Wayanad Tragedy: ತಬ್ಬಲಿ ಶಿಶುಗಳಿಗೆ ಎದೆಹಾಲು ನೀಡಿ ಪೋಷಿಸಿದ ʼಮಹಾತಾಯಿʼಗೆ ವ್ಯಾಪಕ ಪ್ರಶಂಸೆ - Vistara News

Latest

Wayanad Tragedy: ತಬ್ಬಲಿ ಶಿಶುಗಳಿಗೆ ಎದೆಹಾಲು ನೀಡಿ ಪೋಷಿಸಿದ ʼಮಹಾತಾಯಿʼಗೆ ವ್ಯಾಪಕ ಪ್ರಶಂಸೆ

Wayanad Tragedy: ತಾಯಿಯಿಲ್ಲದ ಮಕ್ಕಳು ಪಾಡು ನಿಜಕ್ಕೂ ಶೋಚನೀಯವಾಗಿರುತ್ತದೆ. ಕೇರಳದ ವಯನಾಡಿನಲ್ಲಿ ಮಳೆಯಿಂದಾಗಿ ಭೂಕುಸಿತ ಉಂಟಾಗಿ ಅನೇಕ ಸಾವು ನೋವಾಗಿದೆ. ಸಾವನಪ್ಪಿದವರ ಸಂಖ್ಯೆ ದಿನ ದಿನಕ್ಕೇ ಏರುತ್ತಿದೆ. ಇದರಿಂದ ಅನೇಕ ಮಕ್ಕಳು ತಂದೆತಾಯಿಯನ್ನು ಕಳೆದುಕೊಂಡು ಅನಾಥರಾಗಿದ್ದಾರೆ. ಈ ನಡುವೆ ತಾಯಿಯೊಬ್ಬಳು ಅನಾಥರಾದ ಮಕ್ಕಳಿಗೆ ಎದೆ ಹಾಲುಣಿಸಿ ಮಾನವೀಯತೆ ಮರೆದಿದ್ದಾಳೆ. ಈಕೆಯ ಈ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

VISTARANEWS.COM


on

Wayanad Tragedy
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo


ಭಾರೀ ಮಳೆಯಿಂದಾಗಿ ವಯನಾಡ್ ಜಿಲ್ಲೆಯಲ್ಲಿ ಭೂಕುಸಿತ ಉಂಟಾಗಿ ಅನೇಕ ಸಾವು ನೋವಾಗಿದೆ. ಸಾವನಪ್ಪಿದವರ ಸಂಖ್ಯೆ ದಿನ ದಿನಕ್ಕೇ ಏರುತ್ತಿದೆ. ಇದರಿಂದ ಅನೇಕ ಮಕ್ಕಳು ತಂದೆತಾಯಿಯನ್ನು ಕಳೆದುಕೊಂಡು ಅನಾಥರಾಗಿದ್ದಾರೆ. ಪೋಷಕರು ತಮ್ಮ ಮಕ್ಕಳನ್ನು ಕಳೆದುಕೊಂಡು ಗೋಳಾಡುತ್ತಿದ್ದಾರೆ. ವಯನಾಡ್ (Wayanad Tragedy )ಜಿಲ್ಲೆಯಲ್ಲಿ ಜನರ ಗೋಳಾಟ ಮುಗಿಲು ಮುಟ್ಟುತ್ತಿದೆ.

ಈ ನಡುವೆ ತಾಯಿಯೊಬ್ಬಳು ಅನಾಥರಾದ ಮಕ್ಕಳಿಗೆ ಎದೆ ಹಾಲುಣಿಸಿ ಮಾನವೀಯತೆ ಮೆರೆದಿದ್ದಾಳೆ. ತಾಯಿ ಎಂದರೆ ಕರುಣಾಮಯಿ ಎಂಬುದಕ್ಕೆ ಆಕೆ ಉದಾಹರಣೆಯಾಗಿದ್ದಾಳೆ. ಈಕೆ ಇಡುಕ್ಕಿಯ ನಿವಾಸಿ, ಇಬ್ಬರು ಮಕ್ಕಳ ತಾಯಿ. ನೂರಾರು ಜನರನ್ನು ಬಲಿ ತೆಗೆದುಕೊಂಡ ದುರಂತದಲ್ಲಿ ತಾಯಿಯನ್ನು ಕಳೆದುಕೊಂಡ ಶಿಶುಗಳಿಗೆ ನಿಸ್ವಾರ್ಥವಾಗಿ ಎದೆ ಹಾಲನ್ನು ನೀಡಿದ್ದಾಳೆ. ಈ ಮಹಿಳೆಯ ಈ ಮಹಾ ಕಾರ್ಯಕ್ಕೆ ಕೇರಳಾದ್ಯಂತ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಮಹಿಳೆ, ಆಕೆಯ ಪತಿ ಮತ್ತು 4 ವರ್ಷ ಮತ್ತು 4 ತಿಂಗಳ ಇಬ್ಬರು ಮಕ್ಕಳು ಈಗಾಗಲೇ ಮಧ್ಯ ಕೇರಳದ ಇಡುಕ್ಕಿಯಲ್ಲಿರುವ ತಮ್ಮ ಮನೆಯಿಂದ ವಯನಾಡ್‌ಗೆ ಹೋಗಿದ್ದಾರೆ. ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಆ ಮಹಿಳೆ, ಇಬ್ಬರು ಮಕ್ಕಳ ತಾಯಿಯಾದ ತನಗೆ ತಾಯಿ ಇಲ್ಲದ ಮಕ್ಕಳ ನೋವು, ಅವರನ್ನು ನೋಡಿಕೊಳ್ಳುವುದು ಎಷ್ಟು ಕಷ್ಟ ಎಂದು ತಿಳಿದಿದೆ. ಈ ದುರಂತದಲ್ಲಿ ಚಿಕ್ಕ ಮಕ್ಕಳು ತನ್ನ ತಾಯಿಯನ್ನು ಕಳೆದುಕೊಂಡಿದ್ದಾರೆ ಎಂಬ ಸುದ್ದಿ ಕೇಳಿ ಈ ಬಗ್ಗೆ ಪತಿಯ ಬಳಿ ಚರ್ಚಿಸಿ ಅವರ ಬೆಂಬಲದೊಂದಿಗೆ ತಾನು ಈ ನಿರ್ಧಾರ ತೆಗೆದುಕೊಂಡೆ ಎಂಬುದಾಗಿ ಹೇಳಿದ್ದಾರೆ.

Wayanad Tragedy
Wayanad Tragedy

ಧಾರಾಕಾರ ಮಳೆಯಿಂದಾಗಿ ಜುಲೈ 30ರಂದು ಕೇರಳದ ಗುಡ್ಡಗಾಡು ವಯನಾಡ್ ಜಿಲ್ಲೆಯ ವೈತಿರಿ ತಾಲ್ಲೂಕಿನ ಸುಮಾರು ಮೂರು ಹಳ್ಳಿಗಳಾದ ಮುಂಡಕ್ಕೈ, ಚೂರಲ್ಮಾಲಾ, ಅಟ್ಟಮಾಲಾದಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಸತ್ತವರ ಸಂಖ್ಯೆ 200 ದಾಟಿದೆ. ಇನ್ನೂರಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಮುಂಜಾನೆ 2 ಮತ್ತು 4.10ರ ಸುಮಾರಿಗೆ ಭೂಕುಸಿತ ಸಂಭವಿಸಿದ್ದು, ಈ ಸಮಯದಲ್ಲಿ ಜನರು ಮಲಗಿದ್ದರಿಂದ ಹೆಚ್ಚಿನ ಸಂಖ್ಯೆಯ ಸಾವುನೋವುಗಳಿಗೆ ಕಾರಣವಾಗಿದೆ.
ಇದನ್ನೂ ಓದಿ: ಈ ಮುದ್ದು ವಿದ್ಯಾರ್ಥಿನಿಯರ ನಗು, ಸೈಕಲ್‌ ಸವಾರಿ ಇನ್ನೆಲ್ಲಿ? ಮಣ್ಣಿನಡಿ ಸಮಾಧಿ; ಕಣ್ಣಂಚಲಿ ನೀರು ತರಿಸುವ ವಿಡಿಯೊ

