Viral Video: ಜಾರಿ ಬಿದ್ದ ವಧುವನ್ನು ಎತ್ತದ ವರ; ಸಹೋದರನಿಂದ ಮದುವೆ ಮಂಟಪದಲ್ಲೇ ಬಿತ್ತು ಗೂಸಾ! - Vistara News

Latest

Viral Video: ಜಾರಿ ಬಿದ್ದ ವಧುವನ್ನು ಎತ್ತದ ವರ; ಸಹೋದರನಿಂದ ಮದುವೆ ಮಂಟಪದಲ್ಲೇ ಬಿತ್ತು ಗೂಸಾ!

Viral Video: ಒಡಹುಟ್ಟಿದವರ ಪ್ರೀತಿಯನ್ನು ಅಳೆಯಲು ಸಾಧ್ಯವಿಲ್ಲ. ಅದರಲ್ಲೂ ಅಣ್ಣ-ತಂಗಿಯ ಬಂಧವಂತೂ ಯಾರಿಂದಲೂ ಬಿಡಿಸಲು ಸಾಧ್ಯವಿಲ್ಲ. ತಂಗಿಯನ್ನು ಮದುವೆ ಮಾಡಿಕೊಡುವ ಜವಾಬ್ದಾರಿಯನ್ನು ನಿಭಾಯಿಸುತ್ತಾ ಇರುವ ಅಣ್ಣನಿಗೆ ತಂಗಿಯ ಕೈ ಹಿಡಿಯಲಿರುವ ವರ ದುರಂಹಕಾರಿಯಂತೆ ವರ್ತಿಸಿದರೆ ಹೇಗಾಗಿರಬೇಡ ಹೇಳಿ? ಮದುವೆಯ ಮಂಟಪಕ್ಕೆ ವಧುವನ್ನು ಕರೆದುಕೊಂಡು ಹೋಗುವಾಗ ವರನು ಸ್ವಲ್ಪವೂ ಕನಿಕರವಿಲ್ಲದೇ ವಧುವಿನ ಜೊತೆ ಕೆಟ್ಟದಾಗಿ ವರ್ತಿಸಿದ್ದಕ್ಕೆ ಕೋಪಗೊಂಡ ವಧುವಿನ ಸಹೋದರ ಮದುವೆ ಮಂಟಪದಲ್ಲಿಯೇ ವರನ ಗ್ರಹಚಾರ ಬಿಡಿಸಿದ್ದಾನೆ.ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

VISTARANEWS.COM


on

Viral Video
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo


ಶುಭ ಕಾರ್ಯಕ್ಕೆ ನೂರೆಂಟು ವಿಘ್ನಗಳು ಎಂಬಂತೆ ಒಂದು ಮದುವೆ ಮಾಡಿಸುವಾಗ ಒಂದಲ್ಲ ಒಂದು ಸಮಸ್ಯೆ ಬಂದು ಕಾಡುತ್ತಿರುತ್ತದೆ. ವರನ ಕಡೆಯವರಿಗೆ ಸರಿಯಾದ ಗೌರವ ಸಿಗಲಿಲ್ಲ, ಊಟ ಉಪಚಾರ ಸರಿಯಾಗಲಿಲ್ಲವೆಂದು ಕಿರಿಕಿರಿ ಮಾಡುವುದು ಅಥವಾ ಚಿನ್ನ ಕಡಿಮೆ, ಕಾರು ಕೊಟ್ಟಿಲ್ಲ ಹೀಗೆ ಒಂದಲ್ಲ ಒಂದು ಕಿರಿಕ್‌ ತೆಗೆದು ಜಗಳವಾಡುತ್ತಿರುತ್ತಾರೆ. ಹೀಗೆ ಹಲವಾರು ಸಮಸ್ಯೆಗಳು ಎದುರಾಗುತ್ತದೆ. ಇಂತಹ ಪರಿಸ್ಥಿತಿಯಲ್ಲೂ ಕೆಲವು ಮದುವೆ ನಡೆದರೆ, ಕೆಲವು ಮುರಿದು ಬೀಳುತ್ತದೆ. ಇದೀಗ ಮದುವೆಯ ದಿನ ಅಂತಹದೊಂದು ವಿಘ್ನ ಎದುರಾಗಿದ್ದು, ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral video) ಆಗಿದೆ.

ಮದುವೆಯ ಮಂಟಪಕ್ಕೆ ವಧುವನ್ನು ಕರೆದುಕೊಂಡು ಹೋಗುವಾಗ ವರನು ಸ್ವಲ್ಪವೂ ಕನಿಕರವಿಲ್ಲದೇ ವಧುವಿನ ಜೊತೆ ಕೆಟ್ಟದಾಗಿ ವರ್ತಿಸಿದ್ದಕ್ಕೆ ಕೋಪಗೊಂಡ ವಧುವಿನ ಸಹೋದರ ಮದುವೆ ಮಂಟಪದಲ್ಲಿಯೇ ವರನ ಗ್ರಹಚಾರ ಬಿಡಿಸಿದ್ದಾನೆ. ವರ, ವಧುವನ್ನು ಮದುವೆ ಮಂಟಪಕ್ಕೆ ಕರೆದುಕೊಂಡು ಬರುವಾಗ ಧರಧರನೆ ಎಳೆದುಕೊಂಡು ದುರಂಹಕಾರಿಯಂತೆ ವರ್ತಿಸಿದ್ದಾನೆ.. ಇದರಿಂದ ವಧು ಆಯ ತಪ್ಪಿ ಕೆಳಗೆ ಬಿದ್ದಿದ್ದಾಳೆ. ಇಷ್ಟಾದರೂ ಆಕೆಯನ್ನು ಮೇಲೆತ್ತದೆ ವರ ಆಕೆಯನ್ನು ಅದೇ ಸ್ಥಿತಿಯಲ್ಲೇ ಎಳೆದಾಡಿದ್ದಾನೆ. ನಂತರ ಮಂಟಪಕ್ಕೆ ಬಂದು ಸೋಫಾದ ಮೇಲೆ ತಾನೊಬ್ಬನೇ ಕುಳಿತಿದ್ದಾನೆ. ಇದನ್ನು ಕಂಡು ಕುಟುಂಬಸ್ಥರು ಸಹಿಸಿಕೊಂಡು ಸುಮ್ಮನಿದ್ದರೆ ವಧುವಿನ ಸಹೋದರ ಮಾತ್ರ ರೊಚ್ಚಿಗೆದ್ದು ನೇರವಾಗಿ ಮಂಟಪಕ್ಕೆ ಹೋಗಿ ವರನನ್ನು ಚೆನ್ನಾಗಿ ಥಳಿಸಿದ್ದಾನೆ. ವಧುವಿನ ಸಹೋದರ ವರನನ್ನು ಥಳಿಸಿದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ವಿಡಿಯೊದಲ್ಲಿ ವಧು ಮತ್ತು ವರ ಒಟ್ಟಿಗೆ ವೇದಿಕೆಗೆ ಬರುವಾಗ ವಧು ಎಡವಿ ನೆಲದ ಮೇಲೆ ಬಿದ್ದಿದ್ದಾಳೆ. ಆಗ ವರ ವಧುವನ್ನು ಮೇಲೆತ್ತುವ ಬದಲು, ಅವಳನ್ನು ಎಳೆದಾಡಿ ಮಂಟಪಕ್ಕೆ ಬಂದಿದ್ದಾನೆ. ಆಗ ಎಲ್ಲರಿಗೂ ಆಘಾತವಾಗುತ್ತದೆ. ನಂತರ ವರನು ನಡೆದು ಬಂದು ಸೋಫಾದ ಮೇಲೆ ಕುಳಿತನು. ಸಹೋದರಿಗೆ ಅಗೌರವವನ್ನು ತೋರಿದ ವರನ ಮೇಲೆ ಕೋಪಗೊಂಡ ವಧುವಿನ ಸಹೋದರ ವೇದಿಕೆಗೆ ಬಂದು ವರನಿಗೆ ಹೊಡೆದನು. ಆಗ ವಧುವಿನ ಕಡೆಯವರು ಆಕೆಯನ್ನು ಮೇಲೆತ್ತಿದ್ದಾರೆ.

ಸಫಿ ಮೊಹಮ್ಮದ್ ಎಂಬ ಹೆಸರಿನ ಇನ್ಸ್ಟಾಗ್ರಾಮ್ ಪುಟದಲ್ಲಿ ಈ ವಿಡಿಯೊವನ್ನು ಹಂಚಿಕೊಳ್ಳಲಾಗಿದ್ದು, ಇದಕ್ಕೆ “ವಧುವಿನ ಸಹೋದರ ದೀರ್ಘಕಾಲ ಬಾಳಲಿ” ಎಂದು ಶೀರ್ಷಿಕೆ ನೀಡಿದೆ. ಈ ವಿಡಿಯೊಗೆ ಅನೇಕರು ಪ್ರತಿಕ್ರಿಯೆ ನೀಡಿದ್ದಾರೆ. ಕೆಲವರು ವರನ ವರ್ತನೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ ಕಾಮೆಂಟ್ ಮಾಡಿ ಅವನನ್ನು ನಿಂದಿಸಿದರೆ, ಕೆಲವರು ಆ ವ್ಯಕ್ತಿಗೆ ಪಾಠ ಕಲಿಸಿದ್ದಕ್ಕಾಗಿ ವಧುವಿನ ಸಹೋದರನಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:  ಪತಿ ಜೊತೆ ಸೇರಿ ಪ್ರೇಮಿಯನ್ನು ತುಂಡು ತುಂಡಾಗಿ ಕತ್ತರಿಸಿದ ಯುವತಿ! ಸ್ನೇಹಿತೆಯ ಮನೆಯೊಳಗೆ ಸಮಾಧಿ!

