Hardik Pandya: ಬ್ರಿಟಿಷ್​ ಸಿಂಗರ್ ಜತೆ ಹಾರ್ದಿಕ್​ ಪಾಂಡ್ಯ​ ಡೇಟಿಂಗ್​​? ಜಾಸ್ಮಿನ್ ವಾಲಿಯಾ ಬ್ರೇಕಪ್‌ ಲಿಸ್ಟ್‌ ಇಲ್ಲಿದೆ - Vistara News

ಕ್ರಿಕೆಟ್

Hardik Pandya: ಬ್ರಿಟಿಷ್​ ಸಿಂಗರ್ ಜತೆ ಹಾರ್ದಿಕ್​ ಪಾಂಡ್ಯ​ ಡೇಟಿಂಗ್​​? ಜಾಸ್ಮಿನ್ ವಾಲಿಯಾ ಬ್ರೇಕಪ್‌ ಲಿಸ್ಟ್‌ ಇಲ್ಲಿದೆ

Hardik Pandya: ಈ ವದಂತಿಗಳಿಗೆ ಜಾಸ್ಮಿನ್, ಹಾರ್ದಿಕ್ ಯಾವುದೇ ಪ್ರತಿಕ್ರಿಯೆ ನೀಡದಿದ್ದರೂ, ಅವರ ನಡುವಿನ ಸಂಬಂಧದ ಬಗ್ಗೆ ಊಹಾಪೋಹಗಳಿವೆ. ಆದರೆ ಜಾಸ್ಮಿನ್ ಅವರು ಹಾರ್ದಿಕ್‌ಗಿಂತ ಮೊದಲು ಹಲವಾರು ಪ್ರಸಿದ್ಧ ವ್ಯಕ್ತಿಗಳೊಂದಿಗೆ ಡೇಟಿಂಗ್ ಮಾಡಿದ್ದಾರೆ.

VISTARANEWS.COM


on

Jasmin Walia From Lip Lock to Breakups Her Boyfriend List is Spectacular
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಹಾರ್ದಿಕ್​ ಪಾಂಡ್ಯ(Hardik Pandya) ಅವರು ನತಾಶಾ ಸ್ಟಾಂಕೋವಿಕ್(Natasa Stankovic) ಅವರಿಗೆ ವಿಚ್ಛೇದನ(Hardik-Natasa Divorce) ನೀಡಿದ ಬಳಿಕ ಇದೀಗ ಜಾಲಿ ಮೂಡ್​ನಲ್ಲಿದ್ದಾರೆ. ನತಾಶಗೆ ವಿಚ್ಛೇದನ ನೀಡಿ ಒಂದು ವಾರ ಕಳೆಯುವಷ್ಟರಲ್ಲಿ ಪಾಂಡ್ಯ ಬಾಲಿವುಡ್​ನ ಖ್ಯಾತ ನಟಿ ಅನನ್ಯ ಪಾಂಡೆ(Ananya Panday) ಜತೆ ಚಾಟಿಂಗ್​, ಡೇಟಿಂಗ್​ ಆರಂಭಿಸಿದ್ದಾರೆ ಎನ್ನಲಾಗಿತ್ತು. ಆದರೆ, ಪಾಂಡ್ಯ ಬ್ರಿಟಿಷ್​ ಗಾಯಕಿ ಮತ್ತು ನಟಿ ಜಾಸ್ಮಿನ್​ ವಾಲಿಯಾ(Jasmin Walia) ಜತೆ ಡೇಟಿಂಗ್​(Hardik Pandya And Jasmin Walia Dating) ಮಾಡುತ್ತಿದ್ದಾರೆ ಎಂಬ ಸುದ್ದಿಯೊಂದು ಹೊರಬಿದ್ದಿದೆ. ಈ ವದಂತಿಗಳಿಗೆ ಜಾಸ್ಮಿನ್, ಹಾರ್ದಿಕ್ ಯಾವುದೇ ಪ್ರತಿಕ್ರಿಯೆ ನೀಡದಿದ್ದರೂ, ಅವರ ನಡುವಿನ ಸಂಬಂಧದ ಬಗ್ಗೆ ಊಹಾಪೋಹಗಳಿವೆ. ಆದರೆ ಜಾಸ್ಮಿನ್ ಅವರು ಹಾರ್ದಿಕ್‌ಗಿಂತ ಮೊದಲು ಹಲವಾರು ಪ್ರಸಿದ್ಧ ವ್ಯಕ್ತಿಗಳೊಂದಿಗೆ ಡೇಟಿಂಗ್ ಮಾಡಿದ್ದಾರೆ.

ಗಾಜ್ ಬೀಡಲ್ ಅವರು 2013ರಲ್ಲಿ ಜಾಸ್ಮಿನ್ ಜತೆ ಪ್ರೇಮ ಸಂಬಂಧವನ್ನು ಹೊಂದಿದ್ದರು. ಗಾಜ್ ಅವರು ಜಾಸ್ಮಿನ್ ಅನ್ನು ಇಷ್ಟಪಟ್ಟಿದ್ದಾರೆ ಎಂದು ಒಪ್ಪಿಕೊಂಡಿದ್ದರು. 2014 ಮತ್ತು 2016 ರ ನಡುವೆ, ಜಾಸ್ಮಿನ್ ರಾಸ್ ವರ್ಸ್ವಿಕ್ ಅವರೊಂದಿಗೆ ಪ್ರಣಯದಲ್ಲಿ ತೊಡಗಿಸಿಕೊಂಡಿದ್ದರು. ಈ ಅವಧಿಯ ಅವರ ಅನೇಕ ಪ್ರೀತಿಯ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿವೆ.

ಒಂದು ಲಿಪ್-ಲಾಕ್ ಫೋಟೋ ವಿಶೇಷವಾಗಿ ಗಮನ ಸೆಳೆಯಿತು. ಆದರೆ ಎರಡು ವರ್ಷಗಳ ಡೇಟಿಂಗ್ ನಂತರ ಅವರು ಬೇರ್ಪಟ್ಟರು. ಬ್ರಿಟಿಷ್ ಟಿವಿ ಪರ್ಸನಾಲಿಟಿ ಡಾನ್ ಓಸ್ಬೋರ್ನ್ ಕೂಡ ಜಾಸ್ಮಿನ್ ಜೊತೆ ಸಂಬಂಧ ಹೊಂದಿದ್ದರು. ಆದರೆ ಅವರ ಸಂಬಂಧವು ಹೆಚ್ಚು ಕಾಲ ಉಳಿಯಲಿಲ್ಲ. ಜಾನ್ ಕ್ಲಾರ್ಕ್ ಅವರೊಂದಿಗಿನ ಸಂಪರ್ಕದಿಂದಾಗಿ, ಜಾಸ್ಮಿನ್ ವಾಲಿಯಾ ಕೂಡ ಗಮನ ಸೆಳೆದಿದ್ದರು.