ಸಂತ್ರಸ್ತ ಮುಂಡಕ್ಕೈ, ಚೂರಲ್ಮಾಲಾ ಮತ್ತು ಅತ್ತಮಾಲಾ ಪ್ರದೇಶಗಳಲ್ಲಿ ರಾಜ್ಯ ಮತ್ತು ಕೇಂದ್ರ ಪಡೆಗಳನ್ನು ಒಳಗೊಂಡ ತೀವ್ರ ರಕ್ಷಣಾ ಪ್ರಯತ್ನ ನಡೆಯುತ್ತಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಮತ್ತು ಗಾಯಗೊಂಡವರಿಗೆ 50 ಸಾವಿರ ರೂ. ಪರಿಹಾರ ಘೋಷಿಸಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವಿದೇಶ

Breast Ironing: ಆಫ್ರಿಕಾದಲ್ಲಿದೆ ಬಿಸಿ ವಸ್ತುಗಳಿಂದ ಯುವತಿಯರ ಸ್ತನ ಚಪ್ಪಟೆಗೊಳಿಸುವ ಕ್ರೂರ ಪದ್ಧತಿ!

breast ironing tradition: ವಿಶ್ವದಾದ್ಯಂತ ವಿಚಿತ್ರ ಸಂಪ್ರದಾಯಗಳಿವೆ. ಪ್ರತಿಯೊಂದು ಸಂಪ್ರದಾಯಕ್ಕೂ ತಮ್ಮದೇ ಆದ ಕಾರಣಗಳಿದ್ದರೂ ಬಹುತೇಕ ಸಂಪ್ರದಾಯಗಳು ಹೆಣ್ಣು ಮಕ್ಕಳ ಮೇಲೆ ನೋವುಂಟು ಮಾಡುವಂತದ್ದೇ ಆಗಿರುತ್ತದೆ. ಆಫ್ರಿಕದಲ್ಲೊಂದು ಸಂಪ್ರದಾಯ (African Culture) ಹೆಣ್ಣು ಮಕ್ಕಳ ದೈಹಿಕ, ಮಾನಸಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮವನ್ನು ಬಿರುತ್ತಿದ್ದರೂ ಇನ್ನೂ ಹೆಚ್ಚಿನ ಭಾಗಗಳಲ್ಲಿ ಆಚರಣೆಯಲ್ಲಿದೆ. ಇದೇನಿದು ಬ್ರೆಸ್ಟ್‌ ಐರೊನಿಂಗ್‌ ಪದ್ಧತಿ? ಈ ಕುರಿತ ಮಾಹಿತಿ ಇಲ್ಲಿದೆ.

VISTARANEWS.COM


on

By

African Culture
Koo

ವಿಶ್ವದ ಪ್ರತಿಯೊಂದು ದೇಶವೂ ತನ್ನದೇ ಆದ ಸಂಸ್ಕೃತಿ, ಆಚರಣೆಗಳನ್ನು (Culture, ritual) ಹೊಂದಿರುತ್ತದೆ. ಕೆಲವೊಂದು (Breast Ironing) ವಿಚಿತ್ರ ಆಚರಣೆಗಳೂ ಇರುತ್ತವೆ. ಇದರಲ್ಲಿ ಆಫ್ರಿಕಾದಲ್ಲಿ (African Culture) ಯುವತಿಯರಿಗೆ ನಡೆಸುವ ಬ್ರೆಸ್ಟ್ ಐರನಿಂಗ್ (Breast Ironing) ಕೂಡ ಒಂದು. ಇದನ್ನು ಸ್ತನವನ್ನು ಚಪ್ಪಟೆಗೊಳಿಸುವುದು ಎನ್ನಲಾಗುತ್ತದೆ.

ಯುವತಿಯರ ಅಭಿವೃದ್ಧಿ ಹೊಂದುತ್ತಿರುವ ಸ್ತನಗಳ ಮೇಲೆ ಬಿಸಿಯಾದ ವಸ್ತುಗಳಿಂದ ಬಡಿಯುವುದು ಮತ್ತು ಮಸಾಜ್ ಮಾಡುವ ಕ್ರಮ ಇದಾಗಿದೆ. ಇದನ್ನು ತಾಯಿ ಅಥವಾ ಅಜ್ಜಿಯರಂತಹ ನಿಕಟ ಸ್ತ್ರೀ ಸಂಬಂಧಿಗಳು ತಮ್ಮ ಹೆಣ್ಣು ಮಕ್ಕಳಿಗೆ ಮಾಡಿಸುತ್ತಾರೆ. ಈ ಸಾಂಪ್ರದಾಯಿಕ ಅಭ್ಯಾಸವು ಲೈಂಗಿಕ ಕಿರುಕುಳ, ಸಣ್ಣ ವಯಸ್ಸಿನಲ್ಲಿ ಗರ್ಭಧಾರಣೆ ಮತ್ತು ಬಲವಂತದ ಮದುವೆಯಿಂದ ಹುಡುಗಿಯರನ್ನು ರಕ್ಷಿಸುವ ಗುರಿಯನ್ನು ಹೊಂದಿದೆ. ಈ ರೀತಿ ಮಾಡುವುದರಿಂದ ಅವರು ಪುರುಷರಿಗೆ ಕಡಿಮೆ ಆಕರ್ಷಕವಾಗಿರುತ್ತಾರೆ ಎನ್ನುವ ನಂಬಿಕೆ ಆ ಜನರಲ್ಲಿದೆ.

ಸ್ತನವನ್ನು ಚಪ್ಪಟೆಗೊಳಿಸುವ ಈ ಸಂಪ್ರದಾಯವು ಯುವತಿಯರ ದೈಹಿಕ ಮತ್ತು ಮಾನಸಿಕ ಮೇಲೆ ಗಂಭೀರ ಹಾನಿಯನ್ನು ಉಂಟು ಮಾಡುತ್ತದೆ. ಇದರಿಂದ ಸಾವನ್ನಪ್ಪುವವರೂ ಇದ್ದಾರೆ. ಆದರೆ ಬದುಕುಳಿದವರ ಮೇಲೆ ದೀರ್ಘಕಾಲ ಇದರ ಗುರುತು ಉಳಿದು ಬಿಡುತ್ತದೆ.

African Culture
African Culture


ಸಾಂಸ್ಕೃತಿಕ ಸಮರ್ಥನೆ

ಇದನ್ನು ಕ್ಯಾಮರೂನ್‌ನಲ್ಲಿ ಹೆಚ್ಚಾಗಿ ಮಾಡಲಾಗುತ್ತದೆ. ಇತರ ಆಫ್ರಿಕನ್ ದೇಶಗಳಾದ ನೈಜೀರಿಯಾ, ಟೋಗೊ, ಗಿನಿಯಾ, ಕೋಟ್ ಡಿ’ಐವೊಯಿರ್, ಕೀನ್ಯಾ ಮತ್ತು ಜಿಂಬಾಬ್ವೆಯಲ್ಲೂ ಈ ಸಂಪ್ರದಾಯವಿದೆ. ನಗರ ಪ್ರದೇಶಗಳಲ್ಲಿ ಲೈಂಗಿಕ ದುರ್ಬಳಕೆಯ ಅಪಾಯ ಹೆಚ್ಚಾಗಿರುವುದರಿಂದ ಈ ಸಂಪ್ರದಾಯ ಹೆಚ್ಚು ಪ್ರಚಲಿತವಾಗಿದೆ.

ಸ್ತನವನ್ನು ಚಪ್ಪಟೆಗೊಳಿಸಲು ಮರದ ಕೀಟ, ಎಲೆ, ಬಾಳೆಹಣ್ಣು, ತೆಂಗಿನ ಚಿಪ್ಪು, ರುಬ್ಬುವ ಕಲ್ಲು, ಕಲ್ಲಿದ್ದಲಿನ ಮೇಲೆ ಬಿಸಿ ಮಾಡಲಾದ ಸುತ್ತಿಗೆಗಳನ್ನು ಬಳಸಲಾಗುತ್ತದೆ. ಈ ಪ್ರಕ್ರಿಯೆಯು ವಾರಗಳಿಂದ ಹಲವಾರು ತಿಂಗಳುಗಳವರೆಗೆ ನಡೆಯುತ್ತದೆ.