ಈ ವಿಡಿಯೊಗೆ ಪ್ರತಿಕ್ರಿಯಿಸಿದ ಬಳಕೆದಾರರೊಬ್ಬರು, ತನ್ನ ಮಗಳು ತನ್ನ ಜೀವನದಲ್ಲಿ ಅಂತಹ ವ್ಯಕ್ತಿಯನ್ನು ಮದುವೆಯಾಗುವುದಕ್ಕಿಂತ ಮನೆಯಲ್ಲಿ ವಯಸ್ಸಾಗುವವರೆಗೂ ಇರುವುದೇ ಲೇಸು ಎಂದು ಕಾಮೆಂಟ್ ಮಾಡಿದ್ದಾರೆ. ಕುಟುಂಬದವರು ಆಕೆಯ ರಕ್ಷಣೆಗೆ ಬಂದಿರುವುದನ್ನು ಕಂಡು ಮತ್ತೊಬ್ಬರು ಸಂತೋಷ ವ್ಯಕ್ತಪಡಿಸಿದ್ದಾರೆ. ಮತ್ತು ವರನ ವರ್ತನೆಯ ಬಗ್ಗೆ ಅಸಹ್ಯ ವ್ಯಕ್ತಪಡಿಸಿದ್ದಾರೆ. ವಧುವಿಗೆ ನ್ಯಾಯ ಒದಗಿಸಲಾಗಿದೆ ಎಂದು ಇನ್ನೊಬ್ಬರು ತಿಳಿಸಿದ್ದಾರೆ. ಆದರೆ ಈ ಮದುವೆ ಮುರಿದು ಬಿತ್ತೆ ಅಥವಾ ಮುಂದುವರಿಯಿತೆ ಎಂಬ ಬಗ್ಗೆ ಮಾಹಿತಿ ತಿಳಿದುಬಂದಿಲ್ಲ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪರಿಸರ

ವಿಸ್ತಾರ ಗ್ರಾಮ ದನಿ: ಅಡಿಕೆ ಬೆಳೆಗಾರರೂ ‘ಇನ್‌ಕಮ್ ಟ್ಯಾಕ್ಸ್ ರಿಟರ್ನ್ಸ್ʼ ಸಲ್ಲಿಸಬೇಕಾ? ಸಲ್ಲಿಸದಿದ್ದರೆ ಏನಾಗುತ್ತದೆ?

Vistara Gramadani: ಯಾವ ಬ್ಯಾಂಕ್ ಕೂಡ TDS ಕಟ್ಟಿ (ವಿಸ್ತಾರ ಗ್ರಾಮ ದನಿ) ಅಂತ ಕೇಳಲ್ಲ. ಗಾಬರಿ ಬೇಡ. TDS ಅಂದ್ರೆ TAX Deducted at Source ಅಂತ. ಅಂದರೆ ಈಗಾಗಲೆ ನಿಮ್ಮ ಫಿಕ್ಸೆಡ್ ಡಿಪಾಸಿಟ್ (FD ಅಕೌಂಟ್) ಮೇಲೆ ಕೊಟ್ಟ ಒಟ್ಟು ಬಡ್ಡಿಯ ಮೇಲೆ 10% ಆದಾಯ ತೆರಿಗೆಯನ್ನು ನಿಮ್ಮ ಬಡ್ಡಿಯಿಂದ ಕಳೆದು, ಆದಾಯ ತೆರಿಗೆ ಇಲಾಖೆಗೆ ಕಟ್ಟಿರುತ್ತಾರೆ. ಅಡಿಕೆ ಬೆಳೆಗಾರರೂ ಇದಕ್ಕೆ ಹೊರತಲ್ಲ! ಹಾಗಾದರೆ ಹಣ ಕಟ್‌ ಆಗದ ಹಾಗೆ ಮಾಡಲು ಏನು ಮಾಡಬೇಕು? ಇಲ್ಲಿದೆ ಸರಳ ಮಾಹಿತಿ.

VISTARANEWS.COM


on

Arecanut Price
Koo
Aravinda Sigadal

| ಅರವಿಂದ ಸಿಗದಾಳ್, ಮೇಲುಕೊಪ್ಪ
ಉಜಿರೆ ಸಮೀಪದ ಒಂದು ಹಳ್ಳಿಯಿಂದ ಮಂಜುನಾಥ್ ಎನ್ನುವವರು ಫೋನ್ ಮಾಡಿ “ನಾನು ಅಡಿಕೆ ಬೆಳೆಗಾರ, ನಿಮ್ಮ ಅಡಿಕೆ ಬೆಳೆಗಾರರ ವಾಟ್ಸಪ್ ಗ್ರೂಪ್‌ನಲ್ಲಿದ್ದೇನೆ. ನನಗೆ ನನ್ನ ಬ್ಯಾಂಕಿಂದ ಒಂದು ಇ-ಮೇಲ್‌ ಬಂದಿದೆ. ಅದರಲ್ಲಿ ₹ 6,200 TDS ಕಟ್ಟಬೇಕು ಅಂತ ಬಂದಿದೆ. ಎನು ಮಾಡುವುದು? ಈ TDS ಅಂದ್ರೆ ಎಂತ?” ಅಂದ್ರು. “ಮೊದಲನೆಯದಾಗಿ, ಯಾವ ಬ್ಯಾಂಕ್ ಕೂಡ TDS ಕಟ್ಟಿ ಅಂತ ಕೇಳಲ್ಲ. ಗಾಬರಿ ಬೇಡ. TDS ಅಂದ್ರೆ TAX Deducted at Source ಅಂತ. ಅಂದ್ರೆ ಈಗಾಗಲೆ ನಿಮ್ಮ ಫಿಕ್ಸೆಡ್ ಡಿಪೋಸಿಟ್ (FD ಅಕೌಂಟ್) ಮೇಲೆ ಕೊಟ್ಟ ಒಟ್ಟು ಬಡ್ಡಿಯ ಮೇಲೆ 10% ಆದಾಯ ತೆರಿಗೆಯನ್ನು ನಿಮ್ಮ ಬಡ್ಡಿಯಿಂದ ಕಳೆದು, ಆದಾಯ ತೆರಿಗೆ ಇಲಾಖೆಗೆ ಕಟ್ಟಿರುತ್ತಾರೆ. ನಿಮಗೆ ಬಂದಿರೋ ಮಾಹಿತಿ ಬಹುಶಃ (Vistara Gramadani) ಅದೇ ಇರಬೇಕು” ಅಂದೆ.

ನಾನೊಬ್ಬ ಕೃಷಿಕ, ತೆರಿಗೆ ಕಟ್ಟಬೇಕಾ?

“ಅಯ್ಯೋ, ನನ್ನಿಂದ ಯಾಕೆ ಆದಾಯ ತೆರಿಗೆ ತಗೊಂಡಿದಾರೆ? ನಾನೊಬ್ಬ ಕೃಷಿಕ. ಈ ರೀತಿ ನನಗೆ ಗೊತ್ತಿಲ್ಲದೆ ಟ್ಯಾಕ್ಸ್ ತಗೊಂಡಿದ್ದು ತಪ್ಪಲ್ವಾ? ಅದರಲ್ಲೂ ನನಗೆ ಕೃಷಿ ಇನ್‌ಕಮ್ ಬಿಟ್ಟು ಬೇರೆ ಆದಾಯ ಇಲ್ಲ. ಕೃಷಿ ಆದಾಯಕ್ಕೆ ಟ್ಯಾಕ್ಸ್ ಇಲ್ಲ ಅಲ್ವಾ?” ಅಂದ್ರು. “ಹೌದು. ಕೃಷಿ ಆದಾಯಕ್ಕೆ ಟ್ಯಾಕ್ಸ್ ಇಲ್ಲ. ಕೃಷಿಕರಾದವರಿಗೆ ಕೃಷಿಯೇತರ ಆದಾಯ ಇದ್ರೆ, ಅದೂ ತೆರಿಗೆ ಮಿತಿಗೆ ಒಳ ಪಡುವ ಆದಾಯಕ್ಕಿಂತ ಹೆಚ್ಚಿದ್ದರೆ ಮಾತ್ರ ತೆರಿಗೆ ಬರುತ್ತದೆ. ನಿಮ್ಮ FD ಬಡ್ಡಿ ಕೃಷಿಯೇತರ ಆದಾಯ ಆಗಿದೆ. FDಯ ಮೂಲ ಇನ್ವೆಸ್ಟ್‌ಮೆಂಟ್ ಹಣ ಕೃಷಿಯದ್ದಾದರೂ, ಅದಕ್ಕೆ ಬಂದ ಬಡ್ಡಿ ಕೃಷಿಯೇತರ ಆದಾಯವಾಗಿರುತ್ತದೆ. ಹಾಗಾಗಿ ಬ್ಯಾಂಕ್‌ನವರು FD ಬಡ್ಡಿಗೆ 10% ತೆರಿಗೆಯನ್ನು ಬ್ಯಾಂಕಿನಲ್ಲಿ ಮುರಿದುಕೊಂಡಿದ್ದಾರೆ. ಜೊತೆಗೆ, ಬುಹುಶಃ ನೀವು FD ಮಾಡುವಾಗ ಕೊಡಬೇಕಿದ್ದ ಫಾರಂ 15G/ ಅಥವಾ 15H ನ್ನು ಕೊಟ್ಟಿರುವುದಿಲ್ಲ. ಇದರಿಂದ ನಿಮ್ಮ ಬಡ್ಡಿ ಹಣದಲ್ಲಿ 6,200 ರೂಪಾಯಿಗಳು TDS ಕಟ್ಟಾಗಿದೆ. ಏನೂ ಸಮಸ್ಯೆ ಇಲ್ಲ, ಹತ್ತಿರದ ಟ್ಯಾಕ್ಸ್ ಕನ್ಸಲ್ಟೆಂಟ್ ಅಥವಾ ಇನ್‌ಕಮ್‌ ಟ್ಯಾಕ್ಸ್ ರಿಟರ್ನ್ಸ್ ಮಾಹಿತಿ ಇದ್ದವರ ಬಳಿಯಲ್ಲಿ ಟ್ಯಾಕ್ಸ್ ರಿಟರ್ನ್ಸ್ ಸಬ್‌ಮಿಶನ್ ಮಾಡ್ಸಿ, 45 ದಿನಗಳ ಒಳಗೆ 6,200 ವಾಪಾಸ್ ಬರುತ್ತೆ”

