Samudrayaan Mission | ಸಮುದ್ರದಲ್ಲಿ 6 ಕಿಲೋಮೀಟರ್‌ ಆಳಕ್ಕೆ ಹೋಗಲಿದೆ ಭಾರತದ ʼಮತ್ಸ್ಯʼ - Vistara News

ತಂತ್ರಜ್ಞಾನ

Samudrayaan Mission | ಸಮುದ್ರದಲ್ಲಿ 6 ಕಿಲೋಮೀಟರ್‌ ಆಳಕ್ಕೆ ಹೋಗಲಿದೆ ಭಾರತದ ʼಮತ್ಸ್ಯʼ

ಆಳ ಸಮುದ್ರದಲ್ಲಿ 6000 ಮೀಟರ್‌ ಆಳದವರೆಗೂ ಹೋಗಿ ಸಂಶೋಧನೆ ನಡೆಸುವ ಸಾಮರ್ಥ್ಯ ಕೆಲವೇ ದೇಶಗಳಿಗೆ ಇದೆ. ʼಸಮುದ್ರಯಾನʼ ಮೂಲಕ ಭಾರತವೂ ಆ ಸಾಲಿಗೆ ಸೇರುತ್ತಿದೆ.

VISTARANEWS.COM


on

matsya
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಆಳಸಮುದ್ರದ ನಿಗೂಢಗಳನ್ನು ಅನ್ವೇಷಿಸಲು ʼಮಿಷನ್‌ ಸಮುದ್ರಯಾನʼ ಯೋಜನೆಯನ್ನು ಭಾರತ ಆರಂಭಿಸಿದೆ. ಮಾನವಸಹಿತ ಸಬ್‌ಮರ್ಸಿಬಲ್ ವಾಹನ ʻMATSYA 6000′ ಅನ್ನು ಭಾರತ ಅಭಿವೃದ್ಧಿಪಡಿಸಿದ್ದು, ಇದರಿಂದ 6000 ಮೀಟರ್‌ ಆಳದ ಸಮುದ್ರದಲ್ಲಿ ವಿವಿಧ ಅಧ್ಯಯನಗಳನ್ನು ಕೈಗೊಳ್ಳಲು ತಜ್ಞರ ತಂಡವನ್ನು ಕಳುಹಿಸಬಹುದಾಗಿದೆ.

2021ರ ಅಕ್ಟೋಬರ್‌ನಲ್ಲಿ ಆರಂಭಿಸಿರುವ ʻಸಮುದ್ರಯಾನ’ ಯೋಜನೆಯೊಂದಿಗೆ, ಅಮೆರಿಕ, ರಷ್ಯಾ, ಜಪಾನ್, ಫ್ರಾನ್ಸ್ ಮತ್ತು ಚೀನಾದಂತಹ ದೊಡ್ಡ ರಾಷ್ಟ್ರಗಳ ಕ್ಲಬ್‌ಗೆ ಭಾರತ ಸೇರ್ಪಡೆಗೊಂಡಿದೆ.

ಮಿಷನ್‌ನ ಗುರಿ ಏನು?

ಸಮುದ್ರಯಾನ ಮಿಷನ್‌ನ ಗುರಿ ಆಳವಾದ ಸಾಗರ ಪರಿಶೋಧನೆ. ಇದರಲ್ಲಿ ವೈಜ್ಞಾನಿಕ ಸೆನ್ಸರ್‌ಗಳು ಮತ್ತು ಸಾಧನಗಳನ್ನು ಹೊಂದಿದ ಸೂಟ್‌ ಧರಿಸಿದ ಮೂವರು ಮನುಷ್ಯರನ್ನು ಸಾಗರದಲ್ಲಿ 6,000 ಮೀಟರ್ ಆಳದವರೆಗೆ ಇಳಿಸಲು ಸ್ವಯಂಚಾಲಿತ ಸಬ್‌ಮರ್ಸಿಬಲ್ ಅನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಇದರಲ್ಲಿ 12 ಗಂಟೆಗಳ ಕಾರ್ಯಾಚರಣೆ ಹಾಗೂ ತುರ್ತು ಸಂದರ್ಭದಲ್ಲಿ 96 ಗಂಟೆಗಳ ಆಳಸಮುದ್ರ ಉಳಿಯುವಿಕೆ ಸಾಧ್ಯವಾಗಬೇಕು.

ಆಳ ಸಮುದ್ರದಲ್ಲಿ ಕಾರ್ಯಾಚರಿಸುವ ತಂತ್ರಜ್ಞಾನ ಭವಿಷ್ಯಕ್ಕೆ ಅಗತ್ಯವಾಗಿದೆ. ಆಳವಾದ ಸಮುದ್ರದ ಗಣಿಗಾರಿಕೆ, ಆಳ ಸಮುದ್ರದ ಖನಿಜ ಸಂಪನ್ಮೂಲಗಳ ಪರಿಶೋಧನೆ, ಸಮುದ್ರ ಜೀವವೈವಿಧ್ಯತೆಯ ಶೋಧಗಳು ಈ ತಂತ್ರಜ್ಞಾನದಿಂದ ಸಾಧ್ಯವಾಗಲಿವೆ.

ಸಮುದ್ರ ಅನ್ವೇಷಣೆ ಏಕೆ ಮುಖ್ಯ?

ಜಗತ್ತಿನ ಶೇ.70 ಭಾಗ ಆವರಿಸಿರುವ ಸಮುದ್ರ ನಮ್ಮ ಜೀವನದ ಪ್ರಮುಖ ಭಾಗ. ಆಳವಾದ ಸಾಗರದ ಸುಮಾರು 95 ಪ್ರತಿಶತ ಭಾಗ ಅಜ್ಞಾತವಾಗಿ ಉಳಿದಿದೆ. ಭಾರತದ ಮೂರು ಬದಿಗಳು ಸಾಗರದಿಂದ ಸುತ್ತುವರಿದಿದೆ. ರಾಷ್ಟ್ರದ ಸುಮಾರು 30 ಪ್ರತಿಶತ ಜನಸಂಖ್ಯೆಯು ಕರಾವಳಿ ಪ್ರದೇಶಗಗಳಲ್ಲಿ ವಾಸಿಸಿದ್ದು, ಕರಾವಳಿಯು ಇವರ ಆರ್ಥಿಕತೆಯಾಗಿದೆ.

ಭಾರತದಲ್ಲಿ ಒಂಬತ್ತು ಕರಾವಳಿ ರಾಜ್ಯಗಳಿದ್ದು, 1,382 ದ್ವೀಪಗಳಿಗೆ ನೆಲೆಯಾಗಿರುವ 7517 ಕಿಲೋಮೀಟರ್ ಉದ್ದದ ಕರಾವಳಿಯಿದೆ. ಭಾರತ ಸರ್ಕಾರ ʼನೀಲಿ ಆರ್ಥಿಕತೆʼಯನ್ನು ದೇಶದ ಬೆಳವಣಿಗೆಯ ಹತ್ತು ಪ್ರಮುಖ ಆಯಾಮಗಳಲ್ಲಿ ಪ್ರಮುಖವೆಂದು ಗುರುತಿಸಿದೆ.

ಮತ್ಸ್ಯ 6000 ಎಂದರೇನು?

ʼಮತ್ಸ್ಯ 6000′ ಇದು ಮಾನವಸಹಿತ ಕಾರ್ಯಾಚರಿಸುವ ಸಬ್‌ಮರ್ಸಿಬಲ್‌. ಇದರ ಪ್ರಾಥಮಿಕ ವಿನ್ಯಾಸ ಪೂರ್ಣಗೊಂಡಿದೆ. ಇದಕ್ಕೆ ಇಸ್ರೋ, ಐಐಟಿಎಂ ಮತ್ತು ಡಿಆರ್‌ಡಿಒ ಸೇರಿದಂತೆ ವಿವಿಧ ಸಂಸ್ಥೆಗಳು ಕೈಜೋಡಿಸಿವೆ. ಇದನ್ನು ದೇಶೀಯವಾಗಿ ಅಭಿವೃದ್ಧಿಪಡಿಸಲಾಗಿದೆ. ಭೂ ವಿಜ್ಞಾನ ಸಚಿವಾಲಯದ (MoES) ಅಡಿಯಲ್ಲಿ ಸ್ವಾಯತ್ತ ಸಂಸ್ಥೆಯಾಗಿರುವ ಚೆನ್ನೈನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಓಷನ್ ಟೆಕ್ನಾಲಜಿ (NIOT) ಇದನ್ನು ಅಭಿವೃದ್ಧಿಪಡಿಸಿದೆ. ಇದಕ್ಕೂ ಮೊದಲು ದೂರನಿಯಂತ್ರಿತ ಆಪರೇಟೆಡ್ ವೆಹಿಕಲ್ (ROV), ಸ್ವಯಂಚಾಲಿತ ಕೋರಿಂಗ್ ಸಿಸ್ಟಮ್ (ACS), ಸ್ವಯಂಚಾಲಿತ ನೀರೊಳಗಿನ ವಾಹನ (AUV), ಡೀಪ್ ಸೀ ಮೈನಿಂಗ್ ಸಿಸ್ಟಮ್ (DSM)ನಂತಹ ಇತರ ನೀರೊಳಗಿನ ಉಪಕರಣಗಳನ್ನು ಅಭಿವೃದ್ಧಿಪಡಿಸಿದೆ.

ಇದನ್ನೂ ಓದಿ: Coffee News | ಹವಾಮಾನ ವೈಪರಿತ್ಯ ತಾಳಿಕೊಳ್ಳುವ ಕಾಫಿ ತಳಿ ಅಭಿವೃದ್ಧಿಗೆ ಮುಂದಾದ ಕಾಫಿ ಮಂಡಳಿ

ಆಳಸಮುದ್ರದ ಸಂಶೋಧನೆಗೆ ಇದು ಹೇಗೆ ಸಹಾಯ?