African Culture
African Culture

ಇತಿಹಾಸದಲ್ಲೂ ಉಲ್ಲೇಖ

ಸ್ತನವನ್ನು ಚಪ್ಪಟೆಗೊಳಿಸುವ ಈ ಅಭ್ಯಾಸವನ್ನು ಶುಶ್ರೂಷಾ ನೋವನ್ನು ನಿವಾರಿಸಲು ಪುರಾತನ ಕಾಲದಿಂದಲೂ ಮಾಡಲಾಗುತ್ತಿದೆ. ಈಗ ಇದು ಯುವತಿಯರ ಮೇಲೆ ನಿಯಂತ್ರಣ ಬೀರುವ ವಿಧಾನವಾಗಿ ಪರಿವರ್ತನೆಯಾಗಿದೆ ಎನ್ನಲಾಗುತ್ತದೆ.

ಆರೋಗ್ಯದ ಮೇಲೆ ಪರಿಣಾಮ

ಸ್ತನವನ್ನು ಚಪ್ಪಟೆಗೊಳಿಸುವುದು ತೀವ್ರ ತರದ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ತೀವ್ರವಾದ ನೋವು, ಅಂಗಾಂಶ ಹಾನಿಯನ್ನು ಉಂಟು ಮಾಡುತ್ತದೆ. ದೈಹಿಕ ವಿರೂಪ, ಸ್ತನ್ಯಪಾನಕ್ಕೆ ತೊಂದರೆ, ವಿವಿಧ ರೀತಿಯ ಸೋಂಕು, ಸ್ತನ ಕ್ಯಾನ್ಸರ್ ನ ಅಪಾಯವನ್ನು ಹೆಚ್ಚಿಸುತ್ತದೆ. ಅಲ್ಲದೇ ಇದು ಯುವತಿಯರ ಮಾನಸಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ.

ಇದನ್ನೂ ಓದಿ: Viral News: ಫ್ರಾನ್ಸ್‌ ಅಧ್ಯಕ್ಷ ಮ್ಯಾಕ್ರನ್‌ಗೆ ಕ್ರೀಡಾ ಸಚಿವೆ ಕಿಸ್‌ ಕೊಟ್ಟಿದ್ದು ಸಂಸ್ಕೃತಿಯ ಭಾಗ; ಸಮರ್ಥಿಸಿಕೊಂಡ ನೆಟ್ಟಿಗರು

ವ್ಯಾಪಕ ವಿರೋಧ, ಜಾಗೃತಿಗೆ ಯತ್ನ

ಸ್ತನವನ್ನು ಚಪ್ಪಟೆಗೊಳಿಸುವ ಸಂಪ್ರದಾಯವನ್ನು ತಡೆಯಲು ಕೆಲವು ಕಾನೂನುಗಳನ್ನು ರೂಪಿಸಿದ್ದರೂ ಅದು ಪರಿಣಾಮಕಾರಿಯಾಗಿ ಜಾರಿಯಾಗುವಲ್ಲಿ ವಿಫಲವಾಗಿದೆ. ಕೆಲವು ಸಂಘ ಸಂಸ್ಥೆಗಳು ಈ ಸಂಪ್ರದಾಯದ ವಿರುದ್ಧ ಜಾಗೃತಿಯನ್ನು ಮೂಡಿಸುವ ಪ್ರಯತ್ನ ನಡೆಸುತ್ತಿದೆ. ಆದರೂ ಆಫ್ರಿಕಾ ಖಂಡದಲ್ಲಿ ಈ ಭಯಾನಕ ಪದ್ಧತಿ ಜಾರಿಯಲ್ಲಿದೆ.

Continue Reading

ವಾಣಿಜ್ಯ

Income Tax Returns: ಜುಲೈ 31ರೊಳಗೆ 7.28 ಕೋಟಿ ಐಟಿಆರ್ ಸಲ್ಲಿಕೆ! ಇದು ಹೊಸ ದಾಖಲೆ

ಆದಾಯ ತೆರಿಗೆ ರಿಟರ್ನ್ (Income Tax Returns) ಸಲ್ಲಿಕೆ ಗಡುವಿನೊಳಗೆ ಒಟ್ಟು 7.28 ಕೋಟಿ ಆದಾಯ ತೆರಿಗೆ ರಿಟರ್ನ್ಸ್ ಫೈಲಿಂಗ್ ಮಾಡಲಾಗಿದೆ. ಇದರಲ್ಲಿ ಜುಲೈ 31ರಂದು ಒಂದೇ ದಿನ ಅತ್ಯಧಿಕ ಐಟಿಆರ್‌ಗಳ ಫೈಲಿಂಗ್ ನಡೆದಿದೆ. ಈ ದಿನ 69.92 ಲಕ್ಷಕ್ಕೂ ಹೆಚ್ಚು ಐಟಿಆರ್‌ಗಳನ್ನು ಸಲ್ಲಿಸಲಾಗಿದೆ. ಈ ಬಾರಿ ತೆರಿಗೆದಾರರು ಮತ್ತು ತೆರಿಗೆ ವೃತ್ತಿಪರರು ಸಮಯಕ್ಕೆ ಸರಿಯಾಗಿ ಆದಾಯ ತೆರಿಗೆ ರಿಟರ್ನ್ ಸಲ್ಲಿಕೆ ಮಾಡಿದ್ದರಿಂದ ಫೈಲಿಂಗ್‌ನಲ್ಲಿ ಏಕಾಏಕಿ ಹೆಚ್ಚಳಕ್ಕೆ ಕಾರಣವಾಯಿತು.

VISTARANEWS.COM


on

By

Income Tax Returns
Koo

ಆದಾಯ ತೆರಿಗೆ ರಿಟರ್ನ್ (Income Tax Returns) ಸಲ್ಲಿಕೆ ಗಡುವಿನ ಒಳಗೆ, ಅಂದರೆ 2024ರ ಜುಲೈ 31ರೊಳಗಿನ 2024- 25ರ ಮೌಲ್ಯಮಾಪನ ವರ್ಷಕ್ಕೆ (financial year) ಒಟ್ಟು 7.28 ಕೋಟಿ ಆದಾಯ ತೆರಿಗೆ ರಿಟರ್ನ್ಸ್ (ITR) ಸಲ್ಲಿಸಲಾಗಿದೆ. ಇದು ಕಳೆದ ವರ್ಷ 6.77 ಕೋಟಿಯಾಗಿದ್ದು, ಈ ವರ್ಷ ಶೇ. 7.5ರಷ್ಟು ಹೆಚ್ಚಾಗಿದೆ ಮತ್ತು ಈ ವರ್ಷದ ಐಟಿಆರ್ ಸಲ್ಲಿಕೆಯಲ್ಲಿ ಶೇ. 72ರಷ್ಟು ತೆರಿಗೆದಾರರು ಹೊಸ ತೆರಿಗೆ ಪದ್ಧತಿಯನ್ನು ಆರಿಸಿಕೊಂಡಿದ್ದಾರೆ ಎಂದು ಹಣಕಾಸು ಸಚಿವರು (finance minister) ಶುಕ್ರವಾರ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಈ ಬಾರಿ ತೆರಿಗೆದಾರರು ಮತ್ತು ತೆರಿಗೆ ವೃತ್ತಿಪರರು ಸಮಯಕ್ಕೆ ಸರಿಯಾಗಿ ಆದಾಯ ತೆರಿಗೆ ರಿಟರ್ನ್ ಸಲ್ಲಿಕೆ ಮಾಡಿದ್ದರಿಂದ ಫೈಲಿಂಗ್‌ನಲ್ಲಿ ಏಕಾಏಕಿ ಹೆಚ್ಚಳಕ್ಕೆ ಕಾರಣವಾಯಿತು. 2024ರ ಜುಲೈ 31ರವರೆಗೆ ಸಲ್ಲಿಸಿದ ಐಟಿಆರ್ ಹೊಸ ದಾಖಲೆಗೆ ಇದು ಕಾರಣವಾಯಿತು. ಆರ್ಥಿಕ ವರ್ಷ 2024ರಲ್ಲಿ ಈವರೆಗೆ ಸಲ್ಲಿಸಿರುವ ಐಟಿಆರ್ ಗಳ ಸಂಖ್ಯೆ 7.28 ಕೋಟಿಗಿಂತ ಹೆಚ್ಚು, ಇದು ಆರ್ಥಿಕ ವರ್ಷ 2023- 24ಕ್ಕೆ ಹೋಲಿಸಿದರೆ ಒಟ್ಟು ಐಟಿಆರ್‌ಗಳಿಗಿಂತ ಶೇ. 7.5ರಷ್ಟು ಹೆಚ್ಚು ಎಂದು ಸಚಿವಾಲಯ ತಿಳಿಸಿದೆ.

