Things to Avoid Cleaning with Lemon: ಇವುಗಳನ್ನು ಸ್ವಚ್ಛ ಮಾಡಲು ಯಾವ ಕಾರಣಕ್ಕೂ ನಿಂಬೆಹಣ್ಣನ್ನು ಬಳಸಲೇಬೇಡಿ! - Vistara News

ಲೈಫ್‌ಸ್ಟೈಲ್

Things to Avoid Cleaning with Lemon: ಇವುಗಳನ್ನು ಸ್ವಚ್ಛ ಮಾಡಲು ಯಾವ ಕಾರಣಕ್ಕೂ ನಿಂಬೆಹಣ್ಣನ್ನು ಬಳಸಲೇಬೇಡಿ!

Things to Avoid Cleaning with Lemon: ಎಷ್ಟೋ ಬಾರಿ ಯಾವ ಕ್ಲೀನಿಂಗ್‌ ಏಜೆಂಟ್‌ಗೂ ಬಗ್ಗದ ಕಲೆಗಳು ನಿಂಬೆಹಣ್ಣಿನ ಶಕ್ತಿಯಿಂದ ಮಾಯವಾಗುತ್ತದೆ. ಫಳಪಳಿಸುವ ಮೇಲ್ಮೈಗೆ, ಕಲೆಗಳನ್ನು ತೆಗೆಯಲು, ವಾಸನೆಯನ್ನು ಹೋಗಲಾಡಿಸಲು ಹೀಗೆ ಹಲವು ಕ್ಷೇತ್ರಗಳಲ್ಲಿ ನಿಂಬೆಹಣ್ಣಿನದೇ ಮೇಲುಗೈ. ಮುಖ್ಯವಾಗಿ ಪಾತ್ರೆಗಳನ್ನು ಫಳಫಳಿಸುವಂತೆ ಮಾಡಲು ನಿಂಬೆಹಣ್ಣು ಅತ್ಯುತ್ತಮ ಉಪಾಯ. ಆದರೆ, ನಿಂಬೆಯ ಶಕ್ತಿಯ ಬಗ್ಗೆ ತಿಳಿದುಕೊಂಡವರು ಕೆಲವು ವಿಚಾರಗಳಿಗೆ ನಿಂಬೆಯನ್ನು ನಾವು ಬಳಸಲೇಬಾರದು ಎಂಬುದನ್ನು ತಿಳಿದಿರಬೇಕು.

VISTARANEWS.COM


on

Things to Avoid Cleaning with Lemon
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನಿಂಬೆಹಣ್ಣು ಕೇವಲ ಆಹಾರವಾಗಿ ಜನಪ್ರಿಯವಾದಷ್ಟೇ ಕ್ಲೀನಿಂಗ್‌ ಏಜೆಂಟ್‌ ಆಗಿಯೂ ಕೂಡಾ ಜನಪ್ರಿಯ. ಎಷ್ಟೋ ಬಾರಿ ಯಾವ ಕ್ಲೀನಿಂಗ್‌ ಏಜೆಂಟ್‌ಗೂ ಬಗ್ಗದ ಕಲೆಗಳು ನಿಂಬೆಹಣ್ಣಿನ ಶಕ್ತಿಯಿಂದ ಮಾಯವಾಗುತ್ತದೆ. ಫಳಪಳಿಸುವ ಮೇಲ್ಮೈಗೆ, ಕಲೆಗಳನ್ನು ತೆಗೆಯಲು, ವಾಸನೆಯನ್ನು ಹೋಗಲಾಡಿಸಲು ಹೀಗೆ ಹಲವು ಕ್ಷೇತ್ರಗಳಲ್ಲಿ ನಿಂಬೆಹಣ್ಣಿನದೇ ಮೇಲುಗೈ. ಮುಖ್ಯವಾಗಿ ಪಾತ್ರೆಗಳನ್ನು ಫಳಫಳಿಸುವಂತೆ ಮಾಡಲು ನಿಂಬೆಹಣ್ಣು ಅತ್ಯುತ್ತಮ ಉಪಾಯ. ಆದರೆ, ನಿಂಬೆಯ ಶಕ್ತಿಯ ಬಗ್ಗೆ ತಿಳಿದುಕೊಂಡವರು ಕೆಲವು ವಿಚಾರಗಳಿಗೆ ನಿಂಬೆಯನ್ನು ನಾವು ಬಳಸಲೇಬಾರದು ಎಂಬುದನ್ನು ತಿಳಿದಿರಬೇಕು. ಎಲ್ಲ ಬಗೆಯ ಸ್ವಚ್ಛತೆಗೂ ನಿಂಬೆ ಯೋಗ್ಯವಲ್ಲ. ಬನ್ನಿ, ಯಾವೆಲ್ಲ ವಸ್ತುಗಳ ಮೇಲೆ ನಾವು ನಿಂಬೆಯ ಪ್ರಯೋಗವನ್ನು ಯಾವತ್ತೂ ಮಾಡಲೇಬಾರದು (Things to Avoid Cleaning with Lemon) ಎಂಬುದನ್ನು ನೋಡೋಣ ಬನ್ನಿ.

Lemons on White Marble Background
Lemon Near Kitchen Knife

ಮಾರ್ಬಲ್‌ ಹಾಗೂ ಗ್ರಾನೈಟ್‌ ಫ್ಲೋರ್‌ಗಳ ಮೇಲೆ

ನಿಮ್ಮ ಕಿಚನ್‌ನ ಸ್ಲ್ಯಾಬ್‌ ಮಾರ್ಬಲ್‌ ಅಥವಾ ಗ್ರಾನೈಟ್‌ನದ್ದಾಗಿದ್ದರೆ ಖಂಡಿತ ಅವುಗಳ ಮೇಲ್ಮೈ ಕ್ಲೀನ್‌ ಮಾಡಲು ನಿಂಬೆಹಣ್ಣಿನ ಪ್ರಯೋಗ ಮಾಡಬೇಡಿ. ನಿಂಬೆಹಣ್ಣಿನಲ್ಲಿ ಹೆಚ್ಚು ಆಮ್ಲೀಯ ಪ್ರಕೃತಿ (ಅಸಿಡಿಕ್‌ ನೇಚರ್‌) ಇರುವುದರಿಂದ ಅವು ಮಾರ್ಬಲ್‌ ಗ್ರಾನೈಟ್‌ ಮೇಲೆ ಸರಿಯಾಗಿ ವರ್ತಿಸಲಾರವು. ನೈಸರ್ಗಿಕ ಕಲ್ಲುಗಳಾಗಿರುವುದರಿಂದ ಇವು ನಿಂಬೆಹಣ್ಣಿನ ಜೊತೆಗೆ ಕಾಲಕ್ರಮೇಣ ವರ್ತಿಸುತ್ತಾ, ಇವುಗಳಿಂದ ಅವುಗಳ ಮೇಲಮೈ ಸೌಂದರ್ಯ ಕೆಡಬಹುದು. ಕೊನೆಗೆ ಹಾಳಾಗಬಹುದು. ಪಿಎಚ್‌ ನ್ಯೂಟ್ರಲ್‌ ಇರುವ ಕ್ಲೆನ್ಸರ್‌ಗಳನ್ನು ಇವಕ್ಕೆ ಬಳಸುವುದು ಒಳ್ಳೆಯದು.

ಕಬ್ಬಿಣದ ಕಾವಲಿಗಳು

ತಾಮ್ರ, ಹಿತ್ತಾಳೆಯ ಪಾತ್ರೆಗಳನ್ನು ನಿಂಬೆಹಣ್ಣು ಫಳಫಳ ಹೊಳೆಯುವಂತೆ ಮಾಡುತ್ತದೆ ಎಂದುಕೊಂಡು ಅದನ್ನು ಕಬ್ಬಿಣದ ಮೇಲೂ ಪ್ರಯೋಗಿಸಬೇಡಿ. ಕಬ್ಬಿಣದ ಕಾವಲಿಗಳ ಮೇಲೆ ದೋಸೆ ಹುಯ್ಯಲು ನೀವು ಅದನ್ನು ಎಣ್ಣೆ ತಿಕ್ಕಿ ಪಳಗಿಸಿದ ಗುಣವೇ ಇದರಿಂದ ನಾಶವಾಗಬಹುದು. ಅದರ ಮೇಲ್ಮೈಯಲ್ಲಿ ಇರುವ ಎಣ್ಣೆಯಂಶ ಪೂರ್ತಿಯಾಗಿ ಹೋದಲೆ ಕಬ್ಬಿಣದ ಕಾವಲಿ ನಿಮ್ಮ ಉಪಯೋಗಕ್ಕೆ ನೀವಂದುಕೊಂಡ ಹಾಗೆ ಬಗ್ಗದು. ಮೆದುವಾದ ಬ್ರಷ್‌ನಿಂದ ಉಜ್ಜಿ ತೊಳೆಯಿರಿ. ಸೋಪ್‌/ಲಿಕ್ವಿಡ್‌ ಆದಷ್ಟೂ ಕಡಿಮೆ ಬಳಸಿ. ಬಿಸಿನೀರನಿಂದಲೂ ತೊಳೆಯಬಹುದು.