ಆಳಸಮುದ್ರದ ಸಬ್‌ಮರ್ಸಿಬಲ್‌ಗಳಿಗೆ ಸಾಮಾನ್ಯ ಸಬ್‌ಮರ್ಸಿಬಲ್‌ ವಾಹನಗಳಿಗಿಂತ ಹೆಚ್ಚಿ ಒತ್ತಡವನ್ನು ತಾಳಿಕೊಳ್ಳುವ ಶಕ್ತಿಯ ಅಗತ್ಯವಿದೆ. ಆಳ ಹೆಚ್ಚಾದಂತೆ ಗುರುತ್ವ ಬಲ, ನೀರಿನ ಒತ್ತಡಗಳು ಹೆಚ್ಚಾಗುವುದಲ್ಲದೆ, ನೀರಿನ ಪ್ರವಾಹದ ಸೆಳೆತವೂ ಇರುತ್ತದೆ. ಇತರ ಅನೂಹ್ಯ ಒತ್ತಡಗಳೂ ಸೃಷ್ಟಿಯಾಗಬಹುದು. ಜತೆಗೆ ಒಳಗಿರುವ ವ್ಯಕ್ತಿಗಳಿಗೆ ಆಕ್ಸಿಜನ್‌ ಪೂರೈಕೆಯೂ ಅಬಾಧಿತವಾಗಿ ಇರಬೇಕಾಗುತ್ತದೆ. ಇದೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಹೊಸ ಯಂತ್ರವನ್ನು ಆವಿಷ್ಕರಿಸಲಾಗಿದೆ.

“ಈ ತಂತ್ರಜ್ಞಾನವು ಭೂವಿಜ್ಞಾನ ಸಚಿವಾಲಯಕ್ಕೆ ಪಾಲಿಮೆಟಾಲಿಕ್ ಮ್ಯಾಂಗನೀಸ್ ನಿಕ್ಷೇಪ, ಗ್ಯಾಸ್ ಹೈಡ್ರೇಟ್‌, ಹೈಡ್ರೇಟ್‌ ಮುಂತಾದ ಸಂಪನ್ಮೂಲಗಳ ಆಳವಾದ ಸಾಗರ ಪರಿಶೋಧನೆ ಕೈಗೊಳ್ಳಲು ಸಹಾಯವಾಗಲಿವೆ. ಥರ್ಮಲ್ ಸಲ್ಫೈಡ್‌ಗಳು, ಕೋಬಾಲ್ಟ್ ಕ್ರಸ್ಟ್‌ಗಳು ಸಮುದ್ರದಲ್ಲಿ 1000- 5500 ಮೀಟರ್‌ಗಳ ಆಳದಲ್ಲಿದ್ದು, ಅಲ್ಲಿಗೆ ತಲುಪಲು ಅನುಕೂಲʼʼ ಎಂದು ಕೇಂದ್ರ ಸಚಿವ ಡಾ ಜಿತೇಂದ್ರ ಸಿಂಗ್ ಹೇಳಿದ್ದಾರೆ.

ಮಾನವಸಹಿತ ಸಬ್‌ಮರ್ಸಿಬಲ್‌ಗೆ ಏಕೆ ಆದ್ಯತೆ?

ಸಬ್‌ಮರ್ಸಿಬಲ್‌ಗಳು ಹೆಚ್ಚಿನ ರೆಸಲ್ಯೂಶನ್ ಬಾತಿಮೆಟ್ರಿ, ಜೈವಿಕ ವೈವಿಧ್ಯತೆಯ ಮೌಲ್ಯಮಾಪನ, ಭೂ-ವೈಜ್ಞಾನಿಕ ವೀಕ್ಷಣೆ, ರಕ್ಷಣೆ ಕಾರ್ಯಾಚರಣೆ, ಎಂಜಿನಿಯರಿಂಗ್ ಬೆಂಬಲದಂತಹ ಸಮುದ್ರದ ಚಟುವಟಿಕೆಗಳನ್ನು ಕೈಗೊಳ್ಳುತ್ತವೆ. ಮಾನವರಹಿತ ಸಬ್‌ಮರ್ಸಿಬಲ್‌ಗಳು ಸುಧಾರಿತ ತಂತ್ರಜ್ಞಾನ ಹೊಂದಿದ್ದರೂ, ಮಾನವಸಹಿತ ಸಬ್‌ಮರ್ಸಿಬಲ್‌ಗಳಂತೆ ಸಂಶೋಧಕರಿಗೆ ನೇರ ಭೌತಿಕ ಉಪಸ್ಥಿತಿಯ ಅನುಭವವನ್ನು ನೀಡುವುದಿಲ್ಲ.

ಮಿಷನ್‌ನ ಅಂದಾಜು ವೆಚ್ಚ ಎಷ್ಟು?

ಭಾರತ ಸರ್ಕಾರ ಐದು ವರ್ಷಗಳ ಅವಧಿಗೆ ₹ 4,077 ಕೋಟಿಗಳ ಒಟ್ಟು ಬಜೆಟ್‌ನಲ್ಲಿ ಭೂ ವಿಜ್ಞಾನ ಸಚಿವಾಲಯದ ಅಧೀನದಲ್ಲಿ ಇದಕ್ಕೆ ಸಂಬಂಧಿಸಿದ ಡೀಪ್ ಓಷನ್ ಮಿಷನ್ (ಡಿಒಎಂ) ಅನ್ನು ಅನುಮೋದಿಸಿದೆ. ಜಾರಿಯ ಉದ್ದೇಶಿತ ಅವಧಿ 2021ರಿಂದ 2026.

ಇದನ್ನೂ ಓದಿ: ಸಮುದ್ರದಲ್ಲಿ ಮುಳುಗಿದ ಹಾಂಕಾಂಗ್‌ನ ತೇಲುವ ಜಂಬೊ ರೆಸ್ಟೊರೆಂಟ್‌

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವಾಣಿಜ್ಯ

Isha Ambani: ತಾನು ಅವಳಿ ಮಕ್ಕಳಿಗೆ ತಾಯಿಯಾಗಿದ್ದು ಐವಿಎಫ್ ಮೂಲಕ ಎಂದ ಇಶಾ ಅಂಬಾನಿ

ಜಗತ್ತಿನಲ್ಲಿ ಇಂದು ಸಾಕಷ್ಟು ಆಧುನಿಕ ತಂತ್ರಜ್ಞಾನವಿದೆ. ಮಕ್ಕಳನ್ನು ಪಡೆಯಲು ನಾವು ಏಕೆ ಇದನ್ನು ಬಳಸಬಾರದು ಎಂದು ಪ್ರಶ್ನಿಸಿರುವ ಉದ್ಯಮಿ ಇಶಾ ಅಂಬಾನಿ (Isha Ambani) ಅವರು, ಇದು ಉತ್ಸುಕರಾಗಿರುವ ವಿಷಯವಾಗಿರಬೇಕು. ಮರೆ ಮಾಚಬೇಕಾದ ಸಂಗತಿಯಲ್ಲ. ಈ ಬಗ್ಗೆ ಮಹಿಳೆಯರು ಮಾತನಾಡಲು ಮುಕ್ತವಾದರೆ ಪ್ರಕ್ರಿಯೆಯು ಹೆಚ್ಚು ಸುಲಭವಾಗಬಹುದು ಎಂದು ಅವರು ತಿಳಿಸಿದ್ದಾರೆ.

VISTARANEWS.COM


on

By

Isha Ambani
Koo

ಭಾರತೀಯ ಬಿಲಿಯನೇರ್ ಉದ್ಯಮಿ ಮುಖೇಶ್ ಅಂಬಾನಿ (Mukesh ambani) ಅವರ ಪುತ್ರಿ ಇಶಾ ಅಂಬಾನಿ (Isha Ambani) ಮಕ್ಕಳನ್ನು ಪಡೆಯಲು ಐವಿಎಫ್ (IVF) ಮೊರೆ ಹೋಗಿದ್ದಾಗಿ ತಿಳಿಸಿದ್ದಾರೆ. ಸಂದರ್ಶನವೊಂದರಲ್ಲಿ ಈ ಬಗ್ಗೆ ಮುಕ್ತವಾಗಿ ಮಾತನಾಡಿರುವ ಅವರು, ತನ್ನನ್ನು ಮತ್ತು ಸಹೋದರ ಆಕಾಶ್ ಅಂಬಾನಿ (akash ambani) ನನ್ನು ಪಡೆಯಲು ತಾಯಿ ನೀತಾ ಅಂಬಾನಿ (nita ambani) ಕೂಡ ಐವಿಎಫ್ ಮೊರೆ ಹೋಗಿದ್ದರು ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.

32 ವರ್ಷದ ಅವರು ತಮ್ಮ ಮಾತೃತ್ವದ ಪ್ರಯಾಣದ ಬಗ್ಗೆ ಮಾತನಾಡಿದ್ದು, ಐವಿಎಫ್ ವಿಷಯದ ಸುತ್ತಲಿನ ನಿಷೇಧವನ್ನು ಹೋಗಲಾಡಿಸುವ ಗುರಿಯನ್ನು ಹೊಂದಿರುವುದಾಗಿ ತಿಳಿಸಿದರು.

ನೀತಾ ಅಂಬಾನಿ ಈ ಹಿಂದೆ ಐವಿಎಫ್ ಸಹಾಯದಿಂದ ಗರ್ಭಧರಿಸುವ ಬಗ್ಗೆ ಮಾತನಾಡಿದ್ದರು. ವೈದ್ಯರು ತನಗೆ ಎಂದಿಗೂ ಮಕ್ಕಳಾಗುವುದಿಲ್ಲ ಎಂದು ಹೇಳಿದಾಗ ಆಘಾತವಾಗಿತ್ತು. ಆಗ ನನಗೆ ಕೇವಲ 23 ವರ್ಷ. ನನ್ನ ಆತ್ಮೀಯ ಸ್ನೇಹಿತರಲ್ಲಿ ಒಬ್ಬರಾದ ಡಾ. ಫಿರೂಜಾ ಪಾರಿಖ್ ಅವರ ಸಹಾಯದಿಂದ ನಾನು ಮೊದಲು ನನ್ನ ಅವಳಿ ಮಕ್ಕಳನ್ನು ಗರ್ಭದಲ್ಲಿ ಧರಿಸಿದೆ ಎಂದು ಅವರು ಅವರು ಕೆಲವು ವರ್ಷಗಳ ಹಿಂದೆ ಸಂದರ್ಶನವೊಂದರಲ್ಲಿ ಹೇಳಿದ್ದರು.

ಇದೀಗ ತಾಯಿ ನೀತಾ ಅಂಬಾನಿಯಂತೆ ಇಶಾ ಕೂಡ ಐವಿಎಫ್ ಮೂಲಕ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ.
ಐವಿಎಫ್ ಮೂಲಕ ಅವಳಿ ಮಕ್ಕಳಿಗೆ ನಾನು ತಾಯಿಯಾಗಿದ್ದೇನೆ ಎಂದು ಬಹಳ ಬೇಗ ಹೇಳುತ್ತಿದ್ದೇನೆ. ಈ ಬಗ್ಗೆ ನಾವು ಸಾಮಾನ್ಯವಾಗಿರಬೇಕು. ಇದರ ಬಗ್ಗೆ ನಾಚಿಕೆ ಪಡಬಾರದು. ಇಂತವರನ್ನು ಯಾರೂ ಪ್ರತ್ಯೇಕ ಮಾಡಬಾರದು. ಇದು ಅತ್ಯಂತ ಕಷ್ಟಕರ ಪ್ರಕ್ರಿಯೆ. ಈ ಪ್ರಕ್ರಿಯೆಯಲ್ಲಿ ಸಾಕಷ್ಟು ದಣಿವಾಗುತ್ತದೆ ಎಂದು ಹೇಳಿದರು.

