Urfi Javed: ಚಿಟ್ಟೆ, ಬ್ರಹ್ಮಾಂಡ ಎಲ್ಲಾ ಆಯ್ತು! ಈಗ ಅಕ್ಟೋಪಸ್​​ನಂತೆ ಬಂದ ಉರ್ಫಿ! - Vistara News

ವೈರಲ್ ನ್ಯೂಸ್

Urfi Javed: ಚಿಟ್ಟೆ, ಬ್ರಹ್ಮಾಂಡ ಎಲ್ಲಾ ಆಯ್ತು! ಈಗ ಅಕ್ಟೋಪಸ್​​ನಂತೆ ಬಂದ ಉರ್ಫಿ!

Urfi Javed: ಇದಕ್ಕೂ ಮುಂಚೆ ಯೂನಿವರ್ಸ್-ಪ್ರೇರಿತ ಉಡುಗೆ ತೊಟ್ಟು ಪೋಸ್‌ ಕೊಟ್ಟಿದ್ದರು. ಉಡುಪಿನೊಳಗೇ ಬ್ರಹ್ಮಾಂಡ ತೋರಿಸಿದ್ದರು ನಟಿ ಉರ್ಫಿ. ಉರ್ಫಿ ಅವರನ್ನು ಆಧುನಿಕ ಶ್ರೀಕೃಷ್ಣ ಎನ್ನುತ್ತಿದ್ದರು ಫ್ಯಾನ್ಸ್​. ತಮ್ಮ ಸ್ಕರ್ಟ್‌ನಲ್ಲಿ ಬ್ರಹ್ಮಾಂಡ ತಿರುಗುವ ರೀತಿಯಲ್ಲಿ ತೋರಿಸಿದ್ದರು. ಇಡೀ ಗ್ರಹಗಳನ್ನು ಸ್ಕರ್ಟ್‌ನಲ್ಲಿ ನೋಡಬಹುದಾಗಿತ್ತು.

VISTARANEWS.COM


on

Urfi Javed Octopus Dress Is The Most EPIC Thing Of The Day
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಕೆಲವು ದಿನಗಳಿಂದ ನಟಿ ಉರ್ಫಿ ಜಾವೇದ್ (Urfi Javed) ಕುಡಿದು ತೇಲಡುತ್ತಿರುವ ವಿಡಿಯೊ ಭಾರಿ ವೈರಲ್‌ ಆಗಿತ್ತು. ಹೀಗಾಗಿ ಉರ್ಫಿಯ ಫ್ಯಾಷನ್‌ ಬಗ್ಗೆಯೇ ಸಾಕಷ್ಟು ಸುದ್ದಿಯಾಗಿತ್ತು. ಇದೀಗ ಮತ್ತೆ ಉರ್ಫಿ ಹೊಸ ಅವತರಾದಲ್ಲಿ ಕಂಡಿದ್ದಾರೆ. ಬಬಲ್ ಗಮ್ ಟಾಪ್‌ನಿಂದ ಕಸದ ಚೀಲದ ಉಡುಪಿನವರೆಗೆ ಬಿಗ್ ಬಾಸ್ OTT 1 ಖ್ಯಾತಿಯ ಉರ್ಫಿ ಸದ್ದು ಮಾಡುತ್ತಲೇ ಇರುತ್ತಾರೆ. ಈ ಬಾರಿ ಅಕ್ಟೋಪಸ್ ಡ್ರೆಸ್ ನಿಂದ ಬಹಳ ಮಜವಾಗಿ ಕಂಡಿದ್ದರು.

ಉರ್ಫಿ ಜಾವೇದ್ ಕಪ್ಪು ಡ್ರೆಸ್‌ನಲ್ಲಿ ಕಾಣಿಸಿಕೊಂಡಿದ್ದು, ಅಕ್ಟೋಪಸ್ ರೀತಿಯ ತೋಳುಗಳನ್ನು ಹೊಂದಿತ್ತು ಈ ಉಡುಗೆ. ಸದಾ ತನ್ನ ಉಡುಪಿನ ವಿಚಾರವಾಗಿ ಟ್ರೋಲ್‌ ಆಗುವ ಉರ್ಫಿ ಈ ಬಾರಿ ನೆಟ್ಟಿಗರಿಂದ ಪ್ರಶಂಸೆ ಪಡೆದಿದ್ದಾರೆ. ಬಟ್ಟೆಗಳಲ್ಲಿಯ ಉರ್ಫಿಯ ಸೃಜನಶೀಲತೆಗೆ 10 ಅಂಕ ಎಂದು ಕಮೆಂಟ್‌ ಮಾಡುತ್ತಿದ್ದಾರೆ.

ಇದಕ್ಕೂ ಮುಂಚೆ ಯೂನಿವರ್ಸ್-ಪ್ರೇರಿತ ಉಡುಗೆ ತೊಟ್ಟು ಪೋಸ್‌ ಕೊಟ್ಟಿದ್ದರು. ಉಡುಪಿನೊಳಗೇ ಬ್ರಹ್ಮಾಂಡ ತೋರಿಸಿದ್ದರು ನಟಿ ಉರ್ಫಿ. ಉರ್ಫಿ ಅವರನ್ನು ಆಧುನಿಕ ಶ್ರೀಕೃಷ್ಣ ಎನ್ನುತ್ತಿದ್ದರು ಫ್ಯಾನ್ಸ್​. ತಮ್ಮ ಸ್ಕರ್ಟ್‌ನಲ್ಲಿ ಬ್ರಹ್ಮಾಂಡ ತಿರುಗುವ ರೀತಿಯಲ್ಲಿ ತೋರಿಸಿದ್ದರು. ಇಡೀ ಗ್ರಹಗಳನ್ನು ಸ್ಕರ್ಟ್‌ನಲ್ಲಿ ನೋಡಬಹುದಾಗಿತ್ತು. ʻಕೆಲವರು ಶ್ರೀಕೃಷ್ಣ ಪರಮಾತ್ಮ ಬಾಯಲ್ಲಿ ಬ್ರಹ್ಮಾಂಡ ತೋರಿದರೆ, ನೀವು ಉಡುಪಿನೊಳಗೇ ಬ್ರಹ್ಮಾಂಡ ತೋರಿದ್ದೀರಿ, ಆಧುನಿಕ ಕೃಷ್ಣ ನೀವುʼ ಎನ್ನುತ್ತಿದ್ದರು.

ಇದನ್ನೂ ಓದಿ: Kannada New Movie: `ನೈಸ್ ರೋಡ್’ ಸಿನಿಮಾಗೆ ನೋಟಿಸ್ ; ಅಷ್ಟಕ್ಕೂ ಆಗಿದ್ದೇನು?

