿವೃದ್ಧಿಗೆ ಬಳಕೆ ಆಗಬೇಕಿತ್ತು. ಆ ಎಲ್ಲಾ ಹಣ ಗ್ಯಾರಂಟಿಗೆ ಹೋಗುತ್ತಿದೆ ಎಂದು ಬೊಮ್ಮಾಯಿ ಟೀಕಿಸಿದರು.

VISTARANEWS.COM


on

Basavaraj Bommai
Koo

ಹಾವೇರಿ: ರಾಜ್ಯ ಸರಕಾರ (Karnataka Govt) ದಿವಾಳಿ ಆಗಿರುವುದು ಪ್ರತಿಯೊಂದು ಹೆಜ್ಜೆಯಲ್ಲಿ ಪ್ರದರ್ಶನ ಮಾಡುತ್ತಿದೆ. ಇದೀಗ ದಲಿತ ಸಮುದಾಯಕ್ಕೆ ಮೀಸಲಿಡಬೇಕಾದ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ (Guarantee Schemes) ವೆಚ್ಚ ಮಾಡಿದ್ದು, ಆ ಮೂಲಕ ಎಸ್‌ಸಿ/ಎಸ್‌ಟಿ (SC/ST) ಜನಾಂಗಕ್ಕೆ ಮೋಸ ಮಾಡಿದೆ ಎಂದು ಸಂಸದ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಹರಿಹಾಯ್ದಿದ್ದಾರೆ.

ಶಿಂಗ್ಗಾವಿಯಲ್ಲಿ ಸಂಸದ ಬಸವರಾಜ್ ಬೊಮ್ಮಾಯಿ ಸುದ್ದಿಗೋಷ್ಠಿ ನಡೆಸಿ ಈ ಬಗೆಗೆ ಹೇಳಿಕೆ ನೀಡಿದರು. ಎಸ್ಸಿ ಎಸ್ಟಿಯವರ ಹಣ 14 ಸಾವಿರ ಕೋಟಿಯನ್ನು ಗ್ಯಾರಂಟಿ ಯೋಜನೆಗಳಿಗೆ ವರ್ಗಾವಣೆ ಮಾಡಿದ್ದಾರೆ. ಎಸ್ಸಿ ಎಸ್ಟಿ ಜನಾಂಗಕ್ಕೆ ಸರಕಾರ ಮೋಸ ಮಾಡುತ್ತಿದೆ. ಈ ಹಣ ದಲಿತ ಜನಾಂಗದ ಅಭಿವೃದ್ಧಿಗೆ ಬಳಕೆ ಆಗಬೇಕಿತ್ತು. ಆ ಎಲ್ಲಾ ಹಣ ಗ್ಯಾರಂಟಿಗೆ ಹೋಗುತ್ತಿದೆ ಎಂದು ಬೊಮ್ಮಾಯಿ ಟೀಕಿಸಿದರು.

ಹಿಂದುಳಿದ ವರ್ಗಗಳ ಚಾಂಪಿಯನ್ ಅಂತ ಹೇಳುತ್ತಾರೆ. ಹಿಂದುಳಿದ ವರ್ಗಗಳಿಗೆ ಕಡಿಮೆ ಹಣ ಇಟ್ಟಿದ್ದಾರೆ. ಎಸ್ಸಿ ಎಸ್ಟಿ ಹಣ ಬಳಕೆಯಲ್ಲಿ ಕಾನೂನು ಉಲ್ಲಂಘನೆ ಆಗಿದೆ. ರಾಜಕಾರಣಕ್ಕಾಗಿ, ವೋಟಿಗಾಗಿ ಎಸ್ಸಿ ಎಸ್ಟಿ ಹಣ ದುರ್ಬಳಕೆ ಆಗುತ್ತಿದೆ. ಖಜಾನೆ ಸುಭದ್ರವಾಗಿದೆ ಅಂತಾರೆ, ಹಾಗಾದ್ರೆ ಎಸ್ಸಿ ಎಸ್ಟಿಯವರ ಜೇಬಿಗೆ ಯಾಕೆ ಕೈ ಹಾಕಿದ್ದೀರಿ? ಎಂದು ಬೊಮ್ಮಾಯಿ ಪ್ರಶ್ನಿಸಿದರು.

