Viral Video: ವಂದೇ ಮಾತರಂ ಗೀತೆಗೆ ಮೊಹಮ್ಮದ್ ಶಮಿ ಮಗಳ ಮುದ್ದಾದ ನೃತ್ಯ! ವಿಡಿಯೊ ನೋಡಿ - Vistara News

ವೈರಲ್ ನ್ಯೂಸ್

Viral Video: ವಂದೇ ಮಾತರಂ ಗೀತೆಗೆ ಮೊಹಮ್ಮದ್ ಶಮಿ ಮಗಳ ಮುದ್ದಾದ ನೃತ್ಯ! ವಿಡಿಯೊ ನೋಡಿ

ಭಾರತೀಯ ಕ್ರಿಕೆಟ್ ತಂಡದ ವೇಗದ ಬೌಲರ್ ಮೊಹಮ್ಮದ್ ಶಮಿ ಮತ್ತು ಅವರ ಮಾಜಿ ಪತ್ನಿ ಹಸಿನ್ ಜಹಾನ್ ಅವರ ಮಗಳು ಐರಾ ಅವರ ಮುದ್ದಾದ ಅಭಿನಯದ ವಿಡಿಯೋ ತ್ವರಿತವಾಗಿ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ (Viral Video) ಆಗಿದ್ದು, ಸಾಕಷ್ಟು ಮೆಚ್ಚುಗೆಯೂ ಬಂದಿದೆ. ವಂದೇ ಮಾತರಂ ಗೀತೆ ಶಮಿ ಮಗಳು ಎಷ್ಟು ಮುದ್ದಾಗಿ ನೃತ್ಯ ಮಾಡಿದ್ದಾಳೆ ನೋಡಿ.

VISTARANEWS.COM


on

Viral Video
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಭಾರತೀಯ ಕ್ರಿಕೆಟ್ ತಂಡದ ವೇಗದ (Indian cricket team senior pacer) ಬೌಲರ್ ಮೊಹಮ್ಮದ್ ಶಮಿ (Mohammed Shami) ಅವರ ಮಗಳು ಐರಾ ಅವರು ಸ್ವಾತಂತ್ರ್ಯ ದಿನಾಚರಣೆಯ (Independence Day 2024) ಸಂಭ್ರಮದಲ್ಲಿ ದೇಶಭಕ್ತಿ ಗೀತೆ “ವಂದೇ ಮಾತರಂ” ಗೆ (Vande Mataram) ಆಕರ್ಷಕವಾದ ನೃತ್ಯವನ್ನು ಪ್ರದರ್ಶಿಸಿರುವ ವಿಡಿಯೋ ಇನ್ ಸ್ಟಾ ಗ್ರಾಮ್ ನಲ್ಲಿ ವೈರಲ್ (Viral Video) ಆಗಿದೆ.

ಐರಾ ಮೊಹಮ್ಮದ್ ಶಮಿ ಮತ್ತು ಅವರ ಮಾಜಿ ಪತ್ನಿ ಹಸಿನ್ ಜಹಾನ್ ಅವರು ಮಗಳು. ಐರಾ ಅವರ ಮುದ್ದಾದ ಅಭಿನಯದ ವಿಡಿಯೋ ತ್ವರಿತವಾಗಿ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗಿದ್ದು, ಸಾಕಷ್ಟು ಮೆಚ್ಚುಗೆಯೂ ಬಂದಿದೆ.


ಬಿಳಿ ಬಣ್ಣದ ಸೀರೆಯಲ್ಲಿ “ವಂದೇ ಮಾತರಂ” ಗೀತೆಗೆ ಆಕೆ ಮುದ್ದಾಗಿ ನೃತ್ಯ ಮಾಡಿದ್ದಾಳೆ. ಅವಳು ಧರಿಸಿದ್ದ ಬಿಳಿ ಸೀರೆ ತ್ರಿವರ್ಣ ಥೀಮ್‌ಗೆ ಸುಂದರವಾಗಿ ಪೂರಕವಾಗಿದೆ.

2014 ರಲ್ಲಿ ಹಸಿನ್ ಜಹಾನ್ ಅವರನ್ನು ವಿವಾಹವಾದ ಮೊಹಮ್ಮದ್ ಶಮಿ ಅವರಿಗೆ ಮಗಳು ಐರಾ 2015 ರಲ್ಲಿ ಜನಿಸಿದಳು. ಶಮಿ ಮತ್ತು ಜಹಾನ್ ಈಗ ಬೇರ್ಪಟ್ಟಿದ್ದಾರೆ.

ಭಾರತದ ಹಿರಿಯ ವೇಗಿ ಮೊಹಮ್ಮದ್ ಶಮಿ ನವೆಂಬರ್ 2023ರಲ್ಲಿ ಒಡಿಐ ವಿಶ್ವಕಪ್‌ನಲ್ಲಿ ಗಾಯಗೊಂಡ ಅನಂತರ ಕ್ರಿಕೆಟ್‌ನಿಂದ ಹೊರಗುಳಿದಿದ್ದಾರೆ. ಪಾದದ ಶಸ್ತ್ರಚಿಕಿತ್ಸೆಗೆ ಒಳಗಾದ ಅನಂತರ ಅವರು ಈಗ ಚೇತರಿಕೆಯ ಹಾದಿಯಲ್ಲಿದ್ದಾರೆ. ಬಾಂಗ್ಲಾದೇಶದೊಂದಿಗಿನ ಎರಡು ಪಂದ್ಯಗಳ ಟೆಸ್ಟ್ ಸರಣಿ ಸಮಯದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳುವ ನಿರೀಕ್ಷೆಯಿದೆ.

ಮೊಹಮ್ಮದ್ ಶಮಿ ಅವರು ಅಂತಾಷ್ಟ್ರೀಯ ಪುನರಾಗಮನದ ಮೊದಲು ದುಲೀಪ್ ಟ್ರೋಫಿ 2024ರಲ್ಲಿ ಕಾಣಿಸಿಕೊಳ್ಳಬಹುದು ಎಂದು ಸೂಚಿಸುವ ವರದಿಗಳಿದ್ದರೂ ಅವರು ಬುಧವಾರ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಪ್ರಕಟಿಸಿದ ತಂಡಗಳಲ್ಲಿ ಅವರು ಪಾಲ್ಗೊಂಡಿರಲಿಲ್ಲ.