ತೆರಿಗೆ ಪದ್ಧತಿ ಯಾವುದು ಎಷ್ಟು?

ಆರ್ಥಿಕ ವರ್ಷ 2024-25ಕ್ಕೆ ಸಲ್ಲಿಸಿದ ಒಟ್ಟು 7.28 ಕೋಟಿ ಐಟಿಆರ್‌ಗಳಲ್ಲಿ ಹಳೆಯ ತೆರಿಗೆ ಪದ್ಧತಿಯಲ್ಲಿ ಒಟ್ಟು 2.01 ಕೋಟಿ ಐಟಿಆರ್‌ ಸಲ್ಲಿಕೆಯಾಗಿದೆ. ಹೊಸ ತೆರಿಗೆ ಪದ್ಧತಿಯಲ್ಲಿ 5.27 ಕೋಟಿ ಸಲ್ಲಿಸಲಾಗಿದೆ. ಹೀಗಾಗಿ ಶೇ.72ರಷ್ಟು ತೆರಿಗೆದಾರರು ಹೊಸ ತೆರಿಗೆ ಪದ್ಧತಿಯನ್ನು ಆಯ್ಕೆ ಮಾಡಿಕೊಂಡಿದ್ದರೆ, ಶೇ. 28ರಷ್ಟು ಮಂದಿ ಹಳೆಯ ತೆರಿಗೆ ಪದ್ಧತಿಯಲ್ಲಿಯೇ ಮುಂದುವರಿದಿದ್ದಾರೆ ಎಂದು ಸಚಿವಾಲಯ ತಿಳಿಸಿದೆ.

Income Tax Returns
Income Tax Returns


ಜುಲೈ 31ರಂದು ಎಷ್ಟು ಫೈಲಿಂಗ್?

2024ರ ಜುಲೈ 31ರಂದು ಐಟಿಆರ್‌ಗಳ ಫೈಲಿಂಗ್ ಗರಿಷ್ಠ ಮಟ್ಟವನ್ನು ತಲುಪಿತು. ಒಂದೇ ದಿನದಲ್ಲಿ 69.92 ಲಕ್ಷಕ್ಕೂ ಹೆಚ್ಚು ಐಟಿಆರ್‌ಗಳನ್ನು ಸಲ್ಲಿಸಲಾಗಿದೆ. ಇದನ್ನು ಇ-ಫೈಲಿಂಗ್ ಪೋರ್ಟಲ್ ಗಮನಿಸಿದೆ.

31ರಂದು ಸಂಜೆ 7ರಿಂದ 8 ಗಂಟೆ ಅವಧಿಯಲ್ಲಿ ಐಟಿಆರ್ ಫೈಲಿಂಗ್ ಪ್ರತಿ ಗಂಟೆಗೆ ಗರಿಷ್ಠ ದರ 5.07 ಲಕ್ಷ. ಐಟಿಆರ್ ಫೈಲಿಂಗ್‌ನ ಪ್ರತಿ ಸೆಕೆಂಡಿಗೆ ಅತ್ಯಧಿಕ ದರ 917. ಇದು ಜುಲೈ 17ರಂದು ಬೆಳಗ್ಗೆ 8.13ಕ್ಕೆ ದಾಖಲಾಗಿದೆ. ಐಟಿಆರ್ ಫೈಲಿಂಗ್‌ನ ಪ್ರತಿ ನಿಮಿಷಕ್ಕೆ ಗರಿಷ್ಠ ದರ 9,367. ಇದು ಜುಲೈ 31ರಂದು ರಾತ್ರಿ 8.8ಕ್ಕೆ ದಾಖಲಾಗಿದೆ.

ಮೊದಲ ಬಾರಿ ಸಲ್ಲಿಸಿದವರು

ಇಲಾಖೆಯು ಜುಲೈ 31ರವರೆಗೆ ಮೊದಲ ಬಾರಿ ಸಲ್ಲಿಸುವವರಿಂದ 58.57 ಲಕ್ಷ ಐಟಿಆರ್‌ಗಳನ್ನು ಸ್ವೀಕರಿಸಿದೆ. ಇದು ತೆರಿಗೆ ಮೂಲವನ್ನು ವಿಸ್ತರಿಸುವ ನಿಟ್ಟಿನಲ್ಲಿ ಮಹತ್ವದ ಸೂಚನೆಯಾಗಿದೆ.

ಐತಿಹಾಸಿಕವಾಗಿ ಐಟಿಆರ್‌ಗಳನ್ನು ಐಟಿಆರ್ -1, ಐಟಿಆರ್ -2, ಐಟಿಆರ್ -4, ಐಟಿಆರ್ -6 ಇ-ಫೈಲಿಂಗ್ ಪೋರ್ಟಲ್‌ನಲ್ಲಿ ಹಣಕಾಸು ವರ್ಷದ ಮೊದಲ ದಿನದಂದು ಅಂದರೆ ಏಪ್ರಿಲ್ 1ರಂದು ನಿಯೋಜಿಸಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಹಿಂದಿನ ಹಣಕಾಸು ವರ್ಷಗಳಿಗೆ ಹೋಲಿಸಿದರೆ ಐಟಿಆರ್ -3 ಮತ್ತು ಐಟಿಆರ್ -5 ಅನ್ನು ಸಹ ಬಿಡುಗಡೆ ಮಾಡಲಾಗಿದೆ. ಹಳೆಯ ಮತ್ತು ಹೊಸ ತೆರಿಗೆ ಪದ್ಧತಿಗಳ ಬಗ್ಗೆ ತೆರಿಗೆದಾರರಿಗೆ ಶಿಕ್ಷಣ ನೀಡಲು ಹೆಚ್ಚಿನ ಒತ್ತು ನೀಡಲಾಯಿತು ಎಂದು ಅದು ಹೇಳಿದೆ.

ಯಾವುದು ಎಷ್ಟು?

7.28 ಕೋಟಿ ಐಟಿಆರ್‌ಗಳಲ್ಲಿ ಆರ್ಥಿಕ ವರ್ಷ 2024-25ರಲ್ಲಿ ಶೇ. 45.77ರಷ್ಟು ಅಂದರೆ 3.34 ಕೋಟಿ ಐಟಿಆರ್-1, ಶೇ. 14.93ರಷ್ಟು ಅಂದರೆ 1.09 ಕೋಟಿ ಐಟಿಆರ್ -2, ಶೇ.12.50ರಷ್ಟು 91.10 ಲಕ್ಷ ಐಟಿಆರ್-3, ಶೇ. 25.77ರಷ್ಟು 1.88 ಕೋಟಿ ಐಟಿಆರ್- 4 ಮತ್ತು ಶೇ. 1.03ರಷ್ಟು ಅಂದರೆ 7.48 ಲಕ್ಷ ಐಟಿಆರ್ -5ರಿಂದ ಐಟಿಆರ್ -7 ಅನ್ನು ಸಲ್ಲಿಸಲಾಗಿದೆ. ಈ ಐಟಿಆರ್‌ಗಳಲ್ಲಿ ಶೇ. 43.82ಕ್ಕಿಂತ ಹೆಚ್ಚು ಇ-ಫೈಲಿಂಗ್ ಪೋರ್ಟಲ್‌ನಲ್ಲಿ ಲಭ್ಯವಿರುವ ಆನ್‌ಲೈನ್ ಐಟಿಆರ್ ಸೌಲಭ್ಯವನ್ನು ಬಳಸಿಕೊಂಡು ಸಲ್ಲಿಸಲಾಗಿದೆ ಮತ್ತು ಬಾಕಿಯನ್ನು ಆಫ್‌ಲೈನ್ ಐಟಿಆರ್ ಉಪಯುಕ್ತತೆಗಳನ್ನು ಬಳಸಿ ಸಲ್ಲಿಸಲಾಗಿದೆ.

