Haris Rauf: ʼದಿ ಹಂಡ್ರೆಡ್‌ʼ ಕ್ರಿಕೆಟ್‌ ಲೀಗ್‌ ಆಡುತ್ತಿದ್ದ ಪಾಕ್‌ ವೇಗಿ ರೌಫ್‌ಗೆ ಕೊಹ್ಲಿ ಬಾರಿಸಿದ ಸಿಕ್ಸರ್‌ ನೆನಪಿಸಿದ ಅಭಿಮಾನಿ; ವಿಡಿಯೊ ವೈರಲ್‌ - Vistara News

ಕ್ರೀಡೆ

Haris Rauf: ʼದಿ ಹಂಡ್ರೆಡ್‌ʼ ಕ್ರಿಕೆಟ್‌ ಲೀಗ್‌ ಆಡುತ್ತಿದ್ದ ಪಾಕ್‌ ವೇಗಿ ರೌಫ್‌ಗೆ ಕೊಹ್ಲಿ ಬಾರಿಸಿದ ಸಿಕ್ಸರ್‌ ನೆನಪಿಸಿದ ಅಭಿಮಾನಿ; ವಿಡಿಯೊ ವೈರಲ್‌

Haris Rauf: ಅಂದು ನಡೆದಿದ್ದ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ ಅವರು ರೌಫ್‌ ಅವರು ಎಸೆದಿದ್ದ 19ನೇ ಓವರ್‌ನ ಕೊನೆಯ 2 ಎಸೆತಗಳನ್ನು ಅಸಾಮಾನ್ಯ ಬ್ಯಾಟಿಂಗ್‌ ಮೂಲಕ ಸತತವಾಗಿ ಸಿಕ್ಸರ್‌ಗೆ ಬಡಿದಿಟ್ಟಿದ್ದರು. ಇದು ಪಂದ್ಯಕ್ಕೆ ಮಹತ್ವದ ತಿರುವು ನೀಡಿತ್ತು.

VISTARANEWS.COM


on

Haris Rauf
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಲಂಡನ್‌: 2022ರಲ್ಲಿ ಆಸ್ಟ್ರೇಲಿಯಾದ ಮೆಲ್ಬರ್ನ್ ಮೈದಾನದಲ್ಲಿ ನಡೆದಿದ್ದ​ ಟಿ-20 ವಿಶ್ವಕಪ್‌(t20 world cup 2022) ಪಂದ್ಯದ ವೇಳೆ ಪಾಕಿಸ್ತಾನದ ವೇಗಿ ಹ್ಯಾರಿಸ್‌ ರೌಫ್‌(Haris Rauf) ಬೌಲಿಂಗ್‌ಗೆ ವಿರಾಟ್‌ ಕೊಹ್ಲಿ(Virat Kohli) ಲೀಲಾಜಾಲವಾಗಿ ಸಿಕ್ಸರ್‌ ಬಾರಿಸಿದ್ದನ್ನು ಯಾವ ಭಾರತೀಯನೂ ಮರೆತಿರಲಿಕ್ಕಿಲ್ಲ. ಕೊಹ್ಲಿ ಈ ಓವರ್​ನಲ್ಲಿ ಬಾರಿಸಿದ ಸಿಕ್ಸರ್​ನಿಂದಾಗಿ ಅಂದು ಭಾರತ(t20 world cup 2022 ind vs pak) ಪಂದ್ಯವನ್ನು ಗೆದ್ದು ಬೀಗಿತ್ತು. ಇದೀಗ ದಿ ಹಂಟ್ರೆಡ್​ ಕ್ರಿಕೆಟ್​ ಟೂರ್ನಿಯನ್ನಾಡುತ್ತಿದ್ದ ರೌಫ್​ ಅವರನ್ನು ಭಾರತೀಯ ಅಭಿಮಾನಿಯೊಬ್ಬ ಕೆಣಕ್ಕಿದ ವಿಡಿಯೊ ವೈರಲ್(viral video)​ ಆಗಿದೆ.

ಲಂಡನ್ ಸ್ಪಿರೀಟ್‌ ವಿರುದ್ಧದ ಪಂದ್ಯದಲ್ಲಿ ಹ್ಯಾರಿಸ್‌ ರೌಫ್‌ ಬೌಂಡರಿ ಲೈನ್‌ನಲ್ಲಿ ಫೀಲ್ಡಿಂಗ್‌ ಮಾಡುತ್ತಿದ್ದಋು. ಈ ವೇಳೆ ಪ್ರೇಕ್ಷಕರ ಸ್ಟ್ಯಾಂಡ್‌ನಲ್ಲಿದ್ದ ಅಭಿಮಾನಿಯೊಬ್ಬ ಹಿಂದಿಯಲ್ಲಿ ರೌಫ್‌ ಭಾಯ್…ರೌಫ್‌ ಭಾಯ್ ಎಂದು ಕರೆದು ನೆನೆಪಿದೆಯಾ ಅಂದು ಮೆಲ್ಬರ್ನ್ ಮೈದಾನದಲ್ಲಿ ನಿಮ್ಮ ಓವರ್‌ನಲ್ಲಿ ವಿರಾಟ್‌ ಕೊಹ್ಲಿ ಸಿಕ್ಸರ್‌ ಬಾರಿಸಿದ್ದು ಎಂದು ಹೇಳುವ ಮೂಲಕ ಕೀಚಾಯಿಸಿದ್ದಾರೆ. ಈ ವೇಳೆ ರೌಫ್‌ ತಲೆಯಾಡಿಸುತ್ತಾ ಹಾ ನೆನಪಿದೆ ಎನ್ನುವಂತೆ ಸನ್ನೆ ಮಾಡಿದ್ದಾರೆ. ಸದ್ಯ ಈ ವಿಡಿಯೊ ವೈರಲ್‌ ಆಗಿದೆ.

ಅಂದು ನಡೆದಿದ್ದ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ ಅವರು ರೌಫ್‌ ಅವರು ಎಸೆದಿದ್ದ 19ನೇ ಓವರ್‌ನ ಕೊನೆಯ 2 ಎಸೆತಗಳನ್ನು ಅಸಾಮಾನ್ಯ ಬ್ಯಾಟಿಂಗ್‌ ಮೂಲಕ ಸತತವಾಗಿ ಸಿಕ್ಸರ್‌ಗೆ ಬಡಿದಿಟ್ಟಿದ್ದರು. ಇದು ಪಂದ್ಯಕ್ಕೆ ಮಹತ್ವದ ತಿರುವು ನೀಡಿತ್ತು. ಕೊಹ್ಲಿ ಈ 2 ಸಿಕ್ಸರ್‌ ಬಾರಿಸದೇ ಹೋಗಿದ್ದರೆ ಪಾಕಿಸ್ತಾನ ಪಂದ್ಯವನ್ನು ಗೆಲ್ಲುತ್ತಿತ್ತು. ರೌಫ್‌ ಈ ಓವರ್‌ನಲ್ಲಿ 15 ರನ್‌ ಬಿಟ್ಟುಕೊಟ್ಟಿದ್ದರು. ಈ ಪಂದ್ಯದಲ್ಲಿ ಕೊಹ್ಲಿ ಅಜೇಯ 82 ರನ್‌ ಬಾರಿಸಿ ಭಾರತದ ಗೆಲುವಿನ ಹೀರೊ ಎನಿಸಿಕೊಂಡಿದ್ದರು.

