Haris Rauf: ʼದಿ ಹಂಡ್ರೆಡ್‌ʼ ಕ್ರಿಕೆಟ್‌ ಲೀಗ್‌ ಆಡುತ್ತಿದ್ದ ಪಾಕ್‌ ವೇಗಿ ರೌಫ್‌ಗೆ ಕೊಹ್ಲಿ ಬಾರಿಸಿದ ಸಿಕ್ಸರ್‌ ನೆನಪಿಸಿದ ಅಭಿಮಾನಿ; ವಿಡಿಯೊ ವೈರಲ್‌ - Vistara News

ಕ್ರೀಡೆ

Haris Rauf: ʼದಿ ಹಂಡ್ರೆಡ್‌ʼ ಕ್ರಿಕೆಟ್‌ ಲೀಗ್‌ ಆಡುತ್ತಿದ್ದ ಪಾಕ್‌ ವೇಗಿ ರೌಫ್‌ಗೆ ಕೊಹ್ಲಿ ಬಾರಿಸಿದ ಸಿಕ್ಸರ್‌ ನೆನಪಿಸಿದ ಅಭಿಮಾನಿ; ವಿಡಿಯೊ ವೈರಲ್‌

Haris Rauf: ಅಂದು ನಡೆದಿದ್ದ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ ಅವರು ರೌಫ್‌ ಅವರು ಎಸೆದಿದ್ದ 19ನೇ ಓವರ್‌ನ ಕೊನೆಯ 2 ಎಸೆತಗಳನ್ನು ಅಸಾಮಾನ್ಯ ಬ್ಯಾಟಿಂಗ್‌ ಮೂಲಕ ಸತತವಾಗಿ ಸಿಕ್ಸರ್‌ಗೆ ಬಡಿದಿಟ್ಟಿದ್ದರು. ಇದು ಪಂದ್ಯಕ್ಕೆ ಮಹತ್ವದ ತಿರುವು ನೀಡಿತ್ತು.

VISTARANEWS.COM


on

Haris Rauf
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಲಂಡನ್‌: 2022ರಲ್ಲಿ ಆಸ್ಟ್ರೇಲಿಯಾದ ಮೆಲ್ಬರ್ನ್ ಮೈದಾನದಲ್ಲಿ ನಡೆದಿದ್ದ​ ಟಿ-20 ವಿಶ್ವಕಪ್‌(t20 world cup 2022) ಪಂದ್ಯದ ವೇಳೆ ಪಾಕಿಸ್ತಾನದ ವೇಗಿ ಹ್ಯಾರಿಸ್‌ ರೌಫ್‌(Haris Rauf) ಬೌಲಿಂಗ್‌ಗೆ ವಿರಾಟ್‌ ಕೊಹ್ಲಿ(Virat Kohli) ಲೀಲಾಜಾಲವಾಗಿ ಸಿಕ್ಸರ್‌ ಬಾರಿಸಿದ್ದನ್ನು ಯಾವ ಭಾರತೀಯನೂ ಮರೆತಿರಲಿಕ್ಕಿಲ್ಲ. ಕೊಹ್ಲಿ ಈ ಓವರ್​ನಲ್ಲಿ ಬಾರಿಸಿದ ಸಿಕ್ಸರ್​ನಿಂದಾಗಿ ಅಂದು ಭಾರತ(t20 world cup 2022 ind vs pak) ಪಂದ್ಯವನ್ನು ಗೆದ್ದು ಬೀಗಿತ್ತು. ಇದೀಗ ದಿ ಹಂಟ್ರೆಡ್​ ಕ್ರಿಕೆಟ್​ ಟೂರ್ನಿಯನ್ನಾಡುತ್ತಿದ್ದ ರೌಫ್​ ಅವರನ್ನು ಭಾರತೀಯ ಅಭಿಮಾನಿಯೊಬ್ಬ ಕೆಣಕ್ಕಿದ ವಿಡಿಯೊ ವೈರಲ್(viral video)​ ಆಗಿದೆ.

ಲಂಡನ್ ಸ್ಪಿರೀಟ್‌ ವಿರುದ್ಧದ ಪಂದ್ಯದಲ್ಲಿ ಹ್ಯಾರಿಸ್‌ ರೌಫ್‌ ಬೌಂಡರಿ ಲೈನ್‌ನಲ್ಲಿ ಫೀಲ್ಡಿಂಗ್‌ ಮಾಡುತ್ತಿದ್ದಋು. ಈ ವೇಳೆ ಪ್ರೇಕ್ಷಕರ ಸ್ಟ್ಯಾಂಡ್‌ನಲ್ಲಿದ್ದ ಅಭಿಮಾನಿಯೊಬ್ಬ ಹಿಂದಿಯಲ್ಲಿ ರೌಫ್‌ ಭಾಯ್…ರೌಫ್‌ ಭಾಯ್ ಎಂದು ಕರೆದು ನೆನೆಪಿದೆಯಾ ಅಂದು ಮೆಲ್ಬರ್ನ್ ಮೈದಾನದಲ್ಲಿ ನಿಮ್ಮ ಓವರ್‌ನಲ್ಲಿ ವಿರಾಟ್‌ ಕೊಹ್ಲಿ ಸಿಕ್ಸರ್‌ ಬಾರಿಸಿದ್ದು ಎಂದು ಹೇಳುವ ಮೂಲಕ ಕೀಚಾಯಿಸಿದ್ದಾರೆ. ಈ ವೇಳೆ ರೌಫ್‌ ತಲೆಯಾಡಿಸುತ್ತಾ ಹಾ ನೆನಪಿದೆ ಎನ್ನುವಂತೆ ಸನ್ನೆ ಮಾಡಿದ್ದಾರೆ. ಸದ್ಯ ಈ ವಿಡಿಯೊ ವೈರಲ್‌ ಆಗಿದೆ.

ಅಂದು ನಡೆದಿದ್ದ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ ಅವರು ರೌಫ್‌ ಅವರು ಎಸೆದಿದ್ದ 19ನೇ ಓವರ್‌ನ ಕೊನೆಯ 2 ಎಸೆತಗಳನ್ನು ಅಸಾಮಾನ್ಯ ಬ್ಯಾಟಿಂಗ್‌ ಮೂಲಕ ಸತತವಾಗಿ ಸಿಕ್ಸರ್‌ಗೆ ಬಡಿದಿಟ್ಟಿದ್ದರು. ಇದು ಪಂದ್ಯಕ್ಕೆ ಮಹತ್ವದ ತಿರುವು ನೀಡಿತ್ತು. ಕೊಹ್ಲಿ ಈ 2 ಸಿಕ್ಸರ್‌ ಬಾರಿಸದೇ ಹೋಗಿದ್ದರೆ ಪಾಕಿಸ್ತಾನ ಪಂದ್ಯವನ್ನು ಗೆಲ್ಲುತ್ತಿತ್ತು. ರೌಫ್‌ ಈ ಓವರ್‌ನಲ್ಲಿ 15 ರನ್‌ ಬಿಟ್ಟುಕೊಟ್ಟಿದ್ದರು. ಈ ಪಂದ್ಯದಲ್ಲಿ ಕೊಹ್ಲಿ ಅಜೇಯ 82 ರನ್‌ ಬಾರಿಸಿ ಭಾರತದ ಗೆಲುವಿನ ಹೀರೊ ಎನಿಸಿಕೊಂಡಿದ್ದರು.