ಕೃಷಿ ಆದಾಯಕ್ಕೆ ಆದಾಯ ತೆರಿಗೆ ಇಲ್ಲ

ಭಾರತವು ತನ್ನ ಮೂಲಭೂತ ಆಹಾರದ ಅವಶ್ಯಕತೆಗಳಿಗಾಗಿ ಸಂಪೂರ್ಣವಾಗಿ ಕೃಷಿಯ ಮೇಲೆ ಅವಲಂಬಿತವಾಗಿದೆ. ಈ ವಲಯದಲ್ಲಿ ಬೆಳವಣಿಗೆಯನ್ನು ಉತ್ತೇಜಿಸಲು ಸರ್ಕಾರವು ಹಲವಾರು ಯೋಜನೆಗಳು, ನೀತಿಗಳು ಮತ್ತು ಇತರ ಕ್ರಮಗಳನ್ನು ಹೊಂದಿದೆ – ಅವುಗಳಲ್ಲಿ ಒಂದು ಕೃಷಿ ಆದಾಯವನ್ನು ಆದಾಯ ತೆರಿಗೆಯಿಂದ ವಿನಾಯಿತಿಗೊಳಿಸಲಾಗಿದೆ. ಕೃಷಿ ಆದಾಯಕ್ಕೆ ಆದಾಯ ತೆರಿಗೆ ಇಲ್ಲ.
ಕೃಷಿಯೇತರ ವ್ಯವಹಾರಗಳಿಂದ ಬರುವ ಆದಾಯ ಮೂಲ ವಿನಾಯಿತಿ ಮಿತಿಗಿಂತ ಕಡಿಮೆಯಿದ್ದರೆ ಅದಕ್ಕೂ ತೆರಿಗೆ ಇರುವುದಿಲ್ಲ. ಉದಾಹರಣೆಗೆ ದೊಡ್ಡ ಮೊತ್ತವನ್ನು ಫಿಕ್ಸಡ್ ಡೆಪೋಸಿಟ್ ಮಾಡಿ ಅದಕ್ಕೆ ವಾರ್ಷಿಕ 1.8 ಲಕ್ಷ ರೂಪಾಯಿ ಆದಾಯ ಬಂದಿದ್ದರೂ ಅದಕ್ಕೆ ಆದಾಯ ತೆರಿಗೆ ಇರುವುದಿಲ್ಲ. ಯಾಕೆಂದರೆ, ಕೃಷಿಯೇತರ ಆದಾಯ, ಆದಾಯ ಮೂಲ ವಿನಾಯಿತಿ ಮಿತಿಗಿಂತ ಕಡಿಮೆಯಿದೆ. (2023-24 ಕ್ಕೆ ಆದಾಯ ಮೂಲ ವಿನಾಯಿತಿ ಮಿತಿ ₹.3.00 ಲಕ್ಷ)

ಇದನ್ನೂ ಓದಿ: ವಿಸ್ತಾರ ಗ್ರಾಮ ದನಿ: ಅಡಿಕೆ ರೋಗಗಳ ನಿವಾರಣೆಗೆ ‘ಕೃಷಿ ಸುಣ್ಣ’ ರಾಮಬಾಣ!

ಫಾರಂ 15G ಮತ್ತು 15H ಅಂದರೇನು?

ಸೂಕ್ಷ್ಮ ಇರುವುದು ಇಲ್ಲಿ. ವಾರ್ಷಿಕ FD ಇಂಟ್ರೆಸ್ಟ್ ಆದಾಯ ಮೂಲ ವಿನಾಯಿತಿ ಮಿತಿಗಿಂತ ಕಡಿಮೆ ಇರುವ ಸಂದರ್ಭದಲ್ಲಿ, ಬ್ಯಾಂಕಿನಲ್ಲಿ FD ಮಾಡುವಾಗ, ಆದಾಯ ಮೂಲ ವಿನಾಯಿತಿ ಮಿತಿಗಿಂತ ಕಡಿಮೆಯಿದೆ ಎಂದು ಫಾರಂ 15G ಮತ್ತು 15H ನ್ನು ಭರ್ತಿ ಮಾಡಿ ಕೊಡಬೇಕು.
ಒಬ್ಬ ವ್ಯಕ್ತಿಯ ಬಡ್ಡಿ ಆದಾಯವು ವರ್ಷಕ್ಕೆ ರೂ. 10,000ಕ್ಕಿಂತ ಹೆಚ್ಚಿರುವಾಗ ಬ್ಯಾಂಕುಗಳು TDS ಅನ್ನು ಕಡಿತಗೊಳಿಸಬೇಕಾಗುತ್ತದೆ. ₹10,000 ಈ ಮಿತಿಯನ್ನು ನಿರ್ಧರಿಸಲು ಬ್ಯಾಂಕ್ ಎಲ್ಲಾ ಶಾಖೆಗಳಲ್ಲಿ ಹೊಂದಿರುವ ಠೇವಣಿಗಳನ್ನು ಒಳಗೊಂಡಿದೆ. ಒಬ್ಬ ವ್ಯಕ್ತಿಯ ಒಟ್ಟು ಆದಾಯವು ತೆರಿಗೆಯ ಮಿತಿಗಿಂತ ಕಡಿಮೆಯಿದ್ದರೆ, ಅವನು/ಅವಳು ಬಡ್ಡಿ ಮೊತ್ತದ ಮೇಲೆ TDS ಕಡಿತಗೊಳಿಸದಂತೆ ವಿನಂತಿಸಲು ಬ್ಯಾಂಕ್‌ಗೆ ಫಾರ್ಮ್ 15G ಮತ್ತು ಫಾರ್ಮ್ 15H ಅನ್ನು ಸಲ್ಲಿಸಬಹುದು. ಈ ಫಾರಂ ಸಲ್ಲಿಸದಿದ್ದಲ್ಲಿ, ಬ್ಯಾಂಕುಗಳು ಸಹಜವಾಗಿ ಒಟ್ಟು ಬಡ್ಡಿಯಲ್ಲಿ 10% ಆದಾಯ ತೆರಿಗೆ ಎಂದು ಕಡಿತ ಮಾಡಿ, ತೆರಿಗೆಯನ್ನು ತೆರಿಗೆ ಇಲಾಖೆಗೆ ಕಟ್ಟುತ್ತದೆ. ಅದರ ಒಂದು ದಾಖಲಾತಿಯಾಗಿ TDS (ಟ್ಯಾಕ್ಸ್ ಡಿಡಕ್ಟೆಡ್ ಎಟ್ ಸೋರ್ಸ್) ಬ್ಯಾಂಕಿನವರು ಕೊಡುತ್ತಾರೆ. (ಬ್ಯಾಂಕಿನವರು ಕೇಳಿದರೆ ಕೊಡ್ತಾರೆ. ಕೆಲವು ಬ್ಯಾಂಕ್‌ಗಳಲ್ಲಿ ಇ-ಮೇಲ್‌ ಮಾಡಿರ್ತಾರೆ).
TDS ಅನ್ನು ಬ್ಯಾಂಕಿನವರು ಕೊಡುವುದೂ ಬೇಕಾಗಿಲ್ಲ. PAN ನಂಬರ್‌ ಬಳಸಿ, Incomtax portalನಲ್ಲಿ ಇದನ್ನು ಪಡೆದು ಪರಿಶೀಲಿಸಬಹುದು.

ಉಜಿರೆ ರೈತರ ಹಣ ಕಡಿತ ಆಗಿದ್ದೇಕೆ?

