ರಾಜಮಾರ್ಗ ಅಂಕಣ: ಟಿ20 ವಿಶ್ವಕಪ್ ಫೈನಲ್; ಒಂದು ಪಂದ್ಯ - ಹಲವು ಪಾಠ - Vistara News

ಅಂಕಣ

ರಾಜಮಾರ್ಗ ಅಂಕಣ: ಟಿ20 ವಿಶ್ವಕಪ್ ಫೈನಲ್; ಒಂದು ಪಂದ್ಯ – ಹಲವು ಪಾಠ

ರಾಜಮಾರ್ಗ ಅಂಕಣ: ತಾಳ್ಮೆಯಿಂದ ನರಗಳನ್ನು ಬಿಗಿ ಹಿಡಿದು ಆಡಿದರೆ ಯಾವ ಪಂದ್ಯವನ್ನೂ ಗೆಲ್ಲಲು ಸಾಧ್ಯ ಎನ್ನುವುದು ಕ್ರಿಕೆಟ್ ಕಲಿಸಿದ ಜೀವನದ ಪಾಠ. ಕ್ಲಾಸೆನ್ ಮತ್ತು ಕ್ಲಿಂಟನ್ ಡಿಕಾಕ್ ಅವರು ಕ್ರೀಸಿನಲ್ಲಿ ಗಟ್ಟಿ ನಿಂತು ಆಡುತ್ತಿದ್ದಾಗ ದಕ್ಷಿಣ ಆಫ್ರಿಕಾ ಗೆದ್ದೇ ಬಿಟ್ಟಿತು ಎಂದು ಭಾವಿಸಿಕೊಂಡು ಟಿವಿ ಆಫ್ ಮಾಡಿ ಮಲಗಿದವರಿಗೆ ಇದು Life Time Lesson!

VISTARANEWS.COM


on

ರಾಜಮಾರ್ಗ ಅಂಕಣ virat kohli rohit sharma
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಚಾಂಪಿಯನ್ ಆಟಗಾರರು ಮತ್ತು ಟೀಮ್ ಇಂಡಿಯಾ ಗೆಲುವು

Rajendra-Bhat-Raja-Marga-Main-logo

ರಾಜಮಾರ್ಗ ಅಂಕಣ: ಈ ಭಾವುಕ ಕ್ಷಣಗಳನ್ನು ಭಾರತದ ಕೋಟಿ ಕೋಟಿ ಕ್ರಿಕೆಟ್ (Cricket) ಅಭಿಮಾನಿಗಳು ಮರೆಯಲು ಸಾಧ್ಯವೇ ಇಲ್ಲ.

ಸೂರ್ಯಕುಮಾರ್ (Suryakumar yadav) ಹಿಡಿದ ಅದ್ಭುತವಾದ ಕ್ಯಾಚ್, ವಿರಾಟ್ ಕೊಹ್ಲಿಯ ಹೀರೋಯಿಕ್ ಇನ್ನಿಂಗ್ಸ್, ಬುಮ್ರಾ, ಹಾರ್ದಿಕ್, ಆರ್ಷದೀಪ್ ಬೌಲಿಂಗ್‌ನಲ್ಲಿ ತೋರಿದ ಮ್ಯಾಜಿಕ್, ರೋಹಿತ್ ಶರ್ಮಾ (Rohit Sharma) ತೋರಿಸಿದ ತಾಳ್ಮೆ, ಅಕ್ಷರ್ ಪಟೇಲ್ ಆಲ್ರೌಂಡ್ ಆಟ……ಇದ್ಯಾವುದೂ ನಮಗೆ ಮರೆತು ಹೋಗೋದಿಲ್ಲ.

ಭರವಸೆ ನಮ್ಮನ್ನು ಗೆಲ್ಲಿಸಿತು

ಚಾಂಪಿಯನ್ ಆಟಗಾರರ ಮೇಲೆ ಟೀಮ್ ಇಂಡಿಯಾ ಮತ್ತು ಕೋಚ್ ರಾಹುಲ್ ದ್ರಾವಿಡ್ ಇಟ್ಟ ಭರವಸೆ ನಿಜ ಆಗಿದೆ. ವಿಶ್ವಕಪ್ಪಿನ ಹಿಂದಿನ ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಸತತವಾಗಿ ವೈಫಲ್ಯ ಕಂಡಾಗ ಆತನಿಗೆ ವಿಶ್ರಾಂತಿ ಕೊಡಿ, ಆತನಿಗೆ ಓಪನಿಂಗ್ ಸ್ಲಾಟ್ ಬೇಡವೇ ಬೇಡ, ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗಿಗೆ ಇಳಿಸಿ ಎಂದೆಲ್ಲ ಟ್ರೋಲ್ ಮಾಡಿದವರಿಗೆ ಈ ಬಾರಿ ಸರಿಯಾದ ಉತ್ತರ ದೊರೆತಿದೆ. ಚಾಂಪಿಯನ್ ಆಟಗಾರ ಯಾವತ್ತೂ ದೊಡ್ಡ ಮ್ಯಾಚಲ್ಲಿ ಮಿಂಚು ಹರಿಸುತ್ತಾನೆ.

ಚಾಂಪಿಯನ್, ನಿನ್ನ ಆಟ ಆಡುತ್ತಾ ಹೋಗು!

ಆತ ಸತತವಾಗಿ ಸೋತು ಅಳುತ್ತಾ ಕೂತಾಗ ರಾಹುಲ್ ದ್ರಾವಿಡ್ ಹೇಳಿದ ಮಾತನೊಮ್ಮೆ ಸೂಕ್ಷ್ಮವಾಗಿ ಗಮನಿಸಿ.
‘ಚಾಂಪಿಯನ್, ನಿನ್ನ ಆಟ ಆಡುತ್ತಾ ಹೋಗು. ನಮಗೆ ನಂಬಿಕೆ ಇದೆ’ ಎಂದು. ಆತನ ಬ್ಯಾಟಿಂಗ್ ಕ್ರಮಾಂಕವನ್ನು ಕೂಡ ಬದಲಾವಣೆ ಮಾಡದೆ ಆತನ ನೆರವಿಗೆ ನಿಂತವರು ಟೀಮ್ ಮ್ಯಾನೇಜ್ಮೆಂಟ್ ಮತ್ತು ಟೀಮ್ ಕೋಚ್ ರಾಹುಲ್ ದ್ರಾವಿಡ್. ಚಾಂಪಿಯನ್ ವಿರಾಟ್ ಕೊಹ್ಲಿ ಇಂದು ಆವರ
ನಂಬಿಕೆಯನ್ನು ಉಳಿಸಿಕೊಂಡಿದ್ದಾರೆ.

ಹಾರ್ದಿಕ ಪಾಂಡ್ಯನನ್ನು ಟ್ರೋಲ್ ಮಾಡಿದವರಿಗೆ ಈ ಗೆಲುವು ಅರ್ಪಣೆ!

ಅದೇ ರೀತಿ ನಮ್ಮ ಹಾರ್ದಿಕ್ ಪಾಂಡ್ಯನ ಬಗ್ಗೆ ಗಮನಿಸಿ. ಈ ಬಾರಿಯ ಐಪಿಎಲ್ ಪಂದ್ಯಗಳಲ್ಲಿ ಆತನು ಸತತವಾಗಿ ಬೈಗುಳ ತಿಂದ ಆಟಗಾರ. ಆತ ವಿಶ್ವಕಪ್ ತಂಡಕ್ಕೆ ಆಯ್ಕೆ ಆದಾಗ ಎಷ್ಟೊಂದು ಜನರು ರೊಚ್ಚಿಗೆದ್ದು ಬೈದವರಿದ್ದರು! ಆತನ ಖಾಸಗಿ ಜೀವನದ ಮೇಲೆ ಕೆಸರು ಎರಚುವ ಕೆಲಸ ಕೂಡ ಆಗಿತ್ತು. ಅಂತವನ ಕೈಗೆ ಪಂದ್ಯದ 20ನೇ ಓವರು ಕೊಡುವುದೆಂದರೆ? ಟೀಮ್ ಇಂಡಿಯಾ ಮತ್ತು ಕೋಚ್ ರಾಹುಲ್ ದ್ರಾವಿಡ್ ಆತನ ಮೇಲಿಟ್ಟ ನಂಬಿಕೆಗೆ ಆತನು ಎಷ್ಟೊಂದು ಅದ್ಭುತವಾಗಿ ಉತ್ತರ ಕೊಟ್ಟು ಬಿಟ್ಟ ನೋಡಿ. ಚಾಂಪಿಯನ್ ಎಂದಿಗೂ ಚಾಂಪಿಯನ್ ಆಗಿರುತ್ತಾನೆ.

ರೋಹಿತ್ ಶರ್ಮಾ ನಾಯಕತ್ವವನ್ನು ಪ್ರಶ್ನೆ ಮಾಡಿದವರಿಗೆ, ಆತ ಸ್ವಾರ್ಥಿ ಎಂದು ಟೀಕೆ ಮಾಡಿವರಿಗೆ ಇಲ್ಲಿ ಸರಿಯಾದ ಉತ್ತರ ದೊರೆತಿದೆ. ಟೀಮ್ ಆಡಳಿತ ಯುವ ಆಟಗಾರರ ಮೇಲೆ ತೋರಿದ ಕಾಳಜಿಯಿಂದ ಶಿವಂ ದುಬೆ, ಆಕ್ಷರ್ ಪಟೇಲ್ ಮೊದಲಾದ ಯಂಗಸ್ಟರ್ಸ್ ಒಳ್ಳೆ ಆಟಗಾರರಾಗಿ ಮಿಂಚಲು ಸಾಧ್ಯವಾಯಿತು. ಅವರಿಗೆ ಖಚಿತವಾಗಿ ಒಳ್ಳೆಯ ಭವಿಷ್ಯವಿದೆ.

ಒಂದು ಪಂದ್ಯ – ಹಲವು ಪಾಠ!

ಭಾರತ ಟಿ 20 ವಿಶ್ವಕಪ್ಪನ್ನು ಅರ್ಹವಾಗಿ ಗೆದ್ದು ಬೀಗಿತು, ವಿರಾಟ್ ಕೊಹ್ಲಿ (Virat Kohli) ಮತ್ತು ರಾಹುಲ್ ದ್ರಾವಿಡ್ (Rahul Dravid) ಅವರಿಗೆ ಗೆಲುವಿನ ವಿದಾಯ ನೀಡಿತು, ರೋಹಿತ್ ಶರ್ಮಾ ತನ್ನ ಮೊದಲ ಐಸಿಸಿ ಟ್ರೋಫಿ ಲಿಫ್ಟ್ ಮಾಡಿದರು ಅನ್ನುವುದು ಮುಂದಿನ ಇತಿಹಾಸದ ಭಾಗ. ತಾಳ್ಮೆಯಿಂದ ನರಗಳನ್ನು ಬಿಗಿ ಹಿಡಿದು ಆಡಿದರೆ ಯಾವ ಪಂದ್ಯವನ್ನೂ ಗೆಲ್ಲಲು ಸಾಧ್ಯ ಎನ್ನುವುದು ಕ್ರಿಕೆಟ್ ಕಲಿಸಿದ ಜೀವನದ ಪಾಠ.

ಕ್ಲಾಸೆನ್ ಮತ್ತು ಕ್ಲಿಂಟನ್ ಡಿಕಾಕ್ ಅವರು ಕ್ರೀಸಿನಲ್ಲಿ ಗಟ್ಟಿ ನಿಂತು ಆಡುತ್ತಿದ್ದಾಗ ದಕ್ಷಿಣ ಆಫ್ರಿಕಾ ಗೆದ್ದೇ ಬಿಟ್ಟಿತು ಎಂದು ಭಾವಿಸಿಕೊಂಡು ಟಿವಿ ಆಫ್ ಮಾಡಿ ಮಲಗಿದವರಿಗೆ ಇದು Life Time Lesson!

ಐಪಿಎಲ್ ಪಂದ್ಯಗಳ ಉದ್ದಕ್ಕೂ ಬಾಸುಂಡೆ ಬರುವ ಹಾಗೆ ಹೊಡೆಸಿಕೊಂಡಿದ್ದ ಭಾರತದ ಬೌಲರಗಳಿಗೆ ಈ ವಿಶ್ವಕಪ್ ಸ್ಟಾರ್ ವ್ಯಾಲ್ಯೂ ಕೊಟ್ಟಿತು ಅನ್ನುವುದು ಭರತವಾಕ್ಯ.

ಕಂಗ್ರಾಚ್ಯುಲೇಶನ್ ರೋಹಿತ್ ಆಂಡ್ ಹುಡುಗರು!

ಇದನ್ನೂ ಓದಿ: ರಾಜಮಾರ್ಗ ಅಂಕಣ: ಮುಖವೇ ಇಲ್ಲದ ಆಕೆಗೆ ತನ್ನ ಹೆಸರೇ ಮರೆತು ಹೋಗಿತ್ತು!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಅಂಕಣ

ಧವಳ ಧಾರಿಣಿ ಅಂಕಣ: ಕಿಷ್ಕಿಂಧಾ ಕಾಂಡದಲ್ಲಿನ ರಾಜನೀತಿಯ ವಿಲಕ್ಷಣ ಘಟನೆ

ಧವಳ ಧಾರಿಣಿ ಅಂಕಣ: ಲಕ್ಷ್ಮಣನ ಮೂಲಕ ಸುಗ್ರೀವನ ಹತ್ತಿರ ಸ್ನೇಹವನ್ನು ಯಾಚಿಸುವುದು ತನ್ನ ಪತ್ನಿಯನ್ನು ರಾವಣನಿಂದ ಬಿಡಿಸಿಕೊಂಡು ಬರಲು ಸಹಕಾರಿಯಾಗಲೆಂದು. ರಾಜನೀತಿಗೆ ಅನುಗುಣವಾದ ಸಂಗತಿಯನ್ನು ರಾಮ ಇಲ್ಲಿ ಅನುಸರಿಸಿದ್ದಾನೆಯೇ ಹೊರತೂ ಮತ್ತೇನೂ ಅಲ್ಲ.

VISTARANEWS.COM


on

ಧವಳ ಧಾರಿಣಿ ಅಂಕಣ rama and sugreeva
Koo

ರಾಮ ಸುಗ್ರೀವನಲ್ಲಿ ಶರಣಾಗತಿಯನ್ನು ಕೋರಿದ ಅಪರೂಪದ ಸನ್ನಿವೇಶ

dhavala dharini by Narayana yaji

ಧವಳ ಧಾರಿಣಿ ಅಂಕಣ: ಸರ್ವಲೋಕಸ್ಯ ಧರ್ಮಾತ್ಮಾ ಶರಣ್ಯಃ ಶರಣಂ ಪುರಾ.
ಗುರುರ್ಮೇ ರಾಘವಃ ಸೋSಯಂ ಸುಗ್ರೀವಂ ಶರಣಂ ಗತಃ৷৷ಕಿ. ಕಾಂ.4.20৷৷

ಧರ್ಮಾತ್ಮನಾದ (ಶ್ರೀರಾಮನು) ಈ ಹಿಂದೆ ಹೇಗೆ ಸಕಲ ಲೋಕಗಳಿಗೆ ರಕ್ಷಕನಾಗಿದ್ದನೋ, ಎಲ್ಲರಿಗೂ ಆಶ್ರಯಭೂತನಾಗಿದ್ದನೋ, ನನ್ನ ಗುರುವಾದ ಈ ರಘುವರನು ಇಂದು ಸುಗ್ರೀವನನ್ನು ಆಶ್ರಯಿಸಲು ಬಂದಿರುವನು.

ಪಂಪಾನದಿಯ ತೀರದಲ್ಲಿ ಹನುಮಂತ ರಾಮ ಲಕ್ಷ್ಮಣರನ್ನು ಪರೀಕ್ಷಿಸಲು ಭಿಕ್ಷುವಿನ ವೇಷ ಧರಿಸಿ ಅವರೆದುರು ನಿಂತು ಅವರ ಪರಿಚಯ ಕೇಳಿದಾಗ ಲಕ್ಷ್ಮಣ ತಾವು ಸುಗ್ರೀವನಲ್ಲಿ ಶರಣಾಗಲು/ ಆಶ್ರಯ ಕೋರಲು ಬಂದಿದ್ದೇವೆ ಎಂದು ಹೇಳುತ್ತಾನೆ.

