Wayanad Tragedy: ತಬ್ಬಲಿ ಶಿಶುಗಳಿಗೆ ಎದೆಹಾಲು ನೀಡಿ ಪೋಷಿಸಿದ ʼಮಹಾತಾಯಿʼಗೆ ವ್ಯಾಪಕ ಪ್ರಶಂಸೆ - Vistara News

Latest

Wayanad Tragedy: ತಬ್ಬಲಿ ಶಿಶುಗಳಿಗೆ ಎದೆಹಾಲು ನೀಡಿ ಪೋಷಿಸಿದ ʼಮಹಾತಾಯಿʼಗೆ ವ್ಯಾಪಕ ಪ್ರಶಂಸೆ

Wayanad Tragedy: ತಾಯಿಯಿಲ್ಲದ ಮಕ್ಕಳು ಪಾಡು ನಿಜಕ್ಕೂ ಶೋಚನೀಯವಾಗಿರುತ್ತದೆ. ಕೇರಳದ ವಯನಾಡಿನಲ್ಲಿ ಮಳೆಯಿಂದಾಗಿ ಭೂಕುಸಿತ ಉಂಟಾಗಿ ಅನೇಕ ಸಾವು ನೋವಾಗಿದೆ. ಸಾವನಪ್ಪಿದವರ ಸಂಖ್ಯೆ ದಿನ ದಿನಕ್ಕೇ ಏರುತ್ತಿದೆ. ಇದರಿಂದ ಅನೇಕ ಮಕ್ಕಳು ತಂದೆತಾಯಿಯನ್ನು ಕಳೆದುಕೊಂಡು ಅನಾಥರಾಗಿದ್ದಾರೆ. ಈ ನಡುವೆ ತಾಯಿಯೊಬ್ಬಳು ಅನಾಥರಾದ ಮಕ್ಕಳಿಗೆ ಎದೆ ಹಾಲುಣಿಸಿ ಮಾನವೀಯತೆ ಮರೆದಿದ್ದಾಳೆ. ಈಕೆಯ ಈ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

VISTARANEWS.COM


on

Wayanad Tragedy
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo


ಭಾರೀ ಮಳೆಯಿಂದಾಗಿ ವಯನಾಡ್ ಜಿಲ್ಲೆಯಲ್ಲಿ ಭೂಕುಸಿತ ಉಂಟಾಗಿ ಅನೇಕ ಸಾವು ನೋವಾಗಿದೆ. ಸಾವನಪ್ಪಿದವರ ಸಂಖ್ಯೆ ದಿನ ದಿನಕ್ಕೇ ಏರುತ್ತಿದೆ. ಇದರಿಂದ ಅನೇಕ ಮಕ್ಕಳು ತಂದೆತಾಯಿಯನ್ನು ಕಳೆದುಕೊಂಡು ಅನಾಥರಾಗಿದ್ದಾರೆ. ಪೋಷಕರು ತಮ್ಮ ಮಕ್ಕಳನ್ನು ಕಳೆದುಕೊಂಡು ಗೋಳಾಡುತ್ತಿದ್ದಾರೆ. ವಯನಾಡ್ (Wayanad Tragedy )ಜಿಲ್ಲೆಯಲ್ಲಿ ಜನರ ಗೋಳಾಟ ಮುಗಿಲು ಮುಟ್ಟುತ್ತಿದೆ.

ಈ ನಡುವೆ ತಾಯಿಯೊಬ್ಬಳು ಅನಾಥರಾದ ಮಕ್ಕಳಿಗೆ ಎದೆ ಹಾಲುಣಿಸಿ ಮಾನವೀಯತೆ ಮೆರೆದಿದ್ದಾಳೆ. ತಾಯಿ ಎಂದರೆ ಕರುಣಾಮಯಿ ಎಂಬುದಕ್ಕೆ ಆಕೆ ಉದಾಹರಣೆಯಾಗಿದ್ದಾಳೆ. ಈಕೆ ಇಡುಕ್ಕಿಯ ನಿವಾಸಿ, ಇಬ್ಬರು ಮಕ್ಕಳ ತಾಯಿ. ನೂರಾರು ಜನರನ್ನು ಬಲಿ ತೆಗೆದುಕೊಂಡ ದುರಂತದಲ್ಲಿ ತಾಯಿಯನ್ನು ಕಳೆದುಕೊಂಡ ಶಿಶುಗಳಿಗೆ ನಿಸ್ವಾರ್ಥವಾಗಿ ಎದೆ ಹಾಲನ್ನು ನೀಡಿದ್ದಾಳೆ. ಈ ಮಹಿಳೆಯ ಈ ಮಹಾ ಕಾರ್ಯಕ್ಕೆ ಕೇರಳಾದ್ಯಂತ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಮಹಿಳೆ, ಆಕೆಯ ಪತಿ ಮತ್ತು 4 ವರ್ಷ ಮತ್ತು 4 ತಿಂಗಳ ಇಬ್ಬರು ಮಕ್ಕಳು ಈಗಾಗಲೇ ಮಧ್ಯ ಕೇರಳದ ಇಡುಕ್ಕಿಯಲ್ಲಿರುವ ತಮ್ಮ ಮನೆಯಿಂದ ವಯನಾಡ್‌ಗೆ ಹೋಗಿದ್ದಾರೆ. ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಆ ಮಹಿಳೆ, ಇಬ್ಬರು ಮಕ್ಕಳ ತಾಯಿಯಾದ ತನಗೆ ತಾಯಿ ಇಲ್ಲದ ಮಕ್ಕಳ ನೋವು, ಅವರನ್ನು ನೋಡಿಕೊಳ್ಳುವುದು ಎಷ್ಟು ಕಷ್ಟ ಎಂದು ತಿಳಿದಿದೆ. ಈ ದುರಂತದಲ್ಲಿ ಚಿಕ್ಕ ಮಕ್ಕಳು ತನ್ನ ತಾಯಿಯನ್ನು ಕಳೆದುಕೊಂಡಿದ್ದಾರೆ ಎಂಬ ಸುದ್ದಿ ಕೇಳಿ ಈ ಬಗ್ಗೆ ಪತಿಯ ಬಳಿ ಚರ್ಚಿಸಿ ಅವರ ಬೆಂಬಲದೊಂದಿಗೆ ತಾನು ಈ ನಿರ್ಧಾರ ತೆಗೆದುಕೊಂಡೆ ಎಂಬುದಾಗಿ ಹೇಳಿದ್ದಾರೆ.