ಫ್ಯಾಷನ್‌ ಐಕಾನ್‌ ಎಂದೇ ಖ್ಯಾತಿ ಪಡೆದಿರುವ ಉರ್ಫಿ ಜಾವೇದ್ (Urfi Javed) ಆಗಾಗ ಸುದ್ದಿಯಾಗುತ್ತಲೇ ಇರುತ್ತಾರೆ. ಇದರ ಜತೆಗೆ ಉರ್ಫಿ ಜಾವೇದ್‌ ಬಾಲಿವುಡ್‌ಗೂ ಕಾಲಿಟ್ಟಿದ್ದಾರೆ. ಏಕ್ತಾ ಕಪೂರ್ ನಿರ್ಮಾಣದ ‘ಲವ್ ಸೆಕ್ಸ್ ಔರ್ ಧೋಖಾ 2’ ಸಿನಿಮಾದಲ್ಲಿ ಅವರು ಅಭಿನಯಿಸಿದ್ದರು. ಏಪ್ರಿಲ್ 19ರಂದು ಸಿನಿಮಾ ಬಿಡುಗಡೆಯಾಗಿತ್ತು. ಈ ಚಿತ್ರವನ್ನು ದಿವಾಕರ್ ಬ್ಯಾನರ್ಜಿ ನಿರ್ದೇಶಿಸಿದ್ದರು. ಈ ಹಿಂದೆ ಇವರು ʻಲವ್ ಸೆಕ್ಸ್ ಔರ್ ಧೋಖಾʼ ಸಿನಿಮಾಕ್ಕೆ ಆ್ಯಕ್ಷನ್‌ ಕಟ್‌ ಹೇಳಿದ್ದರು. ʼಲವ್ ಸೆಕ್ಸ್ ಔರ್ ಧೋಖಾ 2ʼನಲ್ಲಿ ಆಸಕ್ತಿದಾಯಕ ಕಥೆ ಇರಲಿದೆ ಎಂದು ಚಿತ್ರತಂಡ ಹೇಳಿಕೊಂಡಿತ್ತು. ಇಂಟರ್‌ನೆಟ್‌ ಜಗತ್ತಿನಲ್ಲಿ ನಡೆಯುವ ಪ್ರೀತಿಯ ಕಥೆ ಇರಲಿದೆ ಎನ್ನಲಾಗಿತ್ತು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

Latest

Viral Video: ಹಾವು ಕಚ್ಚಿದ ಮಹಿಳೆಯನ್ನು ಗಂಗಾ ನದಿಯಲ್ಲಿ ತೇಲಿ ಬಿಟ್ಟರು! ಆಕೆ ಬದುಕಿ ಬರುತ್ತಾಳೆ ಎಂದರು!

Viral Video: ಸತ್ತವರ ದೇಹವನ್ನು ಸುಟ್ಟು ಅವರ ಅಸ್ಥಿಯನ್ನು ಗಂಗಾ ನದಿಯಲ್ಲಿ ಬಿಟ್ಟರೆ ಅವರಿಗೆ ಮೋಕ್ಷ ಸಿಗುತ್ತದೆ ಎಂಬ ನಂಬಿಕೆ ಇದೆ. ಆದರೆ ಉತ್ತರ ಪ್ರದೇಶದ ಹಾಪುರದ ಘರ್ ಮುಕ್ತೇಶ್ವರ ಪ್ರದೇಶದಲ್ಲಿ 20 ವರ್ಷದ ಯುವತಿಯ ಶವವನ್ನು ದೋಣಿಯಿಂದ ಗಂಗಾ ನದಿಗೆ ತೇಲಿಸಿ ಬಿಡಲಾಗಿದೆ. ಇಬ್ಬರು ವ್ಯಕ್ತಿಗಳು ಬಟ್ಟೆಯಲ್ಲಿ ಸುತ್ತಿದ ಶವವನ್ನು ನದಿಗೆ ಎಸೆಯುವ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಹಾವು ಕಡಿತದಿಂದ ಯಾರಾದರೂ ಸತ್ತರೆ, ಅವರ ದೇಹವನ್ನು ಗಂಗಾ ನದಿಯಲ್ಲಿ ತೇಲಿಸಿ ಬಿಟ್ಟರೆ ಅವರು ಮತ್ತೆ ಜೀವಂತವಾಗಿ ಬರಬಹುದು ಎಂದು ನಂಬಿಕೆಯಿಂದ ಹೀಗೆ ಮಾಡಿದರಂತೆ!

VISTARANEWS.COM


on

Dead Body in Ganga River
Koo

ಮೀರತ್: ಗಂಗೆಯನ್ನು ಪವಿತ್ರ ನದಿ ಎಂದು ಕರೆಯುತ್ತಾರೆ. ಬಹಳ ಹಿಂದಿನ ಕಾಲದಿಂದಲೂ ಸತ್ತವರ ದೇಹವನ್ನು ಸುಟ್ಟು ಅವರ ಅಸ್ತಿಯನ್ನು ಗಂಗಾ ನದಿಯಲ್ಲಿ ಬಿಟ್ಟರೆ ಅವರಿಗೆ ಮೋಕ್ಷ ಸಿಗುತ್ತದೆ ಎಂಬ ನಂಬಿಕೆ ಇತ್ತು. ಹಾಗಾಗಿ ಜನರು ಸತ್ತವರ ಅಸ್ತಿಯನ್ನು ತೆಗೆದುಕೊಂಡು ಕಾಶಿಗೆ ಪ್ರಯಾಣಿಸುತ್ತಿದ್ದರು. ಇದೀಗ ಹಾಪುರದ ಘರ್ ಮುಕ್ತೇಶ್ವರ ಪ್ರದೇಶದಲ್ಲಿ 20 ವರ್ಷದ ಯುವತಿಯ ಶವವನ್ನು ದೋಣಿಯಿಂದ ಗಂಗಾ (Viral Video) ನದಿಗೆ ತೇಲಿಸಿ ಬಿಟ್ಟ ಆಘಾತಕಾರಿ ವಿಡಿಯೊ ಬೆಳಕಿಗೆ ಬಂದಿದೆ. ಇಬ್ಬರು ವ್ಯಕ್ತಿಗಳು ಬಟ್ಟೆಯಲ್ಲಿ ಸುತ್ತಿದ ಶವವನ್ನು ನದಿಗೆ ಎಸೆಯುವ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ದಲಿತ ಸಮುದಾಯಕ್ಕೆ ಸೇರಿದ ಮಹಿಳೆ ಬಹದ್ದೂರ್‌ಗಢ ಪ್ರದೇಶದ ನಿವಾಸಿಯಾಗಿದ್ದು, ಜುಲೈ 26ರಂದು ಹಾವು ಕಡಿತದಿಂದ ಸಾವನ್ನಪ್ಪಿದ್ದಳು ಎಂದು ಪೊಲೀಸ್ ತನಿಖೆಯಿಂದ ತಿಳಿದು ಬಂದಿದೆ. ಹಾವು ಕಡಿತದಿಂದ ಯಾರಾದರೂ ಸತ್ತರೆ, ಅವರ ದೇಹವನ್ನು ಗಂಗಾ ನದಿಯಲ್ಲಿ ತೇಲಿಸಿ ಬಿಟ್ಟರೆ ಅವರು ಮತ್ತೆ ಜೀವಂತವಾಗಿ ಬರುತ್ತಾರೆ ಎಂಬ ವಿಚಿತ್ರ ನಂಬಿಕೆ ಸ್ಥಳೀಯರಲ್ಲಿದೆ.