ಕಿಷ್ಕಿಂಡಾ ಕಾಂಡದ ನಾಲ್ಕನೆಯ ಸರ್ಗದಲ್ಲಿ ಬರುವ ಈ ರೀತಿಯ ಎಂಟು ಶ್ಲೋಕಗಳನ್ನು ಓದುತ್ತಾ ಹೋದಂತೆ ಒಮ್ಮೆಲೇ ರಾಮನ ಕುರಿತಾದ ನಮ್ಮ ಭಾವನೆಗಳೆಲ್ಲವುದಕ್ಕೂ ವಿರುದ್ಧವಾದ “ರಾಮ ಸುಗ್ರೀವನಲ್ಲಿ ಶರಣಾಗತಿಯನ್ನು ಬಯಸಿ ಬಂದಿದ್ದಾನೆ” ಎನ್ನುವ ಮಾತುಗಳು ನೋಡಿ ಆಶ್ಚರ್ಯ ಮೂಡುತ್ತದೆ. ಕೆಲ ಕಾಲ ನಾವು ಓದುತ್ತಿರುವುದು ವಾಲ್ಮೀಕಿ ಬರೆದ ರಾಮಾಯಣವೋ ಅಥವಾ ಇನ್ಯಾರದೋ ಎನ್ನುವ ಸಂಶಯಕ್ಕೆ ಒಳಗಾಗುತ್ತೇವೆ. ರಾಮನ ಹದಿನಾರು ಗುಣಗಳಲ್ಲಿ ಒಂದಾದ “ಕಸ್ಯ ಬಿಭ್ಯತಿ ದೇವಾಶ್ಚ ಜಾತರೋಷಸ್ಯ ಸಂಯುಗೇ- ಸಿಟ್ಟುಗೊಂಡು ರಾಮನೇನಾದರೂ ಯುದ್ಧಕ್ಕೆ ನಿಂತರೆ ದೇವತೆಗಳೂ ಸಹ ಅಂಜುವರು” ಎನ್ನುವ ಪರಾಕ್ರಮಗಳನ್ನು ವರ್ಣಿಸಿದ ಕವಿ ಇಲ್ಲಿ ಎಲ್ಲವನ್ನೂ ಕಳೆದುಕೊಂಡು ದೀನನಾಗಿ ಮುಳುಗುವವನಿಗೆ ಹುಲ್ಲುಕಡ್ಡಿಯಾದರೂ ಆಗಬಹುದು ಎನ್ನುವ ರೀತಿಯಲ್ಲಿ ನಿಂತಿದ್ದಾನೆ. ಲಕ್ಷ್ಮಣ ಹನುಮಂತನ ಹತ್ತಿರ ಒಮ್ಮೆ ಸುಗ್ರೀವನನ್ನು ಭೆಟ್ಟಿ ಮಾಡಿಸು ಎಂದು ಯಾಚಿಸುವಾಗ ಉಪಯೋಗಿಸುವ ಶಬ್ದಗಳನ್ನು ಗಮನಿಸಿ:

  1. ರಾಮಶ್ಚ ಸುಗ್ರೀವಂ ಶರಣಂ ಗತೌ
  2. ಸುಗ್ರೀವಂ ನಾಥಮಿಚ್ಛತಿ
  3. ಸುಗ್ರೀವಂ ಶರಣಂ ಗತಃ
  4. ಶರಣ್ಯಶ್ಶರಣಂ ಪುರಾ…. ಸುಗ್ರೀವಂ ಶರಣಂ ಗತಃ
  5. ಸುಗ್ರೀವಂ ವಾನರೇನ್ದ್ರಂ ತು ರಾಮಶ್ಶರಣಮಾಗತಃ
  6. ಶರಣಂ ಗತೇ

ಇವೆಲ್ಲದಕ್ಕಿಂತಲೂ ಮಿಗಿಲಾಗಿ ಕಣ್ಣೀರು ತುಂಬಿಕೊಂಡು ಕೇಳಿಕೊಳ್ಳುವುದು

  1. ಯಸ್ಯ ಪ್ರಸಾದೇ ಸತತಂ ಪ್ರಸೀದೇಯುರಿಮಾಃ ಪ್ರಜಾಃ.

ಸ ರಾಮೋ ವಾನರೇನ್ದ್ರಸ್ಯ ಪ್ರಸಾದಮಭಿಕಾಙ್ಕ್ಷತೇ

ಯಾವನ ಪ್ರಸನ್ನತೆಯಿಂದ ಎಲ್ಲ ಪ್ರಜೆಗಳೂ ಸರ್ವದಾ ಪ್ರಸನ್ನಚಿತ್ತರಾಗಿರುತ್ತಿದ್ದರೋ ಅಂತಹ ಶ್ರೀರಾಮನೀಗ ವಾನರೇಂದ್ರನಾದ ಸುಗ್ರೀವನ ಅನುಗ್ರಹವನ್ನು ಬಯಸಿ ಬಂದಿದ್ದಾನೆ.

ಒಂದು ಕಡೆ ಮಹಾತೇಜಸ್ವಿಯಾದ, ಸರ್ವಗುಣ ಸಂಪನ್ನನಾದ, ವಶಿಷ್ಠ, ವಿಶ್ವಾಮಿತ್ರ, ಅತ್ರಿ, ಅಗಸ್ತ್ಯರಿಂದ ಅನುಗ್ರಹಿಸಲ್ಪಟ್ಟ, ನಾಲ್ಕು ಸಮುದ್ರಪರ್ಯಂತರವೂ ಧರ್ಮಸ್ಥಾಪನೆಗಾಗಿ ಇರುವ ಚಕ್ರವರ್ತಿಗಳ ಪೀಠ ಎಂದು ಕೀರ್ತಿಸಲ್ಪಟ್ಟ ರಾಮ ಲಕ್ಷ್ಮಣನ ಮಾತನ್ನು ಮೌನವಾಗಿ ಕೇಳುತ್ತಾ ನಿಂತಿದ್ದಾನೆ. ಅವರು ಆಶ್ರಯವನ್ನು ಕೇಳುವುದು ಯಾರಲ್ಲಿ ಅಂದರೆ, ಹೆಂಡತಿಯನ್ನೂ ಸೇರಿ, ತನ್ನದೆಲ್ಲವನ್ನೂ, ಕಳೆದುಕೊಂಡು ವಾಲಿಯ ಭಯದಿಂದ ಜೀವ ಉಳಿಸಿಕೊಳ್ಳಲು ಋಷ್ಯಮೂಕ ಪ್ರರ್ವತಶ್ರೇಣಿಯಲ್ಲಿ ನಾಲ್ವರೊಂದಿಗೆ ಇರುವ ಸುಗ್ರೀವನಲ್ಲಿ. ಲಕ್ಷ್ಮಣನಿಗೆ ಈ ಮಾತುಗಳನ್ನು ಹೇಳುವಾಗ ಹೊಟ್ಟೆಯಲ್ಲಿ ಸಂಕಟವಾಗಿರಬೇಕು. ಹೇಳಲೇ ಬೇಕಾದ ಅನಿವಾರ್ಯತೆಯಿಂದ ಹೇಳುವಾಗ ಆತ ದೀನನಾಗಿ ಕಣ್ಣೀರಧಾರೆಯನ್ನು ಹರಿಸುತ್ತಾ – “ಏವಂ ಬ್ರುವಾಣಂ ಸೌಮಿತ್ರಿಂ ಕರುಣಂ ಸಾಶ್ರುಲೋಚನಮ್” ಹನುಮಂತನಲ್ಲಿ ಯಾಚಿಸುತ್ತಿದ್ದ. ಈ ಘಟನೆಯನ್ನು ನೆನಪಿನಲ್ಲಿಟ್ಟುಕೊಂಡು ತಾಳಮದ್ದಳೆಯಲ್ಲಿ ವಾಲಿ ರಾಮನಿಗೆ ಸುಗ್ರೀವನ ಸಹಾಯವನ್ನು ಕೇಳಿರುವುದರ ಕುರಿತು “ಇವನು ನಿನಗೆ ಸಹಾಯಿಯೇ ನೀ I ನೀನವನ ಬಲದಲಿ ನಿನ್ನ ವೈರಿಯIʼ ಎಂದು ಛೇಡಿಸುವ ಪದ್ಯಗಳಿವೆ. (ಪಾರ್ತಿಸುಬ್ಬನ ಪದ್ಯಗಳ ರಚನೆಯ ಕುರಿತು ಕನ್ನಡಸಾಹಿತ್ಯ ಲೋಕ ಚರ್ಚೆ ಮಾಡಬೇಕು. ಯಕ್ಷಗಾನ ಕವಿಗಳೆನ್ನುವ ಅಸಡ್ಡೆಯಿಂದ ಹೊರಬರಬೇಕಾಗಿದೆ). ವಾಲಿಯ ಪ್ರಮುಖವಾದ ಪ್ರಶ್ನೆಯೇ ರಾಮ ಸುಗ್ರೀವನಲ್ಲಿ ಶರಣು ಬಂದಿರುವುದು ಯಾಕೆ ಎನ್ನುವುದು. ಅದಕ್ಕೆ ಆಧಾರವಾಗಿ ಈ ಮೇಲಿನ ಶ್ಲೋಕವನ್ನು ಗಮನಿಸಬಹುದು.

ರಾಮಾಯಣದಲ್ಲಿ ಸುಗ್ರೀವನ ಕುರಿತು ತಿಳಿದಿರುವ ಅಂಶಗಳೆಂದರೆ ಆತುರಗೆಟ್ಟವ, ಸ್ತ್ರೀವ್ಯಾಮೋಹಿ, ಅಂಜುಕುಳಿ, ಪ್ರಾಣ ಉಳಿಸಿಕೊಳ್ಳಲು ಒದ್ದಾಡುತ್ತಿದ್ದವ. ತನಗೇ ಒಂದು ನೆಲೆಯಿಲ್ಲದ ವಾನರನೋರ್ವನಲ್ಲಿ ರಾಮ ಅದು ಹೇಗೆ ಶರಣು ಬರಲು ಸಾಧ್ಯ, ವಾಲ್ಮೀಕಿ ಈ ಭಾಗವನ್ನು ಯಾಕೆ ಹೇಳಿರಬಹುದು ಎನ್ನುವುದನ್ನು ವಿವೇಚಿಸಲು ಅರಣ್ಯಕಾಂಡದೊಳಗೆ ಪ್ರವೇಶಿಸಬೇಕು.

ರಾಮಾಯಣದಲ್ಲಿ ಅರಣ್ಯಕಾಂಡ ಮತ್ತು ಕಿಷ್ಕಿಂಧಾ ಕಾಂಡಗಳಿಲ್ಲದಿದ್ದರೆ ಈ ಮಹಾಕಾವ್ಯವೇ ಹುಟ್ಟುತ್ತಿರಲಿಲ್ಲವೇನೋ. ರಾಮಾವತಾರದ ಉದ್ದೇಶವೇ ಅರಣ್ಯಕಾಂಡದಲ್ಲಿ ಅದೂ ಆತ ಚಿತ್ರಕೂಟಕ್ಕೆ ಬರುವಾಗಿನಿಂದ ಪ್ರಾರಂಭವಾಗುತ್ತದೆ. ರಾವಣವಧೆಗೆ ಯೋಜನೆಯನ್ನು ನಿರೂಪಿಸಿರುವುದು ಅಗಸ್ತ್ಯರ ಆಶ್ರಮದಲ್ಲಿ. ಇದಕ್ಕಿಂತಲೂ ರೋಚಕವಾದ ವಿಷಯವೆಂದರೆ ಕೈಕೇಯಿ ದಶರಥನ ಹತ್ತಿರ ಕೇಳುವ ವರ “ರಾಮ ವನವಾಸಕ್ಕೆ ಹೋಗಲಿ” ಎಂದು, ಆದರೆ ರಾಮನ ಹತ್ತಿರ “ದಶರಥ ನನಗೆ ವರವನ್ನು ಕೊಟ್ಟ ಪ್ರಕಾರ ನೀನು ದಂಡಕಾರಣ್ಯಕ್ಕೆ ಹೋಗಬೇಕು” ಎನ್ನುತ್ತಾಳೆ. ಬುದ್ಧಿವಂತೆಯಾದ ಕೈಕೇಯಿಗೆ ದಂಡಕಾರಣ್ಯದ ರಾಕ್ಷಸರ ವಿಷಯ ತಿಳಿದಿದೆ. ಹಿಂದೆ ದಶರಥ ಶಂಬರನ ಹತ್ತಿರ ಕಾಳಗ ಮಾಡಿದ್ದು ಇದೇ ದಂಡಕಾರಣ್ಯದಲ್ಲಿ. ಹಾಗಾಗಿ ರಾಕ್ಷಸರ ಕೈಯಲ್ಲಿ ರಾಮನಿಗೆ ಅಪಾಯವಾದರೆ ಆಗಲಿ ಎನ್ನುವ ಕುತ್ಸಿತ ಬುದ್ಧಿ ಅವಳದಾಗಿತ್ತು.

ರಾಮನಿಗೆ ಸೀತೆಯ ಮೇಲೆ ಅಪಾರವಾದ ಪ್ರೀತಿ ಇತ್ತು. ಸೀತಾಪಹರಣವೆನ್ನುವುದು ಆತ ನಿರೀಕ್ಷಿಸದ ಘಟನೆ. ಆಕೆಗೆ ರಾಕ್ಷಸರಿಂದ ತೊಂದರೆ ಆಗಬಹುದೆನ್ನುವ ಅನುಮಾನ ಇದ್ದೇ ಇತ್ತು. ಲಕ್ಷ್ಮಣ ಆಕೆಯನ್ನು ಬಿಟ್ಟು ತನ್ನನ್ನು ಹುಡುಕಲು ಬಂದಾಗಲೇ ಆತನಿಗೆ ಅನುಮಾನ ಕಾಡಿತ್ತು. “ಅವಳು ಏನೇ ಅಂದರೂ ಆಕೆಯನ್ನು ಒಂಟಿಯಾಗಿ ಬಿಟ್ಟು ನೀನು ಬರಬಾರದಿತ್ತು” ಎಂದು ಲಕ್ಷ್ಮಣನ ಮೇಲೆ ಅಸಮಾಧಾನವನ್ನು ವ್ಯಕ್ತಪಡಿಸುತ್ತಾನೆ. ಸೀತೆ ಬದುಕಿದ್ದಾಳೋ ಅಥವಾ ಅಪಹರಣಕ್ಕೊಳಗಾದಳೋ ಎನ್ನುವುದನ್ನು ತಿಳಿಯದೇ ದಿಗ್ಮೂಢನಾಗಿದ್ದ. ಅಡವಿಯಲ್ಲಿ ಇರುವ ಎಲ್ಲಾ ಗಿಡಗಳನ್ನೂ, ಮರಗಳನ್ನೂ ಆತ ಹುಚ್ಚನಂತೆ ಕೂಗಿ ಕೂಗಿ ತನ್ನ ಸೀತೆ ಎಲ್ಲಿ ಇದ್ದಾಳೆ ವಿಲಾಪಿಸುತ್ತಿದ್ದ. ವಿರಹದ ದುಃಖ ಎಲ್ಲಿಯವರೆಗೆ ತಿರುಗಿತು ಎಂದರೆ ಗೋದಾವರೀ ನದಿಯ ಹತ್ತಿರ ಸೀತೆಯ ವಿಷಯವನ್ನು ಕೇಳುತ್ತಾನೆ. ಪರ್ವತವನ್ನು ಪುಡಿಮಾಡಿಬಿಡುತ್ತೇನೆ ಎಂದು ಕೂಗಾಡುತ್ತಾನೆ.