ಇದನ್ನೂ ಓದಿ: Viral Video: ಹಳೆಯ ವಿದ್ಯಾರ್ಥಿಗಳನ್ನು ಸಾಲಾಗಿ ಕರೆಸಿ ಬೆತ್ತದಿಂದ ಹೊಡೆದ ಪ್ರಾಂಶುಪಾಲರು! ಅಪರೂಪದ ವಿಡಿಯೊ

ನಾನು ಯಾವಾಗ ಹಿಂತಿರುಗುತ್ತೇನೆ ಎಂದು ಹೇಳುವುದು ಕಷ್ಟ. ನಾನು ಕಷ್ಟಪಟ್ಟು ಪ್ರಯತ್ನಿಸುತ್ತಿದ್ದೇನೆ. ಆದರೆ ನಾನು ಮತ್ತೊಮ್ಮೆ ಇಂಡಿಯಾ ಜೆರ್ಸಿಯನ್ನು ಧರಿಸುವ ಮೊದಲು ನೀವು ನನ್ನನ್ನು ಬಂಗಾಳದ ಬಣ್ಣಗಳಲ್ಲಿ ನೋಡುತ್ತೀರಿ ಎಂದು ನಾನು ಭಾವಿಸುತ್ತೇನೆ. ನಾನು ಬಂಗಾಳಕ್ಕಾಗಿ ಎರಡು ಅಥವಾ ಮೂರು ಪಂದ್ಯಗಳನ್ನು ಆಡಲು ಬರುತ್ತೇನೆ. ಅದಕ್ಕೆ ಸಂಪೂರ್ಣವಾಗಿ ಸಿದ್ಧವಾಗಿದೆ ಎಂದು ಮೊಹಮ್ಮದ್ ಶಮಿ ತಿಂಗಳ ಹಿಂದೆ ಮಾಧ್ಯಮವೊಂದಕ್ಕೆ ಹೇಳಿದ್ದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

Latest

‌Richard Lugner: ಇತ್ತೀಚೆಗಷ್ಟೆ 6ನೇ ಮದುವೆಯಾಗಿದ್ದ 91 ವರ್ಷದ ಬಿಲಿಯಾಧೀಶ ಇನ್ನಿಲ್ಲ!

Richard Lugner: ಖ್ಯಾತ ಆಸ್ಟ್ರೀಯಾದ ಬಿಲಿಯನೇರ್ ಉದ್ಯಮಿ ರಿಚರ್ಡ್ ಲುಗ್ನರ್ ತಮ್ಮ 91 ನೇ ವಯಸ್ಸಿನಲ್ಲಿ ನಿಧನರಾದರು. ಲುಗ್ನರ್ ಇತ್ತೀಚಿನ ತಿಂಗಳುಗಳಲ್ಲಿ ಹಲವಾರು ಆರೋಗ್ಯ ಸಮಸ್ಯೆಗಳೊಂದಿಗೆ ನರಳುತ್ತಿದ್ದರು ಮತ್ತು ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು ಎಂದು ವರದಿಯಾಗಿದೆ.ಇನ್ನು ಕಿಮ್ ಕಾರ್ಡಶಿಯಾನ್ ತನ್ನ ಡೇಟಿಂಗ್ ಗರ್ಲ್ ಆಗುವುದಕ್ಕಾಗಿ ಆಕೆಗೆ ಬರೋಬ್ಬರಿ 5 ಲಕ್ಷ ಡಾಲರ್ ಹಣ ನೀಡಿದ್ದರು ಎಂದು ಸುದ್ದಿಯಲ್ಲಿದ್ದರು.

VISTARANEWS.COM


on

Viral Video
Koo


ಕಿಮ್ ಕಾರ್ಡಶಿಯಾನ್, ಸೋಫಿಯಾ ಲೊರೆನ್, ಜೇನ್ ಫೋಂಡಾ, ಪಮೇಲಾ ಆಂಡರ್ಸನ್ ಅವರಂತಹ ಹಾಲಿವುಡ್‍ನ ಫೇಮಸ್ ಸೆಲೆಬ್ರಿಟಿಗಳನ್ನು ಆಸ್ಟ್ರಿಯಾದ ರಾಜಧಾನಿ ವಿಯೆನ್ನಾದಲ್ಲಿ ನಡೆಯುವ ಐತಿಹಾಸಿಕ ಒಪೆರಾ ಬಾಲ್‍ನಲ್ಲಿ ಪರಿಚಯಿಸಿದ ಖ್ಯಾತ ಆಸ್ಟ್ರೀಯಾದ ಬಿಲಿಯನೇರ್ ಉದ್ಯಮಿ ರಿಚರ್ಡ್ ಲುಗ್ನರ್ (Richard Lugner) ತಮ್ಮ 91 ನೇ ವಯಸ್ಸಿನಲ್ಲಿ ನಿಧನರಾದರು. ಲುಗ್ನರ್ ಇತ್ತೀಚಿನ ತಿಂಗಳುಗಳಲ್ಲಿ ಹಲವಾರು ಆರೋಗ್ಯ ಸಮಸ್ಯೆಗಳೊಂದಿಗೆ ನರಳುತ್ತಿದ್ದರು ಮತ್ತು ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು ಎಂದು ವರದಿಯಾಗಿದೆ. ಕೇವಲ ಎರಡು ತಿಂಗಳ ಹಿಂದೆ ಆರನೇ ಬಾರಿಗೆ ವಿವಾಹವಾದ ಆಸ್ಟ್ರಿಯಾದ ಉದ್ಯಮಿ ವಿಯೆನ್ನಾದಲ್ಲಿನ ತಮ್ಮ ವಿಲ್ಲಾದಲ್ಲಿ ನಿಧನರಾದರು.

ಲುಗ್ನರ್ ನಿಧನಕ್ಕೆ ಸಂತಾಪ ಸೂಚಿಸಿದ ಆಸ್ಟ್ರಿಯಾದ ಚಾನ್ಸಲರ್ ಕಾರ್ಲ್ ನೆಹಮ್ಮರ್ ಎಕ್ಸ್ ನಲ್ಲಿ, “ರಿಚರ್ಡ್ ಲುಗ್ನರ್ ಯಶಸ್ವಿ ಉದ್ಯಮಿ ಮತ್ತು ಆಕರ್ಷಕ ವ್ಯಕ್ತಿತ್ವ ಹೊಂದಿರುವ ವ್ಯಕ್ತಿ. ಅವರು ಆಸ್ಟ್ರೀಯಾ ಮೂಲದ ನಿರ್ಮಾಣ ಲೋಕದ ಪ್ರಸಿದ್ಧ ವ್ಯಕ್ತಿಯಾಗಿದ್ದರು. ಅವರ ಆತ್ಮಕ್ಕೆ ಶಾಂತಿ ಸಿಗಲಿ” ಎಂದು ಬರೆದಿದ್ದಾರೆ.

