Model Monsoon Fashion: ಮಾನ್ಸೂನ್‌ ಫ್ಯಾಷನ್‌ನಲ್ಲಿ ಮಾಡೆಲ್‌ ಸನ್ನಿಧಿಯ ಸಿಂಪಲ್‌ ಲುಕ್ಸ್! - Vistara News

ಲೈಫ್‌ಸ್ಟೈಲ್

Model Monsoon Fashion: ಮಾನ್ಸೂನ್‌ ಫ್ಯಾಷನ್‌ನಲ್ಲಿ ಮಾಡೆಲ್‌ ಸನ್ನಿಧಿಯ ಸಿಂಪಲ್‌ ಲುಕ್ಸ್!

Model Monsoon Fashion: ಮಾಡೆಲಿಂಗ್‌ ಕ್ಷೇತ್ರದಲ್ಲಿ ಬ್ಯುಸಿಯಾಗಿರುವ ಮಾಡೆಲ್‌ ಸನ್ನಿಧಿಗೆ ಮಾನ್ಸೂನ್‌ ಸೀಸನ್‌ ಅಂದ್ರೆ ಸಖತ್‌ ಇಷ್ಟವಂತೆ. ಮರುಬಳಕೆ ಮಾಡಬಹುದಾದ ಸಸ್ಟೈನಬಲ್‌ ಸಿಂಪಲ್‌ ಲೇಯರ್‌ ಲುಕ್‌ ಕೂಡ ಅಂದವನ್ನು ಹೆಚ್ಚಿಸಬಲ್ಲದು ಎನ್ನುತ್ತಾರೆ. ಅಲ್ಲದೇ ಒಂದಿಷ್ಟು ಸಿಂಪಲ್‌ ಟಿಪ್ಸ್ ಕೂಡ ನೀಡಿದ್ದಾರೆ.

VISTARANEWS.COM


on

Model Monsoon Fashion
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಸಂದರ್ಶನ: ಶೀಲಾ ಸಿ. ಶೆಟ್ಟಿ
ಒಂದಿಷ್ಟು ವರ್ಷಗಳಿಂದ ಫ್ಯಾಷನ್‌ ಕ್ಷೇತ್ರದಲ್ಲಿ ಬ್ಯುಸಿಯಾಗಿರುವ ಮಾಡೆಲ್‌ ಸನ್ನಿಧಿ (Model Monsoon Fashion) ಇದೀಗ ಸ್ಯಾಂಡಲ್‌ವುಡ್‌ ಸಿನಿಮಾದಲ್ಲಿ ನಟಿಸುವುದರ ಮೂಲಕ ಸಿನಿಮಾ ಕ್ಷೇತ್ರಕ್ಕೂ ಕಾಲಿಟ್ಟಿದ್ದಾರೆ. ಮಾಡೆಲಿಂಗ್‌ ಪ್ರಪಂಚಕ್ಕೂ ಸಿನಿಮಾದಲ್ಲಿ ನಟಿಸುವುದಕ್ಕೂ ಸಾಕಷ್ಟು ವ್ಯತ್ಯಾಸವಿದೆ ಎನ್ನುವ ಸನ್ನಿಧಿ, ಮಿಸ್‌ ಸುಪ್ರಾ ಸೌತ್‌ 2020 ಪೇಜೆಂಟ್‌ನ ಟೈಟಲ್‌ ವಿಜೇತೆ ಕೂಡ. ಸಾಕಷ್ಟು ಫ್ಯಾಷನ್‌ ವೀಕ್‌ಗಳಲ್ಲೂ ರ‍್ಯಾಂಪ್‌ ವಾಕ್‌ ಮಾಡಿರುವ ಅವರು, ವಿಸ್ತಾರ ನ್ಯೂಸ್‌ನೊಂದಿಗೆ ಮಾತನಾಡಿದ್ದಾರೆ. ತಮ್ಮ ಫ್ಯಾಷನ್‌ ಹಾಗೂ ಮಾನ್ಸೂನ್‌ ಸ್ಟೈಲ್‌ ಟಿಪ್ಸ್ ಕೂಡ ಹಂಚಿಕೊಂಡಿದ್ದಾರೆ.

Model Monsoon Fashion

ವಿಸ್ತಾರ ನ್ಯೂಸ್‌ :ನಿಮ್ಮ ಮಾನ್ಸೂನ್‌ ಫ್ಯಾಷನ್‌ ಮಂತ್ರ ಏನು?:

ಸನ್ನಿಧಿ: ಮಾನ್ಸೂನ್‌ನಲ್ಲಿ ಕಾಟನ್‌ ಟೀ ಶರ್ಟ್ ಮೇಲೆ ಜಾಕೆಟ್‌ ಧರಿಸಿ ಲೇಯರಿಂಗ್‌ ಲುಕ್‌ನಲ್ಲಿ ಕಾಣಿಸಿಕೊಳ್ಳುವುದೆಂದರೇ ನನಗಿಷ್ಟ. ನನ್ನ ಪ್ರಕಾರ, ಹುಡುಗರಂತೆ , ಹುಡುಗಿಯರು ಕೂಡ ಜಾಕೆಟ್ಸ್‌ನಲ್ಲಿ ಆಕರ್ಷಕವಾಗಿ ಕಾಣಿಸಬಲ್ಲರು. ಇನ್ನು, ಮಿಕ್ಸ್‌ ಮ್ಯಾಚ್‌ ಕಾನ್ಸೆಪ್ಟ್ ಕೂಡ ಈ ಸೀಸನ್‌ ಫ್ಯಾಷನ್‌ನಲ್ಲಿದೆ.

Model Monsoon Fashion

ವಿಸ್ತಾರ ನ್ಯೂಸ್‌ :ಮಾಡೆಲ್‌ ಆದ ನೀವು ಟ್ರೆಂಡ್‌ ಫಾಲೋವರ್ರಾ ಅಥವಾ ಟ್ರೆಂಡ್‌ ಸೆಟ್ಟರ್ರಾ?

ಸನ್ನಿಧಿ: ಮಾಡೆಲ್‌ ಆದರೂ ನಾನು ಕೂಡ ಟ್ರೆಂಡ್‌ ಫಾಲೋ ಮಾಡುತ್ತೇನೆ. ಅಲ್ಲದೇ, ಕೆಲವೊಮ್ಮೆ ನನ್ನದೇ ಆದ ಫ್ಯಾಷನ್‌ವೇರ್‌ಗಳನ್ನು ಧರಿಸುವುದರ ಮೂಲಕ ಹೋದೆಡೆ ಟ್ರೆಂಡ್‌ ಸೆಟ್‌ ಮಾಡಲು ಪ್ರಯತ್ನಿಸುತ್ತೇನೆ.

Model Monsoon Fashion

ವಿಸ್ತಾರ ನ್ಯೂಸ್‌: ಬೆಂಗಳೂರು ಫ್ಯಾಷನ್‌ ಪ್ರಪಂಚ ನಿಮಗೇನು ನೀಡಿದೆ?

ಸನ್ನಿಧಿ: ಮುಂಬೈ ಹಾಗೂ ದಿಲ್ಲಿ ಹೊರತುಪಡಿಸಿದಲ್ಲಿ ಬೆಂಗಳೂರು ಫ್ಯಾಷನ್‌ ಲೋಕ ಫಾಸ್ಟಾಗಿ ಅಭಿವೃದ್ಧಿ ಹೊಂದುತ್ತಿದೆ. ಪರಿಣಾಮ, ನಮ್ಮಂತಹ ಮಾಡೆಲ್‌ಗಳಿಗೆ ಸಾಕಷ್ಟು ಅವಕಾಶ ನೀಡಿದೆ. ಭವಿಷ್ಯ ರೂಪಿಸಿದೆ.

Model Monsoon Fashion

ವಿಸ್ತಾರ ನ್ಯೂಸ್‌ : ಮಾನ್ಸೂನ್‌ನಲ್ಲಿ ಹುಡುಗಿಯರು ಆಕರ್ಷಕವಾಗಿ ಕಾಣಿಸಲು ಏನು ಮಾಡಬೇಕು ?

ಸನ್ನಿಧಿ: ಆದಷ್ಟೂ ಲೇಯರಿಂಗ್‌ ಔಟ್‌ಫಿಟ್‌ಗಳೊಂದಿಗೆ ಬ್ರೈಟ್‌ ಆಕ್ಸೆಸರೀಸ್‌ ಧರಿಸಬೇಕು. ಧರಿಸುವ ಲೇಯರ್‌ ಔಟ್‌ಫಿಟ್‌ಗಳು ಕಲರ್‌ಫುಲ್‌ ಆಗಿರಬೇಕು.

ಇದನ್ನೂ ಓದಿ: Saree Fashion: ಕಂಟೆಂಪರರಿ ಪ್ರಿಂಟೆಡ್‌ ವಿನ್ಯಾಸದಲ್ಲೂ ಬಂತು ಆರ್ಗನ್ಜಾ ಸೀರೆ!

ವಿಸ್ತಾರ ನ್ಯೂಸ್‌: ಮಾನ್ಸೂನ್‌ ಫ್ಯಾಷನ್‌ಗೆ ಯುವತಿಯರಿಗೆ ನೀವು ನೀಡುವ ಟಿಪ್ಸ್ ?