ಈಗ ಅಡಿಕೆ ಬೆಳೆಗಾರ ಉಜಿರೆ ಮಂಜುನಾಥ್‌ ಅವರ ವಿಷಯಕ್ಕೆ ಬರೋಣ. ಅವರು FD ಮಾಡುವಾಗ ಫಾರ್ಮ್ 15G ಮತ್ತು ಫಾರ್ಮ್ 15H ಕೊಟ್ಟಿಲ್ಲದ ಕಾರಣ ₹ 6,200 TDS ಕಟ್ಟಾಗಿದೆ.
ಮಂಜುನಾಥ‌ರವರು ಆ 6,200ನ್ನು ಹಿಂಪಡೆಯಲು ಜುಲೈ 31ರ ಒಳಗೆ ಇನ್‌ಕಮ್ ಟ್ಯಾಕ್ಸ್ ರಿಟರ್ನ್ಸ್‌ನ್ನು (ITR) ಆದಾಯ ತೆರಿಗೆ ಇಲಾಖೆಗೆ ಸಲ್ಲಿಸಬೇಕು. ಕೃಷಿ ಆದಾಯ, ಕೃಷಿಯೇತರ (ಬಡ್ಡಿ) ಆದಾಯದ ಮಾಹಿತಿಗಳನ್ನು ITR ನಲ್ಲಿ ತೋರಿಸಬೇಕು. 45 ದಿನಗಳೊಳಗೆ ಬ್ಯಾಂಕ್ ಕಡಿತಗೊಳಿಸಿದ TDS ಮರು ಪಾವತಿಯಾಗಿ SB ಖಾತೆಗೆ ಜಮಾ ಆಗುತ್ತದೆ.
ITR ಸಲ್ಲಿಸುವಾಗ ಎಲ್ಲಾ SB ಖಾತೆಗಳ ಮಾಹಿತಿಯನ್ನು (ಅಕೌಂಟ್ ನಂಬರ್, IFSC ಕೋಡ್) ನಮೂದಿಸಬೇಕು. ಹಾಗಾಗಿ, ಇಂತಹ ಸಂದರ್ಭದಲ್ಲಿ, ಅಡಿಕೆ ಬೆಳೆಗಾರರು ಮತ್ತು ಎಲ್ಲಾ ಕೃಷಿಕರು ಇನ್‌ಕಮ್ ಟ್ಯಾಕ್ಸ್ ರಿಟರ್ನ್ಸ್ ಸಬ್‌ಮಿಷನ್ ಮಾಡಬೇಕು. ಎಷ್ಟೋ ಸಂದರ್ಭಗಳಲ್ಲಿ TDS ಕಡಿತಗೊಳಿಸಿದ ಮಾಹಿತಿ ತೆರಿಗೆದಾರನಿಗೆ ತಿಳಿಯದೇ ಹೋಗಬಹುದು. ಎಲ್ಲಾ ಬ್ಯಾಂಕುಗಳು TDS ಕಡಿತದ ಮಾಹಿತಿಯನ್ನು ಕೊಡುವುದಿಲ್ಲ (ಕೇಳಿದರೆ ಮಾತ್ರ ಕೊಡ್ತಾರೆ).

ಇದನ್ನೂ ಓದಿ: ವಿಸ್ತಾರ ಗ್ರಾಮ ದನಿ: ಗ್ರಾಮೀಣ ಪ್ರದೇಶದಲ್ಲೇ ಹೆಚ್ಚು ಮತದಾನ, SSLC ಫಲಿತಾಂಶದಂತೆ!

ಜಮೀನು, ಮನೆ ಮಾರಿದಾಗ?

ಇದಲ್ಲದೆ ಕೃಷಿ ಜಮೀನು, ಮನೆ ಮಾರಾಟ ಮಾಡುವಾಗ, ಮಾರಾಟದ ಬೆಲೆ ₹ 50 ಲಕ್ಷಕ್ಕಿಂತ ಹೆಚ್ಚಿದ್ದಾಗ, ಖರೀದಿಸುವವನು ಖರೀದಿ ಮೌಲ್ಯದ ಮೇಲೆ, ಸರಿ ಸುಮಾರು 0.75% (₹.37,500+)TDS ಕಟ್ಟಿರುತ್ತಾನೆ. ಇದೂ ಕೂಡ ತೆರಿಗೆ ಆದಾಯ ಮಿತಿಯ ಒಳಗೆ ಇದ್ದರೆ, ಇನ್‌ಕಮ್ ಟ್ಯಾಕ್ಸ್ ರಿಟರ್ನ್ಸ್ ಮಾಡುವುದರಿಂದ ಹಿಂಪಡೆಯಬಹುದಾಗಿರುತ್ತದೆ. ನಿಮ್ಮ ಯಾವುದೇ ಆದಾಯದಿಂದ ಟಿಡಿಎಸ್ ಕಡಿತಗೊಂಡಿದ್ದರೆ ನೀವು ತೆರಿಗೆ ಕ್ರೆಡಿಟ್ ಫಾರ್ಮ್ 26AS ಮೂಲಕ ಗಮನಿಸಬಹುದು . ಈ ಫಾರ್ಮ್ ಏಕೀಕೃತ TDS ಹೇಳಿಕೆಯಾಗಿದ್ದು ಅದು ಎಲ್ಲಾ PAN ಹೊಂದಿರುವವರಿಗೆ ಇನ್‌ಕಮ್ ಟ್ಯಾಕ್ಸ್ ಪೋರ್ಡಲ್‌ನಲ್ಲಿ ಲಭ್ಯವಿದೆ. ಹಾಗಾಗಿ ಅಡಿಕೆ ಬೆಳೆಗಾರರು ಮತ್ತು ಎಲ್ಲಾ ಕೃಷಿಕರು ಕೃಷಿ ಆದಾಯದ ಜೊತೆ, ಕೃಷಿಯೇತರ ಆದಾಯವೂ ಇದ್ದಲ್ಲಿ, ಮತ್ತು ಅದು ಮೂಲ ವಿನಾಯಿತಿ ಮಿತಿಗಿಂತ ಕಡಿಮೆಯಿದ್ದರೂ, ರಿಟರ್ನ್ಸ್ ಸಲ್ಲಿಸಬೇಕು. ಕೃಷಿಯೇತರ ಆದಾಯ ಮೂಲ ವಿನಾಯಿತಿ ಮಿತಿಗಿಂತ ಹೆಚ್ಚಿದ್ದರೆ, ರಿಟರ್ನ್ಸ್ ಸಲ್ಲಿಸುವುದು ಕಡ್ಡಾಯವಾಗಿರುತ್ತದೆ.
ಅಂದ ಹಾಗೆ, ITR ರಿಟರ್ನ್ಸ್ ಮಾಡಲು ಇನ್ನು 5 ದಿನಗಳು ಮಾತ್ರ ಬಾಕಿ ಇವೆ. ಕೊನೇಯ ದಿನಾಂಕ 31.07.2024.

Continue Reading

ಮನಿ-ಗೈಡ್

Tax Saving Tips: 10 ಲಕ್ಷ ರೂ. ಆದಾಯ ಇದ್ದರೂ ತೆರಿಗೆಯಿಂದ ಪಾರಾಗಲು ಸಾಧ್ಯ! ಇಲ್ಲಿದೆ ಸರಳ ಲೆಕ್ಕಾಚಾರ!

Tax Saving Tips: ಕೇಂದ್ರ ಬಜೆಟ್‌ನಲ್ಲಿ ಈ ಬಾರಿ 7.75 ಲಕ್ಷ ರೂ.ವರೆಗಿನ ಆದಾಯವನ್ನು ತೆರಿಗೆ ಮುಕ್ತಗೊಳಿಸಿರುವುದಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ. ಆದರೆ ವಾರ್ಷಿಕ ಆದಾಯ 10 ಲಕ್ಷ ರೂ.ಗಳಿದ್ದರೂ ಆದಾಯ ತೆರಿಗೆಯಿಂದ (Money Guide) ಮುಕ್ತರಾಗಿ ಇರಬಹುದು. ಇದು ಹೇಗೆ ಎನ್ನುವ ಲೆಕ್ಕಾಚಾರ ಇಲ್ಲಿದೆ.

VISTARANEWS.COM


on

By

Tax Saving Tips
Koo

ಕೇಂದ್ರ ಬಜೆಟ್‌ನಲ್ಲಿ (Union Budget 2024) ಈ ಬಾರಿ (Tax Saving Tips) ಹಣಕಾಸು (Money Guide) ಸಚಿವೆ ನಿರ್ಮಲಾ ಸೀತಾರಾಮನ್ (Finance Minister Nirmala Sitharaman) ಅವರು ಹೊಸ ತೆರಿಗೆ ಪದ್ಧತಿಯಡಿ (New Tax Regime) ಬಹುದೊಡ್ಡ ತೆರಿಗೆ ವಿನಾಯಿತಿಯನ್ನು ನೀಡಿದ್ದಾರೆ. ಪ್ರಮಾಣಿತ ತೆರಿಗೆ ಕಡಿತವನ್ನು (standard tax deduction) 50,000 ರೂ.ನಿಂದ 75,000 ರೂ.ಗೆ ಹೆಚ್ಚಿಸಿದ್ದಾರೆ. ಹೀಗಾಗಿ ಸಾಮಾನ್ಯ ಭಾರತೀಯ ನಾಗರಿಕರು 7.75 ಲಕ್ಷ ರೂ.ವರೆಗಿನ ಆದಾಯವನ್ನು (Money Guide) ತೆರಿಗೆ (tax free) ಮುಕ್ತಗೊಳಿಸಬಹುದು.

