Snake Bite: ಈತನಿಗೆ ಒಂದೂವರೆ ತಿಂಗಳಲ್ಲಿ 6 ಬಾರಿ ಹಾವು ಕಚ್ಚಿದೆ! ಆದರೂ ಬಚಾವ್‌! - Vistara News

Latest

Snake Bite: ಈತನಿಗೆ ಒಂದೂವರೆ ತಿಂಗಳಲ್ಲಿ 6 ಬಾರಿ ಹಾವು ಕಚ್ಚಿದೆ! ಆದರೂ ಬಚಾವ್‌!

ಉತ್ತರ ಪ್ರದೇಶದ ಫತೇಪುರ್ ಜಿಲ್ಲೆಯ ಸೌರಾ ಗ್ರಾಮದ 24 ವರ್ಷದ ವಿಕಾಸ್ ದುಬೆ ಎಂಬ ಯುವಕನಿಗೆ ಒಂದೂವರೆ ತಿಂಗಳಲ್ಲಿ ಆರು ಬಾರಿ ಹಾವು ಕಚ್ಚಿದ್ದು, ಆತ ಪ್ರತಿ ಬಾರಿ ಹಾವಿನ ಕಡಿತದಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾನೆ. ಈತನಿಗೆ ಪದೇ ಪದೇ ಹಾವು ಕಚ್ಚಲು ಕಾರಣವೇನು ಎಂಬುದು ತಿಳಿದುಬಂದಿಲ್ಲ. ಆದರೆ ಹಾವು ಕಡಿತವು ಯಾವಾಗಲೂ ಶನಿವಾರ ಅಥವಾ ಭಾನುವಾರದಂದು ನಡೆಯುತ್ತದೆ ಮತ್ತು ಕಚ್ಚುವ ಮೊದಲು ಪ್ರತಿ ಬಾರಿಯೂ ತನಗೆ ಮುನ್ಸೂಚನೆ ಸಿಗುತ್ತಿತ್ತು ಎನ್ನುತ್ತಾನೆ ವಿಕಾಸ್ ದುಬೆ.

VISTARANEWS.COM


on

Snake Bite
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಹಾವುಗಳು ಎಲ್ಲೆಂದರಲ್ಲಿ ಕಂಡು ಬರುವುದು ಸಹಜ. ಕೆಲವು ಹಾವುಗಳ ವಿಷ ಕೂಡ ಜೀವಕ್ಕೆ ಬಹಳ ಅಪಾಯಕಾರಿ. ಹಾವಿನ ಬಗ್ಗೆ ಜನ ಸಾಮಾನ್ಯವಾಗಿ ಹೆಚ್ಚಿನ (Snake Bite) ಎಚ್ಚರ ವಹಿಸುತ್ತಾರೆ. ಕೃಷಿ ಕೆಲಸ ಮಾಡುವವರು ಕೂಡ ಸಾಮಾನ್ಯವಾಗಿ ಜೀವನದಲ್ಲಿ ಹೆಚ್ಚೆಂದರೆ ಒಂದು ಬಾರಿ ಹಾವು ಕಡಿತಕ್ಕೆ ಒಳಗಾಗಬಹುದು. ಇಲ್ಲೊಬ್ಬ ಯುವಕ ಒಂದೂವರೆ ತಿಂಗಳಿನಲ್ಲಿ ಹಾವಿನಿಂದ 6 ಬಾರಿ ಕಚ್ಚಿಸಿಕೊಂಡಿದ್ದಾನೆ. ಇದನ್ನು ಕೇಳಿದವರಿಗೆ ಆಶ್ಚರ್ಯವಾಗುವುದು ಖಂಡಿತ.

ಹೌದು. ಉತ್ತರ ಪ್ರದೇಶದ ಫತೇಪುರ್ ಜಿಲ್ಲೆಯ ಸೌರಾ ಗ್ರಾಮದ 24 ವರ್ಷದ ವಿಕಾಸ್ ದುಬೆ ಎಂಬ ಯುವಕನಿಗೆ ಒಂದೂವರೆ ತಿಂಗಳಲ್ಲಿ ಆರು ಬಾರಿ ಹಾವು ಕಚ್ಚಿದ್ದು, ಆತ ಪ್ರತಿ ಬಾರಿ ಹಾವಿನ ಕಡಿತದಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾನೆ ಎನ್ನಲಾಗಿದೆ. ಆತ ಜೂನ್ 2 ಮತ್ತು ಜುಲೈ 6ರ ನಡುವೆ ಮನೆಯ ಬಳಿ ಆರು ಬಾರಿ ಹಾವುಗಳಿಂದ ಕಚ್ಚಿಸಿಕೊಂಡಿದ್ದಾನೆ. ಮೊದಲ ಬಾರಿ ಜೂನ್ 2ರಂದು ವಿಕಾಸ್ ದುಬೆ ತನ್ನ ಮನೆಯಲ್ಲಿ ಮಲಗಿದ್ದಾಗ ಹಾಸಿಗೆಯಲ್ಲಿದ್ದ ಹಾವಿನಿಂದ ಕಚ್ಚಿಸಿಕೊಂಡಿದ್ದಾನೆ. ಆಗ ಅವರನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಯಿತು.

ಅದೇರೀತಿ ಮತ್ತೊಮ್ಮೆ ಮನೆಯ ಬಳಿ ಮೂರು ಬಾರಿ ಹಾವಿನಿಂದ ಕಚ್ಚಿಸಿಕೊಂಡು ಚಿಕಿತ್ಸೆ ಪಡೆದಿದ್ದನು. ನಾಲ್ಕನೇ ಬಾರಿ ಮನೆಯ ಬಳಿ ಹಾವು ಕಚ್ಚಿದ ನಂತರ, ದುಬೆಗೆ ತನ್ನ ಮನೆಯನ್ನು ಬಿಟ್ಟು ಬೇರೆಡೆ ಉಳಿಯಲು ಸಲಹೆ ನೀಡಲಾಯಿತು. ಹಾಗಾಗಿ ಆತ ರಾಧಾನಗರದಲ್ಲಿರುವ ತನ್ನ ಚಿಕ್ಕಮ್ಮನ ಮನೆಗೆ ಹೋಗಿದ್ದನು, ಆದರೆ ಅಲ್ಲಿ ಆತ ಮತ್ತೆ ಐದನೇ ಬಾರಿಗೆ ಹಾವಿನ ಕಡಿತಕ್ಕೆ ಒಳಗಾದ. ನಂತರ ದುಬೆಯ ಪೋಷಕರು ಅವನನ್ನು ಮನೆಗೆ ಕರೆತಂದರು. ಜುಲೈ 6 ರಂದು, ಅವರ ಮೇಲೆ ಮತ್ತೊಮ್ಮೆ ಹಾವು ದಾಳಿ ಮಾಡಿತು. ಇದರಿಂದ ಅವನ ಸ್ಥಿತಿ ಹದಗೆಟ್ಟಿತು. ಅವನ ಆರೋಗ್ಯದ ಬಗ್ಗೆ ಭಯಗೊಂಡ ಪೋಷಕರು ಅವನನ್ನು ಆಸ್ಪತ್ರೆಗೆ ದಾಖಲಿಸಿದರು. ಅಲ್ಲಿ ಅವನಿಗೆ ಚಿಕಿತ್ಸೆ ನೀಡಲಾಯಿತು. ಈಗ ಆತ ಚೇತರಿಸಿಕೊಂಡಿದ್ದಾನೆ ಎಂಬುದಾಗಿ ತಿಳಿದುಬಂದಿದೆ.