ಇದನ್ನೂ ಓದಿ: Hardik Pandya: ಬ್ರಿಟಿಷ್​ ಸಿಂಗರ್​ ಜತೆ ಡೇಟಿಂಗ್​​ ಆರಂಭಿಸಿದರೇ ಹಾರ್ದಿಕ್​ ಪಾಂಡ್ಯ?; ಅನುಮಾನ ಮೂಡಿಸಿದ ಇನ್​ಸ್ಟಾಗ್ರಾಮ್​ ಹಸಿ ಬಿಸಿ ಪೋಸ್ಟ್​

ನಟಿ ಜಾಸ್ಮಿನ್​ ವಾಲಿಯಾ(Hardik Pandya And Jasmin Walia) ಮತ್ತು ಹಾರ್ದಿಕ್​ ಪಾಂಡ್ಯ ಗ್ರೀಸ್​ನ ಪ್ರಮುಖ ಪ್ರವಾಸಿ ತಾಣಗಳಲ್ಲಿ ಸುತ್ತಾಡಿದ ಫೋಟೊವನ್ನು ತಮ್ಮ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಫೋಟೋಗಳಲ್ಲಿ ಇವರಿಬ್ಬರು ಜತೆಯಾಗಿ ಕಾಣಿಸಿಕೊಳ್ಳದಿದ್ದರೂ, ಒಂದೇ ಸಮಯದಲ್ಲಿ ಒಂದೇ ಸ್ಥಳದಲ್ಲಿರುವ ಫೋಟೋಗಳನ್ನು ಹಂಚಿಕೊಂಡಿರುವುದು ಅನುಮಾನಕ್ಕೆ ಕಾರಣವಾಗಿದೆ.

ಜಾಸ್ಮಿನ್ ವಾಲಿಯಾ ಶ್ರೀಲಂಕಾ ವಿರುದ್ಧದ ಟಿ20 ಸರಣಿಯ ವೇಳೆಯೂ ಕಾಣಿಸಿಕೊಂಡಿದ್ದರು. ಹೀಗಾಗಿ ಪಾಂಡ್ಯ ಮತ್ತು ಜಾಸ್ಮಿನ್ ಡೇಟಿಂಗ್​ ನಡೆಸುತ್ತಿರುವುದು ಖಚಿತ ಎಂದು ನೆಟ್ಟಿಗರು ಕಮೆಂಟ್​ ಮಾಡಲಾರಂಭಿಸಿದ್ದಾರೆ. ಹಾರ್ದಿಕ್ ಮತ್ತು ಜಾಸ್ಮಿನ್ ಪರಸ್ಪರ ಇನ್​ಸ್ಟಾಗ್ರಾಮ್​ನಲ್ಲಿ ಫೋಟೊಗಳಿಗೂ ಲೈಕ್​ ಮಾಡಿಕೊಂಡಿದ್ದಾರೆ. ಹೀಗಾಗಿ ಡೇಟಿಂಗ್​ ವದಂತಿ ಬಲವಾಗಿದೆ.

2014ರಲ್ಲಿ ಜಾಸ್ಮಿನ್ ಯೂಟ್ಯೂಬ್ ಚಾನೆಲ್ ಆರಂಭಿಸಿ ಕೆಲ ಪಾಪ್ಯುಲರ್ ಹಾಡುಗಳನ್ನು ಹಾಡುವ ಮೂಲಕ ಗಮನಸೆಳೆದಿದ್ದರು. 2017ರಲ್ಲಿ ಬಾಂ ಡಿಗ್ಗಿ ಡಿಗ್ಗಿ ಹಾಡು ಇವರಿಗೆ ಖ್ಯಾತಿ ತಂದುಕೊಟ್ಟಿತ್ತು. ಇದಾದ ಬಳಿಕ ಜಾಸ್ಮಿನ್ ಬಿಗ್​ಬಾಸ್ 13ರ ಫೈನಲಿಸ್ಟ್ ಅಸಿಮ್ ರಿಯಾಸ್ ಜತೆ 2022ರ ಮ್ಯೂಸಿಕ್ ವಿಡಿಯೋ ನೈಟ್ಸ್ & ಫೈಟ್ಸ್​ನಲ್ಲಿಯೂ ಕೆಲಸ ಮಾಡಿದ್ದರು. ಸದ್ಯ ಪಾಂಡ್ಯ ಜತೆ ಡೇಟಿಂಗ್​ ಮಾಡುತ್ತಿದ್ದಾರೆ ಎನ್ನಲಾಗಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

National Cricket Academy : ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ನೀರಜ್ ಚೋಪ್ರಾರಂಥ ಬೇರೆ ಕ್ರೀಡೆಯ ಅಥ್ಲೀಟ್​ಗಳು ಅಭ್ಯಾಸ ಮಾಡಬಹುದು

National Cricket Academy : ವಾರಣಸಿಯಲ್ಲಿ ಕ್ರಿಕೆಟ್ ಕ್ರೀಡಾಂಗಣ ಮತ್ತು ಆರು ಈಶಾನ್ಯ ರಾಜ್ಯಗಳಲ್ಲಿ ಎನ್​ಸಿಎ ಮತ್ತು ಜಮ್ಮುವಿನಲ್ಲಿ ಏಳನೇ ಎನ್ಸಿಎ ಸ್ಥಾಪಿಸುವ ಯೋಜನೆಗಳನ್ನು ಬಿಸಿಸಿಐ ಕಾರ್ಯದರ್ಶಿ ವಿವರಿಸಿದರು. ಪ್ಯಾರಿಸ್ ಒಲಿಂಪಿಕ್ಸ್ 2024 ರ ಬೆಳ್ಳಿ ಪದಕ ವಿಜೇತ ನೀರಜ್ ಚೋಪ್ರಾ ಬೇಸಿಗೆ ಕ್ರೀಡಾಕೂಟಕ್ಕೆ ಮುಂಚಿತವಾಗಿ ಟರ್ಕಿಯಲ್ಲಿ ತರಬೇತಿ ಪಡೆದಿದ್ದರು. ಹೀಗಾಗಿ ಈ ರೀತಿ ಉನ್ನತ ಮಟ್ಟದ ಕ್ರೀಡಾಪಟುಗಳು ಹೊಸ ಎನ್​ಸಿಎನಲ್ಲಿ ಅಭ್ಯಾಸ ನಡೆಸಲು ಸಾಧ್ಯವಿದೆ.