ಇದನ್ನೂ ಓದಿ ಮ್ಯಾಚ್‌ ಫಿಕ್ಸಿಂಗ್‌ ಕಳಂಕಿತ ಅಂಪೈರ್‌ ಅಸದ್‌ ರೌಫ್‌ ಇನ್ನಿಲ್ಲ

ಅಭಿಮಾನಿ ಮೇಲೆ ಹಲ್ಲೆಗೆ ಯತ್ನಿಸಿದ್ದ ರೌಫ್​


ಈ ಬಾರಿಯ ಟ್ವಿ20 ವಿಶ್ವಕಪ್‌ ಟೂನಿಯ ವೇಳೆ ಹ್ಯಾರಿಸ್ ರೌಫ್ ಅಭಿಮಾನಿಯೊಬ್ಬರ ಮೇಲೆ ಹಲ್ಲೆಗೆ ಯತ್ನಿಸಿ ಭಾರೀ ಟೀಕೆಗೆ ಒಳಗಾಗಿದ್ದರು. ಫ್ಲೋರಿಡಾದಲ್ಲಿ ರೌಫ್​ ಅವರು ಪತ್ನಿ ಜತೆ ತಾವು ತಂಗಿದ್ದ ಹೋಟೆಲ್​ಗೆ ಹೋಗುತ್ತಿದ್ದಾಗ ವೇಳೆ ಅಭಿಮಾನಿಯೊಬ್ಬ ನಿಮ್ಮ ಜತೆಗೊಂದು ಫೋಟೊ ಬೇಕಿತ್ತು ಎಂದು ಕೇಳಿದ್ದ. ಈ ವೇಳೆ ರೌಫ್​, ನೀನು ಭಾರತೀಯನಾಗಿರಬೇಕು ಎಂದು ಹೇಳಿದ್ದರು. ಇದಕ್ಕೆ ಸಿಟ್ಟಿನಿಂದ ಉತ್ತರಿಸಿದ ಅಭಿಮಾನಿ ನಾನು ಕೂಡ ಪಾಕಿಸ್ತಾನ ಮೂಲದವನೇ ಎಂದು ಹೇಳಿ ಬಳಿಕ ಏನೋ ಕೆಟ್ಟ ಪದಗಳಿಂದ ನಿಂದಿಸಿದ್ದರು. ಇದು ರೌಫ್​ ಅವರ ಪಿತ್ತ ನೆತ್ತಿಗೇರುವಂತೆ ಮಾಡಿತ್ತು. ಏಕಾಏಕಿ ಓಡಿ ಬಂದು ಈತನ ಮೇಲೆ ರೌಫ್ ಹಲ್ಲೆಗೆ ಯತ್ನಿಸಿದ್ದರು. ಈ ವಿಡಿಯೊ ಭಾರೀ ವೈರಲ್‌ ಆಗಿತ್ತು.

ಪತ್ನಿ ರೌಫ್​ ಅವರನ್ನು ಹಿಡಿದು ನಿಲ್ಲಿಸುವ ಪ್ರಯತ್ನ ಪಟ್ಟರೂ ಕೂಡ ರೌಫ್​ ತಪ್ಪಿಸಿಕೊಂಡು ಹಲ್ಲೆಗೆ ಮುಂದಾದರು. ತಕ್ಷಣ ರೌಫ್​ ಅವರ ಮ್ಯಾನೇಜರ್​ ಹಾಗು ಕೆಲ ಸಿಬ್ಬಂದಿಗಳು ಅವರನ್ನು ತಡೆದು ನಿಲ್ಲಿಸಿದ್ದಾರೆ. ಪತ್ನಿ ಕೂಡ ಅವರ ಕೈಗಳನ್ನು ಹಿಡಿದು ಹಲ್ಲೆ ಮಾಡದಂತೆ ಮನವಿ ಮಾಡುತ್ತಲೇ ಅವರನ್ನು ಸಮಾಧಾನ ಪಡಿಸಿದ್ದರು. ಈ ಎಲ್ಲ ದೃಶ್ಯಗಳು ವಿಡಿಯೊದಲ್ಲಿ ಸೆರೆಯಾಗಿತ್ತು.

 

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Paris Olympics 2024 : ಪ್ಯಾರಿಸ್​​ನಲ್ಲಿ ಸಿಕ್ಕಾಪಟ್ಟೆ ಸೆಖೆ; ಅಥ್ಲೀಟ್​ಗಳಿಗಾಗಿ 40 ಎಸಿ ಕಳುಹಿಸಿದ ಕ್ರೀಡಾ ಸಚಿವಾಲಯ

Paris Olympics 2024: ಎರಡು ಪ್ರಮುಖ ಒಲಿಂಪಿಕ್ ಕ್ರೀಡಾಕೂಟದ ಸ್ಥಳಗಳಾದ ಪ್ಯಾರಿಸ್ ಮತ್ತು ಚಟೌರೌಕ್ಸ್ ಎರಡರಲ್ಲೂ ತಾಪಮಾನ ಮಿತೀಮೀರಿದೆ. ಪುರುಷರ 50 ಮೀಟರ್ ರೈಫಲ್ 3-ಪೊಸಿಷನ್ಸ್ ಸ್ಪರ್ಧೆಯ ವೇಲೆ ಭಾರತದ ಕಂಚಿನ ವಿಜೇತ ಸ್ವಪ್ನಿಲ್ ಕುಸಾಲೆ ಸೇರಿದಂತೆ ಎಲ್ಲಾ ಎಂಟು ಅಂತಿಮ ಸ್ಪರ್ಧಿಗಳು ಚಟೌರೌಕ್ಸ್ ಶೂಟಿಂಗ್ ರೇಂಜ್​ನಲ್ಲಿ ಸಾಕಷ್ಟು ಸಮಸ್ಯೆ ಎದುರಿಸಿದರು. ಅವರಿಗೆ ಸ್ಪರ್ಧೆ ಮಾಡಲೂ ಸಮಸ್ಯೆ ಆಯಿತು.