ಈತನಿಗೆ ಪದೇ ಪದೇ ಹಾವು ಕಚ್ಚಲು ಕಾರಣವೇನು ಎಂಬುದು ತಿಳಿದುಬಂದಿಲ್ಲ. ಆದರೆ ಹಾವು ಕಡಿತವು ಯಾವಾಗಲೂ ಶನಿವಾರ ಅಥವಾ ಭಾನುವಾರದಂದು ನಡೆಯುತ್ತದೆ. ಕಚ್ಚುವ ಮೊದಲು ಪ್ರತಿ ಬಾರಿಯೂ ತನಗೆ ಮುನ್ಸೂಚನೆ ಸಿಗುತ್ತಿತ್ತು ಎಂದು ವಿಕಾಸ್ ದುಬೆ ಆಶ್ಚರ್ಯಕರ ವಿಚಾರವನ್ನು ತಿಳಿಸಿದ್ದಾನೆ.

ಇದನ್ನೂ ಓದಿ: ಸಿನಿಮೀಯ ಲವ್‌ ಸ್ಟೋರಿ; ಜೀವ ಉಳಿಸಿಕೊಳ್ಳಲು ಎಸ್‍ಪಿ ಕಚೇರಿಗೆ ಓಡಿದ ಪ್ರೇಮಿಗಳು! ವಿಡಿಯೊ ನೋಡಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

Children Mobile Addiction: ನಮ್ಮ ಮಕ್ಕಳು ಎಷ್ಟು ಹೊತ್ತು ಮೊಬೈಲ್‌ ನೋಡಬಹುದು?

Children Mobile Addiction: ಮಕ್ಕಳಿಗೆ ದಿನದ ಸ್ಕ್ರೀನ್‌ ಸಮಯ ಎಷ್ಟಿರಬೇಕು? ಚಿಣ್ಣರು ಕೇಳುವಷ್ಟು ಹೊತ್ತೇ? ಹೆತ್ತವರಿಗೆ ಅನುಕೂಲ ಅಥವಾ ಪುರುಸೊತ್ತು ಆಗುವಲ್ಲಿಯವರೆಗೇ? ದಿನಕ್ಕಿಷ್ಟು ಹೊತ್ತು ಎಂದು ನಿಗದಿ ಮಾಡುವುದು ಸೂಕ್ತವೇ? ಹೆಚ್ಚು ಸಮಯ ಪರದೆಗೆ ಅಂಟಿಕೊಂಡಿದ್ದರೆ ಸಮಸ್ಯೆಯೇನು? ಇಂಥ ಹಲವು ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ. ಮಕ್ಕಳ ಕೈಯಲ್ಲಿ ಸದಾ ಗೆಜೆಟ್‌ ಇದ್ದರೆ ಏನಾಗುತ್ತದೆ ಎಂಬುದನ್ನು ಅರ್ಥ ಮಾಡಿಸುವ ಮಾಹಿತಿ ಇಲ್ಲಿದೆ.

VISTARANEWS.COM


on

By

Children Mobile Addiction
Koo

ಮಕ್ಕಳೆಂದರೆ ಹಾರಾಡುವ (Children Mobile Addiction) ಬಣ್ಣದ ಚಿಟ್ಟೆಗಳೆಂಬ (butterfly) ಭಾವ ಇತ್ತೀಚೆಗೆ ಕಡಿಮೆಯಾಗುತ್ತಿದೆ. ಕೂತಲ್ಲೇ ಅಂಟಿಕೊಂಡು, ಕರೆದರೂ ಕೇಳದ ಸ್ಥಿತಿಯಲ್ಲಿ, ಮಾತು ಬಾರದವರಂತೆ, ಎದುರಿನವರ ಪರಿಚಯವೂ ಇಲ್ಲದಂತೆ, ಹಸಿವೆ-ನೀರಡಿಕೆಗಳ ಪರಿವೆಯಿಲ್ಲದಂತೆ ಕೂತಿರುತ್ತಾರೆ… ಕೈಯಲ್ಲೊಂದು ಮೊಬೈಲು (mobile) ಹಿಡಿದು.

ಅದನ್ನು ಅವರ ಕೈಯಿಂದ ಕಿತ್ತರೆ ಟ್ಯಾಬ್‌ ಹಿಡಿಯುತ್ತಾರೆ, ಅದನ್ನೂ ಕಸಿದುಕೊಂಡರೆ ಎಲ್ಲಿ ಲ್ಯಾಪ್‌ಟಾಪ್‌ ಸಿಗುವಂತಿದೆ ನೋಡುತ್ತಾರೆ, ಕಡೆಗೆ ಟಿವಿಯಾದರೂ ಬೇಕು. ಅಂತೂ ಕೈಯಲ್ಲೊಂದು ಸ್ಕ್ರೀನ್‌ ಇಲ್ಲದಿದ್ದರೆ ಮಕ್ಕಳು ತಾವಾಗಿರುವುದಿಲ್ಲ ಎಂಬಂತೆ ಭಾಸವಾಗುತ್ತದೆ. ಅವರನ್ನೇ ಬಿಟ್ಟರೆ ಎಚ್ಚರ ಇದ್ದಷ್ಟೂ ಹೊತ್ತು ಕೈಯಲ್ಲಿ ಗೆಜೆಟ್‌ ಹಿಡಿದೇ ಇರುತ್ತಾರೆ. ಆದರೆ ಚಿಕ್ಕ ಮಕ್ಕಳು, ಅಂದರೆ ನಾಲ್ಕು-ಐದು ವರ್ಷದ ಒಳಗಿನ ಮಕ್ಕಳು ದಿನಕ್ಕೆ ಎಷ್ಟು ಹೊತ್ತು ಸ್ಕ್ರೀನ್‌ ನೋಡಬಹುದು?

ಜಾರಿಕೊಳ್ಳುತ್ತಿದ್ದಾರೆ ಹೆತ್ತವರು

ಹೆತ್ತವರ ವಿಷಯಕ್ಕೆ ಬಂದರೆ, ಬಹಳ ಮಂದಿಗೆ ಮಕ್ಕಳು ತಮ್ಮಷ್ಟಕ್ಕೆ ತಾವಿರುವುದು ಅನುಕೂಲವೇ. ಅವರು ಏನಾದರೂ ಮಾಡಿಕೊಳ್ಳಲಿ, ತಮ್ಮ ತಂಟೆಗೆ ಬಾರದಿದ್ದರೆ ಸಾಕು ಎಂಬ ಮನಸ್ಥಿತಿ ಹೆಚ್ಚಿವರದ್ದು. ಇದಕ್ಕೆ ಕಾರಣಗಳೂ ಇಲ್ಲದಿಲ್ಲ.

ದಿನವಿಡೀ ದುಡಿದು ಹೈರಾಣಾಗಿ ಬಂದ ದೊಡ್ಡವರಿಗೂ ತಮ್ಮದೇ ಆದ ಸಮಯ ಬೇಕು. ಮನೆಯದ್ದೇ ಆದ ನಿತ್ಯದ ಕೆಲಸಗಳನ್ನು ನಿಭಾಯಿಸಬೇಕು. ಮಾರನೇ ದಿನಕ್ಕೆ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಇದಿಷ್ಟರ ನಡುವೆ ಮಕ್ಕಳನ್ನೂ ಸುಧಾರಿಸಬೇಕೆಂದರೆ…? ಹಾಗಾಗಿ ಸುಲಭದ ಉಪಾಯವೆಂಬಂತೆ ಅವರ ಕೈಗೊಂದು ಗೆಜೆಟ್‌ ಕೊಟ್ಟರೆ ಮುಗಿಯಿತು ಸಮಸ್ಯೆ. ಆದರಿದು ಸಾಧುವೇ? ಮಕ್ಕಳ ದೈಹಿಕ, ಮಾನಸಿಕ ಬೆಳವಣಿಗೆಗಳ ಗತಿಯೇನು?ಮನೆಯಲ್ಲಿ ದೊಡ್ಡವರೂ ಕೈಯಲ್ಲಿರುವ ಮೊಬೈಲ್‌ ಗೀರುವುದನ್ನೇ ಮಕ್ಕಳು ಸದಾ ಕಾಣುವಾಗ ಅದನ್ನು ತಪ್ಪು ಎಂದು ಹೇಳುವುದು ಹೇಗೆ? ಅದು ಒಳ್ಳೆಯದಲ್ಲ ಎಂದು ಅರ್ಥ ಮಾಡಿಸುವುದು ಹೇಗೆ?