ಇದನ್ನೂ ಓದಿ: Stock Market: ಷೇರುಪೇಟೆಯಲ್ಲಿ ಭಾರೀ ಕುಸಿತ; ಸೆನ್ಸೆಕ್ಸ್‌ 700 ಅಂಕಗಳಷ್ಟು ಪತನ

ಗರಿಷ್ಠ ಫೈಲಿಂಗ್ ಅವಧಿಯಲ್ಲಿ ಇ-ಫೈಲಿಂಗ್ ಪೋರ್ಟಲ್ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿತು. ಐಟಿಆರ್‌ಗಳನ್ನು ಸಲ್ಲಿಸಲು ತೆರಿಗೆದಾರರಿಗೆ ತಡೆರಹಿತ ಅನುಭವವನ್ನು ನೀಡಿದೆ. ಜುಲೈ 31ರಂದು 3.2 ಕೋಟಿ ಮಂದಿ ಇದರಲ್ಲಿ ಲಾಗಿನ್ ಮಾಡಿದ್ದಾರೆ.

Continue Reading

Latest

Kriti Sanon: ನಟಿ ಕೃತಿ ಸನೋನ್‌ ಡೇಟಿಂಗ್‌ ಮಾಡುತ್ತಿರುವ ಈ ಕಬೀರ್ ಬಹಿಯಾ ಯಾರು?

ಬಾಲಿವುಡ್ ನಟಿ ಕೃತಿ ಸನೋನ್ (Kriti Sanon) ಹೆಸರೀಗ ಯುಕೆ ಮೂಲದ ಮಿಲಿಯನೇರ್ ಉದ್ಯಮಿ ಕಬೀರ್ ಬಹಿಯಾ ಅವರೊಂದಿಗೆ ಕೇಳಿ ಬರುತ್ತಿದೆ. ಈ ಹಿಂದೆ ನಟಿ ಹೆಸರು ಕಾರ್ತಿಕ್ ಆರ್ಯನ್, ಪ್ರಭಾಸ್ ಮತ್ತು ಸುಶಾಂತ್ ಸಿಂಗ್ ರಜಪೂತ್ ಅವರೊಂದಿಗೆ ಕೇಳಿ ಬಂದಿತ್ತಾದರೂ ಈ ಬಗ್ಗೆ ಕೃತಿ ಎಂದಿಗೂ ಪ್ರತಿಕ್ರಿಯಿಸಿರಲಿಲ್ಲ. ಇದೀಗ ಕೃತಿ ಮತ್ತೊಮ್ಮೆ ಡೇಟಿಂಗ್ ನಲ್ಲಿರುವುದು ಸುದ್ದಿಯಾಗುತ್ತಿದ್ದಂತೆ ಆ ವ್ಯಕ್ತಿ ಯಾರು ಎನ್ನುವ ಕುತೂಹಲ ಅವರ ಅಭಿಮಾನಿಗಳಲ್ಲಿ ಹೆಚ್ಚಾಗಿದೆ. ಕಬೀರ್‌ ಹಿನ್ನೆಲೆ ಏನು ಎಂಬ ಮಾಹಿತಿ ಇಲ್ಲಿದೆ.

VISTARANEWS.COM


on

By

Kriti Sanon
Koo

ಕ್ರೂ, ಹಿರೊಪಂತಿ, ಮಿಮಿ, ದಿಲ್ವಾಲೆ, ಬರೇಲಿ ಕಿ ಬರ್ಫಿ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ಬಾಲಿವುಡ್ ನಟಿ (bollywood actress) ಕೃತಿ ಸನೋನ್ (Kriti Sanon) ಈಗ ಯುಕೆ ಮೂಲದ ಮಿಲಿಯನೇರ್ (UK based millionaire) ಜೊತೆ ಡೇಟಿಂಗ್ ನಲ್ಲಿದ್ದಾರೆ ಎನ್ನುವ ವದಂತಿಗಳು ಕೇಳಿ ಬರುತ್ತಿವೆ. ಸಾಕಷ್ಟು ಅಭಿಮಾನಿಗಳನ್ನು ಹೊಂದಿರುವ ಆಕೆಯ ವೈಯಕ್ತಿಕ ಜೀವನದ ಬಗ್ಗೆ ತಿಳಿದುಕೊಳ್ಳಲು ಅಭಿಮಾನಿಗಳು ಕಾತರರಾಗಿರುತ್ತಾರೆ.

ಕಾರ್ತಿಕ್ ಆರ್ಯನ್, ಪ್ರಭಾಸ್ ಮತ್ತು ಸುಶಾಂತ್ ಸಿಂಗ್ ರಜಪೂತ್ ಅವರೊಂದಿಗೆ ಡೇಟಿಂಗ್‌ನಲ್ಲಿದ್ದರು ಎನ್ನುವ ವದಂತಿ ಇತ್ತಾದರೂ ಈ ಬಗ್ಗೆ ಕೃತಿ ಎಂದಿಗೂ ಪ್ರತಿಕ್ರಿಯಿಸಿರಲಿಲ್ಲ. ಇದೀಗ ಕೃತಿ ಮತ್ತೊಮ್ಮೆ ಡೇಟಿಂಗ್‌ನಲ್ಲಿರುವುದು ಸುದ್ದಿಯಾಗುತ್ತಿದ್ದಂತೆ ಆ ವ್ಯಕ್ತಿ ಯಾರು ಎನ್ನುವ ಕುತೂಹಲ ಕೃತಿ ಅಭಿಮಾನಿಗಳಲ್ಲಿ ಹೆಚ್ಚಾಗಿದೆ.

ಕಬೀರ್ ಬಹಿಯಾ ಯಾರು?

1999ರ ನವೆಂಬರ್‌ನಲ್ಲಿ ಜನಿಸಿದ ಕಬೀರ್ ಬಹಿಯಾ ಇಂಗ್ಲೆಂಡ್‌ನ ಮಿಲ್‌ಫೀಲ್ಡ್ ಶಾಲೆಯಲ್ಲಿ ತಮ್ಮ ಆರಂಭಿಕ ಶಿಕ್ಷಣವನ್ನು ಪೂರ್ಣಗೊಳಿಸಿದ್ದರು. ಲಿಂಕ್ಡ್‌ಇನ್ ಪ್ರೊಫೈಲ್‌ನ ಪ್ರಕಾರ ಅವರು ಯುಕೆ ಮೂಲದ ಉದ್ಯಮಿಯಾಗಿದ್ದು, ಲಂಡನ್‌ನ ರೀಜೆಂಟ್ಸ್ ಯೂನಿವರ್ಸಿಟಿಯಿಂದ ವ್ಯಾಪಾರ, ನಿರ್ವಹಣೆ, ಮಾರ್ಕೆಟಿಂಗ್ ಮತ್ತು ಸಂಬಂಧಿತ ಬೆಂಬಲ ಸೇವೆಗಳ ಕುರಿತು ಅಧ್ಯಯನ ಪೂರ್ಣಗೊಳಿಸಿದ್ದಾರೆ.