VISTARANEWS.COM


on

Paris Olympics 2024
Koo

ಪ್ಯಾರಿಸ್: ಒಲಿಂಪಿಕ್ಸ್​ ನಡೆಯುತ್ತಿರುವ ಪ್ಯಾರಿಸ್​​ನಲ್ಲಿ (Paris Olympics 2024) ತಾಪಮಾನ ಹೆಚ್ಚುತ್ತಿದೆ. ಹೀಗಾಗಿ ಕ್ರೀಡಾ ಗ್ರಾಮದಲ್ಲಿರುವ ತಮ್ಮ ಕೊಠಡಿಗಳಲ್ಲಿ ಅಥ್ಲೀಟ್​ಗಳು ಪರಿತಪಿಸುವಂತಾಗಿದೆ. ಸೆಖೆಯ ಸಮಸ್ಯೆಯಿಂದ ಹೋರಾಡುತ್ತಿರುವ ಭಾರತೀಯ ಕ್ರೀಡಾಪಟುಗಳ ಅನುಕೂಲಕ್ಕಾಗಿ ಕ್ರೀಡಾ ಸಚಿವಾಲಯವು 40 ಪೋರ್ಟಬಲ್ ಹವಾನಿಯಂತ್ರ ವ್ಯವಸ್ಥೆಯನ್ನು ಕಳುಹಿಸಿದೆ. ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ಮತ್ತು ಫ್ರೆಂಚ್ ರಾಯಭಾರ ಕಚೇರಿಯೊಂದಿಗೆ ಚರ್ಚಿಸಿದ ನಂತರ ಹವಾನಿಯಂತ್ರಣಗಳನ್ನು ಕ್ರೀಡಾಕೂಟದ ಗ್ರಾಮಕ್ಕೆ ಕಳುಹಿಸಲಾಗಿದೆ ಎಂದು ಸಚಿವಾಲಯದ ಮೂಲಗಳು ತಿಳಿಸಿವೆ.

ಪ್ಯಾರಿಸ್ನಲ್ಲಿನ ತಾಪಮಾನ ಮತ್ತು ಆರ್ದ್ರತೆಯಿಂದಾಗಿ ಒಲಿಂಪಿಕ್ ಗೇಮ್ಸ್ ಗ್ರಾಮದಲ್ಲಿ ಕ್ರೀಡಾಪಟುಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಗಣನೆಗೆ ತೆಗೆದುಕೊಂಡು, ಭಾರತೀಯ ಕ್ರೀಡಾಪಟುಗಳು ತಂಗಿರುವ ಗೇಮ್ಸ್ ವಿಲೇಜ್ ಕೊಠಡಿಗಳಲ್ಲಿ 40 ಎಸಿಗಳನ್ನು ಒದಗಿಸಲು ಕ್ರೀಡಾ ಸಚಿವಾಲಯ ನಿರ್ಧರಿಸಿದೆ” ಎಂದು ಮೂಲಗಳು ಪಿಟಿಐಗೆ ತಿಳಿಸಿವೆ.

ಎರಡು ಪ್ರಮುಖ ಒಲಿಂಪಿಕ್ ಕ್ರೀಡಾಕೂಟದ ಸ್ಥಳಗಳಾದ ಪ್ಯಾರಿಸ್ ಮತ್ತು ಚಟೌರೌಕ್ಸ್ ಎರಡರಲ್ಲೂ ತಾಪಮಾನ ಮಿತೀಮೀರಿದೆ. ಪುರುಷರ 50 ಮೀಟರ್ ರೈಫಲ್ 3-ಪೊಸಿಷನ್ಸ್ ಸ್ಪರ್ಧೆಯ ವೇಲೆ ಭಾರತದ ಕಂಚಿನ ವಿಜೇತ ಸ್ವಪ್ನಿಲ್ ಕುಸಾಲೆ ಸೇರಿದಂತೆ ಎಲ್ಲಾ ಎಂಟು ಅಂತಿಮ ಸ್ಪರ್ಧಿಗಳು ಚಟೌರೌಕ್ಸ್ ಶೂಟಿಂಗ್ ರೇಂಜ್​ನಲ್ಲಿ ಸಾಕಷ್ಟು ಸಮಸ್ಯೆ ಎದುರಿಸಿದರು. ಅವರಿಗೆ ಸ್ಪರ್ಧೆ ಮಾಡಲೂ ಸಮಸ್ಯೆ ಆಯಿತು.

ಇದನ್ನೂ ಓದಿ: Paris Olympics 2024 : 52 ವರ್ಷಗಳ ಬಳಿಕ ಒಲಿಂಪಿಕ್ಸ್​​ನಲ್ಲಿ ಆಸ್ಟ್ರೇಲಿಯಾ ತಂಡವನ್ನು ಸೋಲಿಸಿದ ಭಾರತದ ಹಾಕಿ ತಂಡ

ಪ್ಯಾರಿಸ್​​ನಲ್ಲಿ ಕೆಲವು ದಿನಗಳಲ್ಲಿ ತಾಪಮಾನವು ಅಸಹನೀಯ 40 ಡಿಗ್ರಿ ಸೆಲ್ಸಿಯಸ್ ತಲುಪಿದೆ ಎಂದು ವರದಿಗಳಿವೆ. ಡಾಕೂಟ ಪ್ರಾರಂಭವಾಗುವ ಮೊದಲೇ,ಇಂಗಾಲದ ಡೈಆಕ್ಸೈಡ್​ ಹೊರಸೂಸುವಿಕೆಯನ್ನು ತಡೆಯಲು ಹವಾನಿಯಂತ್ರಣ ವ್ಯವಸ್ಥೆ ಬಳಸುವುದಿಲ್ಲ ಸಂಘಟಕರು ಹೇಳಿದ್ದರು. ಹೀಗಾಗಿ ಹಲವಾರು ತಂಡಗಳು ಪ್ಯಾರಿಸ್ನ ತಾಪಮಾನದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದವು.

ಕ್ರೀಡಾಕೂಟದ ಆಯೋಜಕ ಸಮಿತಿಯು ಗೇಮ್ಸ್ ವಿಲೇಜ್​ನಲ್ಲಿ ತಾಪಮಾನ ಕಡಿಮೆ ಮಾಡಲು ಅಂಡರ್ಫ್ಲೋರ್ ಕೂಲಿಂಗ್ ಕಾರ್ಯವಿಧಾನ ಮತ್ತು ಅಂತರ್ನಿರ್ಮಿತ ಇನ್ಸುಲೇಷನ್ ಅನಾವರಣಗೊಳಿಸಿತು. ಆದಾಗ್ಯೂ, ಕ್ರಮಗಳ ಬಗ್ಗೆ ಸಮಾಧಾನಗೊಳ್ಳದ ಯುಎಸ್ಎ ತುಕಡಿ ಪೋರ್ಟಬಲ್ ಏರ್ ಕಂಡೀಷನರ್​​ ಜತೆಗೆ ಪ್ರಯಾಣಿಸಿತ್ತು.

ಶಾಖವನ್ನು ನಿರ್ವಹಿಸಲು ಇತರ ದೇಶಗಳು ಪೋರ್ಟಬಲ್ ಎಸಿಗಳನ್ನು ಖರೀದಿಸಲು ಆಶ್ರಯಿಸಿವೆ ಎಂದು ವರದಿಗಳು ಸೂಚಿಸಿವೆ. ಭಾರತ ಈಗ ಈ ಸಾಲಿಗೆ ಸೇರಿಕೊಂಡಿದೆ. “ಶುಕ್ರವಾರ ಮುಂಜಾನೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಮತ್ತು ವೆಚ್ಚವನ್ನು ಸಚಿವಾಲಯವು ಭರಿಸುತ್ತಿದೆ” ಎಂದು ಸಚಿವಾಲಯದ ಮೂಲಗಳು ತಿಳಿಸಿವೆ.