ರಿಚರ್ಡ್ ಲುಗ್ನರ್ ಯಾರು?
ಲುಗ್ನರ್ ನಿರ್ಮಾಣ ಮತ್ತು ರಿಯಲ್ ಎಸ್ಟೇಟ್ ವ್ಯವಹಾರಗಳಲ್ಲಿ ತೊಡಗಿಸಿಕೊಂಡ ಯಶಸ್ವಿ ಆಸ್ಟ್ರಿಯಾದ ಉದ್ಯಮಿಯಾಗಿದ್ದರು. ಅವರು ತಮ್ಮ ಆಕರ್ಷಕ ಜೀವನಶೈಲಿ ಮತ್ತು ಹಾಲಿವುಡ್‍ನ ಫೇಮಸ್ ಸೆಲೆಬ್ರಿಟಿಗಳನ್ನು ಹೋಸ್ಟ್ ಮಾಡಿದ ಕಾರಣಕ್ಕೆ ಇವರು ಸಾಕಷ್ಟು ಹೆಸರುವಾಸಿಯಾಗಿದ್ದರು. 2014 ರಲ್ಲಿ ಕಿಮ್ ಕಾರ್ಡಶಿಯಾನ್ ಸೇರಿದಂತೆ ಹಲವು ಮಹಿಳಾ ಸೆಲೆಬ್ರಿಟಿಗಳಿಗೆ ವಾರ್ಷಿಕ ವಿಯೆನ್ನಾ ಒಪೆರಾ ಬಾಲ್ ಕಾರ್ಯಕ್ರಮಗಳಿಗೆ ಡೇಟಿಂಗ್ ಮಾಡಲು ಅವಕಾಶ ನೀಡಿದ್ದರು.

Viral Video
Viral Video

ಅಲ್ಲದೇ ಈ ಕಾರ್ಯಕ್ರಮದಲ್ಲಿ ಕಾರ್ಡಶಿಯಾನ್ ತನ್ನ ಡೇಟಿಂಗ್ ಗರ್ಲ್ ಆಗುವುದಕ್ಕಾಗಿ ಆಕೆಗೆ ಬರೋಬ್ಬರಿ 5 ಲಕ್ಷ ಡಾಲರ್ ನೀಡಿದ್ದರು ಎಂದು ಸುದ್ದಿಯಲ್ಲಿದ್ದರು. ಅಲ್ಲದೇ ಇವರು ರಾಜಕೀಯ ಮಹತ್ವಾಕಾಂಕ್ಷೆಗಳನ್ನು ಹೊಂದಿದ್ದರು ಮತ್ತು ಆಸ್ಟ್ರಿಯಾದ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಎರಡು ಬಾರಿ ಅಂದರೆ ಒಮ್ಮೆ 1998 ರಲ್ಲಿ ಮತ್ತು ಮತ್ತೆ 2016 ರಲ್ಲಿ ಸ್ಪರ್ಧಿಸಿದ್ದರು.

ಇದನ್ನೂ ಓದಿ: ಭರತನಾಟ್ಯ ರಂಗಪ್ರವೇಶ ಮಾಡಿ ಇತಿಹಾಸ ನಿರ್ಮಿಸಿದ 13 ವರ್ಷದ ಚೀನೀ ಬಾಲಕಿ

ರಿಚರ್ಡ್ ಲುಗ್ನರ್ ಅಕ್ಟೋಬರ್ 11, 1932 ರಂದು ವಿಯೆನ್ನಾದಲ್ಲಿ ಜನಿಸಿದರು. ಅವರು ವಿಯೆನ್ನಾದಲ್ಲಿ ತಮ್ಮ “ಲುಗ್ನರ್ ಸಿಟಿ” ಶಾಪಿಂಗ್ ಕೇಂದ್ರವನ್ನು ನಿರ್ಮಿಸಿದರು. ಅವರು ಈ ಹಿಂದೆ ಕ್ರಿಸ್ಟೀನ್ ಗ್ಮೈನರ್ (1961-1978), ಕಾರ್ನೆಲಿಯಾ ಲಾಫರ್ಸ್ವೀಲರ್ (1979-1983), ಸುಸಾನೆ ಡೈಟ್ರಿಚ್ (1984-1989), ಕ್ರಿಸ್ಟಿನಾ ಲುಗ್ನರ್ (1990-2007) ಮತ್ತು ಪ್ಲೇಬಾಯ್ ರೂಪದರ್ಶಿ ಮತ್ತು ನಟಿ ಕ್ಯಾಥಿ ಶ್ಮಿಟ್ಜ್ (2014-2016) ಅವರನ್ನು ವಿವಾಹವಾದರು. ಅಲ್ಲದೇ ಜೂನ್ 1 2024ರಂದು ರಿಚರ್ಡ್ ಲುಗ್ನರ್ 42 ವರ್ಷದ ಸಿಮೊನೆ ರೈಲ್ಯಾಂಡರ್ ಎಂಬಾಕೆಯನ್ನು 6ನೇ ಬಾರಿ ಮದುವೆಯಾಗಿದ್ದರು. ಆ ಮದುವೆಯ ವೇಳೆ ಇದು ನನ್ನ ಕೊನೆಯ ಮದುವೆ ಎಂದು ಅವರು ಹೇಳಿದ್ದು, ಈಗ ಅವರು ಇಹಲೋಕ ತ್ಯಜಿಸುವ ಮೂಲಕ ಅದು ನಿಜವಾಗಿದೆ. ಈ ಸುದ್ದಿ ಓದಿದ ನೆಟ್ಟಿಗರು, ಕೊನೆಯ ಹೆಂಡತಿಯ ಅದೃಷ್ಟವೋ ಅದೃಷ್ಟ ಅಂತಿದ್ದಾರೆ!

Continue Reading

Latest

Viral News: ಈತ 610 ಕೆಜಿ ಇದ್ದ, ಈಗ 63 ಕೆಜಿಗೆ ಇಳಿದಿದ್ದಾನೆ! 30 ವೈದ್ಯರ ತಂಡದ ಕಾರ್ಯಾಚರಣೆ!