Kriti Sanon
Kriti Sanon


ಯುಕೆಯಲ್ಲಿ ಸೌಥಾಲ್ ಟ್ರಾವೆಲ್ ಎಂಬ ಪ್ರಮುಖ ಟ್ರಾವೆಲ್ ಕಂಪನಿಯನ್ನು ನಡೆಸುತ್ತಿರುವ ಕುಲ್ಜಿಂದರ್ ಬಹಿಯಾ ಅವರ ಮಗ ಕಬೀರ್. 2019ರ ಸಂಡೇ ಟೈಮ್ಸ್ ಶ್ರೀಮಂತರ ಪಟ್ಟಿಯ ಆಧರಿಸಿ ಹೇಳುವುದಾದರೆ ಕುಲ್ಜಿಂದರ್ ಮತ್ತು ಅವರ ಕುಟುಂಬವು 427 ಮಿಲಿಯನ್ ಪೌಂಡ್‌ಗಳ (ಸುಮಾರು 4590 ಕೋಟಿ ರೂ.) ನಿವ್ವಳ ಮೌಲ್ಯವನ್ನು ಹೊಂದಿದೆ. ಕಬೀರ್ ತನ್ನದೇ ಆದ ಟ್ರಾವೆಲ್ ಕಂಪನಿಯಾದ ವರ್ಲ್ಡ್‌ವೈಡ್ ಏವಿಯೇಷನ್ ​​ಮತ್ತು ಟೂರಿಸಂ ಲಿಮಿಟೆಡ್ ಅನ್ನು ಪ್ರಾರಂಭಿಸಿದ್ದು, 2021ರ ಜೂನ್ ನಿಂದ ಅದರ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ.

ಕಬೀರ್ ಉದ್ಯಮಿಯಾಗಿದ್ದರೂ ಕ್ರೀಡೆಯಲ್ಲಿ ಅಪಾರ ಆಸಕ್ತಿ ಹೊಂದಿದ್ದಾರೆ. ಅವರ ನೆಚ್ಚಿನ ಫುಟ್‌ಬಾಲ್ ಕ್ಲಬ್ ಬೊರುಸ್ಸಿಯಾ ಡಾರ್ಟ್‌ಮಂಡ್ ಆಗಿದೆ. ಅವರು ಹಲವಾರು ಭಾರತೀಯ ಕ್ರಿಕೆಟಿಗರೊಂದಿಗೆ ನಿಕಟ ಸಂಬಂಧವನ್ನು ಹೊಂದಿದ್ದಾರೆ.

ಎಂ.ಎಸ್. ಧೋನಿ, ಹಾರ್ದಿಕ್ ಪಾಂಡ್ಯ ಅವರಿಗೂ ಪರಿಚಿತರು

ನತಾಸಾ ಸ್ಟಾಂಕೋವಿಕ್ ಮತ್ತು ಹಾರ್ದಿಕ್ ಪಾಂಡ್ಯ ಅವರ ವಿವಾಹ ಸಮಾರಂಭದಲ್ಲಿ ಕಬೀರ್ ಭಾಗವಹಿಸಿದ್ದರು. ಅಲ್ಲದೇ ಮಹೇಂದ್ರ ಸಿಂಗ್ ಧೋನಿ ಮತ್ತು ಅವರ ಕುಟುಂಬದ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದಾರೆ. 2024ರ ಹೊಸ ವರ್ಷಾಚರಣೆಯ ಸಂದರ್ಭದಲ್ಲಿ ಧೋನಿ ಮತ್ತು ಅವರ ಪತ್ನಿ ಸಾಕ್ಷಿಯೊಂದಿಗೆ ಕಬೀರ್ ಕಾಣಿಸಿಕೊಂಡಿದ್ದರು. ಕಬೀರ್ ತಮ್ಮ ಇನ್‌ಸ್ಟಾಗ್ರಾಮ್ ಪ್ರೊಫೈಲ್‌ನಲ್ಲಿ ಇಬ್ಬರೂ ಕ್ರಿಕೆಟಿಗರೊಂದಿಗೆ ಅನೇಕ ಚಿತ್ರಗಳನ್ನು ಹೊಂದಿದ್ದಾರೆ.

Kriti Sanon
Kriti Sanon


ಕೃತಿ ಸನೋನ್ ಜೊತೆ ಡೇಟಿಂಗ್ ವದಂತಿ

ಕೃತಿ ಮತ್ತು ಕಬೀರ್ ಹೊಸ ವರ್ಷವನ್ನು ಒಟ್ಟಿಗೆ ಆಚರಿಸುತ್ತಿರುವಾಗ ಅವರ ನಡುವಿನ ಸಂಬಂಧದ ಬಗ್ಗೆ ವದಂತಿಗಳು ಪ್ರಾರಂಭವಾದವು. 2024ರ ಹೋಳಿ ಹಬ್ಬವನ್ನು ಕಬೀರ್ ಜೊತೆ ಕೃತಿ ನಡೆಸಿರುವುದಾಗಿ ಹೇಳುವ ಅನೇಕ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದ್ದು, ಇದು ನಟಿಯ ಅಭಿಮಾನಿಗಳು ಕುತೂಹಲ ಕೆರಳಿಸಿದೆ. ಕಬೀರ್‌ಗಿಂತ ಒಂಬತ್ತು ವರ್ಷ ಹಿರಿಯರಾದ ಕೃತಿ ತನ್ನ ಸಹೋದರಿ ನೂಪುರ್ ಮೂಲಕ ಅವರನ್ನು ಮೊದಲ ಬಾರಿ ಭೇಟಿಯಾಗಿದ್ದರು ಎನ್ನಲಾಗಿದೆ.

ಇದನ್ನೂ ಓದಿ: OTT Releases: ಒಟಿಟಿಯಲ್ಲಿ ಈ ತಿಂಗಳು ಕಲ್ಕಿ, ಇಂಡಿಯನ್‌, ಟರ್ಬೊ ಜತೆಗೆ ಇನ್ಯಾವ ಹೊಸ ಚಿತ್ರ, ವೆಬ್‌ ಸಿರೀಸ್‌?

ಕೃತಿ ಸನೋನ್ ಇತ್ತೀಚೆಗೆ ತಮ್ಮ ಹುಟ್ಟುಹಬ್ಬದ ವೇಳೆ ಕಬೀರ್ ಜೊತೆ ಪ್ರವಾಸ ನಡೆಸಿರುವುದಾಗಿ ಕೇಳಿ ಬಂದಾಗ ಅವರಿಬ್ಬರ ಡೇಟಿಂಗ್ ಗೆ ಮತ್ತಷ್ಟು ಪುಷ್ಟಿ ಸಿಕ್ಕಿದೆ. ಸದ್ಯ ನಟಿ ಕೃತಿ ತನ್ನ ಸಹೋದರಿ ನೂಪುರ್ ಸನೋನ್ ಮತ್ತು ಸ್ನೇಹಿತರೊಂದಿಗೆ ಗ್ರೀಸ್‌ನಲ್ಲಿ ಕಾಲ ಕಳೆಯುತ್ತಿದ್ದಾರೆ. ಇದರಲ್ಲಿ ಅಭಿಮಾನಿಗಳು ಕೃತಿ ಮತ್ತು ಕಬೀರ್ ಒಟ್ಟಿಗೆ ಇರುವ ಚಿತ್ರಗಳನ್ನು ಸಾಮಾಜಿಕ ಮಾಧ್ಯಮಗಳ ಮೂಲಕ ಹರಿದಾಡುತ್ತಿವೆ. ಇದನ್ನು ನೋಡಿರುವ ಅವರ ಅಭಿಮಾನಿಗಳು ನಟಿ ಕೃತಿ ತಮ್ಮ 34ನೇ ಹುಟ್ಟುಹಬ್ಬವನ್ನು ಕಬೀರ್ ಜೊತೆ ಆಚರಿಸಿದರು ಎಂಬುದಾಗಿ ಹೇಳುತ್ತಿದ್ದಾರೆ

Continue Reading

Latest

Reels in Railway Station: ರೈಲ್ವೆ ನಿಲ್ದಾಣದಲ್ಲಿ ರೀಲ್ಸ್‌ ಮಾಡುತ್ತ ಯುವತಿಯ ಅಸಭ್ಯ ವರ್ತನೆ; ಕಿಡಿಕಾರಿದ ನೆಟ್ಟಿಗರು!