ಎಸಿಗಳು ಪ್ಲಗ್ ಮತ್ತು ಪ್ಲೇ ಘಟಕಗಳಾಗಿವೆ. ಕ್ರೀಡಾಪಟುಗಳು ಈಗಾಗಲೇ ಅವುಗಳನ್ನು ಬಳಸಲು ಪ್ರಾರಂಭಿಸಿದ್ದಾರೆ. ಇದರೊಂದಿಗೆ ಅವರು ಹೆಚ್ಚು ಆರಾಮದಾಯಕವಾಗಿ ಉಳಿದುಕೊಳ್ಳಬಹುದು. ಉತ್ತಮ ಪ್ರದರ್ಶನವನ್ನು ನೀಡಬಹುದು “ಎಂದು ಮೂಲಗಳು ಹೇಳಿವೆ.

Continue Reading

ಪ್ರಮುಖ ಸುದ್ದಿ

Paris Olympics 2024 : 52 ವರ್ಷಗಳ ಬಳಿಕ ಒಲಿಂಪಿಕ್ಸ್​​ನಲ್ಲಿ ಆಸ್ಟ್ರೇಲಿಯಾ ತಂಡವನ್ನು ಸೋಲಿಸಿದ ಭಾರತದ ಹಾಕಿ ತಂಡ

Paris Olympics 2024: ಈ ವರ್ಷ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 8 ನೇ ಪಂದ್ಯ ಇದಾಗಿದೆ. ಹಿಂದಿನ 7 ಪಂದ್ಯಗಳನ್ನು ಆಸೀಸ್ ಗೆದ್ದಿತ್ತು. ಇದೀಗ ಭಾರತ ತಿರುಗೇಟು ನೀಡಿತು. ಅಲ್ಲದೆ ಬೆಲ್ಜಿಯಂ ವಿರುದ್ಧದ ಸೋಲಿನಿಂದ ಚೇತರಿಸಿಕೊಳ್ಳಲು ಭಾರತಕ್ಕೆ ಉತ್ತಮ ಕಾರಣ ಸಿಕ್ಕಿತು ಹಾಗೂ ಕ್ವಾರ್ಟರ್ ಫೈನಲ್​​ ಗೆಲುವಿಗೆ ಪ್ರೇರಣೆಯಾಯಿತು.

VISTARANEWS.COM


on

Paris Olympics 2024
Koo

ಬೆಂಗಳೂರು: ಹರ್ಮನ್ ಪ್ರೀತ್ ಸಿಂಗ್ ಅವರ ಆಕರ್ಷಕ ಎರಡು ಗೋಲುಗಳ ನೆರವಿನಿಂದ ಮಿಂಚಿದ ಭಾರತ ಹಾಕಿ ತಂಡ ಪ್ಯಾರಿಸ್ ಒಲಿಂಪಿಕ್ಸ್​​ನ (Paris Olympics 2024) ಗ್ರೂಪ್ ಹಂತದಲ್ಲಿ ಆಸ್ಟ್ರೇಲಿಯಾ ವಿರುದ್ಧ 3-2 ಗೋಲುಗಳ ಅಂತರದಲ್ಲಿ ಜಯ ಸಾಧಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ. ಒಲಿಂಪಿಕ್ಸ್​​ನಲ್ಲಿ ಆಸ್ಟ್ರೇಲಿಯಾ ವಿರುದ್ಧ 52 ವರ್ಷಗಳ ಬಳಿಕ ಭಾರತ ಗೆಲುವು ಸಾಧಿಸಿದ್ದು ಈ ಫಲಿತಾಂಶದವ ವಿಶೇಷವಾಗಿದೆ. ಈ ಮೂಲಕ ಭಾರತ ಹಾಕಿ ತಂಡ ಪ್ಯಾರಿಸ್​​ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವುದನ್ನು ಮುಂದುವರಿಸಿತು. ಈ ಗೆಲುವು ಭಾರತದ ಪಾಲಿಗೆ ಸಂಘಟಿತ ಹೋರಾಟವಾಗಿತ್ತು.

ಈ ವರ್ಷ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 8 ನೇ ಪಂದ್ಯ ಇದಾಗಿದೆ. ಹಿಂದಿನ 7 ಪಂದ್ಯಗಳನ್ನು ಆಸೀಸ್ ಗೆದ್ದಿತ್ತು. ಇದೀಗ ಭಾರತ ತಿರುಗೇಟು ನೀಡಿತು. ಅಲ್ಲದೆ ಬೆಲ್ಜಿಯಂ ವಿರುದ್ಧದ ಸೋಲಿನಿಂದ ಚೇತರಿಸಿಕೊಳ್ಳಲು ಭಾರತಕ್ಕೆ ಉತ್ತಮ ಕಾರಣ ಸಿಕ್ಕಿತು ಹಾಗೂ ಕ್ವಾರ್ಟರ್ ಫೈನಲ್​​ ಗೆಲುವಿಗೆ ಪ್ರೇರಣೆಯಾಯಿತು.

ಡಿ ಗುಂಪಿನ ಈ ಪಂದ್ಯದಲ್ಲಿ ಭಾರತವು ಆಕ್ರಮಣಕಾರಿ ಆಟವಾಡಿತು. ಭಾರತದ ದಾಳಿಯ ಬೆದರಿಕೆಯನ್ನು ಎದುರಿಸಲು ಆಸ್ಟ್ರೇಲಿಯಾದ ಆಟಗಾರ ನಿಧಾನವಾಗಿ ಆಟ ಪ್ರಾರಂಭಿಸಿತು.

ಮೊದಲ ಕ್ವಾರ್ಟರ್ನಲ್ಲಿ ಹರ್ಮನ್ಪ್ರೀತ್ ಸಿಂಗ್ ನೇತೃತ್ವದ ತಂಡ ಎರಡು ಗೋಲುಗಳ ಮುನ್ನಡೆ ಸಾಧಿಸಿತು. ಫಾರ್ವರ್ಡ್ ಆಟಗಾರ ಅಭಿಷೇಕ್ 12ನೇ ನಿಮಿಷದಲ್ಲಿ ಭಾರತದ ಪರ ಮೊದಲ ಗೋಲು ಗಳಿಸಿದರು. ಒಂದು ನಿಮಿಷದ ನಂತರ ಹರ್ಮನ್ ಪ್ರೀತ್ ಪೆನಾಲ್ಟಿ ಕಾರ್ನರ್ ಮೂಲಕ ಗೋಲು ಗಳಿಸಿ ತಂಡಕ್ಕೆ 2-0 ಮುನ್ನಡೆ ತಂದುಕೊಟ್ಟರು.