 Lemon Near Kitchen Knife

ಚಾಕು

ಕಿಚನ್‌ನಲ್ಲಿ ನಿತ್ಯವೂ ಬಳಸುವ ಚಾಕುಗಳು ಅತ್ಯಂತ ಹೆಚ್ಚು ಉಪಯೋಗಕ್ಕೆ ಬರುವ ವಸ್ತುಗಳಲ್ಲಿ ಒಂದು. ಈ ಚಾಕುಗಳನ್ನು ಕೆಲವೊಮ್ಮೆ ಹೈ- ಕಾರ್ಬನ್‌ ಸ್ಟೀನ್‌ಲಿಂದ ಮಾಡಲಾಗಿರುತ್ತದೆ. ಹಾಗಾಗಿ, ಅವುಗಳನ್ನು ತೊಳೆಯಲು ನಿಂಬೆಹಣ್ಣು ಸೂಕ್ತವಲ್ಲ. ಇದು ಕೆಲವೊಮ್ಮೆ ಚಾಕುವಿನ ಮೇಲ್ಮೈ ಮೇಲೆ ಘಾಸಿ ಮಾಡಬಹುದು. ತುಕ್ಕು ಹಿಡಿಯುವಂತೆ ಪ್ರೇರೇಪಿಸಬಹುದು.

ಮರದ ಪಾತ್ರೆಗಳು/ಸೌಟುಗಳು

ಮರದ ವಸ್ತುಗಳ ಬಳಕೆ ಇಂದು ಕಿಚನ್‌ನಲ್ಲಿ ಹೆಚ್ಚಾಗುತ್ತಿದೆ. ಮರದ ಪಾತ್ರೆಗಳು, ಮರದ ಕಟ್ಟಿಂಗ್‌ ಬೋರ್ಡ್‌, ಮರದ ಸೌಟುಗಳು, ಟ್ರೇ ಇತ್ಯಾದಿಗಳ ಬಳಕೆ ಸಾಮಾನ್ಯ. ಹಾಗಾಗಿ, ಇವುಗಳನ್ನು ಸ್ವಚ್ಛಗೊಳಿಸಲು ಖಂಡಿತವಾಗಿಯೂ ನಿಂಬೆಹಣ್ಣು ಸೂಕ್ತವಲ್ಲ. ಇದು ಇವುಗಳನ್ನು ಹಾಳು ಮಾಡುತ್ತದೆ. ಒಡೆಯುವಂತೆಯೂ ಮಾಡಬಹುದು. ಮೆದುವಾದ ಸೋಪ್‌/ಲಿಕ್ವಿಡ್‌ ಬಳಸಿ ಮರದ ವಸ್ತುಗಳನ್ನು ಸ್ವಚ್ಛ ಮಾಡಿ. ನಂತರ ತೆಳುವಾದ ಲೇಯರ್‌ ಎಣ್ಣೆ ಹಚ್ಚಿ.

Tips for Monsoon: ಮಳೆಗಾಲದಲ್ಲಿ ಬಟ್ಟೆಗಳನ್ನು ಗರಿಗರಿಯಾಗಿ ಇರಿಸುವುದು ಹೇಗೆ?ಇದನ್ನೂ ಓದಿ:

ಅಲ್ಯೂಮಿನಿಯಂ ಪಾತ್ರೆಗಳು

ಅಲ್ಯೂಮಿನಿಯಂ ಪಾತ್ರೆಗಳ ಬಳಕೆ ಇತ್ತೀಚೆಕೆ ಕಡಿಮೆಯಾಗುತ್ತಿದ್ದರೂ, ಇನ್ನೂ ಹಲವರು ಅಲ್ಯೂಮಿನಿಯಂ ಪಾತ್ರೆಗಳನ್ನು ಬಳಸುವುದುಂಟು. ಇವುಗಳನ್ನು ಫಳಫಳಿಸುವ ನೆಪದಲ್ಲಿ ನಿಂಬೆ ಬಳಸಬೇಡಿ. ಅಲ್ಯೂಮಿನಿಯಂ ಪಾತ್ರೆಯ ಮೇಲೆ ನಿಂಬೆ ವರ್ತಿಸಿ ಅವುಗಳ ಹೊಳಪನ್ನು ಕಡಿಮೆ ಮಾಡಬಹುದು, ಜೊತೆಗೆ ಬಣ್ಣ ಮಾಸಲೂಬಹುದು. ಇವು ಹೊಸದಾಗಿ ಫಳಫಳಿಸಲು ಯಾವುದಾದರೂ ಡಿಶ್‌ ಸೋಪ್‌ ಬಳಸಿ, ತಿಕ್ಕಿ ತೊಳೆಯಿರಿ. ಹೊಸದರಂತೆ ಫಳಫಳಿಸಬಹುದು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

Tea vs Coffee: ಟೀ ಒಳ್ಳೆಯದಾ ಕಾಫಿ ಒಳ್ಳೆಯದಾ? ಇಲ್ಲಿದೆ ಉತ್ತರ

Tea vs coffee: ʻಯಾವುದು ಒಳ್ಳೆಯದು?ʼ ಎನ್ನುವ ಚಹಾ ಮತ್ತು ಕಾಫಿಯ ಅಭಿಮಾನಿಗಳ ಮೂಲಭೂತ ಪ್ರಶ್ನೆಗೆ ಉತ್ತರ ನಿರ್ಣಯ ಮಾಡುವುದು ಕೊಂಚ ಕಷ್ಟ. ಆದರೆ ಇವೆರಡೂ ಪೇಯಗಳಲ್ಲಿ ಕೆಲವು ಸಾಮ್ಯತೆಗಳು ಮತ್ತು ಕೆಲವು ಭಿನ್ನತೆಗಳು ಇರುವುದು ಹೌದು. ಅದನ್ನು ತಿಳಿದುಕೊಂಡರೆ, ಉತ್ತರವನ್ನು ನೀವೇ ನಿರ್ಧರಿಸಬಹುದು. ಇಲ್ಲಿದೆ ವಿವರಗಳು.

VISTARANEWS.COM


on

Tea vs Coffee
Koo

ಬೆಳಗಾಗುತ್ತಿದ್ದಂತೆಯೇ ನಾವು (Tea vs coffee) ಮಾಡುವ ಕೆಲಸಗಳಲ್ಲಿ ಎರಡು ಪ್ರಮುಖವಾದವು. ಒಂದು ಮೊಬೈಲ್‌ ಗೀರುವುದು, ಇನ್ನೊಂದು ಕಾಫಿ/ ಚಹಾ ಹೀರುವುದು. ಇವೆರಡೂ ಇಲ್ಲದಿದ್ದರೆ ಬೆಳಕು ಹರಿಯುವುದೇ ಇಲ್ಲ ನಮಗೆ. ಇವೆರಡೂ ದೇಹಕ್ಕೆ ನೀಡುವುದರಲ್ಲಿ ಕೆಫೇನ್‌ ಅಂಶವೇ ಪ್ರಧಾನವಾಗಿ ನಮಗೆ ಲೆಕ್ಕಕ್ಕೆ ಬರುವುದು. ಶರೀರದಲ್ಲಿ ಕಾಣುವ ಚೇತರಿಕೆಗೆ ಇದೇ ಪ್ರಧಾನವಾದ ಕಾರಣ. ಚಹಾ ಎಲೆಗಳ ರಸ ಹೀರುವುದು ಒಳ್ಳೆಯದೋ ಅಥವಾ ಕಾಫಿ ಬೀಜಗಳ ರಸ ಹೀರುವುದೋ ಎಂಬ ಚರ್ಚೆ ಬಹುಶಃ ಇವುಗಳ ಹುಟ್ಟಿನಷ್ಟೇ ಹಳೆಯದು. ಆದರೂ… ಯಾವುದು ಸೂಕ್ತ? ಅಂದಹಾಗೆ ಚಹಾದ ಹುಟ್ಟಿಗೆ ಸಾವಿರಾರು ವರ್ಷಗಳ ಹಿಂದಿನ ಸಣ್ಣದೊಂದು ಕಥೆಯೂ ಇದೆ. ಚೀನಾದ ಚಕ್ರವರ್ತಿ ಷೆನ್‌ ನಂಗ್‌ ಒಮ್ಮೆ ತನ್ನ ಪಡೆಯೊಂದಿಗೆ ಎಲ್ಲಿಗೋ ಹೋಗುತ್ತಿದ್ದ. ಆಗ ದಾರಿಯಲ್ಲಿ ವಿಶ್ರಾಂತಿ ಮತ್ತು ಆಹಾರಕ್ಕಾಗಿ ನೆರಳಿನಲ್ಲಿ ಬೀಡು ಬಿಟ್ಟಿದ್ದರು. ಏನೋ ಕಾರಣಕ್ಕಾಗಿ ಪಾತ್ರೆಯೊಂದರಲ್ಲಿ ನೀರನ್ನು ಕುದಿಸುತ್ತಿದ್ದರು. ಎಲ್ಲಿಂದಲೋ ತೂರಿ ಬಂದ ಚಹಾ ಎಲೆಗಳು ಈ ಪಾತ್ರೆಯೊಳಗೆ ಬಿದ್ದವಂತೆ. ನೀರು ತನ್ನಷ್ಟಕ್ಕೇ ಕುದಿದು, ಚಹಾ ಪರಿಮಳದ ನೀರು ಸಿದ್ಧವಾಯಿತು. ಈ ಲಘುವಾದ ಡಿಕಾಕ್ಷನ್‌ ಘಮ ಚಕ್ರವರ್ತಿಗೆ ಇಷ್ಟವಾಯಿತು ಎಂಬುದು ಚಹಾ ಹುಟ್ಟಿನ ಕಥೆ. ಇದೇನೇ ಇದ್ದರೂ, ಸಾವಿರಾರು ವರ್ಷಗಳಿಂದ ಏಷ್ಯಾದ ಸಂಸ್ಕೃತಿಗಳಲ್ಲಿ ಚಹಾಗೊಂದು ವಿಶಿಷ್ಟವಾದ ಸ್ಥಾನ ಇರುವುದಂತೂ ಹೌದು.

Tea And Coffee

ಯಾವುದು ಒಳ್ಳೆಯದು?