ಸಕಲ ಪ್ರಪಂಚವನ್ನೇ ಸುಟ್ಟು ಪುಡಿಮಾಡುವೆ ಎಂದು ಬಿಲ್ಲಿನ ನಾಣನ್ನು ಬಿಗಿದು “ಕ್ಷುರವೆನ್ನುವ ಬಾಣವನ್ನು” ಹೂಡಿದಾಗ ಆತನ ಕ್ರೋಧವನ್ನು ಗಮನಿಸಿದ ಲಕ್ಷ್ಮಣ ಆತನನ್ನು ಸಮಾಧಾನ ಪಡಿಸುತ್ತಾನೆ. ಲಕ್ಷ್ಮಣ ರಾಮನಿಗೆ ಧರ್ಮದ ವಿವೇಕವನ್ನು ಹೇಳುವುದು ರಾಮಾಯಣದಲ್ಲಿ ಸೊಗಸಾಗಿ ವರ್ಣಿತವಾಗಿದೆ. ವಿಪತ್ತು ಎನ್ನುವುದು ಎಂತಹ ದೊಡ್ದ ಮನುಷ್ಯರಿಗೂ ಬರುತ್ತದೆ. ಆಗ ವಿವೇಕವನ್ನು ಕಳೆದುಕೊಳ್ಳಬಾರದು. ತಮ್ಮ ಕುಲಪುರೋಹಿತರಾದ ವಶಿಷ್ಠರ ನೂರುಮಂದಿ ಮಕ್ಕಳು ವಿಶ್ವಾಮಿತ್ರರಿಂದ ಹತರಾದರೂ ಅವರು ತಾಳ್ಮೆಯನ್ನು ತಂದು ಪ್ರತಿ ಶಾಪವನ್ನು ಕೊಡದಿರುವ ವಿಷಯವನ್ನು ತಿಳಿಸಿ ಸಮಾಧಾನ ಮಾಡುತ್ತಾನೆ. ಸಂಕಟ ಬಂದಾಗ ಧೃತಿಗೆಡದೇ ಅದನ್ನು ಪರಿಹರಿಸುವ ಉಪಾಯವನ್ನು ಹುಡಕಬೇಕೆಂದು ಹೇಳಿದಾಗ ರಾಮ ಸ್ವಲ್ಪಮಟ್ಟಿಗೆ ಸಮಾಧಾನಗೊಳ್ಳುತ್ತಾನೆ. ಅರಣ್ಯದಲ್ಲಿದ್ದ ಮೃಗಗಳ ಹತ್ತಿರ ವೈದೇಹಿಯ ಎಲ್ಲಿದ್ದಾಳೆ ಎಂದು ಕೇಳಿದಾಗ ಅವುಗಳು ದಕ್ಷಿಣ ದಿಕ್ಕಿಗೆ ಮುಖಮಾಡಿ ಆಕಾಶದ ಕಡೆಗೆ ನೋಡುತ್ತಿದ್ದವು. ಈ ಶಕುನದ ಲಕ್ಷಣದಂತೆ ಅವರು ಆಕಾಶಮಾರ್ಗದಲ್ಲಿ ದಕ್ಷಿಣದ ಕಡೆ ಹುಡುಕಲು ಪ್ರಾರಂಭಿಸುತ್ತಾರೆ.

ಅವರಿಗೆ ಮೊದಲು ಎದುರಾದ ಸವಾಲು ಸೀತೆಯನ್ನು ಯಾರು ಕದ್ದೊಯ್ದಿರಬಹುದೆನ್ನುವುದು. ಆಗ ಆತನಿಗೆ ಈ ವಿಷಯವನ್ನು ಹೇಳುವುದು ಜಟಾಯು. “ಪುತ್ರೋ ವಿಶ್ರವಸಃ ಸಾಕ್ಷಾದ್ಭಾತ್ರಾ ವಶ್ರವಣಸ್ಯ ಚ” ರಾವಣ ವಿಶ್ರವಸನ ಮಗ, ಕುಬೇರನ ಸಾಕ್ಷಾತ ಸಹೋದರ, ಎನ್ನುವ ಮೂಲಕ ಮೊತ್ತಮೊದಲ ಬಾರಿಗೆ ರಾವಣನೆನ್ನುವವನ ವಿಷಯವನ್ನು ರಾಮನಿಗೆ ತಿಳಿಸುತ್ತಾ ಮುಂದೆ ಹೇಳಲು ಸಾಧ್ಯವಾಗದೇ ಜೀವಬಿಡುತ್ತಾನೆ. ಅಲ್ಲಿಂದ ಮುಂದೆ ಆತನಿಗೆ ರಾವಣನ ಇರುವ ತಾಣವೆಲ್ಲಿ ಎನ್ನುವ ಸಂಶಯ ಉಂಟಾಗುತ್ತದೆ. ರಾಮಾಯಣದ ಪ್ರಕಾರ ಲಂಕೆಯೆನ್ನುವುದು ಒಂದು ಅಭೇದ್ಯವಾದ ಪ್ರದೇಶವಾಗಿತ್ತು. ರಾವಣ ಅಲ್ಲಿಂದ ಜಗತ್ತಿನ ಬೇರೆಕಡೆ ಹೋಗಿ ಆಕ್ರಮಣ ಮಾಡುತ್ತಿದ್ದ. ಸಮುದ್ರದ ಮದ್ಯದಲ್ಲಿರುವ ಈ ದ್ವೀಪ ಪುರಾಣದ ಕಾಲದಿಂದಲೂ ಹೊರಗಿನ ಪ್ರಪಂಚಕ್ಕೆ ತಿಳಿದಿರಲಿಲ್ಲ. ಮೊದಲು ಅದು ಗಂಧರ್ವರ, ಯಕ್ಷರ ವಾಸ ಸ್ಥಳವಾಗಿತ್ತು. ದೇವತೆಗಳು ವಿಹಾರಕ್ಕಾಗಿ ಅಲ್ಲಿಗೆ ಬರುತ್ತಿದ್ದರು. ಕುಬೇರನಿಂದ ಲಂಕೆಯನ್ನು ರಾವಣ ವಶಪಡಿಸಿಕೊಂಡ ಮೇಲೆ ದೇವತೆಗಳಿಗೂ ಅದು ಅಪರಿಚಿತ ಪ್ರದೇಶವಾಯಿತು. ಲಂಕೆ ಇರುವ ಪ್ರದೇಶ ಯಾರಿಗೂ ಗೊತ್ತಿರಲಿಲ್ಲ.

ಅದನ್ನು ಮೊದಲು ತಿಳಿದುಕೊಳ್ಳಲು ದಕ್ಷಿಣದೆಡೆಗೆ ಹುಡುಕಲು ಹೊರಡುತ್ತಾರೆ. ಸತಿವಿಯೋಗದ ದುಃಖದಿಂದ ಭ್ರಮಿತನಾದ ರಾಮನಿಗೆ ಲಕ್ಷ್ಮಣನೇ ಮಾರ್ಗದರ್ಶನ ಮಾಡುತ್ತಾನೆ. ಇಲ್ಲಿ ಲಕ್ಷ್ಮಣನ ವಿವೇಕ ಮತ್ತು ಪ್ರಕೃತಿಯೊಡನೆ ಆತನಿಗಿರುವ ತಾದಾತ್ಯ್ಮ ಚನ್ನಾಗಿ ವ್ಯಕ್ತವಾಗುತ್ತದೆ. ತನ್ನ ವೈಪಲ್ಯದಿಂದ ಅಣ್ಣ ಹೆಂಡತಿಯನ್ನು ಕಳೆದುಕೊಳ್ಳಬೇಕಾಯಿತು ಎನ್ನುವ ಯಾವ ನೋವನ್ನು ಹೊರಗಡೆ ತೋರಿಸಿಕೊಳ್ಳುವುದಿಲ್ಲ. ವಾಸ್ತವದಲ್ಲಿ ಎದುರಾಗುವ ಸವಾಲುಗಳನ್ನು ಎದುರಿಸಲು ಆತ ವಿವೇಚನೆಯನ್ನು ಮಾಡುತ್ತಿರುತ್ತಾನೆ. ಶೂರ್ಪನಖಿ, ಅಯೋಮುಖಿಯರಿಗೆ ಶಿಕ್ಷಿಸಿದ್ದು, ಇಂದ್ರಜಿತುವಿನ ವಧಾ ಪ್ರಕರಣ ಇಲ್ಲೆಲ್ಲ ಅದನ್ನು ಗಮನಿಸಬಹುದು. ಸುಮಿತ್ರೆ ಹೇಳಿದ ʼಇನ್ನು ಮುಂದೆ ಅರಣ್ಯವೇ ನಿನಗೆ ಅಯೋಧ್ಯೆ, ರಾಮನೇ ನಿನಗೆ ದಶರಥನಂತೆ, ಸೀತೆಯಲ್ಲಿ ತನ್ನನ್ನು ಕಾಣುʼ ಎನ್ನುವ ಮಾತುಗಳು ಅವನಲ್ಲಿ ಮನಮಾಡಿದ್ದವು. ಆತನಿಗೆ ಶಕುನಗಳ ಕುರಿತು ಅರಿವಿತ್ತು. ರಾಮನಿಗೆ ಸಮಾಧಾನ ಮಾಡುತ್ತಾ ಮುಂದೆ ಸೀತಾನ್ವೇಷಣೆಯ ಕರ್ತವ್ಯವನ್ನು ಸೂಚಿಸಿ ಅಡವಿಯಲ್ಲಿ ದಕ್ಷಿಣಕ್ಕೆ ನಡೆಯುವಂತೆ ಪ್ರೇರೇಪಿಸುತ್ತಾನೆ. ಆಗ ಇದ್ದಕ್ಕಿದ್ದಂತೆ ಅವನ ಎಡತೋಳು ಅದುರಿತು, ಅದು ಅನಿಷ್ಟಸೂಚಕವಾದ ಶಕುನ, ಆದರೆ ಅದರ ಬೆನ್ನಲ್ಲೇ ಮಂಜುಲಕವೆನ್ನುವ ಹೆಸರಿನ ಮಹಾಭಯಂಕರ ಪಕ್ಷಿಯ ಧ್ವನಿ ಕೇಳಿಸಿತು. ಆತ ರಾಮನಿಗೆ “ಸದ್ಯದಲ್ಲಿಯೇ ಭಯಂಕರವಾದ ಯುದ್ಧದ ಸನ್ನಿವೇಶ ತಮಗೆ ಎದುರಾಗುತ್ತದೆ. ಪಕ್ಷಿಯ ಧ್ವನಿ ಕೇಳಿಸಿರುವದರಿಂದ ಅದರಲ್ಲಿ ನಮ್ಮಿಬ್ಬರಿಗೂ ವಿಜಯವಾಗುತ್ತದೆ” ಎಂದು ಹೇಳುತ್ತಾನೆ.

ಇದ್ದಕ್ಕಿದ್ದಂತೆ ಯಾವುದೋ ವಿಶಾಲವಾದ ತೋಳುಗಳು ಅವರಿಬ್ಬರನ್ನೂ ಬಂಧಿಸಿಬಿಡುತ್ತವೆ. ಅದು ಕಬಂಧನೆನ್ನುವ ರಾಕ್ಷಸನದು. ಆತನಿಗೆ ತಲೆಯೇ ಇರಲಿಲ್ಲ, ಹೊಟ್ಟೆಯಲ್ಲಿ ಬಾಯಿ ಇತ್ತು. ಅರಣ್ಯದಲ್ಲಿರುವ ಮೃಗ ಪಕ್ಷಿ ಪ್ರಾಣಿಗಳನ್ನು ತನ್ನ ಬಾಹುಗಳಲ್ಲಿ ಹಿಡಿದು ತಿನ್ನುತ್ತಿದ್ದ. ರಾಮ ಲಕ್ಷ್ಮಣರಿಬ್ಬರನ್ನೂ ಒಂದೊಂದು ತೋಳಿನಲ್ಲಿ ಹಿಡಿದು ತಿನ್ನಲು ಬಯಸಿದಾಗ ಆತನಿಂದ ತಪ್ಪಿಸಿಕೊಳ್ಳಲು ಅವರಿಬ್ಬರೂ ಆತನ ತೋಳುಗಳನ್ನು ಕತ್ತರಿಸಿಬಿಡುತ್ತಾರೆ. ಯಾವಾಗ ಆತನ ಕೈ ಕತ್ತರಿಸಲ್ಪಟ್ಟಿತೋ ಆ ರಾಕ್ಷಸ ಆಶ್ವರ್ಯಚಕಿತನಾಗಿ ಅವರಿಬ್ಬರ ಪರಿಚಯವನ್ನು ಕೇಳುತ್ತಾನೆ. ರಾಮ ತಮ್ಮಿಬ್ಬರ ಪರಿಚಯವನ್ನು ಹೇಳಿದೊಡನೆಯೇ ಅತ ತನ್ನ ಪರಿಚಯವನ್ನು ಹೇಳಲುಪಕ್ರಮಿಸುತ್ತಾನೆ. ದನುವಿನ ಪುತ್ರನಾದ ಆತ ಗಂಧರ್ವನಾಗಿದ್ದ. ಸುಂದರನಾದ ರೂಪವನ್ನು ಹೊಂದಿದ್ದ, ಆದರೆ ಘೋರವಾದ ರೂಪವನ್ನು ಧರಿಸಿ ಅಡವಿಯಲ್ಲಿದ್ದ ಋಷಿಮುನಿಗಳಿಗೆ ತೊಂದರೆ ಕೊಡುತ್ತಿದ್ದ. ಒಮ್ಮೆ ಸ್ಥೂಲಶಿರಸನೆನ್ನುವ ಮುನಿಗೆ ಹೀಗೆ ಪೀಡಿಸಲು ಹೋದಾಗ ಮುನಿ, ನಿನಗೆ ಈ ಘೋರರೂಪವೇ ಶಾಶ್ವತವಾಗಿ ಉಳಿಯಲಿ ಎಂದು ಶಾಪವನ್ನು ಕೊಟ್ಟ ಕಾರಣದಿಂದ ಅರಣ್ಯದಲ್ಲಿ ರಾಕ್ಷಸನಾಗಿಬಿಟ್ಟ. ತನ್ನ ತಪ್ಪಿನ ಅರಿವಾಗಿ ಆತ ಋಷಿಯಲ್ಲಿ ಉಶ್ಶ್ಯಾಪವನ್ನು ಬೇಡಿದಾಗ, ಮುನಿ ”ರಾಮಲಕ್ಷ್ಮಣರು ಮುಂದೊಂದು ದಿನ ಅರಣ್ಯಕ್ಕೆ ಬಂದಾಗ ನಿನ್ನ ಎರಡೂ ತೋಳುಗಳನ್ನು ಕಡಿದು ಜೀವಂತವಾಗಿ ಸುಡುವರು. ಆಗ ಪುನಃ ನಿನ್ನ ಕಾಂತಿಯುತವಾದ ಶರೀರ ನಿನಗೆ ದೊರೆಯುವುದು” ಎಂದು ನುಡಿಯುತ್ತಾನೆ.