25ನೇ ನಿಮಿಷದಲ್ಲಿ ಕ್ರೇಗ್ ಥಾಮಸ್ ಪೆನಾಲ್ಟಿ ಕಾರ್ನರ್ ಮೂಲಕ ಗೋಲು ಬಾರಿಸಿ ಅಂತರವನ್ನು ಒಂದು ಗೋಲಿಗೆ ಇಳಿಸಿದರು. 32ನೇ ನಿಮಿಷದಲ್ಲಿ ಹರ್ಮನ್ ಪ್ರೀತ್ ಮತ್ತೊಂದು ಪೆನಾಲ್ಟಿ ಕಾರ್ನರ್ ಮೂಲಕ ಭಾರತಕ್ಕೆ ಮುನ್ನಡೆ ತಂದುಕೊಟ್ಟರು. 55ನೇ ನಿಮಿಷದಲ್ಲಿ ಬ್ಲೇಕ್ ಗ್ರೋವರ್ ಗಳಿಸಿದ ಪೆನಾಲ್ಟಿ ಸ್ಟ್ರೋಕ್ ಮೂಲಕ ಆಸ್ಟ್ರೇಲಿಯಾ ನಾಲ್ಕನೇ ಕ್ವಾರ್ಟರ್​ನಲ್ಲಿ ಭಾರತಕ್ಕೆ ಬೆದರಿಕೆ ಒಡ್ಡಿತು. ಕೊನೆಯ ನಿಮಿಷಗಳಲ್ಲಿ ಸಮಬಲದ ಹೋರಾಟ ತೋರಿದ ಆಸೀಸ್ ಕಠಿಣ ಪ್ರಯತ್ನ ನಡೆಸಿದರೂ ಗೋಲು ಗಳಿಸಲು ವಿಫಲವಾಯಿತು.

ಇದನ್ನೂ ಓದಿ: Manu Bhaker : 25 ಮೀಟರ್ ಪಿಸ್ತೂಲ್ ವಿಭಾಗದಲ್ಲಿ ಮನು ಭಾಕರ್​ ಫೈನಲ್​ಗೆ​​; ಒಂದೇ ಒಲಿಂಪಿಕ್ಸ್​ನಲ್ಲಿ ಮೂರನೇ ಬಾರಿ ಫೈನಲ್​ಗೆ

ಭಾರತ ಗ್ರೂಪ್ ಹಂತವನ್ನು ಕೇವಲ ಒಂದು ಸೋಲಿನೊಂದಿಗೆ ಕೊನೆಗೊಳಿಸಿದೆ. ನ್ಯೂಜಿಲೆಂಡ್ ತಂಡವನ್ನು 3-2 ಅಂತರದಿಂದ ಮಣಿಸಿ ಭಾರತ ತನ್ನ ಅಭಿಯಾನವನ್ನು ಆರಂಭಿಸಿತ್ತು. ಆ ಗೆಲುವಿನ ನಂತರ ಅರ್ಜೆಂಟೀನಾ ವಿರುದ್ಧ 1-1 ಡ್ರಾ ಸಾಧಿಸಿತು. ನಂತರ ಭಾರತ ಐರ್ಲೆಂಡ್ ತಂಡವನ್ನು 2-0 ಅಂತರದಿಂದ ಸೋಲಿಸಿತು. ಒಲಿಂಪಿಕ್ ಚಾಂಪಿಯನ್ ಬೆಲ್ಜಿಯಂ ವಿರುದ್ಧ 2-1 ಗೋಲುಗಳ ಅಂತರದಲ್ಲಿ ಸೋತಿದ್ದ ಭಾರತ, ಆಸೀಸ್ ವಿರುದ್ಧ ಐತಿಹಾಸಿಕ ಗೆಲುವು ದಾಖಲಿಸಿತ್ತು.

‘ಬಿ’ ಗುಂಪಿನಲ್ಲಿ ಬೆಲ್ಜಿಯಂ ನಂತರ ಎರಡನೇ ಸ್ಥಾನ ಪಡೆದಿರುವ ಭಾರತ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ. ನಾಕೌಟ್​​ನಲ್ಲಿ ಯಾವ ತಂಡವನ್ನು ಎದುರಿಸುತ್ತಾರೆ ಎಂದು ತಿಳಿಯಲು ತಂಡವು ಈಗ ಗ್ರೇಟ್ ಬ್ರಿಟನ್ ಮತ್ತು ಸ್ಪೇನ್ ನಡುವಿನ ಪಂದ್ಯದ ವಿಜೇತರಿಗಾಗಿ ಕಾಯುತ್ತಿದೆ.

Continue Reading

ಕ್ರೀಡೆ

Manu Bhaker : 25 ಮೀಟರ್ ಪಿಸ್ತೂಲ್ ವಿಭಾಗದಲ್ಲಿ ಮನು ಭಾಕರ್​ ಫೈನಲ್​ಗೆ​​; ಒಂದೇ ಒಲಿಂಪಿಕ್ಸ್​ನಲ್ಲಿ ಮೂರನೇ ಬಾರಿ ಫೈನಲ್​ಗೆ

Manu Bhaker : ಅರ್ಹತಾ ಸುತ್ತಿನ ಭಾಗವಾಗಿದ್ದ ಇಶಾ ಸಿಂಗ್ 18 ನೇ ಸ್ಥಾನ ಪಡೆದು ನಿರಾಸೆಗೆ ಒಳಗಾದರು. ಇದೇ ವೇಳೆ ಪ್ಯಾರಿಸ್​​ನಲ್ಲಿ ನಡೆದ ಕ್ರೀಡಾಕೂಟದಲ್ಲಿ ಮನು ತನ್ನ ಮೂರನೇ ಬಾರಿಗೆ ಫೈನಲ್​ ಪ್ರವೇಶಿಸಿದರು. ಮನು ಈಗಾಗಲೇ ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಮತ್ತು ಮಿಶ್ರ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಗಳಲ್ಲಿ 2 ಕಂಚಿನ ಪದಕಗಳನ್ನು ಗೆದ್ದುಕೊಂಡು ದಾಖಲೆ ಬರೆದಿದ್ದಾರೆ. ಈ ಸ್ಪರ್ಧೆಯಲ್ಲೂ ಗೆದ್ದರೆ ಅವರ ಸಾಧನೆಯ ಕಿರೀಟಕ್ಕೆ ಇನ್ನೊಂದು ಗರಿ ಸೇರಿಕೊಳ್ಳಲಿವೆ.