ಪೊಲೀಸರು ಆಕೆಯ ಕುಟುಂಬ, ಗ್ರಾಮದ ಮುಖ್ಯಸ್ಥ ಮತ್ತು ಕೆಲವು ಗ್ರಾಮಸ್ಥರನ್ನು ಪ್ರಶ್ನಿಸಿದಾಗ, ಮಹಿಳೆ ಹಾವು ಕಡಿತದಿಂದ ಸಾವನ್ನಪ್ಪಿದ್ದು ಎಂದು ದೃಢವಾಗಿದೆ. ಸ್ಥಳೀಯ ತಂತ್ರಿಯಿಂದ ಚಿಕಿತ್ಸೆ ಪಡೆದರೂ ಆಕೆ ಚೇತರಿಸಿಕೊಳ್ಳದಿದ್ದಾಗ, ಆಕೆಯ ಕುಟುಂಬವು ಮೂಢನಂಬಿಕೆಯಂತೆ ಆಕೆಯ ಶವವನ್ನು ಗಂಗಾ ನದಿಗೆ ತೇಲಿಸಿ ಬಿಟ್ಟಿದ್ದಾರೆ ಎಂಬುದು ತಿಳಿದುಬಂದಿದೆ. ಸತ್ಯಾಂಶಗಳನ್ನು ದೃಢಪಡಿಸಿದ ನಂತರ ಪೊಲೀಸರು ಪ್ರಕರಣವನ್ನು ಮುಕ್ತಾಯಗೊಳಿಸಿದರು. ಮತ್ತು ಆಕೆಯ ಸಾವಿನಲ್ಲಿ ಯಾವುದೇ ದುರುದ್ದೇಶವಿಲ್ಲದ ಕಾರಣ ಶವವನ್ನು ಹಿಂಪಡೆಯುವ ಅಗತ್ಯವಿಲ್ಲ ಎಂದು ಅವರು ತಿಳಿಸಿದ್ದಾರೆ ಎನ್ನಲಾಗಿದೆ.

ಹಾವು ಕಚ್ಚಿದವರ ಶವಗಳನ್ನು ತೇಲಿಸಿ ಬಿಡುವ ಅಭ್ಯಾಸ ಸ್ಥಳೀಯ ಹಳ್ಳಿಗಳಲ್ಲಿ ಹೊಸತೇನಲ್ಲ. ಮೇ ತಿಂಗಳಲ್ಲಿ ಬುಲಂದ್ ಶಹರ್‌ನ ಜಹಾಂಗೀರಾಬಾದ್ ಪ್ರದೇಶದಲ್ಲಿ ಹಾವು ಕಚ್ಚಿದ ನಂತರ 22 ವರ್ಷದ ವ್ಯಕ್ತಿಯ ದೇಹವನ್ನು ಎರಡು ದಿನಗಳ ಕಾಲ ಗಂಗಾ ನದಿಯಲ್ಲಿ ಮುಳುಗಿಸಲಾಗಿತ್ತು. ದೇಹವು ಕೊಳೆಯಲು ಪ್ರಾರಂಭಿಸಿದ ನಂತರವೇ ದಹನ ಮಾಡಲಾಗಿತ್ತು.

ಇದನ್ನೂ ಓದಿ: ವರದಕ್ಷಿಣೆ ತರಲು ನಿರಾಕರಿಸಿದ ಪತ್ನಿಗೆ ವಾಟ್ಸಾಪ್‍ನಲ್ಲೇ ತ್ರಿವಳಿ ತಲಾಖ್!

ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಹಾವು ಕಡಿತದಿಂದ ಸಾವನ್ನಪ್ಪಿದೆ. ಬಿಹಾರದ ಸರನ್ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ರಾಜೀವ್ ಪ್ರತಾಪ್ ಸೋಮವಾರ ಸಂಸತ್ತಿನಲ್ಲಿ ಮಾತನಾಡಿ, “ದೇಶದಲ್ಲಿ ಪ್ರತಿವರ್ಷ ಸುಮಾರು 50,000 ಜನರು ಹಾವು ಕಡಿತದಿಂದ ಪ್ರಾಣ ಕಳೆದುಕೊಳ್ಳುತ್ತಾರೆ. ಪ್ರತಿ ವರ್ಷ ಭಾರತದಾದ್ಯಂತ 30-40 ಲಕ್ಷ ಜನರು ಹಾವು ಕಡಿತಕ್ಕೆ ಒಳಗಾಗುತ್ತಾರೆ” ಎಂದು ಹೇಳಿದ್ದಾರೆ.

Continue Reading

ವೈರಲ್ ನ್ಯೂಸ್

Viral Video: ಬಟ್ಟೆ ಹರಿದುಕೊಂಡು ಪುರುಷನ ಮೇಲೆ ಮುಗಿಬಿದ್ದ ಮಹಿಳೆ! ಅಬ್ಬಾ, ಎಂಥ ಜಗಳಗಂಟಿ ಎಂದ ನೆಟ್ಟಿಗರು!

Viral Video: ಜಗಳ, ಹೊಡೆದಾಟ ನಮ್ಮೊಳಗಿನ ರಾಕ್ಷಸತ್ವವನ್ನು ಹೆಚ್ಚಿಸುತ್ತದೆ ಹೊರತು ಕಡಿಮೆ ಮಾಡುವುದಿಲ್ಲ. ಇಲ್ಲೊಬ್ಬಳು ಮಹಿಳೆ ಪುರುಷನೊಂದಿಗೆ ಜಗಳವಾಡುತ್ತಾ ತನ್ನ ಬಟ್ಟೆಯನ್ನು ತಾನೇ ಹಿದುಕೊಂಡಿದ್ದಾಳೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ವಿಡಿಯೊ ನೋಡಿ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಮೆಂಟ್ ವಿಭಾಗದಲ್ಲಿ, ಹೆಚ್ಚಿನ ಸಂಖ್ಯೆಯ ಬಳಕೆದಾರರು ಬಟ್ಟೆಯನ್ನು ಹರಿದುಹಾಕಿದ ಮಹಿಳೆಯ ಕೃತ್ಯದ ವಿರುದ್ಧ ತಮ್ಮ ಕೋಪವನ್ನು ವ್ಯಕ್ತಪಡಿಸಿದ್ದಾರೆ. ಅಲ್ಲದೇ ಈ ವಿಡಿಯೊ ರೆಕಾರ್ಡ್ ಮಾಡಿ ತನ್ನನ್ನು ಸುಳ್ಳು ಆರೋಪಗಳಿಂದ ಕಾಪಾಡಿಕೊಂಡ ವ್ಯಕ್ತಿಯನ್ನು ಶ್ಲಾಘಿಸಿದ್ದಾರೆ.