ಇಂದು ಜಗತ್ತಿನಲ್ಲಿ ಸಾಕಷ್ಟು ಆಧುನಿಕ ತಂತ್ರಜ್ಞಾನವಿದೆ. ಮಕ್ಕಳನ್ನು ಪಡೆಯಲು ನಾವು ಏಕೆ ಇದನ್ನು ಬಳಸಬಾರದು ಎಂದು ಪ್ರಶ್ನಿಸಿದ ಅವರು, ಇದು ಉತ್ಸುಕರಾಗಿರುವ ವಿಷಯವಾಗಿರಬೇಕು. ಮರೆ ಮಾಚಬೇಕಾದ ಸಂಗತಿಯಲ್ಲ. ಈ ಬಗ್ಗೆ ಮಹಿಳೆಯರು ಮಾತನಾಡಲು ಮುಕ್ತವಾದರೆ ಪ್ರಕ್ರಿಯೆಯು ಹೆಚ್ಚು ಸುಲಭವಾಗಬಹುದು ಎಂದು ಅವರು ತಿಳಿಸಿದ್ದಾರೆ.

ಇಶಾ ಅವರು ಆನಂದ್ ಪಿರಾಮಲ್ ಅವರನ್ನು ವಿವಾಹವಾಗಿದ್ದು, ಒಬ್ಬ ಮಗಳು ಮತ್ತು ಮಗನೊಂದಿಗೆ ಅವಳಿ ಮಕ್ಕಳನ್ನು ಹೊಂದಿದ್ದಾರೆ. 2018ರ ಡಿಸೆಂಬರ್ 12 ರಂದು ದಂಪತಿ ಮುಂಬಯಿ ನಲ್ಲಿ ಅದ್ದೂರಿಯಾಗಿ ವಿವಾಹವಾಗಿದ್ದರು.

ಐವಿಎಫ್ ಎಂದರೇನು?

ಇನ್ ವಿಟ್ರೊ ಫರ್ಟಿಲೈಸೇಶನ್ (ಐವಿಎಫ್) ಮಕ್ಕಳನ್ನು ಪಡೆಯಲು ಒಂದು ವೈದ್ಯಕೀಯ ವಿಧಾನವಾಗಿದೆ. ಪ್ರಯೋಗಾಲಯದಲ್ಲಿ ವೀರ್ಯದಿಂದ ಮೊಟ್ಟೆಯನ್ನು ಫಲವತ್ತಾಗಿಸಲಾಗುತ್ತದೆ. ಇದು ಫಲವತ್ತತೆ ಸಮಸ್ಯೆಗಳಿರುವ ವ್ಯಕ್ತಿಗಳು ಅಥವಾ ದಂಪತಿಗೆ ಸಹಾಯ ಮಾಡಲು ಬಳಸುವ ಸಾಮಾನ್ಯ ನೆರವಿನ ಸಂತಾನೋತ್ಪತ್ತಿ ತಂತ್ರಜ್ಞಾನವಾಗಿದೆ.

ಈ ಪ್ರಕ್ರಿಯೆಯು ಬಹು ಮೊಟ್ಟೆಗಳನ್ನು ಉತ್ಪಾದಿಸಲು ಮಹಿಳೆಯ ಅಂಡಾಶಯವನ್ನು ಉತ್ತೇಜಿಸುತ್ತದೆ. ಮೊಟ್ಟೆಗಳನ್ನು ಪಡೆದು ನಿಯಂತ್ರಿತ ವಾತಾವರಣದಲ್ಲಿ ವೀರ್ಯದೊಂದಿಗೆ ಫಲವತ್ತಾಗಿಸುತ್ತದೆ ಮತ್ತು ಅನಂತರ ಭ್ರೂಣಗಳನ್ನು ಗರ್ಭಾಶಯಕ್ಕೆ ವರ್ಗಾಯಿಸಲಾಗುತ್ತದೆ.

ಇದನ್ನೂ ಓದಿ: Elon Musk: ಕೆಲವೇ ವರ್ಷಗಳಲ್ಲಿ ಮೊಬೈಲ್‌ ಫೋನೇ ಇರುವುದಿಲ್ಲ; ಬರಲಿದೆ ಹೊಸ ತಂತ್ರಜ್ಞಾನ!

ನಿರ್ಬಂಧಿಸಲಾದ ಫಾಲೋಪಿಯನ್ ಟ್ಯೂಬ್‌ಗಳು, ಪುರುಷ ಬಂಜೆತನ, ಅಂಡೋತ್ಪತ್ತಿ ಅಸ್ವಸ್ಥತೆಗಳು ಅಥವಾ ವಿವರಿಸಲಾಗದ ಬಂಜೆತನ ಸೇರಿದಂತೆ ವಿವಿಧ ಕಾರಣಗಳಿಗಾಗಿ ಐವಿಎಫ್ ಅನ್ನು ಬಳಸಬಹುದು ಮತ್ತು ಅನೇಕರು ಗರ್ಭಧಾರಣೆ ಮತ್ತು ಪಿತೃತ್ವವನ್ನು ಸಾಧಿಸಲು ಇದು ಸಹಾಯ ಮಾಡಿದೆ.

ಇಶಾ ಅಂಬಾನಿ ಅವರ ಕಿರಿಯ ಸಹೋದರ ಅನಂತ್ ಅಂಬಾನಿ ಜುಲೈ 12ರಂದು ರಾಧಿಕಾ ಮರ್ಚೆಂಟ್ ಅವರನ್ನು ವಿವಾಹವಾಗಲಿದ್ದಾರೆ. ಈ ಕಾರಣದಿಂದ ಇಶಾ ಮತ್ತು ಅವರ ಕುಟುಂಬ ವರ್ಷವಿಡೀ ಸುದ್ದಿಯಲ್ಲಿದೆ.

Continue Reading

ತಂತ್ರಜ್ಞಾನ

Tulu Translate Google: ಗೂಗಲ್ ಟ್ರಾನ್ಸ್‌ಲೇಟ್‌ನಲ್ಲಿ ತುಳು ಭಾಷೆ ಸೇರ್ಪಡೆ

ಗೂಗಲ್ ಟ್ರಾನ್ಸ್‌ಲೇಟ್‌ನಲ್ಲಿ ಫೋನ್, ಲುವೊ, ಗಾ, ಕಿಕೊಂಗೊ, ಸ್ವಾತಿ, ವೆಂಡಾ ಮತ್ತು ವುಲ್ಫ್‌ನಂತಹ ಹೆಚ್ಚಿನ ಆಫ್ರಿಕನ್ ಭಾಷೆಗಳನ್ನು ಸೇರಿಸಲಾಗಿದ್ದು, ಇದರಲ್ಲಿ ಏಳು ಭಾರತೀಯ ಭಾಷೆಗಳಾದ ಅವಧಿ, ಬೋಡೋ, ಖಾಸಿ, ಕೊಕ್ಬೊರೊಕ್, ಮಾರ್ವಾಡಿ, ಸಂತಾಲಿ ಮತ್ತು ತುಳು (Tulu language) ಕೂಡ ಸೇರ್ಪಡೆಗೊಂಡಿದೆ.

VISTARANEWS.COM


on

By

Tulu language
Koo

ಲಕ್ಷಾಂತರ ಜನರ ಸಂವಹನಕ್ಕೆ (communication) ಸಹಾಯ ಮಾಡುತ್ತಿರುವ ಗೂಗಲ್‌ನಲ್ಲಿ ಈಗ ತುಳು ಭಾಷೆ (Tulu language) ಸೇರಿ 110 ಹೊಸ ಭಾಷೆಗಳನ್ನು (new languages) ಅನುವಾದಕ್ಕೆ ಲಭ್ಯವಾಗಿದೆ. ಅನುವಾದದಲ್ಲಿ ಹೊಸ ನವೀಕರಣವನ್ನು ಗೂಗಲ್ (google) ಪ್ರಕಟಿಸಿದ್ದು, ಅಪ್ಲಿಕೇಶನ್ ಮೂಲಕ ವಿವಿಧ ಭಾಷೆಗಳನ್ನು ಅನುವಾದಗೊಳಿಸಲು ಆರ್ಟಿಫಿಷಿಯಲ್ ತಂತ್ರಜ್ಞಾನವನ್ನು ಬಳಸುತ್ತಿರುವುದಾಗಿ ಗೂಗಲ್ ಹೇಳಿದೆ.

PaLM 2 ಭಾಷೆಯ ಮಾದರಿಯ ಬೆಂಬಲದೊಂದಿಗೆ ಗೂಗಲ್ ಈಗ 110 ಹೊಸ ಭಾಷೆಗಳನ್ನು ಅನುವಾದಗೊಳಿಸುತ್ತಿದೆ. ಆಲ್ಫಾಬೆಟ್ ಇಂಕ್ ಕಂಪೆನಿಯು ಇದು ತನ್ನ ಅತಿದೊಡ್ಡ ವಿಸ್ತರಣೆಯಾಗಿದೆ ಎಂದು ಹೇಳಿಕೊಂಡಿದೆ. ಗೂಗಲ್‌ನಲ್ಲಿ ಅನುವಾದವನ್ನು 2006ರಲ್ಲಿ ಪರಿಚಯಿಸಲಾಯಿತು. 2024ರ ಜೂನ್ ವೇಳೆಗೆ ಈ ವೈಶಿಷ್ಟ್ಯವು 243 ಭಾಷೆಗಳನ್ನು ಬೆಂಬಲಿಸುತ್ತದೆ. ಹೆಚ್ಚು ಜನರಿಗೆ ಅನುಕೂಲವಾಗುವಂತೆ ಮಾಡಲು ಈ ವೈಶಿಷ್ಟ್ಯಕ್ಕೆ ಇತ್ತೀಚಿನ ತಂತ್ರಜ್ಞಾನಗಳನ್ನು ಸತತವಾಗಿ ಅನ್ವಯಿಸಲಾಗುತ್ತಿದೆ ಎಂದು ಕಂಪನಿ ಹೇಳಿದೆ.