ಇದೀಗ ಮುಖ್ಯವಾದ ಪ್ರಶ್ನೆ- ಕಾಫಿಯೊ ಚಹಾವೊ… ಆರೋಗ್ಯಕ್ಕೆ ಯಾವುದು ಸರಿ? ಇವೆರಡೂ ಪೇಯಗಳಲ್ಲಿ ಮುಖ್ಯವಾಗಿ ಇರುವುದು ಕೆಫೇನ್‌ ಮತ್ತು ಉತ್ಕರ್ಷಣ ನಿರೋಧಕಗಳು. ಇದರಿಂದ ದೇಹದಲ್ಲಿನ ಶಕ್ತಿ ಸಂಚಯನ ಹೆಚ್ಚುತ್ತದೆ; ಮೆದುಳು ಚುರುಕಾಗುತ್ತದೆ; ಚಯಾಪಚಯ ವೃದ್ಧಿಸುತ್ತದೆ ಮತ್ತು ತೂಕ ಇಳಿಕೆಗೂ ನೆರವಾಗುತ್ತದೆ. ಹಾಗೆಂದು ಈ ಎರಡೂ ಪೇಯಗಳ ಗುಣಗಳು ಒಂದೇ ಎಂದೇನಲ್ಲ. ಚಹಾದಲ್ಲಿರುವ ಉತ್ಕರ್ಷಣ ನಿರೋಧಕಗಳಿಗೆ ಹೆಚ್ಚಾಗಿ ಮನಸ್ಸನ್ನು ಶಾಂತವಾಗಿಸುವ ಗುಣಗಳಿವೆ. ಆದರೆ ಕಾಫಿಯಲ್ಲಿ ಕೆಫೇನ್‌ ಸಾಂದ್ರತೆ ಹೆಚ್ಚಿದ್ದು, ದೈಹಿಕ ಕ್ಷಮತೆಯನ್ನು ಹೆಚ್ಚಿಸುತ್ತದೆ.

ಸಾಮ್ಯತೆಯೇನು?

ಇವೆರಡೂ ಪೇಯಗಳಲ್ಲಿರುವ ಸಾಮ್ಯತೆಯೇನು ಎಂಬುದನ್ನು ಅರ್ಥ ಮಾಡಿಕೊಳ್ಳೋಣ. ಇವೆರಡೂ ಪೇಯಗಳಲ್ಲಿ ಉತ್ಕರ್ಷಣ ನಿರೋಧಕಗಳು ವಿಫುಲವಾಗಿವೆ. ದೇಹದಲ್ಲಿನ ಉರಿಯೂತವನ್ನು ಕಡಿಮೆ ಮಾಡಿ, ಕೆಲವು ರೀತಿಯ ರೋಗಗಳನ್ನು ದೂರ ಇರಿಸುವುದಕ್ಕೆ ಇಂಥ ಅಂಶಗಳು ನೆರವಾಗುತ್ತವೆ. ಮಿತಿಯಲ್ಲಿ ಇವುಗಳನ್ನು ಕುಡಿಯುವುದು ಒಂದರ್ಥದಲ್ಲಿ ಆರೋಗ್ಯವನ್ನು ಕಾಪಾಡಲೂಬಹುದು. ಇವೆರಡೂ ಪೇಯಗಳಲ್ಲಿ ಕೆಫೇನ್‌ ಇರುವುದು ಹೌದು. ಆದರೆ ಬ್ಲಾಕ್‌ ಟೀಗೆ ಹೋಲಿಸಿದಲ್ಲಿ ಕಾಫಿಯಲ್ಲಿರುವ ಕೆಫೇನ್‌ ಪ್ರಮಾಣ ಹೆಚ್ಚು. ಅಂದಾಜಿಗೆ ಹೇಳುವುದಾದರೆ, ಒಂದು ದೊಡ್ಡ ಕಪ್‌ ಕಾಫಿಯಲ್ಲಿ, ಮೂರು ಚಹಾಗಳಲ್ಲಿರುವಷ್ಟು ಕೆಫೆನ್‌ ದೇಹ ಸೇರುತ್ತದೆ. ಹಾಗಾಗಿ ಈ ಪೇಯಗಳ ಸೇವನೆಯನ್ನು ಮಿತಿಯಲ್ಲಿ ಇರಿಸಿಕೊಳ್ಳದಿದ್ದರೆ ನಿದ್ರಾಹೀನತೆ, ಜೀರ್ಣಾಂಗಗಳ ತೊಂದರೆ, ಮಾನಸಿನ ಆತಂಕಗಳಂಥವು ಗಂಟು ಬೀಳುತ್ತವೆ.

ಇದನ್ನೂ ಓದಿ: World Lung Cancer Day: ಶ್ವಾಸಕೋಶದ ಕ್ಯಾನ್ಸರ್‌ಗೆ ಪ್ರತಿವರ್ಷ 16 ಲಕ್ಷ ಮಂದಿ ಬಲಿ; ಇದರಿಂದ ಪಾರಾಗುವುದು ಹೇಗೆ?

ಭಿನ್ನತೆಗಳೇನು?

ಚಹಾದಲ್ಲಿರುವ ಎಲ್‌-ಥಿಯಾನಿನ್‌ ಅಂಶವು ಮಾನಸಿಕ ಒತ್ತಡವನ್ನು ದೂರ ಮಾಡುವ ಕ್ಷಮತೆಯನ್ನು ಹೊಂದಿದೆ. ಜೊತೆಗೆ, ಮೆದುಳನ್ನು ಜಾಗೃತ ಸ್ಥಿತಿಯಲ್ಲೂ ಇರಿಸುತ್ತದೆ. ಇದರಲ್ಲಿ ಹಲವು ರೀತಿಯ ಪಾಲಿಫೆನಾಲ್‌ಗಳಿದ್ದು, ಚಯಾಪಚಯವನ್ನು ವೃದ್ಧಿಸುತ್ತದೆ. ಗ್ರೀನ್‌ ಟೀ ಅಥವಾ ಹರ್ಬಲ್‌ ಚಹಾಗಳು ಜೀರ್ಣಾಂಗಗಳ ಬ್ಯಾಕ್ಟೀರಿಯಗಳಿಗೆ ಕೊಂಚ ಸಹಾಯ ನೀಡಿ, ತೂಕ ಇಳಿಕೆಗೂ ನೆರವಾಗುತ್ತದೆ.
ಆದರೆ ಕಾಫಿಯಲ್ಲಿರುವ ಕ್ಷಮತೆ ಬೇರೆಯೇ. ಇದರಲ್ಲಿ ಕೆಫೇನ್‌ ಅಂಶ ನೈಸರ್ಗಿಕವಾಗಿಯೇ ಹೆಚ್ಚಿರುವುದರಿಂದ ದೇಹದಲ್ಲಿ ಶಕ್ತಿಯಲ್ಲಿ ಹೆಚ್ಚಿಸಿ, ಅಥ್ಲೆಟಿಕ್‌ ಕ್ಷಮತೆಯನ್ನು ವೃದ್ಧಿಸುವಂಥದ್ದು. ಡೋಪಮಿನ್‌ ಅಂಶದಿಂದಾಗಿ ನರಗಳನ್ನು ಉತ್ತೇಜಿಸುವುದರಿಂದ ಪಾರ್ಕಿನ್‌ಸನ್‌ ಮತ್ತು ಅಲ್‌ಜೈಮರ್ಸ್‌ ರೋಗಿಗಳಿಗೆ ಇದರಿಂದಾಗುವ ಲಾಭಗಳ ಬಗ್ಗೆ ಸಂಶೋಧನೆಗಳು ನಡೆಯುತ್ತಿವೆ. ಮಿತಿಯಲ್ಲಿದ್ದರೆ ಯಕೃತ್‌ಗೂ ಒಳ್ಳೆಯದು. ಆದರೆ ಮಿತಿ ಮೀರಿದರೆ ಜೀರ್ಣಾಂಗಗಳ ಆರೋಗ್ಯವನ್ನು ಹದಗೆಡಿಸಿ, ವ್ಯಸನವನ್ನೂ ಅಂಟಿಸುತ್ತದೆ.

Continue Reading

ಆರೋಗ್ಯ

Blood Cancer: ಕ್ರಿಕೆಟಿಗ ಅಂಶುಮಾನ್ ಗಾಯಕ್ವಾಡ್‌ರನ್ನು ಬಲಿ ಪಡೆದ ರಕ್ತದ ಕ್ಯಾನ್ಸರ್‌ಗೆ ಏನು ಕಾರಣ? ಇದರ ಲಕ್ಷಣಗಳೇನು?

ಭಾರತೀಯ ತಂಡದ ಮುಖ್ಯ ಕೋಚ್ ಆಗಿದ್ದ ಮಾಜಿ ಕ್ರಿಕೆಟಿಗ ಅಂಶುಮಾನ್ ಗಾಯಕ್ವಾಡ್ ಒಂದು ವರ್ಷದಿಂದ ರಕ್ತದ ಕ್ಯಾನ್ಸರ್ (Blood Cancer) ವಿರುದ್ಧ ಹೋರಾಡುತ್ತಿದ್ದರು. ಲಂಡನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೂ ಫಲ ನೀಡಲಿಲ್ಲ. ಬುಧವಾರ ಅವರು ಎಲ್ಲರನ್ನೂ ಅಗಲಿದ್ದಾರೆ. ಮಾರಣಾಂತಿಕ ಕ್ಯಾನ್ಸರ್ ಗಳಲ್ಲಿ ಒಂದಾಗಿರುವ ರಕ್ತದ ಕ್ಯಾನ್ಸರ್ ಎಂದರೇನು, ಅದರ ಲಕ್ಷಣಗಳು ಯಾವುದು ಎನ್ನುವ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.