Wayanad Tragedy
Wayanad Tragedy

ಧಾರಾಕಾರ ಮಳೆಯಿಂದಾಗಿ ಜುಲೈ 30ರಂದು ಕೇರಳದ ಗುಡ್ಡಗಾಡು ವಯನಾಡ್ ಜಿಲ್ಲೆಯ ವೈತಿರಿ ತಾಲ್ಲೂಕಿನ ಸುಮಾರು ಮೂರು ಹಳ್ಳಿಗಳಾದ ಮುಂಡಕ್ಕೈ, ಚೂರಲ್ಮಾಲಾ, ಅಟ್ಟಮಾಲಾದಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಸತ್ತವರ ಸಂಖ್ಯೆ 200 ದಾಟಿದೆ. ಇನ್ನೂರಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಮುಂಜಾನೆ 2 ಮತ್ತು 4.10ರ ಸುಮಾರಿಗೆ ಭೂಕುಸಿತ ಸಂಭವಿಸಿದ್ದು, ಈ ಸಮಯದಲ್ಲಿ ಜನರು ಮಲಗಿದ್ದರಿಂದ ಹೆಚ್ಚಿನ ಸಂಖ್ಯೆಯ ಸಾವುನೋವುಗಳಿಗೆ ಕಾರಣವಾಗಿದೆ.
ಇದನ್ನೂ ಓದಿ: ಈ ಮುದ್ದು ವಿದ್ಯಾರ್ಥಿನಿಯರ ನಗು, ಸೈಕಲ್‌ ಸವಾರಿ ಇನ್ನೆಲ್ಲಿ? ಮಣ್ಣಿನಡಿ ಸಮಾಧಿ; ಕಣ್ಣಂಚಲಿ ನೀರು ತರಿಸುವ ವಿಡಿಯೊ

ಸಂತ್ರಸ್ತ ಮುಂಡಕ್ಕೈ, ಚೂರಲ್ಮಾಲಾ ಮತ್ತು ಅತ್ತಮಾಲಾ ಪ್ರದೇಶಗಳಲ್ಲಿ ರಾಜ್ಯ ಮತ್ತು ಕೇಂದ್ರ ಪಡೆಗಳನ್ನು ಒಳಗೊಂಡ ತೀವ್ರ ರಕ್ಷಣಾ ಪ್ರಯತ್ನ ನಡೆಯುತ್ತಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಮತ್ತು ಗಾಯಗೊಂಡವರಿಗೆ 50 ಸಾವಿರ ರೂ. ಪರಿಹಾರ ಘೋಷಿಸಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

Latest

Kriti Sanon: ನಟಿ ಕೃತಿ ಸನೋನ್‌ ಡೇಟಿಂಗ್‌ ಮಾಡುತ್ತಿರುವ ಈ ಕಬೀರ್ ಬಹಿಯಾ ಯಾರು?

ಬಾಲಿವುಡ್ ನಟಿ ಕೃತಿ ಸನೋನ್ (Kriti Sanon) ಹೆಸರೀಗ ಯುಕೆ ಮೂಲದ ಮಿಲಿಯನೇರ್ ಉದ್ಯಮಿ ಕಬೀರ್ ಬಹಿಯಾ ಅವರೊಂದಿಗೆ ಕೇಳಿ ಬರುತ್ತಿದೆ. ಈ ಹಿಂದೆ ನಟಿ ಹೆಸರು ಕಾರ್ತಿಕ್ ಆರ್ಯನ್, ಪ್ರಭಾಸ್ ಮತ್ತು ಸುಶಾಂತ್ ಸಿಂಗ್ ರಜಪೂತ್ ಅವರೊಂದಿಗೆ ಕೇಳಿ ಬಂದಿತ್ತಾದರೂ ಈ ಬಗ್ಗೆ ಕೃತಿ ಎಂದಿಗೂ ಪ್ರತಿಕ್ರಿಯಿಸಿರಲಿಲ್ಲ. ಇದೀಗ ಕೃತಿ ಮತ್ತೊಮ್ಮೆ ಡೇಟಿಂಗ್ ನಲ್ಲಿರುವುದು ಸುದ್ದಿಯಾಗುತ್ತಿದ್ದಂತೆ ಆ ವ್ಯಕ್ತಿ ಯಾರು ಎನ್ನುವ ಕುತೂಹಲ ಅವರ ಅಭಿಮಾನಿಗಳಲ್ಲಿ ಹೆಚ್ಚಾಗಿದೆ. ಕಬೀರ್‌ ಹಿನ್ನೆಲೆ ಏನು ಎಂಬ ಮಾಹಿತಿ ಇಲ್ಲಿದೆ.

VISTARANEWS.COM


on

By

Kriti Sanon
Koo

ಕ್ರೂ, ಹಿರೊಪಂತಿ, ಮಿಮಿ, ದಿಲ್ವಾಲೆ, ಬರೇಲಿ ಕಿ ಬರ್ಫಿ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ಬಾಲಿವುಡ್ ನಟಿ (bollywood actress) ಕೃತಿ ಸನೋನ್ (Kriti Sanon) ಈಗ ಯುಕೆ ಮೂಲದ ಮಿಲಿಯನೇರ್ (UK based millionaire) ಜೊತೆ ಡೇಟಿಂಗ್ ನಲ್ಲಿದ್ದಾರೆ ಎನ್ನುವ ವದಂತಿಗಳು ಕೇಳಿ ಬರುತ್ತಿವೆ. ಸಾಕಷ್ಟು ಅಭಿಮಾನಿಗಳನ್ನು ಹೊಂದಿರುವ ಆಕೆಯ ವೈಯಕ್ತಿಕ ಜೀವನದ ಬಗ್ಗೆ ತಿಳಿದುಕೊಳ್ಳಲು ಅಭಿಮಾನಿಗಳು ಕಾತರರಾಗಿರುತ್ತಾರೆ.

ಕಾರ್ತಿಕ್ ಆರ್ಯನ್, ಪ್ರಭಾಸ್ ಮತ್ತು ಸುಶಾಂತ್ ಸಿಂಗ್ ರಜಪೂತ್ ಅವರೊಂದಿಗೆ ಡೇಟಿಂಗ್‌ನಲ್ಲಿದ್ದರು ಎನ್ನುವ ವದಂತಿ ಇತ್ತಾದರೂ ಈ ಬಗ್ಗೆ ಕೃತಿ ಎಂದಿಗೂ ಪ್ರತಿಕ್ರಿಯಿಸಿರಲಿಲ್ಲ. ಇದೀಗ ಕೃತಿ ಮತ್ತೊಮ್ಮೆ ಡೇಟಿಂಗ್‌ನಲ್ಲಿರುವುದು ಸುದ್ದಿಯಾಗುತ್ತಿದ್ದಂತೆ ಆ ವ್ಯಕ್ತಿ ಯಾರು ಎನ್ನುವ ಕುತೂಹಲ ಕೃತಿ ಅಭಿಮಾನಿಗಳಲ್ಲಿ ಹೆಚ್ಚಾಗಿದೆ.

ಕಬೀರ್ ಬಹಿಯಾ ಯಾರು?

1999ರ ನವೆಂಬರ್‌ನಲ್ಲಿ ಜನಿಸಿದ ಕಬೀರ್ ಬಹಿಯಾ ಇಂಗ್ಲೆಂಡ್‌ನ ಮಿಲ್‌ಫೀಲ್ಡ್ ಶಾಲೆಯಲ್ಲಿ ತಮ್ಮ ಆರಂಭಿಕ ಶಿಕ್ಷಣವನ್ನು ಪೂರ್ಣಗೊಳಿಸಿದ್ದರು. ಲಿಂಕ್ಡ್‌ಇನ್ ಪ್ರೊಫೈಲ್‌ನ ಪ್ರಕಾರ ಅವರು ಯುಕೆ ಮೂಲದ ಉದ್ಯಮಿಯಾಗಿದ್ದು, ಲಂಡನ್‌ನ ರೀಜೆಂಟ್ಸ್ ಯೂನಿವರ್ಸಿಟಿಯಿಂದ ವ್ಯಾಪಾರ, ನಿರ್ವಹಣೆ, ಮಾರ್ಕೆಟಿಂಗ್ ಮತ್ತು ಸಂಬಂಧಿತ ಬೆಂಬಲ ಸೇವೆಗಳ ಕುರಿತು ಅಧ್ಯಯನ ಪೂರ್ಣಗೊಳಿಸಿದ್ದಾರೆ.