ಇದನ್ನೂ ಓದಿ ಮ್ಯಾಚ್‌ ಫಿಕ್ಸಿಂಗ್‌ ಕಳಂಕಿತ ಅಂಪೈರ್‌ ಅಸದ್‌ ರೌಫ್‌ ಇನ್ನಿಲ್ಲ

ಅಭಿಮಾನಿ ಮೇಲೆ ಹಲ್ಲೆಗೆ ಯತ್ನಿಸಿದ್ದ ರೌಫ್​


ಈ ಬಾರಿಯ ಟ್ವಿ20 ವಿಶ್ವಕಪ್‌ ಟೂನಿಯ ವೇಳೆ ಹ್ಯಾರಿಸ್ ರೌಫ್ ಅಭಿಮಾನಿಯೊಬ್ಬರ ಮೇಲೆ ಹಲ್ಲೆಗೆ ಯತ್ನಿಸಿ ಭಾರೀ ಟೀಕೆಗೆ ಒಳಗಾಗಿದ್ದರು. ಫ್ಲೋರಿಡಾದಲ್ಲಿ ರೌಫ್​ ಅವರು ಪತ್ನಿ ಜತೆ ತಾವು ತಂಗಿದ್ದ ಹೋಟೆಲ್​ಗೆ ಹೋಗುತ್ತಿದ್ದಾಗ ವೇಳೆ ಅಭಿಮಾನಿಯೊಬ್ಬ ನಿಮ್ಮ ಜತೆಗೊಂದು ಫೋಟೊ ಬೇಕಿತ್ತು ಎಂದು ಕೇಳಿದ್ದ. ಈ ವೇಳೆ ರೌಫ್​, ನೀನು ಭಾರತೀಯನಾಗಿರಬೇಕು ಎಂದು ಹೇಳಿದ್ದರು. ಇದಕ್ಕೆ ಸಿಟ್ಟಿನಿಂದ ಉತ್ತರಿಸಿದ ಅಭಿಮಾನಿ ನಾನು ಕೂಡ ಪಾಕಿಸ್ತಾನ ಮೂಲದವನೇ ಎಂದು ಹೇಳಿ ಬಳಿಕ ಏನೋ ಕೆಟ್ಟ ಪದಗಳಿಂದ ನಿಂದಿಸಿದ್ದರು. ಇದು ರೌಫ್​ ಅವರ ಪಿತ್ತ ನೆತ್ತಿಗೇರುವಂತೆ ಮಾಡಿತ್ತು. ಏಕಾಏಕಿ ಓಡಿ ಬಂದು ಈತನ ಮೇಲೆ ರೌಫ್ ಹಲ್ಲೆಗೆ ಯತ್ನಿಸಿದ್ದರು. ಈ ವಿಡಿಯೊ ಭಾರೀ ವೈರಲ್‌ ಆಗಿತ್ತು.

ಪತ್ನಿ ರೌಫ್​ ಅವರನ್ನು ಹಿಡಿದು ನಿಲ್ಲಿಸುವ ಪ್ರಯತ್ನ ಪಟ್ಟರೂ ಕೂಡ ರೌಫ್​ ತಪ್ಪಿಸಿಕೊಂಡು ಹಲ್ಲೆಗೆ ಮುಂದಾದರು. ತಕ್ಷಣ ರೌಫ್​ ಅವರ ಮ್ಯಾನೇಜರ್​ ಹಾಗು ಕೆಲ ಸಿಬ್ಬಂದಿಗಳು ಅವರನ್ನು ತಡೆದು ನಿಲ್ಲಿಸಿದ್ದಾರೆ. ಪತ್ನಿ ಕೂಡ ಅವರ ಕೈಗಳನ್ನು ಹಿಡಿದು ಹಲ್ಲೆ ಮಾಡದಂತೆ ಮನವಿ ಮಾಡುತ್ತಲೇ ಅವರನ್ನು ಸಮಾಧಾನ ಪಡಿಸಿದ್ದರು. ಈ ಎಲ್ಲ ದೃಶ್ಯಗಳು ವಿಡಿಯೊದಲ್ಲಿ ಸೆರೆಯಾಗಿತ್ತು.

 

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

Paris Olympics 2024 : ಪ್ಯಾರಿಸ್​ ಒಲಿಂಪಿಕ್ಸ್​ನ 8ನೇ ದಿನವಾದ ಶನಿವಾರ ಭಾರತದ ಸ್ಪರ್ಧೆಗಳ ವಿವರ ಇಲ್ಲಿದೆ

Paris Olympics 2024:

VISTARANEWS.COM


on

Paris Olympics 2024
Koo

ಬೆಂಗಳೂರು: ಪ್ಯಾರಿಸ್ ಒಲಿಂಪಿಕ್ಸ್​ನ (Paris Olympics 2024 ) ಏಳನೇ ದಿನವಾದ ಶುಕ್ರವಾರ ಭಾರತಕ್ಕೆ ಯಾವುದೇ ಪದಕಗಳು ಲಭಿಸಿಲ್ಲ. ಆರ್ಚರಿಯ ಮಿಶ್ರ ತಂಡ ವಿಭಾಗದಲ್ಲಿ ಅಂಕಿತಾ ಹಾಗೂ ಧೀರಜ್ ಬೊಮ್ಮದೇವರ ಕಂಚಿನ ಪದಕ ಮಿಸ್​ ಮಾಡಿಕೊಳ್ಳುವ ಮೂಲಕ ಹಿನ್ನಡೆಯಾಯಿತು. ಇದೇ ವೇಳೆ ಪೂಲ್ ಹಂತದ ಪಂದ್ಯದಲ್ಲಿ ಭಾರತೀಯ ಪುರುಷರ ಹಾಕಿ ತಂಡವು ಆಸ್ಟ್ರೇಲಿಯಾವನ್ನು 3-2 ಅಂತರದಿಂದ ಸೋಲಿಸಿತು. 1972ರ ಬಳಿಕ ಇದೇ ಮೊದಲ ಬಾರಿಗೆ ಭಾರತ ಪುರುಷರ ತಂಡ ಒಲಿಂಪಿಕ್ಸ್​ನಲ್ಲಿ ಆಸ್ಟ್ರೇಲಿಯಾವನ್ನು ಮಣಿಸಿದೆ.

ಎರಡು ಬಾರಿ ಪ್ಯಾರಿಸ್ ಒಲಿಂಪಿಕ್ ಪದಕ ವಿಜೇತ ಮನು ಭಾಕರ್ ತಮ್ಮ ಮೂರನೇ ಸ್ಪರ್ಧೆಯಾದ 25 ಮೀಟರ್ ಪಿಸ್ತೂಲ್ ನ ಫೈನಲ್ ಗೆ ಅರ್ಹತೆ ಪಡೆದಿದ್ದಾರೆ. ಶೂಟಿಂಗ್​ನಲ್ಲಿ ಭಾರತಕ್ಕೆ ಎರಡು ಕಂಚಿನ ಪದಕ ಗೆದ್ದ ಅವರು ಮತ್ತೊಂದು ಪದಕಕ್ಕೆ ಗುರಿಯಿಟ್ಟಿದ್ದಾರೆ. ಆರ್ಚರಿಯಲ್ಲಿ ಅಂಕಿತಾ ಭಕತ್ ಮತ್ತು ಧೀರಜ್ ಬೊಮ್ಮದೇವರ ಅವರು ಇಂಡೋನೇಷ್ಯಾ ಮತ್ತು ಸ್ಪೇನ್ ಜೋಡಿಯನ್ನು ಸೋಲಿಸಿ ಮಿಶ್ರ ತಂಡ ಸ್ಪರ್ಧೆಯ ಸೆಮಿಫೈನಲ್ ಗೆ ಪ್ರವೇಶಿಸಿದ್ದರು. ಆದರೆ, ಚಾಂಪಿಯನ್ ಕೊರಿಯಾ ಹಾಗೂ ಕಂಚಿನ ಪದಕದ ಪಂದ್ಯದಲ್ಲಿ ಅಮೆರಿಕ ವಿರುದ್ಧ ಸೋತಿತು.