Children Mobile Addiction


ಏನಾಗುತ್ತದೆ?

ಮಕ್ಕಳ ಕೈಯಲ್ಲಿ ಸದಾ ಗೆಜೆಟ್‌ ಇದ್ದರೆ ಏನಾಗುತ್ತದೆ ಎಂಬುದನ್ನು ಮೊದಲು ಅರ್ಥ ಮಾಡಿಕೊಳ್ಳೋಣ. ದಿನಕ್ಕೆ ಮಿತಿಮೀರಿದ ಸ್ಕ್ರೀನ್‌ ಸಮಯದಿಂದಾಗಿ ಮಕ್ಕಳಲ್ಲಿ ಏಕಾಗ್ರತೆಯ ತೀವ್ರ ಸಮಸ್ಯೆ ಉಂಟಾಗುತ್ತದೆ. ಸಾಮಾಜಿಕ ಸಂಬಂಧಗಳು ಕಳಚಿ ಒಂಟಿತನದ ಭಾವನೆ ಎಳವೆಯಿಂದಲೇ ಬರುತ್ತದೆ. ಗಮನ ಸೆಳೆಯುವುದಕ್ಕಾಗಿ ರಚ್ಚೆ ಹಿಡಿಯುವ, ಅತಿಯಾದ ಚಂಚಲತೆಯನ್ನು ತೋರಿಸುತ್ತಾರೆ.

ಗಮನ ಕೊರತೆಯ ಅಸ್ವಸ್ಥತೆ (hyperactivity and attention deficit disorder) ಎಂದು ಕರೆಯಲಾಗುವ ಈ ಸಮಸ್ಯೆಯು ಮೆದುಳಿನ ಸಾಮರ್ಥ್ಯವನ್ನು ಕುಗ್ಗಿಸುತ್ತದೆ. ಈ ಎಲ್ಲವುಗಳ ಫಲವಾಗಿ, ಈ ಮಕ್ಕಳಲ್ಲಿ ಋಣಾತ್ಮಕ ವರ್ತನೆಗಳು ಕಂಡುಬರುತ್ತವೆ. ಶಿಸ್ತಿಲ್ಲದ, ಯಾವ ನಿಬಂಧನೆಗಳಿಗೂ ಒಳಪಡದ, ನಂಟುಗಳನ್ನೂ ಹಚ್ಚಿಕೊಳ್ಳದ ಬೀಡುಬೀಸಾದ ವರ್ತನೆ ಚಿಕ್ಕಂದಿನಲ್ಲೇ ಕಾಣಿಸಿಕೊಳ್ಳುತ್ತದೆ.

ದೃಷ್ಟಿದೋಷ

ಕೈಯಲ್ಲಿ ಹಿಡಿದು ನೋಡುವಂಥ ಗೆಜೆಟ್‌ಗಳನ್ನು ಸಾಮಾನ್ಯವಾಗಿ 2 ಅಡಿಗಿಂತ ಕಡಿಮೆ ಅಂತರಲ್ಲಿ ಇರಿಸಿಕೊಂಡು ವಾಚಿಸುತ್ತಾರೆ ಮಕ್ಕಳು. ಇದರಿಂದ ದೃಷ್ಟಿದೋಷವೂ ಹೆಚ್ಚುತ್ತದೆ. ಮೊದಲಿಗಿಂತ ಅತಿ ಹೆಚ್ಚಿನ ಪ್ರಮಾಣದಲ್ಲಿ ಬಾಲವಾಡಿಯ ಮಕ್ಕಳ ಕಣ್ಣಿಗೆ ಕನ್ನಡಕಗಳು ಬಂದಿರುವುದನ್ನು ಕಾಣಬಹುದು.

ದೈಹಿಕ ಆರೋಗ್ಯ

ಕೂತಲ್ಲೇ ಕೂತು ಕಳೆಯುವುದಾದರೆ ದೇಹ ಸ್ವಾಸ್ಥ್ಯ ಹಾಳಾಗುವುದೇ ತಾನೇ? ಮಕ್ಕಳೆಂದರೆ ಚಟುವಟಿಕೆಯ ಚಿಲುಮೆಗಳಂತೆ ಇರಬೇಕಾದವರು. ಓಡುವವರನ್ನು ಹಿಡಿದು ಕೂರಿಸುವುದು ಹೇಗೆ ಎಂದು ಹೆತ್ತವರು ಚಿಂತಿಸಬೇಕು. ಆದರೆ ಈಗಿನ ದಿನಗಳಲ್ಲಿ ಕೂತವರನ್ನು ಎಬ್ಬಿಸಿ ಆಡುವುದಕ್ಕೆ ಹೊರಗೆ ಕಳಿಸುವುದು ಹೇಗೆ ಎಂಬ ಚಿಂತೆಯಲ್ಲಿದ್ದರೆ ಸಹ.

Children Mobile Addiction


ಮಿತಿ ಎಷ್ಟು?

ದೊಡ್ಡ ಮಕ್ಕಳಿಗೆ ಶಾಲೆಯಿಂದ ಬರುವ ಹೋಮ್ ವರ್ಕ್‌ ಸಲುವಾಗಿ ಒಂದಿಷ್ಟು ಹೊತ್ತು ಪರದೆಯ ಮುಂದೆ ಕೂರುವುದು ಅನಿವಾರ್ಯವಾಗಬಹುದು. ಅದರ ಹೊರತಾಗಿ ಎಷ್ಟು ಹೊತ್ತು ಪರದೆಗೆ ಅಂಟಿಕೊಂಡಿರುತ್ತಾರೆ ಎಂಬುದನ್ನು ಗಮನಿಸಿ.

ಇದನ್ನೂ ಓದಿ: Smartphone Charging Tips: ನಿಮ್ಮ ಸ್ಮಾರ್ಟ್ ಪೋನ್ ಬ್ಯಾಟರಿ ಹೆಚ್ಚು ಬಾಳಿಕೆ ಬರಲು ಹೀಗೆ ಮಾಡಿ

ಶಾಲೆಯ ದಿನಗಳಲ್ಲಿ ಅನಗತ್ಯ ಸ್ಕ್ರೀನ್‌ ಸಮಯ ಇಲ್ಲದಿದ್ದರೇ ಒಳಿತು. ರಜೆಯ ದಿನಗಳಲ್ಲಿ ಪರದೆಯ ಪರಿಮಿತಿಯನ್ನು ಒಂದು ತಾಸಿಗೆ ನಿಗದಿಗೊಳಿಸಿ. ಬಾಲವಾಡಿ ಅಥವಾ ಅದಕ್ಕಿಂತ ಚಿಕ್ಕ ಮಕ್ಕಳಿಗೆ ದಿನಕ್ಕೆ ಒಂದು ತಾಸಿನ ಸ್ಕ್ರೀನ್‌ ಸಮಯ ಸಾಕಾಗುತ್ತದೆ. ಉಳಿದ ಸಮಯವನ್ನು ಅರ್ಥಪೂರ್ಣವಾಗಿ ಕಳೆಯುವುದು ಹೇಗೆ ಎಂಬುದನ್ನು ಹೆತ್ತವರೇ ನಿರ್ಧರಿಸಬೇಕಾಗುತ್ತದೆ.