  1. ಸಸ್ಟೈನಬಲ್‌ ಫ್ಯಾಷನ್‌ವೇರ್‌ಗಳನ್ನು ಚೂಸ್‌ ಮಾಡಿ.
  2. ನಿಮ್ಮ ಬಾಡಿ ಮಾಸ್‌ ಇಂಡೆಕ್ಸ್‌ಗೆ ಸೂಟ್‌ ಆಗುವಂತಹ ಡ್ರೆಸ್‌ ಧರಿಸಿ.
  3. ಉತ್ತಮ ಫ್ಯಾಬ್ರಿಕ್‌ ಡಿಸೈನರ್‌ವೇರ್ಸ್ ಆಯ್ಕೆ ಮಾಡಿ.
  4. ಹೊರ ಹೋಗುವಾಗ ರೈನ್‌ಕೋಟ್ಸ್ ಹಾಗೂ ಅಂಬ್ರೆಲ್ಲಾ ಜೊತೆಗಿರಲಿ.
  5. ಹೈಲೈಟಾಗುವ ಕಲರ್ಸ್ ಔಟ್‌ಫಿಟ್‌ ಧರಿಸಿ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

Nita Ambani Beauty Secrets: ನೀತಾ ಅಂಬಾನಿ ನಿತ್ಯವೂ ಕುಡಿಯುವ ಆರೋಗ್ಯಕರ ಮ್ಯಾಜಿಕ್‌ ಡ್ರಿಂಕ್‌ ಯಾವುದು ಗೊತ್ತೇ? ನಾವೂ ಕುಡಿಯಬಹುದು!

Nita Ambani Beauty Secrets: ನೀತಾ ಅಂಬಾನಿ ಚಾಚೂ ತಪ್ಪದೆ ಪಾಲಿಸುವ ಇನ್ನೊಂದು ಡಯಟ್‌ ಸೀಕ್ರೆಟ್‌ ಎಂದರೆ ಅದು ಬೀಟ್‌ರೂಟ್‌ ಜ್ಯೂಸ್‌. ನಿತ್ಯವೂ ಬೀಟ್‌ರೂಟ್‌ ಜ್ಯೂಸ್‌ ಹೀರುವುದೇ ಅವರ ಸೌಂದರ್ಯದ, ಅತ್ಯುತ್ತಮ ಆರೋಗ್ಯದ ಹಿಂದಿರುವ ಗುಟ್ಟು ಎನ್ನಲಾಗುತ್ತದೆ. ಬೀಟ್‌ರೂಟ್‌ ಜ್ಯೂಸ್‌ ನಿತ್ಯವೂ ಹೀರುವುದರಿಂದ ಪಡೆಯಬಹುದಾದ ಲಾಭಗಳೇನು ಎಂಬ ಬಗ್ಗೆ ಉಪಯುಕ್ತ ಮಾಹಿತಿ ಇಲ್ಲಿದೆ.

VISTARANEWS.COM


on

Nita Ambani Beauty Secrets
Koo

ಮಗನ ಭರ್ಜರಿ ಮದುವೆಯಿಂದ (Nita Ambani Beauty Secrets) ಸಾಕಷ್ಟು ಸುದ್ದಿಗೆ ಗ್ರಾಸವಾಗಿದ್ದ ಅಂಬಾನಿ ಕುಟುಂಬದ ಕಣ್ಣು ನೀತಾ ಅಂಬಾನಿ. ವರ್ಷ ಅರುವತ್ತು ದಾಟಿದರೂ ಪುಟಿದೇಳುವ ಉತ್ಸಾಹ, ಮಾಸದ ಚೆಲುವಿನಿಂದಾಗಿಯೂ ಹಲವರಿಗೆ ಸ್ಫೂರ್ತಿ. ಬ್ಯುಸಿನೆಸ್‌ ವುಮನ್‌ ಆಗಿ, ರಿಲಯನ್ಸ್‌ನ ಜವಾಬ್ದಾರಿಗಳನ್ನು ನಿರ್ವಹಿಸುತ್ತಾ ನೀತಾ ಅಂಬಾನಿ ಆರೋಗ್ಯದ ಕಾಳಜಿಯನ್ನೂ ಸಾಕಷ್ಟು ಮಾಡುತ್ತಾರಂತೆ. ತಮ್ಮ ಫಿಟ್‌ನಸ್‌ ಕಾಳಜಿಯನ್ನು ವಹಿಸುವ ಇವರು ಬೆಳಗ್ಗೆ ಎದ್ದ ಕೂಡಲೇ ಒಂದು ವಾಕ್‌ ಹಾಗೂ ಪೋಷಕಾಂಶಯುಕ್ತ ಬ್ರೇಕ್‌ಫಾಸ್ಟ್‌ ಇವರ ಇಡೀ ದಿನದ ಲವಲವಿಕೆಯ ಸೀಕ್ರೆಟ್‌. ಅಷ್ಟೇ ಅಲ್ಲ, ನೀತಾ ಅಂಬಾನಿ ಚಾಚೂ ತಪ್ಪದೆ ಪಾಲಿಸುವ ಇನ್ನೊಂದು ಡಯಟ್‌ ಸೀಕ್ರೆಟ್‌ ಎಂದರೆ ಅದು ಬೀಟ್‌ರೂಟ್‌ ಜ್ಯೂಸ್‌ ಅಂತೆ. ನಿತ್ಯವೂ ಬೀಟ್‌ರೂಟ್‌ ಜ್ಯೂಸ್‌ ಹೀರುವ ಅವರ, ಸೌಂದರ್ಯದ, ಅತ್ಯುತ್ತಮ ಆರೋಗ್ಯದ ಹಿಂದಿರುವ ಗುಟ್ಟು ಎನ್ನಲಾಗುತ್ತದೆ. ಬನ್ನಿ ಬೀಟ್‌ರೂಟ್‌ ಜ್ಯೂಸ್‌ ನಿತ್ಯವೂ ಹೀರುವುದರಿಂದ ಪಡೆಯಬಹುದಾದ ಲಾಭಗಳೇನು ಎಂಬುದನ್ನು ನೋಡೋಣ.

Ambani Wedding Fashion

ಹೇರಳವಾಗಿ ಪೋಷಕಾಂಶ

ಬೀಟ್‌ರೂಟ್‌ ಜ್ಯೂಸ್‌ನಲ್ಲಿ ಹೇರಳವಾಗಿ ಪೋಷಕಾಂಶಗಳಿವೆ. ಮುಖ್ಯವಾಗಿ ವಿಟಮಿನ್‌ ಸಿ, ಬಿ6, ಕಬ್ಬಿಣಾಂಶ, ಮೆಗ್ನೀಶಿಯಂ, ಪೊಟಾಶಿಯಂ ಹಾಗೂ ಮ್ಯಾಂಗನೀಸ್‌ ಹೆಚ್ಚಿನ ಪ್ರಮಾಣದಲ್ಲಿದೆ. ಈ ಎಲ್ಲ ಪೋಷಕಾಂಶಗಳು ನಮ್ಮನ್ನು ಆರೋಗ್ಯವಾಗಿಟ್ಟುಕೊಳ್ಳುವಲ್ಲಿ ಮಹತ್ವದ ಸ್ಥಾನ ವಹಿಸುತ್ತದೆ. ವಿಟಮಿನ್‌ ಸಿ ರೋಗ ನಿರೋಧಕ ಶಕ್ತಿಯನ್ನು ಬಲಗೊಳಿಸಿದರೆ, ಕಬ್ಬಿಣಾಂಶವು ರಕ್ತವನ್ನು ಹೆಚ್ಚಿಸುತ್ತದೆ.

ಚುರುಕಾಗಿ ಇರಲು ಸಾಧ್ಯ

ನೀತಾ ಅಂಬಾನಿ ಈ ಜ್ಯೂಸ್‌ ಹೀರುವುದಕ್ಕೆ ಮೂಲ ಕಾರಣ ದಿನವಿಡೀ ಚುರುಕಾಗಿ ಇರುವುದಕ್ಕೆ. ಬೀಟ್‌ರೂಟ್‌ನಲ್ಲಿ ನೈಟ್ರೇಟ್‌ ಹೇರಳವಾಗಿದೆ. ದೇಹವು ಇದ್ನು ನೈಟ್ರಿಕ್‌ ಆಕ್ಸೈಡ್‌ ಆಗಿ ಪರಿವರ್ತಿಸುತ್ತದೆ. ಇದು ರಕ್ತ ಪರಿಚಲನೆಯನ್ನು ಚುರುಕುಗೊಳಿಸಲು ನೆರವಾಗುವುದಲ್ಲದೆ, ನಮ್ಮ ದೇಹಕ್ಕೆ ರಕ್ತದ ಮೂಲಕ ಸರಿಯಾದ ಪ್ರಮಾಣದಲ್ಲಿ ಆಮ್ಲಜನಕವನ್ನು ಒದಗಿಸುವಲ್ಲಿಯೂ ಸಹಾಯ ಮಾಡುತ್ತದೆ. ಇದರಿಂದಾಗಿ, ಉಲ್ಲಾಸ, ಚುರುಕುತನ ಹೆಚ್ಚುತ್ತದೆ.

Heart Health Fish Benefits

ಹೃದಯದ ಆರೋಗ್ಯ ಸುಧಾರಣೆ

ಹೃದಯದ ಆರೋಗ್ಯಕ್ಕೆ ಬೀಟ್‌ರೂಟ್‌ ಜ್ಯೂಸ್‌ ಬಹಳ ಒಳ್ಳೆಯದು. ಇದು ರಕ್ತದೊತ್ತಡವನ್ನು ಸಮತೋಲನಗೊಳಿಸಿ, ಹೃದಯವನ್ನು ಆರೋಗ್ಯವಾಗಿರಿಸುತ್ತದೆ. ಇದರಲ್ಲಿರುವ ನೈಟ್ರೇಟ್‌ ರಕ್ತ ಪರಿಚಲನೆಯನ್ನು ಚುರುಕುಗೊಳಿಸುವ ಮೂಲಕ ಪರೋಕ್ಷವಾಗಿ ಹೃದಯವನ್ನೂ ಚುರುಕಾಗಿ ಇರಿಸುತ್ತದೆ. ಹೃದಯದ ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ನೀತಾ ಅಂಬಾನಿ ಇದಕ್ಕಾಗಿ ಬೀಟ್‌ರೂಟ್‌ ಜ್ಯೂಸ್‌ ಅನ್ನು ಮರೆಯದೆ ಸೇವಿಸುತ್ತಾರಂತೆ.