ಮೂರನೇ ದಿನ ಮನು ಭಾಕರ್ಗೆ ಚಿನ್ನ ಸೇರಿದಂತೆ ಯಾವುದೇ ಪದಕ ಗೆಲ್ಲುವ ಅವಕಾಶವಿದೆ. ಅದು ಅವರ ಮೂರನೇ ಪದಕವಾಗಲಿದೆ. ಬಾಕ್ಸರ್ ನಿಶಾಂತ್ ದೇವ್ ಕೂಡ ಶನಿವಾರ ಪದಕವನ್ನು ಖಚಿತಪಡಿಸುವ ಅವಕಾಶವಿದೆ. ಮೆಕ್ಸಿಕೊದ ಮಾರ್ಕೊ ವರ್ಡೆ ವಿರುದ್ಧದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಜಯ ಗಳಿಸಿದರೆ ಸೆಮಿಫೈನಲ್ ಪ್ರವೇಶಿಸಲಿದ್ದು. ಪದಕ ಖಚಿತವಾಗಲಿದೆ. ಆರ್ಚರಿಯಲ್ಲಿ ಭಜನ್ ಕೌರ್ ಮತ್ತು ದೀಪಿಕಾ ಕುಮಾರಿ ತಮ್ಮ ಮಹಿಳಾ ಸಿಂಗಲ್ಸ್ ಸುತ್ತುಗಳಲ್ಲಿ ಸ್ಪರ್ಧಿಸಲಿದ್ದಾರೆ.

ಇದನ್ನೂ ಓದಿ: Paris Olympics 2024 : ಭಾರತಕ್ಕೆ ಒಂದು ಪದಕ ಜಸ್ಟ್​​ ಮಿಸ್​; ಆರ್ಚರಿ ಕಂಚಿನ ಪದಕದ ಪಂದ್ಯದಲ್ಲಿ ಸೋತ ಅಂಕಿತಾ, ಧೀರಜ್ ಜೋಡಿ​

ಆಗಸ್ಟ್ 3ರ ಭಾರತದ ವೇಳಾಪಟ್ಟಿಯ ನೋಟ ಇಲ್ಲಿದೆ

ಮಧ್ಯಾಹ್ನ 12:30: ಶೂಟಿಂಗ್ – ಮಹಿಳಾ ಸ್ಕೀಟ್ ಅರ್ಹತಾ ಸುತ್ತಿನ ದಿನ ಮೊದಲ ದಿನ, ರೈಜಾ ಧಿಲ್ಲಾನ್ ಮತ್ತು ಮಹೇಶ್ವರಿ ಚೌಹಾಣ್.

ಮಧ್ಯಾಹ್ನ 1 ಗಂಟೆ: ಶೂಟಿಂಗ್; ಮಹಿಳೆಯರ 25 ಮೀಟರ್ ಪಿಸ್ತೂಲ್ ಫೈನಲ್​​ನಲ್ಲಿ ಮನು ಭಾಕರ್ (ಪದಕದ ಸ್ಪರ್ಧೆ)

ಮಧ್ಯಾಹ್ನ 1:52: ಆರ್ಚರಿ – ಮಹಿಳೆಯರ ವೈಯಕ್ತಿಕ 16ನೇ ಸುತ್ತಿನ ಪಂದ್ಯದಲ್ಲಿ ದೀಪಿಕಾ ಕುಮಾರಿ ಮತ್ತು ಜರ್ಮನಿಯ ಮಿಚೆಲ್ ಕ್ರೊಪೆನ್ ನಡುವೆ ಹಣಾಹಣಿ

ಮಧ್ಯಾಹ್ನ 2:05: ಆರ್ಚರಿ – ಮಹಿಳೆಯರ ವೈಯಕ್ತಿಕ 16ನೇ ಸುತ್ತಿನ ಪಂದ್ಯದಲ್ಲಿ ಭಜನ್ ಕೌರ್ ಮತ್ತು ಡಯಾನಂದಾ ಕೊಯಿರುನ್ನಿಸಾ.

ಮಧ್ಯಾಹ್ನ 3:45 ಸೇಯ್ಲಿಂಗ್​​- ಪುರುಷರ ಡಿಂಗ್ಲೇ ರೇಸ್ 5 ಮತ್ತು 6ರಲ್ಲಿ ವಿಷ್ಣು ಸರವಣನ್ ಸ್ಪರ್ಧಿಸಲಿದ್ದಾರೆ.

ಸಂಜೆ 5:55: ಸೇಯ್ಲಿಂಗ್; ಮಹಿಳೆಯರ ಡಿಂಗ್ಲೇ ರೇಸ್ 5 ಮತ್ತು 6 ರಲ್ಲಿ ನೇತ್ರಾ ಕುಮನನ್ ಭಾಗಿಯಾಗಲಿದ್ದಾರೆ.

ರಾತ್ರಿ 11:05: ಶಾಟ್ ಪುಟ್ ಫೈನಲ್ ; ತಜಿಂದರ್ಪಾಲ್ ಸಿಂಗ್ ತೂರ್ (ಅರ್ಹತೆ ಪಡೆದರೆ).

ರಾತ್ರಿ 12:02 : ಪುರುಷರ 71 ಕೆಜಿ ವಿಭಾಗದ ಕ್ವಾರ್ಟರ್ ಫೈನಲ್​​ನಲ್ಲಿ ನಿಶಾಂತ್ ದೇವ್ ಮತ್ತು ಮೆಕ್ಸಿಕೊದ ಮಾರ್ಕೊ ವರ್ಡೆ.

Continue Reading

ಪ್ರಮುಖ ಸುದ್ದಿ

Paris Olympics 2024 : ಭಾರತಕ್ಕೆ ಒಂದು ಪದಕ ಜಸ್ಟ್​​ ಮಿಸ್​; ಆರ್ಚರಿ ಕಂಚಿನ ಪದಕದ ಪಂದ್ಯದಲ್ಲಿ ಸೋತ ಅಂಕಿತಾ, ಧೀರಜ್ ಜೋಡಿ​

Paris Olympics 2024 : ಸ್ಪರ್ಧೆಯ ಆರಂಭದಲ್ಲೇ ಭಾರತ ಹಿನ್ನಡೆ ಅನುಭವಿಸಿತು. ಮೊದಲೆರಡು ಸೆಟ್​ಗಳನ್ನು ಸೋತು ಒತ್ತಡಕ್ಕೆ ಬಿತ್ತು. ಮೂರನೇ ಸೆಟ್​ ಗೆದ್ದರೂ ನಾಲ್ಕನೇ ಸೆಟ್ ಅನ್ನು 37 ಅಂಕಗಳೊಂದಿಗೆ ಗೆಲ್ಲುವ ಮೂಲಕ ಯುಎಸ್ಎ ಕಂಚಿನ ಪದಕವನ್ನು ತನ್ನದಾಗಿಸಿಕೊಂಡಿತು. ಈ ಸೆಟ್​ನಲ್ಲಿ ಅಂಕಿತಾ 8 ಮತ್ತು 8 ಅಂಕ ಗಳಿಸಿದರೆ, ಧೀರಜ್ 9 ಮತ್ತು 10 ಅಂಕ ಗಳಿಸಿದರು. ಯುಎಸ್ಎ ಪರ ಬ್ರಾಂಡಿ 10 ಮತ್ತು 9 ಅಂಕಗಳನ್ನು ಗಳಿಸಿದರೆ, ಕೇಸಿ 9 ಮತ್ತು 9 ಅಂಕಗಳನ್ನು ಗಳಿಸಿದರು.