Continue Reading

ಕರ್ನಾಟಕ

Assembly Session: ಖಾಸಗಿ ಕಂಪನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗ; ಏನೆಲ್ಲ ಅರ್ಹತೆ ಇರಬೇಕು?

Assembly Session: ಖಾಸಗಿ ಕ್ಷೇತ್ರಗಳಲ್ಲಿ ದುಡಿಯುವ ಕನ್ನಡಿಗರಿಗೆ ಉದ್ಯೋಗ ಮೀಸಲು ನೀಡುವ ವಿಧೇಯಕವನ್ನು ವಿಧಾನ ಮಂಡಲದಲ್ಲಿ ಮಂಡಿಸಲು ಸೋಮವಾರ ನಡೆದ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಸಭೆಯಲ್ಲಿ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ. ಇದೇ ಅಧಿವೇಶನದಲ್ಲಿ ವಿಧೇಯಕವನ್ನು ಮಂಡಿಸಿ ಅಂಗೀಕಾರ ಪಡೆಯುವುದಾಗಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ತಿಳಿಸಿದ್ದಾರೆ.

VISTARANEWS.COM


on

Assembly Session Job reservation for Kannadigas in private sectors Cabinet meeting approves bill
Koo

ಬೆಂಗಳೂರು: ಖಾಸಗಿ ಕ್ಷೇತ್ರಗಳಲ್ಲಿ ದುಡಿಯುವ ಕನ್ನಡಿಗರಿಗೆ ಉದ್ಯೋಗ ಮೀಸಲು ನೀಡುವ ವಿಧೇಯಕವನ್ನು ವಿಧಾನ ಮಂಡಲದಲ್ಲಿ ಮಂಡಿಸಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಸಭೆಯಲ್ಲಿ (Assembly Session) ಈ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ. ಇದೇ ಅಧಿವೇಶನದಲ್ಲಿ ವಿಧೇಯಕವನ್ನು ಮಂಡಿಸಿ ಅಂಗೀಕಾರ ಪಡೆಯುವುದಾಗಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ತಿಳಿಸಿದ್ದಾರೆ.

‘ದಿ ಕರ್ನಾಟಕ ಸ್ಟೇಟ್ ಎಂಪ್ಲಾಯ್ಮೆಂಟ್ ಆಫ್ ಲೋಕಲ್ ಕ್ಯಾಡಿಡೇಟ್ಸ್ ಇನ್ ದಿ ಇಂಡಸ್ಟ್ರೀಸ್, ಫ್ಯಾಕ್ಟರೀಸ್ ಆ್ಯಂಡ್ ಲೋಕಲ್ ಎಷ್ಟಾಬ್ಲಿಷ್‌ಮೆಂಟ್ ಬಿಲ್-2024 ವಿಧೇಯಕದಂತೆ ಮ್ಯಾನೇಜ್‌ಮೆಂಟ್ ಹುದ್ದೆಗಳು ಶೇ.50 ಹಾಗೂ ನಾನ್ ಮ್ಯಾನೇಜ್‌ಮೆಂಟ್ ಶೇ.75 ರಷ್ಟು ಹುದ್ದೆಗಳು ಸ್ಥಳೀಯರಿಗೆ ಮೀಸಲಿಡಲಾಗುತ್ತದೆ.

ಇದನ್ನೂ ಓದಿ: Assembly Session: ಕಾರ್ಮಿಕ ಇಲಾಖೆಯಿಂದ ಸಿನಿ ಕಾರ್ಮಿಕರಿಗೆ ಭರ್ಜರಿ ಗಿಫ್ಟ್!

ಕರ್ನಾಟಕದಲ್ಲಿಯೇ ಹುಟ್ಟಿದವರು, ಕರ್ನಾಟಕದಲ್ಲಿ 15 ವರ್ಷದಿಂದ ವಾಸಿಸುತ್ತಿರುವವರು, ಕನ್ನಡ ಓದಲು, ಬರೆಯಲು ಮತ್ತು ಮಾತನಾಡಲು ಬರುವವರು, ನೋಡಲ್ ಏಜೆನ್ಸಿ ನಡೆಸುವ ಕನ್ನಡ ಪರೀಕ್ಷೆಯಲ್ಲಿ ಪಾಸಾದವರನ್ನು ಸ್ಥಳೀಯರು ಎಂದು ಪರಿಗಣಿಸಲಾಗುವುದು. ಮ್ಯಾನೇಜ್‌ಮೆಂಟ್‌ನಲ್ಲಿ ಸೂಪರ್‌ವೈಸ‌ರ್, ಮ್ಯಾನೇಜಿರಿಯಲ್, ಟೆಕ್ನಿಕಲ್, ಆಪರೇಷನಲ್, ಆಡಳಿತ ಸೇರಿ ಉನ್ನತ ಹುದ್ದೆಗಳಲ್ಲಿ ಶೇ.50 ಉದ್ಯೋಗ ಸ್ಥಳೀಯರಿಗೆ ಮೀಸಲಿಡಲಾಗುವುದು. ಇನ್ನು ನಾನ್-ಮ್ಯಾನೇಜ್‌ಮೆಂಟ್ನಲ್ಲಿ ಕ್ಲರ್ಕ್‌ಗಳು, ಕೌಶಲ, ಕೌಶಲ ರಹಿತ ಹಾಗೂ ಅರೆಕೌಶಲ, ಗುತ್ತಿಗೆ ನೌಕರ ಹಾಗೂ ಐಟಿ ಹುದ್ದೆಗಳಲ್ಲಿ ಶೇ.75 ಮೀಸಲು ಸ್ಥಳೀಯರಿಗೆ ನೀಡುವ ವಿಧೇಯಕ ಇದಾಗಿದೆ.

ಸ್ಥಳೀಯರಿಗೆ ಉದ್ಯೋಗ ನೀಡದಿದ್ದರೆ ದಂಡ ವಿಧಿಸುವ ಅಂಶವನ್ನೂ ವಿಧೇಯಕದಲ್ಲಿ ಸೇರಿಸಲಾಗಿದೆ. ಕನಿಷ್ಠ 10 ಸಾವಿರ ರೂ. ಹಾಗೂ 25 ಸಾವಿರ ರೂ.ಗಳ ವರೆಗೆ ದಂಡ ವಿಸ್ತರಣೆ ಮಾಡಲು ಅವಕಾಶ ನೀಡಲಾಗುತ್ತದೆ. ಆ ನಂತರವೂ ಉದ್ಯೋಗ ನೀಡದೇ ಹೋದರೆ ದಿನಕ್ಕೆ 100 ರೂ. ದಂಡ ವಿಧಿಸಲಾಗುತ್ತದೆ.

ಇದನ್ನೂ ಓದಿ: Lakshmi Hebbalkar: ವಿಶೇಷ ಶಾಲೆಗಳ ಶಿಕ್ಷಕರ ವೇತನ ಪರಿಷ್ಕರಣೆಗೆ ಅಗತ್ಯ ಕ್ರಮ: ಹೆಬ್ಬಾಳಕರ್ ಭರವಸೆ

ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗ ಸಿಗಬೇಕು. ಈ ನಿಟ್ಟಿನಲ್ಲಿ ವಿಧೇಯಕವು ಮಹತ್ವದ ಪಾತ್ರ ವಹಿಸಲಿದೆ. ಕನ್ನಡಿಗ ನೌಕರರ ಜೀವನ ಭದ್ರತೆಗೆ ಇದು ಸಹಾಯವಾಗಲಿದೆ ಎಂದು ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ತಿಳಿಸಿದ್ದಾರೆ.