ಡೆಂಗ್ಯು ಜ್ವರ ಪ್ರಕರಣದಲ್ಲಿ ಜಿಲ್ಲಾಡಳಿತ ಮುಂಜಾಗ್ರತಾ ಕ್ರಮ ಕೈಗೊಳ್ತಿಲ್ಲ. ಮಂತ್ರಿಗಳು ಕೇವಲ ಸಭೆ ಮಾಡುತ್ತಿದ್ದಾರೆ. ಚಿಕಿತ್ಸೆ ಸಿಗದಿದ್ದರೆ ಸಾವು ನೋವುಗಳಾಗುತ್ತದೆ, ಜನ ಪರದಾಡುತ್ತಿದ್ದಾರೆ. ಆರೋಗ್ಯ ಇಲಾಖೆ ಸಂಪೂರ್ಣ ವಿಫಲವಾಗಿದೆ, ಡಿಹೆಚ್‌ಓ ವರ್ಗಾವಣೆ ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಅಶೋಕ‌ ಅವರ ನೇತೃತ್ವದಲ್ಲಿ ಶಿಗ್ಗಾಂವಿ ಉಪಚುನಾವಣೆ ವಿಚಾರ ಸಮಿತಿ ಮಾಡಿದ್ದೇವೆ. ಧನ್ಯವಾದ ಯಾತ್ರೆ ಶಿಗ್ಗಾವಿಯಲ್ಲಿ ಮಾಡುತ್ತೇನೆ. ಜುಲೈ 12ರಿಂದ ಯಾತ್ರೆ ಆರಂಭ ಮಾಡುತ್ತೇನೆ. ಒಂದುವರೆ ತಿಂಗಳುಗಳ‌ ಕಾಲ ಕ್ಷೇತ್ರದಲ್ಲಿ ಯಾತ್ರೆ ನಡೆಯಲಿದೆ. ಶಿಗ್ಗಾವಿಯಲ್ಲಿ ಪೋಸ್ಟರ್ ಭರಾಟೆ ನಡೆಯುವುದಿಲ್ಲ ಎಂದರು.

ಬಿಜೆಪಿ ರಾಜ್ಯ ಉಸ್ತುವಾರಿಯಾಗಿ ರಾಧಾಮೋಹನ್‌ ದಾಸ್‌ ಅಗರ್ವಾಲ್

ಬೆಂಗಳೂರು: ರಾಜ್ಯ ಬಿಜೆಪಿಗೆ (BJP Karnataka) ನೂತನ ಉಸ್ತುವಾರಿ, ಸಹ ಉಸ್ತುವಾರಿಯನ್ನು ನೇಮಕ ಮಾಡಲಾಗಿದೆ. ಉಸ್ತುವಾರಿಯಾಗಿ ಡಾ. ರಾಧಾಮೋಹನ್ ದಾಸ್ ಅಗರ್ವಾಲ್ ಮತ್ತು ಸಹ ಉಸ್ತುವಾರಿಯಾಗಿ ಪ್ರಭಾಕರ್ ರೆಡ್ಡಿ ನೇಮಕವಾಗಿದ್ದಾರೆ. ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ಆಗಿದ್ದ ರಾಧಾಮೋಹನ್ ದಾಸ್ ಅಗರ್ವಾಲ್ ಅವರನ್ನು ರಾಜ್ಯ ಬಿಜೆಪಿ ನೂತನ ಉಸ್ತುವಾರಿಯಾಗಿ ಮುಂದುವರಿಸಲಾಗಿದೆ.

ಕರ್ನಾಟಕ ಸೇರಿ ದೇಶದ ವಿವಿಧ ರಾಜ್ಯಗಳಿಗೆ ಉಸ್ತುವಾರಿ, ಸಹ ಉಸ್ತುವಾರಿಗಳನ್ನು ನೇಮಿಸಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್‌ ಸಿಂಗ್‌ ಅವರು ಆದೇಶ ಹೊರಡಿಸಿದ್ದು, ಕರ್ನಾಟಕದ ಉಸ್ತುವಾರಿಯಾಗಿ ಡಾ. ರಾಧಾಮೋಹನ್ ದಾಸ್ ಅಗರ್ವಾಲ್ ಮತ್ತು ಸಹ ಉಸ್ತುವಾರಿಯಾಗಿ ಪ್ರಭಾಕರ್ ರೆಡ್ಡಿ ನೇಮಕ ಮಾಡಲಾಗಿದೆ.