Kriti Sanon
Kriti Sanon


ಯುಕೆಯಲ್ಲಿ ಸೌಥಾಲ್ ಟ್ರಾವೆಲ್ ಎಂಬ ಪ್ರಮುಖ ಟ್ರಾವೆಲ್ ಕಂಪನಿಯನ್ನು ನಡೆಸುತ್ತಿರುವ ಕುಲ್ಜಿಂದರ್ ಬಹಿಯಾ ಅವರ ಮಗ ಕಬೀರ್. 2019ರ ಸಂಡೇ ಟೈಮ್ಸ್ ಶ್ರೀಮಂತರ ಪಟ್ಟಿಯ ಆಧರಿಸಿ ಹೇಳುವುದಾದರೆ ಕುಲ್ಜಿಂದರ್ ಮತ್ತು ಅವರ ಕುಟುಂಬವು 427 ಮಿಲಿಯನ್ ಪೌಂಡ್‌ಗಳ (ಸುಮಾರು 4590 ಕೋಟಿ ರೂ.) ನಿವ್ವಳ ಮೌಲ್ಯವನ್ನು ಹೊಂದಿದೆ. ಕಬೀರ್ ತನ್ನದೇ ಆದ ಟ್ರಾವೆಲ್ ಕಂಪನಿಯಾದ ವರ್ಲ್ಡ್‌ವೈಡ್ ಏವಿಯೇಷನ್ ​​ಮತ್ತು ಟೂರಿಸಂ ಲಿಮಿಟೆಡ್ ಅನ್ನು ಪ್ರಾರಂಭಿಸಿದ್ದು, 2021ರ ಜೂನ್ ನಿಂದ ಅದರ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ.

ಕಬೀರ್ ಉದ್ಯಮಿಯಾಗಿದ್ದರೂ ಕ್ರೀಡೆಯಲ್ಲಿ ಅಪಾರ ಆಸಕ್ತಿ ಹೊಂದಿದ್ದಾರೆ. ಅವರ ನೆಚ್ಚಿನ ಫುಟ್‌ಬಾಲ್ ಕ್ಲಬ್ ಬೊರುಸ್ಸಿಯಾ ಡಾರ್ಟ್‌ಮಂಡ್ ಆಗಿದೆ. ಅವರು ಹಲವಾರು ಭಾರತೀಯ ಕ್ರಿಕೆಟಿಗರೊಂದಿಗೆ ನಿಕಟ ಸಂಬಂಧವನ್ನು ಹೊಂದಿದ್ದಾರೆ.

ಎಂ.ಎಸ್. ಧೋನಿ, ಹಾರ್ದಿಕ್ ಪಾಂಡ್ಯ ಅವರಿಗೂ ಪರಿಚಿತರು

ನತಾಸಾ ಸ್ಟಾಂಕೋವಿಕ್ ಮತ್ತು ಹಾರ್ದಿಕ್ ಪಾಂಡ್ಯ ಅವರ ವಿವಾಹ ಸಮಾರಂಭದಲ್ಲಿ ಕಬೀರ್ ಭಾಗವಹಿಸಿದ್ದರು. ಅಲ್ಲದೇ ಮಹೇಂದ್ರ ಸಿಂಗ್ ಧೋನಿ ಮತ್ತು ಅವರ ಕುಟುಂಬದ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದಾರೆ. 2024ರ ಹೊಸ ವರ್ಷಾಚರಣೆಯ ಸಂದರ್ಭದಲ್ಲಿ ಧೋನಿ ಮತ್ತು ಅವರ ಪತ್ನಿ ಸಾಕ್ಷಿಯೊಂದಿಗೆ ಕಬೀರ್ ಕಾಣಿಸಿಕೊಂಡಿದ್ದರು. ಕಬೀರ್ ತಮ್ಮ ಇನ್‌ಸ್ಟಾಗ್ರಾಮ್ ಪ್ರೊಫೈಲ್‌ನಲ್ಲಿ ಇಬ್ಬರೂ ಕ್ರಿಕೆಟಿಗರೊಂದಿಗೆ ಅನೇಕ ಚಿತ್ರಗಳನ್ನು ಹೊಂದಿದ್ದಾರೆ.

Kriti Sanon
Kriti Sanon


ಕೃತಿ ಸನೋನ್ ಜೊತೆ ಡೇಟಿಂಗ್ ವದಂತಿ

ಕೃತಿ ಮತ್ತು ಕಬೀರ್ ಹೊಸ ವರ್ಷವನ್ನು ಒಟ್ಟಿಗೆ ಆಚರಿಸುತ್ತಿರುವಾಗ ಅವರ ನಡುವಿನ ಸಂಬಂಧದ ಬಗ್ಗೆ ವದಂತಿಗಳು ಪ್ರಾರಂಭವಾದವು. 2024ರ ಹೋಳಿ ಹಬ್ಬವನ್ನು ಕಬೀರ್ ಜೊತೆ ಕೃತಿ ನಡೆಸಿರುವುದಾಗಿ ಹೇಳುವ ಅನೇಕ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದ್ದು, ಇದು ನಟಿಯ ಅಭಿಮಾನಿಗಳು ಕುತೂಹಲ ಕೆರಳಿಸಿದೆ. ಕಬೀರ್‌ಗಿಂತ ಒಂಬತ್ತು ವರ್ಷ ಹಿರಿಯರಾದ ಕೃತಿ ತನ್ನ ಸಹೋದರಿ ನೂಪುರ್ ಮೂಲಕ ಅವರನ್ನು ಮೊದಲ ಬಾರಿ ಭೇಟಿಯಾಗಿದ್ದರು ಎನ್ನಲಾಗಿದೆ.

ಇದನ್ನೂ ಓದಿ: OTT Releases: ಒಟಿಟಿಯಲ್ಲಿ ಈ ತಿಂಗಳು ಕಲ್ಕಿ, ಇಂಡಿಯನ್‌, ಟರ್ಬೊ ಜತೆಗೆ ಇನ್ಯಾವ ಹೊಸ ಚಿತ್ರ, ವೆಬ್‌ ಸಿರೀಸ್‌?