VISTARANEWS.COM


on

By

Blood Cancer
Koo

ರಕ್ತದ ಕ್ಯಾನ್ಸರ್‌ನೊಂದಿಗೆ (Blood Cancer) ದೀರ್ಘ ಕಾಲ ಹೋರಾಡಿದ ಭಾರತದ ಮಾಜಿ ಕ್ರಿಕೆಟಿಗ (Indian cricketer) ಅಂಶುಮಾನ್ ಗಾಯಕ್ವಾಡ್ (Anshuman Gaekwad) 71ನೇ ವಯಸ್ಸಿನಲ್ಲಿ ಬುಧವಾರ ನಿಧನರಾದರು. 1997, 1999 ಮತ್ತು 2000 ನಡುವೆ ಭಾರತೀಯ ತಂಡದ ಮುಖ್ಯ ಕೋಚ್ ಆಗಿದ್ದ ಗಾಯಕ್ವಾಡ್ ಒಂದು ವರ್ಷದಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಲಂಡನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೂ ಚಿಕಿತ್ಸೆ ಫಲ ನೀಡಲಿಲ್ಲ. ರಕ್ತದ ಕ್ಯಾನ್ಸರ್ ಮಾರಣಾಂತಿಕ ಕ್ಯಾನ್ಸರ್‌ಗಳಲ್ಲಿ ಒಂದಾಗಿದೆ. ಹಾಗಾದರೆ ರಕ್ತದ ಕ್ಯಾನ್ಸರ್ ಎಂದರೇನು, ಅದರ ಲಕ್ಷಣಗಳು ಯಾವುದು ಎನ್ನುವ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.

ರಕ್ತದ ಕ್ಯಾನ್ಸರ್‌ಗೆ ಏನು ಕಾರಣ?

ದೇಹವು ರಕ್ತ ಕಣಗಳನ್ನು ಹೇಗೆ ಉತ್ಪಾದಿಸುತ್ತದೆ ಮತ್ತು ಅವು ಎಷ್ಟು ಚೆನ್ನಾಗಿ ಕೆಲಸ ಮಾಡುತ್ತದೆ ಎಂಬುದರ ಮೇಲೆ ಪರಿಣಾಮ ಬೀರುವ ರಕ್ತ ಕ್ಯಾನ್ಸರ್ ಮೂಳೆಯಲ್ಲಿ ಪ್ರಾರಂಭವಾಗುತ್ತದೆ. ಮೂಳೆಗಳ ಮಧ್ಯಭಾಗದಲ್ಲಿರುವ ಸ್ಪಾಂಜ್ ನಂತಹ ವಸ್ತು ಕಾಂಡಕೋಶಗಳನ್ನು ಪ್ರಬುದ್ಧಗೊಳಿಸುತ್ತದೆ. ಕೆಂಪು ರಕ್ತ ಕಣಗಳು, ಬಿಳಿ ರಕ್ತ ಕಣಗಳು ಮತ್ತು ಪ್ಲೇಟ್ಲೆಟ್ ಗಳಾಗಿ ಮಾರ್ಪಡುವಂತೆ ಮಾಡುತ್ತದೆ.

ಸಾಮಾನ್ಯ ರಕ್ತ ಕಣಗಳು ಸೋಂಕಿನ ವಿರುದ್ಧ ಹೋರಾಡುತ್ತವೆ. ದೇಹದಾದ್ಯಂತ ಆಮ್ಲಜನಕವನ್ನು ಸಾಗಿಸುತ್ತವೆ ಮತ್ತು ರಕ್ತಸ್ರಾವವನ್ನು ನಿಯಂತ್ರಿಸುತ್ತವೆ. ಆದರೆ ದೇಹವು ರಕ್ತ ಕಣಗಳನ್ನು ತಯಾರಿಸುವಾಗ ಏನಾದರೂ ಅಡ್ಡಿಯಾದರೆ ಅದು ರಕ್ತದ ಕ್ಯಾನ್ಸರ್ ಆಗಿ ಪರಿವರ್ತನೆಯಾಗುತ್ತದೆ.

ವೈದ್ಯರ ಪ್ರಕಾರ, ರಕ್ತದ ಕ್ಯಾನ್ಸರ್ ಹೊಂದಿರುವವರಲ್ಲಿ ಅಸಹಜ ರಕ್ತ ಕಣಗಳು ಸಾಮಾನ್ಯ ರಕ್ತ ಕಣಗಳನ್ನು ನಾಶಪಡಿಸುತ್ತವೆ. ಇದು ವೈದ್ಯಕೀಯ ಪರಿಸ್ಥಿತಿಗಳ ಏರಿಳಿತದ ಪರಿಣಾಮವನ್ನು ಉಂಟುಮಾಡುತ್ತದೆ.

Blood Cancer
Blood Cancer


ಭಾರತದಲ್ಲೇ ಹೆಚ್ಚು

ಅಂಕಿಅಂಶಗಳ ಪ್ರಕಾರ ಭಾರತವು ವಿಶ್ವದಲ್ಲೇ ಅತಿ ಹೆಚ್ಚು ರಕ್ತದ ಕ್ಯಾನ್ಸರ್ ಪ್ರಮಾಣವನ್ನು ಹೊಂದಿದೆ. ವರ್ಷಕ್ಕೆ 1 ಲಕ್ಷದಿಂದ 5.5 ಲಕ್ಷ ಜನರಲ್ಲಿ ರಕ್ತ ಕ್ಯಾನ್ಸರ್ ಕಾಣಿಸಿಕೊಳ್ಳುತ್ತಿದೆ. ಪ್ರತಿ ವರ್ಷ ಕನಿಷ್ಠ 80,000 ಹೊಸ ಪ್ರಕರಣಗಳು ಅಥವಾ ಪ್ರತಿ ಏಳು ಸೆಕೆಂಡಿಗೆ ಒಂದು ಹೊಸ ಪ್ರಕರಣ ದಾಖಲಾಗುತ್ತಿದೆ. 2022ರಲ್ಲಿ ಭಾರತದಲ್ಲಿ 70,000ಕ್ಕೂ ಹೆಚ್ಚು ಜನರು ರಕ್ತದ ಕ್ಯಾನ್ಸರ್‌ನಿಂದ ಸಾವನ್ನಪ್ಪಿದರು.

ಇದರಲ್ಲಿ ಮೂರು ವಿಧ

ರಕ್ತ ಕ್ಯಾನ್ಸರ್ ಮೂರು ವಿಧವನ್ನು ಹೊಂದಿದ್ದು, ಇದರಲ್ಲಿ ಉಪವಿಧಗಳೂ ಸೇರಿವೆ.

ಲ್ಯುಕೇಮಿಯಾ: ಮಕ್ಕಳು ಮತ್ತು ಹದಿಹರೆಯದವರಲ್ಲಿ ಇದು ಸಾಮಾನ್ಯ ರಕ್ತ ಕ್ಯಾನ್ಸರ್ ಆಗಿದೆ. ಲ್ಯುಕೇಮಿಯಾದ ವಿಧಗಳಲ್ಲಿ ತೀವ್ರವಾದ ಲಿಂಫೋಬ್ಲಾಸ್ಟಿಕ್ ಲ್ಯುಕೇಮಿಯಾ, ತೀವ್ರವಾದ ಮೈಲೋಯ್ಡ್ ಲ್ಯುಕೇಮಿಯಾ, ದೀರ್ಘಕಾಲದ ಲಿಂಫೋಸೈಟಿಕ್ ಲ್ಯುಕೇಮಿಯಾ ಮತ್ತು ದೀರ್ಘಕಾಲದ ಮೈಲೋಜೆನಸ್ ಲ್ಯುಕೇಮಿಯಾ ಸೇರಿವೆ.

ಲಿಂಫೋಮಾ: ಇದು ದುಗ್ಧರಸ ವ್ಯವಸ್ಥೆಯ ಕ್ಯಾನ್ಸರ್. ಇದು ಮೂಳೆ ಮಜ್ಜೆಯನ್ನು ಒಳಗೊಂಡಿರುತ್ತದೆ. ಇದರ ವಿಧಗಳಲ್ಲಿ ಹಾಡ್ಗ್ ಕಿನ್ ಲಿಂಫೋಮಾ, ಹಾಡ್ಗ್ ಕಿನ್ ಅಲ್ಲದ ಲಿಂಫೋಮಾ, ಬಿ-ಸೆಲ್ ಲಿಂಫೋಮಾ ಮತ್ತು ಚರ್ಮದ ಟಿ-ಸೆಲ್ ಲಿಂಫೋಮಾ ಸೇರಿವೆ.

ಮೈಲೋಮಾ: ಮೈಲೋಮಾ ಮೂಳೆ ಮಜ್ಜೆಯಲ್ಲಿ ಪ್ರಾರಂಭವಾಗುತ್ತದೆ. ಇದು ಪ್ಲಾಸ್ಮಾ ಜೀವಕೋಶಗಳ ಮೇಲೆ ಪರಿಣಾಮ ಬೀರುವ ಕ್ಯಾನ್ಸರ್ ಆಗಿದೆ. ಮಲ್ಟಿಪಲ್ ಮೈಲೋಮಾ ಅತ್ಯಂತ ಸಾಮಾನ್ಯವಾದ ಮೈಲೋಮಾ ವಿಧವಾಗಿದೆ. ಮೈಲೋಮಾ ರೋಗ ನಿರ್ಣಯ ಮಾಡಿದ ಅರ್ಧಕ್ಕಿಂತ ಹೆಚ್ಚು ಜನರು ರೋಗ ನಿರ್ಣಯದ ಅನಂತರ ಕನಿಷ್ಠ ಐದು ವರ್ಷಗಳವರೆಗೆ ಬದುಕುತ್ತಾರೆ.