VISTARANEWS.COM


on

Viral Video
Koo


ಕಾಲು ಕೆರೆದುಕೊಂಡು ಜಗಳಕ್ಕೆ ಬಂದಿದ್ದಲ್ಲದೆ ಮೈಮೇಲಿದ್ದ ಬಟ್ಟೆಯನ್ನು ಹರಿದುಕೊಂಡು ಪುರುಷನೊಬ್ಬನ ಜೊತೆ ಮಹಿಳೆಯೊಬ್ಬಳು ಜಗಳವಾಡಿದ ವಿಡಿಯೊವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video)ಆಗಿದೆ. ಇದಕ್ಕೆ ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಡಿಯೊದಲ್ಲಿ ಪುರುಷ ಮತ್ತು ಮಹಿಳೆ ಕೆಟ್ಟದಾಗಿ ಜಗಳವಾಡುತ್ತಿರುವ ದೃಶ್ಯ ಕಂಡು ಬಂದಿದೆ. ಈ ಕ್ಲಿಪ್‍ನಲ್ಲಿ ಮಹಿಳೆ ಮತ್ತು ಪುರುಷರೊಬ್ಬರ ನಡುವೆ ಬಿಸಿಯಾದ ಮಾತಿನ ಚಕಮಕಿ ನಡೆಯುತ್ತಿದೆ. ಮಹಿಳೆಯೊಬ್ಬಳು ಜಮೀನಿನಲ್ಲಿ ನೀರು ನಿಲ್ಲುವ ವಿವಾದದ ಬಗ್ಗೆ ವ್ಯಕ್ತಿಯೊಂದಿಗೆ ವಾದಿಸುತ್ತ ತನ್ನ ಬಟ್ಟೆಗಳನ್ನು ತಾನೇ ಹರಿದುಕೊಂಡಿದ್ದಾಳೆ. ಕೈಯಲ್ಲಿ ರಾಡ್ ಹಿಡಿದುಕೊಂಡು ಆ ವ್ಯಕ್ತಿಯನ್ನು ಹೊಡೆಯಲು ಓಡಿಸಿಕೊಂಡು ಹೋಗುತ್ತಿದ್ದಾಳೆ. ನಂತರ ಅವಳು ತನ್ನ ಕೈಯಲ್ಲಿ ರಾಡ್ ಅನ್ನು ತೆಗೆದುಕೊಂಡು ಇಟ್ಟಿಗೆಯ ಗೋಡೆಯನ್ನು ಒಡೆದು ಹಾಕಿದ್ದಾಳೆ. ಆ ವ್ಯಕ್ತಿ ಅದನ್ನು ವಿಡಿಯೊ ಮಾಡಿದ್ದಾನೆ.

ಅದನ್ನು ನೋಡಿದ , ಮಹಿಳೆ ತನ್ನನ್ನು ವಿಡಿಯೊ ಮಾಡುವ ವ್ಯಕ್ತಿಗೆ ಅದೇ ಕೋಲಿನಿಂದ ಹೊಡೆಯುವುದಾಗಿ ಬೆದರಿಕೆ ಹಾಕುತ್ತಾಳೆ. ʼಹಿಮಾಲಯನ್ ಹಿಂದೂʼ ಎಂಬ ಬಳಕೆದಾರರು ಎಕ್ಸ್ (ಈ ಹಿಂದೆ ಟ್ವಿಟರ್)ನಲ್ಲಿ ಈ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಘಟನೆಯ ನಿಖರವಾದ ದಿನಾಂಕ, ಸ್ಥಳ ಮತ್ತು ಸಮಯದ ಬಗ್ಗೆ ಮಾಹಿತಿ ತಿಳಿದುಬಂದಿಲ್ಲ.

ಇದನ್ನೂ ಓದಿ: ಮಹಿಳೆಯ ಎದೆ, ಕುತ್ತಿಗೆಗೆ ಭೀಕರವಾಗಿ ತಿವಿದ ಬೀದಿ ಹಸು; ಮೈ ನಡುಗಿಸುವ ವಿಡಿಯೊ

ಆದರೆ ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ, ಇದಕ್ಕೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಮೆಂಟ್ ವಿಭಾಗದಲ್ಲಿ, ಹೆಚ್ಚಿನ ಸಂಖ್ಯೆಯ ಬಳಕೆದಾರರು ಬಟ್ಟೆಯನ್ನು ಹರಿದುಹಾಕಿದ ಮಹಿಳೆಯ ಕೃತ್ಯದ ವಿರುದ್ಧ ತಮ್ಮ ಕೋಪವನ್ನು ವ್ಯಕ್ತಪಡಿಸಿದ್ದಾರೆ. ಅಲ್ಲದೇ ಈ ವಿಡಿಯೊ ರೆಕಾರ್ಡ್ ಮಾಡಿ ತನ್ನನ್ನು ಸುಳ್ಳು ಆರೋಪಗಳಿಂದ ಕಾಪಾಡಿಕೊಂಡ ವ್ಯಕ್ತಿಯನ್ನು ಶ್ಲಾಘಿಸುತ್ತಿದ್ದಾರೆ. ‘ಸುಳ್ಳು ಆರೋಪಗಳನ್ನು ಹೊರಿಸುವುದು ಇತ್ತೀಚಿನ ದಿನಗಳಲ್ಲಿ ಸುಲಭದ ಕೆಲಸ’ ಎಂದು ಇನ್ನೊಬ್ಬರು ಬರೆದಿದ್ದಾರೆ. ಈ ಜಗಳದ ವಿಡಿಯೊ ನೋಡಿದ ಜನ, ಥೋ…ಈಕೆ ಎಂಥ ಜಗಳಗಂಟಿ ಎಂದು ಉದ್ಗರಿಸಿದ್ದಾರೆ.

Continue Reading

Latest

Viral Video: ಮೆಟ್ರೊದೊಳಗೆ ಚಪ್ಪಲಿಯಿಂದ ಹೊಡೆದಾಡಿಕೊಂಡ ಪ್ರಯಾಣಿಕರು! ವಿಡಿಯೊ ನೋಡಿ

Viral Video: ಮೆಟ್ರೋ ನೃತ್ಯ, ಮೇಕಪ್ ಹೀಗೆ ಹಲವಾರು ಕಾರಣಗಳಿಂದ ಈ ಹಿಂದೆ ದೆಹಲಿ ಮೆಟ್ರೋ ಸುದ್ದಿಯಾಗಿತ್ತು. ಈಗ, ದೆಹಲಿ ಮೆಟ್ರೋದಿಂದ ಇಬ್ಬರು ಪ್ರಯಾಣಿಕರು ಚಪ್ಪಲಿ ಹಿಡಿದು ಹೊಡೆದಾಡಿದ ಕಾರಣ ಮತ್ತೊಮ್ಮೆ ಸುದ್ದಿಯಾಗಿದೆ. ಇವರ ಜಗಳದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.ದೆಹಲಿ ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರಿಬ್ಬರು ವಾಗ್ವಾದದಲ್ಲಿ ತೊಡಗಿಕೊಂಡು ನಂತರ, ಇಬ್ಬರು ವ್ಯಕ್ತಿಗಳಲ್ಲಿ ಒಬ್ಬರು ಇನ್ನೊಬ್ಬರ ಮುಖಕ್ಕೆ ಚಪ್ಪಲಿಯಿಂದ ಹೊಡೆದುಕೊಂಡಿದ್ದಾರೆ.ಈ ಹೊಡೆದಾಟಕ್ಕೆ ನಿಖರ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಈ ವಿಡಿಯೊ ಮಾತ್ರ ಸಖತ್ ವೈರಲ್ ಆಗಿದೆ.