ಶಾಪದ ಕಾರಣ ರೂಪಿನೊಂದಿಗೆ ಸ್ವಭಾವವವೂ ರಾಕ್ಷಸತ್ವವೇ ಆಗಿ ಬದಲಾಗಿಬಿಡುತ್ತದೆ. ಶಾಪಗ್ರಸ್ತನಾದವ ಬ್ರಹ್ಮನನ್ನು ಕುರಿತು ತಪಸ್ಸು ಮಾಡಿ ದೀರ್ಘಾಯುಷ್ಯವನ್ನು ಪಡೆಯುತ್ತಾನೆ. ವರದ ಮದದಿಂದ ಇಂದ್ರನನ್ನು ಎದುರಿಸಿದಾಗ ದೇವೇಂದ್ರ ಈತನ ತಲೆಯ ಮೇಲೆ ವಜ್ರಾಯುಧದಿಂದ ಪ್ರಹಾರ ಮಾಡುತ್ತಾನೆ. ಪ್ರಹಾರಕ್ಕೆ ಕಬಂಧನ ತಲೆ ಕಾಲು ಎಲ್ಲ ಶರೀರದೊಳಗೆ ಸೇರಿ ಹೊಟ್ಟೆಯಲ್ಲಿ ಬಾಯಿ ಮೂಡಿತು. ಸೋತು ಸುಣ್ಣವಾದ ರಾಕ್ಷಸ ಇಂದ್ರನಿಗೆ ತನ್ನನ್ನು ರಕ್ಷಿಸೆಂದು ಕೇಳಲು, ಆತ “ನಿನ್ನ ತೋಳುಗಳು ಯೋಜನದಷ್ಟು ವಿಸ್ತೀರ್ಣವಾಗಲಿ, ಮುಂದೆ “ಯದಾ ರಾಮಃ ಸಲಕ್ಷ್ಮಣಃ I ಛೇತ್ಸತೇ ಸಮರೇ ಬಾಹೂ ತದಾ ಸ್ವರ್ಗಂ ಗಮಿಷ್ಯಸಿ II- ಲಕ್ಷ್ಮಣಸಹಿತನಾದ ರಾಮನು ನಿನ್ನ ಎರಡೂ ತೋಳುಗಳನ್ನು ಯಾವಾಗ ಕಡಿಯುವನೋ ಆಗ ನಿನ್ನ ಶಾಪವಿಮೋಚನೆಯಾಗುತ್ತದೆ” ಎಂದು ಹೇಳುತ್ತಾನೆ. ಇಷ್ಟು ಹೇಳಿ ಆತ ರಾಮನ ಹತ್ತಿರ ತನ್ನನ್ನು ಈಗಲೇ ಜೀವಂತವಾಗಿ ಸುಡು ಎಂದು ಹೇಳಿದಾಗ ರಾಮ ಒಪ್ಪುವುದಿಲ್ಲ. ಕಬಂಧನಿಗೆ ಸೀತೆಯನ್ನು ರಾವಣ ಕದ್ದೊಯ್ದಿರುವ ವಿಷಯ ತಿಳಿದಿದೆ. ಕುಳಿತಲ್ಲಿಯೇ ಆತ ಅದನ್ನು ಗಮನಿಸಿದ್ದಾನೆ. ರಾಮನಿಗೆ ಸೀತೆಯನ್ನು ರಾವಣ ಕದ್ದೊಯ್ದ ವಿಷಯ ತಿಳಿಸಿ ಅವನ ಲಂಕೆಯನ್ನು ಹುಡುಕಲು ಒಬ್ಬ ಒಳ್ಳೆಯ ಮಿತ್ರನನ್ನು ಹುಡುಕಿಕೊಡುವುದಾಗಿ ಹೇಳುತ್ತಾನೆ. ಹಾಗೆ ಹೇಳಬೇಕೆಂದರೆ ತನಗೆ ಮೊದಲಿನ ರೂಪ ಸಿಕ್ಕರೆ ಮಾತ್ರ ಸಾಧ್ಯವೆಂದು ಶರತ್ತು ಹಾಕುತ್ತಾನೆ. ರಾಮನಿಗೆ ರಾವಣ ಸೀತೆಯನ್ನು ಎಲ್ಲಿಟ್ಟರಬಹುದು, ಆತ ಹೇಗಿರಬಹುದು ಎನ್ನುವ ಸಂಗತಿಗಳ ಅರಿವಿಲ್ಲ. ರಾಕ್ಷಸನ ಹೆಸರು ಮಾತ್ರ ಆತನಿಗೆ ತಿಳಿದಿದೆ. ಆತ ಇರುವುದೆಲ್ಲಿ, ಹಾಗಾಗಿ ಕಬಂಧನ ಜೀವ ಇರುವಾಗಲೇ ಸುಡಲು ಒಪ್ಪುತ್ತಾನೆ.

ಈ ಮೊದಲು ವಿರಾಧನೆನ್ನುವ ರಾಕ್ಷಸ ರಾಮನಲ್ಲಿ ತನ್ನನ್ನು ಜೀವಂತವಾಗಿ ಹುಗಿಯಲು ಹೇಳಿದ್ದ. ಹಾಗೆ ಜೀವಂತ ಹುಗಿದಾಗ ಆತನ ಶಾಪವಿಮೋಚನೆಯಾಗಿತ್ತು. ಇದೀಗ ಕಬಂಧನನ್ನು ಸುಟ್ಟ ತಕ್ಷಣದಲ್ಲಿ ಆತ ಮೊದಲಿನ ಗಂಧರ್ವನಾಗಿ ರಾಮನಿಗೆ ಕಾಣಿಸಿಕೊಂಡು ಕೊಡುವ ಸಲಹೆಯೇ ಸುಗ್ರೀವ ಎನ್ನುವ ವಾನರ ಇಲ್ಲಿಯೇ ಋಷ್ಯಮೂಕ ಪರ್ವತದಲ್ಲಿದ್ದಾನೆ. ಆತ ಇಂದ್ರನ ಮಗ. ಆತನ ಅಣ್ಣನಾದ ವಾಲಿ ಸುಗ್ರೀವನನ್ನು ಕಾರಣಾಂತರದಿಂದ ರಾಜ್ಯಭ್ರಷ್ಟನನ್ನಾಗಿ ಮಾಡಿದ್ದಾನೆ, ಎನ್ನುತ್ತಾ ರಾವಣನಿರುವ ಸ್ಥಳವನ್ನು ತಿಳಿಸಲು ಸುಗ್ರೀವನೊಬ್ಬನಿಗೆ ಸಾಧ್ಯ ಎನ್ನುತ್ತಾನೆ. ಕಾರ್ಯಸಾಧನೆಗೆ ಆರು ಮಾರ್ಗಗಳನ್ನು ಅನುಸರಿಸಬೇಕು. ಅವುಗಳು ಸಂಧಿ, ವಿಗ್ರಹ, ಯಾನ, ಆಸನ, ದ್ವೈಧೀಭಾವ ಮತ್ತು ಸಮಾಶ್ರಯಗಳು. ಇದರಲ್ಲಿ ನಿನ್ನಂತೆ ಪತ್ನಿಯನ್ನು ಕಳೆದುಕೊಂಡ ಸುಗ್ರೀವನಿಗೆ ನಿನ್ನ ಕಷ್ಟ ಅರ್ಥವಾಗುತ್ತದೆ. ಹಾಗಾಗಿ ಆತನಲ್ಲಿ ನೀನು ಸಮಾಶ್ರಯವನ್ನು ಕೋರಬಹುದು ಎನ್ನುತ್ತಾನೆ. ಆ ವಾನರನಲ್ಲಿ ಅಗ್ನಿಸಾಕ್ಷಿಯಾಗಿ ಮಿತ್ರತ್ವವನ್ನು ಮಾಡಿಕೋ ಎನ್ನುವುದನ್ನು ಒತ್ತಿ ಹೇಳುತ್ತಾನೆ. ಸುಗ್ರೀವನ ಸಂಪೂರ್ಣ ಪರಿಚಯವನ್ನು ಮೊದಲು ರಾಮನಿಗೆ ಮಾಡಿಕೊಡುವುದೇ ಕಬಂಧನ್ನುವ ರಾಕ್ಷಸ. ತಾಮಸೀ ವ್ಯಕ್ತಿತ್ವದ ರಾಕ್ಷಸನಿಗೆ ವಾಲಿಯ ಪರಿಚಯ ಇತ್ತು, ಆದರೆ ಆತ ವಾಲಿಗಿಂತ ಸುಗ್ರೀವನನ್ನೇ ಅಶ್ರಯ ಹೊಂದಲು ತಿಳಿಸುವ ಕಾರಣವೇ “ಕಷ್ಟದಲ್ಲಿರುವವರಿಗೆ ಕಷ್ಟದಲ್ಲಿರುವವರೇ ನೆರವಾಗುತ್ತಾರೆ” ಎನ್ನುವುದು.

ಲಕ್ಷ್ಮಣನ ಮೂಲಕ ಸುಗ್ರೀವನ ಹತ್ತಿರ ಸ್ನೇಹವನ್ನು ಯಾಚಿಸುವುದು ತನ್ನ ಪತ್ನಿಯನ್ನು ರಾವಣನಿಂದ ಬಿಡಿಸಿಕೊಂಡು ಬರಲು ಸಹಕಾರಿಯಾಗಲೆಂದು. ಇದು ಕಬಂಧನೇ ಹೇಳಿದಂತೆ ಹೆಂಡತಿಯ ವಿಯೋಗದಲ್ಲಿರುವ ಸುಗ್ರೀವನಿಗೆ ತನ್ನ ಕಷ್ಟ ಅರ್ಥವಾಗುತ್ತದೆ ಎನ್ನುವ ನಿಟ್ಟಿನಲ್ಲಿ. ರಾಜನೀತಿಗೆ ಅನುಗುಣವಾದ ಸಂಗತಿಯನ್ನು ರಾಮ ಇಲ್ಲಿ ಅನುಸರಿಸಿದ್ದಾನೆಯೇ ಹೊರತೂ ಮತ್ತೇನೂ ಅಲ್ಲ. ಸುಗ್ರೀವನ ಕುರಿತು ಪ್ರಚಲಿತದಲ್ಲಿದ್ದಂತೆ ಚಂಚಲ, ಅಂಜುಕುಳಿ ಸ್ವಭಾವ ಎನ್ನುವುದಕ್ಕೆ ವಿರುದ್ಧವಾದ ಸ್ವಭಾವ ಆತನದ್ದಾಗಿತ್ತು. ಅದನ್ನು ಮುಂದಿನ ಭಾಗದಲ್ಲಿ ನೋಡೋಣ.

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ಸೂರ್ಯವಂಶದ ಮುಂಗಾಣ್ಕೆಯನು ಅರಿತ ಸಾಧಕ- ಸುಮಂತ್ರ

Continue Reading

ಅಂಕಣ

ರಾಜಮಾರ್ಗ ಅಂಕಣ: ಕ್ಯಾಪ್ಟನ್ ಪ್ರಾಂಜಲ್ ಪರಾಕ್ರಮಕ್ಕೆ ಒಲಿದ ಶೌರ್ಯ ಚಕ್ರ

ರಾಜಮಾರ್ಗ ಅಂಕಣ: ಕ್ಯಾಪ್ಟನ್ ಪ್ರಾಂಜಲ್ ಅವರು ತೋರಿದ ಧೀರೋದಾತ್ತ ಸಾಹಸಕ್ಕೆ ಭಾರತ ರಾಷ್ಟ್ರವು ಶ್ರೇಷ್ಟವಾದ ʼಶೌರ್ಯ ಚಕ್ರ’ ಪ್ರಶಸ್ತಿಯನ್ನು ಘೋಷಣೆ ಮಾಡಿತು. ಅದನ್ನು ನಿನ್ನೆ ಸಂಜೆ ರಾಷ್ಟ್ರಪತಿ ಭವನದಲ್ಲಿ ಮಾನನೀಯ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಾಂಜಲ್ ಪತ್ನಿ ಅದಿತಿ ಮತ್ತು ತಾಯಿಗೆ ಪ್ರದಾನ ಮಾಡಿದ ದೃಶ್ಯವನ್ನು ಟಿವಿಯ ಮೂಲಕ ಇಡೀ ಭಾರತ ಕಣ್ಣು ತುಂಬಿಸಿಕೊಂಡಿತು.

VISTARANEWS.COM


on

ರಾಜಮಾರ್ಗ ಅಂಕಣ captain pranjal shaurya award
Koo

ಕರ್ನಾಟಕದ ಸೈನಿಕನಿಗೆ ದೊರೆಯಿತು ರಾಷ್ಟ್ರದ ಗೌರವ

Rajendra-Bhat-Raja-Marga-Main-logo

ರಾಜಮಾರ್ಗ ಅಂಕಣ: ಕಳೆದ ವರ್ಷವಿಡೀ ಕನ್ನಡ ನಾಡಿನಲ್ಲಿ (Karnataka) ಮೊಳಗಿದ್ದು ಇದೇ ಸೈನಿಕನ (Soldier) ಯಶೋಗಾಥೆ! ಅದು ಕರ್ನಾಟಕದ ಹೆಮ್ಮೆಯನ್ನು ಇಮ್ಮಡಿ ಮಾಡಿದ ಕ್ಯಾಪ್ಟನ್ ಪ್ರಾಂಜಲ್ (Captain Pranjal) ಅವರು ದೇಶಕ್ಕಾಗಿ ಹುತಾತ್ಮರಾದ (Martyr) ರೋಮಾಂಚಕ ಕಥೆ.

ನಾನು ಅಂದು ಬರೆದ ಹಾಗೆ ಪ್ರಾಂಜಲ್ ಅವರು ಆಗರ್ಭ ಶ್ರೀಮಂತ ಕುಟುಂಬದ ಒಬ್ಬನೇ ಮಗ ಆಗಿದ್ದರು. ಅವರ ತಂದೆ ವೆಂಕಟೇಶ್ ಅವರು ಬಹಳ ದೊಡ್ಡ ಕಾರ್ಪೊರೇಟ್ ಸಂಸ್ಥೆಯಾದ MRPL ಇದರ ಎಂಡಿ ಆಗಿ ನಿವೃತ್ತಿಯನ್ನು ಹೊಂದಿದ್ದರು. ಹಾಗಿದ್ದರೂ ಮಗ ಸ್ವ ಇಚ್ಛೆಯಿಂದ ಸೈನ್ಯಕ್ಕೆ ಹೊರಟು ನಿಂತಾಗ ವೆಂಕಟೇಶ್ ಅಥವಾ ಅವರ ಪತ್ನಿ ತಡೆಯಲಿಲ್ಲ ಅನ್ನುವುದು ಶ್ರೇಷ್ಠ ನಿದರ್ಶನ.

ಅಂತಿಮ ಸಂಸ್ಕಾರದ ಹೊತ್ತು ಮಿಡಿಯಿತು ವೆಂಕಟೇಶ್ ಕುಟುಂಬ

ಪ್ರೀತಿ ಮಾಡಿ ಮದುವೆಯಾದ ಪತ್ನಿ ಅದಿತಿ ಕೂಡ ಗಂಡನ ಉಜ್ವಲ ರಾಷ್ಟ್ರಪ್ರೇಮಕ್ಕೆ ನೆರಳಾಗಿ ನಿಂತರು. ಮುಂದೆ ಪ್ರಾಂಜಲ್ ಅವರು ಭಯೋತ್ಪಾದಕರ ಜೊತೆಗೆ ಕೊನೆಯ ಉಸಿರಿನವರೆಗೂ ಹೋರಾಡಿ ಉಸಿರು ಚೆಲ್ಲಿದ ಘಟನೆಯು ನಡೆದಾಗ, ತ್ರಿವರ್ಣ ಧ್ವಜ ಹೊದ್ದು ಮಲಗಿದ ಪ್ರಾಂಜಲ್ ಪಾರ್ಥಿವ ಶರೀರ ಮನೆಯ ಅಂಗಳಕ್ಕೆ ಬಂದಾಗ ಸೈನಿಕನ ಕುಟುಂಬವು ಒಮ್ಮೆ ನಡುಗಿದ್ದು ಹೌದು.

ಹುತಾತ್ಮ ಸೈನಿಕನ ಹೆಂಡತಿ ಹೊರಗೆ ಅಳಲಿಲ್ಲ

ಆದರೆ ತಕ್ಷಣ ಸಾವರಿಸಿಕೊಂಡ ಆ ರಾಷ್ಟ್ರಭಕ್ತ ಕುಟುಂಬ ಪ್ರಾಂಜಲ್ ಅಂತಿಮ ಸಂಸ್ಕಾರದ ಅವಧಿಯಲ್ಲಿ ತೋರಿದ್ದು ಸಾವಧಾನದ ಮತ್ತು ಭಾವನೆಗಳ ನಿಯಂತ್ರಣದ ಅನನ್ಯ ಮಾದರಿಯನ್ನು. ಅದರಲ್ಲಿಯೂ ಹುತಾತ್ಮ ಸೈನಿಕನ ಪತ್ನಿ ಅಳಬಾರದು ಎಂದು ಮನದಲ್ಲಿ ಸಂಕಲ್ಪಿಸಿ ಅದಿತಿ ಅಂದು ಕಲ್ಲುಬಂಡೆಯ ಹಾಗೆ ನಿಂತಿದ್ದರು. ಕರಾವಳಿ ಕರ್ನಾಟಕದಲ್ಲಿ ತನ್ನ ಬಾಲ್ಯವನ್ನು ಕಳೆದಿದ್ದ ಕರ್ನಾಟಕದ ವೀರ ಸೇನಾನಿಯ ಅಂತ್ಯ ಇಡೀ ನಾಡನ್ನು ದುಃಖದ ಮಡುವಿನಲ್ಲಿ ದೂಡಿತ್ತು.