ಜೀರ್ಣಕ್ರಿಯೆಗೆ ಅಗತ್ಯ

ಜೀರ್ಣಕ್ರಿಯೆಗೆ ಅತ್ಯಂತ ಒಳ್ಳೆಯದಾಗಿರುವ ಬೀಟ್‌ರೂಟ್‌ನಲ್ಲಿ ನಾರಿನಂಶ ಸಮೃದ್ಧವಾಗಿದೆ. ಮಲಬದ್ಧತೆಯಂತಹ ಸಮಸ್ಯೆ ಹತ್ತಿರ ಸುಳಿಯದು. ಜೀರ್ಣಾಂಗವ್ಹೂಹವನ್ನು ಸದಾ ಆರೋಗ್ಯವಾಗಿಡಲು ಇದು ಸುಲಭ ನೈಸರ್ಗಿಕವಾದ ವಿಧಾನ.

active brain

ಮಿದುಳಿಗೂ ಪೂರಕ

ಮಿದುಳಿನ ಆರೋಗ್ಯಕ್ಕೂ ಕೂಡಾ ಬೀಟ್‌ರೂಟ್‌ ಉತ್ತಮ. ಬೀಟ್‌ರೂಟ್‌ ರಕ್ತ ಪರಿಚಲನೆಯನ್ನು ಹೆಚ್ಚಿಸುವ ಹಾಗೂ ರಕ್ತದ ಮೂಲಕ ದೇಹಕ್ಕೆ ಸರಿಯಾಗಿ ಆಮ್ಲಜನಕ ಪೂರೈಕೆ ಮಾಡುವುದರಿಂದ ಮಿದುಳಿಗೂ ಸರಿಯಾದ ಪೋಷಣೆ ದೊರೆಯುತ್ತದೆ. ಕೆಲಸದಲ್ಲಿ ದೃಢತೆ, ಫೋಕಸ್‌, ಚುರುಕುತನ, ತೀಕ್ಷ್ಣ ಬುದ್ಧಿ ಇವೆಲ್ಲವಕ್ಕೂ ಬೀಟ್‌ರೂಟ್‌ ಒಳ್ಳೆಯ ಆಹಾರ.

ಚರ್ಮದ ಆರೋಗ್ಯಕ್ಕೂ ಉತ್ತಮ

ಮುಖ್ಯವಾಗಿ ಚರ್ಮದ ಆರೋಗ್ಯಕ್ಕೂ ಬೀಟ್‌ರೂಟ್‌ ಉತ್ತಮ. ಬೀಟ್‌ರೂಟ್‌ನಲ್ಲಿ ಆಂಟಿ ಆಕ್ಸಿಡೆಂಟ್‌ಗಳು ಹೇರಳವಾಗಿದ್ದು, ವಿಟಮಿನ್‌ ಸಿ ಯೂ ಇವೆ. ಇದು ಆರೋಗ್ಯಯುತ ಚರ್ಮಕ್ಕೆ ಅಗತ್ಯ ಬೇಕಾದವು. ಆಂಟಿ ಏಜಿಂಗ್‌ ಕೂಡಾ. ನೀತಾ ಅಂಬಾನಿ ತನ್ನ ಸೌಂದರ್ಯದ ಗುಟ್ಟು ಆರೋಗ್ಯದಲ್ಲಿ ಅಡಗಿದೆ ಎಂಬುದನ್ನು ಬಲವಾಗಿ ನಂಬುವ ಕಾರಣ, ಚರ್ಮಕ್ಕೆ ಬೇಕಾದ ನೈಸರ್ಗಿಕ ಆಹಾರವನ್ನು ಇದರಲ್ಲಿ ಕಾಣುತ್ತಾರಂತೆ.

gall bladder

ಪಿತ್ತಕೋಶದ ಆರೋಗ್ಯಕ್ಕೂ ಉತ್ತಮ

ಪಿತ್ತಕೋಶದ ಆರೋಗ್ಯಕ್ಕೂ ಬೀಟ್‌ರೂಟ್‌ ಬಹಳ ಉತ್ತಮ. ಇದರಲ್ಲಿ ಡಿಟಾಕ್ಸಿಫೈಯಿಂಗ್‌ ಗುಣಗಳಿದ್ದು, ಮುಖ್ಯವಾಗಿ ಪಿತ್ತಕೋಶದ ವಿಚಾರದಲ್ಲಿ ಅದ್ಭುತ ಜಾದೂ ಮಾಡುತ್ತದೆ. ಪಿತ್ತಕೋಶದ ಆರೋಗ್ಯ ಅತ್ಯಂತ ಹೆಚ್ಚು ಗಮನ ಕೊಡಬೇಕಾದವುಗಳಲ್ಲಿ ಒಂದು.

ಔಷಧೀಯ ಗುಣ

ಸಂಧಿವಾತ ಸೇರಿದಂತೆ ಅನೇಕ ಬಗೆಯ ಉರಿಯೂತಗಳಿಗೂ ಬೀಟ್‌ರೂಟ್‌ ಔಷಧೀಯ ಗುಣಗಳನ್ನು ತನ್ನಲ್ಲಿ ಹೊಂದಿದೆ. ನಿತ್ಯ ಸೇವನೆಯಿಂದ ಇಂತಹ ಸಮಸ್ಯೆಯೂ ಬರದಂತೆ ತಡೆಯುವ ಗುಣವನ್ನು ಬೀಟ್‌ರೂಟ್‌ ಹೊಂದಿದೆ.

ಇದನ್ನೂ ಓದಿ: Health tips Kannada: ವೃತ್ತಿನಿರತ ತಾಯಂದಿರೇ, ಖಿನ್ನತೆ ಆವರಿಸಿಕೊಳ್ಳುವ ಮೊದಲೇ ಎಚ್ಚೆತ್ತುಕೊಳ್ಳಿ!

ಕಡಿಮೆ ಕ್ಯಾಲರಿ

ಬೀಟ್‌ರೂಟ್‌ ಕಡಿಮೆ ಕ್ಯಾಲರಿಯನ್ನು ಹೊಂದಿದೆ. ಹಾಗಾಗಿ ತೂಕ ಇಳಿಕೆಗೂ ಇದು ಒಳ್ಳೆಯದು. ನೀತಾ ಅಂಬಾನಿ ಆರೋಗ್ಯಕರ ತೂವನ್ನು ಹೊಂದಲು ಸದಾ ಬೀಟ್‌ರೂಟ್‌ ಜ್ಯೂಸ್‌ ಅನ್ನು ತಮ್ಮ ಡಯಟ್‌ನ ಭಾಗವಾಗಿಸಿಕೊಂಡಿದ್ದಾರೆ.

Continue Reading

ಲೈಫ್‌ಸ್ಟೈಲ್

Things to Avoid Cleaning with Lemon: ಇವುಗಳನ್ನು ಸ್ವಚ್ಛ ಮಾಡಲು ಯಾವ ಕಾರಣಕ್ಕೂ ನಿಂಬೆಹಣ್ಣನ್ನು ಬಳಸಲೇಬೇಡಿ!

Things to Avoid Cleaning with Lemon: ಎಷ್ಟೋ ಬಾರಿ ಯಾವ ಕ್ಲೀನಿಂಗ್‌ ಏಜೆಂಟ್‌ಗೂ ಬಗ್ಗದ ಕಲೆಗಳು ನಿಂಬೆಹಣ್ಣಿನ ಶಕ್ತಿಯಿಂದ ಮಾಯವಾಗುತ್ತದೆ. ಫಳಪಳಿಸುವ ಮೇಲ್ಮೈಗೆ, ಕಲೆಗಳನ್ನು ತೆಗೆಯಲು, ವಾಸನೆಯನ್ನು ಹೋಗಲಾಡಿಸಲು ಹೀಗೆ ಹಲವು ಕ್ಷೇತ್ರಗಳಲ್ಲಿ ನಿಂಬೆಹಣ್ಣಿನದೇ ಮೇಲುಗೈ. ಮುಖ್ಯವಾಗಿ ಪಾತ್ರೆಗಳನ್ನು ಫಳಫಳಿಸುವಂತೆ ಮಾಡಲು ನಿಂಬೆಹಣ್ಣು ಅತ್ಯುತ್ತಮ ಉಪಾಯ. ಆದರೆ, ನಿಂಬೆಯ ಶಕ್ತಿಯ ಬಗ್ಗೆ ತಿಳಿದುಕೊಂಡವರು ಕೆಲವು ವಿಚಾರಗಳಿಗೆ ನಿಂಬೆಯನ್ನು ನಾವು ಬಳಸಲೇಬಾರದು ಎಂಬುದನ್ನು ತಿಳಿದಿರಬೇಕು.