VISTARANEWS.COM


on

Viral Video
Koo


ನವದೆಹಲಿ: ಇತ್ತೀಚಿನ ದಿನಗಳಲ್ಲಿ, ದೆಹಲಿ ಮೆಟ್ರೋದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಿದೆ. ಹೆಚ್ಚಿನ ಜನರು ಪ್ರತಿದಿನ ಬಸ್ ಬಿಟ್ಟು ಮೆಟ್ರೋಗಳಲ್ಲಿ ಪ್ರಯಾಣಿಸುತ್ತಿದ್ದಾರೆ. ಇದರಿಂದ ಮೆಟ್ರೋದಲ್ಲಿ ನೂಕುನುಗ್ಗಲು ಶುರುವಾಗಿದೆ. ಹಾಗಾಗಿ ದೆಹಲಿ ಮೆಟ್ರೋದಲ್ಲಿ ಹೆಚ್ಚಾಗಿ ಅಶಿಸ್ತಿನ ಮತ್ತು ಅಸಾಮಾನ್ಯ ಪ್ರಯಾಣಿಕರ ನಡವಳಿಕೆಯಿಂದಾಗಿ ಅದು ಆಗಾಗ ವಿಲಕ್ಷಣ ಕಾರಣಗಳಿಂದ ಸುದ್ದಿಯಲ್ಲಿರುತ್ತದೆ. ಜಗಳಗಳು, ಪ್ರಯಾಣಿಕರ ನೃತ್ಯ, ಮೇಕಪ್ ಬಳಿದುಕೊಳ್ಳುವುದು ಹೀಗೆ ಹಲವಾರು ಕಾರಣಗಳಿಂದ ಈ ಹಿಂದೆ ದೆಹಲಿ ಮೆಟ್ರೋ ಸುದ್ದಿಯಾಗಿತ್ತು. ಈಗ, ದೆಹಲಿ ಮೆಟ್ರೋದಿಂದ ಇಬ್ಬರು ಪ್ರಯಾಣಿಕರು ಚಪ್ಪಲಿ ಹಿಡಿದು ಹೊಡೆದಾಡಿದ ಕಾರಣ ಮತ್ತೊಮ್ಮೆ ಸುದ್ದಿಯಾಗಿದೆ. ಇವರ ಜಗಳದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral video)ಆಗಿದೆ.

‘ಘರ್ ಕೆ ಕಾಲೇಶ್’ ಎಂಬ ಖಾತೆಯಿಂದ ಎಕ್ಸ್ (ಹಿಂದೆ ಟ್ವಿಟರ್) ನಲ್ಲಿ ಹಂಚಿಕೊಳ್ಳಲಾದ ವಿಡಿಯೊದಲ್ಲಿ ಇಬ್ಬರು ದೆಹಲಿ ಮೆಟ್ರೋ ಪ್ರಯಾಣಿಕರು ವಾಗ್ವಾದದಲ್ಲಿ ತೊಡಗಿದ್ದಾರೆ. ಸೆಕೆಂಡುಗಳ ನಂತರ, ಇಬ್ಬರು ವ್ಯಕ್ತಿಗಳಲ್ಲಿ ಒಬ್ಬರು ಇನ್ನೊಬ್ಬರ ಮುಖಕ್ಕೆ ಚಪ್ಪಲಿಯಿಂದ ಹೊಡೆದಿದ್ದಾರೆ. ಇನ್ನೊಬ್ಬ ವ್ಯಕ್ತಿಯು ಅದಕ್ಕೆ ಪ್ರತಿಕ್ರಿಯಿಸಿ ಎರಡು ಬಾರಿ ಹೊಡೆಯುತ್ತಾನೆ. ವಿಡಿಯೊ ಕೊನೆಯಲ್ಲಿ, ಒಬ್ಬ ವ್ಯಕ್ತಿಯು ಮಧ್ಯಪ್ರವೇಶಿಸಿ ಜಗಳವನ್ನು ನಿಲ್ಲಿಸಲು ಪ್ರಯತ್ನಿಸುತ್ತಾನೆ. ಹೊಡೆದಾಟಕ್ಕೆ ನಿಖರ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಈ ವಿಡಿಯೊ ವೈರಲ್ ಆಗಿದೆ. ಇದು ಸುಮಾರು 2 ಮಿಲಿಯನ್ ವೀಕ್ಷಣೆಗಳನ್ನು ಮತ್ತು ಹಲವಾರು ಕಾಮೆಂಟ್‍ಗಳನ್ನು ಪಡೆದುಕೊಂಡಿದೆ.

“ದೆಹಲಿ ಮೆಟ್ರೋ ಇತ್ತೀಚಿನ ದಿನಗಳಲ್ಲಿ ಮನರಂಜನೆಯಿಂದ ತುಂಬಿದೆ. ನೀವು ಆಕ್ಷನ್ ದೃಶ್ಯಗಳು, ರೊಮ್ಯಾಂಟಿಕ್, ಲವ್ ಮೇಕಿಂಗ್, ಗಾಸಿಪ್‍ಗಳು ಮತ್ತು ಹಾಡುಗಳನ್ನು ಸಹ ನೋಡಬಹುದು” ಎಂದು ಬಳಕೆದಾರರೊಬ್ಬರು ಬರೆದಿದ್ದಾರೆ. “ಅವರು ಕುಡಿದಿರುವಂತೆ ಕಾಣುತ್ತಿದ್ದಾರೆ. ಇಲ್ಲವಾದರೆ ಮೆಟ್ರೋ ಒಳಗೆ ಯಾರಾದರೂ ಚಪ್ಪಲಿಗಳನ್ನು ತೆಗೆದು ಇನ್ನೊಬ್ಬ ವ್ಯಕ್ತಿಯನ್ನು ಹೊಡೆಯಲು ಹೇಗೆ ಸಾಧ್ಯ? ದೆಹಲಿ ಪೊಲೀಸರು ಇದಕ್ಕೆ ಕಠಿಣ ಕ್ರಮ ಕೈಗೊಳ್ಳುತ್ತಾರೆ ಮತ್ತು ಇನ್ನು ಮುಂದೆ ಅಂತಹ ಜನರನ್ನು ಮೆಟ್ರೋಗೆ ಪ್ರವೇಶಿಸಲು ಅನುಮತಿಸುವುದಿಲ್ಲ ಎಂದು ಆಶಿಸುತ್ತೇವೆ” ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.

“ವಿಶ್ವದ ಯಾವುದೇ ಮೆಟ್ರೋಗೆ ಹೋಲಿಸಿದರೆ ದೆಹಲಿ ಮೆಟ್ರೋ ಅತ್ಯಂತ ಶಾಂತ ಪ್ರಯಾಣಿಕರನ್ನು ಹೊಂದಿದೆ. ಪ್ರತಿದಿನ ಉಚಿತ ಮನರಂಜನೆ ಮತ್ತು ಪ್ರಸಾರ ರಿಯಾಲಿಟಿ ಶೋಗಳು. ದೆಹಲಿ ಮೆಟ್ರೋವನ್ನು ಸೋಲಿಸಲು ಯಾರಿಂದಲೂ ಸಾಧ್ಯವಿಲ್ಲ. ಪ್ರಯಾಣಿಕರನ್ನು ಮಾತ್ರ ಹೊಡೆಯಲಾಗುತ್ತದೆ” ಎಂದು ಮೂರನೇ ಬಳಕೆದಾರರು ವ್ಯಂಗ್ಯ ಮಾಡಿದ್ದಾರೆ.