Family of Captain MV Pranjal ರಾಜಮಾರ್ಗ ಅಂಕಣ

ಕಲ್ಯಾ ಶಾಲೆಯಲ್ಲಿ ನಿರ್ಮಾಣವಾಯಿತು ಕ್ಯಾ. ಪ್ರಾಂಜಲ್ ಸ್ಮಾರಕ

ಇಡೀ ಕನ್ನಡ ನಾಡು ದುಃಖ ಮತ್ತು ಸೂತಕದ ಛಾಯೆಯಲ್ಲಿ ಮುಳುಗಿದ್ದಾಗ ನಾಡಿನಾದ್ಯಂತ ಶ್ರದ್ಧಾಂಜಲಿ ಸಭೆಗಳು ನಡೆದವು. ಕಾರ್ಕಳ ತಾಲೂಕಿನ ಕಲ್ಯಾ ಗ್ರಾಮದ ಸರಕಾರಿ ಶಾಲೆಯ ಶತಮಾನೋತ್ಸವ ಸಮಿತಿ ಮತ್ತು ಗ್ರಾಮಸ್ಥರು ಸೇರಿ ಶಾಲೆಯ ಅಂಗಳದಲ್ಲಿ ಕ್ಯಾಪ್ಟನ್ ಪ್ರಾಂಜಲ್ ಸ್ಮಾರಕ ನಿರ್ಮಿಸಿದರು. ಈ ವರ್ಷ ಜನವರಿ 26ರಂದು ಸಂಜೆ ನಡೆದ ಈ ಭಾವುಕ ಕಾರ್ಯಕ್ರಮದಲ್ಲಿ ಸೈನಿಕನ ತಂದೆ ವೆಂಕಟೇಶ್ ಮತ್ತು ತಾಯಿ ಇಬ್ಬರೂ ಭಾಗವಹಿಸಿದ್ದರು. ನಿವೃತ್ತ ಸೈನಿಕರ ವೇದಿಕೆಯು ಗೌರವಾರ್ಪಣೆ ಮಾಡಿತ್ತು. ಕಲ್ಯಾ ಎಂಬ ಪುಟ್ಟ ಗ್ರಾಮ, ಅಲ್ಲಿನ ಸರಕಾರಿ ಶಾಲೆ, ಅಧ್ಯಾಪಕರು, ಮಕ್ಕಳು, ಹೆತ್ತವರು, ನೂರಾರು ಸಂಖ್ಯೆಯ ಗ್ರಾಮಸ್ಥರು ಸೇರಿ ಕಂಬನಿ ಮಿಡಿದ ಅತ್ಯಪೂರ್ವ ಕಾರ್ಯಕ್ರಮ ಅದಾಗಿತ್ತು.

Raja Marga Column Captain MV Pranjal Memorial

ಅದೇ ವೀರ ಸೈನಿಕನಿಗೆ ಇಂದು ದೊರೆಯಿತು ರಾಷ್ಟ್ರದ ಗೌರವ

ಕ್ಯಾಪ್ಟನ್ ಪ್ರಾಂಜಲ್ ಅವರು ತೋರಿದ ಧೀರೋದಾತ್ತ ಸಾಹಸಕ್ಕೆ ಭಾರತ ರಾಷ್ಟ್ರವು ಶ್ರೇಷ್ಟವಾದ ʼಶೌರ್ಯ ಚಕ್ರ’ ಪ್ರಶಸ್ತಿಯನ್ನು ಘೋಷಣೆ ಮಾಡಿತು. ಅದನ್ನು ನಿನ್ನೆ ಸಂಜೆ ರಾಷ್ಟ್ರಪತಿ ಭವನದಲ್ಲಿ ಮಾನನೀಯ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಾಂಜಲ್ ಪತ್ನಿ ಅದಿತಿ ಮತ್ತು ತಾಯಿಗೆ ಪ್ರದಾನ ಮಾಡಿದ ದೃಶ್ಯವನ್ನು ಟಿವಿಯ ಮೂಲಕ ಇಡೀ ಭಾರತ ಕಣ್ಣು ತುಂಬಿಸಿಕೊಂಡಿತು. ಹುತಾತ್ಮ ಸೈನಿಕನ ಪತ್ನಿ ಅದಿತಿಯವರ ಅದೇ ಭಾವುಕ ಮುಖ, ಅಮ್ಮನ ಅಕ್ಕರೆ ತುಂಬಿದ ಆಳವಾದ ಕಣ್ಣುಗಳು, ಪ್ರಾಂಜಲ್ ಹೆಸರು ಮೊಳಗಿದಾಗ ದೃಢವಾದ ಹೆಜ್ಜೆಗಳೊಂದಿಗೆ ತಾಯಿ ಮತ್ತು ಪತ್ನಿ ಇಬ್ಬರೂ ವೇದಿಕೆಯೇರಿದ್ದು, ಎದೆಯಲ್ಲಿ ಜ್ವಾಲಾಮುಖಿ ಇದ್ದರೂ ತುಟಿಯಲ್ಲಿ ಅರಳಿದ ಹೂ ನಗು, ರಾಷ್ಟ್ರಪತಿ ಅವರು ಪ್ರಶಸ್ತಿ ಪ್ರದಾನ ಮಾಡಿದಾಗ ಅದಿತಿಯವರ ಕಣ್ಣಲ್ಲಿ ಒಮ್ಮೆ ಮಿಂಚಿ ಮರೆಯಾದ ಪ್ರೌಡ್ ಫೀಲಿಂಗ್.

ಈ ದೃಶ್ಯವು ಮುಂದಿನ ನೂರಾರು ವರ್ಷಗಳ ಕಾಲ ನಮ್ಮ ರಕ್ತವನ್ನು ಬಿಸಿ ಮಾಡುವುದು ಖಂಡಿತ. ಅಮರ್ ರಹೇ ಕ್ಯಾಪ್ಟನ್ ಪ್ರಾಂಜಲ್.

ಇದನ್ನೂ ಓದಿ: ರಾಜಮಾರ್ಗ ಅಂಕಣ: ಟಿ20 ವಿಶ್ವಕಪ್ ಫೈನಲ್; ಒಂದು ಪಂದ್ಯ – ಹಲವು ಪಾಠ

Continue Reading

ಅಂಕಣ

ನನ್ನ ದೇಶ ನನ್ನ ದನಿ: ಜಗತ್ತಿನ ಇತಿಹಾಸ ಕನ್ನಡದಲ್ಲಿ ತರಲು ಆಸೆಪಟ್ಟಿದ್ದ ನಿರಂಜನ

ನನ್ನ ದೇಶ ನನ್ನ ದನಿ ಅಂಕಣ: ಐವತ್ತು ವರ್ಷಗಳ ಹಿಂದೆಯೇ ನಿರಂಜನರು “ಕಿರಿಯರ ವಿಶ್ವಕೋಶ” ತಂದರು. ಇಂದಿನಂತೆ ಕಂಪ್ಯೂಟರ್, ಅಂತರಜಾಲ, ಫೋನ್, ಇತ್ಯಾದಿ ಇಲ್ಲದ ಆ ಕಾಲಘಟ್ಟದಲ್ಲಿ ನಿರಂಜನ ಅವರ ಸಂಗ್ರಹ, ಸಂಪಾದನೆ ಮತ್ತು ಪ್ರಸ್ತಾವನೆಗಳು ನಿಜವಾಗಿಯೂ ಸಾಹಸವೇ. ವಿವಿಧ ಪ್ರವರ್ಗಗಳ ಅವರ ಕೃತಿಗಳನ್ನು, ಸಂಪಾದಿತ ಕೃತಿಗಳನ್ನು ನೋಡುವಾಗ, ನಿರಂಜನರು ಅದೆಂತಹ ಅದ್ಭುತ ಸಾಧಕರು, ಎನಿಸಿ ಗೌರವ ಇನ್ನಷ್ಟು ಹೆಚ್ಚಾಗುತ್ತದೆ.

VISTARANEWS.COM


on

niranjana ನನ್ನ ದೇಶ ನನ್ನ ದನಿ ಅಂಕಣ
Koo

ನಿರಂಜನ ಅವರ ಜನ್ಮ ಶತಮಾನೋತ್ಸವ

ಈ ಅಂಕಣವನ್ನು ಇಲ್ಲಿ ಆಲಿಸಿ:

ajjampura manjunath ನನ್ನ ದೇಶ ನನ್ನ ದನಿ

ನನ್ನ ದೇಶ ನನ್ನ ದನಿ ಅಂಕಣ: “ಇಡೀ ಜಗತ್ತಿನ ಇತಿಹಾಸವನ್ನು (History) ಕನ್ನಡದಲ್ಲಿ ಬರೆಯಬೇಕು ಎನಿಸುತ್ತಿದೆ” ಎಂದು ಆಸೆಪಟ್ಟಿದ್ದರು ನಿರಂಜನ (Niranjana).

ಇದೀಗ ಲೇಖಕ, ಸಂಪಾದಕ, ಕಾದಂಬರಿಕಾರ, ಅಪರೂಪದ ಸಾಧಕ “ನಿರಂಜನ” (ಜನನ : ಜೂನ್ 1924) ಅವರ ಶತಮಾನೋತ್ಸವ. ನಿರಂಜನ ಎಂದರೆ ಜ್ಞಾನ, ದೋಷರಹಿತವಾದುದು ಎಂಬೆಲ್ಲಾ ಅರ್ಥಗಳಿವೆ. ಶಿವ ಎನ್ನುವ ಅರ್ಥವೂ ಇದೆ. ಮೂಲತಃ ಕುಳಕುಂದ ಶಿವ ರಾವ್ ಆಗಿದ್ದ ಅವರು “ನಿರಂಜನ” ಎಂಬ ಕಾವ್ಯನಾಮ ಬಳಸಿದುದು ಅನ್ವರ್ಥವೇ ಆಗಿತ್ತು. ಕನ್ನಡ ಸಾಹಿತ್ಯದಲ್ಲಿ ಶಿವರಾಮ ಕಾರಂತರಂತೆ, ಮಹತ್ತ್ವದ ಮತ್ತು ಬಹು-ಆಯಾಮದ ಸಾಹಿತ್ಯ ರಚನೆ ಮಾಡಿದವರು ವಿರಳ. ಆದರೆ ಎಚ್ಚೆಸ್ಕೆ, ನಿರಂಜನ ಅವರನ್ನು ಈ ಕ್ಷಣಕ್ಕೆ ನೆನಪು ಮಾಡಿಕೊಳ್ಳಬಹುದು. ಸ್ವಯಂಭೂ, ಸ್ವಯಂಘೋಷಿತ ಸಾಹಿತ್ಯ ಧುರಂಧರ ಭಯಂಕರರ ಮಾಫಿಯಾದ ಅಬ್ಬರದಲ್ಲಿ, ಪ್ರಶಸ್ತಿ – ಸ್ಥಾನಮಾನ ಇತ್ಯಾದಿಗಳಿಗೆ ಹಾತೊರೆಯದೆ ತಮ್ಮ ಪಾಡಿಗೆ ತಾವು ಶುದ್ಧ ಸಾಹಿತ್ಯ ಸೇವೆಯನ್ನು ವ್ರತದಂತೆ ಪಾಲಿಸಿದವರು ಈ ಎಚ್ಚೆಸ್ಕೆ, ನಿರಂಜನ ಅಂತಹವರು.

1982ರಲ್ಲಿ ಒಮ್ಮೆ ಹೀಗಾಯಿತು. ಆಕಾಶವಾಣಿಯಲ್ಲಿ ಸಂಸ್ಕೃತ ವಾರ್ತೆಗಳು ಆರಂಭವಾದವು. ಕನ್ನಡದ ನಮ್ಮ ಸಮಾಜವಾದೀ, ಸಾಮ್ಯವಾದೀ ಲೇಖಕರು ಭಾರೀ ಗದ್ದಲವೆಬ್ಬಿಸಿದರು. ಅವರದ್ದೇ ನಿಯಂತ್ರಣದ ಪತ್ರಿಕೆಗಳನ್ನು ಓದಿದರೆ, ಏನೋ ಆಗಬಾರದ್ದು ಆಗಿಹೋಗಿದೆ, ಪ್ರಳಯವೇ ಆಗುತ್ತಿದೆ, ಎಂಬಂತಹ ಅಭಿಪ್ರಾಯ ಮೂಡುತ್ತಿತ್ತು. ಒಂದು ಪ್ರತಿಭಟನಾ ಸಭೆಯನ್ನೇ ಆಯೋಜಿಸಲಾಯಿತು. ನಾನೂ ಸಭಿಕನಾಗಿ ಹೋಗಿದ್ದೆ. ನಿರಂಜನ ಅವರದ್ದೇ ಅಧ್ಯಕ್ಷತೆ. ಒಬ್ಬೊಬ್ಬರಾಗಿ “ಕೆಲವೇ ಕೆಲವು ನಿಮಿಷಗಳ ಈ ಸಂಸ್ಕೃತ ವಾರ್ತೆಯ ಪ್ರಸಾರದಿಂದ” ಹೇಗೆ ಮತ್ತು ಎಷ್ಟು ಅನಾಹುತವಾಗುತ್ತಿದೆ, ಎಂದೆಲ್ಲಾ ಕೂಗಾಡತೊಡಗಿದರು. ಅನಂತರ ನಮ್ಮ ಸಮಾಜವಾದೀ ಲೇಖಕ ಮಿತ್ರ ಕಾಳಪ್ಪನವರು ಎದ್ದು ಮೈಕ್ ಮುಂದೆ ನಿಂತು ರೋದಿಸಲು ಪ್ರಾರಂಭಿಸಿದರು. “ನೋಡಿ, ಸತ್ತ ಭಾಷೆ ಸಂಸ್ಕೃತಕ್ಕೆ ಮಣೆ ಹಾಕಲಾಗುತ್ತಿದೆ. ಆದರೆ ಜನಭಾಷೆ ಉರ್ದುವಿಗೆ ಸ್ಥಾನವಿಲ್ಲ” ಇತ್ಯಾದಿ ಗಳಹತೊಡಗಿದರು. ತಡೆಯಲಾರದೆ, ನಾನು ಎದ್ದು ನಿಂತು ಗಟ್ಟಿಯಾಗಿ “ಎರಡಕ್ಕೂ ಹೋಲಿಕೆಯಿಲ್ಲ, ಉರ್ದುವಿಗೆ ಆಕಾಶವಾಣಿಯಲ್ಲಿ ಪ್ರತ್ಯೇಕ ಸ್ಟೇಷನ್ ಇದೆ” ಎಂದು ಆಕ್ಷೇಪಿಸಿದೆ. ನಮ್ಮ ಕಾಳಪ್ಪನವರಿಗೆ ಬರೀ ದ್ವೇಷ, ಪೂರ್ವಗ್ರಹಗಳೇ ಹೊರತು ಮಾಹಿತಿಯೂ ಇಲ್ಲ, ತಿಳಿವಳಿಕೆಯೂ ಇಲ್ಲ. ಸಭಾಂಗಣದಲ್ಲಿ ಆಗ ಗಲಾಟೆಯೇ ಆಗಿಹೋಯಿತು. ಸಭೆಯನ್ನೇ ಮುಗಿಸಬೇಕಾಯಿತು. ನಾನು ನೇರವಾಗಿ ಸಭಾಧ್ಯಕ್ಷರಾದ ನಿರಂಜನ ಅವರಲ್ಲಿಗೇ ಹೋಗಿ, ಪ್ರತ್ಯೇಕ ಉರ್ದು ಸ್ಟೇಷನ್ ಇರುವುದನ್ನು, ಸಂಸ್ಕೃತದಲ್ಲಿ ಕೇವಲ ಕೆಲವು ನಿಮಿಷಗಳ ವಾರ್ತೆ ಮಾತ್ರ ಬರುತ್ತಿದೆ, ಎಂಬಿತ್ಯಾದಿ ವಿವರ ಹೇಳಿದೆ. ಸಜ್ಜನರಾದ ಅವರು “You have a valid point” ಎಂದು ಒಪ್ಪಿಕೊಂಡರು.