VISTARANEWS.COM


on

Manu Bhaker
Koo

ಬೆಂಗಳೂರು: ಪ್ಯಾರಿಸ್​ನಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್ 2024ರ (Paris Olympics 2024) ಮಹಿಳೆಯರ 25 ಮೀಟರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಭಾರತದ ಮನು ಭಾಕರ್ (Manu Bhaker) ಮೂರನೇ ಬಾರಿಗೆ ಫೈನಲ್ ಪ್ರವೇಶಿಸಿದ್ದಾರೆ. ನಿಖರತೆ ಮತ್ತು ಕ್ಷಿಪ್ರ ಸುತ್ತುಗಳಲ್ಲಿ ಒಟ್ಟು 590 ಅಂಕಗಳನ್ನು ಗಳಿಸಿದ ಮನು. 2ನೇ ಸ್ಥಾನ ಪಡೆದು ಫೈನಲ್​ಗೇರಿದರು. ಹಂಗರಿಯ ವೆರೋನಿಕಾ ಮೇಜರ್ ಅವರಿಗಿಂತ 2 ಅಂಕಗಳ ಹಿಂದೆ ಉಳಿದರು. ವೆರೋನಿಕಾ ಒಲಿಂಪಿಕ್ ಅರ್ಹತಾ ಸುತ್ತಿನ ದಾಖಲೆಯನ್ನು 592 ಅಂಕಗಳೊಂದಿಗೆ ಸರಿಗಟ್ಟಿದರು.

ಅರ್ಹತಾ ಸುತ್ತಿನ ಭಾಗವಾಗಿದ್ದ ಇಶಾ ಸಿಂಗ್ 18 ನೇ ಸ್ಥಾನ ಪಡೆದು ನಿರಾಸೆಗೆ ಒಳಗಾದರು. ಇದೇ ವೇಳೆ ಪ್ಯಾರಿಸ್​​ನಲ್ಲಿ ನಡೆದ ಕ್ರೀಡಾಕೂಟದಲ್ಲಿ ಮನು ತನ್ನ ಮೂರನೇ ಬಾರಿಗೆ ಫೈನಲ್​ ಪ್ರವೇಶಿಸಿದರು. ಮನು ಈಗಾಗಲೇ ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಮತ್ತು ಮಿಶ್ರ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಗಳಲ್ಲಿ 2 ಕಂಚಿನ ಪದಕಗಳನ್ನು ಗೆದ್ದುಕೊಂಡು ದಾಖಲೆ ಬರೆದಿದ್ದಾರೆ. ಈ ಸ್ಪರ್ಧೆಯಲ್ಲೂ ಗೆದ್ದರೆ ಅವರ ಸಾಧನೆಯ ಕಿರೀಟಕ್ಕೆ ಇನ್ನೊಂದು ಗರಿ ಸೇರಿಕೊಳ್ಳಲಿವೆ.

ಇದನ್ನೂ ಓದಿ: IND vs SL ODI : ಲಂಕಾ ವಿರುದ್ಧ ಪಂದ್ಯದ ವೇಳೆ ಕಪ್ಪು ಪಟ್ಟಿ ಕಟ್ಟಿಕೊಂಡು ಮೈದಾನಕ್ಕೆ ಇಳಿದ ರೋಹಿತ್​ ಪಡೆ

ಮನು ತನ್ನ ನಿಖರ ಸುತ್ತಿನ ಮೊದಲ ಸುತ್ತಿನಲ್ಲಿ ಅಸ್ಥಿರ ಆರಂಭ ಪಡೆದುಕೊಂಡಿದ್ದರು. ಏಕೆಂದರೆ ಅವರು ಮೊದಲ 5 ಶಾಟ್​ಗಳಲ್ಲಿ ಎರಡು ಬಾರಿ ಮಾತ್ರ 10 ಅಂಕಗಳನ್ನು ಗಳಿಸಲು ಸಾಧ್ಯವಾಯಿತು. ಆದಾಗ್ಯೂ, ಅವರು ಪುಟಿದೆದ್ದು ಒಟ್ಟು 5 ಬಾರಿ 10 ಅಂಕ ಗಳಿಸಿದರು.

ಎರಡನೇ ಸೀರಿಸ್​ನಲ್ಲಿ ಅವರು 3 ಬಾರಿ 10 ಅಂಕ ಗಳಿಸಿದರು. ಇನ್ನೂ 5 ಅಂಕಗಳನ್ನು ಸೇರಿಸಿ 98 ಅಂಕಗಳೊಂದಿಗೆ ಕೊನೆಗೊಳಿಸಿದರು. ಮೂರನೇ ಸರಣಿಯಲ್ಲಿ ಇನ್ನಷ್ಟು ಸುಧಾರಿಸಿಕೊಂಡರು. ಏಕೆಂದರೆ ಅವರು 9 ಬಾರಿ 10 ಅಂಕಗಳನ್ನು ಗಳಿಸಿದರು. ಆಗಸ್ಟ್ 3ರಂದು ಮಧ್ಯಾಹ್ನ 1.30ಕ್ಕೆ ನಡೆಯಲಿರುವ ಫೈನಲ್ನಲ್ಲಿ ಅವರು ಸೆಣಸಲಿದ್ದಾರೆ

ಇಶಾ ಸಿಂಗ್ 18ನೇ ಸ್ಥಾನ
ಇಶಾ ಮೊದಲ ಎರಡು ಸೀರಿಸ್​ನಲ್ಲಿ ನೀರಸ ಪ್ರದರ್ಶನ ನೀಡಿದರು. ಕ್ರಮವಾಗಿ 95 ಮತ್ತು 96 ರನ್ ಅಂಕಗಳನ್ನು ಗಳಿಸಿದರು. ಆದಾಗ್ಯೂ, 10 ನೇ ಸುತ್ತಿನಲ್ಲಿ ಪರಿಪೂರ್ಣ 100 ಅಂಕಗಳನ್ನು ಪಡೆದರು. ರ್ಯಾಪಿಡ್ ಸುತ್ತಿನಲ್ಲಿ ಅವರ ಆರಂಭವು ಉತ್ತಮವಾಗಿತ್ತು,. ಆದರೆ ನಿಧಾನವಾಗಿ 9 ಅಂಕಗಳು ಅವರ ಒಟ್ಟು ಸ್ಕೋರ್​ಗೆ ಹಾನಿ ಮಾಡಿದವು.

Continue Reading

ಪ್ರಮುಖ ಸುದ್ದಿ

IND vs SL ODI : ಲಂಕಾ ವಿರುದ್ಧ ಪಂದ್ಯದ ವೇಳೆ ಕಪ್ಪು ಪಟ್ಟಿ ಕಟ್ಟಿಕೊಂಡು ಮೈದಾನಕ್ಕೆ ಇಳಿದ ರೋಹಿತ್​ ಪಡೆ

IND vs SL ODI: ಅನ್ಶುಮಾನ್ ಗಾಯಕ್ವಾಡ್ 40 ಟೆಸ್ಟ್ ಮತ್ತು 15 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಅವರು 2 ಶತಕ ಸಮೇತ 2254 ರನ್ ಗಳಿಸಿದ್ದಾರೆ. 1983 ರಲ್ಲಿ ಜಲಂಧರ್​ನಲ್ಲಿ ನಡೆದ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ 201 ಗರಿಷ್ಠ ಸ್ಕೋರ್ ಗಳಿಸಿದ್ದಾರೆ. ಅವರು ಸಚಿನ್ ತೆಂಡೂಲ್ಕರ್ ಮತ್ತು ಸೌರವ್ ಗಂಗೂಲಿ ಅವರಂತಹ ಹಿರಿಯ ರಾಷ್ಟ್ರೀಯ ಪುರುಷರ ತಂಡಕ್ಕೆ ತರಬೇತುದಾರರಾಗಿದ್ದರು.