VISTARANEWS.COM


on

National Cricket Academy
Koo

ಬೆಂಗಳೂರು : ಬೆಂಗಳೂರಿನಲ್ಲಿ ನಿರ್ಮಾಣಗೊಳ್ಳುತ್ತಿರುವ ಬೃಹತ್​​ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಇನ್ನು ಮುಂದೆ ಕ್ರಿಕೆಟ್​ಗೆ ಮಾತ್ರ ಮೀಸಲಲ್ಲ. ನೀರಜ್ ಚೋಪ್ರಾ ಅವರಂತಹ ಒಲಿಂಪಿಕ್ ಕ್ರೀಡಾಪಟುಗಳಿಗೂ ಹೊಸ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್ಸಿಎ) ಲಭ್ಯವಾಗಲಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಭರವಸೆ ಕೊಟ್ಟಿದ್ದಾರೆ. ಬಿಸಿಸಿಐ ಯಾವಾಗಲೂ ಭಾರತೀಯ ಕ್ರೀಡಾಪಟುಗಳು ಮತ್ತು ಭಾರತೀಯ ಒಲಿಂಪಿಕ್ ಅಸೋಸಿಯೇಷನ್​ಗೆ ಬೆಂಬಲ ನೀಡುತ್ತಿದೆ. ಕ್ರೀಡಾಪಟುಗಳ ಅಭಿವೃದ್ಧಿಗೆ ಕೊಡುಗೆಯನ್ನು ನೀಡುತ್ತದೆ. ಇತ್ತೀಚೆಗೆ, ಜಯ್ ಶಾ ಹೊಸ ಎನ್​​ಸಿಎ ಪೂರ್ಣಗೊಳ್ಳುವ ಹಂತದಲ್ಲಿದೆ ಮತ್ತು ಶೀಘ್ರದಲ್ಲೇ ಕ್ರಿಕೆಟಿಗರಿಗೆ ಮುಕ್ತವಾಗಲಿದೆ ಎಂದು ಘೋಷಿಸಿದ್ದರು. ಅತ್ಯಾಧುನಿಕ ಸೌಲಭ್ಯವು ದೇಶದಲ್ಲಿ ಕ್ರಿಕೆಟ್ ಮತ್ತು ಇತರ ಕ್ರೀಡಾ ಬೆಳವಣಿಗೆಗಳಲ್ಲಿ ಕ್ರಾಂತಿಯನ್ನುಂಟು ಮಾಡುವ ಭರವಸೆಯನ್ನು ನೀಡಿದೆ.

“ನೀರಜ್ ಚೋಪ್ರಾ ಅವರಂತಹ ಒಲಿಂಪಿಕ್ ಕ್ರೀಡಾಪಟುಗಳಿಗೂ ನಾವು ಹೊಸ ಎನ್​ಸಿಎಯನ್ನು ಲಭ್ಯವಾಗಿಸಲಿದ್ದೇವೆ” ಎಂದು ಜಯ್ ಶಾ ಟೈಮ್ಸ್ ಆಫ್ ಇಂಡಿಯಾಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ವಾರಣಸಿಯಲ್ಲಿ ಕ್ರಿಕೆಟ್ ಕ್ರೀಡಾಂಗಣ ಮತ್ತು ಆರು ಈಶಾನ್ಯ ರಾಜ್ಯಗಳಲ್ಲಿ ಎನ್​ಸಿಎ ಮತ್ತು ಜಮ್ಮುವಿನಲ್ಲಿ ಏಳನೇ ಎನ್ಸಿಎ ಸ್ಥಾಪಿಸುವ ಯೋಜನೆಗಳನ್ನು ಬಿಸಿಸಿಐ ಕಾರ್ಯದರ್ಶಿ ವಿವರಿಸಿದರು. ಪ್ಯಾರಿಸ್ ಒಲಿಂಪಿಕ್ಸ್ 2024 ರ ಬೆಳ್ಳಿ ಪದಕ ವಿಜೇತ ನೀರಜ್ ಚೋಪ್ರಾ ಬೇಸಿಗೆ ಕ್ರೀಡಾಕೂಟಕ್ಕೆ ಮುಂಚಿತವಾಗಿ ಟರ್ಕಿಯಲ್ಲಿ ತರಬೇತಿ ಪಡೆದಿದ್ದರು. ಹೀಗಾಗಿ ಈ ರೀತಿ ಉನ್ನತ ಮಟ್ಟದ ಕ್ರೀಡಾಪಟುಗಳು ಹೊಸ ಎನ್​ಸಿಎನಲ್ಲಿ ಅಭ್ಯಾಸ ನಡೆಸಲು ಸಾಧ್ಯವಿದೆ.

ಹೊಸ ಎನ್ಸಿಎ ಅನಾವರಣಕ್ಕೆ ಸಜ್ಜು

ಹೊಸ ಎನ್​ಸಿಎ ವಿಶ್ವದರ್ಜೆಯ ಮೂಲಸೌಕರ್ಯಗಳನ್ನು ಹೊಂದಿದೆ. ಕ್ರಿಕೆಟಿಗರಿಗೆ ತಮ್ಮ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಉತ್ತಮ ವಾತಾವರಣವನ್ನು ಒದಗಿಸಲು ವಿನ್ಯಾಸಗೊಳಿಸಲಾಗಿದೆ. ಈ ಸೌಲಭ್ಯವು ಮೂರು ಅಂತಾರಾಷ್ಟ್ರೀಯ ಗುಣಮಟ್ಟದ ಆಟದ ಮೈದಾನಗಳನ್ನು ಒಳಗೊಂಡಿರುತ್ತದೆ. ಜೊತೆಗೆ 45 ಅಭ್ಯಾಸ ಪಿಚ್ ಗಳನ್ನು ಹೊಂದಿರುತ್ತದೆ. ಹೆಚ್ಚುವರಿಯಾಗಿ ಇದು ಒಳಾಂಗಣ ಕ್ರಿಕೆಟ್ ಪಿಚ್​ಗಳನ್ನು ಒಲಿಂಪಿಕ್ ಗಾತ್ರದ ಈಜುಕೊಳ ಮತ್ತು ಅತ್ಯಾಧುನಿಕ ತರಬೇತಿ, ಚೇತರಿಕೆ ಮತ್ತು ಕ್ರೀಡಾ ವಿಜ್ಞಾನ ಸೌಲಭ್ಯಗಳನ್ನು ಹೊಂದಿರುತ್ತದೆ.