VISTARANEWS.COM


on

Things to Avoid Cleaning with Lemon
Koo

ನಿಂಬೆಹಣ್ಣು ಕೇವಲ ಆಹಾರವಾಗಿ ಜನಪ್ರಿಯವಾದಷ್ಟೇ ಕ್ಲೀನಿಂಗ್‌ ಏಜೆಂಟ್‌ ಆಗಿಯೂ ಕೂಡಾ ಜನಪ್ರಿಯ. ಎಷ್ಟೋ ಬಾರಿ ಯಾವ ಕ್ಲೀನಿಂಗ್‌ ಏಜೆಂಟ್‌ಗೂ ಬಗ್ಗದ ಕಲೆಗಳು ನಿಂಬೆಹಣ್ಣಿನ ಶಕ್ತಿಯಿಂದ ಮಾಯವಾಗುತ್ತದೆ. ಫಳಪಳಿಸುವ ಮೇಲ್ಮೈಗೆ, ಕಲೆಗಳನ್ನು ತೆಗೆಯಲು, ವಾಸನೆಯನ್ನು ಹೋಗಲಾಡಿಸಲು ಹೀಗೆ ಹಲವು ಕ್ಷೇತ್ರಗಳಲ್ಲಿ ನಿಂಬೆಹಣ್ಣಿನದೇ ಮೇಲುಗೈ. ಮುಖ್ಯವಾಗಿ ಪಾತ್ರೆಗಳನ್ನು ಫಳಫಳಿಸುವಂತೆ ಮಾಡಲು ನಿಂಬೆಹಣ್ಣು ಅತ್ಯುತ್ತಮ ಉಪಾಯ. ಆದರೆ, ನಿಂಬೆಯ ಶಕ್ತಿಯ ಬಗ್ಗೆ ತಿಳಿದುಕೊಂಡವರು ಕೆಲವು ವಿಚಾರಗಳಿಗೆ ನಿಂಬೆಯನ್ನು ನಾವು ಬಳಸಲೇಬಾರದು ಎಂಬುದನ್ನು ತಿಳಿದಿರಬೇಕು. ಎಲ್ಲ ಬಗೆಯ ಸ್ವಚ್ಛತೆಗೂ ನಿಂಬೆ ಯೋಗ್ಯವಲ್ಲ. ಬನ್ನಿ, ಯಾವೆಲ್ಲ ವಸ್ತುಗಳ ಮೇಲೆ ನಾವು ನಿಂಬೆಯ ಪ್ರಯೋಗವನ್ನು ಯಾವತ್ತೂ ಮಾಡಲೇಬಾರದು (Things to Avoid Cleaning with Lemon) ಎಂಬುದನ್ನು ನೋಡೋಣ ಬನ್ನಿ.

Lemons on White Marble Background
Lemon Near Kitchen Knife

ಮಾರ್ಬಲ್‌ ಹಾಗೂ ಗ್ರಾನೈಟ್‌ ಫ್ಲೋರ್‌ಗಳ ಮೇಲೆ

ನಿಮ್ಮ ಕಿಚನ್‌ನ ಸ್ಲ್ಯಾಬ್‌ ಮಾರ್ಬಲ್‌ ಅಥವಾ ಗ್ರಾನೈಟ್‌ನದ್ದಾಗಿದ್ದರೆ ಖಂಡಿತ ಅವುಗಳ ಮೇಲ್ಮೈ ಕ್ಲೀನ್‌ ಮಾಡಲು ನಿಂಬೆಹಣ್ಣಿನ ಪ್ರಯೋಗ ಮಾಡಬೇಡಿ. ನಿಂಬೆಹಣ್ಣಿನಲ್ಲಿ ಹೆಚ್ಚು ಆಮ್ಲೀಯ ಪ್ರಕೃತಿ (ಅಸಿಡಿಕ್‌ ನೇಚರ್‌) ಇರುವುದರಿಂದ ಅವು ಮಾರ್ಬಲ್‌ ಗ್ರಾನೈಟ್‌ ಮೇಲೆ ಸರಿಯಾಗಿ ವರ್ತಿಸಲಾರವು. ನೈಸರ್ಗಿಕ ಕಲ್ಲುಗಳಾಗಿರುವುದರಿಂದ ಇವು ನಿಂಬೆಹಣ್ಣಿನ ಜೊತೆಗೆ ಕಾಲಕ್ರಮೇಣ ವರ್ತಿಸುತ್ತಾ, ಇವುಗಳಿಂದ ಅವುಗಳ ಮೇಲಮೈ ಸೌಂದರ್ಯ ಕೆಡಬಹುದು. ಕೊನೆಗೆ ಹಾಳಾಗಬಹುದು. ಪಿಎಚ್‌ ನ್ಯೂಟ್ರಲ್‌ ಇರುವ ಕ್ಲೆನ್ಸರ್‌ಗಳನ್ನು ಇವಕ್ಕೆ ಬಳಸುವುದು ಒಳ್ಳೆಯದು.

ಕಬ್ಬಿಣದ ಕಾವಲಿಗಳು

ತಾಮ್ರ, ಹಿತ್ತಾಳೆಯ ಪಾತ್ರೆಗಳನ್ನು ನಿಂಬೆಹಣ್ಣು ಫಳಫಳ ಹೊಳೆಯುವಂತೆ ಮಾಡುತ್ತದೆ ಎಂದುಕೊಂಡು ಅದನ್ನು ಕಬ್ಬಿಣದ ಮೇಲೂ ಪ್ರಯೋಗಿಸಬೇಡಿ. ಕಬ್ಬಿಣದ ಕಾವಲಿಗಳ ಮೇಲೆ ದೋಸೆ ಹುಯ್ಯಲು ನೀವು ಅದನ್ನು ಎಣ್ಣೆ ತಿಕ್ಕಿ ಪಳಗಿಸಿದ ಗುಣವೇ ಇದರಿಂದ ನಾಶವಾಗಬಹುದು. ಅದರ ಮೇಲ್ಮೈಯಲ್ಲಿ ಇರುವ ಎಣ್ಣೆಯಂಶ ಪೂರ್ತಿಯಾಗಿ ಹೋದಲೆ ಕಬ್ಬಿಣದ ಕಾವಲಿ ನಿಮ್ಮ ಉಪಯೋಗಕ್ಕೆ ನೀವಂದುಕೊಂಡ ಹಾಗೆ ಬಗ್ಗದು. ಮೆದುವಾದ ಬ್ರಷ್‌ನಿಂದ ಉಜ್ಜಿ ತೊಳೆಯಿರಿ. ಸೋಪ್‌/ಲಿಕ್ವಿಡ್‌ ಆದಷ್ಟೂ ಕಡಿಮೆ ಬಳಸಿ. ಬಿಸಿನೀರನಿಂದಲೂ ತೊಳೆಯಬಹುದು.

 Lemon Near Kitchen Knife

ಚಾಕು

ಕಿಚನ್‌ನಲ್ಲಿ ನಿತ್ಯವೂ ಬಳಸುವ ಚಾಕುಗಳು ಅತ್ಯಂತ ಹೆಚ್ಚು ಉಪಯೋಗಕ್ಕೆ ಬರುವ ವಸ್ತುಗಳಲ್ಲಿ ಒಂದು. ಈ ಚಾಕುಗಳನ್ನು ಕೆಲವೊಮ್ಮೆ ಹೈ- ಕಾರ್ಬನ್‌ ಸ್ಟೀನ್‌ಲಿಂದ ಮಾಡಲಾಗಿರುತ್ತದೆ. ಹಾಗಾಗಿ, ಅವುಗಳನ್ನು ತೊಳೆಯಲು ನಿಂಬೆಹಣ್ಣು ಸೂಕ್ತವಲ್ಲ. ಇದು ಕೆಲವೊಮ್ಮೆ ಚಾಕುವಿನ ಮೇಲ್ಮೈ ಮೇಲೆ ಘಾಸಿ ಮಾಡಬಹುದು. ತುಕ್ಕು ಹಿಡಿಯುವಂತೆ ಪ್ರೇರೇಪಿಸಬಹುದು.

ಮರದ ಪಾತ್ರೆಗಳು/ಸೌಟುಗಳು

ಮರದ ವಸ್ತುಗಳ ಬಳಕೆ ಇಂದು ಕಿಚನ್‌ನಲ್ಲಿ ಹೆಚ್ಚಾಗುತ್ತಿದೆ. ಮರದ ಪಾತ್ರೆಗಳು, ಮರದ ಕಟ್ಟಿಂಗ್‌ ಬೋರ್ಡ್‌, ಮರದ ಸೌಟುಗಳು, ಟ್ರೇ ಇತ್ಯಾದಿಗಳ ಬಳಕೆ ಸಾಮಾನ್ಯ. ಹಾಗಾಗಿ, ಇವುಗಳನ್ನು ಸ್ವಚ್ಛಗೊಳಿಸಲು ಖಂಡಿತವಾಗಿಯೂ ನಿಂಬೆಹಣ್ಣು ಸೂಕ್ತವಲ್ಲ. ಇದು ಇವುಗಳನ್ನು ಹಾಳು ಮಾಡುತ್ತದೆ. ಒಡೆಯುವಂತೆಯೂ ಮಾಡಬಹುದು. ಮೆದುವಾದ ಸೋಪ್‌/ಲಿಕ್ವಿಡ್‌ ಬಳಸಿ ಮರದ ವಸ್ತುಗಳನ್ನು ಸ್ವಚ್ಛ ಮಾಡಿ. ನಂತರ ತೆಳುವಾದ ಲೇಯರ್‌ ಎಣ್ಣೆ ಹಚ್ಚಿ.

Tips for Monsoon: ಮಳೆಗಾಲದಲ್ಲಿ ಬಟ್ಟೆಗಳನ್ನು ಗರಿಗರಿಯಾಗಿ ಇರಿಸುವುದು ಹೇಗೆ?ಇದನ್ನೂ ಓದಿ:

ಅಲ್ಯೂಮಿನಿಯಂ ಪಾತ್ರೆಗಳು

ಅಲ್ಯೂಮಿನಿಯಂ ಪಾತ್ರೆಗಳ ಬಳಕೆ ಇತ್ತೀಚೆಕೆ ಕಡಿಮೆಯಾಗುತ್ತಿದ್ದರೂ, ಇನ್ನೂ ಹಲವರು ಅಲ್ಯೂಮಿನಿಯಂ ಪಾತ್ರೆಗಳನ್ನು ಬಳಸುವುದುಂಟು. ಇವುಗಳನ್ನು ಫಳಫಳಿಸುವ ನೆಪದಲ್ಲಿ ನಿಂಬೆ ಬಳಸಬೇಡಿ. ಅಲ್ಯೂಮಿನಿಯಂ ಪಾತ್ರೆಯ ಮೇಲೆ ನಿಂಬೆ ವರ್ತಿಸಿ ಅವುಗಳ ಹೊಳಪನ್ನು ಕಡಿಮೆ ಮಾಡಬಹುದು, ಜೊತೆಗೆ ಬಣ್ಣ ಮಾಸಲೂಬಹುದು. ಇವು ಹೊಸದಾಗಿ ಫಳಫಳಿಸಲು ಯಾವುದಾದರೂ ಡಿಶ್‌ ಸೋಪ್‌ ಬಳಸಿ, ತಿಕ್ಕಿ ತೊಳೆಯಿರಿ. ಹೊಸದರಂತೆ ಫಳಫಳಿಸಬಹುದು.