2022ರಲ್ಲಿ ಕಂಪನಿಯು ಝೀರೋ- ಶಾಟ್ ಮೆಷಿನ್ ಅನುವಾದವನ್ನು ಬಳಸಿಕೊಂಡು 24 ಹೊಸ ಭಾಷೆಗಳನ್ನು ಸೇರಿಸಿತು. ಈ ತಂತ್ರದ ಮೂಲಕ ಯಂತ್ರ ಕಲಿಕೆಯ ಮಾದರಿಗಳು ಹೇಗೆ ಅನುವಾದಿಸಬೇಕೆಂದು ಕಲಿಯಬಹುದು. ಆಗ ಕಂಪೆನಿಯು ತನ್ನ 1,000 ಭಾಷೆಯ ಉಪಕ್ರಮವನ್ನು ಘೋಷಿಸಿತ್ತು. ಉಪಕ್ರಮದ ಭಾಗವಾಗಿ ಕಂಪೆನಿಯು ಪ್ರಪಂಚದಾದ್ಯಂತ ಹೆಚ್ಚು ಮಾತನಾಡುವ 1,000 ಭಾಷೆಗಳನ್ನು ಬೆಂಬಲಿಸುವ ಎಐ ಮಾದರಿಗಳನ್ನು ನಿರ್ಮಿಸುವ ಗುರಿಯನ್ನು ಹೊಂದಿದೆ.

ಸುಮಾರು ಅರ್ಧ ಬಿಲಿಯನ್ ಅನುವಾದಿಸಲು ಸಹಾಯ

ಗೂಗಲ್ ತನ್ನ ಅಧಿಕೃತ ಬಿಡುಗಡೆಯಲ್ಲಿ ಹೊಸ ಭಾಷೆಗಳು 614 ಮಿಲಿಯನ್‌ಗಿಂತಲೂ ಹೆಚ್ಚು ಮಾತನಾಡುವವರನ್ನು ಪ್ರತಿನಿಧಿಸುತ್ತವೆ. ಇದರಿಂದಾಗಿ ಪ್ರಪಂಚದ ಜನಸಂಖ್ಯೆಯ ಸುಮಾರು ಎಂಟು ಪ್ರತಿಶತದಷ್ಟು ಜನರ ಭಾಷೆಗಳನ್ನು ಅನುವಾದ ಮಾಡಬಹುದು. ಇವುಗಳಲ್ಲಿ ಕೆಲವು 100 ಮಿಲಿಯನ್‌ಗಿಂತಲೂ ಹೆಚ್ಚು ಮಾತನಾಡುವ ಪ್ರಮುಖ ಭಾಷೆಗಳಾಗಿವೆ. ಆದರೆ ಇತರವು ಸ್ಥಳೀಯ ಜನರ ಸಣ್ಣ ಸಮುದಾಯಗಳಿಂದ ಮಾತನಾಡುತ್ತವೆ.


ಏಳು ಭಾರತೀಯ ಭಾಷೆಗಳು

ಇತ್ತೀಚಿನ ವಿಸ್ತರಣೆಯು ಫೋನ್, ಲುವೊ, ಗಾ, ಕಿಕೊಂಗೊ, ಸ್ವಾತಿ, ವೆಂಡಾ ಮತ್ತು ವುಲ್ಫ್‌ನಂತಹ ಹೆಚ್ಚಿನ ಆಫ್ರಿಕನ್ ಭಾಷೆಗಳನ್ನು ಅಪ್ಲಿಕೇಶನ್‌ಗೆ ಸೇರಿಸಿದೆ. ಹೊಸ ಸೇರ್ಪಡೆಯು ಏಳು ಭಾರತೀಯ ಭಾಷೆಗಳಾದ ಅವಧಿ, ಬೋಡೋ, ಖಾಸಿ, ಕೊಕ್ಬೊರೊಕ್, ಮಾರ್ವಾಡಿ, ಸಂತಾಲಿ ಮತ್ತು ತುಳುವನ್ನು ಒಳಗೊಂಡಿದೆ.

ಹೇಗೆ ಅನ್ವಯ?

ಅನುವಾದಕ್ಕೆ ಹೊಸ ಭಾಷೆಗಳನ್ನು ಹೇಗೆ ಸೇರಿಸುತ್ತದೆ ಎಂಬುದನ್ನು ಗೂಗಲ್ ಉಲ್ಲೇಖಿಸಿದೆ. ಟೆಕ್ ದೈತ್ಯ ಪ್ರಾದೇಶಿಕ ಪ್ರಭೇದಗಳು, ಉಪಭಾಷೆಗಳು ಮತ್ತು ಕಾಗುಣಿತ ಮಾನದಂಡಗಳಂತಹ ಹಲವಾರು ಅಂಶಗಳನ್ನು ಇದಕ್ಕಾಗಿ ಪರಿಗಣಿಸುತ್ತದೆ ಎಂದು ಹೇಳಿದರು.

ಇದನ್ನೂ ಓದಿ: Tata Motors: ನೆಕ್ಸಾನ್, ಪಂಚ್‌ ಮೂಲಕ ಎಸ್‌ಯುವಿ ಮಾರುಕಟ್ಟೆಯಲ್ಲಿ ಮುನ್ನಡೆ ಸಾಧಿಸಿದ ಟಾಟಾ ಮೋಟಾರ್ಸ್

ಅನೇಕ ಭಾಷೆಗಳು ಒಂದೇ ಪ್ರಮಾಣಿತ ರೂಪವನ್ನು ಹೊಂದಿರದ ಕಾರಣ ಸಾಮಾನ್ಯವಾಗಿ ಬಳಸುವ ಪ್ರಭೇದಗಳಿಗೆ ಆದ್ಯತೆ ನೀಡುವುದಾಗಿ ಗೂಗಲ್ ಹೇಳಿದೆ. ಪಾಲ್ಎಮ್ 2 ತಂತ್ರಜ್ಞಾನವು ಹಿಂದಿ ಮತ್ತು ಫ್ರೆಂಚ್ ಕ್ರಿಯೋಲ್‌ಗಳಂತಹ ಪರಸ್ಪರ ನಿಕಟ ಸಂಬಂಧ ಹೊಂದಿರುವ ಭಾಷೆಗಳನ್ನು ಕಲಿಯಲು ಸಹಾಯ ಮಾಡುತ್ತದೆ ಎಂದು ಕಂಪೆನಿ ಹೇಳಿದೆ.

ಭಾಷಾಶಾಸ್ತ್ರಜ್ಞರು ಮತ್ತು ಸ್ಥಳೀಯ ಭಾಷಿಕರೊಂದಿಗೆ ಸಹಯೋಗ ಮಾಡುವ ಮೂಲಕ ಕಾಲಾನಂತರದಲ್ಲಿ ಹೆಚ್ಚಿನ ಭಾಷಾ ಪ್ರಭೇದಗಳು ಮತ್ತು ಕಾಗುಣಿತ ಸಂಪ್ರದಾಯಗಳನ್ನು ಬೆಂಬಲಿಸುವ ಗುರಿಯನ್ನು ಹೊಂದಿದೆ ಎಂದು ಗೂಗಲ್ ಹೇಳಿದೆ.

Continue Reading

Latest

BGauss RUV350 : ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಆರ್‌ಯುವಿ350 ಬಿಡುಗಡೆ ಮಾಡಿದ ಬಿಗಾಸ್

BGauss RUV350 : ಬಿಗಾಸ್ ಆರ್‌ಯುವಿ350 ಜುಲೈನಿಂದ ಎಲ್ಲಾ 120 ಬಿಗಾಸ್ ಡೀಲರ್‌ಶಿಪ್‌ಗಳಲ್ಲಿ ಖರೀದಿಗೆ ಲಭ್ಯವಿರುತ್ತದೆ. ಬಿಗಾಸ್ ಆರ್‌ಯುವಿ350ಯ ಸ್ಪರ್ಧಾತ್ಮಕ ಆರಂಭಿಕ ಬೆಲೆ ರೂ. 1,09,999/- (ಎಕ್ಸ್ ಶೋ ರೂಂ) ಈ ದ್ವಿಚಕ್ರ ವಾಹನವನ್ನು ವಿಸ್ತಾವಾದ ಗ್ರಾಹಕ ಜಗತ್ತಿಗೆ ಸುಲಭವಾಗಿ ದೊರಕಿಸುವಂತೆ ಮಾಡಲು ವಿವಿಧ ಹಣಕಾಸು (ಫೈನಾನ್ಸಿಂಗ್) ಆಯ್ಕೆಗಳನ್ನು ಸಹ ನೀಡಲಾಗುತ್ತದೆ.

VISTARANEWS.COM


on

BGauss RUV350
Koo

ಮುಂಬೈ : ಆರ್ ಆರ್ ಗ್ಲೋಬಲ್‌ನ ಬಿಗಾಸ್ ತನ್ನ ಹೊಚ್ಚ ಹೊಸ ಮಾಡೆಲ್ ಆರ್‌ಯುವಿ350 (BGauss RUV350 ) ಎಲೆಕ್ಟ್ರಿಕ್​ ಸ್ಕೂಟರ್ ಬಿಡುಗಡೆ ಮಾಡಿದೆ. ನಗರ ಕೇಂದ್ರೀತ ಸ್ಕೂಟರ್​ ಆರ್‌ಯುವಿ ಗಮನಾರ್ಹ ಮೈಲಿಗಲ್ಲನ್ನು ಸಾಧಿಸಿದ್ದು, ಅತ್ಯುತ್ತಮ ರೈಡಿಂಗ್ ಅನುಭವವನ್ನು ನೀಡುತ್ತಿದೆ. ಅದಕ್ಕಾಗಿ ವಿಭಿನ್ನ ವಿನ್ಯಾಸ ಹಾಗೂ ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಲಾಗಿದೆ. ಬಿಗಾಸ್ ಆರ್‌ಯುವಿ350 ಜುಲೈನಿಂದ ಎಲ್ಲಾ 120 ಬಿಗಾಸ್ ಡೀಲರ್‌ಶಿಪ್‌ಗಳಲ್ಲಿ ಖರೀದಿಗೆ ಲಭ್ಯವಿರುತ್ತದೆ. ಬಿಗಾಸ್ ಆರ್‌ಯುವಿ350ಯ ಸ್ಪರ್ಧಾತ್ಮಕ ಆರಂಭಿಕ ಬೆಲೆ ರೂ. 1,09,999/- (ಎಕ್ಸ್ ಶೋ ರೂಂ) ಈ ದ್ವಿಚಕ್ರ ವಾಹನವನ್ನು ವಿಸ್ತಾವಾದ ಗ್ರಾಹಕ ಜಗತ್ತಿಗೆ ಸುಲಭವಾಗಿ ದೊರಕಿಸುವಂತೆ ಮಾಡಲು ವಿವಿಧ ಹಣಕಾಸು (ಫೈನಾನ್ಸಿಂಗ್) ಆಯ್ಕೆಗಳನ್ನು ಸಹ ನೀಡಲಾಗುತ್ತದೆ.