ನವಕರ್ನಾಟಕ ಪ್ರಕಾಶನದ ಮಹತ್ತ್ವದ ಯೋಜನೆಗಳಲ್ಲೊಂದು ನಿರಂಜನ ಅವರು ಸಂಪಾದಕರಾಗಿದ್ದ 25 ಸಂಪುಟಗಳ “ವಿಶ್ವಕಥಾಕೋಶ” ಸರಣಿ. ಈ ಕಟ್ಟಿನಲ್ಲಿ ಧರಣಿ ಮಂಡಲ ಮಧ್ಯದೊಳಗೆ, ಆಫ್ರಿಕಾದ ಹಾಡು, ಕಾಡಿನಲ್ಲಿ ಬೆಳದಿಂಗಳು, ಚೆಲುವು, ಸುಭಾಷಿಣಿ, ವಿಚಿತ್ರ ಕಕ್ಷಿದಾರ, ಮಂಜು ಹೂವಿನ ಮದುವಣಿಗ, ಬೂದು ಬಣ್ಣದ ಕಾಂಗರೂ, ಹೆಜ್ಜೆಗುರುತು, ಅರಬಿ, ನೆತ್ತರು ದೆವ್ವ, ಬಾವಿ ಕಟ್ಟೆಯ ಬಳಿ, ಅದೃಷ್ಟ, ಸಜ್ಜನನ ಸಾವು, ಡೇಗೆ ಹಕ್ಕಿ, ಅವಸಾನ, ತಾತನ ಹುಟ್ಟುಹಬ್ಬ, ಬಾಲ ಮೇಧಾವಿ, ಇಬ್ಬರು ಗೆಳೆಯರು, ಅಬಿಂದಾ ಸಯೀದಾ, ನಿಗೂಢಸೌಧ, ಬೆಳಗಾಗುವ ಮುನ್ನ, ಮರಳುಗಾಡಿನ ಮದುವೆ, ಕಿವುಡು ವನದೇವತೆ, ಸಾವಿಲ್ಲದವರು ಸಂಪುಟಗಳಿವೆ.

ಜಗತ್ತಿನ ನೂರಾರು ದೇಶಗಳ ಹಲವು ನೂರು ಪ್ರಾತಿನಿಧಿಕ ಕಥೆಗಳು. ಅತ್ಯದ್ಭುತ ಸಂಚಯವದು. ನಿರಂಜನ ಅವರ ಸಂಪಾದಕತ್ವ ಎಂದರೆ, ಅಂತಹ ಯೋಜನೆಯ ಸತ್ತ್ವ ಏನು, ಪ್ರಾಮುಖ್ಯ ಏನು ಎಂದು ಅರಿಯಲು ಆ ಸಂಪುಟಗಳನ್ನೇ ಓದಬೇಕು, ಮುಖ್ಯವಾಗಿ ಆ ಎಲ್ಲ ಸಂಪುಟಗಳಿಗೆ ನಿರಂಜನ ಅವರು ಸಂಪಾದಕರಾಗಿ ಬರೆದ ಪ್ರಸ್ತಾವನೆಗಳನ್ನೂ ಓದಬೇಕು. ಆಯಾ ಸಂಕಲನದಲ್ಲಿ ಇರುವ ಕತೆಗಳು ಯಾವೆಲ್ಲ ದೇಶಗಳಿಗೆ ಸೇರಿವೆಯೋ, ಆ ದೇಶಗಳ ಪುಟ್ಟ ಸಾಂಸ್ಕೃತಿಕ ಇತಿಹಾಸವನ್ನೇ ಅವರು ನೀಡಿದ್ದಾರೆ. ಅದೊಂದು ದಾಖಲೆ, ಅದೊಂದು ಅದ್ಭುತ. ನಿರಂಜನ ಅವರು ಒಂದು ಚಿಕ್ಕ ಕಿಂಡಿಯಲ್ಲಿ ಜಗತ್ತಿನ ವಿಶ್ವರೂಪ ದರ್ಶನವನ್ನೇ ಮಾಡಿಸಿದ್ದರು, ಮಾಡಿಸಿದ್ದಾರೆ (ಮುಂದೆ ಪ್ರಕಾಶಕರು ಈ ಪ್ರಸ್ತಾವನೆಗಳನ್ನೇ ಪ್ರತ್ಯೇಕ ಸಂಪುಟವನ್ನಾಗಿ ಹೊರತಂದು ಮೆಚ್ಚುವಂತಹ ಕೆಲಸ ಮಾಡಿದರು).

ಈ “ವಿಶ್ವಕಥಾಕೋಶ” ಸಂಪುಟಗಳ ಒಂದು ಸರಣಿಯ ಲೋಕಾರ್ಪಣೆಗೆ, ನನ್ನ ನೆಚ್ಚಿನ ಅಂಕಣಕಾರರಾದ ಹಾ.ಮಾ.ನಾಯಕರು ಬಂದಿದ್ದರು. ಒಂದೇ ವೇದಿಕೆಯಲ್ಲಿ ಹಾ.ಮಾ.ನಾಯಕರನ್ನು, ನಿರಂಜನರನ್ನು ನೋಡುವ ಭಾಗ್ಯ ನಮ್ಮದು. ಲೋಕಾರ್ಪಣೆಯಾದ ಸರಣಿಗಳಲ್ಲಿ ರಷ್ಯನ್ ಕತೆಗಳೂ ಇದ್ದವು. ಲೋಕಾರ್ಪಣೆ ಮಾಡಿದ ಹಾ.ಮಾ.ನಾಯಕರು “ಈ ಸಂಕಲನಗಳಲ್ಲಿ ದಸ್ತಯೇವ್ ಸ್ಕಿ, ತೋಲ್ಸ್ ತೋಯ್ ಎಂಬ ಪ್ರಯೋಗಗಳಿವೆ, ನಮಗೆಲ್ಲಾ ಸುಪರಿಚಿತವಾಗಿರುವ ದಾಸ್ತೋವಸ್ಕಿ, ಟಾಲ್ ಸ್ಟಾಯ್ ಎಂಬ ಪದಗಳನ್ನೇ ಪ್ರಯೋಗಿಸಬಹುದಿತ್ತು” ಎಂದು ಅಭಿಪ್ರಾಯಪಟ್ಟರು. ಅದಕ್ಕೆ ಉತ್ತರವಾಗಿ ನಿರಂಜನರು “ನಾಯಕರೇ, ನಮಗೆ ಹೆಚ್ಚು ಪರಿಚಯವಿರುವ ಹೆಸರುಗಳು ಎರಡೋ ಮೂರೋ. ಆದರೆ, ಈ ಎಲ್ಲ ದೇಶಗಳ ಕತೆಗಳಲ್ಲಿ ಅಲ್ಲಿನ ನೂರಾರು ಹೆಸರುಗಳಿವೆ. ಅಲ್ಲಿನ ಸ್ಥಳೀಯವಾದ ಮತ್ತು ಅವರು ಬಳಸುವ ಮೂಲ-ಪ್ರಯೋಗಗಳನ್ನೇ ಬಳಸಿದ್ದೇವೆ. ನಮಗೆ ಪರಿಚಯವಿರುವ ಕೆಲವು (ಅಪಭ್ರಂಶವಾಗಿಹೋಗಿರುವ) ಪ್ರಯೋಗಗಳನ್ನು ಮಾತ್ರ ಉಳಿಸಿಕೊಳ್ಳಲು ಹೇಗೆ ಸಾಧ್ಯ?” ಎಂದು ಪ್ರಶ್ನಿಸಿದರು.

ನನಗಂತೂ ನಿರಂಜನರ ಪರಿಕಲ್ಪನೆ ಅದ್ಭುತ ಎನಿಸಿತು.

ಕಾರಣಾಂತರಗಳಿಂದ ನಮ್ಮ ಮೇಲೆ ಮುಗಿಬಿದ್ದಿರುವ ಇಂಗ್ಲಿಷ್ ಭಾಷೆ ಮತ್ತು ರೋಮನ್ ಲಿಪಿಗಳ ಅಧ್ವಾನದ ಕಾರಣಕ್ಕೆ ಮೂಲ ಉಚ್ಚಾರಣೆಗಳಿಗೂ, ನಾವು ಬಳಸುತ್ತಿರುವ ಉಚ್ಚಾರಣೆಗಳಿಗೂ ಅರ್ಥಾತ್ ಸಂಬಂಧವೇ ಇಲ್ಲ ಎನ್ನುವಂತಾಗಿದೆ. ಹತ್ತಾರು ವರ್ಷಗಳಿಂದ ಸೀತಾರಾಮ ಗೋಯಲ್ ಅವರ “ವಾಯ್ಸ್ ಆಫ್ ಇಂಡಿಯಾ” ಸರಣಿಯ ಸಂಪಾದಕನಾಗಿ, ಈ ಗ್ರಂಥಗಳಲ್ಲಿ ಬರುವ ಸಾವಿರಾರು ಹೆಸರುಗಳಿಗೆ, ಸ್ಥಳನಾಮಗಳಿಗೆ ಮೂಲ ಉಚ್ಚಾರಣೆಗಳನ್ನು ದೊರಕಿಸಿಕೊಳ್ಳಲು, ಪ್ರತಿಬಾರಿಯೂ ಅಪಾರ ಪರಿಶ್ರಮ ಹಾಕಬೇಕಾಗುತ್ತಿದೆ. ಪ್ರತಿಬಾರಿಯೂ ನಿರಂಜನರಂತಹ ಧೀಮಂತರು ನೆನಪಾಗುತ್ತಾರೆ, ಎಂದರೆ ಉತ್ಪ್ರೇಕ್ಷೆಯಲ್ಲ.

ಉದಾಹರಣೆಗೆ, ಉತ್ತರ ಪ್ರದೇಶದ “ಅಮೇಠಿ” (ಸರಿಯಾದ ಪ್ರಯೋಗ) ಕ್ಷೇತ್ರವು, ಸಂಜಯ ಗಾಂಧಿ ಅವರ ಕಾಲದಿಂದಲೂ “ಖ್ಯಾತಿ” ಪಡೆದಿದೆ. ರೋಮನ್ ಲಿಪಿಯ ಅದ್ವಾನದ ಕಾರಣದಿಂದ (ನಾಲ್ಕೈದು ದಶಕಗಳಿಂದಲೂ) ಕನ್ನಡದ ಪತ್ರಿಕೆಗಳಲ್ಲಿ, ವಾಹಿನಿಗಳಲ್ಲಿ ಮತ್ತು ಪುಸ್ತಕಗಳಲ್ಲಿ ಬಹುಪಾಲು “ಅಮೇಥಿ” ಎಂದೇ ಬಳಸಲಾಗುತ್ತಿದೆ! ಅಂತೆಯೇ, ಚೀನಾ ದೇಶದ Sinkiang / Xinjiang ಅನ್ನು ಸಿಂಕಿಯಾಂಗ್ ಎಂದೇ ಅನೇಕ ಕಡೆ ಉಲ್ಲೇಖಿಸಲಾಗಿದೆಯಾದರೂ, ಸರಿಯಾದ ಪ್ರಯೋಗ “ಶಿಂಜಾಂಗ್” ಆಗಿದೆ.

ನಿರಂಜನ ಅವರು ಆ ಕಾಲದಲ್ಲಿ ಮೂಲ ಉಚ್ಚಾರಣೆಗಳಿಗಾಗಿ ಅದೆಷ್ಟು ಶ್ರಮ ಹಾಕಿದರೋ, ಏನೋ?! ಐವತ್ತು ವರ್ಷಗಳ ಹಿಂದೆಯೇ ನಿರಂಜನರು “ಕಿರಿಯರ ವಿಶ್ವಕೋಶ” ತಂದರು. ಇಂದಿನಂತೆ ಕಂಪ್ಯೂಟರ್, ಅಂತರಜಾಲ, ಫೋನ್, ಇತ್ಯಾದಿ ಇಲ್ಲದ ಆ ಕಾಲಘಟ್ಟದಲ್ಲಿ ನಿರಂಜನ ಅವರ ಸಂಗ್ರಹ, ಸಂಪಾದನೆ ಮತ್ತು ಪ್ರಸ್ತಾವನೆಗಳು ನಿಜವಾಗಿಯೂ ಸಾಹಸವೇ. ವಿವಿಧ ಪ್ರವರ್ಗಗಳ ಅವರ ಕೃತಿಗಳನ್ನು, ಸಂಪಾದಿತ ಕೃತಿಗಳನ್ನು ನೋಡುವಾಗ, ನಿರಂಜನರು ಅದೆಂತಹ ಅದ್ಭುತ ಸಾಧಕರು, ಎನಿಸಿ ಗೌರವ ಇನ್ನಷ್ಟು ಹೆಚ್ಚಾಗುತ್ತದೆ.

ಅಂದಿನ ಆ ಲೋಕಾರ್ಪಣೆ ಸಮಾರಂಭದಲ್ಲಿ, ನಿರಂಜನರು “ಇಡೀ ಜಗತ್ತಿನ ಇತಿಹಾಸವನ್ನು ಕನ್ನಡದಲ್ಲಿ ಬರೆಯಬೇಕು ಎನಿಸುತ್ತಿದೆ” ಎಂದು ಆಸೆಪಟ್ಟಿದ್ದರು. ವಿಲ್ ಡ್ಯೂರಾಂಟ್ ಅವರ “ದ ಸ್ಟೋರಿ ಆಫ್ ಸಿವಿಲೈಸೇಷನ್” ಬೃಹತ್ ಸಂಪುಟಗಳನ್ನು ನೋಡುವಾಗ, ನಿರಂಜನರದ್ದೇ ನೆನಪು. ಆರೋಗ್ಯ ಚೆನ್ನಾಗಿದ್ದಿದ್ದರೆ ಅಂತಹುದನ್ನು ಅವರು ಖಂಡಿತವಾಗಿಯೂ ಸಾಧಿಸುತ್ತಿದ್ದರು.

ಇದನ್ನೂ ಓದಿ: ನನ್ನ ದೇಶ ನನ್ನ ದನಿ ಅಂಕಣ: “ನೀವು ಭಾರತೀಯರೋ, ರಾಷ್ಟ್ರೀಯರೋ?” ಎಮರ್ಜೆನ್ಸಿಯ ಕರಾಳ ನೆನಪು

Continue Reading

ಅಂಕಣ

ದಶಮುಖ ಅಂಕಣ: ಮಳೆಯ ನಡುವೆ ಮರಳಿ ಶಾಲೆಗೆ!

ದಶಮುಖ ಅಂಕಣ: ಶಾಲೆಯ ಜೀವನ ಮುಗಿದು ಹಲವು ಕಾಲ ಸಂದಿದ್ದರೂ, ಅದರ ನೆನಪುಗಳು ಮಾತ್ರ ಹುಲ್ಲಿನಂತೆ… ಒಂದು ಸಣ್ಣ ಮಳೆಗೇ ಹಸಿರಾಗಿ ಬಿಡುತ್ತವೆ. ನಮ್ಮನೆಯ ಮಕ್ಕಳೋ, ಪಕ್ಕದ ಮನೆಯ ಪಾಪುವೋ ಶಾಲೆಯ ಬಸ್ಸಿಗೆ ಓಡುತ್ತಿದ್ದರೆ ಅವರೊಂದಿಗೆ ನಾವೂ ದಾಪುಗಾಲಿಡುತ್ತೇವೆ.