Viral News: ಖಾಲಿದ್ ಬಿನ್ ಮೊಹ್ಸೆನ್ ಶಾರಿ ಸೌದಿ ಅರೇಬಿಯಾದ ಮಾಜಿ ದೊರೆ ಅಬ್ದುಲ್ಲಾ ಅವರ ಸಹಾಯದಿಂದ 542 ಕೆಜಿ ತೂಕವನ್ನು ಕಳೆದುಕೊಳ್ಳುವ ಮೂಲಕ ಅವರು ಐತಿಹಾಸಿಕ ದಾಖಲೆ ಮಾಡಿದ್ದಾರೆ. ಒಂದು ಕಾಲದಲ್ಲಿ 610 ಕೆಜಿ ತೂಕವಿದ್ದ ಶಾರಿ ಈಗ ಕೇವಲ 63 ಕೆಜಿ ತೂಕ ಹೊಂದಿದ್ದಾರೆ. ಶಾರಿ ತನ್ನ ಅತಿಯಾದ ತೂಕದಿಂದಾಗಿ ಮೂರು ವರ್ಷಗಳಿಗಿಂತ ಹೆಚ್ಚು ಕಾಲ ಹಾಸಿಗೆಯಲ್ಲೇ ಮಲಗಿದ್ದರು. ಮತ್ತು ಅವರ ಸ್ಥಿತಿ ದಿನದಿಂದ ದಿನಕ್ಕೆ ಹದಗೆಟ್ಟಿತು, ಏಕೆಂದರೆ ಅವರು ತನ್ನ ಮೂಲಭೂತ ಅಗತ್ಯಗಳನ್ನು ಪೂರೈಸಿಕೊಳ್ಳಲು ತನ್ನ ಕುಟುಂಬ ಮತ್ತು ಪೋಷಕರ ಮೇಲೆ ಅಲಂಬಿತರಾಗಿದ್ದರು. ಕೊನೆಗೆ ಸೌದಿ ಅರೇಬಿಯಾದ ಮಾಜಿ ದೊರೆಯ ಸಹಾಯದಿಂದ ಅವರು ತಮ್ಮ ಅತಿಯಾದ ತೂಕವನ್ನು ಇಳಿಸಿಕೊಳ್ಳಲು ಸಾಧ್ಯವಾಗಿದೆ.

VISTARANEWS.COM


on

Viral News
Koo


ವಿಶ್ವದ ಅತಿ ತೂಕ ಹೊಂದಿರುವ ವ್ಯಕ್ತಿ ಎಂದು ಕರೆಸಿಕೊಂಡ ಖಾಲಿದ್ ಬಿನ್ ಮೊಹ್ಸೆನ್ ಶಾರಿ ಸೌದಿ ಅರೇಬಿಯಾದ ಮಾಜಿ ದೊರೆ ಅಬ್ದುಲ್ಲಾ ಅವರ ಸಹಾಯದಿಂದ 542 ಕೆಜಿ ತೂಕವನ್ನು ಕಳೆದುಕೊಳ್ಳುವ ಮೂಲಕ ಅವರು ಐತಿಹಾಸಿಕ ದಾಖಲೆ ಮಾಡಿದ್ದಾರೆ. ಒಂದು ಕಾಲದಲ್ಲಿ 610 ಕೆಜಿ ತೂಕವಿದ್ದ ಶಾರಿ ಈಗ ಕೇವಲ 63 ಕೆಜಿ ತೂಕ ಹೊಂದಿದ್ದಾರೆ ಎಂಬುದಾಗಿ ತಿಳಿದುಬಂದಿದೆ.ಈ ಸುದ್ದಿ ಸಿಕ್ಕಾಪಟ್ಟೆ ವೈರಲ್‌ (Viral News) ಆಗಿದೆ.

ಶಾರಿ ತನ್ನ ಅತಿಯಾದ ತೂಕದಿಂದಾಗಿ ಮೂರು ವರ್ಷಗಳಿಗಿಂತ ಹೆಚ್ಚು ಕಾಲ ಹಾಸಿಗೆಯಲ್ಲೇ ಮಲಗಿದ್ದರು. ಮತ್ತು ಅವರ ಸ್ಥಿತಿ ದಿನದಿಂದ ದಿನಕ್ಕೆ ಹದಗೆಟ್ಟಿತು, ಏಕೆಂದರೆ ಅವರು ತನ್ನ ಮೂಲಭೂತ ಅಗತ್ಯಗಳನ್ನು ಪೂರೈಸಿಕೊಳ್ಳಲು ತನ್ನ ಕುಟುಂಬ ಮತ್ತು ಪೋಷಕರ ಮೇಲೆ ಅಲಂಬಿತರಾಗಿದ್ದರು. ಕೊನೆಗೆ ಸೌದಿ ಅರೇಬಿಯಾದ ಮಾಜಿ ದೊರೆಯ ಸಹಾಯದಿಂದ ಅವರು ತಮ್ಮ ಅತಿಯಾದ ತೂಕವನ್ನು ಇಳಿಸಿಕೊಳ್ಳಲು ಸಾಧ್ಯವಾಗಿದೆ. ದೊರೆಯ ಸಹಾಯದಿಂದ ಅವರು ವೈದ್ಯಕೀಯ ಚಿಕಿತ್ಸೆಗಳನ್ನು ಉಚಿತವಾಗಿ ಪಡೆದರು ಎನ್ನಲಾಗಿದೆ.

ಹಾಗಾದ್ರೆ ಶಾರಿ ತೂಕ ಕಳೆದುಕೊಳ್ಳುವಂತೆ ಸೌದಿ ದೊರೆ ಮಾಡಿದ್ದೇನು? ಎಂಬುದಕ್ಕೆ ಇಲ್ಲಿದೆ ವಿವರ:
2013 ರಲ್ಲಿ ಶಾರಿಯ ಸ್ಥಿತಿಯ ಬಗ್ಗೆ ರಾಜ ಅಬ್ದುಲ್ಲಾ ಅವರ ಗಮನವನ್ನು ಸೆಳೆಯಿತು. ಅದಕ್ಕಾಗಿ ರಾಜ ಶಾರಿಯನ್ನು ವೈದ್ಯಕೀಯ ಸಹಾಯದಿಂದ ಸರಿಪಡಿಸಲು ಯೋಜನೆ ಮಾಡಿದರು. ಶಾರಿಗಾಗಿ ರೂಪಿಸಲಾದ ಯೋಜನೆಯಲ್ಲಿ, ಕಾರ್ಯ ನಿರ್ವಹಿಸಲು 30 ವೈದ್ಯರ ತಂಡವನ್ನು ರಚಿಸಲಾಯಿತು. ವಿಶೇಷವಾಗಿ ವಿನ್ಯಾಸಗೊಳಿಸಲಾದ ಬೆಡ್ ಮತ್ತು ಫೋರ್ಕ್ ಲಿಫ್ಟ್ ಸಹಾಯದಿಂದ, ಶಾರಿಯನ್ನು ಜಜಾನ್‍ನಲ್ಲಿರುವ ಅವರ ಮನೆಯಿಂದ ರಿಯಾದ್‍ನ ಕಿಂಗ್ ಫಹಾದ್ ಮೆಡಿಕಲ್ ಸಿಟಿಗೆ ಚಿಕಿತ್ಸೆಗಾಗಿ ಸ್ಥಳಾಂತರಿಸಲಾಯಿತು. ಅವರ ಚಿಕಿತ್ಸಾ ಯೋಜನೆಯ ಭಾಗವಾಗಿ, ಅವರು ಗ್ಯಾಸ್ಟ್ರಿಕ್ ಬೈಪಾಸ್ ಶಸ್ತ್ರಚಿಕಿತ್ಸೆಗೆ ಒಳಗಾದರು ಮತ್ತು ಸೂಕ್ತವಾದ ಆಹಾರ ಮತ್ತು ಕಠಿಣ ವ್ಯಾಯಾಮ ನಿಯಮವನ್ನು ಅನುಸರಿಸಿದರು.