ಇದನ್ನೂ ಓದಿ: Aman Sehrawat : ಒಲಿಂಪಿಕ್ಸ್​ನಲ್ಲಿ ಕಂಚು ಗೆದ್ದ ಅಮನ್ ಸೆಹ್ರಾವತ್​ಗೆ ರೈಲ್ವೆ ಇಲಾಖೆಯಲ್ಲಿ ಭರ್ಜರಿ ಬಡ್ತಿ

ಎನ್​​ಸಿಎ ಕೆಲಸ ಸರಿಯಾಗಿ ಆಗಿದೆ

ನಾನು ಸೆಪ್ಟೆಂಬರ್ 2019 ರಲ್ಲಿ ಬಿಸಿಸಿಐ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡಾಗ ಮೂರರಿಂದ ನಾಲ್ಕು ತಿಂಗಳೊಳಗೆ ಕೋವಿಡ್ -19 ಸಾಂಕ್ರಾಮಿಕ ರೋಗ ಶುರುವಾಯಿತು. ಐಪಿಎಲ್ ಮತ್ತು ಕೆಲವು ದೇಶೀಯ ಕ್ರಿಕೆಟ್ ಅನ್ನು ಹೇಗೆ ಆಯೋಜಿಸುವುದು ಎಂಬುದರ ಮೇಲೆ ನಮ್ಮ ಗಮನವಿತ್ತು. ಎರಡು ವರ್ಷಗಳ ಕಾಲ ಬಿಸಿಸಿಐ ಕಚೇರಿ ಬಹುತೇಕ ಮುಚ್ಚಿತ್ತು.

ನಾವು ಎರಡನೇ ಅವಧಿಯನ್ನು ಪಡೆದ ನಂತರ, ನಾವು ಇದನ್ನು ಮುಂದುವರಿಸಬೇಕು ಎಂದು ನಿರ್ಧರಿಸಿದ್ದೇವೆ. ಇದು ಈಶಾನ್ಯದಲ್ಲಿ ಸೌಲಭ್ಯಗಳನ್ನು ಅಭಿವೃದ್ಧಿಪಡಿಸುವ ಬಗ್ಗೆಯೂ ಇತ್ತು. ಎನ್ಸಿಎ, ನಾನು 2022 ರಲ್ಲಿ ಬೆಂಗಳೂರಿನಲ್ಲಿ ನಿರ್ಮಾಣಕ್ಕೆ ಅಡಿಪಾಯ ಹಾಕಿದ್ದೆ. 2008 ರಲ್ಲಿ, ನಾವು ಭೂಮಿಯನ್ನು ಖರೀದಿಸಿದ್ದೆವು. ಆದರೆ ಯಾವುದೇ ಕೆಲಸ ಮಾಡಿರಲಿಲ್ಲ. ಹಿಂದಿನವರು ಏಕೆ ಏನನ್ನೂ ಮಾಡಲಿಲ್ಲ ಎಂದು ನನಗೆ ತಿಳಿದಿಲ್ಲ” ಎಂದು ಶಾ ಹೇಳಿದ್ದಾರೆ.

Continue Reading

ಪ್ರಮುಖ ಸುದ್ದಿ

Happy Independence Day : ನೀರಜ್​ನಿಂದ ಹಿಡಿದು ರೋಹಿತ್​ ಶರ್ಮಾ ; ಭಾರತೀಯ ಅಥ್ಲೀಟ್​​ಗಳ ಸ್ವಾತಂತ್ರ್ಯೋತ್ಸವ ಆಚರಣೆಯ ಪೋಸ್ಟ್​ಗಳು ಇಲ್ಲಿವೆ…

Happy Independence Day :

VISTARANEWS.COM


on

Happy Independence Day
Koo

ಬೆಂಗಳೂರು: ಭಾರತವು ತನ್ನ 78 ನೇ ಸ್ವಾತಂತ್ರ್ಯ ದಿನಾಚರಣೆ (Happy Independence Day) ಸಂಭ್ರಮದಲ್ಲಿದೆ. ರಾಷ್ಟ್ರ ವ್ಯಾಪಿ ದೇಶಭಕ್ತಿಯ ಭಾವದಲ್ಲಿ ತುಂಬಿಕೊಂಡಿದೆ. ಅಂತೆಯೇ ಭಾರತದ ಕ್ರೀಡಾ ಭ್ರಾತೃತ್ವವು ಸ್ವಾತಂತ್ರ್ಯ ದಿನವನ್ನು ಸಂಭ್ರದಿಂದ ಆಚರಿಸಿದೆ. ಪ್ರಖ್ಯಾತ ಕ್ರೀಡಾಪಟುಗಳು ದೇಶ ಭಕ್ತಿಯ ಸಾರವನ್ನು ಸಾರಿದ್ದಾರೆ. ದೇಶದ ಜನರಿಗೆ ತಮ್ಮ ಅಭಿಮಾನಿಗಳಿಗೆ ಶುಭಾಶಯ ಕೋರಿದ್ದಾರೆ. ರೋಹಿತ್ ಶರ್ಮಾ, ನೀರಜ್ ಚೋಪ್ರಾ, ಭಾರತ ತಂಡದ ನೂತ ಗೌತಮ್ ಗಂಭೀರ್ ಸೇರಿದಂತೆ ಎಲ್ಲರೂ ದೇಶ ಪ್ರೇಮದ ಭಾವವನ್ನು ಸ್ಪುರಿಸಿದ್ದಾರೆ. ‘

ಪ್ಯಾರಿಸ್ ಒಲಿಂಪಿಕ್ಸ್ 2024 ರಲ್ಲಿ ಬೆಳ್ಳಿ ಪದಕ ಗೆದ್ದ ಭಾರತದ ಗೋಲ್ಡನ್ ಬಾಯ್ ಮತ್ತು ಸ್ಟಾರ್ ಅಥ್ಲೀಟ್ ನೀರಜ್ ಚೋಪ್ರಾ ರಾಷ್ಟ್ರಧ್ವಜವನ್ನು ಹಿಡಿದಿರುವ ಚಿತ್ರವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರೆ, ಐತಿಹಾಸಿಕ ಟಿ 20 ವಿಶ್ವಕಪ್ 2024 ರ ಗೆಲುವಿನ ಸಮಯದಲ್ಲಿ ಬಾರ್ಬಡೋಸ್​ನಲ್ಲಿ ತ್ರಿವರ್ಣಧ್ವಜವನ್ನು ಎತ್ತಿ ಹಿಡಿದಿರುವ ಚಿತ್ರವನ್ನು ಆಲ್​ರೌಂಡರ್​ ಹಾರ್ದಿಕ್ ಪಾಂಡ್ಯ ಪೋಸ್ಟ್ ಮಾಡಿದ್ದಾರೆ. ಭಾರತೀಯ ಕ್ರೀಡಾಪಟುಗಳಿಗೆ ವಿದೇಶ ನೆಲದಲ್ಲಿ ಸೇರಿದಂತೆ ಕ್ರೀಡಾಕ್ಷೇತ್ರದಲ್ಲಿ ಸಾಧನೆ ಮಾಡಲು ಭಾರತದ ಧ್ವಜವೇ ಪ್ರೇರಣೆಯಾಗಿರುತ್ತದೆ. ಭಾರತಕ್ಕಾಗಿ ಆಡುವ ಮತ್ತು ಗೆದ್ದು ಧ್ವಜ ಹಿಡಿದು ಸಂಭ್ರಮಿಸುವ ಕನಸು ಅವರದ್ದಾಗಿರುತ್ತದೆ. ಹೀಗಾಗಿ ಕ್ರೀಡಾಪಟುಗಳು ದೇಶದ ಧ್ವಜದ ಬಗ್ಗೆ ಅಪಾರ ಅಭಿಮಾನ ಹೊಂದಿರುತ್ತಾರೆ. ಅಂತೆಯೇ ಸ್ವಾತಂತ್ರ್ಯ ದಿನದಂದೂ ಧ್ವಜದೊಂದಿಗೆ ಸಂಭ್ರಮಿಸಿದ್ದಾರೆ.