ಇದನ್ನೂ ಓದಿ: ಕ್ಲಾಸ್‌ಗೆ ಹೋಗಲು ಆಟೊ ಹತ್ತಿದ್ದ ಬಾಲಕಿ ಮೇಲೆ ಅತ್ಯಾಚಾರ; ಚಾಲಕ ಮೊಹಮ್ಮದ್‌ ಬಂಧನ

ದೆಹಲಿ ಮೆಟ್ರೋದಲ್ಲಿ ಜನರು ಜಗಳವಾಡುತ್ತಿರುವ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡಿರುವುದು ಇದೇ ಮೊದಲಲ್ಲ. ಈ ತಿಂಗಳ ಆರಂಭದಲ್ಲಿ, ಟೋಕನ್ ಕೌಂಟರ್‌ನಲ್ಲಿ ವಾಗ್ವಾದದ ನಂತರ ಎರಡರಿಂದ ಮೂರು ಜನರು ಜಗಳದಲ್ಲಿ ತೊಡಗಿರುವ ವಿಡಿಯೊ ವೈರಲ್ ಆಗಿತ್ತು. ಟೋಕನ್ ಪಡೆಯಲು ಸರತಿ ಸಾಲಿನಲ್ಲಿ ನಿಂತಾಗ ಕಪಾಳಮೋಕ್ಷ ಮಾಡುವುದು, ತಳ್ಳುವುದು ಮತ್ತು ಹೊಡೆಯುವುದು ಗೊಂದಲಮಯ ದೃಶ್ಯವಾಗಿತ್ತು. ಬೇರೆ ಸಾಲಿನಲ್ಲಿ ನಿಂತಿದ್ದ ಇನ್ನೊಬ್ಬ ವ್ಯಕ್ತಿ ಪರಿಸ್ಥಿತಿಯನ್ನು ತಿಳಿಗೊಳಿಸಲು ಪ್ರಯತ್ನಿಸಿದನು, ಆದರೆ, ಅವರಲ್ಲಿ ಒಬ್ಬರು ಅವನನ್ನು ಜಗಳಕ್ಕೆ ಎಳೆದುಕೊಂಡು ಹಿಂದಿನಿಂದ ಕಪಾಳಮೋಕ್ಷ ಮಾಡಿದ್ದರು.

Continue Reading

Latest

Condom Cause Cancer: ಕಾಂಡೋಮ್, ಲೂಬ್ರಿಕೆಂಟ್‍ ಬಳಸಿದರೂ ಕ್ಯಾನ್ಸರ್‌! ಅಧ್ಯಯನ ವರದಿಯಲ್ಲಿ ಆಘಾತಕಾರಿ ಸಂಗತಿ

Condom Cause Cancer: ಕಾಂಡೋಮ್ ಹಾಗೂ ಲೂಬ್ರಿಕೆಂಟ್‌ಗಳಲ್ಲಿ ಬಂಜೆತನ, ಕ್ಯಾನ್ಸರ್ ಸೇರಿದಂತೆ ಇತರ ಸಮಸ್ಯೆಗಳಿಗೆ ಕಾರಣವಾಗುವ ವಿಷಕಾರಿ ರಾಸಾಯನಿಕಗಳನ್ನು ಹೊಂದಿರುತ್ತವೆ ಎಂದು ಹೊಸ ಅಧ್ಯಯನವು ಬಹಿರಂಗಪಡಿಸಿದೆ. ಪಿಎಫ್ಎಎಸ್ ಅನ್ನು ಹೆಚ್ಚು ಬಳಸುವುದರಿಂದ ಕ್ಯಾನ್ಸರ್, ಯಕೃತ್ತಿನ ಹಾನಿ, ಥೈರಾಯ್ಡ್ ಸಮಸ್ಯೆಗಳು, ಜನನ ದೋಷಗಳು ಮತ್ತು ಕಡಿಮೆ ರೋಗನಿರೋಧಕ ಶಕ್ತಿ ಸೇರಿದಂತೆ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಒಳಗಾಗುವ ಸಾಧ್ಯತೆ ಹೆಚ್ಚಿದೆಯಂತೆ.

VISTARANEWS.COM


on

Condom Cause Cancer
Koo


ಸಾಮಾನ್ಯವಾಗಿ ದಂಪತಿ ಬೇಡದ ಗರ್ಭವನ್ನು ತಡೆಯಲು ಕಾಂಡೋಮ್‌ಗಳನ್ನು ಬಳಸುತ್ತಾರೆ. ಹಾಗೇ ಸಂಭೋಗದ ವೇಳೆ ಯೋನಿಯಲ್ಲಿ ಲೋಳೆ ಸ್ರಾವ ಕಡಿಮೆಯಾದಾಗ ಯೋನಿ ನಾಳದ ನೋವು, ಬಿಗಿತವನ್ನು ಕಡಿಮೆ ಮಾಡಲು ಕೆಲವರು ಲೂಬ್ರಿಕೆಂಟ್ ಅನ್ನು ಬಳಸುತ್ತಾರೆ. ಆದರೆ ನೀವು ಬಳಸುವಂತಹ ಈ ಕಾಂಡೋಮ್ (Condom Cause Cancer) ಹಾಗೂ ಲೂಬ್ರಿಕೆಂಟ್‍ಗಳಲ್ಲಿ ಬಂಜೆತನ, ಕ್ಯಾನ್ಸರ್ ಸೇರಿದಂತೆ ಇತರ ಸಮಸ್ಯೆಗಳಿಗೆ ಕಾರಣವಾಗುವ ವಿಷಕಾರಿ ರಾಸಾಯನಿಕಗಳನ್ನು ಹೊಂದಿರುತ್ತವೆ ಎಂದು ಹೊಸ ಅಧ್ಯಯನವು ಬಹಿರಂಗಪಡಿಸಿದೆ!

ಕಾಂಡೋಮ್‍ಗಳು ಮತ್ತು ಲೂಬ್ರಿಕೆಂಟ್‍ಗಳ ಹಲವಾರು ಪ್ರಸಿದ್ಧ ಬ್ರಾಂಡ್‍ಗಳಲ್ಲಿ ಈ ವಿಷಕಾರಿ ಪಿಎಫ್ಎಎಸ್ ರಾಸಾಯನಿಕಗಳ ಅಪಾಯಕಾರಿ ಮಟ್ಟಲ್ಲಿದೆ ಎಂಬುದನ್ನು ಇತ್ತೀಚಿನ ಅಧ್ಯಯನವು ಬಹಿರಂಗಪಡಿಸಿದೆ. ಗ್ರಾಹಕ ನ್ಯಾಯವಾದಿ ಸಂಸ್ಥೆಯಾದ ಮಾಮಾವೇಶನ್ ನಡೆಸಿದ ಸಂಶೋಧನೆಯು ಈ ಉತ್ಪನ್ನಗಳಿಗೆ ಸಂಬಂಧಿಸಿದ ಗಮನಾರ್ಹ ಆರೋಗ್ಯ ಅಪಾಯಗಳನ್ನು ಬಹಿರಂಗಪಡಿಸಿದೆ. ಎನ್ವಿರಾನ್ಮೆಂಟಲ್ ಪ್ರೊಟೆಕ್ಷನ್ ಏಜೆನ್ಸಿಯ ಪ್ರಯೋಗಾಲಯವು ನಡೆಸಿದ ಅಧ್ಯಯನವು ಟ್ರೋಜನ್ ಅಲ್ಟ್ರಾ ಥಿನ್ ಕಾಂಡೋಮ್‍ಗಳು ಮತ್ತು ಕೆ-ವೈ ಜೆಲ್ಲಿ ಕ್ಲಾಸಿಕ್ ವಾಟರ್ ಬೇಸಡ್ ಫರ್ಸನಲ್ ಲೂಬ್ರಿಕೆಂಟ್ ಸೇರಿದಂತೆ ವಿವಿಧ ಸಂತಾನೋತ್ಪತ್ತಿಗೆ ಸಂಬಂಧಿಸಿದ ಆರೋಗ್ಯ ಉತ್ಪನ್ನಗಳಲ್ಲಿ ಪಿಎಫ್ಎಎಸ್ ಅನ್ನು ಪತ್ತೆ ಮಾಡಿದೆ.