ಮೊದಲ ಆರು ತಿಂಗಳಲ್ಲಿ, ಹಲವಾರು ಫಿಸಿಯೋಥೆರಪಿ ಮತ್ತು ಇನ್ಟೆಸಿವ್ ಕೇರ್ ಸಹಾಯದಿಂದ ಅವರ ದೇಹದ ತೂಕದ ಅರ್ಧದಷ್ಟು ಕಳೆದುಕೊಳ್ಳಲು ಸಹಾಯ ಮಾಡಿತು. 2023 ರ ಹೊತ್ತಿಗೆ, ಅವರ ತೂಕವನ್ನು 63.5 ಕೆಜಿಗಳಿಗೆ ಇಳಿಸಲಾಯಿತು. ಆದರೆ ಅಂತಹ ದೊಡ್ಡ ತೂಕ ನಷ್ಟದಿಂದಾಗಿ ಉಳಿದಿದ್ದ ಹೆಚ್ಚುವರಿ ಚರ್ಮವನ್ನು ತೆಗೆದುಹಾಕಲು ಅವರು ಅನೇಕ ಶಸ್ತ್ರಚಿಕಿತ್ಸೆಗಳಿಗೆ ಒಳಗಾಗಬೇಕಾಯಿತು.

ಇದನ್ನೂ ಓದಿ:ಪಿಸ್ತೂಲ್ ಹಿಡಿದು ಚಿನ್ನ ದೋಚಲು ಬಂದವರನ್ನು ಕೋಲು ಹಿಡಿದು ಓಡಿಸಿದ ಅಂಗಡಿ ಮಾಲೀಕ!

ಅಂತಹ ಗಮನಾರ್ಹ ತೂಕ ನಷ್ಟಕ್ಕೆ ಒಳಗಾಗುವ ಜನರು ಸಾಮಾನ್ಯವಾಗಿ ಹೆಚ್ಚುವರಿ ಚರ್ಮ ತೆಗೆಯುವ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಗುತ್ತದೆ ಇದರಿಂದ ಅವರ ಚರ್ಮವು ಅವರ ಹೊಸ ದೇಹದ ಆಕಾರಕ್ಕೆ ಹೊಂದಿಕೊಳ್ಳುತ್ತದೆ ಎನ್ನಲಾಗಿದೆ. ಈಗ, ಈ ವ್ಯಕ್ತಿಯನ್ನು “ದಿ ಸ್ಮೈಲಿಂಗ್ ಮ್ಯಾನ್” ಎಂದು ಕರೆಯಲಾಗುತ್ತದೆ, ಇದು ಅವನ ಗಮನಾರ್ಹ ರೂಪಾಂತರವನ್ನು ನೋಡಿದ ವೈದ್ಯಕೀಯ ಸಿಬ್ಬಂದಿ ಅವರಿಗೆ ನೀಡಲಾದ ಅಡ್ಡಹೆಸರು ಎನ್ನಲಾಗಿದೆ.

Continue Reading

Latest

Sexual Abuse: ಲೈಂಗಿಕ ಕಿರುಕುಳ ನೀಡಿದವನನ್ನು ನಡು ರಸ್ತೆಯಲ್ಲಿ ಥಳಿಸಿದ ಅಕ್ಕತಂಗಿ; ವಿಡಿಯೊ ವೈರಲ್

Sexual Abuse: ವೈರಲ್ ಆಗುತ್ತಿರುವ ಈ ವಿಡಿಯೊದಲ್ಲಿ , ಆರೋಪಿಯು ನೆಲದ ಮೇಲೆ ಮಲಗಿದ್ದು, ಹುಡುಗಿಯರಲ್ಲಿ ಒಬ್ಬರು ಅವನನ್ನು ಬೆಲ್ಟ್ ನಿಂದ ಹೊಡೆಯುತ್ತಿದ್ದರೆ, ಇನ್ನೊಬ್ಬ ಹುಡುಗಿ ಅಲ್ಲಿ ನಿಂತಿದ್ದ ಜನರ ಮುಂದೆ ಆತನ ನೀಚತನವನ್ನು ಬಯಲಿಗೆಳೆಯುತ್ತಿದ್ದಾಳೆ. ಸೋಶಿಯಲ್ ಮೀಡಿಯಾದಲ್ಲಿ ಮತ್ತೆ ಕಾಣಿಸಿಕೊಂಡಿರುವ ಈ ವಿಡಿಯೊ ಮಹಿಳೆಯರ ಸುರಕ್ಷತೆಯ ಕಾಳಜಿಯ ಬಗ್ಗೆ ತಿಳಿಸುತ್ತದೆ.

VISTARANEWS.COM


on

Sexual Abuse
Koo


ಅಹ್ಮದಾಬಾದ್: ಇತ್ತೀಚಿನ ದಿನಗಳಲ್ಲಿ ಬಾಲಕಿಯರ ಮೇಲೆ ಲೈಂಗಿಕ ಕಿರುಕುಳದ ಘಟನೆ ಹೆಚ್ಚಾಗಿ ಕೇಳಿಬರುತ್ತಿದೆ. ಕೆಲವರು ಇದರಿಂದ ಹೆದರಿ ತಪ್ಪಿಸಿಕೊಂಡರೆ ಕೆಲವು ಬಾಲಕಿಯರು ಅವರನ್ನು ಎದುರಿಸಿ ನಿಲ್ಲುತ್ತಾರೆ ಮತ್ತೆ ಲೈಂಗಿಕ ಕಿರುಕುಳ ನೀಡಿದವನಿಗೆ ತಕ್ಕ ಶಾಸ್ತಿ ಮಾಡುತ್ತಾರೆ. ಇದೀಗ ಅಂತಹದೊಂದು ಘಟನೆ ಅಹ್ಮದಾಬಾದ್‍ನಲ್ಲಿ ನಡೆದಿದೆ. ಇಬ್ಬರು ಸಹೋದರಿಯರು ತಮ್ಮಲ್ಲಿ ಒಬ್ಬರಿಗೆ ಕಿರುಕುಳ ನೀಡಿದ ವ್ಯಕ್ತಿಯನ್ನು ನಡುರಸ್ತೆಯಲ್ಲಿ ಬೀಳಿಸಿ ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ. ಇದು ಹಳೆಯ ವಿಡಿಯೊವಾದರೂ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ (Sexual Abuse)ಆಗುತ್ತಿದೆ.