ಇದನ್ನೂ ಓದಿ: Petrol Diesel Price Hike: ಬಡವರ ಮೇಲೆ ತೆರಿಗೆ ಹಾಕಿ ಬೇರೆ ರಾಜ್ಯಗಳಿಗೆ ಹೋಲಿಸುವುದು ದ್ರೋಹ: ಬೊಮ್ಮಾಯಿ ಆಕ್ರೋಶ

Continue Reading

Latest

Viral News: ಮದುವೆಯಾಗಲು ನಿರಾಕರಿಸಿದ ಪ್ರಿಯಕರನ ಆ ʼಅಂಗʼಕ್ಕೆ ಕತ್ತರಿ ಹಾಕಿದ ಪ್ರಿಯತಮೆ

Viral News: ಬಿಹಾರದ ಸರನ್ ಜಿಲ್ಲೆಯಲ್ಲಿ ಮಹಿಳಾ ವೈದ್ಯೆಯೊಬ್ಬಳು ಪ್ರೀತಿಸಿ ತನ್ನ ಜೊತೆ ಸಂಬಂಧ ಬೆಳೆಸಿ ಮದುವೆಯಾಗಲು ನಿರಾಕರಿಸಿದ ಗೆಳೆಯನ ಖಾಸಗಿ ಭಾಗವನ್ನು ಕತ್ತರಿಸಿದ ಘಟನೆ ನಡೆದಿದೆ. ಸಂತ್ರಸ್ತ ಪ್ರಕಾಶ್ ಅಲಿಯಾಸ್ ವಿಕಾಶ್ ಸಿಂಗ್ ಎಂದು ಗುರುತಿಸಲಾಗಿದ್ದು, ಈತ ಮಧೌರಾ ಬ್ಲಾಕ್‌ನ ವಾರ್ಡ್ ಸಂಖ್ಯೆ 12 ರ ಕೌನ್ಸಿಲರ್ ಆಗಿದ್ದ ಎನ್ನಲಾಗಿದೆ. ಕಳೆದ ಐದು ವರ್ಷಗಳಿಂದ ಆತ ಯುವತಿಯೊಂದಿಗೆ ಸಂಬಂಧ ಹೊಂದಿದ್ದನು. ಆದರೆ ಅವನು ಅವಳನ್ನು ಮದುವೆಯಾಗಲು ನಿರಾಕರಿಸುತ್ತಿದ್ದನು. ಇದರಿಂದ ಕೋಪಗೊಂಡ ಯುವತಿ ಆ ವ್ಯಕ್ತಿಯನ್ನು ತನ್ನ ಮನೆಗೆ ಕರೆಸಿಕೊಂಡು, ಅವನ ಖಾಸಗಿ ಭಾಗವನ್ನು ಕತ್ತರಿಸಿದ್ದಾಳೆ ಎನ್ನಲಾಗಿದೆ.

VISTARANEWS.COM


on

Love Case
Koo

ಪಾಟ್ನಾ: ಪ್ರೀತಿಸಿ ಯುವತಿಯರನ್ನು ಬಳಸಿಕೊಂಡು ಮೋಸ ಮಾಡುವಂತಹ ಯುವಕರ ಸಂಖ್ಯೆ ಹೆಚ್ಚಾಗುತ್ತಿದೆ. ಯುವಕರ ಮೋಸದ ಪ್ರೀತಿಗೆ ಎಷ್ಟೋ ಯುವತಿಯರ ಜೀವನ ಹಾಳಾಗಿದೆ. ಹಾಗಾಗಿ ಇವರಲ್ಲಿ ಕೆಲವು ಯುವತಿಯರು ಮಾನ ಮರ್ಯಾದೆಗೆ ಅಂಜಿ ಜೀವ ಕಳೆದುಕೊಂಡಿದ್ದಾರೆ, ಆದರೆ ಇಲ್ಲೊಬ್ಬ ಯುವತಿ ಪ್ರೀತಿಸಿ (Viral News) ಮೋಸ ಮಾಡಿದವನಿಗೆ ತಕ್ಕ ಶಿಕ್ಷೆ ವಿಧಿಸಿದ್ದಾಳೆ.