Blood Cancer
Blood Cancer


ಯಾಕೆ ಬರುತ್ತದೆ?

ರಕ್ತದ ಕ್ಯಾನ್ಸರ್ ಯಾಕೆ ಬರುತ್ತದೆ ಎಂಬುದಕ್ಕೆ ಖಚಿತ ಕಾರಣವಿಲ್ಲ. ಆದರೂ ಇದಕ್ಕೆ ಮುಖ್ಯವಾಗಿ ಡಿಎನ್ಎ ಕಾರಣ ಎಂದು ಅಧ್ಯಯನಗಳು ಹೇಳಿವೆ.

ಡಿಎನ್‌ಎ ರಕ್ತ ಕಣಗಳನ್ನು ಯಾವಾಗ ವಿಭಜಿಸಬೇಕು ಅಥವಾ ಗುಣಿಸಬೇಕು ಮತ್ತು ಯಾವಾಗ ಸಾಯಬೇಕು ಎಂದು ನಿರ್ಧರಿಸುತ್ತದೆ. ಆದ್ದರಿಂದ ಡಿಎನ್‌ಎ ನಿಮ್ಮ ಜೀವಕೋಶಗಳಿಗೆ ಹೊಸ ಸೂಚನೆಗಳನ್ನು ನೀಡಿದಾಗ ದೇಹವು ಅಸಹಜ ರಕ್ತ ಕಣಗಳನ್ನು ಅಭಿವೃದ್ಧಿಪಡಿಸುತ್ತದೆ. ಅದು ಸಾಮಾನ್ಯಕ್ಕಿಂತ ವೇಗವಾಗಿ ಬೆಳೆಯುತ್ತದೆ. ಗುಣಿಸುತ್ತದೆ ಮತ್ತು ಕೆಲವೊಮ್ಮೆ ಸಾಮಾನ್ಯಕ್ಕಿಂತ ಹೆಚ್ಚು ಕಾಲ ಬದುಕುತ್ತದೆ. ಸಾಮಾನ್ಯ ರಕ್ತ ಕಣಗಳು ನಿರಂತರವಾಗಿ ಬೆಳೆಯುತ್ತಿರುವ ಅಸಹಜ ಕೋಶಗಳ ಗುಂಪಿನಲ್ಲಿ ಕಳೆದುಹೋಗುತ್ತವೆ. ಅದು ಸಾಮಾನ್ಯ ಕೋಶಗಳನ್ನು ಒಟ್ಟುಗೂಡಿಸುತ್ತದೆ ಮತ್ತು ಮೂಳೆ ಮಜ್ಜೆಯಲ್ಲಿ ಜಾಗವನ್ನು ಏಕಸ್ವಾಮ್ಯಗೊಳಿಸುತ್ತದೆ. ಅಂತಿಮವಾಗಿ ಮೂಳೆ ಮಜ್ಜೆಯು ಕಡಿಮೆ ಸಾಮಾನ್ಯ ಜೀವಕೋಶಗಳನ್ನು ಉತ್ಪಾದಿಸುತ್ತದೆ. ಆದ್ದರಿಂದ ಆನುವಂಶಿಕ ಬದಲಾವಣೆಯು ಮೂರು ವಿಧದ ರಕ್ತದ ಕ್ಯಾನ್ಸರ್ ಗೆ ಕಾರಣವಾಗುತ್ತದೆ.

ರಕ್ತ ಕ್ಯಾನ್ಸರ್ ಲಕ್ಷಣಗಳೇನು?

ರಕ್ತದ ಕ್ಯಾನ್ಸರ್ ಲಕ್ಷಣಗಳು ಎಲ್ಲರಲ್ಲೂ ಒಂದೇ ರೀತಿ ಇರುವುದಿಲ್ಲ ಎನ್ನುತ್ತಾರೆ ತಜ್ಞರು. ಆದರೂ ಮೂರು ಸಾಮಾನ್ಯವಾಗಿರುವ ಕೆಲವು ಚಿಹ್ನೆಗಳನ್ನು ಹೊಂದಿರುತ್ತದೆ.

ಆಯಾಸ, ಕಡಿಮೆ ರೋಗನಿರೋಧಕ ಶಕ್ತಿಯಿಂದಾಗಿ ನಿರಂತರ ಮತ್ತು ಹೆಚ್ಚಿನ ಜ್ವರ, ರಾತ್ರಿ ಬೆವರುವಿಕೆ, ಅಸಾಮಾನ್ಯ ರಕ್ತಸ್ರಾವ, ಅನಿರೀಕ್ಷಿತ ತೂಕ ನಷ್ಟ, ಆಗಾಗ್ಗೆ ಸೋಂಕುಗಳು, ಊದಿಕೊಂಡ ದುಗ್ಧರಸ ಗ್ರಂಥಿಗಳು, ಯಕೃತ್ತು ತೊಂದರೆಗಳು, ಮೂಳೆ ನೋವು ಕಾಣಿಸಿಕೊಳ್ಳುತ್ತವೆ.

ಇದನ್ನೂ ಓದಿ: Condom Cause Cancer: ಕಾಂಡೋಮ್, ಲೂಬ್ರಿಕೆಂಟ್‍ ಬಳಸಿದರೂ ಕ್ಯಾನ್ಸರ್‌! ಅಧ್ಯಯನ ವರದಿಯಲ್ಲಿ ಆಘಾತಕಾರಿ ಸಂಗತಿ

ರಕ್ತ ಕ್ಯಾನ್ಸರ್‌ನ ಅನೇಕ ರೋಗಲಕ್ಷಣಗಳು ಸಾಮಾನ್ಯ ಕಾಯಿಲೆಗಳಿಗೂ ಹೋಲುತ್ತವೆ. ಆದ್ದರಿಂದ ಈ ಯಾವುದೇ ರೋಗಲಕ್ಷಣಗಳನ್ನು ಹೊಂದಿರುವವರು ರಕ್ತದ ಕ್ಯಾನ್ಸರ್ ಹೊಂದಿದ್ದಾರೆ ಎಂದೇ ಅರ್ಥವಲ್ಲ. ಆದರೆ ಕೆಲವು ವಾರಗಳಿಗಿಂತ ಹೆಚ್ಚು ಕಾಲ ದೇಹದಲ್ಲಿ ರೋಗಲಕ್ಷಣಗಳು ಅಥವಾ ಬದಲಾವಣೆಗಳನ್ನು ಗಮನಿಸಿದರೆ ವೈದ್ಯರಿಂದ ಪರೀಕ್ಷಿಸಿಕೊಳ್ಳುವುದು ಒಳ್ಳೆಯದು.

Continue Reading

ಆರೋಗ್ಯ

World Breastfeeding Week: ವಿಶ್ವ ಸ್ತನ್ಯಪಾನ ಸಪ್ತಾಹ; ಹಾಲುಣಿಸಿದರೆ ಮಗುವಿಗೆ ಮಾತ್ರವಲ್ಲ, ತಾಯಿಗೂ ಲಾಭ!

World Breastfeeding Week: ವಿಶ್ವದೆಲ್ಲೆಡೆ ಆಗಸ್ಟ್‌ ತಿಂಗಳ ಮೊದಲ ವಾರವನ್ನು ಸ್ತನ್ಯಪಾನ ಜಾಗೃತಿ ಸಪ್ತಾಹವೆಂದು ಆಚರಿಸಲಾಗುತ್ತದೆ. ಮನುಕುಲದ ಆದಿಯಿಂದಲೂ ನಡೆದು ಬಂದ ಈ ಪೋಷಣೆಯ ಕ್ರಿಯೆಯ ಬಗೆಗೆ ಈಗ ಅರಿವು, ಜಾಗೃತಿ ಮೂಡಿಸುವ ಅಗತ್ಯ ಬಂದಿರುವುದು ಬೇಸರದ ವಿಷಯವೇ ಆದರೂ, ಕೆಲವು ವೈಜ್ಞಾನಿಕ ತಿಳುವಳಿಕೆಗಳು ಸರಿ ದಾರಿಯಲ್ಲಿ ನಡೆಯಲು ಬೆಳಕು ತೋರಬಹುದು.