ಟ್ರೋಜನ್ ಅಲ್ಟ್ರಾ ಥಿನ್ ಕಾಂಡೋಮ್‍ಗಳು ಮತ್ತು ಯೂನಿಯನ್ ಸ್ಟ್ಯಾಂಡರ್ಡ್ ಅಲ್ಟ್ರಾ ಥಿನ್ ಲೂಬ್ರಿಕೇಟೆಡ್ ಮೇಲ್ ಲ್ಯಾಟೆಕ್ಸ್ ಕಾಂಡೋಮ್‍ಗಳಲ್ಲಿ ಪಿಎಫ್ಎಎಸ್ ಮಟ್ಟವು ವಿಶೇಷವಾಗಿ ಹೆಚ್ಚಾಗಿದೆ ಎಂದು ಸಂಶೋಧನೆಗಳು ತಿಳಿಸುತ್ತವೆ. ಇತರ ಲೂಬ್ರಿಕೆಂಟ್‍ಗಳಾದ ಲೋಲಾ ಟಿಂಗ್ ಲಿಂಗ್ ಮಿಂಟ್ ಪ್ಲೆಷರ್ ಜೆಲ್ ಸಹ ಈ ಹಾನಿಕಾರಕ ರಾಸಾಯನಿಕಗಳನ್ನು ಒಳಗೊಂಡಿವೆ ಎನ್ನಲಾಗಿದೆ.

ಪಿಎಫ್ಎಎಸ್ ಎಂಬುದು ನೀರು, ಕಲೆಗಳು ಮತ್ತು ಶಾಖ ನಿರೋಧಕ ಉತ್ಪನ್ನಗಳನ್ನು ತಯಾರಿಸಲು ಬಳಸುವ ಸುಮಾರು 15,000 ಸಂಶ್ಲೇಷಿತ ರಾಸಾಯನಿಕಗಳ ಗುಂಪು. ಅವುಗಳನ್ನು “ಫಾರೇವರ್ ಕೆಮಿಕಲ್ಸ್” ಎಂದು ಕರೆಯಲಾಗುತ್ತದೆ. ಏಕೆಂದರೆ ಅವು ಪರಿಸರದಲ್ಲಿ ನೈಸರ್ಗಿಕವಾಗಿ ಕರಗುವುದಿಲ್ಲ ಮತ್ತು ಮಾನವ ದೇಹದಲ್ಲಿ ಸಂಗ್ರಹವಾಗುವಂತಹ ರಾಸಾಯನಿಕವಾಗಿದೆ. ಹಾಗಾಗಿ ಪಿಎಫ್ಎಎಸ್ ಅನ್ನು ಹೆಚ್ಚು ಬಳಸುವುದರಿಂದ ಕ್ಯಾನ್ಸರ್, ಯಕೃತ್ತಿನ ಹಾನಿ, ಥೈರಾಯ್ಡ್ ಸಮಸ್ಯೆಗಳು, ಜನನ ದೋಷಗಳು ಮತ್ತು ಕಡಿಮೆ ರೋಗನಿರೋಧಕ ಶಕ್ತಿ ಸೇರಿದಂತೆ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಒಳಗಾಗಬಹುದು. ಅಲ್ಲದೇ ಇಂತಹ ಕಾಂಡೋಮ್‍ಗಳು ಮತ್ತು ಲೂಬ್ರಿಕೆಂಟ್‍ಗಳನ್ನು ಶಿಶ್ನ ಮತ್ತು ಯೋನಿಯಂತಹ ತುಂಬಾ ಸೂಕ್ಷ್ಮ ಪ್ರದೇಶಗಳಿಗೆ ಬಳಸುವುದರಿಂದ ಹೆಚ್ಚು ಆತಂಕಕಾರಿಯಾಗಿದೆ. ಯಾಕೆಂದರೆ ದೇಹದ ಇತರ ಭಾಗಗಳಿಗೆ ಹೋಲಿಸಿದರೆ ಅವು ರಾಸಾಯನಿಕಗಳನ್ನು ಸುಲಭವಾಗಿ ಹೀರಿಕೊಳ್ಳಬಲ್ಲವು. ಅಲ್ಲದೇ ಈ ರಾಸಾಯನಿಕಗಳ ಕಾಂಡೋಮ್ ಬಳಕೆ ಮಾಡುವುದರಿಂದ ಸ್ತ್ರೀ ಸಂತಾನೋತ್ಪತ್ತಿಯ ನಾಳವು ಹಾನಿಗೊಳಗಾಗುತ್ತದೆ ಎಂದು ತಜ್ಞರು ಹೇಳಿದ್ದಾರೆ.

ಇದನ್ನೂ ಓದಿ: ತಂದೆಯ ಜೀವ ಉಳಿಸಲು ಮೊಸಳೆ ಬಾಯಿಗೆ ಕೈ ಹಾಕಿದ ಬಾಲಕ!

ಈ ರಾಸಾಯನಿಕಗಳನ್ನು ತಮ್ಮ ಉತ್ಪನ್ನಗಳಿಂದ ತೆಗೆದುಹಾಕಲು ಕೈಗಾರಿಕೆಗಳ ಮೇಲೆ ಒತ್ತಡ ಹೆಚ್ಚುತ್ತಿದೆ. ಸಂಭವಿಸಬಹುದಾದ ಆರೋಗ್ಯ ಅಪಾಯಗಳನ್ನು ತಡೆಗಟ್ಟಲು ಕಾಂಡೋಮ್ ಮತ್ತು ಲೂಬ್ರಿಕೆಂಟ್‍ಗಳಿಂದ ಪಿಎಫ್ಎಎಸ್ ಅನ್ನು ತೆಗೆದುಹಾಕಲು ತಕ್ಷಣದ ಕ್ರಮಕ್ಕೆ ಮಾಮಾವತಿ ಕರೆ ನೀಡುತ್ತಿದೆ. ತಯಾರಕರು ತಮ್ಮ ಉತ್ಪನ್ನಗಳಿಂದ ಈ ಹಾನಿಕಾರಕ ರಾಸಾಯನಿಕಗಳನ್ನು ತೆಗೆದುಹಾಕುವ ಮೂಲಕ ಗ್ರಾಹಕರ ಸುರಕ್ಷತೆಗೆ ಆದ್ಯತೆ ನೀಡುವಂತೆ ಸಂಸ್ಥೆ ಒತ್ತಾಯಿಸುತ್ತಿದೆ.