ಕೃತಿ ಸನೋನ್ ಇತ್ತೀಚೆಗೆ ತಮ್ಮ ಹುಟ್ಟುಹಬ್ಬದ ವೇಳೆ ಕಬೀರ್ ಜೊತೆ ಪ್ರವಾಸ ನಡೆಸಿರುವುದಾಗಿ ಕೇಳಿ ಬಂದಾಗ ಅವರಿಬ್ಬರ ಡೇಟಿಂಗ್ ಗೆ ಮತ್ತಷ್ಟು ಪುಷ್ಟಿ ಸಿಕ್ಕಿದೆ. ಸದ್ಯ ನಟಿ ಕೃತಿ ತನ್ನ ಸಹೋದರಿ ನೂಪುರ್ ಸನೋನ್ ಮತ್ತು ಸ್ನೇಹಿತರೊಂದಿಗೆ ಗ್ರೀಸ್‌ನಲ್ಲಿ ಕಾಲ ಕಳೆಯುತ್ತಿದ್ದಾರೆ. ಇದರಲ್ಲಿ ಅಭಿಮಾನಿಗಳು ಕೃತಿ ಮತ್ತು ಕಬೀರ್ ಒಟ್ಟಿಗೆ ಇರುವ ಚಿತ್ರಗಳನ್ನು ಸಾಮಾಜಿಕ ಮಾಧ್ಯಮಗಳ ಮೂಲಕ ಹರಿದಾಡುತ್ತಿವೆ. ಇದನ್ನು ನೋಡಿರುವ ಅವರ ಅಭಿಮಾನಿಗಳು ನಟಿ ಕೃತಿ ತಮ್ಮ 34ನೇ ಹುಟ್ಟುಹಬ್ಬವನ್ನು ಕಬೀರ್ ಜೊತೆ ಆಚರಿಸಿದರು ಎಂಬುದಾಗಿ ಹೇಳುತ್ತಿದ್ದಾರೆ

Continue Reading

Latest

Reels in Railway Station: ರೈಲ್ವೆ ನಿಲ್ದಾಣದಲ್ಲಿ ರೀಲ್ಸ್‌ ಮಾಡುತ್ತ ಯುವತಿಯ ಅಸಭ್ಯ ವರ್ತನೆ; ಕಿಡಿಕಾರಿದ ನೆಟ್ಟಿಗರು!

Reels in Railway Station: ಈಗಿನ ಯುವಜನತೆ ಸೋಶಿಯಲ್ ಮೀಡಿಯಾದಲ್ಲಿ ತಾವು ಟ್ರೆಂಡ್ ಆಗಬೇಕು ಎಂಬ ಹಪಾಹಪಿಯಲ್ಲಿ ರೀಲ್ಸ್‌ ಚಟಕ್ಕೆ ಬಿದ್ದಿದ್ದಾರೆ. ತಾವೇನು ಮಾಡುತ್ತಿದ್ದೇವೆ ಎಂಬ ವಿವೇಚನೆ ಇಲ್ಲದೇ ರಸ್ತೆ ಬದಿಯಲ್ಲಿ ಬಿದ್ದು ಹೊರಳಾಡುವುದು, ಬಿಲ್ಡಿಂಗ್‌ನಿಂದ ಹಾರುವುದು ಹೀಗೆ ಏನೇನೋ ಸರ್ಕಸ್‌ಗಳನ್ನು ಮಾಡುತ್ತಿರುತ್ತಾರೆ. ಇಂತಹದ್ದೇ ಒಂದು ಘಟನೆ ಇಲ್ಲಿ ನಡೆದಿದೆ. ಸೀಮಾ ಕನೋಜಿಯಾ ಎಂಬಾಕೆ ರೈಲ್ವೆ ನಿಲ್ದಾಣದಲ್ಲಿ ಬೆಂಚಿನ ಮೇಲೆ ಕುಳಿತಿರುವ ಮಹಿಳೆಯ ಬಳಿ ನೃತ್ಯ ಮಾಡುತ್ತಾ ಆ ಮಹಿಳೆಯ ಜೊತೆ ಅಸಭ್ಯವಾಗಿ ವರ್ತಿಸಿದ್ದಾಳೆ. ಇದಕ್ಕೆ ನೆಟ್ಟಿಗರು ಸಿಕ್ಕಾಪಟ್ಟೆ ಗರಂ ಆಗಿದ್ದಾರೆ.

VISTARANEWS.COM


on

Viral Video
Koo


ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆಗಲು (Reels in Railway Station) ಯುವ ಜನರು ರೀಲ್ಸ್‌ಗಳನ್ನು ಮಾಡುವ ಕ್ರೇಜ್‌ಗಿಳಿದಿದ್ದಾರೆ. ಈ ರೀಲ್ಸ್‌ಗಾಗಿ ಅವರು ಎಲ್ಲೆಂದರಲ್ಲಿ ಹಾಡಿ ಕುಣಿಯುತ್ತಾ ಸಾರ್ವಜನಿಕರಿಗೆ ತೊಂದರೆ ನೀಡಲಾರಂಭಿಸಿದ್ದಾರೆ. ಇತ್ತೀಚೆಗೆ ರೈಲ್ವೆ ನಿಲ್ದಾಣದಲ್ಲಿ ಯುವತಿಯೊಬ್ಬಳ ವಿಲಕ್ಷಣ ನೃತ್ಯದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದ್ದು, ಯುವತಿಯ ವರ್ತನೆಗೆ ಅನೇಕರು ಸಿಟ್ಟಾಗಿದ್ದಾರೆ.

ತನ್ನ ಇನ್ಸ್ಟಾಗ್ರಾಮ್ ಹ್ಯಾಂಡಲ್ @seemakanojiya87 ಮೂಲಕ ಚಿರಪರಿಚಿತಳಾಗಿರುವ ಸೀಮಾ ಕನೋಜಿಯಾ ಎಂಬಾಕೆ ನಿಲ್ದಾಣದಲ್ಲಿ ಬೆಂಚಿನ ಮೇಲೆ ಕುಳಿತಿರುವ ಮಹಿಳೆಯ ಬಳಿ ನೃತ್ಯ ಮಾಡುತ್ತಿದ್ದಾಳೆ. ಸೀಮಾ ನೃತ್ಯ ಮಾಡುತ್ತಾ ಆ ಮಹಿಳೆಯ ಜೊತೆ ಅಸಭ್ಯವಾಗಿ ವರ್ತಿಸಿದ್ದಾಳೆ. ಹಾಗಾಗಿ ಆ ಮಹಿಳೆ ತುಂಬಾ ಅಸಮಾಧಾನಗೊಂಡ ಹಾಗೆ ನಟಿಸುತ್ತಾ ಪ್ರತಿಭಟಿಸಿದ್ದಾಳೆ.

746,000ಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿರುವ ಸೀಮಾ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೊವನ್ನು ಪೋಸ್ಟ್ ಮಾಡಿದ್ದು, ಇದು 323 ದಶಲಕ್ಷಕ್ಕೂ ಹೆಚ್ಚು ವೀವ್ಸ್ ಪಡೆದಿದೆ, 75,000ಕ್ಕೂ ಹೆಚ್ಚು ಬಾರಿ ಶೇರ್ ಮಾಡಲಾಗಿದೆ. 200,000ಕ್ಕೂ ಹೆಚ್ಚು ಬಳಕೆದಾರರು ಈ ವಿಡಿಯೊವನ್ನು ಲೈಕ್ ಮಾಡಿದ್ದಾರೆ ಮತ್ತು 5,300ಕ್ಕೂ ಹೆಚ್ಚು ಕಾಮೆಂಟ್‌ಗಳು ಬಂದಿವೆ. ಆಕೆ ಈ ವಿಡಿಯೊಗೆ ಶೀರ್ಷಿಕೆ ನೀಡಿ ಮನರಂಜನೆಯ ಉದ್ದೇಶಗಳಿಗಾಗಿ ಈ ವಿಡಿಯೊ ಮಾಡಲಾಗಿದೆ. ಈ ವಿಡಿಯೊದಲ್ಲಿರುವ ಮಹಿಳೆ ತನ್ನ ಸ್ನೇಹಿತೆ ಎಂದು ವಿವರಿಸಿದ್ದಾಳೆ.