VISTARANEWS.COM


on

IND vs SL ODI
Koo

ಬೆಂಗಳೂರು: ಮಾಜಿ ಕ್ರಿಕೆಟಿಗ ಅಂಶುಮಾನ್ ಗಾಯಕ್ವಾಡ್ ನಿಧನದ ಹಿನ್ನೆಲೆಯಲ್ಲಿ ಕೊಲಂಬೊದಲ್ಲಿ ನಡೆದ ಶ್ರೀಲಂಕಾ (IND vs SL ODI) ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ಕ್ರಿಕೆಟ್ ತಂಡದ ಆಟಗಾರರು ತೋಳಿನಲ್ಲಿ ಕಪ್ಪು ಪಟ್ಟಿ ಧರಿಸಿದ್ದರು. ರಕ್ತದ ಕ್ಯಾನ್ಸರ್​ನಿಂದ ಬಳಲುತ್ತಿದ್ದ ಭಾರತದ ಮಾಜಿ ಕ್ರಿಕೆಟಿಗ ಜುಲೈ 31 ರಂದು ತಮ್ಮ 71 ನೇ ವಯಸ್ಸಿನಲ್ಲಿ ನಿಧನ ಹೊಂದಿದ್ದರು. ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ಶುಕ್ರವಾರ (ಆಗಸ್ಟ್ 2) ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಕಪ್ಪು ಪಟ್ಟಿ ಧರಿಸಿ ಆಡಿದರು.

“ಬುಧವಾರ ನಿಧನರಾದ ಭಾರತದ ಮಾಜಿ ಕ್ರಿಕೆಟಿಗ ಮತ್ತು ತರಬೇತುದಾರ ಅಂಶುಮಾನ್ ಗಾಯಕ್ವಾಡ್ ಅವರ ಸ್ಮರಣಾರ್ಥ ಟೀಮ್ ಇಂಡಿಯಾ ಇಂದು ಕಪ್ಪು ತೋಳುಗಳನ್ನು ಧರಿಸಿದೆ” ಎಂದು ಬಿಸಿಸಿಐ ಹೇಳಿಕೆಯಲ್ಲಿ ತಿಳಿಸಿದೆ.

ಅನ್ಶುಮಾನ್ ಗಾಯಕ್ವಾಡ್ 40 ಟೆಸ್ಟ್ ಮತ್ತು 15 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಅವರು 2 ಶತಕ ಸಮೇತ 2254 ರನ್ ಗಳಿಸಿದ್ದಾರೆ. 1983 ರಲ್ಲಿ ಜಲಂಧರ್​ನಲ್ಲಿ ನಡೆದ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ 201 ಗರಿಷ್ಠ ಸ್ಕೋರ್ ಗಳಿಸಿದ್ದಾರೆ. ಅವರು ಸಚಿನ್ ತೆಂಡೂಲ್ಕರ್ ಮತ್ತು ಸೌರವ್ ಗಂಗೂಲಿ ಅವರಂತಹ ಹಿರಿಯ ರಾಷ್ಟ್ರೀಯ ಪುರುಷರ ತಂಡಕ್ಕೆ ತರಬೇತುದಾರರಾಗಿದ್ದರು. ಮಾಜಿ ಕ್ರಿಕೆಟಿಗ ಅನ್ಶುಮಾನ್ ತಮ್ಮ ಕೊನೆಯ ದಿನಗಳನ್ನು ಆಸ್ಪತ್ರೆಯಲ್ಲಿ ಕಳೆದಾಗ ಅವರ ಚಿಕಿತ್ಸೆಗೆ ಬಿಸಿಸಿಐ 1 ಕೋಟಿ ರೂಪಾಯಿ ಆರ್ಥಿಕ ನೆರವು ಘೋಷಿಸಿತ್ತು.

ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಶ್ರೀಲಂಕಾ ತಂಡ

ಶುಕ್ರವಾರ ಟಾಸ್ ಗೆದ್ದ ಶ್ರೀಲಂಕಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಕೊಲಂಬೊದಲ್ಲಿ ನಡೆಯುತ್ತಿರುವ ಬಹುನಿರೀಕ್ಷಿತ ಏಕದಿನ ಸರಣಿಯಲ್ಲಿ ರೋಹಿತ್ ಶರ್ಮಾ ಮತ್ತು ಮುಖ್ಯ ಕೋಚ್ ಗೌತಮ್ ಗಂಭೀರ್ ಜತೆಗೂಡಿ ಗೆಲುವಿಗಾಗಿ ಯತ್ನಿಸಲಿದೆ. ಆರಂಭದಲ್ಲಿ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಆಡುವುದಿಲ್ಲ ಎಂದು ಹೇಳಲಾಗಿತ್ತು. ಅಂತಿಮವಾಗಿ ಭಾರತ ತಂಡಕ್ಕೆ ಅವರು ಸೇರಿಕೊಂಡಿದ್ದರು. ಭಾರತ ಮುಂದಿನ ವರ್ಷ ಫೆಬ್ರವರಿ-ಮಾರ್ಚ್​​ನಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಗೆ ತನ್ನ ಸಿದ್ಧತೆ ಪ್ರಾರಂಭಿಸಿದೆ.

ಇದನ್ನೂ ಓದಿ: Swapnil Kusale : ಒಲಿಂಪಿಕ್ಸ್ ಪದಕ ಹೀರೋ ಸ್ವಪ್ನಿಲ್​ಗೆ ರೈಲ್ವೆಯ ಟಿಕೆಟ್ ಕಲೆಕ್ಟರ್​ ಹುದ್ದೆಯಿಂದ ಡಬಲ್​ ಪ್ರಮೋಷನ್​!

ಏಕದಿನ ಸರಣಿಯ ಭಾಗವಾಗದ ಹಾರ್ದಿಕ್ ಪಾಂಡ್ಯ ತಂಡದಲ್ಲಿ ಇಲ್ಲ. ಇದೇ ವೇಲೆ ರಿಷಭ್ ಪಂತ್ ಅವರನ್ನು ಕೈಬಿಟ್ಟು ಕೆಎಲ್ ರಾಹುಲ್ ಅವರನ್ನು ಭಾರತ ತನ್ನ ಮೊದಲ ಆಯ್ಕೆಯ ವಿಕೆಟ್ ಕೀಪರ್ ಆಗಿ ಆಯ್ಕೆ ಮಾಡಿದೆ. ಸೂರ್ಯಕುಮಾರ್ ಯಾದವ್ ನಾಯಕತ್ವದಲ್ಲಿ ಭಾರತವು ಶ್ರೀಲಂಕಾವನ್ನು ಟಿ 20 ಐ ಸರಣಿಯಲ್ಲಿ 3-0 ಅಂತರದಿಂದ ಸೋಲಿಸಿದ ನಂತರ ಏಕದಿನ ಸರಣಿಗೆ ಬಂದಿದೆ.