ನಗರ ಪ್ರಯಾಣಿಕರ ವೈವಿಧ್ಯಮಯ ಅಗತ್ಯಗಳನ್ನು ಪೂರೈಸಲು ನಿಖರವಾಗಿ ವಿನ್ಯಾಸಗೊಳಿಸಲಾಗಿರುವ ಬಿಗಾಸ್ ಆರ್‌ಯುವಿ350 ಉನ್ನತ- ಕಾರ್ಯಕ್ಷಮತೆ ಒದಗಿಸುವ, ದಕ್ಷತೆ ಹಾಗೂ ವಿಶ್ವಾಸಾರ್ಹತೆಗೆ ಹೆಚ್ಚಿನ ಒತ್ತು ನೀಡುವ ಇನ್ ವೀಲ್ ಹೈಪರ್ ಡ್ರೈವ್ ಮೋಟಾರ್‌ ಹೊಂದಿದೆ. ಸಾಂಪ್ರದಾಯಿಕ ಬೆಲ್ಟ್- ಚಾಲಿತ ವ್ಯವಸ್ಥೆಗಳಿಗಿಂತ ಭಿನ್ನವಾಗಿರುವ ಆರ್‌ಯುವಿ350ಯ ಡೈರೆಕ್ಟ್ ಡ್ರೈವ್ ಮೋಟಾರ್ ವ್ಯವಸ್ಥೆಯು ಬ್ಯಾಟರಿ ಚಾರ್ಜ್​ (ವಿದ್ಯುತ್) ನಷ್ಟ ಆಗುವುದನ್ನು ಕಡಿಮೆ ಮಾಡುತ್ತದೆ. ಆ ಮೂಲಕ ಉತ್ತಮ ದಕ್ಷತೆ ಮತ್ತು ಹೆಚ್ಚುನ ಕಾರ್ಯಕ್ಷಮತೆಗೆ ನೀಡುತ್ತದೆ. ಈ ವಿನ್ಯಾಸವು ಶಕ್ತಿಯುತ ಮತ್ತು ಮೃದುವಾದ ಆಕ್ಸಲರೇಷನ್ ಆಗುವಂತೆ ನೋಡಿಕೊಳ್ಳುತ್ತದೆ.

ಉನ್ನತ ಕಾರ್ಯಕ್ಷಮತೆ ಮತ್ತು ವೈವಿಧ್ಯಮಯತೆ

ಆರ್‌ಯುವಿ350ನ ಅಸಾಧಾರಣ ಫೀಚರ್ ಎಂದರೆ ಅದರ ಗ್ರೇಡೇಬಿಲಿಟಿ. ಇದು ಕಡಿದಾದ ಇಳಿಜಾರು ಹಾದಿಗಳಲ್ಲಿ ಸುಲಭವಾಗಿ ಸಾಗಲು ಅನುವು ಮಾಡಿಕೊಡುತ್ತದೆ. ಈ ದ್ವಿಚಕ್ರ ವಾಹನವು ವಿವಿಧ ರೀತಿಯ ಭೂಪ್ರದೇಶಗಳಿಗೂ ಉತ್ತಮ ಆಯ್ಕೆಯಾಗಿದೆ. ಗುಡ್ಡಗಾಡು ಪ್ರದೇಶಗಳಲ್ಲಿ, ನಗರ ಪ್ರದೇಶಗಳಲ್ಲಿ ಅಥವಾ ಸಮತಟ್ಟಾದ ನಗರ ರಸ್ತೆಗಳಲ್ಲಿ ಹೀಗೆ ಎಲ್ಲೇ ಪ್ರಯಾಣಿಸುತ್ತಿರಲಿ ಆರ್‌ಯುವಿ350 ಸ್ಥಿರ ಮತ್ತು ವಿಶ್ವಾಸಾರ್ಹ ರೈಡಿಂಗ್ ಸೌಕರ್ಯವನ್ನು ಒದಗಿಸುತ್ತದೆ.

ಬಾಳಿಕೆ ಮತ್ತು ಸುರಕ್ಷತೆ

ಬಾಳಿಕೆ ಮತ್ತು ಸುರಕ್ಷತೆ ಎಂಬುದು ಆರ್‌ಯುವಿ350 ವಿನ್ಯಾಸದ ಅವಿಭಾಜ್ಯ ಅಂಗ. ವಾಹನವು ದೃಢವಾದ, ಗಟ್ಟಿಯಾದ ಲೋಹದ ಬಾಡಿ ಹೊಂದಿದ್ದು, ಆ ಮೂಲಕ ವಾಹನದ ಬಾಳಿಕೆ ಹೆಚ್ಚಿಸಲಾಗಿದೆ. ಜೊತೆಗೆ ಸವಾರನಿಗೆ ಹೆಚ್ಚುವರಿ ಸುರಕ್ಷತೆ ಒದಗಿಸುತ್ತದೆ. ಈ ಗಟ್ಟಿಮುಟ್ಟಾದ ವಾಹನವು 16-ಇಂಚಿನ ಚಕ್ರಗಳನ್ನು ಹೊಂದಿದ್ದು, ಆ ಚಕ್ರಗಳು ಹೆಚ್ಚಿನ ಸ್ಥಿರತೆ ಮತ್ತು ನಿಯಂತ್ರಣವನ್ನು ಒದಗಿಸುತ್ತದೆ. ಚಕ್ರದ ದೊಡ್ಡ ಗಾತ್ರವು ಸವಾರಿಯ ಗುಣಮಟ್ಟವನ್ನು ಸುಧಾರಿಸುತ್ತದೆ, ಗುಂಡಿಗಳು ಮತ್ತು ಉಬ್ಬು ತಗ್ಗುಗಳನ್ನು ಹೊಂದಿರುವ ರಸ್ತೆಗಳ ಮೇಲ್ಮೈಗಳ ಮೇಲೆ ಸುಗಮವಾಗಿ ಮುಂದೆ ಸಾಗಲು ಅನುವು ಮಾಡಿಕೊಡುತ್ತದೆ.

ರೈಡರ್ ನ ಆರಾಮದಾಯಕತೆ ಮತ್ತು ಅನುಕೂಲತೆ

ಆರ್‌ಯುವಿ350 ಅನ್ನು ರೈಡರ್ ಗೆ ಆರಾಮದಾಯಕತೆ ಮತ್ತು ಅನುಕೂಲತೆಯನ್ನು ಒದಗಿಸುವ ವಿಚಾರವನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾಗಿದೆ. ಅತ್ಯುತ್ತಮ ಸೀಟಿಂಗ್ ವ್ಯವಸ್ಥೆಯು ಸುದೀರ್ಘ ಪ್ರಯಾಣದ ಸಮಯದಲ್ಲಿಯೂ ಉತ್ತಮ ಸೌಕರ್ಯವನ್ನು ಒದಗಿಸುತ್ತದೆ. ಹೆಚ್ಚುವರಿಯಾಗಿ, ಸೀಟು ವಿಶಾಲವಾಗಿದ್ದು, ಈ ವಿಶಾಲವಾದ ಸೀಟಿನ ಕೆಳಗೆ ಉತ್ತಮ ಸ್ಟೋರೇಜ್ ವ್ಯವಸ್ಥೆ ಕೂಡ ಇದೆ. ಈ ಮೂಲಕ ರೈಡರ್ ಗಳು ತಮ್ಮ ಅಗತ್ಯ ವಸ್ತುಗಳನ್ನು ಅನುಕೂಲಕರವಾಗಿ ಸಾಗಿಸಲು ಅನುವು ಮಾಡಿಕೊಡುತ್ತದೆ. ಸುಧಾರಿತ ಸಸ್ಪೆನ್ಷನ್ ವ್ಯವಸ್ಥೆಯು ಆಘಾತ, ವೈಬ್ರೇಷನ್ ಗಳು ಅಥವಾ ಕಂಪನಗಳನ್ನು ಪರಿಣಾಮಕಾರಿಯಾಗಿ ಕಡಿಮೆ ಮಾಡುತ್ತದೆ. ಜೊತೆಗೆ ಉಬ್ಬು ತಗ್ಗು ರಸ್ತೆಗಳಲ್ಲಿ ಸುಗಮ ಸವಾರಿ ಮಾಡುವ ಸೌಕರ್ಯ ಒದಗಿಸುತ್ತದೆ.

ಇದನ್ನೂ ಓದಿ: Tata Motors: ನೆಕ್ಸಾನ್, ಪಂಚ್‌ ಮೂಲಕ ಎಸ್‌ಯುವಿ ಮಾರುಕಟ್ಟೆಯಲ್ಲಿ ಮುನ್ನಡೆ ಸಾಧಿಸಿದ ಟಾಟಾ ಮೋಟಾರ್ಸ್

ಆಧುನಿಕ ಫೀಚರ್ ಗಳು ಮತ್ತು ಕನೆಕ್ಟಿವಿಟಿ ವ್ಯವಸ್ಥೆ

ಆಧುನಿಕ ಫೀಚರ್ ಗಳ ಶ್ರೇಣಿಯನ್ನು ಹೊಂದಿರುವ ಆರ್‌ಯುವಿ350 ಸವಾರರ ಒಟ್ಟಾರೆ ಅನುಭವ ಹೆಚ್ಚಿಸುವ ಗುರಿ ಹೊಂದಿದೆ. ಡಿಜಿಟಲ್ ಡಿಸ್ಪ್ಲೇ ಕಾಲ್ ನೋಟಿಫಿಕೇಷನ್ ಗಳು, ಟರ್ನ್ ಬೈ ಟರ್ನ್ ನ್ಯಾವಿಗೇಷನ್, ಲೈವ್ ವೆಹಿಕಲ್ ಟ್ರ್ಯಾಕಿಂಗ್, ಜಿಯೋ ಫೆನ್ಸಿಂಗ್, ವಾಹನ ಇಮ್ಮೊಬಿಲೈಸೇಷನ್, ಡ್ಯುಯಲ್ ಥೀಮ್, ಹಗಲು ರಾತ್ರಿ ಮೋಡ್, ಡಾಕ್ಯುಮೆಂಟ್ ಸ್ಟೋರೇಜ್, ವೇಗ, ಬ್ಯಾಟರಿ ಸ್ಥಿತಿ ಮತ್ತು ರೇಂಜ್ ನಂತಹ ನೈಜ-ಸಮಯದ ಮಾಹಿತಿ ಒದಗಿಸುತ್ತದೆ. ಈ ಮೂಲಕ ಸವಾರರು ಎಲ್ಲಾ ಅಗತ್ಯ ಮಾಹಿತಿಯು ಸುಲಭವಾಗಿ ಲಭ್ಯವಿರುವುದನ್ನು ಖಚಿತಪಡಿಸಿಕೊಳ್ಳಬಹುದು. ಇದಲ್ಲದೆ, ವಾಹನವು ಬ್ಲೂಟೂತ್ ಮತ್ತು ಟೆಲಿಮ್ಯಾಟಿಕ್ಸ್‌ ನಂತಹ ಸ್ಮಾರ್ಟ್ ಕನೆಕ್ಟಿವಿಟಿ ಫೀಚರ್ ಗಳನ್ನು ಒಳಗೊಂಡಿದೆ. ಈ ವ್ಯವಸ್ಥೆಯು ಸವಾರರು ಸಂಪರ್ಕದಲ್ಲಿರಲು ಮತ್ತು ಸುಲಭವಾಗಿ ಮುಂದೆ ಸಾಗಲು ಅನುವು ಮಾಡಿಕೊಡುತ್ತದೆ.