ಕ್ರೀಡಾಪಟುಗಳು ದೇಶದ ಹೆಮ್ಮೆಯ ಕಲಿಗಳು. ಭಾರತದಲ್ಲಿ ಅವರ ಮೇಲೆ ದೊಡ್ಡ ಪ್ರಮಾಣದ ನಿರೀಕ್ಷೆಗಳ ಇರುತ್ತವೆ. ಕ್ರೀಡಾಪಟುಗಳು ತಾವು ಕೇವಲ ತಮಗಾಗಿ ಸ್ಪರ್ಧಿಸುತ್ತಿಲ್ಲ. ಶತಕೋಟಿ ಜನರ ಭರವಸೆಗಳು ಮತ್ತು ಆಕಾಂಕ್ಷೆಗಳಿಗಾಗಿ ಆಡುತ್ತಾರೆ. ಈ ಗುರಿಯು ಅವರ ಮಿತಿಗಳನ್ನು ಮೀರಲು, ಸವಾಲುಗಳನ್ನು ಜಯಿಸಲು ಮತ್ತು ಅತ್ಯುತ್ತಮ ಕಾರ್ಯಕ್ಷಮತೆ ಪಡೆಯಲು ನೆರವಾಗುತ್ತದೆ.

ಇದನ್ನೂ ಓದಿ: Happy Independence day 2024: ಸ್ವಾತಂತ್ರ್ಯ ದಿನಾಚರಣೆಯಂದು ಒಲಿಂಪಿಯನ್​ಗಳನ್ನು ಭೇಟಿಯಾದ ಪ್ರಧಾನಿ ಮೋದಿ ಗೆ ಜೆರ್ಸಿ ಉಡುಗೊರೆ

ಒಲಿಂಪಿಕ್ಸ್​​ನಂಥ ಜಾಗತಿಕ ಕ್ರಿಡಾಕೂಟಲ್ಲಿ ಭಾರತವನ್ನು ಪ್ರತಿನಿಧಿಸುವುದು ಕ್ರೀಡಾಪಟುಗಳಿಗೆ ವಿಶೇಷ ಭಾವವಾಗಿದೆ. ದೇಶದ ಗೌರವನ್ನು ವಿಶ್ವ ವೇದಿಕೆಗೆ ಏರಿಸಲು ಅವರಿಗೆ ಅವಕಾಶ ಸಿಗುತ್ತದೆ. ಈ ಕ್ಷೇತ್ರಗಳಲ್ಲಿನ ಯಶಸ್ಸು ರಾಷ್ಟ್ರದ ಖ್ಯಾತಿ ಹೆಚ್ಚಿಸಲು ಸಹಾಯ ಮಾಡುತ್ತದೆ. ಮುಂದಿನ ಪೀಳಿಗೆಯ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುತ್ತದೆ. ಭಾರತೀಯ ಕ್ರೀಡಾಪಟುಗಳಿಗೆ, ತಮ್ಮ ದೇಶವನ್ನು ಪ್ರತಿನಿಧಿಸುವ ಗೌರವವು ಹೆಮ್ಮೆಯ ಸಂಕೇತವಾಗಿದೆ.

Continue Reading

ಪ್ರಮುಖ ಸುದ್ದಿ

World Test Championship : ಐಪಿಎಲ್ ಮತ್ತು ವಿಶ್ವ ಟೆಸ್ಟ್ ಚಾಂಪಿಯನ್​​ಶಿಪ್​ ಫೈನಲ್​​ಗಳ ಮಧ್ಯೆ ಉತ್ತಮ ಅಂತರ: ಜಯ್ ಶಾ

World Test Championship : ಜಯ್ ಶಾ ಐಪಿಎಲ್ ಫೈನಲ್ ಮತ್ತು ಡಬ್ಲ್ಯುಟಿಸಿ ಫೈನಲ್ ನಡುವೆ 15 ದಿನಗಳ ಅಂತರವನ್ನು ಕಾಯ್ದುಕೊಳ್ಳುವ ಬಗ್ಗೆ ಸ್ಪಷ್ಟನೆ ನೀಡಿದ್ದರು. ಐಪಿಎಲ್ ವೇಳಾಪಟ್ಟಿಯನ್ನು ಲೆಕ್ಕಿಸದೆ ತಂಡವು ಯಾವಾಗಲೂ ಸಮಯಕ್ಕೆ ಸರಿಯಾಗಿ ಫೈನಲ್​ ಪಂದ್ಯಕ್ಕೆ ತಲುಪಿತ್ತು ಬಿಸಿಸಿಐ ಕಾರ್ಯದರ್ಶಿ ಶಾ ಸಮರ್ಥಿಸಿಕೊಂಡಿದ್ದರು. ಇಲ್ಲಿಯವರೆಗೆ ಎರಡೂ ಸಂದರ್ಭಗಳಲ್ಲಿ ಫೈನಲ್ ತಲುಪಿದ್ದಕ್ಕಾಗಿ ತಂಡವನ್ನು ಶ್ಲಾಘಿಸಿದ್ದಾರೆ.

VISTARANEWS.COM


on

World Test Championship
Koo

ಬೆಂಗಳೂರು : ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​​ (ಡಬ್ಲ್ಯುಟಿಸಿ) ಫೈನಲ್ ಪಂದ್ಯಕ್ಕೆ ಸಾಕಷ್ಟು ಅಂತರ ಇರುವ ರೀತಿಯಲ್ಲಿ ಐಪಿಎಲ್ ಫೈನಲ್​ ಪಂದ್ಯ ಆಯೋಜಿಸಲಾಗುವುದು ಎಂದು ಬಿಸಿಸಿಐ ಗೌರವ ಕಾರ್ಯದರ್ಶಿ ಜಯ್​ ಶಾ ಹೇಳಿದ್ದಾರೆ. ಫೈನಲ್​​ನಲ್ಲಿ ಆಡಿ ಹೆಚ್ಚು ದಿನಗಳ ಅಂತರವಿಲ್ಲದೇ ಡಬ್ಲ್ಯುಟಿಸಿಗೆ ಹೋದ ಭಾರತವು ಗೆಲ್ಲಲು ವಿಫಲವಾದ ನಂತರ ಐಪಿಎಲ್ ವೇಳಾಪಟ್ಟಿಯನ್ನು ತೀವ್ರವಾಗಿ ಟೀಕೆಗೆ ಒಳಪಟ್ಟಿತ್ತು. ಹೀಗಾಗಿ ಬಿಸಿಸಿಐ ವೇಳಾಪಟ್ಟಿಯನ್ನು ಹೆಚ್ಚು ದಿನಗಳ ಅಂತರದೊಂದಿಗೆ ಮಾಡಲು ಮುಂದಾಗಿದೆ.