Continue Reading
Advertisement
Kodagu News
ಪ್ರಮುಖ ಸುದ್ದಿ1 min ago

Wayanad landslide: ವಯನಾಡು ಭೂ ಕುಸಿತ; ಮೃತ ಬಾಲಕ ರೋಹಿತ್ ತಾಯಿಗೆ ಸಾಂತ್ವನ ಹೇಳಿ ಪರಿಹಾರ ಘೋಷಿಸಿದ ಸಿಎಂ

Paris Olympics 2024
ಪ್ರಮುಖ ಸುದ್ದಿ4 mins ago

Paris Olympics 2024 : ಪ್ಯಾರಿಸ್​​ನಲ್ಲಿ ಸಿಕ್ಕಾಪಟ್ಟೆ ಸೆಖೆ; ಅಥ್ಲೀಟ್​ಗಳಿಗಾಗಿ 40 ಎಸಿ ಕಳುಹಿಸಿದ ಕ್ರೀಡಾ ಸಚಿವಾಲಯ

Kriti Sanon
Latest9 mins ago

Kriti Sanon: ನಟಿ ಕೃತಿ ಸನೋನ್‌ ಡೇಟಿಂಗ್‌ ಮಾಡುತ್ತಿರುವ ಈ ಕಬೀರ್ ಬಹಿಯಾ ಯಾರು?

Viral Video
Latest23 mins ago

Reels in Railway Station: ರೈಲ್ವೆ ನಿಲ್ದಾಣದಲ್ಲಿ ರೀಲ್ಸ್‌ ಮಾಡುತ್ತ ಯುವತಿಯ ಅಸಭ್ಯ ವರ್ತನೆ; ಕಿಡಿಕಾರಿದ ನೆಟ್ಟಿಗರು!

Dog attack
ಕ್ರೈಂ34 mins ago

Dog Attack: ವೃದ್ಧ ತಾಯಿಯನ್ನು ಮನೆಯ ಹೊರಗೆ ಮಲಗಿಸಿದ್ದ ಪುತ್ರರು; ಜೀವಂತವಾಗಿ ತಿಂದು ಹಾಕಿದ ಬೀದಿ ನಾಯಿಗಳು!

karnataka Weather Forecast
ಮಳೆ38 mins ago

Karnataka Weather : ವಾರಾಂತ್ಯದಲ್ಲಿ ಉಡುಪಿ, ಉತ್ತರ ಕನ್ನಡದಲ್ಲಿ ಭಾರಿ ಮಳೆ ಎಚ್ಚರಿಕೆ

Paris Olympics 2024
ಪ್ರಮುಖ ಸುದ್ದಿ39 mins ago

Paris Olympics 2024 : 52 ವರ್ಷಗಳ ಬಳಿಕ ಒಲಿಂಪಿಕ್ಸ್​​ನಲ್ಲಿ ಆಸ್ಟ್ರೇಲಿಯಾ ತಂಡವನ್ನು ಸೋಲಿಸಿದ ಭಾರತದ ಹಾಕಿ ತಂಡ

Wayanad Tragedy
Latest46 mins ago

Wayanad Tragedy: ಇಡೀ ಊರು ಭೂಕುಸಿತದಿಂದ ನಾಶ; ಮೂರು ದಿನ ಬಳಿಕ ಒಂದೇ ಕುಟುಂಬದ ನಾಲ್ವರು ಜೀವಂತವಾಗಿ ಪತ್ತೆ!

Nice road
ಕರ್ನಾಟಕ51 mins ago

NICE Road: ನೈಸ್ ರಸ್ತೆಯಲ್ಲಿ ವೇಗದ ಚಾಲನೆಗೆ ಬ್ರೇಕ್; ರಾತ್ರಿ ವೇಳೆ‌ ದ್ವಿಚಕ್ರ ವಾಹನ ಸಂಚಾರಕ್ಕೂ ನಿಷೇಧ!

Wayanad Landslide
ದೇಶ1 hour ago

Wayanad Landslide: 144 ಸೈನಿಕರು 31 ಗಂಟೆಯೊಳಗೆ 190 ಅಡಿ ಉದ್ದದ ಸೇತುವೆ ನಿರ್ಮಿಸಿದ್ದು ಹೇಗೆ?

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka Rain
ಮಳೆ1 day ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ1 day ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ1 day ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

karnataka Rain
ಮಳೆ3 days ago

Karnataka rain : ಭದ್ರಾ ನದಿಯಲ್ಲಿ ಕೊಚ್ಚಿ ಹೋದ ಹಸು; ಬೈಂದೂರಿನಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ

Karnataka Rain
ಮಳೆ3 days ago

Karnataka Rain : ಭಾರಿ ಮಳೆಗೆ ಬಾಳೆಹೊನ್ನೂರು ಮುಳುಗಡೆ; ನೆರೆಗೆ ಬೋಟ್‌ ಮೊರೆ ಹೋದ ಜನರು

Bharachukki falls
ಚಾಮರಾಜನಗರ3 days ago

Bharachukki Falls : ಭರಚುಕ್ಕಿ ಜಲಪಾತಕ್ಕೆ ಕಳ್ಳ ಮಾರ್ಗದಿಂದ ಹೋದೋರಿಗೆ ಬಸ್ಕಿ ಹೊಡೆಸಿದ ಪೊಲೀಸರು!

karnataka Rain
ಮಳೆ4 days ago

Karnataka Rain: ಮತ್ತೆ ಶುರು ಮಳೆ ಅಬ್ಬರ; ಗಾಳಿಗೆ ಹಾರಿ ಹೋದ ಮನೆಗಳ ಚಾವಣಿ, ಶಿರಾಡಿಘಾಟ್‌ನಲ್ಲಿ ಮತ್ತೆ ಭೂ ಕುಸಿತ

Elephant combing Makna elephant captured near Bannerghatta
ಬೆಂಗಳೂರು ಗ್ರಾಮಾಂತರ4 days ago

Elephant combing: ಭೀಮ, ಮಹೇಂದ್ರರ ಮುಂದೆ ಮಂಡಿಯೂರಿದ ಮಕ್ನಾ ಆನೆ; ಹೇಗಿತ್ತು ಗೊತ್ತಾ ಕಾರ್ಯಾಚರಣೆ

karnataka rain
ಮಳೆ4 days ago

Karnataka rain: ಪ್ರವಾಹದ ಭೀಕರತೆ; ಹಳ್ಳದಲ್ಲಿ ತೇಲಿಬಂದ ಎಮ್ಮೆಗಳ ಕಳೇಬರ

Tungabhadra Dam
ಕೊಪ್ಪಳ5 days ago

Tungabhadra Dam: ಕಾಲುವೆಯಲ್ಲಿ ಬಾಲಕರ ಈಜಾಟ; ಅಧಿಕಾರಿಗಳಿಗೆ ಪೀಕಲಾಟ!

ಟ್ರೆಂಡಿಂಗ್‌