VISTARANEWS.COM


on

Paris Olympics 2024
Koo

ಪ್ಯಾರಿಸ್: ಪ್ಯಾರಿಸ್​ ಒಲಿಂಪಿಕ್ಸ್​ನ ಏಳನೇ ದಿನವಾದ ಶುಕ್ರವಾರ ಭಾರತಕ್ಕೆ ಮತ್ತೊಂದು ಆಘಾತ ಉಂಟಾಯಿತು. ಆರ್ಚರಿ ಮಿಶ್ರ ತಂಡ ವಿಭಾಗದಲ್ಲಿ ಕಂಚಿನ ಪದಕದ ಹಣಾಹಣಿಯಲ್ಲಿ ಭಾರತ ಧೀರಜ್​ ಬೊಮ್ಮದೇವರ ಹಾಗೂ ಅಂಕಿತಾ ಅಮೆರಿಕ ವಿರುದ್ಧ ಸೋಲು ಕಾಣುವ ಮೂಲಕ ಕಂಚಿನ ಪದಕ ಗೆಲ್ಲುವ ಅವಕಾಶವನ್ನು ಜಸ್ಟ್ ಮಿಸ್ ಮಾಡಿಕೊಂಡಿತು. ಅಂಕಿತಾ ಹಾಗೂ ಧೀರಜ್​ ಸೆಮಿಫೈನಲ್​ಗೇರಿದಾಗ ಭಾರತಕ್ಕೆ ಪದಕವೊಂದರ ಭರವಸೆ ಮೂಡಿತ್ತು. ಆದರೆ, ಕೊರಿಯಾ ವಿರುದ್ಧ ಸೆಮಿಫೈನಲ್ ಪಂದ್ಯ ಸೋಲು ಉಂಟಾಯಿತು. ಅಮೆರಿಕದ ತಂಡದ ಬಿಲ್ಲುಗಾರರು ಪದಕ ಗೆದ್ದು ಸಂಭ್ರಮಿಸಿದರು.

ಸ್ಪರ್ಧೆಯ ಆರಂಭದಲ್ಲೇ ಭಾರತ ಹಿನ್ನಡೆ ಅನುಭವಿಸಿತು. ಮೊದಲೆರಡು ಸೆಟ್​ಗಳನ್ನು ಸೋತು ಒತ್ತಡಕ್ಕೆ ಬಿತ್ತು. ಮೂರನೇ ಸೆಟ್​ ಗೆದ್ದರೂ ನಾಲ್ಕನೇ ಸೆಟ್ ಅನ್ನು 37 ಅಂಕಗಳೊಂದಿಗೆ ಗೆಲ್ಲುವ ಮೂಲಕ ಯುಎಸ್ಎ ಕಂಚಿನ ಪದಕವನ್ನು ತನ್ನದಾಗಿಸಿಕೊಂಡಿತು. ಈ ಸೆಟ್​ನಲ್ಲಿ ಅಂಕಿತಾ 8 ಮತ್ತು 8 ಅಂಕ ಗಳಿಸಿದರೆ, ಧೀರಜ್ 9 ಮತ್ತು 10 ಅಂಕ ಗಳಿಸಿದರು. ಯುಎಸ್ಎ ಪರ ಬ್ರಾಂಡಿ 10 ಮತ್ತು 9 ಅಂಕಗಳನ್ನು ಗಳಿಸಿದರೆ, ಕೇಸಿ 9 ಮತ್ತು 9 ಅಂಕಗಳನ್ನು ಗಳಿಸಿದರು.

ಈ ಗೆಲುವಿನೊಂದಿಗೆ, ಬಿಲ್ಲುಗಾರಿಕೆಯಲ್ಲಿ ಪದಕ ಗೆದ್ದ ಮೊದಲ ಅಮೇರಿಕನ್ ಮಹಿಳೆ ಎಂಬ ಹೆಗ್ಗಳಿಕೆಗೆ ಕೇಸಿ ಪಾತ್ರರಾದರು.ಈ ಸೋಲಿನೊಂದಿಗೆ ಭಾರತಕ್ಕೆ ಏಳನೇ ದಿನವಾದ ಶುಕ್ರವಾರ ಭಾರತಕ್ಕೆ ಹೆಚ್ಚಿನ ಭರವಸೆಗಳು ಮೂಡಲಿಲ್ಲ. ಆದಾಗ್ಯೂ ಹಾಕಿ ತಂಡ ಆಸ್ಟ್ರೇಲಿಯಾ ತಂಡವನ್ನು ಸೋಲಿಸುವ ಮೂಲಕ ವಿಶೇಷ ಸಾಧನೆ ಮಾಡಿತು. ಒಲಿಂಪಿಕ್ಸ್​ನಲ್ಲಿ 52 ವರ್ಷಗಳ ಬಳಿಕ ಆಸೀಸ್​ ಬಳಗವನ್ನು ಮಣಿಸಿ ಸಂಭ್ರಮಿಸಿತು. ಭಾರತ ಹಾಕಿ ತಂಡ ಕ್ವಾರ್ಟರ್​ ಫೈನಲ್​ಗೇರಿದೆ.

25 ಮೀಟರ್ ಪಿಸ್ತೂಲ್ ವಿಭಾಗದಲ್ಲಿ ಮನು ಭಾಕರ್​ ಫೈನಲ್​ಗೆ​​

ಪ್ಯಾರಿಸ್​ನಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್ 2024ರ (Paris Olympics 2024) ಮಹಿಳೆಯರ 25 ಮೀಟರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಭಾರತದ ಮನು ಭಾಕರ್ (Manu Bhaker) ಮೂರನೇ ಬಾರಿಗೆ ಫೈನಲ್ ಪ್ರವೇಶಿಸಿದ್ದಾರೆ. ನಿಖರತೆ ಮತ್ತು ಕ್ಷಿಪ್ರ ಸುತ್ತುಗಳಲ್ಲಿ ಒಟ್ಟು 590 ಅಂಕಗಳನ್ನು ಗಳಿಸಿದ ಮನು. 2ನೇ ಸ್ಥಾನ ಪಡೆದು ಫೈನಲ್​ಗೇರಿದರು. ಹಂಗರಿಯ ವೆರೋನಿಕಾ ಮೇಜರ್ ಅವರಿಗಿಂತ 2 ಅಂಕಗಳ ಹಿಂದೆ ಉಳಿದರು. ವೆರೋನಿಕಾ ಒಲಿಂಪಿಕ್ ಅರ್ಹತಾ ಸುತ್ತಿನ ದಾಖಲೆಯನ್ನು 592 ಅಂಕಗಳೊಂದಿಗೆ ಸರಿಗಟ್ಟಿದರು.

ಇದನ್ನೂ ಓದಿ: Paris Olympics 2024 : ಪ್ಯಾರಿಸ್​​ನಲ್ಲಿ ಸಿಕ್ಕಾಪಟ್ಟೆ ಸೆಖೆ; ಅಥ್ಲೀಟ್​ಗಳಿಗಾಗಿ 40 ಎಸಿ ಕಳುಹಿಸಿದ ಕ್ರೀಡಾ ಸಚಿವಾಲಯ

ಅರ್ಹತಾ ಸುತ್ತಿನ ಭಾಗವಾಗಿದ್ದ ಇಶಾ ಸಿಂಗ್ 18 ನೇ ಸ್ಥಾನ ಪಡೆದು ನಿರಾಸೆಗೆ ಒಳಗಾದರು. ಇದೇ ವೇಳೆ ಪ್ಯಾರಿಸ್​​ನಲ್ಲಿ ನಡೆದ ಕ್ರೀಡಾಕೂಟದಲ್ಲಿ ಮನು ತನ್ನ ಮೂರನೇ ಬಾರಿಗೆ ಫೈನಲ್​ ಪ್ರವೇಶಿಸಿದರು. ಮನು ಈಗಾಗಲೇ ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಮತ್ತು ಮಿಶ್ರ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಗಳಲ್ಲಿ 2 ಕಂಚಿನ ಪದಕಗಳನ್ನು ಗೆದ್ದುಕೊಂಡು ದಾಖಲೆ ಬರೆದಿದ್ದಾರೆ. ಈ ಸ್ಪರ್ಧೆಯಲ್ಲೂ ಗೆದ್ದರೆ ಅವರ ಸಾಧನೆಯ ಕಿರೀಟಕ್ಕೆ ಇನ್ನೊಂದು ಗರಿ ಸೇರಿಕೊಳ್ಳಲಿವೆ.