VISTARANEWS.COM


on

ದಶಮುಖ back to school
Koo

ಈ ಅಂಕಣವನ್ನು ಇಲ್ಲಿ ಆಲಿಸಿ:

dashamukha column logo

ದಶಮುಖ ಅಂಕಣ: ಶಾಲೆಗಳು (School) ಪ್ರಾರಂಭವಾಗಿ ಕೆಲದಿನಗಳಾಗಿವೆ. ಬಣ್ಣದ ಚಿಟ್ಟೆಗಳಂತೆ ಹಾರಾಡುತ್ತಾ ಶಾಲೆಯ ದಾರಿ ಹಿಡಿದಿರುವ (Back to School) ಮಕ್ಕಳನ್ನು (Children) ಕಾಣುತ್ತಿದ್ದಂತೆ ಮನಸ್ಸು ತುಂಬಿ ಬರುತ್ತದೆ. ಬೇಸಿಗೆ (Summer holidays) ರಜೆಯಲ್ಲಿ ಅವರೇನೇ ಮಾಡಿದರೂ, ಮಾಡದಿದ್ದರೂ… ರಜೆ ಕಳೆದಿದ್ದಂತೂ ಹೌದು. ಈಗ ಮರಳಿ ಶಾಲೆಗೆ. ಬಹುಪಾಲು ಮಕ್ಕಳು ಶಾಲೆಗೆ ಮರಳಿ ಹೋಗುತ್ತಿದ್ದರೆ, ಒಂದಿಷ್ಟು ಪುಟಾಣಿಗಳು ಮೊದಲ ಬಾರಿಗೆ ಶಾಲೆಗೆ ಹೋಗುವವರು. ಶಾಲೆಯ ಹಾದಿ ಹಿಡಿದಿರುವ ತಂತಮ್ಮ ಮಕ್ಕಳ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಷಕರು ತುಂಬಿಸಿಟ್ಟಿದ್ದಾರೆ. ಸಮವಸ್ತ್ರ (Uniform) ಹಾಕಿ ಹೊರಟವರು, ಅದಿನ್ನೂ ದೊರೆಯದೆ ಬಣ್ಣದ ಬಟ್ಟೆಗಳಲ್ಲೇ ಹೊರಟವರು, ಅಕ್ಕ-ಅಣ್ಣನ ಕೈ ಹಿಡಿದು ನಿಂತವರು, ಹೋಗಲು ಮನಸ್ಸಿಲ್ಲದ ಪೆಚ್ಚ ಮೋರೆಯವರು, ಫೋಟೊ ಇಷ್ಟವಿಲ್ಲದ ಗಂಭೀರ ಭಾವದವರು, ರಜೆಯ ಬೋರು ಕಳೆದ ಬಿಡುಗಡೆಯ ಭಾವದವರು, ಮೊದಲ ಬಾರಿಗೆ ಹೊರಟ ಅಳು ಮೋರೆಯವರು… ಅಂತೂ ಸಂಭ್ರಮ, ನಗು, ದುಗುಡ, ಆತಂಕ, ಅಳು ಮುಂತಾದ ಹಲವಾರು ಭಾವಗಳನ್ನು ಹೊತ್ತ ಪುಟ್ಟ ಬೊಂಬೆಗಳಂತೆ ಅವರೆಲ್ಲ ಕಂಡುಬರುತ್ತಾರೆ.

ಇದೇನು ಹೊಸದಲ್ಲ, ಪ್ರತಿವರ್ಷವೂ ಕಾಣುವಂಥದ್ದು. ಇವೆಲ್ಲ ಎಷ್ಟು ಹಳೆಯದ್ದೆಂದರೆ, ಬಾಲ್ಯದಲ್ಲಿ ನಾವೂ ಇದನ್ನೇ ಮಾಡಿದ್ದೆವಲ್ಲ ಎನಿಸಬಹುದು. ಶಾಲೆಗೆ ಹೋಗುವಾಗ ನಮಗೆಲ್ಲ ಈಗಿನಂತೆ ಪ್ರೀಸ್ಕೂಲ್‌ಗಳೆಲ್ಲ ಇರಲಿಲ್ಲ. ನೇರವಾಗಿ ಕಿಂಡರ್‌ಗಾರ್ಟ್‌ನ್‌ಗೆ ಹೋಗುವುದಾಗಿತ್ತು. ಅದಕ್ಕೆ ಬರುವವರೂ ಕಡಿಮೆಯೇ. ಒಂದನೇ ತರಗತಿಗೆ ಹೋದರೆ ಸಾಲದೇ ಎಂಬ ಮನಸ್ಥಿತಿ ಹಲವರಿಗಿತ್ತು ಆಗ. ಮನೆಯೊಂದನ್ನು ಶಾಲೆಯಾಗಿ ಮಾಡಿ, ನಮ್ಮ ಬಾಲವಾಡಿಯನ್ನು ನಡೆಸಲಾಗುತ್ತಿತ್ತು. ಬಾಲವಾಡಿಗೆ ಹೋದ ಮೊದಲ ದಿನ ನಾವೊಂದಿಷ್ಟು ಜನ ನಗುನಗುತ್ತಲೇ ಇದ್ದೆವು. ಆದರೆ ಇನ್ನೊಂದಿಷ್ಟು ಮಕ್ಕಳು ಚೀರಾಡಿ, ಭೋರಾಡಿ, ಉರುಳಾಡಿ, ಘಟ್ಟಿಸಿಕೊಂಡು ಅತ್ತಿದ್ದರು. ಸಮಾಧಾನ ಮಾಡುವ ಸಲುವಾಗಿ ಅವರಿಗೆಲ್ಲ ಒಂದೊಂದು ನಿಂಬೆಹುಳಿ ಪೆಪ್ಪರಮಿಂಟ್‌ ಸಿಕ್ಕಿದ್ದವು. ಮಾರನೇ ದಿನ ಅತ್ತವರ ಸಂಖ್ಯೆ ಹೆಚ್ಚಾಗಿತ್ತು, ನನ್ನನ್ನೂ ಸೇರಿ!

ನಮ್ಮ ಬಾಲವಾಡಿಯಲ್ಲಿ ಸಹಾಯಕ್ಕಿದ್ದವರನ್ನೂ ಸೇರಿಸಿದರೆ ಒಟ್ಟೂ ನಾಲ್ವರು ಸಿಬ್ಬಂದಿ ಇದ್ದರು. ಪಂಕಜಾ ಮಿಸ್‌, ಫಿರ್ದೂಸ್‌ ಮಿಸ್‌, ಸುಶೀಲಮ್ಮ ಆಂಟಿ ಮತ್ತು ಆಯಮ್ಮ ಆಂಟಿ- ಇವರಿಷ್ಟು ಮಂದಿ ಸೇರಿ, ಸುಮಾರು ೩೦ ಮಕ್ಕಳನ್ನು ಸುಧಾರಿಸುತ್ತಿದ್ದರು. ಕುಳಿತುಕೊಳ್ಳುವುದಕ್ಕೆಂದು ಬೆಂಚು- ಕುರ್ಚಿಗಳಲ್ಲ, ಮಕ್ಕಳಿಗೆಲ್ಲ ಪುಟ್ಟ ಕಾಲುಮಣೆಗಳು ಇರುತ್ತಿದ್ದವು. ಆ ಕಾಲುಮಣೆಗಳ ಅಡಿಗಿನ ಖಾಲಿ ಜಾಗವಂತೂ, ನಮ್ಮ ಬೆಣ್ಣೆ ಬಳಪಗಳು ಮತ್ತು ಸೀಮೆಸುಣ್ಣಗಳನ್ನು ಆಗಾಗ ತಿಂದು ಹಾಕುತ್ತಿತ್ತು. ಕೆಲವೊಮ್ಮೆ ಪಾಟಿಗಳೂ ಅದರಡಿಗೆ ಮರೆಯಾಗಿ, ಅದನ್ನು ಹುಡುಕುವುದಕ್ಕೆಂದು ಕಾಲುಮಣೆಗಳನ್ನು ಸರಿಸಿದಾಗ ಎಂದೋ ಕಣ್ಮರೆಯಾಗಿದ್ದ ಯಾರಾರದ್ದೋ ಬಣ್ಣಬಣ್ಣದ ಸೀಮೆ ಸುಣ್ಣಗಳೆಲ್ಲ- ಇಡಿಯಾಗಿ, ಪುಡಿಯಾಗಿ ದೊರೆಯುತ್ತಿದ್ದವು.

ನಮಗೆಲ್ಲ ಬಾಲವಾಡಿಯಲ್ಲಿ ಪುಸ್ತಕ-ಪೆನ್ಸಿಲ್ಲು ಇರಲಿಲ್ಲ. ಪೆನ್ಸಿಲ್ಲು, ರಬ್ಬರು, ಮೆಂಡರ್‌ಗಳನ್ನೆಲ್ಲ ನಾವು ಕಂಡಿದ್ದು ಪ್ರಾಥಮಿಕ ಶಾಲೆ ಆರಂಭವಾದ ಮೇಲೆಯೆ. ಅಲ್ಲಿಯವರೆಗೆ ಸ್ಲೇಟು-ಬಳಪದಲ್ಲೇ ಗೀಚುತ್ತಿದ್ದೆವು. ʻನನ್ನ ಪಾಟಿ ಕರಿಯದು, ಸುತ್ತುಕಟ್ಟು ಬಿಳಿಯದುʼ ಎಂಬ ಶಿಶುಗೀತೆ ಹೇಳಿದವರಿಗೆ, ಅದನ್ನು ಬಳಸಿಯೂ ಗೊತ್ತಿದ್ದೀತು. ಹಾಗಂತ ಪ್ಲಾಸ್ಟಿಕ್‌ ಮಣಿಗಳ ಪಾಟಿ ಇರುತ್ತಿತ್ತು ಕೆಲವರ ಬಳಿ. ಯಾರದ್ದೋ ಸ್ಲೇಟಿನಲ್ಲಿ ಬರೆದಿದ್ದನ್ನು ಇನ್ಯಾರೊ ಅಳಿಸುವುದು, ಯಾರದ್ದೋ ಬಟ್ಟೆ ತಾಗಿ, ಬರೆದಿದ್ದೆಲ್ಲ ತನ್ನಷ್ಟಕ್ಕೆ ಒರೆಸಿ ಹೋಗುವುದು, ಅದಕ್ಕಾಗಿ ʻಹೋʼ ಎಂದು ಅತ್ತು ರಂಪ ಮಾಡುವುದು, ಹಾಗೆ ಅಳಿಸಿಹೋಗಬಾರದೆಂದು ಸೀಮೆ ಸುಣ್ಣವನ್ನು ನೀರಲ್ಲಿ ಅದ್ದಿಕೊಂಡು ಬರೆಯುವುದು, ಹಾಗೆ ಬರೆದಿದ್ದನ್ನು ಅಳಿಸಲೇ ಆಗದೆ ʻಥೂʼ ಎಂದು ಎಂಜಲು ಉಗಿದು ಅಳಿಸುವುದು… ಇಂಥವೆಲ್ಲ ಬಾಲವಾಡಿಯ ದಿನಗಳ ಮಾಮೂಲಿ ಪ್ರಕ್ರಿಯೆ.

ಅಂದಿನ ಬಾಲವಾಡಿಯ ಜಗಳಗಳೂ ಇಂದಿನ ಹಾಗೆಯೇ, ಯಾವ ಕಾರಣಕ್ಕೆ ಬೇಕಿದ್ದರೂ ಹುಟ್ಟುತ್ತಿದ್ದವು. ತೊಟ್ಟ ಅಂಗಿಯ ಚುಂಗನ್ನು ಪಕ್ಕದವರು ಜಗ್ಗಿದರು ಎನ್ನುವುದರಿಂದ ಹಿಡಿದು, ಬಳಪ ಮುರಿದರು, ಮೊಣಕೈಯಲ್ಲಿ ತಿವಿದರು, ಜುಟ್ಟೆಳೆದರು, ಸ್ಲೇಟು ಮುಟ್ಟಿದರು ಎನ್ನುವವರೆಗೆ ಯಾವುದೇ ಕಾರಣಕ್ಕೂ ಹೊಡೆದಾಟ ಶುರುವಾಗುತ್ತಿತ್ತು. ಮನೆಯಲ್ಲಿ ಅತಿ ಮುದ್ದಿನಿಂದ ಬೆಳೆದವರು, ಬಾಲವಾಡಿಯಲ್ಲೂ ಹಠ ಮಾಡಿ, ಪೆಟ್ಟು ತಿಂದು, ಅತ್ತು ವಾಂತಿ ಮಾಡಿದ ಉದಾಹರಣೆಗಳಿದ್ದವು. ಮಕ್ಕಳ ಉಳಿದೆಲ್ಲ ಚಾಕರಿಯ ಜೊತೆಗೆ ಬಾಲವಾಡಿಯ ಆಯಮ್ಮ ಆಂಟಿಗೆ ಇಂಥ ಸ್ವಚ್ಛತೆಗೆ ಕೆಲಸಗಳೂ ಗಂಟು ಬೀಳುತ್ತಿದ್ದವು.

ಒಮ್ಮೆ ಬಾಲವಾಡಿ ಮುಗಿದ ಮೇಲೆ ಮುಂದಿನ ತರಗತಿಗಳಲ್ಲಿ, ಶಾಲೆಯ ಮೊದಲ ದಿನ ಅಷ್ಟೊಂದು ಕಷ್ಟ ಎನಿಸಿರಲಿಲ್ಲ. ಆದರೂ ಕೆಲವು ಮಕ್ಕಳಿಗೆ ಎರಡೇಟು ಬಿಗಿದು ಪಾಲಕರು ಬಿಟ್ಟು ಹೋಗುವ ದೃಶ್ಯಗಳು ಅಲ್ಲಲ್ಲಿ ಕಾಣುತ್ತಲೇ ಇರುತ್ತಿದ್ದವು. ಶಾಲೆಯ ಮುಖ ಕಾಣುತ್ತಿದ್ದಂತೆ, ʻಹೋಗಲೊಲ್ಲೆʼ ಎಂದು ರಸ್ತೆಯಲ್ಲೇ ಬಿದ್ದು ಉರುಳಾಡುವ ಮಕ್ಕಳ ಚಿತ್ರಗಳು ಈಗಲೂ ನೆನಪಿಗೆ ಬರುತ್ತವೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಶಾಲೆಯ ಮೊದಲ ದಿನವೆಂದರೆ ಹಬ್ಬದ ವಾತಾವರಣವನ್ನೇ ನಿರ್ಮಿಸಲಾಗುತ್ತಿದೆ. ಶಾಲೆಯ ಆವರಣವನ್ನು ತಳಿರು-ತೋರಣ, ಬಾಳೆ ಕಂಬಗಳಿಂದ ಅಲಂಕರಿಸಿ, ಮಕ್ಕಳಿಗೆಲ್ಲ ಆರತಿ ಎತ್ತಿ ಬರಮಾಡಿಕೊಂಡು, ಮಿಠಾಯಿ ಹಂಚುವುದೋ ಅಥವಾ ಸಿಹಿಯೂಟ ಉಣಿಸುವುದನ್ನು ಕಾಣಬಹುದು. ಕೆಲವು ಶಾಲೆಗಳಲ್ಲಿ ಮಕ್ಕಳನ್ನು ಎತ್ತಿನ ಗಾಡಿಯ ಮೇಲೆ, ಟ್ರಾಕ್ಟರ್‌ಗಳ ಮೇಲೆ ಮೆರವಣಿಗೆಯ ಮೂಲಕ ಶಾಲೆಗೆ ಕರೆದೊಯ್ದ ಸುದ್ದಿಗಳಿವೆ. ಹಿಂದೆ ಶಾಲೆಗಳನ್ನು ಕರೆಯುತ್ತಿದ್ದುದೇ ʻಶಾಲೆಮನೆʼಗಳೆಂದು. ಹಿಂದಲ್ಲ, ಇಂದಿಗೂ ಮಕ್ಕಳು ಮನೆಗೆ ಹೋದಷ್ಟೇ ನಿರುಮ್ಮಳವಾಗಿ ಶಾಲೆಗೆ ಹೋಗಬೇಕೆಂಬ ಕಳಕಳಿ ನಿಜಕ್ಕೂ ಶ್ಲಾಘನೆಗೆ ಅರ್ಹ.