Continue Reading

ಫ್ಯಾಷನ್

Dog Ethnicwear: ನಾಯಿಗಳಿಗೂ ಬಂತು ಎಥ್ನಿಕ್‌ ವೇರ್ಸ್! ಎಷ್ಟು ಮುದ್ದಾಗಿ ಕಾಣಿಸುತ್ತಿವೆ!

Dog Ethnicwear: ಇದೀಗ ಮುದ್ದು ಶ್ವಾನಗಳು ಕೂಡ ಗ್ರ್ಯಾಂಡ್‌ ಸಮಾರಂಭಗಳಲ್ಲಿ ಸಿಂಗಾರಗೊಳ್ಳುತ್ತಿವೆ. ಇವಕ್ಕೆ ಪೂರಕ ಎಂಬಂತೆ ನಾನಾ ಪೆಟ್‌ ಶಾಪ್‌ಗಳು ಡಿಸೈನರ್‌ವೇರ್‌ಗಳನ್ನು ಬಿಡುಗಡೆಗೊಳಿಸಿವೆ. ಅವುಗಳಲ್ಲಿ ಯಾವ್ಯಾವ ಬಗೆಯವು ಬೇಡಿಕೆ ಪಡೆದುಕೊಂಡಿವೆ ಎಂಬುದರ ಕುರಿತಂತೆ ಡಾಗ್‌ ಸ್ಟೈಲಿಸ್ಟ್‌ಗಳು ಇಲ್ಲಿ ವಿವರಿಸಿದ್ದಾರೆ.

VISTARANEWS.COM


on

By

Dog Ethnicwear
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು

ಶ್ವಾನಗಳು ಇತ್ತೀಚೆಗೆ (Dog Ethnicwear) ಎಥ್ನಿಕ್‌ವೇರ್‌ಗಳಲ್ಲಿ ಮಿಂಚುತ್ತಿವೆ. ಅಂಬಾನಿ ಫ್ಯಾಮಿಲಿಯ (ambani family) ಮುದ್ದು ಶ್ವಾನಗಳಾದ (dog) ಹ್ಯಾಪಿ ಹಾಗೂ ಪಾಪ್‌ಕಾರ್ನ್‌ ವೆಡ್ಡಿಂಗ್‌ ಔಟ್‌ಫಿಟ್‌ನಲ್ಲಿ (Wedding outfit) ಕಾಣಿಸಿಕೊಂಡು ಸುದ್ದಿಯಾಗಿರುವುದು ಎಲ್ಲರಿಗೂ ಗೊತ್ತೇ ಇದೆ. ಇದಕ್ಕೆ ಪೂರಕ ಎಂಬಂತೆ, ಇದೀಗ ಮುದ್ದು ಶ್ವಾನಗಳು ಕೂಡ ಗ್ರ್ಯಾಂಡ್‌ ಸಮಾರಂಭಗಳಲ್ಲಿ ಸಿಂಗಾರಗೊಳ್ಳುತ್ತಿವೆ. ಮನುಷ್ಯರಂತೆ ಉಡುಪನ್ನು ಧರಿಸಿ ಮೆರೆಯುತ್ತಿವೆ.

ಪೆಟ್‌ ಶಾಪ್‌ಗಳಲ್ಲೂ ಲಭ್ಯ

ಪೆಟ್‌ ಶಾಪ್‌ಗಳು ಡಾಗ್ಗಿಗಳ ನಾನಾ ಬಗೆಯ ವೈವಿಧ್ಯಮಯ ಡಿಸೈನರ್‌ವೇರ್‌ಗಳನ್ನು ಬಿಡುಗಡೆಗೊಳಿಸಿವೆ. ಪುಟ್ಟ ನಾಯಿಮರಿಯಿಂಡಿದು ದೊಡ್ಡ ಗೋಲ್ಡನ್‌ ರಿಟ್ರಿವರ್‌ನಂತಹ ನಾಯಿ ಕೂಡ ಧರಿಸಬಹುದಾದ ಎಥ್ನಿಕ್‌ವೇರ್‌ಗಳನ್ನು ಲಾಂಚ್‌ ಮಾಡಿವೆ.

ಆಯಾ ಜಾತಿಯ ಶ್ವಾನಗಳಿಗೆ ಅನುಗುಣವಾಗಿ ಎಥ್ನಿಕ್‌ವೇರ್‌ಗಳ ಆಯ್ಕೆ ಮಾಡಬಹುದು ಎನ್ನುವ ಡಾಗ್‌ ಸ್ಟೈಲಿಸ್ಟ್ ರಾಕೇಶ್‌, ಈ ಕುರಿತಂತೆ ಒಂದಿಷ್ಟು ಮಾಹಿತಿ ನೀಡಿದ್ದಾರೆ.

Dog Ethnicwear
ಚಿತ್ರಕೃಪೆ: ಇನ್ ಸ್ಟಾಗ್ರಾಮ್


ಟ್ರೆಂಡಿಯಾಗಿರುವ ಡಾಗ್‌ ಎಥ್ನಿಕ್‌ವೇರ್ಸ್

ಸ್ಯಾಟಿನ್‌, ವೆಲ್ವೆಟ್‌, ಕಾಟನ್‌, ಕಾಟನ್‌ ಸಿಲ್ಕ್‌ ಹೀಗೆ ನಾನಾ ಫ್ಯಾಬ್ರಿಕ್‌ನ ಫ್ರಾಕ್‌ ಶೈಲಿಯ ಡ್ರೆಸ್‌ಗಳು, ಹೆಣ್ಣು ನಾಯಿಮರಿಗಳಿಗೆ ನಾನಾ ಡಿಸೈನ್‌ನಲ್ಲಿ ಬಿಡುಗಡೆಗೊಂಡಿದ್ದರೇ, ಗಂಡು ನಾಯಿಮರಿಗಳಿಗೆ ನೋಡಲು ಕೋಟ್‌ ಎಂದೆನಿಸುವ ವೇಸ್ಟ್ಕೋಟ್‌ ಶೈಲಿಯಂತವು ಬಂದಿವೆ ಎನ್ನುತ್ತಾರೆ ಪೆಟ್‌ ಶಾಪ್‌ವೊಂದರ ಮಾಲೀಕರು.

Dog Ethnicwear
ಚಿತ್ರಕೃಪೆ: ಇನ್ ಸ್ಟಾಗ್ರಾಮ್


ಕಸ್ಟಮೈಸ್ಡ್ ಡಾಗ್‌ ಎಥ್ನಿಕ್‌ವೇರ್ಸ್

ಇನ್ನು ಸಾಕಷ್ಟು ಬೋಟಿಕ್‌ಗಳು ಮುದ್ದು ನಾಯಿಮರಿಗಳಿಗೂ ಎಥ್ನಿಕ್‌ವೇರ್‌ಗಳನ್ನು ಹೊಲಿದು ಡಿಸೈನ್‌ ಮಾಡಿಕೊಡುತ್ತಿವೆ. ಆಯಾ ಕುಟುಂಬದವರ ಸಮಾರಂಭಗಳಿಗೆ ಅನುಗುಣವಾಗಿ ಡಿಸೈನ್‌ ಮಾಡಿ, ರೆಡಿ ಮಾಡಿಕೊಡುತ್ತವೆ.