ಬಿಹಾರದ ಸರನ್ ಜಿಲ್ಲೆಯಲ್ಲಿ ಮಹಿಳಾ ವೈದ್ಯೆಯೊಬ್ಬಳು ಪ್ರೀತಿಸಿ ತನ್ನ ಜೊತೆ ಸಂಬಂಧ ಬೆಳೆಸಿ ಮದುವೆಯಾಗಲು ನಿರಾಕರಿಸಿದ ಗೆಳೆಯನ ಖಾಸಗಿ ಭಾಗವನ್ನು ಕತ್ತರಿಸಿದ ಘಟನೆ ಜುಲೈ 1ರಂದು ನಡೆದಿದೆ. ಸಂತ್ರಸ್ತ ಪ್ರಕಾಶ್ ಅಲಿಯಾಸ್ ವಿಕಾಶ್ ಸಿಂಗ್ ಎಂದು ಗುರುತಿಸಲಾಗಿದ್ದು, ಈತ ಮಧೌರಾ ಬ್ಲಾಕ್‌ನ ವಾರ್ಡ್ ಸಂಖ್ಯೆ 12ರ ಕೌನ್ಸಿಲರ್ ಆಗಿದ್ದ ಎನ್ನಲಾಗಿದೆ. ಕಳೆದ ಐದು ವರ್ಷಗಳಿಂದ ಆತ ಯುವತಿಯೊಂದಿಗೆ ಸಂಬಂಧ ಹೊಂದಿದ್ದನು. ಆದರೆ ಅವನು ಅವಳನ್ನು ಮದುವೆಯಾಗಲು ನಿರಾಕರಿಸುತ್ತಿದ್ದನು. ತಾನು ಸಂಬಂಧ ಬೆಳೆಸಿದ ತಪ್ಪಿಗೆ ಯುವತಿ ಹೇಗೋ ನ್ಯಾಯಾಲಯದಲ್ಲಿ ಮದುವೆಯಾಗಲು ಅವನನ್ನು ಮನವೊಲಿಸಿದಳು. ಆದರೆ ಅಂದು ಆತ ಮದುವೆಯಾಗಲು ನ್ಯಾಯಾಲಯಕ್ಕೆ ಬರದೆ ತಪ್ಪಿಸಿಕೊಂಡ. ಇದರಿಂದ ಕೋಪಗೊಂಡ ಯುವತಿ ಆ ವ್ಯಕ್ತಿಯನ್ನು ತನ್ನ ಮನೆಗೆ ಕರೆಸಿಕೊಂಡು, ಅವನ ಖಾಸಗಿ ಭಾಗವನ್ನು ಕತ್ತರಿಸಿದ್ದಾಳೆ ಎನ್ನಲಾಗಿದೆ.

ಆತ ಅಳುವುದನ್ನು ಕೇಳಿದ ನೆರೆಹೊರೆಯವರು ಬಂದು ನೋಡಿದಾಗ ಆತ ರಕ್ತದ ಮಡುವಿನಲ್ಲಿ ಹಾಸಿಗೆಯ ಮೇಲೆ ಬಿದ್ದಿರುವುದನ್ನು ಕಂಡು ಸರನ್ ಜಿಲ್ಲೆಯ ಮಧೌರಾ ಠಾಣೆಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ವ್ಯಕ್ತಿಯನ್ನು ಚಿಕಿತ್ಸೆಗಾಗಿ ಪಾಟ್ನಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ (ಪಿಎಂಸಿಎಚ್) ದಾಖಲಿಸಿದ್ದಾರೆ. ಆತನ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ.

ಇದನ್ನೂ ಓದಿ: ರಸ್ತೆ ಮೇಲೆಯೇ ಮಹಿಳೆಯ ವಶೀಕರಣ! 4.5 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಲೂಟಿ

ಹಾಗೇ ಕೊಲೆ ಯತ್ನದ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪೊಲೀಸರು ಯುವತಿಯನ್ನು ಬಂಧಿಸಿ, ತನಿಖೆ ನಡೆಸುತ್ತಿದ್ದಾರೆ. ಯುವತಿ ಹಾಜಿಪುರದ 25 ವರ್ಷದ ಅವಿವಾಹಿತ ವೈದ್ಯೆಯಾಗಿದ್ದು, ಮಧೌರಾದಲ್ಲಿ ವೈದ್ಯಕೀಯ ಶಿಕ್ಷಣ ಅಭ್ಯಾಸ ಮಾಡುತ್ತಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ವಿಚಾರಣೆ ವೇಳೆ ತಮ್ಮಿಬ್ಬರ ನಡುವೆ ಸಂಬಂಧವಿದ್ದು, ಆತ ಮದುವೆಯಾಗಲು ನಿರಾಕರಿಸಿದ್ದಕ್ಕೆ ಅವನ ಖಾಸಗಿ ಭಾಗ ಕತ್ತರಿಸಿರುವುದಾಗಿ ಯುವತಿ ಒಪ್ಪಿಕೊಂಡಿದ್ದಾಳೆ ಎಂಬುದಾಗಿ ತಿಳಿದುಬಂದಿದೆ.