ವೈರಲ್ ಆಗುತ್ತಿರುವ ಈ ವಿಡಿಯೊದಲ್ಲಿ , ಆರೋಪಿಯು ನೆಲದ ಮೇಲೆ ಮಲಗಿದ್ದು, ಹುಡುಗಿಯರಲ್ಲಿ ಒಬ್ಬರು ಅವನನ್ನು ಬೆಲ್ಟ್ ನಿಂದ ಹೊಡೆಯುತ್ತಿದ್ದರೆ, ಇನ್ನೊಬ್ಬ ಹುಡುಗಿ ಅಲ್ಲಿ ನಿಂತಿದ್ದ ಜನರ ಮುಂದೆ ಆತನ ನೀಚತನವನ್ನು ಬಯಲಿಗೆಳೆಯುತ್ತಿದ್ದಾಳೆ. ಸೋಶಿಯಲ್ ಮೀಡಿಯಾದಲ್ಲಿ ಮತ್ತೆ ಕಾಣಿಸಿಕೊಂಡಿರುವ ಈ ವಿಡಿಯೊ ಮಹಿಳೆಯರ ಸುರಕ್ಷತೆಯ ಕಾಳಜಿಯ ಬಗ್ಗೆ ತಿಳಿಸುತ್ತದೆ.

ಮೂಲಗಳ ಪ್ರಕಾರ, ಒಡಿಶಾದ ಬೆಹ್ರಾಂಪುರದ 17 ವರ್ಷದ ಬಾಲಕಿಗೆ ವ್ಯಕ್ತಿಯೊಬ್ಬ ಕಿರುಕುಳ ನೀಡಿದಾಗ ಈ ಗಲಾಟೆ ನಡೆದಿದೆ. ಈ ಘಟನೆಯನ್ನು ನೋಡಿದ ಆಕೆಯ 19 ವರ್ಷದ ಅಕ್ಕ ಮಧ್ಯಪ್ರವೇಶಿಸಿದಳು. ನಂತರ ಇಬ್ಬರು ಸಹೋದರಿಯರು ಸಾರ್ವಜನಿಕವಾಗಿ ವ್ಯಕ್ತಿಯನ್ನು ಎದುರಿಸಲು ಮತ್ತು ಹೊಡೆಯಲು ಮುಂದಾದರು. ನ್ಯಾಯಕ್ಕಾಗಿ ಇಂತಹ ಸಾರ್ವಜನಿಕ ಸ್ಥಳದಲ್ಲಿ ಅಕ್ಕತಂಗಿ ಧೈರ್ಯವನ್ನು ಪ್ರದರ್ಶಿಸಿದ್ದಾರೆ. ಹಾಗಾಗಿ ಅಂತಹ ಅಪರಾಧಿಗಳ ವಿರುದ್ಧ ಕಠಿಣ ಕ್ರಮಗಳ ಅಗತ್ಯದ ಬಗ್ಗೆ ವ್ಯಾಪಕ ಚರ್ಚೆ ಹುಟ್ಟುಹಾಕಿದೆ. ಈ ವಿಡಿಯೊ ಆನ್‍ಲೈನ್‍ನಲ್ಲಿ ಹಲವರ ಗಮನವನ್ನು ಸೆಳೆದಿದೆ, ಅನೇಕ ಬಳಕೆದಾರರು ಸಹೋದರಿಯರ ಕ್ರಮಗಳನ್ನು ಬೆಂಬಲಿಸಿದ್ದಾರೆ ಮತ್ತು ಅಂತಹ ಅಪರಾಧ ನಡವಳಿಕೆಯಲ್ಲಿ ಭಾಗಿಯಾಗಿರುವ ವ್ಯಕ್ತಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಕರೆ ನೀಡಿದ್ದಾರೆ.

ಇದನ್ನೂ ಓದಿ: ಹೋಟೆಲ್ ರೂಂನಲ್ಲಿ ಒಬ್ಬಳಲ್ಲ, ಇಬ್ಬರು ಹುಡುಗಿಯರ ಜೊತೆ ಪತಿಯ ಸರಸ; ರೆಡ್‍ಹ್ಯಾಂಡ್ ಆಗಿ ಹಿಡಿದ ಪತ್ನಿಯ ಸಾಹಸ!

ತನ್ನ ಕಿರಿಯ ಸಹೋದರಿಯನ್ನು ಹಿಂಬಾಲಿಸುತ್ತಿದ್ದ ವ್ಯಕ್ತಿಯನ್ನು ತನ್ನ ಹೆಣ್ಣುಮಕ್ಕಳು ಹೊಡೆದಿದ್ದಾರೆ ಎಂದು ಬಾಲಕಿಯರ ತಾಯಿಗೆ ಫೋನ್ ಕರೆ ಮೂಲಕ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಹುಡುಗಿಯರು ತಪ್ಪು ಮಾಡಿದವನಿಗೆ ತಕ್ಷಣದ ಶಿಕ್ಷ ವಿಧಿಸಿದ್ದಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Continue Reading

ಕರ್ನಾಟಕ

Viral News: ಮಹಿಳೆಯ ದೈವ ನರ್ತನಕ್ಕೆ ಭಾರಿ ಆಕ್ರೋಶ; ಕದ್ರಿ ಮಂಜುನಾಥನ ಸನ್ನಿಧಿಯಲ್ಲಿ ಕ್ಷಮೆಯಾಚನೆ

Viral News: ಮಂಗಳೂರಿನಲ್ಲಿ ನಡೆದ ‘ಆಟಿದ ಕೂಟ’ ಕಾರ್ಯಕ್ರಮವೊಂದರಲ್ಲಿ ದೈವ ನೃತ್ಯವನ್ನು ಅನುಕರಣೆ ಮಾಡಿ ಕುಣಿದ ಮಹಿಳೆ ಇದೀಗ ತಪ್ಪೊಪ್ಪಿಕೊಂಡು ಮಂಗಳೂರಿನ ಕದ್ರಿ ದೇವಸ್ಥಾನಕ್ಕೆ ತೆರಳಿ ಮಂಜುನಾಥ ದೇವರ ಸನ್ನಿಧಿಯಲ್ಲಿ ಮಂಡಿಯೂರಿ ಕ್ಷಮೆಯಾಚಿಸಿದ್ದಾರೆ. ಮಹಿಳೆ ದೈವ ನೃತ್ಯವನ್ನು ಅನುಕರಣೆ ಮಾಡುತ್ತಿರುವ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿ ಭಾರಿ ಆಕ್ರೋಶ ವ್ಯಕ್ತವಾಗಿತ್ತು.