ಮನು ತನ್ನ ನಿಖರ ಸುತ್ತಿನ ಮೊದಲ ಸುತ್ತಿನಲ್ಲಿ ಅಸ್ಥಿರ ಆರಂಭ ಪಡೆದುಕೊಂಡಿದ್ದರು. ಏಕೆಂದರೆ ಅವರು ಮೊದಲ 5 ಶಾಟ್​ಗಳಲ್ಲಿ ಎರಡು ಬಾರಿ ಮಾತ್ರ 10 ಅಂಕಗಳನ್ನು ಗಳಿಸಲು ಸಾಧ್ಯವಾಯಿತು. ಆದಾಗ್ಯೂ, ಅವರು ಪುಟಿದೆದ್ದು ಒಟ್ಟು 5 ಬಾರಿ 10 ಅಂಕ ಗಳಿಸಿದರು.

ಎರಡನೇ ಸೀರಿಸ್​ನಲ್ಲಿ ಅವರು 3 ಬಾರಿ 10 ಅಂಕ ಗಳಿಸಿದರು. ಇನ್ನೂ 5 ಅಂಕಗಳನ್ನು ಸೇರಿಸಿ 98 ಅಂಕಗಳೊಂದಿಗೆ ಕೊನೆಗೊಳಿಸಿದರು. ಮೂರನೇ ಸರಣಿಯಲ್ಲಿ ಇನ್ನಷ್ಟು ಸುಧಾರಿಸಿಕೊಂಡರು. ಏಕೆಂದರೆ ಅವರು 9 ಬಾರಿ 10 ಅಂಕಗಳನ್ನು ಗಳಿಸಿದರು. ಆಗಸ್ಟ್ 3ರಂದು ಮಧ್ಯಾಹ್ನ 1.30ಕ್ಕೆ ನಡೆಯಲಿರುವ ಫೈನಲ್ನಲ್ಲಿ ಅವರು ಸೆಣಸಲಿದ್ದಾರೆ

Continue Reading

ಪ್ರಮುಖ ಸುದ್ದಿ

Paris Olympics 2024 : ಪ್ಯಾರಿಸ್​​ನಲ್ಲಿ ಸಿಕ್ಕಾಪಟ್ಟೆ ಸೆಖೆ; ಅಥ್ಲೀಟ್​ಗಳಿಗಾಗಿ 40 ಎಸಿ ಕಳುಹಿಸಿದ ಕ್ರೀಡಾ ಸಚಿವಾಲಯ

Paris Olympics 2024: ಎರಡು ಪ್ರಮುಖ ಒಲಿಂಪಿಕ್ ಕ್ರೀಡಾಕೂಟದ ಸ್ಥಳಗಳಾದ ಪ್ಯಾರಿಸ್ ಮತ್ತು ಚಟೌರೌಕ್ಸ್ ಎರಡರಲ್ಲೂ ತಾಪಮಾನ ಮಿತೀಮೀರಿದೆ. ಪುರುಷರ 50 ಮೀಟರ್ ರೈಫಲ್ 3-ಪೊಸಿಷನ್ಸ್ ಸ್ಪರ್ಧೆಯ ವೇಲೆ ಭಾರತದ ಕಂಚಿನ ವಿಜೇತ ಸ್ವಪ್ನಿಲ್ ಕುಸಾಲೆ ಸೇರಿದಂತೆ ಎಲ್ಲಾ ಎಂಟು ಅಂತಿಮ ಸ್ಪರ್ಧಿಗಳು ಚಟೌರೌಕ್ಸ್ ಶೂಟಿಂಗ್ ರೇಂಜ್​ನಲ್ಲಿ ಸಾಕಷ್ಟು ಸಮಸ್ಯೆ ಎದುರಿಸಿದರು. ಅವರಿಗೆ ಸ್ಪರ್ಧೆ ಮಾಡಲೂ ಸಮಸ್ಯೆ ಆಯಿತು.

VISTARANEWS.COM


on

Paris Olympics 2024
Koo

ಪ್ಯಾರಿಸ್: ಒಲಿಂಪಿಕ್ಸ್​ ನಡೆಯುತ್ತಿರುವ ಪ್ಯಾರಿಸ್​​ನಲ್ಲಿ (Paris Olympics 2024) ತಾಪಮಾನ ಹೆಚ್ಚುತ್ತಿದೆ. ಹೀಗಾಗಿ ಕ್ರೀಡಾ ಗ್ರಾಮದಲ್ಲಿರುವ ತಮ್ಮ ಕೊಠಡಿಗಳಲ್ಲಿ ಅಥ್ಲೀಟ್​ಗಳು ಪರಿತಪಿಸುವಂತಾಗಿದೆ. ಸೆಖೆಯ ಸಮಸ್ಯೆಯಿಂದ ಹೋರಾಡುತ್ತಿರುವ ಭಾರತೀಯ ಕ್ರೀಡಾಪಟುಗಳ ಅನುಕೂಲಕ್ಕಾಗಿ ಕ್ರೀಡಾ ಸಚಿವಾಲಯವು 40 ಪೋರ್ಟಬಲ್ ಹವಾನಿಯಂತ್ರ ವ್ಯವಸ್ಥೆಯನ್ನು ಕಳುಹಿಸಿದೆ. ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ಮತ್ತು ಫ್ರೆಂಚ್ ರಾಯಭಾರ ಕಚೇರಿಯೊಂದಿಗೆ ಚರ್ಚಿಸಿದ ನಂತರ ಹವಾನಿಯಂತ್ರಣಗಳನ್ನು ಕ್ರೀಡಾಕೂಟದ ಗ್ರಾಮಕ್ಕೆ ಕಳುಹಿಸಲಾಗಿದೆ ಎಂದು ಸಚಿವಾಲಯದ ಮೂಲಗಳು ತಿಳಿಸಿವೆ.

ಪ್ಯಾರಿಸ್ನಲ್ಲಿನ ತಾಪಮಾನ ಮತ್ತು ಆರ್ದ್ರತೆಯಿಂದಾಗಿ ಒಲಿಂಪಿಕ್ ಗೇಮ್ಸ್ ಗ್ರಾಮದಲ್ಲಿ ಕ್ರೀಡಾಪಟುಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಗಣನೆಗೆ ತೆಗೆದುಕೊಂಡು, ಭಾರತೀಯ ಕ್ರೀಡಾಪಟುಗಳು ತಂಗಿರುವ ಗೇಮ್ಸ್ ವಿಲೇಜ್ ಕೊಠಡಿಗಳಲ್ಲಿ 40 ಎಸಿಗಳನ್ನು ಒದಗಿಸಲು ಕ್ರೀಡಾ ಸಚಿವಾಲಯ ನಿರ್ಧರಿಸಿದೆ” ಎಂದು ಮೂಲಗಳು ಪಿಟಿಐಗೆ ತಿಳಿಸಿವೆ.