VISTARANEWS.COM


on

World Breastfeeding Week
Koo

ಹಾಲುಣಿಸುವ ಲಾಭಗಳು ಕೂಸಿಗೆ (World Breastfeeding Week) ಮಾತ್ರವಲ್ಲ, ತಾಯಿಗೂ ಇದೆ. ಗರ್ಭಾವಸ್ಥೆಯಲ್ಲಿ ಹೆಚ್ಚಿಸಿಕೊಂಡ ತೂಕವನ್ನು ಇಳಿಸುವ ಶ್ರಮವಿಲ್ಲದ ವಿಧಾನವಿದು. ಮಾತ್ರವಲ್ಲ, ಹಿಗ್ಗಿ ಚೀಲದಂತಾಗಿದ್ದ ಗರ್ಭಾಶಯ ಸಂಕುಚಿತಗೊಂಡು ಹೊಟ್ಟೆ ಕಡಿಮೆಯಾಗುವಂಥ ಸರಳ ವಿಧಾನವೂ ಹೌದಿದು. ಹಾಗಾಗಿ ಸ್ತನ್ಯಪಾನದಿಂದ ತಾಯಿಯ ಶರೀರ ಮೊದಲಿನಂತೆ ಬಳುಕುವ ಬಳ್ಳಿಯಾಗಲು ಸಾಧ್ಯವಿದೆ. ಹೆರಿಗೆಯ ನಂತರ ಕಾಡುವ ಖಿನ್ನತೆಯನ್ನು ದೂರ ಮಾಡುವ ಸಮರ್ಥ ಉಪಾಯವಿದು. ಜೊತೆಗೆ, ರಕ್ತದ ಏರೊತ್ತಡ, ಆರ್ಥರೈಟಿಸ್‌, ಮಧುಮೇಹ ಮತ್ತು ಕೊಬ್ಬನ್ನು ದೂರ ಇರಿಸಲು ಶಿಶುವಿಗೆ ಹಾಲುಣಿಸುವುದು ನೆರವಾಗುತ್ತದೆ. ಶಿಶುವು ಹಾಲುಣ್ಣುವಷ್ಟು ದಿನಗಳು ತಾಯಿಯ ಮುಟ್ಟು ಮುಂದೂಡುವುದು ಸಾಮಾನ್ಯ. ಹಾಗಾಗಿ ನಿಸರ್ಗವೇ ಕೊಟ್ಟ ಈ ಫಾರ್ಮುಲಾಗೆ ಶರಣಾಗಿ, ಶಿಶುಗಳಿಗೆ ಹಾಲೂಡಿಸಿ ಎನ್ನುವುದನ್ನು ಜಗತ್ತಿಗೆ ಸಾರಲು ಆಗಸ್ಟ್‌ ತಿಂಗಳ ಮೊದಲ ವಾರವನ್ನು (1-8 ತಾರೀಕು) ಜಾಗೃತಿ ಸಪ್ತಾಹವನ್ನಾಗಿ ವಿಶ್ವದೆಲ್ಲೆಡೆ ಆಚರಿಸಲಾಗುತ್ತದೆ.

Young Woman Breastfeeding Her Baby at Home

ನೈಸರ್ಗಿಕ ಆಹಾರ

ಮೊದಲ ಆರು ತಿಂಗಳು ಮಗುವಿನ ಬೆಳವಣಿಗೆಗೆ ಅಗತ್ಯವಾದ ಎಲ್ಲಾ ಪೋಷಕಾಂಶಗಳನ್ನೂ ಒದಗಿಸುವ ಪ್ರಾಕೃತಿಕ ಆಹಾರವೆಂದರೆ ತಾಯಿಯ ಹಾಲು. ಹಾಲಿನ ಉಷ್ಣತೆ ಮತ್ತು ರುಚಿಯಿಂದ ಹಿಡಿದು ಪೋಷಕಾಂಶದವರೆಗೆ ಯಾವುದಕ್ಕೂ ಯೋಚಿಸುವ ಅಗತ್ಯವಿಲ್ಲದಂಥ ಸಿದ್ಧ ಆಹಾರವಿದು. ಮೊದಲ ಹಾಲು ಅಥವಾ ಕೊಲಾಸ್ಟ್ರಮ್‌ನಿಂದ ತೊಡಗಿ ಕಾಲಕಾಲಕ್ಕೆ ಬೆಳೆಯುತ್ತಾ ಬರುವ ಶಿಶುವಿನ ಜಠರದ ಸಾಮರ್ಥ್ಯಕ್ಕೆ ಹೊಂದುವಂತೆ ತಾಯಿಯ ಹಾಲೂ ಒದಗಿ ಬರುತ್ತದೆ.

ಪ್ರತಿರೋಧಕತೆ

ಶಿಶುವಿನ ಆರಂಭಿಕ ದಿನಗಳಲ್ಲಿ ಅಗತ್ಯವಾಗಿ ಬೇಕಾದ ರೋಗನಿರೋಧಕ ಶಕ್ತಿಯನ್ನು ನೀಡುವುದು ತಾಯಿಯ ಹಾಲೇ ಹೊರತು ಬೇರೆ ಯಾವುದೂ ಅಲ್ಲ. ಅದರಲ್ಲೂ ಮೊದಲೆರೆಡು ದಿನಗಳು ಮಗುವಿಗೆ ಸಿಗುವ ಕೊಲಾಸ್ಟ್ರಮ್‌ನಲ್ಲಿ ಅತಿ ಹೆಚ್ಚಿನ ಸಾಂದ್ರತೆಯಲ್ಲಿ ರೋಗನಿರೋಧಕ ಶಕ್ತಿ ಇರುತ್ತದೆ. ಮಗುವಿನ ಮೂಗು, ಗಂಟಲು ಮತ್ತು ಜೀರ್ಣಾಂಗಗಳಲ್ಲಿ ರಕ್ಷಾಕವಚವನ್ನು ಕೊಲಾಸ್ಟ್ರಮ್‌ನಲ್ಲಿರುವ ಇಮ್ಯುನೊಗ್ಲೋಬುಲಿನ್‌ಗಳು ನಿರ್ಮಿಸುತ್ತವೆ. ಜೊತೆಗೆ, ತಾಯಿಯ ದೇಹದಲ್ಲಿ ಉತ್ಪಾದನೆಯಾಗುವ ಪ್ರತಿಕಾಯಗಳು ಸುಲಭವಾಗಿ ಮಗುವಿನ ದೇಹಕ್ಕೆ ಹಾಲಿನ ಮೂಲಕ ವರ್ಗಾವಣೆಯಾಗುತ್ತವೆ.

Breastfeeding

ಅಪಾಯವಿಲ್ಲ

ಮೇಲಿಂದ ಹಾಕುವ ಹಾಲು, ಫಾರ್ಮುಲಾ ಮುಂತಾದ ಆಹಾರಗಳಿಂದ ಮಗುವಿಗೆ ಹಲವು ರೀತಿಯ ಸಮಸ್ಯೆಗಳು ಎದುರಾಗಬಹುದು. ಆದರೆ ತಾಯಿಯ ಹಾಲಿನಿಂದ ಕಿವಿ ಸೋಂಕು, ಶ್ವಾಸನಾಳದ ಸೋಂಕು, ಜೀರ್ಣಾಂಗದ ಸಮಸ್ಯೆಗಳು, ಅಲರ್ಜಿಗಳು, ಬಾಲ್ಯದ ಮಧುಮೇಹ ಮುಂತಾದ ಹತ್ತು-ಹಲವು ಸಮಸ್ಯೆಗಳನ್ನು ದೂರ ಮಾಡಬಹುದು. ಯಾವುದೇ ಅಪಾಯವಿಲ್ಲದಂತಹ ಸುರಕ್ಷಿತವಾದ ಆಹಾರವಿದು

Breastfeeding

ಆರೋಗ್ಯಕರ ತೂಕ

ಪುಟ್ಟ ಮಕ್ಕಳ ತೂಕ ಹೆಚ್ಚಿದ್ದರೂ ಸಮಸ್ಯೆ, ಕಡಿಮೆ ಇದ್ದರೂ ಸಮಸ್ಯೆ. ಆದರೆ ಕೂಸು ಮೊದಲೊಂದು ವರ್ಷ ತಾಯಿಯ ಹಾಲುಣ್ಣುವುದರಿಂದ ತೂಕ ಹೆಚ್ಚಳ ಸಮರ್ಪಕವಾಗಿರುತ್ತದೆ. ಮೊದಲಾರು ತಿಂಗಳ ನಂತರ ಕ್ರಮೇಣ ಘನ ಆಹಾರಗಳನ್ನು ಶಿಶುವಿಗೆ ನೀಡಬಹುದು. ಆದರೆ ತಾಯಿಯ ಹಾಲನ್ನು ಕೂಸಿಗೆ ನಿಲ್ಲಿಸುವಂತಿಲ್ಲ. ಸ್ತನ್ಯಪಾನ ಮಾಡುವ ಶಿಶುಗಳು ತಮಗೆ ಹೊಟ್ಟೆ ತುಂಬಿದ ತಕ್ಷಣ ಕುಡಿಯುವುದನ್ನು ತಾವೇ ನಿಲ್ಲಿಸಿಬಿಡುತ್ತದೆ. ಬಾಟಲಿಯಲ್ಲಿ ಮಿಕ್ಕಿದೆಯೋ ಇಲ್ಲವೋ ಎಂಬಂತೆ ನೋಡುವ ಪ್ರಮೇಯವೇ ಇಲ್ಲ.

ಇದನ್ನೂ ಓದಿ: Health tips Kannada: ವೃತ್ತಿನಿರತ ತಾಯಂದಿರೇ, ಖಿನ್ನತೆ ಆವರಿಸಿಕೊಳ್ಳುವ ಮೊದಲೇ ಎಚ್ಚೆತ್ತುಕೊಳ್ಳಿ!

ಜಾಣರು!

ಸುಮ್ಮನೆ ಹೇಳುವುದಕ್ಕಲ್ಲ, ಫಾರ್ಮುಲಾ ಕುಡಿದ ಮಕ್ಕಳಿಗಿಂತ ತಾಯಿಯ ಹಾಲು ಕುಡಿದ ಮಕ್ಕಳ ಮೆದುಳಿನ ಬೆಳವಣಿಗೆ ಚೆನ್ನಾಗಿರುತ್ತದೆ ಎನ್ನುತ್ತವೆ ಅಧ್ಯಯನಗಳು. ಹಾಲುಣ್ಣುವ ಸಂದರ್ಭದಲ್ಲಿ ಶಿಶುಗಳಿಗೆ ಒದಗುವ ತಾಯಿಯ ಸಾಮೀಪ್ಯ ಮತ್ತು ಸ್ಪರ್ಶವೂ ಇದಕ್ಕೆ ಬಹು ಮುಖ್ಯ ಕಾರಣ. ಇದೊಂದು ವರ್ಷದಲ್ಲಿ ಮಕ್ಕಳಿಗೆ ದೊರೆಯುವ ಈ ಅಮೂಲ್ಯ ಪೋಷಕಾಂಶದಿಂದ ದೀರ್ಘಕಾಲೀನ ಬೆಳವಣಿಗೆಗೆ ಸಹಾಯ ಒದಗುತ್ತದೆ.