ಪರಿಸರ ಸ್ನೇಹಿ ಮತ್ತು ಆರ್ಥಿಕ ಸ್ನೇಹಿ

ಆರ್‌ಯುವಿ350 ಕೇವಲ ಹೆಚ್ಚಿನ ಕಾರ್ಯಕ್ಷಮತೆ ಒದಗಿಸುವ ವಾಹನ ಮಾತ್ರವೇ ಅಲ್ಲ, ಜೊತೆಗೆ ಪರಿಸರ ಸ್ನೇಹಿ ಆಯ್ಕೆಯೂ ಆಗಿದೆ. ಆ ಮೂಲಕ ಈ ವಾಹನವು ಸ್ವಚ್ಛ ಮತ್ತು ಆರೋಗ್ಯಕರ ಪರಿಸರಕ್ಕೆ ಕೊಡುಗೆ ನೀಡುತ್ತದೆ. ವಾಹನದ ಸಮರ್ಥ ವಿನ್ಯಾಸ ಮತ್ತು ಕಡಿಮೆ ನಿರ್ವಹಣಾ ಅಗತ್ಯತೆಗಳು ಇದನ್ನು ನಗರ ಪ್ರಯಾಣಿಕರಿಗೆ ಆರ್ಥಿಕವಾಗಿ ನೆರವಾಗುವ ಆಯ್ಕೆಯನ್ನಾಗಿಯೂ ಮಾಡುತ್ತದೆ.

ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಹೊಸ ಮಾನದಂಡಗಳನ್ನು ಸ್ಥಾಪಿಸುವುದು

ಸ್ಕೂಟರ್​ ಬಿಡುಗಡೆ ಕುರಿತು ಬಿಗಾಸ್ ನ ಸಂಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಹೇಮಂತ್ ಕಾಬ್ರಾ ಮಾತನಾಡಿ “ನಗರದ ಸಂಚಾರ ವ್ಯವಸ್ಥೆಗೆ ಹೊಸತನ ನೀಡಲೆಂದೇ ವಿನ್ಯಾಸಗೊಳಿಸಲಾದ ಕ್ರಾಂತಿಕಾರಿ ಬಿಗಾಸ್ಆರ್‌ಯುವಿ350 ಅನ್ನು ಪರಿಚಯಿಸಲು ಸಂತೋಷ ಪಡುತ್ತೇವೆ. ಇದು ನಾವೀನ್ಯತೆ ಕಡೆಗೆ ನಾವು ಹೊಂದಿರುವ ನಮ್ಮ ಬದ್ಧತೆಗೆ ಸಾಕ್ಷಿ. ಆರ್‌ಯುವಿ350ನ ಸುಧಾರಿತ ಫೀಚರ್ ಗಳು, ದೃಢ ವಿನ್ಯಾಸ ಮತ್ತು ಅತ್ಯುತ್ತಮ ಕಾರ್ಯಕ್ಷಮತೆ ನೀಡುತ್ತದೆ. ಆರ್‌ಯುವಿ350 ನಮ್ಮ ತಾಂತ್ರಿಕ ಹೆಚ್ಚುಗಾರಿಕೆಗೆ ಉದಾಹರಣೆ. ಇದು ಮೇಕ್ ಇನ್ ಇಂಡಿಯಾ ಉಪಕ್ರಮದೊಂದಿಗೆ ಸೂಕ್ತವಾಗಿ ಹೊಂದಿಕೆಯಾಗುತ್ತದೆ. ಗುಣಮಟ್ಟದ ಉತ್ಪನ್ನಗಳನ್ನು ದೇಶದಲ್ಲಿಯೇ ಉತ್ಪಾದಿಸುವ ನಮ್ಮ ಬದ್ಧತೆಯನ್ನು ಈ ವಾಹನ ತೋರಿಸುತ್ತದೆ. ಈ ವಾಹನವು ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಹೊಸ ಮಾನದಂಡಗಳನ್ನು ಸ್ಥಾಪಿಸುತ್ತದೆ ಎಂದು ನಾವು ನಂಬಿದ್ದೇವೆ” ಎಂದು ಹೇಳಿದರು.

Continue Reading

ಕರ್ನಾಟಕ

Tata Motors: ನೆಕ್ಸಾನ್, ಪಂಚ್‌ ಮೂಲಕ ಎಸ್‌ಯುವಿ ಮಾರುಕಟ್ಟೆಯಲ್ಲಿ ಮುನ್ನಡೆ ಸಾಧಿಸಿದ ಟಾಟಾ ಮೋಟಾರ್ಸ್

Tata Motors: ಟಾಟಾ ಮೋಟಾರ್ಸ್‌ನ ಎರಡು ಉತ್ಪನ್ನಗಳಾದ ಪಂಚ್ ಮತ್ತು ನೆಕ್ಸಾನ್ ದೇಶದಲ್ಲಿ ಹೆಚ್ಚು ಮಾರಾಟವಾಗುವ ಎಸ್‌ಯುವಿಗಳಾಗಿ ಹೊರಹೊಮ್ಮಿರುವುದರಿಂದ ಆರ್ಥಿಕ ವರ್ಷ 24 ಅನ್ನು ಅತ್ಯುತ್ತಮ ರೀತಿಯಲ್ಲಿ ಆರಂಭಿಸಿದೆ. ಟಾಟಾ ನೆಕ್ಸಾನ್ ರೇಸ್‌ನಲ್ಲಿ ಇದ್ದಂತೆ ಪೋಲ್ ಪೊಸಿಷನ್ ಅನ್ನು ಪಡೆದುಕೊಂಡಿದ್ದು, ಈ ವಿಭಾಗದಲ್ಲಿ ಸತತ ಮೂರು ವರ್ಷಗಳ ಕಾಲ ಪ್ರಾಬಲ್ಯ ಸಾಧಿಸಿದೆ.

VISTARANEWS.COM


on

Tata Motors has taken the lead in the SUV market with Nexon Punch
Koo

ಬೆಂಗಳೂರು: ಭಾರತದ ಪ್ರಮುಖ ವಾಹನ ತಯಾರಕರಲ್ಲಿ ಒಂದಾದ ಟಾಟಾ ಮೋಟಾರ್ಸ್ (Tata Motors) ಅದರ ಎರಡು ಉತ್ಪನ್ನಗಳಾದ ಪಂಚ್ ಮತ್ತು ನೆಕ್ಸಾನ್ ದೇಶದಲ್ಲಿ ಹೆಚ್ಚು ಮಾರಾಟವಾಗುವ ಎಸ್‌ಯುವಿಗಳಾಗಿ ಹೊರಹೊಮ್ಮಿರುವುದರಿಂದ ಆರ್ಥಿಕ ವರ್ಷ 24 ಅನ್ನು ಅತ್ಯುತ್ತಮ ರೀತಿಯಲ್ಲಿ ಮುಕ್ತಾಯಗೊಳಿಸಿದೆ. ಟಾಟಾ ನೆಕ್ಸಾನ್ ರೇಸ್‌ನಲ್ಲಿ ಇದ್ದಂತೆ ಪೋಲ್ ಪೊಸಿಷನ್ ಅನ್ನು ಪಡೆದುಕೊಂಡಿದ್ದು, ಈ ವಿಭಾಗದಲ್ಲಿ ಸತತ ಮೂರು ವರ್ಷಗಳ ಕಾಲ ಪ್ರಾಬಲ್ಯ ಸಾಧಿಸಿದೆ. ವಿಭಾಗದಲ್ಲಿ ಭಾರಿ ಸ್ಪರ್ಧೆಯ ಹೊರತಾಗಿಯೂ ಪಂಚ್ ಎರಡನೇ ಸ್ಥಾನದಲ್ಲಿದೆ.

Tata Punch

ಟಾಟಾ ನೆಕ್ಸಾನ್ ಇತ್ತೀಚೆಗೆ ತನ್ನ 7ನೇ ವಾರ್ಷಿಕೋತ್ಸವ ಸಂದರ್ಭದಲ್ಲಿ 7 ಲಕ್ಷ ಯುನಿಟ್ ಮಾರಾಟದ ಮೈಲಿಗಲ್ಲನ್ನು ಸಾಧಿಸಿದ್ದು, ಇದು ಭಾರತದ ಅತ್ಯಂತ ಪ್ರೀತಿಪಾತ್ರ ಎಸ್‌ಯುವಿ ಆಗಿದೆ.

ಕಾಂಪ್ಯಾಕ್ಟ್ ಎಸ್‌ಯುವಿ ವಿಭಾಗವು ಇತ್ತೀಚಿನ ವರ್ಷಗಳಲ್ಲಿ ಗಮನಾರ್ಹ ಬೆಳವಣಿಗೆಯನ್ನು ಪ್ರದರ್ಶಿಸಿದೆ. ಈ ವಿಭಾಗವು ಅತ್ಯಂತ ಸ್ಪರ್ಧಾತ್ಮಕ ಮತ್ತು ತೀವ್ರ ಪೈಪೋಟಿಯ ವಿಭಾಗವಾಗಿದೆ ಮತ್ತು ಟಾಟಾ ಮೋಟಾರ್ಸ್ ಈ ವಿಭಾಗದಲ್ಲಿರುವ ನಾಯಕರಲ್ಲಿ ಒಬ್ಬರಾಗಿದೆ. ನೆಕ್ಸಾನ್ ಮತ್ತು ಪಂಚ್‌ಗಾಗಿ ವಿವಿಧ ಆವಿಷ್ಕಾರಗಳನ್ನು ಪರಿಚಯಿಸಲು ಕಂಪನಿಯು ಮಾಡಿರುವ ಪ್ರಯತ್ನಗಳನ್ನು ಗಮನಿಸಬಹುದಾಗಿದೆ.