Continue Reading

ಆರೋಗ್ಯ

Tea vs Coffee: ಟೀ ಒಳ್ಳೆಯದಾ ಕಾಫಿ ಒಳ್ಳೆಯದಾ? ಇಲ್ಲಿದೆ ಉತ್ತರ

Tea vs coffee: ʻಯಾವುದು ಒಳ್ಳೆಯದು?ʼ ಎನ್ನುವ ಚಹಾ ಮತ್ತು ಕಾಫಿಯ ಅಭಿಮಾನಿಗಳ ಮೂಲಭೂತ ಪ್ರಶ್ನೆಗೆ ಉತ್ತರ ನಿರ್ಣಯ ಮಾಡುವುದು ಕೊಂಚ ಕಷ್ಟ. ಆದರೆ ಇವೆರಡೂ ಪೇಯಗಳಲ್ಲಿ ಕೆಲವು ಸಾಮ್ಯತೆಗಳು ಮತ್ತು ಕೆಲವು ಭಿನ್ನತೆಗಳು ಇರುವುದು ಹೌದು. ಅದನ್ನು ತಿಳಿದುಕೊಂಡರೆ, ಉತ್ತರವನ್ನು ನೀವೇ ನಿರ್ಧರಿಸಬಹುದು. ಇಲ್ಲಿದೆ ವಿವರಗಳು.

VISTARANEWS.COM


on

Tea vs Coffee
Koo

ಬೆಳಗಾಗುತ್ತಿದ್ದಂತೆಯೇ ನಾವು (Tea vs coffee) ಮಾಡುವ ಕೆಲಸಗಳಲ್ಲಿ ಎರಡು ಪ್ರಮುಖವಾದವು. ಒಂದು ಮೊಬೈಲ್‌ ಗೀರುವುದು, ಇನ್ನೊಂದು ಕಾಫಿ/ ಚಹಾ ಹೀರುವುದು. ಇವೆರಡೂ ಇಲ್ಲದಿದ್ದರೆ ಬೆಳಕು ಹರಿಯುವುದೇ ಇಲ್ಲ ನಮಗೆ. ಇವೆರಡೂ ದೇಹಕ್ಕೆ ನೀಡುವುದರಲ್ಲಿ ಕೆಫೇನ್‌ ಅಂಶವೇ ಪ್ರಧಾನವಾಗಿ ನಮಗೆ ಲೆಕ್ಕಕ್ಕೆ ಬರುವುದು. ಶರೀರದಲ್ಲಿ ಕಾಣುವ ಚೇತರಿಕೆಗೆ ಇದೇ ಪ್ರಧಾನವಾದ ಕಾರಣ. ಚಹಾ ಎಲೆಗಳ ರಸ ಹೀರುವುದು ಒಳ್ಳೆಯದೋ ಅಥವಾ ಕಾಫಿ ಬೀಜಗಳ ರಸ ಹೀರುವುದೋ ಎಂಬ ಚರ್ಚೆ ಬಹುಶಃ ಇವುಗಳ ಹುಟ್ಟಿನಷ್ಟೇ ಹಳೆಯದು. ಆದರೂ… ಯಾವುದು ಸೂಕ್ತ? ಅಂದಹಾಗೆ ಚಹಾದ ಹುಟ್ಟಿಗೆ ಸಾವಿರಾರು ವರ್ಷಗಳ ಹಿಂದಿನ ಸಣ್ಣದೊಂದು ಕಥೆಯೂ ಇದೆ. ಚೀನಾದ ಚಕ್ರವರ್ತಿ ಷೆನ್‌ ನಂಗ್‌ ಒಮ್ಮೆ ತನ್ನ ಪಡೆಯೊಂದಿಗೆ ಎಲ್ಲಿಗೋ ಹೋಗುತ್ತಿದ್ದ. ಆಗ ದಾರಿಯಲ್ಲಿ ವಿಶ್ರಾಂತಿ ಮತ್ತು ಆಹಾರಕ್ಕಾಗಿ ನೆರಳಿನಲ್ಲಿ ಬೀಡು ಬಿಟ್ಟಿದ್ದರು. ಏನೋ ಕಾರಣಕ್ಕಾಗಿ ಪಾತ್ರೆಯೊಂದರಲ್ಲಿ ನೀರನ್ನು ಕುದಿಸುತ್ತಿದ್ದರು. ಎಲ್ಲಿಂದಲೋ ತೂರಿ ಬಂದ ಚಹಾ ಎಲೆಗಳು ಈ ಪಾತ್ರೆಯೊಳಗೆ ಬಿದ್ದವಂತೆ. ನೀರು ತನ್ನಷ್ಟಕ್ಕೇ ಕುದಿದು, ಚಹಾ ಪರಿಮಳದ ನೀರು ಸಿದ್ಧವಾಯಿತು. ಈ ಲಘುವಾದ ಡಿಕಾಕ್ಷನ್‌ ಘಮ ಚಕ್ರವರ್ತಿಗೆ ಇಷ್ಟವಾಯಿತು ಎಂಬುದು ಚಹಾ ಹುಟ್ಟಿನ ಕಥೆ. ಇದೇನೇ ಇದ್ದರೂ, ಸಾವಿರಾರು ವರ್ಷಗಳಿಂದ ಏಷ್ಯಾದ ಸಂಸ್ಕೃತಿಗಳಲ್ಲಿ ಚಹಾಗೊಂದು ವಿಶಿಷ್ಟವಾದ ಸ್ಥಾನ ಇರುವುದಂತೂ ಹೌದು.

Tea And Coffee

ಯಾವುದು ಒಳ್ಳೆಯದು?

ಇದೀಗ ಮುಖ್ಯವಾದ ಪ್ರಶ್ನೆ- ಕಾಫಿಯೊ ಚಹಾವೊ… ಆರೋಗ್ಯಕ್ಕೆ ಯಾವುದು ಸರಿ? ಇವೆರಡೂ ಪೇಯಗಳಲ್ಲಿ ಮುಖ್ಯವಾಗಿ ಇರುವುದು ಕೆಫೇನ್‌ ಮತ್ತು ಉತ್ಕರ್ಷಣ ನಿರೋಧಕಗಳು. ಇದರಿಂದ ದೇಹದಲ್ಲಿನ ಶಕ್ತಿ ಸಂಚಯನ ಹೆಚ್ಚುತ್ತದೆ; ಮೆದುಳು ಚುರುಕಾಗುತ್ತದೆ; ಚಯಾಪಚಯ ವೃದ್ಧಿಸುತ್ತದೆ ಮತ್ತು ತೂಕ ಇಳಿಕೆಗೂ ನೆರವಾಗುತ್ತದೆ. ಹಾಗೆಂದು ಈ ಎರಡೂ ಪೇಯಗಳ ಗುಣಗಳು ಒಂದೇ ಎಂದೇನಲ್ಲ. ಚಹಾದಲ್ಲಿರುವ ಉತ್ಕರ್ಷಣ ನಿರೋಧಕಗಳಿಗೆ ಹೆಚ್ಚಾಗಿ ಮನಸ್ಸನ್ನು ಶಾಂತವಾಗಿಸುವ ಗುಣಗಳಿವೆ. ಆದರೆ ಕಾಫಿಯಲ್ಲಿ ಕೆಫೇನ್‌ ಸಾಂದ್ರತೆ ಹೆಚ್ಚಿದ್ದು, ದೈಹಿಕ ಕ್ಷಮತೆಯನ್ನು ಹೆಚ್ಚಿಸುತ್ತದೆ.

ಸಾಮ್ಯತೆಯೇನು?

ಇವೆರಡೂ ಪೇಯಗಳಲ್ಲಿರುವ ಸಾಮ್ಯತೆಯೇನು ಎಂಬುದನ್ನು ಅರ್ಥ ಮಾಡಿಕೊಳ್ಳೋಣ. ಇವೆರಡೂ ಪೇಯಗಳಲ್ಲಿ ಉತ್ಕರ್ಷಣ ನಿರೋಧಕಗಳು ವಿಫುಲವಾಗಿವೆ. ದೇಹದಲ್ಲಿನ ಉರಿಯೂತವನ್ನು ಕಡಿಮೆ ಮಾಡಿ, ಕೆಲವು ರೀತಿಯ ರೋಗಗಳನ್ನು ದೂರ ಇರಿಸುವುದಕ್ಕೆ ಇಂಥ ಅಂಶಗಳು ನೆರವಾಗುತ್ತವೆ. ಮಿತಿಯಲ್ಲಿ ಇವುಗಳನ್ನು ಕುಡಿಯುವುದು ಒಂದರ್ಥದಲ್ಲಿ ಆರೋಗ್ಯವನ್ನು ಕಾಪಾಡಲೂಬಹುದು. ಇವೆರಡೂ ಪೇಯಗಳಲ್ಲಿ ಕೆಫೇನ್‌ ಇರುವುದು ಹೌದು. ಆದರೆ ಬ್ಲಾಕ್‌ ಟೀಗೆ ಹೋಲಿಸಿದಲ್ಲಿ ಕಾಫಿಯಲ್ಲಿರುವ ಕೆಫೇನ್‌ ಪ್ರಮಾಣ ಹೆಚ್ಚು. ಅಂದಾಜಿಗೆ ಹೇಳುವುದಾದರೆ, ಒಂದು ದೊಡ್ಡ ಕಪ್‌ ಕಾಫಿಯಲ್ಲಿ, ಮೂರು ಚಹಾಗಳಲ್ಲಿರುವಷ್ಟು ಕೆಫೆನ್‌ ದೇಹ ಸೇರುತ್ತದೆ. ಹಾಗಾಗಿ ಈ ಪೇಯಗಳ ಸೇವನೆಯನ್ನು ಮಿತಿಯಲ್ಲಿ ಇರಿಸಿಕೊಳ್ಳದಿದ್ದರೆ ನಿದ್ರಾಹೀನತೆ, ಜೀರ್ಣಾಂಗಗಳ ತೊಂದರೆ, ಮಾನಸಿನ ಆತಂಕಗಳಂಥವು ಗಂಟು ಬೀಳುತ್ತವೆ.