ಪ್ರಧಾನಿ ನರೇಂದ್ರ ಮೋದಿ ಅಧಿಕಾರಾವಧಿಯ 3.0ರ ಮೊದಲ ಬಜೆಟ್‌ನಲ್ಲಿ ಆದಾಯ ತೆರಿಗೆಗೆ ಸಂಬಂಧಿಸಿದಂತೆ ಜನರಿಗೆ ಬಹುದೊಡ್ಡ ಪ್ರಯೋಜನವನ್ನು ನೀಡಲಾಗಿದೆ. ಇದರಲ್ಲಿ ಹೊಸ ತೆರಿಗೆ ಪದ್ಧತಿಯಡಿ ದೊಡ್ಡ ರಿಯಾಯಿತಿ ನೀಡಿದ್ದು, ಪ್ರಮಾಣಿತ ಆದಾಯ ತೆರಿಗೆ ಕಡಿತವನ್ನು 50,000 ರೂ. ನಿಂದ 75,000 ರೂ.ಗೆ ಹೆಚ್ಚಿಸಲಾಗಿದೆ.

ಇದರೊಂದಿಗೆ ತೆರಿಗೆ ಸ್ಲ್ಯಾಬ್‌ನಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ. 7.75 ಲಕ್ಷ ರೂ. ಆದಾಯವು ಹೊಸ ತೆರಿಗೆ ಪದ್ಧತಿಯನ್ನು ಆಯ್ಕೆ ಮಾಡುವವರಿಗೆ ಈಗ ಸಂಪೂರ್ಣ ತೆರಿಗೆ ಮುಕ್ತವಾಗಿದೆ. ಆದರೆ ಯಾರೊಬ್ಬರ ವಾರ್ಷಿಕ ಆದಾಯ 10 ಲಕ್ಷ ರೂ.ಗಳಿದ್ದರೆ ಅವರೂ ಆದಾಯ ತೆರಿಗೆಯಿಂದ ಮುಕ್ತರಾಗಿ ಇರಬಹುದು. ಇದಕ್ಕಾಗಿ ಕೆಲವು ಲೆಕ್ಕಾಚಾರಗಳನ್ನು ಇಲ್ಲಿ ನೀಡಲಾಗಿದೆ.

Money Guide
Money Guide


ತೆರಿಗೆ ಉಳಿಸುವುದು ಹೇಗೆ?

1. 10 ಲಕ್ಷ ರೂ.ವರೆಗಿನ ಆದಾಯದ ಮೇಲೆ ಆದಾಯ ತೆರಿಗೆ ಪ್ರಯೋಜನಗಳನ್ನು ಪಡೆಯಲು ತೆರಿಗೆ ರಿಟರ್ನ್ ಸಲ್ಲಿಕೆ ಮಾದರಿಯನ್ನು ಹಳೆಯ ತೆರಿಗೆ ಪದ್ಧತಿಗೆ ಬದಲಾಯಿಸಬೇಕಾಗುತ್ತದೆ. ಇದರಲ್ಲಿ ಅನೇಕ ರೀತಿಯ ಕಡಿತಗಳನ್ನು ಕ್ಲೈಮ್ ಮಾಡಬಹುದು ಮತ್ತು ಅನೇಕ ರೀತಿಯ ಆದಾಯದ ಮೇಲೆ ತೆರಿಗೆಯನ್ನು ಉಳಿಸಬಹುದು.

2. ಹಳೆಯ ತೆರಿಗೆ ವ್ಯವಸ್ಥೆಯನ್ನು ಆರಿಸಿಕೊಂಡರೆ 50,000 ರೂ. ವರೆಗೆ ಪ್ರಮಾಣಿತ ಕಡಿತವನ್ನು ಪಡೆಯಬಹುದು. ಅಂದರೆ 50,000 ರೂ. ವರೆಗೆ ಯಾವುದೇ ತೆರಿಗೆ ಇರುವುದಿಲ್ಲ. ಇದು ಒಟ್ಟು ಆದಾಯದಿಂದ ಮುಂಚಿತವಾಗಿ ಕಡಿತಗೊಳಿಸಲಾಗುವ ಮೊತ್ತವಾಗಿದೆ. ಅಂದರೆ 10 ಲಕ್ಷ ರೂಪಾಯಿ ಗಳಿಸುವ ವ್ಯಕ್ತಿಯ ತೆರಿಗೆಯ ಆದಾಯವು 9.50 ಲಕ್ಷ ರೂಪಾಯಿ ಆಗುತ್ತದೆ.

3. ಇನ್ನು 80ಸಿಯ ಲಾಭವನ್ನು ನೀಡುವ ಪಿಪಿಎಫ್, ಇಪಿಎಫ್ ಮತ್ತು ಎನ್ ಎಸ್ ಸಿಯಂತಹ ಯೋಜನೆಗಳಲ್ಲಿ ಹೂಡಿಕೆ ಮಾಡಿದ್ದರೆ 1.5 ಲಕ್ಷ ರೂ.ವರೆಗೆ ತೆರಿಗೆ ಉಳಿಸಬಹುದು. ಇದರಿಂದ 9.50 ಲಕ್ಷದಿಂದ 1.50 ಲಕ್ಷ ರೂ. ಕಡಿತಗೊಳಿಸಿದರೆ ತೆರಿಗೆಯ ಆದಾಯವು 8 ಲಕ್ಷ ರೂ.ಗಳಾಗುತ್ತದೆ.

4. ಅಲ್ಲದೇ ಎನ್ ಪಿ ಎಸ್ ನಲ್ಲಿ ವಾರ್ಷಿಕವಾಗಿ 50,000 ರೂ.ವರೆಗೆ ಹೂಡಿಕೆ ಮಾಡಿದರೆ ಸೆಕ್ಷನ್ 80ಸಿಸಿಡಿ (1ಬಿ) ಅಡಿಯಲ್ಲಿ 50,000 ರೂ. ಹೆಚ್ಚುವರಿ ತೆರಿಗೆ ವಿನಾಯಿತಿ ನೀಡಲಾಗುತ್ತದೆ. ಈ ಸಂದರ್ಭದಲ್ಲಿ 8 ಲಕ್ಷದಿಂದ 50 ಸಾವಿರವನ್ನು ಕಳೆದರೆ ತೆರಿಗೆಯ ಆದಾಯವು 7.50 ಲಕ್ಷ ರೂಪಾಯಿಗಳಾಗುತ್ತದೆ.

5. ಗೃಹ ಸಾಲ ಪಡೆದವರು ಆದಾಯ ತೆರಿಗೆಯ ಸೆಕ್ಷನ್ 24ಬಿ ಅಡಿಯಲ್ಲಿ 2 ಲಕ್ಷ ರೂಪಾಯಿಗಳವರೆಗೆ ಬಡ್ಡಿಯನ್ನು ಉಳಿಸಬಹುದು. ಈಗ 7.50 ಲಕ್ಷದಿಂದ 2 ಲಕ್ಷ ರೂಪಾಯಿ ಕಳೆದರೆ 5.50 ಲಕ್ಷ ರೂಪಾಯಿ ಉಳಿಯುತ್ತದೆ.

6. ವೈದ್ಯಕೀಯ ವಿಮೆಗಳನ್ನು ತೆಗೆದುಕೊಂಡಿದ್ದರೆ ಆದಾಯ ತೆರಿಗೆಯ ಸೆಕ್ಷನ್ 80ಡಿ ಅಡಿಯಲ್ಲಿ 25 ಸಾವಿರ ರೂಪಾಯಿಗಳವರೆಗೆ ತೆರಿಗೆ ಉಳಿಸಬಹುದು. ಜೊತೆಗೆ ಹೆಂಡತಿ, ಮಕ್ಕಳ ಹೆಸರಿನಲ್ಲಿ ಆರೋಗ್ಯ ವಿಮೆಯಲ್ಲಿದ್ದರೆ 50,000 ರೂಪಾಯಿಗಳವರೆಗೆ ಹೆಚ್ಚುವರಿ ವಿನಾಯಿತಿ ಪಡೆಯಬಹುದು. ಇದರಿಂದ 5.50 ಲಕ್ಷ ರೂಪಾಯಿಗಳಿಂದ 75,000 ರೂಪಾಯಿಗಳನ್ನು ಹೆಚ್ಚು ಕಳೆದರೆ ಆದಾಯವು 4.75 ಲಕ್ಷ ರೂಪಾಯಿಗಳಾಗಿರುತ್ತದೆ.

ಇದನ್ನೂ ಓದಿ: Mudra loan: ಕೇಂದ್ರ ಬಜೆಟ್‌ನಲ್ಲಿ ಮುದ್ರಾ ಸಾಲ ಮಿತಿ ಹೆಚ್ಚಳ; ಷರತ್ತುಗಳೇನು? ಯಾರಿಗೆ ಪ್ರಯೋಜನ?