ಇದನ್ನೂ ಓದಿ: ನಿನಗೆಷ್ಟು ಬಾಯ್‌ಫ್ರೆಂಡ್‌ ಎನ್ನುತ್ತ ಗೆಳತಿಗೆ ಭೀಕರವಾಗಿ ಇರಿದ ಯುವ ಕಾಂಗ್ರೆಸ್ ಮುಖಂಡ!

ಆದರೆ ವೀಕ್ಷಕರು ಮಾತ್ರ ಆಕೆಯ ವಿವರಣೆಯ ಹೊರತಾಗಿಯೂ ಆಕೆಯ ವರ್ತನೆಯ ಬಗ್ಗೆ ಕೋಪಗೊಂಡಿದ್ದಾರೆ. ಅನೇಕ ಬಳಕೆದಾರರು ಈ ಕೃತ್ಯವನ್ನು ಅಸಭ್ಯ ಮತ್ತು ಅಪಾಯಕಾರಿ ಎಂದು ಖಂಡಿಸಿದ್ದಾರೆ. ರೈಲ್ವೆ ಪ್ಲಾಟ್‍ಫಾರ್ಮ್‍ನಲ್ಲಿ ಈ ರೀತಿ ನೃತ್ಯ ಮಾಡುವುದು ತುಂಬಾ ಅಪಾಯಕಾರಿ. ಅಂತಹ ಜನರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ರೈಲ್ವೆ ಇಲಾಖೆಗೆ ಮನವಿ ಮಾಡಿದ್ದಾರೆ.

ಇನ್ಸ್ಟಾಗ್ರಾಮ್ ಬ್ಲಾಗರ್ ಸೀಮಾ ಕನೋಜಿಯಾ ಈ ಹಿಂದೆ ಮುಂಬೈ ರೈಲ್ವೆ ಪ್ಲಾಟ್‍ಫಾರ್ಮ್‍ನಲ್ಲಿ ‘ಕುಚ್ ಕುಚ್ ಹೋತಾ ಹೈ’ ಚಿತ್ರದ ಪ್ರಸಿದ್ಧ ‘ಕೋಯಿ ಮಿಲ್ ಗ್ಯಾ’ ಹಾಡಿಗೆ ಉತ್ಸಾಹದಿಂದ ನೃತ್ಯ ಮಾಡುತ್ತಿರುವ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಸ್ಥಳೀಯ ರೈಲಿಗಾಗಿ ತಮ್ಮ ಬ್ಯಾಗ್ ಗಳನ್ನು ಹಿಡಿದುಕೊಂಡು ಕಾಯುತ್ತಿರುವ ಪ್ರಯಾಣಿಕರು, ಕನೋಜಿಯಾ ನೃತ್ಯವನ್ನು ಕಂಡು ಅದರಲ್ಲೇ ಮುಳುಗಿದ್ದಾರೆ. ಇದರಲ್ಲಿ ಆಕೆ ಕುಣಿಯುವುದು, ನೆಲದ ಮೇಲೆ ಉರುಳುವುದು ಮತ್ತು ಇತರ ಹಲವಾರು ಚಲನೆಗಳನ್ನು ಮಾಡಿದ್ದಾಳೆ. ಇದಕ್ಕೆ ಹಲವರು ವ್ಯಂಗ್ಯವಾಗಿ ಕಾಮೆಂಟ್ ಮಾಡಿದ್ದರು.

Continue Reading

Latest

Wayanad Tragedy: ಇಡೀ ಊರು ಭೂಕುಸಿತದಿಂದ ನಾಶ; ಮೂರು ದಿನ ಬಳಿಕ ಒಂದೇ ಕುಟುಂಬದ ನಾಲ್ವರು ಜೀವಂತವಾಗಿ ಪತ್ತೆ!

Wayanad Tragedy: ಭಾರಿ ಭೂಕುಸಿತಕ್ಕೆ ಒಳಗಾದ ವಯನಾಡಿನ ಮುಂಡಕ್ಕೈ ಪ್ರದೇಶದಲ್ಲಿ ಭಾರಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಆ ವೇಳೆ ಒಂದೇ ಮನೆಯಲ್ಲಿ ವಾಸವಾಗಿದ್ದ ಕುಟುಂಬದ ಇಬ್ಬರು ಪುರುಷರು ಮತ್ತು ಇಬ್ಬರು ಮಹಿಳೆಯರು ಜೀವಂತವಾಗಿ ಪತ್ತೆಯಾಗಿದ್ದಾರೆ. ಅವರನ್ನು ಕಂಜಿರಕಥೋಟೆ ಕುಟುಂಬದ ಜಾನಿ, ಜೋಮೋಲ್, ಅಬ್ರಹಾಂ ಮತ್ತು ಕ್ರಿಸ್ಟಿ ಎಂದು ಗುರುತಿಸಲಾಗಿದೆ.ರಕ್ಷಣಾ ಕಾರ್ಯಕರ್ತರು ಅವರನ್ನು ರಕ್ಷಿಸಿ ಹೆಲಿಕಾಪ್ಟರ್ ಮೂಲಕ ಸುರಕ್ಷಿತ ಸ್ಥಳಕ್ಕೆ ಕಳುಹಿಸಿದ್ದಾರೆ.

VISTARANEWS.COM


on

Wayanad Tragedy
Koo


ಕೇರಳದ ವಯನಾಡ್(Wayanad Tragedy) ಜಿಲ್ಲೆಯ ಮೂರು ಪ್ರದೇಶಗಳಲ್ಲಿ ಭೂಕುಸಿತ ಉಂಟಾಗಿ ಮೂರು ದಿನ ಕಳೆದಿದೆ. ಈ ನಡುವೆ ಪವಾಡ ಎಂಬಂತೆ, ಮುಂಡಕ್ಕೈ ಪ್ರದೇಶದಲ್ಲಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದ ಕಾರ್ಯಕರ್ತರು ಶುಕ್ರವಾರ ಪಡವೆಟ್ಟಿ ಕುನ್ನು ಬಳಿಯ ಪ್ರದೇಶದಲ್ಲಿ ಒಂದೇ ಕುಟುಂಬದ ನಾಲ್ಕು ಜನರನ್ನು ಜೀವಂತವಾಗಿ ಪತ್ತೆ ಮಾಡಿದ್ದಾರೆ!

ಮಂಗಳವಾರ ಭಾರಿ ಭೂಕುಸಿತಕ್ಕೆ ಒಳಗಾದ ವಯನಾಡಿನ ಮುಂಡಕ್ಕೈ ಪ್ರದೇಶದಲ್ಲಿ ಭಾರಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಆ ವೇಳೆ ಒಂದೇ ಮನೆಯಲ್ಲಿ ವಾಸವಾಗಿದ್ದ ಕುಟುಂಬದ ಇಬ್ಬರು ಪುರುಷರು ಮತ್ತು ಇಬ್ಬರು ಮಹಿಳೆಯರು ಜೀವಂತವಾಗಿ ಪತ್ತೆಯಾಗಿದ್ದಾರೆ. ಅವರನ್ನು ಕಂಜಿರಕಥೋಟೆ ಕುಟುಂಬದ ಜಾನಿ, ಜೋಮೋಲ್, ಅಬ್ರಹಾಂ ಮತ್ತು ಕ್ರಿಸ್ಟಿ ಎಂದು ಗುರುತಿಸಲಾಗಿದೆ.