ಎರಡು ಪ್ರಮುಖ ಒಲಿಂಪಿಕ್ ಕ್ರೀಡಾಕೂಟದ ಸ್ಥಳಗಳಾದ ಪ್ಯಾರಿಸ್ ಮತ್ತು ಚಟೌರೌಕ್ಸ್ ಎರಡರಲ್ಲೂ ತಾಪಮಾನ ಮಿತೀಮೀರಿದೆ. ಪುರುಷರ 50 ಮೀಟರ್ ರೈಫಲ್ 3-ಪೊಸಿಷನ್ಸ್ ಸ್ಪರ್ಧೆಯ ವೇಲೆ ಭಾರತದ ಕಂಚಿನ ವಿಜೇತ ಸ್ವಪ್ನಿಲ್ ಕುಸಾಲೆ ಸೇರಿದಂತೆ ಎಲ್ಲಾ ಎಂಟು ಅಂತಿಮ ಸ್ಪರ್ಧಿಗಳು ಚಟೌರೌಕ್ಸ್ ಶೂಟಿಂಗ್ ರೇಂಜ್​ನಲ್ಲಿ ಸಾಕಷ್ಟು ಸಮಸ್ಯೆ ಎದುರಿಸಿದರು. ಅವರಿಗೆ ಸ್ಪರ್ಧೆ ಮಾಡಲೂ ಸಮಸ್ಯೆ ಆಯಿತು.

ಇದನ್ನೂ ಓದಿ: Paris Olympics 2024 : 52 ವರ್ಷಗಳ ಬಳಿಕ ಒಲಿಂಪಿಕ್ಸ್​​ನಲ್ಲಿ ಆಸ್ಟ್ರೇಲಿಯಾ ತಂಡವನ್ನು ಸೋಲಿಸಿದ ಭಾರತದ ಹಾಕಿ ತಂಡ

ಪ್ಯಾರಿಸ್​​ನಲ್ಲಿ ಕೆಲವು ದಿನಗಳಲ್ಲಿ ತಾಪಮಾನವು ಅಸಹನೀಯ 40 ಡಿಗ್ರಿ ಸೆಲ್ಸಿಯಸ್ ತಲುಪಿದೆ ಎಂದು ವರದಿಗಳಿವೆ. ಡಾಕೂಟ ಪ್ರಾರಂಭವಾಗುವ ಮೊದಲೇ,ಇಂಗಾಲದ ಡೈಆಕ್ಸೈಡ್​ ಹೊರಸೂಸುವಿಕೆಯನ್ನು ತಡೆಯಲು ಹವಾನಿಯಂತ್ರಣ ವ್ಯವಸ್ಥೆ ಬಳಸುವುದಿಲ್ಲ ಸಂಘಟಕರು ಹೇಳಿದ್ದರು. ಹೀಗಾಗಿ ಹಲವಾರು ತಂಡಗಳು ಪ್ಯಾರಿಸ್ನ ತಾಪಮಾನದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದವು.

ಕ್ರೀಡಾಕೂಟದ ಆಯೋಜಕ ಸಮಿತಿಯು ಗೇಮ್ಸ್ ವಿಲೇಜ್​ನಲ್ಲಿ ತಾಪಮಾನ ಕಡಿಮೆ ಮಾಡಲು ಅಂಡರ್ಫ್ಲೋರ್ ಕೂಲಿಂಗ್ ಕಾರ್ಯವಿಧಾನ ಮತ್ತು ಅಂತರ್ನಿರ್ಮಿತ ಇನ್ಸುಲೇಷನ್ ಅನಾವರಣಗೊಳಿಸಿತು. ಆದಾಗ್ಯೂ, ಕ್ರಮಗಳ ಬಗ್ಗೆ ಸಮಾಧಾನಗೊಳ್ಳದ ಯುಎಸ್ಎ ತುಕಡಿ ಪೋರ್ಟಬಲ್ ಏರ್ ಕಂಡೀಷನರ್​​ ಜತೆಗೆ ಪ್ರಯಾಣಿಸಿತ್ತು.

ಶಾಖವನ್ನು ನಿರ್ವಹಿಸಲು ಇತರ ದೇಶಗಳು ಪೋರ್ಟಬಲ್ ಎಸಿಗಳನ್ನು ಖರೀದಿಸಲು ಆಶ್ರಯಿಸಿವೆ ಎಂದು ವರದಿಗಳು ಸೂಚಿಸಿವೆ. ಭಾರತ ಈಗ ಈ ಸಾಲಿಗೆ ಸೇರಿಕೊಂಡಿದೆ. “ಶುಕ್ರವಾರ ಮುಂಜಾನೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಮತ್ತು ವೆಚ್ಚವನ್ನು ಸಚಿವಾಲಯವು ಭರಿಸುತ್ತಿದೆ” ಎಂದು ಸಚಿವಾಲಯದ ಮೂಲಗಳು ತಿಳಿಸಿವೆ.

ಎಸಿಗಳು ಪ್ಲಗ್ ಮತ್ತು ಪ್ಲೇ ಘಟಕಗಳಾಗಿವೆ. ಕ್ರೀಡಾಪಟುಗಳು ಈಗಾಗಲೇ ಅವುಗಳನ್ನು ಬಳಸಲು ಪ್ರಾರಂಭಿಸಿದ್ದಾರೆ. ಇದರೊಂದಿಗೆ ಅವರು ಹೆಚ್ಚು ಆರಾಮದಾಯಕವಾಗಿ ಉಳಿದುಕೊಳ್ಳಬಹುದು. ಉತ್ತಮ ಪ್ರದರ್ಶನವನ್ನು ನೀಡಬಹುದು “ಎಂದು ಮೂಲಗಳು ಹೇಳಿವೆ.

Continue Reading

ಪ್ರಮುಖ ಸುದ್ದಿ

Paris Olympics 2024 : 52 ವರ್ಷಗಳ ಬಳಿಕ ಒಲಿಂಪಿಕ್ಸ್​​ನಲ್ಲಿ ಆಸ್ಟ್ರೇಲಿಯಾ ತಂಡವನ್ನು ಸೋಲಿಸಿದ ಭಾರತದ ಹಾಕಿ ತಂಡ

Paris Olympics 2024: ಈ ವರ್ಷ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 8 ನೇ ಪಂದ್ಯ ಇದಾಗಿದೆ. ಹಿಂದಿನ 7 ಪಂದ್ಯಗಳನ್ನು ಆಸೀಸ್ ಗೆದ್ದಿತ್ತು. ಇದೀಗ ಭಾರತ ತಿರುಗೇಟು ನೀಡಿತು. ಅಲ್ಲದೆ ಬೆಲ್ಜಿಯಂ ವಿರುದ್ಧದ ಸೋಲಿನಿಂದ ಚೇತರಿಸಿಕೊಳ್ಳಲು ಭಾರತಕ್ಕೆ ಉತ್ತಮ ಕಾರಣ ಸಿಕ್ಕಿತು ಹಾಗೂ ಕ್ವಾರ್ಟರ್ ಫೈನಲ್​​ ಗೆಲುವಿಗೆ ಪ್ರೇರಣೆಯಾಯಿತು.