ಹಳೆಯ ತೆರಿಗೆ ಪದ್ಧತಿಯಲ್ಲಿ 5 ಲಕ್ಷ ರೂಪಾಯಿವರೆಗಿನ ಆದಾಯದ ಮೇಲೆ ಯಾವುದೇ ತೆರಿಗೆ ಇಲ್ಲದಿರುವುದರಿಂದ ಈ ಸಂದರ್ಭದಲ್ಲಿ 10 ಲಕ್ಷ ರೂ. ಆದಾಯವಿದ್ದವರಿಗೂ ಯಾವುದೇ ತೆರಿಗೆ ವಿಧಿಸಲಾಗುವುದಿಲ್ಲ. ಈ ರೀತಿಯಾಗಿ 10 ಲಕ್ಷ ರೂ. ವರೆಗಿನ ಆದಾಯವನ್ನು ತೆರಿಗೆ ಮುಕ್ತಗೊಳಿಸಬಹುದು.

Continue Reading

Latest

Murder Case: ʼಸಾಫ್ಟ್ ಟಚ್ʼ ಸ್ಪಾಗೆ ಹೋಗಿದ್ದ ಕ್ರಿಮಿನಲ್‌ನನ್ನು ಪ್ರೇಯಸಿ ಎದುರೇ ತುಂಡು ತುಂಡಾಗಿ ಕತ್ತರಿಸಿದರು!

Murder Case: ಮುಂಬೈನ ವರ್ಲಿಯಲ್ಲಿ 50 ವರ್ಷದ ವ್ಯಕ್ತಿಯನ್ನು ಸ್ಪಾದಲ್ಲಿ ತುಂಡು ತುಂಡಾಗಿ ಕತ್ತರಿಸಿದ ಘಟನೆ ನಡೆದಿದೆ. ಕೊಲೆಯಾದ ವ್ಯಕ್ತಿ ಗುರುಸಿದ್ದಪ್ಪ ವಾಘ್ಮೋರೆ ಅಲಿಯಾಸ್ ಚುಲ್ಬುಲ್ ಪಾಂಡೆ ಎನ್ನಲಾಗಿದೆ. ತನ್ನ ಗೆಳತಿಯೊಂದಿಗೆ ಸಿಯಾನ್ ರೈಲ್ವೆ ನಿಲ್ದಾಣದ ಬಳಿಯ ಅಪರ್ಣಾ ಬಾರ್ & ರೆಸ್ಟೋರೆಂಟ್ನಲ್ಲಿ ಡ್ರಿಂಕ್ಸ್ ಮಾಡಿದ ನಂತರ ವರ್ಲಿ ನಾಕಾ ಬಳಿಯ ಸಾಫ್ಟ್ ಟಚ್ ಸ್ಪಾಗೆ ಹೋಗಿದ್ದರು. ಆಗ ಮೂವರು ಅಪರಿಚಿತ ವ್ಯಕ್ತಿಗಳು ಬಾಗಿಲು ಮುರಿದು ಒಳಗೆ ಬಂದು ಈ ಕೃತ್ಯ ಎಸಗಿದ್ದಾರೆ.

VISTARANEWS.COM


on

Murder Case
Koo


ಮುಂಬೈ: ಇತ್ತೀಚಿನ ದಿನಗಳಲ್ಲಿ ಮನುಷ್ಯರು ತುಂಬಾ ಕ್ರೂರವಾಗಿ ವರ್ತಿಸುತ್ತಿದ್ದಾರೆ. ಪ್ರಾಣಿಗಳಂತೆ ಮನುಷ್ಯರನ್ನು ಕೂಡ ಜನರು ಪ್ರತಿಕಾರದಿಂದ ತುಂಡುತುಂಡಾಗಿ ಕ್ರೂರವಾಗಿ ಕೊಲೆ ಮಾಡುತ್ತಿದ್ದಾರೆ. ಇಂತಹದೊಂದು ಪ್ರಕರಣ ಇದೀಗ ಮುಂಬೈನ ವರ್ಲಿಯಲ್ಲಿ ನಡೆದಿದ್ದು, ಅಪರಾಧ ಹಿನ್ನೆಲೆಯನ್ನು ಹೊಂದಿರುವ 50 ವರ್ಷದ ವ್ಯಕ್ತಿಯನ್ನು ಸ್ಪಾದಲ್ಲಿ ತುಂಡು ತುಂಡಾಗಿ ಕತ್ತರಿಸಿದ (Murder Case) ಘಟನೆ ಜುಲೈ 24ರಂದು ಮುಂಜಾನೆ ನಡೆದಿದೆ.

ಪೊಲೀಸರ ಪ್ರಕಾರ, ಗುರುಸಿದ್ದಪ್ಪ ವಾಘ್ಮೋರೆ ಅಲಿಯಾಸ್ ಚುಲ್ಬುಲ್ ಪಾಂಡೆ ತನ್ನ ಗೆಳತಿಯೊಂದಿಗೆ ಸಿಯಾನ್ ರೈಲ್ವೆ ನಿಲ್ದಾಣದ ಬಳಿಯ ಅಪರ್ಣಾ ಬಾರ್ & ರೆಸ್ಟೋರೆಂಟ್‍ನಲ್ಲಿ ಡ್ರಿಂಕ್ಸ್ ಮಾಡಿದ ನಂತರ ವರ್ಲಿ ನಾಕಾ ಬಳಿಯ ಸಾಫ್ಟ್ ಟಚ್ ಸ್ಪಾಗೆ ಹೋಗಿದ್ದರು. ಚುಲ್ಬುಲ್ ಪಾಂಡೆ ಸ್ವಲ್ಪ ದಿನದಲ್ಲೇ ತಮ್ಮ ಹುಟ್ಟುಹಬ್ಬವನ್ನು ಆಚರಿಸಲಿದ್ದಾರೆ ಎನ್ನಲಾಗಿದೆ.

ವರ್ಲಿ ನಾಕಾದ ಎಲ್.ಆರ್.ಪಾಪನ್ ಮಾರ್ಗದ ಮಂಜ್ರೇಕರ್ ಕಟ್ಟಡದ ನೆಲಮಹಡಿಯಲ್ಲಿರುವ ಸ್ಪಾಗೆ ಹೋಗಿದ್ದಾರೆ. ಆದರೆ ಕಳೆದ ಆರು ತಿಂಗಳಿನಿಂದ ಆ ಸ್ಪಾ ಮುಚ್ಚಲ್ಪಟ್ಟಿತ್ತು, ಆದರೆ ಅದರ ಮಾಲೀಕರಿಗೆ ಹತ್ತಿರವಾಗಿದ್ದ ಚುಲ್ಬುಲ್ ಪಾಂಡೆ ಸ್ನೇಹಿತೆಗೆ ಅದಕ್ಕೆ ಹೋಗಲು ಅವಕಾಶವಿತ್ತು. ಇವರಿಬ್ಬರು ಸ್ಪಾ ಒಳಗೆ ಇದ್ದಾಗ ಚಾಕು ಹೊಂದಿದ್ದ ಮೂವರು ಅಪರಿಚಿತ ವ್ಯಕ್ತಿಗಳು ಬಾಗಿಲು ಮುರಿದು ಒಳಗೆ ಬಂದು ಸೋಫಾದ ಮೇಲೆ ಮಲಗಿದ್ದ ವಾಘ್ಮೋರೆ ಮೇಲೆ ಚಾಕುವಿನಿಂದ ಹಲವಾರು ಬಾರಿ ಚುಚ್ಚಿದ್ದಾರೆ. ಈ ಬಗ್ಗೆ ವಿಲೆ ಪಾರ್ಲೆ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿದೆ. ಹಾಗಾಗಿ ಸ್ಥಳಕ್ಕೆ ಬಂದ ವಿಲೆ ಪಾರ್ಲೆ ಪೊಲೀಸರು ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಿಸಿ, ಮುಂದಿನ ಕ್ರಮ ಕೈಗೊಂಡಿದ್ದಾರೆ ಎನ್ನಲಾಗಿದೆ.

ಹಿರಿಯ ಪೊಲೀಸ್ ಅಧಿಕಾರಿಯ ಮಾರ್ಗದರ್ಶನದಲ್ಲಿ ಆರೋಪಿಗಳನ್ನು ಬಂಧಿಸಲು ಆರು ತಂಡಗಳನ್ನು ನಿಯೋಜಿಸಲಾಗಿದೆ. ಪ್ರಮುಖ ಸಾಕ್ಷಿಯಾಗಿರುವ ಮಹಿಳೆಯ ಜೊತೆ ಶವವನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿದ ಪೊಲೀಸ್ ಅಧಿಕಾರಿ, “ಘಟನೆಯ ಬಗ್ಗೆ ನಮಗೆ ಮಧ್ಯಾಹ್ನ ಕರೆ ಬಂದಿದೆ. ನಾವು ಸ್ಥಳಕ್ಕೆ ಬಂದು ಹತ್ಯೆಗೊಳಗಾದ ವ್ಯಕ್ತಿಯನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದೆವು, ಅಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಅವರ ದೇಹದಾದ್ಯಂತ ಗಾಯಗಳಿದ್ದವು. ಅದರ ಆಧಾರದ ಮೇಲೆ ನಾವು ಎಫ್ಐಆರ್ ದಾಖಲಿಸಿದ್ದೇವೆ ಮತ್ತು ಆರೋಪಿಗಳನ್ನು ಬಂಧಿಸಲು ಹುಡುಕಾಟ ಪ್ರಾರಂಭಿಸಿದ್ದೇವೆ. ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ.