ಯಾವ ಆಹಾರಗಳು?

ಇಷ್ಟೆಲ್ಲ ಅನುಕೂಲಗಳಿರುವಾಗ ಎಳೆಗೂಸುಗಳಿಗೆ ಹಾಲುಣಿಸುವುದು ಅಮ್ಮಂದಿರ ಆಯ್ಕೆಯೂ ಆಗಿರಬೇಕು. ಆದರೆ ಸಾಕಷ್ಟು ಹಾಲಿಲ್ಲದಿದ್ದರೆ ನಿರಾಸೆಯಾಗುವುದು ಖಚಿತ. ಸಾಮಾನ್ಯವಾಗಿ ಸಮತೋಲನೆಯಿಂದ ಕೂಡಿದ ಸತ್ವಯುತ ಆಹಾರವನ್ನು ಸೇವಿಸುವುದು, ಚೆನ್ನಾಗಿ ನೀರು ಕುಡಿಯುವುದು ಮತ್ತು ವಿಶ್ರಾಂತಿ ತೆಗೆದುಕೊಳ್ಳುವುದು- ಇವಿಷ್ಟಿದ್ದರೆ ತಾಯಿಯ ಹಾಲಿಗೆ ಕೊರತೆಯಾಗುವುದಿಲ್ಲ. ಆದರೂ, ತಾಯಿಯು ಕೆಲವು ಆಹಾರಗಳನ್ನು ಹೆಚ್ಚುವರಿಯಾಗಿ ತಿನ್ನುವುದು ನೆರವಾಗಬಹುದು. ಯಾವುದೇ ಸೊಪ್ಪುಗಳು, ಮುಖ್ಯವಾಗಿ ಮೆಂತೆ, ಸಬ್ಬಸಿಗೆ, ಗಣಕೆ ಸೊಪ್ಪಿನಂಥವು, ಹಾಲು ಹೆಚ್ಚಿಸುವುದಕ್ಕೆ ಪೂರಕ. ಎಳ್ಳು, ಬಾದಾಮಿ, ಮೆಂತೆ ಬೀಜಗಳನ್ನೂ ಇದಕ್ಕಾಗಿ ಉಪಯೋಗಿಸಬಹುದು. ಶುಂಠಿ, ಬೆಳ್ಳುಳ್ಳಿಯಂಥವು ಸ್ವಲ್ಪ ಮಟ್ಟಿಗೆ ನೆರವಾಗುತ್ತವೆ. ಕಾಳುಗಳಿಂದ ತಾಯಿ-ಮಗುವಿನ ಹೊಟ್ಟೆಗೆ ತೊಂದರೆಯಾಗುತ್ತಿಲ್ಲ ಎಂದಾದರೆ ಮೊಳಕೆ ಬರಿಸಿ, ಚೆನ್ನಾಗಿ ಬೇಯಿಸಿದ ಕಡಲೆ ಕಾಳುಗಳೂ ನೆರವಾದಾವು. ತಾಯಿಯ ಹೊಟ್ಟೆಗೆ ದಿನಕ್ಕೆ ಮೂರು ದೊಡ್ಡ ಗ್ಲಾಸ್‌ನಷ್ಟು ಹಾಲು ಹೋಗುವುದು ಸಹ ಅಗತ್ಯ.

Continue Reading

ಫ್ಯಾಷನ್

Saree Fashion: ಕಂಟೆಂಪರರಿ ಪ್ರಿಂಟೆಡ್‌ ವಿನ್ಯಾಸದಲ್ಲೂ ಬಂತು ಆರ್ಗನ್ಜಾ ಸೀರೆ!

Saree Fashion: ಆರ್ಗನ್ಜಾ ಸೀರೆಗಳು ಇದೀಗ ಕಂಟೆಂಪರರಿ ಪ್ರಿಂಟೆಡ್‌ ವಿನ್ಯಾಸದಲ್ಲಿ ಸೀರೆ ಲೋಕಕ್ಕೆ ಎಂಟ್ರಿ ನೀಡಿವೆ. ಅವುಗಳಲ್ಲಿ ಫ್ಲೋರಲ್‌, ಟ್ರಾಪಿಕಲ್‌ ಡಿಜಿಟಲ್‌ ಪ್ರಿಂಟ್ಸ್‌ನವು ಮಹಿಳೆಯರನ್ನು ಸೆಳೆದಿವೆ. ಯಾವ್ಯಾವ ಶೇಡ್‌ನವು ಟ್ರೆಂಡಿಯಾಗಿವೆ? ಆಯ್ಕೆ ಮತ್ತು ಸ್ಟೈಲಿಂಗ್‌ ಹೇಗೆ ಎಂಬುದರ ಬಗ್ಗೆ ಸೀರೆ ಸ್ಟೈಲಿಸ್ಟ್‌ಗಳು ಇಲ್ಲಿ ವಿವರಿಸಿದ್ದಾರೆ.

VISTARANEWS.COM


on

Saree Fashion
ಚಿತ್ರಗಳು: ರಾಧಿಕಾ ಮದನ್‌, ನಟಿ
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಕಂಟೆಂಪರರಿ ಪ್ರಿಂಟೆಡ್‌ ವಿನ್ಯಾಸದ (Saree Fashion) ಆರ್ಗನ್ಜಾ ಸೀರೆಗಳು ಮಾರುಕಟ್ಟೆಗೆ ಎಂಟ್ರಿ ನೀಡಿವೆ. ಹೌದು, ಈ ಮೊದಲು ಕೇವಲ ಸಾದಾ ಡಿಸೈನ್‌ನಲ್ಲಿ ಟ್ರೆಂಡಿಯಾಗಿದ್ದ, ಈ ಆರ್ಗನ್ಜಾ ಸೀರೆಗಳು, ಇದೀಗ ಯುವತಿಯರಿಗೆ ಪ್ರಿಯವಾಗುವಂತಹ ಡಿಜಿಟಲ್‌ ಪ್ರಿಂಟ್ಸ್‌ನಲ್ಲಿ ಸೀರೆ ಲೋಕಕ್ಕೆ ಲಗ್ಗೆ ಇಟ್ಟಿವೆ.

Saree Fashion

ಲಕ್ಷುರಿ ಸೀರೆಗಳಂತೆ ಬಿಂಬಿಸುವ ಆರ್ಗನ್ಜಾ

“ಆರ್ಗನ್ಜಾ ಸೀರೆಗಳು ಉಟ್ಟಾಗ ನೋಡಲು ಲಕ್ಷುರಿ ಸೀರೆಗಳಂತೆ ಬಿಂಬಿಸುತ್ತವೆ. ಇತ್ತೀಚೆಗೆ ನಟಿ ರಾಧಿಕಾ ಮದನ್‌ ಉಟ್ಟು ಕಾಣಿಸಿಕೊಂಡಿದ್ದ, ಈ ಸೀರೆ ಸಾಕಷ್ಟು ಮಹಿಳೆಯರನ್ನು ಆಕರ್ಷಿಸಿತ್ತು. ಈ ಸೀರೆಗಳು ಕೊಂಚ ಪಾರದರ್ಶಕವಾಗಿರುವುದರಿಂದ ಬಹುತೇಕ ಮಹಿಳೆಯರು ಪ್ರಿಫರ್‌ ಮಾಡುತ್ತಿರಲಿಲ್ಲ! ಹಾಗಾಗಿ ಇವು ಕೆಲಕಾಲ ಕೇವಲ ಸೆಲೆಬ್ರೆಟಿಗಳ ಹಾಗೂ ಪಾರ್ಟಿಪ್ರಿಯ ಮಹಿಳೆಯರಿಗೆ ಸೀಮಿತವಾಗಿತ್ತು. ಆದರೆ, ಇದೀಗ ಈ ಸೀರೆಗಳ ಲುಕ್‌ ಬದಲಾಗಿದೆ. ಸೀರೆಯ ಪ್ರಿಂಟೆಡ್‌ ವಿನ್ಯಾಸವು ಎಲ್ಲಾ ವರ್ಗದ ಸೀರೆ ಪ್ರಿಯ ಮಹಿಳೆಯರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ” ಎನ್ನುತ್ತಾರೆ ಸೀರೆ ಸ್ಟೈಲಿಸ್ಟ್ ರಿಯಾ.

Saree Fashion

ಆರ್ಗನ್ಜಾ ಸೀರೆಯ ಕಂಟೆಂಪರರಿ ವಿನ್ಯಾಸ

ಶ್ವೇತ ವರ್ಣ, ತಿಳಿ ಗುಲಾಬಿ, ಪೀಚ್‌, ಪಿಸ್ತಾ ಕಲರ್‌ ಸೇರಿದಂತೆ ನಾನಾ ಪಾಸ್ಟೆಲ್‌ ಶೇಡ್‌ನ ಸೀರೆಗಳ ಮೇಲೆ ಫ್ಲೋರಲ್‌, ಟ್ರಾಪಿಕಲ್‌ ಮತ್ತು ಗಾರ್ಡನ್‌ ಚಿತ್ತಾರದ ಡಿಜಿಟಲ್‌ ಪ್ರಿಂಟ್ಸ್ ಅರ್ಗನ್ಜಾ ಸೀರೆಯ ರಂಗನ್ನು ಹೆಚ್ಚಿಸಿದೆ. ಪರಿಣಾಮ, ಬೇಡಿಕೆ ಹೆಚ್ಚಾಗಿದೆ ಎನ್ನುತ್ತಾರೆ ಸೀರೆ ಮಾರಾಟಗಾರರು.