ಇದನ್ನೂ ಓದಿ: Agumbe Ghat: ಭಾರಿ ಮಳೆ; ಸೆ.15ರವರೆಗೆ ಆಗುಂಬೆ ಘಾಟಿಯಲ್ಲಿ ಭಾರಿ ವಾಹನಗಳ ಸಂಚಾರ ನಿಷೇಧ!

2017ರಲ್ಲಿ ಪ್ರಾರಂಭವಾದಾಗಿನಿಂದಲೂ ನೆಕ್ಸಾನ್ ತನ್ನ ವಿಶಿಷ್ಟತೆ ಮತ್ತು ಔಟ್ ಆಫ್ ದಿ ಬಾಕ್ಸ್ ಗುಣ ಅಂದರೆ ವಿಭಿನ್ನತೆಯನ್ನು ಬಯಸುವ ಗ್ರಾಹಕರನ್ನು ಆಕರ್ಷಿಸಿದೆ ಮತ್ತು ಇದು ಅತ್ಯುತ್ತಮವಾದ ಕಾರ್ಯಕ್ಷಮತೆ ಮತ್ತು ಸೌಕರ್ಯವನ್ನು ಒದಗಿಸುತ್ತದೆ. ನೆಕ್ಸಾನ್‌ನ ಭವಿಷ್ಯಕ್ಕೆ ಸಲ್ಲುವ ವಿನ್ಯಾಸ, ಉನ್ನತ ಸುರಕ್ಷತಾ ಫೀಚರ್‌ಗಳು ಮತ್ತು ಸ್ಥಿರವಾದ ಬೆಳವಣಿಗೆಯಿಂದ ಇದು ಭಾರತೀಯ ಗ್ರಾಹಕರ ಜನಪ್ರಿಯ ಆಯ್ಕೆಯಾಗಿದೆ ಮತ್ತು ವಿಶ್ವಾಸಾರ್ಹತೆಯ ಖ್ಯಾತಿಯನ್ನು ಗಳಿಸಿದೆ.

ನೆಕ್ಸಾನ್ 2018 ರ ಭಾರತದ ಮೊದಲ ಜಿಎನ್‌ಸಿಎಪಿ 5 ಸ್ಟಾರ್ ರೇಟಿಂಗ್ ಪಡೆದ ವಾಹನವಾಗಿದೆ, ಆ ಮೂಲಕ ಇದು ಎಲ್ಲಾ ಭಾರತೀಯ ಆಟೋಮೊಬೈಲ್‌ಗಳಿಗೆ ಅನುಸರಿಸಲು ಮಾನದಂಡವನ್ನು ಸ್ಥಾಪಿಸಿದೆ. ಅಂದಿನಿಂದ ಇಂದಿನವರೆಗೂ ಪರಂಪರೆ ಮುಂದುವರಿದಿದೆ. 2024ರ ಫೆಬ್ರವರಿಯಲ್ಲಿ ಹೊಸ ಜನರೇಷನ್‌ನ ನೆಕ್ಸಾನ್ ವರ್ಧಿತ 2022 ಪ್ರೋಟೋಕಾಲ್ ಪ್ರಕಾರ ತನ್ನ ಜಿಎನ್‌ಸಿಎಪಿ 5 ಸ್ಟಾರ್ ರೇಟಿಂಗ್ ಅನ್ನು ಪಡೆದುಕೊಂಡಿತು. ಅದರ ಬೆನ್ನಲ್ಲೇ ನೆಕ್ಸಾನ್.ಇವಿ ಈ ತಿಂಗಳು ಭಾರತ್- ಎನ್‌ಸಿಎಪಿಯಿಂದ ಪ್ರತಿಷ್ಠಿತ 5-ಸ್ಟಾರ್ ರೇಟಿಂಗ್ ಅನ್ನು ಪಡೆಯಿತು.

ಭಾರತೀಯ ರಸ್ತೆಗಳಲ್ಲಿ 7 ಲಕ್ಷ ನೆಕ್ಸಾನ್‌ ಇವೆ ಮತ್ತು ನೆಕ್ಸಾನ್ 41 ಪ್ರತಿಷ್ಠಿತ ಪ್ರಶಸ್ತಿಗಳನ್ನು ಗಳಿಸಿವೆ. ಅದರ ಅತ್ಯದ್ಭುತ ಕಾರ್ಯಕ್ಷಮತೆ ಅದರ ಮಾರಾಟದ ಬೆಳವಣಿಗೆಯಲ್ಲಿ ಪ್ರಮುಖ ಕೊಡುಗೆ ನೀಡಿರುವುದು ಎಲ್ಲರೂ ಗಮನಿಸಬಹುದಾಗಿದೆ. ಕಳೆದ ಎರಡು ವರ್ಷಗಳಲ್ಲಿ (2022 ಮತ್ತು 2023) ನೆಕ್ಸಾನ್ ನ 3 ಲಕ್ಷಕ್ಕೂ ಹೆಚ್ಚು ಯುನಿಟ್‌ಗಳು ಮಾರಾಟವಾಗಿವೆ. ನೆಕ್ಸಾನ್ ಪೆಟ್ರೋಲ್, ಡೀಸೆಲ್ ಮತ್ತು ಎಲೆಕ್ಟ್ರಿಕ್ ನ ಬಹು ಪವರ್‌ಟ್ರೇನ್‌ಗಳಲ್ಲಿ ಲಭ್ಯವಿದೆ. ನೆಕ್ಸಾನ್ ಕಾಲ ಕಾಲಕ್ಕೆ ದೃಢವಾಗಿ ಬೆಳೆದಿದೆ ಮತ್ತು ಅದರ ವಿಭಾಗ ಪ್ರಮುಖ ವಿನ್ಯಾಸ, ವಿಭಾಗದ ಅತ್ಯುತ್ತಮ ಫೀಚರ್ ಗಳು ಮತ್ತು ಅತ್ಯಾಧುನಿಕ ತಂತ್ರಜ್ಞಾನದಿಂದಾಹಿ ನಿಷ್ಠಾವಂತ ಅಭಿಮಾನಿಗಳನ್ನು ಗಳಿಸಿದೆ.

ಇದನ್ನೂ ಓದಿ: Lakshmi Hebbalkar: ಅಂಗನವಾಡಿಗಳಿಗೆ ಕಳಪೆ ಆಹಾರ ಪೂರೈಕೆಯಾದರೆ ಉಪನಿರ್ದೇಶಕರ ಮೇಲೆ ಕಠಿಣ ಕ್ರಮ: ಹೆಬ್ಬಾಳಕರ್

ಟಾಟಾ ಪಂಚ್: ಮತ್ತೊಂದೆಡೆ ಟಾಟಾ ಪಂಚ್ ಎಸ್‌ಯುವಿ ಗುಣಲಕ್ಷಣಗಳನ್ನು ಎಲ್ಲರೂ ಮೆಚ್ಚುವಂತೆ ಮಾಡಿದೆ. ಪಂಚ್‌ನ ಅದ್ಭುತ ವಿನ್ಯಾಸ, ಸೌಕರ್ಯ ಮತ್ತು ಅಪ್ರತಿಮ ಸಾಮರ್ಥ್ಯವು ಈಗಾಗಲೇ ಕಾರು ಹೊಂದಿರುವ ಮತ್ತು ಮೊದಲ ಬಾರಿಯ ಕಾರು ಖರೀದಿದಾರರಿಗೂ ಆಸಕ್ತಿ ಹುಟ್ಟುವಂತೆ ಮಾಡುತ್ತದೆ.

ಪಂಚ್ ಎಸ್‌ಯುವಿಯು ಅದ್ಭುತ ನಿಲುವು, ವಿಶಾಲವಾದ ಇಂಟೀರಿಯರ್‌ಗಳು ಮತ್ತು ವಿಭಾಗದಲ್ಲಿಯೇ ಅತ್ಯುನ್ನತ ಸುರಕ್ಷತಾ ರೇಟಿಂಗ್ (ಜಿಎನ್‌ಸಿಎಪಿ 5 ಸ್ಟಾರ್ ರೇಟಿಂಗ್) ಅನ್ನು ಹೊಂದಿದ್ದು, ನಿಸ್ಸಂದೇಹವಾಗಿ ಸಮಗ್ರ ಪ್ಯಾಕೇಜ್ ಹೊಂದಿರುವ ಕಾರ್ ಆಗಿದೆ. ಅದಲ್ಲದೆ, ಪಂಚ್.ಇವಿ ಇತ್ತೀಚೆಗೆ 5-ಸ್ಟಾರ್ ಬಿ ಎನ್ ಸಿ ಎ ಪಿ ರೇಟಿಂಗ್ ಅನ್ನು ಪಡೆದುಕೊಂಡಿದೆ, ಆ ಮೂಲಕ ಇದು ಭಾರತದ ಸುರಕ್ಷಿತ ಇವಿ ವಾಹನ ಎಂಬ ಹೆಗ್ಗಳಿಕೆ ಗಳಿಸಿದೆ.

ಒಟ್ಟಾರೆಯಾಗಿ, ಪಂಚ್ ಉಪ-ಕಾಂಪ್ಯಾಕ್ಟ್ ಎಸ್‌ಯುವಿ ವಿಭಾಗದಲ್ಲಿ ಮುಂಚೂಣಿ ಸಾಧಿಸಿದೆ ಮತ್ತು ಆರ್ಥಿಕ ವರ್ಷ 24ರಲ್ಲಿ ಶ್ಲಾಘನೀಯ 170,076 ಯುನಿಟ್‌ಗಳನ್ನು ಮಾರಾಟ ಮಾಡಿದೆ ಮತ್ತು ಮಾರುಕಟ್ಟೆಯಲ್ಲಿ ತನ್ನ ಸ್ಥಾನವನ್ನು ಗಟ್ಟಿಗೊಳಿಸಿದೆ. ಮಾರ್ಚ್ 2024ರ ಸಮಯದಲ್ಲಿ ಪಂಚ್ ಉದ್ಯಮದಲ್ಲಿ #1 ಮಾರಾಟವಾದ ಕಾರು ಎಂಬ ಮನ್ನಣೆ ಗಳಿಸಿತ್ತು.