Dog Ethnicwear
ಚಿತ್ರಕೃಪೆ: ಇನ್ ಸ್ಟಾಗ್ರಾಮ್


ಆನ್‌ಲೈನ್‌ನಲ್ಲಿ ಡಾಗ್‌ ಡಿಸೈನರ್‌ವೇರ್ಸ್

ಇನ್ನು, ಆನ್‌ಲೈನ್‌ಗಳಲ್ಲಂತೂ ಲೆಕ್ಕವಿಲ್ಲದಷ್ಟೂ ಬಗೆಯ ಡಾಗ್‌ ಎಥ್ನಿಕ್‌ವೇರ್‌ಗಳು ದೊರೆಯುತ್ತಿವೆ. ಅದರಲ್ಲೂ ವೆಡ್ಡಿಂಗ್‌, ಬರ್ತ್ ಡೇ ಸೆಲೆಬ್ರೇಷನ್‌ ಹೀಗೆ ನಾನಾ ಸಮಾರಂಭಗಳಿಗೆ ಮ್ಯಾಚ್‌ ಆಗುವಂತಹ ಕ್ಯೂಟ್‌ ಡಿಸೈನರ್‌ವೇರ್‌ಗಳು ಇಲ್ಲಿ ಲಭ್ಯ ಎನ್ನುತ್ತಾರೆ ಡಾಗ್‌ ಪ್ರೇಮಿ ಜೀವಿತಾ ಹಾಗೂ ದೀಕ್ಷಾ.

ಇದನ್ನೂ ಓದಿ: Summer Fashion: ಉರಿ ಬಿಸಿಲಿನಲ್ಲಿ ಗಮನ ಸೆಳೆವ ನಟ ಶೈನ್‌ ಶೆಟ್ಟಿಯ ಕೂಲ್‌ ಸ್ಮೈಲ್‌ & ಸ್ಟೈಲ್‌!

· ಆನ್‌ಲೈನ್‌ನಲ್ಲಿ ಕೆಲವೊಮ್ಮೆ ಆಫರ್‌ಗಳಲ್ಲಿ ಕಡಿಮೆ ಬೆಲೆಯಲ್ಲಿ ದೊರೆಯುತ್ತವೆ.
· ನಿಮ್ಮ ಶ್ವಾನದ ಸೈಜ್‌ಗೆ ತಕ್ಕಂತೆ ಖರೀದಿಸಿ. ದೊಗಲೆಯಾದಲ್ಲಿ ಚೆನ್ನಾಗಿ ಕಾಣಿಸುವುದಿಲ್ಲ.
· ಗ್ರ್ಯಾಂಡ್‌ ಆಗಿರುವಂಥವು ಚೆನ್ನಾಗಿ ಕಾಣಿಸುತ್ತವೆ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)
Continue Reading

ಗ್ಯಾಜೆಟ್ಸ್

SIM Cards: ಮಿತಿ ಮೀರಿ ಮೊಬೈಲ್‌ ಸಿಮ್ ಹೊಂದಿದ್ದೀರಾ? ಕಾದಿದೆ ಭಾರಿ ದಂಡ, ಶಿಕ್ಷೆ!

ಒಬ್ಬರ ಹೆಸರಿನಲ್ಲಿ ಹಲವಾರು ಸಿಮ್ ಕಾರ್ಡ್‌ಗಳನ್ನು (SIM Cards) ಹೊಂದಿರುವುದು ಗಂಭೀರ ಸಮಸ್ಯೆಗಳಿಗೆ ಕಾರಣವಾಗಬಹುದು. ಈ ನಿಟ್ಟಿನಲ್ಲಿ ಟೆಲಿಕಾಂ ಕಾನೂನುಗಳು ನಿಗದಿಪಡಿಸಿದ ಮಿತಿಯನ್ನು ಮೀರಿದರೆ ಭಾರೀ ದಂಡವನ್ನು ಎದುರಿಸಬೇಕಾಗಬಹುದು. ನಮ್ಮ ಹೆಸರಿನಲ್ಲಿ ಇರುವ ಸಿಮ್‌ ಕಾರ್ಡ್‌ಗಳನ್ನು ಪತ್ತೆ ಹಚ್ಚುವುದು ಹೇಗೆ? ಇಲ್ಲಿದೆ ಉಪಯುಕ್ತ ಮಾಹಿತಿ.

VISTARANEWS.COM


on

By

SIM Cards
Koo

ನವದೆಹಲಿ: ಹಲವಾರು ಸಿಮ್ ಕಾರ್ಡ್‌ಗಳು ನಿಮ್ಮ (SIM Cards) ಹೆಸರಲ್ಲಿದೆಯೆ? ಹಾಗಿದ್ದರೆ ಎಚ್ಚರಿಕೆ (alert) ಸೂಚನೆ ಒಂದಿದೆ ಗಮನಿಸಿ. ಕಾನೂನು ಪ್ರಕಾರ ನಿಗದಿಪಡಿಸಿದ ಸಿಮ್‌ಗಿಂತ ಹೆಚ್ಚಿನ ಸಂಖ್ಯೆಯ ಸಿಮ್ ನಿಮ್ಮ ಬಳಿ ಇದ್ದರೆ ಭಾರಿ ದಂಡ (fine) ಜೊತೆಗೆ ಜೈಲು ಶಿಕ್ಷೆಗೂ ಗುರಿಯಾಗಬೇಕಾಬಹುದು. ನಿಮ್ಮ ಹೆಸರಲ್ಲಿ ಬೇರೆ ಯಾರೋ ಸಿಮ್‌ ಕಾರ್ಡ್‌ಗಳನ್ನು ಬಳಸುತ್ತಿದ್ದರೆ ಕೂಡಲೇ ಪತ್ತೆ ಹಚ್ಚಿ ಆದಷ್ಟು ಬೇಗ ನಿಷ್ಕ್ರಿಯಗೊಳಿಸಿ.

ಈಗಿನ ಡಿಜಿಟಲ್ ಯುಗದಲ್ಲಿ, ಗೌಪ್ಯತೆ ಮತ್ತು ಸುರಕ್ಷತೆಯನ್ನು ಕಾಪಾಡಿಕೊಳ್ಳುವುದು ಬಹುಮುಖ್ಯ. ಅದಕ್ಕಾಗಿ ವಿಶೇಷವಾಗಿ ಅನಧಿಕೃತ ಸಿಮ್ ಕಾರ್ಡ್ ವಿತರಣೆಯ ಬಗ್ಗೆ ಕಾಳಜಿಯೊಂದಿಗೆ ಮೊಬೈಲ್ ಸಂಪರ್ಕಗಳನ್ನು ಎಚ್ಚರಿಕೆಯಿಂದ ನಿರ್ವಹಿಸುವುದು ಕೂಡ ಮುಖ್ಯವಾಗಿದೆ. ಒಬ್ಬರ ಹೆಸರಿನಲ್ಲಿ ಹಲವಾರು ಸಿಮ್ ಕಾರ್ಡ್‌ಗಳನ್ನು ಹೊಂದಿರುವುದು ಗಂಭೀರ ಸಮಸ್ಯೆಗಳಿಗೆ ಕಾರಣವಾಗಬಹುದು. ಈ ನಿಟ್ಟಿನಲ್ಲಿ ಟೆಲಿಕಾಂ ಕಾನೂನುಗಳು ನಿಗದಿಪಡಿಸಿದ ಮಿತಿಯನ್ನು ಮೀರಿದರೆ ಭಾರೀ ದಂಡವನ್ನು ಎದುರಿಸಬೇಕಾಗಬಹುದು.

ಏನು ಶಿಕ್ಷೆ?