Continue Reading

Latest

Viral News: ಮಗುವಿಗೆ ಔಷಧಿ ತರಲು ಹೋದ ತಾಯಿ ಹೆಬ್ಬಾವಿಗೆ ಆಹಾರವಾಗಿದ್ದು ಹೇಗೆ?

Viral News: ಇಂಡೋನೇಷ್ಯಾದಲ್ಲಿ ಮಹಿಳೆಯೊಬ್ಬಳನ್ನು 30 ಅಡಿ ಉದ್ದ ಹೆಬ್ಬಾವು ತಿಂದು ಹಾಕಿದ ಘಟನೆ ನಡೆದಿದೆ.ತನ್ನ ಮಗುವೊಂದಕ್ಕೆ ಅನಾರೋಗ್ಯವಿರುವ ಕಾರಣ ಔಷಧಿ ಖರೀದಿಸಲು ಕಾಡಿನಲ್ಲಿ ಮರಗಳ ನಡುವೆ ಒಬ್ಬಂಟಿಯಾಗಿ ನಡೆದುಕೊಂಡು ಹೋಗುತ್ತಿದ್ದಾಗ ಹೆಬ್ಬಾವು ಅವಳ ಮೇಲೆ ದಾಳಿ ಮಾಡಿ ಆಕೆಯನ್ನು ನುಂಗಿ ಹಾಕಿದೆ. ಆಕೆಯ ಪತಿ ಮನೆಯಲ್ಲಿ ಪತ್ನಿ ನಾಪತ್ತೆಯಾಗಿರುವುದು ಕಂಡು ಹುಡುಕಿಕೊಂಡು ಬಂದಾಗ ಹೆಂಡತಿಯ ಕಾಲುಗಳು 30 ಅಡಿ ಉದ್ದದ ಹೆಬ್ಬಾವಿನ ಬಾಯಿಯಿಂದ ಕಾಣಿಸುತ್ತಿದ್ದವು. ಆಗ ಆತ ತನ್ನ ಪತ್ನಿಯನ್ನು ಉಳಿಸಿಕೊಳ್ಳಲು ಹಾವನ್ನು ಕೊಂದುಹಾಕಿದ್ದಾನೆ.

VISTARANEWS.COM


on

Snake Bite
Koo

ಇಂಡೋನೇಷ್ಯಾ: ಹಾವುಗಳು ಸಾಮಾನ್ಯವಾಗಿ ಮನೆಯ ಸುತ್ತಮುತ್ತ, ಹೊಲ ಗದ್ದೆಗಳಲ್ಲಿ, ಕರೆಗಳ ಸಮೀಪದಲ್ಲಿ ಕಂಡುಬರುತ್ತದೆ. ಹಾವಿನ ಕಡಿತದಿಂದ ಸಾಕಷ್ಟು ಜನರು ಜೀವ ಕೂಡ ಕಳೆದುಕೊಂಡಿದ್ದಾರೆ. ವಿಷಜಂತುಗಳಾದ ಹಾವು ಒಂದು ರೀತಿಯಾದರೆ ಹೆಬ್ಬಾವು ಇನ್ನೊಂದು ರೀತಿಯದ್ದು. ಇದರ ಬಾಯಿಗೆ ಸಿಕ್ಕರೆ ಮರಳಿ ಬರುವುದು ಅಸಾಧ್ಯ. ಇಂಡೋನೇಷ್ಯಾದಲ್ಲಿ ಮಹಿಳೆಯೊಬ್ಬಳನ್ನು 30 ಅಡಿ ಉದ್ದ ಹೆಬ್ಬಾವು ತಿಂದು (Viral News) ಹಾಕಿದೆಯಂತೆ.