VISTARANEWS.COM


on

Viral News
Koo

ಮಂಗಳೂರು: ತುಳುನಾಡಿನ ವಿಶಿಷ್ಟ ಆಚರಣೆ ದೈವಾರಾಧನೆಗೆ ಅದರದ್ದೇ ಆದ ಮಹತ್ವವಿದೆ, ಪಾವಿತ್ರ್ಯವಿದೆ. ಆದರೆ ಇದನ್ನೆಲ್ಲ ಮರೆತು ಮಂಗಳೂರಿನಲ್ಲಿ ನಡೆದ ‘ಆಟಿದ ಕೂಟ’ ಕಾರ್ಯಕ್ರಮವೊಂದರಲ್ಲಿ ದೈವ ನೃತ್ಯವನ್ನು ಅನುಕರಣೆ ಮಾಡಿ ಕುಣಿದ ಮಹಿಳೆ ಇದೀಗ ತಪ್ಪೊಪ್ಪಿಕೊಂಡು ಮಂಗಳೂರಿನ ಕದ್ರಿ ದೇವಸ್ಥಾನಕ್ಕೆ ತೆರಳಿ ಮಂಜುನಾಥ ದೇವರ ಸನ್ನಿಧಿಯಲ್ಲಿ ಮಂಡಿಯೂರಿ ಕ್ಷಮೆಯಾಚಿಸಿದ್ದಾರೆ. ಮಹಿಳೆ ದೈವ ನೃತ್ಯವನ್ನು ಅನುಕರಣೆ ಮಾಡುತ್ತಿರುವ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಈ ಹಿನ್ನಲೆಯಲ್ಲಿ ಅವರು ದೇವರ ಸನ್ನಿದಿಗೆ ಆಗಮಿಸಿ ಕಣ್ಣೀರಿಟ್ಟು ಕ್ಷಮೆಯಾಚಿಸಿದ್ದಾರೆ (Viral News).

ಇತ್ತೀಚೆಗೆ ಮಂಗಳೂರಿನ ಯೆಯ್ಯಾಡಿಯಲ್ಲಿ ನಡೆದಿದ್ದ ‘ಆಟಿದ ಕೂಟ’ ಕಾರ್ಯಕ್ರಮದಲ್ಲಿ ಕವಿತಾ ಎನ್ನುವ ಮಹಿಳೆ ದೈವ ನರ್ತನ ಮಾಡಿದ್ದರು. ಈ ವಿಡಿಯೊ ವೈರಲ್ ಆಗಿ ಕವಿತಾ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಹೀಗಾಗಿ ಬುಧವಾರ ಕದ್ರಿ ಶ್ರೀ ಮಂಜುನಾಥ ದೇವಸ್ಥಾನಕ್ಕೆ ಆಗಮಿಸಿ ಕ್ಷಮೆಯಾಚಿಸಿದ್ದಾರೆ. ದೈವರಾಧಕ ಸಮ್ಮುಖದಲ್ಲಿ ಬಂದು ದೇವರ ಮುಂದೆ ದೇವರ ಮುಂದೆ ಕಣ್ಣೀರು ಹಾಕಿ ಕ್ಷಮಾಪಣೆ ಕೇಳಿದ್ದಾರೆ. ಜತೆಗೆ ತಪ್ಪು ಕಾಣಿಕೆ ಹಾಕಿ ರುದ್ರಾಭಿಷೇಕ ಸೇವೆ ಮಾಡಿಸಿದ್ದಾರೆ.

ದೇವರ ಮುಂದೆ ಕಣ್ಣೀರು

ʼʼನಿತ್ಯ ದೈವಗಳ ಆರಾಧನೆ, ದೇವರ ಪೂಜೆ ಮಾಡಿಕೊಂಡು ಬಂದವಳು ನಾನು. ಆದರೆ ಸಂಗೀತ ಮತ್ತು ನೃತ್ಯದಲ್ಲಿ ಅಪಾರ ಆಸಕ್ತಿಯ ಕಾರಣದಿಂದ ತಪ್ಪಾಗಿದೆ. ಮಂಜುನಾಥನ ಬಳಿ ಕ್ಷಮೆ ಕೇಳಿ ತಪ್ಪು ಕಾಣಿಕೆ ಹಾಕಿದ್ದೇನೆ. ಇನ್ನು ಮುಂದೆ ಇಂತಹ ತಪ್ಪು ಮಾಡುವುದಿಲ್ಲ. ʼವಾ ಪೊರ್ಲುಯಾʼ ತುಳು ಹಾಡು ಮೊಳಗಿದಾಗ ಮೈಮರೆತು ನರ್ತಿಸಿದ್ದೇನೆ. ನಾನು ದೈವವನ್ನು ಅಪಹಾಸ್ಯ ಮಾಡಿಲ್ಲ. ಯಾರೂ ಇದನ್ನು ಅನುಕರಿಸಬೇಡಿ. ನಾನು ತಿಳಿಯದೇ ತಪ್ಪು ಮಾಡಿದ್ದೇನೆ. ಇದಕ್ಕಾಗಿ ನನ್ನನ್ನು ಕ್ಷಮಿಸಿʼʼ ಎಂದು ಅತ್ತು ಬಿಟ್ಟಿದ್ದಾರೆ. ಕವಿತಾ ಅವರೊಂದಿಗೆ ಆಗಮಿಸಿದ ದೈವಾರಾಧಕ ದಯಾನಂದ ಕತ್ತಲ್‌ಸಾರ್, ಬುದ್ದಿಮಾತು ಹೇಳಿ ಇಂಥ ಘಟನೆ ಮರುಕಳಿಸಬಾರದು ಎಂದು ಎಚ್ಚರಿಕೆ ನೀಡಿದ್ದಾರೆ.