VISTARANEWS.COM


on

Paris Olympics 2024
Koo

ಬೆಂಗಳೂರು: ಹರ್ಮನ್ ಪ್ರೀತ್ ಸಿಂಗ್ ಅವರ ಆಕರ್ಷಕ ಎರಡು ಗೋಲುಗಳ ನೆರವಿನಿಂದ ಮಿಂಚಿದ ಭಾರತ ಹಾಕಿ ತಂಡ ಪ್ಯಾರಿಸ್ ಒಲಿಂಪಿಕ್ಸ್​​ನ (Paris Olympics 2024) ಗ್ರೂಪ್ ಹಂತದಲ್ಲಿ ಆಸ್ಟ್ರೇಲಿಯಾ ವಿರುದ್ಧ 3-2 ಗೋಲುಗಳ ಅಂತರದಲ್ಲಿ ಜಯ ಸಾಧಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ. ಒಲಿಂಪಿಕ್ಸ್​​ನಲ್ಲಿ ಆಸ್ಟ್ರೇಲಿಯಾ ವಿರುದ್ಧ 52 ವರ್ಷಗಳ ಬಳಿಕ ಭಾರತ ಗೆಲುವು ಸಾಧಿಸಿದ್ದು ಈ ಫಲಿತಾಂಶದವ ವಿಶೇಷವಾಗಿದೆ. ಈ ಮೂಲಕ ಭಾರತ ಹಾಕಿ ತಂಡ ಪ್ಯಾರಿಸ್​​ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವುದನ್ನು ಮುಂದುವರಿಸಿತು. ಈ ಗೆಲುವು ಭಾರತದ ಪಾಲಿಗೆ ಸಂಘಟಿತ ಹೋರಾಟವಾಗಿತ್ತು.

ಈ ವರ್ಷ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 8 ನೇ ಪಂದ್ಯ ಇದಾಗಿದೆ. ಹಿಂದಿನ 7 ಪಂದ್ಯಗಳನ್ನು ಆಸೀಸ್ ಗೆದ್ದಿತ್ತು. ಇದೀಗ ಭಾರತ ತಿರುಗೇಟು ನೀಡಿತು. ಅಲ್ಲದೆ ಬೆಲ್ಜಿಯಂ ವಿರುದ್ಧದ ಸೋಲಿನಿಂದ ಚೇತರಿಸಿಕೊಳ್ಳಲು ಭಾರತಕ್ಕೆ ಉತ್ತಮ ಕಾರಣ ಸಿಕ್ಕಿತು ಹಾಗೂ ಕ್ವಾರ್ಟರ್ ಫೈನಲ್​​ ಗೆಲುವಿಗೆ ಪ್ರೇರಣೆಯಾಯಿತು.

ಡಿ ಗುಂಪಿನ ಈ ಪಂದ್ಯದಲ್ಲಿ ಭಾರತವು ಆಕ್ರಮಣಕಾರಿ ಆಟವಾಡಿತು. ಭಾರತದ ದಾಳಿಯ ಬೆದರಿಕೆಯನ್ನು ಎದುರಿಸಲು ಆಸ್ಟ್ರೇಲಿಯಾದ ಆಟಗಾರ ನಿಧಾನವಾಗಿ ಆಟ ಪ್ರಾರಂಭಿಸಿತು.

ಮೊದಲ ಕ್ವಾರ್ಟರ್ನಲ್ಲಿ ಹರ್ಮನ್ಪ್ರೀತ್ ಸಿಂಗ್ ನೇತೃತ್ವದ ತಂಡ ಎರಡು ಗೋಲುಗಳ ಮುನ್ನಡೆ ಸಾಧಿಸಿತು. ಫಾರ್ವರ್ಡ್ ಆಟಗಾರ ಅಭಿಷೇಕ್ 12ನೇ ನಿಮಿಷದಲ್ಲಿ ಭಾರತದ ಪರ ಮೊದಲ ಗೋಲು ಗಳಿಸಿದರು. ಒಂದು ನಿಮಿಷದ ನಂತರ ಹರ್ಮನ್ ಪ್ರೀತ್ ಪೆನಾಲ್ಟಿ ಕಾರ್ನರ್ ಮೂಲಕ ಗೋಲು ಗಳಿಸಿ ತಂಡಕ್ಕೆ 2-0 ಮುನ್ನಡೆ ತಂದುಕೊಟ್ಟರು.

25ನೇ ನಿಮಿಷದಲ್ಲಿ ಕ್ರೇಗ್ ಥಾಮಸ್ ಪೆನಾಲ್ಟಿ ಕಾರ್ನರ್ ಮೂಲಕ ಗೋಲು ಬಾರಿಸಿ ಅಂತರವನ್ನು ಒಂದು ಗೋಲಿಗೆ ಇಳಿಸಿದರು. 32ನೇ ನಿಮಿಷದಲ್ಲಿ ಹರ್ಮನ್ ಪ್ರೀತ್ ಮತ್ತೊಂದು ಪೆನಾಲ್ಟಿ ಕಾರ್ನರ್ ಮೂಲಕ ಭಾರತಕ್ಕೆ ಮುನ್ನಡೆ ತಂದುಕೊಟ್ಟರು. 55ನೇ ನಿಮಿಷದಲ್ಲಿ ಬ್ಲೇಕ್ ಗ್ರೋವರ್ ಗಳಿಸಿದ ಪೆನಾಲ್ಟಿ ಸ್ಟ್ರೋಕ್ ಮೂಲಕ ಆಸ್ಟ್ರೇಲಿಯಾ ನಾಲ್ಕನೇ ಕ್ವಾರ್ಟರ್​ನಲ್ಲಿ ಭಾರತಕ್ಕೆ ಬೆದರಿಕೆ ಒಡ್ಡಿತು. ಕೊನೆಯ ನಿಮಿಷಗಳಲ್ಲಿ ಸಮಬಲದ ಹೋರಾಟ ತೋರಿದ ಆಸೀಸ್ ಕಠಿಣ ಪ್ರಯತ್ನ ನಡೆಸಿದರೂ ಗೋಲು ಗಳಿಸಲು ವಿಫಲವಾಯಿತು.

ಇದನ್ನೂ ಓದಿ: Manu Bhaker : 25 ಮೀಟರ್ ಪಿಸ್ತೂಲ್ ವಿಭಾಗದಲ್ಲಿ ಮನು ಭಾಕರ್​ ಫೈನಲ್​ಗೆ​​; ಒಂದೇ ಒಲಿಂಪಿಕ್ಸ್​ನಲ್ಲಿ ಮೂರನೇ ಬಾರಿ ಫೈನಲ್​ಗೆ

ಭಾರತ ಗ್ರೂಪ್ ಹಂತವನ್ನು ಕೇವಲ ಒಂದು ಸೋಲಿನೊಂದಿಗೆ ಕೊನೆಗೊಳಿಸಿದೆ. ನ್ಯೂಜಿಲೆಂಡ್ ತಂಡವನ್ನು 3-2 ಅಂತರದಿಂದ ಮಣಿಸಿ ಭಾರತ ತನ್ನ ಅಭಿಯಾನವನ್ನು ಆರಂಭಿಸಿತ್ತು. ಆ ಗೆಲುವಿನ ನಂತರ ಅರ್ಜೆಂಟೀನಾ ವಿರುದ್ಧ 1-1 ಡ್ರಾ ಸಾಧಿಸಿತು. ನಂತರ ಭಾರತ ಐರ್ಲೆಂಡ್ ತಂಡವನ್ನು 2-0 ಅಂತರದಿಂದ ಸೋಲಿಸಿತು. ಒಲಿಂಪಿಕ್ ಚಾಂಪಿಯನ್ ಬೆಲ್ಜಿಯಂ ವಿರುದ್ಧ 2-1 ಗೋಲುಗಳ ಅಂತರದಲ್ಲಿ ಸೋತಿದ್ದ ಭಾರತ, ಆಸೀಸ್ ವಿರುದ್ಧ ಐತಿಹಾಸಿಕ ಗೆಲುವು ದಾಖಲಿಸಿತ್ತು.