ಆರ್ಟಿಸ್ಟಿಕ್‌ ಆರ್ಗನ್ಜಾ ಸೀರೆ

ಹೂವಿನ ಚಿತ್ತಾರದವನ್ನು ಹೊರತುಪಡಿಸಿದರೆ ಇಂದು ಅತಿ ಹೆಚ್ಚು ಟ್ರೆಂಡಿಯಾಗಿರುವುದು ಲೈಟ್‌ ಶೇಡ್‌ ಸೀರೆಗಳ ಮೇಲಿನ ಆರ್ಟಿಸ್ಟಿಕ್‌ ಪ್ರಿಂಟ್ಸ್ ಎನ್ನುತ್ತಾರೆ ಡಿಸೈನರ್ಸ್.

ಇದನ್ನ ಓದಿ: Star Saree Styling Tips: ಎಂಬ್ರಾಯ್ಡರಿ ಸೀರೆಯಲ್ಲಿ ನಟಿ ರಶ್ಮಿಕಾ ಮಂದಣ್ಣರಂತೆ ಕಾಣಿಸಬೇಕೇ? ಈ 5 ಟಿಪ್ಸ್ ಫಾಲೋ ಮಾಡಿ

ಡಿಜಿಟಲ್‌ ಪ್ರಿಂಟೆಡ್‌ ಆರ್ಗನ್ಜಾ ಸೀರೆಯ ಸ್ಟೈಲಿಂಗ್‌

  • ಸೆಲೆಬ್ರೆಟಿ ಲುಕ್‌ಗಾಗಿ ಅರ್ಗನ್ಜಾ ಸೀರೆ ಉಡಬಹುದು.
  • ಪಿಯರ್‌ ಶೇಪ್‌ ಬಾಡಿ ಇರುವ ಮಹಿಳೆಯರಿಗೆ ಇದು ಪರ್ಫೆಕ್ಟ್ ಹೊಂದುತ್ತದೆ.
  • ಸ್ಲಿಮ್‌ ಇರುವವರು ಯಾರೂ ಬೇಕಾದರೂ ಉಡಬಹುದು.
  • ಬಹುತೇಕ ಪಾರದರ್ಶಕವಾಗಿರುವುದರಿಂದ ಕಚೇರಿಗಳಿಗೆ ಉಡುವುದು ಬೇಡ!
  • ಲಂಚ್‌-ಬ್ರಾಂಚ್‌ ಪಾರ್ಟಿಗಳಿಗೆ ಹೇಳಿ ಮಾಡಿಸಿದ ಸೀರೆ.
  • ಸೀರೆಯನ್ನು ಐರನಿಂಗ್‌ ಮಾಡುವ ಅಗತ್ಯವಿರುವುದಿಲ್ಲ!
  • ಬ್ಲೌಸ್‌ಗೆ ಹೆವ್ವಿ ಡಿಸೈನ್‌ ಬೇಕಾಗಿಲ್ಲ!

( ಲೇಖಕಿ ಫ್ಯಾಷನ್‌ ಪತ್ರಕರ್ತೆ )

Continue Reading
Advertisement
Stock Market
ದೇಶ11 mins ago

Stock Market: ಷೇರುಪೇಟೆಯಲ್ಲಿ ಭಾರೀ ಕುಸಿತ; ಸೆನ್ಸೆಕ್ಸ್‌ 700 ಅಂಕಗಳಷ್ಟು ಪತನ

Swapnil Kusale
ಕ್ರೀಡೆ28 mins ago

Swapnil Kusale: ಕಂಚು ಗೆದ್ದ ಸ್ವಪ್ನಿಲ್ ಕುಸಾಲೆಗೆ 1 ಕೋಟಿ ಬಹುಮಾನ ಪ್ರಕಟಿಸಿದ ಶಿಂಧೆ ಸರ್ಕಾರ

raichur food poisoning 1
ಕ್ರೈಂ34 mins ago

Food Poisoning: ವಿಷ ಬೆರೆತ ಮಟನ್‌ ಸೇವಿಸಿ ಒಂದೇ ಕುಟುಂಬದ ನಾಲ್ವರ ಘೋರ ಸಾವು; ಆತ್ಮಹತ್ಯೆ ಶಂಕೆ

Paris Olympics
ಕ್ರೀಡೆ1 hour ago

Paris Olympic: ಒಲಿಂಪಿಕ್ಸ್​ ಪದಕ ವಿಜೇತರಿಗೆ ಸಿಗಲಿದೆ ದುಬಾರಿ ಬೆಲೆಯ ಕಾರು

Wayanad Landslide
ದೇಶ1 hour ago

Wayanad Landslide: ವಯನಾಡಿನ ಭೀಕರ ದೃಶ್ಯ ಸೆರೆ ಹಿಡಿದ ಇಸ್ರೋ; ಭೂಕುಸಿತಕ್ಕೂ ಮುನ್ನ ಮತ್ತು ನಂತರ ಫೋಟೋ ರಿಲೀಸ್‌

14 hours work it jobs
ಪ್ರಮುಖ ಸುದ್ದಿ1 hour ago

14 Hours Work: ಒಂದೆಡೆ ಐಟಿ ಉದ್ಯೋಗಿಗಳಿಂದ ಬೃಹತ್ ಪ್ರತಿಭಟನೆ, ಇನ್ನೊಂದೆಡೆ ಐಟಿ ಕಂಪನಿಗಳ ಮುಂದೆ ಕೆಲಸಕ್ಕಾಗಿ ಮೈಲುಗಟ್ಟಲೆ ಕ್ಯೂ!

India vs Sri Lanka
ಕ್ರೀಡೆ2 hours ago

India vs Sri Lanka: ಲಂಕಾ ಸರಣಿಯಲ್ಲಿ ವಿಶೇಷ ದಾಖಲೆ ಮೇಲೆ ಕಣ್ಣಿಟ್ಟ ಕೊಹ್ಲಿ, ರೋಹಿತ್​

police firing hubli robber
ಕ್ರೈಂ2 hours ago

Police Firing: ದರೋಡೆ ಆರೋಪಿ ಕಾಲಿಗೆ ಪೊಲೀಸರ ಗುಂಡೇಟು

Phone Storage Issue
ಗ್ಯಾಜೆಟ್ಸ್2 hours ago

Phone Storage Issue: ನಿಮ್ಮ ಮೊಬೈಲ್ ಸ್ಟೋರೇಜ್ ಸಮಸ್ಯೆಗೆ ಇಲ್ಲಿದೆ ಸರಳ ಪರಿಹಾರ!

IND vs SL: When and where to watch ODI, squads, predicted XI, venues
ಕ್ರೀಡೆ2 hours ago

IND vs SL: ಇಂದು ಭಾರತ-ಲಂಕಾ ಮೊದಲ ಏಕದಿನ ಹಣಾಹಣಿ; ಎಷ್ಟು ಗಂಟೆಗೆ ಪಂದ್ಯ ಆರಂಭ?

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ21 hours ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ22 hours ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ22 hours ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

karnataka Rain
ಮಳೆ3 days ago

Karnataka rain : ಭದ್ರಾ ನದಿಯಲ್ಲಿ ಕೊಚ್ಚಿ ಹೋದ ಹಸು; ಬೈಂದೂರಿನಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ

Karnataka Rain
ಮಳೆ3 days ago

Karnataka Rain : ಭಾರಿ ಮಳೆಗೆ ಬಾಳೆಹೊನ್ನೂರು ಮುಳುಗಡೆ; ನೆರೆಗೆ ಬೋಟ್‌ ಮೊರೆ ಹೋದ ಜನರು

Bharachukki falls
ಚಾಮರಾಜನಗರ3 days ago

Bharachukki Falls : ಭರಚುಕ್ಕಿ ಜಲಪಾತಕ್ಕೆ ಕಳ್ಳ ಮಾರ್ಗದಿಂದ ಹೋದೋರಿಗೆ ಬಸ್ಕಿ ಹೊಡೆಸಿದ ಪೊಲೀಸರು!

karnataka Rain
ಮಳೆ4 days ago

Karnataka Rain: ಮತ್ತೆ ಶುರು ಮಳೆ ಅಬ್ಬರ; ಗಾಳಿಗೆ ಹಾರಿ ಹೋದ ಮನೆಗಳ ಚಾವಣಿ, ಶಿರಾಡಿಘಾಟ್‌ನಲ್ಲಿ ಮತ್ತೆ ಭೂ ಕುಸಿತ

Elephant combing Makna elephant captured near Bannerghatta
ಬೆಂಗಳೂರು ಗ್ರಾಮಾಂತರ4 days ago

Elephant combing: ಭೀಮ, ಮಹೇಂದ್ರರ ಮುಂದೆ ಮಂಡಿಯೂರಿದ ಮಕ್ನಾ ಆನೆ; ಹೇಗಿತ್ತು ಗೊತ್ತಾ ಕಾರ್ಯಾಚರಣೆ

karnataka rain
ಮಳೆ4 days ago

Karnataka rain: ಪ್ರವಾಹದ ಭೀಕರತೆ; ಹಳ್ಳದಲ್ಲಿ ತೇಲಿಬಂದ ಎಮ್ಮೆಗಳ ಕಳೇಬರ

Tungabhadra Dam
ಕೊಪ್ಪಳ5 days ago

Tungabhadra Dam: ಕಾಲುವೆಯಲ್ಲಿ ಬಾಲಕರ ಈಜಾಟ; ಅಧಿಕಾರಿಗಳಿಗೆ ಪೀಕಲಾಟ!

ಟ್ರೆಂಡಿಂಗ್‌