ಜಯ್ ಶಾ ಐಪಿಎಲ್ ಫೈನಲ್ ಮತ್ತು ಡಬ್ಲ್ಯುಟಿಸಿ ಫೈನಲ್ ನಡುವೆ 15 ದಿನಗಳ ಅಂತರವನ್ನು ಕಾಯ್ದುಕೊಳ್ಳುವ ಬಗ್ಗೆ ಸ್ಪಷ್ಟನೆ ನೀಡಿದ್ದರು. ಐಪಿಎಲ್ ವೇಳಾಪಟ್ಟಿಯನ್ನು ಲೆಕ್ಕಿಸದೆ ತಂಡವು ಯಾವಾಗಲೂ ಸಮಯಕ್ಕೆ ಸರಿಯಾಗಿ ಫೈನಲ್​ ಪಂದ್ಯಕ್ಕೆ ತಲುಪಿತ್ತು ಬಿಸಿಸಿಐ ಕಾರ್ಯದರ್ಶಿ ಶಾ ಸಮರ್ಥಿಸಿಕೊಂಡಿದ್ದರು. ಇಲ್ಲಿಯವರೆಗೆ ಎರಡೂ ಸಂದರ್ಭಗಳಲ್ಲಿ ಫೈನಲ್ ತಲುಪಿದ್ದಕ್ಕಾಗಿ ತಂಡವನ್ನು ಶ್ಲಾಘಿಸಿದ್ದಾರೆ.

ಹಿಂದಿನ ಎರಡು ಡಬ್ಲ್ಯುಟಿಸಿ ಫೈನಲ್ಸ್​​ಗೆ ತಂಡ ತಡವಾಗಿ ತಲುಪಿರಲಿಲ್ಲ. ನಮಗೆ ಬೇರೆ ಆಯ್ಕೆ ಇರಲಿಲ್ಲ. ಇಂದಿನಿಂದ, ಐಪಿಎಲ್ ಅಂತ್ಯ ಮತ್ತು ಡಬ್ಲ್ಯುಟಿಸಿ ಫೈನಲ್ ನಡುವೆ ನಾವು 15 ದಿನಗಳ ಅಂತರವನ್ನು ಪಡೆಯಲಿದ್ದೇವೆ. ನಾವು ಎರಡು ಬಾರಿ ಫೈನಲ್​​ಗೆ ಅರ್ಹತೆ ಪಡೆದಿದ್ದೇವೆ ಎಂಬ ಅಂಶವನ್ನು ನಾವು ಅರಿಯಬೇಕು ” ಎಂದು ಜಯ್ ಶಾ ಹೇಳಿದ್ದಾರೆ.

ಜೂನ್ 18 ರಿಂದ ನಡೆಯಲಿರುವ ಡಬ್ಲ್ಯುಟಿಸಿ ಫೈನಲ್ 2021ಗಾಗಿ ಭಾರತ ಜೂನ್ 3 ರಂದು ಇಂಗ್ಲೆಂಡ್ ತಲುಪಿತ್ತು ಪರಿಸ್ಥಿತಿಗಳಿಗೆ ಹೊಂದಿಕೊಳ್ಳಲು ತಂಡವು ಪಂದ್ಯಕ್ಕೆ ಮುಂಚಿತವಾಗಿ ಇಂಟ್ರಾ ಸ್ಕ್ವಾಡ್ ಪಂದ್ಯವನ್ನು ಆಡಿತ್ತು . ಆದಾಗ್ಯೂ, ಫೈನಲ್​ನಲ್ಲಿ ಎಂಟು ವಿಕೆಟ್​ಗಳಿಂದ ಸೋತು ಟೆಸ್ಟ್ ಕ್ರಿಕೆಟ್​​ನ ಮೊದಲ ಚಾಂಪಿಯನ್ ಪಟ್ಟ ಪಡೆಯುವ ಅವಕಾಶವನ್ನು ಅವರು ಕಳೆದುಕೊಂಡಿತ್ತು.

ಡಬ್ಲ್ಯುಟಿಸಿ ಪಾಯಿಂಟ್ಸ್ ಟೇಬಲ್​ನಲ್ಲಿ ಭಾರತಕ್ಕೆ ಅಗ್ರಸ್ಥಾನ

2023 ರಲ್ಲಿ ಆಡಿದ ಎರಡನೇ ಫೈನಲ್​​ನಲ್ಲಿ ಆಟಗಾರರು ಐಪಿಎಲ್ ಪ್ಲೇಆಫ್​ನಿಂ ತಮ್ಮ ತಂಡದ ನಾಕೌಟ್ ಪಂದ್ಯಗಳನ್ನು ಅವಲಂಬಿಸಿ ಬ್ಯಾಚ್​ಗಳಲ್ಲಿ ಇಂಗ್ಲೆಂಡ್ ತಲುಪಿದ್ದರು ಜೂನ್ 7ರಿಂದ ಫೈನಲ್ ಪ್ರಾರಂಭಗೊಂಡಿತ್ತು ಹಾಗೂ 2021 ಕ್ಕೆ ಹೋಲಿಸಿದರೆ ತಯಾರಿ ನಡೆಸಲು ಕಡಿಮೆ ಸಮಯ ಸಿಕ್ಕಿತು. ರೋಹಿತ್ ಶರ್ಮಾ ನೇತೃತ್ವದ ತಂಡವು 209 ರನ್​​ಗಳಿಂದ ಆಸ್ಟ್ರೇಲಿಯಾ ವಿರುದ್ಧ ಪಂದ್ಯವನ್ನು ಕಳೆದುಕೊಂಡಿತು. ಡಬ್ಲ್ಯುಟಿಸಿ ಪ್ರಶಸ್ತಿ ಗೆಲ್ಲುವ ಸತತ ಎರಡನೇ ಅವಕಾಶವನ್ನು ವ್ಯರ್ಥ ಮಾಡಿಕೊಂಡಿತು.