ಭಾರಿ ಆಕ್ರೋಶ

ಕರಾವಳಿಯಲ್ಲಿ ದೈವಾರಾಧನೆಗೆ ಧಾರ್ಮಿಕವಾಗಿ, ಸಾಂಸ್ಕೃತಿಕವಾಗಿ ಮಹತ್ತರ ಸ್ಥಾನವಿದೆ. ಅನೇಕ ಮಂದಿ ಶ್ರದ್ಧಾ ಭಕ್ತಿಯಿಂದ ತಲೆ ತಲಾಂತರಗಳಿಂದ ದೈವವನ್ನು ಆರಾಧಿಸಿಕೊಂಡು ಬರುತ್ತಿದ್ದಾರೆ. ಆದರೆ ಕವಿತಾ ಎನ್ನುವ ಈ ಮಹಿಳೆ ʼಆಟಿದ ಕೂಟʼ ಕಾರ್ಯಕ್ರಮದಲ್ಲಿ ಅದೆಲ್ಲವನ್ನೂ ಮರೆತು ತುಳು ಹಾಡಿಗೆ ದೈವದಂತೆ ಹೆಜ್ಜೆ ಹಾಕಿದ್ದು ಅನೇಕರನ್ನು ಕೆರಳಿಸಿತ್ತು. ಆಕೆ ದೈವದಂತೆ ಹೆಜ್ಜೆ ಹಾಕುತ್ತಿದ್ದರೆ ನೆರೆದಿದ್ದವರು ಚಪ್ಪಾಳೆ ತಟ್ಟಿ ಪ್ರೋತ್ಸಾಹ ನೀಡುತ್ತಿರುವುದೂ ವಿಡಿಯೊದಲ್ಲಿ ಕಂಡು ಬಂದಿತ್ತು.

ಕವಿತಾಳ ಈ ದೈವ ನರ್ತನದ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡಿ ಭಕ್ತರನ್ನು ಕೆರಳಿಸಿತ್ತು. ಜತೆಗೆ ಭಾರಿ ಚರ್ಚೆಯನ್ನೇ ಹುಟ್ಟು ಹಾಕಿತ್ತು. ಕಾರ್ಯಕ್ರಮ ಆಯೋಜಕರಿಗೆ ಕರೆ ಮಾಡಿ ಅನೇಕರು ತರಾಟೆಗೆ ತೆಗೆದುಕೊಂಡಿದ್ದರು. ಕವಿತಾ ದೈವದ ಎದುರು ನಿಂತು ಕ್ಷಮೆ ಯಾಚಿಸುವಂತೆ ಆಗ್ರಹಿಸಿದ್ದರು. ಅದರಂತೆ ಇದೀಗ ಅವರು ಕ್ಷಮೆಯಾಚಿಸಿದ್ದಾರೆ.

ಇದನ್ನೂ ಓದಿ: Rishab Shetty: ಕಾಂತಾರ 2ನಲ್ಲಿ ದೈವಾರಾಧನೆ ಪ್ರದರ್ಶಿಸಿದರೆ ಉಗ್ರ ಹೋರಾಟ: ರಿಷಬ್‌ಗೆ ವಾರ್ನಿಂಗ್‌!

Continue Reading
Advertisement
Bengaluru Roads
ಕರ್ನಾಟಕ9 mins ago

Bengaluru Roads: ರಸ್ತೆ ಗುಂಡಿ ಮುಚ್ಚುವಂತೆ ಬಿಬಿಎಂಪಿ ಅಧಿಕಾರಿಗಳಿಗೆ ಸಚಿವರಿಂದಲೇ ಮನವಿ!

Wildlife
ಪರಿಸರ10 mins ago

Wildlife: ಹುಟ್ಟಿದ ತಕ್ಷಣ ತಾಯಿಯನ್ನೇ ಕೊಂದು ತಿನ್ನುವ ಜೀವಿ ಇದು!

Karnataka Rain
ಮಳೆ17 mins ago

Karnataka Rain: ಗಂಗಾವತಿಯಲ್ಲಿ ಭಾರಿ ಮಳೆಗೆ ಮನೆಗಳಿಗೆ ನುಗ್ಗಿದ ನೀರು; ಭತ್ತದ ಗದ್ದೆಗಳಿಗೆ ಹಾನಿ

Gold Rate
ಪ್ರಮುಖ ಸುದ್ದಿ19 mins ago

Gold Rate : ಬೆಲೆ ಏರಿಕೆ ಪರಿಣಾಮ; ಏಪ್ರಿಲ್-ಜುಲೈನಲ್ಲಿ ಚಿನ್ನದ ಆಮದು ಶೇ.4.23ರಷ್ಟು ಇಳಿಕೆ

Viral Video
Latest24 mins ago

‌Richard Lugner: ಇತ್ತೀಚೆಗಷ್ಟೆ 6ನೇ ಮದುವೆಯಾಗಿದ್ದ 91 ವರ್ಷದ ಬಿಲಿಯಾಧೀಶ ಇನ್ನಿಲ್ಲ!

Viral News
Latest31 mins ago

Viral News: ಈತ 610 ಕೆಜಿ ಇದ್ದ, ಈಗ 63 ಕೆಜಿಗೆ ಇಳಿದಿದ್ದಾನೆ! 30 ವೈದ್ಯರ ತಂಡದ ಕಾರ್ಯಾಚರಣೆ!

Sexual Abuse
Latest39 mins ago

Sexual Abuse: ಲೈಂಗಿಕ ಕಿರುಕುಳ ನೀಡಿದವನನ್ನು ನಡು ರಸ್ತೆಯಲ್ಲಿ ಥಳಿಸಿದ ಅಕ್ಕತಂಗಿ; ವಿಡಿಯೊ ವೈರಲ್

Paris Paralympics
ಪ್ರಮುಖ ಸುದ್ದಿ56 mins ago

Paris Paralympics : ಪ್ಯಾರಾಲಿಂಪಿಕ್ಸ್​​ನಲ್ಲಿ 12 ಕ್ರೀಡೆಗಳಲ್ಲಿ ಭಾಗವಹಿಸಲಿದೆ ಭಾರತ

karnataka Weather Forecast
ಮಳೆ1 hour ago

Karnataka Weather : ಇಂದು ಧ್ವಜಾರೋಹಣ ಆಯ್ತು, ನಾಳೆ ವರಮಹಾಲಕ್ಷ್ಮಿ ಹಬ್ಬಕ್ಕೂ ಮಳೆ ಅಡ್ಡಿ; ಬೆಂಗಳೂರು ಸೇರಿ ಕರಾವಳಿ, ಮಲೆನಾಡಿಗೆ ಅಲರ್ಟ್‌

Electric Shock
ಕರ್ನಾಟಕ2 hours ago

Electric Shock: ಸ್ವಾತಂತ್ರ್ಯ ದಿನಾಚರಣೆ ಮುಗಿಸಿ ಮನೆಗೆ ಹೋಗುವಾಗ ವಿದ್ಯುತ್ ತಗುಲಿ ವಿದ್ಯಾರ್ಥಿ ಸಾವು

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ9 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka Weather Forecast
ಮಳೆ1 week ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ1 week ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ1 week ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು1 week ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ1 week ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 weeks ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ2 weeks ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ2 weeks ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ2 weeks ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ2 weeks ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

ಟ್ರೆಂಡಿಂಗ್‌