Maharashtra proposed to change School timings to ensure children get enough sleep

ನಮ್ಮಲ್ಲಿ ಮಾತ್ರವಲ್ಲ, ಹಲವಾರು ದೇಶಗಳಲ್ಲಿ ʻಬ್ಯಾಕ್‌ ಟು ಸ್ಕೂಲ್‌ʼ ಎಂಬುದು ಸಂಭ್ರಮದ ಸಮಯ. ಇದಕ್ಕಾಗಿ ಬಹುತೇಕ ಅಂಗಡಿ-ಮಳಿಗೆಗಳಲ್ಲಿ ʻಬ್ಯಾಕ್‌ ಟು ಸ್ಕೂಲ್‌ʼ ರಿಯಾಯ್ತಿಗಳು ರಾರಾಜಿಸುತ್ತವೆ. ಪೆನ್ನು, ಪೆನ್ಸಿಲ್ಲು, ಇರೇಸರ್‌ಗಳಿಂದ ಹಿಡಿದು ಬಣ್ಣದ ಪೆನ್ಸಿಲ್ಲುಗಳು, ಕ್ರೇಯಾನ್‌, ಚಿತ್ರಕಲೆಯ ತರಹೇವಾರಿ ಉಪಕರಣಗಳು, ನೋಟ್ ಪುಸ್ತಕಗಳು, ಶಾಲೆಯ ಬ್ಯಾಗು, ಊಟದ ಡಬ್ಬಿ, ನೀರಿನ ಬಾಟಲಿಗಳು, ಶೂಗಳು, ವಸ್ತ್ರಗಳು, ಕ್ಯಾಲ್ಕುಲೇಟರ್‌, ಲ್ಯಾಪ್‌ಟಾಪ್‌… ಹೀಗೆ, ಶಾಲೆಯ ಮಕ್ಕಳು ಮತ್ತು ಶಿಕ್ಷಕರಿಗೆ ಬೇಕಾಗುವ ಲೆಕ್ಕವಿಲ್ಲದಷ್ಟು ಸಾಮಗ್ರಿಗಳು ʻಸೇಲ್‌ʼ ಎಂಬ ಹಣೆಪಟ್ಟಿ ಹೊತ್ತು ಕುಳಿತಿರುತ್ತವೆ. ಇದೇ ಸಮಯದಲ್ಲಿ, ಉಪಯೋಗಿಸಲು ಯೋಗ್ಯ ಸ್ಥಿತಿಯಲ್ಲೇ ಇರುವ ಶಾಲೆಯ ಸಾಮಗ್ರಿಗಳ ‌ʻಗರಾಜ್‌ ಸೇಲ್ʼ ಸಹ ಕಂಡುಬರುತ್ತದೆ. ಆ ವಸ್ತುಗಳ ಮಾಲೀಕರಿಗೆ ಮನೆಯಲ್ಲಿ ಜಾಗ ಖಾಲಿಯಾಯಿತು, ಜೊತೆಗೆ ನಾಲ್ಕು ಕಾಸೂ ಕೈಗೆ ಬಂತು; ಹೊಸದನ್ನು ಖರೀದಿಸಲು ಅನುಕೂಲ ಇಲ್ಲದವರಿಗೆ ಕಡಿಮೆ ಖರ್ಚಿನಲ್ಲಿ ಅಗತ್ಯ ವಸ್ತುಗಳೂ ದೊರೆತವು- ಉಪಾಯ ಒಳ್ಳೆಯದಲ್ಲವೇ? ನಮ್ಮಲ್ಲಿ… ಇವನ್ನೆಲ್ಲ ಯೋಚಿಸುವುದೂ ಕಷ್ಟ.

ಇದನ್ನೂ ಓದಿ: ದಶಮುಖ ಅಂಕಣ: “ಮಧುಮಾಸವೆ ಅಡಿ ಇಡುತಿದೆ ಹೊಸವರ್ಷದ ಬೆಳಗೆ”

ಇನ್ನೂ ಒಂದು ಕುತೂಹಲ ಬಹುದಿನಗಳವರೆಗೆ ಬಾಲ್ಯದಲ್ಲಿ ಕಾಡಿದ್ದಿತ್ತು. ಜೂನ್‌ 1ರಂದು ಅಷ್ಟೆಲ್ಲಾ ಜನರ ಬರ್ತ್‌ಡೇ ಇರುವುದಕ್ಕೆ ಹೇಗೆ ಸಾಧ್ಯ ಎಂಬುದು! ಪ್ರತಿ ಕ್ಲಾಸಿನಲ್ಲಿ ಇರುತ್ತಿದ್ದ 60-70 ಮಕ್ಕಳಲ್ಲಿ, ನಾಲ್ಕಾರು ಜನರಾದರೂ ಜೂನ್‌ 1ಕ್ಕೆ ಹುಟ್ಟಿದವರು ಇರುತ್ತಿದ್ದರು. ನಮ್ಮ ಕೆಲವು ಟೀಚರ್‌ಗಳು ತಾವೂ ಜೂನ್‌ 1ಕ್ಕೇ ಹುಟ್ಟಿದವರೆಂದು ಹೇಳಿ ನಕ್ಕಾಗ, ಅದೊಂದೇ ದಿನ ಯಾಕಾಗಿ ಅಷ್ಟೊಂದು ಜನ ಹುಟ್ಟುತ್ತಾರೆ ಎಂಬ ಕುತೂಹಲ ಮೂಡಿತ್ತು. ಹುಟ್ಟಿದ ದಿನಾಂಕ ಸ್ಪಷ್ಟವಾಗಿ ಗೊತ್ತಿಲ್ಲದವರೆಲ್ಲ, ಶಾಲೆಗೆ ಹೆಸರು ಕೊಡುವಾಗ ಅನಿವಾರ್ಯವಾಗಿ ಜೂನ್‌ 1ಕ್ಕೇ ಹುಟ್ಟುತ್ತಿದ್ದರು ಎಂಬುದು ತಿಳಿದಾಗ, ಟೀಚರ್‌ಗಳ ನಗೆಯೊಂದಿಗೆ ನಮ್ಮದೂ ಸೇರಿತ್ತು.

ಮಿತ್ರರ ಹುಟ್ಟಿದ ದಿನಗಳಂದು, ನಮ್ಮ ರಫ್‌ ಪುಸ್ತಕದ ಹಾಳೆಗಳನ್ನು ಹಿಂದಿನಿಂದ ಹರಿದು ಅವರಿಗಾಗಿ ತಯಾರಿಸುತ್ತಿದ್ದ ಗ್ರೀಟಿಂಗ್‌ ಕಾರ್ಡ್‌ಗಳು, ಪುಸ್ತಕದ ನಡುವೆ ಮರಿ ಹಾಕಲೆಂದು ಇರಿಸಿಕೊಳ್ಳುತ್ತಿದ್ದ ಹಕ್ಕಿಪುಕ್ಕಗಳು, ಸಾಮಾನ್ಯ ಇಂಕ್‌ ಪೆನ್ನುಗಳ ನಡುವೆ ರಾರಾಜಿಸುತ್ತಿದ್ದ ಹೀರೊ ಪೆನ್ನುಗಳು, ಆರೆಂಟು ಹನಿ ಇಂಕಿನ ಕಡ ಹಿಂತಿರುಗಿಸದ್ದಕ್ಕೆ ಹುಟ್ಟುತ್ತಿದ್ದ ಮುನಿಸು, ಫೌಂಟೆನ್‌ ಪೆನ್ನುಗಳಿಂದ ಚಿಮ್ಮುವ ಇಂಕಿಗೆ ಮುಂದಿನ ಬೆಂಚಿನವರ ವಸ್ತ್ರ ಕಲೆಯಾಗಿ ಏಳುತ್ತಿದ್ದ ಜಗಳ, ಮಧ್ಯಾಹ್ನ ಊಟದ ಡಬ್ಬಿಯ ಹಂಚಿಕೆಯಲ್ಲಿ ಆಗುತ್ತಿದ್ದ ರಾಜಿ ಪಂಚಾಯ್ತಿ, ಪ್ರತಿದಿನವೂ ಇರುತ್ತಿದ್ದ ಆಟದ ಪಿರಿಯೆಡ್‌, ಬೆತ್ತ ಹಿಡಿದೇ ಹುಟ್ಟಿದವರಂತೆ ಕಾಣುತ್ತಿದ್ದ ಪಿ.ಟಿ. ಮೇಷ್ಟ್ರು … ಹೆಕ್ಕುತ್ತಾ ಹೋದರೆ ಶಾಲೆಯ ಜೀವನದ ನೆನಪುಗಳು ಅಡಿಗಡಿಗೆ ಸಿಗುತ್ತವೆ.

ಶಾಲೆಯ ಜೀವನ ಮುಗಿದು ಹಲವು ಕಾಲ ಸಂದಿದ್ದರೂ, ಅದರ ನೆನಪುಗಳು ಮಾತ್ರ ಹುಲ್ಲಿನಂತೆ… ಒಂದು ಸಣ್ಣ ಮಳೆಗೇ ಹಸಿರಾಗಿ ಬಿಡುತ್ತವೆ. ನಮ್ಮನೆಯ ಮಕ್ಕಳೋ, ಪಕ್ಕದ ಮನೆಯ ಪಾಪುವೋ ಶಾಲೆಯ ಬಸ್ಸಿಗೆ ಓಡುತ್ತಿದ್ದರೆ ಅವರೊಂದಿಗೆ ನಾವೂ ದಾಪುಗಾಲಿಡುತ್ತೇವೆ… ಎಂದೋ ದಾಟಿ ಬಂದ ನಮ್ಮದೇ ಶಾಲೆಯ ಅಂಗಳಕ್ಕೆ. ಈಗ ನಿಮ್ಮ ಶಾಲೆಯ ದಿನಗಳು ನಿಮಗೂ ನೆನಪಾಗದಿದ್ದರೆ ಕೇಳಿ!

ಇದನ್ನೂ ಓದಿ: ದಶಮುಖ ಅಂಕಣ: ಮರುಳಿಗೆ ಅರಳುವ ಅರ್ಥಗಳನ್ನು ಹುಡುಕುತ್ತಾ…

Continue Reading
Advertisement
KAS
ಕರ್ನಾಟಕ5 mins ago

KAS: ಕೆಎಎಸ್‌ ಅಭ್ಯರ್ಥಿಗಳಿಗೆ ಗುಡ್‌ ನ್ಯೂಸ್;‌ ನೇಮಕಾತಿಗೆ ಅರ್ಜಿ ಸಲ್ಲಿಸಲು ವಿಶೇಷ ಅವಕಾಶ, ಇಲ್ಲಿದೆ ಮಾಹಿತಿ

Mid Day Meal
ದೇಶ55 mins ago

Mid Day Meal: ಮಕ್ಕಳ ಬಿಸಿಯೂಟದಲ್ಲೂ ಕಳ್ಳಾಟ, ವಿದ್ಯಾರ್ಥಿಗಳಿಗೆ ಸಿಗೋದು ಬರೀ ಅನ್ನ-ಅರಿಶಿಣ; Video ಇದೆ

Dr HS Shetty: Rs 7 crore spent on charity; Businessman Dr. HS Shetty
ಪ್ರಮುಖ ಸುದ್ದಿ1 hour ago

Dr HS Shetty : ದಾನಗಳಿಗಾಗಿಯೇ ವರ್ಷದಲ್ಲಿ 7 ಕೋಟಿ ರೂ. ವಿನಿಯೋಗ

Vasishtha Simha starrer VIP Kannada movie
ಕರ್ನಾಟಕ1 hour ago

Kannada New Movie: ಖ್ಯಾತ ಗಾಯಕಿ ಕೆ.ಎಸ್.ಚಿತ್ರಾ ಕಂಠಸಿರಿಯಲ್ಲಿ ವಸಿಷ್ಠ ಸಿಂಹ ಅಭಿನಯದ ‘ವಿಐಪಿ’ ಚಿತ್ರದ ಹಾಡು

Asia Cup 2024
ಪ್ರಮುಖ ಸುದ್ದಿ2 hours ago

Asia Cup 2024 : ಮಹಿಳಾ ಏಷ್ಯಾಕಪ್ ಟೂರ್ನಿಗೆ ಭಾರತ ತಂಡ ಪ್ರಕಟ

Viral Video
Latest2 hours ago

Viral Video: ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪ; ಪ್ರಾಂಶುಪಾಲರನ್ನು ಕುರ್ಚಿ ಸಹಿತ ಹೊರಗೆಳೆದ ಸಿಬ್ಬಂದಿ

Kashmir Encounter
ದೇಶ2 hours ago

Kashmir Encounter: ಕಾಶ್ಮೀರದಲ್ಲಿ ಸೇನೆ ಭರ್ಜರಿ ಬೇಟೆ; ನಾಲ್ವರು ಉಗ್ರರ ಹತ್ಯೆ, ಇಬ್ಬರು ಯೋಧರು ಹುತಾತ್ಮ

Viral Video
Latest2 hours ago

Viral Video : ಹೀಗೆಲ್ಲಾ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತಾರಾ…? ವಿಡಿಯೊ ನೋಡಿ

Viral News
Latest2 hours ago

Viral News: ಆಸ್ಪತ್ರೆಯಲ್ಲಿ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ವೇಳೆ ಅಚಾತುರ್ಯ; ದೃಷ್ಟಿ ಕಳೆದುಕೊಂಡ 16 ರೋಗಿಗಳು

Dengue cases in Karnataka
ಪ್ರಮುಖ ಸುದ್ದಿ2 hours ago

Dengue cases in Karnataka: ರಾಜ್ಯದಲ್ಲಿಂದು 175 ಡೆಂಗ್ಯೂ ಕೇಸ್‌ಗಳು ಪತ್ತೆ; ಸಕ್ರಿಯ ಪ್ರಕರಣಗಳ ಸಂಖ್ಯೆ 352ಕ್ಕೆ ಏರಿಕೆ!

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ5 hours ago

Karnataka Weather : ಚಾರಣಪ್ರಿಯರಿಗೆ ಶಾಕ್‌; ಭಾರಿ ಮಳೆಯಿಂದಾಗಿ ಈ ಜಾಗಗಳಿಗೆ ಟ್ರೆಕ್ಕಿಂಗ್‌ ನಿಷೇಧ

Murder case
ಯಾದಗಿರಿ7 hours ago

Murder case : ಯಾದಗಿರಿಯಲ್ಲಿ ಹಸುಗೂಸನ್ನು ಬಾವಿಗೆ ಎಸೆದು ಕೊಂದರು ಹಂತಕರು

karnataka Rain
ಮಳೆ8 hours ago

Karnataka Rain : ಭಾರಿ ಗಾಳಿ- ಮಳೆಗೆ ಹಾರಿದ ಅಂಗಡಿಯ ತಗಡು; ಮಾಗುಂಡಿ-ಬಾಳೆಹೊನ್ನೂರು ಮಾರ್ಗ ಬಂದ್

Food Poisoning
ರಾಯಚೂರು11 hours ago

Food Poisoning : ಮೊರಾರ್ಜಿ ವಸತಿ ಶಾಲೆ ಅವ್ಯವಸ್ಥೆ; ಊಟ ಸೇವಿಸಿದ 25ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ

Wild Animal Attack Elephant attack
ರಾಮನಗರ12 hours ago

Wild Animal Attack : ತೋಟದಲ್ಲಿ ನೀರು ಹಾಯಿಸುತ್ತಿದ್ದವನ ತುಳಿದು ಸಾಯಿಸಿದ ಆನೆ

karnataka Weather Forecast
ಮಳೆ17 hours ago

Karnataka Weather : ಕರಾವಳಿ, ಮಲೆನಾಡಿನಲ್ಲಿ ಇಂದು ನಾನ್‌ ಸ್ಟಾಪ್‌ ಮಳೆ; ಬೆಂಗಳೂರಲ್ಲಿ ಹೇಗೆ?

karnataka Weather Forecast
ಮಳೆ1 day ago

Karnataka Weather: ಧಾರಾಕಾರ ಮಳೆಗೆ ಜನರ ಒದ್ದಾಟ- ಸೇತುವೆಗಳು ಮುಳುಗಿ ಪರದಾಟ; ಶಾಲಾ-ಕಾಲೇಜುಗಳಿಗೆ ರಜೆ

Lovers Fighting
ಚಿಕ್ಕಬಳ್ಳಾಪುರ1 day ago

Lovers Fighting: ಪ್ರೀತಿಸಿ ಕೈಕೊಟ್ಟವನಿಗೆ ನಡುರಸ್ತೆಯಲ್ಲೇ ಚಳಿ ಬಿಡಿಸಿದ ಗರ್ಭಿಣಿ

Medical negligence
ದಾವಣಗೆರೆ1 day ago

Medical negligence: ಸಿಸೇರಿಯನ್ ಮಾಡುವಾಗ ಶಿಶುವಿನ ಮರ್ಮಾಂಗವನ್ನೇ ಕತ್ತರಿಸಿ ಸಾಯಿಸಿದ ವೈದ್ಯ!

karnataka rain
ಮಳೆ1 day ago

Karnataka Rain: ಮಳೆಗೆ ಮನೆಗಳಿಗೆ ನುಗ್ಗುತ್ತಿವೆ ಹಾವುಗಳು! ಕುಸಿದು ಬಿತ್ತು ಮನೆಗಳು

ಟ್ರೆಂಡಿಂಗ್‌