ಸಿರಿಯಾತಿ (30) ಹಾವಿನ ಬಾಯಿಗೆ ಆಹಾರವಾದ ಮಹಿಳೆ. ಈಕೆ ದಕ್ಷಿಣ ಸುಲಾವೆಸಿಯ ಲುವು ರೀಜೆನ್ಸಿಯಲ್ಲಿ ತನ್ನ ಪತಿ ಹಾಗೂ ಐದು ಮಕ್ಕಳೊಂದಿಗೆ ವಾಸವಾಗಿದ್ದಳು. ತನ್ನ ಮಗುವೊಂದಕ್ಕೆ ಅನಾರೋಗ್ಯವಿರುವ ಕಾರಣ ಔಷಧಿ ಖರೀದಿಸಲು ಕಾಡಿನಲ್ಲಿ ಮರಗಳ ನಡುವೆ ಒಬ್ಬಂಟಿಯಾಗಿ ನಡೆದುಕೊಂಡು ಹೋಗುತ್ತಿದ್ದಾಗ ಹೆಬ್ಬಾವು ಅವಳ ಮೇಲೆ ದಾಳಿ ಮಾಡಿ ಆಕೆಯನ್ನು ನುಂಗಿ ಹಾಕಿದೆ. ಆಕೆಯ ಪತಿ ಅಡಿಯಾನ್ಸಿಯಾ ಮನೆಯಲ್ಲಿ ಪತ್ನಿ ನಾಪತ್ತೆಯಾಗಿರುವುದು ಕಂಡು ಹುಡುಕಿಕೊಂಡು ಬಂದಾಗ ಸಿರಿಯತಿಯ ಕಾಲುಗಳು 30 ಅಡಿ ಉದ್ದದ ಹೆಬ್ಬಾವಿನ ಬಾಯಿಯಿಂದ ಕಾಣಿಸುತ್ತಿದ್ದವು. ಆಗ ಆತ ತನ್ನ ಪತ್ನಿಯನ್ನು ಉಳಿಸಿಕೊಳ್ಳಲು ಹಾವನ್ನು ಕೊಂದುಹಾಕಿದ್ದಾನೆ. ಆದರೆ ಅಷ್ಟೊತ್ತಿಗಾಗಲೇ ಸಿರಿಯತಿ ಮೃತಪಟ್ಟಿದ್ದಳು.

“ಆಕೆ ತನ್ನ ಮಗುವಿನ ಔಷಧಿಯನ್ನು ಖರೀದಿಸಲು ಹಾಗೂ ತನ್ನ ಸಹೋದರನನ್ನು ಭೇಟಿ ಮಾಡುವ ಉದ್ದೇಶದಿಂದ ಹೊರಗೆಹೋಗಿದ್ದಾಳೆ. ಆಕೆ ಕಾಡಿನ ದಾರಿಯ ಮೂಲಕ ಹೋಗಬೇಕಾಗಿತ್ತು. ಆಕೆಯ ಸಹೋದರ ಬಹಳ ಸಮಯದವರೆಗೆ ಅವಳಿಗಾಗಿ ಕಾಯುತ್ತಿದ್ದನು, ಆಕೆ ಬಾರದಿದ್ದು ನೋಡಿ ಆಕೆಯ ಪತಿಗೆ ಕರೆ ಮಾಡಿದ್ದಾನೆ. ಆದ್ದರಿಂದ ಪತಿ ತನ್ನ ಹೆಂಡತಿಯನ್ನು ಹುಡುಕಲು ಹೋಗಿದ್ದನು ಎಂದು ಸ್ಥಳೀಯ ವ್ಯಕ್ತಿಯೊಬ್ಬರು ಮಾಹಿತಿ ನೀಡಿದ್ದಾರೆ.

ಜುಲೈ 2 ರಂದು ಬೆಳಿಗ್ಗೆ 7.30 ಕ್ಕೆ ಈ ಘಟನೆ ನಡೆದಿದ್ದು, ಮಹಿಳೆಯ ಶವ ಪತ್ತೆಯಾಗಿದೆ. ಆದರೆ ದೇಹದ ಭಾಗಗಳು ಹಾಗೇ ಇದ್ದರೂ ಮೂಳೆಗಳು ಮುರಿದಿರಬಹುದು ಎಂದು ಊಹಿಸಲಾಗಿದೆ. ಪಾರ್ಥಿವ ಶರೀರವನ್ನು ಈಗಾಗಲೇ ಅಂತ್ಯಕ್ರಿಯೆಗಾಗಿ ಮನೆಗೆ ತಲುಪಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಒಂದು ತಿಂಗಳೊಳಗೆ ದಕ್ಷಿಣ ಸುಲಾವೆಸಿಯಲ್ಲಿ ನಡೆದ ಇಂತಹ ಎರಡನೇ ಘಟನೆಯಲ್ಲಿ ಇದು ಒಂದಾಗಿದೆ. ಜೂನ್ ಆರಂಭದಲ್ಲಿ, 45 ವರ್ಷದ ಮಹಿಳೆಯ ದೇಹವು ಹೆಬ್ಬಾವಿನ ಬಾಯಿಯೊಳಗೆ ಪತ್ತೆಯಾಗಿತ್ತು. ಇಂಡೋನೇಷ್ಯಾವು ಬರ್ಮೀಸ್ ಹೆಬ್ಬಾವು ಮತ್ತು ರೆಟಿಕ್ಯುಲೇಟೆಡ್ ಹೆಬ್ಬಾವು ಸೇರಿದಂತೆ ಹಲವಾರು ಜಾತಿಯ ಹೆಬ್ಬಾವುಗಳಿಗೆ ನೆಲೆಯಾಗಿದೆ.