‘ಬಿ’ ಗುಂಪಿನಲ್ಲಿ ಬೆಲ್ಜಿಯಂ ನಂತರ ಎರಡನೇ ಸ್ಥಾನ ಪಡೆದಿರುವ ಭಾರತ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ. ನಾಕೌಟ್​​ನಲ್ಲಿ ಯಾವ ತಂಡವನ್ನು ಎದುರಿಸುತ್ತಾರೆ ಎಂದು ತಿಳಿಯಲು ತಂಡವು ಈಗ ಗ್ರೇಟ್ ಬ್ರಿಟನ್ ಮತ್ತು ಸ್ಪೇನ್ ನಡುವಿನ ಪಂದ್ಯದ ವಿಜೇತರಿಗಾಗಿ ಕಾಯುತ್ತಿದೆ.

Continue Reading
Advertisement
African Culture
ವಿದೇಶ3 mins ago

Breast Ironing: ಆಫ್ರಿಕಾದಲ್ಲಿದೆ ಬಿಸಿ ವಸ್ತುಗಳಿಂದ ಯುವತಿಯರ ಸ್ತನ ಚಪ್ಪಟೆಗೊಳಿಸುವ ಕ್ರೂರ ಪದ್ಧತಿ!

high-speed road corridor
ಪ್ರಮುಖ ಸುದ್ದಿ5 mins ago

High Speed Road Corridor : 8 ಹೊಸ ಹೈಸ್ಪೀಡ್​ ರೋಡ್​ ಕಾರಿರಾಡ್​ಗೆ ಒಪ್ಪಿಗೆ ಕೊಟ್ಟ ಕೇಂದ್ರ ಸರ್ಕಾರ

RRB ALP Recruitment
ಕರ್ನಾಟಕ9 mins ago

RRB ALP Recruitment: ರೈಲ್ವೆ ಲೋಕೋ ಪೈಲಟ್ ಹುದ್ದೆಗಳ ಪರೀಕ್ಷೆ ಕನ್ನಡದಲ್ಲೂ ಬರೆಯಲು ಅವಕಾಶ

Sri Vidyashreesha Theertha Swamiji ashirvachan at Vyasaraja Matha of Sosale village
ಮೈಸೂರು17 mins ago

Mysore News: ದೇವರ ಅನುಗ್ರಹ ದೊರೆತರೆ ಜೀವನದ ಎಲ್ಲ ತಾಪಗಳೂ ನಿವಾರಣೆ: ಶ್ರೀ ವಿದ್ಯಾಶ್ರೀಶ ತೀರ್ಥ ಸ್ವಾಮೀಜಿ

Minister Shivaraj tangadagi visited and inspected Tungabhadra river side villages
ಮಳೆ20 mins ago

Koppala News: ತುಂಗಭದ್ರಾ ನದಿಗೆ ಅಪಾರ ಪ್ರಮಾಣದ ನೀರು; ನದಿಪಾತ್ರದ ಗ್ರಾಮಗಳಿಗೆ ತಂಗಡಗಿ ಭೇಟಿ

Space mission
ಪ್ರಮುಖ ಸುದ್ದಿ33 mins ago

Space mission : ಇಂಡೊ- ಯುಎಸ್​ ಬಾಹ್ಯಾಕಾಶ ಯಾನಕ್ಕೆ ಭಾರತದ ಶುಭಾಂಶು ಶುಕ್ಲಾ ‘ಪ್ರಧಾನ ಗಗನಯಾತ್ರಿ’

Actor Darshan
ಕರ್ನಾಟಕ43 mins ago

Actor Darshan: ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಸಾಕ್ಷಿ ಹೇಳದಂತೆ ಬೆದರಿಕೆ; ದರ್ಶನ್‌ ಗ್ಯಾಂಗ್ ವಿರುದ್ಧ ದೂರು

Fashion workshop
ಫ್ಯಾಷನ್50 mins ago

Fashion Workshop: ಬೆಂಗಳೂರಲ್ಲಿ ಜಪಾನಿನ ಖ್ಯಾತ ಡಿಸೈನರ್‌ ಶಿಂಗೊ ಸಾಟೊ ಫ್ಯಾಷನ್‌ ಕ್ಲಾಸ್‌!

Paris Olympics 2024
ಕ್ರೀಡೆ1 hour ago

Paris Olympics 2024 : ಪ್ಯಾರಿಸ್​ ಒಲಿಂಪಿಕ್ಸ್​ನ 8ನೇ ದಿನವಾದ ಶನಿವಾರ ಭಾರತದ ಸ್ಪರ್ಧೆಗಳ ವಿವರ ಇಲ್ಲಿದೆ

Kasturirangan Report
ಕರ್ನಾಟಕ1 hour ago

Kasturirangan Report: ಕಸ್ತೂರಿ ರಂಗನ್ ವರದಿ ತಿರಸ್ಕರಿಸುವ ಬಗ್ಗೆ ಮತ್ತೊಮ್ಮೆ ಚರ್ಚಿಸಿ ತೀರ್ಮಾನ ಎಂದ ಸಿಎಂ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka Rain
ಮಳೆ1 day ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ1 day ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ1 day ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

karnataka Rain
ಮಳೆ3 days ago

Karnataka rain : ಭದ್ರಾ ನದಿಯಲ್ಲಿ ಕೊಚ್ಚಿ ಹೋದ ಹಸು; ಬೈಂದೂರಿನಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ

Karnataka Rain
ಮಳೆ3 days ago

Karnataka Rain : ಭಾರಿ ಮಳೆಗೆ ಬಾಳೆಹೊನ್ನೂರು ಮುಳುಗಡೆ; ನೆರೆಗೆ ಬೋಟ್‌ ಮೊರೆ ಹೋದ ಜನರು

Bharachukki falls
ಚಾಮರಾಜನಗರ3 days ago

Bharachukki Falls : ಭರಚುಕ್ಕಿ ಜಲಪಾತಕ್ಕೆ ಕಳ್ಳ ಮಾರ್ಗದಿಂದ ಹೋದೋರಿಗೆ ಬಸ್ಕಿ ಹೊಡೆಸಿದ ಪೊಲೀಸರು!

karnataka Rain
ಮಳೆ4 days ago

Karnataka Rain: ಮತ್ತೆ ಶುರು ಮಳೆ ಅಬ್ಬರ; ಗಾಳಿಗೆ ಹಾರಿ ಹೋದ ಮನೆಗಳ ಚಾವಣಿ, ಶಿರಾಡಿಘಾಟ್‌ನಲ್ಲಿ ಮತ್ತೆ ಭೂ ಕುಸಿತ

Elephant combing Makna elephant captured near Bannerghatta
ಬೆಂಗಳೂರು ಗ್ರಾಮಾಂತರ4 days ago

Elephant combing: ಭೀಮ, ಮಹೇಂದ್ರರ ಮುಂದೆ ಮಂಡಿಯೂರಿದ ಮಕ್ನಾ ಆನೆ; ಹೇಗಿತ್ತು ಗೊತ್ತಾ ಕಾರ್ಯಾಚರಣೆ

karnataka rain
ಮಳೆ4 days ago

Karnataka rain: ಪ್ರವಾಹದ ಭೀಕರತೆ; ಹಳ್ಳದಲ್ಲಿ ತೇಲಿಬಂದ ಎಮ್ಮೆಗಳ ಕಳೇಬರ

Tungabhadra Dam
ಕೊಪ್ಪಳ5 days ago

Tungabhadra Dam: ಕಾಲುವೆಯಲ್ಲಿ ಬಾಲಕರ ಈಜಾಟ; ಅಧಿಕಾರಿಗಳಿಗೆ ಪೀಕಲಾಟ!

ಟ್ರೆಂಡಿಂಗ್‌