Continue Reading
Advertisement
Kannada Serials TRP TOP 5 bhagyalakshmi puttakkana makkalu number 1
ಕಿರುತೆರೆ21 mins ago

Kannada Serials TRP: ಟಾಪ್‌ 5ನಲ್ಲಿ ‘ಭಾಗ್ಯಲಕ್ಷ್ಮೀ’; ‘ಪುಟ್ಟಕ್ಕನ ಮಕ್ಕಳು’ ನಂಬರ್‌ 1!

Mohammed Deif
ವಿದೇಶ26 mins ago

Mohammed Deif: ಹಮಾಸ್‌ ಉಗ್ರರಿಗಿಲ್ಲ ಉಳಿಗಾಲ; ಹಮಾಸ್‌ ಮಿಲಿಟರಿ ಚೀಫ್‌ನನ್ನೂ ಕೊಂದ ಇಸ್ರೇಲ್‌!

Rohit Sharma
ಕ್ರೀಡೆ28 mins ago

Rohit Sharma: ಸಚಿನ್​, ಕೊಹ್ಲಿ ಜತೆ ಎಲೈಟ್​ ಪಟ್ಟಿ ಸೇರುವ ನಿರೀಕ್ಷೆಯಲ್ಲಿ ರೋಹಿತ್​

Road Accident
ಬೆಂಗಳೂರು30 mins ago

Road Accident : ಬೆಂಗಳೂರಲ್ಲಿ ಮಳೆಗೆ ಬೈಕ್‌ ಸವಾರ ಬಲಿ; ಕಂಟ್ರೋಲ್‌ ತಪ್ಪಿ ಬಿದ್ದವನ ಮೇಲೆ ಹರಿದ ವಾಹನಗಳು!

Dead Body in Ganga River
Latest41 mins ago

Viral Video: ಹಾವು ಕಚ್ಚಿದ ಮಹಿಳೆಯನ್ನು ಗಂಗಾ ನದಿಯಲ್ಲಿ ತೇಲಿ ಬಿಟ್ಟರು! ಆಕೆ ಬದುಕಿ ಬರುತ್ತಾಳೆ ಎಂದರು!

Madhubala Embodies Pannaga A Pillar of Strength in 'Kannappa'
ಕಾಲಿವುಡ್47 mins ago

Kannappa Movie: ವಿಷ್ಣು ಮಂಚು `ಕಣ್ಣಪ್ಪ’ ಚಿತ್ರದಿಂದ ಹೊರಬಿತ್ತು ಮಧುಬಾಲ ಫಸ್ಟ್‌ ಲುಕ್‌ !

19744 Crore rupees Reserve for Green Hydrogen Mission says Minister Pralhad Joshi Information
ದೇಶ49 mins ago

Pralhad Joshi: ಹಸಿರು ಜಲಜನಕ ಮಿಷನ್‌ಗೆ 19744 ಕೋಟಿ ರೂ. ಮೀಸಲು; ಪ್ರಲ್ಹಾದ್‌ ಜೋಶಿ

Viral Video
ವೈರಲ್ ನ್ಯೂಸ್51 mins ago

Viral Video: ಬಟ್ಟೆ ಹರಿದುಕೊಂಡು ಪುರುಷನ ಮೇಲೆ ಮುಗಿಬಿದ್ದ ಮಹಿಳೆ! ಅಬ್ಬಾ, ಎಂಥ ಜಗಳಗಂಟಿ ಎಂದ ನೆಟ್ಟಿಗರು!

7th Pay Commission
ದೇಶ1 hour ago

7th Pay Commission: ಕೇಂದ್ರ ಸರ್ಕಾರಿ ನೌಕರರಿಗೆ ಗುಡ್‌ನ್ಯೂಸ್‌; ಶೀಘ್ರದಲ್ಲೇ ತುಟ್ಟಿ ಭತ್ಯೆಯಲ್ಲಿ ಶೇ.3ರಷ್ಟು ಏರಿಕೆ

Israel Attack
ವಿದೇಶ1 hour ago

Israel Attack: ಟೂತ್‌ಪೇಸ್ಟ್‌ನಲ್ಲಿ ವಿಷ ಬೆರೆಸಿದ ಇಸ್ರೇಲ್‌ ಗುಪ್ತದಳ! ಪ್ಯಾಲೆಸ್ತೀನ್‌ ಕಮಾಂಡರ್‌ ನರಳಿ ನರಳಿ ಸತ್ತ! ಸೇಡಿನ interesting story

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ2 hours ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ3 hours ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ3 hours ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

karnataka Rain
ಮಳೆ2 days ago

Karnataka rain : ಭದ್ರಾ ನದಿಯಲ್ಲಿ ಕೊಚ್ಚಿ ಹೋದ ಹಸು; ಬೈಂದೂರಿನಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ

Karnataka Rain
ಮಳೆ2 days ago

Karnataka Rain : ಭಾರಿ ಮಳೆಗೆ ಬಾಳೆಹೊನ್ನೂರು ಮುಳುಗಡೆ; ನೆರೆಗೆ ಬೋಟ್‌ ಮೊರೆ ಹೋದ ಜನರು

Bharachukki falls
ಚಾಮರಾಜನಗರ2 days ago

Bharachukki Falls : ಭರಚುಕ್ಕಿ ಜಲಪಾತಕ್ಕೆ ಕಳ್ಳ ಮಾರ್ಗದಿಂದ ಹೋದೋರಿಗೆ ಬಸ್ಕಿ ಹೊಡೆಸಿದ ಪೊಲೀಸರು!

karnataka Rain
ಮಳೆ3 days ago

Karnataka Rain: ಮತ್ತೆ ಶುರು ಮಳೆ ಅಬ್ಬರ; ಗಾಳಿಗೆ ಹಾರಿ ಹೋದ ಮನೆಗಳ ಚಾವಣಿ, ಶಿರಾಡಿಘಾಟ್‌ನಲ್ಲಿ ಮತ್ತೆ ಭೂ ಕುಸಿತ

Elephant combing Makna elephant captured near Bannerghatta
ಬೆಂಗಳೂರು ಗ್ರಾಮಾಂತರ3 days ago

Elephant combing: ಭೀಮ, ಮಹೇಂದ್ರರ ಮುಂದೆ ಮಂಡಿಯೂರಿದ ಮಕ್ನಾ ಆನೆ; ಹೇಗಿತ್ತು ಗೊತ್ತಾ ಕಾರ್ಯಾಚರಣೆ

karnataka rain
ಮಳೆ3 days ago

Karnataka rain: ಪ್ರವಾಹದ ಭೀಕರತೆ; ಹಳ್ಳದಲ್ಲಿ ತೇಲಿಬಂದ ಎಮ್ಮೆಗಳ ಕಳೇಬರ

Tungabhadra Dam
ಕೊಪ್ಪಳ4 days ago

Tungabhadra Dam: ಕಾಲುವೆಯಲ್ಲಿ ಬಾಲಕರ ಈಜಾಟ; ಅಧಿಕಾರಿಗಳಿಗೆ ಪೀಕಲಾಟ!

ಟ್ರೆಂಡಿಂಗ್‌