ಇದನ್ನೂ ಓದಿ: World Lung Cancer Day: ಶ್ವಾಸಕೋಶದ ಕ್ಯಾನ್ಸರ್‌ಗೆ ಪ್ರತಿವರ್ಷ 16 ಲಕ್ಷ ಮಂದಿ ಬಲಿ; ಇದರಿಂದ ಪಾರಾಗುವುದು ಹೇಗೆ?

ಭಿನ್ನತೆಗಳೇನು?

ಚಹಾದಲ್ಲಿರುವ ಎಲ್‌-ಥಿಯಾನಿನ್‌ ಅಂಶವು ಮಾನಸಿಕ ಒತ್ತಡವನ್ನು ದೂರ ಮಾಡುವ ಕ್ಷಮತೆಯನ್ನು ಹೊಂದಿದೆ. ಜೊತೆಗೆ, ಮೆದುಳನ್ನು ಜಾಗೃತ ಸ್ಥಿತಿಯಲ್ಲೂ ಇರಿಸುತ್ತದೆ. ಇದರಲ್ಲಿ ಹಲವು ರೀತಿಯ ಪಾಲಿಫೆನಾಲ್‌ಗಳಿದ್ದು, ಚಯಾಪಚಯವನ್ನು ವೃದ್ಧಿಸುತ್ತದೆ. ಗ್ರೀನ್‌ ಟೀ ಅಥವಾ ಹರ್ಬಲ್‌ ಚಹಾಗಳು ಜೀರ್ಣಾಂಗಗಳ ಬ್ಯಾಕ್ಟೀರಿಯಗಳಿಗೆ ಕೊಂಚ ಸಹಾಯ ನೀಡಿ, ತೂಕ ಇಳಿಕೆಗೂ ನೆರವಾಗುತ್ತದೆ.
ಆದರೆ ಕಾಫಿಯಲ್ಲಿರುವ ಕ್ಷಮತೆ ಬೇರೆಯೇ. ಇದರಲ್ಲಿ ಕೆಫೇನ್‌ ಅಂಶ ನೈಸರ್ಗಿಕವಾಗಿಯೇ ಹೆಚ್ಚಿರುವುದರಿಂದ ದೇಹದಲ್ಲಿ ಶಕ್ತಿಯಲ್ಲಿ ಹೆಚ್ಚಿಸಿ, ಅಥ್ಲೆಟಿಕ್‌ ಕ್ಷಮತೆಯನ್ನು ವೃದ್ಧಿಸುವಂಥದ್ದು. ಡೋಪಮಿನ್‌ ಅಂಶದಿಂದಾಗಿ ನರಗಳನ್ನು ಉತ್ತೇಜಿಸುವುದರಿಂದ ಪಾರ್ಕಿನ್‌ಸನ್‌ ಮತ್ತು ಅಲ್‌ಜೈಮರ್ಸ್‌ ರೋಗಿಗಳಿಗೆ ಇದರಿಂದಾಗುವ ಲಾಭಗಳ ಬಗ್ಗೆ ಸಂಶೋಧನೆಗಳು ನಡೆಯುತ್ತಿವೆ. ಮಿತಿಯಲ್ಲಿದ್ದರೆ ಯಕೃತ್‌ಗೂ ಒಳ್ಳೆಯದು. ಆದರೆ ಮಿತಿ ಮೀರಿದರೆ ಜೀರ್ಣಾಂಗಗಳ ಆರೋಗ್ಯವನ್ನು ಹದಗೆಡಿಸಿ, ವ್ಯಸನವನ್ನೂ ಅಂಟಿಸುತ್ತದೆ.

Continue Reading

ಆರೋಗ್ಯ

Blood Cancer: ಕ್ರಿಕೆಟಿಗ ಅಂಶುಮಾನ್ ಗಾಯಕ್ವಾಡ್‌ರನ್ನು ಬಲಿ ಪಡೆದ ರಕ್ತದ ಕ್ಯಾನ್ಸರ್‌ಗೆ ಏನು ಕಾರಣ? ಇದರ ಲಕ್ಷಣಗಳೇನು?

ಭಾರತೀಯ ತಂಡದ ಮುಖ್ಯ ಕೋಚ್ ಆಗಿದ್ದ ಮಾಜಿ ಕ್ರಿಕೆಟಿಗ ಅಂಶುಮಾನ್ ಗಾಯಕ್ವಾಡ್ ಒಂದು ವರ್ಷದಿಂದ ರಕ್ತದ ಕ್ಯಾನ್ಸರ್ (Blood Cancer) ವಿರುದ್ಧ ಹೋರಾಡುತ್ತಿದ್ದರು. ಲಂಡನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೂ ಫಲ ನೀಡಲಿಲ್ಲ. ಬುಧವಾರ ಅವರು ಎಲ್ಲರನ್ನೂ ಅಗಲಿದ್ದಾರೆ. ಮಾರಣಾಂತಿಕ ಕ್ಯಾನ್ಸರ್ ಗಳಲ್ಲಿ ಒಂದಾಗಿರುವ ರಕ್ತದ ಕ್ಯಾನ್ಸರ್ ಎಂದರೇನು, ಅದರ ಲಕ್ಷಣಗಳು ಯಾವುದು ಎನ್ನುವ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.

VISTARANEWS.COM


on

By

Blood Cancer
Koo

ರಕ್ತದ ಕ್ಯಾನ್ಸರ್‌ನೊಂದಿಗೆ (Blood Cancer) ದೀರ್ಘ ಕಾಲ ಹೋರಾಡಿದ ಭಾರತದ ಮಾಜಿ ಕ್ರಿಕೆಟಿಗ (Indian cricketer) ಅಂಶುಮಾನ್ ಗಾಯಕ್ವಾಡ್ (Anshuman Gaekwad) 71ನೇ ವಯಸ್ಸಿನಲ್ಲಿ ಬುಧವಾರ ನಿಧನರಾದರು. 1997, 1999 ಮತ್ತು 2000 ನಡುವೆ ಭಾರತೀಯ ತಂಡದ ಮುಖ್ಯ ಕೋಚ್ ಆಗಿದ್ದ ಗಾಯಕ್ವಾಡ್ ಒಂದು ವರ್ಷದಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಲಂಡನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೂ ಚಿಕಿತ್ಸೆ ಫಲ ನೀಡಲಿಲ್ಲ. ರಕ್ತದ ಕ್ಯಾನ್ಸರ್ ಮಾರಣಾಂತಿಕ ಕ್ಯಾನ್ಸರ್‌ಗಳಲ್ಲಿ ಒಂದಾಗಿದೆ. ಹಾಗಾದರೆ ರಕ್ತದ ಕ್ಯಾನ್ಸರ್ ಎಂದರೇನು, ಅದರ ಲಕ್ಷಣಗಳು ಯಾವುದು ಎನ್ನುವ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.

ರಕ್ತದ ಕ್ಯಾನ್ಸರ್‌ಗೆ ಏನು ಕಾರಣ?

ದೇಹವು ರಕ್ತ ಕಣಗಳನ್ನು ಹೇಗೆ ಉತ್ಪಾದಿಸುತ್ತದೆ ಮತ್ತು ಅವು ಎಷ್ಟು ಚೆನ್ನಾಗಿ ಕೆಲಸ ಮಾಡುತ್ತದೆ ಎಂಬುದರ ಮೇಲೆ ಪರಿಣಾಮ ಬೀರುವ ರಕ್ತ ಕ್ಯಾನ್ಸರ್ ಮೂಳೆಯಲ್ಲಿ ಪ್ರಾರಂಭವಾಗುತ್ತದೆ. ಮೂಳೆಗಳ ಮಧ್ಯಭಾಗದಲ್ಲಿರುವ ಸ್ಪಾಂಜ್ ನಂತಹ ವಸ್ತು ಕಾಂಡಕೋಶಗಳನ್ನು ಪ್ರಬುದ್ಧಗೊಳಿಸುತ್ತದೆ. ಕೆಂಪು ರಕ್ತ ಕಣಗಳು, ಬಿಳಿ ರಕ್ತ ಕಣಗಳು ಮತ್ತು ಪ್ಲೇಟ್ಲೆಟ್ ಗಳಾಗಿ ಮಾರ್ಪಡುವಂತೆ ಮಾಡುತ್ತದೆ.

ಸಾಮಾನ್ಯ ರಕ್ತ ಕಣಗಳು ಸೋಂಕಿನ ವಿರುದ್ಧ ಹೋರಾಡುತ್ತವೆ. ದೇಹದಾದ್ಯಂತ ಆಮ್ಲಜನಕವನ್ನು ಸಾಗಿಸುತ್ತವೆ ಮತ್ತು ರಕ್ತಸ್ರಾವವನ್ನು ನಿಯಂತ್ರಿಸುತ್ತವೆ. ಆದರೆ ದೇಹವು ರಕ್ತ ಕಣಗಳನ್ನು ತಯಾರಿಸುವಾಗ ಏನಾದರೂ ಅಡ್ಡಿಯಾದರೆ ಅದು ರಕ್ತದ ಕ್ಯಾನ್ಸರ್ ಆಗಿ ಪರಿವರ್ತನೆಯಾಗುತ್ತದೆ.