ರಕ್ಷಣಾ ಕಾರ್ಯಕರ್ತರು ಅವರನ್ನು ರಕ್ಷಿಸಿ ಹೆಲಿಕಾಪ್ಟರ್ ಮೂಲಕ ಸುರಕ್ಷಿತ ಸ್ಥಳಕ್ಕೆ ಕಳುಹಿಸಿದ್ದಾರೆ. ಇದರಲ್ಲಿ ಒಬ್ಬ ಮಹಿಳೆಯ ಕಾಲಿಗೆ ಗಂಭೀರ ಗಾಯವಾಗಿದೆ ಎಂದು ತಿಳಿದು ಬಂದಿದೆ. ಮೇಲ್ನೋಟಕ್ಕೆ, ಭೂಕುಸಿತದಿಂದ ಅವರ ಮನೆಯ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಹಾಗಾಗಿ ಅವರು ಜೀವಂತವಾಗಿ ಉಳಿದಿದ್ದಾರೆ ಎನ್ನಲಾಗಿದೆ.

ಕೇರಳದಲ್ಲಿ ಜುಲೈ 30ರಂದು ಮುಂಜಾನೆ ಭಾರಿ ಮಳೆಯಿಂದಾಗಿ ವಯನಾಡ್ ಜಿಲ್ಲೆಯ ವೈತಿರಿ ತಾಲ್ಲೂಕಿನ ಸುಮಾರು ಮೂರು ಹಳ್ಳಿಗಳಾದ ಮುಂಡಕ್ಕೈ, ಚೂರಲ್ಮಾಲಾ, ಅಟ್ಟಮಾಲಾ ಪ್ರದೇಶಗಳಲ್ಲಿ ಭೂಕುಸಿತ ಉಂಟಾಗಿದೆ. ಮುಂಜಾನೆ 2 ಮತ್ತು 4.10ರ ಸುಮಾರಿಗೆ ಭೂಕುಸಿತ ಸಂಭವಿಸಿದ್ದು, ಈ ಸಮಯದಲ್ಲಿ ಜನರು ಮಲಗಿದ್ದರಿಂದ ಇದು ಹೆಚ್ಚಿನ ಸಂಖ್ಯೆಯ ಸಾವುನೋವುಗಳಿಗೆ ಕಾರಣವಾಗಿದೆ.

ಇದನ್ನೂ ಓದಿ: ಮಂಗಳೂರು-ಬೆಂಗಳೂರು ರೈಲು ವೇಳಾಪಟ್ಟಿ ಬದಲು; ಪ್ರಯಾಣಿಕರಿಗೆ ಏನು ಲಾಭ?

ಈಗಾಗಲೇ ಈ ಭೂಕುಸಿತದಲ್ಲಿ 201 ಜನರು ಸಾವನ್ನಪ್ಪಿದ್ದಾರೆ. ಇನ್ನೂ ಕಾಣೆಯಾದ ಸುಮಾರು 300 ಜನರಿಗಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಹಾಗೇ ಅನೇಕ ದೇಹದ ಭಾಗಗಳನ್ನು ಸಂಗ್ರಹಿಸಲಾಗಿದೆ ಮತ್ತು ಅವಶೇಷಗಳನ್ನು ಗುರುತಿಸಲು ಡಿಎನ್‌ಎ ಪರೀಕ್ಷೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Continue Reading

ದೇಶ

Wayanad Landslide: 144 ಸೈನಿಕರು 31 ಗಂಟೆಯೊಳಗೆ 190 ಅಡಿ ಉದ್ದದ ಸೇತುವೆ ನಿರ್ಮಿಸಿದ್ದು ಹೇಗೆ?

ಭೂಕುಸಿತವಾಗಿರುವ ವಯನಾಡಿನ (Wayanad Landslide) ಚೂರಲ್ಮಲಾದಿಂದ ಮುಂಡಕ್ಕೈ ಗೆ ಸಂಪರ್ಕ ಕಲ್ಪಿಸಲು ಭಾರತೀಯ ಸೈನಿಕರು 31 ಗಂಟೆಗಳಲ್ಲಿ ಅದ್ಭುತ ಸೇತುವೆಯನ್ನು ನಿರ್ಮಿಸಿದ್ದಾರೆ. 190 ಅಡಿ ಉದ್ದದ ಸೇತುವೆ ನಿರ್ಮಾಣ ಕಾರ್ಯ ಸುಲಭವಾಗಿರಲಿಲ್ಲ. ಆದರೂ ನಮ್ಮ ಸೈನಿಕರು ಸೀಮಿತ ಅವಧಿಯಲ್ಲಿ ಅದನ್ನು ನಿರ್ಮಿಸಿದ್ದಾರೆ. ಇದರ ಕಾರ್ಯಾಚರಣೆ ಹೇಗಿತ್ತು ಗೊತ್ತೇ? ಅಂದ ಹಾಗೆ, ಈ ಸೇತುವೆಗೆ ಬೆಂಗಳೂರಿನ ನಂಟೂ ಇದೆ.

VISTARANEWS.COM


on

By

Wayanad Landslide
Koo

ವಯನಾಡು: ಪ್ರವಾಹ ಪೀಡಿತ ವಯನಾಡಿನಲ್ಲಿ (Wayanad Landslide) ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿರುವ ಭಾರತೀಯ ಸೇನೆ (Indian army) 31 ಗಂಟೆಗಳ ಅವಧಿಯಲ್ಲಿ ಯಾವುದೇ ವಿರಾಮವಿಲ್ಲದೆ 190 ಅಡಿ ಉದ್ದದ ಸೇತುವೆಯನ್ನು (Bailey bridge) ನಿರ್ಮಿಸಿ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ. ವಯನಾಡಿನ ಕುಗ್ರಾಮವಾದ ಚೂರಲ್ಮಲಾ ಮತ್ತು ಮುಂಡಕ್ಕೈ ಭೂಕುಸಿತದಿಂದಾಗಿ ಧ್ವಂಸಗೊಂಡಿದ್ದು, ಇಲ್ಲಿ ಫ್ಯಾಬ್ರಿಕೇಟೆಡ್ ಟ್ರಸ್ ಬೈಲಿ ಸೇತುವೆಯನ್ನು ನಿರ್ಮಿಸಲಾಗಿದೆ.

ಬೆಟ್ಟಗಳಿಂದ ಪ್ರಬಲ ಬಂಡೆಗಳು ಉರುಳಿ ಬಿದ್ದ ಪರಿಣಾಮ ಇಲ್ಲಿದ್ದ 100 ಅಡಿ ಉದ್ದದ ಕಾಂಕ್ರೀಟ್ ಸೇತುವೆ ಸಂಪೂರ್ಣ ಧ್ವಂಸಗೊಂಡಿದೆ. ನಿರ್ಮಾಣಗೊಂಡ ಹೊಸ ಸೇತುವೆ ಮೇಲೆ ಸೈನ್ಯವು ಮೊದಲು ಆಂಬ್ಯುಲೆನ್ಸ್ ಅನ್ನು ಹಾದುಹೋಗಲು ಅವಕಾಶ ಮಾಡಿಕೊಟ್ಟಿತು. ಬಳಿಕ ಮಿಲಿಟರಿ ಸೇವೆಯನ್ನು ಒದಗಿಸಲು ಕಳುಹಿಸಿತ್ತು.