2023ರ ದೂರಸಂಪರ್ಕ ಕಾಯ್ದೆಯ ಪ್ರಕಾರ, ಒಬ್ಬ ವ್ಯಕ್ತಿಯು ಎಷ್ಟು ಸಿಮ್ ಕಾರ್ಡ್‌ಗಳನ್ನು ಹೊಂದಬಹುದು ಎಂಬುದರ ಕುರಿತು ಕಟ್ಟುನಿಟ್ಟಾದ ನಿಯಮಗಳಿವೆ. ಈ ನಿಯಮಗಳನ್ನು ಉಲ್ಲಂಘಿಸುವುದು ಜೈಲು ಶಿಕ್ಷೆಗೆ ಕಾರಣವಾಗಬಹುದು. ಮೊದಲ ಅಪರಾಧಕ್ಕಾಗಿ 50,000 ರೂ. ವರೆಗೆ ದಂಡ ವಿಧಿಸಬಹುದು ಮತ್ತು ಅ ನಂತರದ ಅಪರಾಧಗಳಿಗೆ 2 ಲಕ್ಷ ರೂ. ದಂಡ ತೆರಬೇಕಾಗುತ್ತದೆ.

SIM Cards


ಗರಿಷ್ಠ ಎಷ್ಟು ಸಿಮ್ ಹೊಂದಿರಬಹುದು?

ಅನುಮತಿಸಲಾದ ಗರಿಷ್ಠ ಸಂಖ್ಯೆಯ ಸಿಮ್ ಕಾರ್ಡ್‌ಗಳು ಪ್ರದೇಶವಾರು ಬದಲಾಗುತ್ತವೆ. ರಾಷ್ಟ್ರೀಯವಾಗಿ ಪ್ರತಿ ವ್ಯಕ್ತಿಗೆ ಒಂಬತ್ತು ಸಿಮ್ ಕಾರ್ಡ್‌ಗಳ ಮಿತಿ ಇದೆ. ಆದರೆ ಜಮ್ಮು ಮತ್ತು ಕಾಶ್ಮೀರ, ಅಸ್ಸಾಂ ಮತ್ತು ಕೆಲವು ಈಶಾನ್ಯ ಪ್ರದೇಶಗಳಲ್ಲಿ ಇದು ಆರಕ್ಕೆ ಸೀಮಿತವಾಗಿದೆ.

ಸಿಮ್ ಕಾರ್ಡ್ ಮಾಲೀಕತ್ವದ ಪ್ರಸ್ತುತ ನಿಯಮಗಳ ಬಗ್ಗೆ ಮಾಹಿತಿ ನೀಡುವುದು ಮುಖ್ಯವಾಗಿದೆ ಮತ್ತು ಆನ್‌ಲೈನ್‌ನಲ್ಲಿ ನಿಮ್ಮ ಹೆಸರಿನಲ್ಲಿ ಎಷ್ಟು ಸಿಮ್ ಕಾರ್ಡ್‌ಗಳನ್ನು ನೋಂದಾಯಿಸಲಾಗಿದೆ ಎಂಬುದನ್ನು ನಿಯಮಿತವಾಗಿ ಪರಿಶೀಲಿಸುವುದು ಅಷ್ಟೇ ಅಗತ್ಯವಾಗಿದೆ.

ಹೇಗೆ ಪರಿಶೀಲಿಸುವುದು?

ಆಧಾರ್ ಕಾರ್ಡ್‌ಗೆ ನೀಡಲಾದ ಸಿಮ್ ಕಾರ್ಡ್‌ಗಳ ಸಂಖ್ಯೆಯನ್ನು ಆನ್‌ಲೈನ್ ಮೂಲಕ ನಾವೇ ಪರೀಕ್ಷಿಸಿಕೊಳ್ಳಬಹುದು. ಇದಕ್ಕಾಗಿ TAFCOP ವೆಬ್‌ಸೈಟ್‌ಗೆ ಭೇಟಿ ನೀಡಿ. ಬಳಿಕ ಅಲ್ಲಿ ಇರುವ ಬಾಕ್ಸ್ ನಲ್ಲಿ ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ.

ಬಳಿಕ ಒದಗಿಸಲಾಗುವ ಕ್ಯಾಪ್ಚಾ ಕೋಡ್ ಅನ್ನು ನಮೂದಿಸಿ. ಅನಂತರ ಒಟಿಪಿ ಬಟನ್ ಕ್ಲಿಕ್ ಮಾಡಿ.
ಒಟಿಪಿ ನೀವು ನಮೂದಿಸಿರುವ ಮೊಬೈಲ್ ಸಂಖ್ಯೆಗೆ ಬರುತ್ತದೆ. ಅದನ್ನು ಬಳಿಕ ಅಲ್ಲಿ ನಮೂದಿಸಿ ಮತ್ತು ಲಾಗಿನ್ ಬಟನ್ ಮೇಲೆ ಕ್ಲಿಕ್ ಮಾಡಿ.

ಇದನ್ನೂ ಓದಿ: BSNL New Plan: 395 ದಿನಗಳ ವ್ಯಾಲಿಡಿಟಿಯ ಬಿಎಸ್‌ಎನ್‌ಎಲ್ ಹೊಸ ಪ್ಲ್ಯಾನ್‌; ಜಿಯೊ, ಏರ್‌ಟೆಲ್‌ಗೆ ಸೆಡ್ಡು

ನಿಮ್ಮ ಹೆಸರಿನಲ್ಲಿ ನೋಂದಾಯಿಸಲಾಗಿರುವ ಮೊಬೈಲ್ ಸಂಖ್ಯೆಗಳ ಪಟ್ಟಿಯನ್ನು ಕಾಣಬಹುದು. ಎಲ್ಲಾ ಸಕ್ರಿಯ ಮೊಬೈಲ್ ಸಂಖ್ಯೆಗಳು ನಿಮಗೆ ಅಥವಾ ನಿಮ್ಮ ಸಂಬಂಧಿಕರಿಗೆ ಸೇರಿವೆ ಎಂಬುದನ್ನು ಪರಿಶೀಲಿಸಿ ಮತ್ತು ಖಚಿತಪಡಿಸಿಕೊಳ್ಳಿ.

ಯಾವುದೇ ಗುರುತಿಸದ ಸಂಖ್ಯೆಗಳನ್ನು ಕಂಡುಕೊಂಡರೆ, ವೆಬ್‌ಸೈಟ್ ಮೂರು ಆಯ್ಕೆಗಳನ್ನು ನೀಡುತ್ತದೆ. ನನ್ನ ಸಂಖ್ಯೆ ಅಲ್ಲ, ಅಗತ್ಯವಿಲ್ಲ ಮತ್ತು ಬೇಕಾಗಿದೆ. ಇದರಲ್ಲಿ ನಿಮ್ಮ ಅಗತ್ಯ ಯಾವುದು ಎಂಬುದನ್ನು ತಿಳಿಸಿ. ನನ್ನ ಸಂಖ್ಯೆ ಅಲ್ಲ ಅಥವಾ ಅಗತ್ಯವಿಲ್ಲ ಎಂಬುದನ್ನು ಕ್ಲಿಕ್ ಮಾಡಿದರೆ ನಿಮ್ಮ ಹೆಸರಿನಲ್ಲಿರುವ ಅನಗತ್ಯ ಸಿಮ್‌ಗಳು ನಿಷ್ಕ್ರಿಯಗೊಳ್ಳುತ್ತವೆ.