ವೈದ್ಯರ ಪ್ರಕಾರ, ರಕ್ತದ ಕ್ಯಾನ್ಸರ್ ಹೊಂದಿರುವವರಲ್ಲಿ ಅಸಹಜ ರಕ್ತ ಕಣಗಳು ಸಾಮಾನ್ಯ ರಕ್ತ ಕಣಗಳನ್ನು ನಾಶಪಡಿಸುತ್ತವೆ. ಇದು ವೈದ್ಯಕೀಯ ಪರಿಸ್ಥಿತಿಗಳ ಏರಿಳಿತದ ಪರಿಣಾಮವನ್ನು ಉಂಟುಮಾಡುತ್ತದೆ.

Blood Cancer
Blood Cancer


ಭಾರತದಲ್ಲೇ ಹೆಚ್ಚು

ಅಂಕಿಅಂಶಗಳ ಪ್ರಕಾರ ಭಾರತವು ವಿಶ್ವದಲ್ಲೇ ಅತಿ ಹೆಚ್ಚು ರಕ್ತದ ಕ್ಯಾನ್ಸರ್ ಪ್ರಮಾಣವನ್ನು ಹೊಂದಿದೆ. ವರ್ಷಕ್ಕೆ 1 ಲಕ್ಷದಿಂದ 5.5 ಲಕ್ಷ ಜನರಲ್ಲಿ ರಕ್ತ ಕ್ಯಾನ್ಸರ್ ಕಾಣಿಸಿಕೊಳ್ಳುತ್ತಿದೆ. ಪ್ರತಿ ವರ್ಷ ಕನಿಷ್ಠ 80,000 ಹೊಸ ಪ್ರಕರಣಗಳು ಅಥವಾ ಪ್ರತಿ ಏಳು ಸೆಕೆಂಡಿಗೆ ಒಂದು ಹೊಸ ಪ್ರಕರಣ ದಾಖಲಾಗುತ್ತಿದೆ. 2022ರಲ್ಲಿ ಭಾರತದಲ್ಲಿ 70,000ಕ್ಕೂ ಹೆಚ್ಚು ಜನರು ರಕ್ತದ ಕ್ಯಾನ್ಸರ್‌ನಿಂದ ಸಾವನ್ನಪ್ಪಿದರು.

ಇದರಲ್ಲಿ ಮೂರು ವಿಧ

ರಕ್ತ ಕ್ಯಾನ್ಸರ್ ಮೂರು ವಿಧವನ್ನು ಹೊಂದಿದ್ದು, ಇದರಲ್ಲಿ ಉಪವಿಧಗಳೂ ಸೇರಿವೆ.

ಲ್ಯುಕೇಮಿಯಾ: ಮಕ್ಕಳು ಮತ್ತು ಹದಿಹರೆಯದವರಲ್ಲಿ ಇದು ಸಾಮಾನ್ಯ ರಕ್ತ ಕ್ಯಾನ್ಸರ್ ಆಗಿದೆ. ಲ್ಯುಕೇಮಿಯಾದ ವಿಧಗಳಲ್ಲಿ ತೀವ್ರವಾದ ಲಿಂಫೋಬ್ಲಾಸ್ಟಿಕ್ ಲ್ಯುಕೇಮಿಯಾ, ತೀವ್ರವಾದ ಮೈಲೋಯ್ಡ್ ಲ್ಯುಕೇಮಿಯಾ, ದೀರ್ಘಕಾಲದ ಲಿಂಫೋಸೈಟಿಕ್ ಲ್ಯುಕೇಮಿಯಾ ಮತ್ತು ದೀರ್ಘಕಾಲದ ಮೈಲೋಜೆನಸ್ ಲ್ಯುಕೇಮಿಯಾ ಸೇರಿವೆ.

ಲಿಂಫೋಮಾ: ಇದು ದುಗ್ಧರಸ ವ್ಯವಸ್ಥೆಯ ಕ್ಯಾನ್ಸರ್. ಇದು ಮೂಳೆ ಮಜ್ಜೆಯನ್ನು ಒಳಗೊಂಡಿರುತ್ತದೆ. ಇದರ ವಿಧಗಳಲ್ಲಿ ಹಾಡ್ಗ್ ಕಿನ್ ಲಿಂಫೋಮಾ, ಹಾಡ್ಗ್ ಕಿನ್ ಅಲ್ಲದ ಲಿಂಫೋಮಾ, ಬಿ-ಸೆಲ್ ಲಿಂಫೋಮಾ ಮತ್ತು ಚರ್ಮದ ಟಿ-ಸೆಲ್ ಲಿಂಫೋಮಾ ಸೇರಿವೆ.

ಮೈಲೋಮಾ: ಮೈಲೋಮಾ ಮೂಳೆ ಮಜ್ಜೆಯಲ್ಲಿ ಪ್ರಾರಂಭವಾಗುತ್ತದೆ. ಇದು ಪ್ಲಾಸ್ಮಾ ಜೀವಕೋಶಗಳ ಮೇಲೆ ಪರಿಣಾಮ ಬೀರುವ ಕ್ಯಾನ್ಸರ್ ಆಗಿದೆ. ಮಲ್ಟಿಪಲ್ ಮೈಲೋಮಾ ಅತ್ಯಂತ ಸಾಮಾನ್ಯವಾದ ಮೈಲೋಮಾ ವಿಧವಾಗಿದೆ. ಮೈಲೋಮಾ ರೋಗ ನಿರ್ಣಯ ಮಾಡಿದ ಅರ್ಧಕ್ಕಿಂತ ಹೆಚ್ಚು ಜನರು ರೋಗ ನಿರ್ಣಯದ ಅನಂತರ ಕನಿಷ್ಠ ಐದು ವರ್ಷಗಳವರೆಗೆ ಬದುಕುತ್ತಾರೆ.

Blood Cancer
Blood Cancer


ಯಾಕೆ ಬರುತ್ತದೆ?

ರಕ್ತದ ಕ್ಯಾನ್ಸರ್ ಯಾಕೆ ಬರುತ್ತದೆ ಎಂಬುದಕ್ಕೆ ಖಚಿತ ಕಾರಣವಿಲ್ಲ. ಆದರೂ ಇದಕ್ಕೆ ಮುಖ್ಯವಾಗಿ ಡಿಎನ್ಎ ಕಾರಣ ಎಂದು ಅಧ್ಯಯನಗಳು ಹೇಳಿವೆ.

ಡಿಎನ್‌ಎ ರಕ್ತ ಕಣಗಳನ್ನು ಯಾವಾಗ ವಿಭಜಿಸಬೇಕು ಅಥವಾ ಗುಣಿಸಬೇಕು ಮತ್ತು ಯಾವಾಗ ಸಾಯಬೇಕು ಎಂದು ನಿರ್ಧರಿಸುತ್ತದೆ. ಆದ್ದರಿಂದ ಡಿಎನ್‌ಎ ನಿಮ್ಮ ಜೀವಕೋಶಗಳಿಗೆ ಹೊಸ ಸೂಚನೆಗಳನ್ನು ನೀಡಿದಾಗ ದೇಹವು ಅಸಹಜ ರಕ್ತ ಕಣಗಳನ್ನು ಅಭಿವೃದ್ಧಿಪಡಿಸುತ್ತದೆ. ಅದು ಸಾಮಾನ್ಯಕ್ಕಿಂತ ವೇಗವಾಗಿ ಬೆಳೆಯುತ್ತದೆ. ಗುಣಿಸುತ್ತದೆ ಮತ್ತು ಕೆಲವೊಮ್ಮೆ ಸಾಮಾನ್ಯಕ್ಕಿಂತ ಹೆಚ್ಚು ಕಾಲ ಬದುಕುತ್ತದೆ. ಸಾಮಾನ್ಯ ರಕ್ತ ಕಣಗಳು ನಿರಂತರವಾಗಿ ಬೆಳೆಯುತ್ತಿರುವ ಅಸಹಜ ಕೋಶಗಳ ಗುಂಪಿನಲ್ಲಿ ಕಳೆದುಹೋಗುತ್ತವೆ. ಅದು ಸಾಮಾನ್ಯ ಕೋಶಗಳನ್ನು ಒಟ್ಟುಗೂಡಿಸುತ್ತದೆ ಮತ್ತು ಮೂಳೆ ಮಜ್ಜೆಯಲ್ಲಿ ಜಾಗವನ್ನು ಏಕಸ್ವಾಮ್ಯಗೊಳಿಸುತ್ತದೆ. ಅಂತಿಮವಾಗಿ ಮೂಳೆ ಮಜ್ಜೆಯು ಕಡಿಮೆ ಸಾಮಾನ್ಯ ಜೀವಕೋಶಗಳನ್ನು ಉತ್ಪಾದಿಸುತ್ತದೆ. ಆದ್ದರಿಂದ ಆನುವಂಶಿಕ ಬದಲಾವಣೆಯು ಮೂರು ವಿಧದ ರಕ್ತದ ಕ್ಯಾನ್ಸರ್ ಗೆ ಕಾರಣವಾಗುತ್ತದೆ.

ರಕ್ತ ಕ್ಯಾನ್ಸರ್ ಲಕ್ಷಣಗಳೇನು?

ರಕ್ತದ ಕ್ಯಾನ್ಸರ್ ಲಕ್ಷಣಗಳು ಎಲ್ಲರಲ್ಲೂ ಒಂದೇ ರೀತಿ ಇರುವುದಿಲ್ಲ ಎನ್ನುತ್ತಾರೆ ತಜ್ಞರು. ಆದರೂ ಮೂರು ಸಾಮಾನ್ಯವಾಗಿರುವ ಕೆಲವು ಚಿಹ್ನೆಗಳನ್ನು ಹೊಂದಿರುತ್ತದೆ.