ಆರೋಪಿಗಳನ್ನು ಬಂಧಿಸಲು ವರ್ಲಿ ಪೊಲೀಸರು ಈಗ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ. ಕೊಲೆಯಾದ ವ್ಯಕ್ತಿ ಹಾಗೂ ಆತನ ಸ್ನೇಹಿತೆ ಮೇಲೆ ಯಾರೋ ಕಣ್ಣಿಟ್ಟಿದ್ದರು ಮತ್ತು ಅವರು ಸ್ಪಾಗೆ ಪ್ರವೇಶಿಸಿದಾಗ ಕೊಲೆಗಾರರಿಗೆ ಸುಳಿವು ನೀಡಿದ್ದಾರೆ. ಇದು ಪ್ಲ್ಯಾನ್ ಮಾಡಿ ಮಾಡಿದ ಕೊಲೆಯಾಗಿದೆ” ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: ಯುವಕನಿಗೆ ಜಾಡಿಸಿ ಒದ್ದ ಜಿಮ್‌ ಮಾಲೀಕನನ್ನು ಮತ್ತೊಬ್ಬ ಯುವಕ ಇರಿದು ಕೊಂದ; ವಿಡಿಯೊ ಇದೆ

ಇದೇ ರೀತಿಯ ಘಟನೆ ಉತ್ತರ ಪ್ರದೇಶದ ಪ್ರತಾಪ್‌ಘಡದಲ್ಲಿ ಬೆಳಕಿಗೆ ಬಂದಿದೆ. ಮಹಿಳೆ ತನ್ನ ಪತಿಯ ಜೊತೆ ಸೇರಿಕೊಂಡು ತನ್ನ ಪ್ರಿಯಕರನನ್ನು ತುಂಡು ತುಂಡಾಗಿ ಕತ್ತರಿಸಿ ಕೊಲೆ ಮಾಡಿದ ಆಘಾತಕಾರಿ ಘಟನೆ ನಡೆದಿದೆ. ಈ ಪ್ರಕರಣವನ್ನು ಕಂಡು ಉತ್ತರ ಪ್ರದೇಶ, ಬಿಹಾರ ಮತ್ತು ಹರಿಯಾಣದ ಪೊಲೀಸರು ಆಘಾತಕ್ಕೊಳಗಾಗಿದ್ದಾರೆ.

Continue Reading

Latest

Sara Ali Khan: ವಿಮಾನದಲ್ಲಿ ಸಾರಾ ಅಲಿ ಖಾನ್‌ ಮೇಲೆ ಜ್ಯೂಸ್‌ ಚೆಲ್ಲಿದ ಗಗನಸಖಿ! ಮುಂದೇನಾಯ್ತು? ವಿಡಿಯೊ ನೋಡಿ

Sara Ali Khan: ನಟಿ ಸಾರಾ ಅಲಿ ಖಾನ್ ವಿಮಾನದಲ್ಲಿ ಪ್ರಯಾಣಿಸುತ್ತಿದ್ದಾಗ, ಗಗನ ಸಖಿಯೊಬ್ಬರು ಸಾರಾ ಅಲಿ ಖಾನ್ ಉಡುಪಿನ ಮೇಲೆ ಆಕಸ್ಮಾತ್ ಆಗಿ ಜ್ಯೂಸ್ ಬೀಳಿಸಿದ ವಿಡಿಯೊವೊಂದು ಸೋಶಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಗಗಮಸಖಿ ಜ್ಯೂಸ್‌ಗಳನ್ನು ಪ್ರಯಾಣಿಕರಿಗೆ ನೀಡುತ್ತಿರುವಾಗ ಆಕಸ್ಮಿಕವಾಗಿ ನಟಿಯ ಡ್ರೆಸ್‌ ಮೇಲೆ ಜ್ಯೂಸ್ ಅನ್ನು ಚೆಲ್ಲಿದ್ದಾಳೆ. ಇದರಿಂದ ನಟಿ ಅಸಮಾಧಾನಗೊಂಡಿದ್ದಾರೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

VISTARANEWS.COM


on

Sara Ali Khan
Koo


ಮುಂಬೈ: ನಟಿ ಸಾರಾ ಅಲಿ ಖಾನ್ (Sara Ali Khan) ಅವರು ತಮ್ಮ ನಟನೆಯ ಮೂಲಕ ಬಾಲಿವುಡ್‌ನಲ್ಲಿ ಛಾಪು ಮೂಡಿಸಿದ್ದಾರೆ. ಇತ್ತೀಚಿಗೆ ಅವರು ವಿಮಾನದಲ್ಲಿ ಪ್ರಯಾಣಿಸುವಾಗ ಅನಿರೀಕ್ಷಿತ ಘಟನೆಯೊಂದು ನಡೆದಿತ್ತು. ಗಗನ ಸಖಿಯೊಬ್ಬರು ಸಾರಾ ಅಲಿ ಖಾನ್‌ ಉಡುಪಿನ ಮೇಲೆ ಆಕಸ್ಮಾತ್‌ ಆಗಿ ಜ್ಯೂಸ್‌ ಬೀಳಿಸಿದ ವಿಡಿಯೊವೊಂದು ಸೋಶಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದೆ.

Sara Ali Khan
Sara Ali Khan

ವೈರಲ್ ವಿಡಿಯೊದಲ್ಲಿ ನಟಿ ಸಾರಾ ಅಲಿ ಖಾನ್ ಸುರುಳಿ ಕೂದಲು ಮತ್ತು ದೊಡ್ಡ ಹೂಪ್ ಕಿವಿಯೋಲೆಗಳನ್ನು ಧರಿಸಿ ಬಿಳಿ ಮತ್ತು ಗುಲಾಬಿ ಬಣ್ಣದ ಡ್ರೆಸ್‍ನಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಆ ವೇಳೆ ಗಗಮಸಖಿ ಜ್ಯೂಸ್‌ಗಳನ್ನು ಪ್ರಯಾಣಿಕರಿಗೆ ನೀಡುತ್ತಿರುವಾಗ ಆಕಸ್ಮಿಕವಾಗಿ ನಟಿಯ ಡ್ರೆಸ್‍ನ ಮೇಲೆ ಜ್ಯೂಸ್ ಅನ್ನು ಚೆಲ್ಲಿದ್ದಾಳೆ. ಇದರಿಂದ ನಟಿ ಅಸಮಾಧಾನಗೊಂಡಿದ್ದಾರೆ. ಆಗ ನಟಿ ಗಗನಸಖಿಯನ್ನು ಸಿಟ್ಟಿನಿಂದ ದುರುಗುಟ್ಟಿ ನೋಡುತ್ತ ಎದ್ದು ವಾಶ್ ರೂಮ್‌ಗೆ ಹೋಗಿ ಮರಳಿ ಬರುತ್ತಿರುವಾಗ ನಟಿಯನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯಲಾಗಿದೆ. ಇದನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದು, ಇದು ಸಖತ್ ವೈರಲ್ ಆಗಿದೆ.

ವೈರಲ್ ವಿಡಿಯೊಗೆ ಹಲವರು ಕಾಮೆಂಟ್‍ಗಳ ಮೂಲಕ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಕೆಲವು ಅಭಿಮಾನಿಗಳು ಈ ಘಟನೆಯು ಪ್ರಚಾರಕ್ಕಾಗಿ ಮಾಡಿರಬಹುದು ಅಥವಾ ಮುಂಬರುವ ಯೋಜನೆಯ ದೃಶ್ಯವಾಗಿರಬಹುದು ಎಂದು ಆಶ್ಚರ್ಯ ಪಡುತ್ತಿದ್ದಾರೆ. ಆದಾಗ್ಯೂ, ಘಟನೆಯ ಸ್ವರೂಪದ ಬಗ್ಗೆ ಯಾವುದೇ ಅಧಿಕೃತ ದೃಢೀಕರಣವನ್ನು ಮಾಡಲಾಗಿಲ್ಲ.

Sara Ali Khan
Sara Ali Khan

ವೃತ್ತಿಪರ ರಂಗದಲ್ಲಿ ಸಾರಾ ಅಲಿ ಖಾನ್ ನಟನೆಯ ಹಲವು ಆಫರ್‌ಗಳನ್ನು ಹೊಂದಿದ್ದಾರೆ. ಧರ್ಮ ಪ್ರೊಡಕ್ಷನ್ಸ್ ಮತ್ತು ಸಿಖ್ಯಾ ಎಂಟರ್‌ಟೈನ್‍ಮೆಂಟ್ ನಿರ್ಮಿಸುತ್ತಿರುವ ಆಕ್ಷನ್-ಕಾಮಿಡಿ ಚಿತ್ರದಲ್ಲಿ ಆಯುಷ್ಮಾನ್ ಖುರಾನಾ ಎದುರು ಅವರು ಮೊದಲ ಬಾರಿಗೆ ನಟಿಸಲಿದ್ದಾರೆ.