3 ಮೀಟರ್ ಅಗಲದ ಸೇತುವೆಯ ಸಾಮರ್ಥ್ಯವನ್ನು 24 ಟನ್‌ಗಳನ್ನು ಹೊತ್ತೊಯ್ಯಬಲ್ಲ ಟ್ರಕ್ ಮೂಲಕ ಪರೀಕ್ಷೆ ನಡೆಸಲಾಯಿತು. ಈ ಸೇತುವೆ ನಿರ್ಮಾಣದಿಂದ ಮುಂಡಕ್ಕೈನಲ್ಲಿ ಶೋಧ ಕಾರ್ಯಾಚರಣೆಯನ್ನು ಚುರುಕುಗೊಳಿಸಬಹುದು ಎಂದು ಕರ್ನಾಟಕ ಮತ್ತು ಕೇರಳ ಉಪ ಪ್ರದೇಶ ಕಮಾಂಡಿಂಗ್ ಅಧಿಕಾರಿ ಮೇಜರ್ ಜನರಲ್ ವಿ.ಟಿ. ಮ್ಯಾಥ್ಯೂ ತಿಳಿಸಿದ್ದಾರೆ.

Wayanad Landslide
Wayanad Landslide


ಸೇತುವೆಯ ಅಗಲವು ಮಣ್ಣು ತೆಗೆಯುವ ಯಂತ್ರ, ಅಗೆಯುವ ಯಂತ್ರಗಳು, ಆಂಬ್ಯುಲೆನ್ಸ್‌ ಮತ್ತು ಜೀಪ್‌, ಟ್ರಕ್‌ಗಳು ಸಾಗಲು ಸಾಕಷ್ಟು ಉತ್ತಮವಾಗಿದೆ. ಮುಂಡಕೈಗೆ ಇಲ್ಲಿಯವರೆಗೆ ಕೇವಲ ಟೀ ಎಸ್ಟೇಟ್‌ನಲ್ಲಿದ್ದ ಆಫ್ ರೋಡ್ ಜೀಪುಗಳನ್ನು ಮಾತ್ರ ಕಳುಹಿಸಲು ಸಾಧ್ಯವಾಗುತ್ತಿತ್ತು ಎಂದು ಅಧಿಕಾರಿ ತಿಳಿಸಿದರು. ಮಂಡಕೈ ಪ್ರದೇಶದಲ್ಲಿ 400 ಮನೆಗಳಿದ್ದು, ಭೂಕುಸಿತದಿಂದ 30 ಮಂದಿ ಮಾತ್ರ ಬದುಕುಳಿದಿದ್ದಾರೆ. ಅಲ್ಲಿ ಇನ್ನೂ ಅನೇಕ ಜನರಿದ್ದು, ಕಾಣೆಯಾಗಿದ್ದಾರೆ ಎಂದು ಅವರು ಹೇಳಿದರು.

ಸೇತುವೆ ಹೇಗೆ ನಿರ್ಮಿಸಲಾಯಿತು?

ಜುಲೈ 30ರಂದು ಚೂರಲ್ಮಲಾದಲ್ಲಿ ಬೈಲಿ ಸೇತುವೆಗಾಗಿ 20 ಟ್ರಕ್‌ಗಳಲ್ಲಿ ಬೆಂಗಳೂರಿನಿಂದ ಪ್ರತಿ 10 ಅಡಿ ಉದ್ದದ ಪ್ಯಾನಲ್‌ಗಳನ್ನು ಸಾಗಿಸಲಾಗಿತ್ತು. 190 ಅಡಿ ಉದ್ದದ ಸೇತುವೆ ನಿರ್ಮಿಸಲು ಒಟ್ಟು 19 ಉಕ್ಕಿನ ಫಲಕಗಳನ್ನು ಬಳಸಲಾಗಿದೆ. ಇದು ಒಂದೇ ಪಿಯರ್‌ನಿಂದ ಆಧರಿತವಾಗಿದ ಎಂದು ಮೇಜರ್ ಜನರಲ್ ಮ್ಯಾಥ್ಯೂ ಹೇಳಿದರು.

Wayanad Landslide
Wayanad Landslide


ಮಂಗಳವಾರ ಸಂಜೆಯೇ ಮದ್ರಾಸ್ ಎಂಜಿನಿಯರ್ ಗ್ರೂಪ್‌ನ ಅಧಿಕಾರಿಗಳು, ಸೇನೆಯ ಎಂಜಿನಿಯರಿಂಗ್ ಟಾಸ್ಕ್ ಫೋರ್ಸ್ ಸ್ಥಳಕ್ಕೆ ಆಗಮಿಸಿತ್ತು. ಬುಧವಾರ ಬೆಳಗ್ಗೆ 9 ಗಂಟೆಗೆ ಸೀಮಿತ ಸ್ಥಳಾವಕಾಶದಲ್ಲಿ ಸೇತುವೆ ನಿರ್ಮಾಣ ಕಾರ್ಯವನ್ನು 144 ಅಧಿಕಾರಿಗಳು ಪ್ರಾರಂಭಿಸಿದರು. ಒಂದು ಟ್ರಕ್‌ಗೆ ಮಾತ್ರ ಸ್ಥಳಾವಕಾಶವಿತ್ತು. ಪ್ರತಿಕೂಲ ಹವಾಮಾನ ಪರಿಸ್ಥಿತಿ, ಸಾಕಷ್ಟು ಸ್ಥಳಾವಕಾಶದ ಕೊರತೆಯಿಂದ ಕಾಮಗಾರಿ ವಿಳಂಬವಾಯಿತು. ಇವೆಲ್ಲದರ ಹೊರತಾಗಿಯೂ ಅಧಿಕಾರಿಗಳು ರಾತ್ರಿಯಿಡೀ ಬಿಡುವಿಲ್ಲದೆ ದುಡಿದು ಆಗಸ್ಟ್ 1ರಂದು ಸಂಜೆ 6 ಗಂಟೆಗೆ ಸೇತುವೆಯನ್ನು ಸಿದ್ಧಗೊಳಿಸಿದರು ಎಂದು ಅವರು ತಿಳಿಸಿದರು.



ಇದನ್ನೂ ಓದಿ: Wayanad Landslide: ವಯನಾಡು ಹಿಂದೆ ಹೇಗಿತ್ತು? ಈಗ ಹೇಗಿದೆ? ದುರಂತ ಸ್ಥಳದ ದೃಶ್ಯ ಸೆರೆ ಹಿಡಿದ ಇಸ್ರೋ

ಬೈಲಿ ಸೇತುವೆಗೆ ಸಮಾನಾಂತರವಾದ ಕಾಲುಸೇತುವೆ ನಿರ್ಮಾಣ ಕಾರ್ಯವನ್ನು ಗುರುವಾರ ಮುಂಜಾನೆ 3 ಗಂಟೆ ಸುಮಾರಿಗೆ ಸೇನೆಯ ಸಿಬ್ಬಂದಿ ಪ್ರಾರಂಭಿಸಿದರು. 100 ಅಡಿ ಉದ್ದದ ಈ ಸೇತುವೆಯನ್ನು ಸಂಜೆ 6 ಗಂಟೆಗೆ ಪೂರ್ಣಗೊಳಿಸಿದ್ದೇವೆ ಎಂದರು. ಈ ಎರಡು ಸೇತುವೆಗಳನ್ನು ಸರ್ಕಾರ ಬಯಸಿದಷ್ಟು ಕಾಲ ಇರಿಸಿಕೊಳ್ಳಬಹುದು. ಈ ಹಿಂದೆ ಶಬರಿಮಲೆಯಲ್ಲಿ ನಿರ್ಮಿಸಿರುವ ಬೈಲಿ ಸೇತುವೆ ಇನ್ನೂ ಇದೆ ಎಂದು ಅವರು ತಿಳಿಸಿದರು.