ಇದನ್ನೂ ಓದಿ: Happy Independence day 2024: ಸ್ವಾತಂತ್ರ್ಯ ದಿನಾಚರಣೆಯಂದು ಒಲಿಂಪಿಯನ್​ಗಳನ್ನು ಭೇಟಿಯಾದ ಪ್ರಧಾನಿ ಮೋದಿ ಗೆ ಜೆರ್ಸಿ ಉಡುಗೊರೆ

ಡಬ್ಲ್ಯುಟಿಸಿ ಫೈನಲ್ 2025 ರ ದಿನಾಂಕ ಪ್ರಕಟಗೊಂಡಿಲ್ಲ. ಆದರೆ ಪಂದ್ಯವು ಜೂನ್​​ನಲ್ಲಿ ನಡೆಯುವ ಸಾಧ್ಯತೆಯಿದೆ. 68.51 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಭಾರತ ಮತ್ತೊಮ್ಮೆ ಫೈನಲ್ ತಲುಪುವ ನೆಚ್ಚಿನ ತಂಡವಾಗಿದೆ. ಸತತ ಮೂರನೇ ಬಾರಿಗೆ ಅರ್ಹತೆ ಪಡೆದರೆ ಟೀಮ್ ಇಂಡಿಯಾ ದೊಡ್ಡ ಪಂದ್ಯಕ್ಕೆ ತಮ್ಮನ್ನು ಸಿದ್ಧಪಡಿಸಲು ಸಾಕಷ್ಟು ಸಮಯ ದೊರೆಯಬಹುದು.

Continue Reading

ವೈರಲ್ ನ್ಯೂಸ್

Viral Video: ವಂದೇ ಮಾತರಂ ಗೀತೆಗೆ ಮೊಹಮ್ಮದ್ ಶಮಿ ಮಗಳ ಮುದ್ದಾದ ನೃತ್ಯ! ವಿಡಿಯೊ ನೋಡಿ

ಭಾರತೀಯ ಕ್ರಿಕೆಟ್ ತಂಡದ ವೇಗದ ಬೌಲರ್ ಮೊಹಮ್ಮದ್ ಶಮಿ ಮತ್ತು ಅವರ ಮಾಜಿ ಪತ್ನಿ ಹಸಿನ್ ಜಹಾನ್ ಅವರ ಮಗಳು ಐರಾ ಅವರ ಮುದ್ದಾದ ಅಭಿನಯದ ವಿಡಿಯೋ ತ್ವರಿತವಾಗಿ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ (Viral Video) ಆಗಿದ್ದು, ಸಾಕಷ್ಟು ಮೆಚ್ಚುಗೆಯೂ ಬಂದಿದೆ. ವಂದೇ ಮಾತರಂ ಗೀತೆ ಶಮಿ ಮಗಳು ಎಷ್ಟು ಮುದ್ದಾಗಿ ನೃತ್ಯ ಮಾಡಿದ್ದಾಳೆ ನೋಡಿ.

VISTARANEWS.COM


on

By

Viral Video
Koo

ಭಾರತೀಯ ಕ್ರಿಕೆಟ್ ತಂಡದ ವೇಗದ (Indian cricket team senior pacer) ಬೌಲರ್ ಮೊಹಮ್ಮದ್ ಶಮಿ (Mohammed Shami) ಅವರ ಮಗಳು ಐರಾ ಅವರು ಸ್ವಾತಂತ್ರ್ಯ ದಿನಾಚರಣೆಯ (Independence Day 2024) ಸಂಭ್ರಮದಲ್ಲಿ ದೇಶಭಕ್ತಿ ಗೀತೆ “ವಂದೇ ಮಾತರಂ” ಗೆ (Vande Mataram) ಆಕರ್ಷಕವಾದ ನೃತ್ಯವನ್ನು ಪ್ರದರ್ಶಿಸಿರುವ ವಿಡಿಯೋ ಇನ್ ಸ್ಟಾ ಗ್ರಾಮ್ ನಲ್ಲಿ ವೈರಲ್ (Viral Video) ಆಗಿದೆ.

ಐರಾ ಮೊಹಮ್ಮದ್ ಶಮಿ ಮತ್ತು ಅವರ ಮಾಜಿ ಪತ್ನಿ ಹಸಿನ್ ಜಹಾನ್ ಅವರು ಮಗಳು. ಐರಾ ಅವರ ಮುದ್ದಾದ ಅಭಿನಯದ ವಿಡಿಯೋ ತ್ವರಿತವಾಗಿ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗಿದ್ದು, ಸಾಕಷ್ಟು ಮೆಚ್ಚುಗೆಯೂ ಬಂದಿದೆ.


ಬಿಳಿ ಬಣ್ಣದ ಸೀರೆಯಲ್ಲಿ “ವಂದೇ ಮಾತರಂ” ಗೀತೆಗೆ ಆಕೆ ಮುದ್ದಾಗಿ ನೃತ್ಯ ಮಾಡಿದ್ದಾಳೆ. ಅವಳು ಧರಿಸಿದ್ದ ಬಿಳಿ ಸೀರೆ ತ್ರಿವರ್ಣ ಥೀಮ್‌ಗೆ ಸುಂದರವಾಗಿ ಪೂರಕವಾಗಿದೆ.

2014 ರಲ್ಲಿ ಹಸಿನ್ ಜಹಾನ್ ಅವರನ್ನು ವಿವಾಹವಾದ ಮೊಹಮ್ಮದ್ ಶಮಿ ಅವರಿಗೆ ಮಗಳು ಐರಾ 2015 ರಲ್ಲಿ ಜನಿಸಿದಳು. ಶಮಿ ಮತ್ತು ಜಹಾನ್ ಈಗ ಬೇರ್ಪಟ್ಟಿದ್ದಾರೆ.

ಭಾರತದ ಹಿರಿಯ ವೇಗಿ ಮೊಹಮ್ಮದ್ ಶಮಿ ನವೆಂಬರ್ 2023ರಲ್ಲಿ ಒಡಿಐ ವಿಶ್ವಕಪ್‌ನಲ್ಲಿ ಗಾಯಗೊಂಡ ಅನಂತರ ಕ್ರಿಕೆಟ್‌ನಿಂದ ಹೊರಗುಳಿದಿದ್ದಾರೆ. ಪಾದದ ಶಸ್ತ್ರಚಿಕಿತ್ಸೆಗೆ ಒಳಗಾದ ಅನಂತರ ಅವರು ಈಗ ಚೇತರಿಕೆಯ ಹಾದಿಯಲ್ಲಿದ್ದಾರೆ. ಬಾಂಗ್ಲಾದೇಶದೊಂದಿಗಿನ ಎರಡು ಪಂದ್ಯಗಳ ಟೆಸ್ಟ್ ಸರಣಿ ಸಮಯದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳುವ ನಿರೀಕ್ಷೆಯಿದೆ.