Reels in Railway Station: ಈಗಿನ ಯುವಜನತೆ ಸೋಶಿಯಲ್ ಮೀಡಿಯಾದಲ್ಲಿ ತಾವು ಟ್ರೆಂಡ್ ಆಗಬೇಕು ಎಂಬ ಹಪಾಹಪಿಯಲ್ಲಿ ರೀಲ್ಸ್‌ ಚಟಕ್ಕೆ ಬಿದ್ದಿದ್ದಾರೆ. ತಾವೇನು ಮಾಡುತ್ತಿದ್ದೇವೆ ಎಂಬ ವಿವೇಚನೆ ಇಲ್ಲದೇ ರಸ್ತೆ ಬದಿಯಲ್ಲಿ ಬಿದ್ದು ಹೊರಳಾಡುವುದು, ಬಿಲ್ಡಿಂಗ್‌ನಿಂದ ಹಾರುವುದು ಹೀಗೆ ಏನೇನೋ ಸರ್ಕಸ್‌ಗಳನ್ನು ಮಾಡುತ್ತಿರುತ್ತಾರೆ. ಇಂತಹದ್ದೇ ಒಂದು ಘಟನೆ ಇಲ್ಲಿ ನಡೆದಿದೆ. ಸೀಮಾ ಕನೋಜಿಯಾ ಎಂಬಾಕೆ ರೈಲ್ವೆ ನಿಲ್ದಾಣದಲ್ಲಿ ಬೆಂಚಿನ ಮೇಲೆ ಕುಳಿತಿರುವ ಮಹಿಳೆಯ ಬಳಿ ನೃತ್ಯ ಮಾಡುತ್ತಾ ಆ ಮಹಿಳೆಯ ಜೊತೆ ಅಸಭ್ಯವಾಗಿ ವರ್ತಿಸಿದ್ದಾಳೆ. ಇದಕ್ಕೆ ನೆಟ್ಟಿಗರು ಸಿಕ್ಕಾಪಟ್ಟೆ ಗರಂ ಆಗಿದ್ದಾರೆ.

VISTARANEWS.COM


on

Viral Video
Koo


ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆಗಲು (Reels in Railway Station) ಯುವ ಜನರು ರೀಲ್ಸ್‌ಗಳನ್ನು ಮಾಡುವ ಕ್ರೇಜ್‌ಗಿಳಿದಿದ್ದಾರೆ. ಈ ರೀಲ್ಸ್‌ಗಾಗಿ ಅವರು ಎಲ್ಲೆಂದರಲ್ಲಿ ಹಾಡಿ ಕುಣಿಯುತ್ತಾ ಸಾರ್ವಜನಿಕರಿಗೆ ತೊಂದರೆ ನೀಡಲಾರಂಭಿಸಿದ್ದಾರೆ. ಇತ್ತೀಚೆಗೆ ರೈಲ್ವೆ ನಿಲ್ದಾಣದಲ್ಲಿ ಯುವತಿಯೊಬ್ಬಳ ವಿಲಕ್ಷಣ ನೃತ್ಯದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದ್ದು, ಯುವತಿಯ ವರ್ತನೆಗೆ ಅನೇಕರು ಸಿಟ್ಟಾಗಿದ್ದಾರೆ.

ತನ್ನ ಇನ್ಸ್ಟಾಗ್ರಾಮ್ ಹ್ಯಾಂಡಲ್ @seemakanojiya87 ಮೂಲಕ ಚಿರಪರಿಚಿತಳಾಗಿರುವ ಸೀಮಾ ಕನೋಜಿಯಾ ಎಂಬಾಕೆ ನಿಲ್ದಾಣದಲ್ಲಿ ಬೆಂಚಿನ ಮೇಲೆ ಕುಳಿತಿರುವ ಮಹಿಳೆಯ ಬಳಿ ನೃತ್ಯ ಮಾಡುತ್ತಿದ್ದಾಳೆ. ಸೀಮಾ ನೃತ್ಯ ಮಾಡುತ್ತಾ ಆ ಮಹಿಳೆಯ ಜೊತೆ ಅಸಭ್ಯವಾಗಿ ವರ್ತಿಸಿದ್ದಾಳೆ. ಹಾಗಾಗಿ ಆ ಮಹಿಳೆ ತುಂಬಾ ಅಸಮಾಧಾನಗೊಂಡ ಹಾಗೆ ನಟಿಸುತ್ತಾ ಪ್ರತಿಭಟಿಸಿದ್ದಾಳೆ.

746,000ಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿರುವ ಸೀಮಾ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೊವನ್ನು ಪೋಸ್ಟ್ ಮಾಡಿದ್ದು, ಇದು 323 ದಶಲಕ್ಷಕ್ಕೂ ಹೆಚ್ಚು ವೀವ್ಸ್ ಪಡೆದಿದೆ, 75,000ಕ್ಕೂ ಹೆಚ್ಚು ಬಾರಿ ಶೇರ್ ಮಾಡಲಾಗಿದೆ. 200,000ಕ್ಕೂ ಹೆಚ್ಚು ಬಳಕೆದಾರರು ಈ ವಿಡಿಯೊವನ್ನು ಲೈಕ್ ಮಾಡಿದ್ದಾರೆ ಮತ್ತು 5,300ಕ್ಕೂ ಹೆಚ್ಚು ಕಾಮೆಂಟ್‌ಗಳು ಬಂದಿವೆ. ಆಕೆ ಈ ವಿಡಿಯೊಗೆ ಶೀರ್ಷಿಕೆ ನೀಡಿ ಮನರಂಜನೆಯ ಉದ್ದೇಶಗಳಿಗಾಗಿ ಈ ವಿಡಿಯೊ ಮಾಡಲಾಗಿದೆ. ಈ ವಿಡಿಯೊದಲ್ಲಿರುವ ಮಹಿಳೆ ತನ್ನ ಸ್ನೇಹಿತೆ ಎಂದು ವಿವರಿಸಿದ್ದಾಳೆ.

ಇದನ್ನೂ ಓದಿ: ನಿನಗೆಷ್ಟು ಬಾಯ್‌ಫ್ರೆಂಡ್‌ ಎನ್ನುತ್ತ ಗೆಳತಿಗೆ ಭೀಕರವಾಗಿ ಇರಿದ ಯುವ ಕಾಂಗ್ರೆಸ್ ಮುಖಂಡ!

ಆದರೆ ವೀಕ್ಷಕರು ಮಾತ್ರ ಆಕೆಯ ವಿವರಣೆಯ ಹೊರತಾಗಿಯೂ ಆಕೆಯ ವರ್ತನೆಯ ಬಗ್ಗೆ ಕೋಪಗೊಂಡಿದ್ದಾರೆ. ಅನೇಕ ಬಳಕೆದಾರರು ಈ ಕೃತ್ಯವನ್ನು ಅಸಭ್ಯ ಮತ್ತು ಅಪಾಯಕಾರಿ ಎಂದು ಖಂಡಿಸಿದ್ದಾರೆ. ರೈಲ್ವೆ ಪ್ಲಾಟ್‍ಫಾರ್ಮ್‍ನಲ್ಲಿ ಈ ರೀತಿ ನೃತ್ಯ ಮಾಡುವುದು ತುಂಬಾ ಅಪಾಯಕಾರಿ. ಅಂತಹ ಜನರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ರೈಲ್ವೆ ಇಲಾಖೆಗೆ ಮನವಿ ಮಾಡಿದ್ದಾರೆ.