ಇದನ್ನೂ ಓದಿ: Fans chant Pakistan: ಟೀಮ್ ಇಂಡಿಯಾ ವಿಕ್ಟರಿ ಪೆರೇಡ್​ನಲ್ಲಿ ಅಭಿಮಾನಿಗಳು ಪಾಕಿಸ್ತಾನ್ ಘೋಷಣೆ ಕೂಗಿದ್ದು ಏಕೆ? ವಿಡಿಯೊ ವೈರಲ್​

Continue Reading
Advertisement
Mukesh Ambani music video with grandkids
ಬಾಲಿವುಡ್6 mins ago

Mukesh Ambani: 60ರ ದಶಕದ ಹಾಡನ್ನು ಮೊಮ್ಮಕ್ಕಳೊಂದಿಗೆ ರೀ ಕ್ರಿಯೇಟ್ ಮಾಡಿದ ಮುಕೇಶ್ – ನೀತಾ ದಂಪತಿ; ಕ್ಯೂಟ್‌ ವಿಡಿಯೊ ಇಲ್ಲಿದೆ!

MyMUL President
ಕರ್ನಾಟಕ17 mins ago

MyMUL President: ಸಚಿವ ಕೆ.ವೆಂಕಟೇಶ್ ಕಿರುಕುಳದಿಂದಲೇ ಮೈಮುಲ್‌ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ: ಪಿ.ಎಂ.ಪ್ರಸನ್ನ

karnataka Rain
ಮಳೆ22 mins ago

Karnataka Rain : ಭಾರಿ ಗಾಳಿ- ಮಳೆಗೆ ಹಾರಿದ ಅಂಗಡಿಯ ತಗಡು; ಮಾಗುಂಡಿ-ಬಾಳೆಹೊನ್ನೂರು ಮಾರ್ಗ ಬಂದ್

ಕ್ರೀಡೆ24 mins ago

Rajeev Shukla: ಆದಿತ್ಯ ಠಾಕ್ರೆ ಹೇಳಿಕೆಗೆ ತಿರುಗೇಟು ನೀಡಿದ ಬಿಸಿಸಿಐ ಉಪಾಧ್ಯಕ್ಷ ರಾಜೀವ್‌ ಶುಕ್ಲಾ

Assam Flood
ದೇಶ35 mins ago

Assam Flood: ಅಸ್ಸಾಂನಲ್ಲಿ ಧಾರಾಕಾರ ಮಳೆ; 52 ಮಂದಿಯ ಜೀವ ಕಸಿದುಕೊಂಡ ಭೀಕರ ಪ್ರವಾಹ

Basavaraj Bommai
ಪ್ರಮುಖ ಸುದ್ದಿ56 mins ago

Basavaraj Bommai: ದಲಿತ ಸಮುದಾಯಕ್ಕೆ ಮೋಸ ಮಾಡುತ್ತಿರುವ ರಾಜ್ಯ ಸರಕಾರ: ಬೊಮ್ಮಾಯಿ

Renuka Swamy Murder Case
ಕರ್ನಾಟಕ1 hour ago

Renuka Swamy Murder Case: ರೇಣುಕಾಸ್ವಾಮಿ ಕೊಲೆಗೆ ಸಂಬಂಧಿಸಿದ 66 ವಸ್ತುಗಳು ಎಫ್ಎಸ್ಎಲ್‌ಗೆ ರವಾನೆ

Love Case
Latest2 hours ago

Viral News: ಮದುವೆಯಾಗಲು ನಿರಾಕರಿಸಿದ ಪ್ರಿಯಕರನ ಆ ʼಅಂಗʼಕ್ಕೆ ಕತ್ತರಿ ಹಾಕಿದ ಪ್ರಿಯತಮೆ

Snake Bite
Latest2 hours ago

Viral News: ಮಗುವಿಗೆ ಔಷಧಿ ತರಲು ಹೋದ ತಾಯಿ ಹೆಬ್ಬಾವಿಗೆ ಆಹಾರವಾಗಿದ್ದು ಹೇಗೆ?