ಆಯಾಸ, ಕಡಿಮೆ ರೋಗನಿರೋಧಕ ಶಕ್ತಿಯಿಂದಾಗಿ ನಿರಂತರ ಮತ್ತು ಹೆಚ್ಚಿನ ಜ್ವರ, ರಾತ್ರಿ ಬೆವರುವಿಕೆ, ಅಸಾಮಾನ್ಯ ರಕ್ತಸ್ರಾವ, ಅನಿರೀಕ್ಷಿತ ತೂಕ ನಷ್ಟ, ಆಗಾಗ್ಗೆ ಸೋಂಕುಗಳು, ಊದಿಕೊಂಡ ದುಗ್ಧರಸ ಗ್ರಂಥಿಗಳು, ಯಕೃತ್ತು ತೊಂದರೆಗಳು, ಮೂಳೆ ನೋವು ಕಾಣಿಸಿಕೊಳ್ಳುತ್ತವೆ.

ಇದನ್ನೂ ಓದಿ: Condom Cause Cancer: ಕಾಂಡೋಮ್, ಲೂಬ್ರಿಕೆಂಟ್‍ ಬಳಸಿದರೂ ಕ್ಯಾನ್ಸರ್‌! ಅಧ್ಯಯನ ವರದಿಯಲ್ಲಿ ಆಘಾತಕಾರಿ ಸಂಗತಿ

ರಕ್ತ ಕ್ಯಾನ್ಸರ್‌ನ ಅನೇಕ ರೋಗಲಕ್ಷಣಗಳು ಸಾಮಾನ್ಯ ಕಾಯಿಲೆಗಳಿಗೂ ಹೋಲುತ್ತವೆ. ಆದ್ದರಿಂದ ಈ ಯಾವುದೇ ರೋಗಲಕ್ಷಣಗಳನ್ನು ಹೊಂದಿರುವವರು ರಕ್ತದ ಕ್ಯಾನ್ಸರ್ ಹೊಂದಿದ್ದಾರೆ ಎಂದೇ ಅರ್ಥವಲ್ಲ. ಆದರೆ ಕೆಲವು ವಾರಗಳಿಗಿಂತ ಹೆಚ್ಚು ಕಾಲ ದೇಹದಲ್ಲಿ ರೋಗಲಕ್ಷಣಗಳು ಅಥವಾ ಬದಲಾವಣೆಗಳನ್ನು ಗಮನಿಸಿದರೆ ವೈದ್ಯರಿಂದ ಪರೀಕ್ಷಿಸಿಕೊಳ್ಳುವುದು ಒಳ್ಳೆಯದು.

Continue Reading
Advertisement
Woman Deliver Baby in Auto
ಕರ್ನಾಟಕ2 mins ago

Woman Deliver Baby in Auto: ಆಸ್ಪತ್ರೆಗೆ ಹೋಗುವಾಗ ಆಟೋದಲ್ಲೇ ಗಂಡು ಮಗುವಿಗೆ ಜನ್ಮ ನೀಡಿದ ಮಹಿಳೆ

Mangaluru Train Timings
Latest16 mins ago

Mangaluru Train Timings: ಮಂಗಳೂರು-ಬೆಂಗಳೂರು ರೈಲು ವೇಳಾಪಟ್ಟಿ ಬದಲು; ಪ್ರಯಾಣಿಕರಿಗೆ ಏನು ಲಾಭ?

BSNL 5G Service
ಪ್ರಮುಖ ಸುದ್ದಿ24 mins ago

BSNL 5G Service : ಬಿಎಸ್​ಎನ್​​ಎಲ್​ 5ಜಿ ಸಿಮ್​ಕಾರ್ಡ್​ಗಳು ವಿತರಣೆಗೆ ರೆಡಿ​; ಬೆಂಗಳೂರಿನಲ್ಲಿಯೂ ಲಭ್ಯವೇ?

karnataka Rain
ಮಳೆ27 mins ago

Karnataka Rain : ಹಾಸನದಲ್ಲಿ ಗಾಳಿ- ಮಳೆಗೆ ಕುಸಿದು ಬಿದ್ದ ಮನೆ; ಮಂಗಳೂರಿನಲ್ಲಿ ಜಾನುವಾರುಗಳು ಸಾವು

Haris Rauf
ಕ್ರೀಡೆ28 mins ago

Haris Rauf: ʼದಿ ಹಂಡ್ರೆಡ್‌ʼ ಕ್ರಿಕೆಟ್‌ ಲೀಗ್‌ ಆಡುತ್ತಿದ್ದ ಪಾಕ್‌ ವೇಗಿ ರೌಫ್‌ಗೆ ಕೊಹ್ಲಿ ಬಾರಿಸಿದ ಸಿಕ್ಸರ್‌ ನೆನಪಿಸಿದ ಅಭಿಮಾನಿ; ವಿಡಿಯೊ ವೈರಲ್‌

Wayanad Tragedy
Latest30 mins ago

Wayanad Tragedy: ತಬ್ಬಲಿ ಶಿಶುಗಳಿಗೆ ಎದೆಹಾಲು ನೀಡಿ ಪೋಷಿಸಿದ ʼಮಹಾತಾಯಿʼಗೆ ವ್ಯಾಪಕ ಪ್ರಶಂಸೆ

Western Ghats
ಕರ್ನಾಟಕ51 mins ago

Western Ghats: ಪಶ್ಚಿಮ ಘಟ್ಟದಲ್ಲಿನ ಅನಧಿಕೃತ ಹೋಮ್ ಸ್ಟೇ‌, ರೆಸಾರ್ಟ್ ತೆರವಿಗೆ ಸರ್ಕಾರ ಸೂಚನೆ

Parliament Session
ರಾಜಕೀಯ54 mins ago

Parliament Session: ಪೈರಸಿಯಿಂದ ಚಿತ್ರೋದ್ಯಮಕ್ಕೆ 20,000 ಕೋಟಿ ರೂ. ನಷ್ಟ; ಸಂಸತ್‌ನಲ್ಲಿ ಕಳವಳ

Rajeev Chandrasekhar
ದೇಶ59 mins ago

Rajeev Chandrasekhar: 10 ವರ್ಷಗಳಲ್ಲಿ 80 ಕೋಟಿ ಮಂದಿ ಬಡತನದಿಂದ ಹೊರಗೆ; ವಿಶ್ವಸಂಸ್ಥೆಯಲ್ಲೇ ಮೋದಿ ಆಡಳಿತಕ್ಕೆ ಪ್ರಶಂಸೆ

Teacher Transfer Counselling
ಬೆಂಗಳೂರು1 hour ago

Teachers Transfer : ಇಂದಿನಿಂದ ಶಿಕ್ಷಕರ ವರ್ಗಾವಣೆ ಕೌನ್ಸೆಲಿಂಗ್‌ ಶುರು; ವಿವಿಧ ನೇಮಕಾತಿ ಪರೀಕ್ಷೆಗಳ ವೇಳಾಪಟ್ಟಿ ಪ್ರಕಟ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ1 day ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ1 day ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ1 day ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

karnataka Rain
ಮಳೆ3 days ago

Karnataka rain : ಭದ್ರಾ ನದಿಯಲ್ಲಿ ಕೊಚ್ಚಿ ಹೋದ ಹಸು; ಬೈಂದೂರಿನಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ

Karnataka Rain
ಮಳೆ3 days ago

Karnataka Rain : ಭಾರಿ ಮಳೆಗೆ ಬಾಳೆಹೊನ್ನೂರು ಮುಳುಗಡೆ; ನೆರೆಗೆ ಬೋಟ್‌ ಮೊರೆ ಹೋದ ಜನರು

Bharachukki falls
ಚಾಮರಾಜನಗರ3 days ago

Bharachukki Falls : ಭರಚುಕ್ಕಿ ಜಲಪಾತಕ್ಕೆ ಕಳ್ಳ ಮಾರ್ಗದಿಂದ ಹೋದೋರಿಗೆ ಬಸ್ಕಿ ಹೊಡೆಸಿದ ಪೊಲೀಸರು!

karnataka Rain
ಮಳೆ4 days ago

Karnataka Rain: ಮತ್ತೆ ಶುರು ಮಳೆ ಅಬ್ಬರ; ಗಾಳಿಗೆ ಹಾರಿ ಹೋದ ಮನೆಗಳ ಚಾವಣಿ, ಶಿರಾಡಿಘಾಟ್‌ನಲ್ಲಿ ಮತ್ತೆ ಭೂ ಕುಸಿತ

Elephant combing Makna elephant captured near Bannerghatta
ಬೆಂಗಳೂರು ಗ್ರಾಮಾಂತರ4 days ago

Elephant combing: ಭೀಮ, ಮಹೇಂದ್ರರ ಮುಂದೆ ಮಂಡಿಯೂರಿದ ಮಕ್ನಾ ಆನೆ; ಹೇಗಿತ್ತು ಗೊತ್ತಾ ಕಾರ್ಯಾಚರಣೆ

karnataka rain
ಮಳೆ4 days ago

Karnataka rain: ಪ್ರವಾಹದ ಭೀಕರತೆ; ಹಳ್ಳದಲ್ಲಿ ತೇಲಿಬಂದ ಎಮ್ಮೆಗಳ ಕಳೇಬರ

Tungabhadra Dam
ಕೊಪ್ಪಳ5 days ago

Tungabhadra Dam: ಕಾಲುವೆಯಲ್ಲಿ ಬಾಲಕರ ಈಜಾಟ; ಅಧಿಕಾರಿಗಳಿಗೆ ಪೀಕಲಾಟ!

ಟ್ರೆಂಡಿಂಗ್‌