ಇನ್ಸ್ಟಾಗ್ರಾಮ್ ಬ್ಲಾಗರ್ ಸೀಮಾ ಕನೋಜಿಯಾ ಈ ಹಿಂದೆ ಮುಂಬೈ ರೈಲ್ವೆ ಪ್ಲಾಟ್‍ಫಾರ್ಮ್‍ನಲ್ಲಿ ‘ಕುಚ್ ಕುಚ್ ಹೋತಾ ಹೈ’ ಚಿತ್ರದ ಪ್ರಸಿದ್ಧ ‘ಕೋಯಿ ಮಿಲ್ ಗ್ಯಾ’ ಹಾಡಿಗೆ ಉತ್ಸಾಹದಿಂದ ನೃತ್ಯ ಮಾಡುತ್ತಿರುವ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಸ್ಥಳೀಯ ರೈಲಿಗಾಗಿ ತಮ್ಮ ಬ್ಯಾಗ್ ಗಳನ್ನು ಹಿಡಿದುಕೊಂಡು ಕಾಯುತ್ತಿರುವ ಪ್ರಯಾಣಿಕರು, ಕನೋಜಿಯಾ ನೃತ್ಯವನ್ನು ಕಂಡು ಅದರಲ್ಲೇ ಮುಳುಗಿದ್ದಾರೆ. ಇದರಲ್ಲಿ ಆಕೆ ಕುಣಿಯುವುದು, ನೆಲದ ಮೇಲೆ ಉರುಳುವುದು ಮತ್ತು ಇತರ ಹಲವಾರು ಚಲನೆಗಳನ್ನು ಮಾಡಿದ್ದಾಳೆ. ಇದಕ್ಕೆ ಹಲವರು ವ್ಯಂಗ್ಯವಾಗಿ ಕಾಮೆಂಟ್ ಮಾಡಿದ್ದರು.

Continue Reading
Advertisement
African Culture
ವಿದೇಶ6 mins ago

Breast Ironing: ಆಫ್ರಿಕಾದಲ್ಲಿದೆ ಬಿಸಿ ವಸ್ತುಗಳಿಂದ ಯುವತಿಯರ ಸ್ತನ ಚಪ್ಪಟೆಗೊಳಿಸುವ ಕ್ರೂರ ಪದ್ಧತಿ!

high-speed road corridor
ಪ್ರಮುಖ ಸುದ್ದಿ8 mins ago

High Speed Road Corridor : 8 ಹೊಸ ಹೈಸ್ಪೀಡ್​ ರೋಡ್​ ಕಾರಿರಾಡ್​ಗೆ ಒಪ್ಪಿಗೆ ಕೊಟ್ಟ ಕೇಂದ್ರ ಸರ್ಕಾರ

RRB ALP Recruitment
ಕರ್ನಾಟಕ11 mins ago

RRB ALP Recruitment: ರೈಲ್ವೆ ಲೋಕೋ ಪೈಲಟ್ ಹುದ್ದೆಗಳ ಪರೀಕ್ಷೆ ಕನ್ನಡದಲ್ಲೂ ಬರೆಯಲು ಅವಕಾಶ

Sri Vidyashreesha Theertha Swamiji ashirvachan at Vyasaraja Matha of Sosale village
ಮೈಸೂರು19 mins ago

Mysore News: ದೇವರ ಅನುಗ್ರಹ ದೊರೆತರೆ ಜೀವನದ ಎಲ್ಲ ತಾಪಗಳೂ ನಿವಾರಣೆ: ಶ್ರೀ ವಿದ್ಯಾಶ್ರೀಶ ತೀರ್ಥ ಸ್ವಾಮೀಜಿ

Minister Shivaraj tangadagi visited and inspected Tungabhadra river side villages
ಮಳೆ22 mins ago

Koppala News: ತುಂಗಭದ್ರಾ ನದಿಗೆ ಅಪಾರ ಪ್ರಮಾಣದ ನೀರು; ನದಿಪಾತ್ರದ ಗ್ರಾಮಗಳಿಗೆ ತಂಗಡಗಿ ಭೇಟಿ

Space mission
ಪ್ರಮುಖ ಸುದ್ದಿ36 mins ago

Space mission : ಇಂಡೊ- ಯುಎಸ್​ ಬಾಹ್ಯಾಕಾಶ ಯಾನಕ್ಕೆ ಭಾರತದ ಶುಭಾಂಶು ಶುಕ್ಲಾ ‘ಪ್ರಧಾನ ಗಗನಯಾತ್ರಿ’

Actor Darshan
ಕರ್ನಾಟಕ46 mins ago

Actor Darshan: ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಸಾಕ್ಷಿ ಹೇಳದಂತೆ ಬೆದರಿಕೆ; ದರ್ಶನ್‌ ಗ್ಯಾಂಗ್ ವಿರುದ್ಧ ದೂರು

Fashion workshop
ಫ್ಯಾಷನ್52 mins ago

Fashion Workshop: ಬೆಂಗಳೂರಲ್ಲಿ ಜಪಾನಿನ ಖ್ಯಾತ ಡಿಸೈನರ್‌ ಶಿಂಗೊ ಸಾಟೊ ಫ್ಯಾಷನ್‌ ಕ್ಲಾಸ್‌!

Paris Olympics 2024
ಕ್ರೀಡೆ1 hour ago

Paris Olympics 2024 : ಪ್ಯಾರಿಸ್​ ಒಲಿಂಪಿಕ್ಸ್​ನ 8ನೇ ದಿನವಾದ ಶನಿವಾರ ಭಾರತದ ಸ್ಪರ್ಧೆಗಳ ವಿವರ ಇಲ್ಲಿದೆ

Kasturirangan Report
ಕರ್ನಾಟಕ1 hour ago

Kasturirangan Report: ಕಸ್ತೂರಿ ರಂಗನ್ ವರದಿ ತಿರಸ್ಕರಿಸುವ ಬಗ್ಗೆ ಮತ್ತೊಮ್ಮೆ ಚರ್ಚಿಸಿ ತೀರ್ಮಾನ ಎಂದ ಸಿಎಂ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka Rain
ಮಳೆ1 day ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ1 day ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ1 day ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

karnataka Rain
ಮಳೆ3 days ago

Karnataka rain : ಭದ್ರಾ ನದಿಯಲ್ಲಿ ಕೊಚ್ಚಿ ಹೋದ ಹಸು; ಬೈಂದೂರಿನಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ

Karnataka Rain
ಮಳೆ3 days ago

Karnataka Rain : ಭಾರಿ ಮಳೆಗೆ ಬಾಳೆಹೊನ್ನೂರು ಮುಳುಗಡೆ; ನೆರೆಗೆ ಬೋಟ್‌ ಮೊರೆ ಹೋದ ಜನರು

Bharachukki falls
ಚಾಮರಾಜನಗರ3 days ago

Bharachukki Falls : ಭರಚುಕ್ಕಿ ಜಲಪಾತಕ್ಕೆ ಕಳ್ಳ ಮಾರ್ಗದಿಂದ ಹೋದೋರಿಗೆ ಬಸ್ಕಿ ಹೊಡೆಸಿದ ಪೊಲೀಸರು!

karnataka Rain
ಮಳೆ4 days ago

Karnataka Rain: ಮತ್ತೆ ಶುರು ಮಳೆ ಅಬ್ಬರ; ಗಾಳಿಗೆ ಹಾರಿ ಹೋದ ಮನೆಗಳ ಚಾವಣಿ, ಶಿರಾಡಿಘಾಟ್‌ನಲ್ಲಿ ಮತ್ತೆ ಭೂ ಕುಸಿತ

Elephant combing Makna elephant captured near Bannerghatta
ಬೆಂಗಳೂರು ಗ್ರಾಮಾಂತರ4 days ago

Elephant combing: ಭೀಮ, ಮಹೇಂದ್ರರ ಮುಂದೆ ಮಂಡಿಯೂರಿದ ಮಕ್ನಾ ಆನೆ; ಹೇಗಿತ್ತು ಗೊತ್ತಾ ಕಾರ್ಯಾಚರಣೆ

karnataka rain
ಮಳೆ4 days ago

Karnataka rain: ಪ್ರವಾಹದ ಭೀಕರತೆ; ಹಳ್ಳದಲ್ಲಿ ತೇಲಿಬಂದ ಎಮ್ಮೆಗಳ ಕಳೇಬರ

Tungabhadra Dam
ಕೊಪ್ಪಳ5 days ago

Tungabhadra Dam: ಕಾಲುವೆಯಲ್ಲಿ ಬಾಲಕರ ಈಜಾಟ; ಅಧಿಕಾರಿಗಳಿಗೆ ಪೀಕಲಾಟ!

ಟ್ರೆಂಡಿಂಗ್‌