Continue Reading
Advertisement
Kodagu News
ಪ್ರಮುಖ ಸುದ್ದಿ7 mins ago

Wayanad landslide: ವಯನಾಡು ಭೂ ಕುಸಿತ; ಮೃತ ಬಾಲಕ ರೋಹಿತ್ ತಾಯಿಗೆ ಸಾಂತ್ವನ ಹೇಳಿ ಪರಿಹಾರ ಘೋಷಿಸಿದ ಸಿಎಂ

Paris Olympics 2024
ಪ್ರಮುಖ ಸುದ್ದಿ10 mins ago

Paris Olympics 2024 : ಪ್ಯಾರಿಸ್​​ನಲ್ಲಿ ಸಿಕ್ಕಾಪಟ್ಟೆ ಸೆಖೆ; ಅಥ್ಲೀಟ್​ಗಳಿಗಾಗಿ 40 ಎಸಿ ಕಳುಹಿಸಿದ ಕ್ರೀಡಾ ಸಚಿವಾಲಯ

Kriti Sanon
Latest15 mins ago

Kriti Sanon: ನಟಿ ಕೃತಿ ಸನೋನ್‌ ಡೇಟಿಂಗ್‌ ಮಾಡುತ್ತಿರುವ ಈ ಕಬೀರ್ ಬಹಿಯಾ ಯಾರು?

Viral Video
Latest28 mins ago

Reels in Railway Station: ರೈಲ್ವೆ ನಿಲ್ದಾಣದಲ್ಲಿ ರೀಲ್ಸ್‌ ಮಾಡುತ್ತ ಯುವತಿಯ ಅಸಭ್ಯ ವರ್ತನೆ; ಕಿಡಿಕಾರಿದ ನೆಟ್ಟಿಗರು!

Dog attack
ಕ್ರೈಂ39 mins ago

Dog Attack: ವೃದ್ಧ ತಾಯಿಯನ್ನು ಮನೆಯ ಹೊರಗೆ ಮಲಗಿಸಿದ್ದ ಪುತ್ರರು; ಜೀವಂತವಾಗಿ ತಿಂದು ಹಾಕಿದ ಬೀದಿ ನಾಯಿಗಳು!

karnataka Weather Forecast
ಮಳೆ43 mins ago

Karnataka Weather : ವಾರಾಂತ್ಯದಲ್ಲಿ ಉಡುಪಿ, ಉತ್ತರ ಕನ್ನಡದಲ್ಲಿ ಭಾರಿ ಮಳೆ ಎಚ್ಚರಿಕೆ

Paris Olympics 2024
ಪ್ರಮುಖ ಸುದ್ದಿ45 mins ago

Paris Olympics 2024 : 52 ವರ್ಷಗಳ ಬಳಿಕ ಒಲಿಂಪಿಕ್ಸ್​​ನಲ್ಲಿ ಆಸ್ಟ್ರೇಲಿಯಾ ತಂಡವನ್ನು ಸೋಲಿಸಿದ ಭಾರತದ ಹಾಕಿ ತಂಡ

Wayanad Tragedy
Latest51 mins ago

Wayanad Tragedy: ಇಡೀ ಊರು ಭೂಕುಸಿತದಿಂದ ನಾಶ; ಮೂರು ದಿನ ಬಳಿಕ ಒಂದೇ ಕುಟುಂಬದ ನಾಲ್ವರು ಜೀವಂತವಾಗಿ ಪತ್ತೆ!

Nice road
ಕರ್ನಾಟಕ56 mins ago

NICE Road: ನೈಸ್ ರಸ್ತೆಯಲ್ಲಿ ವೇಗದ ಚಾಲನೆಗೆ ಬ್ರೇಕ್; ರಾತ್ರಿ ವೇಳೆ‌ ದ್ವಿಚಕ್ರ ವಾಹನ ಸಂಚಾರಕ್ಕೂ ನಿಷೇಧ!

Wayanad Landslide
ದೇಶ2 hours ago

Wayanad Landslide: 144 ಸೈನಿಕರು 31 ಗಂಟೆಯೊಳಗೆ 190 ಅಡಿ ಉದ್ದದ ಸೇತುವೆ ನಿರ್ಮಿಸಿದ್ದು ಹೇಗೆ?

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka Rain
ಮಳೆ1 day ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ1 day ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ1 day ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

karnataka Rain
ಮಳೆ3 days ago

Karnataka rain : ಭದ್ರಾ ನದಿಯಲ್ಲಿ ಕೊಚ್ಚಿ ಹೋದ ಹಸು; ಬೈಂದೂರಿನಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ

Karnataka Rain
ಮಳೆ3 days ago

Karnataka Rain : ಭಾರಿ ಮಳೆಗೆ ಬಾಳೆಹೊನ್ನೂರು ಮುಳುಗಡೆ; ನೆರೆಗೆ ಬೋಟ್‌ ಮೊರೆ ಹೋದ ಜನರು

Bharachukki falls
ಚಾಮರಾಜನಗರ3 days ago

Bharachukki Falls : ಭರಚುಕ್ಕಿ ಜಲಪಾತಕ್ಕೆ ಕಳ್ಳ ಮಾರ್ಗದಿಂದ ಹೋದೋರಿಗೆ ಬಸ್ಕಿ ಹೊಡೆಸಿದ ಪೊಲೀಸರು!

karnataka Rain
ಮಳೆ4 days ago

Karnataka Rain: ಮತ್ತೆ ಶುರು ಮಳೆ ಅಬ್ಬರ; ಗಾಳಿಗೆ ಹಾರಿ ಹೋದ ಮನೆಗಳ ಚಾವಣಿ, ಶಿರಾಡಿಘಾಟ್‌ನಲ್ಲಿ ಮತ್ತೆ ಭೂ ಕುಸಿತ

Elephant combing Makna elephant captured near Bannerghatta
ಬೆಂಗಳೂರು ಗ್ರಾಮಾಂತರ4 days ago

Elephant combing: ಭೀಮ, ಮಹೇಂದ್ರರ ಮುಂದೆ ಮಂಡಿಯೂರಿದ ಮಕ್ನಾ ಆನೆ; ಹೇಗಿತ್ತು ಗೊತ್ತಾ ಕಾರ್ಯಾಚರಣೆ

karnataka rain
ಮಳೆ4 days ago

Karnataka rain: ಪ್ರವಾಹದ ಭೀಕರತೆ; ಹಳ್ಳದಲ್ಲಿ ತೇಲಿಬಂದ ಎಮ್ಮೆಗಳ ಕಳೇಬರ

Tungabhadra Dam
ಕೊಪ್ಪಳ5 days ago

Tungabhadra Dam: ಕಾಲುವೆಯಲ್ಲಿ ಬಾಲಕರ ಈಜಾಟ; ಅಧಿಕಾರಿಗಳಿಗೆ ಪೀಕಲಾಟ!

ಟ್ರೆಂಡಿಂಗ್‌