ಇದನ್ನೂ ಓದಿ: ‘ಮಿಸ್ಟರ್ ಬೀನ್’ ಖ್ಯಾತಿಯ ರೋವನ್ ಅಟ್ಕಿನ್ಸನ್ ಹಾಸಿಗೆ ಹಿಡಿದಿದ್ದಾರೆಯೇ? ಭಾರೀ ವೈರಲಾಗ್ತಿದೆ ಈ ಫೋಟೊ

ಹಾಗೇ ನಟಿ ಸಾರಾ ಅಲಿ ಖಾನ್ ಅವರು ಅನುರಾಗ್ ಬಸು ನಿರ್ದೇಶನದ “ಮೆಟ್ರೋ ಇನ್ ಡಿನೋ” ಎಂಬ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಆದಿತ್ಯ ರಾಯ್ ಕಪೂರ್, ಪಂಕಜ್ ತ್ರಿಪಾಠಿ, ಫಾತಿಮಾ ಸನಾ ಶೇಖ್ ಮತ್ತು ನೀನಾ ಗುಪ್ತಾ ಸೇರಿದಂತೆ ಅನೇಕರು ನಟಿಸಲಿದ್ದಾರೆ. ಸಿನಿಮಾರಂಗದಲ್ಲಿ ಸಾರಾ ಅವರ ಅಭಿನಯವನ್ನು ನೋಡಲು ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ.

Continue Reading
Advertisement
NEET UG 2024
ದೇಶ4 hours ago

NEET UG 2024: ನೀಟ್‌ ಪ್ರಶ್ನೆಪತ್ರಿಕೆಯನ್ನು ಎಗರಿಸಿದ್ದು ಯಾವ ಕೇಂದ್ರದಿಂದ? ಸಿಬಿಐ ಸ್ಫೋಟಕ ಮಾಹಿತಿ ಬಯಲು

V Sumangala
ಕರ್ನಾಟಕ4 hours ago

V Sumangala: ಶಿಕ್ಷಣ ಇಲಾಖೆಯಲ್ಲಿ 1.62 ಕೋಟಿ ರೂ. ಅಕ್ರಮ; DSERT ನಿರ್ದೇಶಕಿ ಸುಮಂಗಲಾ ಅಮಾನತು!

Sri lanka Team
ಕ್ರೀಡೆ5 hours ago

Sri lanka Team: ಟಿ20 ಸರಣಿ ಆರಂಭಕ್ಕೂ ಮುನ್ನವೇ ಲಂಕಾಗೆ ಗಾಯದ ಬರೆ; ಇಬ್ಬರು ವೇಗಿಗಳು ಔಟ್​

HD Deve Gowda
ದೇಶ6 hours ago

HD Deve Gowda: ವ್ಹೀಲ್‌ಚೇರ್‌ನಲ್ಲೇ ತೆರಳಿ ಮೋದಿಯನ್ನು ಭೇಟಿಯಾದ ದೇವೇಗೌಡ; ಇಲ್ಲಿವೆ ಫೋಟೊಗಳು

Team India
ಕ್ರೀಡೆ6 hours ago

Team India: ಲಂಕಾ ಸರಣಿಗೂ ಮುನ್ನವೇ ಟೀಮ್​ ಇಂಡಿಯಾ ಜೆರ್ಸಿಯಲ್ಲಿ ಮಹತ್ವದ ಬದಲಾವಣೆ

Atal Setu
ಪ್ರಮುಖ ಸುದ್ದಿ6 hours ago

Atal Setu: ಅಟಲ್‌ ಸೇತು ಮೇಲೆ ಕಾರಿನಲ್ಲಿ ಬಂದು, ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಟೆಕ್ಕಿ; ಏನಾಗಿತ್ತು?

Health Minister Dinesh Gundurao instructs to send a team of deputy directors to dengue hot spots
ಕರ್ನಾಟಕ7 hours ago

Dengue Fever: ಬೆಂಗಳೂರಿನಲ್ಲೇ ಶೇ.50ರಷ್ಟು ಡೆಂಗ್ಯೂ ಪ್ರಕರಣಗಳು; ಹಾಟ್‌ಸ್ಪಾಟ್‌ಗಳಿಗೆ ಅಧಿಕಾರಿಗಳ ತಂಡ

Media Connect Founder and ceo Dr Divya Rangenahalli honored at Chess Festival in bengaluru
ಬೆಂಗಳೂರು7 hours ago

Media Connect: ಚೆಸ್‌ ಹಬ್ಬದಲ್ಲಿ ಮೀಡಿಯಾ ಕನೆಕ್ಟ್‌ ಸಂಸ್ಥಾಪಕಿ ಡಾ. ದಿವ್ಯಾ ರಂಗೇನಹಳ್ಳಿಗೆ ಸನ್ಮಾನ

1200 farmers suicides in last 15 months in Karnataka says Minister Pralhad Joshi Minister Pralhad Joshi alleges
ಕರ್ನಾಟಕ7 hours ago

Pralhad Joshi: ಕರ್ನಾಟಕದಲ್ಲಿ ಕಳೆದ 15 ತಿಂಗಳಲ್ಲಿ 1200 ರೈತರ ಆತ್ಮಹತ್ಯೆ!

BJP Protest
ಕರ್ನಾಟಕ7 hours ago

BJP Protest: ದಾಖಲೆ ನೀಡದೆ ಹೇಡಿಯಂತೆ ಪಲಾಯನ; ಸಿಎಂ ರಾಜೀನಾಮೆ ಪಡೆಯಲು ರಾಜ್ಯಪಾಲರಿಗೆ ಆರ್‌.ಅಶೋಕ್‌ ಮನವಿ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ10 hours ago

Karnataka Rain : ಮನೆಯೊಳಗೆ ನುಗ್ಗಿದ ಮಳೆ ನೀರು; ಕಾಲು ಜಾರಿ ಬಿದ್ದು ವೃದ್ಧೆ ಸಾವು

Actor Darshan
ಸ್ಯಾಂಡಲ್ ವುಡ್14 hours ago

Actor Darshan: ನಟ ದರ್ಶನ್ ಇರುವ ಜೈಲು ಕೋಣೆ ಹೇಗಿದೆ?

Actor Darshan
ಸಿನಿಮಾ15 hours ago

Actor Darshan : ಹೆಂಡ್ತಿ ಮಕ್ಕಳೊಟ್ಟಿಗೆ ಚೆನ್ನಾಗಿರು.. ಸಹಕೈದಿ ಜತೆಗೆ 12 ನಿಮಿಷ ಕಳೆದ ನಟ ದರ್ಶನ್‌

Actor Darshan
ಸಿನಿಮಾ16 hours ago

Actor Darshan: ಆಧ್ಯಾತ್ಮದತ್ತ ವಾಲಿದ ದರ್ಶನ್‌; ಜೈಲಲ್ಲಿ ಹೇಗಿದೆ ಗೊತ್ತಾ ನಟನ ಬದುಕು

karnataka Weather Forecast
ಮಳೆ2 days ago

Karnataka Weather : ರಭಸವಾಗಿ ಸುರಿಯುವ ಮಳೆ; 50 ಕಿ.ಮೀ ವೇಗದಲ್ಲಿ ಬೀಸುತ್ತೆ ಗಾಳಿ

karnataka weather Forecast
ಮಳೆ2 days ago

Karnataka Weather : ರಾಜ್ಯದಲ್ಲಿ ಮುಂದುವರಿದ ಮಳೆ ಅವಾಂತರ; ನಾಳೆಯೂ ಇರಲಿದೆ ಅಬ್ಬರ

Udupi News
ಉಡುಪಿ2 days ago

Udupi News : ಹಳೆ ಲಾರಿ ಚಾಸ್ಸಿಯಲ್ಲೇ ಕಿರು ಸೇತುವೆ ನಿರ್ಮಾಣ! ಬೈಂದೂರು ಶಾಸಕರ ಪರಿಕಲ್ಪನೆಗೆ ಜನರು ಫಿದಾ

murder case
ರಾಮನಗರ3 days ago

Murder Case : ರಾಮನಗರದಲ್ಲೊಂದು ಪೈಶಾಚಿಕ ಕೃತ್ಯ; ಅತ್ಯಾಚಾರವೆಸಗಿ 4 ವರ್ಷದ ಬಾಲಕಿಯನ್ನು ಕೊಂದ ದುಷ್ಟ

karnataka Rain
ಮಳೆ6 days ago

Karnataka Rain : ಭಾರಿ ಮಳೆಗೆ ಮನೆ ಗೋಡೆ ಕುಸಿತ; ಕೊಟ್ಟಿಗೆಯಲ್ಲಿದ್ದ ಜಾನುವಾರುಗಳು ಸಾವು

karnataka Rain
ಮಳೆ6 days ago

Karnataka Rain : ಹಳ್ಳ ದಾಟಲು ಹೋಗಿ ನೀರುಪಾಲಾದ ಜಾನುವಾರು; ಬಿರುಗಾಳಿಗೆ ಕಳಚಿದ ವಿಂಡ್‌ ಫ್ಯಾನ್‌

ಟ್ರೆಂಡಿಂಗ್‌