ಮೊಹಮ್ಮದ್ ಶಮಿ ಅವರು ಅಂತಾಷ್ಟ್ರೀಯ ಪುನರಾಗಮನದ ಮೊದಲು ದುಲೀಪ್ ಟ್ರೋಫಿ 2024ರಲ್ಲಿ ಕಾಣಿಸಿಕೊಳ್ಳಬಹುದು ಎಂದು ಸೂಚಿಸುವ ವರದಿಗಳಿದ್ದರೂ ಅವರು ಬುಧವಾರ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಪ್ರಕಟಿಸಿದ ತಂಡಗಳಲ್ಲಿ ಅವರು ಪಾಲ್ಗೊಂಡಿರಲಿಲ್ಲ.

ಇದನ್ನೂ ಓದಿ: Viral Video: ಹಳೆಯ ವಿದ್ಯಾರ್ಥಿಗಳನ್ನು ಸಾಲಾಗಿ ಕರೆಸಿ ಬೆತ್ತದಿಂದ ಹೊಡೆದ ಪ್ರಾಂಶುಪಾಲರು! ಅಪರೂಪದ ವಿಡಿಯೊ

ನಾನು ಯಾವಾಗ ಹಿಂತಿರುಗುತ್ತೇನೆ ಎಂದು ಹೇಳುವುದು ಕಷ್ಟ. ನಾನು ಕಷ್ಟಪಟ್ಟು ಪ್ರಯತ್ನಿಸುತ್ತಿದ್ದೇನೆ. ಆದರೆ ನಾನು ಮತ್ತೊಮ್ಮೆ ಇಂಡಿಯಾ ಜೆರ್ಸಿಯನ್ನು ಧರಿಸುವ ಮೊದಲು ನೀವು ನನ್ನನ್ನು ಬಂಗಾಳದ ಬಣ್ಣಗಳಲ್ಲಿ ನೋಡುತ್ತೀರಿ ಎಂದು ನಾನು ಭಾವಿಸುತ್ತೇನೆ. ನಾನು ಬಂಗಾಳಕ್ಕಾಗಿ ಎರಡು ಅಥವಾ ಮೂರು ಪಂದ್ಯಗಳನ್ನು ಆಡಲು ಬರುತ್ತೇನೆ. ಅದಕ್ಕೆ ಸಂಪೂರ್ಣವಾಗಿ ಸಿದ್ಧವಾಗಿದೆ ಎಂದು ಮೊಹಮ್ಮದ್ ಶಮಿ ತಿಂಗಳ ಹಿಂದೆ ಮಾಧ್ಯಮವೊಂದಕ್ಕೆ ಹೇಳಿದ್ದರು.

Continue Reading
Advertisement
Bengaluru Roads
ಕರ್ನಾಟಕ13 mins ago

Bengaluru Roads: ರಸ್ತೆ ಗುಂಡಿ ಮುಚ್ಚುವಂತೆ ಬಿಬಿಎಂಪಿ ಅಧಿಕಾರಿಗಳಿಗೆ ಸಚಿವರಿಂದಲೇ ಮನವಿ!

Wildlife
ಪರಿಸರ14 mins ago

Wildlife: ಹುಟ್ಟಿದ ತಕ್ಷಣ ತಾಯಿಯನ್ನೇ ಕೊಂದು ತಿನ್ನುವ ಜೀವಿ ಇದು!

Karnataka Rain
ಮಳೆ21 mins ago

Karnataka Rain: ಗಂಗಾವತಿಯಲ್ಲಿ ಭಾರಿ ಮಳೆಗೆ ಮನೆಗಳಿಗೆ ನುಗ್ಗಿದ ನೀರು; ಭತ್ತದ ಗದ್ದೆಗಳಿಗೆ ಹಾನಿ

Gold Rate
ಪ್ರಮುಖ ಸುದ್ದಿ23 mins ago

Gold Rate : ಬೆಲೆ ಏರಿಕೆ ಪರಿಣಾಮ; ಏಪ್ರಿಲ್-ಜುಲೈನಲ್ಲಿ ಚಿನ್ನದ ಆಮದು ಶೇ.4.23ರಷ್ಟು ಇಳಿಕೆ

Viral Video
Latest28 mins ago

‌Richard Lugner: ಇತ್ತೀಚೆಗಷ್ಟೆ 6ನೇ ಮದುವೆಯಾಗಿದ್ದ 91 ವರ್ಷದ ಬಿಲಿಯಾಧೀಶ ಇನ್ನಿಲ್ಲ!

Viral News
Latest35 mins ago

Viral News: ಈತ 610 ಕೆಜಿ ಇದ್ದ, ಈಗ 63 ಕೆಜಿಗೆ ಇಳಿದಿದ್ದಾನೆ! 30 ವೈದ್ಯರ ತಂಡದ ಕಾರ್ಯಾಚರಣೆ!

Sexual Abuse
Latest43 mins ago

Sexual Abuse: ಲೈಂಗಿಕ ಕಿರುಕುಳ ನೀಡಿದವನನ್ನು ನಡು ರಸ್ತೆಯಲ್ಲಿ ಥಳಿಸಿದ ಅಕ್ಕತಂಗಿ; ವಿಡಿಯೊ ವೈರಲ್

Paris Paralympics
ಪ್ರಮುಖ ಸುದ್ದಿ1 hour ago

Paris Paralympics : ಪ್ಯಾರಾಲಿಂಪಿಕ್ಸ್​​ನಲ್ಲಿ 12 ಕ್ರೀಡೆಗಳಲ್ಲಿ ಭಾಗವಹಿಸಲಿದೆ ಭಾರತ

karnataka Weather Forecast
ಮಳೆ1 hour ago

Karnataka Weather : ಇಂದು ಧ್ವಜಾರೋಹಣ ಆಯ್ತು, ನಾಳೆ ವರಮಹಾಲಕ್ಷ್ಮಿ ಹಬ್ಬಕ್ಕೂ ಮಳೆ ಅಡ್ಡಿ; ಬೆಂಗಳೂರು ಸೇರಿ ಕರಾವಳಿ, ಮಲೆನಾಡಿಗೆ ಅಲರ್ಟ್‌

Electric Shock
ಕರ್ನಾಟಕ2 hours ago

Electric Shock: ಸ್ವಾತಂತ್ರ್ಯ ದಿನಾಚರಣೆ ಮುಗಿಸಿ ಮನೆಗೆ ಹೋಗುವಾಗ ವಿದ್ಯುತ್ ತಗುಲಿ ವಿದ್ಯಾರ್ಥಿ ಸಾವು

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ9 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka Weather Forecast
ಮಳೆ1 week ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ1 week ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ1 week ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು1 week ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ1 week ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 weeks ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ2 weeks ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ2 weeks ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ2 weeks ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ2 weeks ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

ಟ್ರೆಂಡಿಂಗ್‌