Continue Reading
Advertisement
Mosaic of Modernity art exhibition by Gallery G in Bengaluru
ಕರ್ನಾಟಕ5 mins ago

Bengaluru News: ಬೆಂಗಳೂರಿನಲ್ಲಿ ಗ್ಯಾಲರಿ ಜಿ ಯಿಂದ ‘ಮೊಸಾಯಿಕ್ ಆಫ್ ಮಾಡರ್ನಿಟಿ’ ಕಲಾ ಪ್ರದರ್ಶನ

Viral Video
ವೈರಲ್ ನ್ಯೂಸ್7 mins ago

Viral Video: ಪಕ್ಷದ ಕಾರ್ಯಕರ್ತನಿಗೆ ರಪ್‌ ಅಂತಾ ಕೆನ್ನೆಗೆ ಬಾರಿಸಿದ ಟಿಎಂಸಿ ನಾಯಕಿ; ವಿಡಿಯೋ ಇದೆ

T20 World Cup 2024
ಪ್ರಮುಖ ಸುದ್ದಿ47 mins ago

T20 World Cup 2024 : 30 ಎಸೆತಕ್ಕೆ 30 ರನ್​ ಇದ್ದಾಗ ದಿಕ್ಕೇ ತೋಚದಂತಾಗಿದ್ದೆ! ಆ ತಲ್ಲಣ ವಿವರಿಸಿದ ಶರ್ಮಾ

Assembly Session
ಕರ್ನಾಟಕ1 hour ago

Assembly Session: ಅಧಿಕಾರಿಗಳು ಮಾಡಿದ ಅಕ್ರಮಕ್ಕೆ ಸಚಿವರ ವಿರುದ್ಧ ಆರೋಪಿಸುವುದು ಸರಿಯಲ್ಲ ಎಂದ ಡಿಕೆಶಿ!

A 15 year old boy weighing 111 kg underwent successful spinal disc surgery that avoided potential paralysis
ಕರ್ನಾಟಕ1 hour ago

Fortis Hospital: 111 ಕೆಜಿ ತೂಕವಿದ್ದ ಬಾಲಕನಿಗೆ ಪಾರ್ಶ್ವವಾಯು ತಪ್ಪಿಸಿದ ʼಬೆನ್ನೆಲುಬಿನ ಡಿಸ್ಕ್ʼ ಶಸ್ತ್ರಚಿಕಿತ್ಸೆ

Pooja Khedkar
ದೇಶ1 hour ago

Pooja Khedkar: ಪೂಜಾ ಖೇಡ್ಕರ್‌ ಪುಣೆ ಜಿಲ್ಲಾಧಿಕಾರಿ ವಿರುದ್ಧ ಲೈಂಗಿಕ ಕಿರುಕುಳದ ಆರೋಪ

Larva survey Show the old photo without GPS and get crores of rupees to the government Cheating Alleged by MLC TA Sharavana
ಕರ್ನಾಟಕ1 hour ago

Assembly Session: ಲಾರ್ವಾ ಸರ್ವೇ; ಜಿಪಿಎಸ್ ಇಲ್ಲದ ಹಳೆ ಫೋಟೋ ತೋರಿಸಿ ಕೋಟ್ಯಂತರ ರೂ. ಮೋಸ; ಶರವಣ ಆರೋಪ

A permanent solution to artificial flood on national highways says MP Vishweshwar Hegde Kageri
ಉತ್ತರ ಕನ್ನಡ1 hour ago

Uttara Kannada News: ರಾಷ್ಟ್ರೀಯ ಹೆದ್ದಾರಿಯಲ್ಲಿ ಕೃತಕ ನೆರೆ ತಡೆಗೆ ಶಾಶ್ವತ ಪರಿಹಾರ; ಕಾಗೇರಿ

ಕರ್ನಾಟಕ1 hour ago

Dengue Fever: ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳಲ್ಲಿ ತೀವ್ರ ಏರಿಕೆ; ಮಂಗಳವಾರ 487 ಕೇಸ್‌ ಪತ್ತೆ!

Chennai Super King
ಕ್ರೀಡೆ1 hour ago

Chennai Super King : ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಕ್ರಿಕೆಟ್ ಅಕಾಡೆಮಿ ಆರಂಭಿಸಿದ ಚೆನ್ನೈ ಸೂಪರ್ ಕಿಂಗ್ಸ್​

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ10 hours ago

Karnataka Rain : ಕಾರವಾರದಲ್ಲಿ ಮಳೆ ಅವಾಂತರ; ಮನೆ ಮೇಲೆ ಗುಡ್ಡ ಕುಸಿದು ವೃದ್ಧ ಸಾವು

karnataka Rain
ಮಳೆ11 hours ago

Karnataka Rain : ಭಾರಿ ಮಳೆಗೆ ನಿಯಂತ್ರಣ ತಪ್ಪಿ ಕೆರೆಗೆ ಉರುಳಿ ಬಿದ್ದ ಕಾರು; ನಾಲ್ವರು ಪ್ರಾಣಾಪಾಯದಿಂದ ಪಾರು

karnataka Weather Forecast
ಮಳೆ1 day ago

Karnataka Weather : ವ್ಯಾಪಕ ಮಳೆ ಎಚ್ಚರಿಕೆ; ನಾಳೆಯೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

karnataka Rain
ಮಳೆ1 day ago

Karnataka Rain : ಶಾಲಾ-ಕಾಲೇಜಿಗೆ ಈ ದಿನ ರಜಾ; ಅಬ್ಬರಿಸುತ್ತಿರುವ ಮಳೆಗೆ ಮನೆಯಲ್ಲೇ ಎಲ್ಲರೂ ಸಜಾ!

karnataka weather Forecast
ಮಳೆ2 days ago

Karnataka Weather : ಮುಂದಿನ 24 ಗಂಟೆಯಲ್ಲಿ ರಣಮಳೆ ಫಿಕ್ಸ್‌; ರೆಡ್‌ ಅಲರ್ಟ್‌ ಘೋಷಣೆ

Karnataka Rain
ಮಳೆ2 days ago

Karnataka Rain : ಧಾರಾಕಾರ ಮಳೆಗೆ ತೇಲಿ ಹೋದ ಸ್ಕೂಲ್‌ ಬಸ್‌; ಕೊಡಗಿನಲ್ಲಿ ಕುಸಿದು ಬಿದ್ದ ಮನೆಗಳ ಗೋಡೆ

karnataka Rain
ಮಳೆ2 days ago

Karnataka Rain : ಭಾರಿ ಗಾಳಿ ಮಳೆ; ತುಂಡಾಗಿ ಬಿದ್ದಿದ್ದ ವಿದ್ಯುತ್‌ ತಂತಿ ತುಳಿದು ವಿಲವಿಲ ಒದ್ದಾಡಿ ಸತ್ತ ಗಬ್ಬದ ಹಸು

haveri News
ಹಾವೇರಿ2 days ago

Haveri News : ಹಾವೇರಿಯಲ್ಲಿ ಪೊಲೀಸ್ ಠಾಣೆ ಮೆಟ್ಟಿಲೇರಿದ ನಾಯಿ ಜಗಳ; ಊರಿನೊಳಗೆ ದಾಂಧಲೆ ಮಾಡುತ್ತಿದ್ದ ಕರಡಿ ಸೆರೆ

karnataka Rain
ಮಳೆ2 days ago

Karnataka Rain : ಭಾರಿ ಮಳೆ ಎಫೆಕ್ಟ್‌; ಕಪಿಲಾ ನದಿ ತೀರದಲ್ಲೀಗ ಪ್ರವಾಹ ಭೀತಿ

karnataka Weather Forecast
ಮಳೆ3 days ago

Karnataka Weather : ಶಿರಸಿಯಲ್ಲಿ ಭೂಕುಸಿತ; ಮತ್ತೆ ಕರಾವಳಿ, ಮಲೆನಾಡಿಗೆ ಭಾರಿ ಮಳೆ ಎಚ್ಚರಿಕೆ

ಟ್ರೆಂಡಿಂಗ್‌