ಇದನ್ನೂ ಓದಿ: KMH CUP: ʼಕೆಎಂಎಚ್‌ ಕಪ್‌ʼ ಕ್ರಿಕೆಟ್‌ಗೆ ನಟಿ ಭಾವನಾ ರಾಮಣ್ಣ ರಾಯಭಾರಿ

ಭಾರತದಲ್ಲಿನ ಕಾಂಪ್ಯಾಕ್ಟ್ ಎಸ್‌ಯುವಿ ಮಾರುಕಟ್ಟೆಯು ಕಳೆದ ಕೆಲವು ವರ್ಷಗಳಲ್ಲಿ ಗಣನೀಯ ಬೆಳವಣಿಗೆಯನ್ನು ಕಂಡಿದೆ. ಮಾರುಕಟ್ಟೆಯ ಸ್ಥಿರ ಬೆಳವಣಿಗೆಯಿಂದ ಈ ವಿಚಾರ ವ್ಯಕ್ತವಾಗಿದೆ. ಉದ್ಯಮವು ಈ ವಿಭಾಗದಲ್ಲಿ ಮಾರುಕಟ್ಟೆ ಪಾಲಿನಲ್ಲಿ 4% ರಿಂದ 7%ಗೆ ಏರಿಕೆ ಕಂಡಿದೆ ಮತ್ತು ದೊಡ್ಡ ಎಸ್‌ಯುವಿ ಮಾರುಕಟ್ಟೆಯಲ್ಲಿ, ಮಾರುಕಟ್ಟೆ ಪಾಲು 8% ರಿಂದ 14%ಗೆ ಬೆಳೆದಿದೆ. ಈ ಅಭಿವೃದ್ಧಿಯು ಆಟೋಮೋಟಿವ್ ಕ್ಷೇತ್ರದಲ್ಲಿ ಕಾಂಪ್ಯಾಕ್ಟ್ ಎಸ್‌ಯುವಿಗಳ ಹೆಚ್ಚುತ್ತಿರುವ ಬೇಡಿಕೆ ಮತ್ತು ಅದರ ಮೇಲೆ ಹೆಚ್ಚುತ್ತಿರುವ ಆಕರ್ಷಣೆಯನ್ನು ಸಾರುತ್ತದೆ ಮತ್ತು ಉದ್ಯಮದಲ್ಲಿ ಪ್ರಮುಖ ಶಕ್ತಿಯಾಗಿ ಅದರ ಸ್ಥಾನವನ್ನು ಗಟ್ಟಿಗೊಳಿಸುತ್ತದೆ.

Continue Reading
Advertisement
Job Alert
ಉದ್ಯೋಗ1 second ago

Job Alert: 10ನೇ ತರಗತಿ ಪಾಸಾದವರಿಗೆ ಗುಡ್‌ನ್ಯೂಸ್‌; SSCಯಿಂದ ಬರೋಬ್ಬರಿ 8,326 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

OTT Release
Latest4 mins ago

OTT Release : ಒಟಿಟಿಯಲ್ಲಿ ಈ ವಾರ ಬಿಡುಗಡೆಯಾಗಲಿರುವ ಹೊಸ ಚಲನಚಿತ್ರಗಳು, ವೆಬ್ ಸರಣಿಗಳ ಪಟ್ಟಿ ಹೀಗಿವೆ

Chinnamma song from Krishnam Pranaya Sakhi is at 3rd position in All India YouTube trending list
ಕರ್ನಾಟಕ9 mins ago

Kannada New Movie: “ಯೂಟ್ಯೂಬ್ ಟ್ರೆಂಡಿಂಗ್” ಪಟ್ಟಿಯ 3ನೇ ಸ್ಥಾನದಲ್ಲಿ “ಕೃಷ್ಣಂ ಪ್ರಣಯ ಸಖಿ” ಚಿತ್ರದ “ಚಿನ್ನಮ್ಮ” ಹಾಡು!

Kanguva vs Alia Bhatt Kanguva finally set a date
ಕಾಲಿವುಡ್11 mins ago

Kanguva vs Alia Bhatt: ಕಂಗುವ- ಮಾರ್ಟಿನ್‌ ಜತೆ ಆಲಿಯಾ ಭಟ್‌ ಸಿನಿಮಾ ಕೂಡ ಕ್ಲ್ಯಾಶ್‌!

DCET 2024
ಬೆಂಗಳೂರು19 mins ago

DCET 2024 : ಡಿಸಿಇಟಿ ಫಲಿತಾಂಶ ಪ್ರಕಟಿಸಿದ ಕರ್ನಾಟಕ ಪರೀಕ್ಷಾ ಪ್ರಾಧಿಕಾರ

vinay Kulkarni
ಕರ್ನಾಟಕ20 mins ago

Vinay Kulkarni: ವಿನಯ್‌ ಕುಲಕರ್ಣಿಗೆ ಧಾರವಾಡ ಜಿಲ್ಲೆ ಪ್ರವೇಶ ಮತ್ತೆ ನಿರಾಕರಿಸಿದ ಕೋರ್ಟ್‌

Sania Mirza
ಕ್ರೀಡೆ38 mins ago

Sania Mirza: ಶಮಿ ಜತೆ ಮದುವೆ ಟಾಕ್​ ಬೆನ್ನಲ್ಲೇ ಇನ್​ಸ್ಟಾಗ್ರಾಮ್​ನಲ್ಲಿ ‘YES’ ಎಂದು ಬರೆದುಕೊಂಡ ಸಾನಿಯಾ ಮಿರ್ಜಾ

Mohamed Muizzu
ವಿದೇಶ40 mins ago

Mohamed Muizzu: ಮಾಲ್ಡೀವ್ಸ್‌ ಅಧ್ಯಕ್ಷನ ವಿರುದ್ಧ ವಾಮಾಚಾರ; ಸಚಿವೆ ಅರೆಸ್ಟ್‌

Rakshana Vedike
ಕರ್ನಾಟಕ48 mins ago

ಕರ್ನಾಟಕ ತೋಟದಪ್ಪನ ಛತ್ರ ಅಲ್ಲ; ಕನ್ನಡಿಗರಿಗೆ ಉದ್ಯೋಗಕ್ಕೆ ಆಗ್ರಹಿಸಿ ಜು.1ರಂದು ಕರವೇ ಬೃಹತ್‌ ಪ್ರತಿಭಟನೆ!

Heavy Rain
ದೇಶ48 mins ago

Heavy Rain: ಭಾರೀ ಮಳೆಗೆ ಕುಸಿದು ಬಿದ್ದ ರಾಜ್‌ಕೋಟ್‌ ವಿಮಾನ ನಿಲ್ದಾಣ ಹೊರಭಾಗದ ಛಾವಣಿ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ5 hours ago

Karnataka Rain: ಭಾರಿ ಮಳೆಗೆ ಮನೆಗಳ ಗೋಡೆ ಕುಸಿತ; ಕೂದಲೆಳೆ ಅಂತರದಲ್ಲಿ ವೃದ್ಧ ಪಾರು

karnataka Weather Forecast
ಮಳೆ21 hours ago

Karnataka Weather : ಅಬ್ಬಬ್ಬಾ.. ಮುಲ್ಕಿಯಲ್ಲಿ 30 ಸೆಂ.ಮೀ ಮಳೆ ದಾಖಲು; ವಾರಾಂತ್ಯದಲ್ಲೂ ಭಾರಿ ವರ್ಷಧಾರೆ

karnataka Rain
ಮಳೆ1 day ago

Karnataka Rain : ಭಾರಿ ಮಳೆಗೆ ಪಾತಾಳ ಸೇರಿದ ಬಾವಿ; ಅಲೆಗಳ ಹೊಡೆತಕ್ಕೆ ಸಮುದ್ರಪಾಲಾದ ಮನೆ

Karnataka Weather Forecast
ಮಳೆ2 days ago

Karnataka Weather : ಭಾರಿ ಮಳೆ ಹಿನ್ನೆಲೆ ದಕ್ಷಿಣ ಕನ್ನಡಕ್ಕೆ ರೆಡ್ ಅಲರ್ಟ್; ಶುಕ್ರವಾರವೂ ಶಾಲೆಗಳಿಗೆ ರಜೆ ಘೋಷಣೆ

karnataka Weather Forecast
ಮಳೆ2 days ago

Karnataka Weather : ಭಾರಿ ಮಳೆಗೆ ಸೇತುವೆಯಿಂದ ಹೊಳೆಗೆ ಬಿದ್ದ ಕಾರು; ಮರ ಹಿಡಿದು ಪ್ರಾಣ ಉಳಿಸಿಕೊಂಡ ಸವಾರರು

Heart Attack
ಕೊಡಗು2 days ago

Heart Attack : ಕೊಡಗಿನಲ್ಲಿ ಹೃದಯಾಘಾತಕ್ಕೆ ಯುವತಿ ಬಲಿ; ಹೆಚ್ಚಾಯ್ತು ಅಲ್ಪಾಯುಷ್ಯದ ಭಯ

karnataka Rains Effected
ಮಳೆ2 days ago

Karnataka Rain : ಧಾರಾಕಾರ ಮಳೆಗೆ ಸಡಿಲಗೊಂಡ ಗುಡ್ಡಗಳು; ಧರೆ ಕುಸಿದು ಮಣ್ಣಿನಡಿ ಸಿಲುಕಿದ ಇಬ್ಬರು ಮಕ್ಕಳು

karnataka Weather Forecast
ಮಳೆ5 days ago

Karnataka Weather : ಕರಾವಳಿಯಲ್ಲಿ ಮುಂದುವರಿದ ವರುಣಾರ್ಭಟ; ಸಾಂಪ್ರದಾಯಿಕ ಮೀನುಗಾರಿಕೆಗೂ ಬ್ರೇಕ್

karnataka weather Forecast
ಮಳೆ1 week ago

Karnataka Weather : ರಭಸವಾಗಿ ಹರಿಯುವ ನೀರಲ್ಲಿ ಸಿಲುಕಿದ ಬೊಲೆರೋ; ಬಿರುಗಾಳಿ ಸಹಿತ ಮಳೆ ಎಚ್ಚರಿಕೆ

International Yoga Day 2024
ಕರ್ನಾಟಕ1 week ago

International Yoga Day 2024: ಎಲ್ಲೆಲ್ಲೂ ಯೋಗಾಯೋಗ‌ಕ್ಕೆ ಮಂಡಿಯೂರಿದ ಜನತೆ

ಟ್ರೆಂಡಿಂಗ್‌