Vicky Kaushal responds after paparazzi ask him where's Katrina Kaif
ಸಿನಿಮಾ2 hours ago

Vicky Kaushal: ಅನಂತ್-ರಾಧಿಕಾ ಸಂಗೀತ ಕಾರ್ಯಕ್ರಮದಲ್ಲಿ ಭಾಗಿಯಾಗಿಲ್ಲ ಕತ್ರಿನಾ; ವಿಕ್ಕಿ ಕೌಶಲ್ ಕೊಟ್ಟರು ಕಾರಣ!

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ22 mins ago

Karnataka Rain : ಭಾರಿ ಗಾಳಿ- ಮಳೆಗೆ ಹಾರಿದ ಅಂಗಡಿಯ ತಗಡು; ಮಾಗುಂಡಿ-ಬಾಳೆಹೊನ್ನೂರು ಮಾರ್ಗ ಬಂದ್

Food Poisoning
ರಾಯಚೂರು2 hours ago

Food Poisoning : ಮೊರಾರ್ಜಿ ವಸತಿ ಶಾಲೆ ಅವ್ಯವಸ್ಥೆ; ಊಟ ಸೇವಿಸಿದ 25ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ

Wild Animal Attack Elephant attack
ರಾಮನಗರ4 hours ago

Wild Animal Attack : ತೋಟದಲ್ಲಿ ನೀರು ಹಾಯಿಸುತ್ತಿದ್ದವನ ತುಳಿದು ಸಾಯಿಸಿದ ಆನೆ

karnataka Weather Forecast
ಮಳೆ9 hours ago

Karnataka Weather : ಕರಾವಳಿ, ಮಲೆನಾಡಿನಲ್ಲಿ ಇಂದು ನಾನ್‌ ಸ್ಟಾಪ್‌ ಮಳೆ; ಬೆಂಗಳೂರಲ್ಲಿ ಹೇಗೆ?

karnataka Weather Forecast
ಮಳೆ21 hours ago

Karnataka Weather: ಧಾರಾಕಾರ ಮಳೆಗೆ ಜನರ ಒದ್ದಾಟ- ಸೇತುವೆಗಳು ಮುಳುಗಿ ಪರದಾಟ; ಶಾಲಾ-ಕಾಲೇಜುಗಳಿಗೆ ರಜೆ

Lovers Fighting
ಚಿಕ್ಕಬಳ್ಳಾಪುರ23 hours ago

Lovers Fighting: ಪ್ರೀತಿಸಿ ಕೈಕೊಟ್ಟವನಿಗೆ ನಡುರಸ್ತೆಯಲ್ಲೇ ಚಳಿ ಬಿಡಿಸಿದ ಗರ್ಭಿಣಿ

Medical negligence
ದಾವಣಗೆರೆ24 hours ago

Medical negligence: ಸಿಸೇರಿಯನ್ ಮಾಡುವಾಗ ಶಿಶುವಿನ ಮರ್ಮಾಂಗವನ್ನೇ ಕತ್ತರಿಸಿ ಸಾಯಿಸಿದ ವೈದ್ಯ!

karnataka rain
ಮಳೆ1 day ago

Karnataka Rain: ಮಳೆಗೆ ಮನೆಗಳಿಗೆ ನುಗ್ಗುತ್ತಿವೆ ಹಾವುಗಳು! ಕುಸಿದು ಬಿತ್ತು ಮನೆಗಳು

Elephant attack in Hassan and Chikmagalur
ಹಾಸನ1 day ago

Elephant Attack : ಕಾಫಿ ತೋಟದ‌ ಕೆಲಸಗಾರನನ್ನು ಸೊಂಡಿಲಿನಿಂದ ಎತ್ತಿ ಬಿಸಾಡಿದ ಒಂಟಿ ಸಲಗ

Physical Abuse
ಬೆಂಗಳೂರು1 day ago

Physical Abuse : ಇವಳೇನು ಶಿಕ್ಷಕಿಯೋ ಕಾಮುಕಿಯೋ; ಬಾಲಕಿಯ ಖಾಸಗಿ ಅಂಗಾಂಗ ಮುಟ್ಟಿ ವಿಕೃತಿ

ಟ್ರೆಂಡಿಂಗ್‌